Super Speciality Hospital: ಉ.ಕ.ದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ; ಬಗೆಹರಿದ ಜಾಗದ ಗೊಂದಲ - Vistara News

ಆರೋಗ್ಯ

Super Speciality Hospital: ಉ.ಕ.ದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ; ಬಗೆಹರಿದ ಜಾಗದ ಗೊಂದಲ

Super Speciality Hospital: ಉತ್ತರ ಕನ್ನಡ ಜಿಲ್ಲೆಯ ಬಹು ದಿನಗಳ ಬೇಡಿಕೆಯಾಗಿದ್ದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಕುಮಟಾದಲ್ಲಿ ಸರ್ವೆ ನಂಬರ್ 440ರಲ್ಲಿ 15.35 ಎಕರೆ ಜಾಗವನ್ನು ಇದೀಗ ಮೀಸಲು ಇಡಲಾಗಿದೆ.

VISTARANEWS.COM


on

super specialty hospital kumta
ಕುಮಟಾದಲ್ಲಿ ಆಸ್ಪತ್ರೆ ನಿರ್ಮಾಣಕ್ಕಾಗಿ ಮೀಸಲು ಇಡಲಾಗಿರುವ ಜಾಗ.
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
Super Speciality Hospital

ಎಸ್.ಎಸ್.ಸಂದೀಪ ಸಾಗರ, ಕಾರವಾರ
ಉತ್ತರ ಕನ್ನಡಿಗರ ಬಹು ದಿನಗಳ ಬೇಡಿಕೆಯಾಗಿದ್ದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ (Super Speciality Hospital) ನಿರ್ಮಾಣಕ್ಕೆ ಎದುರಾಗಿದ್ದ ಜಾಗದ ಗೊಂದಲವನ್ನು ಸರ್ಕಾರ ಕೊನೆಗೂ ಪರಿಹರಿಸಿದೆ. ಕುಮಟಾ ತಾಲೂಕಿನ ಹೃದಯ ಭಾಗದಲ್ಲೇ ಜಾಗವನ್ನು ಮಂಜೂರು ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶಿಸುವ ಮೂಲಕ ಆಸ್ಪತ್ರೆ ನಿರ್ಮಾಣದ ಕನಸು ನನಸಾಗುವ ಭರವಸೆ ಮೂಡಿಸಿದೆ.

ಕುಮಟಾದಲ್ಲಿ ಆಸ್ಪತ್ರೆ ನಿರ್ಮಾಣಕ್ಕಾಗಿ ಸರ್ವೆ ನಂಬರ್ 440ರಲ್ಲಿ 15.35 ಎಕರೆ ಜಾಗವನ್ನು ಮೀಸಲಿಡಲಾಗಿದೆ. ಹಿಂದೆ ಈ ಜಾಗವನ್ನು ಏಕಲವ್ಯ ಮಾದರಿ ವಸತಿ ಶಾಲೆ ನಿರ್ಮಾಣಕ್ಕಾಗಿ ಮೀಸಲಿಡಲಾಗಿತ್ತು. ಆಸ್ಪತ್ರೆ ನಿರ್ಮಾಣಕ್ಕೆ ಸೂಕ್ತ ಜಾಗವಾಗಿರುವ ಹಿನ್ನೆಲೆಯಲ್ಲಿ ಸದ್ಯ ಈ ಜಾಗವನ್ನು ಆಸ್ಪತ್ರೆಗಾಗಿ ನೀಡುವಂತೆ ಸೂಚನೆ ನೀಡಲಾಗಿದ್ದು, ವಸತಿ ಶಾಲೆ ನಿರ್ಮಾಣಕ್ಕೆ ಮುಂದಿನ ದಿನಗಳಲ್ಲಿ ಪರ್ಯಾಯ ಜಾಗವನ್ನು ಒದಗಿಸುವ ಭರವಸೆಯನ್ನು ನೀಡಲಾಗಿದೆ.

ವಸತಿ ಶಾಲೆಯ ಜಾಗ ಆಸ್ಪತ್ರೆಗೆ

ಉತ್ತರ ಕನ್ನಡ ಜಿಲ್ಲಾಡಳಿತವು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಏಕಲವ್ಯ ವಸತಿ ಶಾಲೆಗೆ ಮೀಸಲಿರಿಸಲಾಗಿದ್ದ ಜಾಗವನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ ನೀಡುವಂತೆ ಇಲಾಖೆಗೆ ಪತ್ರ ಬರೆದಿತ್ತು. ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರು ಉತ್ತರ ಕನ್ನಡದ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಹಿನ್ನೆಲೆಯಲ್ಲಿ ಜಾಗವನ್ನು ಸರ್ಕಾರಕ್ಕೆ ಹಿಂದಿರುಗಿಸಲು ಅನುಮತಿ ನೀಡಿದ್ದರು. ಅದರಂತೆ ಏಕಲವ್ಯ ವಸತಿ ಶಾಲೆಗಾಗಿ ನಿಗದಿಪಡಿಸಿ ಇರಿಸಲಾಗಿದ್ದ 17 ಎಕರೆ 14 ಗುಂಟೆ ಜಮೀನಿನಲ್ಲಿ, 15 ಎಕರೆ 35 ಗುಂಟೆಯಷ್ಟು ಪ್ರದೇಶವನ್ನು ಸರ್ಕಾರಕ್ಕೆ ಹಿಂದಿರುಗಿಸಿದೆ. ಜತೆಗೆ ಏಕಲವ್ಯ ವಸತಿ ಶಾಲೆಗೆ ಪರ್ಯಾಯ ಜಾಗ ಒದಗಿಸುವಂತೆ ಜಿಲ್ಲಾಡಳಿತಕ್ಕೆ ಷರತ್ತು ವಿಧಿಸಿ, ಇದೀಗ ಇದೇ ಪ್ರದೇಶವನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ ಕಾಯ್ದಿರಿಸಲು ಸರ್ಕಾರದ ಆಪ್ತ ಕಾರ್ಯದರ್ಶಿಗಳು ಆದೇಶದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Satish Kaushik: 800 ರೂ. ಜೇಬಿನಲ್ಲಿಟ್ಟುಕೊಂಡು ಮುಂಬೈಗೆ ಬಂದು ಗೆದ್ದ ಸತೀಶ್‌ ಕೌಶಿಕ್‌

ತಾಂತ್ರಿಕ ತೊಂದರೆಯಿಂದ ಎದುರಾಗಿದ್ದ ಜಾಗದ ಸಮಸ್ಯೆ

ಈ ಮೊದಲು ಕುಮಟಾ ತಾಲೂಕಿನ ಮಿರ್ಜಾನ್ ರೈಲ್ವೆ ನಿಲ್ದಾಣದ ಎದುರು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಜಾಗವನ್ನು ಗುರುತಿಸಲಾಗಿತ್ತು. ಇದೇ ಸ್ಥಳಕ್ಕೆ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಶೀಘ್ರದಲ್ಲೇ ಆಸ್ಪತ್ರೆಗೆ ಅಡಿಗಲ್ಲು ಹಾಕುವ ಭರವಸೆ ನೀಡಿದ್ದರು. ಆದರೆ, ಈ ಪ್ರದೇಶ ಅರಣ್ಯ ಇಲಾಖೆಯ ವ್ಯಾಪ್ತಿಗೆ ಒಳಪಡುವ ಹಿನ್ನೆಲೆಯಲ್ಲಿ ಜಾಗವನ್ನು ಪಡೆದುಕೊಳ್ಳಲು ಸರ್ಕಾರಕ್ಕೆ ತಾಂತ್ರಿಕ ತೊಡಕುಗಳು ಎದುರಾಗಿತ್ತು. ಹೀಗಾಗಿ ಪರ್ಯಾಯ ಜಾಗಕ್ಕಾಗಿ ಹುಡುಕಾಟ ಆರಂಭಿಸಲಾಗಿತ್ತು. ಕುಮಟಾ ತಾಲೂಕಿನ ವ್ಯಾಪ್ತಿಯ ಹೆಗಡೆ ಗ್ರಾಮ, ಕುಮಟಾ ರೈಲ್ವೆ ನಿಲ್ದಾಣ ಹಾಗೂ ಮೂರೂರು ಗುಡ್ಡ ಸೇರಿದಂತೆ ಮೂರ್ನಾಲ್ಕು ಸ್ಥಳಗಳಲ್ಲಿ ಆಸ್ಪತ್ರೆ ನಿರ್ಮಾಣದ ಸಾಧ್ಯತೆಗಳ ಕುರಿತು ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿ ವರದಿ ನೀಡಿತ್ತು.

ಜಿಲ್ಲೆಯ ಕೇಂದ್ರ ಸ್ಥಳ

ಅದರನ್ವಯ ಕೊನೆಗೆ ಹೆಗಡೆ ಗ್ರಾಮಕ್ಕೆ ತೆರಳುವ ರಸ್ತೆ ಮಾರ್ಗದ ಸಮೀಪದಲ್ಲಿ, ಕೃಷಿ ಇಲಾಖೆಗೆ ಹೊಂದಿಕೊಂಡಿರುವ ಜಾಗವನ್ನು ಇದೀಗ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಆಯ್ಕೆ ಮಾಡಲಾಗಿದೆ. ಕುಮಟಾ, ಜಿಲ್ಲೆಯ ಕರಾವಳಿ ತಾಲೂಕುಗಳಲ್ಲಿ ಕೇಂದ್ರ ಸ್ಥಳದಲ್ಲಿದ್ದು ಘಟ್ಟದ ಮೇಲಿನ ಶಿರಸಿ, ಸಿದ್ದಾಪುರ, ಯಲ್ಲಾಪುರ ತಾಲೂಕುಗಳಿಗೂ ಸಮೀಪದಲ್ಲಿದೆ. ಈ ಕಾರಣದಲ್ಲಿ ಇಲ್ಲಿ ಆಸ್ಪತ್ರೆ ನಿರ್ಮಾಣವಾದಲ್ಲಿ ಜಿಲ್ಲೆಯ ಜನತೆಗೆ ಅನುಕೂಲವಾಗಲಿದೆ ಎನ್ನುವ ಉದ್ದೇಶದಿಂದ ಕುಮಟಾದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ.

ಇದನ್ನೂ ಓದಿ: ಹೊಸ ಇನಿಂಗ್ಸ್​ ಆರಂಭಿಸಿದ ಆರ್​ಸಿಬಿ ಸ್ಪಿನ್ನರ್​ ವಾನಿಂದು ಹಸರಂಗ, ಐಪಿಎಲ್​ಗೆ ಬರುವುದು ತಡ?

ಮುಖ್ಯಮಂತ್ರಿಗಳಿಂದ ಅಡಿಗಲ್ಲು

ಕಳೆದ ತಿಂಗಳು ಶಿರಸಿಯಲ್ಲಿ ಏರ್ಪಡಿಸಲಾಗಿದ್ದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿನಂದನಾ ಸಮಾರಂಭಕ್ಕೆ ಆಗಮಿಸಿದ್ದ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶೀಘ್ರದಲ್ಲೇ ಆಸ್ಪತ್ರೆಗೆ ಜಾಗ ನಿಗದಿಪಡಿಸಿ ಅಡಿಗಲ್ಲನ್ನೂ ತಾವೇ ಹಾಕುವುದಾಗಿ ಹೇಳಿದ್ದರು. ಅದರಂತೆ ಮುಂದಿನ ದಿನಗಳಲ್ಲಿ ಕುಮಟಾದಲ್ಲಿ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯ ವಿತರಿಸುವ ಬೃಹತ್ ಕಾರ್ಯಕ್ರಮವನ್ನು ಕುಮಟಾದಲ್ಲಿಯೇ ಆಯೋಜಿಸಿ ಮುಖ್ಯಮಂತ್ರಿಗಳನ್ನು ಆಹ್ವಾನಿಸಲು ನಿರ್ಧರಿಸಲಾಗಿದ್ದು, ಇದೇ ಸಂದರ್ಭದಲ್ಲಿ ಆಸ್ಪತ್ರೆಗೂ ಅಡಿಗಲ್ಲು ಹಾಕಿಸಲು ಚಿಂತನೆ ನಡೆಸಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Fruit Juice Side Effects: ಹಣ್ಣು ತಿಂದರೆ ಒಳ್ಳೆಯದೋ, ಹಣ್ಣಿನ ಜ್ಯೂಸ್‌ ಕುಡಿದರೆ ಒಳ್ಳೆಯದೋ?

ಬೇಸಿಗೆಯಲ್ಲಿ ಹಣ್ಣಿನ ಜ್ಯೂಸ್‌ಗೆ ಭಾರಿ ಬೇಡಿಕೆ. ಆದರೆ ತಾಜಾ ಹಣ್ಣುಗಳ ಜ್ಯೂಸ್‌ಗಳಿಂದಲೂ ಕೆಲವು ಸಮಸ್ಯೆಗಳಿವೆ. ಇವೂ ಕೂಡಾ ನಾವು ಅಂದುಕೊಂಡಷ್ಟು ಆರೋಗ್ಯಕರವಲ್ಲ. ಬನ್ನಿ, ಹಣ್ಣುಗಳ ಜ್ಯೂಸ್‌ ಕೂಡಾ ಅತಿಯಾಗಬಾರದು (Fruit Juice Side Effects) ಯಾಕೆ ಎಂಬುದನ್ನು ನೋಡೋಣ.

VISTARANEWS.COM


on

Fruit Juice Side Effects
Koo

ಬೇಸಿಗೆ ಕಾಲ ಹಾಗೂ ಜ್ಯೂಸ್‌ಗಳಿಗೆ ಇರುವ ಸಂಬಂಧ ದೊಡ್ಡದು. ಬೇಸಿಗೆಯ ಬಿಸಿಲಿಗೆ ತಂಪಾದ ಜ್ಯೂಸ್‌ ಹೀರಿದರೆ ಆಗುವ ನೆಮ್ಮದಿ, ಸುಖ ಪದಗಳಲ್ಲಿ ವರ್ಣಿಸುವುದು ಕಷ್ಟವೇ. ಆದರೂ, ಆರೋಗ್ಯದ ವಿಚಾರಕ್ಕೆ ಬಂದರೆ, ಹಲವರು, ನೈಸರ್ಗಿಕವಾದ ಜ್ಯೂಸ್‌ಗಳನ್ನು ಮಾಡಿ ಕುಡಿಯುವುದು ಒಳ್ಳೆಯದೇ ಹೊರತು, ಹೊರಗೆ ರೆಡಿಮೇಡ್‌ ಆಗಿ ಟೆಟ್ರಾ ಪ್ಯಾಕ್‌ಗಳಲ್ಲಿ ಸಿಗುವ ಕೃತಕ ರುಚಿಗಳ ಹಣ್ಣುಗಳ ಪೇಯಗಳು ಒಳ್ಳೆಯದಲ್ಲ ಎಂಬ ಸತ್ಯ ಎಲ್ಲರಿಗೂ ತಿಳಿದಿದೆ. ಜ್ಯೂಸ್‌ ಅಂಗಡಿಗಳಲ್ಲಿ ಬೇಸಿಗೆಯಲ್ಲಿ ನೆರೆದಿರುವ ಕಿಕ್ಕಿರಿದ ಜನಸಂದಣಿಯೇ ಇದಕ್ಕೆ ಸಾಕ್ಷಿ. ಆದರೆ, ತಾಜಾ ಹಣ್ಣುಗಳ ಜ್ಯೂಸ್‌ಗಳಿಂದಲೂ ಕೆಲವು ಸಮಸ್ಯೆಗಳಿವೆ. ಇವೂ ಕೂಡಾ ನಾವು ಅಂದುಕೊಂಡಷ್ಟು ಆರೋಗ್ಯಕರವಲ್ಲ. ಬನ್ನಿ, ಹಣ್ಣುಗಳ ಜ್ಯೂಸ್‌ ಕೂಡಾ ಅತಿಯಾಗಬಾರದು (Fruit Juice Side Effects) ಯಾಕೆ ಎಂಬುದನ್ನು ನೋಡೋಣ.

Drinking Glasses with Fruit Juice

ಅಧಿಕ ಸಕ್ಕರೆಯ ಅಂಶ

ತಾಜಾ ಹಣ್ಣಿನ ಜ್ಯೂಸ್‌ಗಳನ್ನು, ಮಿಲ್ಕ್‌ ಶೇಕ್‌ಗಳನ್ನು ಮಾಡಲು ಒಂದಷ್ಟು ಸಕ್ಕರೆ ಸುರಿದಿರುತ್ತೇವೆ. ಅಧಿಕವಾಗಿ ಸಕ್ಕರೆ ಸುರಿದು ಜ್ಯೂಸ್‌ಗಳನ್ನು ಮಾಡುವಿದರಿಂದ ಹಣ್ಣುಗಳು ತಾಜಾ ಆಗಿದ್ದರೂ ಕೂಡಾ ಅದರಲ್ಲಿರುವ ಸಕ್ಕರೆಯಿಂದಾಗಿ ಇವು ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಜೊತೆಗೆ ಹಣ್ಣಿನ ಜ್ಯೂಸ್‌ ದ್ರವರೂಪದಲ್ಲಿರುವುದರಿಂದ ಬಹುಬೇಗನೆ ಸಕ್ಕರೆಯ ಅಂಶ ನೇರವಾಗಿ ರಕ್ತಕ್ಕೆ ಸೇರ್ಪಡೆಯಾಗುತ್ತದೆ. ಸಕ್ಕರೆಯ ಮಟ್ಟ ಏರಲು ಇದೂ ಕಾರಣವಾಗಬಹುದು. ಹೀಗಾಗಿ, ಹಣ್ಣನ್ನು ಜ್ಯೂಸ್‌ ಮಾಡಿ ಕುಡಿಯುವ ಬದಲು, ಹಾಗೆಯೇ ತಿನ್ನಬಹುದು. ಹಣ್ಣುಗಳಲ್ಲಿರುವ ನಾರಿನಂಶವೂ ಹೊಟ್ಟೆ ಸೇರುವುದರಿಂದ ಸಕ್ಕರೆ ಬಹುಬೇಗನೆ ರಕ್ತಕ್ಕೆ ಸೇರದು. ಹೀಗಾಗಿ ಜ್ಯೂಸ್‌ ಕುಡಿಯುವ ಯೋಚನೆಯಿದ್ದರೆ ಆರೋಗ್ಯದ ದೃಷ್ಟಿಯಿಂದ ತರಕಾರಿಗಳ ಜ್ಯೂಸ್‌ ಹಣ್ಣಿನ ಜ್ಯೂಸ್‌ಗಳಿಗಿಂತ ಒಳ್ಳೆಯದು. ಇವುಗಳಲ್ಲಿ ಸಕ್ಕರೆಯ ಅಂಶ ಅತ್ಯಂತ ಕಡಿಮೆ ಇರುತ್ತದೆ.

ನಾರಿನಂಶ ಕಡಿಮೆ ಇರುತ್ತದೆ

ಜ್ಯೂಸ್‌ ಮಾಡಿದಾಗ, ಹಣ್ಣುಗಳಲ್ಲಿರುವ ನಾರಿನಂಶ ವ್ಯರ್ಥವಾಗುತ್ತದೆ. ಹಣ್ಣಿನಿಂದ ಜ್ಯೂಸನ್ನು ಹಿಂಡಿ ಉಳಿದೆಲ್ಲವನ್ನೂ ಸೋಸಿ ಎಸೆಯುವುದರಿಂದ ಇದರ ನಾರಿನಂಶವು ನಷ್ಟವಾಗುತ್ತದೆ. ಒಳ್ಳೆಯ ಪೋಷಕಾಂಶಗಳು ನಷ್ಟವಾಗುವುದರಿಂದ ಜ್ಯೂಸ್‌ನಲ್ಲಿರುವ ಸಕ್ಕರೆಯ ಅಂಶ ನೇರವಾಗಿ ರಕ್ತಕ್ಕೆ ಸೇರುತ್ತದೆ. ಹಾಗಾಗಿ ಜ್ಯೂಸ್‌ ಕುಡಿಯುವ ಇರಾದೆಯಿದ್ದರೆ, ಹೆಚ್ಚು ಸೋಸಬೇಡಿ. ಸೋಸಿದರೂ ಬೀಜ ಬೇರ್ಪಡಿಸಿ ಹಣ್ಣಿನ ನಾರಿನಂಶವನ್ನು ಮತ್ತೆ ಜ್ಯೂಸ್‌ಗೆ ಹಾಕಿ.

Image Of Fruit Juices Role in Managing Blood Sugar Levels

ಪೋಷಕಾಂಶ ನಷ್ಟವಾಗಬಹುದು

ಜ್ಯೂಸ್‌ ಮಾಡುವುದರಿಂದ ಹಣ್ಣನ್ನು ಮಿಕ್ಸಿಯಲ್ಲಿ ತಿರುಗಿಸಿ ಸೋಸುವ ಕಾರಣ ಅದರ ಪೋಷಕಾಂಶ ನಷ್ಟವಾಗುವ ಸಾಧ್ಯತೆ ಹೆಚ್ಚು. ಹಣ್ಣಿನಲ್ಲಿರುವ ನಾರಿನಂಶ ಮಾತ್ರ ನಷ್ಟವಾಗುವುದಲ್ಲ, ಅದರಲ್ಲಿರುವ ವಿಟಮಿನ್‌ಗಳು, ಖನಿಜಾಂಶಗಳು, ಆಂಟಿ ಆಕ್ಸಿಡೆಂಟ್‌ಗಳೂ ನಾಶವಾಗುತ್ತವೆ. ಹಾಗಾಗಿ ಹಣ್ಣನ್ನು ಹಾಗೆಯೇ ತಿನ್ನುವುದೇ ಬಹಳ ಉತ್ತಮ.

ಅಧಿಕ ಕ್ಯಾಲರಿ ಇರುತ್ತವೆ

ಜ್ಯೂಸ್‌ಗೆ ಒಂದಷ್ಟು ಸಕ್ಕರೆಯನ್ನೂ ಹಾಕಿರುವುದರಿಂದ ಕ್ಯಾಲರಿಯ ವಿಚಾರಕ್ಕೆ ಬಂದರೆ ಇದರಲ್ಲಿ ಅಧಿಕ ಕ್ಯಾಲರಿ ಇರುತ್ತದೆ. ಹೀಗಾಗಿ ಫಿಟ್‌ನೆಸ್‌ ಬಯಸುವ ಮಂದಿಗೆ, ಹೃದ್ರೋಗ, ಮಧುಮೇಹ, ಕೊಲೆಸ್ಟೆರಾಲ್‌ ಇತ್ಯಾದಿಗಳ ಸಮಸ್ಯೆ ಇರುವ ಮಂದಿಗೆ ಇದು ಖಂಡಿತವಾಗಿ ಒಳ್ಳೆಯದಲ್ಲ.

Acidity sourness flatulence are constant guests of sleepless persons Sleeping Tips

ಅಸಿಡಿಟಿ ಸಮಸ್ಯೆ

ಕೆಲವು ಹಣ್ಣಿನ ಜ್ಯೂಸ್‌ಗಳು, ಬಹಳ ಮುಖ್ಯವಾಗಿ ಸಿಟ್ರಸ್‌ ಹಣ್ಣಿನ ಜ್ಯೂಸ್‌ಗಳು ಕೆಲವು ಮಂದಿಯಲ್ಲಿ ಅಸಿಡಿಟಿ ಸಮಸ್ಯೆಯನ್ನೂ ಹುಟ್ಟು ಹಾಕುತ್ತದೆ. ಅಸಿಡಿಕ್‌ ಜ್ಯೂಸ್‌ಗಳು ಈ ಸಮಸ್ಯೆ ತರುತ್ತವೆ ಎಂದಾದಲ್ಲಿ ಅವಕ್ಕೆ ಹೆಚ್ಚು ನೀರು ಸೇರಿಸಿ ಜ್ಯೂಸ್‌ ಮಾಡಿ. ನೀರು ಸಾಕಷ್ಟು ಕುಡಿಯಿರಿ.

ಇದನ್ನೂ ಓದಿ: Tips On Tea: ಚಹಾ ಅತಿಯಾಗಿ ಕುದಿಸುವುದು ಒಳ್ಳೆಯದಲ್ಲ! ಏಕೆ ಗೊತ್ತಾ?

ಹಲ್ಲು ಹುಳುಕಾಗಬಹುದು

ಜ್ಯೂಸ್‌ನಲ್ಲಿ ಸಕ್ಕರೆಯ ಅಂಶ ಹೆಚ್ಚಿರುವುದರಿಂದ ನೇರವಾಗಿ ಹಲ್ಲಿನ ಸಂಪರ್ಕಕ್ಕೆ ಬರುವುದರಿಂದ ಜ್ಯೂಸ್‌ನ ಸಕ್ಕರೆಯ ಅಂಶ ಹಲ್ಲಿನ ಭಾಗದಲ್ಲಿ ಸೇರಿಕೊಳ್ಳುವುದರಿಂದ ಹಲ್ಲು ಹುಳುಕಾಗಬಹುದು.
ಇವಿಷ್ಟಲ್ಲದೆ, ಸರಿಯಾದ ಶುದ್ಧ ನೀರಿನ ಬಳಕೆಯಿಲ್ಲದೆ ಮಾಡಿದ ರಸ್ತೆ ಬದಿಯ ಹಣ್ಣಿನ ಜ್ಯೂಸ್‌ ಅಂಗಡಿಗಳಲ್ಲಿ ಕುಡಿಯುವುದರಿಂದ ಆರೋಗ್ಯ ಕೈಕೊಡುವ ಸಂಭವವೂ ಅಧಿಕ. ಐಸ್‌ ಹಾಕಿ ಕುಡಿಯುವುದರಿಂದ ನೆಗಡಿ, ಗಂಟಲು ನೋವು, ಜ್ವರ ಇತ್ಯಾದಿಗಳ ಸಂಭವವೂ ಇರುತ್ತದೆ. ಜೊತೆಗೆ ಈಗಾಗಲೇ ನಿತ್ಯವೂ ತಮ್ಮ ಆರೋಗ್ಯ ಸಮಸ್ಯೆಗಳಿಗಾಗಿ ಮಾತ್ರೆಗಳನ್ನು ತಿನ್ನುವ ಮಂದಿ ಹಣ್ಣಿನ ಜ್ಯೂಸ್‌ ಕುಡಿಯುವುದರಿಂದ ಮತ್ತಷ್ಟು ಸಮಸ್ಯೆಗಳನ್ನೂ ಆಹ್ವಾನಿಸುವ ಸಂದರ್ಭಗಳೂ ಬರಬಹುದು. ಉದಾಹರಣೆಗೆ ಮಧುಮೇಹ, ಹೃದ್ರೋಗ ಅಥವಾ ಇನ್ನೂ ಅನೇಕ ಸಮಸ್ಯೆಗಳಿರುವ ಮಂದಿ ನಿತ್ಯವೂ ಮಾತ್ರೆಗಳನ್ನು ಸೇವಿಸುತ್ತಿರುವಾಗ ಆರೋಗ್ಯಕರ ಆಹಾರದ ಕಾಳಜಿ ವಹಿಸಲೇ ಬೇಕಾಗುತ್ತದೆ. ಇಂಥವರೂ ಜ್ಯೂಸ್‌ ಬದಲು ಹಣ್ಣನ್ನೇ ನೆಚ್ಚಿದರೆ ಒಳ್ಳೆಯದು.

Continue Reading

ಆರೋಗ್ಯ

Tips On Tea: ಚಹಾ ಅತಿಯಾಗಿ ಕುದಿಸುವುದು ಒಳ್ಳೆಯದಲ್ಲ! ಏಕೆ ಗೊತ್ತಾ?

ಚಹಾ ಸಿದ್ಧಪಡಿಸಿದ ಮೇಲೆ ಅದನ್ನು ಮತ್ತೆ ಮತ್ತೆ ಬಿಸಿ ಮಾಡುವುದು, ಹಾಲು ಹಾಕಿದ ಮೇಲೆ ದೀರ್ಘಕಾಲ ಕುದಿಸುವುದು- ಇಂಥ ಅಭ್ಯಾಸಗಳು ಬಹಳಷ್ಟು ಜನರಿಗೆ ಇರುತ್ತವೆ. ಇಂಥ ಅಭ್ಯಾಸಗಳು ಅನಾರೋಗ್ಯಕರ ಪರಿಣಾಮಗಳನ್ನು ಆರೋಗ್ಯದ ಮೇಲೆ ಉಂಟು ಮಾಡಬಹುದು. ಈ ಬಗೆಗಿನ (Tips On Tea) ವಿವರಗಳು ಇಲ್ಲಿವೆ.

VISTARANEWS.COM


on

Tips On Tea
Koo

ಚಹಾ ಮಾಡುವುದೆಂದರೆ ರಾಕೆಟ್‌ ಹಾರಿಸಿದಂತೇನಲ್ಲ, ಸುಲಭದ ಕೆಲಸ. ಮಾಡುವ ರೀತಿಗಳಲ್ಲಿ ಒಬ್ಬರಿಂದೊಬ್ಬರಿಗೆ ಭಿನ್ನತೆ ಇರಬಹುದೇ ಹೊರತು, ಚಹಾವನ್ನು ಪಾಯಸ ಮಾಡಿದಂತೆ ಮಾಡುವುದಕ್ಕಂತೂ ಸಾಧ್ಯವಿಲ್ಲ. ಅಂದರೆ, ಚಹಾ ಡಿಕಾಕ್ಷನ್‌ಗೆ ಹಾಲು ಹಾಕಿದ ಮೇಲೆ ಪಾಯಸದಂತೆ ಕುದಿಸುವವರಿದ್ದಾರೆ; ಡಿಕಾಕ್ಷನ್‌ ಕುದಿಸಿ ಕೊನೆಗೆ ಹಾಲು ಹಾಕುವವರಿದ್ದಾರೆ- ಹೀಗೆ. ದಿನಕ್ಕೊಂದೆರಡು ಬಾರಿ ಚಹಾ ಕುಡಿಯುವುದರಲ್ಲಿ ಸಮಸ್ಯೆಗಳಿಲ್ಲ. ಅದರಲ್ಲೂ ಏಕ್ಕಿ, ಶುಂಠಿ ಮುಂತಾದ ಮಸಾಲೆಗಳನ್ನು ಹಾಕಿ ಚಹಾ ಮಾಡುವುದರಿಂದ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಲಾಭಗಳಿವೆ. ಆದರೆ ಇದನ್ನು ಮಾಡುವ ಕ್ರಮ ತಪ್ಪಾಗಿದ್ದರೆ, ಆರೋಗ್ಯಕ್ಕೆ ಸಮಸ್ಯೆಗಳು (Tips On Tea) ಎದುರಾಗಬಹುದು.

Cup of Tea

ಏನು ಹಾಗೆಂದರೆ?

ಒಮ್ಮೆ ಚಹಾ ಸಿದ್ಧಪಡಿಸಿದ ಮೇಲೆ ಅದನ್ನು ಮತ್ತೆ ಮತ್ತೆ ಬಿಸಿ ಮಾಡುವುದು, ಹಾಲು ಹಾಕಿದ ಮೇಲೆ ದೀರ್ಘಕಾಲ ಕುದಿಸುವುದು- ಇಂಥ ಅಭ್ಯಾಸಗಳು ಬಹಳಷ್ಟು ಜನರಿಗೆ ಇರುತ್ತವೆ. ಇಂಥ ಯಾವುದೇ ಅಭ್ಯಾಸಗಳು ಅನಾರೋಗ್ಯಕರ ಪರಿಣಾಮಗಳನ್ನು ಆರೋಗ್ಯದ ಮೇಲೆ ಉಂಟು ಮಾಡಬಹುದು. ಈ ಬಗೆಗಿನ ವಿವರಗಳು ಇಲ್ಲಿವೆ.

ಏಕೆ ಕುದಿಸಬಾರದು?

ಚಹಾದಲ್ಲಿ ಟ್ಯಾನಿನ್‌ ಅಂಶಗಳಿವೆ. ಟ್ಯಾನಿನ್‌ಗಳೆಂದು ಪಾಲಿಫೆನಾಲ್‌ನಂಥ ಜೈವಿಕ ಕಣಗಳು. ಇವು ಹಣ್ಣುಗಳು, ತರಕಾರಿಗಳು, ಬೀಜಗಳು, ವೈನ್‌, ಚಹಾ ಇಂಥವುಗಳು ಕಂಡುಬರುತ್ತವೆ. ಪ್ರೊಟೀನ್‌, ಸೆಲ್ಯುಲೋಸ್‌, ಖನಿಜಗಳ ಜೊತೆಗೆಲ್ಲ ಟ್ಯಾನಿನ್‌ಗಳು ಅಂಟಿಕೊಂಡಿರುತ್ತವೆ. ಚಹಾದಲ್ಲೂ ಈ ಟ್ಯಾನಿನ್‌ಗಳು ಹೇರಳವಾಗಿರುವುದರಿಂದ, ದೀರ್ಘಕಾಲದವರೆಗೆ ಚಹಾ ಕುದಿಸಿದರೆ, ಕಬ್ಬಿಣದಂಶ ಹೀರಿಕೊಳ್ಳುವುದಕ್ಕೆ ದೇಹಕ್ಕೆ ಸಂಕಷ್ಟವನ್ನು ನೀಡುತ್ತವೆ. ಚಹಾವನ್ನು ಅತಿಯಾಗಿ ಕುದಿಸುವುದರಿಂದ ಸತ್ವಗಳು ನಾಶವಾಗಿ, ಹೊಟ್ಟೆಯಲ್ಲಿ ಆಸಿಡಿಟಿಯನ್ನು ಮಾತ್ರವೇ ಆಹ್ವಾನಿಸಿಕೊಂಡಂತಾಗುತ್ತದೆ. ಇದಲ್ಲದೆ, ಚಹಾವನ್ನು ಅತಿಯಾಗಿ ಕುದಿಸುವುದರ ಅಡ್ಡ ಪರಿಣಾಮಗಳು ಇನ್ನೂ ಏನೇನಿವೆ?

ICMR Dietary Guidelines

ಸತ್ವಗಳ ನಾಶ

ಇಲ್ಲೀಗ ಕೇವಲ ಚಹಾ ಡಿಕಾಕ್ಷನ್‌ ಕುದಿಸುತ್ತಿರುವುದರ ಬಗ್ಗೆಯಲ್ಲ ಹೇಳುತ್ತಿರುವುದು. ಡಿಕಾಕ್ಷನ್‌ಗೆ ಹಾಲು ಹಾಕಿ, ಚಹಾ ಸಿದ್ಧವಾದ ಮೇಲೆ ಕುದಿಸುವುದರ ಬಗೆಗಿನ ಮಾತಿದು. ಹಾಲಿನಲ್ಲಿರುವ ಕ್ಯಾಲ್ಶಿಯಂ, ವಿಟಮಿನ್‌ ಸಿ, ವಿಟಮಿನ್‌ ಬಿ12 ಮುಂತಾದ ಪೋಷಕಾಂಶಗಳು ನಾಶವಾಗಿ ಬಿಡುತ್ತವೆ. ಹಾಗಾಗಿ ಚಹಾ ಅತಿಯಾಗಿ ಕುದಿಸುವುದು ಸಲ್ಲದು.

ರುಚಿಗೆಡುತ್ತದೆ

ಚಹಾವನ್ನು ಅತಿಯಾಗಿ ಕುದಿಸುವುದರಿಂದ ರುಚಿಗೆಟ್ಟಂತಾಗುತ್ತದೆ. ಅದರಲ್ಲೂ ಚಹಾ ರುಚಿಯನ್ನು ಸೂಕ್ಷ್ಮವಾಗಿ ಆಸ್ವಾದಿಸುವವರಿಗಂತೂ ಅರೆಘಳಿಗೆ ಹೆಚ್ಚು ಕುದಿಸಿದರೂ ಇಷ್ಟವಾಗದು. ಹೆಚ್ಚು ಕುದಿಸುವುದರಿಂದ ಸಣ್ಣದೊಂದು ಒಗರು, ಕಹಿ ರುಚಿಗಳು ಚಹಾದಲ್ಲಿ ಸೇರಿಕೊಳ್ಳುತ್ತವೆ. ಮಸಾಲೆ ಚಹಾಗಳಾದರೆ ಅದರ ಘಮವನ್ನೂ ಕೆಡಿಸುವಂತೆ ಕಹಿವಾಸನೆ ಚಹಾದಲ್ಲಿ ಸೇರಿಕೊಳ್ಳುತ್ತದೆ.

ealthy internal organs of human digestive system / highlighted blue organs

ಜೀರ್ಣಾಂಗಗಳ ಸಮಸ್ಯೆ

ಚಹಾ ಅತಿಯಾಗಿ ಕುದಿಸುವುದರಿಂದ ಅದರ ಪಿಎಚ್‌ ಹೆಚ್ಚುತ್ತದೆ. ಇದರಿಂದ ಆಸಿಡಿಟಿಯ ತೊಂದರೆ ಅಂಟಿಕೊಳ್ಳಬಹುದು. ಜೊತೆಗೆ, ಹಾಲಿನಲ್ಲಿರುವ ಪ್ರೊಟೀನ್‌ಗಳ ಸ್ವರೂಪ ವ್ಯತ್ಯಾಸವಾಗುತ್ತದೆ. ಇದರಿಂದ ಜೀರ್ಣವಾಗುವುದು ಕಷ್ಟವಾಗಿ, ಅಜೀರ್ಣ, ಹೊಟ್ಟೆಯುಬ್ಬರ, ಹೊಟ್ಟೆನೋವಿಗೆ ಕಾರಣವಾಗಬಹುದು.

ಹಾನಿಕಾರಕ ಅಂಶಗಳು

ಕೆಫೇನ್‌ ಅಂಶವನ್ನು ಅತಿಯಾಗಿ ಕುದಿಸುವುದರ ಅಡ್ಡ ಪರಿಣಾಮಗಳು ಇದ್ದೇಇವೆ. ಜೊತೆಗೆ, ಹೆಚ್ಚಿನ ಉಷ್ಣತೆಯಲ್ಲಿ ಹಾಲಿನಲ್ಲಿರುವ ಲ್ಯಾಕ್ಟೋಸ್‌ ಅಂಶವು ಚಹಾ ಅಂಶಗಳು ಮತ್ತು ಪ್ರೊಟೀನ್‌ಗಳ ಜೊತೆಗೂಡಿ ಇನ್ನಷ್ಟು ತೊಂದರೆ ನೀಡುತ್ತವೆ. ಹಾಗಾಗಿ ಹೆಚ್ಚಿನ ಪ್ರಮಾಣದಲ್ಲಿ ಚಹಾ ಕುಡಿಯುವುದರಿಂದ ಆರೋಗ್ಯ ಹದಗೆಡಬಹುದು.

ಕಾರ್ಸಿನೋಜೆನ್‌ಗಳು

ಅತಿಯಾಗಿ ಕುದಿಸುವುದು ಅಕ್ರಿಲಮೈಡ್‌ನಂಥ ಕಾರ್ಸಿನೋಜೆನ್‌ಗಳನ್ನು ಸೃಷ್ಟಿ ಮಾಡಬಹುದು. ಆದರೆ ಇದು ಅತಿ ಕಡಿಮೆ ಪ್ರಮಾಣದಲ್ಲಿ ಸೃಷ್ಟಿಯಾಗುವುದರಿಂದ, ಈ ಮೂಲಕ ಕ್ಯಾನ್ಸರ್‌ನಂಥ ರೋಗಗಳು ಬರುವಂಥ ಸಾಧ್ಯತೆ ಅಸಾಧ್ಯ. ಆದರೂ ಹೀಗೊಂದು ಸಾಧ್ಯತೆ ಇರುವುದನ್ನು ತಳ್ಳಿ ಹಾಕುವಂತಿಲ್ಲ.

Masala tea or chai

ಎಷ್ಟು ಕುದಿಸಬೇಕು?

ಹಾಗಾದರೆ ಎಷ್ಟು ಕುದಿಸಬೇಕು? ಹಾಲು ಹಾಕುವ ಮುನ್ನ ಮತ್ತು ಹಾಕಿದ ಮೇಲೆ- ಎಲ್ಲವೂ ಸೇರಿ ಅತಿ ಹೆಚ್ಚೆಂದರೆ 4-5 ನಿಮಿಷಗಳವರೆಗೆ ಕುದಿಸಿದರೆ ಸಾಕು. ಆದರೆ ಎಷ್ಟು ಕಡಿಮೆ ಕುದಿಸಿದರೂ ಅಷ್ಟು ಒಳ್ಳೆಯದು. ತಜ್ಞರ ಪ್ರಕಾರ, ಚಹಾವನ್ನು ಕುದಿಸುವುದಕ್ಕಿಂತ ನಿಧಾನ ವಿಧಾನದಲ್ಲಿ ಬ್ರೂ ಮಾಡುವುದು ಒಳ್ಳೆಯ ವಿಧಾನ. ಏನು ಹಾಗೆಂದರೆ? ಹೇಗೆ ಮಾಡುವುದು ಅದನ್ನು?

ಇದನ್ನೂ ಓದಿ: Drinks for Summer: ಬೇಸಿಗೆಯಲ್ಲಿ ತಂಪಾಗಿರಬೇಕೆ? ಈ ಪೇಯಗಳನ್ನು ತಪ್ಪದೇ ಕುಡಿಯಿರಿ

ಟೀ ಬ್ರೂ ಮಾಡುವುದೆಂದರೆ

ಚಹಾ ಮಾಡುವಾಗ ಅದಕ್ಕೆ ಹಾಲು, ಸಕ್ಕರೆ ಹಾಕಿ ಪಾಯಸದಂತೆ ಕುದಿಸುವದಲ್ಲ. ಬದಲಿಗೆ, ಕುದಿಯುವ ನೀರಿಗೆ ಚಹಾ ಪುಡಿಯನ್ನು ಹಾಕಿ. ಉರಿ ಆರಿಸಿ, ಮುಚ್ಚಿಡಿ. ಐದು ನಿಮಿಷದ ನಂತರ ಅದು ಕುಡಿಯಲು ಸಿದ್ಧವಾಗಿರುತ್ತದೆ. ಒಂದೊಮ್ಮೆ ಹಾಲು ಮತ್ತು ಸಕ್ಕರೆ ಬೇಕೆಂದರೆ, ಅದನ್ನು ಪ್ರತ್ಯೇಕವಾಗಿ ಬಿಸಿ ಮಾಡಿ, ಕಡೆಯ ಹಂತದಲ್ಲಿ ಬೆರೆಸಿಕೊಳ್ಳಿ.

Continue Reading

ಆರೋಗ್ಯ

Dengue Fever: ಮಳೆಗಾಲ ಬರುತ್ತಿದೆ! ಡೆಂಗ್ಯೂ ಬಗ್ಗೆ ಇರಲಿ ಎಚ್ಚರಿಕೆ!

ಇನ್ನು ಕೆಲವೇ ದಿನಗಳಲ್ಲಿ ಮಳೆಗಾಲ ಶುರುವಾಗಲಿದ್ದು, ಇದರ ಜೊತೆಗೆ ಸೊಳ್ಳೆಗಳ ಕಾಟವೂ ಹೆಚ್ಚಲಿದೆ. ಹೌದು, ಡೆಂಗ್ಯೂ ಜ್ವರ ಹೆಚ್ಚಳವೂ ಇದೇ ಋತುವಿನಲ್ಲಿ ಆಗುವುದರಿಂದ ಈಗಿನಿಂದಲೇ ಎಚ್ಚರ ವಹಿಸುವುದು ಅತಿ ಅವಶ್ಯಕ. ಜಾಗತಿಕ ಜನಸಂಖ್ಯೆಯ ಸುಮಾರು ಮೂರನೇ ಒಂದು ಭಾಗದಷ್ಟು ಜನರು ಡೆಂಗ್ಯೂಗೆ (Dengue Fever) ಗುರಿಯಾಗುತ್ತಾರೆ. ಈ ಕುರಿತ ವೈದ್ಯರ ಮಾಹಿತಿ ಇಲ್ಲಿದೆ.

VISTARANEWS.COM


on

Dengue Fever
Koo

ಡಾ. ಪದ್ಮಕುಮಾರ್ ಎವಿ, ಹಿರಿಯ ನಿರ್ದೇಶಕರು, ಕ್ರಿಟಿಕಲ್ ಕೇರ್ ಮೆಡಿಸಿನ್ ವಿಭಾಗ, ಫೋರ್ಟಿಸ್ ಆಸ್ಪತ್ರೆ, ಬನ್ನೇರುಘಟ್ಟ ರಸ್ತೆ

ಇನ್ನು ಕೆಲವೇ ದಿನಗಳಲ್ಲಿ ಮಳೆಗಾಲ ಶುರುವಾಗಲಿದ್ದು, ಇದರ ಜೊತೆಗೆ ಸೊಳ್ಳೆಗಳ ಕಾಟವೂ ಹೆಚ್ಚಲಿದೆ. ಹೌದು, ಡೆಂಗ್ಯೂ ಜ್ವರ ಹೆಚ್ಚಳವೂ ಇದೇ ಋತುವಿನಲ್ಲಿ ಆಗುವುದರಿಂದ ಈಗಿನಿಂದಲೇ ಎಚ್ಚರ ವಹಿಸುವುದು ಅತಿ ಅವಶ್ಯಕ. ಜಾಗತಿಕ ಜನಸಂಖ್ಯೆಯ ಸುಮಾರು ಮೂರನೇ ಒಂದು ಭಾಗದಷ್ಟು ಜನರು ಡೆಂಗ್ಯೂಗೆ (Dengue Fever) ಗುರಿಯಾಗುತ್ತಾರೆ. ಡೆಂಗ್ಯೂ ನಿರೋಧಕ ಲಸಿಕೆ ಇನ್ನಷ್ಟೇ ಪ್ರಯೋಗದ ಹಂತದಲ್ಲಿದೆ. ದೇಶದ ವಿವಿಧ ಭಾಗದಲ್ಲಿ ಸೊಳ್ಳೆಯಿಂದ ಉಂಟಾಗುವ ಡೆಂಗ್ಯೂ ಮಾರಣಾಂತಿಕ. ಕೆಲವರ ಜೀವವನ್ನು ಸಹ ಬಲಿಪಡೆದುಬಿಡುತ್ತದೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಈ ಬಗ್ಗೆ ಜಾಗೃತಿ ಇಲ್ಲದ ಕಾರಣ, ಹೆಚ್ಚು ನಿರ್ಲಕ್ಷ್ಯಕ್ಕೆ ಒಳಗಾಗಿ ಡೆಂಗ್ಯೂಗೆ ಬಲಿಯಾಗುತ್ತಾರೆ. ಡೆಂಗ್ಯೂನಲ್ಲಿ ಪ್ರಮುಖವಾಗಿ ಸ್ಪೆಕ್ಟ್ರಮ್ ಡೆಂಗ್ಯೂನಿಂದ ಎಚ್ಚರಿಕೆ ವಹಿಸುವುದು ಅವಶ್ಯಕ. ಕಡಿಮೆ ತೀವ್ರತೆ, ಮಧ್ಯಮ ಹಾಗೂ ಅತಿ ಹೆಚ್ಚು ತೀವ್ರತೆಯ ಡೆಂಗ್ಯೂ ಹರಡುತ್ತದೆ. ಕಡಿಮೆ ಲಕ್ಷಣವಿರುವ ಡೆಂಗ್ಯೂ ಬಂದರೆ ಕೆಲವೇ ದಿನಗಳಲ್ಲಿ ಜ್ವರದ ಬಳಿಕ ಕಡಿಮೆಯಾಗಲಿದೆ. ಮಧ್ಯಮದ ತೀವ್ರತೆಯ ಡೆಂಗ್ಯೂ ಸಹ, ಆಸ್ಪತ್ರೆಯಲ್ಲಿ ವೈದ್ಯರ ಚಿಕಿತ್ಸೆಯಿಂದ ಗುಣವಾಗಲಿದೆ. ಆದರೆ, ಅತಿಹೆಚ್ಚು ತೀವ್ರತೆಯ ಲಕ್ಷಣ ಹೊಂದಿರುವ ಡೆಂಗ್ಯೂ ಮನುಷ್ಯನನ್ನೇ ಬಲಿ ತೆಗೆದುಕೊಳ್ಳಬಹುದು. ದೇಹದಲ್ಲಿನ ಬಿಳಿರಕ್ತಕಣವನ್ನು ಕಡಿಮೆಗೊಳಿಸಿ ಮನುಷ್ಯರನ್ನು ಅಸ್ವಸ್ಥಗೊಳಿಸುತ್ತದೆ, ಇದಕ್ಕೆ ಸೂಕ್ತ ಸಮಯದಲ್ಲಿ ಸೂಕ್ತ ಚಿಕಿತ್ಸೆ ಪಡೆಯದೇ ಹೋದರೆ (Dengue Fever) ಬದುಕುವುದು ಕಷ್ಟ.

Dengue Fever Vaccines

ಲಸಿಕೆಗಳು

ಡೆಂಗ್ಯೂ ನಿಯಂತ್ರಣಕ್ಕೆ ಲಸಿಕೆ ತರಲು ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ, ಇದನ್ನು ಪಡೆದುಕೊಳ್ಳಲು ಪರ ವಿರೊಧ ಚರ್ಚೆಗಳು ನಡೆಯುತ್ತಿವೆ. ಅದರಲ್ಲೂ ಸನೋಫಿ ಗ್ಲೋಬಲ್‌ ಹೆಲ್ತ್‌ಕೇರ್‌ ಅಭಿವೃದ್ಧಿಪಡಿಸಿ, ಪರವಾನಗಿ ಪಡೆದ “ಡೆಂಗ್‌ವಾಕ್ಸಿಯಾ” ಎಂಬ ಲಸಿಕೆಯು ಸಹ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: Mouth Sleeping: ನಿದ್ದೆಯಲ್ಲಿದ್ದಾಗ ಬಾಯಿಯಿಂದ ಉಸಿರಾಡುತ್ತೀರಾ? ಹಾಗಾದರೆ ಮುಂದೆ ಸಮಸ್ಯೆಯಾಗಬಹುದು!

ಆಶಾದಾಯಕ ಬೆಳವಣಿಗೆಗಳು

ಡೆಂಗ್‌ವಾಕ್ಸಿಯಾದ ಹಿನ್ನಡೆಯ ಹೊರತಾಗಿಯೂ, ಭಾರತದಲ್ಲಿ ಡೆಂಗ್ಯೂ ಲಸಿಕೆ ಅಭಿವೃದ್ಧಿಯ ದಿಗಂತದಲ್ಲಿ ಭರವಸೆಯ ಬೆಳವಣಿಗೆಗಳಿವೆ. ಕನಿಷ್ಠ ಎರಡು ಸ್ಥಳೀಯ ಡೆಂಗ್ಯೂ ಲಸಿಕೆ ಅಭಿವೃದ್ಧಿಪಡಿಸಲು ಸಂಶೋಧನಾ ಸಂಸ್ಥೆಗಳ ನೇತೃತ್ವದಲ್ಲಿ ಸ್ಥಳೀಯ ಪ್ರಯತ್ನಗಳು ಸಕ್ರಿಯವಾಗಿ ನಡೆಯುತ್ತಿವೆ. ಹೆಚ್ಚುವರಿಯಾಗಿ, ಡೆಂಗ್ಯೂ ವಿರುದ್ಧ ಹೋರಾಡಲು ಸುರಕ್ಷಿತ ಮತ್ತು ಪರಿಣಾಮಕಾರಿ ಪರಿಹಾರವನ್ನು ಕಂಡುಹಿಡಿಯುವ ಬದ್ಧತೆಯನ್ನು ಪ್ರದರ್ಶಿಸುವ ಲೈವ್-ಅಟೆನ್ಯೂಯೇಟೆಡ್ ಟೆಟ್ರಾವೆಲೆಂಟ್ ಲಸಿಕೆಯಂತಹ ಭರವಸೆಗೆ ಭಾರತವು ಅಂತರರಾಷ್ಟ್ರೀಯ ಪ್ರಯೋಗಗಳಲ್ಲಿ ಸಹಕರಿಸುತ್ತಿದೆ. ಹೀಗಾಗಿ ಭಾರತದಲ್ಲಿ ಡೆಂಗ್ಯೂ ಲಸಿಕೆ ಅಭಿವೃದ್ಧಿ ಪಡಿಸುವ ಕಾರ್ಯ ಭರದಿಂದ ಸಾಗಿದ್ದು, ಭವಿಷ್ಯದಲ್ಲಿ ಲಸಿಕೆ ಸಿಗಲಿದೆ ಎಂಬ ಭರವಸೆ ಇದೆ, ಒಂದು ವೇಳೆ ಡೆಂಗ್ಯೂ ಲಸಿಕೆ ಜನರಿಗೆ ಸಿಕ್ಕರೆ, ಸಾಕಷ್ಟು ಸಾವು ನೋವುಗಳನ್ನು ತಡೆಯಬಹುದು.

Continue Reading

ಆರೋಗ್ಯ

Mouth Sleeping: ನಿದ್ದೆಯಲ್ಲಿದ್ದಾಗ ಬಾಯಿಯಿಂದ ಉಸಿರಾಡುತ್ತೀರಾ? ಹಾಗಾದರೆ ಮುಂದೆ ಸಮಸ್ಯೆಯಾಗಬಹುದು!

ನೆಗಡಿಯಾದಾಗ, ಮೂಗು ಕಟ್ಟಿದಾಗ, (Mouth Sleeping) ಜೋರಾಗಿ ಓಡುವಾಗೆಲ್ಲ ಬಾಯಲ್ಲಿ ಉಸಿರಾಡುವುದು ಸಾಮಾನ್ಯ. ಆದರೆ ಅಂಥ ಯಾವುದೂ ಇಲ್ಲದಾಗಲೂ ನಿದ್ದೆ ಮಾಡುವಾಗ ಬಾಯಲ್ಲಿ ಉಸಿರಾಡುವುದು ಅನಾರೋಗ್ಯಕರ. ಈ ಬಗ್ಗೆ ಆರೋಗ್ಯ ಪರಿಣತರು ಏನೆನ್ನುತ್ತಾರೆ? ಈ ಸಮಸ್ಯೆಯ ಹಿಂದು-ಮುಂದಿನ ಮಾಹಿತಿಗಳು ಇಲ್ಲಿವೆ.

VISTARANEWS.COM


on

Mouth Sleeping
Koo

ಹೀಗೊಂದು ಸನ್ನಿವೇಶವನ್ನು (Mouth Sleeping) ಊಹಿಸಿಕೊಳ್ಳಿ- ನಿಮಗೆ ಸಖತ್‌ ನೆಗಡಿಯಾಗಿದೆ. ಮೂಗೆಲ್ಲ ಕಟ್ಟಿ ಉಸಿರಾಡಲು ಸಾಧ್ಯವಾಗುತ್ತಿಲ್ಲ. ಮಲಗಿದಾಗ ಈ ಸಮಸ್ಯೆ ಇನ್ನೂ ಹೆಚ್ಚು ಬಾಧಿಸುತ್ತಿದೆ. ಇಂಥ ಹೊತ್ತಿನಲ್ಲಿ ಬಾಯಲ್ಲಿ ಉಸಿರಾಡುವುದೊಂದೇ ಮಾರ್ಗ. ಆದರೆ ನೆಗಡಿ ಕಡಿಮೆಯಾದ ನಂತರ ಮರಳಿ, ಮೂಗಲ್ಲೇ ಉಸಿರಾಟ ಆರಂಭಿಸುತ್ತೀರಿ. ಹಾಗಲ್ಲದೆ, ಮಲಗಿದಾಗೆಲ್ಲ ಮೂಗಿನಲ್ಲಲ್ಲದೆ, ಬಾಯಲ್ಲೇ ಉಸಿರಾಡುತ್ತೀರಾ? ನೆಗಡಿ ಇಲ್ಲದಿದ್ದರೂ ನಿಮ್ಮ ಉಸಿರಾಟ ಬಾಯಲ್ಲೇ ನಡೆಯುತ್ತದೆಯೇ? ಹಾಗಾದರೆ ಇದರಿಂದ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳು ಉಂಟಾಗಬಹುದು. ಅತಿಯಾಗಿ ವ್ಯಾಯಾಮ ಮಾಡುವಾಗ, ಜೋರಾಗಿ ಓಡುವಾಗ ಅಥವಾ ನಡೆಯುವಾಗಲೂ ನಾವು ಬಾಯಲ್ಲಿ ಉಸಿರಾಡುತ್ತೇವೆ. ಇದರಿಂದ ದೇಹಕ್ಕೆ ಬೇಕಾದ ಆಮ್ಲಜನಕವನ್ನು ಬೇಗನೇ ಒದಗಿಸುವುದಕ್ಕೆ ಸಾಧ್ಯ. ಆದರೆ ಮಲಗಿದಾಗ, ನಿದ್ದೆಯಲ್ಲಿ ಬಾಯಲ್ಲಿ ಉಸಿರಾಡುವುದು ಸಮಸ್ಯೆಗೆ ಕಾರಣವಾಗಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು. ಆದರೆ ನಿದ್ದೆ ಮಾಡುತ್ತಿರುವವರಿಗೆ ಅವರು ಹೇಗೆ ಉಸಿರಾಡುತ್ತಿದ್ದಾರೆ ಎಂಬುದು ತಿಳಿಯುವುದಾದರೂ ಹೇಗೆ?

Sleeping Tips

ತಿಳಿಯಬಹುದು

ನಿದ್ದೆ ಮಾಡುವಾಗ ತಿಳಿಯದಿದ್ದರೂ, ನಿದ್ದೆಯಿಂದ ಎದ್ದಾಗ ತಿಳಿಯುವುದಕ್ಕೆ ದಾರಿಗಳಿವೆ. ಬೆಳಗ್ಗೆ ಎದ್ದಾಗ ಬಾಯೆಲ್ಲ ಒಣಗಿದಂತಿದ್ದರೆ, ಬಾಯಲ್ಲಿ ದುರ್ಗಂಧ ಅತಿಯಾಗಿದ್ದರೆ, ಧ್ವನಿ ಒರಟಾಗಿದ್ದರೆ, ಏಳುವಾಗ ಅತಿಯಾದ ಸುಸ್ತು ಅಥವಾ ಕಿರಿಕಿರಿ ಎನಿಸುತ್ತಿದ್ದರೆ, ಕಣ್ಣಿನ ಕೆಳಗೆ ಕಪ್ಪು ವರ್ತುಲಗಳು ಕಾಣುತ್ತಿದ್ದರೆ, ಎದ್ದಾಗ ಬುದ್ಧಿಯಲ್ಲಿ ಸ್ಪಷ್ಟತೆಯ ಬದಲು ಗೊಂದಲ ಇದ್ದರೆ- ಮಲಗಿದಾಗ ಬಾಯಲ್ಲಿ ಉಸಿರಾಡಿರುವ ಸಾಧ್ಯತೆಗಳು ಅಧಿಕ.

ಯಾಕೆ ಹೀಗೆ?

ಮೂಗಿನಲ್ಲಿ ಸರಾಗ ಉಸಿರಾಡುವುದಕ್ಕೆ ಯಾವುದೇ ಸಮಸ್ಯೆ ಎದುರಾದರೂ, ತಕ್ಷಣಕ್ಕೆ ಬಾಯಲ್ಲಿ ಉಸಿರಾಡುವುದು ದೇಹಧರ್ಮ. ಮೂಗು ಕಟ್ಟಿದ್ದರೆ, ಕಫ ಬಿಗಿದಿದ್ದರೆ, ಟಾನ್ಸಿಲ್‌ ಸಮಸ್ಯೆಯಿದ್ದರೆ, ಶ್ವಾಸನಾಳದಲ್ಲಿ ಎಲ್ಲಾದರೂ ಪಾಲಿಪ್‌ಗಳಿದ್ದರೆ, ಅತಿಯಾದ ಸುಸ್ತು, ಒತ್ತಡದಿಂದ ಬಳಲುತ್ತಿದ್ದರೆ- ಹೀಗೆ ಮೂಗಿನ ಬದಲು ಬಾಯಲ್ಲಿ ಉಸಿರಾಡುವುದಕ್ಕೆ ಹಲವಾರು ಕಾರಣಗಳು ಇರಬಹುದು.

ಏನಾಗುತ್ತದೆ?

ನಿದ್ದೆ ಮಾಡುವಾಗ ಹೀಗೆ ಬಾಯಲ್ಲಿ ಉಸಿರಾಡಿದರೆ ಆಗುವ ಸಮಸ್ಯೆಯೇನು? ಹೇಗೋ ಒಂದು- ಉಸಿರಾಡುವುದು ಮುಖ್ಯವಲ್ಲವೇ? ಉಸಿರಾಡುವುದು ಮುಖ್ಯ ಎಂಬುದು ಹೌದಾದರೂ, ಹೇಗೋ ಒಂದು ಎಂಬುದು ಸರಿಯಲ್ಲ. ಇದರಿಂದ ಬಾಯಿಯಲ್ಲಿರುವ ಬ್ಯಾಕ್ಟೀರಿಯಗಳ ಸಂಖ್ಯೆ ತ್ವರಿತವಾಗಿ ದ್ವಿಗುಣಗೊಳ್ಳುತ್ತದೆ. ಜೊತೆಗೆ ಇನ್ನಷ್ಟು ಸಮಸ್ಯೆಗಳು ಗಂಟಿಕ್ಕಿಕೊಳ್ಳುತ್ತವೆ.

Sleeping Tips
  • ಹ್ಯಾಲಿಟೋಸಿಸ್‌ ಅಥವಾ ಬಾಯಿಯ ದುರ್ಗಂಧದ ಸಮಸ್ಯೆ ಎದುರಾಗುತ್ತದೆ. ಕಾರಣ, ಬಾಯಿಯಲ್ಲಿರುವ ಬ್ಯಾಕ್ಟೀರಿಯಗಳು ಅಧಿಕವಾಗುತ್ತವೆ.
  • ಹಲ್ಲಿನ ಸಮಸ್ಯೆಗಳು ಸಹ ಹೆಚ್ಚುತ್ತವೆ. ಒಸಡುಗಳಿಗೆ ಸೋಂಕು ಉಂಟಾಗಬಹುದು. ಹಲ್ಲಿನ ಹುಳುಕು ಕಾಡಬಹುದು.
    ಗಂಟಲು ಮತ್ತು ಕಿವಿಯ ಸೋಂಕು ಪದೇಪದೆ ಕಾಡಬಹುದು. ಮಕ್ಕಳಲ್ಲಿ ಈ ಸಮಸ್ಯೆ ಇದ್ದರೆ, ಅದರ ಪ್ರಮಾಣ ಹೆಚ್ಚಬಹುದು.
  • ಬಾಯಲ್ಲಿ ಉಸಿರಾಡುವುದರಿಂದ ರಕ್ತದಲ್ಲಿನ ಆಮ್ಲಜನಕದ ಮಟ್ಟ ಕುಸಿಯುವ ಸಂಭವವಿದೆ. ಇದರಿಂದ ಶ್ವಾಸಕೋಶಗಳ ಕ್ಷಮತೆಯೂ ಕಡಿಮೆಯಾಗಬಹುದು. ಅಲರ್ಜಿ, ಅಸ್ತಮಾದಂಥ ತೊಂದರೆಗಳಲ್ಲಿ ಇದು ಹೆಚ್ಚಿನ ಉಪಟಳ ನೀಡುತ್ತದೆ.
  • ಮಕ್ಕಳಲ್ಲಿ ಮುಖದ ಆಕಾರ ಬದಲಾಗುವುದು, ಒಸಡುಗಳ ಆಕೃತಿ ಬದಲಾಗುವುದು, ಹಲ್ಲುಗಳು ಒತ್ತೊತ್ತಾಗಿ ಮೂಡುವುದು ಮುಂತಾದ ತೊಂದರೆಗಳು ಕಾಣಬಹುದು.

ಇದನ್ನೂ ಓದಿ: Jackfruit Seed: ಹಲಸಿನ ಹಣ್ಣು ತಿಂದು ಬೀಜ ಎಸೆಯದಿರಿ; ಬೀಜದಿಂದಾಗುವ ಆರೋಗ್ಯ ಲಾಭಗಳು ಹಲವು!

ಪರಿಹಾರ ಏನು?

ತಲೆಯನ್ನು ಕೊಂಚ ಎತ್ತರಿಸಿ ಮಲಗುವುದರಿಂದ ಶ್ವಾಸನಾಳಗಳು ತೆರೆದುಕೊಂಡು, ಮೂಗಲ್ಲಿ ಉಸಿರಾಡುವುದು ಸುಲಭವಾಗುತ್ತದೆ. ಮೂಗು ಕಟ್ಟಿದಾಗ ಸಲೈನ್‌ ಸ್ಪ್ರೇಗಳನ್ನು ಉಪಯೋಗಿಸುವುದರಿಂದ ಉಸಿರಾಟ ಸುಲಭವಾಗಬಹುದು. ಮನೆಯ ವಾತಾವರಣವನ್ನು ಶುಚಿಯಾಗಿ ಇರಿಸಿಕೊಳ್ಳುವುದರಿಂದ ಅಲರ್ಜಿಯನ್ನು ಮಟ್ಟ ಹಾಕಲು ಸಾಧ್ಯ. ಯೋಗ, ಪ್ರಾಣಾಯಾಮಗಳು ಶ್ವಾಸಕೋಶದ ಬಲವರ್ಧನೆ ಮಾಡಿ, ಮೂಗಿನ ಉಸಿರಾಟವನ್ನು ಸುಲಭ ಮಾಡುತ್ತವೆ.

Continue Reading
Advertisement
bulldozer justice
ಪ್ರಮುಖ ಸುದ್ದಿ17 mins ago

Bulldozer justice : ಅಸ್ಸಾಂ ಸರ್ಕಾರಕ್ಕೆ ತಿರುಗುಬಾಣವಾದ ಬುಲ್ದೋಜರ್ ನ್ಯಾಯ! ನೆಲಸಮಗೊಳಿಸಿದ ಮನೆ ಮಾಲೀಕರಿಗೆ 30 ಲಕ್ಷ ಪರಿಹಾರ!

assault case koratagere
ಕ್ರೈಂ34 mins ago

Assault Case: ಗೃಹ ಸಚಿವರ ಕ್ಷೇತ್ರದಲ್ಲಿ ಭೂಸೇನೆ ಯೋಧನ ಮೇಲೆಯೇ ಮಾರಣಾಂತಿಕ ಹಲ್ಲೆ; ಇಲ್ಲಿ ಕೇಳೋರೇ ಇಲ್ವಾ?

Rameshwaram Cafe
ಪ್ರಮುಖ ಸುದ್ದಿ36 mins ago

Rameshwaram Cafe : ಅವಧಿ ಮುಗಿದ ವಸ್ತುಗಳಲ್ಲಿ ತಿಂಡಿ ತಯಾರಿ, ರಾಮೇಶ್ವರಂ ಕೆಫೆ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ

Road Accident
ಪ್ರಮುಖ ಸುದ್ದಿ55 mins ago

Road Accident : ಬಸ್ ಗೆ ಟ್ರಕ್ ಡಿಕ್ಕಿ: ಒಂದೇ ಕುಟುಂಬದ 7 ಮಂದಿ ಸಾವು, 25 ಮಂದಿಗೆ ಗಾಯ

koti kannada movie
ಪ್ರಮುಖ ಸುದ್ದಿ1 hour ago

koti kannada movie : ಕಾಂಚಾಣದ ಕನಸು; ಕೋಟಿ ಸಿನಿಮಾದ ‘ಜನತಾ ಸಿಟಿ’ ಹಾಡು ಬಿಡುಗಡೆ

ranebennuru road accident
ಹಾವೇರಿ1 hour ago

Road Accident: ಸೇತುವೆಯಿಂದ ಪಲ್ಟಿ ಹೊಡೆದ ಕಾರು, ತಿರುಪತಿಗೆ ಹೋಗುತ್ತಿದ್ದ 4 ಮಂದಿ ದುರ್ಮರಣ

Udho Udho Shri Renuka Yellamma
ಪ್ರಮುಖ ಸುದ್ದಿ1 hour ago

Udho Udho Shri Renuka Yellamma : ಬಾಲ್ಯದಿಂದ ತಾರುಣ್ಯದ ಕಡೆಗೆ ರೇಣುಕಾ-ಯಲ್ಲಮ್ಮ, ಕಾದಿವೆ ಹಲವು ರೋಚಕ ಕತೆಗಳು

superstar rajnikanth
ಪ್ರಮುಖ ಸುದ್ದಿ2 hours ago

Superstar Rajinikanth : ನಟ ರಜನಿಕಾಂತ್​​ಗೆ ವಿಶೇಷ ಗಿಫ್ಟ್​ ಕೊಟ್ಟ ಲುಲು ಮಾಲ್​ನ ಮಾಲೀಕ ಯೂಸುಫ್​​ ಅಲಿ

thunderbolt
ಚಿಕ್ಕೋಡಿ2 hours ago

Thunderbolt: ಮುಂಗಾರಿಗೆ ಮೊದಲೇ ಸಿಡಿಲಿನ ದುಃಸ್ವಪ್ನ, ಇಬ್ಬರು ಬಲಿ, ಇಬ್ಬರು ಗಂಭೀರ

Fruit Juice Side Effects
ಆರೋಗ್ಯ2 hours ago

Fruit Juice Side Effects: ಹಣ್ಣು ತಿಂದರೆ ಒಳ್ಳೆಯದೋ, ಹಣ್ಣಿನ ಜ್ಯೂಸ್‌ ಕುಡಿದರೆ ಒಳ್ಳೆಯದೋ?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for May 23 2024
ಭವಿಷ್ಯ1 day ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ2 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು3 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು3 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ4 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ5 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ5 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ5 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ7 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

ಟ್ರೆಂಡಿಂಗ್‌