Chakravarthy Sulibele: ಜೈಲಿಗೆ ಕಳುಹಿಸಲೇ ಬೇಕು ಅಂತಿದ್ದರೆ ಬನ್ನಿ, ನಾನೂ ನೋಡ್ತೇನೆ: ಎಂಬಿಪಿಗೆ ಸೂಲಿಬೆಲೆ ಸವಾಲ್‌ Vistara News
Connect with us

ಕರ್ನಾಟಕ

Chakravarthy Sulibele: ಜೈಲಿಗೆ ಕಳುಹಿಸಲೇ ಬೇಕು ಅಂತಿದ್ದರೆ ಬನ್ನಿ, ನಾನೂ ನೋಡ್ತೇನೆ: ಎಂಬಿಪಿಗೆ ಸೂಲಿಬೆಲೆ ಸವಾಲ್‌

Chakravarthy Sulibele: ಸಾವರ್ಕರ್‌ ಪ್ರತಿಷ್ಠಾನದಿಂದ ಮೈಸೂರಿನಲ್ಲಿ ಶನಿವಾರ ಆಯೋಜನೆಗೊಂಡಿದ್ದ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ್ದ ಕಾರಣ ಚಕ್ರವರ್ತಿ ಸೂಲಿಬೆಲೆ ಅವರು ರಾಜ್ಯ ಸರ್ಕಾರವನ್ನು ಹಿಟ್ಲರ್‌ ಆಡಳಿತಕ್ಕೆ ಹೋಲಿಕೆ ಮಾಡಿದ್ದರು. ಈ ಹೇಳಿಕೆ ವಿರುದ್ಧ ಸಚಿವ ಎಂ.ಬಿ. ಪಾಟೀಲ್‌ ಗರಂ ಆಗಿದ್ದಲ್ಲದೆ, ಜೈಲಿಗೆ ಹಾಕುವ ಎಚ್ಚರಿಕೆಯನ್ನೂ ನೀಡಿದ್ದರು. ಇದಕ್ಕೆ ಈಗ ಸೂಲಿಬೆಲೆ ತಿರುಗೇಟು ನೀಡಿದ್ದಾರೆ.

VISTARANEWS.COM


on

Chakravarthy Sulibele and MB Patil
Koo

ಬೆಂಗಳೂರು: ರಾಜ್ಯ ಸರ್ಕಾರವನ್ನು ಹಿಟ್ಲರ್‌ ಆಡಳಿತ ಅಂದರೆ ಜೈಲು ಗ್ಯಾರಂಟಿ ಎಂಬ ಸಚಿವ ಎಂ.ಬಿ. ಪಾಟೀಲ್‌ ಹೇಳಿಕೆಗೆ ಚಿಂತಕ ಚಕ್ರವರ್ತಿ ಸೂಲಿಬೆಲೆ ತಿರುಗೇಟು ನೀಡಿದ್ದಾರೆ. “ನನ್ನನ್ನು ಜೈಲಿಗೆ ಕಳುಹಿಸಲೇ ಬೇಕು ಅಂತಿದ್ದರೆ ಬನ್ನಿ, ನಮ್ಮ ಹೋರಾಟವನ್ನು ನಾವು ಮಾಡುತ್ತೇವೆ. ಮಂತ್ರಿ ಆದವರಿಗೆ ವಿಷಯ, ವಸ್ತುವಿನ ಆಳವೇ ಗೊತ್ತಿಲ್ಲ. ಇದು ರಾಜ್ಯದ ದುರದೃಷ್ಟಕರ ಸಂಗತಿ, ಇವರಿಗೆ ರೌಡಿಸಂ ಬಿಟ್ಟರೆ ಬೇರೇನೂ ಗೊತ್ತಿಲ್ಲ” ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.

ಸಚಿವ ಎಂ.ಬಿ. ಪಾಟೀಲ್‌ ಹೇಳಿಕೆ ಬಗ್ಗೆ ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ, ಮೊದಲು ನೀವೇನು ಗ್ಯಾರಂಟಿ ಯೋಜನೆಗಳನ್ನು ಹೇಳಿದ್ದೀರೋ ಅದನ್ನು ಯಾವುದೇ ಷರತ್ತು ಇಲ್ಲದೆ ಜಾರಿ ಮಾಡಿ. ನೀವೇನು ಭಯ ಪಡಿಸಲು ಮುಂದಾಗಿದ್ದೀರೋ ಅದನ್ನು ಎದುರಿಸುವುದು ನಮಗೆ ಗೊತ್ತಿದೆ ಎಂದು ಸವಾಲು ಹಾಕಿದರು.

ಇದನ್ನೂ ಓದಿ: Weather report: ಗಳಿಗೆಗೊಂದು ವಾತಾವರಣ; ಏರಲಿದೆ ತಾಪಮಾನ, ಇರಲಿದೆ ಗುಡುಗು ಮಳೆ

ನಾನು ಹೇಳಿದ ಹಿಟ್ಲರ್ ಸರ್ಕಾರ ಎಂಬ ಹೇಳಿಕೆಯನ್ನು ಎಂ.ಬಿ. ಪಾಟೀಲ್ ಪ್ರೂವ್‌ ಮಾಡುತ್ತಿದ್ದಾರೆ. ಹಿಟ್ಲರ್ ತಾನು ಏನು ಹೇಳುತ್ತಿದ್ದನೋ, ಏನು ಮಾಡುತ್ತಿದ್ದನೋ ಅದು ಮಾತ್ರ ಸತ್ಯ ಎಂಬುದಾಗಿ ಹೇಳುತ್ತಿದ್ದ. ಇವತ್ತಿನ ಸರ್ಕಾರವನ್ನು ನೋಡಿದರೆ ನನಗೆ ಹಾಗೆಯೇ ಅನ್ನಿಸುತ್ತದೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಚಕ್ರವರ್ತಿ ಸೂಲಿಬೆಲೆ ಚಾಲೆಂಜ್‌; ಏನಿದೆ ವಿಡಿಯೊದಲ್ಲಿ?

ಇಂದು ಈ ಸರ್ಕಾರ ನಡೆದುಕೊಳ್ಳುತ್ತಿರುವುದನ್ನು ನೋಡಿದರೆ ನನಗೆ ಹಿಟ್ಲರ್‌ ಸರ್ಕಾರದಂತೆಯೇ ಅನ್ನಿಸುತ್ತದೆ. ಯಾಕೆಂದರೆ ಮೈಸೂರಿನಲ್ಲಿ ನಡೆಯಬೇಕಿದ್ದ ಒಂದು ಕಾರ್ಯಕ್ರಮವನ್ನೂ ಆಗುವುದಕ್ಕೆ ಬಿಡುವುದಿಲ್ಲ ಎಂದು ರಾಜ್ಯ ಸರ್ಕಾರ ಹಠಕ್ಕೆ ಬಿದ್ದಂತೆ ಕಾಣುತ್ತಿದೆ. ಯಾಕೆಂದರೆ ಸಾವರ್ಕರ್‌ ಪ್ರತಿಷ್ಠಾನದಿಂದ ಮೈಸೂರಿನಲ್ಲಿ ಶನಿವಾರ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ನಾನು, ಸಾಹಿತಿ ಎಸ್‌.ಎಲ್‌. ಭೈರಪ್ಪ ಮತ್ತು ವಿಕ್ರಂ ಸಂಪತ್ ಇದ್ದೆವು ಎಂಬ ಕಾರಣಕ್ಕೆ ತಡೆಯೊಡ್ಡಲು ನೋಡಿದರು. ಇನ್ನೊಂದು ವಾದವನ್ನು ಕೇಳಲು ಸಿದ್ಧವಿಲ್ಲದ ಈ ಸರ್ಕಾರ ಹಿಟ್ಲರ್ ಸರ್ಕಾರ ಅಲ್ಲದೆ ಇನ್ನೇನು? ಜೈಲಿಗೆ ಕಳಿಸುತ್ತೇವೆ ಅಂದರೆ ನಿಮ್ಮನ್ನು ಯಾರೂ ಪ್ರಶ್ನೆ ಮಾಡಬಾರದಾ? ಇದೆ ರೀತಿಯ ಬೆದರಿಕೆ ಒಡ್ಡುವ ಕೆಲಸ ಈಗಾಗಲೇ ಎಲ್ಲ ಕಡೆ ಮಾಡಲಾಗುತ್ತಿದೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಇದನ್ನೂ ಓದಿ: Elephant Attack: ರಾಷ್ಟ್ರೀಯ ಹೆದ್ದಾರಿ ಅಡ್ಡಗಟ್ಟಿದ ಆನೆ, ಮರಿಯಾನೆ; ವಾಹನ ಸವಾರರಿಗೆ ಗಂಟೆಗಟ್ಟಲೇ ತಲೆಬೇನೆ!

ಎಂ.ಬಿ. ಪಾಟೀಲ್‌ ಹೇಳಿದ್ದೇನು?

ಭಾನುವಾರ ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಸಚಿವ ಎಂ.ಬಿ. ಪಾಟೀಲ್‌, ಹಿಂದೆ ನಾಲ್ಕು ವರ್ಷ ಸೂಲಿಬೆಲೆ ಏನು ಮಾಡಿದ್ದಾರೆ ಎಂಬುದನ್ನು ಕೇಳಿ. ನಾಲ್ಕು ವರ್ಷ ಸೂಲಿಬೆಲೆ ಅನಾಹುತ ಮಾಡಿದ್ದಾರೆ. ಸೂಲಿಬೆಲೆ ಮಾಡಿದ ಅನಾಹುತಗಳನ್ನು ನಾವು ಸರಿಪಡಿಸುತ್ತಿದ್ದೇವೆ. ಪಠ್ಯಪುಸ್ತಕ, ಹಿಜಾಬ್, ಹಲಾಲ್, ಆಜಾನ್ ಎಂದು ಹೇಳಿ ನಾಟಕ ಮಾಡಿದ್ದಾರೆ. ಇನ್ಮುಂದೆ ಇಂಥ ನಾಟಕ ಮಾಡಿದರೆ ಜೈಲು ಕಂಬಿಯೇ ಗತಿ ಎಂದು ಎಚ್ಚರಿಕೆ ನೀಡಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Cauvery Protest : ಕಾಂಗ್ರೆಸ್‌ ಪಕ್ಷ ತಮಿಳುನಾಡಿನ ಏಜೆಂಟ್‌ ಎಂದ ಬಿಎಸ್‌ವೈ, ಬಿಜೆಪಿಯಿಂದ ಬೀದಿಗಿಳಿದು ಹೋರಾಟ

Cauvery protest : ಬೆಂಗಳೂರಿನ ಮೈಸೂರ್‌ ಬ್ಯಾಂಕ್‌ ಸರ್ಕಲ್‌ನಲ್ಲಿ ಬಿಜೆಪಿ ಬೃಹತ್‌ ಪ್ರತಿಭಟನೆ ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ಬಿಎಸ್‌ವೈ ಅವರು ಕಾಂಗ್ರೆಸನ್ನು ತಮಿಳುನಾಡಿನ ಏಜೆಂಟ್‌ ಎಂದರು.

VISTARANEWS.COM


on

Edited by

BJP Cauvery protest at Bangalore
ಬೆಂಗಳೂರಿನ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಬಿಜೆಪಿ ಪ್ರತಿಭಟನೆ
Koo

ಬೆಂಗಳೂರು: ಕಾವೇರಿ ನೀರಿನ ವಿಚಾರದಲ್ಲಿ (Cauvery protest) ರಾಜ್ಯದ ಹಿತಾಸಕ್ತಿ ಕಾಪಾಡಬೇಕಿದ್ದ ಕಾಂಗ್ರೆಸ್‌ ಪಕ್ಷ ತಮಿಳುನಾಡಿನ ಏಜೆಂಟ್‌ (Congress acting like Tamilnadu Agent) ರೀತಿಯಲ್ಲಿ ವರ್ತಿಸುತ್ತಿದೆ. ಸಚಿವರು ಕೂಡಾ ತಮಿಳುನಾಡಿನ ಪರ ದಲ್ಲಾಳಿಗಳಂತೆ ಮಾತನಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ (BS Yediyurappa) ಆಕ್ರೋಶ ವ್ಯಕ್ತಪಡಿಸಿದರು.

ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆಯನ್ನು ನಿಲ್ಲಿಸಲು ಮತ್ತು ರಾಜ್ಯಕ್ಕೆ ನ್ಯಾಯ ಸಿಗುವಂತೆ ಕಾನೂನಾತ್ಮಕ ಹೋರಾಟ ಸಂಘಟಿಸುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸುವುದಕ್ಕಾಗಿ ಬಿಜೆಪಿ ವತಿಯಿಂದ ಬೆಂಗಳೂರಿನ ಮೈಸೂರು ಬ್ಯಾಂಕ್‌ ಸರ್ಕಲ್‌ನಲ್ಲಿ ಆಯೋಜಿಸಿದ್ದ ಬೃಹತ್‌ ಪ್ರತಿಭಟನೆಯಲ್ಲಿ (BJP Protest At Bangalore) ಅವರು ಮಾತನಾಡಿದರು.

BJP protest at Bangalore

ʻʻರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಹೇಳುವ ಮೊದಲೇ ನೀರು ಬಿಟ್ಟಿದೆ. ನಮ್ಮ‌ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆʼʼ ಎಂದು ಆಕ್ಷೇಪಿಸಿರುವ ಬಿ.ಎಸ್‌ ಯಡಿಯೂರಪ್ಪ ಅವರು, ʻʻತಮಿಳುನಾಡಿನಿಂದ ತಜ್ಞರ ತಂಡ ಕಳಿಸಿ ಕಾವೇರಿಯಲ್ಲಿ ಎಷ್ಟು ನೀರಿದೆ ನೋಡಲಿ. ನಾವು ಸಂಕಷ್ಟದಲ್ಲಿದ್ದೇವೆ ಅಂತ ಗೊತ್ತಾಗಲಿʼʼ ಎಂದು ಹೇಳಿದರು.

ಕಾವೇರಿಯಲ್ಲಿ ನೀರಿಲ್ಲ ಅಂತ ಗೊತ್ತಿದ್ದರೂ ಹಗಲು ರಾತ್ರಿ ನೀರು ಬಿಟ್ಟು ರಾಜ್ಯವನ್ನು ಸಂಕಷ್ಟಕ್ಕೆ ದೂಡಿದೆ. ಹೀಗಾಗಿ ರಾಜ್ಯ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ಹಕ್ಕಿಲ್ಲʼʼ ಎಂದು ಹೇಳಿದ ಯಡಿಯೂರಪ್ಪ, ಇದು ಬಿಜೆಪಿ ಬಿಜೆಪಿಯ ಸಾಂಕೇತಿಕ ಹೋರಾಟ. ಮುಂದೆ ಹಗಲು, ರಾತ್ರಿ ಹೋರಾಟ ಮುಂದುವರೆಸುತ್ತೇವೆ. ಎಲ್ಲಾ ಶಾಸಕ, ಸಂಸದರು ಸೇರಿ ಹೋರಾಟ ಮಾಡುತ್ತೇವೆ. ಮಾಜಿ ಪ್ರಧಾನಿ ದೇವೇಗೌಡರು, ಕುಮಾರಸ್ವಾಮಿ ಅವರೂ ಇನ್ನು ಮುಂದೆ ಒಂದು ಹನಿ ನೀರು ಬಿಡೋದಕ್ಕೆ ಆಗಲ್ಲ, ಬಿಡುವುದು ಸರಿಯಲ್ಲ ಎಂದಿದ್ದಾರೆʼʼ ಎಂದರು.

ಕಾಂಗ್ರೆಸ್‌ ಸರ್ಕಾರ ತಮಿಳುನಾಡಿನ ಏಜಂಟರಂತೆ ವರ್ತಿಸುವುದನ್ನು ಬಿಟ್ಟು ಸುಪ್ರೀಂ ಕೋರ್ಟಿನಲ್ಲಿ ಮನವಿ ಮಾಡಬೇಕು, ಸರಿಯಾಗಿ ವಾಸ್ತವಿಕ ಸ್ಥಿತಿಯನ್ನು ತಿಳಿಸಬೇಕು ಎಂದರು.

BJP protest at Bangalore on cauvery

ಬಿಜೆಪಿ ಪ್ರಮುಖರು ಪ್ರತಿಭಟನೆಯಲ್ಲಿ ಭಾಗಿ

ಬೆಂಗಳೂರು ನಗರ ಬಿಜೆಪಿ ಘಟಕ ಆಯೋಜಿಸಿದ ಈ ಪ್ರತಿಭಟನೆಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಚಿವರಾದ ಅಶ್ವಥ್ ನಾರಾಯಣ್, ಗೋವಿಂದ ಕಾರಜೋಳ, ಸಂಸದರಾದ ಪಿ.ಸಿ. ಮೋಹನ್‌, ಶಾಸಕರಾದ ಗೋಪಾಲಯ್ಯ. ಶಾಸಕ ರವಿ ಸುಬ್ರಹ್ಮಣ್ಯ, ಸಿ.ಕೆ ರಾಮಮೂರ್ತಿ, ಉದಯ್ ಗರುಡಾಚಾರ್ ಭಾಗಿಯಾಗಿದ್ದಾರೆ.

ಮಾಜಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಪರಿಷತ್ ಸದಸ್ಯರಾದ ಛಲವಾದಿ ನಾರಾಯಣಸ್ವಾಮಿ, ಪ್ರತಾಪಸಿಂಹ ನಾಯಕ್, ಬಿಜೆಪಿ ಪ್ರಧಾನಕಾರ್ಯದರ್ಶಿಗಳಾದ ಅಶ್ವಥ್ ನಾರಾಯಣ್, ಸಿದ್ದರಾಜು ಸೇರಿದಂತೆ ಹಲವು ಭಾಗಿಯಾಗಿದ್ದಾರೆ. ಮಹಿಳೆಯರು ಖಾಲಿ ಕೊಡ ಹಿಡಿದು ಪ್ರತಿಭಟನೆ ನಡೆಸಿದರು. ಬೆಂಗಳೂರಿನ ಪರಾಜಿತ ಅಭ್ಯರ್ಥಿಗಳು, ಮಾಜಿ ಕಾರ್ಪೊರೇಟರ್ಸ್, ಕಾರ್ಯಕರ್ತರು ಭಾಗಿಯಾಗಿದ್ದಾರೆ.

ತಮಿಳುನಾಡಿನ ಸಿಎಂ ಸಿದ್ದರಾಮಯ್ಯ, ತಮಿಳುನಾಡು ಡಿಸಿಎಂ ಡಿಕೆ ಶಿವಕುಮಾರ್ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಕಾರ್ಯಕರ್ತರು, ನಾಯಕರು ಕಾವೇರಿ ನಮ್ಮದು, ತೊಲಗಲಿ, ತೊಲಗಲಿ ಕಾಂಗ್ರೆಸ್ ತೊಲಗಲಿ ಎಂದು ಘೋಷಣೆ ಕೂಗಿದರು. ಬಳಿಕ ಪೊಲೀಸರು ಎಲ್ಲರನ್ನು ವಶಕ್ಕೆ ಪಡೆದು ಬಿಡುಗಡೆ ಮಾಡಿದರು.

BJP protest at Bangalore on cauvery

ಪಾರ್ಟನರ್‌ ಕಾಪಾಡಲು ಮುಂದಾದ ಡಿ.ಕೆ. ಶಿವಕುಮಾರ್‌

ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಸಚಿವ ಗೋವಿಂದ ಕಾರಜೋಳ ಅವರು, ಕಾಂಗ್ರೆಸ್ ಸರ್ಕಾರ ಬಂದ ಮೇಲೆ ರಾಜ್ಯ ಅಧಃಪತನವಾಗಿದೆ. ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ಪಕ್ಷದ ಪಾರ್ಟ್‌ನರ್ ಡಿಎಂಕೆಯನ್ನು ಕಾಪಾಡಲು ಮುಂದಾಗಿದ್ದಾರೆ. ಇದೇ ಡಿಕೆ ಶಿವಕುಮಾರ್ ಕಾವೇರಿ ನಮ್ಮ ಹಕ್ಕು ಅಂತ ಪಾದಯಾತ್ರೆ ಮಾಡಿದರು. ಈಗ ಅದನ್ನು ಮರೆತಿದ್ದಾರೆ ಎಂದರು.

ಸೋನಿಯಾ ಗಾಂಧಿ ಮಧ್ಯಪ್ರವೇಶಿಸಲಿ ಎಂದ ಬೊಮ್ಮಾಯಿ

ಕಾವೇರಿ ವಿವಾದಕ್ಕೆ ಸಂಬಂಧಿಸಿ ಸುಲಭದ ದಾರಿ ಇದೆ. ನಿಮ್ಮ ಸ್ನೇಹಿತ ಎಂ.ಕೆ. ಸ್ಟಾಲಿನ್ ಅವರಿಗೆ ಪತ್ರಬರೆಯಿರಿ. ನಮ್ಮ ಬಳಿ ಕುಡಿಯುವ ನೀರಿಲ್ಲ ಅಂತ ಮನವರಿಕೆ ಮಾಡಿಕೊಡಿ ಎಂದು ಸಲಹೆ ನೀಡಿದರು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ.

ʻʻಕಾನೂನಿನ ಒಳಗೆ ರಾಜಕೀಯವಾಗಿ ನಿಲ್ಲಬೇಕಾದರೆ ಈ ವಿಷಯದಲ್ಲಿ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಮಧ್ಯಪ್ರವೇಶ ಮಾಡಬೇಕು. ನೀರು ಕೇಳಬೇಡಿ, ಕರ್ನಾಟಕದಲ್ಲಿ ಸಂಕಷ್ಟ ಇದೆ ಅಂತ ಸ್ಟಾಲಿನ್‌ಗೆ ಹೇಳಬೇಕು. ಇದನ್ನು ಹೇಳಿದ್ರೆ ಸೋನಿಯಾ ಗಾಂಧಿ ಅವರಿಗೆ ಏನು ಅಧಿಕಾರ ಇದೆ ಅಂತಾರೆ. ಸಿದ್ದರಾಮಯ್ಯ ಅವರೇ, ಸೋನಿಯಾ ಗಾಂಧಿ ಅವರು ಇಬ್ಬರೂ ಸಿಎಂಗಳನ್ನು ಕೂರಿಸಿಕೊಂಡು ಮಾತನಾಡಿದರೆ ಆಗುತ್ತದೆ ಎಂದು ಸಲಹೆ ನೀಡಿದರು.

Continue Reading

ಕರ್ನಾಟಕ

Road Accident : ಹಿಟ್‌ ಆ್ಯಂಡ್‌ ರನ್‌; ಬೈಕ್‌ ಸವಾರ ಸತ್ತರೂ ನೋಡದೆ ಹೋದ ಕಾರು ಚಾಲಕ!

Hit And Run case : ಬೆಂಗಳೂರಲ್ಲಿ ಹಿಟ್‌ ಆ್ಯಂಡ್‌ ರನ್‌ ಕೇಸ್‌ ಹೆಚ್ಚಾಗುತ್ತಿದೆ. ವೇಗವಾಗಿ ಬಂದ ಕಾರೊಂದು ಬೈಕ್‌ ಸವಾರನ ಜೀವ ತೆಗೆದಿದೆ. ಅಪಘಾತ ಮಾಡಿದ (Road Accident) ಕಾರು ಚಾಲಕ ಪರಾರಿ ಆಗಿದ್ದಾನೆ.

VISTARANEWS.COM


on

Edited by

Hit Run Case in bengaluru
Koo

ಬೆಂಗಳೂರು: ಬೆಂಗಳೂರಿನ ಕೆಂಗೇರಿ ಸಮೀಪದ ಗಾಣಕಲ್ ರಸ್ತೆಯಲ್ಲಿ ಹಿಟ್‌ ಆ್ಯಂಡ್‌ ರನ್‌ಗೆ (Hit And Run case) ಬೈಕ್ ಸವಾರ (Road Accident) ಬಲಿಯಾಗಿದ್ದಾನೆ. ಅಜಯ್ ಕುಮಾರ್ ಮೃತ ದುರ್ದೈವಿ.

ಚಿಕ್ಕೇಗೌಡನಪಾಳ್ಯ ಕಡೆಯಿಂದ ಉತ್ತರಹಳ್ಳಿ ರಸ್ತೆ ಕಡೆಗೆ ವೇಗವಾಗಿ ಬಂದ ಕಾರು, ಮುಂದೆ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಬೈಕ್ ಸಂಪೂರ್ಣ ಜಖಂಗೊಂಡಿದ್ದು, ಸವಾರ ಸ್ಥಳದಲ್ಲೆ ಮೃತಪಟ್ಟಿದ್ದಾನೆ.

ಅಪಘಾತದ ಬಳಿಕ ಸ್ಥಳದಿಂದ ಕಾರು ಸಮೇತ ಚಾಲಕ ಪರಾರಿ ಆಗಿದ್ದಾನೆ. ಘಟನೆ ಸಂಬಂಧ ಕೆಂಗೇರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಕಾರು ಚಾಲಕನಿಗಾಗಿ ಹುಡುಕಾಟ ನಡೆದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Continue Reading

ಕರ್ನಾಟಕ

Congress Politics : ಮೂರಲ್ಲ ಐದು ಡಿಸಿಎಂ ಬೇಕು; ಬಸವರಾಜ ರಾಯರೆಡ್ಡಿ ಹೊಸ ಬೇಡಿಕೆ; ಡಿಕೆಶಿ principal DCM ಆಗಲಿ!

Congress Politics : ಡಿಸಿಎಂ ಹೆಚ್ಚಳ ಬೇಡಿಕೆಗೆ ಇನ್ನೊಂದು ಸೇರ್ಪಡೆ. ಮೂರಲ್ಲ ಐದು ಬೇಕು ಎಂದಿದ್ದಾರೆ ಕಾಂಗ್ರೆಸ್‌ ಶಾಸಕ ಬಸವರಾಜ ರಾಯರೆಡ್ಡಿ. ಇವರು ಕೂಡಾ ಸಿದ್ದರಾಮಯ್ಯ ಆಪ್ತರು ಎನ್ನುವುದು ವಿಶೇಷ.

VISTARANEWS.COM


on

Edited by

Basavaraja Rayareddy
Koo

ಬೆಂಗಳೂರು: ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್‌ (DK Shivakumar) ಅವರಲ್ಲದೆ ಇನ್ನೂ ಮೂರು ಹೊಸ ಡಿಸಿಎಂ ಸ್ಥಾನಗಳನ್ನು ಸೃಷ್ಟಿಸಿ ಬೇರೆ ಬೇರೆ ವರ್ಗಕ್ಕೆ ಅವಕಾಶ ನೀಡಬೇಕು ಎಂಬ ಸಹಕಾರ ಸಚಿವ ಕೆ.ಎನ್‌. ರಾಜಣ್ಣ (KN Rajanna) ಅವರ ಬೇಡಿಕೆಯ ಚರ್ಚೆಯೇ (Congress Politics) ಜೋರಾಗಿದೆ. ಅದರ ನಡುವೆ ಶಾಸಕ ಬಸವರಾಜ ರಾಯರೆಡ್ಡಿ (MLA Basavaraja Rayareddy) ಇದನ್ನೂ ಮೀರಿಸಿ ಹೊಸದಾಗಿ ಐದು ಉಪಮುಖ್ಯಮಂತ್ರಿಗಳು ಬೇಕು ಎಂಬ ಅಭಿಪ್ರಾಯ ಮಂಡಿಸಿದ್ದಾರೆ. ಒಟ್ಟು ಆರು ಡಿಸಿಎಂಗಳ ಪೈಕಿ ಡಿ.ಕೆ. ಶಿವಕುಮಾರ್‌ ಅವರು ಪ್ರಿನ್ಸಿಪಾಲ್‌ ಡಿಸಿಎಂ (Principal DCM) ಆಗಲಿ ಎಂಬ ಸಲಹೆಯನ್ನೂ ಅವರೇ ನೀಡಿ ಸಂಧಾನ ಸೂತ್ರ ಹೊಸೆದಿದ್ದಾರೆ.

ಅಚ್ಚರಿ ಎಂದರೆ ಈ ಎಲ್ಲಾ ಹೆಚ್ಚುವರಿ ಡಿಸಿಎಂಗಳ ಬೇಡಿಕೆ ಬರುತ್ತಿರುವುದು ಸಿಎಂ ಸಿದ್ದರಾಮಯ್ಯ ಅವರ ಅತ್ಯಾಪ್ತ ವಲಯದಿಂದಲೇ ಎನ್ನುವುದು ವಿಶೇಷ. ಈ ಹಿಂದೆ ಮೂವರು ಬೇಕೆಂದ ಕೆ.ಎನ್‌. ರಾಜಣ್ಣ ಅವರು ಮತ್ತು ಈಗ ಬೇಡಿಕೆ ಮಂಡಿಸಿರುವ ಬಸವರಾಜ ರಾಯರೆಡ್ಡಿ ಇಬ್ಬರೂ ಸಿದ್ದರಾಮಯ್ಯ ಆಸ್ಥಾನಿಕರೇ. ಇವರೆಲ್ಲರೂ ಸಿದ್ದರಾಮಯ್ಯ ಅವರ ಮನದಿಂಗಿತವನ್ನೆ ಮಾತನಾಡುತ್ತಿದ್ದಾರೆ ಎಂಬ ಮಾತು ಜೋರಾಗಿ ಕೇಳಿಬಂದಾಗ ಕೆ.ಎನ್‌ ರಾಜಣ್ಣ ಅವರು ನಿರಾಕರಿಸಿದ್ದರು. ಇದು ಯಾರದೋಗ ಮನಸಿನ ಮಾತಲ್ಲ, ನನ್ನದೇ ಅಭಿಪ್ರಾಯ ಎಂದಿದ್ದರು.

ಹಾಗಿದ್ದರೆ ಬಸವರಾಜ ರಾಯರೆಡ್ಡಿ ವಾದವೇನು? ಯಾಕಂತೆ ಐದು ಡಿಸಿಎಂ?

  1. ನನ್ನ ಪ್ರಕಾರ ರಾಜ್ಯದಲ್ಲಿ ಮೂರಲ್ಲ, ಇನ್ನೂ ಐದು ಹೆಚ್ಚು ಡಿಸಿಎಂ ಹುದ್ದೆಗಳು ಸೃಷ್ಟಿ ಆಗಬೇಕು.
  2. ಈಗ ಡಿಕೆಶಿ ಡಿಸಿಎಂ ಆಗಿ ಇದ್ದಾರೆ. ಅವರ ಜತೆ ಪ್ರಾದೇಶಿಕವಾರು ಮತ್ತು ಜಿಲ್ಲಾವಾರು ಅವಕಾಶ ಕೊಡಬೇಕು.
  3. ಲಿಂಗಾಯತ, ಮುಸ್ಲಿಂ, ದಲಿತ, ಒಂದು ಮಹಿಳೆಗೆ ಅವಕಾಶ ಕೊಡಬೇಕು

ಐದು ಡಿಸಿಎಂ ಆದರೆ ಲಾಭವೇನು?

ಬಸವರಾಜ ರಾಯರೆಡ್ಡಿ ಅವರ ಪ್ರಕಾರ, ಐದು ಮಂದಿ ಡಿಸಿಎಂ ಆದರೆ, ಮುಂದೆ ಬರುವ ಲೋಕಸಭಾ ಚುನಾವಣೆಗೆ ಅನುಕೂಲವಾಗುತ್ತದೆ. ಲೋಕಸಭಾ ಚುನಾವಣೆಯಲ್ಲಿ ಎಲ್ಲ ಸಮುದಾಯಗಳು ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸುತ್ತವೆ. ಹೀಗಾಗಿ ನಾನು ಡಿಸಿಎಂ ಹುದ್ದೆ ಸೃಷ್ಟಿ ವಿಚಾರದಲ್ಲಿ ರಾಜಣ್ಣ ಅವರನ್ನು ಬೆಂಬಲಿಸುತ್ತೇನೆ, ಎರಡು ಹೆಚ್ಚು ಮಾಡಬೇಕು ಎಂದು ಕೇಳುತ್ತೇನೆ ಎಂದಿದ್ದಾರೆ ರಾಯರೆಡ್ಡಿ.

ಹಾಗಂತ ಲೋಕಸಭೆಯಲ್ಲಿ ಬಿಜೆಪಿ ಗಿಂತಲೂ ಸ್ಥಾನ ಕಡಿಮೆ ಗೆದ್ದರೆ ಸರ್ಕಾರಕ್ಕೆ ಅಭದ್ರತೆ ಕಾಡಬಹುದು ಎಂಬ ರಾಜಣ್ಣ ವಾದವನ್ನು ಅವರು ಒಪ್ಪಲಿಲ್ಲ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸುಭದ್ರ ಸರ್ಕಾರ ಎಂದರು.

ಇದು ಡಿಕೆಶಿ ವಿರುದ್ಧ ಅಲ್ಲ, ಅವರು ಪ್ರಿನ್ಸಿಪಾಲ್‌ ಡಿಸಿಎಂ

ಇದೆಲ್ಲವೂ ಈಗ ಏಕೈಕ ಡಿಸಿಎಂ ಆಗಿರುವ ಡಿ.ಕೆ. ಶಿವಕುಮಾರ್‌ ಅವರ ಬಲವನು ಕುಂದಿಸಲು ಮಾಡುತ್ತಿರುವ ಪ್ರಯತ್ನ ಎಂಬ ವಾದವನ್ನು ಅವರು ಅಲ್ಲಗಳೆದರು. ʻʻಇದು ಡಿಕೆಶಿ ವಿರುದ್ಧ ಅಂದ್ರೆ ನಾನು ಒಪ್ಪಲ್ಲ. ಅವರು ಒಬ್ಬ ಒಳ್ಳೆಯ ಸಂಘಟನಾಕಾರ. ಅವರು ಮೊದಲ ಡಿಸಿಎಂ ಇಲ್ಲವೇ ಪ್ರಿನ್ಸಿಪಲ್ ಡಿಸಿಎಂ ಆಗಲಿ. ಉಳಿದವರಿಗೆ ಎರಡು ಮೂರು ಅಂತ ಕೊಡಲಿʼʼ ಎಂದು ವಾದಿಸಿದರು.

ಇದನ್ನೂ ಓದಿ: Congress Politics : ಮುಗಿಯದ 3 ಡಿಸಿಎಂ ಡ್ರಾಮಾ; ತೆವಲಿಗೆ ಮಾತಾಡ್ಬೇಡಿ ರಾಜಣ್ಣ ಎಂದು ಮಾಗಡಿ ಬಾಲಕೃಷ್ಣ ನೇರ ವಾಗ್ದಾಳಿ

ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಸಿಎಂ: ಸ್ಪಷ್ಟೋಕ್ತಿ

ಇದೇ ಸಂದರ್ಭದಲ್ಲಿ ಅವರು ಸಿದ್ದರಾಮಯ್ಯ ಅವರೇ ಮುಂದಿನ ಐದು ವರ್ಷವೂ ಸಿಎಂ ಆಗಿರಲಿದ್ದಾರೆ ಎಂದು ಹೇಳಿದ್ದಾರೆ.

ʻʻಸಿದ್ದರಾಮಯ್ಯ ಅವರನ್ನು ಪೂರ್ಣಾವಧಿ ಸಿಎಂ ಅಂತಲೇ ಮಾಡಿರುವುದು. ಒಮ್ಮೆ ಸಿಎಂ ಆದ ಮೇಲೆ ಅವರು ಸ್ವ ಇಚ್ಛೆಯಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬಹುದು. ಇಲ್ಲವೇ ಬೇರೆಯವರಿಗೆ ಅವಕಾಶ ಕೊಡಬೇಕು ಎಂದು ಹೈಕಮಾಂಡ್ ರಾಜೀನಾಮೆ ಕೊಡುವಂತೆ ಹೇಳಬಹುದು. ಆದರೆ, ಈಗ ಹೈಕಮಾಂಡ್ ಸಿಎಂ ಮಾಡುವಾಗ ಅವರನ್ನ ಪೂರ್ಣಾವಧಿ ಸಿಎಂ ಎಂದೇ ಹೇಳಿದೆʼʼ ಎಂದು ಸ್ಪಷ್ಟಪಡಿಸಿದರು ಬಸವರಾಜ ರಾಯರೆಡ್ಡಿ.

ಬೆಂಗಳೂರು: ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್‌ (DK Shivakumar) ಅವರಲ್ಲದೆ ಇನ್ನೂ ಮೂರು ಹೊಸ ಡಿಸಿಎಂ ಸ್ಥಾನಗಳನ್ನು ಸೃಷ್ಟಿಸಿ ಬೇರೆ ಬೇರೆ ವರ್ಗಕ್ಕೆ ಅವಕಾಶ ನೀಡಬೇಕು ಎಂಬ ಸಹಕಾರ ಸಚಿವ ಕೆ.ಎನ್‌. ರಾಜಣ್ಣ (KN Rajanna) ಅವರ ಬೇಡಿಕೆಯ ಚರ್ಚೆಯೇ ಜೋರಾಗಿದೆ. ಅದರ ನಡುವೆ ಶಾಸಕ ಬಸವರಾಜ ರಾಯರೆಡ್ಡಿ (MLA Basavaraja Rayareddy) ಇದನ್ನೂ ಮೀರಿಸಿ ಹೊಸದಾಗಿ ಐದು ಉಪಮುಖ್ಯಮಂತ್ರಿಗಳು ಬೇಕು ಎಂಬ ಅಭಿಪ್ರಾಯ ಮಂಡಿಸಿದ್ದಾರೆ. ಒಟ್ಟು ಆರು ಡಿಸಿಎಂಗಳ ಪೈಕಿ ಡಿ.ಕೆ. ಶಿವಕುಮಾರ್‌ ಅವರು ಪ್ರಿನ್ಸಿಪಾಲ್‌ ಡಿಸಿಎಂ (Principal DCM) ಆಗಲಿ ಎಂಬ ಸಲಹೆಯನ್ನೂ ಅವರೇ ನೀಡಿ ಸಂಧಾನ ಸೂತ್ರ ಹೊಸೆದಿದ್ದಾರೆ.

ಹೆಚ್ಚುವರಿ ಡಿಸಿಎಂ ಬೇಡಿಕೆಗೆ ಭಾರಿ ಪರ-ವಿರೋಧ

ಡಿ.ಕೆ.ಶಿವಕುಮಾರ್‌ ಅವರ ಜತೆ ಹೆಚ್ಚುವರಿಯಾಗಿ ಡಿಸಿಎಂಗಳನ್ನು ಮಾಡುವ ವಿಚಾರ ಪಕ್ಷದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಜಿ. ಪರಮೇಶ್ವರ್‌ ಸೇರಿದಂತೆ ಕೆಲವೇ ಕೆಲವು ಮಂದಿ ಇದನ್ನು ಬೆಂಬಲಿಸಿದ್ದಾರೆ. ಈಗ ಬಸವರಾಜ ರಾಯರೆಡ್ಡಿ ಬೆಂಲ ನೀಡಿದ್ದಾರೆ. ಉಳಿದವರಲ್ಲಿ ಹೆಚ್ಚಿನವರು ಇದು ಅನಗತ್ಯವಾಗಿ ಗೊಂದಲ ಸೃಷ್ಟಿಸುವ ಪ್ರಯತ್ನ ಎಂದಿದ್ದಾರೆ.

Continue Reading

ಕರ್ನಾಟಕ

Cauvery Protest : ಮಂಡ್ಯದಲ್ಲಿ ಭುಗಿಲೆದ್ದ ಆಕ್ರೋಶ; ಕಾವೇರಿ ನೀರಿಗಾಗಿ ವಿದ್ಯಾರ್ಥಿಗಳು ಸಾಥ್‌

ಕಾವೇರಿ ವಿಚಾರವಾಗಿ ಸುಪ್ರೀಂ ಕೋರ್ಟ್ ಕೊಟ್ಟ ತೀರ್ಪು ಕರ್ನಾಟಕದ ಜನರಿಗೆ ಬರೆ ಎಳೆದಂತಾಗಿದೆ . ಹೀಗಾಗಿ ಮಂಡ್ಯ ಸೇರಿದಂತೆ ಹಲವೆಡೆ ಪ್ರತಿಭಟನೆ ಜೋರಾಗಿದೆ.

VISTARANEWS.COM


on

Edited by

Protest in Mandya over Cauvery water
Koo

ಕಾವೇರಿ ನೀರು ಹಂಚಿಕೆ ಖಂಡಿಸಿ ಸೆ.23ರಂದು ಮಂಡ್ಯ ಬಂದ್‌‌ಗೆ (Cauvery Protest) ಕರೆ ನೀಡಲಾಗಿದೆ. ಇದರ ಜತೆಗೆ ಬೆಂಗಳೂರು ಗಡಿಭಾಗ ಹಾಗೂ ಮದ್ದೂರಿನಲ್ಲೂ ಬಂದ್‌‌ಗೆ ಕರೆ ಕೊಡಲಾಗಿದೆ. ಬಂದ್‌ಗೆ ವಿವಿಧ ಸಂಘಟನೆಗಳಿಂದ ಸಾಥ್ ಸಿಕ್ಕಿದ್ಯಾ? ಮಂಡ್ಯದಲ್ಲಿ ಪ್ರತಿಭಟನೆಯ ಕಿಚ್ಚು ಹೇಗಿತ್ತು ಎಂಬುದರ ಮಾಹಿತಿ ಇಲ್ಲಿದೆ.

Cauvery Protests in several parts of the state for Cauvery water
ಬಾಯಿಗೆ ಮಣ್ಣು ಹಾಕಿಕೊಂಡು ಆಕ್ರೋಶ ವ್ಯಕ್ತಪಡಿಸಿದ ಹೋರಾಟಗಾರರು
Urulu seve
ರಸ್ತೆಯಲ್ಲಿ ಮಲಗಿ ಉರುಳು ಸೇವೆ ಮಾಡಿದ ವ್ಯಕ್ತಿ
Bike jatha
ಮದ್ದೂರು ರಸ್ತೆಯಲ್ಲಿ ಕಾವೇರಿ ಹೋರಾಟ ಬೈಕ್‌ ಜಾಥಾ ನಡೆಸಿ ಆಕ್ರೋಶ
stores are closed
ಅಂಗಡಿ ಮುಂಗಟ್ಟು ಬಂದ್‌ ಮಾಡಿ ಬೆಂಬಲ ನೀಡಿದ ಮದ್ದೂರು ಜನತೆ
Protest in bengluru rural
ಬೆಂಗಳೂರು ಗಡಿಭಾಗದಲ್ಲಿ ಕಾವೇರಿ ನಿರ್ವಹಣಾ ಪ್ರಾಧಿಕಾರದ ಪ್ರತಿಕೃತಿ ದಹಿಸಿ ಆಕ್ರೋಶ
Cauvery Protests in several parts of the state for Cauvery water
ಬೈಕ್‌ ಜಾಥಾ ಮೂಲಕ ಬಂದ್‌ಗೆ ಬೆಂಬಲ ನೀಡುವಂತೆ ಮಾಡಿದ ಹೋರಾಟಗಾರರು
Cauvery Protests in several parts of the state for Cauvery water
ಮಂಡ್ಯದಲ್ಲಿ ಪೆಟ್ರೋಲ್‌ ಬಂಕ್‌ ಮುಚ್ಚಿಸಿದ ಹೋರಾಟಗಾರರು
Cauvery Protests in several parts of the state for Cauvery water
ಕಿವಿಯಲ್ಲಿ ಹೂವಿಟ್ಟುಕೊಂಡು ಪ್ರತಿಭಟಿಸಿದ ಹೋರಾಟಗಾರರು

police alert
ಮುಂಜಾಗ್ರತಾ ಕ್ರಮವಾಗಿ ಮಂಡ್ಯ ಬಂದ್‌‌‌ಗೆ ಕರೆ ಕೊಟ್ಟ ಬೆನ್ನಲ್ಲೇ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ
Puneeth Photo Cauvery Protests in several parts of the state for Cauvery water
ಮಂಡ್ಯದ ಕಾವೇರಿ ಹೋರಾಟದಲ್ಲಿ ಅಪ್ಪು ಚಿತ್ರ
Cauvery Protests in several parts of the state for Cauvery water
ಪುನೀತ್‌ ಫೋಟೊ ಹಿಡಿದು ಕುಳಿತ ಹೋರಾಟಗಾರರು
Cauvery Protests in several parts of the state for Cauvery water
ಬಂದ್‌ ಹಿನ್ನೆಲೆ ರಸ್ತೆಗಿಳಿದ ಬೈಕ್‌ ಸವಾರನನ್ನು ತಡೆಹಿಡಿದ ಮಹಿಳೆ ಹೊಟ್ಟೆಗೆ ಏನ್ ತಿನ್ನುತ್ತೀರಿ ಎಂದು ಆಕ್ರೋಶ
Cauvery Protests in several parts of the state for Cauvery water
ಕಾವೇರಿ ನೀರಿಗಾಗಿ ವಿದ್ಯಾರ್ಥಿಗಳ ಪ್ರತಿಭಟನೆ
ಖಾಲಿ ಬಿಂದಿಗೆ ಹಿಡಿದು ಹೆದ್ದಾರಿಯಲ್ಲಿ ಧಿಕ್ಕಾರ ಕೂಗಿ ಪ್ರತಿಭಟನೆ
ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆ
ಹಾಸನದಲ್ಲೂ ಕಾವೇರಿ ಕಿಚ್ಚು
Continue Reading
Advertisement
BJP Cauvery protest at Bangalore
ಕರ್ನಾಟಕ17 mins ago

Cauvery Protest : ಕಾಂಗ್ರೆಸ್‌ ಪಕ್ಷ ತಮಿಳುನಾಡಿನ ಏಜೆಂಟ್‌ ಎಂದ ಬಿಎಸ್‌ವೈ, ಬಿಜೆಪಿಯಿಂದ ಬೀದಿಗಿಳಿದು ಹೋರಾಟ

Rashmika Mandanna
ಬಾಲಿವುಡ್24 mins ago

Rashmika Mandanna: ಕತ್ತಿನಲ್ಲಿ ತಾಳಿ, ಕೆಂಪು ಬಾರ್ಡರ್‌ ಸೀರೆಯುಟ್ಟು ಫಸ್ಟ್‌ ಲುಕ್‌ನಲ್ಲೇ ನಾಚಿ ನೀರಾದ ರಶ್ಮಿಕಾ!

kanti parmar dalit FPS
ದೇಶ27 mins ago

Dalit vs Thakors: ದಲಿತರ ನ್ಯಾಯಬೆಲೆ ಅಂಗಡಿಯಿಂದ ಪಡಿತರ ಖರೀದಿಸದವರ ಕಾರ್ಡ್‌ಗಳನ್ನು ಪಕ್ಕದ ಹಳ್ಳಿಗೆ ವರ್ಗಾಯಿಸಿದ ಡಿಸಿ!

Varanasi Stadium
ಕ್ರಿಕೆಟ್29 mins ago

Varanasi Stadium: ವಾರಾಣಸಿ ಕ್ರಿಕೆಟ್‌ ಸ್ಟೇಡಿಯಂ ಶಿವಮಯ; ಹೀಗಿರಲಿದೆ ಇದರ ವೈಭವ, ವೈಶಿಷ್ಟ್ಯ

Parineeti Chopra Wedding
South Cinema30 mins ago

Parineeti Chopra: ಮದುವೆಯಲ್ಲಿ ಫೋನ್‌, ಕ್ಯಾಮೆರಾಗಳಿಗೆ ಟೇಪ್‌, 100 ಭದ್ರತಾ ಸಿಬ್ಬಂದಿ!

Hit Run Case in bengaluru
ಕರ್ನಾಟಕ49 mins ago

Road Accident : ಹಿಟ್‌ ಆ್ಯಂಡ್‌ ರನ್‌; ಬೈಕ್‌ ಸವಾರ ಸತ್ತರೂ ನೋಡದೆ ಹೋದ ಕಾರು ಚಾಲಕ!

Basavaraja Rayareddy
ಕರ್ನಾಟಕ1 hour ago

Congress Politics : ಮೂರಲ್ಲ ಐದು ಡಿಸಿಎಂ ಬೇಕು; ಬಸವರಾಜ ರಾಯರೆಡ್ಡಿ ಹೊಸ ಬೇಡಿಕೆ; ಡಿಕೆಶಿ principal DCM ಆಗಲಿ!

IBSA meeting
ದೇಶ1 hour ago

India Canada Row: ಭಾರತದಿಂದಲೇ G20 ಶೃಂಗಸಭೆ ಯಶಸ್ವಿ ಎಂದ ಬ್ರೆಜಿಲ್;‌ ಕೆನಡಾ ಪಿಎಂ ಆರೋಪಕ್ಕೆ ಏನೆಂದಿತು?

MS Dhoni And S Sreesanth
ಕ್ರಿಕೆಟ್1 hour ago

MS Dhoni: ತಂಡಕ್ಕಾಗಿ ಧೋನಿ ಬ್ಯಾಟಿಂಗ್‌ ‘ತ್ಯಾಗ’ ಮಾಡಿಲ್ಲ; ಮಾಜಿ ಬೌಲರ್‌ ಶಾಕಿಂಗ್‌ ಹೇಳಿಕೆ

Mannangatti Poster
South Cinema1 hour ago

Actress Nayanthara: ಯೂಟ್ಯೂಬರ್ ಸಿನಿಮಾಗೆ ನಯನತಾರಾ ನಾಯಕಿ; ಅಚ್ಚರಿಗೊಂಡ ಫ್ಯಾನ್ಸ್‌!

7th Pay Commission
ನೌಕರರ ಕಾರ್ನರ್11 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ8 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ4 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Govt employees ssociation
ಕರ್ನಾಟಕ7 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

kpsc recruitment 2023 pdo recruitment 2023
ಉದ್ಯೋಗ2 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Rajendra Singh Gudha
ದೇಶ2 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Village Accountant Recruitment
ಉದ್ಯೋಗ7 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike; Order from Govt
ನೌಕರರ ಕಾರ್ನರ್7 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ9 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

7th Pay Commission
ಕರ್ನಾಟಕ11 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Dina bhavishya
ಪ್ರಮುಖ ಸುದ್ದಿ9 hours ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಇಂದು ಬಾಸ್‌ನಿಂದ ಕಿರಿಕ್‌!

Dina Bhavishya
ಪ್ರಮುಖ ಸುದ್ದಿ1 day ago

Dina Bhavishya : ದಿನದ ಮಟ್ಟಿಗೆ ಈ ರಾಶಿಯವರು ಹೂಡಿಕೆ ಮಾಡ್ಬೇಡಿ!

Dina Bhavishya
ಪ್ರಮುಖ ಸುದ್ದಿ3 days ago

Dina Bhavishya : ನಂಬಿದ ವ್ಯಕ್ತಿಗಳು ಮೋಸ ಮಾಡ್ತಾರೆ ಹುಷಾರ್‌!

dina bhavishya
ಪ್ರಮುಖ ಸುದ್ದಿ5 days ago

Dina Bhavishya : ಆಪ್ತರೊಂದಿಗೆ ಜಗಳವಾದೀತು ಹುಷಾರ್‌!

Dina Bhavishya
ಪ್ರಮುಖ ಸುದ್ದಿ6 days ago

Dina Bhavishya : ಈ ರಾಶಿಯವರು ಇಂದು ಮುಟ್ಟಿದ್ದೆಲ್ಲಾ ಚಿನ್ನ!

Ramalinga Reddy
ಕರ್ನಾಟಕ7 days ago

ಇನ್ಮುಂದೆ ಹೇಗಂದ್ರೆ ಹಾಗೆ ದೇವಸ್ಥಾನ ಕಟ್ಟೋ ಹಾಗಿಲ್ಲ! ರಾಮಲಿಂಗಾ ರೆಡ್ಡಿ ಮಾಸ್ಟರ್ ಪ್ಲಾನ್

Bannerghatta Park
ಆರೋಗ್ಯ7 days ago

Nipah Virus : ನಿಫಾ ವೈರಸ್‌ ಭೀತಿ; ಬನ್ನೇರುಘಟ್ಟ ಪಾರ್ಕ್‌ನಲ್ಲಿ ಹೈ ಅಲರ್ಟ್

Villagers exclude menstruating women
ಕರ್ನಾಟಕ1 week ago

Tumkur News : ಮುಟ್ಟಾದ ಮಹಿಳೆಯರನ್ನು ಗ್ರಾಮದಿಂದ ಹೊರಗಿಟ್ಟು ಮೌಡ್ಯಾಚರಣೆ!

dina bhavishya
ಪ್ರಮುಖ ಸುದ್ದಿ1 week ago

Dina Bhavishya : ಈ ದಿನ ಭೂಮಿ, ಆಸ್ತಿ ಖರೀದಿಸುವ ಮುನ್ನ ಎಚ್ಚರ!

Kadri temple is the target for Shariq NIA reveals
ಕರ್ನಾಟಕ1 week ago

ಮಂಗಳೂರು ಸ್ಫೋಟ : ಶಾರಿಕ್‌ಗೆ ಕದ್ರಿ ದೇವಸ್ಥಾನವೇ ಟಾರ್ಗೆಟ್; ರಿವೀಲ್ ಮಾಡಿದ ಎನ್ಐಎ

ಟ್ರೆಂಡಿಂಗ್‌