Vistara Kannada Sambhrama : ವಿಸ್ತಾರ ಕನ್ನಡ ಸಂಭ್ರಮ; ಮಹಾವೈಭವಕ್ಕೆ ಇನ್ನು ಎರಡೇ ದಿನ - Vistara News

ಕರ್ನಾಟಕ

Vistara Kannada Sambhrama : ವಿಸ್ತಾರ ಕನ್ನಡ ಸಂಭ್ರಮ; ಮಹಾವೈಭವಕ್ಕೆ ಇನ್ನು ಎರಡೇ ದಿನ

Vistara Kannada Sambhrama : ವಿಸ್ತಾರ ನ್ಯೂಸ್‌ ಆಯೋಜಿಸಿರುವ ವಿಸ್ತಾರ ಕನ್ನಡ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಕಲೆ, ಸಂಸ್ಕೃತಿ, ಸಾಹಿತ್ಯಗಳ ಮಹಾಮೇಳ ನವೆಂಬರ್‌ 4ರಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯಲಿದೆ.

VISTARANEWS.COM


on

Vistara Kannada Sambhrama22
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನಾಡಿನ ಜನಪ್ರಿಯ ಮತ್ತು ಜನಪರ ಮಾಧ್ಯಮ ಸಂಸ್ಥೆಯಾದ ವಿಸ್ತಾರ ನ್ಯೂಸ್‌ (Vistara News) ಆಯೋಜಿಸಿರುವ ವಿಸ್ತಾರ ಕನ್ನಡ ಸಂಭ್ರಮ ಕಾರ್ಯಕ್ರಮಕ್ಕೆ (Vistara Kannada Sambhrama) ಇನ್ನು ಎರಡೇ ದಿನ ಬಾಕಿ ಉಳಿದಿದೆ. ನವೆಂಬರ್‌ 4ರಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ (Ravindra Kalakshetra) ನಡೆಯುವ ಅದ್ಧೂರಿ ಕಾರ್ಯಕ್ರಮದ ಕಾತರದ ಕ್ಷಣಗಳು ಹತ್ತಿರವಾಗುತ್ತಿವೆ.

ಕನ್ನಡ ಟಿವಿ ವಾಹಿನಿಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಕನ್ನಡ ಮತ್ತು ಸಾಹಿತ್ಯದ ಹಬ್ಬ ಆಯೋಜಿಸಿದ ಕೀರ್ತಿ ವಿಸ್ತಾರ ನ್ಯೂಸ್‌ಗೆ ಸಲ್ಲುತ್ತದೆ. 2022ರಲ್ಲಿ ನಡೆದ ಕಾರ್ಯಕ್ರಮದ ಅದ್ಧೂರಿ ಯಶಸ್ಸಿನ ಬಳಿಕ ಇದೀಗ ಎರಡನೇ ವರ್ಷ ʻವಿಸ್ತಾರ ಕನ್ನಡ ಸಂಭ್ರಮʼ ಆಯೋಜಿಸಲಾಗಿದ್ದು, ಹತ್ತಾರು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ರಂಜಿಸಲಿದೆ. ವಿಸ್ತಾರ ನ್ಯೂಸ್‌ಗೆ ಒಂದು ವರ್ಷದ ತುಂಬುತ್ತಿರುವ ಹೊತ್ತಿನಲ್ಲಿ ಇದನ್ನು ʻವರ್ಷ ವೈಭವʼವಾಗಿಯೂ (Vistara Varsha Vaibhava) ಆಚರಿಸಲಾಗುತ್ತಿದೆ.

ಬೆಳಗ್ಗೆ 9 ಗಂಟೆಗೆ ಆರಂಭವಾಗಲಿರುವ ವಿಸ್ತಾರ ಕನ್ನಡ ಸಂಭ್ರಮದಲ್ಲಿ ರಾತ್ರಿ 12 ಗಂಟೆಯವರೆಗೂ ನಾನ್‌ಸ್ಟಾಪ್‌ ಮನರಂಜನೆಯ ಮಹಾಪೂರವಿದೆ. ಹಾಡು, ಸಂಗೀತ, ಕನ್ನಡ ಸಾಹಿತ್ಯದ ಗೋಷ್ಠಿಗಳು, ನಟ-ನಟಿಯರು, ಕಿರುತೆರೆ ಕಲಾವಿದರ ಜತೆ ನೇರ ಮುಕ್ತ ಮಾತುಕತೆ, ಯಕ್ಷಗಾನ ವೈಭವಗಳೊಂದಿಗೆ ಮೇಳೈಸಲಿದೆ.

ರವೀಂದ್ರ ಕಲಾಕ್ಷೇತ್ರದ ಪ್ರಧಾನ ವೇದಿಕೆ, ಕಲಾಕ್ಷೇತ್ರದ ಆವರಣ, ನಯನಾ ಸಭಾಂಗಣ, ಸಂಸ ಬಯಲು ರಂಗ ಮಂದಿರ ಹೀಗೆ ಎಲ್ಲ ಕಡೆಯೂ ವೈವಿಧ್ಯಮಯ ಕಾರ್ಯಕ್ರಮ, ಸಾಂಸ್ಕೃತಿಕ ಲೋಕದ ಅನಾವರಣ ನಡೆಯಲಿದೆ.

ಏನುಂಟು ಏನಿಲ್ಲ? ಈ ಸಂಭ್ರಮದ ಲೋಕದಲ್ಲಿ?

ವಿಸ್ತಾರ ಕನ್ನಡ ಸಂಭ್ರಮದಲ್ಲಿ ಸಂಗೀತೋತ್ಸವವಿದೆ, ನಾಟಕೋತ್ಸವವಿದೆ. ಆಹಾರೋತ್ಸವದ ಸವಿಯಿದೆ, ಪುಸ್ತಕೋತ್ಸವದ ಸೊಬಗಿದೆ. ಯಕ್ಷ ಗಾನ ಗಂಧರ್ವರೆಲ್ಲ ಧರೆಗಿಳಿವ ಸಡಗರವಿದೆ.

ನಾಡಿನ ಯೋಗಕ್ಷೇಮದ ರೂವಾರಿಗಳಾದ ಜನಪ್ರತಿನಿಧಿಗಳು, ನಿಮ್ಮ ನೆಚ್ಚಿನ ಚಂದನವನದ ಚಂದದ ತಾರೆಯರು, ಕಿರುತೆರೆಯ ನಿಮ್ಮ ಇಷ್ಟದ ನಟ-ನಟಿಯರು ಇಲ್ಲಿ ಸೇರಲಿದ್ದಾರೆ. ಕನ್ನಡಕ್ಕೆ ದನಿಯಾದ ಗಾಯಕರು, ಸಂಗೀತಗಾರರು, ಸ್ಟಾಂಡಪ್‌ ಕಾಮಿಡಿಯನ್‌ಗಳು, ಯಕ್ಷಿಣಿ ಜಾದೂಗಾರರು, ಎಲ್ಲರೂ ನಿಮ್ಮನ್ನು ಒಂದೇ ಕಡೆ ಎದುರ್ಗೊಳ್ಳಲಿದ್ದಾರೆ. ಇದು ಸಣ್ಣ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಖುಷಿಪಡಬಹುದಾದ ಒಂದು ಪರಿಶುದ್ಧ ಫ್ಯಾಮಿಲಿ ಪ್ಯಾಕೇಜ್‌ ಕಾರ್ಯಕ್ರಮವಾಗಿ ಕಳೆಗಟ್ಟಲಿದೆ. ಈ ಕಾರ್ಯಕ್ರಮಕ್ಕೆ ಪ್ರವೇಶ ಸಂಪೂರ್ಣ ಉಚಿತವಾಗಿದೆ.

ಮುಖ್ಯಮಂತ್ರಿಗಳಿಂದ ವಿಸ್ತಾರ ಕನ್ನಡ ಸಂಭ್ರಮಕ್ಕೆ ಚಾಲನೆ

ನವೆಂಬರ್‌ 4ರಂದು ಬೆಳಗ್ಗೆ 10 ಗಂಟೆಗೆ ವಿಸ್ತಾರ ಕನ್ನಡ ಸಂಭ್ರಮ- ವಿಸ್ತಾರ ನ್ಯೂಸ್‌ ವರ್ಷ ವೈಭವ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಡಾ. ಸುಬುಧೇಂದ್ರ ತೀರ್ಥ ಶ್ರೀಪಾದರು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ.

ಸಿಎಂ ಸಿದ್ದರಾಮಯ್ಯ, ಮಂತ್ರಾಲಯ ಮಠದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಗಳು, ಸಚಿವ ಶಿವರಾಜ್‌ ತಂಗಡಗಿ

ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ ತಂಗಡಗಿ, ಸಹಕಾರ ಸಚಿವ ಕೆ.ಎನ್‌ ರಾಜಣ್ಣ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ತೇಜಸ್ವಿ ಸೂರ್ಯ, ಬೆಂಗಳೂರು ಸೆಂಟ್ರಲ್‌ ಸಂಸದರಾದ ಪಿ.ಸಿ. ಮೋಹನ್‌, ಶಾಸಕರಾದ ಡಾ. ಸಿ.ಎನ್‌. ಅಶ್ವತ್ಥನಾರಾಯಣ, ವಿಧಾನ ಪರಿಷತ್‌ ಸದಸ್ಯರಾದ ಟಿ.ಎ. ಶರವಣ, ಹಿರಿಯ ಸಾಹಿತಿ ಡಾ. ಎಚ್.ಎಸ್. ವೆಂಕಟೇಶಮೂರ್ತಿ, ಜನಪ್ರಿಯ ನಟ ರಮೇಶ್‌ ಅರವಿಂದ್‌, ಜನಪ್ರಿಯ ನಟಿ ಬೃಂದಾ ಆಚಾರ್ಯ ಅವರು ಭಾಗವಹಿಸಲಿದ್ದಾರೆ.

Vistara Kannada Sambharama foods

ಸಮಾರೋಪ ಸಮಾರಂಭದಲ್ಲಿ ಡಿಸಿಎಂ ಮತ್ತು ಇತರ ಗಣ್ಯರು ಭಾಗಿ

ಸಂಜೆ 6 ಗಂಟೆಯಿಂದ 7.30ರವರೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್‌, ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವರಾದ ದಿನೇಶ್‌ ಗುಂಡೂರಾವ್‌, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವರಾದ ಪ್ರಿಯಾಂಕ್‌ ಖರ್ಗೆ, ಶಾಸಕರಾದ ಜಿ.ಟಿ. ದೇವೇಗೌಡ, ಹಿರಿಯ ಸಾಹಿತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್‌, ಅದಮ್ಯ ಚೇತನ ಸಂಸ್ಥಾಪಕರಾದ ತೇಜಸ್ವಿನಿ ಅನಂತ್‌ಕುಮಾರ್‌, ಖ್ಯಾತ ಸಿನಿಮಾ ನಿರ್ದೇಶಕರಾದ ಯೋಗರಾಜ್‌ ಭಟ್‌, ಜನಪ್ರಿಯ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಮಾನ್ವಿತಾ ಕಾಮತ್‌ ಭಾಗವಹಿಸುತ್ತಿದ್ದಾರೆ.

Vistara Kannada Sambhrama validictory
Vistara Kannada Sambharama foods

ಸರ್ವರನ್ನೂ ಪ್ರೀತಿಯಿಂದ ಸ್ವಾಗತಿಸುತ್ತಿದೆ ವಿಸ್ತಾರ ತಂಡ

ವಿಸ್ತಾರ ನ್ಯೂಸ್‌ ಪ್ರೈವೆಟ್‌ ಲಿಮಿಟೆಡ್‌ನ ಎಕ್ಸಿಕ್ಯೂಟಿವ್‌ ಚೇರ್ಮನ್ ಆಗಿರುವ ಡಾ. ಎಚ್‌.ಎಸ್‌. ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕರಾಗಿರುವ ಎಚ್.‌ ವಿ. ಧರ್ಮೇಶ್‌, ನಿರ್ದೇಶಕರಾಗಿರುವ ಶ್ರೀನಿವಾಸ ಹೆಬ್ಬಾರ್‌, ವಿಸ್ತಾರ ನ್ಯೂಸ್‌ನ ಸಿಇಒ ಹಾಗೂ ಪ್ರಧಾನ ಸಂಪಾದಕರಾಗಿರುವ ಹರಿಪ್ರಕಾಶ್‌ ಕೋಣೆಮನೆ, ಕಾರ್ಯನಿರ್ವಾಹಕ ನಿರ್ದೇಶಕ ಮತ್ತು – ಸ್ಪೆಷಲ್‌ ಆಪರೇಷನ್ಸ್‌ ಸಂಪಾದಕರಾಗಿರುವ ಕಿರಣ್‌ ಕುಮಾರ್‌ ಡಿ.ಕೆ. ಅವರು ಈ ಕಾರ್ಯಕ್ರಮಕ್ಕೆ ಎಲ್ಲರನ್ನೂ ಆಹ್ವಾನಿಸುತ್ತಿದ್ದಾರೆ.

15 ಗಂಟೆಗಳ ಕಾಲ ಬ್ಯಾಕ್‌ ಟು ಬ್ಯಾಕ್‌ ಕಾರ್ಯಕ್ರಮ

ಬೆಳಗ್ಗೆ 9.00 – 10.00: ಗೀತ ಬೆಳಗು
ಭಕ್ತಿ ಗೀತೆ, ಭಾವ ಗೀತೆ, ಜನಪದ, ಸೂಫಿ ಹಾಡುಗಳ ಮಾಧುರ್ಯ
ರಾಮಚಂದ್ರ ಹಡಪದ, ಆರ್‌. ಕೆ. ಸ್ಪರ್ಶ ಅವರಿಂದ ಗಾನಸುಧೆ

ಬೆಳಗ್ಗೆ 10.00ರಿಂದ 11.30: ವಿಸ್ತಾರ ಕನ್ನಡ ಸಂಭ್ರಮ ಉದ್ಘಾಟನೆ ಹಾಗೂ
ವಿಸ್ತಾರ ಪ್ರಕಾಶನದ ಪುಸ್ತಕಗಳ ಬಿಡುಗಡೆ

ಮಧ್ಯಾಹ್ನ 12.00 – 1.00: ಬಾರಿಸು ಕನ್ನಡ ಡಿಂಡಿಮವ

ಕನ್ನಡ ವಿಸ್ತರಿಸುತ್ತಿರುವ ಹೊಸ ದಿಕ್ಕುಗಳು: ವಿಚಾರಗೋಷ್ಠಿ

Vistara Kannada Sambhrama kannada Goshti
Vistara Kannada Sambharama foods

ವಿಷಯ ಮತ್ತು ಭಾಗವಹಿಸುವ ವಿಷಯ ತಜ್ಞರು

  1. ಕನ್ನಡ ಓದಿನ ಹೊಸ ಮೀಡಿಯಂ: ವಸಂತ್ ಶೆಟ್ಟಿ ಮೈಲಾಂಗ್ ಸಂಸ್ಥಾಪಕರು
  2. ಮುಕ್ತ ಡಬ್ಬಿಂಗ್‌: ಕನ್ನಡಕ್ಕೆ ಲಾಭ ಆಯ್ತಾ? ನಷ್ಟ ಆಯ್ತಾ?: ಹೃದಯಶಿವ ಚಿತ್ರ ಸಾಹಿತಿ
  3. ಮಾತೃ ಭಾಷೆಯಲ್ಲೇ ಏಕೆ ಕಲಿಯಬೇಕು?: ವೀಣಾ ರಾವ್​
    ಸಂಸ್ಥಾಪಕರು, ಭಾಷಾ ವಿದ್ಯಾ ಕನ್ನಡ ಕಲಿಕಾ ಕೇಂದ್ರ
  4. ನಿತ್ಯದ ಬರವಣಿಗೆಯಾಗಿ ಕನ್ನಡ: ಶ್ರೀಧರ್‌​ ನಾಗರಾಜ್​ ‘ಜಸ್ಟ್​ ಕನ್ನಡ’ ರೂವಾರಿ
  5. ಅಪಾರ್ಟ್‌ಮೆಂಟ್ ಗಳಲ್ಲಿ ಕನ್ನಡಾಭಿಮಾನ: ವಿಕ್ರಂ ರೈ ಕಾರ್ಯದರ್ಶಿ,
    ಬೆಂಗಳೂರು ಅಪಾರ್ಟ್‌ಮೆಂಟ್ಸ್ ಫೆಡರೇಷನ್
  6. ನಿರ್ವಹಣೆ: ಶ್ರೀ ಎನ್‌. ರವಿಶಂಕರ್‌ ಸಿಇಒ, ಏಮ್ಸ್​ ಹೈ ಕನ್ಸಲ್ಟಿಂಗ್

ಮಧ್ಯಾಹ್ನ 1.30 – 2.30: ವಾಯ್ಸ್‌ ಆಫ್‌ ಯಂಗ್‌ ಕನ್ನಡಿಗ

ದನಿ ಬೇರೆ, ಭಾಷೆ ಒಂದೇ!: ವಿಶಿಷ್ಟ ಸಂವಾದ

Vistara Kannada Sambhrama kannada Goshti2
Vistara Kannada Sambharama foods

ಸಂವಾದದಲ್ಲಿ ಪಾಲ್ಗೊಳ್ಳುವವರು
ಚಂದನ್​ ಶೆಟ್ಟಿ ಖ್ಯಾತ ಸಂಗೀತ ನಿರ್ದೇಶಕರು ಹಾಗೂ ಕನ್ನಡ ರ‍್ಯಾಪರ್​
ನಿರಂಜನ್​ ದೇಶಪಾಂಡೆ ಹೆಸರಾಂತ ನಿರೂಪಕರು
ನೇತ್ರಾ ಖ್ಯಾತ ಆರ್​ ಜೆ
ಸಿರಿ ಜನಪ್ರಿಯ ನಟಿ-ನಿರೂಪಕಿ

ಮಧ್ಯಾಹ್ನ 3.00 – 4.00: ಭಾಗ್ಯಲಕ್ಷ್ಮೀ & ಟೀಮ್‌ ಬರ್ತಾರಮ್ಮ!

Bhagya lakshmi team

ಕಲರ್ಸ್​ ಕನ್ನಡದ ಜನಪ್ರಿಯ ಧಾರಾವಾಹಿಗಳಾದ ಭಾಗ್ಯಲಕ್ಷ್ಮೀ ಹಾಗೂ ಲಕ್ಷ್ಮೀ ಬಾರಮ್ಮ ಟೀಮ್ ಜತೆ ಆತ್ಮೀಯ ಸಂವಾದ

ಸಂಜೆ 4.30 – 5.30: ಮಕ್ಕಳ ನಾಟಕ

ಮೈಸೂರಿನ ಖ್ಯಾತ ‘ಅರಿವು’ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಂದ ನಾಟಕ: ವಿಗಡ ವಿಕ್ರಮರಾಯ
ರಚನೆ: ಸಂಸ, ನಿರ್ದೇಶನ: ಯತೀಶ್ ಎನ್. ಕೊಳ್ಳೇಗಾಲ

Vistara Kannada Sambhrama Drama
Vistara Kannada Sambharama foods

ಸಂಜೆ 6.00- 7.30: ಸಮಾರೋಪ ಸಮಾರಂಭ

ರಾತ್ರಿ 8.00- 9.30: ಲೈವ್‌ ಮ್ಯೂಸಿಕ್‌ ಧಮಾಕಾ

ಖ್ಯಾತ ಗಾಯಕ, ಸಂಗೀತ ನಿರ್ದೇಶಕ ಶ್ರೀ ಗುರುಕಿರಣ್‌ ಮತ್ತು ತಂಡದಿಂದ ಸೂಪರ್‌ ಹಿಟ್‌ ಹಾಡುಗಳು (GURUKIRAN Live in Concert)

Gurukiran Vistara Kannada sambhrama
Vistara Kannada Sambharama foods

ರಾತ್ರಿ 10ರಿಂದ 12: ಯಕ್ಷಗಾನ ಪ್ರದರ್ಶನ

ಪ್ರಸಂಗ: ಕವಿರತ್ನ ಕಾಳಿದಾಸ
ಹೇರಂಜಾಲು ಯಕ್ಷಬಳಗ ಹಾಗೂ ಟೀಮ್ ಉತ್ಸಾಹಿ, ಬೆಂಗಳೂರು ತಂಡದಿಂದ
ಭಾಗವತರು: ಹೇರಂಜಾಲು ಗೋಪಾಲ ಗಾಣಿಗ, ಪಲ್ಲವ ಗಾಣಿಗ, ಜತೆಗೆ, ಕರಾವಳಿಯ ಪ್ರಖ್ಯಾತ ಯಕ್ಷಗಾನ ಕಲಾವಿದರು.

Yakshagana Vistara Kannada Sambhrama
Vistara Kannada Sambharama foods

ಸಂಸ ಬಯಲು ರಂಗಮಂದಿರದಲ್ಲಿ ಹಲವು ಕಾರ್ಯಕ್ರಮ

ಪ್ರಧಾನ ವೇದಿಕೆಯ ಜತೆ ಜತೆಯಲ್ಲೇ ಸಂಸ ಬಯಲು ರಂಗ ಮಂದಿರದಲ್ಲೂ ಕಾರ್ಯಕ್ರಮಗಳು ನಡೆಯಲಿವೆ.

1. ಸಂಜೆ 4.00ರಿಂದ ಚಿಣ್ಣರಿಗಾಗಿ ಜಾದೂ: ಆಕಾಶ್‌ ಗುಪ್ತಾ ಅವರಿಂದ

2. ಸಂಜೆ 5ರಿಂದ 6: ಸ್ಟ್ಯಾಂಡಪ್ ಕಾಮಿಡಿ: ಖ್ಯಾತ ಹಾಸ್ಯ ಕಲಾವಿದ ಕಾರ್ತಿಕ್‌ ಪತ್ತಾರ್ ಹಾಸ್ಯ ಕಾರಂಜಿ

3. ಸಂಜೆ 6ರಿಂದ 6.30: ಸೀರೆ ಸೊಬಗು: ಸೀರೆಯಲ್ಲಿ ನೋಡಿ, ಲಲನೆಯರ ಮೋಡಿ!
ಮಿಸೆಸ್ ಇಂಡಿಯಾ ಕರ್ನಾಟಕ ಡೈರೆಕ್ಟರ್‌ ಪ್ರತಿಭಾ ಸಂಶಿಮಠ ತಂಡದಿಂದ ನಾಡಿನ ಪಾರಂಪರಿಕ ಉಡುಗೆ ಬಿಂಬಿಸುವ ರಾಂಪ್ ವಾಕ್

ಹೊರಾಂಗಣದಲ್ಲಿ ಪುಸ್ತಕ ಮೇಳ: 20%ವರೆಗೆ ರಿಯಾಯಿತಿ

ರವೀಂದ್ರ ಕಲಾಕ್ಷೇತ್ರದ ಹೊರಾವರಣದಲ್ಲಿ ಅಪೂರ್ವ ಪುಸ್ತಕ ಮೇಳ ನಡೆಯಲಿದ್ದು, 20ಕ್ಕೂ ಹೆಚ್ಚು ಜನಪ್ರಿಯ ಬುಕ್‌ ಸ್ಟಾಲ್‌ಗಳು ಭಾಗಿಯಾಗಲಿವೆ. ಸಾವಿರಾರು ಪುಸ್ತಕಗಳು ಒಂದೇ ಕಡೆ ಲಭ್ಯವಾಗಲಿದೆ. ಪುಸ್ತಕಗಳಿಗೆ ಶೇ.20ರವರೆಗೆ ವಿಶೇಷ ರಿಯಾಯಿತಿ ಇರಲಿದೆ.

ಭಾಗವಹಿಸಲಿರುವ ಪ್ರಕಾಶನ ಸಂಸ್ಥೆಗಳು

ಸಪ್ನ ಬುಕ್‌ ಹೌಸ್‌, ನವ ಕರ್ನಾಟಕ, ಅಂಕಿತ, ವಿಸ್ತಾರ ಪ್ರಕಾಶನ, ಸ್ನೇಹ ಬುಕ್‌ ಹೌಸ್‌, ಛಂದ ಪುಸ್ತಕ, ಸಾವಣ್ಣ ಪ್ರಕಾಶನ, ವೀರಲೋಕ, ಸಮನ್ವಿತ, ಸಾಹಿತ್ಯ ಪ್ರಕಾಶನ, ಸಾಹಿತ್ಯ ಲೋಕ, ವಿಕ್ರಂ ಪ್ರಕಾಶನ, ಹರಿವು ಬುಕ್ಸ್‌, ಅಯೋಧ್ಯ ಪ್ರಕಾಶನ, ಅಭಿನವ, ಅಮೂಲ್ಯ ಪುಸ್ತಕ, ಮೈತ್ರಿ ಸಂಸ್ಕೃತ- ಸಂಸ್ಕೃತಿ ಪ್ರತಿಷ್ಠಾನ, ಕದಂಬ ಪ್ರಕಾಶನ

ಬಿಡುಗಡೆಯಾಗಲಿರುವ ವಿಸ್ತಾರ ಪ್ರಕಾಶನದ ನೂತನ ಪುಸ್ತಕಗಳು

ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಸ್ತಾರ ಪ್ರಕಾಶನದ ನಾಲ್ಕು ಪುಸ್ತಕಗಳು ಬಿಡುಗಡೆಯಾಗಲಿವೆ.
1. ಕುಣಿಯೇ ಜೀವ : ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನದ ಸಹಯೋಗದಲ್ಲಿ ನಡೆಸಿದ್ದ ವಿಸ್ತಾರ ನ್ಯೂಸ್
ಯುಗಾದಿ ಕಥಾಸ್ಪರ್ಧೆ 2023ರ ಬಹುಮಾನಿತ ಕಥೆಗಳ ಸಂಕಲನ
2. ನಮ್ಮದೇ ಕಥೆಗಳು: ಲೇಖಕರು: ಕೃಷ್ಣ ಭಟ್ ಅಳದಂಗಡಿ
3.ರಾಜಮಾರ್ಗ: ಪ್ರೇರಣಾದಾಯಕ ಕಥೆಗಳು ಲೇಖಕರು: ರಾಜೇಂದ್ರ ಭಟ್ ಕೆ
4. ಅಮ್ಮ ಹೇಳುವ ಚಂದದ ಕಥೆಗಳು: ಲೇಖಕರು: ಅಲಕಾ ಕಟ್ಟೆಮನೆ

ಮಕ್ಕಳಿಗೆ ನಾನಾ ಮನರಂಜನೆಗಳ ಮಹಾಲೋಕ

ಯುವಕ ಸಂಘ, ಸಾಂಸ್ಕೃತಿಕ ಸಂಘಟನೆಗಳಿಂದ ಮಕ್ಕಳಿಗಾಗಿ ವಿವಿಧ ಚಟುವಟಿಕೆಗಳು ನಡೆಯಲಿವೆ. ವಿಶೇಷ ಸ್ಪರ್ಧೆ ಮತ್ತು ಬಹುಮಾನಗಳಿವೆ. ಪುಟ್ಟ ಮಕ್ಕಳಿಗೆ ಆಟವಾಡಲು ಆಕರ್ಷಕ ಸಾಧನಗಳು ಇರಲಿವೆ.

ಹೊಟ್ಟೆ ತಣ್ಣಗಾಗಿಸುವ ಸವಿ ಸಂಭ್ರಮ

Vistara Kannada Sambharama foods
Vistara Kannada Sambharama foods

ವಿಸ್ತಾರ ಸಂಭ್ರಮದಲ್ಲಿ ಮೆದುಳಿಗೆ ಮಾತ್ರವಲ್ಲ, ಹೊಟ್ಟೆಯನ್ನೂ ತಣ್ಣಗೆ ಮಾಡುವ ವಿಶೇಷ ಆಹಾರ ಖಾದ್ಯಗಳ ಲೋಕವಿದೆ.
 ಬಾಯಿಯಲ್ಲಿ ನೀರೂರಿಸುವ ರಾಜ್ಯದ ನಾನಾ ಭಾಗಗಳ ಆಹಾರ ಮಳಿಗೆಗಳು
 ಮೈಸೂರು, ಕರಾವಳಿ, ಮಲೆನಾಡು ಮತ್ತು ಉತ್ತರ ಕರ್ನಾಟಕ ಪ್ರದೇಶದ ವಿಶೇಷ ತಿಂಡಿಗಳು
 ಸಾವಯವ ಆಹಾರ ಪದಾರ್ಥಗಳು, ದೇಸಿ ಉತ್ಪನ್ನಗಳ ವಿಶೇಷ ಮಳಿಗೆಗಳು ಇರಲಿವೆ.

ಜಾನಪದ ಕಲಾ ತಂಡದ ಪ್ರದರ್ಶನ: ಡಿಜಿಟಲ್ 3ಡಿ ಶೋ ಇರಲಿದೆ

ಸ್ಥಳದಲ್ಲೇ ನಿಮ್ಮ ಚಿತ್ರ ಬಿಡಿಸುತ್ತಾರೆ ಐವರು ಕಲಾವಿದರು

ಖ್ಯಾತ ಕಲಾವಿದರಾದ ಬಿ.ಜಿ. ಗುಜ್ಜಾರಪ್ಪ, ಜಿ.ಎಸ್‌. ರಂಗನಾಥ್‌, ರಘುಪತಿ ಶೃಂಗೇರಿ, ವಿ.ಆರ್‌.ಸಿ. ಶೇಖರ್‌, ರವಿ ಪೂಜಾರಿ ಅವರು ಕೆಲವೇ ನಿಮಿಷದಲ್ಲಿ ನಿಮ್ಮ ಪೆನ್ಸಿಲ್‌ ಸ್ಕೆಚ್‌ ರೆಡಿ ಮಾಡಲಿದ್ದಾರೆ.

ಇವರು ನಮ್ಮ ಪಾರ್ಟ್ನರ್‌ಗಳು

91.1 ಎಫ್‌ಎಂ ರೇಡಿಯೊ ಸಿಟಿ ನಮಗೆ ರೇಡಿಯೊ ಪಾರ್ಟ್ನರ್‌ ಆಗಿದ್ದರೆ, ಡೈಲಿಹಂಟ್‌ ಡಿಟಿಟಲ್‌ ಪಾರ್ಟ್ನರ್‌ ಆಗಿರಲಿದೆ.

ಈ ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಸಹಕರಿಸುವ ಸಂಘ ಸಂಸ್ಥೆಗಳು ಇವು

■ ಬೆಂಗಳೂರು ಅಪಾರ್ಟ್​ಮೆಂಟ್‌ ಒಕ್ಕೂಟ
■ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ)
■ ರೋಟರಿ ಸಂಸ್ಥೆ, ಬೆಂಗಳೂರು
■ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ
■ ಮಾನ್ಯತೆ ಪಡೆದ ಖಾಸಗಿ ಅನುದಾನ ರಹಿತ ಶಾಲೆಗಳ ಸಂಘ
■ ಶಿ ಫಾರ್‌ ಸೊಸೈಟಿ
■ ರಾಜ್ಯ ಆಗಮಿಕರ ಹಾಗೂ ಅರ್ಚಕರ ಸಂಘ
■ ರಾಜ್ಯ ಕಬ್ಬು ಬೆಳೆಗಾರರ ಸಂಘ
■ ಕೆಎಸ್‌ಆರ್‌ಟಿಸಿ ಕನ್ನಡ ಕ್ರಿಯಾ ಸಮಿತಿ
■ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ
■ ಕರ್ನಾಟಕ ಹೋಟೆಲ್ ಮಾಲೀಕರ ಸಂಘ
■ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ
■ ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ನಗರ ಜಿಲ್ಲಾ ಘಟಕ
■ ಕರ್ನಾಟಕ ಕಾರ್ಮಿಕ ಲೋಕ
■ ಕನ್ನಡ ಗೆಳೆಯರ ಬಳಗ
■ ಕೇಂದ್ರೀಯ ಸದನ ಕನ್ನಡ ಸಂಘ
■ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ)
■ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ)
■ ಕರ್ನಾಟಕ ಓಲಾ ಉಬರ್ ಚಾಲಕರ ಸಂಘ
■ ಆದರ್ಶ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘ
■ ಕೇಬಲ್ ಆಪರೇಟರ್ ಸಂಘ
■ ಬಿಬಿಎಂಪಿ ನೌಕರರ ಸಂಘ
■ ವಿಷ್ಣು ಸೇನಾ ಸಮಿತಿ
■ ವೀರಲೋಕ ಸಂಸ್ಥೆ
■ ಆಸರೆ ಫೌಂಡೇಷನ್
ಇದನ್ನೂ ಓದಿ: Krishna Janmashtami : ವಿಸ್ತಾರ ನ್ಯೂಸ್‌ನಲ್ಲಿ ನಿಮ್ಮ ಮನೆಯ ಶ್ರೀಕೃಷ್ಣನ ದರ್ಶನ; ಇಲ್ಲಿದೆ Photo Gallery!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಬೆಂಗಳೂರು

Drugs Mafia : ಫಾರಿನ್ ಪೋಸ್ಟ್ ಆಫೀಸ್‌ನಲ್ಲಿ 626 ಮಾದಕ ವಸ್ತುಗಳ ಪಾರ್ಸಲ್‌ಗಳು ಪತ್ತೆ!

Drugs mafia : ಮಾದಕ ವಸ್ತುಗಳಿರುವ 626 ಪಾರ್ಸಲ್‌ಗಳು ಪತ್ತೆಯಾಗಿದ್ದು, ಪೋಸ್ಟ್‌ ಆಫೀಸ್‌ ಸಿಬ್ಬಂದಿ ಈ ಡ್ರಗ್ ಮಾಫಿಯಾದಲ್ಲಿ ಭಾಗಿಯಾಗಿದ್ದಾರಾ ಎಂಬ ಶಂಕೆ ಮೂಡಿದೆ.

VISTARANEWS.COM


on

By

Drugs mafia
Koo

ಬೆಂಗಳೂರು: ಡ್ರಗ್ ಮಾಫಿಯಾ (Drugs Mafia) ಪೋಸ್ಟ್ ಆಫೀಸಿಗೂ ತಟ್ಟಿದ್ದು ಇತ್ತೀಚೆಗಲ್ಲ. ಈ ಹಿಂದೆ ಕೂಡ ಫಾರೀನ್ ಪೋಸ್ಟ್ ಆಫೀಸ್ ಮೇಲೆ ದಾಳಿ ಮಾಡಿದ ಸಂಧರ್ಭದಲ್ಲಿ ಡ್ರಗ್ಸ್‌ಗಳು ಸಿಕ್ಕಿದ್ದವು. ಈಗ ಮತ್ತೊಮ್ಮೆ ದಾಳಿ ವೇಳೆ ಅಪಾರ ಪ್ರಮಾಣದ ಡ್ರಗ್ಸ್ ಪತ್ತೆಯಾಗಿದೆ.

ಚಾಮರಾಜಪೇಟೆ ಫಾರೀನ್ ಪೋಸ್ಟ್ ಆಫೀಸ್‌ನಲ್ಲಿ ಡ್ರಗ್ಸ್‌ ಮಾಫಿಯಾ ನಡೆದಿದೆ. ವಿದೇಶದಿಂದ ಬರುವ ಪಾರ್ಸಲ್‌ಗಳಲ್ಲಿ ಡ್ರಗ್ಸ್‌ಗಳು ಬರುತ್ತಿದೆ. ದುಬಾರಿ ಬೆಲೆಯ ಎಂಡಿಎಂಎ, ಬ್ರೌನ್ ಶುಗರ್, ಕೊಕೇನ್ ಸೇರಿದಂತೆ ಹಲವು ಮಾದರಿಯ ಡ್ರಗ್ ಪತ್ತೆಯಾಗಿವೆ.

ಬೇರೆಯದೆ ವಸ್ತುಗಳ ಹೆಸರಿನಲ್ಲಿ ವಿದೇಶದಿಂದ ಬರುತ್ತಿರುವ ಪಾರ್ಸಲ್ ಇದಾಗಿದೆ. ಅಪರಿಚಿತ ವಿಳಾಸವಿರುವ ಈ ಮಾದಕ ವಸ್ತುಗಳನ್ನು ಪಡೆದು , ಸಂಬಂಧಪಟ್ಟಂತಹ ಡ್ರಗ್ ಪೆಡ್ಲರ್‌ಗಳಿಗೆ ರವಾನೆ ಮಾಡಲಾಗುತ್ತದೆ. ಇಂತಹ ಪ್ಯೂರ್ ಡ್ರಗ್ಸ್‌ಗಳಿಗೆ ಬ್ಲಾಕ್ ಮಾರ್ಕೆಟ್‌ನಲ್ಲಿ ಭಾರಿ ಬೇಡಿಕೆ ಇದೆ. ಹೀಗಾಗಿ ವಿದೇಶದಿಂದ ಬರುವ ಪ್ಯೂರ್ ಡ್ರಗ್ಸ್‌ಗಳನ್ನು ಪಡೆದು ಅದರಿಂದ ಮತ್ತಷ್ಟು ಡ್ರಗ್‌ಗಳನ್ನು ಮಾಡಬಹುದಾಗಿದೆ.

ಇದನ್ನೂ ಓದಿ: Drugs Mafia: ಥೈಲ್ಯಾಂಡ್ ಟು ದುಬೈ ಡ್ರಗ್‌ ಮಾಫಿಯಾಗೆ ಇಂಡಿಯಾನೆ ಮೈನ್ ಲಿಂಕ್; 3 ಕೋಟಿ ಮೌಲ್ಯದ ಗಾಂಜಾ ವಶ

ಅಂದರೆ ಒಂದು ಗ್ರಾಂ ಪ್ಯೂರ್ ಡ್ರಗ್‌ನಿಂದ ಹತ್ತು ಗ್ರಾಂನಷ್ಟು ಡ್ರಗ್‌ಗಳನ್ನು ತಯಾರಿಸಬಹುದು. ಹೀಗಾಗಿ ಇಂತಹ ಪ್ಯೂರ್ ಸಿಂಥಟಿಕ್ ಡ್ರಗ್‌ಗಳನ್ನು ವಿದೇಶದಲ್ಲಿ ಸಿಗುವ ಹಿನ್ನೆಲೆಯಲ್ಲಿ ಅದನ್ನು ತರಿಸಿಕೊಳ್ಳಲು ಫಾರಿನ್ ಪೋಸ್ಟ್ ಆಫೀಸ್‌ಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇನ್ನು ಈ ಹಿಂದೆ ಕೂಡ ಡ್ರಗ್ ವಿಚಾರವಾಗಿ ದಾಳಿ ನಡೆಸಿದಾಗಲು ಅಪಾರ ಪ್ರಮಾಣದ ಮಾದಕ ವಸ್ತುಗಳು ಪತ್ತೆಯಾಗಿದ್ದವು. ಸದ್ಯ ಈ ಸಲವು ಕೂಡ ಅಪಾರ ಪ್ರಮಾಣದಲ್ಲಿ ಡ್ರಗ್ ಪತ್ತೆಯಾಗಿದೆ.

ಇದರ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸಿಸಿಬಿ ಅಧಿಕಾರಿಗಳು ಅಕ್ಟೋಬರ್ ಒಂದನೇ ತಾರೀಖು ಫಾರಿನ್ ಪೋಸ್ಟ್ ಆಫೀಸ್‌ಗೆ ದಾಳಿ ನಡೆಸಿದಾಗ, ಸುಮಾರು 626 ಸಿಂಥಟಿಕ್ ಡ್ರಗ್ ಪಾರ್ಸಲ್‌ಗಳು ಸಿಕ್ಕಿದೆ. 2018ರಂದು ದಾಳಿ ನಡೆಸಿದಾಗ ಡ್ರಗ್ ಸಿಕ್ಕಿತ್ತು. ಹೀಗಾಗಿ ಅಂದಿನಿಂದ ಇಂದಿನವರೆಗೆ ಪೊಲೀಸರು ತಮ್ಮ ಮೇಲೆ ಕಣ್ಣೀಟ್ಟಿರುತ್ತಾರೆಂಬ ಕಾರಣಕ್ಕೆ ಪಾರ್ಸಲ್‌ಗಳನ್ನು ಪಡೆಯಲು ಯಾರು ಬಂದಿಲ್ಲ ಎನ್ನಲಾಗಿದೆ. ಹೀಗಾಗಿ ಅನೇಕ ಪಾರ್ಸಲ್‌ಗಳು ಪೋಸ್ಟ್ ಆಫೀಸ್‌ನಲ್ಲೆ ಬಿದ್ದಿದೆ.

ಮಾದಕ ವಸ್ತುಗಳ ವಿರುದ್ಧ ಸಮರ ಸಾರಿರುವ ನಗರ ಪೊಲೀಸರು , ಮಾಹಿತಿ ಬಂದ ಕಡೆ ದಾಳಿ ನಡೆಸುತ್ತಲೆ ಇದ್ದಾರೆ. ಅದೇ ರೀತಿ ಫಾರೀನ್ ಪೋಸ್ಟ್ ಮೇಲೆ ಕೂಡ ದಾಳಿ ನಡೆಸಲಾಗಿದೆ. ಸದ್ಯ ಯಾವ ಹೆಸರಿಗೆ ಪಾರ್ಸಲ್‌ಗಳು ಬಂದಿದೆ ಎಂಬುದನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ವಿಜಯನಗರ

Karnataka Rain : ವಿಜಯನಗರದಲ್ಲಿ ಸಿಡಿಲು ಬಡಿದು ರೈತರಿಬ್ಬರು ಸಾವು

Karnataka Rain : ವಿಜಯನಗರದಲ್ಲಿ ಸಿಡಿಲು ಬಡಿದು ರೈತರಿಬ್ಬರು ಮೃತಪಟ್ಟಿದ್ದಾರೆ. ಚಿಕ್ಕಮಗಳೂರಿನಲ್ಲಿ ಟಿಟಿ ಡ್ರೈವರ್‌ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

VISTARANEWS.COM


on

By

karnataka rain
ಸಾಂದರ್ಭಿಕ ಚಿತ್ರ
Koo

ವಿಜಯನಗರ: ಸಿಡಿಲು ಬಡಿದು ಇಬ್ಬರು ರೈತರು ಮೃತಪಟ್ಟಿರುವ ಘಟನೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನ ಹಳ್ಳಿ ತಾಲೂಕಿನ ದಶಮಾಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಬಣಕಾರ್ ನಾರಪ್ಪ (58), ಬಣಕಾರ್ ಪ್ರಶಾಂತ್ (40) ಮೃತ ದುರ್ದೈವಿ. ಹಗರಿಬೊಮ್ಮನಹಳ್ಳಿ ತಹಸೀಲ್ದಾರ್ ಕವಿತಾ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೊಲದಲ್ಲಿ ಕೆಲಸ ಮಾಡುವ ವೇಳೆ ಸಿಡಿಲು ಬಡಿದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಗರಿಬೊಮ್ಮನ ಹಳ್ಳಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ.

ಟಿಟಿ ಡ್ರೈವರ್‌ ಚಿಕ್ಕಮಗಳೂರಿನಲ್ಲಿ ಹೃದಯಾಘಾತದಿಂದ ಸಾವು

ಚಿಕ್ಕಮಗಳೂರಿನಲ್ಲಿ ಟಿಟಿ ಡ್ರೈವರ್‌ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಬೆಂಗಳೂರಿನ ಟಿಟಿ ಡ್ರೈವರ್ ಚಿಕ್ಕಮಗಳೂರಿಗೆ ಪ್ರವಾಸಿಗರನ್ನು ಕರೆತಂದಾಗ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವಿನಾಶ್ (25) ಮೃತ ದುರ್ದೈವಿ. ಬೆಂಗಳೂರಿನ ಸೋಮನಹಳ್ಳಿ ಮೂಲದ ಅವಿನಾಶ್ ಮೂರು ವರ್ಷದ ಹಿಂದೆ ಮದುವೆಯಾಗಿದ್ದು, 2 ವರ್ಷದ ಮಗು ಇದೆ. ಪ್ರವಾಸಿಗರನ್ನು ಹೋಂ ಸ್ಟೇ ಬಳಿ ಬಿಟ್ಟು ಬಂದ ಬಳಿಕ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ಕೂಡಲೇ ಆಸ್ಪತ್ರೆಗೆ ಸೇರಿಸಲು ಪ್ರಯತ್ನಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕೆರೆಯಂತಾದ ಕ್ರೀಡಾಂಗಣ

ರಾತ್ರಿ ಸುರಿದ ಮಳೆಗೆ ಕ್ರೀಡಾಂಗಣ ಜಲಾವೃತವಾಗಿದೆ. ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದಲ್ಲಿನ ತಾಲೂಕು ಮಟ್ಟದ ಕ್ರೀಡಾಂಗಣವು ಕೆರೆಯಂತೆ ಭಾಸವಾಗುತ್ತಿದೆ. ಪ್ರತಿಬಾರಿ ಮಳೆ ಬಂದಾಗ ಕ್ರೀಡಾಂಗಣ ಜಲಾವೃತಗೊಳ್ಳುತ್ತದೆ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಕ್ರೀಡಾಂಗಣವು ಕ್ರೀಡಾ ಇಲಾಖೆ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಅವ್ಯವಸ್ಥೆ ಆಗಿದೆ. ಸರಿಯಾದ ನಿರ್ವಹಣೆ ಇಲ್ಲದೆ ಕ್ರೀಡಾಂಗಣ ಹಾಳಾಗಿದೆ.

ಕೆಸರು ಗದ್ದೆಯಾದ ರಸ್ತೆ

ರಾತ್ರಿ ಸುರಿದ ಭಾರಿ ಮಳೆಗೆ ರಸ್ತೆಯು ಕೆಸರು ಗದ್ದೆಯಾಗಿದೆ. ಹದಗೆಟ್ಟ ರಸ್ತೆಯಲ್ಲಿ ಸಂಚರಿಸಲಾಗದೆ ನಿವಾಸಿಗಳು ಪರದಾಡುತ್ತಿದ್ದಾರೆ. ಆನೇಕಲ್‌ನ ಚಂದಾಪುರ ಪುರಸಭೆ ವಾರ್ಡ್ ನಂಬರ್ 20ರಲ್ಲಿ ಘಟನೆ ನಡೆದಿದೆ. ಹೆಡ್ ಮಾಸ್ಟರ್ ಲೇಔಟ್‌ಗೆ ಸಂಪರ್ಕ್ ಕಲ್ಪಿಸುವ ರಸ್ತೆ ಇದಾಗಿದೆ. ಮಳೆ ಬಂದಾಗ ರಸ್ತೆ ಜಲಾವೃತಗೊಂಡು ಸಂಪೂರ್ಣ ಕೆಸರುಮಯವಾಗಿದೆ. ನಿತ್ಯ ಓಡಾಡುವ ಜನರಿಗೆ ಈ ರಸ್ತೆಯಲ್ಲಿ ಸಂಚರಿಸುವುದೆ ನರಕಯಾತನೆ ಆಗಿದೆ. ಮಳೆ ಬಂದಾಗ ಕೆಸರು ಗದ್ದೆ, ಬಿಸಿಲಿನ ಸಮಯದಲ್ಲಿ ಧೂಳಿನ ಸಮಸ್ಯೆ ಎದುರಾಗಿದೆ. ರಸ್ತೆಯಲ್ಲಿ ಹಳ್ಳಗುಂಡಿಗಳು ಕಾಣದೆ ಬಿದ್ದು ನಿವಾಸಿಗಳು ಆಸ್ಪತ್ರೆ ಪಾಲಾಗುತ್ತಿದ್ದಾರೆ. ಚಂದಾಪುರ ಪುರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮೈಸೂರು

Murder Case : ಮೈಸೂರಿನಲ್ಲಿ ಬಾವಿ ಪತ್ನಿಯನ್ನು ಕೊಂದು‌ ನೇಣು ಹಾಕಿದ ದುರುಳ!

Murder Case : ಮೈಸೂರಿನಲ್ಲಿ ಬಾವಿ ಪತ್ನಿಯನ್ನು ಕೊಂದು‌ ನೇಣು ಹಾಕಿರುವ ಆರೋಪ ಕೇಳಿ ಬಂದಿದೆ. ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ.

VISTARANEWS.COM


on

By

Murder case
Koo

ಮೈಸೂರು: ಬಾವಿ ಪತ್ನಿಯನ್ನು ಕೊಂದು‌ ನೇಣು ಹಾಕಿರುವ (Murder Case) ಆರೋಪವೊಂದು ಕೇಳಿ ಬಂದಿದೆ. ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಹಿರೇಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಕವಿತಾ (20) ಕೊಲೆಯಾದ ದುರ್ದೈವಿ. ನಿರಂಜನ ಅಲಿಯಾಸ್ ಜಗ್ಗ ಎಂಬಾತನ ಮೇಲೆ ಕೊಲೆ ಆರೋಪವಿದೆ.

ಪುಟ್ಟಮಲ್ಲಪ್ಪ ಹಾಗೂ ಶಿವನಂಜಮ್ಮ ದಂಪತಿ ಪುತ್ರಿ ಕವಿತಾಳಿಗೆ ಇದೇ ಅಕ್ಟೋಬರ್ 21ಕ್ಕೆ ನಿರಂಜನ ಜತೆಗೆ ಮದುವೆ ದಿನಾಂಕ ನಿಶ್ಚಯವಾಗಿತ್ತು. ಕವಿತಾ ಪೋಷಕರು ಜಮೀನಿಗೆ ಹೋದಾಗ ನಿರಂಜನ ಮನೆಗೆ ಬಂದಿದ್ದ. ಈ ವೇಳೆ ಕವಿತಾ ಜತೆಗೆ ಜಗಳ ಮಾಡಿ ಕೊಲೆ ಮಾಡಿ ನೇಣು ಹಾಕಿ ಪರಾರಿ ಆಗಿದ್ದಾನೆ. ಮನೆಯ ಹೆಂಚು ತೆಗೆದು ಓಡಿ‌ ಹೋಗುವಾಗ ಗ್ರಾಮಸ್ಥರಿಂದ ತಡೆಯುವ ಯತ್ನ ನಡೆದಿದೆ.

murder case
murder case

ಎಚ್.ಡಿ.ಕೋಟೆ ಅಂತರಸಂತೆ ಠಾಣೆಗೆ ತೆರಳಿ ಪೊಲೀಸರಿಗೆ ಆರೋಪಿ ಶರಣಾಗಿದ್ದಾನೆ. ನಾನು ಕೊಲೆ‌ ಮಾಡಿಲ್ಲ. ಜನರು ಹೊಡೆದು ಸಾಯಿಸಿ ಬಿಡುತ್ತಾರೆ ಎಂದು ಓಡಿ ಹೋದೆ ಅಷ್ಟೇ ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ. ಆದರೆ ಕವಿತಾ ಆತ್ಮಹತ್ಯೆ ಮಾಡಿಕೊಂಡಳಾ ಅಥವಾ ಕೊಲೆ ಆಗಿದ್ಯಾ ? ಆಗಿದ್ದರೆ ಯಾಕಾಗಿ ಎಂಬ ಪ್ರಶ್ನೆ ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಉತ್ತರ ಕನ್ನಡ

Drowned in Water : ಸಮುದ್ರದ ಅಲೆಗೆ ಸಿಲುಕಿ ವಿದ್ಯಾರ್ಥಿ ಸಾವು; ಹಿಟ್‌ ಆ್ಯಂಡ್‌ ರನ್‌ಗೆ ತಮಿಳುನಾಡು ಮೂಲದ ವಿದ್ಯಾರ್ಥಿ ಬಲಿ

Drowned in Water : ಕಾರವಾರದಲ್ಲಿ ಸಮುದ್ರದ ಅಲೆಗೆ ಸಿಲುಕಿ ವಿದ್ಯಾರ್ಥಿ ಮೃತಪಟ್ಟರೆ, ಇತ್ತ ಹಿಟ್‌ ಆ್ಯಂಡ್‌ ರನ್‌ಗೆ ತಮಿಳುನಾಡು ಮೂಲದ ವಿದ್ಯಾರ್ಥಿ ಬಲಿಯಾಗಿದ್ದಾನೆ.

VISTARANEWS.COM


on

By

Drowned in water
Koo

ಕಾರವಾರ: ಸಮುದ್ರದ ಅಲೆಗೆ ಸಿಲುಕಿ ಪ್ರವಾಸಿ (Drowned in Water) ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದಾನೆ. ಉತ್ತರಕನ್ನಡದ ಭಟ್ಕಳದ ಮುರ್ಡೇಶ್ವರ ಕಡಲತೀರದಲ್ಲಿ ಘಟನೆ ನಡೆದಿದೆ. ಗೌತಮ್ (17) ಮೃತ ದುರ್ದೈವಿ.

ಬೆಂಗಳೂರಿನ ವಿದ್ಯಾ ಸೌಧ ಪ್ರಥಮ ದರ್ಜೆ ಕಾಲೇಜಿನಲ್ಲಿ 220 ವಿದ್ಯಾರ್ಥಿಗಳ ತಂಡ ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ಈಜಲು ಸಮುದ್ರಕ್ಕೆ ಇಳಿದಿದ್ದಾರೆ. ಅಲೆಗಳ ಅಬ್ಬರಕ್ಕೆ ಗೌತಮ್‌ ಸಿಲುಕಿ ಮೃತಪಟ್ಟರೆ, ಇನ್ನೋರ್ವ ವಿದ್ಯಾರ್ಥಿ ಧನುಶ್‌ ಎಂಬಾತನನ್ನು ಲೈಫ್‌ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

ಅಸ್ವಸ್ಥನಾಗಿದ್ದ ಧನುಶ್‌ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಮುದ್ರದ ಅಲೆಯಲ್ಲಿ ಮೋಜು ಮಸ್ತಿ ಮಾಡುವ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಮುರ್ಡೇಶ್ವರ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಹಿಟ್‌ ಆ್ಯಂಡ್‌ ರನ್‌ಗೆ ತಮಿಳುನಾಡು ಮೂಲದ ವಿದ್ಯಾರ್ಥಿ ಬಲಿ

ಭೀಕರ ಹಿಟ್ ಆ್ಯಂಡ್‌ ರನ್ ವಿಡಿಯೋ ಬೆಚ್ಚಿ ಬೀಳಿಸುವಂತಿದೆ. ತಮಿಳುನಾಡು ಮೂಲದ‌ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಕೊಡಗು ಜಿಲ್ಲೆ ಕುಶಾಲನಗರ ಬಳಿಯ ರಾಷ್ಟ್ರೀಯ ಹೆದ್ದಾರಿ 275ರ ಗಂಧದಕೋಟೆ ಬಳಿ ಘಟನೆ ನಡೆದಿದೆ. ಅಪಘಾತದಲ್ಲಿ ವಿದ್ಯಾರ್ಥಿ ಅಗಸ್ಟೀನ್ (19) ಮೃತ ದುರ್ದೈವಿ. ಮತ್ತೋರ್ವ ವಿದ್ಯಾರ್ಥಿ ರವಿಕುಮಾರ್‌ ಗಂಭೀರವಾಗಿ ಗಾಯಗೊಂಡಿದ್ದಾನೆ.

ನಾಮಕಲ್‌ನ ಇಂಜಿನಿಯರಿಂಗ್ ಕಾಲೇಜಿನ 70 ವಿದ್ಯಾರ್ಥಿಗಳು ನಾಮಕಲ್‌ನಿಂದ ಕೊಡಗಿಗೆ ಪ್ರವಾಸಕ್ಕೆ‌ ಬಂದಿದ್ದರು. ರಸ್ತೆ ಬದಿ ಟೀ‌ ಕುಡಿಯಲು‌ ನಿಂತಿದ್ದಾಗ, ಕಾರೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ಅಗಸ್ಟೀನ್‌ ಸ್ಥಳದಲ್ಲೇ ಮೃತಪಟ್ಟರೆ, ರವಿಕುಮಾರ್‌ ಗಾಯಗೊಂಡಿದ್ದಾನೆ.

ಲಾರಿಗೆ ಬೈಕ್‌ ಡಿಕ್ಕಿ; ಯುವಕ ಸ್ಥಳದಲ್ಲೇ ಸಾವು

ಹಿಂಬದಿಯಿಂದ ಲಾರಿಗೆ ಬೈಕ್ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೆ ಯುವಕನೊರ್ವ ಮೃತಪಟ್ಟಿದ್ದಾನೆ. ಮಂಡ್ಯದ ಕೆಆರ್‌ ಪೇಟೆಯ ಮೋದೂರು ಗ್ರಾಮದ ಬಳಿ ಘಟನೆ ನಡೆದಿದೆ. ಶ್ರೀರಂಗಪಟ್ಟಣದ ಬಲ್ಲೇನಹಳ್ಳಿ ಮೂಲದ ಶ್ರೇಯಸ್ ಗೌಡ (27) ಸ್ಥಳದಲ್ಲೆ ಮೃತಪಟ್ಟವರು. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಹೊತ್ತಿ ಉರಿದ ಫ್ಯಾಕ್ಟರಿ

ಬೆಳಗಾವಿಯಲ್ಲಿ ಸ್ಪಾರ್ಕ್ ತಯಾರಿಸುವ ಫ್ಯಾಕ್ಟರಿಗೆ ಬೆಂಕಿ ತಗುಲಿದ್ದು, ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿದೆ. ಬೆಳಗಾವಿ ಕಣಬಗರಿ ಇಂಡಸ್ಟ್ರಿಯಲ್ ಪ್ರದೇಶದ ಆಟೋ ನಗರದಲ್ಲಿ ಘಟನೆ ನಡೆದಿದೆ. ಪ್ರೊ.ಮಹಾದೇವ ರಾಠೋಡ ಮಾಲೀಕತ್ವದ ಸೋನಾಕ್ಷಿ ಇನೋವೇಷನ್ಸ್ ಪ್ರೈವೇಟ್ ಲಿಮಿಟೆಡ್ ಫ್ಯಾಕ್ಟರಿಗೆ
ತಡರಾತ್ರಿ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ.

ಘಟನೆಯಲ್ಲಿ ಯಾವುದೇ ರೀತಿಯಲ್ಲಿ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ, ತಡರಾತ್ರಿ ಸಂಭವಿಸಿದ ಬೆಂಕಿ ಅವಘಡಕ್ಕೆ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ. ಘಟನಾ ಸ್ಥಳಕ್ಕೆ ಮಾಳಮಾರುತಿ ಪಿಎಸ್ಐ ಹೊನ್ನಪ್ಪ ತಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಕಿ ಅವಘಡ ಸಂಭವಿಸುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.
ಮಾಳಮಾರುತಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಶಾರ್ಟ್‌ ಸರ್ಕ್ಯೂರ್ಟ್‌; ಐವರು ಪ್ರಾಣಾಪಾಯದಿಂದ ಪಾರು

ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡು, ಮನೆಯಲ್ಲಿದ್ದ ವಸ್ತುಗಳೆಲ್ಲಾ ಬೆಂಕಿಗಾಹುತಿ ಆಗಿವೆ. ವಾಸದ ಮನೆಯಲ್ಲಿದ್ದ ಐದು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಾಸನ ನಗರದ ಹೊಸಲೈನ್ ರಸ್ತೆಯಲ್ಲಿ ಘಟನೆ ನಡೆದಿದೆ. ಮುಸ್ತಾಫ್ ಎಂಬುವವರಿಗೆ ಸೇರಿದ ಮನೆಯಲ್ಲಿ ರೆಫ್ರಿಜರೇಟರ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿದೆ. ಆರು ಮನೆಗಳಿರುವ ಕಟ್ಟಡದ ಮೊದಲನೇ ಮಹಡಿಯಲ್ಲಿರುವ ಬೆಂಕಿ ಅವಘಡ ನಡೆದಿದೆ. ಅದೃಷ್ಟವಶಾತ್‌ ರೆಫ್ರಿಜರೇಟರ್‌ನಲ್ಲಿ ಪಕ್ಕದಲ್ಲೆ ಇದ್ದ ಗ್ಯಾಸ್ ಸಿಲಿಂಡರ್‌ ಸ್ಫೋಟಗೊಂಡಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಮನೆ ಮಂದಿ ಎಲ್ಲ ಹೊರಗೆ ಓಡಿ ಬಂದಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಹಾಸನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Drugs mafia
ಬೆಂಗಳೂರು11 ನಿಮಿಷಗಳು ago

Drugs Mafia : ಫಾರಿನ್ ಪೋಸ್ಟ್ ಆಫೀಸ್‌ನಲ್ಲಿ 626 ಮಾದಕ ವಸ್ತುಗಳ ಪಾರ್ಸಲ್‌ಗಳು ಪತ್ತೆ!

karnataka rain
ವಿಜಯನಗರ1 ಗಂಟೆ ago

Karnataka Rain : ವಿಜಯನಗರದಲ್ಲಿ ಸಿಡಿಲು ಬಡಿದು ರೈತರಿಬ್ಬರು ಸಾವು

Murder case
ಮೈಸೂರು3 ಗಂಟೆಗಳು ago

Murder Case : ಮೈಸೂರಿನಲ್ಲಿ ಬಾವಿ ಪತ್ನಿಯನ್ನು ಕೊಂದು‌ ನೇಣು ಹಾಕಿದ ದುರುಳ!

Drowned in water
ಉತ್ತರ ಕನ್ನಡ3 ಗಂಟೆಗಳು ago

Drowned in Water : ಸಮುದ್ರದ ಅಲೆಗೆ ಸಿಲುಕಿ ವಿದ್ಯಾರ್ಥಿ ಸಾವು; ಹಿಟ್‌ ಆ್ಯಂಡ್‌ ರನ್‌ಗೆ ತಮಿಳುನಾಡು ಮೂಲದ ವಿದ್ಯಾರ್ಥಿ ಬಲಿ

karnataka rain
ಮಳೆ4 ಗಂಟೆಗಳು ago

Karnataka Rain : ಸತತ ಮಳೆಗೆ ಮನೆಯ ಗೋಡೆ ಕುಸಿದು ವೃದ್ಧ ಸಾವು

murder case
ಚಿಕ್ಕೋಡಿ4 ಗಂಟೆಗಳು ago

Murder Case : ವಿಕೋಪಕ್ಕೆ ತಿರುಗಿದ ಅಣ್ಣ-ತಮ್ಮಂದಿರ ಗಲಾಟೆ; ಓರ್ವನ ಕೊಲೆಯಲ್ಲಿ ಅಂತ್ಯ

Lovers Death
ಕೋಲಾರ5 ಗಂಟೆಗಳು ago

Lovers Death : ವಿಷ ಸೇವಿಸಿ ಪ್ರೇಮಿಗಳು ಆತ್ಮಹತ್ಯೆಗೆ ಯತ್ನ; ಅಪ್ರಾಪ್ತೆ ಸಾವು, ಹುಡುಗ ಗಂಭೀರ

Karnataka Rain
ಮಳೆ6 ಗಂಟೆಗಳು ago

karnataka Rain : ಬೆಂಗಳೂರಿನಲ್ಲಿ ಮಳೆ ಬಂದೋಯ್ತು, ಯಡವಟ್ಟು ಆಯ್ತು; ಜನರಿಗೆ ತಲೆ ಕೆಟ್ಟು ಹೋಯಿತು

Dina Bhvishya
ಭವಿಷ್ಯ7 ಗಂಟೆಗಳು ago

Dina Bhavishya : ಅತಿರೇಕದಲ್ಲಿ ಮಾತನಾಡುವ ಮುನ್ನ ಈ ರಾಶಿಯವರು ಯೋಚಿಸಿ

karnataka Weather Forecast
ಮಳೆ1 ದಿನ ago

Karnataka Weather : ರಾಜ್ಯದಲ್ಲಿ ಮುಂದುವರಿಯಲಿದೆ ಮಳೆಯಾಟ; ಗುಡುಗು, ಮಿಂಚು ಸಾಥ್‌

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

galipata neetu
ಕಿರುತೆರೆ10 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Sharmitha Gowda in bikini
ಕಿರುತೆರೆ1 ವರ್ಷ ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ12 ತಿಂಗಳುಗಳು ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ12 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ10 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ11 ತಿಂಗಳುಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ3 ದಿನಗಳು ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್1 ತಿಂಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್1 ತಿಂಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ1 ತಿಂಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌