Amrit Mahotsav | ಅಮರವಾಗಿದೆ ಅಮರ ಸುಳ್ಯ ದಂಗೆ-1837; ಬ್ರಿಟಿಷರ ವಿರುದ್ಧ ರೈತರ ಕೆಚ್ಚೆದೆಯ ಹೋರಾಟ - Vistara News

ಕರ್ನಾಟಕ

Amrit Mahotsav | ಅಮರವಾಗಿದೆ ಅಮರ ಸುಳ್ಯ ದಂಗೆ-1837; ಬ್ರಿಟಿಷರ ವಿರುದ್ಧ ರೈತರ ಕೆಚ್ಚೆದೆಯ ಹೋರಾಟ

ಸೂರ್ಯ ಮುಳುಗದ ಸಾಮ್ರಾಜ್ಯವೆಂದೇ ಪ್ರಸಿದ್ಧಿ ಪಡೆದಿದ್ದ ಬ್ರಿಟಿಷರನ್ನು ಬಗ್ಗುಬಡಿದು ಎರಡು ವಾರಗಳ ಕಾಲ ಆಂಗ್ಲರಿಂದ ವಿಮೋಚನೆಯನ್ನು ಗಳಿಸಿದ ಜನರ ಅಸೀಮ ಸಾಹಸದ ಕತೆ ಇದು. ಅಮರ ಸುಳ್ಯ ಹೋರಾಟದ ಬಗ್ಗೆ ಇಂದಿಗೂ ಹಲವಾರು ಯಶೋಗಾಥೆಗಳಿವೆ.

VISTARANEWS.COM


on

Amrit Mahotsav
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
Vistara-Logo-Azadi-ka-amrit-Mahotsav

| ಗಂಗಾಧರ ಕಲ್ಲಪಳ್ಳಿ, ಸುಳ್ಯ
ಬ್ರಿಟಿಷರ ದಬ್ಬಾಳಿಕೆಯ ಸಂಕೊಲೆಯಲ್ಲಿ ನಲುಗಿದ ಭಾರತೀಯರ ಆಕ್ರೋಶದ ದನಿ ಮೊಳಗಿದ್ದು 1857ರಲ್ಲಿ ಎಂಬುದು ಇತಿಹಾಸದ ಪುಟಗಳನ್ನು ತೆರೆದಾಗ ನಮಗೆ ತಿಳಿಯುತ್ತದೆ. ಇದನ್ನು ಮೊದಲ ಸ್ವಾತಂತ್ರ್ಯ ಸಂಗ್ರಾಮ (Amrit Mahotsav) ಎಂದು ಇತಿಹಾಸಕಾರರು ಪರಿಗಣಿಸಿದ್ದಾರೆ. ಆದರೆ, ಇದಕ್ಕೂ ಎರಡು ದಶಕಗಳ ಮೊದಲೇ 1837ರಲ್ಲಿ ರೈತಾಪಿ ವರ್ಗದಿಂದ ರಾಜ್ಯದಲ್ಲಿ ನಡೆದಿತ್ತು ‘ಅಮರ ಸುಳ್ಯ ದಂಗೆ’ ಅಥವಾ ‘ಕೊಡಗು-ಕೆನರಾ ಬಂಡಾಯ’…

1837ರಲ್ಲಿ ನಡೆದ ಆ ಹೋರಾಟದಲ್ಲಿ ಬ್ರಿಟಿಷರನ್ನು ಸೋಲಿಸಿ ಮಂಗಳೂರಿನ ಬಾವುಟಗುಡ್ಡೆಯಲ್ಲಿ ವಿಜಯ ಪತಾಕೆಯನ್ನು ಹಾರಿಸಿ 13 ದಿನಗಳ ಕಾಲ ಮಂಗಳೂರನ್ನು ಆಳಿದ್ದರು. ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದಲ್ಲಿರುವಾಗ ಅಮರ ಸುಳ್ಯ ಹೋರಾಟದ ನೆನಪುಗಳು ಶಾಶ್ವತವಾಗಿ ಉಳಿಯಲು ಯೋಜನೆ ರೂಪಿಸಲಾಗಿದೆ. ಅಂದಿನ ಹೋರಾಟದ ನೇತೃತ್ವ ವಹಿಸಿದ್ದ ಸಮರ ವೀರ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ ಮಂಗಳೂರಿನಲ್ಲಿ ಸ್ಥಾಪಿಸಿರುವುದು ಅದರ ಪ್ರಮುಖ ಭಾಗ.

ಕ್ರಿ.ಶ.1799ರಲ್ಲಿ ನಡೆದ 4ನೇ ಆಂಗ್ಲೋ-ಮೈಸೂರು ಯುದ್ಧದ ರಣಾಂಗಣದಲ್ಲಿ ಟಿಪ್ಪು ಮಡಿದ ನಂತರ ಮಂಗಳೂರು ಸಂಪೂರ್ಣವಾಗಿ ಇಂಗ್ಲಿಷರ ವಶವಾಯಿತು. ಅದಾದ ಕೆಲವೇ ದಿನಗಳಲ್ಲಿ ವಿಟ್ಲದ ರವಿವರ್ಮ ನರಸಿಂಹ ದೊಂಬ ಹೆಗ್ಗಡೆ ತಾನು ಸ್ವತಂತ್ರ ರಾಜನೆಂದು ಘೋಷಿಸಿಕೊಂಡ, ಆದರೆ ಮಂಗಳೂರನ್ನು ಗೆಲ್ಲುವ ಆತನ ಉದ್ದೇಶ ವಿಫಲವಾಯಿತು. ಹೆಗ್ಗಡೆ ಮತ್ತು ಆತನ ಸೇನಾಧಿಕಾರಿಯನ್ನು ಬಂಧಿಸಿದ ಇಂಗ್ಲಿಷರು ಅವರಿಗೆ ಗಲ್ಲು ಶಿಕ್ಷೆ ನೀಡುತ್ತಾರೆ. ಮುಂದೆ ಕ್ರಿ.ಶ.1811ರಲ್ಲಿ ಮಂಗಳೂರು ಮತ್ತು ಸುತ್ತಲ ಗ್ರಾಮಗಳ ರೈತರು ಅಸಹಕಾರ ಚಳವಳಿಗೆ ಧುಮುಕಿದರು. ಶಾಂತ ರೀತಿಯ ಪ್ರತಿಭಟನೆಗೆ ಮಹತ್ತರವಾದ ಬದಲಾವಣೆಗಳಾಗದಿದ್ದರೂ ಅಲ್ಪಸ್ವಲ್ಪ ಪರಿಹಾರದ ದಾರಿಯನ್ನು ತೋರಿಸಿದ ಬ್ರಿಟಿಷರು ಹೋರಾಟವನ್ನು ತಣ್ಣಗಾಗಿಸಿದರು.

ಇದನ್ನೂ ಓದಿ | Amrit Mahotsav | ಬ್ರಿಟಿಷರ ವಿರುದ್ಧ ದಂಗೆ ಸಂಘಟಿಸಿದ್ದ ಅಪ್ಪಾಸಾಹೇಬ ಪಟವರ್ಧನ್‌

ಇದು ನಡೆದು 20 ವರ್ಷಗಳಾಗುತ್ತಿದ್ದಂತೆ ಕೆನರಾ ಜಿಲ್ಲೆಯ ಗಡಿಪ್ರದೇಶವಾದ ಇಂದಿನ ಶಿವಮೊಗ್ಗ ಜಿಲ್ಲೆಯ ನಗರ ಎಂಬ ಊರಿನಲ್ಲಿ ರೈತ ಹೋರಾಟವೊಂದು ಮೊಗ್ಗೊಡೆಯಿತು. ಮೈಸೂರು ಮುಮ್ಮುಡಿ ಕೃಷ್ಣರಾಜ ಒಡೆಯರ್‌ನ ಕಂದಾಯ ನೀತಿಯ ವಿರುದ್ಧ ನಡೆದ ಬಂಡಾಯವದು. ತಣ್ಣಗೆ ಆರಂಭವಾದ ಈ ‘ನಗರ ರೈತದಂಗೆ’ ಮುಂದೆ ಉಗ್ರ ಸ್ವರೂಪವನ್ನು ಪಡೆದುಕೊಂಡಿತು. ಇದೇ ಸಮಯದಲ್ಲಿ ಮಂಗಳೂರಿನ ರೈತರು ಕೂಡ ಬ್ರಿಟಿಷರನ್ನು ಪ್ರತಿಭಟಿಸುವ ದಾರಿಯನ್ನು ಹಿಡಿದರು. ಶಾಂತ ಸ್ವರೂಪದ ಪ್ರತಿಭಟನೆ ನಂತರ ದಿನಗಳಲ್ಲಿ ಹಿಂಸಾತ್ಮಕ ರೂಪ ಪಡೆಯಿತು. ಈ ವಿಶಿಷ್ಟ ಪ್ರತಿಭಟನೆಯು ‘ ಮಂಗಳೂರು ಕೂಟ ಹೋರಾಟ ‘ ಎಂದು ಪ್ರಸಿದ್ಧಿಯನ್ನು ಪಡೆದಿದೆ . ಈ ಹೋರಾಟದಲ್ಲಿ ಭಾಗಿಗಳಾದ ದೇರೆಬೈಲು ರಾಮಯ್ಯ, ಸಂಕು ಪೂಂಜ ಸೂರಪ್ಪ , ಕೃಷ್ಣರಾವ್ ಮೊದಲಾದವರನ್ನು ಬ್ರಿಟಿಷರು ಬಂಧಿಸಿ ಬಿಡುಗಡೆಗೊಳಿಸಿದರು, ಮುಂದೆ ಈ ಹೋರಾಟ ಅಂತ್ಯವಾಯಿತು.

ನಂತರ ನಡೆದ ಅತ್ಯಂತ ಪ್ರಮುಖ ಹೋರಾಟವೆಂದರೆ 1837ರಲ್ಲಿ ನಡೆದ ʼಅಮರಸುಳ್ಯ ದಂಗೆ’ ಅಥವಾ ʼಕೊಡಗು-ಕೆನರಾʼ ಬಂಡಾಯ ಎಂದು ಕರೆಯಲಾಗಿರುವ ಬ್ರಿಟಿಷ್ ವಿರೋಧಿ ಸಶಸ್ತ್ರ ಕದನ. ಈ ಹೋರಾಟ ಆರಂಭಗೊಳ್ಳಲು ಮೂಲ ಕಾರಣ, ಕೊಡಗಿನ ಹಾಲೇರಿ ವಂಶದ ಅರಸ ಚಿಕ್ಕವೀರರಾಜೇಂದ್ರ ಒಡೆಯನ ವಿರುದ್ಧ ಬ್ರಿಟಿಷರು ಸುಳ್ಳು ಆರೋಪಗಳನ್ನು ಹೊರಿಸಿ ಆತನನ್ನು ಕುತಂತ್ರದಿಂದ ಪದಚ್ಯುತಿಗೊಳಿಸಿ ಜನರ ಇಚ್ಛೆಗೆ ವಿರುದ್ಧವಾಗಿ ಕಾಶಿಗೆ ಗಡಿಪಾರು ಮಾಡಿದುದು.

ವ್ಯಗ್ರರಾದ ರೈತರು

ಚಿಕ್ಕವೀರರಾಜನ ಹಿರಿಯರು ಇಂಗ್ಲಿಷರಿಗೆ ಆಪ್ತರಾಗಿದ್ದರೂ ಆತ ಮಾತ್ರ ಅವರ ವಿರುದ್ಧ ಬಹಿರಂಗವಾಗಿ ತೊಡೆತಟ್ಟಿ ಪಂಥಾಹ್ವಾನ ನೀಡಿದ್ದ. ಶಿವಮೊಗ್ಗದ ನಗರ ದಂಗೆಗೆ ಬೆಂಬಲ ಕೊಟ್ಟಿದ್ದಲ್ಲದೆ, ಬೆಂಗಳೂರಿನ ಬ್ರಿಟಿಷ್ ಮಿಲಿಟಲಿ ದಂಡಿನಲ್ಲಿ ಕ್ಷೋಭೆಯನ್ನು ಹುಟ್ಟಿಸುವಲ್ಲಿ ಯಶಸ್ವಿಯಾಗಿದ್ದ. ಹೈದರಾಬಾದ್, ಪಂಜಾಬ್ ರಾಜರೊಡನೆ ಸೇರಿ ಬ್ರಿಟಿಷ್ ವಿರೋಧಿ ಒಕ್ಕೂಟವನ್ನು ರೂಪಿಸುವ ಪ್ರಯತ್ನ ನಡೆಸಿದ್ದ. ಇದೇ ಹೊತ್ತಲ್ಲಿ ಕೊಡಗಿನೊಳಗೆ ರಾಜಕುಟುಂಬದಲ್ಲಿದ್ದ ಆಂತರಿಕ ಭಿನ್ನಾಭಿಪ್ರಾಯವನ್ನು ಬಳಸಿ ಅವನನ್ನು ಸಿಂಹಾಸನದಿಂದ ಕೆಳಗಿಳಿಸಲಾಯಿತು. ಇದರಿಂದ ರಾಜನ ಆಪ್ತರಾದ ಒಂದು ವರ್ಗದ ರೈತರು ವ್ಯಗ್ರರಾದರು. ಅದು ಮುಂದೆ 1837ರ ಹೋರಾಟದ ಮೂಲದ್ರವ್ಯವಾಯಿತು.

ಕೆದಂಬಾಡಿ ರಾಮಯ್ಯ ಗೌಡ

ಆಶ್ರಮದಲ್ಲಿ ಶಸ್ತ್ರಾಸ್ತ್ರ ತರಬೇತಿ

ಹೋರಾಟವನ್ನು ಶಿಸ್ತುಬದ್ಧವಾಗಿ ಸಂಘಟಿಸಿದ ಸುಳ್ಯ ಉಬರಡ್ಕ ಗ್ರಾಮದ ಕೆದಂಬಾಡಿ ರಾಮಯ್ಯ ಗೌಡ ಎಂಬ ಪ್ರಭಾವಶಾಲಿಯಾದ ಶ್ರೀಮಂತ ಜಮೀನ್ದಾರ, ಜನನಾಯಕನಾಗಿ ಹೊರಹೊಮ್ಮುತ್ತಾರೆ. ಸಶಸ್ತ್ರ ಸಮರಕ್ಕೆ ನಾಯಕನೊಬ್ಬ ಅನಿವಾರ್ಯ, ಅಂತಹ ನಾಯಕ ರಾಜ ಮನೆತನಕ್ಕೆ ಸೇರಿದವನಾದರೆ ಜನಸಾಮಾನ್ಯರು ಭಾವನಾತ್ಮಕತೆಯಿಂದ ಆಪ್ತತೆಯಿಂದ ಸ್ವೀಕರಿಸುತ್ತಾರೆ ಎಂದು ತಿಳಿದಿದ್ದ ಇವರು, ಶನಿವಾರಸಂತೆ ಹೆಮ್ಮನೆಯಿಂದ ಪುಟ್ಟಬಸಪ್ಪ ಎಂಬ ತರುಣನನ್ನು ಕರೆತರುತ್ತಾರೆ. ಅವನಿಗೆ ಸನ್ಯಾಸಿಯ ವೇಷ ತೊಡಿಸುತ್ತಾರೆ. ‘ಕಲ್ಯಾಣಸ್ವಾಮಿ’ ಎಂಬ ಹೆಸರನ್ನು ಇಡುತ್ತಾರೆ. ಸನಿಹದ ಪೂಮಲೆ ಕಾಡಲ್ಲಿ ಆಶ್ರಮ ಕಟ್ಟಿಸಿ ನೆಲೆ ನಿಲ್ಲಿಸುತ್ತಾರೆ. ಈತ ಹಾಲೇರಿ ರಾಜವಂಶಸ್ಥ ಎಂಬ ಸುದ್ದಿ ಎಲ್ಲೆಡೆ ಹರಡುತ್ತದೆ. ಜನ ಆಶ್ರಮಕ್ಕೆ ಭೇಟಿ ಕೊಡುತ್ತಾರೆ. ಈ ಮೂಲಕ ಸುಳ್ಯದ ಸುತ್ತಲಿನ ಗ್ರಾಮಗಳ ಯುವಕರನ್ನು ಯುದ್ಧಕ್ಕೆ ಸನ್ನದ್ಧಗೊಳಿಸಿ, ಶಸ್ತ್ರಾಸ್ತ್ರ ತರಬೇತಿ ನೀಡಲಾಗುತ್ತದೆ.

1837ರ ಮಾರ್ಚ್ 30ರಂದು ಹೋರಾಟಕ್ಕೆ ಸಜ್ಜುಗೊಳ್ಳುತ್ತಾರೆ, ಕಲ್ಯಾಣಸ್ವಾಮಿಯನ್ನು ಪೂಮಲೆ ಕಾಡಿನ ಆಶ್ರಮದಿಂದ ಗೌರಪೂರ್ವಕವಾಗಿ ಕರೆದುಕೊಂಡು ಬರುತ್ತಾರೆ. ಈ ದಿನ ಕೆದಂಬಾಡಿ ರಾಮಯ್ಯ ಗೌಡನ ಮಗನ ಮದುವೆಯೆಂಬ ಯುದ್ಧಸನ್ನದ್ಧತೆಯ ಸಂಕೇತದ ಸುದ್ದಿಯನ್ನು ಸಾರಲಾಗಿರುತ್ತದೆ. ಜನ ಆಯುಧಪಾಣಿಗಳಾಗಿ ಕೆದಂಬಾಡಿ ರಾಮಯ್ಯ ಗೌಡರ ಮನೆಯ ಮುಂದಿನ ಗದ್ದೆಯಲ್ಲಿ ಸೇರುತ್ತಾರೆ. ಕನಿಷ್ಠ 2000 ಹೋರಾಟಗಾರರು ಅಲ್ಲಿ ಸೇರಿರುತ್ತಾರೆ. ಅದೇ ದಿನ ಪೆರಾಜೆ, ಸುಳ್ಯ, ಸುಬ್ರಹ್ಮಣ್ಯ, ಮಂಜ್ರಾಬಾದ್, ಬಿಸಲೆ ಮೊದಲಾದ ಕಡೆಗಳಲ್ಲಿ ಯುದ್ಧದ ನಿರೂಪಗಳನ್ನು (War proclamation ) ಪ್ರಕಟಿಸಲಾಗುತ್ತದೆ.

ಯುದ್ಧದ ನಾಯಕತ್ವದ ಪಟ್ಟ

ಕೊಡಗಿನ ದಿವಾನನಾಗಿದ್ದ ತುದಿಯಡ್ಕ ಲಕ್ಷ್ಮೀನಾರಾಯಣರ ತಮ್ಮನಾದ ಅಟ್ಲೂರು ರಾಮಪ್ಪಯ್ಯ ಸುಳ್ಯದ ಪ್ರಭಾವದ ವ್ಯಕ್ತಿಯಾಗಿದ್ದ. ಹೋರಾಟಕ್ಕೆ ಮೊದಲು ಬೆಂಬಲ ನೀಡಿದ್ದರೂ ಕೊನೆಗೆ ವಿರುದ್ಧ ದಿಕ್ಕಿಗೆ ವಾಲಿಕೊಂಡಿದ್ದ. ದಂಡು ಹೊರಡುವ ಮೊದಲು ಅವನನ್ನು ಕರೆತರಲು ಕೆದಂಬಾಡಿ ರಾಮಯ್ಯ ಗೌಡರು ತಂಡವೊಂದನ್ನು ರಚಿಸಿ ಪಯಸ್ವಿನಿ ನದಿಯ ಪಶ್ಚಿಮದ ದಡದಲ್ಲಿನ ಅಟ್ಲೂರಿಗೆ ಕಳುಹಿಸುತ್ತಾರೆ. ಆದರೆ ರಾಮಪ್ಪಯ್ಯನ ಜನ ಇವರ ವಿರುದ್ಧ ಕಾದಾಟ ನಿಲ್ಲುತ್ತಾರೆ. ಆತನನ್ನು ಬಂಧಿಸಿ ಕರೆತರುವುದು ಅವರಿಗೆ ಅನಿವಾರ್ಯವಾಗುತ್ತದೆ. ಇಂದು ಮದುವೆಗದ್ದೆಯೆಂದು ಕರೆಯುವ ಮನೆಯ ಮುಂಭಾಗದ ಗದ್ದೆಯಲ್ಲಿ ಕಲ್ಯಾಣಸ್ವಾಮಿಗೆ ರಾಮಯ್ಯಗೌಡರ ನೇತೃತ್ವದಲ್ಲಿ ನಡೆದ ಕಾರ್ಯಯೋಜನೆಯಂತೆ ಯುದ್ಧದ ನಾಯಕತ್ವದ ಪಟ್ಟವನ್ನು ಕಟ್ಟಲಾಗುತ್ತದೆ.

ಇದನ್ನೂ ಓದಿ | Amrit Mahotsav | ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಕೂ ಆ್ಯಪ್ ವಿಶೇಷ ಅಭಿಯಾನ

ಕಲ್ಯಾಣಸ್ವಾಮಿಗೆ ಬಣ್ಣದ ಕುದುರೆಯನ್ನು ರಾಜಾಶ್ವವಾಗಿ ಅರ್ಪಿಸಲಾಗುತ್ತದೆ. ಜತೆಗೆ ಪ್ರೀತಿ, ಗೌರವದ ಪರಾಕಾಷ್ಟೆ ಎಂಬಂತೆ ಮಿತ್ತೂರು ನಾಯರ್ ದೈವದ ಕೆಂಪು ಕೊಡೆಯನ್ನು ಹಿಡಿಯುತ್ತಾರೆ. ಮಿತ್ತೂರ್ ನಾಯರ್‌ ಸುಳ್ಯ ಪರಿಸರದ ಅತ್ಯಂತ ಕಾರಣಿಕದ ದೈವವೆಂಬ ನಂಬಿಕೆ ಇಂದಿಗೂ ಪ್ರಚಲಿತದಲ್ಲಿದೆ. ಇಂತಹ ದೈವದ ಛತ್ರಚಾಮರವನ್ನು ಮನುಷ್ಯ ಮಾತ್ರನೊಬ್ಬನಿಗೆ ಹಿಡಿಯುವುದೆಂದರೆ ಈ ಹೋರಾಟದ ಬಗ್ಗೆ ಜನ ಸಾಮಾನ್ಯರಿಗಿದ್ದ ಅರ್ಪಣಾ ಮನೋಭಾವ ಅರ್ಥವಾಗುತ್ತದೆ. ಮದುವೆ ಗದ್ದೆಯಲ್ಲಿ ಕ್ರಿ.ಶ.1837 ಮಾರ್ಚ್ 30 ರಂದು ರೈತ ಸೈನ್ಯ ಜಮಾವಣೆಯಾದಲ್ಲಿಂದ ಕೆದಂಬಾಡಿ ರಾಮಯ್ಯ ಗೌಡರ ನಾಯಕತ್ವದ ಗುಣಗಳು ಅನಾವರಣಗೊಳ್ಳುತ್ತಾ ಹೋಗುತ್ತವೆ. ಮೊದಲು ಈ ದಂಡು ಬೆಳ್ಳಾರೆಯತ್ತ ಸಾಗಿ ಕಂಪನಿಯ ಖಜಾನೆಯನ್ನು ಸ್ವಾಧೀನಕ್ಕೆ ಪಡೆದುಕೊಳ್ಳುತ್ತದೆ. ಆಗ ಸ್ಥಳೀಯ ಶಿರಸ್ತೇದಾರ ದೇವಪ್ಪನ ಪ್ರತಿಭಟನೆ ನಿಷ್ಪಲಗೊಳ್ಳುತ್ತದೆ.

೪ ತಂಡಗಳಾಗಿ ವಿಂಗಡನೆ

ಪೈಶ್ಕಾರನ ಕಚೇರಿಯ ಮುಖ್ಯ ಶಿರಸ್ತೇದಾರ, ತಹಸೀಲ್ದಾರ್ ಇನ್ನಿತರ ಉದ್ಯೋಗಿಗಳನ್ನು ಸೆರೆ ಹಿಡಿಯುತ್ತಾರೆ. ಬೆಳ್ಳಾರೆಯಲ್ಲಿ 3000ಕ್ಕಿಂತಲೂ ಹೆಚ್ಚು ಹೋರಾಟಗಾರರು ಜಮಾವಣೆಗೊಂಡಿದ್ದರು. ದಂಡಿನಲ್ಲಿ ಕುದುರೆ ಮತ್ತು ಆನೆಗಳೂ ಇದ್ದವು. ಬೆಳ್ಳಾರೆಯಲ್ಲಿ ಹೋರಾಟದ ಸೇನಾಳುಗಳನ್ನು ನಾಲ್ಕು ತಂಡಗಳಾಗಿ ವಿಂಗಡಿಸಲಾಗುತ್ತದೆ. 800 ಜನರ ಮೊದಲ ದಂಡು ಕುಡೆಕಲ್ಲು ಪುಟ್ಟ ಗೌಡ ಹಾಗೂ ಕುಂಚಡ್ಕ ರಾಮ ಗೌಡರ ನೇತೃತ್ವದಲ್ಲಿ ಕುಂಬ್ಳೆ- ಕಾಸರಗೋಡು ಮಂಜೇಶ್ವರಗಳನ್ನು ಗೆಲ್ಲಲು ಕಳುಹಿಸಲಾಯಿತು. ಎರಡನೇ ದಳ ಬಂಟ್ವಾಳ ಕಾರ್ಕಳಕ್ಕೆ ಮತ್ತು ಮೂರನೇ ತಂಡವು ಕೂಜುಗೋಡು ಮಲ್ಲಪ್ಪ ಗೌಡ ಹಾಗೂ ಅಪ್ಪಯ್ಯ ಗೌಡರ ಮುಂದಾಳುತನದಲ್ಲಿ ಉಪ್ಪಿನಂಗಡಿ – ಬಿಸಲೆ- ಐಗೂರಿಗೆ ಹೋಗುತ್ತದೆ. ಕಲ್ಯಾಣಸ್ವಾಮಿ, ಕೆದಂಬಾಡಿ ರಾಮಯ್ಯ ಗೌಡ, ಗುಡ್ಡೆಮನೆ ಅಪ್ಪಯ್ಯ ಗೌಡ ಹಾಗೂ ಕುಕ್ಕುನೂರು ಚೆನ್ನಯ್ಯ ಇವರಿದ್ದ ಪ್ರಧಾನ ಸೈನ್ಯವು ಮಂಗಳೂರಿಗೆ ಹೊರಟಿತು. ಜನಪ್ರಿಯವಾಗಿ ಕರೆಯಲಾಗುತ್ತಿದ್ದ ಮಂಗಳೂರಿಗೆ ಹೊರಟ ಮುಖ್ಯ ಸೈನ್ಯ ಮೊದಲು ಪುತ್ತೂರಿಗೆ ಲಗ್ಗೆ ಇಟ್ಟಿತು.

ಕಾಸರಗೋಡು ಕದನ

ಜನಸಮರದ ಸುದ್ದಿ ತಿಳಿದ ಕೆನರಾ ಜಿಲ್ಲೆಯ ಕಲೆಕ್ಟರ್ ಲೆವಿನ್ ಮಂಗಳೂರಿನಿಂದ ಹೊರಟು ತುಕಡಿಯೊಂದಿಗೆ ಪುತ್ತೂರಿಗೆ ಆಗಮಿಸಿದ. ಪುತ್ತೂರಲ್ಲಿ ಕಂಪನಿ ಕಚೇರಿ ಸುಲಭವಾಗಿ ಹೋರಾಟಗಾರರ ವಶಕ್ಕೆ ಬಂತು. ಅಲ್ಲಿನ ಉದ್ಯೋಗಿಗಳು ಬಂಧನಕ್ಕೊಳಗಾದರು. ಎರಡು ದಿನ ದೂರದಲ್ಲಿದ್ದು ಹೊಂಚು ಹಾಕಿದ ಲೆವಿನ್ ಯುದ್ಧ ನಡೆಸಿದರೆ ತನಗೇ ಅಪಾಯ ಎಂದು ತಿಳಿದು ಏಪ್ರಿಲ್ 2ರಂದು ರಾತ್ರಿ ಅಲ್ಲಿಂದ ಮಂಗಳೂರು ಕಡೆ ಕಾಲ್ಕಿತ್ತ. ಪುತ್ತೂರಲ್ಲಿ ಅದಾಗಲೇ ಅಪಾರ ಪ್ರಮಾಣದ ಸಶಸ್ತ್ರ ಜನ ಸೇರಿದ್ದರು. ಅಲ್ಲಿ ಅಪಾಯವನ್ನು ಎದುರು ಹಾಕಿಕೊಳ್ಳುವುದಕ್ಕಿಂತ ದುರ್ಬಲ ಮಂಗಳೂರನ್ನು ರಕ್ಷಿಸಲು ಮುಂದಾಗುವುದು ಒಳಿತೆಂದು ಲೆವಿನ್ ಭಾವಿಸಿದ. ಮಂಗಳೂರಲ್ಲಿ ಸಹ ಅಲ್ಲಿನ ನಿವಾಸಿಗಳ ಅಸಹಕಾರ ಲೆವಿನ್ ಗಮನಕ್ಕೆ ಬಂತು. ಪುತ್ತೂರಿಂದ ಮಂಗಳೂರಿಗೆ ಹೋಗುವ ದಾರಿಯಲ್ಲಿ ಲೆವಿನ್ ಸೈನಿಕರನ್ನು ಒಟ್ಟು ಸೇರಿಸಿ ಬಂದೂಕು ಮತ್ತು ಮದ್ದುಗುಂಡುಗಳನ್ನು ಕೊಟ್ಟರೂ ಅವರು ತಮಗೆ ಕೊಟ್ಟ ಕೆಲಸವನ್ನು ನಿರ್ವಹಿಸುವ ಬದಲು ಯಾರಿಗೂ ತಿಳಿಸದೆ ನಾಪತ್ತೆಯಾದರು. ಈ ಕಲೆಕ್ಟರ್ ಮಂಗಳೂರಿಗೆ ತಲಪುವ ಹೊತ್ತಿಗೆ ಊರು ನಿರ್ಜನವಾಗಿತ್ತು. ಅಲ್ಲಿನ ಜನ ಹೋರಾಟಗಾರರೊಂದಿಗೆ ಸಂಪರ್ಕದಲ್ಲಿರುವುದು ಅವನ ಗಮನಕ್ಕೆ ಬಂದಿತು. ನಗರದ ಕಾವಲು ಪಡೆ ಸಹ ಅವರೊಂದಿಗೆ ಸೇರಿಕೊಂಡಿತ್ತು.

ಒಂದೆಡೆ ಹೋರಾಟಗಾರರೊಂದಿಗೆ ಕಾದಾಡುತ್ತಾ, ಇನ್ನೊಂದೆಡೆ ಯುರೋಪಿಯನ್ ಕುಟುಂಬಗಳನ್ನು ಮಂಗಳೂರಿನಿಂದ ತೆರವು ಮಾಡಿ ಅಪಾಯಕಾರಿಯಲ್ಲದ ಸ್ಥಳಕ್ಕೆ ಕಳುಹಿಸಲು ಕಂಪನಿಯ ಅಧಿಕಾರಿಗಳು ತೀರ್ಮಾನಿಸಿದ್ದರು. ಏಪ್ರಿಲ್ 5ರಂದು ಅವರನ್ನು ಹಡಗಿಗೆ ಹತ್ತಿಸಲು ನಿರ್ಧರಿಸಿದ್ದರೂ ಅದು ಸಾಧ್ಯವಾಗಲಿಲ್ಲ. ಈ ನಡುವೆ ಖಜಾನೆಯನ್ನು ಸಂರಕ್ಷಿಸುವ ಪ್ರಯತ್ನದಿಂದ ಅವರ ಉಳಿದ ಕೆಲಸಕ್ಕೂ ಅಡಚಣೆಯಾಯಿತು. ಕೊನೆಗೂ ಆ ಸಾಹಸವನ್ನು ಕೈಬಿಡಬೇಕಾಯಿತು. ಅಂತೂ ಇಂತೂ ಏಪ್ರಿಲ್ 6 ಮತ್ತು 7 ರಂದು ಒಂದಷ್ಟು ಜನ ಮಂಗಳೂರು ತೊರೆದು ಕಣ್ಣನೂರಿಗೆ ಪಲಾಯನ ಮಾಡಿದರು. 1837ರ ಹೋರಾಟದ ಸೈನ್ಯವು ಮಂಗಳೂರಿನ ಕಡೆ ಸಾಗುತ್ತಿದ್ದಂತೆ ಅಪಾರವಾದ ಜನಬೆಂಬಲ, ನೆರವು ದೊರಕುತ್ತದೆ. ಧರ್ಮಸ್ಥಳದ ಧರ್ಮಾಧಿಕಾರಿ ಮಂಜಯ್ಯ ಹೆಗ್ಗಡೆ ಫಿರಂಗಿ, ಕುದುರೆ ಹಾಗೂ ಅಪಾರ ಪ್ರಮಾಣದ ಹಣವನ್ನು ನೀಡುತ್ತಾರೆ. ನಂದಾವರದಲ್ಲಿದ್ದ ಬಂಗಾಡಿ ಅರಸು ಮನೆತನದ ಲಕ್ಷ್ಮಪ್ಪ ಬಂಗರಸ ದೊಡ್ಡ ಸಂಖ್ಯೆಯ ಯೋಧರೊಂದಿಗೆ ನೇರವಾಗಿ ಯುದ್ಧಕ್ಷೇತ್ರಕ್ಕೆ ಧಾವಿಸುತ್ತಾರೆ. ಉಪ್ಪಿನಂಗಡಿಯಲ್ಲಿ ಕಂಪನಿಯ ಉದ್ಯೋಗಿ ಮಂಜ ದಂಡಿಗೆ ಜನರನ್ನು ಜಮಾವಣೆಗೊಳಿಸುತ್ತಾರೆ. ಬೆಳ್ಳಾರೆಯಿಂದ ಮಾರ್ಚ್ 30ರಂದು ಕಾಸರಗೋಡನ್ನು ಲಗ್ಗೆ ಹಾಕಲು ಹೊರಟ ತಂಡವು ಅದರಲ್ಲಿ ಯಶಸ್ಸನ್ನು ಕಂಡಿತು.

ಕಾಸರಗೋಡು, ಕುಂಬ್ಳೆ, ಮಂಜೇಶ್ವರಗಳನ್ನು ಗೆದ್ದ ಆ ರೈತರು ಪುತ್ತೂರಿನಿಂದ ಸೇನೆಯು ಮಂಗಳೂರು ಸೇರುವ ಸಮಯಕ್ಕೆ ಸರಿಯಾಗಿ ಅಲ್ಲಿಗೆ ತಲುಪಿತು. ಈ ನಡುವೆ ಚಂದ್ರಗಿರಿ ಫೆರಿ, ಬಿಸಿಲೆ ಪಾಸ್ ಮತ್ತಿತರ ದಾರಿಗಳ ಮೂಲಕ ನಡೆಯುತ್ತಿದ್ದ ಕಂಪನಿಯ ಟಪಾಲು ವ್ಯವಸ್ಥೆಯನ್ನು ಸಂಪೂರ್ಣವಾಗಿ ವಿಫಲಗೊಳಿಸಲಾಗಿತ್ತು. ಹೋರಾಟಗಾರರು ಪ್ರತಿಯೊಂದು ಉಕ್ಕಡದಲ್ಲಿಯೂ, ಪ್ರತಿಯೊಂದು ಗಡಿಯಲ್ಲಿಯೂ ಕಾವಲು ಪಡೆಯನ್ನು ನಿಯೋಜಿಸಿದ್ದರು. ಉದ್ದೇಶಿತ ಹೋರಾಟ ಪ್ರಥಮ ಹಂತದಲ್ಲಿ ಅಭೂತಪೂರ್ವ ಜಯವನ್ನು ಗಳಿಸಿ ಸುಳ್ಯ, ಸುಬ್ರಹ್ಮಣ್ಯ , ಬಿಸಲೆ, ಉಪ್ಪಿನಂಗಡಿ, ಬೆಳ್ತಂಗಡಿ, ಕುಂಬ್ಳೆ , ಕಾಸರಗೋಡು, ಮಂಜೇಶ್ವರ, ಬಂಟ್ವಾಳ, ಮುಲ್ಕಿ, ಸುರತ್ಕಲ್, ಪುತ್ತೂರು ಈ ಎಲ್ಲ ಊರುಗಳೂ ರೈತಸೈನ್ಯದ ಕೈವಶವಾಗುತ್ತವೆ. ಕೊನೆಗೆ ನಡೆದ ಮಂಗಳೂರು ಆಕ್ರಮಣದಲ್ಲಿ ಕೆದಂಬಾಡಿ ರಾಮಯ್ಯ ಗೌಡರು ಮತ್ತಿತರರು ಅಪ್ರತಿಮ ಹೋರಾಟದಲ್ಲಿ ಭಾಗಿಯಾಗುತ್ತಾರೆ. ಕೆನರಾ ಜಿಲ್ಲೆಯ ಕೇಂದ್ರಸ್ಥಾನ ಪತನಗೊಳ್ಳುತ್ತದೆ. ಆ ಸಮಯದಲ್ಲಿ ಸಂಗ್ರಾಮದ ಯೋಧರ ಸಂಖ್ಯಾಬಲ 10 ರಿಂದ 12 ಸಾವಿರದಷ್ಟು ಇತ್ತು ಎಂದು ಬ್ರಿಟಿಷ್ ದಾಖಲೆಗಳು ತಿಳಿಸುತ್ತವೆ.

ಮಂಗಳೂರನ್ನು ಆಕ್ರಮಿಸಿದ ಹೋರಾಟಗಾರರ ಸೈನ್ಯ ಮೊದಲು ಮಾಡಿದ ಕೆಲಸವೆಂದರೆ ಲೈಟ್‌ಹೌಸ್‌ ಪ್ರದೇಶದಲ್ಲಿದ್ದ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ 7 ಬಾವುಟವನ್ನು ಕೆಳಗಿಳಿಸಿ ಹಾಲೇರಿ ರಾಜಲಾಂಛನದ ಧ್ವಜವನ್ನು ಹಾರಿಸಲಾಗುತ್ತದೆ. ಹೋರಾಟದ ಮುಖ್ಯಸ್ಥರಲ್ಲೊಬ್ಬನಾದ ಗುಡ್ಡೆಮನೆ ತಮ್ಮಯ್ಯರು ರಾಮಯ್ಯ ಗೌಡರ ಸೂಚನೆಗೆ ಅನುಗುಣವಾಗಿ ಈ ಕಾರ್ಯವನ್ನು ನೆರವೇರಿಸಿ ವಿಜಯದ ಸಂಕೇತವನ್ನು ಸಾರುತ್ತಾರೆ. ಅಂದಿನಿಂದ ಮಂಗಳೂರಿನ ಈ ಉನ್ನತ ಮತ್ತು ಪ್ರಮುಖ ಪ್ರದೇಶವು “ಬಾವುಟ ಗುಡ್ಡ” ಎಂಬ ಪ್ರಖ್ಯಾತಿಯನ್ನು ಪಡೆದುಕೊಳ್ಳುತ್ತದೆ. ನಂತರ ಸೈನ್ಯವು ಇಂಗ್ಲಿಷರ ಕಟ್ಟಡ, ಕುರುಹುಗಳನ್ನು ಸುಟ್ಟು ಹಾಕುತ್ತದೆ. ಸೆರೆಮನೆಯನ್ನು ಒಡೆದು, ಬ್ರಿಟಿಷ್ ನ್ಯಾಯವ್ಯವಸ್ಥೆಯಲ್ಲಿ ವಿನಾಕಾರಣ ಶಿಕ್ಷೆಗೆ ಈಡಾಗಿದ್ದ ಸ್ಥಳೀಯ ಜನರನ್ನು ಮುಕ್ತಗೊಳಿಸಲಾಗುತ್ತದೆ. ಅವರು ಸ್ವಂತ ಇಚ್ಛೆಯಿಂದ ಸೈನ್ಯಕ್ಕೆ ಸೇರ್ಪಡೆಗೊಳ್ಳುತ್ತಾರೆ. ನಂತರ ಮಂಗಳೂರಿನ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುತ್ತದೆ. ಆಡಳಿತವನ್ನು ವಹಿಸಿಕೊಂಡ ಹೋರಾಟಗಾರರು ರೈತರಿಗೆ ಕಂದಾಯ ವಿನಾಯಿತಿಯನ್ನು ಘೋಷಿಸುತ್ತಾರೆ. ಮಂಗಳೂರಿನ ವರ್ತಕರ ಬೆಂಬಲವನ್ನು ಪಡೆದುಕೊಳ್ಳುತ್ತಾರೆ. ಎಲ್ಲವೂ ಸುಗಮವಾಗಿ ನಡೆಯುತ್ತದೆ.

ರೈತಸೇನೆಯ ಕಾದಾಟ ಕೊನೆಗೂ ಫಲಪ್ರದವಾಗಲಿಲ್ಲ

ಮಂಗಳೂರನ್ನು ಭದ್ರಪಡಿಸಿದ ನಂತರ ಹೋರಾಟಗಾರರ ಹಲವು ಪ್ರಮುಖರು ಮಡಿಕೇರಿ ಪಟ್ಟಣಕ್ಕೆ ಲಗ್ಗೆ ಹಾಕಲು ಸುಳ್ಯ, ಸುಬ್ರಹ್ಮಣ್ಯದ ಕಡೆ ಹಿಂದಿರುಗುತ್ತಾರೆ. ಕೂಜುಗೋಡು ಅಪ್ಪಯ್ಯ ಗೌಡ ಮತ್ತು ಕೂಜುಗೋಡು ಮಲ್ಲಪ್ಪ ಗೌಡ ಇವರ ನೇತೃತ್ವದಲ್ಲಿ ಬಿಸಿಲೆ ಘಾಟಿಯ ಮುಖಾಂತರ ರೈತಸೈನ್ಯ ಮಡಿಕೇರಿಯ ಕಡೆ ಸಾಗಿತು. ಬಲಮುರಿಯ ಗುಡ್ಡೆಮನೆ ಅಪ್ಪಯ್ಯ ಗೌಡ ಮಡಿಕೇರಿಗೆ ಮುತ್ತಿಗೆ ಹಾಕಲು ಜನರನ್ನು ಒಟ್ಟು ಸೇರಿಸಲು ಪಾಡಿ ನಾಲ್ಕುನಾಡಿನ ಕಡೆ ತೆರಳಿದರು. ಆದರೆ ಅಷ್ಟು ಹೊತ್ತಿಗಾಗಲೇ ಮೇಜರ್ ಡ್ರಾಯರ್‌ನ ಬೆಟಾಲಿಯನ್‌ ಪಾಂಡವಪುರದಿಂದ ಮಡಿಕೇರಿ ತಲುಪಿಯಾಗಿತ್ತು. ಮಡಿಕೇರಿಯ ಉತ್ತರ ದಿಕ್ಕಿನ ಉಕ್ಕಡದ ಬಳಿ ಉಗ್ರವಾಗಿ ಗುಂಡಿನ ಕಾಳಗ ನಡೆಯಿತು. ಆದರೆ ರೈತಸೇನೆಯ ಕಾದಾಟ ಕೊನೆಗೂ ಫಲಪ್ರದವಾಗಲಿಲ್ಲ. ಗುಡ್ಡೆಮನೆ ಅಪ್ಪಯ್ಯ ಗೌಡ ಮತ್ತಿತರರ ಕೆಚ್ಚೆದೆಯ ಪ್ರತಾಪವು ಸಾಫಲ್ಯವನ್ನು ಪಡೆಯಲಿಲ್ಲ. ಸಂಗ್ರಾಮದಲ್ಲಿ ವೀರೋಚಿತ ಸೋಲು ಎದುರಾಯಿತು. ಅತ್ತ ಮಂಗಳೂರಿನ ಸಹಾಯಕ್ಕೆ ಮುಂಬೈನಿಂದ ಸೈನ್ಯ , ಮದ್ದುಗುಂಡು, ಸಂಗ್ರಾಮ ಸಾಧನಗಳು ಬರುವ ವ್ಯವಸ್ಥೆಯಾಯಿತು. ಸೈನಿಕರನ್ನೂ, ಸಾಮಾನು ಸರಂಜಾಮನ್ನು ಒಯ್ಯಲು ಜಹಜುಗಳು ಸಿದ್ಧವಾದವು. ಧಾರವಾಡ, ಬೆಳಗಾವಿಯಿಂದ ಸೈನ್ಯ ಮಂಗಳೂರಿಗೆ ಹೊರಟವು. ಕೆನರಾ ಸೈನ್ಯಗಳ ನಾಯಕ ಬ್ರಿಗೇಡಿಯರ್ ಅಲನ್‌ಗೆ ಮಂಗಳೂರಿನ ಸಮಾಚಾರ ಹೋಯಿತು. ಕೂಡಲೇ ಕರ್ನಲ್ ಗ್ರೀನ್ ನಾಯಕತ್ವದಲ್ಲಿ ಸೈನ್ಯವನ್ನು ಮಂಗಳೂರಿಗೆ ಕಳುಹಿಸಿಸಲಾಯಿತು. ಮುಂಬೈ ಕಡೆಯಿಂದಲೂ ಸೈನ್ಯ ಬಂತು.

ಇದನ್ನೂ ಓದಿ | Amrit Mahotsav | ದೆಹಲಿ ಕೆಂಪುಕೋಟೆ ಮೇಲೆ ಹಾರಾಡೋದು ಧಾರವಾಡದಲ್ಲಿ ತಯಾರಾದ ಧ್ವಜ!

ಬ್ರಿಟಿಷ್‌ ಮೇಲುಗೈ

ಏಪ್ರಿಲ್ 16ರ ವೇಳೆಗೆ ಬ್ರಿಟಿಷ್ ಅಧಿಕಾರಿಗಳೆಲ್ಲ ಚರ್ಚಿಸಿ ಹೋರಾಟಗಾರರನ್ನು ಎದುರಿಸುವ ನಿಶ್ಚಯ ಮಾಡಿದರು. 1200 ಮಂದಿ ಯುರೋಪಿಯನ್ನರು ಮತ್ತು ಸಿಪಾಯಿಗಳ ನೇತೃತ್ವವನ್ನು ಗ್ರೀನ್ ವಹಿಸಿದ ಮೇಜರ್ ಎವರೆಸ್ಟನೂ ಮುಂಬಯಿ ಸೈನ್ಯದೊಂದಿಗೆ ಬಂದು ಸೇರಿಕೊಂಡ. ಹಲವು ಕಡೆ ಬ್ರಿಟಿಷರ ಸುಸಜ್ಜಿತ ಸೇನೆಗೂ ರೈತಸೈನ್ಯಕ್ಕೂ ನಡುವೆ ಕಾಳಗ ನಡೆಯಿತು. ಭೀಕರ ಕದನವನ್ನು ನಡೆಸಿದರೂ ಹೋರಾಟಗಾರರಿಗೆ ಮಂಗಳೂರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹೀಗೆ ವಿವಿಧ ಪ್ರದೇಶಗಳಲ್ಲಿ ಸೋಲು ಹಿಂಬಾಲಿಸಿತು. ಪ್ರಮುಖ ನಾಯಕರು ಒಬ್ಬೊಬ್ಬರಾಗಿ ಬ್ರಿಟಿಷರ ಸೆರೆಯಾದರು. ಸ್ಥಳೀಯ ಗೇಣಿಕಾರರ ನೆರವಿನಿಂದ ಇಂಗ್ಲಿಷರು ಹೋರಾಟಗಾರರ ವಿರುದ್ಧ ಮೇಲುಗೈ ಸಾಧಿಸಲು ಸಾಧ್ಯವಾಯಿತು. ಪುಟ್ಟಬಸಪ್ಪ ತನ್ನ ಸ್ವಂತ ಊರು ಹೆಮ್ಮನೆಯಲ್ಲಿ ಸೆರೆಯಾದರೆ, ಗುಡ್ಡೆಮನೆ ಅಪ್ಪಯ್ಯ ಗೌಡರನ್ನು ಮಡಿಕೇರಿಯಲ್ಲಿ ವಶಕ್ಕೆ ಪಡೆದುಕೊಳ್ಳಲಾಯಿತು. ಉಪ್ಪಿನಂಗಡಿ ಮಂಜ ಮತ್ತು ಲಕ್ಷ್ಮಪ್ಪ ಬಂಗರಸ ಮಂಗಳೂರಿನಲ್ಲಿ ಬಂಧಿಸಲ್ಪಡುತ್ತಾರೆ. ಈ ನಡುವೆ ಶಿವಮೊಗ್ಗದ ನಗರ ಪ್ರಾಂತದ ಹೋರಾಟಗಾರರ ಬೆಂಬಲದಿಂದ ಮತ್ತೆ ಸೈನ್ಯವನ್ನು ಆಯೋಜಿಸಲು ಹೊರಟಿದ್ದ ಕೆದಂಬಾಡಿ ರಾಮಯ್ಯ ಗೌಡರನ್ನು ಕಾರ್ಕಳದ ಸಮೀಪ ಕಬ್ಬನಾಲೆಯಲ್ಲಿ ಸೆರೆಹಿಡಿಯಲಾಯಿತು.

ಬಿಕರ್ನಕಟ್ಟೆಯಲ್ಲಿ ಗಲ್ಲು

ಕ್ರಿ.ಶ. 1837ರ ಹೋರಾಟಕ್ಕೆ ಸಂಬಂಧಿಸಿದಂತೆ ಒಟ್ಟು 1115 ಜನರನ್ನು ಬಂಧಿಸಲಾಗಿತ್ತು. ಅವರಲ್ಲಿ 12 ಮಂದಿಯನ್ನು ಕೋರ್ಟ್‌ ಮಾರ್ಷಲ್‌ಗೆ ಒಳಪಡಿಸಲಾಯಿತು. ವಿಶೇಷ ಆಯೋಗದ ಮುಂದೆ 54 ಕೇಸು ನಡೆದಿತ್ತು‌, ಅಲ್ಲಿ ಒಟ್ಟು 416 ಜನರ ವಿಚಾರಣೆ ನಡೆಸಲಾಗಿತ್ತು. ಕ್ರಿಮಿನಲ್ ನ್ಯಾಯಾಲಯದಲ್ಲಿ 133 ಜನರ ವಿಚಾರಣೆ ನಡೆಸಲಾಯಿತು. 35 ವಿಚಾರಣಾಧೀನ ಕೈದಿಗಳು ಸೆರೆಮನೆ ವಾಸದಲ್ಲಿದ್ದಾಗಲೇ ಮೃತಪಟ್ಟಿದ್ದರು. ಕೆಲವರನ್ನು ಮುಚ್ಚಳಿಕೆ ಪಡೆದು ಬಿಡಲಾಯಿತು. ಎಲ್ಲ ಬಂದಿಗಳನ್ನು ಸೆರೆಮನೆಯಲ್ಲಿಡಲು ಸೂಕ್ತ ವ್ಯವಸ್ಥೆ ಇರಲಿಲ್ಲ. 1837ರ ಹೋರಾಟದಲ್ಲಿ ಭಾಗವಹಿಸಿದ ಲಕ್ಷ್ಮಪ್ಪ ಬಂಗರಸನನ್ನು 1837ರ ಮೇ 23 ರಂದು, ಉಪ್ಪಿನಂಗಡಿಯ ಮಂಜನನ್ನು ಮೇ 30 ರಂದು ಮತ್ತು ಕಲ್ಯಾಣಸ್ವಾಮಿ ಎಂಬ ಹೆಸರಿನ ಪುಟ್ಟಬಸಪ್ಪನನ್ನು ಜೂನ್ 19ರಂದು ಮಂಗಳೂರಿನ ಬಿಕರ್ನಕಟ್ಟೆಯಲ್ಲಿ ಗಲ್ಲಿಗೇರಿಸಲಾಯಿತು. ಗುಡ್ಡೆಮನೆ ಅಪ್ಪಯ್ಯ ಗೌಡರನ್ನು ಅದೇ ವರ್ಷ ಅಕ್ಟೋಬರ್ 31ರಂದು ಮಡಿಕೇರಿ ಕೋಟೆಯೊಳಗೆ ನೇಣುಗಂಬಕ್ಕೆ ಏರಿಸಲಾಯಿತು.

ಕೆದಂಬಾಡಿ ರಾಮಯ್ಯ ಗೌಡ, ಅವರ ಮಗ ಸಣ್ಣಯ್ಯ ಗೌಡ, ಚೆಟ್ಟಿ ಕುಡಿಯ, ಕುಕ್ಕುನೂರು ಚೆನ್ನಯ್ಯ, ಕೂಜುಗೋಡು ಮಲ್ಲಪ್ಪ ಗೌಡ, ಬೀರಣ್ಣ ಬಂಟ, ಕಾರ್ಯಕಾರ ಸುಬೇದಾರ್ ಕೃಷ್ಣಯ್ಯ, ಗುಡ್ಡೆಮನೆ ತಮ್ಮಯ್ಯ ಮೊದಲಾದವರನ್ನು ಪ್ರಾಣಿಗಳಂತೆ ಬೋನಿನಲ್ಲಿ ತುಂಬಿಸಿ ಸಿಂಗಾಪುರ, ಬರ್ಮಾ ಮುಂತಾದ ಸಮುದ್ರದಾಚೆಗಿನ ಊರುಗಳಿಗೆ ಸಾಗಹಾಕಿ ಜೀವನದುದ್ದಕ್ಕೂ ಕೈಕಾಲುಗಳಿಗೆ ಕೋಳ ತೊಡಿಸಿ ಪ್ರಖರವಾದ ಶಿಕ್ಷೆಯನ್ನು ಕೊಟ್ಟು ಅವರ ಶವವೂ ದೊರಕದಂತೆ ನೋವು ನೀಡಲಾಯಿತು. ಉಳುವಾರು ಕೃಷ್ಣ, ಗೌಡಳ್ಳಿ ಸುಬ್ಬಪ್ಪು, ಕುಕ್ಕೆಟ್ಟಿ ಸುಬ್ಬ, ಶೇಕ್, ದೇರಾಜೆ ಬಚ್ಚ ಪಟೇಲ, ನೆಡುಂಪಳ್ಳಿ ದೇವಪ್ಪ ರೈ, ಗುಂಡ್ಲ ಸುಬ್ಬಪ್ಪ ಮತ್ತು ಇತರ ಕೆಲವರಿಗೆ ಜೀವಾವಧಿ ಶಿಕ್ಷೆ ನೀಡಲಾಗಿತ್ತು. ಇನ್ನು ಹಲವು ಮಂದಿಗೆ 14 ವರ್ಷ, 10 ವರ್ಷ ಮತ್ತು 7 ವರ್ಷಗಳ ಕಾರಾಗೃಹವಾಸದ ಶಿಕ್ಷೆಯನ್ನು ವಿಧಿಸಲಾಗಿತ್ತು. ಮಾನ್ಯದ ರಂಗಪ್ಪ ರಣರಂಗದಲ್ಲಿ ಮೃತ ಪಟ್ಟರೆ, ಚೆರಂಜಿ ಸುಬ್ರಾಯ ಗಾಯಾಳುವಾಗಿ ಸೆರೆ ಸಿಕ್ಕಿ ಜೈಲಿನಲ್ಲಿಯೇ ಮೃತಪಟ್ಟಿದ್ದರು.

ಜಮೀನು ಮುಟ್ಟುಗೋಲು

ಹೋರಾಟದ ಅಪ್ರತಿಮ ನಾಯಕ ಕೆದಂಬಾಡಿ ರಾಮಯ್ಯ ಗೌಡರಿಗೆ ಸುಳ್ಯದ ಉಬರಡ್ಕ ಮತ್ತು ಭಾಗಮಂಡಲದ ಚೆಟ್ಟಮಾನಿ ಎರಡು ಸ್ಥಳಗಳಲ್ಲಿ ಮನೆಗಳು ಇದ್ದು, ಅಪಾರ ಪ್ರಮಾಣದ ಜಮೀನುಗಳ ಮಾಲೀಕನಾಗಿದ್ದರು. ಕೊಡಗಿನ ರಾಜಕುಟುಂಬದ ಜತೆ ಇವರಿಗೆ ಉತ್ತಮ ಬಾಂಧವ್ಯವಿತ್ತು. ಅವರ ಒಬ್ಬ ಮಗನ ಹೆಸರು ಸಣ್ಣಯ್ಯ ಗೌಡ, ಮಗಳ ಗಂಡನ ಹೆಸರು ಮಡಿಯಾಲ ತಮ್ಮಯ್ಯ, ಅಣ್ಣ ಕೃಷ್ಣಪ್ಪ ಗೌಡ, ಕೆದಂಬಾಡಿ ರಾಮಯ್ಯ ಗೌಡರ ಕುಟುಂಬದ ಪ್ರತಿಯೊಬ್ಬ ಸದಸ್ಯನೂ ಶಿಕ್ಷೆಗೆ ಈಡಾಗುತ್ತಾರೆ. ಅವರ ಜಮೀನುಗಳನ್ನು ಕಂಪನಿ ಮುಟ್ಟುಗೋಲು ಹಾಕಿಕೊಳ್ಳುತ್ತದೆ.

ತುಳುನಾಡಿನ ಹಳ್ಳಿಯಲ್ಲಿ ಹುಟ್ಟಿ, ಸಾಮ್ರಾಜ್ಯಶಾಹಿ ಬ್ರಿಟಿಷರ ವಿರುದ್ಧ ಪುಟಿದೆದ್ದಿದ್ದ ಅಪ್ರತಿಮ ಹೋರಾಟಗಾರ, ಧೀರೋದಾತ್ತ ನಾಯಕ ಕೆದಂಬಾಡಿ ರಾಮಯ್ಯ ಗೌಡ ಮತ್ತವರ ಕುಟುಂಬ ವರ್ಗವು, ಇಂದಿನ ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳನ್ನು ಸಂಪೂರ್ಣವಾಗಿ, ಉಡುಪಿ ಹಾಗೂ ಕೊಡಗು ಜಿಲ್ಲೆಗಳನ್ನು ಭಾಗಶಃ ಗೆದ್ದಿದ್ದರು. ಈ ಮೂಲಕ ೨ ವಾರಗಳ ಕಾಲ ಬ್ರಿಟಿಷರ ಕಪಿಮುಷ್ಟಿಯಿಂದ ಈ ಭಾಗವನ್ನು ರಕ್ಷಿಸಿದ್ದರು. ಕೊನೆಗೆ ಗುರುತು, ಪರಿಚಯವಿಲ್ಲದ ಕಡಲಾಚೆಗಿನ ಪ್ರದೇಶದಲ್ಲಿ ತಮ್ಮ ಜೀವನದ ಅಂತ್ಯವನ್ನು ಕಾಣುವಂತಾಯಿತು. ಇವರಲ್ಲದೆ ಇನ್ನೂ ಹಲವು ಜನ ನಾಡಿಗಾಗಿ ತ್ಯಾಗ ಮಾಡಿದ್ದಾರೆ.

ಇದನ್ನೂ ಓದಿ | Amrit Mahotsav | ಮುಳುಬಾಗಿಲು ಸ್ವಾಮಿ ಎಂಬ ಕ್ರಾಂತಿಕಾರಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Lok Sabha Election 2024

Lok Sabha Election 2024: ಚಿಕ್ಕಮಗಳೂರಲ್ಲಿ ಬಿಜೆಪಿ ಕಾರ್ಯಕರ್ತರ ಮಧ್ಯೆಯೇ ಮಾರಾಮಾರಿ; ಮುಖಂಡನ ತಲೆಗೆ ಏಟು!

Lok Sabha Election 2024: ಕ್ಕಮಗಳೂರು ತಾಲೂಕಿನ ಉಜ್ಜಿನಿ ಗ್ರಾಮದ ಬಳಿ ಘಟನೆ ನಡೆದಿದೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ಪ್ರವೀಣ್ ಖಾಂಡ್ಯ ಕಾಂಗ್ರೆಸ್‌ನಿಂದ ಬಿಜೆಪಿ ಸೇರ್ಪಡೆಯಾಗಿದ್ದರು. ಆದರೆ, ಲೋಕಸಭಾ ಚುನಾವಣೆಯಲ್ಲಿ ಅವರು ಕಾಂಗ್ರೆಸ್ ಪರ ಮತ ಚಲಾಯಿಸಲು ಮತದಾರರಿಗೆ ಪ್ರೇರೇಪಿಸಿದ್ದಾರೆ ಎಂಬ ವಿಷಯವು ಗಲಾಟೆಗೆ ಕಾರಣವಾಗಿದೆ. ಬಿಜೆಪಿ ಕಾರ್ಯಕರ್ತರು ಹಾಗೂ ಬಿಜೆಪಿ ಮುಖಂಡರು ಆಕ್ರೋಶಗೊಂಡು ಪ್ರವೀಣ್‌ ಬಳಿ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಹೊಡೆದಾಟ ಆಗಿದೆ. ಬಾಳೆಹೊನ್ನೂರು ವ್ಯಾಪ್ತಿಯ ಬೂತ್ ಮಟ್ಟದಲ್ಲಿ ಖಾಂಡ್ಯ ಪ್ರವೀಣ್ ಕಾಂಗ್ರೆಸ್‌ ಪರ ಪ್ರಚಾರ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

VISTARANEWS.COM


on

Lok Sabha Election 2024 Bjp workers clash in Chikmagalur
Koo

ಚಿಕ್ಕಮಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಶುಕ್ರವಾರ (ಏಪ್ರಿಲ್‌ 26) ಮೊದಲ ಹಂತದ ಮತದಾನ (First phase of polling) ಮುಕ್ತಾಯಗೊಂಡಿದೆ. ಆದರೆ, ಚಿಕ್ಕಮಗಳೂರು ತಾಲೂಕಿನ ಉಜ್ಜಿನಿ ಗ್ರಾಮದ ಬಳಿ ಬಿಜೆಪಿ ಕಾರ್ಯಕರ್ತರ ನಡುವೆಯೇ ಮಾರಾಮಾರಿಯಾಗಿದೆ. ಬಿಜೆಪಿ ಮುಖಂಡ ಪ್ರವೀಣ್ ಖಾಂಡ್ಯಾ ಎಂಬುವವರ ಮೇಲೆ ಹಲ್ಲೆಯಾದ ವರದಿಯಾಗಿದೆ.

ಮತದಾನದ ವೇಳೆ ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿಯಾಗಿದ್ದು, ಕೆಲ ಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಬಿಜೆಪಿ ಕಾರ್ಯಕರ್ತರಿಂದಲೇ ಪ್ರವೀಣ್ ಖಾಂಡ್ಯ ಮೇಲೆ ಹಿಗ್ಗಾಮುಗ್ಗ ಥಳಿತವಾಗಿದೆ. ಪ್ರವೀಣ್‌ ತಲೆಗೆ ಏಟಾಗಿದ್ದು, ರಕ್ತ ಸುರಿದಿದೆ. ಕೂಡಲೇ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಏಕೆ ಗಲಾಟೆ?

ಚಿಕ್ಕಮಗಳೂರು ತಾಲೂಕಿನ ಉಜ್ಜಿನಿ ಗ್ರಾಮದ ಬಳಿ ಘಟನೆ ನಡೆದಿದೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ಪ್ರವೀಣ್ ಖಾಂಡ್ಯ ಕಾಂಗ್ರೆಸ್‌ನಿಂದ ಬಿಜೆಪಿ ಸೇರ್ಪಡೆಯಾಗಿದ್ದರು. ಆದರೆ, ಲೋಕಸಭಾ ಚುನಾವಣೆಯಲ್ಲಿ ಅವರು ಕಾಂಗ್ರೆಸ್ ಪರ ಮತ ಚಲಾಯಿಸಲು ಮತದಾರರಿಗೆ ಪ್ರೇರೇಪಿಸಿದ್ದಾರೆ ಎಂಬ ವಿಷಯವು ಗಲಾಟೆಗೆ ಕಾರಣವಾಗಿದೆ. ಬಿಜೆಪಿ ಕಾರ್ಯಕರ್ತರು ಹಾಗೂ ಬಿಜೆಪಿ ಮುಖಂಡರು ಆಕ್ರೋಶಗೊಂಡು ಪ್ರವೀಣ್‌ ಬಳಿ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಹೊಡೆದಾಟ ಆಗಿದೆ.

ಬಾಳೆಹೊನ್ನೂರು ವ್ಯಾಪ್ತಿಯ ಬೂತ್ ಮಟ್ಟದಲ್ಲಿ ಖಾಂಡ್ಯ ಪ್ರವೀಣ್ ಕಾಂಗ್ರೆಸ್‌ ಪರ ಪ್ರಚಾರ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬಿಜೆಪಿ ಕಾರ್ಯಕರ್ತರಾದ ಸೃಜನ್, ಸಚಿನ್, ಅಭಿ, ಶಂಕರ್‌ ಹಲ್ಲೆ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿದೆ.

ಹೃದಯಾಘಾತಕ್ಕೆ ಮೂವರು ಸಾವು

ತುಮಕೂರು/ ಕೊಡಗು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಶುಕ್ರವಾರ (ಏಪ್ರಿಲ್‌ 26) ಮೊದಲ ಹಂತದ ಮತದಾನಕ್ಕೆ (First phase of polling) ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಜನರು ಬಿಸಿಲನ್ನೂ ಲೆಕ್ಕಿಸದೆ ಮತದಾನ ಮಾಡುತ್ತಿದ್ದಾರೆ. ಇದೇ ವೇಳೆ ತುಮಕೂರಿನಲ್ಲಿ ಮತ ಚಲಾಯಿಸಿ ಬಂದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಮತ್ತೊಂದು ಕಡೆ ಕೊಡಗಿನ ವಿರಾಜಪೇಟೆಯಲ್ಲಿಯೂ ಮತದಾನಕ್ಕೆ ಸರತಿ ಸಾಲಿನಲ್ಲಿ ನಿಂತಿದ್ದಾಗ ಹೃದಯಾಘಾತವಾಗಿ ವ್ಯಕ್ತಿಯೊಬ್ಬರು ಇಹಲೋಕ ತ್ಯಜಿಸಿದ್ದಾರೆ.

ತುಮಕೂರಲ್ಲಿ ಹೃದಯಾಘಾತಕ್ಕೆ ವ್ಯಕ್ತಿ ಬಲಿ

ತುಮಕೂರು ನಗರದ ಎಸ್.ಎಸ್.ಪುರಂನಲ್ಲಿ ಮತ ಚಲಾಯಿಸಿ ಮನೆಗೆ ಬಂದಿದ್ದ ರಮೇಶ್ (54) ಎಂಬುವವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

Lok Sabha Election 2024 Two die of heart attack in Tumakuru and Kodagu

ಬಟ್ಟೆ ಅಂಗಡಿ ವ್ಯಾಪಾರಿಯಾಗಿದ್ದ ರಮೇಶ್ ಅವರು ಶುಕ್ರವಾರ ಬೆಳಗ್ಗೆ ನಗರದ ಎಸ್.ಎಸ್. ಪುರಂನಲ್ಲಿರುವ ಎಸ್‌ವಿಕೆ ಸ್ಕೂಲ್‌ನಲ್ಲಿರುವ ಮತಗಟ್ಟೆ ಸಂಖ್ಯೆ 149ರಲ್ಲಿ ಪತ್ನಿಯ ಜತೆ ಹೋಗಿ ಮತ ಚಲಾಯಿಸಿ ಬಂದಿದ್ದರು. ಮನೆಗೆ ಬಂದವರಿಗೆ ತೀವ್ರ ಎದೆ ನೋವು ಬಂದಿದೆ. ಹೀಗಾಗಿ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ಥೆ ಮಾಡಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಕೊಡಗಿನಲ್ಲಿ ಮತದಾನಕ್ಕೆ ನಿಂತಿದ್ದ ವ್ಯಕ್ತಿ ಹೃದಯಾಘಾತಕ್ಕೆ ಬಲಿ

ವೀರಾಜಪೇಟೆ ತಾಲೂಕಿನ ಬಿ.ಶೆಟ್ಟಿಗೇರಿ ಗ್ರಾಮದ ಮತಗಟ್ಟೆ ಸಮೀಪ ಮತ ಹಾಕಲು ಸರತಿ ಸಾಲಿನಲ್ಲಿ ನಿಂತಿದ್ದ ಪದಾರ್ಥಿ ಮನೋಹರ (58) ಎಂಬುವವರು ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ.

Lok Sabha Election 2024 Two die of heart attack in Tumakuru and Kodagu
ಪದಾರ್ಥಿ ಮನೋಹರ

ಆಕ್ಸಿಜನ್‌ ಸಹಾಯದಿಂದ ಮತ ಚಲಾಯಿಸಿದ ಮಹಿಳೆ; ವೋಟು ಹಾಕಿ ಕುಸಿದು ಮೃತಪಟ್ಟ ವೃದ್ಧೆ!

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಶುಕ್ರವಾರ (ಏಪ್ರಿಲ್‌ 26) ಮೊದಲ ಹಂತದ ಮತದಾನ (First phase of polling) ನಡೆಯುತ್ತಿದ್ದು, ಎಲ್ಲರೂ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. ಬೆಂಗಳೂರಿನಲ್ಲಿ ವೃದ್ಧೆಯೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದರೂ, ಆಕ್ಸಿಜನ್‌ ಸಮೇತ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದ್ದಾರೆ. ಇನ್ನು ಮೈಸೂರಿನ ಹುಣಸೂರಿನಲ್ಲಿ ವೃದ್ಧೆಯೊಬ್ಬರು ಮತ ಚಲಾಯಿಸಿ ಮೃತಪಟ್ಟಿದ್ದಾರೆ.

ವೋಟು ಹಾಕಿ ಬಂದು ವೃದ್ಧೆ ನಿಧನ

ಮೈಸೂರು: ಮೈಸೂರು ಲೋಕಸಭಾ ಕ್ಷೇತ್ರದ (Mysore Lok Sabha constituency) ಹುಣಸೂರು ತಾಲೂಕಿನ ತಿಪ್ಪೂರು ಗ್ರಾಮದ ವೃದ್ಧೆಯೊಬ್ಬರು ತಿಪ್ಪೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 172ರಲ್ಲಿ ಮತ ಚಲಾವಣೆ ಮಾಡಿದ್ದಾರೆ. ಮತ ಹಾಕಿ ಹೊರ ಬರುತ್ತಿದ್ದಂತೆ ಅವರು ಕುಸಿದು ಮೃತಪಟ್ಟಿದ್ದಾರೆ.

Lok Sabha Election 2024 Woman casts her vote with the help of oxygen elderly woman dies after casting her vote

ಹುಣಸೂರು ತಾಲೂಕಿನ ತಿಪ್ಪೂರು ಗ್ರಾಮದ ಪುಟ್ಟಮ್ಮ (90) ಮೃತರು. ಇವರು ಪ್ರತಿ ಚುನಾವಣೆಯಂತೆ ಈ ಬಾರಿಯೂ ತಮ್ಮ ಹಕ್ಕನ್ನು ತಪ್ಪದೇ ಚಲಾವಣೆ ಮಾಡಿದ್ದಾರೆ. ಮತ ಹಾಕಿ ಅದೇ ಖುಷಿಯಲ್ಲಿ ವಾಪಸಾಗುತ್ತಿದ್ದಾಗ ದಿಢೀರ್‌ ಕುಸಿದುಬಿದ್ದಿದ್ದು, ಅಲ್ಲಿಯೇ ಮೃತಪಟ್ಟಿದ್ದಾರೆ.

ಆಕ್ಸಿಜನ್ ಸಮೇತ ಹಕ್ಕು ಚಲಾಯಿಸಿದ ವೃದ್ಧೆ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ (Bangalore South Lok Sabha constituency) ಜಯನಗರದಲ್ಲಿ ವೃದ್ಧೆಯೊಬ್ಬರು ಆಕ್ಸಿಜನ್‌ ಸಹಾಯದಿಂದಲೇ ಮತಗಟ್ಟೆಗೆ ಬಂದು ಹಕ್ಕು ಚಲಾವಣೆ ಮಾಡಿದ್ದಾರೆ. 78 ವರ್ಷದ ಕಲಾವತಿ ಎಂಬುವವರೇ ಆಕ್ಸಿಜನ್ ಸಮೇತ ಹಕ್ಕು ಚಲಾಯಿಸಿದ ವೃದ್ಧೆಯಾಗಿದ್ದಾರೆ. ಕಲಾವತಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಇವರನ್ನು ಏಪ್ರಿಲ್‌ 23ರಂದು ಜಯನಗರದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶುಕ್ರವಾರ ಅವರನ್ನು ಆಂಬ್ಯುಲೆನ್ಸ್‌ ಮೂಲಕ ವೈದ್ಯಕೀಯ ಸಿಬ್ಬಂದಿ ಜತೆ ಕರೆತರಲಾಗಿದ್ದು, ಮತ ಚಲಾವಣೆಗೆ ಅವಕಾಶ ಕಲ್ಪಿಸಲಾಗಿತ್ತು. ಕೊನೆಗೂ ಅವರು ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ.

ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ; ಮತ ಹಾಕಲು ಬಂದಿದ್ದ ವೈದ್ಯನಿಂದ ಪ್ರಾಣ ರಕ್ಷಣೆ

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಮೊದಲ ಹಂತದ ಮತದಾನ (First phase of polling) ಪ್ರಕ್ರಿಯೆಗೆ ಚಾಲನೆ ಸಿಕ್ಕಿದ್ದು, ಜೆ.ಪಿ.ನಗರ 8ನೇ ಹಂತದ ಜಂಬೂ ಸವಾರಿ ದಿನ್ನೆಯಲ್ಲಿ ಮತ ಚಲಾಯಿಸಲು ಬಂದ ಮಹಿಳೆಯೊಬ್ಬರಿಗೆ ಹೃದಯ ಸ್ತಂಭನ (cardiac arrest) ಆಗಿದೆ. ಬಳಿಕ ಅಲ್ಲಿಯೇ ಮತ ಚಲಾಯಿಸಲು ಬಂದಿದ್ದರಿಂದ ಅವರ ಜೀವ ಉಳಿದಿದೆ.

ಜೆ.ಪಿ. ನಗರದ 8ನೇ ಹಂತದ ಜಂಬೂ ಸವಾರಿ ದಿನ್ನೆಯಲ್ಲಿ ಮಹಿಳೆಯೊಬ್ಬರು ಮತದಾನ ಮಾಡಲು ಬಂದಿದ್ದಾರೆ. ಅವರು ಆಯಾಸವಾಗಿದೆ ಎಂದು ಮತಗಟ್ಟೆಯಲ್ಲಿ ಇಟ್ಟಿದ್ದ ನೀರು ಕುಡಿಯಲು ಹೋಗಿದ್ದಾರೆ. ಅದೇ ವೇಳೆಗೆ ಅವರು ಕುಸಿದು ಬಿದ್ದಿದ್ದಾರೆ. ಅದೇ ಸಮಯದಲ್ಲಿ ಅಲ್ಲಿಗೆ ಬಂದಿದ್ದ ಬೊಮ್ಮಸಂದ್ರದ ನಾರಾಯಣ ಆರೋಗ್ಯ ಕೇಂದ್ರದ ಮೂತ್ರಪಿಂಡ ತಜ್ಞ ಡಾ. ಗಣೇಶ್ ಶ್ರೀನಿವಾಸ ಪ್ರಸಾದ್ ಅವರು ರಕ್ಷಣೆಗೆ ದಾವಿಸಿದ್ದಾರೆ.

ಇದನ್ನೂ ಓದಿ: Lok Sabha Election 2024: ಚಾಮರಾಜನಗರದಲ್ಲಿ ಮತ ಯಂತ್ರ ಪೀಸ್‌ ಪೀಸ್‌; ಮತಗಟ್ಟೆ ಧ್ವಂಸ, ಲಾಠಿ ಚಾರ್ಜ್‌!

ನಾಡಿಮಿಡಿತವನ್ನು ಪರಿಶೀಲಿಸಿದ ಡಾ. ಗಣೇಶ್ ಶ್ರೀನಿವಾಸ ಪ್ರಸಾದ್, ಪಲ್ಸ್‌ ರೇಟ್‌ ಕಡಿಮೆಯಾಗುತ್ತಿರುವುದನ್ನು ಗಮನಿಸಿದ್ದಾರೆ. ಆ ಸಮಯದಲ್ಲಿ ದೇಹ ಕೂಡ ಯಾವುದೇ ಸ್ಪಂದನೆಯನ್ನು ಮಾಡುತ್ತಿರಲಿಲ್ಲ. ಹೀಗಾಗಿ ಕೂಡಲೇ ಸಿಪಿಆರ್‌ ಮಾಡಿದ್ದು, ಪರಿಸ್ಥಿತಿಯು ಕೊಂಚ ಮಟ್ಟಿಗೆ ಸುಧಾರಿಸುವಂತೆ ಮಾಡಿದ್ದಾರೆ. ಚುನಾವಣಾ ಕರ್ತವ್ಯದಲ್ಲಿದ್ದವರು ಧಾವಿಸಿ ಜ್ಯೂಸ್ ನೀಡಿದ್ದಾರೆ. ಕೂಡಲೇ ಆಂಬ್ಯುಲೆನ್ಸ್‌ಗೆ ಕರೆ ಮಾಡಲಾಗಿದೆ. ಐದು ನಿಮಿಷದೊಳಗೆ ಮತಗಟ್ಟೆ ಬಳಿ ಆಂಬ್ಯುಲೆನ್ಸ್ ಬಂದಿದ್ದು, ಮಹಿಳೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Continue Reading

ಪ್ರಮುಖ ಸುದ್ದಿ

Lok Sabha Election : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಮುಕ್ತಾಯ; ದಾಖಲೆ ಪ್ರಮಾಣದಲ್ಲಿ ಮತ ಚಲಾವಣೆ

ಸಂಜೆ ಐದು ಗಂಟೆಯ ವೇಳೆಗೆ ಶೇ 63.90 ಮತದಾನ ದಾಖಲಾಗಿದ್ದು, ಗರಿಷ್ಠ ಪ್ರಮಾಣದಲ್ಲಿ ಮತ ಚಲಾವಣೆಗೊಂಡಿದೆ. ಆದರೆ ಮತದಾನ ಮುಕ್ತಾಯಗೊಂಡ ಬಳಿಕ ಒಟ್ಟು ಎಷ್ಟು ಪ್ರಮಾಣದಲ್ಲಿ ಮತ ಚಲಾವಣೆಗೊಂಡಿತು ಎಂಬುದರ ಅಂಕಿ ಅಂಶಗಳನ್ನು ಚುನಾವಣಾ ಅಧಿಕಾರಿಗಳು ಇನ್ನೊಂದಿಷ್ಟು ಹೊತ್ತಿನ ಬಳಿಕ ಬಿಡುಗಡೆ ಮಾಡಲಿದ್ದಾರೆ.

VISTARANEWS.COM


on

lok sabha election
Koo

ಬೆಂಗಳೂರು: ದೇಶದಲ್ಲಿ ಎರಡನೇ ಹಂತದ ಹಾಗೂ ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆ (Lok Sabha Election) ಶುಕ್ರವಾರ ಸಂಜೆ (ಏಪ್ರಿಲ್​ 26) 6 ಗಂಟೆಗೆ ಮುಕ್ತಾಯಗೊಂಡಿದೆ. ಬೆಳಗ್ಗೆ ಏಳು ಗಂಟೆಗೆ ಆರಂಭಗೊಂಡ ಮತದಾನ ಪಕ್ರಿಯೆ ಸಂಜೆ 6 ಗಂಟೆಗೆ ಸರಿಯಾಗಿ ಅಂತ್ಯಗೊಂಡಿತು. ನಿಗದಿತ ಸಮಯವಾಗುತ್ತಿದ್ದಂತೆ ಅಧಿಕಾರಿಗಳು ಮತಗಟ್ಟೆಯ ಪ್ರಮುಖ ದ್ವಾರಗಳನ್ನು ಮುಚ್ಚಿದರು. ಸಂಜೆ ಐದು ಗಂಟೆಯ ವೇಳೆಗೆ ಶೇ 63.90 ಮತದಾನ ದಾಖಲಾಗಿದ್ದು, ಗರಿಷ್ಠ ಪ್ರಮಾಣದಲ್ಲಿ ಮತ ಚಲಾವಣೆಗೊಂಡಿದೆ. ಹೀಗಾಗಿ 6 ಗಂಟೆಗೆ ಇನ್ನಷ್ಟು ಮತದಾನವಾಗಿದ್ದು ಪ್ರಮಾಣ ಹೆಚ್ಚಾಗಲಿದೆ. ಮತದಾನ ಮುಕ್ತಾಯಗೊಂಡ ಬಳಿಕ ಒಟ್ಟು ಎಷ್ಟು ಪ್ರಮಾಣದಲ್ಲಿ ಮತ ಚಲಾವಣೆಗೊಂಡಿತು ಎಂಬುದರ ಅಂಕಿ ಅಂಶಗಳನ್ನು ಚುನಾವಣಾ ಅಧಿಕಾರಿಗಳು ಇನ್ನೊಂದಿಷ್ಟು ಹೊತ್ತಿನ ಬಳಿಕ ಬಿಡುಗಡೆ ಮಾಡಲಿದ್ದಾರೆ.

ಇವಿಎಂಗಳಿಗೆ ಸೀಲ್​

ಮತದಾನದ ಸಮಯ ಮುಕ್ತಾಯಗೊಳ್ಳುತ್ತಿದ್ದಂತೆ ಅಧಿಕಾರಿಗಳು ಗೇಟ್​ ಮುಚ್ಚಿದ್ದರು. ಈ ವೇಳೆ ಮೊದಲೇ ಬಂದು ಸರತಿಯಲ್ಲಿ ಸಾಲಿನಲ್ಲಿ ನಿಂತವರಿಗೆ ಮಾತ್ರ ಅವಕಾಶ ನೀಡಲಾಯಿತು. ಕೆಲವರು ಅ ಬಳಿಕ ಬಂದರೂ ಅವರಿಗೆ ಅವಕಾಶ ನೀಡಲು ಹಿರಿಯ ಅಧಿಕಾರಿಗಳು ಒಪ್ಪಲಿಲ್ಲ. ಎಲ್ಲರೂ ಮತ ಚಲಾವಣೆ ಮಾಡಿದ ಬಳಿಕ ಹಿರಿಯ ಅಧಿಕಾರಿಗಳು ಇವಿಎಂ ಯಂತ್ರಗಳಿಗೆ ಸೀಲ್ ಮಾಡಿದರು. ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಅವರು ಮತ ಯಂತ್ರಗಳನ್ನು ಪ್ಯಾಕ್ ಮಾಡಿದರು. ಈ ಮತಪೆಟ್ಟಿಗಳು ಇನ್ನು ಭಾರೀ ಭದ್ರತೆಯೊಂದಿಗೆ ನಿಗದಿತ ಸ್ಟ್ರಾಂಗ್ ರೂಮ್​ಗೆ ರವಾನೆಯಾಗಲಿದೆ.

ಭರ್ಜರಿ ಪ್ರತಿಕ್ರಿಯೆ

ಬೆಂಗಳೂರು ನಗರ ಸೇರಿದಂತೆ ದಕ್ಷಿಣ ಕರ್ನಾಟಕದಲ್ಲಿ ಮುಂಜಾನೆಯಿಂದಲೇ ಜನರು ಅತ್ಯಂತ ಉತ್ಸಾಹದಿಂದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. ಬೇಸಿಗೆ ಬಿಸಿಲು ಹೆಚ್ಚಿರಬಹುದು ಎಂಬ ಕಾರಣಕ್ಕೆ ಮುಂಜಾನೆ ಅವಧಿಯಲ್ಲಿ ಮತಗಟ್ಟೆಗಳ ಬಳಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಕಂಡು ಬಂದರು. ಕೆಲವೊಂದು ಜನನಿಬಿಡ ಮತಗಟ್ಟೆಗಳಲ್ಲಿ 2 ಗಂಟೆಗಳಷ್ಟು ಕಾಲ ಜನ ಮತ ಚಲಾಯಿಸಲು ಸರತಿ ಸಾಲಿನಲ್ಲಿ ನಿಂತಿದ್ದರು.

ಇದನ್ನೂ ಓದಿ: Tejasvi Surya: ಧರ್ಮಾಧಾರಿತ ಮತಯಾಚನೆ; ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕೇಸ್‌

ಬೆಂಗಳೂರು: ರಾಜ್ಯದ 14 ಕ್ಷೇತ್ರಗಳ ಲೋಕಸಭಾ ಚುನಾವಣೆಯ ಮೊದಲ ಹಂತದಲ್ಲಿ ಮತದಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಶುಕ್ರವಾರ ಸಂಜೆ 5 ಗಂಟೆವರೆಗೆ ಶೇ 63.90 ಮತದಾನ ದಾಖಲಾಗಿದೆ. ಮಂಡ್ಯ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚಿನ ಪ್ರಮಾಣದ ಮತದಾನವಾಗಿದ್ದು, ಬೆಂಗಳೂರು ಸೆಂಟ್ರಲ್‌ ಕ್ಷೇತ್ರದಲ್ಲಿ ಅತಿ ಕಡಿಮೆ ವೋಟಿಂಗ್ ದಾಖಲಾಗಿದೆ.

ಮಂಡ್ಯ ಕ್ಷೇತ್ರದಲ್ಲಿ ಶೇ. 74.87, ಉಡುಪಿ-ಚಿಕ್ಕಮಗಳೂರು 72.13, ಹಾಸನ 72.13, ದಕ್ಷಿಣ ಕನ್ನಡ 71.83 ಬೆಂಗಳೂರು ಸೆಂಟ್ರಲ್‌ 48.61 ಮತದಾನವಾಗಿದೆ. ಇನ್ನು ಸಂಜೆ 6 ಗಂಟೆಗೆ ಮತದಾನ ಮುಕ್ತಾಯವಾಗಿದ್ದು, ಕೊನೆಯ ಕ್ಷಣದಲ್ಲಿ ಹಲವು ಕಡೆ ಮತದಾರರು ಓಡೋಡಿ ಬಂದಿದ್ದು ಕಡುಬಂದಿದೆ. ಆದರೆ, ಸಮಯ ಮುಗಿದ ಹಿನ್ನೆಲೆ ಮತದಾನಕ್ಕೆ ಸಿಬ್ಬಂದಿ ಅವಕಾಶ ಮಾಡಿಕೊಟ್ಟಿಲ್ಲ. ಕೆಲವರು ಇನ್ನೂ ಸಮಯವಿತ್ತು ಆದರೂ ತಮ್ಮನ್ನು ಬಿಟ್ಟಿಲ್ಲ ಎಂದು ಆರೋಪಿಸಿರುವುದು ಕಂಡುಬಂದಿದೆ.

ಮಧ್ಯಾಹ್ನ 3 ಗಂಟೆವರೆಗೆ ಶೇ. 50.93 ಮತದಾನ ದಾಖಲಾಗಿತ್ತು. ದಕ್ಷಿಣ ಕನ್ನಡ – 58.76, ಉಡುಪಿ – 57.49, ಮಂಡ್ಯ – 57.44, ತುಮಕೂರು -56.62, ಹಾಸನ – 55.90 ಮತದಾನ ಆಗಿದ್ದು, ಈ ಕ್ಷೇತ್ರದಲ್ಲಿ ಶರವೇಗದಲ್ಲಿ ಮತದಾನ ಮಾಡಿದ್ದರು.

ಕೆಲವೆಡೆ ಬಹಿಷ್ಕಾರ

ಮೂಲ ಸೌಕರ್ಯ ಸೇರಿದಂತೆ ನಾನಾ ಕಾರಣಗಳಿಗೋಸ್ಕರ ಹಲವೆಡೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಪ್ರಸಂಗವೂ ನಡೆಯಿತು.ಸಮಾಧಾನ ಮಾಡಲು ಬಂದ ಅಧಿಕಾರಿಗಳ ಮೇಲೆಯೆ ಗ್ರಾಮಸ್ಥರು ಮುಗಿಬಿದ್ದ ಕಾರಣ ಪೊಲೀಸರ ಲಾಠಿ ಏಟು ತಿನ್ನಬೇಕಾದ ಪ್ರಸಂಗವೂ ಅವರಿಗೆ ಎದುರಾಯಿತು.

ಸೆಲೆಬ್ರಿಟಿಗಳಿಂದ ಮತದಾನ

ಸಿನಿಮಾ, ಉದ್ಯಮ, ಐಟಿ ಸೇರಿದಂತೆ ನಾನಾ ಕ್ಷೇತ್ರಗಳ ಸೆಲೆಬ್ರಿಟಿಗಳು ಕರ್ನಾಟಕದ ನಾನಾ ಮತ ಕ್ಷೇತ್ರಗಳಲ್ಲಿ ಮತದಾನ ಮಾಡಿದ್ದಾರೆ. ಬಹುತೇಕ ಮಂದಿ ಬೆಂಗಳೂರಿನಲ್ಲಿಯೇ ನೆಲೆಸಿರುವ ಕಾರಣ ಹೆಚ್ಚಿನವರು ನಗರದ ಸುತ್ತಲಿನ ಮತಗಟ್ಟೆಗಳಲ್ಲಿ ಕಾಣಿಸಿಕೊಂಡರು. ಅವರೆಲ್ಲರೂ ಮತದಾನ ಮಾಡುವಂತೆ ಕೋರಿಕೊಂಡರು. ತಮ್ಮ ಹಕ್ಕನ್ನು ಚಲಾಯಿಸಲು ಇರುವ ಅದ್ಬುತ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ ಎಂದು ಹೇಳಿದರು.

Continue Reading

ಮಳೆ

Karnataka Weather : ಹಾಟ್‌ ಸಿಟಿಯಾದ ಬೆಂಗಳೂರು; ಇನ್ನು 3 ದಿನಗಳು ಈ ಜಿಲ್ಲೆಗಳು ಕಾದ ಕೆಂಡ

Karnataka Weather Forecast : ಬೆಂಗಳೂರು ನಗರವು ಬಿಸಿಲ ನಗರೀಯಾಗಿ ಮಾರ್ಪಾಟ ಆಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದೆ. ಎಲ್ಲ ಕಾಲದಲ್ಲೂ ಕೂಲ್‌ ಆಗಿದ್ದ ಬೆಂಗಳೂರು ಇದೀಗ ಹಾಟ್‌ ಸಿಟಿಯಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಶಾಖದ ಅಲೆಯ ಎಚ್ಚರಿಕೆ ನೀಡಲಾಗಿದೆ.

VISTARANEWS.COM


on

By

Karnataka weather Forecast
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಹಗುರ ಮಳೆ ನಡುವೆಯೂ (rain News) ಮತ್ತೆ ತಾಪಮಾನ ಏರಿಕೆ ಹಾಗೂ ಶಾಖದ ಅಲೆಗಳ ಎಚ್ಚರಿಕೆಯನ್ನು ಹವಾಮಾನ ಇಲಾಖೆ (Karnataka Weather Forecast) ನೀಡುತ್ತಿದೆ. ಏ.26ರಿಂದ 30ರವರೆಗೆ ಹಲವು ಜಿಲ್ಲೆಗಳಿಗೆ ಹೀಟ್‌ ವೇವ್‌ (Heat Wave) ಅಲರ್ಟ್‌ ನೀಡಲಾಗಿದೆ. ಮುಂದಿನ 5 ದಿನಗಳು ತಾಪಮಾನದಲ್ಲಿ ಏರಿಳಿತ ಉಂಟಾಗಲಿದೆ. ಸಾಮಾನ್ಯಕ್ಕಿಂತ 2-3 ಡಿ.ಸೆ ತಾಪಮಾನ ಏರಿಕೆ ಆಗಲಿದೆ.

ಉತ್ತರ ಕರ್ನಾಟಕಕ್ಕೂ ಸೆಡ್ಡು ಹೊಡೆಯುತ್ತಿರುವ ಬೆಂಗಳೂರು

ರಾಜಧಾನಿ ಬೆಂಗಳೂರಲ್ಲಿ ಬಿಸಿಲಿನ ವಾತಾವರಣವೇ ಮುಂದುವರಿಯಲಿದೆ. ಬೆಳಗಿನ ಸಮಯ ಕೆಲವೊಮ್ಮೆ ಮೋಡ ಕವಿದ ವಾತಾವರಣ ಇದ್ದರೆ ಮಧ್ಯಾಹ್ನದ ನಂತರ ಆಕಾಶವು ನಿರ್ಮಲವಾಗಿರದೆ. ಗರಿಷ್ಠ ಹಾಗೂ ಕನಿಷ್ಟ ಉಷ್ಣಾಂಶವು ಕ್ರಮವಾಗಿ 38 ಹಾಗೂ 23 ಡಿ.ಸೆ ಇರಲಿದೆ. ಕೂಲ್‌ ಆಗಿದ್ದ ಬೆಂಗಳೂರು ನಗರವು ಇದೀಗ ಹಾಟ್‌ ಸಿಟಿಯಾಗಿ ಮಾರ್ಪಾಟ್ಟಿದ್ದು, ಹಳೇಯ ದಾಖಲೆಯನ್ನು ಉಡೀಸ್‌ ಆಗಿದೆ. ಕಳೆದ 12 ವರ್ಷಗಳಲ್ಲೇ ಅತ್ಯಾಧಿಕ ಗರಿಷ್ಠ ಉಷ್ಣಾಂಶ ದಾಖಲಾಗಿದೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ. ಗುರುವಾರ ಹಾಗೂ ಶುಕ್ರವಾರ ಗರಿಷ್ಠ ಉಷ್ಣಾಂಶವು 38ಕ್ಕೆ ಹೋಗಿತ್ತು, ಶನಿವಾರ ಇದೇ ಪರಿಸ್ಥಿತಿ ಮುಂದುವರಿಯಲಿದೆ.

ಏ. 27, 28ರಂದು ಬಾಗಲಕೋಟೆ, ವಿಜಯಪುರ, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ತುಮಕೂರು, ಮಂಡ್ಯ, ಗದಗ, ದಾವಣಗೆರೆ ಮತ್ತು ಚಿತ್ರದುರ್ಗಕ್ಕೆ ಶಾಖದ ಅಲೆಯ ಎಚ್ಚರಿಕೆ ನೀಡಲಾಗಿದೆ.

ರಾಯಚೂರಲ್ಲಿ ಗರಿಷ್ಠ ಉಷ್ಣಾಂಶ ದಾಖಲು

ಬುಧವಾರದಂದು ಕೋಲಾರದಲ್ಲಿ ಸರಾಸರಿ ಕನಿಷ್ಠ ಉಷ್ಣಾಂಶ 20.1 ಡಿಗ್ರಿ ಸೆಲ್ಸಿಯಸ್ ಹಾಗೂ ರಾಯಚೂರು ಜಿಲ್ಲೆಯಲ್ಲಿ ಸರಾಸರಿ ಗರಿಷ್ಠ ಉಷ್ಣಾಂಶ 43.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಉಳಿದಂತೆ ಹಾಸನ ಮತ್ತು ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರದಲ್ಲಿ ಕನಿಷ್ಠ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್‌ನಿಂದ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ರಾಯಚೂರು, ಕಲಬುರಗಿ, ಬೀದರ್, ಕೊಪ್ಪಳ, ಬಾಗಲಕೋಟೆ, ಯಾದಗಿರಿ ಮತ್ತು ಬಳ್ಳಾರಿ, ವಿಜಯಪುರದ ಕೆಲವು ಭಾಗಗಳಲ್ಲಿ ಗರಿಷ್ಠ ತಾಪಮಾನ 42 ಡಿಗ್ರಿ ಸೆಲ್ಸಿಯಸ್ ನಿಂದ 44 ಡಿಗ್ರಿ ಸೆಲ್ಸಿಯಸ್ ವರೆಗೆ ದಾಖಲಾಗಿದೆ.

ಇದನ್ನೂ ಓದಿ: Lok Sabha Election 2024 : ವೋಟ್‌ ಮಾಡಲು ಒಂದೂವರೆ ಲಕ್ಷ ರೂ. ಖರ್ಚು; ಲಂಡನ್‌ನಿಂದ ಮಂಡ್ಯಕ್ಕೆ ಬಂದ ಮಹಿಳೆ

ORS: ಒಆರ್‌ಎಸ್‌ ಜೀವಜಲ; ಯಾರು, ಎಷ್ಟು ಪ್ರಮಾಣದಲ್ಲಿ ಸೇವಿಸಬಹುದು?

ಬಿಸಿಲಿನ ಝಳ (ORS) ನೆತ್ತಿ ಸುಡುವಂತಿದೆ. ತಾಪಮಾನ 40 ಡಿಗ್ರಿ ಸೆ. ಆಚೀಚೆ ಬರುತ್ತಿದ್ದಂತೆ ನಿರ್ಜಲೀಕರಣಕ್ಕೆ ತುತ್ತಾಗದಂತೆ ಕಾಪಾಡಿಕೊಳ್ಳಲು ಹಲವು ಪ್ರಯತ್ನಗಳಲ್ಲಿ ಜನ ನಿರತರಾಗಿರುವುದು ಕಂಡುಬರುತ್ತದೆ. ಅವುಗಳಲ್ಲಿ ಪ್ರಮುಖ ಪೇಯವೆಂದರೆ ಒಆರ್‌ಎಸ್‌ ಅಥವಾ ಓರಲ್‌ ರಿಹೈಡ್ರೇಶನ್‌ ಸೊಲ್ಯೂಶನ್‌.

ದೇಹಕ್ಕೆ ಅಗತ್ಯವಾದ ನೀರು, ಸಕ್ಕರೆ ಮತ್ತು ಲವಣಗಳನ್ನು ಹೊಂದಿರುವ ಈ ದ್ರಾವಣದ ಸೇವನೆಯಿಂದ ನಿರ್ಜಲೀಕರಣಕ್ಕೆ ತುತ್ತಾಗಿ ಪ್ರಾಣಾಪಾಯ ಆಗುವುದರಿಂದ ಪಾರಾಗಬಹುದು. ಆದರೆ ಇದನ್ನು ಯಾರು, ಎಷ್ಟು ಕುಡಿಯಬಹುದು? ಸೆಕೆಗೆ ತತ್ತರಿಸುತ್ತಿರುವ ಈ ದಿನಗಳಲ್ಲಿ ಒಆರ್‌ಎಸ್‌ನಂಥವು ಎಷ್ಟು ಬೇಕಿದ್ದರೂ ಹೊಟ್ಟೆ ಸೇರುತ್ತವೆ. ಆದರೆ ಇದನ್ನು ಎಷ್ಟು ಕುಡಿದರೆ ಸಾಕು ಮತ್ತು ಬೇಕು? ನಿರ್ಜಲೀಕರಣದಿಂದ ಕಳೆದುಕೊಂಡ ಖನಿಜಾಂಶಗಳನ್ನು ಮತ್ತು ನೀರನ್ನು ದೇಹಕ್ಕೆ ಮರಳಿ ಒದಗಿಸಿಕೊಡುವ ವ್ಯವಸ್ಥಿತವಾದ ಮಾರ್ಗವಿದು.

ಬೇಸಿಗೆಯ ತೀವ್ರತೆ ವಿಪರೀತವಾದ ಮೇಲೆ ರಾಜಧಾನಿಯೊಂದರಲ್ಲೇ ಒಆರೆಸ್‌ ಮಾರಾಟ ಶೇ. ೬೦ರಷ್ಟು ಹೆಚ್ಚಿದೆ. ಅದರಲ್ಲೂ ವಾಂತಿ, ಡಯರಿಯಾ, ಸುಸ್ತು ಮತ್ತು ನಿರ್ಜಲೀಕರಣದ ಲಕ್ಷಣಗಳು ಕಾಣುತ್ತಿದ್ದಂತೆ ಒಂದು ಸ್ಯಾಶೆ ಒಆರೆಸ್‌ ನೀರಿಗೆ ಬೆರೆಸಿ ಕುಡಿದರೆ, ಜೀವಕ್ಕೆ ತಂಪಾಗುತ್ತದೆ ಎಂಬುದು ಬಹುತೇಕ ಮಂದಿಗೆ ಅನುಭವಕ್ಕೆ ಬಂದಿದೆ. ಆದರೆ ನಮಗೆ ನಿಜಕ್ಕೂ ಓಆರೆಸ್‌ ಅಗತ್ಯ ಬೀಳುವುದು ಯಾವಾಗ? ಮಧುಮೇಹ ಇದ್ದವರೂ ಇದನ್ನು ಕುಡಿಯಬಹುದೇ? ಮಕ್ಕಳಿಗೂ ಸೂಕ್ತವೇ? ಒಆರೆಸ್‌ ಪುಡಿ ಒಳ್ಳೆಯದೋ ಅಥವಾ ಜ್ಯೂಸ್‌ ರೀತಿಯಲ್ಲಿರುವ ಒಆರೆಸ್ಸೆಲ್‌ ಒಳ್ಳೆಯದೋ?

ors drink

ಏನಿದು ಒಆರ್‌ಎಸ್‌

ರಾಬರ್ಟ್‌ ಕ್ರೇನ್‌ ಎಂಬಾತ ಇದರ ಮಹತ್ವವನ್ನು ತಿಳಿಸಿಕೊಟ್ಟವ. 1960ರ ಸುಮಾರಿಗೆ ವಾಂತಿ, ಅತಿಸಾರದಿಂದ ಆಗುತ್ತಿದ್ದ ಪ್ರಾಣಾಪಾಯಗಳನ್ನು ತಡೆಯುವುದಕ್ಕೆ ಈ ದ್ರಾವಣದ ಸೇವನೆಯನ್ನು ಜಾರಿಗೆ ತರಲಾಗಿತ್ತು. ವಾಂತಿ-ಭೇದಿಯಿಂದ ಆಗುತ್ತಿದ್ದ ನಿರ್ಜಲೀಕರಣ ತಪ್ಪಿಸಲು ರಕ್ತನಾಳಕ್ಕೆ ಗ್ಲೂಕೋಸ್‌ ಕೊಡುವ ಪದ್ಧತಿ ಆಗ ಚಾಲ್ತಿಯಲ್ಲಿತ್ತು. ಆದರೆ ಎಲ್ಲ ಕಡೆಯೂ ಚಿಕಿತ್ಸೆಯನ್ನು ನೀಡಲಾಗುತ್ತಿರಲಿಲ್ಲ. ಆಗ ಒಆರೆಸ್‌ ಎಂಬ ಜೀವಜಲದ ಸೇವನೆ ವರದಾನವಾಗಿ ಪರಿಣಮಿಸಿತ್ತು. ಇದು ಗ್ಲೂಕೋಸ್‌, ಸೋಡಿಯಂ ಕ್ಲೋರೈಡ್‌, ಪೊಟಾಶಿಯಂ ಕ್ಲೋರೈಡ್‌ ಮತ್ತು ಸೋಡಿಯಂ ಸಿಟ್ರೇಟ್‌ಗಳ ಮಿಶ್ರಣವಾಗಿದೆ. ಜೊತೆಗೆ ಜಿಂಕ್‌ ಸಹ ಸೇರಿರುವುದರಿಂದ ವಾಂತಿ- ಅತಿಸಾರದ ಲಕ್ಷಣಗಳ ಉಪಶಮನಕ್ಕೆ ನೆರವಾಗುತ್ತದೆ.

ಯಾವಾಗ ಕುಡಿಯಬೇಕು?

ನಿರ್ಜಲೀಕರಣದ ಪ್ರಾರಂಭಿಕ ಲಕ್ಷಣಗಳು ಗೋಚರವಾಗುತ್ತಿದ್ದಂತೆ ಒಆರೆಸ್‌ ಸೇವನೆಯನ್ನು ಪ್ರಾರಂಭಿಸುವುದು ಸೂಕ್ತ. ಅಂದರೆ ತೀವ್ರ ಬಾಯಾರಿಕೆ. ತುಟಿಗಳೆಲ್ಲ ಒಣಗಿದಂತಾಗುವುದು, ಮೂತ್ರ ಕಡಿಮೆಯಾಗುವುದು, ಮೂತ್ರದ ಬಣ್ಣ ಗಾಢವಾಗುವುದು, ಸುಸ್ತು, ಆಯಾಸ, ತಲೆ ಸುತ್ತುವುದು, ತಲೆಯೊಳಗೆ ನೋವು… ಇಂಥ ಯಾವುದೇ ಅನುಭವಕ್ಕೆ ಬಂದರೂ ಒಆರೆಸ್‌ ಸೇವನೆಯನ್ನು ಆರಂಭಿಸಬಹುದು. ಬಿಸಿಲಿನ ತೀವ್ರತೆ ಸಿಕ್ಕಾಪಟ್ಟೆ ಇರುವ ದಿನಗಳಲ್ಲಿ, ಮನೆಯೊಳಗಿದ್ದರೂ ಸುಸ್ತು, ಆಯಾಸ, ಸಂಕಟ ಕಾಡುತ್ತಿರುವ ಹೊತ್ತಿನಲ್ಲಿ ಒಂದು ಲೋಟ ಒಆರೆಸ್‌ ನೀರು ಕುಡಿಯುವುದು ಜೀವವನ್ನು ತಂಪಾಗಿಸುತ್ತದೆ.

ಎಷ್ಟು ಕುಡಿಯಬೇಕು?

ಇದು ಆ ವ್ಯಕ್ತಿಯ ದೇಹಸ್ಥಿತಿಯನ್ನು ಅವಲಂಬಿಸಿದೆ. ನಿರ್ಜಲೀಕರಣದ ಲಕ್ಷಣಗಳು ಸ್ವಲ್ಪ ಅಥವಾ ಮಧ್ಯಮ ಪ್ರಮಾಣದಲ್ಲಿದ್ದರೆ, ಸುಮಾರು 20-25 ಎಂ.ಎಲ್‌ನಷ್ಟು ಒಆರೆಸ್‌ ದ್ರಾವಣವನ್ನು ಒಮ್ಮೆ ಗುಟುಕರಿಸುವುದು. ಪ್ರತಿ 10-15 ನಿಮಿಷಗಳಿಗೆ ಇದನ್ನೇ ನಿಯಮಿತವಾಗಿ ಮುಂದುವರಿಸುವುದು. ದಾಹ ಕಡಿಮೆಯಾಗಿ, ಬಾಯಿ ಒಣಗುವುದು ನಿಂತು, ಮೂತ್ರ ಹೆಚ್ಚಾಗಿ, ಮೂತ್ರದ ಬಣ್ನ ತಿಳಿಯಾಗಿ, ಸುಸ್ತು ಕಡಿಮೆಯಾಗುವವರೆಗೂ ಇದನ್ನೇ ಮುಂದುವರಿಸಬೇಕು. ಅಗತ್ಯವಿದ್ದರೆ ಇದನ್ನು ದಿನವಿಡೀ ಮಾಡಬಹುದು. ಆದರೆ ನಿರ್ಜಲೀಕರಣ ತೀವ್ರವಾಗಿದ್ದರೆ ಒಆರೆಸ್‌ ಪ್ರಮಾಣ ಹೆಚ್ಚು ಬೇಕಾಗುತ್ತದೆ. ಇದಕ್ಕೆ ವೈದ್ಯರಲ್ಲಿ ಸಲಹೆ ಕೇಳುವುದು ಒಳಿತು.

ಯಾರೆಲ್ಲ ಕುಡಿಯಬಹುದು?

ಬೇಸಿಗೆಯ ಹೊಡೆತ ತೀವ್ರವಾಗಿರುವ ಈ ದಿನಗಳಲ್ಲಿ ಬಹುತೇಕ ಎಲ್ಲರೂ ಇದನ್ನು ಸೇವಿಸಬಹುದು. ಆದರೆ ಹೃದ್ರೋಗಿಗಳು, ಕಿಡ್ನಿ ಸಮಸ್ಯೆ ಇರುವವರು ವೈದ್ಯರ ಸಲಹೆಯನ್ನು ತೆಗೆದುಕೊಳ್ಳಬೇಕು. ಅಗತ್ಯವಿದ್ದಾಗ ಮಧುಮೇಹಿಗಳು ಸಹ ಇದನ್ನು ಸೇವಿಸಬಹುದು. ಆದರೆ ನಿಯಮಿತವಾಗಿ ಸೇವಿಸುವ ಅಗತ್ಯವಿದ್ದರೆ ಸಕ್ಕರೆಯಂಶದ ಮೇಲೆ ಕಣ್ಣಿಡಬೇಕಾಗುತ್ತದೆ. ಹಾಗಾಗಿ ಅವರೂ ವೈದ್ಯರಲ್ಲಿ ಸಮಾಲೋಚನೆ ಮಾಡುವುದು ಕ್ಷೇಮ. ಇದರಿಂದ ಯಾವಾಗ, ಎಷ್ಟು ಕುಡಿಯಬಹುದು ಎಂಬುದು ಸ್ಪಷ್ಟವಾಗುತ್ತದೆ.

Boy Drinking Water from Glass

ಮಕ್ಕಳಿಗೆ ನೀಡಬಹುದೇ?

ಖಂಡಿತ. ಆರು ತಿಂಗಳ ನಂತರದ ಶಿಶುಗಳಿಗೂ ಒಆರೆಸ್‌ನಿಂದ ಅನುಕೂಲವಾಗುತ್ತದೆ. ಬಿಸಿಲ ದಿನಗಳಲ್ಲಿ, 6-24 ತಿಂಗಳ ಮಕ್ಕಳಿಗೆ, ದಿನಕ್ಕೆ 20 ಚಮಚ ಒಆರೆಸ್‌ ನೀಡಬಹುದು. 2-5 ವರ್ಷದ ಮಕ್ಕಳಿಗೆ 40 ಚಮಚ ಒಆರೆಸ್‌ ನೀಡಬಹುದು. 5 ವರ್ಷಕ್ಕೆ ಮೇಲ್ಪಟ್ಟ ಮಕ್ಕಳಿಗೆ ಅವು ಕುಡಿದು ತಡೆಯುವಷ್ಟು ನೀಡಬಹುದು. ವಯಸ್ಕರಿಗಿಂತ ಮಕ್ಕಳೇ ಹೆಚ್ಚು ನಿರ್ಜಲೀಕರಣಕ್ಕೆ ತುತ್ತಾಗುವುದರಿಂದ ಒಆರೆಸ್‌ ದ್ರಾವಣ ಎಳೆಯರ ಪಾಲಿನ ಜೀವಜಲ.

ಯಾವುದು ಒಳ್ಳೆಯದು?

ವಾಂತಿ, ಅತಿಸಾರದಂಥ ತೊಂದರೆ ಇರುವಾಗ ಒಆರ್‌ಎಸ್‌ ಪುಡಿಯೇ ಸೂಕ್ತವಾದದ್ದು. ಅದರ ಮೇಲೆ ನಮೂದಿಸಿರುವ ಪ್ರಮಾಣವನ್ನು ತಪ್ಪದೆ ಪಾಲಿಸಬೇಕು. ಒಆರೆಸೆಲ್‌ನಲ್ಲಿ ಬಣ್ಣ ಮತ್ತು ಸುವಾಸನೆಯನ್ನು ಸೇರಿಸಿರುವ ಸಾಧ್ಯತೆ ಹೆಚ್ಚಿರುವುದರಿಂದ, ಚಿಕಿತ್ಸೆಗೆ ಪುಡಿಯೇ ಸೂಕ್ತ. ಹಾಗಲ್ಲದೆ ಬೇಸಿಗೆಯ ಹೊಡೆತ ತಡೆಯುವಾಗ, ಸಾಮಾನ್ಯ ಸುಸ್ತು, ಆಯಾಸಗಳ ಪರಿಹಾರಕ್ಕಾದರೆ ಯಾವುದನ್ನಾದರೂ ಬಳಸಬಹುದು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

Lok Sabha Election 2024: ಸಂಜೆ 5 ಗಂಟೆವರೆಗೆ ಶೇ.63.90 ಮತದಾನ; ಮಂಡ್ಯ ಕ್ಷೇತ್ರದಲ್ಲಿ ಗರಿಷ್ಠ!

Lok Sabha Election 2024: ರಾಜ್ಯದಲ್ಲಿ 14 ಲೋಕಸಭಾ ಕ್ಷೇತ್ರಗಳ ಪೈಕಿ ಮಂಡ್ಯ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಪ್ರಮಾಣದ ಮತದಾನವಾಗಿದ್ದು, ಬೆಂಗಳೂರು ಸೆಂಟ್ರಲ್‌ ಕ್ಷೇತ್ರದಲ್ಲಿ ಅತಿ ಕಡಿಮೆ ವೋಟಿಂಗ್ ದಾಖಲಾಗಿದೆ.

VISTARANEWS.COM


on

Lok Sabha Election 2024
Koo

ಬೆಂಗಳೂರು: ರಾಜ್ಯದ 14 ಕ್ಷೇತ್ರಗಳ ಲೋಕಸಭಾ ಚುನಾವಣೆಯ (Lok Sabha Election 2024) ಮೊದಲ ಹಂತದಲ್ಲಿ ಮತದಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಶುಕ್ರವಾರ ಸಂಜೆ 5 ಗಂಟೆವರೆಗೆ ಶೇ 63.90 ಮತದಾನ ದಾಖಲಾಗಿದೆ. ಮಂಡ್ಯ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚಿನ ಪ್ರಮಾಣದ ಮತದಾನವಾಗಿದ್ದು, ಬೆಂಗಳೂರು ಸೆಂಟ್ರಲ್‌ ಕ್ಷೇತ್ರದಲ್ಲಿ ಅತಿ ಕಡಿಮೆ ವೋಟಿಂಗ್ ದಾಖಲಾಗಿದೆ.

ಮಂಡ್ಯ ಕ್ಷೇತ್ರದಲ್ಲಿ ಶೇ. 74.87, ಉಡುಪಿ-ಚಿಕ್ಕಮಗಳೂರು 72.13, ಹಾಸನ 72.13, ದಕ್ಷಿಣ ಕನ್ನಡ 71.83 ಬೆಂಗಳೂರು ಸೆಂಟ್ರಲ್‌ 48.61 ಮತದಾನವಾಗಿದೆ. ಇನ್ನು ಸಂಜೆ 6 ಗಂಟೆಗೆ ಮತದಾನ ಮುಕ್ತಾಯವಾಗಿದ್ದು, ಕೊನೆಯ ಕ್ಷಣದಲ್ಲಿ ಹಲವು ಕಡೆ ಮತದಾರರು ಓಡೋಡಿ ಬಂದಿದ್ದು ಕಡುಬಂದಿದೆ. ಆದರೆ, 6 ಗಂಟೆ ವೇಳೆಗೆ ಸಾಲಿನಲ್ಲಿ ನಿಂತವರಿಗೆ ಮಾತ್ರ ಅವಕಾಶ ನೀಡಿದ್ದು, ನಂತರ ಬಂದವರಿಗೆ ಮತದಾನ ಮಾಡಲು ಬಿಟ್ಟಿಲ್ಲ. ಸಮಯ ಮುಗಿದ ಹಿನ್ನೆಲೆ ಮತದಾನಕ್ಕೆ ಸಿಬ್ಬಂದಿ ಅವಕಾಶ ಮಾಡಿಕೊಟ್ಟಿಲ್ಲ. ಕೆಲವರು ಇನ್ನೂ ಸಮಯವಿತ್ತು ಆದರೂ ತಮ್ಮನ್ನು ಬಿಟ್ಟಿಲ್ಲ ಎಂದು ಆರೋಪಿಸಿರುವುದು ಕಂಡುಬಂದಿದೆ.

ಮಧ್ಯಾಹ್ನ 3 ಗಂಟೆವರೆಗೆ ಶೇ. 50.93 ಮತದಾನ

ಮಧ್ಯಾಹ್ನ 3 ಗಂಟೆವರೆಗೆ ಶೇ. 50.93 ಮತದಾನ ದಾಖಲಾಗಿತ್ತು. ದಕ್ಷಿಣ ಕನ್ನಡ – 58.76, ಉಡುಪಿ – 57.49, ಮಂಡ್ಯ – 57.44, ತುಮಕೂರು -56.62, ಹಾಸನ – 55.90 ಮತದಾನ ಆಗಿದ್ದು, ಈ ಕ್ಷೇತ್ರದಲ್ಲಿ ಶರವೇಗದಲ್ಲಿ ಮತದಾನ ಮಾಡಿದ್ದರು.

Continue Reading
Advertisement
Lok Sabha Election 2024 Bjp workers clash in Chikmagalur
Lok Sabha Election 20249 mins ago

Lok Sabha Election 2024: ಚಿಕ್ಕಮಗಳೂರಲ್ಲಿ ಬಿಜೆಪಿ ಕಾರ್ಯಕರ್ತರ ಮಧ್ಯೆಯೇ ಮಾರಾಮಾರಿ; ಮುಖಂಡನ ತಲೆಗೆ ಏಟು!

lok sabha election
ಪ್ರಮುಖ ಸುದ್ದಿ35 mins ago

Lok Sabha Election : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಮುಕ್ತಾಯ; ದಾಖಲೆ ಪ್ರಮಾಣದಲ್ಲಿ ಮತ ಚಲಾವಣೆ

Karnataka weather Forecast
ಮಳೆ49 mins ago

Karnataka Weather : ಹಾಟ್‌ ಸಿಟಿಯಾದ ಬೆಂಗಳೂರು; ಇನ್ನು 3 ದಿನಗಳು ಈ ಜಿಲ್ಲೆಗಳು ಕಾದ ಕೆಂಡ

Lok Sabha Election 2024
ಕರ್ನಾಟಕ51 mins ago

Lok Sabha Election 2024: ಸಂಜೆ 5 ಗಂಟೆವರೆಗೆ ಶೇ.63.90 ಮತದಾನ; ಮಂಡ್ಯ ಕ್ಷೇತ್ರದಲ್ಲಿ ಗರಿಷ್ಠ!

Flower Crown Trend
ಫ್ಯಾಷನ್1 hour ago

Flower Crown Trend: ಬಣ್ಣಬಣ್ಣದ ಫಂಕಿ ಫ್ಲವರ್‌ ಕ್ರೌನ್‌ಗೆ ಯುವತಿಯರು ಫಿದಾ

Rinku Singh
ಕ್ರೀಡೆ1 hour ago

Rinku Singh : ಹಠ ಹಿಡಿದು ಕೊಹ್ಲಿಯಿಂದ ಮತ್ತೊಂದು ಬ್ಯಾಟ್ ಪಡೆದುಕೊಂಡ ರಿಂಕು ಸಿಂಗ್​​

Tejasvi Surya
ಕರ್ನಾಟಕ1 hour ago

Tejasvi Surya: ಧರ್ಮಾಧಾರಿತ ಮತಯಾಚನೆ; ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕೇಸ್‌

Lok Sabha Election 2024 Two die of heart attack in Tumakuru and Kodagu
Lok Sabha Election 20242 hours ago

Lok Sabha Election 2024: ಹೃದಯಾಘಾತಕ್ಕೆ 3 ಬಲಿ; ಮೈಸೂರು, ತುಮಕೂರಿನಲ್ಲಿ ಮತ ಹಾಕಿದ್ದ, ಕೊಡಗಲ್ಲಿ ವೋಟ್‌ ಹಾಕಲು ನಿಂತಿದ್ದವ ಸಾವು!

Lok Sabha Election 2024 Anant Nag outrage against non-voters
ಸ್ಯಾಂಡಲ್ ವುಡ್2 hours ago

Lok Sabha Election 2024: ಮತ ಹಾಕದವರನ್ನು ಮತ ಪಟ್ಟಿಯಿಂದ ತೆಗೆದುಹಾಕಬೇಕು: ಅನಂತ್ ನಾಗ್ ಸಲಹೆಗೆ ಏನಂತೀರಿ?

Healthcare Tips For Women
ಆರೋಗ್ಯ2 hours ago

Healthcare Tips For Women: 30 ವರ್ಷದ ಬಳಿಕ ಮಹಿಳೆಯರು ಮಾಡಿಸಿಕೊಳ್ಳಲೇಬೇಕಾದ ಆರೋಗ್ಯ ಪರೀಕ್ಷೆಗಳಿವು

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election 2024 congress booth agent allegation for Fake voting in Hassan Lok Sabha constituency
ಹಾಸನ7 hours ago

Lok Sabha Election 2024: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ! ಏನಿದು ಕಾಂಗ್ರೆಸ್‌ ಬೂತ್‌ ಏಜೆಂಟ್‌ ಆರೋಪ?

Lok Sabha Election 2024 Woman suffers cardiac arrest at polling booth Doctor who came to cast his vote saved life
Lok Sabha Election 20248 hours ago

Lok Sabha Election 2024: ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ; ಮತ ಹಾಕಲು ಬಂದಿದ್ದ ವೈದ್ಯನಿಂದ ಪ್ರಾಣ ರಕ್ಷಣೆ

Lok Sabha Election 2024 Youth Congress protest
Lok Sabha Election 20248 hours ago

Lok Sabha Election 2024 : ಮತಗಟ್ಟೆ ಬಳಿ ಚೆಂಬು, ಗ್ಯಾಸ್ ಸಿಲಿಂಡರ್ ಪ್ರದರ್ಶಿಸಿದ ಯೂತ್‌ ಕಾಂಗ್ರೆಸ್‌

Dina bhavishya
ಭವಿಷ್ಯ14 hours ago

Dina Bhavishya : ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರ

Neha Murder Case in hubblli
ಹುಬ್ಬಳ್ಳಿ1 day ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ1 day ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

Neha Murder case CID Officer
ಹುಬ್ಬಳ್ಳಿ1 day ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

Lok sabha election 2024
Lok Sabha Election 20241 day ago

Lok Sabha Election 2024 : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ; ಪ್ರವಾಸಿ ತಾಣಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ

Dina Bhavishya
ಭವಿಷ್ಯ3 days ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

ಟ್ರೆಂಡಿಂಗ್‌