Vistara Digital | ವಿಸ್ತಾರ ನ್ಯೂಸ್‌ಗೆ ರಾಜ್ಯದ ಗಣ್ಯರಿಂದ ಶುಭಾಶಯಗಳ ಮಹಾಪೂರ - Vistara News

ಕರ್ನಾಟಕ

Vistara Digital | ವಿಸ್ತಾರ ನ್ಯೂಸ್‌ಗೆ ರಾಜ್ಯದ ಗಣ್ಯರಿಂದ ಶುಭಾಶಯಗಳ ಮಹಾಪೂರ

ನಿಖರ, ಜನಪರ ಘೋಷವಾಕ್ಯದೊಂದಿಗೆ ಅನಾವರಣಗೊಂಡಿರುವ ವಿಸ್ತಾರ ನ್ಯೂಸ್‌ ವೆಬ್‌ಸೈಟ್‌ ಮತ್ತು ಚಾನೆಲ್‌ ವಸ್ತುನಿಷ್ಠ, ನೈಜ ಸುದ್ದಿಗಳನ್ನು ಸಮಾಜಕ್ಕೆ ತಲುಪಿಸುತ್ತ ಜನರ ಧ್ವನಿಯಾಗಿ ಸೇವೆ ಸಲ್ಲಿಸಲಿ ಎಂದು ನಾಡಿನ ಗಣ್ಯರು ಶುಭ ಹಾರೈಸಿದ್ದಾರೆ.

VISTARANEWS.COM


on

Vistara Digital
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ವಿಸ್ತಾರ ಮೀಡಿಯಾ ಪ್ರೈ.ಲಿ ಸಂಸ್ಥೆಯ ವಿಸ್ತಾರ ಡಿಜಿಟಲ್ ನ್ಯೂಸ್‌ ಲೋಗೊ ಮತ್ತು ವೆಬ್‌ಸೈಟ್‌ (Vistara Digital) ಶನಿವಾರ ಅನಾವರಣಗೊಂಡಿದೆ. ಮಾಧ್ಯಮ ಕ್ಷೇತ್ರದಲ್ಲಿ ವಿಸ್ತಾರ ನ್ಯೂಸ್‌ ಸಮಾಜಮುಖಿಯಾಗಿ ಸೇವೆ ಸಲ್ಲಿಸಿ ಉತ್ತಮ ಸಾಧನೆ ಮಾಡಲಿ ಎಂದು ರಾಜ್ಯದ ಪ್ರಮುಖ ರಾಜಕಾರಣಿಗಳು, ಸ್ವಾಮೀಜಿಗಳು, ಉದ್ಯಮಿಗಳು, ರೈತ ಮುಖಂಡರು ಹಾಗೂ ಜನಸಾಮಾನ್ಯರು ಶುಭ ಹಾರೈಸಿದ್ದಾರೆ. ಯಾರು ಏನು ಹೇಳಿದರು ಎಂಬ ವಿವರ ಇಲ್ಲಿದೆ.

ಕನ್ನಡದ ಮಾಧ್ಯಮ ಲೋಕಕ್ಕೆ ನೂತನವಾಗಿ ಸಮರ್ಪಣೆಯಾಗಿರುವ ವಿಸ್ತಾರ ಸುದ್ದಿ ಮಾಧ್ಯಮಕ್ಕೆ ಅಭಿನಂದನೆಗಳು. ಸಕಾರಾತ್ಮಕ ಸುದ್ದಿಗಳನ್ನು ಜನರಿಗೆ ತಲುಪಿಸುವ ಕೆಲಸವಾಗಲಿ ಎಂದು ಶುಭ ಹಾರೈಸುತ್ತೇನೆ.
-ಪ್ರಲ್ಹಾದ್ ಜೋಶಿ, ಕೇಂದ್ರ ಸಚಿವರು

ಜಗತ್ತಿನ ವಿದ್ಯಮಾನಗಳು ಜನರ ಅಂಗೈಯಲ್ಲಿಯೇ ದೊರಕುತ್ತಿರುವುದಕ್ಕೆ ವಿಜ್ಞಾನದಲ್ಲಾದ ಬದಲಾವಣೆಗಳೆ ಸಾಕ್ಷಿ. ವಿಶ್ವದಲ್ಲೆಲ್ಲ ನ್ಯೂಸ್ ಚಾನೆಲ್‌ಗಳು ವಿಸ್ತಾರಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಕನ್ನಡಕ್ಕೆ ಮತ್ತೊಂದು ನ್ಯೂಸ್ ಚಾನೆಲ್ ‘ವಿಸ್ತಾರ’ ಬರುತ್ತಿರುವುದು ಸಂತೋಷದ ವಿಷಯ. ಮೊದಲಿಗೆ ಬಿಡುಗಡೆಯಾಗಿರುವ ವೆಬ್‌ಸೈಟ್‌ ಕನ್ನಡಿಗರ ಮನೆ ಮನಗಳನ್ನು ತಲುಪಲೆಂದು ಹಾರೈಸುತ್ತೇವೆ.
-ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ, ಸಂಸ್ಥಾನ ಶ್ರೀ ಗವಿಮಠ, ಕೊಪ್ಪಳ

ಎಚ್‌.ಡಿ.ಕುಮಾರಸ್ವಾಮಿ

ಹರಿಪ್ರಕಾಶ್ ಕೋಣೆಮನೆ ನೇತೃತ್ವದಲ್ಲಿ ನೂತನವಾಗಿ ರಾಜ್ಯದಲ್ಲಿ ಬರುತ್ತಿರುವ ಮತ್ತೊಂದು ಕನ್ನಡ ಸುದ್ದಿವಾಹಿನಿ “ವಿಸ್ತಾರ ನ್ಯೂಸ್” ತಂಡಕ್ಕೆ ಶುಭವಾಗಲಿ. ನಾಡುನುಡಿ ಪರವಾಗಿ ಹೆಚ್ಚು ಹೆಚ್ಚು ಸುದ್ದಿಗಳನ್ನು ಪ್ರಸಾರ ಮಾಡುವ ಜತೆಗೆ ರಾಜ್ಯಾದ್ಯಂತ ವಿಸ್ತಾರವಾಗಿ ಬೆಳೆಯಲಿ.
-ಎಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

ಬಿ.ಶ್ರೀರಾಮುಲು

ಇಂದಿನ‌ ಜೀವನ ಶೈಲಿಯಲ್ಲಿ ಗುಣಮಟ್ಟದ ಡಿಜಿಟಲ್ ಮಾಧ್ಯಮದ ಅಗತ್ಯವಿದೆ. ಕನ್ನಡ ಪತ್ರಿಕೋದ್ಯಮವನ್ನು ಇದು ಮತ್ತಷ್ಟು ಶ್ರೀಮಂತಗೊಳಿಸಲಿದೆ. ಈ ನಿಟ್ಟಿನಲ್ಲಿ ಅನುಭವಿ ಪತ್ರಕರ್ತರ ತಂಡ ಇಲ್ಲಿ ತೊಡಗಿಸಿಕೊಂಡಿರುವುದರಿಂದ ಇದು ಉತ್ಕೃಷ್ಟವಾಗಿ ಬೆಳೆಯಲಿದೆ. ವಿಸ್ತಾರ ಡಿಜಿಟಲ್ ಮತ್ತು ಟಿವಿ ಚಾನೆಲ್‌ ಸರಕಾರ ಮತ್ತು ಜನರ ಮಧ್ಯೆ ಸೇತುವೆಯಾಗಿ ಕೆಲಸ ಮಾಡಲಿ. ವಿಭಿನ್ನವಾಗಿ ಮೂಡಿ ಬಂದು ಜನಪ್ರಿಯತೆ ಗಳಿಸುವಂತಾಗಲಿ. ವಿಸ್ತಾರ ಡಿಜಿಟಲ್‌ಗೆ ಅಭಿನಂದನೆಗಳು.
-ಶ್ರೀರಾಮುಲು, ಸಾರಿಗೆ ಸಚಿವ

ವಿಸ್ತಾರ ವೆಬ್‌ನ್ಯೂಸ್ ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆ ಅವರು ನನ್ನ ಸ್ನೇಹಿತರು. ವಿಸ್ತಾರ ಚಾನೆಲ್ ವಿಸ್ತಾರವಾದ ಚರ್ಚೆಗೆ ಅವಕಾಶವನ್ನು ಕೊಡಲಿ. ವಸ್ತುನಿಷ್ಠ ರಾಜಕಾರಣದತ್ತ ಬೆಳಕು ಚೆಲ್ಲಿ ರಾಜಕಾರಣವನ್ನು ಸರಿಯಾದ ದಿಕ್ಕಿಗೆ ತೆಗೆದುಕೊಂಡು ಹೋಗುವ ಕೆಲಸ ಮಾಡಲಿ. ಅದಕ್ಕಿಂತ ಹೆಚ್ಚು, ವ್ಯಕ್ತಿ ಆಧಾರಿತ ಟೀಕೆಗಳಿಂದ ದೂರ ಇದ್ದರೆ ಯಾವುದೇ ಚಾನೆಲ್ ಆದರೂ ಅದರ ಗೌರವ ಇನ್ನಷ್ಟು ಹೆಚ್ಚಾಗುತ್ತದೆ ಅನ್ನೊದು ನನ್ನ ನಂಬಿಕೆ. ಈ ನಿಟ್ಟಿನಲ್ಲಿ ವಿಸ್ತಾರ ಚಾನೆಲ್ ಕೆಲಸ ಮಾಡಲಿ.
ಶಿವರಾಮ ಹೆಬ್ಬಾರ್, ಸಚಿವರು

ಡಿ.ಕೆ.ಶಿವಕುಮಾರ್‌

ನಾನು ಕನಕಪುರದಲ್ಲಿ ಕೆಡಿಪಿ ಮೀಟಿಂಗ್‌ನಲ್ಲಿ ಇದ್ದ ಕಾರಣ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಲಿಲ್ಲ. ಈ ಹಿಂದೆ ಹರಿಪ್ರಕಾಶ್ ಕೋಣೆಮನೆ ನೇತೃತ್ವದಲ್ಲಿ ಎರಡು ಪತ್ರಿಕೆಗಳು ಯಶಸ್ವಿ ಬೆಳವಣಿಗೆ ಕಂಡಿರುವುದನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಈಗ ವಿಸ್ತಾರ ನ್ಯೂಸ್ ಬರುತ್ತಿರುವುದು ಬಹಳ ಖುಷಿಯ ವಿಚಾರ. ವಿಸ್ತಾರ ತಂಡಕ್ಕೆ ಈ ಸಂದರ್ಭದಲ್ಲಿ ಶುಭಾಶಯ ಕೋರುತ್ತೇನೆ. ಇದು ಎಲ್ಲಾ ವರ್ಗದ ಜನರ ಧ್ವನಿಯಾಗಲಿ. ಮಧ್ಯಮವರ್ಗ ಮತ್ತು ಯುವಕರಿಗೆ ಸಹಕಾರಿಯಾಗಲಿ. ಇಡೀ ತಂಡಕ್ಕೆ ಅಭಿನಂದನೆ.
ಡಿ.ಕೆ. ಶಿವಕುಮಾರ್‌, ಅಧ್ಯಕ್ಷರು, ಕೆಪಿಸಿಸಿ

ವಿಸ್ತಾರ ಸುದ್ದಿ ಮಾಧ್ಯಮ ಹಲವು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಇದು ಜನಪರ ಮತ್ತು ನಿಖರ ಸುದ್ದಿಗಳನ್ನು ಜನರಿಗೆ ತಲುಪಿಸಲಿದೆ ಎಂಬ ವಿಶ್ವಾಸ ಇದೆ. ಸಮಾಜದ ಎಲ್ಲ ಕ್ಷೇತ್ರದ ಆಗುಹೋಗುಗಳ ಮಾಹಿತಿ ವಿಸ್ತಾರದ ಮೂಲಕ ನಾಡಿನ ಜನತೆಗೆ ತಲುಪುವಂತಾಗಲಿ. ವಿಸ್ತಾರ ಸಂಸ್ಥೆಯ ಎಲ್ಲರಿಗೂ ಶುಭ ಕೋರುತ್ತೇನೆ.
-ಡಾ. ಎಂ. ಬಿ. ಪಾಟೀಲ್, ಅಧ್ಯಕ್ಷರು, ಕೆಪಿಸಿಸಿ ಪ್ರಚಾರ ಸಮಿತಿ

ಹರಿಪ್ರಕಾಶ್‌ ಕೋಣೆಮನೆ ಅವರು ಒಬ್ಬ ಅನುಭವಿ ಪತ್ರಕರ್ತರು, ಮಾಧ್ಯಮ ಕ್ಷೇತ್ರದಲ್ಲಿ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಅವರು ಸಮಾಜಕ್ಕೆ ಮಾರ್ಗದರ್ಶನ ನೀಡುವ ರೀತಿಯಲ್ಲಿ ಅತ್ಯುತ್ತಮವಾದಂತಹ ಚಾನೆಲ್‌ ತರುತ್ತಾರೆ ಎನ್ನುವ ಆತ್ಮವಿಶ್ವಾಸ ನನಗಿದೆ. ಅಲ್ಲಿ ಕೆಲಸ ಮಾಡುವ ಸಿಬ್ಬಂದಿ ವರ್ಗಕ್ಕೂ ಅಭಿನಂದನೆಗಳು.
-ಗೋವಿಂದ ಕಾರಜೋಳ, ಜಲಸಂಪನ್ಮೂಲ ಸಚಿವರು

ವಿಸ್ತಾರ ಸುದ್ದಿ ಮಾಧ್ಯಮಕ್ಕೆ ಶುಭವಾಗಲಿ. ಕನ್ನಡ ನಾಡಿನ ಜನತೆಗೆ ನಿಖರ, ಜನಪರ ಸುದ್ದಿಗಳನ್ನು ಕೊಡಲು ಸಜ್ಜಾಗಿರುವ ನಿಮಗೆ ಒಳ್ಳೆಯದಾಗಲಿ. ನಿಮ್ಮ ವಿಚಾರಗಳು ಜನರ ಮನೆ, ಮನ ತಲುಪಲಿ ಎಂದು ಶುಭ ಕೋರುತ್ತೇವೆ.
-ಜಗದೀಶ್ ಶೆಟ್ಟರ್, ಮಾಜಿ ಸಿಎಂ

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಡಿಜಿಟಲ್ ಮತ್ತು ಟಿವಿ ಮಾಧ್ಯಮ ಜನರ ಮೇಲೆ ಬಹಳ‌ ಪರಿಣಾಮ ಬೀರುತ್ತಿದೆ. ವಿಸ್ತಾರ ಮಾಧ್ಯಮದ ಮೂಲಕ ಮಕ್ಕಳಿಗೆ, ಮಹಿಳೆಯರಿಗೆ ಸಾಮಾಜಿಕ ನ್ಯಾಯ ಸಿಗುವಂತಹ ಕಾರ್ಯಕ್ರಮಗಳು ನಡೆಯಲಿ. ಅದರಿಂದ ಈ ದೇಶದಲ್ಲಿ ಬದಲಾವಣೆ ಕಾಣಲು ಸಾಧ್ಯ. ವಿಸ್ತಾರ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಹಾರೈಸುತ್ತೇನೆ.
– ಬಿ.ವೈ.ರಾಘವೇಂದ್ರ, ಸಂಸದ, ಶಿವಮೊಗ್ಗ

ಈಶ್ವರಪ್ಪ

‘ವಿಸ್ತಾರ’ ಹೊಸ ಕನ್ನಡ ನ್ಯೂಸ್‌ ವೆಬ್‌ಸೈಟ್ ಆರಂಭವಾಗಿ‌ರುವುದು ತುಂಬಾ ಸಂತೋಷದ ವಿಷಯ. ಸ್ಪರ್ಧಾತ್ಮಕ ಯುಗದಲ್ಲಿ ವಿಸ್ತಾರ ನ್ಯೂಸ್ ಹೊಸ ಭರವಸೆ ಮೂಡಿಸುವಂತಿದ್ದು, ಹೊಸ ಹೊಸ ಸುದ್ದಿಗಳನ್ನು, ಸತ್ಯ ಸಂಗತಿಗಳನ್ನು ಬಿತ್ತರಿಸಿ ರಾಜ್ಯದ ಜನರ ವಿಶ್ವಾಸ ಗಳಿಸಲಿ ಎಂದು ವಿಸ್ತಾರ ನ್ಯೂಸ್‌ಗೆ ಶುಭವನ್ನು ಕೋರುತ್ತೇನೆ.
ಕೆ.ಎಸ್. ಈಶ್ವರಪ್ಪ, ಮಾಜಿ ಸಚಿವ, ಶಿವಮೊಗ್ಗ

‘ವಿಸ್ತಾರ’ ನ್ಯೂಸ್ ಪ್ರಾರಂಭಗೊಳ್ಳುತಿರುವುದು ಸಮಸ್ತ ಕನ್ನಡಿಗರಿಗೆ ಹೆಮ್ಮೆಯ ಸಂಗತಿ. ತನ್ನ ನಿಖರ ಸ್ಪಷ್ಟ ಸಮಾಜಮುಖಿ ಕಾರ್ಯಗಳಿಂದ ಕನ್ನಡಿಗರ ಹೃದಯ ಸಾಮ್ರಾಜ್ಯವನ್ನು ಆವರಿಸಲಿ. ಭವಿಷ್ಯದಲ್ಲಿ ‘ವಿಸ್ತಾರ’ ವಿಸ್ತಾರೋನ್ನತವಾಗಿ ಬೆಳೆಯಲಿ ಎಂದು ಶುಭ ಹಾರೈಸುತ್ತೇನೆ.
-ಡಾ. ಪ್ರಭಾಕರ ಕೋರೆ, ಕಾರ್ಯಾಧ್ಯಕ್ಷ, ಕೆಎಲ್ಇ, ಬೆಳಗಾವಿ

ವಿಸ್ತಾರ ನ್ಯೂಸ್ ಕನ್ನಡ ಸುದ್ದಿ ಮಾಧ್ಯಮ ಹೊಸತನದ ಹರಿಕಾರವಾಗಲಿ. ನೊಂದವರ ಧ್ವನಿ ಆಗಲಿ. ಎಲ್ಲ ವರ್ಗದ ಜನರಿಗೆ ಅನುಕೂಲವಾಗುವ ಸದಭಿರುಚಿಯ ಸುದ್ದಿಯನ್ನು ನೀಡಲಿ. ವಿಸ್ತಾರ ಮಾಧ್ಯಮ ಹಾಗೂ ಎಲ್ಲ ಸಿಬ್ಬಂದಿಗೆ ಶುಭ ಕೋರುತ್ತೇನೆ.
ಬಾಲಚಂದ್ರ ಜಾರಕಿಹೊಳಿ, ಅಧ್ಯಕ್ಷ, ಕೆಎಂಎಫ್

ವಿಸ್ತಾರ ಸುದ್ದಿ ಮಾಧ್ಯಮ ಹಲವು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಜನಪರ- ನಿಖರ ಸುದ್ದಿಗಳನ್ನು ಜನರಿಗೆ ತಲುಪಿಸಲಿದೆ ಎಂಬ ವಿಶ್ವಾಸ ಇದೆ. ಎಲ್ಲ ಕ್ಷೇತ್ರದ ಆಗುಹೋಗುಗಳ ಮಾಹಿತಿ ವಿಸ್ತಾರದ ಮೂಲಕ ನಾಡಿನ ಜನತೆಗೆ ತಲುಪುವಂತಾಗಲಿ. ವಿಸ್ತಾರ ಸಂಸ್ಥೆಯ ಎಲ್ಲರಿಗೂ ಶುಭ ಕೋರುತ್ತೇನೆ
ಸತೀಶ್ ಜಾರಕಿಹೊಳಿ, ಕಾರ್ಯಾಧ್ಯಕ್ಷ, ಕೆಪಿಸಿಸಿ

ಹೊಸ ವಿಸ್ತಾರ ನ್ಯೂಸ್ ವೆಬ್‌ಸೈಟ್ ಜವಾಬ್ದಾರಿಯುತವಾಗಿ ಸುದ್ದಿಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಪ್ರಾರಂಭ ಮಾಡಿದೆ. ವಿಸ್ತಾರ ಚಾನೆಲ್ ಸಂಪಾದಕರು ಹಾಗೂ ಸಿಬ್ಬಂದಿಗೆ ಶುಭ ಕೋರುತ್ತೇನೆ. ಅತೀ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ವೀಕ್ಷಕರು ಹಾಗೂ ಓದುಗರನ್ನು ಪಡೆಯಲಿ ಎಂದು ಶುಭ ಹಾರೈಸುತ್ತೇನೆ.
-ಆನಂದ್ ಸಿಂಗ್, ಪ್ರವಾಸೋದ್ಯಮ ಸಚಿವ, ಹೊಸಪೇಟೆ

ವಿಸ್ತಾರ ತಾನೇ ಹೇಳಿಕೊಂಡಂತೆ ಗಿಮಿಕ್ ಇಲ್ಲದ ಎಲ್ಲವನ್ನೂ ಒಳಗೊಂಡ ಮಾಧ್ಯಮವಾಗಿ ಬರುತ್ತಿರುವುದು ಸಂತೋಷದ ಸಂಗತಿ. ನೇರ, ಸರಳ,‌ ಸದಭಿರುಚಿಯ ಸುದ್ದಿ ಕೊಡುವುದಾಗಿ ಹೇಳಿಕೊಂಡು ನಿಖರ, ಜನಪರವಾದ ಮಾಧ್ಯಮವಾಗಿ ಇರುವುದಾಗಿ ಘೋಷಿಸಿಕೊಂಡಿರುವುದು ಮಾಧ್ಯಮ ಲೋಕದಲ್ಲಿ ಭರವಸೆಯ ಬೆಳಕಿಂಡಿಯಾಗಿ “ವಿಸ್ತಾರ” ಹೊರಹೊಮ್ಮುತ್ತದೆ ಎಂಬ ನಂಬಿಕೆ ನಮಗಿದೆ. ಆ ನಿಟ್ಟಿನಲ್ಲಿ ಅನುಕ್ಷಣದ ಸುದ್ದಿಮಿತ್ರನಾಗಿ ಬರುತ್ತಿರುವ ಈ ವಾರ್ತಾ ವಾಹಿನಿ ಸಾಕಷ್ಟು ಜನರಿಗೆ ಮುಟ್ಟಲಿ. ಎಲ್ಲ ಮಾಧ್ಯಮಗಳಿಗೂ ನೈತಿಕತೆ ಸ್ಪಷ್ಟ ಪಡಿಸುವ ರೀತಿಯಲ್ಲಿ ಹೊರಬರಲಿ ಎಂದು ಮನದುಂಬಿ ಹಾರೈಸುತ್ತೇವೆ.
-ಡಾ.ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ, ಬಸವಕೇಂದ್ರ, ಶಿವಮೊಗ್ಗ

ವಿಸ್ತಾರ ನ್ಯೂಸ್ ಸದಭಿರುಚಿಯ ಸುದ್ದಿಗಳನ್ನು ಪಸರಿಸಲಿ. ಜನರಿಗೆ ಒಳ್ಳೆಯ ವಿಷಯಗಳನ್ನು, ಉತ್ತಮ ಸಂದೇಶಗಳನ್ನು ನೀಡುವಂತಾಗಲಿ. ವಿಸ್ತಾರ ಎಲ್ಲ ಕಡೆ ವಿಸ್ತಾರಗೊಳ್ಳಲಿ ಎಂದು ಹಾರೈಸುತ್ತೇನೆ.
-ಕಿಮ್ಮನೆ ಜಯರಾಮ್, ಉದ್ಯಮಿ, ಶಿವಮೊಗ್ಗ.

ವಿಸ್ತಾರ ಎಂಬ ಹೆಸರಿನಲ್ಲಿ ಅನಾವರಣವಾಗಿರುವ ಕನ್ನಡ ವಾಹಿನಿಗೆ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪರವಾಗಿ ಮತ್ತು ಜಿಲ್ಲೆಯ ಸಮಸ್ತ ಕನ್ನಡ ಮನಸು ಪರವಾಗಿ ಶುಭಹಾರೈಸುತ್ತೇನೆ. ಮಾಧ್ಯಮ ಕ್ಷೇತ್ರದಲ್ಲಿ ವಿಸ್ತಾರ ವಾಹಿನಿಯು ವಿಸ್ತಾರವಾಗಿ ತನ್ನ ಆಯಾಮವನ್ನು ವಿಸ್ತರಿಸಿಕೊಂಡು ಜನಮನ ಗೆಲ್ಲಲೆಂದು ಆಶಿಸುತ್ತೇನೆ.
– ಡಾ. ಎಚ್.ಎಲ್. ಮಲ್ಲೇಶಗೌಡ್ರು, ಅಧ್ಯಕ್ಷರು, ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್

ವಿಸ್ತಾರ ಎಂಬ ನಾಮವುಳ್ಳಂತಹ, ರಾಜ್ಯಾದ್ಯಂತ ವಿಸ್ತರಿಸುತ್ತಿರುವ ವಿಸ್ತಾರ ವೆಬ್ ನ್ಯೂಸ್ ಪ್ರಾರಂಭವಾಗುತ್ತಿರುವುದು ಮನಸ್ಸಿಗೆ ಬಹಳ ಸಂತೋಷವನ್ನುಂಟು‌ ಮಾಡಿದೆ. ಜಿಲ್ಲೆ ಹಾಗೂ ರಾಜ್ಯದ ಆಗುಹೋಗುಗಳ ಬಗ್ಗೆ ಸುದ್ದಿಗಳನ್ನು ಹಾಗೂ ಮಾಹಿತಿಯನ್ನು ಮನೆ ಮನೆಗೆ ತಲುಪುವ ರೀತಿಯಲ್ಲಿ ಕೆಲಸ ಮತ್ತು ಒಳ್ಳೆಯ ಸಾಧನೆ ಮಾಡಲಿ. ವಿಸ್ತಾರ ಸಂಸ್ಥೆಯ ನೌಕರ ವರ್ಗದವರಿಗೆ, ಸಂಪಾದಕರಿಗೆ, ಮಾಲೀಕರಿಗೆ ದೇವರು ಒಳ್ಳೆಯದು ಮಾಡಲಿ. ವಿಸ್ತಾರ ವಾಹಿನಿಗೆ ಸ್ವಾಗತವನ್ನು ಕೋರುತ್ತೇವೆ.
ಶ್ರೀ ಶಂಭುನಾಥ ಮಹಾಸ್ವಾಮೀಜಿ, ಆದಿಚುಂಚನಗಿರಿ ಹಾಸನ ಶಾಖಾ ಮಠ

ಹೊಸದಾಗಿ ಆರಂಭವಾಗುತ್ತಿರುವ ವಿಸ್ತಾರ ವಾಹಿನಿಗೆ ಶುಭವಾಗಲಿ, ಜಿಲ್ಲಾಮಟ್ಟ ಹಾಗೂ ರಾಜ್ಯಮಟ್ಟದಲ್ಲಿ ಮುಂಚೂಣಿ ವಾಹಿನಿಯಾಗಿ ಬೆಳೆಯಲಿ, ಸರ್ಕಾರ ಹಾಗೂ ಸಾರ್ವಜನಿಕವಾಗಿ ನಡೆಯುವ ಸರಿತಪ್ಪುಗಳನ್ನು ಎತ್ತಿಹಿಡಿಯುವ ಪ್ರಾಮಾಣಿಕವಾದ ಪ್ರಯತ್ನವನ್ನು ಮಾಡಲಿ, ನಿಮ್ಮಿಂದ ಸಾರ್ವಜನಿಕರಿಗೆ ಅನುಕೂಲವಾಗಲಿ ಹಾಗೂ ರಾಜ್ಯ ಬೆಳೆಯುವುದಕ್ಕೆ ಅನುಕೂಲವಾಗಲಿ. ಎಲ್ಲರಿಗೂ ನ್ಯಾಯವನ್ನ ದೊರಕಿಸಿಕೊಡುವ ಮೂಲಕ ವಾಹಿನಿ ರಾಜ್ಯದಲ್ಲಿ ನಂಬರ್ ಚಾನೆಲ್ ಆಗಲಿ ಎಂದು ಶುಭಕೋರುತ್ತೇನೆ….
-ಸಿ.ಎನ್. ದಾನಿ, ಪುರಸಭೆ ಅಧ್ಯಕ್ಷರು ಬೇಲೂರು

ವಿಸ್ತಾರ ವಾಹಿನಿಯು ಜನಮನ ಗೆಲ್ಲುವಂತಹ ಕಾರ್ಯಕ್ರಮಗಳನ್ನು ನೀಡಲಿ, ದೇಶದಲ್ಲಿ ನಡೆಯುವ ಸುದ್ದಿಗಳನ್ನು ಬಿತ್ತರಿಸಲಿ ಹಾಗೂ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಲಿ. ಬಡವರು ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ನ್ಯಾಯ ಕೊಡಿಸುವಂತಹ ಕೆಲಸ ಮಾಡಲಿ. ವಿಸ್ತಾರ ಸಮಾಜದಲ್ಲಿ ಅತೀ ಹೆಚ್ಚು ಕೆಲಸ ಮಾಡುತ್ತದೆ ಎಂಬ ವಿಶ್ವಾಸ ಇದೆ, ವಿಸ್ತಾರ ವಾಹಿನಿಗೆ ಅತ್ಮೀಯವಾದ ಶುಭಾಶಯ ಕೋರುತ್ತೇನೆ…
ಹುಲ್ಲಹಳ್ಳಿ ಸುರೇಶ್, ಬಿಜೆಪಿ ಜಿಲ್ಲಾಧ್ಯಕ್ಷ, ಹಾಸನ ಜಿಲ್ಲೆ

ವಿಸ್ತಾರ ವಾಹಿನಿಯು ವಿಶೇಷವಾದ ಆಶಯಗಳಿಂದ ಜನರ ಸೇವೆಯನ್ನು ಮಾಡಲು ಮುಂದಾಗಿದೆ. ಸಮಾಜದಲ್ಲಿನ ತಪ್ಪುಗಳನ್ನು ತಿದ್ದಿ ತೀಡುವ ಕಾರ್ಯವನ್ನು ವಿಸ್ತಾರ ವಾಹಿನಿಯೂ ಯಶಸ್ವಿಯಾಗಿ ನಿರ್ವಹಿಸಿ, ಜನರ ಮನದಲ್ಲಿ ಸದಾ ಕಾಲ ನೆಲೆಸಿ, ಯಶಸ್ಸು ಕಾಣಲಿ ಎಂದು ಶುಭ ಹಾರೈಸುತ್ತೇನೆ.
ಶ್ರೀ ಕಲ್ಯಾಣಸ್ವಾಮೀಜಿಗಳು, ಶ್ರೀ ಸಿದ್ಧರಾಮೇಶ್ವರ ಮಠ, ತೇಜೂರು ಗ್ರಾಮ, ಹೊಳೆನರಸೀಪುರ

ರಾಜ್ಯದ ಹಿರಿಯ, ಕ್ರಿಯಾಶೀಲ ಪತ್ರಕರ್ತರೇ ಹುಟ್ಟು ಹಾಕಿರುವ ವಿಸ್ತಾರ ಮಾಧ್ಯಮಕ್ಕೆ ಶುಭವಾಗಲಿ. ರಾಜ್ಯದಲ್ಲಿ ಮತ್ತೊಂದು ಸುದ್ದಿ ಮಾಧ್ಯಮ ಬರುತ್ತಿರುವುದು ಖುಷಿಯ ವಿಚಾರ. ವಿಸ್ತಾರ ಡಿಜಿಟಲ್ ಮಾಧ್ಯಮ ಜನರ ಸಮಸ್ಯೆಗಳಿಗೆ ಧ್ವನಿಯಾಗಲಿ. ಉತ್ತರ ‌ಕರ್ನಾಟಕ ಭಾಗದ ಜನರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡಲಿ. ನೂತನ ಸುದ್ದಿ ಸಂಸ್ಥೆ, ಅಲ್ಲಿನ ಎಲ್ಲ ಪತ್ರಕರ್ತರಿಗೆ ಶುಭ ಕೋರುವೆ.
-ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ (ಹುಕ್ಕೇರಿ ಹಿರೇಮಠ)

ರಾಜ್ಯದಲ್ಲಿ ಮತ್ತೊಂದು ಹೊಸ ಸುದ್ದಿವಾಹಿನಿ, ವಿಸ್ತಾರ ನ್ಯೂಸ್ ಲೋಕಾರ್ಪಣೆಯಾಗಿದೆ. ರಾಷ್ಟ್ರದಾದ್ಯಂತ ಉತ್ತಮ ಸುದ್ದಿ ನೀಡುತ್ತ, ಹೆಸರಿಗೆ ತಕ್ಕಂತೆ ಮುಂಬರುವ ದಿನಗಳಲ್ಲಿ ವಿಸ್ತಾರವಾಗಲಿ ಎಂದು ಈ ಶುಭ ಸಂದರ್ಭದಲ್ಲಿ ಶುಭ ಹಾರೈಸುವೆ…
-ಉಮೇಶ್ ಮುದ್ನಾಳ, ಸಾಮಾಜಿಕ ಹೋರಾಟಗಾರ, ಯಾದಗಿರಿ

ಮಾಧ್ಯಮ ಕ್ಷೇತ್ರದಲ್ಲಿ ಮತ್ತೊಂದು ಸುದ್ದಿವಾಹಿನಿ‌ ವಿಸ್ತಾರ ನ್ಯೂಸ್ ಡಿಜಿಟಲ್ ಲೋಕಾರ್ಪಣೆಯಾಗಿದೆ. ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯ ಹಾಗೂ ಭ್ರಷ್ಟಾಚಾರದ ಕುರಿತು ಸಮಾಜದ ಜನರ ಮುಂದಿಟ್ಟು, ಒಂದು ಒಳ್ಳೆಯ ಸಮಾಜವನ್ನು ನಿರ್ಮಾಣ ಮಾಡಿ ಜನತೆಗೆ ಒಳ್ಳೆ ಸುದ್ದಿ ನೀಡುತ್ತ ಜಗತ್ತಿನಾದ್ಯಂತ ವಿಸ್ತಾರಗೊಳ್ಳಲಿ ಎಂದು ಹಾರೈಸುವೆ.
-ಶರಣು ಇಟಗಿ, ಕರ್ನಾಟಕ ರಕ್ಷಣಾ ವೇದಿಕೆ, ವಡಗೇರ ತಾಲೂಕು

ರಾಜ್ಯದಲ್ಲಿ ಇಂದಿನಿಂದ ಮತ್ತೊಂದು ಮಾಧ್ಯಮ ಹುಟ್ಟಿಕೊಂಡಿದೆ. ವಿಸ್ತಾರ ನ್ಯೂಸ್ ಕನ್ನಡ ಹೆಸರಿನಲ್ಲಿ ಇಂದು ಡಿಜಿಟಲ್ ವೆಬ್‌ಸೈಟ್‌ ಉದ್ಘಾಟನೆಯಾಗಿದೆ. ಪ್ರತಿಯೊಬ್ಬ ಕನ್ನಡಿಗರ ಮನ ಗೆದ್ದು, ಪ್ರತಿಯೊಬ್ಬರ ಮನೆ- ಮನದಲ್ಲಿ ನೆಲೆಸುವಂತಾಗಲಿ.
-ಮಾಣಿಕ್ ರೆಡ್ಡಿ, ಕೆಪಿಸಿಸಿ‌ ಕೋ ಆರ್ಡಿನೆಟರ್ ಹಾಗೂ ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷರು‌, ಯಾದಗಿರಿ

ವಿಸ್ತಾರ ನ್ಯೂಸ್‌ನ ಲೋಗೊ ಹಾಗೂ ವೆಬ್‌ಸೈಟ್‌ ಲಾಂಚ್ ಆಗಿದೆ. ಜನರಿಗೆ ಒಳ್ಳೆಯ ಸುದ್ದಿಗಳನ್ನು ತಲುಪಿಸಲು ಹರಿಪ್ರಕಾಶ್ ಅವರ ತಂಡ ಯಶಸ್ವಿಯಾಗಲಿ.
ಅರುಣ್ ಕುಮಾರ್ ಕೆ, ವಿಜಯನಗರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ

ಸಮಾಜದಲ್ಲಿ ಅನೇಕ ಕಡೆ ಅನ್ಯಾಯ, ದೌರ್ಜನ್ಯದಂತಹ ಹೀನ ಕೃತ್ಯಗಳು ನಿತ್ಯವೂ ನಡೆಯುತ್ತಿರುತ್ತವೆ. ಅಂಥವುಗಳ ಮೇಲೆ ಬೆಳಕು ಚೆಲ್ಲಿ ಕಟ್ಟ ಕಡೆಯ ವ್ಯಕ್ತಿಯ ಧ್ವನಿಯಾಗಿ ಸೂಕ್ತ ನ್ಯಾಯ ಒದಗಿಸುವ ಕೆಲಸವನ್ನು ಈ ಸುದ್ದಿ ಸಂಸ್ಥೆ ಮಾಡಲಿ. ಮಾಧ್ಯಮ ಕ್ಷೇತ್ರದಲ್ಲಿ ಹೊಸತನದೊಂದಿಗೆ ಪ್ರಾರಂಭವಾಗುತ್ತಿರುವ ವಿಸ್ತಾರ ಕನ್ನಡ ನ್ಯೂಸ್ ಈ ನಾಡಿನಲ್ಲಿ ನವ ಇತಿಹಾಸ ನಿರ್ಮಾಣ ಮಾಡಲಿ.
– ಸಂಗಮೇಶ ಸಗರ, ಜಿಲ್ಲಾಧ್ಯಕ್ಷ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ವಿಜಯಪುರ

ವಿಸ್ತಾರ ನ್ಯೂಸ್ ಕನ್ನಡ ಸುದ್ದಿ ಮಾಧ್ಯಮವು ಹೊಸತನದ ಹರಿಕಾರವಾಗಲಿ. ನೊಂದವರ ಧ್ವನಿ ಆಗಲಿ. ಸಮಾಜದ ಎಲ್ಲ ವರ್ಗದ ಜನರಿಗೆ ಅನುಕೂಲವಾಗುವ ಸದಭಿರುಚಿಯ ಸುದ್ದಿಯನ್ನು ನೀಡಲಿ. ವಿಸ್ತಾರ ಮಾಧ್ಯಮ ಹಾಗೂ ಎಲ್ಲ ಸಿಬ್ಬಂದಿಗೆ ಶುಭ ಕೋರುತ್ತೇನೆ.
– ಅಶೋಕ ಬಿರಾದಾರ, ಯೂರೋಲಾಜಿಸ್ಟ್, ಶ್ರೀ ಭಾಗ್ಯವಂತಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ & ಸಂಶೋಧನಾ ಕೇಂದ್ರ, ವಿಜಯಪುರ

ನೂತನವಾಗಿ ರಾಜ್ಯದಲ್ಲಿ ಆರಂಭವಾಗುತ್ತಿರುವ ವಿಸ್ತಾರ ವಾಹಿನಿಗೆ ಶುಭಾಶಯಗಳು. ವಿಸ್ತಾರ ವಾಹಿನಿಯು ಬಡವರ, ದೀನದಲಿತರ ಧ್ವನಿಯಾಗಿ ನಿಲ್ಲಲಿ. ಸಮಾಜದ ಎಲ್ಲಾ ಆಯಾಮಗಳಲ್ಲಿ ಚಿಂತನೆ ನಡೆಸಿ, ಸಮಾಜಮುಖಿ ಸುದ್ದಿಗಳನ್ನು ಬಿತ್ತರಿಸಲಿ. ಹೊಸ ಚಿಂತನೆ ಹಾಗೂ ವಿಶೇಷ ಕಾರ್ಯಕ್ರಮಗಳ ಮೂಲಕ ರಾಜ್ಯದ ಜನರ ಮನಸ್ಸನ್ನು ಗೆಲ್ಲಲಿ ಎಂದು ಶುಭ ಹಾರೈಸುತ್ತೇನೆ.
ಎಂ. ಎ. ಗೋಪಾಲಸ್ವಾಮಿ, ಮಾಜಿ ಎಂಎಲ್‌ಸಿ, ಹಾಸನ ಜಿಲ್ಲಾ ಕಾಂಗ್ರೆಸ್ ನಾಯಕರು

ನೂತನವಾಗಿ ಪ್ರಾರಂಭಗೊಳ್ಳುತ್ತಿರುವ ವಿಸ್ತಾರ ಸುದ್ದಿ ಮಾಧ್ಯಮಕ್ಕೆ ಮೊದಲನೆಯದಾಗಿ ALL THE BEST. ವಿಸ್ತಾರ ಎಂಬ ಹೆಸರಿನಲ್ಲಿ ಆರಂಭವಾಗುತ್ತಿರುವ ನೂತನ ತಂಡ ಹೊಸ ಹೊಸ ವಿಚಾರಗಳತ್ತ ಗಮನ ಹರಿಸಲಿ. ಸದಾ ನೈಜ ಸುದ್ದಿಗಳನ್ನು ನೀಡುತ್ತ ಜನರ ಮನೆ ಮನೆ ಮಾತಾಗುವ ಸುದ್ದಿವಾಹಿಯಾಗಲೆಂದು ವಿಸ್ತಾರ ಚಾನೆಲ್‌ ಬಳಗಕ್ಕೆ ಶುಭ ಹಾರೈಸುತ್ತೇನೆ.
ಮಂತರ್ ಗೌಡ, ಯುವ ಕಾಂಗ್ರೆಸ್, ಮುಖಂಡರು

ಹೊಸದಾಗಿ ಬರುತ್ತಿರುವ ವಿಸ್ತಾರ ಚಾನೆಲ್‌ನಿಂದ ನೈಜ ಮತ್ತು ನೇರ ವಿಚಾರಗಳನ್ನು ರಾಜ್ಯ, ದೇಶದ ಜನತೆಗೆ ಬಿತ್ತರಿಸುವ ಕೆಲಸವಾಗಲಿ. ನಿಖರ ಹಾಗೂ ನೈಜತೆಯನ್ನು ಎತ್ತಿ ಹಿಡಿಯುವ ಸುದ್ದಿಗಳತ್ತ ಗಮನ ಹರಿಸಲಿ. ವಿಸ್ತಾರ ಚಾನೆಲ್ ಮಾಧ್ಯಮ‌ ಲೋಕದಲ್ಲೊಂದು ಹೊಸ ಇತಿಹಾಸ ಬರೆಯಲಿ ಎಂದು ಆಶಿಸುತ್ತಾ ಮತ್ತೊಮ್ಮೆ ವಿಸ್ತಾರಕ್ಕೆ ಅಭಿನಂದನೆ ಹೇಳುವೆ.
-ತೆಲಪಂಡ ಶಿವಕುಮಾರ್ ನಾಣಯ್ಯ, ಕೊಡಗು ಬಿಜೆಪಿ ಜಿಲ್ಲಾ ಕಾರ್ಯಾಕಾರಣಿ ಸದಸ್ಯರು

ಪ್ರಜಾಪ್ರಭುತ್ವದ ಉಳಿವಿನಲ್ಲಿ ಮಾಧ್ಯಮದ ಪಾತ್ರ ಬಹಳ ದೊಡ್ಡದಿದೆ. ಮಾಧ್ಯಮ‌ ಜನತೆಯಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದೆ. ಇದೀಗ ಹೊಸ ಸುದ್ದಿವಾಹಿನಿ ವಿಸ್ತಾರ ಲೋಕರ್ಪಣೆಗೊಳ್ಳುತ್ತಿರುವುದು ಸಂತೋಷದ ವಿಚಾರ. ಈ ಸುದ್ದಿ ವಾಹಿನಿ ರಾಜ್ಯಕ್ಕೆ ಸೀಮಿತವಾಗಿರದೆ ರಾಷ್ಟ್ರಮಟ್ಟಕ್ಕೆ ಬೆಳೆಯಲಿ. ಹಾಗೆ ಜನರಲ್ಲಿ ಜಾಗೃತಿ ಮೂಡಿಸುವ ಮಹತ್ತರ ಕೆಲಸ ಮಾಡಲಿ. ಸಂಸ್ಥೆಯನ್ನ ಪ್ರಾರಂಭ ಮಾಡಿದ ಮಾಲೀಕರು ಹಾಗೂ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ನನ್ನ ಶುಭ ಕಾಮನೆಗಳು.
– ಕೆ.ಜಿ ಬೋಪಯ್ಯ ಮಾಜಿ ಸ್ಪೀಕರ್ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರು

ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಿಕೋದ್ಯಮಕ್ಕೆ ಹೊಸದಾಗಿ ಸೇರ್ಪಡೆಯಾಗುತ್ತಿರುವ ವಿಸ್ತಾರ ವಾಹಿನಿಗೆ ಶುಭಾಶಯಗಳು. ಪ್ರಸ್ತುತ ಸುದ್ದಿವಾಹಿನಿಗಳಲ್ಲಿ ಬದಲಾವಣೆಯ ಅವಶ್ಯಕತೆ ಇದೆ. ಕೋಮು ಸಂಘರ್ಷಕ್ಕೆ ಎಡೆ ಮಾಡಿಕೊಡದೆ ಜವಾಬ್ದಾರಿಯಿಂದ ವರ್ತಿಸಬೇಕಾದ ಅನಿವಾರ್ಯತೆ ಇದೆ. ಜತೆಗೆ ನೊಂದವರಿಗೆ ಸಹಾಯ ಮಾಡುವತ್ತ, ಸಮಸ್ಯೆ ಪರಿಹರಿಸುವತ್ತ ಗಮನ ಹರಿಸಬೇಕಾಗಿದೆ. ಆ ನಿಟ್ಟಿನಲ್ಲಿ ವಿಸ್ತಾರ ವಾಹಿನಿ ಬದಲಾವಣೆಗಳೊಂದಿಗೆ ಜನಮನ ಗೆಲ್ಲಲಿ ಎಂದು ಆಶಿಸುತ್ತೇನೆ.
-ಪೊನ್ನಚ್ಚನ ಮಧು, ಉದ್ಯಮಿ

ವಿಸ್ತಾರ ಸುದ್ದಿ ಸಂಸ್ಥೆ ಇದೀಗ ತಮ್ಮ ವೆಬ್‌ಸೈಟ್ ಹಾಗೂ ಲೋಗೊ ಲಾಂಚ್ ಮಾಡಿದೆ. ಈ ಸುದ್ದಿವಾಹಿನಿ ಜನರ ಮೆಚ್ಚುಗೆಗೆ ಪಾತ್ರವಾಗಿ ಉತ್ತಮ ಸುದ್ದಿಗಳನ್ನು ಕೊಡುವತ್ತ ಗಮನ ಹರಿಸಲಿ. ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಪ್ರಬಲ ಸಂಸ್ಥೆಯಾಗಿ ಬೆಳೆಯಲಿ.
– ಸುಜಾ ಕುಶಾಲಪ್ಪ, ಎಂಎಲ್‌ಸಿ, ಕೊಡಗು

ಸಾಮಾಜಿಕ ಸಾಮರಸ್ಯ ಮತ್ತು ಐಕ್ಯತೆ ಕಾಪಾಡುವಲ್ಲಿ ಸುದ್ದಿ ಮಾಧ್ಯಮಗಳ ಪಾತ್ರ ಬಹುಮುಖ್ಯ. ವಿಸ್ತಾರ ಸುದ್ದಿ ಮಾಧ್ಯಮ ರಾಜ್ಯದ ಜನರಿಗೆ ಸತ್ಯ ಸುದ್ದಿಗಳನ್ನು ತಲುಪಿಸುವಲ್ಲಿ ಯಶಸ್ವಿಯಾಗಲಿ. ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಹಾರೈಸುತ್ತೇನೆ.
-ಪ್ರಸಾದ್ ಅಬ್ಬಯ್ಯ. ಹುಬ್ಬಳ್ಳಿ- ಧಾರವಾಡ ಪೂರ್ವ ಕ್ಷೇತ್ರದ ಶಾಸಕರು

basavaraja horatti

ಅತಿರಂಜಿತ ಸುದ್ದಿಗಳು ಜನರಿಗೆ ತಪ್ಪು ಸಂದೇಶ ಕೊಡುತ್ತವೆ. ನೈಜ ಸುದ್ದಿಗಳನ್ನು ಜನರಿಗೆ ತಲುಪಿಸಬೇಕಾದ ಗುರುತರ ಜವಾಬ್ದಾರಿ ಮಾಧ್ಯಮಗಳ ಮೇಲಿದೆ. ವಿಸ್ತಾರ ಸುದ್ದಿ ಮಾಧ್ಯಮ ನಿಖರ ಮತ್ತು ಜನಪರ ಎನ್ನುವ ಘೋಷವಾಕ್ಯದೊಂದಿಗೆ ಮಾಧ್ಯಮ ಜಗತ್ತಿಗೆ ಕಾಲಿಡುತ್ತಿರುವುದು ಸಂತೋಷದ ವಿಚಾರ. ವಿಸ್ತಾರ ಬಳಗ ದೊಡ್ಡಮಟ್ಟದಲ್ಲಿ ಯಶಸ್ವಿಯಾಗಲಿ ಎಂದು ಶುಭಕೋರುತ್ತೇನೆ.
– ಬಸವರಾಜ್ ಹೊರಟ್ಟಿ. ವಿಧಾನ ಪರಿಷತ್ ಸದಸ್ಯರು

ಜನಪರ ಧ್ಯೇಯಗಳೊಂದಿಗೆ ಮಾಧ್ಯಮ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸುತ್ತಾ ಬಂದಿರುವ ಹರಿಪ್ರಕಾಶ್ ಕೋಣೆಮನೆ ಅವರ ನೇತೃತ್ವದ ನೂತನ ವೆಬ್ ಸೈಟ್ ಹಾಗೂ ಚಾನೆಲ್ ಮಾಧ್ಯಮ ಲೋಕದಲ್ಲಿ ಸಂಚಲನ ಮೂಡಿಸುವ ನಿರೀಕ್ಷೆಯಿದೆ. ಟೀಮ್ ವಿಸ್ತಾರಕ್ಕೆ ಯಶಸ್ಸು ಲಭಿಸಲಿ.
-ಸಿ.ಎಸ್.ಪುಟ್ಟರಾಜು, ಮಾಜಿ ಸಚಿವ, ಶಾಸಕರು, ಮೇಲುಕೋಟೆ ಕ್ಷೇತ್ರ

ಹರಿಪ್ರಕಾಶ್ ಕೋಣೆಮನೆ ನೇತೃತ್ವದ ನೂತನ ವೆಬ್ ಸೈಟ್‌ ಹಾಗೂ ಚಾನೆಲ್ ಯಶಸ್ವಿಯಾಗಲಿ. ವಿಸ್ತಾರ ತಂಡ ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲಿ. ದಲಿತ, ದಮನಿತ, ರೈತಾಪಿ ಮತ್ತು ದುಡಿಯುವ ವರ್ಗದ ದನಿಯಾಗಲಿ. ಸಮಾಜದ ದಿಕ್ಸೂಚಿಯಾಗಲೆಂದು ಹಾರೈಸುವೆ.
-ಎನ್. ಚಲುವರಾಯಸ್ವಾಮಿ, ಮಾಜಿ ಸಚಿವರು ಹಾಗೂ ಉಪಾಧ್ಯಕ್ಷರು, ಕೆಪಿಸಿಸಿ

ವಿಸ್ತಾರ ನ್ಯೂಸ್ ಸಮಾಜಮುಖಿ ಸುದ್ದಿಗಳನ್ನು ಬಿತ್ತರಿಸಲಿ. ಹೊಸ ಚಿಂತನೆ ಹಾಗೂ ವಿಶೇಷ ಕಾರ್ಯಕ್ರಮಗಳ‌ ಮೂಲಕ ರಾಜ್ಯ, ರಾಷ್ಟ್ರದ ಜನರ ಮನಸ್ಸನ್ನು ಗೆಲ್ಲಲಿ. ಈ ವಾಹಿನಿಯು ಬಡವರ ಧ್ವನಿಯಾಗಿ ಸದಾ ನಿಲ್ಲಲಿ.
– ಬಸವರಾಜ್ ಮತ್ತಿಮೂಡ್, ಕಲಬುರಗಿ ಗ್ರಾಮೀಣ ಬಿಜೆಪಿ ಶಾಸಕರು

ಕನ್ನಡ ನಾಡಿನ ಟಿವಿ ಕ್ಷೇತ್ರದಲ್ಲಿ ಹೊಸದಾಗಿ ಆರಂಭವಾಗುತ್ತಿರುವ ವಿಸ್ತಾರ ವಾಹಿನಿಗೆ ನನ್ನ ತಾಲೂಕಿನ ಜನತೆಯ ಪರವಾಗಿ ಶುಭಾಶಯ ಅರ್ಪಿಸುತ್ತೇನೆ. ಈ ವಾಹಿನಿ ಜನರ ಕಷ್ಟ ಸುಖದ ಬಗ್ಗೆ, ವಿಶೇಷವಾಗಿ ದಲಿತರ- ಹಿಂದುಳಿದ ವರ್ಗದವರ ಅಭಿವೃದ್ಧಿ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಿ. ಈ ನಾಡಿನ ಜಲ, ನೆಲ, ಭಾಷೆ ಬಗ್ಗೆ ಅಪಾರ ಆಸಕ್ತಿ ವಹಿಸಿ ಈ ನಾಡಿಗೆ ಆಗುವ ಅನ್ಯಾಯವನ್ನು ಸರಿಪಡಿಸಲು ಶ್ರಮಿಸಲಿ. ಜನರಲ್ಲಿ ಜಾಗೃತಿ ಮೂಡಿಸುವಂಥ ಕೆಲಸ ಮಾಡಲಿ ಎಂದು ಶುಭಾಶಯವನ್ನು ಕೋರುತ್ತೇನೆ.
– ಕೆ.ಎಸ್. ಲಿಂಗೇಶ್, ಶಾಸಕ, ಬೇಲೂರು

ಇಂದಿನಿಂದ ಹೊಸದೊಂದು ಮಾಧ್ಯಮ ಹುಟ್ಟಿಕೊಂಡಿದೆ. ವಿಸ್ತಾರ ನ್ಯೂಸ್ ಕನ್ನಡ ಡಿಜಿಟಲ್ ಲೋಕಾರ್ಪಣೆಯಾಗಿದೆ. ಇದು ಜನಪರ ಕಾಳಜಿ ಹೊತ್ತು ಮುಂದೆ ಬರುತ್ತಿದೆ. ಇದು ಬಡವರ ಬೆನ್ನೆಲುಬಾಗಿ ನಿಲ್ಲಲಿ, ಹೆಸರಿಗೆ ತಕ್ಕಂತೆ ಎಲ್ಲ ಕಡೆ ಜನಮನ್ನಣೆ ಗೆಲ್ಲಲಿ. ಮುಂದಿನ ದಿನಗಳಲ್ಲಿ ಒಳ್ಳೆಯ ಸುದ್ದಿ ಮಾಧ್ಯಮವಾಗಿ ಬೆಳೆಯಲಿ ಎಂದು ಶುಭ ಕೊರುವೆ.
– ಡಾ. ವೇದಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಯಾದಗಿರಿ

ಪ್ರಸ್ತುತ ಕಾಲಘಟ್ಟದಲ್ಲಿ ಜವಾಬ್ದಾರಿಯುತವಾದ ಒಂದು ಒಳ್ಳೆಯ ವಾಹಿನಿಯ ಅವಶ್ಯಕತೆ ಇದೆ. ಮುಂದಿನ ದಿನಗಳಲ್ಲಿ ಒಳ್ಳೆಯ ವಿಚಾರಗಳನ್ನು ಸಮಾಜಕ್ಕೆ ತೋರಿಸುವಂತಹ ಕೆಲಸವನ್ನು ನಿಮ್ಮ ವಾಹಿನಿ ಮಾಡಲಿ. ವಿಸ್ತಾರ ವಾಹಿನಿಯ ಮುಖ್ಯಸ್ಥರು, ಎಲ್ಲಾ ವರದಿಗಾರರು, ಸಿಬ್ಬಂದಿ ಸೇರಿದಂತೆ ವಾಹಿನಿಯ ಸಮಸ್ತ ತಂಡಕ್ಕೆ ಶುಭ ಹಾರೈಸುತ್ತೇನೆ.
ಸಂತೋಷ್ ಕೆಂಚಾಂಬ, ರಾಷ್ಟ್ರ ಧರ್ಮ ಸಂಸ್ಥಾಪಕರು, ಬೇಲೂರು

ಮಾಧ್ಯಮ ಕ್ಷೇತ್ರದಲ್ಲಿ ವಿಭಿನ್ನ ಪ್ರಯತ್ನ ನಡೆಸುವ ಹರಿಪ್ರಕಾಶ್ ಕೋಣೆಮನೆ ಅವರ ನೇತೃತ್ವದಲ್ಲಿ ಹೊಸ ನ್ಯೂಸ್‌ ಚಾನೆಲ್‌ನತ್ತ ಹೆಜ್ಜೆ ಹಾಕಿರುವುದು ಅಭಿನಂದನೀಯ. ವಿಸ್ತಾರ ಮಾಧ್ಯಮವು ಹೆಚ್ಚು ಪ್ರಚಲಿತಗೊಂಡು ವೀಕ್ಷಕರ ಜನಮೆಚ್ಚುಗೆ ಗಳಿಸಲಿ.
– ಬೆಳ್ಳಿಪ್ರಕಾಶ್, ಶಾಸಕ, ಕಡೂರು

ವಿಸ್ತಾರ ನ್ಯೂಸ್ ಚಾನೆಲ್‌ನಿಂದ ಎಲ್ಲಾ ರೀತಿಯ ಉತ್ತಮ ಸೇವೆ ಸಿಗಲಿ ಎಂದು ಬಯಸುತ್ತೇನೆ. ಮುಂದಿನ ದಿನಗಳಲ್ಲಿ ನಿಮಗೆಲ್ಲರಿಗೂ ಒಳ್ಳೆಯ ಭವಿಷ್ಯ ಇರಲಿ ಎಂದು ಬಯಸುತ್ತೇನೆ. ಈ ಚಾನೆಲ್ ಮೂಲಕ ಒಳ್ಳೆಯ ವರದಿಗಾರರು ಕರ್ನಾಟಕ ಜನತೆಗೆ ಹಾಗೂ ಜನಸಾಮಾನ್ಯರ ಹಿತಕ್ಕಾಗಿ ಸುದ್ದಿಗಳನ್ನು ಪ್ರಸಾರ ಮಾಡಲಿ ಎಂದು ಶುಭ ಹಾರೈಸುತ್ತೇನೆ.
ಅನಿರುದ್ಧ್ ಪಿ ಶ್ರವಣ್, ಜಿಲ್ಲಾಧಿಕಾರಿ, ವಿಜಯನಗರ

ಮಾಧ್ಯಮ ಎನ್ನುವುದು ಒಂದು ದೇಶದ ವಾಸ್ತವ ಮತ್ತು ಸತ್ಯವನ್ನು ತಿಳಿಸುವ ಶಕ್ತಿ ಕೇಂದ್ರವಾಗಬೇಕು. ಪ್ರಶ್ನಾರ್ಥಕ ಚಿಹ್ನೆಯನ್ನು ಇಟ್ಟು ಜನರಲ್ಲಿ ಗೊಂದಲ ಮೂಡಿಸುವ ಕಾರ್ಯ ಆಗಬಾರದು. ಮಾಧ್ಯಮ ಭಾರತೀಯ ಸಂಸ್ಕೃತಿ ಹಾಗೂ ರಾಷ್ಟ್ರೀಯತೆಯನ್ನು ಬೆಳೆಸುವ ಕಾರ್ಯವನ್ನು ಹೆಚ್ಚಿಸಬೇಕು. ಯಾರ ಪರವೂ ಅಲ್ಲದೆ ವಸ್ತುನಿಷ್ಠವಾಗಿ ಸುದ್ದಿಯನ್ನು ಕಟ್ಟಿಕೊಡಬೇಕು. ಪ್ರತಿಷ್ಠಿತ ವಿಸ್ತಾರ ಡಿಜಿಟಲ್ ಉದ್ಘಾಟನೆಗೊಂಡಿರುವುದು ಸಂತಸದ ವಿಚಾರ. ವಿಸ್ತಾರ ತಂಡಕ್ಕೆ ಶುಭವಾಗಲಿ.
ಡಿ.ಎನ್ ಜೀವರಾಜ್, ಮಾಜಿ ಶಾಸಕ, ಶೃಂಗೇರಿ

ರಾಜ್ಯದಲ್ಲಿ ಇಂದಿನಿಂದ ಮತ್ತೊಂದು ಡಿಜಿಟಲ್‌ ಸುದ್ದಿ ಜಾಲ ಹುಟ್ಟಿಕೊಂಡಿದೆ. ಇದು ಪ್ರತಿಯೊಬ್ಬ ಕನ್ನಡಿಗರ ಮನ ಗೆದ್ದು, ಪ್ರತಿಯೊಬ್ಬರ ಮನೆ ಮನದಲ್ಲಿ ನೆಲೆಸುವಂತಾಗಲಿ ಎಂದು ಶುಭ ಹಾರೈಸುತ್ತೇನೆ.
– ಇಂಚರ ಗೋವಿಂದರಾಜು, ಎಂಎಲ್‌ಸಿ

ಕನ್ನಡ ನಾಡು ನುಡಿ ವಿಚಾರದ ಸುದ್ದಿ ಬಿತ್ತರಕ್ಕಾಗಿ ಕನ್ನಡದ್ದೆ ಮತ್ತೊಂದು ಸುದ್ದಿವಾಹಿನಿ ಬರುತ್ತಿರುವುದು ಸಂತೋಷಕರ ವಿಚಾರವಾಗಿದೆ. ಎಲ್ಲಾ ಕ್ಷೇತ್ರದ ಬಗ್ಗೆ ಮಾಹಿತಿ ವಿಚಾರ ಜನತೆಗೆ ನೀಡುವ ನಿಟ್ಟಿನಲ್ಲಿ ನೀವು ಪ್ರಾರಂಭಿಸಿರುವ ವಿಸ್ತಾರ ನ್ಯೂಸ್ ಚಾನೆಲ್ ಜನಮನ್ನಣೆ ಪಡೆಯಲಿ ಎಂದು ಶುಭ ಹಾರೈಸುತ್ತೇನೆ.
– ನೀಲಾವರ ಸುರೇಂದ್ರ ಅಡಿಗ

ವಿಸ್ತಾರ ನ್ಯೂಸ್ ರೈತರ ಪರವಾದ ಎಲ್ಲ ಸಮಸ್ಯೆಗಳನ್ನು ಎತ್ತಿ ಹಿಡಿದು ನಮ್ಮ ರೈತರ ಪರ ನಿಲ್ಲುತ್ತದೆ ಎಂಬ ವಿಶ್ವಾಸ ನಮಗಿದೆ. ವಿಸ್ತಾರ ವಾಹಿನಿಯ ಮೂಲಕ ಮುಂದಿನ ದಿನಗಳಲ್ಲಿ ರೈತರ ಸಮಸ್ಯೆಗಳಿಗೆ ಧ್ವನಿಗೂಡಿಸಿ, ಅವರ ನೋವು ಹಾಗೂ ಸಮಸ್ಯೆಗೆ ಸ್ಪಂದಿಸಿ ಅನ್ಯಾಯವಾಗದಂತೆ ಸುದ್ದಿ ಬಿತ್ತರಿಸಿ. ರೈತರ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುವ ಕೆಲಸ ಮಾಡಿ. ಸತ್ಯ ಘಟನೆಗಳನ್ನು ನೈಜವಾಗಿ ತೋರಿಸಿ. ಶುಭ ಹಾರೈಕೆ.
– ಭೋಗ ಮಲ್ಲೇಶ್, ರೈತ ಮುಖಂಡ, ಹಾಸನ

ಎಲ್ಲ ರಂಗಗಳಲ್ಲಿ ಆಗುತ್ತಿರುವಂತೆಯೇ ಮಾಧ್ಯಮ ರಂಗದಲ್ಲಿಯೂ ಬದಲಾವಣೆ ನಿರಂತರ. ಅದರ ಸ್ವರೂಪ, ಬದಲಾಗುವುದನ್ನು ಯಾರೂ ತಡೆಯಲಾಗದು. ವಿಸ್ತಾರ ಎಂಬ ಹೆಸರಿನೊಂದಿಗೆ ಪ್ರಾರಂಭವಾಗುತ್ತಿರುವ ನೂತನ ವಾಹಿನಿಯೂ ಬಡವರ, ಅನ್ಯಾಯಕ್ಕೆ ಒಳಗಾದವರ ಪರವಾಗಿ ಧ್ವನಿಯೆತ್ತಿ ಈ ನಾಡಿನ ಸಂಸ್ಕೃತಿಯ ರಾಯಭಾರಿಯಾಗಿ ಮುಂದಿನ ದಿನಗಳಲ್ಲಿ ಇನ್ನಷ್ಟು ವಿಸ್ತಾರವಾಗಿ ಬೆಳೆಯಲಿ.
ಎ. ಮಂಜು, ಮಾಜಿ ಸಚಿವರು, ಅರಕಲಗೂಡು, ಹಾಸನ‌ ಜಿಲ್ಲೆ

ಮಾಧ್ಯಮವು ಬಿಳಿ ಹಾಳೆಯಷ್ಟೇ ಶುದ್ಧವಾಗಿರಬೇಕು, ಯಾವುದೇ ರೀತಿಯ ಒತ್ತಡ, ವೈಯಕ್ತಿಕ, ಸ್ವಹಿತಾಸಕ್ತಿಗೆ ಒಳಪಡಬಾರದು. ನೂತನವಾಗಿ ಪ್ರಾರಂಭಗೊಳ್ಳುತ್ತಿರುವ ವಿಸ್ತಾರ ವಾಹಿನಿಯು ಮಾಧ್ಯಮ ಧರ್ಮವನ್ನು ಎತ್ತಿ ಹಿಡಿಯಲಿ ಎಂದು ಬಯಸುವೆ.
ಎ. ಟಿ. ರಾಮಸ್ವಾಮಿ, ಶಾಸಕ, ಅರಕಲಗೂಡು

ಸಮಾಜದಲ್ಲಿ ನಡೆಯುವ ಎಲ್ಲ ವಿದ್ಯಮಾನಗಳನ್ನು ಕಟ್ಟಕಡೆಯ ವ್ಯಕ್ತಿಗಳಿಗೆ ಮುಟ್ಟಿಸುವಂತಹ ಪ್ರಯತ್ನವನ್ನು ನೂತನ ವಿಸ್ತಾರ ವಾಹಿನಿಯು ಮಾಡಲಿ. ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಸುದ್ದಿಗಳ ನೈಜ ಚಿತ್ರಣವನ್ನು ನೀಡಿ ಸಮಾಜದ ಪ್ರೀತಿಗೆ ಪಾತ್ರವಾಗವ ಮೂಲಕ, ಭವಿಷ್ಯದಲ್ಲಿ ಅತ್ಯುತ್ತಮ ವಿಚಾರವನ್ನು ಮುಟ್ಟಿಸುವ ಪ್ರಯತ್ನ ನಡೆಸಿ ಸರ್ವರ ವಿಶ್ವಾಸವನ್ನು ಗಳಿಸಲಿ.
ಹೊಯ್ಸಳ ಕೆ. ಆರ್, ರಂಗ ಸಮುದ್ರ, ಚಿತ್ರ ನಿರ್ಮಾಪಕರು

‘ವಿಸ್ತಾರ’ ಎಂಬ ಹೆಸರಿನಲ್ಲಿ ಆರಂಭವಾಗುತ್ತಿರುವ ಹೊಸ ಕನ್ನಡ ವಾಹಿನಿ ಸಮಸ್ತ ಕನ್ನಡಿಗರ ಜನರ ಮನ,
ಮನಸ್ಸು, ಮನೆಗಳನ್ನು ಮುಟ್ಟುವ ರೀತಿಯಲ್ಲಿ ಮುಂದುವರಿಯಲಿ ಎಂಬುದು ನಮ್ಮ ಅಪೇಕ್ಷೆ. ಹರಿಪ್ರಕಾಶ್ ಕೋಣೆಮನೆಯವರ ಕ್ರಿಯಾಶೀಲತೆ, ಪ್ರತಿಭೆಯನ್ನು ಹತ್ತಿರದಿಂದ ಗಮನಿಸಿದ್ದೇವೆ. ಹಲವಾರು ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಸಂಪಾದಕ ಜವಾಬ್ದಾರಿ ನಿರ್ವಹಿಸಿ ಅದರಲ್ಲಿ ಅವರು ಯಶಸ್ಸು ಕಂಡಿದ್ದಾರೆ. ಈಗ ಮತ್ತೊಂದು ಹೊಸ ಪ್ರಯತ್ನಕ್ಕೆ ಹರಿಪ್ರಕಾಶ್ ನೇತೃತ್ವ ವಹಿಸುತ್ತಿದ್ದಾರೆ. ಅವರ ತಂಡದ ಶ್ರಮ ಯಶಸ್ವಿಯಾಗಲಿ ಎಂದು ಶುಭ ಕೋರುತ್ತೇನೆ.
ಶ್ರೀ ಶಿವಶರಣ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಮಾದಾರ ಚೆನ್ನಯ್ಯ ಗುರುಪೀಠ, ಚಿತ್ರದುರ್ಗ

ಲೋಕಾರ್ಪಣೆಗೊಂಡಿರುವ ವಿಸ್ತಾರ ನ್ಯೂಸ್ ನಾಡಿನ ಜನತೆಯ ವಿಶ್ವಾಸಾರ್ಹ ಮಾಧ್ಯಮವಾಗಿ ಗುರುತಿಸಿಕೊಳ್ಳಲಿ. ಸಮಾಜ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ನೀಡುವ ನಿಟ್ಟಿನಲ್ಲಿ ವಿಸ್ತಾರ್ ನ್ಯೂಸ್ ಬೆಳಕು ಚೆಲ್ಲುವ ಕಾರ್ಯ ಮಾಡಲಿ. ಮುಂದಿನ ದಿನದಲ್ಲಿ ರಾಜ್ಯದ ನಂಬರ್ 1 ಸುದ್ದಿ ಮಾಧ್ಯಮವಾಗಲಿ ಎಂದು ಹಾರೈಸುತ್ತೇನೆ.
– ಅರುಣ್ ಕುಂದರ್ ಕಲ್ಗದ್ದೆ, ಸದಸ್ಯರು, ರಾಜ್ಯ ಹಿಂದುಳಿದ ವರ್ಗಗಳ ಆಯೋಗ

ಕನ್ನಡದ ನೂತನ ಸುದ್ದಿ ಚಾನೆಲ್ ವಿಸ್ತಾರ ನ್ಯೂಸ್ ನ ಲೋಗೋ ಮತ್ತು ವೆಬ್ ಸೈಟ್ ಲೋಕಾರ್ಪಣೆಯಾಗಿದೆ. ಈ ಸುದ್ದಿ ಸಂಸ್ಥೆಗೆ ನಾನು ಶುಭ ಕೋರುತ್ತಿದ್ದೇನೆ. ಈ ಸುದ್ದಿ ವಾಹಿನಿ ಒಳ್ಳೆಯ ಸುದ್ದಿಗಳನ್ನು ಮತ್ತು ನಿಜಾಂಶಗಳನ್ನು ಜನರಿಗೆ ಮುಟ್ಟಿಸಲಿ. ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡಲಿ ಅಂತ ಶುಭಾಶಯಗಳನ್ನು ಕೋರುತ್ತಿದ್ದೇನೆ.
-ರಫೀಕ್ ಅಹಮದ್, ಮಾಜಿ ಶಾಸಕ

ಮಿತ್ರರಾದ ಹರಿಪ್ರಕಾಶ್ ಕೋಣೆಮನೆ ಮತ್ತು ತಂಡ ಹೊಸ ಚಾನೆಲ್ ವೆಬ್‌ಸೈಟ್ ಅನಾವರಣ ಮಾಡಿರುವುದು ಬಹಳ ಸಂತೋಷದ ವಿಷಯ. ಹೆಸರೇ ಸೂಚಿಸುವಂತೆ ವಿಸ್ತಾರ ಒಂದು ವಿಶೇಷವಾದ ಉದ್ದೇಶದಿಂದ ಪ್ರಾರಂಭವಾಗುತ್ತಿದೆ. ಸ್ಕೈ ಇಸ್ ದಿ ಲಿಮಿಟ್ ಅನ್ನೋ ರೀತಿಯಲ್ಲಿ ಈ ತಂಡ ಕೆಲಸ ಮಾಡುತ್ತೆ ಎನ್ನುವ ವಿಶ್ವಾಸವಿದೆ. ಮಿತ್ರ ಹರಿಪ್ರಕಾಶ್ ಕೋಣೆಮನೆ ಅವರು ಹಲವು ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಕೃಷಿ ಮಾಡಿದ್ದಾರೆ. ಅವರ ತಂಡಕ್ಕೆ ಶುಭವಾಗಲಿ.
– ಸ್ವಾಮಿ ವಿರೇಶಾನಂದ, ರಾಮಕೃಷ್ಣ ಆಶ್ರಮ, ತುಮಕೂರು

ರಾಜ್ಯದಲ್ಲಿ ವಿಸ್ತಾರ ಎನ್ನುವ ಹೊಸ ಸುದ್ದಿ ವಾಹಿನಿ ಆರಂಭವಾಗುತ್ತಿರುವುದು ಬಹಳ ಸಂತಸದ ವಿಚಾರ. ಈ ಸುದ್ದಿ ವಾಹಿನಿ ನೇರ, ದಿಟ್ಟ ಮತ್ತು ಸತ್ಯವಾದ ಸುದ್ದಿಗಳನ್ನು ಕೊಡುವಂತಾಗಲಿ. ದಿನ ನಿತ್ಯ ಜನರ ಹಲವು ಸಮಸ್ಯೆಗಳಿರುತ್ತವೆ. ಜನರಿಗೆ ಸಮಸ್ಯೆ ತರುವಂತಹ ಸುದ್ದಿಗಳನ್ನು ಬಿತ್ತರಿಸುವಾಗ ಬಹಳ ಸೂಕ್ಷ್ಮವಾಗಿರಬೇಕು. ಈ ಚಾನೆಲ್ ಜನಸಾಮಾನ್ಯರ ಧ್ವನಿಯಾಗಿ ಹೊರ ಹೊಮ್ಮಲಿ ಅಂತ ನಾನು ಕುಣಿಗಲ್ ಜನತೆಯ ಪರವಾಗಿ ಶುಭ ಹಾರೈಸುತ್ತೇನೆ.
-ಡಾ. ರಂಗನಾಥ್, ಶಾಸಕ, ಕುಣಿಗಲ್

ಕನ್ನಡದ ನೂತನ ಸುದ್ದಿ ವಾಹಿನಿ ವಿಸ್ತಾರ ಚಾನೆಲ್‌ಗೆ ಶುಭವಾಗಲಿ. ರಾಜ್ಯಾದ್ಯಂತ ಈ ಸುದ್ದಿ ವಾಹಿನಿ ಜನರ ಪ್ರೀತಿ ಗಳಿಸುವಂತಾಗಲಿ. ನಿಮ್ಮ ಜನಪರ ಸುದ್ದಿಗಳಿಗೆ ನಾವು ಕೈಜೋಡಿಸುತ್ತೇವೆ.
-ರಾಹುಲ್ ಕುಮಾರ್ ಶಹಾಪುರ್ ವಾಡ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಸ್ಪರ್ಧಾ ಜಗತ್ತಿನಲ್ಲಿ ವಿಸ್ತಾರ ಎಂಬ ಹೊಸ ಚಾನೆಲ್ ಬರುತ್ತಿದೆ. ಚಾನೆಲ್‌ಗೆ ತುಂಬು ಹೃದಯದ ಸ್ವಾಗತ. ವಿಸ್ತಾರ ಚಾನೆಲ್ ಆರಂಭವಾಗುವುದಕ್ಕೆ ಸಿದ್ಧತೆ ನಡೆದಿದೆ. ಇದಕ್ಕೆ ತುಂಬಾ ಜನರ ಶ್ರಮ ಇರುತ್ತದೆ ಎನ್ನುವುದು ತಿಳಿದಿದೆ. ವಿಸ್ತಾರ ಯಶಸ್ವಿಯಾಗಿ ನಡೆಯಲಿ. ಹೊಸ ಹೊಸ ಸುದ್ದಿಗಳನ್ನು ಬಿತ್ತರಿಸಲಿ. ಸಮಾಜವನ್ನ ತಿದ್ದುವ ವ್ಯವಸ್ಥೆಗೆ ನೂತನ ಚಾನೆಲ್ ಶಕ್ತಿ ತುಂಬಲಿ ಎಂದು ಶುಭ ಹಾರೈಸುತ್ತೇನೆ.
– ಸಿ.ಎನ್.‌ಬಾಲಕೃಷ್ಣ, ಶಾಸಕ, ಶ್ರವಣಬೆಳಗೊಳ

ಲೋಕಾರ್ಪಣೆಗೊಂಡಿರುವ ‘ವಿಸ್ತಾರ’ ಡಿಜಿಟಲ್‌ ಜನಪರವಾಗಿ ಕೆಲಸ ಮಾಡಲಿ. ಸಮಾಜದ ಮುಖ್ಯವಾಹಿನಿಯಲ್ಲಿ ಜನರಿಗೆ ಶಕ್ತಿ ತುಂಬುವ ಕೆಲಸ ಈ ವಾಹಿನಿಯಿಂದ ಆಗುತ್ತದೆ ಎಂಬ ವಿಶ್ವಾಸ ನಮಗಿದೆ. ಹೊಸದಾಗಿ ಮಾಧ್ಯಮ ಕ್ಷೇತ್ರಕ್ಕೆ ಕಾಲಿಟ್ಟ ‘ವಿಸ್ತಾರ’ ವಾಹಿನಿಗೆ ಶುಭ ಕೋರುತ್ತೇನೆ.
– ಇಮ್ಮಡಿ ಸಿದ್ಧರಾಮೇಶ್ವರ ಶ್ರೀ, ಭೋವಿಪೀಠ, ಚಿತ್ರದುರ್ಗ

ಕನ್ನಡ ಮಾಧ್ಯಮ ಕ್ಷೇತ್ರದಲ್ಲಿ ಮತ್ತೊಂದು ಹೊಸ ನ್ಯೂಸ್ ಚಾನೆಲ್ ಮತ್ತು ಡಿಜಿಟಲ್‌ ನೈಸ್‌ ವೆಬ್‌ಸೈಟ್‌ ಪದಾರ್ಪಣೆ ಮಾಡುತ್ತಿವೆ. ಹೆಸರಿಗೆ ತಕ್ಕಹಾಗೆ ವಿಸ್ತಾರ ನ್ಯೂಸ್ ವಿಸ್ತಾರವಾಗಿ ಬೆಳೆದು, ಬಡವ ದಿನ ದಲಿತರ ಮತ್ತು ಎಲ್ಲ ಕ್ಷೇತ್ರದ ಸುದ್ದಿಯನ್ನು ಮನಮುಟ್ಟುವಂತೆ ಎಲ್ಲರಿಗೂ ಮುಟ್ಟಿಸಲಿ. ಎಲ್ಲರ ವಿಶ್ವಾಸ ಗಳಿಸಿ ಜಗದಗಲ ವಿಸ್ತಾರವಾಗಿ ಬೆಳೆಯಲಿ ಎಂದು ಹಾರೈಸುತ್ತೇನೆ.
– ಶ್ರೀ ಷ.ಬ್ರ.ಅಮರೇಶ್ವರ ಗುರು ಅಭಿನವ ಗಜದಂಡ ಶಿವಾಚಾರ್ಯರು, ಬ್ರಹನ್ಮಠ ದೇವರಭೂಪರ

ಹರಿಪ್ರಕಾಶ ಕೋಣೆಮನೆ ಅವರ ನೇತೃತ್ವದಲ್ಲಿ ನೂತನವಾಗಿ ರಾಜ್ಯದ ಜನರ ಮುಂದೆ ನಿಖರ ಮತ್ತು ಜನಪರ ಧ್ಯೇಯ ವಾಕ್ಯದೊಂದಿಗೆ ವಿಸ್ತಾರ ನ್ಯೂಸ್ ಬಂದಿದೆ. ಈ ವೆಬ್‌ಸೈಟ್‌ ಮತ್ತು ಚಾನೆಲ್ ಒಳ್ಳೆಯ ಬೆಳವಣಿಗೆ ಕಾಣಲಿ. ಒಳ್ಳೆಯ ಸದುದ್ದೇಶದಿಂದ ಬರಲಿ, ಮುಂದೆ ವಿಸ್ತಾರ ನ್ಯೂಸ್ ತಂಡದಿಂದ ಒಳ್ಳೆಯ ಕೆಲಸ ಆಗಲಿ. ರಾಜ್ಯದ ಜನತೆಯ ಪರವಾದ ಕೆಲಸ ಆಗಲಿ ಎಂದು ಇಡೀ ವಿಸ್ತಾರ ತಂಡಕ್ಕೆ ಹಾರ್ದಿಕ ಅಭಿನಂದನೆಗಳನ್ನು ತಿಳಿಸುತ್ತೇನೆ.
ಎಚ್.ವೈ.ಮೇಟಿ, ಮಾಜಿ ಸಚಿವ, ಬಾಗಲಕೋಟೆ ಕಾಂಗ್ರೆಸ್ ಮಾಜಿ ಶಾಸಕ

ನ್ಯೂಸ್ ಚಾನೆಲ್‌ಗಳು, ಪತ್ರಿಕೆಗಳು ಜನರಿಗೆ ಬೆಂಬಲವಾಗಿ ನಿಲ್ಲುವ ಕೆಲಸವನ್ನು ರಾಜ್ಯ, ದೇಶದಲ್ಲಿ ಮಾಡುತ್ತಿರುವುದು ನಾವು ಕಂಡಿದ್ದೇವೆ. ಜನಪ್ರತಿನಿಧಿಗಳ ಗಮನ ಸೆಳೆದು, ಸಮಸ್ಯೆಯನ್ನು ನಿವಾರಣೆ ಮಾಡುವಂತಹ ಕೆಲಸವನ್ನು ವಿಸ್ತಾರ ನ್ಯೂಸ್ ಮಾಡಲಿ. ನೂತನವಾಗಿ ಆರಂಭವಾಗುವ ಚಾನೆಲ್‌ಗೆ ವೈಯಕ್ತಿಕ, ಕ್ಷೇತ್ರದ ಜನತೆಯ ಪರವಾಗಿ ಹೃದಯಪೂರ್ವಕ ಅಭಿನಂದನೆಗಳನ್ನು ಹೇಳಬಯಸುತ್ತೇನೆ.
-ಸಿದ್ದು ಸವದಿ, ತೇರದಾಳ ಬಿಜೆಪಿ ಶಾಸಕ

ಕನ್ನಡ ಸುದ್ದಿಮಾಧ್ಯಮ ಲೋಕಕ್ಕೆ ನೂತನ ಸುದ್ದಿವಾಹಿನಿ ವಿಸ್ತಾರ ಟಿವಿ ಪದಾರ್ಪಣೆ ಮಾಡುತ್ತಿರುವುದು ಸಂತಸದ ವಿಷಯ. ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎನಿಸಿರುವ ಮಾಧ್ಯಮ ಅತಿ ವೇಗ ಹಾಗೂ ಪರಿಣಾಮಕಾರಿಯಾಗಿ ಬೆಳೆದು ನಿಂತಿದ್ದು, ಅವುಗಳ ಸಾಲಿನ ವಿಸ್ತಾರ ವಾಹಿನಿಯೂ ದೊಡ್ಡ ಮಟ್ಟದಲ್ಲಿ ವಿಸ್ತರಿಸುವ ಮೂಲಕ ಅಪಾರ ಜನಮನ್ನಣೆ ಗಳಿಸಲಿ ಎಂದು ಆಶಿಸುತ್ತೇವೆ. ಹೊಸ ವಾಹಿನಿ ಎಲ್ಲಾ ರೀತಿಯಲ್ಲೂ ಸಮಾಜವನ್ನು ಉತ್ತಮ ರೀತಿಯಲ್ಲಿ ಕಟ್ಟುವ, ಒಳ್ಳೆಯದರ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಿ. ಸಮಸ್ತ ತಂಡಕ್ಕೆ ಭಗವಾನ್ ಬಾಹುಬಲಿ ಸ್ವಾಮೀಜಿ ಆಶೀರ್ವಾದ ಇರಲಿ.
ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಶ್ರೀ ಕ್ಷೇತ್ರ ಜೈನಮಠ, ಶ್ರವಣಬೆಳಗೊಳ

ಕನ್ನಡ ಮಾಧ್ಯಮ ಕ್ಷೇತ್ರ, ಅದರಲ್ಲೂ ವಿದ್ಯುನ್ಮಾನ ಮಾಧ್ಯಮ ಇಂದು ಬೃಹದಾಕಾರವಾಗಿ ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಂಡಿದೆ. ಅದರೊಳಗೆ ಇದೀಗ ವಿಸ್ತಾರ ಟೀವಿ ಸೇರ್ಪಡೆಯಾಗುವುದು ಖುಷಿಯ ವಿಷಯ. ಈ ವಾಹಿನಿ ಸಮಾಜದ ಅಂಕುಡೊಂಕುಗಳಿಗೆ ಮುಖವಾಣಿಯಾಗುವ ಮೂಲಕ ಜನರನ್ನು ಹೆಚ್ಚು ಹೆಚ್ಚು ಜಾಗೃತಗೊಳಿಸುವ ಕೆಲಸ ಮಾಡಲಿ. ಆ ಮೂಲಕ ಉತ್ತಮ ಸಮಾಜ ಕಟ್ಟುವ ಸದಾಶಯ ಈಡೇರಲಿ ಎಂದು ಶುಭ ಕೋರುತ್ತೇನೆ.
– ಎಚ್.ಬಿ.ಮದನಗೌಡ, ಹಿರಿಯ ಪತ್ರಕರ್ತ, ಸಂಚಾಲಕರು, ಏಷ್ಯಾ ಕಾರ್ಯನಿರತ ಪತ್ರಕರ್ತರ ಒಕ್ಕೂಟ, ನವ ದೆಹಲಿ

ಹೊಸದಾಗಿ ವಿಸ್ತಾರ ನ್ಯೂಸ್ ಚಾನೆಲ್ ಮತ್ತು ವೆಬ್‌ಸೈಟ್‌ ಆರಂಭವಾಗುತ್ತಿದೆ. ವಿಸ್ತಾರ ನ್ಯೂಸ್ ಚಾನೆಲ್ ಒಳ್ಳೆಯ ಕೆಲಸ ಮಾಡಲಿ, ಚಾನೆಲ್‌ಗೆ ಒಳ್ಳೆಯದಾಗಲಿ. ಸಮಾಜದಲ್ಲಿ ತುಳಿತಕ್ಕೊಳಗಾದವರ ಮತ್ತು ನ್ಯಾಯ ಸಿಗದವರಿಗೆ ನ್ಯಾಯ ಸಿಗುವಂತಹ ಕೆಲಸ ಮಾಡಲಿ. ರಾಜ್ಯಕ್ಕೆ ಒಂದು ಒಳ್ಳೆಯ ಸಂದೇಶ ನೀಡುವ ಚಾನೆಲ್ ಆಗಲಿ. ನೂತನ ಚಾನೆಲ್‌ ಮತ್ತು ವೆಬ್‌ಸೈಟ್‌ನ ಎಲ್ಲ ಸಿಬ್ಬಂದಿಗಳಿಗೂ ಒಳ್ಳೆಯದಾಗಲಿ.
– ಶಿವರಾಜ ತಂಗಡಗಿ, ಮಾಜಿ ಸಚಿವ ಹಾಗೂ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ

ಹಿರಿಯ ಪತ್ರಕರ್ತರಾದ ಹರಿಪ್ರಕಾಶ್ ಕೋಣೆಮನೆ ನೇತೃತ್ವದಲ್ಲಿ ವಿಸ್ತಾರ ನ್ಯೂಸ್ ಅನ್ನೋ ಹೊಸ ಚಾನೆಲ್ ಮತ್ತು ವೆಬ್‌ಸೈಟ್‌ ಲೋಕಾರ್ಪಣೆಯಾಗಿರುವುದು ಸಂತಸದ ವಿಷಯ. ಹರಿಪ್ರಕಾಶ್ ಕೋಣೆಮನೆಯವರು ನಮಗೆ ಮೊದಲಿನಿಂದಲೂ ಚಿರಪರಿಚಿತರು. ಒಬ್ಬ ಪತ್ರಕರ್ತರು ಆರಂಭಿಸುತ್ತಿರುವ ಸುದ್ದಿ ವಾಹಿನಿಗೆ ನಾವು ಸಂತಸದಿಂದ ಶುಭ ಹಾರೈಸುತ್ತೇವೆ.
– ಜ್ಯೋತಿ ಗಣೇಶ್, ತುಮಕೂರು ನಗರ ಶಾಸಕರು

ವಿಸ್ತಾರ ನ್ಯೂಸ್‌ನ ಲೋಗೋ ಮತ್ತು ವೆಬ್ ಸೈಟ್ ಲೋಕಾರ್ಪಣೆ ಆಗಿದೆ. ಈ ಸುದ್ದಿ ವಾಹಿನಿ ಬಹಳ ದೊಡ್ಡ ಮಟ್ಟದಲ್ಲಿ ಬೆಳೆಯಲಿ. ಈ ಚಾನೆಲ್ ಮುಖಾಂತರ ಜನ ಸಾಮಾನ್ಯರಿಗೆ ನ್ಯಾಯ ಕೊಡಿಸುವ ಕೆಲಸ ಆಗಲಿ. ಅವರ ಕುಂದು ಕೊರತೆಗಳನ್ನು ಆಲಿಸಿ ಅವರಿಗೆ ನ್ಯಾಯ ಒದಗಿಸುವಂತಾಗಲಿ, ಶುಭವಾಗಲಿ.
-ಗೋವಿಂದರಾಜು, ಜೆಡಿಎಸ್ ಮುಖಂಡರು, ತುಮಕೂರು

ಇತ್ತೀಚಿನ ದಿನಗಳಲ್ಲಿ ಪತ್ರಿಕೆಗಳಲ್ಲಿ ಅಂಕಣಗಳು, ಸಾಹಿತಿಗಳ ಬರಹಗಳು, ವಿಮರ್ಶೆಗಳು ತೀರಾ ಕಡಿಮೆಯಾಗಿವೆ. ತಂತ್ರಜ್ಞಾನ ಬೆಳೆದಂತೆ ಜನರ ಶೈಲಿಯೂ ಬದಲಾಗಿದೆ. ವಿಸ್ತಾರ ನ್ಯೂಸ್ ಎಲ್ಲ ರೀತಿಯ ಓದುಗ ಬಳಗಕ್ಕೆ ಬೇಕಾದ ಮಾಹಿತಿ ನೀಡಲಿ ಎಂದು ಹಾರೈಸುವೆ. ಸಾಹಿತಿಗಳು ಮತ್ತು ವಿಮರ್ಶಕರನ್ನು ಪರಿಗಣಿಸಿ ಅತ್ಯತ್ತಮ ಜನಪರವಾದ ಸುದ್ದಿ ನೀಡಲಿ ಎಂದು ಹಾರೈಸುವೆ.
ಸಿದ್ದಲಿಂಗ ಪಟ್ಟಣಶೆಟ್ಟಿ, ಹಿರಿಯ ಸಾಹಿತಿ

ಹರಿಪ್ರಕಾಶ್‌ ಕೋಣೆಮನೆ ನೇತೃತ್ವದ ವಿಸ್ತಾರ ವೆಬ್ ಸೈಟ್ ಉದ್ಘಾಟನೆಯಾಗಿದ್ದು, ಮುಂದಿನ ದಿನಗಳಲ್ಲಿ ಟಿವಿ ವಾಹಿನಿ ಬರಲಿದೆ. ವಿಸ್ತಾರ ನ್ಯೂಸ್ ಮಾಧ್ಯಮ ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಮಾಡಲಿ. ನೈಜವಾದ ವಿಷಯಗಳನ್ನು ಸಮಾಜಕ್ಕೆ ತಿಳಿಸುವ ಕೆಲಸ ಮಾಡುತ್ತದೆ ಎಂಬ ವಿಶ್ವಾಸ ನನಗಿದೆ. ಹಾಗೆಯೇ ಇದು ರಾಜ್ಯದ ಜನತೆಗೆ ಒಂದು ಉಪಯುಕ್ತವಾದ ಚಾನೆಲ್ ಆಗಿ ಹೊರಹೊಮ್ಮಲಿ ಎಂದು ಶುಭ ಹಾರೈಸುತ್ತೇನೆ.
– ದೊಡ್ಡನಗೌಡ ಪಾಟೀಲ್, ಹುನಗುಂದ ಬಿಜೆಪಿ ಶಾಸಕ

ದಶಕಗಳಿಂದ ಕನ್ನಡ ಪತ್ರಿಕೋದ್ಯಮದಲ್ಲಿ ತಮ್ಮದೇಯಾದ ಚಾಪು ಮೂಡಿಸಿರುವ ಹರಿಪ್ರಕಾಶ್‌ ಕೋಣೆಮನೆಯವರು ಪ್ರತಿಭಾನ್ವಿತ ತಂಡದೊಂದಿಗೆ ಆರಂಭಿಸುತ್ತಿರುವ ವಿಸ್ತಾರ ಮಿಡಿಯಾ ಯಶಸ್ಸಿನತ್ತ ಸಾಗಲಿ. ರಾಜ್ಯದ ಅಭಿವೃದ್ಧಿಯಲ್ಲಿ ಮಾಧ್ಯಮದ ಜವಾಬ್ದಾರಿ ಮಹತ್ವದ್ದು. ವಿಸ್ತಾರ ಮಾಧ್ಯಮ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ ಎಂಬ ವಿಶ್ವಾಸವಿದೆ.
– ಶ್ರೀ ಚೆನ್ನಬಸವ ಸ್ವಾಮೀಜಿ, ಸಿದ್ದಾಮಲ್ಲೇಶ್ವರ ವಿರಕ್ತ ಮಠ, ಚಾಮರಾಜನಗರ

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಳಕೆ ಹೆಚ್ಚಿದ್ದು ಜನರು ತಮ್ಮ ಅಂಗೈಯಲ್ಲೇ ಸುದ್ದಿ ನೋಡಲು ಇಚ್ಛೆ ಪಡುತ್ತಾರೆ. ಇದಕ್ಕೆ ಪೂರಕವಾಗಿ ವಿಶಿಷ್ಟ ಚಿಂತನೆಯೊಂದಿಗೆ ವಿಸ್ತಾರ ನ್ಯೂಸ್ ಸಮಾಜದಲ್ಲಿ ಕಾಲಿಡುತಿದ್ದು, ಸಮಾಜಕ್ಕೆ ಉತ್ತಮ ಮಾರ್ಗದರ್ಶನ ನೀಡಿ ರಾಜ್ಯದ ಅಭಿವೃದ್ಧಿಗೆ ಹೊಸ ದಿಕ್ಸೂಚಿಯಾಗಲಿ ಎಂದು ಆಶಿಸುತ್ತೇನೆ.
– ಮುಡ್ಲೂಪುರ ನಂದೀಶ್, ಅಖಿಲ ಭಾರತ ವೀರಶೈವ ಮಹಾಸಭೆ ಜಿಲ್ಲಾಧ್ಯಕ್ಷ, ಬಿಜೆಪಿ ಮುಖಂಡರು, ಚಾಮರಾಜನಗರ

ನೂತನ ಡಿಜಿಟಲ್ ಮಾಧ್ಯಮ ವಿಸ್ತಾರ ನ್ಯೂಸ್‌ಗೆ ಒಳ್ಳೆಯದಾಗಲಿ. ಹನ್ನೊಂದರಲ್ಲಿ ಇನ್ನೊಂದು ಆಗುವಂತಹ ಚಾನೆಲ್ ಆಗದೆ ಜನಪರವಾಗಿ ಸುದ್ದಿ ಬಿತ್ತರಿಸುವ ಜತೆಗೆ ಪ್ರತಿಯೊಬ್ಬರ ಜನರ ಮನದಲ್ಲಿ ವಿಸ್ತಾರವಾಗಿ ಬೆಳೆಯಲಿ ಎಂದು ಹಾರೈಸುತ್ತೇನೆ. ಜನರ ಪರ, ರೈತರ ಪರ, ಮಧ್ಯಮ ವರ್ಗದವರ ಪರವಾಗಿ ಈ ನೂತನ ಡಿಜಿಟಲ್ ಚಾನೆಲ್ ಹೆಸರು ಮಾಡಲಿ.
– ಎಚ್.ಸಿ ಬಾಲಕೃಷ್ಣ, ಮಾಜಿ ಶಾಸಕ, ಮಾಗಡಿ

ವಿಸ್ತಾರ ರಾಜ್ಯದ ನಂಬರ್ 1 ನ್ಯೂಸ್‌ ಚಾನೆಲ್ ಆಗಲಿ. ಉತ್ತರ ಕರ್ನಾಟಕದ ಭಾಗದ ಜನರಿಗೆ ಅನುಕೂಲವಾಗುವ ಸುದ್ದಿಗಳನ್ನು ಬಿತ್ತರಿಸಲಿ. ಪ್ರಾಮಾಣಿಕ, ನಿಖರ ಸುದ್ದಿಗಳನ್ನು ಬಿತ್ತರಿಸಿ ಜನರ ಮನಮುಟ್ಟಲಿ.
-ದೀಪಕ್ ಚಿಂಚೋರೆ, ಎಐಸಿಸಿ ಸದಸ್ಯ

ವಿಸ್ತಾರ ನ್ಯೂಸ್ ತಂಡದ ಎಲ್ಲರಿಗೂ ಒಳ್ಳೆಯದಾಗಲಿ. ಹತ್ತಾರು ಚಾನೆಲ್‌ಗಳ ನಡುವೆ ಈ ಚಾನೆಲ್‌ ಗುಣಮಟ್ಟ ಮತ್ತು ಸತ್ಯ ನಿಷ್ಠೆ ಮೂಲಕ ಜನಮನ ಗೆಲ್ಲಲಿ ಎಂದು ಹಾರೈಸುವೆ. ಸಮಾಜದಲ್ಲಿ ಕೆಲವರು ಸುಳ್ಳು ಸುದ್ದಿ ಪ್ರಸಾರ ಮಾಡಲು ಯತ್ನಿಸುತ್ತಿದ್ದಾರೆ. ಅದರ ಮಧ್ಯೆ ಜನರಿಗೆ ಸತ್ಯದ ಅರಿವು ಮೂಡಿಸುವ ಸುದ್ದಿ ವಾಹಿನಿ ಮತ್ತು ನ್ಯೂಸ್‌ ವೆಬ್‌ಸೈಟ್‌ ನಿಮ್ಮದಾಗಲಿ.
– ಸಂತೋಷ್ ಲಾಡ್, ಮಾಜಿ ಸಚಿವರು

ವಿಸ್ತಾರ ವಾಹಿನಿ ಆರಂಭ‌ ಮಾಡಿರುವುದಕ್ಕೆ ಶುಭ ಹಾರೈಸುತ್ತೇನೆ. ವಿಸ್ತಾರ ನ್ಯೂಸ್ ಸಮಾಜಕ್ಕೆ ಒಳ್ಳೆಯ ಸುದ್ದಿ ಕೊಡಬೇಕು. ಉಳಿದೆಲ್ಲ ಚಾನೆಲ್‌ಗಳಿಗಿಂತ ಹೆಚ್ಚಿನ ಮಟ್ಟದ ಸುದ್ದಿಗಳನ್ನು ವಿಸ್ತಾರ ನ್ಯೂಸ್ ಸಮಾಜಕ್ಕೆ ಕೊಡುಗೆಯಾಗಿ ಕೊಡಲಿ.
-ತುಕಾರಾಂ, ಕಾಂಗ್ರೆಸ್ ಶಾಸಕರು, ಸಂಡೂರು

ಕನ್ನಡದಲ್ಲಿ ಮತ್ತೊಂದು ಹೊಸ ಸುದ್ದಿ ವಾಹಿನಿ ವಿಸ್ತಾರ ನ್ಯೂಸ್ ಆರಂಭ ಆಗುತ್ತಿರುವುದು ಸಂತಸದ ವಿಷಯ. ಗ್ರಾಮೀಣ ಭಾಗದ ಜನರ ಆಶೋತ್ತರಗಳಿಗೆ ಇದು ಬೆನ್ನೆಲುಬಾಗಲಿ. ಮಹಾತ್ಮಾ ಗಾಂಧಿ ಕನಸು ಕಂಡ ಜಾತಿ ರಹಿತ, ವರ್ಗ ರಹಿತವಾದ ಕಾರ್ಯವನ್ನು ವಿಸ್ತಾರ ಮಾಡಲಿ. ಕನ್ನಡಿಗರ ಧ್ವನಿಯಾಗಿ ಕನ್ನಡದಲ್ಲಿ ಉತ್ತಮವಾದ ಚಾನೆಲ್ ಆಗಿ ವಿಸ್ತಾರ ಕೆಲಸ ಮಾಡಲಿ ಎಂದು ಶುಭ ಕೋರುತ್ತೇನೆ.
– ವಿ.ಎಸ್.ಉಗ್ರಪ್ಪ, ಮಾಜಿ ಸಂಸದರು

ದಶಕಗಳಿಂದ ಮಾಧ್ಯಮ ಲೋಕದಲ್ಲಿ ಬಹಳ ದೊಡ್ಡ ಹೆಸರು ಮಾಡಿರುವ ಹರಿಪ್ರಕಾಶ ಕೋಣೆಮನೆ ಅವರು ವಿಸ್ತಾರ ನ್ಯೂಸ್ ಚಾನೆಲ್ ಪ್ರಾರಂಭ ಮಾಡಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದರ ಲೋಗೊ ಲೋಕಾರ್ಪಣೆ ಮಾಡಿದ್ದಾರೆ. ಈ ತಂಡಕ್ಕೆ ಬಹಳ ದೊಡ್ಡ ಮಟ್ಟದ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ. ವಿಸ್ತಾರ ಎನ್ನುವ ಹೆಸರಿನ ಹಾಗೆಯೇ ರಾಜ್ಯದ ಹಳ್ಳಿ ಹಳ್ಳಿಗೂ ಈ ಮಾಧ್ಯಮ ಸಂಸ್ಥೆ ಸುದ್ದಿ ವಿಸ್ತರಿಸಲಿ. All the best Vistara.
– ಎನ್.ಮಹೇಶ್, ಶಾಸಕರು, ಕೊಳ್ಳೇಗಾಲ

ಗ್ರಾಮೀಣ ಭಾಗದಿಂದ ಹಿಡಿದು ರಾಜ್ಯ ಮತ್ತು ದೇಶದ ನಿತ್ಯದ ಸುದ್ದಿಗಳನ್ನು ಪ್ರತಿಯೊಬ್ಬ ಸಾರ್ವಜನಿಕರ ಬೆರಳ ತುದಿಗೆ ತರುವ ನಿಟ್ಟಿನಲ್ಲಿ ಡಿಜಿಟಲ್ ಮೀಡಿಯಾದ ಪಾತ್ರ ಹಿರಿದು. ಇದೀಗ ಹೊಸದಾಗಿ ಹೊರ ಹೊಮ್ಮುತ್ತಿರುವ ವಿಸ್ತಾರ ಡಿಜಿಟಲ್ ಮೀಡಿಯಾ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡಲಿ.
-ಎಂ.ಎಸ್. ಸೋಮಲಿಂಗಪ್ಪ. ಶಾಸಕ, ಸಿರುಗುಪ್ಪ

ಕರ್ನಾಟಕದಲ್ಲಿ ವಿಸ್ತಾರ ನ್ಯೂಸ್ ಹೆಸರಿನಲ್ಲಿ ಹೊಸ ಸುದ್ದಿವಾಹಿನಿ ಬರುತ್ತಿದೆ. ಇದು ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡಲಿ. ವಿಶೇಷವಾಗಿ ರೈತರು, ಮಹಿಳೆಯರು, ಶೋಷಿತ ವರ್ಗದವರ ಬಗ್ಗೆ ಹೆಚ್ಚಿನ ಪ್ರಚಾರ ಮಾಡಬೇಕಿದೆ‌. ಹಾಗೆಯೇ ಹೊಸ ಸುದ್ದಿವಾಹಿನಿ ವಿಸ್ತಾರ ನ್ಯೂಸ್ ಮತ್ತು ವೆಬ್‌ಸೈಟ್‌ಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸುತ್ತೇನೆ.
ಬ್ಯಾಲಹಳ್ಳಿ ಎಂ.ಗೋವಿಂದೇಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷರು

ಈಗಾಗಲೇ ಕರ್ನಾಟಕದಲ್ಲಿ ಹತ್ತಾರು ನ್ಯೂಸ್ ಚಾನೆಲ್‌ಗಳು ಇವೆ. ಇದೀಗ ಬಂದಿರುವ ವಿಸ್ತಾರ ನ್ಯೂಸ್‌ ಭಿನ್ನವಾಗಿರಲಿ. ಚಾನೆಲ್ ಜತೆ ಡಿಜಿಟಲ್‌ ವೆಬ್‌ಸೈಟ್‌ ಬರುತ್ತಿದೆ. ಈ ತಂಡಕ್ಕೆ ಶುಭವಾಗಲಿ. ದೇಶವ್ಯಾಪಿ ವೈವಿಧ್ಯಮಯ ಸುದ್ದಿಗಳನ್ನು ಬಿತ್ತರಿಸುವ ಮೂಲಕ ಸಮಾಜಮುಖಿ ಕೆಲಸಕ್ಕೆ ಇದು ಸಹಕಾರಿಯಾಗಲಿ
ಸಿ.ಎಂ.ಲಿಂಗಪ್ಪ, ಎಂಎಲ್‌ಸಿ, ರಾಮನಗರ

ನೂತನವಾಗಿ ಆರಂಭಗೊಂಡ ವಿಸ್ತಾರ ನ್ಯೂಸ್ ವಾಹಿನಿಯು ರಾಜ್ಯದೆಲ್ಲೆಡೆ ಹೊಸ ಸಂಚಲನ ಮೂಡಿಸಲಿ,
ಮಾಧ್ಯಮ ಲೋಕದಲ್ಲಿ ವಿಭಿನ್ನ ಹೆಜ್ಜೆಯಿಟ್ಟಿರುವ ಈ ವಾಹಿನಿಯು ನಿಖರ ಮತ್ತು ನಿಷ್ಪಕ್ಷಪಾತ ಸುದ್ದಿಗಳ ಮೂಲಕ ಜನರ ಮನೆ ಮನ ತಲುಪುವ ವಿಶ್ವಾಸವಿದೆ. ಹೊಸ ಮಾಧ್ಯಮ ತಂಡಕ್ಕೆ ಅಭಿನಂದನೆಗಳು.
-ಡಾ. ಪ್ರಭು ಸಾರಂಗ ದೇವ ಶಿವಾಚಾರ್ಯರು, ಸಾರಂಗ ಮಠ, ಸಿಂದಗಿ

ಹೊಸ ವಿಸ್ತಾರ ನ್ಯೂಸ್ ಡಿಜಿಟಲ್‌ ಜವಾಬ್ದಾರಿಯುತವಾಗಿ ಸುದ್ದಿಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಈಗಾಗಲೇ ಪ್ರಾರಂಭ ಮಾಡಿದೆ. ವಿಸ್ತಾರ ಮಾಧ್ಯಮದ ಸಂಪಾದಕರು ಹಾಗೂ ಸಿಬ್ಬಂದಿಗೆ ಶುಭ ಕೋರುತ್ತೇನೆ. ಅತೀ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ವೀಕ್ಷಕರನ್ನು ಪಡೆಯಲಿ ಎಂದು ಶುಭ ಹಾರೈಸುತ್ತೇನೆ.
-ಉಮೇಶ ಗೋವಿಂದ ಕಾರಜೋಳ, ಜಿಲ್ಲಾ ಉಪಾಧ್ಯಕ್ಷರು, ಬಿಜೆಪಿ, ವಿಜಯಪುರ

ನೂತನವಾಗಿ ಪ್ರಾರಂಭವಾಗಿರುವ ವಿಸ್ತಾರ ನ್ಯೂಸ್ ಭವಿಷ್ಯದ ದಿನಗಳಲ್ಲಿ ನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಬೇಕು. ಈ ಮೂಲಕ ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೆ ನೆರವಾಗಬೇಕು ಎಂದು ಶುಭಹಾರೈಸುತ್ತೇನೆ.
ಬಿ.ಡಿ.ಪಾಟೀಲ, ಜೆಡಿಎಸ್ ತಾಲೂಕು ಅಧ್ಯಕ್ಷ, ಇಂಡಿ, ವಿಜಯಪುರ ಜಿಲ್ಲೆ

ಹೊಸದಾಗಿ ಪ್ರಾರಂಭವಾಗಿರುವ ವಿಸ್ತಾರ ನ್ಯೂಸ್‌ಗೆ ಶುಭವಾಗಲಿ, ನಾಡಿನ ಜ್ವಲಂತ ಸಮಸ್ಯೆಗಳಿಗೆ ಸುದ್ದಿವಾಹಿನಿ ಒಂದು ದಾರಿದೀಪವಾಗಲಿ, ಭ್ರಷ್ಟಾಚಾರದ ವಿರುದ್ಧ ಸಿಂಹಸ್ವಪ್ನವಾಗಿ ನಿಂತು ಸಮಾಜವನ್ನು ಬದಲಾವಣೆ ದಿಕ್ಕಿನಲ್ಲಿ ಸಾಗುವಲ್ಲಿ ಸಹಕಾರವಾಗಲಿ. ನಾಡಿನ ನೆಲ, ಜಲ, ಭಾಷೆ ರಕ್ಷಣೆ ಮಾಡುವಲ್ಲಿ ದಿಟ್ಟ ಹೆಜ್ಜೆ ಹಾಕಲಿ, ಹೆಮ್ಮರವಾಗಿ ಬೆಳೆದು ನಾಡಿನ ಅಭಿವೃದ್ಧಿಗೆ ಕೈಜೋಡಿಸಲಿ.
-ಶ್ರೀಶೈಲ ಮುಳಜಿ, ನ್ಯಾಯವಾದಿ, ಅಧ್ಯಕ್ಷ ಬಸವಶ್ರೀ ಫೌಂಡೇಶನ್, ರಾಜ್ಯ ಸಂಚಾಲಕ, ಕರವೇ

ರಾಜ್ಯದಲ್ಲಿ ಮತ್ತೊಂದು ಹೊಸ ಸುದ್ದಿವಾಹಿನಿ, ವಿಸ್ತಾರ ನ್ಯೂಸ್ ಡಿಜಿಟಲ್ ಲೋಕಾರ್ಪಣೆಯಾಗಿರುವುದು ಸಂತಸದ ವಿಷಯ. ರಾಜ್ಯ ಸೇರಿದಂತೆ ರಾಷ್ಟ್ರಾದ್ಯಂತ ಒಳ್ಳೆ ಸುದ್ದಿ ನೀಡುತ್ತಾ ವಿಸ್ತಾರ ಹೆಸರಿಗೆ ತಕ್ಕಂತೆ ಮುಂಬರುವ ದಿನಗಳಲ್ಲಿ ವಿಸ್ತಾರವಾಗಲಿ ಎಂದು ಶುಭಹಾರೈಸುವೆ.
-ನಾನಾಗೌಡ ಬಿರಾದಾರ, ಜೆಡಿಎಸ್ ರಾಜ್ಯ ಉಪಾಧ್ಯಕ್ಷರು

ಹೊಸದಾಗಿ ಪ್ರಾರಂಭವಾಗಿರುವ ವಿಸ್ತಾರ ನ್ಯೂಸ್ ಸತ್ಯ, ನಿಖರವಾರದ ಸುದ್ದಿಗಳನ್ನು ನೀಡುವ ಮೂಲಕ ಬಡವರ ಸಮಸ್ಯೆಗಳಿಗೆ ಸ್ಪಂದಿಸಲಿ. ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತ ಉತ್ತಮ ಚಾನೆಲ್ ಆಗಿ ವಿಸ್ತಾರ ಹೊರಹೊಮ್ಮಲಿ ಎಂದು ಹಾರೈಸುತ್ತೇನೆ.
-ಶರಣಗೌಡ ಜ ಬಂಡಿ, ಬಿಜೆಪಿ ಮುಖಂಡರು, ರೋಡಗಿ. ಅಧ್ಯಕ್ಷರು ವೀರರಾಣಿ ಕಿತ್ತೂರ ಚೆನ್ನಮ್ಮ ಸಹಕಾರ ಬ್ಯಾಂಕ್, ಇಂಡಿ

ವಿಸ್ತಾರ ನ್ಯೂಸ್ ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ಒಂದು ದಾಖಲೆಯನ್ನು ಬರೆಯಲಿ, ನಾಡಿಗೆ ವಿಶೇಷ ಕೊಡುಗೆ ಕೊಡುವ ಮೂಲಕ ಹೆಮ್ಮರವಾಗಿ ಬೆಳೆಯಲೆಂದು ಶುಭ ಕೊರುತ್ತೆನೆ.
-ಪ್ರಶಾಂತಗೌಡ ಬಿರಾದಾರ, ಮಾಲಿಕರು, ಬಸವ ಬ್ಯಾನರ್, ಉಪಾಧ್ಯಕ್ಷ, ವೀರ ರಾಣಿ ಕಿತ್ತೂರ ಚೆನ್ನಮ್ಮ ಸಹಕಾರ ಸಂಘ, ಇಂಡಿ

ಹೊಸದಾಗಿ ಪ್ರಾರಂಭವಾಗಿರುವ ವಿಸ್ತಾರ ನ್ಯೂಸ್ ಮಾಧ್ಯಮಕ್ಕೆ ಶುಭವಾಗಲಿ. ನೇರ ನುಡಿ ಸಮಾಜದ ಏಳಿಗೆಗಾಗಿ ಬಡವರ ದೀನದಲಿತರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಭ್ರಷ್ಟಾಚಾರದ ವಿರುದ್ಧ ಹೋರಾಡಿ, ರಾಜ್ಯದಲ್ಲಿ ನಂಬರ್ ಒನ್ ಚಾನೆಲ್ ಆಗಿ ಹೊರಹೊಮ್ಮಲೆಂದು ಹಾರೈಸುತ್ತೇನೆ.
-ವಿನೋದ್ ಪಾಟೀಲ್ (ಬೋಳೇಗಾಂವ್), ಬಿಜೆಪಿ ರೈತ ಮೋರ್ಚಾ, ಇಂಡಿ

ಹೊಸದಾಗಿ ಪ್ರಾರಂಭವಾಗಿರುವ ಕನ್ನಡ ನಾಡಿನ ಹೊಸ ನ್ಯೂಸ್ ಚಾನೆಲ್ ವಿಸ್ತಾರ ನ್ಯೂಸ್ ಕನ್ನಡ ನಾಡಿನ ಜ್ವಲಂತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲಿ. ಮನೆ ಮನೆಯ ಮಾತಾಗಿ, ಜನತೆಗೆ ವಿವಿಧ ರೀತಿಯ ಸುದ್ದಿ ಒದಗಿಸಲೆಂದು ಶುಭ ಹಾರೈಸುತ್ತೇನೆ ಚಾನೆಲ್ ನ ಮುಖ್ಯಸ್ಥರಿಗೂ ಹಾಗೂ ಸಿಬ್ಬಂದಿ ವರ್ಗದವರಿಗೂ ಒಳ್ಳೆಯದಾಗಲಿ.
-ಕು.ಬಸವರಾಜ ಮಡಗೊಂಡ, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

ಇದನ್ನೂ ಓದಿ | ಸಮಸ್ಯೆ ಪರಿಹಾರದ ಭಾಗವಾಗಲಿ ವಿಸ್ತಾರ ನ್ಯೂಸ್‌: ಸಿಎಂ ಬಸವರಾಜ ಬೊಮ್ಮಾಯಿ ಆಶಯ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಶ್ರದ್ಧಾಂಜಲಿ

ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಕವಿ ಲಕ್ಕೂರು ಆನಂದ ನಿಧನ, ಅನುಮಾನಾಸ್ಪದ ಸಾವು ಕೇಸು

ಲಕ್ಕೂರು ಆನಂದ ಅವರ ಶವ ಆಳಂದ‌ ತಾಲೂಕಿನ‌ ಕಡಗಂಚಿ ಬಳಿ ಅನುಮಾನಾಸ್ಪದವಾಗಿ ಪತ್ತೆಯಾಗಿದೆ. ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಇವರು ಪಿಎಚ್‌ಡಿ ಮಾಡುತ್ತಿದ್ದರು. ಸ್ಥಳಕ್ಕೆ ನರೋಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

VISTARANEWS.COM


on

ಲಕ್ಕೂರು ಆನಂದ lakkuru Anand
Koo

ಕಲಬುರಗಿ: ಪ್ರತಿಭಾವಂತ ಕವಿ, ಕೇಂದ್ರ ಸಾಹಿತ್ಯ ಅಕಾಡೆಮಿ (Central Sahitya Akademy) ಯುವ ಪ್ರಶಸ್ತಿ ಪುರಸ್ಕೃತ ಸಾಹಿತಿ ಲಕ್ಕೂರು ಆನಂದ (Lakkuru Ananda) ಅವರು ಮೇ 20ರಂದು ನಿಧನ (Death news) ಹೊಂದಿದ್ದಾರೆ. ಪೊಲೀಸರು ಇದೊಂದು ಅನುಮಾನಾಸ್ಪದ ಸಾವು (UDR Case) ಎಂದು ‌ದೂರು ದಾಖಲಿಸಿಕೊಂಡಿದ್ದಾರೆ.

44 ವರ್ಷ ಪ್ರಾಯದ ಲಕ್ಕೂರು ಸಿ. ಆನಂದ ಮೂಲತಃ ಕೋಲಾರ ಜಿಲ್ಲೆಯ ಲಕ್ಕೂರಿನವರು. ದಲಿತ- ಬಂಡಾಯ ಕವಿ, ಸಂಶೋಧಕ, ವಿಮರ್ಶಕ, ಸಂಘಟನಾಕಾರ, ಅನುವಾದಕಾರ ಆಗಿದ್ದರು. ಕೆಂಗೇರಿ ಶೇಷಾದ್ರಿಪುರಂ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಆನಂದ ಅವರು ಇದುವರೆಗೆ ಐದು ಕವನ ಸಂಕಲನ, ಐದು ಅನುವಾದಿತ ಕೃತಿಗಳು ಹಾಗೂ ಒಂದು ಸಂಶೋಧನಾ ಗ್ರಂಥವನ್ನು ಹೊರತಂದಿದ್ದಾರೆ. ಮಾತಂಗ ಮಾದಿಗರ ಸಂಸ್ಕೃತಿಯ ಬಗ್ಗೆ ಅವರು ಆಳವಾದ ಅಧ್ಯಯನ ನಡೆಸಿದ್ದಾರೆ.

ಇತ್ತೀಚೆಗೆ ತೆಲುಗು ಭಾಷೆಯಿಂದ ರಾಣಿ ಶಿವ ಶಂಕರ ಶರ್ಮರ ‘ಕೊನೆಯ ಬ್ರಾಹ್ಮಣ’ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ, ಆಂಧ್ರದ ಶ್ರೀ ಶ್ರೀ ಕಾವ್ಯ, ದೆಹಲಿಯ ದಲಿತ ಸಾಹಿತ್ಯ ಪರಿಷತ್ತು ಪ್ರಶಸ್ತಿ, ದು ನಿಂ ಬೆಳಗಲಿ ಪ್ರಶಸ್ತಿ, ವಿಭಾ ಸಾಹಿತ್ಯ ಪ್ರಶಸ್ತಿ, ಕಡೆಂಗೋಡ್ಲು ಶಂಕರಭಟ್ಟ ಪ್ರಶಸ್ತಿ, ಡಾ ತಿಪ್ಪೇರುದ್ರ ಸ್ವಾಮಿ ಪ್ರಶಸ್ತಿ ಆನಂದರಿಗೆ ಸಂದಿದೆ.

ಊರಿಂದ ಊರಿಗೆ, ಇಪ್ಪತ್ತರ ಕಲ್ಲಿನ ಮೇಲೆ, ಬಟವಾಡೆಯಾಗದ ರಸೀತಿ, ಇತಿ ನಿನ್ನ ವಿಧೇಯನು, ಉರಿವ ಏಕಾಂತ ದೀಪ ಇವರ ಕವನ ಸಂಕಲನಗಳು. ಸ್ಮೃತಿ ಕಿಣಾನ್ತಂ, ಕೊನೆ ಬ್ರಾಹ್ಮಣ, ಆಕಾಶ ದೇವರ, ನಗ್ನ ಮುನಿಯ ಸಮಗ್ರ ಕಥೆಗಳು, ಅರುದ್ರ ಇವರ ಅನುವಾದಿತ ಕೃತಿಗಳು.

ಆನಂದ್ ಅವರ ಶವ ಆಳಂದ‌ ತಾಲೂಕಿನ‌ ಕಡಗಂಚಿ ಬಳಿ ಅನುಮಾನಾಸ್ಪದವಾಗಿ ಪತ್ತೆಯಾಗಿದೆ. ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಇವರು ಪಿಎಚ್‌ಡಿ ಮಾಡುತ್ತಿದ್ದರು. ಸ್ಥಳಕ್ಕೆ ನರೋಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: Raghunandan Kamath: ʼನ್ಯಾಚುರಲ್ಸ್‌ʼ ಖ್ಯಾತಿಯ ʼಐಸ್‌ಕ್ರೀಂ ಮ್ಯಾನ್‌ʼ ರಘುನಂದನ ಕಾಮತ್‌ ಇನ್ನಿಲ್ಲ

Continue Reading

ರಾಜಕೀಯ

Prajwal Revanna Case: ಶಿವರಾಮೇಗೌಡರ ದೇವೇಗೌಡ ಆತ್ಮಹತ್ಯೆ ಹೇಳಿಕೆ; ನಿಖಿಲ್‌ ಕುಮಾರಸ್ವಾಮಿ ಕೆಂಡ

Prajwal Revanna Case: ಇಡೀ ರಾಜ್ಯದ ಜನ ಶಿವರಾಮೇಗೌಡರ ಆಡಿಯೊವನ್ನು ಕೇಳಿದ್ದಾರೆ. ದೇಶದ ಮಾಜಿ ಪ್ರಧಾನಿಗಳು, ಕೆಂಪುಕೋಟೆ ಮೇಲೆ ಬಾವುಟ ಹಾರಿಸಿದ ಕನ್ನಡದ ಹೆಮ್ಮೆಯ ಮಾಜಿ ಪ್ರಧಾನಿಗಳ ವಿರುದ್ಧ ಇಂಥ ಹೇಳಿಕೆಯನ್ನು ಕೊಡಬಾರದಿತ್ತು. ಅವರ ಸಂಸ್ಕೃತಿ, ಮನಸ್ಥಿತಿ ಹೇಗಿದೆ ಅ‌ನ್ನೋದನ್ನು ಅರ್ಥ ಮಾಡಿಕೊಳ್ಳಬೇಕು. ರಾಜಕೀಯವನ್ನು ಮಾಡಿ ಯಾರು ಬೇಡ ಎಂದು ಹೇಳುತ್ತಾರೆ? ಆದರೆ, ಇನ್ನೊಬ್ಬರ ಸಾವಿನ ಹೆಸರಲ್ಲಿ ರಾಜಕೀಯ ಮಾಡೋದು ಸರಿಯಲ್ಲದ ಎಂದು ನಿಖಿಲ್‌ ಕುಮಾರಸ್ವಾಮಿ ಹೇಳಿದ್ದಾರೆ.

VISTARANEWS.COM


on

Prajwal Revanna Case Shivarame Gowdas Deve Gowda suicide statement says Nikhil Kumaraswamy
Koo

ಬೆಂಗಳೂರು: ಸಂಸದ ಪ್ರಜ್ವಲ್‌ ರೇವಣ್ಣ (Prajwal Revanna Case) ಎಸಗಿದ್ದಾರೆ ಎನ್ನಲಾದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ದೇವರಾಜೇಗೌಡ (Devaraje Gowda) ಹಾಗೂ ಮಾಜಿ ಸಂಸದ ಎಲ್‌.ಆರ್. ಶಿವರಾಮೇಗೌಡ (LR Shivarame Gowda) ಅವರ ಮಧ್ಯೆ ನಡೆದಿದೆ ಎನ್ನಲಾದ ದೂರವಾಣಿ ಸಂಭಾಷಣೆಯ ಆಡಿಯೊ ಈಗ ಎಲ್ಲಡೆ ವೈರಲ್‌ ಆಗಿದೆ. ಅಲ್ಲಿ ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡ (HD Dewegowda) ಅವರ ಬಗ್ಗೆ ಲಘುವಾಗಿ ಮಾತನಾಡಿದ್ದ ಹೇಳಿಕೆಗೆ ವ್ಯಾಪಕ ಟೀಕೆಗಳು ಕೇಳಿ ಬರುತ್ತಿವೆ. ಇದನ್ನು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ (Nikhil Kumaraswamu) ಖಂಡಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ನಿಖಿಲ್‌ ಕುಮಾರಸ್ವಾಮಿ, ನಿನ್ನೆ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಅವರ ಆಡಿಯೊವನ್ನು ನಾನು ಕೇಳಿದೆ. ದೇವೇಗೌಡರ ಬಗ್ಗೆ ಈ ರೀತಿ ಲಘುವಾಗಿ ಮಾತನಾಡಬಾರದು. ರಾಜಕಾರಣ ಬೇರೆಯೊಬ್ಬರ ಸಾವು ಬಯಸುವುದು ಅವರ ಸಂಸ್ಕೃತಿಯನ್ನು ತೋರುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಾವಿನ ಹೆಸರಲ್ಲಿ ರಾಜಕೀಯ ಮಾಡೋದು ಸರಿಯಲ್ಲ

ಇಡೀ ರಾಜ್ಯದ ಜನ ಶಿವರಾಮೇಗೌಡರ ಆಡಿಯೊವನ್ನು ಕೇಳಿದ್ದಾರೆ. ದೇಶದ ಮಾಜಿ ಪ್ರಧಾನಿಗಳು, ಕೆಂಪುಕೋಟೆ ಮೇಲೆ ಬಾವುಟ ಹಾರಿಸಿದ ಕನ್ನಡದ ಹೆಮ್ಮೆಯ ಮಾಜಿ ಪ್ರಧಾನಿಗಳ ವಿರುದ್ಧ ಇಂಥ ಹೇಳಿಕೆಯನ್ನು ಕೊಡಬಾರದಿತ್ತು. ಅವರ ಸಂಸ್ಕೃತಿ, ಮನಸ್ಥಿತಿ ಹೇಗಿದೆ ಅ‌ನ್ನೋದನ್ನು ಅರ್ಥ ಮಾಡಿಕೊಳ್ಳಬೇಕು. ರಾಜಕೀಯವನ್ನು ಮಾಡಿ ಯಾರು ಬೇಡ ಎಂದು ಹೇಳುತ್ತಾರೆ? ಆದರೆ, ಇನ್ನೊಬ್ಬರ ಸಾವಿನ ಹೆಸರಲ್ಲಿ ರಾಜಕೀಯ ಮಾಡೋದು ಸರಿಯಲ್ಲ ಎಂದು ನಿಖಿಲ್‌ ಕುಮಾರಸ್ವಾಮಿ ಹೇಳಿದರು.

ನಮ್ಮ ಬಳಿ ಅಡ್ಜೆಸ್ಟ್‌ಮೆಂಟ್‌ ಸಂಸ್ಕೃತಿ ಇಲ್ಲ

ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಮಗನ ಭವಿಷ್ಯದ ಬಗ್ಗೆ ಯೋಚನೆ ಮಾಡಿ ಹೀಗೆ ಮಾಡಿದ್ದಾರೆ ಎಂದು ಶಿವರಾಮೇಗೌಡ ಅವರು ಹೇಳಿರುವ ಮಾತುಗಳು ಆಡಿಯೊದಲ್ಲಿ ದಾಖಲಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ನಿಖಿಲ್‌ ಕುಮಾರಸ್ವಾಮಿ, ಚುನಾವಣೆಗಳಲ್ಲಿ ಅಡ್ಜಸ್ಟ್‌ಮೆಂಟ್‌ ಕೆಲವು ಸಲ ಆಗುತ್ತದೆ. ಅದು ಹೊರಗೂ ಬರುತ್ತದೆ. ಆದರೆ, ನನ್ನ ಬಗ್ಗೆ ನಮ್ಮ ತಂದೆ ಎಂದೂ ಹೀಗೆ ಯೋಚನೆ ಮಾಡಿಲ್ಲ. ನಮ್ಮ ತಂದೆ ರಾಜ್ಯದ, ಜನರ ಬಗ್ಗೆ ಯೋಚನೆ ಮಾಡ್ತಾರೆ. ಬಹಳ ಜನ ಅಡ್ಜೆಸ್ಟ್‌ಮೆಂಟ್‌ ಮಾಡಿಕೊಂಡು ಇವತ್ತು ಬಹಳ ಒಳ್ಳೇ ಸ್ಥಾನದಲ್ಲಿ ಇದ್ದಾರೆ. ಆದರೆ, ನಮ್ಮ ಬಳಿ ಆ ರೀತಿ ಯಾವ ಅಡ್ಜೆಸ್ಟ್‌ಮೆಂಟ್‌ ಸಂಸ್ಕೃತಿ ಇಲ್ಲ ಎಂದು ಹೇಳಿದರು.

ಶಿವರಾಮೇಗೌಡ ಮಾತನಾಡಿರುವ ಪ್ರತಿ ವಿಚಾರದಲ್ಲಿಯೂ ರಾಜ್ಯ ಸರ್ಕಾರದ ಕೈವಾಡ ಇದೆ ಎಂಬುದು ಗೊತ್ತಾಗುತ್ತದೆ. ಅವರೂ ಕೂಡಾ ಸರ್ಕಾರದ ಪ್ರಮುಖ ವ್ಯಕ್ತಿಯೊಬ್ಬರ ಹೆಸರು ಹೇಳಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ವಿರುದ್ಧ ಪರೋಕ್ಷವಾಗಿ ಆರೋಪ ಮಾಡಿದರು.

ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮಗನ ಭವಿಷ್ಯದ ಚಿಂತೆ ಅಂತಾರೆ. ಎರಡು ಚುನಾವಣೆಯನ್ನು ನಾನು ಎದುರಿಸಿದ್ದೇನೆ. ಕೆಲವೊಮ್ಮೆ ಕೆಲವು ಸಂದರ್ಭದಲ್ಲಿ ಅಡ್ಜೆಸ್ಟ್‌ಮೆಂಟ್‌ ಒಳಗೆ ಹೊರಗೆ ಆಗುತ್ತದೆ. ಆದರೆ, ನಮ್ಮ ವಿಚಾರದಲ್ಲಿ ಹೀಗೆ ಆಗಲಿಲ್ಲ. ನನ್ನ ವಿಷಯದಲ್ಲಿ ದೊಡ್ಡ ಮಟ್ಟದಲ್ಲಿ ಕೂರಿಸಬೇಕು ಅನ್ನೋ ಚಿಂತನೆ ಕುಮಾರಣ್ಣರಿಗೆ ಇಲ್ಲ. ಅವರಿಗೆ ರಾಜ್ಯದ ಜನತೆ ಬಗ್ಗೆ ಇದ್ದ ಕಮಿಟ್ಮೆಂಟ್, ಬದ್ಧತೆ ಹಿನ್ನೆಲೆಯಲ್ಲಿ ಅವರು ಯಾವುದೇ ರೀತಿಯ ಯೋಚನೆಯನ್ನು ಮಾಡಲಿಲ್ಲ. ನಾನು ಸೋತ ಬಳಿಕವೂ ರಾಮನಗರ, ಮಂಡ್ಯದಲ್ಲಿ ಓಡಾಡುತ್ತಿದ್ದೇನೆ. ಅನೇಕ ರಾಜಕಾರಣಿ ಮಕ್ಕಳು ಅಡ್ಜೆಸ್ಟ್‌ಮೆಂಟ್‌ ಮೂಲಕ ಉತ್ತಮ ಸ್ಥಾನಗಳಲ್ಲಿದ್ದಾರೆ. ನನಗೆ ಹಾಗೇ ಆಗಿಲ್ಲ. ನಾನು ಒಬ್ಬನೇ ಓಡಾಡುತ್ತಿದ್ದೇನೆ ಎಂದು ನಿಖಿಲ್‌ ಕುಮಾರಸ್ವಾಮಿ ಹೇಳಿದರು.

ಇದನ್ನೂ ಓದಿ: CM Siddaramaiah: ಸರ್ಕಾರಕ್ಕೆ ಒಂದು ವರ್ಷ; ಹಲವು ಕನಸು ಬಿಚ್ಚಿಟ್ಟ ಸಿಎಂ ಸಿದ್ದರಾಮಯ್ಯ! ಮಾಧ್ಯಮ ಸಂವಾದದ ಲೈವ್‌ ಇಲ್ಲಿದೆ

ನೂರು ಕೋಟಿ ರೂಪಾಯಿ ಆಫರ್ ವಿಚಾರವೂ ತನಿಖೆ ಆಗಬೇಕು

ಶಿವರಾಮೇಗೌಡ ಒಬ್ಬ ಸರ್ಕಾರದ ವ್ಯಕ್ತಿಯ ಹೆಸರನ್ನು ಉಲ್ಲೇಖಿಸುತ್ತಾರೆ. ಹಾಸನದ ಸಂಸದರ ವಿಡಿಯೊ ರಿಲೀಸ್ ಆದ ಬಳಿಕ ಸಂತ್ರಸ್ತೆ ಮುಖವನ್ನು ಬ್ಲರ್ ಮಾಡಲಿಲ್ಲ. ಸಂಸದರ ಮೇಲೆ ಆರೋಪ ಕೇಳಿಬಂದಿದೆ. ಆರೋಪಿ ಅದನ್ನು ಎದುರಿಸಲಿ. ಆದರೆ, ಸಂತ್ರಸ್ತೆಯರ ವಿಡಿಯೊ ಬಿಡುಗಡೆ ಮಾಡಿ ಮಾನ ಹರಾಜು ಮಾಡೋದು ಯಾಕೆ? ವಿಡಿಯೊ ರಿಲೀಸ್ ಮಾಡಿದವರ ಬಗ್ಗೆ ಕ್ರಮ ಯಾಕೆ ಆಗುತ್ತಿಲ್ಲ. ನೂರು ಕೋಟಿ ರೂಪಾಯಿ ಆಫರ್ ವಿಚಾರವೂ ತನಿಖೆ ಆಗಬೇಕು ಎಂದು ನಿಖಿಲ್‌ ಕುಮಾರಸ್ವಾಮಿ ಆಗ್ರಹಿಸಿದರು.

Continue Reading

ಬೆಳಗಾವಿ

Baby Death : ಮಲತಾಯಿಯ ಕ್ರೌರ್ಯಕ್ಕೆ ಬಲಿಯಾಯ್ತಾ 3 ವರ್ಷದ ಕಂದಮ್ಮ?

Baby Death : ಮೂರು ವರ್ಷದ ಮಗುವೊಂದು ಅನುಮಾನಾಸ್ಪದವಾಗಿ ಮೃತಪಟ್ಟಿದೆ. ಮಗುವು ಮಲತಾಯಿಯ ಕ್ರೌರ್ಯಕ್ಕೆ ಬಲಿಯಾಗಿದೆ ಎಂದು ಆರೋಪ ಕೇಳಿ ಬಂದಿದೆ. ಸದ್ಯ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ನಡೆಸುತ್ತಿದ್ದಾರೆ.

VISTARANEWS.COM


on

By

murder case in Belgavi
ರಾಯಣ್ಣ ಮತ್ತು ಆತನ ಎರಡನೇ ಪತ್ನಿ ಸಪ್ನಾ. ಮೊದಲ ಪತ್ನಿ ಮಗು ಸಮೃದ್ದಿ ಮೃತ ದುರ್ದೈವಿ
Koo

ಬೆಳಗಾವಿ: ಮಲತಾಯಿಯ ಕ್ರೌರ್ಯಕ್ಕೆ ಮೂರು ವರ್ಷದ ಕಂದಮ್ಮ (Baby Death) ಬಲಿಯಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಮಲತಾಯಿಯೇ 3 ವರ್ಷದ ಮಗುವನ್ನು ಕೊಂದಿದ್ದಾಳೆ (Murder case) ಎನ್ನಲಾಗಿದೆ. ಸಮೃದ್ಧಿ(3) ಮೃತ ದುರ್ದೈವಿ. ಮಲತಾಯಿ ಸಪ್ನಾ ರಾಯಣ್ಣ ನಾವಿ ಎಂಬಾಕೆ ಕೊಲೆ ಆರೋಪ ಎದುರಿಸುತ್ತಿರುವ ಮಲತಾಯಿ ಆಗಿದ್ದಾಳೆ. ಬೆಳಗಾವಿಯ ಕಂಗ್ರಾಳಿ ಕೆ ಹೆಚ್ ಗ್ರಾಮದಲ್ಲಿ ಘಟನೆ ನಡೆದಿದೆ.

ಮಗುವಿನ ಮೇಲೆ ಕ್ರೌರ್ಯ ಮೆರೆದು ಕೊಲೆ ಮಾಡಿದ್ದಾಗಿ ಸಮೃದ್ಧಿಯ ಅಜ್ಜಿ ಹಾಗೂ ಚಿಕ್ಕಪ್ಪ ಆರೋಪಿಸಿದ್ದಾರೆ. ಸಮೃದ್ಧಿ ತಂದೆ ರಾಯಣ್ಣ ಸಿಆರ್‌ಪಿಎಫ್ ಯೋಧನಾಗಿ ಕಾರ್ಯ ನಿರ್ವಹಿಸುತ್ತಿದ್ದು, ಮೊದಲ ಪತ್ನಿ ನಿಧನದ ನಂತರ ಎರಡನೇ ಮದುವೆಯಾಗಿದ್ದರು. ಇದೀಗ ರಾಯಣ್ಣನ 2ನೇ ಪತ್ನಿ ಸಪ್ನಾ ಎಂಬಾಕೆ ಸಮೃದ್ದಿಯನ್ನು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

Murder case in Belgavi
ರಾಯಣ್ಣ ಹಾಗೂ ಮೊದಲ ಪತ್ನಿ ಭಾರತಿ ನಾವಿ, ಆಕೆಯ ಮಗಳು ಸಮೃದ್ದಿ

ಮೊದಲ ಪತ್ನಿ ಕೊಲೆ ಆರೋಪ ಎದುರಿಸುತ್ತಿರುವ ಕುಟುಂಬ

ಈಗಾಗಲೇ ಮೊದಲ ಪತ್ನಿ ಭಾರತಿ ನಾವಿ ಕೊಲೆ ಆರೋಪವನ್ನು ರಾಯಣ್ಣ ಹಾಗೂ ಆತನ ಕುಟುಂಬಸ್ಥರು ಎದುರಿಸುತ್ತಿದ್ದಾರೆ. ಪತಿ ರಾಯಣ್ಣ ಹಾಗೂ ತಾಯಿ ಶೋಭಾ ಹಾಗೂ ತಂಗಿ ರೂಪಾ ವಿರುದ್ಧ 2021ರಲ್ಲಿ ಮೃತ ಭಾರತಿ ನಾವಿ ಕುಟುಂಬಸ್ಥರು ನಾಗಪುರದ ಕಾರದಾ ಠಾಣೆಯಲ್ಲಿ ದಾಖಲಿಸಿದ್ದಾರೆ. ಆ ಪ್ರಕರಣದಲ್ಲೂ ರಾಯಣ್ಣ ನಾವಿ ಕುಟುಂಬ ಆರೋಪಿಯಾಗಿದ್ದರು. ಅಂದು ತಾಯಿ ಕೊಂದರು, ಇಂದು ಆಕೆಯ ಮಗಳು ಸಮೃದ್ಧಿಯನ್ನೂ ಕೊಂದಿದ್ದಾರೆ ಎಂದು ಮೊದಲ ಪತ್ನಿ ಕುಟುಂಬಸ್ಥರು ಎಪಿಎಂಸಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: Drowned In water : ಕೆರೆಯಲ್ಲಿ ಈಜಲು ಹೋದ ಬಾಲಕರು ನೀರುಪಾಲು

ಮೇಲಿಂದ ಬಿದ್ದು ಬದುಕುಳಿದಿದ್ದ ಮಗುವಿನ ತಾಯಿ ಸೂಸೈಡ್‌; ಸೋಶಿಯಲ್‌ ಮೀಡಿಯಾ ಕಮೆಂಟ್‌ನಿಂದಲೇ ಖಿನ್ನತೆಗೊಳಗಾಗಿದ್ಳಾ?

ಕೊಯಂಬತ್ತೂರ್‌: ಕಳೆದ ತಿಂಗಳು ಅಪಾರ್ಟ್‌ಮೆಂಟ್‌(Apartment)ನ ಕಿಟಕಿಯಿಂದ ವಿಂಡೋ ಪೋರ್ಚ್‌(Window Porch) ಮೇಲೆ ಬಿದ್ದು, ಪವಾಡ ಸದೃಶ್ಯವಾಗಿ ಬದುಕಿ ಬಂದ ಏಳು ತಿಂಗಳ ಮಗುವಿನ(Toddler) ತಾಯಿ ಇದೀಗ ಆತಹತ್ಯೆಗೆ ಶರಣಾಗಿದ್ದಾಳೆ(Viral News). ಅವಡಿಯ ತಿರುಮಲ್ಲೈವೋವಲ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ತಾಯಿಯ ಮಡಿಲಿನಲ್ಲಿ ಆಟವಾಡುತ್ತಿದ್ದ ಮಗು ಇದ್ದಕ್ಕಿದ್ದಂತೆ ಕಿಟಕಿಯಿಂದ ಪ್ಲಾಸ್ಟಿಕ್‌ ಶೀಟ್‌ ಕವರ್‌ ಮಾಡಲಾಗಿದ್ದ ವಿಂಡೋ ಪೋರ್ಚ್‌ ಮೇಲೆ ಬಿದ್ದಿತ್ತು. ಮಗು ಅದೃಷ್ಟವಶಾತ್‌ ಅಲ್ಲೇ ನೇತಾಡಿಕೊಂಡು ಸ್ಥಳೀಯರ ಸಹಾಯದಿಂದ ಬದುಕುಳಿದಿತ್ತು.

ಈ ಘಟನೆ ಬಳಿಕ ಮಗುವಿನ ತಾಯಿ ರಮ್ಯಾ ತೀರ ಖಿನ್ನತೆಗೊಳಗಾಗಿದ್ದರು. ತನ್ನ ಅಜಾಗುರೂಕತೆಯಿಂದ ದುರಂತ ಸಂಭವಿಸಿದೆ ಎಂಬುದನ್ನು ಪದೇ ಪದೇ ಹೇಳುತ್ತಲೇ ಇದ್ದರು. ಇನ್ನು ನೆರೆಹೊರೆಯವರು, ನೆಟ್ಟಿಗರು ಈ ಘಟನೆ ಬಗ್ಗೆ ತಿಳಿದವರು ಎಲ್ಲರೂ ರಮ್ಯಾಳ ಅಜಾಗುರೂಕತೆಯಿಂದಲೇ ಈ ಘಟನೆ ನಡೆದಿದೆ ಎಂದು ದೂರುತ್ತಿದ್ದರು. ಇದರಿಂದ ಬೇಸರಗೊಂಡಿದ್ದ ರಮ್ಯಾ ಖಿನ್ನತೆಗೊಳಗಾಗಿದ್ದರು. ಇದನ್ನು ಗಮನಿಸಿದ ಆಕೆಯ ಪತಿ ವೆಂಕಟೇಶ್‌ ಕೊಯಂಬತ್ತೂರ್‌ನಲ್ಲಿರುವ ಆಕೆಯ ತವರು ಮನೆಗೆ ಕರೆದುಕೊಂಡು ಬಂದಿದ್ದರು.

ಭಾನುವಾರ ರಮ್ಯಾಳನ್ನು ಒಬ್ಬಳೇ ಮನೆಯಲ್ಲಿ ಬಿಟ್ಟು ಎಲ್ಲರೂ ಕಾರ್ಯಕ್ರಮವೊಂದಕ್ಕೆ ತೆರಳಿದ್ದರು. ವಾಪಸ್‌ ಮನೆಗೆ ಬಂದಾಗ ರಮ್ಯಾ ಪ್ರಜ್ಞೆ ತಪ್ಪಿ ಬಿದ್ದಿದ್ದನ್ನು ಕಂಡು ಮನೆಯವರು ಗಾಬರಿಗೊಂಡಿದ್ದಾರೆ. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅಲ್ಲಿ ಆಕೆ ಕೊನೆಯುಸಿರೆಳೆದಿದ್ದಾಳೆ. ಇನ್ನು ಆಕೆಯ ಸಾವಿಗೆ ಕಾರಣ ಏನೆಂಬುದು ಸರಿಯಾಗಿ ತಿಳಿದುಬಂದಿಲ್ಲ. ಆಕೆ ಏನಾದರೂ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಅವಡಿಯ ತಿರುಮಲ್ಲೈವೋವಲ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಏ.28ರಂದು ತಾಯಿಯ ಮಡಿಲಿನಲ್ಲಿ ಆಟವಾಡುತ್ತಿದ್ದ ಮಗು ಇದ್ದಕ್ಕಿದ್ದಂತೆ ಕಿಟಕಿಯಿಂದ ಪ್ಲಾಸ್ಟಿಕ್‌ ಶೀಟ್‌ ಕವರ್‌ ಮಾಡಲಾಗಿದ್ದ ವಿಂಡೋ ಪೋರ್ಚ್‌ ಮೇಲೆ ಬಿದ್ದಿತ್ತು. ವಿಚಾರ ತಿಳಿಯುತ್ತಿದ್ದಂತೆ ಸ್ಥಳೀಯರು ತಕ್ಷಣ ಮಗುವಿನ ರಕ್ಷಣೆಗೆ ಧಾವಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ವಿಂಡೋ ಪೋರ್ಚ್‌ ಮೇಲೆ ಬಿದ್ದಿ ಮಗುವಿನ ರಕ್ಷಣೆಗೆ ದೌಡಾಯಿಸಿದ್ದ ಅಪಾರ್ಟ್‌ಮೆಂಟ್‌ ನಿವಾಸಿಗಳು ಮತ್ತೊಂದು ಕಿಟಕಿಯಿಂದ ಹೊರಬಂದು ಮಗುವನ್ನು ರಕ್ಷಿಸಿಲು ಹರಸಾಹನ ಪಟ್ಟರು. ನಾಲ್ಕೈದು ಜನ ಕಿಟಕಿಯ ಹೊರ ಭಾಗದಲ್ಲಿರುವ ಸಣ್ಣ ಜಾಗದಲ್ಲಿ ನಿಂತು ಮಗುವಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ರಕ್ಷಿಸಿದ್ದಾರೆ. ಇನ್ನು ಕೆಳಗೆ ಅನೇಕ ಜನ ದೊಡ್ಡ ಬಟ್ಟೆಯೊಂದು ಹಿಡಿದು ಮಗುವಿನ ರಕ್ಷಣೆಗೆ ಸಹಾಯ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಪ್ರಶಂಸೆ ವ್ಯಕ್ತಪಡಿಸಿರುವ ನೆಟ್ಟಿಗರು, ಅಚಾನಕ್ಕಾಗಿ ನಾಲ್ಕನೇ ಮಹಡಿಯಿಂದ ವಿಂಡೋ ಪೋರ್ಚ್‌ ಮೇಲೆ ಬಿದ್ದಿದ್ದ 7 ತಿಂಗಳಿನ ಮಗುವನ್ನು ಬಹಳ ಜಾಣ್ಮೆಯಿಂದ ರಕ್ಷಿಸಿದ್ದಾರೆ. ಅವರ ಕಾರ್ಯಕ್ಕೆ ಸಲಾಂ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕ್ರೈಂ

‌Rave Party: ʼರೇವ್‌ ಪಾರ್ಟಿಯಲ್ಲಿ ನಾನಿಲ್ಲʼ ಎಂದು ವಿಡಿಯೋ ಮಾಡಿದ ತೆಲುಗು ನಟಿ; ಐವರ ಬಂಧನ

‌Rave Party: ಸಿಸಿಬಿ ಪೊಲೀಸರು ದಾಳಿ ಮಾಡಿದ ಸಂದರ್ಭದಲ್ಲಿ ಪಾರ್ಟಿ ಆಯೋಜಕರು ಸ್ಥಳದ ಡೋರ್‌ಲಾಕ್ ಮಾಡಿಕೊಂಡಿದ್ದಲ್ಲದೆ, ಎಂಡಿಎಂಎ ಮತ್ತು ಇನ್ನಿತರೆ ಮಾದಕ ವಸ್ತುಗಳನ್ನು ಸಿಕ್ಕಸಿಕ್ಕಲ್ಲಿ ಎಸೆದಿದ್ದರು. ಪೊಲೀಸರು ಎಂದು ಗೊತ್ತಾಗುತ್ತಿದ್ದಂತೆ ಓಡಿಹೋಗಲು ಯತ್ನಿಸಿದ್ದಾರೆ. ಡ್ರಗ್ಸ್‌ ಅನ್ನು ಬಾತ್ ರೂಂನ ಕಮೋಡ್‌ನಲ್ಲಿ ಹಾಕಿ ಫ್ಲಶ್ ಮಾಡಿದ್ದಾರೆ. ಪೊಲೀಸರು ಬಲವಂತವಾಗಿ ಡೋರ್ ತೆಗಿಸಿ ಒಳಹೋಗಿದ್ದು, ಸದ್ಯ ಫಾರ್ಮ್ ಹೌಸಿನ ಇಂಚಿಂಚನ್ನೂ ಬಿಡದೆ ಜಾಲಾಡುತ್ತಿದ್ದಾರೆ.

VISTARANEWS.COM


on

rave party telugu actress hema
Koo

ಬೆಂಗಳೂರು: ನಿನ್ನೆ ತಡರಾತ್ರಿ ಎಲೆಕ್ಟ್ರಾನಿಕ್‌ ಸಿಟಿಯ (electronic city) ಫಾರಂ ಹೌಸ್‌ನಲ್ಲಿ (Farm house) ನಡೆದ ರೇವ್‌ ಪಾರ್ಟಿಯಲ್ಲಿ (Rave party) ತೆಲುಗು ನಟಿ ಹೇಮಾ (telugu actress Hema) ಭಾಗಿಯಾಗಿದ್ದು, ಪೊಲೀಸ್‌ ವಶದಲ್ಲಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಅಲ್ಲಿ ತಾನಿರಲಿಲ್ಲ ಎಂದು ಹೇಮಾ ವಿಡಿಯೋ ಸಂದೇಶ ಹರಿಬಿಟ್ಟಿದ್ದಾರೆ. ಪಾರ್ಟಿ ಮಾಡಿದ ಐವರನ್ನು ಬಂಧಿಸಲಾಗಿದೆ.

ಮೂಲಗಳ ಪ್ರಕಾರ, ಮುಜುಗರ ತಪ್ಪಿಸಲು ಅದೇ ಫಾರಂ ಹೌಸ್‌ನಲ್ಲೇ ವಿಡಿಯೋ ಚಿತ್ರೀಕರಿಸಿ ಅವರು ಹರಿಬಿಟ್ಟಿದ್ದಾರೆ ಎನ್ನಲಾಗಿದೆ. ಹೆಬ್ಬಗೋಡಿ ಫಾರ್ಮ್ ಹೌಸ್ ಒಳಗಡೆಯೇ ವಿಡಿಯೋ ಮಾಡಿ, ತಾನು ಹೈದರಾಬಾದ್‌ ಫಾರ್ಮ್ ಹೌಸ್‌ನಲ್ಲಿದ್ದೀನಿ ಎಂದು ಹೇಳುತ್ತಿದ್ದಾರೆ ಎನ್ನಲಾಗಿದೆ. ಸದ್ಯ ನಟಿಯ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

ಕಮೋಡ್‌ನಲ್ಲಿ ಫ್ಲಶ್‌ ಮಾಡಿದರು!

ಸಿಸಿಬಿ ಪೊಲೀಸರು ದಾಳಿ ಮಾಡಿದ ಸಂದರ್ಭದಲ್ಲಿ ಪಾರ್ಟಿ ಆಯೋಜಕರು ಸ್ಥಳದ ಡೋರ್‌ಲಾಕ್ ಮಾಡಿಕೊಂಡಿದ್ದಲ್ಲದೆ, ಎಂಡಿಎಂಎ ಮತ್ತು ಇನ್ನಿತರೆ ಮಾದಕ ವಸ್ತುಗಳನ್ನು ಸಿಕ್ಕಸಿಕ್ಕಲ್ಲಿ ಎಸೆದಿದ್ದರು. ಪೊಲೀಸರು ಎಂದು ಗೊತ್ತಾಗುತ್ತಿದ್ದಂತೆ ಓಡಿಹೋಗಲು ಯತ್ನಿಸಿದ್ದಾರೆ. ಡ್ರಗ್ಸ್‌ ಅನ್ನು ಬಾತ್ ರೂಂನ ಕಮೋಡ್‌ನಲ್ಲಿ ಹಾಕಿ ಫ್ಲಶ್ ಮಾಡಿದ್ದಾರೆ. ಪೊಲೀಸರು ಬಲವಂತವಾಗಿ ಡೋರ್ ತೆಗಿಸಿ ಒಳಹೋಗಿದ್ದು, ಸದ್ಯ ಫಾರ್ಮ್ ಹೌಸಿನ ಇಂಚಿಂಚನ್ನೂ ಬಿಡದೆ ಜಾಲಾಡುತ್ತಿದ್ದಾರೆ.

3 ಜನ ಡ್ರಗ್ ಪೆಡ್ಲರ್‌ಗಳು, ಆಯೋಜಕ ವಾಸು ಸೇರಿ ಐದು ಜನರನ್ನು ಬಂಧಿಸಲಾಗಿದೆ. ಪಾರ್ಟಿಯಲ್ಲಿ ಡ್ರಗ್ ಪೆಡ್ಲರ್‌ಗಳೂ ಭಾಗಿಗಳಾಗಿದ್ದರು. ಇವರು ಯಥೇಚ್ಛವಾಗಿ ಮಾದಕ ವಸ್ತುಗಳನ್ನು ಪೂರೈಸುತ್ತಿದ್ದರು. ವಾಸು ಹುಟ್ಟಿದ ಹಬ್ಬಕ್ಕೆ ಪಾರ್ಟಿ ಆಯೋಜಿಸಿದ ಆರ್ಗನೈಸರ್ ಅರುಣ್, ಸಿದ್ಧಿಕಿ, ರಣಬೀರ್, ನಾಗಬಾಬುರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಮಾದಕ ವಸ್ತು ಸಿಕ್ಕಿದಂತಹ ಐಷಾರಾಮಿ ಮರ್ಸಿಡಿಸ್‌ ಬೆಂಜ್‌, ರೇಂಜ್ ರೋವರ್, ಆಡಿ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.

ಸದ್ಯ ಪೊಲೀಸರು ರೇವ್‌ ಪಾರ್ಟಿಯಲ್ಲಿದ್ದ 101 ಮಂದಿಯನ್ನೂ ಕೂರಿಸಿಕೊಂಡು, ಯಾರ್ಯಾರು ಡ್ರಗ್ಸ್‌ ತೆಗೆದುಕೊಂಡಿದ್ದಾರೆ ಎಂಬುದಕ್ಕೆ ವೈದ್ಯಕೀಯ ಪರೀಕ್ಷೆ ಮಾಡಿಸುತ್ತಿದ್ದಾರೆ. ಮೆಡಿಕಲ್‌ ಟೀಮನ್ನು ಫಾರಂ ಹೌಸ್‌ಗೆ ಕರೆಸಲಾಗಿದ್ದು, ಮೆಡಿಕಲ್‌ ಮುಗಿಯುವವರೆಗೆ ಎಲ್ಲ ಅತಿಥಿಗಳನ್ನೂ ಫಾರಂ ಹೌಸ್‌ ತೊರೆಯದಂತೆ ನಿರ್ಬಂಧಿಸಲಾಗಿದೆ. ಸದ್ಯ 30 ಜನ ಹುಡುಗಿಯರು, 71 ಜನ ಪುರುಷರು ಹೀಗೆ ಒಟ್ಟು 101 ಜನರ ವಿಚಾರಣೆ ನಡೆಯುತ್ತಿದೆ.

ಪಾರ್ಟಿ ಆಯೋಜಕ, ಆರೋಪಿ ವಾಸು ಇದೀಗ ಪೊಲೀಸರಿಂದ ಬಚಾವಾಗಲು ʼನಾನು ಪಾರ್ಟಿಗೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಅನುಮತಿ ಪಡೆದಿದ್ದೇನೆಂದುʼ ಸುಳ್ಳು ಹೇಳಿಕೆ ನೀಡಿದ್ದಾನೆ. ಆದರೆ ಫಾರ್ಮ್ ಹೌಸ್ ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿದೆ. ಪಾರ್ಟಿಗೆ ಬಂದವರು ಫಾರ್ಮ್ ಹೌಸ್ ಒಳಗೆ ಹೋಗಬೇಕಾದರೆ ಸೆಕ್ಯೂರಿಟಿಗೆ ಪಾಸ್ ವರ್ಡ್ ಹೇಳಬೇಕಿತ್ತು. ವಾಸು ನೀಡಿದ ಪಾಸ್‌ವರ್ಡ್ ಹೇಳಿದರೆ ಮಾತ್ರ ಒಳಗೆ ಎಂಟ್ರಿಯಾಗಬಹುದಿತ್ತು. ಡ್ರಗ್ ಪಾರ್ಟಿ ಹಿನ್ನೆಲೆಯಲ್ಲಿ ಬೇರೆ ಯಾರಾದರು ಬರದಿರಲಿ ಎಂಬ ಕಾರಣಕ್ಕೆ ವಾಸು ಪಾಸ್‌ವರ್ಡ್ ನೀಡಿದ್ದ.

ಫಾರಂ ಹೌಸ್‌ನಲ್ಲಿ ಸದ್ಯ ಭಾರಿ ಪ್ರಮಾಣದಲ್ಲಿ ಎಂಡಿಎಂಎ, ಕ್ಯಾಪ್ಸೂಲ್, ಕೊಕೇನ್ ಇತ್ಯಾದಿ ಮಾದಕ ವಸ್ತುಗಳು ದೊರೆತಿವೆ. 45 ಗ್ರಾಂನಷ್ಟು ಡ್ರಗ್ ವಶಕ್ಕೆ ಪಡೆಯಲಾಗಿದೆ. 1 ಗ್ರಾಂ ಕೊಕೇನ್‌ಗೆ 8ರಿಂದ 9 ಸಾವಿರ ರೂ. ದರವಿದೆ. ಇಂತಹ ಕೊಕೇನ್ ಭಾರಿ ಪ್ರಮಾಣದಲ್ಲಿ ಪಾರ್ಟಿಯಲ್ಲಿ ಪತ್ತೆಯಾಗಿದೆ. ಸದ್ಯ ಸಿಕ್ಕಿರುವ ಡ್ರಗ್ಸ್‌ನ ಮೌಲ್ಯ ಪರಿಶೀಲನೆಯನ್ನು ಸಿಸಿಬಿ ನಡೆಸುತ್ತಿದೆ.

ಸ್ಥಳಕ್ಕೆ ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಳೆದಂಡಿ ಆಗಮಿಸಿ ತನಿಖೆಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ನಡೆಸುತ್ತಿದ್ದ ವಾಸು ಈ ಹಿಂದೆ ಕೂಡ ಇದೇ ರೀತಿಯ ರೇವ್ ಪಾರ್ಟಿ ಮಾಡಿರುವ ಶಂಕೆ ಇದೆ. ಇನ್ನಷ್ಟು ಡ್ರಗ್ ಪೆಡ್ಲರ್‌ಗಳ ಪತ್ತೆಗೆ ಸಿಸಿಬಿ ಮುಂದಾಗಿದೆ.

ಕಳೆದ ಶುಕ್ರವಾರದಿಂದಲೇ ಪಾರ್ಟಿಗೆ ಸಿದ್ಧತೆ ನಡೆದಿತ್ತು. ಪಾರ್ಟಿಯಲ್ಲಿ ಭಾಗಿಯಾಗಿರುವ ಬಹುತೇಕರು ಆಂಧ್ರ ಮೂಲದ ಉದ್ಯಮಿಗಳು. ಖ್ಯಾತ ಹೋಟೆಲ್‌ಗಳ ಮಾಲೀಕರ ಮಕ್ಕಳು, ತೆಲುಗು ಸಿನಿರಂಗದ ಕಲಾವಿದರು, ಮಾಡೆಲ್‌ಗಳು, ದಕ್ಷಿಣಭಾರತದ ಖ್ಯಾತ ಡಿಜೆಗಳು ಭಾಗಿಯಾಗಿದ್ದಾರೆ. ಆಂಧ್ರ ಮೂಲದವರಾಗಿದ್ದು ಬೆಂಗಳೂರಿನಲ್ಲಿ ಬಿಝಿನೆಸ್ ಹೊಂದಿರುವ ಬಹುತೇಕರು ಇದ್ದರು. ಫಾರಂ ಹೌಸ್‌ನ ಹೊರಗೆ ನಿಂತಿರುವ ವಿಲಾಸಿ ವಾಹನಗಳಲ್ಲಿ ಆಂಧ್ರ ಮೂಲದ ವಾಹನಗಳೇ ಹೆಚ್ಚಿವೆ.

ನಿನ್ನೆ ಸಂಜೆ ಐದು ಗಂಟೆಯಿಂದಲೇ ಪಾರ್ಟಿ ಶುರುವಾಗಿದ್ದು, ಸ್ಥಳೀಯ ಪೊಲೀಸರ ಕರ್ತವ್ಯ ಲೋಪ ಗಮನಿಸಲಾಗಿದೆ. ಡ್ರಗ್ಸ್ ಪಾರ್ಟಿ ನಡೀತಿದ್ರೂ ಪೊಲೀಸರ ಗಮನಕ್ಕೆ ಬಂದಿಲ್ಲ. ಶುಕ್ರವಾರದಿಂದಲೇ ಪಾರ್ಟಿ ಸಿದ್ಧತೆ ನಡೆದಿದೆ. ಭಾರಿ ಪ್ರಮಾಣದಲ್ಲಿ ಡ್ರಗ್ ಸರಬರಾಜು ಆಗಿದೆ. ಡ್ರಗ್ ಪೆಡ್ಲರ್‌ಗಳ ಬಗ್ಗೆ ಡಿಸಿಪಿ ಶ್ರೀನಿವಾಸ್ ಗೌಡ ನೇತೃತ್ವದ ತಂಡ ಮಾಹಿತಿ ಕಲೆ ಹಾಕುತ್ತಿದೆ.

ತನಿಖೆ ನಡೆಯುತ್ತಿದೆ

“ಬೆಂಗಳೂರು ಹೊರ ವಲಯದಲ್ಲಿ ನೂರು ಜನರನ್ನೊಳಗೊಂಡ ರೇವ್ ಪಾರ್ಟಿ ನಡೆದಿದೆ. ತಪಾಸಣೆ ವೇಳೆ ದೊಡ್ಡ ಪ್ರಮಾಣದಲ್ಲಿ ಮಾದಕವಸ್ತುಗಳು ಪತ್ತೆಯಾಗಿವೆ. ಮಾದಕ ಸೇವನೆ ಬಗ್ಗೆ ತನಿಖೆ ನಡೆಯಲಾಗುತ್ತಿದೆ. ಎಫ್ಎಸ್ಎಲ್ ಹಾಗೂ ಸೋಕೋ ‌ಟೀಂನಿಂದ ತಪಾಸಣೆ ನಡೆಯಲಾಗುತ್ತಿದೆ. ಆಯೋಜಕ ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಘಟನೆ ಸಂಬಂಧ ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಜಿ. ಆರ್. ಪಾರ್ಮ್‌ಹೌಸ್‌ನ ಮಾಲೀಕರ ಬಗ್ಗೆ ಸ್ಥಳೀಯ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆʼʼ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಡಾ.‌ಚಂದ್ರಗುಪ್ತಾ ಹೇಳಿಕೆ ಕೊಟ್ಟಿದ್ದಾರೆ.

Continue Reading
Advertisement
ಲಕ್ಕೂರು ಆನಂದ lakkuru Anand
ಶ್ರದ್ಧಾಂಜಲಿ6 mins ago

ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಕವಿ ಲಕ್ಕೂರು ಆನಂದ ನಿಧನ, ಅನುಮಾನಾಸ್ಪದ ಸಾವು ಕೇಸು

Prajwal Revanna Case Shivarame Gowdas Deve Gowda suicide statement says Nikhil Kumaraswamy
ರಾಜಕೀಯ10 mins ago

Prajwal Revanna Case: ಶಿವರಾಮೇಗೌಡರ ದೇವೇಗೌಡ ಆತ್ಮಹತ್ಯೆ ಹೇಳಿಕೆ; ನಿಖಿಲ್‌ ಕುಮಾರಸ್ವಾಮಿ ಕೆಂಡ

murder case in Belgavi
ಬೆಳಗಾವಿ22 mins ago

Baby Death : ಮಲತಾಯಿಯ ಕ್ರೌರ್ಯಕ್ಕೆ ಬಲಿಯಾಯ್ತಾ 3 ವರ್ಷದ ಕಂದಮ್ಮ?

rave party telugu actress hema
ಕ್ರೈಂ24 mins ago

‌Rave Party: ʼರೇವ್‌ ಪಾರ್ಟಿಯಲ್ಲಿ ನಾನಿಲ್ಲʼ ಎಂದು ವಿಡಿಯೋ ಮಾಡಿದ ತೆಲುಗು ನಟಿ; ಐವರ ಬಂಧನ

Payal Rajput Accuses Rakshana Producers Of Not Clearing Her Dues
ಟಾಲಿವುಡ್35 mins ago

Payal Rajput: ನಿರ್ಮಾಪಕನ ವಿರುದ್ಧ ‘ಹೆಡ್‌ಬುಷ್’ ನಟಿಯ ಗಂಭೀರ ಆರೋಪ!

Salman Khan Ultimate Sex Symbol Says Malaika Arora
ಬಾಲಿವುಡ್39 mins ago

Salman Khan: ʻಅಲ್ಟಿಮೇಟ್ ಸೆಕ್ಸ್ ಸಿಂಬಲ್ʼ ನನ್ನ ಗಂಡ ಅಲ್ಲ, ಅದು ಸಲ್ಮಾನ್‌ ಖಾನ್‌ ಎಂದಳು ಖ್ಯಾತ ನಟಿ!

Ebrahim Raisi
ವಿದೇಶ41 mins ago

Ebrahim Raisi: ಹೆಲಿಕಾಪ್ಟರ್‌ ದುರಂತಕ್ಕೂ ಮುಂಚಿನ ಇಬ್ರಾಹಿಂ ರೈಸಿ ವಿಡಿಯೋ ವೈರಲ್‌

One year for the government Cm Siddaramaiah reveals many dreams and media interaction live
ರಾಜಕೀಯ49 mins ago

CM Siddaramaiah: ಸರ್ಕಾರಕ್ಕೆ ಒಂದು ವರ್ಷ; ಹಲವು ಕನಸು ಬಿಚ್ಚಿಟ್ಟ ಸಿಎಂ ಸಿದ್ದರಾಮಯ್ಯ! ಮಾಧ್ಯಮ ಸಂವಾದದ ಲೈವ್‌ ಇಲ್ಲಿದೆ

Drowned in water
ಬೆಂಗಳೂರು1 hour ago

Drowned In water : ಕೆರೆಯಲ್ಲಿ ಈಜಲು ಹೋದ ಬಾಲಕರು ನೀರುಪಾಲು

gold rate today sai pallavi
ಚಿನ್ನದ ದರ2 hours ago

Gold Rate Today: 22 ಕ್ಯಾರಟ್‌ ಚಿನ್ನದ ಬೆಲೆ 500 ರೂ. ಏರಿಕೆ; ಇಂದಿನ ಬಂಗಾರದ ಧಾರಣೆ ಹೀಗಿದೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ21 hours ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ22 hours ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ23 hours ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ3 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ3 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ4 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು4 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ5 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

ಟ್ರೆಂಡಿಂಗ್‌