KSRTC Staff : ಹಬ್ಬದ ದಿನ ಕೆಲಸ ಮಾಡಿದ್ರೆ ಡಬಲ್‌ ಧಮಾಕಾ; ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ಗುಡ್ ನ್ಯೂಸ್ Vistara News
Connect with us

ಉದ್ಯೋಗ

KSRTC Staff : ಹಬ್ಬದ ದಿನ ಕೆಲಸ ಮಾಡಿದ್ರೆ ಡಬಲ್‌ ಧಮಾಕಾ; ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ಗುಡ್ ನ್ಯೂಸ್

Double Wages : ಇನ್ನು ಮುಂದೆ ರಾಷ್ಟ್ರೀಯ ರಜಾ ದಿನ ಹಾಗೂ ಹಬ್ಬದ ರಜಾ ದಿನಗಳಂದು ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ (KSRTC Staff) ಹೆಚ್ಚುವರಿ ವೇತನ ಪಾವತಿ ಮಾಡಲಾಗುತ್ತದೆ. ಈ ಸಂಬಂಧ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಆದೇಶ ಹೊರಡಿಸಿದೆ.

VISTARANEWS.COM


on

Ksrtc Driver Conductor
Koo

ಬೆಂಗಳೂರು: ಕೋವಿಡ್‌ ಸೋಂಕು, ಚಾಲಕರ ಸಾಲು ಸಾಲು ಮುಷ್ಕರದಿಂದ ನಷ್ಟವನ್ನು ಅನುಭವಿಸಿದ್ದ ಕೆಎಸ್‌ಆರ್‌ಟಿಸಿ ನಿಗಮವು (KSRTC Staff) ತನ್ನ ಸಿಬ್ಬಂದಿಗೆ ಗುಡ್‌ ನ್ಯೂಸ್‌ವೊಂದನ್ನು ನೀಡಿದೆ. ರಾಷ್ಟ್ರೀಯ ರಜಾ ದಿನ ಹಾಗೂ ಹಬ್ಬದ ರಜಾ ದಿನಗಳಂದು ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ಈ ಹಿಂದಿನಂತೆ ಹೆಚ್ಚುವರಿ ವೇತನ (Double Wages) ಪಾವತಿಸಲು ಮುಂದಾಗಿದೆ.

ಪ್ರಸ್ತುತ ‘ಶಕ್ತಿ ಯೋಜನೆʼಯಿಂದಾಗಿ ಪ್ರಯಾಣಿಕರ ದಟ್ಟಣೆ ಅಧಿಕವಾಗಿದೆ. ಹೀಗಾಗಿ ವಾಹನಗಳ ಸುಗಮ ಕಾರ್ಯಾಚರಣೆಗೆ ಅನುಕೂಲವಾಗುವಂತೆ ಕಳೆದ ಜುಲೈ (2023) ರಿಂದಲೇ ಜಾರಿಗೆ ಬರುವಂತೆ ಆದೇಶಿಸಲಾಗಿದೆ. ರಾಷ್ಟ್ರೀಯ ರಜಾ ದಿನ ಮತ್ತು ನೌಕರರು ಆಯ್ಕೆ ಮಾಡಿಕೊಂಡ ಹಬ್ಬದ ರಜಾ ದಿನಗಳಂದು ಕರ್ತವ್ಯ ನಿರ್ವಹಿಸಿದ ದಿನಗಳಿಗೆ ಕೋವಿಡ್ 19 ಪೂರ್ವದಲ್ಲಿದ್ದಂತೆ ಹೆಚ್ಚುವರಿ ವೇತನವನ್ನು (Double Wages) ಪಾವತಿಸುವಂತೆ ಆದೇಶ ಹೊರಡಿಸಿದೆ.

ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ನಿಗಮದ ಸಾರಿಗೆ ಆದಾಯ ಹಾಗೂ ಇತರೇ ಆದಾಯವು ಕುಂಠಿತವಾಗಿತ್ತು. ಈ ಹಿನ್ನೆಲೆಯಲ್ಲಿ ಸವೇತನ ರಜಾ ದಿನಗಳಂದು ಕರ್ತವ್ಯ ನಿರ್ವಹಿಸಿದ ನೌಕರರಿಗೆ ಹೆಚ್ಚುವರಿ ವೇತನವನ್ನು ಕಡಿತ ಮಾಡಲಾಗಿತ್ತು. ಸವೇತನದ ಬದಲಾಗಿ ಪರಿಹಾರ ರಜೆ ನೀಡಲು ನಿರ್ದೇಶನಗಳನ್ನು ನೀಡಲಾಗಿತ್ತು. ಆ ಬಳಿಕ ಜನದಟ್ಟಣೆ ಹೆಚ್ಚಿರುವ ಪೀಕ್ ಸೀಜನ್‌ಗಳಲ್ಲಿ ವಾಹನಗಳ ಕಾರ್ಯಾಚರಣೆಗೆ ಅನುಕೂಲವಾಗುವಂತೆ ಡಿಸೆಂಬರ್-2022 ರಿಂದ ಜೂನ್-2023 ರ ವರೆಗೆ ಮಾತ್ರ ಸವೇತನ ರಜೆ ಸೌಲಭ್ಯವನ್ನು ವಿಸ್ತರಿಸಲಾಗಿತ್ತು.

ಸದ್ಯ ಮೊದಲಿನಂತೆ ರಜೆ ಬದಲಾಗಿ ಸವೇತನ ನೀಡಲು ಕೆಎಸ್‌ಆರ್‌ಟಿಸಿ ಮುಂದಾಗಿದೆ. ಜತೆಗೆ ಆಯಾ ಡಿಪೋ ಮ್ಯಾನರೇಜರ್‌ಗಳು ಅವಶ್ಯಕತೆಗೆ ಅನುಗುಣವಾಗಿ ಮಾತ್ರ ಸಿಬ್ಬಂದಿಯನ್ನು ಕರ್ತವ್ಯದ ಮೇಲೆ ನಿಯೋಜಿಸುವಂತೆ ಸೂಚನೆ ನೀಡಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

ಉದ್ಯೋಗ

Indian Coast Guard: 290 ನಾವಿಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ, ಅಪ್ಲೈ ದಿನಾಂಕ ವಿಸ್ತರಣೆ

Indian Coast Guard: ಇಂಡಿಯನ್‌ ಕೋಸ್ಟ್‌ ಗಾರ್ಡ್‌(Indian Coast Guard)ಖಾಲಿ ಇರುವ 290 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆನ್‌ ಲೈನ್‌ ಮೂಲಕ ಸೆಪ್ಟಂಬರ್‌ 27ರೊಳಗೆ ಆಸಕ್ತರು ಅರ್ಜಿ ಸಲ್ಲಿಸಬಹುದು.

VISTARANEWS.COM


on

Edited by

coast guard
Koo

ದೇಶಕ್ಕಾಗಿ ಸೇವೆ ಸಲ್ಲಿಸಬೇಕು ಎಂದುಕೊಂಡಿರುವವರಿಗೆ ಇಲ್ಲಿದೆ ಗುಡ್‌ ನ್ಯೂಸ್‌. ಇಂಡಿಯನ್‌ ಕೋಸ್ಟ್‌ ಗಾರ್ಡ್‌(Indian Coast Guard) ಖಾಲಿ ಇರುವ 290 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ನಾವಿಕ(General Duty) 260 ಮತ್ತು ನಾವಿಕ(Domestic Branch) 30 ಹುದ್ದೆಗಳಿವೆ. ಕಡಲ ತೀರದ ರಕ್ಷಣೆಯ ಮೂಲಕ ತಾಯಿ ನಾಡಿಗಾಗಿ ಸೇವೆ ಸಲ್ಲಿಸಲಿರುವ ಅಪೂರ್ವ ಅವಕಾಶ ಇದಾಗಿದೆ. ಈ ಹಿಂದೆ ಆನ್‌ಲೈನ್ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 8 ಕೊನೆಯ ದಿನ ಎಂದು ಹೇಳಲಾಗಿತ್ತಾದರೂ ಇದೀಗ ಸಮಯಾವಕಾಶವನ್ನು ಸೆಪ್ಟಂಬರ್‌ 27ರವರೆಗೆ ವಿಸ್ತರಿಸಲಾಗಿದೆ.

ವಿದ್ಯಾರ್ಹತೆ

ನಾವಿಕ(Domestic Branch) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು Council of Boards of School Education (COBSE) ಮಾನ್ಯತೆ ಪಡೆದ ಮಂಡಳಿಯಿಂದ ಹತ್ತನೇ ತರಗತಿ ಉತ್ತೀರ್ಣರಾಗಿರಬೇಕು ಮತ್ತು +2 ಕೋರ್ಸ್‌ನಲ್ಲಿ ಗಣಿತ ಮತ್ತು ಭೌತಶಾಸ್ತ್ರ ವನ್ನು ಓದಿದವರು ನಾವಿಕ(General Duty) ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರು ಎಂದು ಪ್ರಕಟಣೆ ತಿಳಿಸಿದೆ. ತಮ್ಮ ಹುದ್ದೆಯ ಬಗ್ಗೆ ಪ್ರಾಥಮಿಕ ಜ್ಞಾನ ಹೊಂದಿರುವುದು ಕಡ್ಡಾಯ.

ವೇತನದ ವಿವರ

ನಾವಿಕ(General Duty)-21700-69,100 ರೂ., ನಾವಿಕ(Domestic Branch)-21700-69,100 ರೂ. ವೇತನ ನಿಗದಿ ಪಡಿಸಲಾಗಿದೆ. ಇದಲ್ಲದೆ ಕೋಸ್ಟ್‌ ಗಾರ್ಡ್‌ ತನ್ನ ಸದಸ್ಯರಿಗೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಮತ್ತು ಸಾಹಸಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶವನ್ನೂ ಒದಗಿಸಲಿದೆ.

ಅರ್ಜಿ ಸಲ್ಲಿಸುವವರ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 22 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯಸ್ಸಿನಲ್ಲಿ ರಿಯಾಯಿತಿ ಇದೆ. ಎಸ್‌.ಸಿ. ಮತ್ತು ಎಸ್‌.ಟಿ. ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒ.ಬಿ.ಸಿ. ಅಭ್ಯರ್ಥಿಗಳಿಗೆ 3 ವರ್ಷಗಳ ರಿಯಾಯಿತಿ ಅನ್ವಯವಾಗಲಿದೆ.

ಆಯ್ಕೆ ವಿಧಾನ

ಅಭ್ಯರ್ಥಿಗಳನ್ನು ವಿವಿಧ ಹಂತಗಳ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುವುದು. ಆರಂಭದಲ್ಲಿ ಅಭ್ಯರ್ಥಿಗಳು ಪರೀಕ್ಷೆ ಬರೆಯಬೇಕು. ಅದರಲ್ಲಿ ಉತ್ತೀರ್ಣರಾದವರನ್ನು ಫಿಸಿಕಲ್‌ ಫಿಟ್ನೆಸ್‌ ಪರೀಕ್ಷೆಗೆ ಕರೆಯಲಾಗುತ್ತದೆ. ಇದರಲ್ಲಿ 1.6 ಕಿ.ಮೀ.ಯನ್ನು 7 ನಿಮಿಷಗಳಲ್ಲಿ ತಲುಪಬೇಕು ಮತ್ತು 20 ಸ್ಕ್ವಾಟ್‌ ಅಪ್ಸ್‌, 10 ಪುಶ್‌ ಅಪ್‌ ಮಾಡುವಂತಿರಬೇಕು. ಬಳಿಕ ದಾಖಲೆಗಳ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ ನಡೆಯಲಿದೆ. ಕೊನೆಯ ಹಂತದಲ್ಲಿ ಭಾರತೀಯ ಕೋಸ್ಟ್ ಗಾರ್ಡ್ ಸಂಬಂಧಿತ ಮಂಡಳಿಗಳು, ವಿಶ್ವವಿದ್ಯಾಲಯಗಳು ಮತ್ತು ರಾಜ್ಯ ಸರ್ಕಾರಗಳ ಮೂಲಕ ಎಲ್ಲಾ ಮೂಲ ದಾಖಲೆಗಳ ಸಮಗ್ರ ಪರಿಶೀಲನೆಯನ್ನು ಕೈಗೊಳ್ಳುತ್ತದೆ.

ಅರ್ಜಿ ಶುಲ್ಕ

ಸಾಮಾನ್ಯ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 300 ರೂ. ಪಾವತಿಸಬೇಕು. ಎಸ್‌.ಸಿ. ಮತ್ತು ಎಸ್‌.ಟಿ. ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇಲ್ಲ. ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಬೇಕು. ನೆಟ್‌ ಬ್ಯಾಂಕಿಂಗ್‌, ಕ್ರೆಡಿಟ್‌/ಡೆಬಿಟ್‌ ಕಾರ್ಡ್‌ ಅಥವಾ ಯುಪಿಐ ಮೂಲಕ ಹಣ ಪಾವತಿಸಬಹುದಾಗಿದೆ.

ಇದನ್ನೂ ಓದಿ: Job Alert: ಸರ್ಕಾರಿ ಉದ್ಯೋಗ ಹುಡುಕುತ್ತಿದ್ದೀರಾ? ಇಲ್ಲಿವೆ ಭರಪೂರ ಅವಕಾಶಗಳು

ಹೆಚ್ಚಿನ ಮಾಹಿತಿಗೆ ಇಂಡಿಯಾ ಕೋಸ್ಟ್‌ ಗಾರ್ಡ್ ವೆಬ್‌ ಸೈಟ್‌ ಕ್ಲಿಕ್‌ ಮಾಡಿ. ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ.

Continue Reading

ಉದ್ಯೋಗ

Job Alert: ಸರ್ಕಾರಿ ಉದ್ಯೋಗ ಹುಡುಕುತ್ತಿದ್ದೀರಾ? ಇಲ್ಲಿವೆ ಭರಪೂರ ಅವಕಾಶಗಳು

Job Alert : ಸರ್ಕಾರಿ ಉದ್ಯೋಗ (government job) ಹುಡುಕುವವರಿಗೆ ಗುಡ್‌ನ್ಯೂಸ್‌. ಬ್ಯಾಂಕ್‌‌ (bank) ಸೇರಿ ವಿವಿಧ ಕಡೆಗಳಲ್ಲಿ ಬಾಕಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಆನ್‌ಲೈನ್‌ (online) ಮೂಲಕ ಅರ್ಜಿ ಸಲ್ಲಿಸಬಹುದು.

VISTARANEWS.COM


on

Edited by

job alert
Koo

ನವದೆಹಲಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲೂ ಸರ್ಕಾರಿ ಉದ್ಯೋಗಕ್ಕಿರುವ(Government job) ಬೇಡಿಕೆ ಕಡಿಮೆಯಾಗಿಲ್ಲ. ಅದಲ್ಲಿನ ಭದ್ರತೆ, ಇತರ ಸೌಲಭ್ಯಗಳ ಕಾರಣದಿಂದ ಇಂದಿಗೂ ಯುವ ಜನತೆ ಸರಕಾರಿ ಉದ್ಯೋಗದ ಕಡೆಗೆ ಗಮನ ಹರಿಸುತ್ತಿದೆ. ಅದಕ್ಕೆ ತಕ್ಕಂತೆ ಸದ್ಯ ವಿವಿಧ ಸರಕಾರಿ ಮೂಲಗಳು ಈ ವಾರ ಉದ್ಯೋಗ ಭರ್ತಿ ಮಾಡುವ ನಿಟ್ಟಿನಲ್ಲಿ ನೋಟಿಫಿಕೇಷನ್‌ ಹೊರಡಿಸಿದ್ದು ನೀವು ಅರ್ಜಿ ಸಲ್ಲಿಸಬಹುದಾಗಿದೆ. ಮಧ್ಯಪ್ರದೇಶ ಪಬ್ಲಿಕ್‌ ಸರ್ವಿಸ್‌ ಕಮಿಷನ್‌ (MPPSC), ಐಡಿಬಿಐ(IDBI) ಬ್ಯಾಂಕ್‌ ಸೇರಿದಂತೆ ವಿವಿಧ ಕಡೆಗಳಲ್ಲಿ ಲಭ್ಯವಿರುವ ಉದ್ಯೋಗವಕಾಶಗಳ ಮಾಹಿತಿ ಇಲ್ಲಿದೆ.

MPPSCನಲ್ಲಿ 227 ಹುದ್ದೆ ಖಾಲಿ

ಪಿಸಿಎಸ್‌ (PCS)ಹುದ್ದೆಗಳನ್ನು ಭರ್ತಿ ಮಾಡಲು ಮಧ್ಯ ಪ್ರದೇಶ ಪಬ್ಲಿಕ್‌ ಸರ್ವಿಸ್‌ ಕಮಿಷನ್‌-MPPSC ಈಗಾಗಲೇ ಕಾರ್ಯಾರಂಭಿಸಿದೆ. ಸೆಪ್ಟಂಬರ್‌ 22ರಂದು ನೋಟಿಫಿಕೇಷನ್‌ ಹೊರಡಿಸಿದ್ದು, ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ MPPSCನ ಅಧಿಕೃತ ವೆಬ್‌ ಸೈಟ್‌ mppsc.mp.gov.in. ಭೇಟಿ ನೀಡಿ. ಸೂಚನೆ ಪ್ರಕಾರ ಡಿಸೆಂಬರ್‌ 12ರಂದು ಪರೀಕ್ಷೆ ನಡೆಯಲಿದೆ. ಸುಮಾರು 227 PCS ಹುದ್ದೆಗಳನ್ನು ಭರ್ತಿ ಮಾಡುವುದಾಗಿ MPPSC ತಿಳಿಸಿದೆ. ಮಧ್ಯ ಪ್ರದೇಶದವರು ಮತ್ತು ಇತರ ಯಾವುದೇ ರಾಜ್ಯದವರು ಅರ್ಜಿ ಸಲ್ಲಿಸಬಹುದು. ಯಾವುದೇ ವಿಷಯದಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಲು ಅರ್ಹರು.

UPPSCಯಲ್ಲಿದೆ 2,240 ಹುದ್ದೆಗಳು

ಉತ್ತರ ಪ್ರದೇಶ ಪಬ್ಲಿಕ್‌ ಸರ್ವಿಸ್‌ ಕಮಿಷನ್‌ (UPPSC) ಸ್ಟಾಫ್‌ ನರ್ಸ್‌ ಹುದ್ದೆಗೆ ನೋಂದಣಿ ಮಾಡುವ ದಿನಾಂಕವನ್ನು ವಿಸ್ತರಿಸಿದೆ. ಅಭ್ಯರ್ಥಿಗಳು ಸೆಪ್ಟಂಬರ್‌ 29ರ ತನಕ ಪರೀಕ್ಷೆಗಾಗಿ ನೋಂದಣಿ ಮಾಡಬಹುದಾಗಿದೆ. ಒಟ್ಟು 2,240 ಸ್ಟಾಫ್‌ ನರ್ಸ್‌ ಹುದ್ದೆಗಳನ್ನು ಭರ್ತಿ ಮಾಡುವ ಯೋಜನೆ ಹಾಕಿಕೊಳ್ಳಲಾಗಿದ್ದು ಅದರಲ್ಲಿ 2,069 ಮಹಿಳೆಯರು ಮತ್ತು 171 ಪುರುಷ ನರ್ಸ್‌ಗಳು ಸೇರಿದ್ದಾರೆ. ಅಭ್ಯರ್ಥಿಗಳು uppsc.up.nic.in. ಮೂಲಕ ನೋಂದಣಿ ಮಾಡಿಕೊಳ್ಳಬೇಕು.

BTSCಯಲ್ಲಿ ಖಾಲಿ ಇದೆ 1,279 ಟ್ರೇಡ್‌ ಇನ್‌ಸ್ಟ್ರಕ್ಟರ್ ಹುದ್ದೆ

ಬಿಹಾರ ಟೆಕ್ನಿಕಲ್‌ ಸರ್ವಿಸ್‌ ಕಮಿಷನ್‌(BTSC) ಖಾಲಿ ಇರುವ ಒಟ್ಟು 1,279 ಟ್ರೇಡ್‌ ಇನ್ಟ್ರಕ್ಟರ್‌ ಹುದ್ದೆಗಳ ಭರ್ತಿಗೆ ನೋಟಿಫಿಕೇಷನ್‌ ಹೊರಡಿಸಿದೆ. ಆಸಕ್ತರು ಅಧಿಕೃತ ವೆಬ್‌ ಸೈಟ್‌ btsc.bih.nic.in. ಮೂಲಕ ಅರ್ಜಿ ಸಲ್ಲಿಸಬಹುದು. ಕೊನೆಯ ದಿನಾಂಕ ಅಕ್ಟೋಬರ್‌ 18. ವಿವಿಧ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಬೋಧನೆ ಮಾಡಲು ಇವರನ್ನು ನೇಮಿಸಲಾಗುವುದು. ಅಭ್ಯರ್ಥಿಗಳು ಪದವಿ ಅಥವಾ ಡಿಪ್ಲೋಮಾ ಓದಿರಬೇಕು.

ಇದನ್ನೂ ಓದಿ: Border Roads Organisation : ಗಡಿ ರಸ್ತೆಗಳ ಕಾರ್ಮಿಕರು ಮೃತಪಟ್ಟರೆ ಸರ್ಕಾರಿ ಸೌಲಭ್ಯಗಳು, ಕೇಂದ್ರ ಸರ್ಕಾರದ ಯೋಜನೆ

IDBI ಬ್ಯಾಂಕ್‌ನಲ್ಲಿ 600 ಹುದ್ದೆಗಳು

IDBI ಬ್ಯಾಂಕ್‌ ಜ್ಯೂನಿಯರ್‌ ಅಸಿಸ್ಟೆಂಟ್‌ ಮ್ಯಾನೇಜರ್‌(Grade 0) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಒಟ್ಟು 600 ಹುದ್ದೆಗಳಿದ್ದು, ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ idbibank.in.ಗೆ ಭೇಟಿ ನೀಡಿ ಹೆಸರು ನೋಂದಾಯಿಸಿಕೊಳ್ಳಬೇಕು. ಸೆಪ್ಟಂಬರ್‌ 30 ಹೆಸರು ನೋಂದಾಯಿಸಲು ಕೊನೆಯ ದಿನ. ಪರೀಕ್ಷೆ ಅಕ್ಟೋಬರ್‌ 20ರಂದು ನಡೆಯುವ ಸಾಧ್ಯತೆ ಇದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ಕನಿಷ್ಠ 20 ವರ್ಷ ದಾಟಿರಬೇಕು ಮತ್ತು ಗರಿಷ್ಠ 25 ವರ್ಷದ ಒಳಗಿರಬೇಕು.

Continue Reading

ಉದ್ಯೋಗ

Great Learning Survey: ಭಾರತದ ಐಟಿಯೇತರ ಕ್ಷೇತ್ರದಲ್ಲಿ ಡೇಟಾ ಸೈನ್ಸ್, ಅನಾಲಿಟಿಕ್ಸ್ ಉದ್ಯೋಗ ಹೆಚ್ಚಳ!

Great Learning Survey: ಕಳೆದ ವರ್ಷಕ್ಕೆ ಹೋಲಿಸಿದರೆ ಸ್ವದೇಶೀ ಐಟಿಯೇತರ ಸಂಸ್ಥೆಗಳಲ್ಲಿ ಅನಾಲಿಟಿಕ್ಸ್ ಮತ್ತು ಡೇಟಾ ಸೈನ್ಸ್ ಉದ್ಯೋಗಾವಕಾಶ ಶೇಕಡಾ 20 ರಷ್ಟು ಹೆಚ್ಚಾಗಿದೆ.

VISTARANEWS.COM


on

Edited by

Data Science
Koo

ಬೆಂಗಳೂರು, ಕರ್ನಾಟಕ: ವೃತ್ತಿಪರ ಮತ್ತು ಉನ್ನತ ಶಿಕ್ಷಣ ವಿಭಾಗದಲ್ಲಿ ಪ್ರಮುಖ ಜಾಗತಿಕ ಮುಂದಾಳಾದ ಗ್ರೇಟ್ ಲರ್ನಿಂಗ್(Great Learning), ಭಾರತದಲ್ಲಿ ಅನಾಲಿಟಿಕ್ಸ್ (analytics) ಮತ್ತು ಡೇಟಾ ಸೈನ್ಸ್ (Data Science) ಉದ್ಯೋಗಗಳು 2023ರ ವರದಿಯನ್ನು ಪ್ರಕಟಿಸಿದೆ. ಡೇಟಾ-ಚಾಲಿತ ನಿರ್ಧಾರಗಳು ಸಂಸ್ಥೆಗಳಿಗೆ ಯಾವಾಗಲೂ ಪ್ರಮುಖವಾಗಿದ್ದರೂ, ಡೇಟಾ ಸೈನ್ಸ್ ಮತ್ತು ಅನಾಲಿಟಿಕ್ಸ್ ನಲ್ಲಿರುವ ಒಟ್ಟಾರೆ ಉದ್ಯೋಗಗಳ ಸಂಖ್ಯೆ ಕಳೆದ 12 ತಿಂಗಳುಗಳಲ್ಲಿ ಕುಸಿತವನ್ನು ದಾಖಲಿಸಿದೆ. ಚಾಲ್ತಿಯಲ್ಲಿರುವ ಜಾಗತಿಕ ಸ್ಥೂಲ ಆರ್ಥಿಕ ಅನಿಶ್ಚಿತತೆಯನ್ನು ಒಳಗೊಂಡಂತೆ ಅಂಶಗಳ ಸಂಯೋಜನೆಯು, ವಿಶೇಷವಾಗಿ ಐಟಿ ಉದ್ಯಮದಲ್ಲಿ ಈ ಪಾತ್ರಗಳ ಮೇಲೆ ಪ್ರಭಾವ ಬೀರುತ್ತಿದೆ. ಈ ವಲಯದಲ್ಲಿ ಬದಲಾಗುತ್ತಿರುವ ಉದ್ಯೋಗಗಳ ಅವಕಾಶದ ಕುರಿತು ವರದಿಯು ದೃಷ್ಟಿಕೋನವನ್ನು ನೀಡುತ್ತದೆ ಮತ್ತು ಲಭ್ಯವಿರುವ ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಳ್ಳಲು ವೃತ್ತಿಪರರಿಗೆ ಸಹಾಯ ಮಾಡುತ್ತದೆ. ಹಾಗಾಗಿ, ಕಳೆದ ವರ್ಷಕ್ಕೆ ಹೋಲಿಸಿದರೆ ಸ್ವದೇಶೀ ಐಟಿಯೇತರ ಸಂಸ್ಥೆಗಳಲ್ಲಿ ಅನಾಲಿಟಿಕ್ಸ್ ಮತ್ತು ಡೇಟಾ ಸೈನ್ಸ್‌ ಉದ್ಯೋಗಾವಕಾಶ ಶೇಕಡಾ 20 ರಷ್ಟು ಹೆಚ್ಚಾಗಿದೆ
.
ಈ ವರದಿಯನ್ನು ವಿವಿಧ ಉದ್ಯೋಗ ಸೈಟ್ ಗಳಿಂದ ಡೇಟಾ ಸೈನ್ಸ್ ಮತ್ತು ಅನಾಲಿಟಿಕ್ಸ್ ಗೆ ಸಂಬಂಧಿಸಿದ ಡೇಟಾವನ್ನು ಒಗ್ಗೂಡಿಸುವ ಎಐಎಂ ರಿಸರ್ಚ್ ನಿಂದ ಅಭಿವೃದ್ಧಿಪಡಿಸಲಾಗಿದೆ. 2023 ರಲ್ಲಿ ಬಿ ಎಫ್ ಎಸ್ ಐ ವಲಯ ಅತ್ಯಧಿಕ ಡೇಟಾ ಅನಾಲಿಟಿಕ್ಸ್ ಉದ್ಯೋಗದ ಪಾಲಿನ ಕುರಿತು ವರದಿ ಮಾಡಿದೆ

2023ರಲ್ಲಿ ಬಿ ಎಫ್ ಎಸ್ ಐ ವಲಯ ಭಾರತದ ಡೇಟಾ ಸೈನ್ಸ್ ಮತ್ತು ಅನಾಲಿಟಿಕ್ಸ್ ಉದ್ಯೋಗಗಳ ಏಕೈಕ-ಅತಿದೊಡ್ಡ ಪಾಲನ್ನು ಎಂದರೆ ಒಟ್ಟಾರೆಯಾಗಿ 1/3 ರಷ್ಟು ಉದ್ಯೋಗಗಳಿಗೆ ಸಾಕ್ಷಿಯಾಯಿತು. ಅಪಾಯ ನಿರ್ವಹಣೆ, ವಂಚನೆ ಪತ್ತೆ ಮತ್ತು ಗ್ರಾಹಕ ಸೇವೆಯಂತಹ ಕಾರ್ಯಾಚರಣೆಗಳನ್ನು ಹೆಚ್ಚಿಸಲು ಎಐ/ಎಂಎಲ್ ಮತ್ತು ದೊಡ್ಡ ಡೇಟಾ ಅನಾಲಿಟಿಕ್ಸ್ ನಂತಹ ಹೊಸ ತಂತ್ರಜ್ಞಾನಗಳ ಬಳಕೆಯಿಂದ ಈ ಬೆಳವಣಿಗೆ ದಾಖಲಿಸಲಾಗಿದೆ.

ಪ್ರತಿಯೊಂದು ಕಾರ್ಯದಲ್ಲಿ ಡೇಟಾ ಸೈನ್ಸ್ ಬಳಸುವುದರಿಂದ, ಹಣಕಾಸು ಸಂಸ್ಥೆಗಳು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಹೆಚ್ಚಿನ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಪ್ರಾರಂಭಿಸುತ್ತಿವೆ.

ಐಟಿ ಉದ್ಯೋಗಗಳ ಪಾಲು ಗಮನಾರ್ಹ ಇಳಿಕೆ

ಒಟ್ಟಾರೆ ಡೇಟಾ ಸೈನ್ಸ್ ಮತ್ತು ಅನಾಲಿಟಿಕ್ಸ್ ಉದ್ಯೋಗಗಳಲ್ಲಿ ಐಟಿ ವಲಯದ ಉದ್ಯೋಗಗಳ ಪಾಲು ಕಳೆದ ವರ್ಷದಿಂದ ಗಮನಾರ್ಹ ಇಳಿಕೆ ಕಂಡಿದೆ. ವಿಶೇಷವಾಗಿ ಹೆಚ್ಚಿನ ಸಂಖ್ಯೆಯ ಐಟಿ ವಲಯದ ಕ್ಲಯಂಟ್ ಗಳಿರುವ ಯು ಎಸ್ ಎ ಮತ್ತು ಯುರೋಪ್‌ನಲ್ಲಿ, ಇದು ಜಾಗತಿಕ ಹಿಂಜರಿತದ ಪ್ರವೃತ್ತಿಗಳಿಗೆ ಕಾರಣವೆಂದು ಹೇಳಬಹುದು. ಹಾಗೆಯೇ, 2022 ಕ್ಕೆ ಹೋಲಿಸಿದರೆ ವಿದ್ಯುತ್ ಮತ್ತು ಗೃಹಬಳಕೆಯಲ್ಲಿನ ಉದ್ಯೋಗಗಳು ಒಟ್ಟಾರೆಯಾಗಿ ಶೇಕಡಾವಾರು ಕಡಿಮೆಯಾಗಿದೆ, ಆದರೆ ರೀಟೇಲ್ ಮತ್ತು ಸಿಪಿಜಿ ಹಾಗೂ ಫಾರ್ಮಾ ಮತ್ತು ಆರೋಗ್ಯ ಸೇವೆಗಳಲ್ಲಿ ಈ ವರ್ಷ ಏರಿಕೆಯಾಗಿದೆ.

ಎಂ ಎನ್ ಸಿ ಐಟಿ ಮತ್ತು ಕೆಪಿಓ ಗಳು ಈ ವರ್ಷದ ಉದ್ಯೋಗಗಳಲ್ಲಿ ಇನ್ನೂ ಹೆಚ್ಚಿನ ಪಾಲನ್ನು ಹೊಂದಿವೆ; 2022 ಕ್ಕೆ ಹೋಲಿಸಿದರೆ ದೇಶೀಯ ಐಟಿಯೇತರ ಸಂಸ್ಥೆಗಳು ಉದ್ಯೋಗಾವಕಾಶಗಳಲ್ಲಿ ಹೆಚ್ಚಿನ ಜಿಗಿತ ವರದಿ ಮಾಡಿದೆ

2023ರಲ್ಲಿ ಭಾರತದಲ್ಲಿ ಡೇಟಾ ಸೈನ್ಸ್ ಮತ್ತು ಅನಾಲಿಟಿಕ್ಸ್ ಉದ್ಯೋಗಗಳಿಗೆ ಗರಿಷ್ಠ ಅವಕಾಶಗಳು ಎಂ ಎನ್ ಸಿ ಐಟಿ ಮತ್ತು ಕೆಪಿಓ ಗಳಲ್ಲಿವೆ, ಏಕೆಂದರೆ ಈ ಸಂಸ್ಥೆಗಳು ಸಾಮಾನ್ಯವಾಗಿ ದೊಡ್ಡ ಗ್ರಾಹಕರೊಂದಿಗೆ ಕೆಲಸ ಮಾಡುವುದರಿಂದ, ದೊಡ್ಡ ಪ್ರಮಾಣದ ಡೇಟಾ ನಿರ್ವಹಿಸುತ್ತವೆ. ಆದರೂ, ಮುಖ್ಯವಾಗಿ ಪಾಶ್ಚಿಮಾತ್ಯ ಜಗತ್ತಿನಲ್ಲಿ ಆರ್ಥಿಕ ಹಿಂಜರಿತದ ಕಠಿಣ ಆರ್ಥಿಕ ಸನ್ನಿವೇಶಗಳು ವಲಯದ ಮೇಲೆ ಪರಿಣಾಮ ಬೀರುವುದರಿಂದ ಡೇಟಾ ಉದ್ಯೋಗಗಳ ಪಾಲು ಹಿಂದಿನ ವರ್ಷಕ್ಕಿಂತ ಕಡಿಮೆಯಾಗಿದೆ. ಎಂ ಎನ್ ಸಿ ಐಟಿ ಮತ್ತು ಕೆಪಿಓ ಗಳಲ್ಲಿ ಡೇಟಾ ಮತ್ತು ಅನಾಲಿಟಿಕ್ಸ್ ಉದ್ಯೋಗಾವಕಾಶಗಳು ಹಿಂದಿನ ವರ್ಷ 2022 ಕ್ಕೆ ಹೋಲಿಸಿದರೆ ಶೇಕಡಾ 21 ಅಂಕಗಳಷ್ಟು (ಪಿಪಿ) ಕಡಿಮೆಯಾಗಿದೆ, ದೇಶೀಯ ಐಟಿ ಯೇತರ ಸಂಸ್ಥೆಗಳು ಮತ್ತು ದೇಶೀಯ ಐಟಿ ಮತ್ತು ಕೆಪಿಓ ಸಂಸ್ಥೆಗಳು ಕ್ರಮವಾಗಿ 20 ಪಿಪಿ ಮತ್ತು 8 ಪಿಪಿ ಯಷ್ಟು ಹೆಚ್ಚಾಗಿದೆ.

ಹಿರಿಯ ವೃತ್ತಿಪರರಿಗೆ ಉದ್ಯೋಗ ಕುಸಿತ

ಮಧ್ಯಮ ಹಂತದ ವೃತ್ತಿಪರರಿಗೆ ಲಭ್ಯವಿರುವ ಉದ್ಯೋಗಗಳು ಬೆಳೆಯುತ್ತಿರುವಾಗ, ಹಿರಿಯ ಹಂತದ ವೃತ್ತಿಪರರಿಗೆ ಮುಕ್ತ ಉದ್ಯೋಗಗಳಲ್ಲಿ ಕುಸಿತ ವರದಿಯಾಗಿದೆ. ಡೇಟಾ ಸೈನ್ಸ್ ಮತ್ತು ಅನಾಲಿಟಿಕ್ಸ್ ಉದ್ಯೋಗಗಳ ಸಂಖ್ಯೆಯನ್ನು ಪ್ರಾಥಮಿಕವಾಗಿ 2–5 ವರ್ಷಗಳು ಮತ್ತು 5–7 ವರ್ಷಗಳ ಅನುಭವದ ಆವರಣದಲ್ಲಿ ವೃತ್ತಿಪರರತ್ತ ಕೇಂದ್ರೀಕರಿಸಲಾಗಿದೆ. ಈ ಎರಡು ಮಾಜಿ ಕೆಲಸದ ವರ್ಗಗಳು ಐತಿಹಾಸಿಕವಾಗಿ ಮೆಚ್ಚಿನದ್ದಾಗಿದೆ, ಏಕೆಂದರೆ ಅವುಗಳ ಹೊಂದಾಣಿಕೆ ಮತ್ತು ಹೆಚ್ಚು ಹಿರಿಯ ವಯಸ್ಸಿನ ಗುಂಪುಗಳಿಗೆ ಹೋಲಿಸಿದರೆ ಸಂಸ್ಥೆಗಳಿಗೆ ಕಡಿಮೆ ವೆಚ್ಚ ಉಂಟಾಗುತ್ತದೆ. ಇದಲ್ಲದೇ, ಈ ಆವರಣದಲ್ಲಿ ಬರುವ ವೃತ್ತಿಪರರು ಸಂಬಂಧಿತ ಕೌಶಲ್ಯ ಮತ್ತು ಪ್ರಾಯೋಗಿಕ ಅನುಭವವನ್ನು ಹೊಂದಿದ್ದಾರೆ, ಅವರಿಗೆ ಫ್ರೆಶರ್‌ಗಳ ಮೇಲೆ ಒಂದು ಹಂತ ಹೆಚ್ಚು ನೀಡುತ್ತದೆ. 2022 ರಲ್ಲಿ, 2–5 ವರ್ಷಗಳು ಮತ್ತು 5–7 ವರ್ಷಗಳ ಮಾಜಿ-ಕೆಲಸದ ಆವರಣಕ್ಕೆ ಉದ್ಯೋಗಗಳ ಪಾಲು ಒಂದೇ ಆಗಿತ್ತು. ಅಂದಿನಿಂದ ಎರಡೂ ಗುಂಪುಗಳಲ್ಲಿ ಸ್ಥಾನಗಳಲ್ಲಿ ಹೆಚ್ಚಳ ಕಂಡುಬಂದಿದೆ, 2-5 ವರ್ಷಗಳ ಅನುಭವದ ಆವರಣವು ಆರ್ಥಿಕ ಹಿಂಜರಿತದ ನಡುವೆ ವೆಚ್ಚ ಕಡಿತದ ಕ್ರಮಗಳ ಪರಿಣಾಮವಾಗಿ ಉದ್ಯೋಗಾವಕಾಶದಲ್ಲಿ ಹೆಚ್ಚಿನ ಏರಿಕೆ (13 ಪಿಪಿ) ದಾಖಲಿಸಿದೆ.

ಹೆಚ್ಚುತ್ತಿರುವ ಸಂಸ್ಥೆಗಳ ಆದ್ಯತೆ

ಹೆಚ್ಚು ಅನುಭವೀ ವ್ಯಕ್ತಿಗಳಿಗೆ (7+ ವರ್ಷಗಳು) ಅವಕಾಶಗಳು ಕಡಿಮೆಯಾಗಿದೆ-ಕಠಿಣ ಸ್ಥೂಲ ಆರ್ಥಿಕ ಪರಿಸ್ಥಿತಿಗಳು ಮತ್ತು ಹೊಸದಾಗಿ, ದುಬಾರಿ ನೇಮಕ ಮಾಡುವ ಬದಲು ಆಂತರಿಕವಾಗಿ ತಮ್ಮ ಉದ್ಯೋಗಿಗಳನ್ನು ಹೆಚ್ಚಿಸಲು ಸಂಸ್ಥೆಗಳು ಆದ್ಯತೆ ನೀಡಿವೆ.

ಅನಾಲಿಟಿಕ್ಸ್ ಮತ್ತು ಡೇಟಾ ಸೈನ್ಸ್ ತಜ್ಞರಿಗೆ 6-10 ಎಲ್ ಪಿ ಎ ವೇತನ ಶ್ರೇಣಿಯಲ್ಲಿ ಹೆಚ್ಚು ಸ್ಥಾನಗಳು ಲಭ್ಯವಿದೆ
6–10 ಎಲ್ ಪಿ ಎ ಮತ್ತು 10–15 ಎಲ್ ಪಿ ಎ ನಡುವಿನ ಆದಾಯ ವ್ಯಾಪ್ತಿಯಲ್ಲಿರುವ ಮುಕ್ತ ಡೇಟಾ ಸೈನ್ಸ್ ಮತ್ತು ಅನಾಲಿಟಿಕ್ಸ್ ಉದ್ಯೋಗಗಳು 2023 ರಲ್ಲಿ ಎಲ್ಲಾ ಡೇಟಾ ಸಂಬಂಧಿತ ಉದ್ಯೋಗಗಳಲ್ಲಿ 60% ವರೆಗೆ ಇರುತ್ತವೆ. ಈ ಅಂಕಿಅಂಶವು 2-5 ಮತ್ತು 5-7 ವರ್ಷಗಳ ಅನುಭವ ಹೊಂದಿರುವವರಿಗೆ ಹೆಚ್ಚುತ್ತಿರುವ ಉದ್ಯೋಗಗಳ ಸಂಖ್ಯೆಗೆ ಅನುಗುಣವಾಗಿದೆ. ಈ ವರ್ಷ ಫ್ರೆಶರ್‌ಗಳು ಮತ್ತು ಹೆಚ್ಚು ಅನುಭವಿ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಸಂಸ್ಥೆಗಳು ಉತ್ಸುಕರಾಗಿಲ್ಲ ಎನ್ನುವ ಅಂಶವನ್ನು ಮಾಹಿತಿಯು ಪುನರುಚ್ಚರಿಸುತ್ತದೆ.

ದೇಶದ ಟೆಕ್ ರಾಜಧಾನಿಯಾಗಿರುವ ಬೆಂಗಳೂರು 2022 ರಿಂದ ಸ್ವಲ್ಪ ಕುಸಿತದ ಹೊರತಾಗಿಯೂ ಡೇಟಾ ಸೈನ್ಸ್ ಮತ್ತು ಅನಾಲಿಟಿಕ್ಸ್ ಉದ್ಯೋಗಗಳಲ್ಲಿ ಅತಿದೊಡ್ಡ ಪಾಲನ್ನು ಹೊಂದಿದೆ. ದೆಹಲಿ ಎನ್ ಸಿ ಆರ್‍, ಹೈದರಾಬಾದ್ ಮತ್ತು ಚೆನ್ನೈನಂತಹ ಇತರ ಸ್ಥಳಗಳು ಇತರೆ ಪ್ರತಿಭಾ ಕೇಂದ್ರಗಳತ್ತ ವಲಸೆ ಹೋಗುವುದರಿಂದ ತಮ್ಮ ಪಾಲನ್ನು ಹೆಚ್ಚಿಸಿವೆ. ಬೆಂಗಳೂರು ನಿಧಾನವಾಗಿ ಸಂತೃಪ್ತ ಬಿಂದುವನ್ನು ತಲುಪುತ್ತಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಚೆನ್ನೈನ ಆಟೋಮೋಟಿವ್ ಮತ್ತು ಉತ್ಪಾದನಾ ವಲಯಗಳು ಮತ್ತು ಹೈದರಾಬಾದ್‌ನ ಪ್ರವರ್ಧಮಾನಕ್ಕೆ ಬರುತ್ತಿರುವ ಔಷಧೀಯ ಮತ್ತು ಜೈವಿಕ ತಂತ್ರಜ್ಞಾನ ಉದ್ಯಮ ವಲಯಗಳು ಡೇಟಾ ಚಾಲಿತ ವಿಧಾನಗಳನ್ನು ಅಳವಡಿಸಿಕೊಂಡಿರುವುದರಿಂದ, ಹೆಚ್ಚುವರಿಯಾಗಿ ಡೇಟಾ ಸೈನ್ಸ್ ವೃತ್ತಿಪರರಿಗೆ ಹೆಚ್ಚಿನ ಬೇಡಿಕೆಯನ್ನು ಸೃಷ್ಟಿಸುತ್ತಿವೆ.

ಡೇಟಾ ಸೈನ್ಸ್ ಮತ್ತು ಅನಾಲಿಟಿಕ್ಸ್

ಎಂಬಿಎ ಪದವಿ ಹೆಚ್ಚುತ್ತಿರುವ ಡೇಟಾ ಸೈನ್ಸ್ ಮತ್ತು ಅನಾಲಿಟಿಕ್ಸ್ ಉದ್ಯೋಗಗಳಿಗೆ ಪೂರ್ವ ಅಗತ್ಯತೆಯಾಗಿದೆ, ಇದು ಕ್ಷೇತ್ರದ ಬಲವಾದ ವ್ಯಾಪಾರ ಏಕೀಕರಣವನ್ನು ಎತ್ತಿ ತೋರಿಸುತ್ತದೆ.

ಕಠಿಣ ಆರ್ಥಿಕ ಪರಿಸ್ಥಿತಿಗಳಿಂದಾಗಿ ಕೈಗಾರಿಕೆಗಳಾದ್ಯಂತ ಫ್ರೆಶರ್‌ಗಳ ನೇಮಕಾತಿಯಲ್ಲಿನ ಕುಸಿತದಿಂದ ಇಂಜಿನಿಯರಿಂಗ್ ಪದವಿ ಪಡೆದವರಿಗೆ ಡೇಟಾ ಸೈನ್ಸ್ ವಲಯದಲ್ಲಿ ಖಾಲಿ ಹುದ್ದೆಗಳಲ್ಲಿ ಇಳಿಕೆ ಕಂಡುಬಂದಿದೆ. ಫ್ರೆಶರ್‌ಗಳನ್ನು ನೇಮಿಸಿಕೊಳ್ಳುವುದು ಅತ್ಯಧಿಕ ವೆಚ್ಚದ ವ್ಯವಹಾರವಾಗಿದೆ ಏಕೆಂದರೆ ಸಂಸ್ಥೆಗಳು ಅವರನ್ನು ಯೋಜನೆಗಳಲ್ಲಿ ನಿಯೋಜಿಸುವ ಮೊದಲು ತರಬೇತಿ ನೀಡಬೇಕಾಗುತ್ತದೆ. ಆದರೂ, ಈ ವರ್ಷ ಎಂಬಿಎ ಪದವೀಧರರಿಗೆ ಡೇಟಾ ಸೈನ್ಸ್ ಮತ್ತು ಅನಾಲಿಟಿಕ್ಸ್ ಉದ್ಯೋಗಗಳು ಹೆಚ್ಚಿವೆ ಏಕೆಂದರೆ ಸಂಸ್ಥೆಗಳು ಅಸ್ತಿತ್ವದಲ್ಲಿರುವ ತಂಡಗಳನ್ನು ನಿರ್ವಹಿಸಲು ಕೇವಲ ಡೇಟಾ ಸೈನ್ಸ್ ಕೌಶಲ್ಯಗಳನ್ನು ಮಾತ್ರವಲ್ಲದೇ ವ್ಯವಸ್ಥಾಪಕ ಕೌಶಲ್ಯಗಳನ್ನು ಹೊಂದಿರುವ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಹೆಚ್ಚು ಆಸಕ್ತಿ ವಹಿಸುತ್ತಿವೆ.

ಈ ಸುದ್ದಯನ್ನೂ ಓದಿ: Jio Institute: ಎಐ, ಡೇಟಾ ಸೈನ್ಸ್‌‌ನಲ್ಲಿ ಬೋಧಕರಿಗೆ ಕಾರ್ಯಕ್ರಮ; ಜಿಯೋ ಸಂಸ್ಥೆ ಜತೆ ಕೈಜೋಡಿಸಿದ ಎಐಸಿಟಿಇ

ಗ್ರೇಟ್ ಲರ್ನಿಂಗ್‌ನ ಸಹ-ಸಂಸ್ಥಾಪಕ ಹರಿ ಕೃಷ್ಣನ್ ನಾಯರ್ ಹೀಗೆ ಹೇಳಿದ್ದಾರೆ, “ಭಾರತವು ಜಾಗತಿಕವಾಗಿ ವ್ಯಾಪಾರ ಕಾರ್ಯಾಚರಣೆಗಳನ್ನು ಬೆಂಬಲಿಸುವ ಬೃಹತ್ ಡಿಜಿಟಲ್ ರೂಪಾಂತರದ ಮಧ್ಯದಲ್ಲಿದೆ ಮತ್ತು ಹೆಚ್ಚು ಪರಿಣಾಮಕಾರಿ ವ್ಯಾಪಾರ ಕಾರ್ಯಾಚರಣೆಗಳನ್ನು ಸಾಧಿಸಲು ಡೇಟಾ-ಚಾಲಿತ ನಿರ್ಧಾರಗಳನ್ನು ಅಳವಡಿಸಿಕೊಳ್ಳುವತ್ತ ಪ್ರಮುಖವಾಗಿ ಮುನ್ನಡೆದಿದೆ. ಈ ವರ್ಷದ ವರದಿಯು ಕೆಲವು ಅಚ್ಚರಿಗಳನ್ನು ಹುಟ್ಟುಹಾಕಿದೆ-ಆದರೆ ಒಮ್ಮೆ ಆರ್ಥಿಕತೆ ಮರುಕಳಿಸಿದರೆ, ಭಾರತದಲ್ಲಿ ಡೇಟಾ ಸೈನ್ಸ್ ಮತ್ತು ಅನಾಲಿಟಿಕ್ಸ್ ಉದ್ಯೋಗಗಳು ಮತ್ತಷ್ಟು ಬೆಳೆಯುತ್ತವೆಶಾಗೂ ಹೆಚ್ಚು ವಿಶಿಷ್ಟವಾದ ಉದ್ಯೋಗ ಪ್ರೊಫೈಲ್‌ಗಳನ್ನು ತೆರೆಯುತ್ತವೆ ಎಂದು ನಾವು ನಿರೀಕ್ಷಿಸಬಹುದು. ‘ಭಾರತದಲ್ಲಿ ಅನಾಲಿಟಿಕ್ಸ್ ಮತ್ತು ಡೇಟಾ ಸೈನ್ಸ್ ಉದ್ಯೋಗಗಳು 2023’ ವರದಿಯು ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳಿಗೆ ದೇಶದಲ್ಲಿ ಚಾಲ್ತಿಯಲ್ಲಿರುವ ಉದ್ಯೋಗ ಪ್ರವೃತ್ತಿಗಳ ಬಗ್ಗೆ ಆಳವಾದ ನೋಟವನ್ನು ನೀಡುವ ಮೂಲಕ ತಮ್ಮ ವೃತ್ತಿ ಗುರಿಗಳನ್ನು ಅನುಸರಿಸಲು ಮಾರ್ಗದರ್ಶನ ನೀಡುತ್ತದೆ ಎಂದು ನಾವು ಭಾವಿಸುತ್ತೇವೆ.

Continue Reading

ಉದ್ಯೋಗ

Toyota Kaushalya 2023: ಟೊಯೊಟಾ ಕೌಶಲ್ಯ ಕಾರ್ಯಕ್ರಮದಲ್ಲಿ ಯುವತಿಯರಿಗೆ ಅವಕಾಶ; ತರಬೇತಿಗೆ ಅರ್ಜಿ ಆಹ್ವಾನ

Toyota Kaushalya 2023: ಟೊಯೊಟಾ ತಾಂತ್ರಿಕ ತರಬೇತಿ ಸಂಸ್ಥೆ (ಟಿಟಿಟಿಐ) 2023ನೇ ಸಾಲಿನ ʼಟೊಯೊಟಾ ಕೌಶಲ್ಯ ಕಾರ್ಯಕ್ರಮʼದಲ್ಲಿ ಆಟೋಮೊಬೈಲ್‌ ಸಂಬಂಧಿತ ವಿವಿಧ ಕೋರ್ಸ್‌ಗಳಿಗೆ ಯುವತಿಯರಿಂದ ಅರ್ಜಿ ಆಹ್ವಾನಿಸಿದೆ.

VISTARANEWS.COM


on

Edited by

Young woman undergoing automobile training
Koo

ಬೆಂಗಳೂರು/ರಾಮನಗರ: ‘ಸ್ಕಿಲ್ ಇಂಡಿಯಾʼ ಅಭಿಯಾನವನ್ನು ನಿರಂತರವಾಗಿ ಬೆಂಬಲಿಸುತ್ತಿರುವ ಟೊಯೊಟಾ ತಾಂತ್ರಿಕ ತರಬೇತಿ ಸಂಸ್ಥೆ (ಟಿಟಿಟಿಐ), 2023ನೇ ಸಾಲಿನ ʼಟೊಯೊಟಾ ಕೌಶಲ್ಯ ಕಾರ್ಯಕ್ರಮʼದಲ್ಲಿ (Toyota Kaushalya 2023) ಯುವತಿಯರ ಪ್ರವೇಶಕ್ಕೆ ಅವಕಾಶ ನೀಡಿದೆ. ವಿಶ್ವದರ್ಜೆಯ ತಾಂತ್ರಿಕ ತರಬೇತಿ ನೀಡಿ ಯುವತಿಯರನ್ನು ಸಬಲೀಕರಣಗೊಳಿಸುವುದು ಕಾರ್ಯಕ್ರಮದ ಉದ್ದೇಶವಾಗಿದ್ದು, ಆಸಕ್ತರು ತರಬೇತಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ತರಬೇತಿ ಮಹಾನಿರ್ದೇಶಕರ (ಡಿಜಿಟಿ) ಸಹಯೋಗದೊಂದಿಗೆ ಈ ಕಾರ್ಯಕ್ರಮವು ಕರ್ನಾಟಕದ ಯುವ, ಸೌಲಭ್ಯ ವಂಚಿತ ಮಹಿಳೆಯರಿಗೆ ಆಟೋಮೋಟಿವ್ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಅನನ್ಯ ಅವಕಾಶವನ್ನು ನೀಡುತ್ತದೆ. ಇದಕ್ಕೂ ಮೊದಲು ಜೂನ್ 23ರಂದು ಯುವಕರನ್ನು ತರಬೇತಿಗೆ ಆಹ್ವಾನಿಸಲಾಗಿತ್ತು. ಪ್ರಸ್ತುತ ಈ ಕಾರ್ಯಕ್ರಮವು ಇಲ್ಲಿಯವರೆಗೆ ಶೇ.8ರಷ್ಟು ಯುವತಿಯರಿಗೆ ಅವಕಾಶ ಕಲ್ಪಿಸಿದೆ. 2025ರ ಅಂತ್ಯದ ವೇಳೆಗೆ ಶೇ. 30 ಯುವತಿಯರಿಗೆ ಪ್ರವೇಶ ನೀಡುವ ಗುರಿಯನ್ನು ಹೊಂದಿದೆ.

ಇದನ್ನೂ ಓದಿ | SBI recruitment 2023: ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ ತರಬೇತಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಯುವತಿಯರಿಗೆ ವಿಶ್ವದರ್ಜೆಯ ತಾಂತ್ರಿಕ ತರಬೇತಿ ಒದಗಿಸುವ ಮತ್ತು ಉತ್ತಮ ತಂತ್ರಜ್ಞರಾಗಲು ಅಗತ್ಯವಾದ ಕೌಶಲ್ಯ, ಜ್ಞಾನದೊಂದಿಗೆ ಅವರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿರುವ ಈ ಕಾರ್ಯಕ್ರಮದಲ್ಲಿ ಆಟೋಮೋಟಿವ್ ವೆಲ್ಡ್ ತಂತ್ರಜ್ಞ, ಆಟೋಮೋಟಿವ್ ಪೇಂಟ್ ತಂತ್ರಜ್ಞ, ಆಟೋಮೋಟಿವ್ ಅಸೆಂಬ್ಲಿ ತಂತ್ರಜ್ಞ ಮತ್ತು ಮೆಕಾಟ್ರಾನಿಕ್ಸ್ ತಂತ್ರಜ್ಞಾನದಲ್ಲಿ ವಿಶೇಷ ಕೋರ್ಸ್‌ಗಳಿವೆ.

ಅರ್ಹತಾ ಮಾನದಂಡ

  • 18-22 ವರ್ಷ ವಯಸ್ಸಿನ ಯುವತಿಯರು
  • ಕನಿಷ್ಠ ಶೈಕ್ಷಣಿಕ ಅರ್ಹತೆ: 10ನೇ ತರಗತಿ ತೇರ್ಗಡೆ / 12ನೇ ತರಗತಿ ಉತ್ತೀರ್ಣ ಅಥವಾ ಅನುತ್ತೀರ್ಣ.
  • ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಭಾಷೆಯಲ್ಲಿ ಪ್ರಾವೀಣ್ಯತೆ
  • ಕರ್ನಾಟಕದಲ್ಲಿ ವಾಸವಿರಬೇಕು.
  • ಆಯ್ಕೆಯಾದ ಸ್ಪರ್ಧಿಗಳು ತರಗತಿ ಮತ್ತು ಕೆಲಸದ ಅಭಿವೃದ್ಧಿ ಎರಡನ್ನೂ ಒಳಗೊಂಡಿರುವ ಸಮಗ್ರ ತರಬೇತಿ ಕಾರ್ಯಕ್ರಮದ ಪ್ರಯೋಜನ ಪಡೆಯುತ್ತಾರೆ.
  • ಈ ಕಾರ್ಯಕ್ರಮವು 2.5 ತಿಂಗಳ ತರಗತಿಯ ತರಬೇತಿಯನ್ನು ಒಳಗೊಂಡಿದೆ ಮತ್ತು ನಂತರ 21.5 ತಿಂಗಳ ಶಾಪ್ ಫ್ಲೋರ್ ಪ್ರಾಯೋಗಿಕ ತರಬೇತಿಯನ್ನು ಹೊಂದಿದೆ. ಹೆಚ್ಚುವರಿಯಾಗಿ, ಆಸಕ್ತರಿಗೆ ಒಂದು ವರ್ಷದ ಅಪ್ರೆಂಟಿಸ್‌ಶಿಪ್ ಅವಕಾಶ ಲಭ್ಯವಿದೆ.

ಟೊಯೊಟಾ ಕೌಶಲ್ಯ ಕಾರ್ಯಕ್ರಮದ ಮುಖ್ಯಾಂಶಗಳು

  • ಮೊದಲ ವರ್ಷ ರೂ.14,505 ಮತ್ತು ಎರಡನೇ ವರ್ಷ ರೂ.15,560 ಸ್ಟೈಫಂಡ್.
  • ಇಎಸ್ಐ, ಸಮವಸ್ತ್ರ, ಕ್ಯಾಂಟೀನ್ ಮತ್ತು ಪಿಎಫ್ ಸೌಲಭ್ಯ.
  • 24X7 ಭದ್ರತೆಯೊಂದಿಗೆ ಅತ್ಯಾಧುನಿಕ ಹಾಸ್ಟೆಲ್ ಸೌಲಭ್ಯ
  • ಇನ್ ಡೋರ್ ಮತ್ತು ಔಟ್ ಡೋರ್ ಗೇಮ್ಸ್, ಕಂಪ್ಯೂಟರ್ ಕೊಠಡಿ, ಫಿಟ್ ನೆಸ್ ಕೇಂದ್ರ, ಗ್ರಂಥಾಲಯ, ಕ್ಲಿನಿಕ್ ಮತ್ತು ಕ್ಯಾಂಟೀನ್ ಸೌಲಭ್ಯ.
  • ಕೋರ್ಸ್ ಪೂರ್ಣಗೊಳಿಸುವ ಪ್ರಮಾಣಪತ್ರ, ರಾಷ್ಟ್ರೀಯ ತರಬೇತಿ ಪ್ರಮಾಣಪತ್ರ, ಮತ್ತು ಕೌಶಲ್ಯ ಅಭಿವೃದ್ಧಿ ಪ್ರಮಾಣಪತ್ರ (ಎಎಸ್‌ಡಿಸಿ)
  • ಆಯ್ಕೆ ಪ್ರಕ್ರಿಯೆಯು ನೋಂದಣಿ, ಮುಖಾಮುಖಿ ಸಂದರ್ಶನ, ವೈದ್ಯಕೀಯ ಪರೀಕ್ಷೆಗಳು, ಹಿನ್ನೆಲೆ ಪರಿಶೀಲನೆ, ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಗೆ ಕುಟುಂಬ ಭೇಟಿ ಮತ್ತು ಕಾರ್ಯಕ್ರಮಕ್ಕೆ ಸೇರುವುದನ್ನು ಒಳಗೊಂಡಿರುತ್ತದೆ.

ಟೊಯೊಟಾ ಕೌಶಲ್ಯ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಲು, ನೋಂದಣಿ ಲಿಂಕ್‌ಗೆ ಭೇಟಿ ನೀಡಿ

ಟಿಕೆಎಂನ ಹಿರಿಯ ಉಪಾಧ್ಯಕ್ಷ ಮತ್ತು ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಜಿ.ಶಂಕರ್ ಅವರು ಮಾತನಾಡಿ, “ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಲ್ಲಿ ಕೌಶಲ್ಯ ಹೆಚ್ಚಿಸಲು ಮತ್ತು ಆಟೊಮೊಬೈಲ್ ಕ್ಷೇತ್ರದಲ್ಲಿ ಲಿಂಗ ಸಮಾನತೆಯನ್ನು ಉತ್ತೇಜಿಸುವಲ್ಲಿ ಟಿಟಿಟಿಐ ಒಂದು ದಶಕದಿಂದ ನಿರ್ಣಾಯಕ ಪಾತ್ರ ವಹಿಸಿದೆ. ವಿಶ್ವದರ್ಜೆಯ ತಂತ್ರಜ್ಞರನ್ನು ಸೃಷ್ಟಿಸುವ ಮೂಲಕ, ಸಂಸ್ಥೆಯು ಸುತ್ತಮುತ್ತಲಿನ ಸಮುದಾಯಗಳ ಮೇಲೆ ಪರಿಣಾಮ ಬೀರುವುದಲ್ಲದೆ, ‘ಸ್ಕಿಲ್ ಇಂಡಿಯಾ’ ಎಂಬ ವಿಶಾಲ ರಾಷ್ಟ್ರೀಯ ಕಾರ್ಯಕ್ರಮಕ್ಕೆ ಕೊಡುಗೆ ನೀಡಿದೆ. ಇಲ್ಲಿಯವರೆಗೆ ಸುಮಾರು 1000 ವಿದ್ಯಾರ್ಥಿಗಳು ತಮ್ಮ ಕೌಶಲ್ಯಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಆಟೋಮೊಬೈಲ್‌ ಉದ್ಯಮದ ಬೆಳವಣಿಗೆಗೆ ಅಗತ್ಯವಾದ ಅಂತಾರಾಷ್ಟ್ರೀಯ ಮಾನದಂಡಗಳ ಜ್ಞಾನವನ್ನು ಪಡೆದಿದ್ದಾರೆ. ಅವರ ಯಶಸ್ಸು ವ್ಯಕ್ತಿಗಳನ್ನು ಸಬಲೀಕರಣಗೊಳಿಸುವ ಮತ್ತು ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಉತ್ಕೃಷ್ಟತೆಯನ್ನು ಬೆಳೆಸುವ ಸಂಸ್ಥೆಯ ಸಮರ್ಪಣೆ ಮತ್ತು ಬದ್ಧತೆಗೆ ಸಾಕ್ಷಿಯಾಗಿದೆ ಎಂದು ತಿಳಿಸಿದ್ದಾರೆ.

ಟೊಯೊಟಾ ಕೌಶಲ್ಯ ಕಾರ್ಯಕ್ರಮವು ಯುವತಿಯರ ಪ್ರವೇಶವು ಲಿಂಗ ಸಮಾನತೆಯನ್ನು ಸಾಧಿಸುವ ನಿಟ್ಟಿನಲ್ಲಿ ಒಂದು ಹೆಜ್ಜೆಯಾಗಿದೆ. ಅತ್ಯುತ್ತಮ ಆಟೋಮೊಬೈಲ್ ತರಬೇತಿಯನ್ನು ನೀಡುವ ಮೂಲಕ ಮತ್ತು ಭವಿಷ್ಯಕ್ಕಾಗಿ ಮೌಲ್ಯವನ್ನು ನಿರ್ಮಿಸುವ ಮೂಲಕ ಯುವ ಸಮುದಾಯವನ್ನು ಬೆಳೆಸಲು ಪ್ರಯತ್ನಿಸುತ್ತಿರುವ ಸಮಯದಲ್ಲಿ ನೂತನ ಕಾರ್ಯಕ್ರಮ ಹೊರಹೊಮ್ಮಿದೆ ಎಂದು ಹೇಳಿದ್ದಾರೆ.

ಉದ್ಯೋಗ ಸಾಮರ್ಥ್ಯ ಹೆಚ್ಚಿಸಲು ಅನನ್ಯ ಅವಕಾಶ

ಟಿಟಿಟಿಐ ಅಡಿಯಲ್ಲಿ ಅಭಿವೃದ್ಧಿಪಡಿಸಲಾದ ಟೊಯೊಟಾ ಕೌಶಲ್ಯ ಕಾರ್ಯಕ್ರಮವು ಎರಡು ವರ್ಷಗಳ ಉಚಿತ ವಸತಿ ಕೋರ್ಸ್ ಅನ್ನು ನೀಡುತ್ತದೆ. ಇದು ಯುವ ಸಮುದಾಯಕ್ಕೆ ಉತ್ಪಾದನಾ ಉದ್ಯಮ ಸಂಬಂಧಿತ ಕೌಶಲ್ಯಗಳನ್ನು ಪಡೆಯಲು ಮತ್ತು ಅವರ ಉದ್ಯೋಗ ಸಾಮರ್ಥ್ಯವನ್ನು ಹೆಚ್ಚಿಸಲು ಅನನ್ಯ ಅವಕಾಶವನ್ನು ಒದಗಿಸುತ್ತದೆ. ಈ ಕಾರ್ಯಕ್ರಮವು ಸೈದ್ಧಾಂತಿಕ ಕಲಿಕೆಯನ್ನು ಆನ್-ದಿ-ಜಾಬ್ ತರಬೇತಿ (ಒಜೆಟಿ) ಯೊಂದಿಗೆ ಸಂಯೋಜಿಸುವ ‘ಕಲಿಯಿರಿ ಮತ್ತು ಸಂಪಾದಿಸಿ’ ವಿಧಾನವನ್ನು ಅನುಸರಿಸುತ್ತದೆ.

ತಮ್ಮ ತರಬೇತಿಯ ಸಮಯದಲ್ಲಿ ಈ ಮಹತ್ವಾಕಾಂಕ್ಷಿ ವಿದ್ಯಾರ್ಥಿಗಳು ಆಯಾ ಕ್ಷೇತ್ರಗಳಲ್ಲಿ ಮಾಸ್ಟರ್ ತರಬೇತುದಾರರಾಗಿರುವ ಅನುಭವಿ ಮೇಲ್ವಿಚಾರಕರಿಂದ ಮಾರ್ಗದರ್ಶನ ಪಡೆಯುವ ಭಾಗ್ಯವನ್ನು ಹೊಂದಿದ್ದು, ಗುಣಮಟ್ಟದ ತರಬೇತಿಯನ್ನು ಪಡೆಯುತ್ತಾರೆ. ಕೈಗಾರಿಕಾ ಸಂಸ್ಕೃತಿ ಮತ್ತು ಮಾನದಂಡಗಳಿಗೆ ಅನುಗುಣವಾಗಿ ಪರಿಣತಿಯನ್ನು ಅಭಿವೃದ್ಧಿಪಡಿಸುತ್ತಾರೆ. ಪ್ರಶಿಕ್ಷಣಾರ್ಥಿಗಳಿಗೆ ಉನ್ನತ ಕೌಶಲ್ಯ, ಆಳವಾದ ಜ್ಞಾನ ಮತ್ತು ಆರೋಗ್ಯಕರ ದೇಹ ಮತ್ತು ಮನಸ್ಸಿನ ತರಬೇತಿಯನ್ನು ಸಹ ನೀಡಲಾಗುವುದು.

ಅತ್ಯುತ್ತಮ ಉದ್ಯೋಗಾವಕಾಶ

ಇದಲ್ಲದೆ, ಟೊಯೊಟಾ ತಾಂತ್ರಿಕ ತರಬೇತಿ ಸಂಸ್ಥೆ (ಟಿಟಿಟಿಐ) ಕರ್ನಾಟಕದ ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯ ಶೈಕ್ಷಣಿಕವಾಗಿ ಆಧಾರಿತ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡುವಲ್ಲಿ ಮುಂಚೂಣಿಯಲ್ಲಿದೆ. ಅವರನ್ನು ನುರಿತ ತಂತ್ರಜ್ಞರಾಗಿ ಬೆಳೆಸುವತ್ತ ಗಮನ ಹರಿಸಿದೆ. ಟಿಟಿಟಿಐನ ಪದವೀಧರರು ನಿರಂತರವಾಗಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಪಡೆಯುತ್ತಿದ್ದು, ಕರ್ನಾಟಕ, ಭಾರತ ಮತ್ತು ವಿದೇಶಗಳಲ್ಲಿ ಅತ್ಯುತ್ತಮ ಉದ್ಯೋಗಾವಕಾಶಗಳಿಗೆ ಪ್ರವೇಶ ಪಡೆಯುತ್ತಿದ್ದಾರೆ.

ಇದನ್ನೂ ಓದಿ | Job News : ಅರಣ್ಯ ಇಲಾಖೆಯಲ್ಲಿ 310 ವೀಕ್ಷಕ ಹುದ್ದೆ ಭರ್ತಿ; ಅರ್ಜಿ ಸಲ್ಲಿಕೆ ಹೇಗೆ, ಕೊನೇ ದಿನಾಂಕ ಎಂದು?

ಕೌಶಲ್ಯ ಅಭಿವೃದ್ಧಿ ಕ್ಷೇತ್ರದಲ್ಲಿ ಟಿಟಿಟಿಐನ ಪ್ರಯತ್ನಗಳನ್ನು ಜಪಾನ್ ಇಂಡಿಯಾ ಇನ್ಸ್ಟಿಟ್ಯೂಟ್ ಫಾರ್ ಮ್ಯಾನುಫ್ಯಾಕ್ಚರಿಂಗ್ (ಜೆ.ಐ.ಎಂ) ನಂತಹ ಸಂಸ್ಥೆಗಳು ಗುರುತಿಸಿವೆ. ಇದು ಮೇಕ್ ಇನ್ ಇಂಡಿಯಾ ಮತ್ತು ಸ್ಕಿಲ್ ಇಂಡಿಯಾ ಮಿಷನ್ ಕಾರ್ಯಕ್ರಮಕ್ಕೆ ತನ್ನ ಬದ್ಧತೆಯನ್ನು ಬಲಪಡಿಸುತ್ತದೆ. ತನ್ನ ಅಸ್ತಿತ್ವದ ಅವಧಿಯಲ್ಲಿ ಟಿಟಿಟಿಐ ಹೆಮ್ಮೆಯಿಂದ 950ಕ್ಕೂ ಹೆಚ್ಚು ಪದವೀಧರರು ತಮ್ಮ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಅವರಲ್ಲಿ ಹಲವರು ರಾಷ್ಟ್ರೀಯ ಕೌಶಲ್ಯ ಸ್ಪರ್ಧೆ ಮತ್ತು ವಿಶ್ವ ಕೌಶಲ್ಯ ಸ್ಪರ್ಧೆಯಂತಹ ಗೌರವಾನ್ವಿತ ಸ್ಪರ್ಧೆಗಳಲ್ಲಿ ಗಮನಾರ್ಹ ಸಾಧನೆಗಳನ್ನು ಮಾಡಿದ್ದಾರೆ. ಆ ಮೂಲಕ ರಾಷ್ಟ್ರೀಯ ಹೆಮ್ಮೆಯ ಪ್ರಜ್ಞೆಯನ್ನು ಮೂಡಿಸಿದ್ದಾರೆ.

Continue Reading
Advertisement
Protest demanding release of education subsidy for building construction workers at pavagada
ತುಮಕೂರು26 mins ago

Tumkur News: ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಶೈಕ್ಷಣಿಕ ಸಹಾಯಧನ ಬಿಡುಗಡೆಗೆ ಒತ್ತಾಯಿಸಿ ಪಾವಗಡದಲ್ಲಿ ಪ್ರತಿಭಟನೆ

Sri Raghaveshvarabharati Swamiji pravachan
ಉತ್ತರ ಕನ್ನಡ26 mins ago

Uttara Kannada News: ಮಠಕ್ಕೆ ಗುರು ಎಷ್ಟು ಮುಖ್ಯವೋ ಸಮಾಜಕ್ಕೆ ಗುರಿಕ್ಕಾರರು ಅಷ್ಟೇ ಮುಖ್ಯ: ಶ್ರೀರಾಘವೇಶ್ವರಭಾರತೀ ಸ್ವಾಮೀಜಿ

Hindu Saints protest against Udhayanidhi Stalin at Delhi
ದೇಶ55 mins ago

Sanatan Dharma row: ತಮಿಳುನಾಡು ಸಿಎಂ ಪುತ್ರ ಉದಯನಿಧಿ ವಿರುದ್ಧ ದಿಲ್ಲಿಯಲ್ಲಿ ಸಂತರ ಪ್ರತಿಭಟನೆ, ಕ್ರಮಕ್ಕೆ ಆಗ್ರಹ

Bangalore Bandh Photo
ಕರ್ನಾಟಕ1 hour ago

Bangalore Bandh : ಬೆಂಗಳೂರು ಬಂದ್‌ ಫಿಕ್ಸ್‌; ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಬಸ್‌ ಸಂಚಾರ ಡೌಟ್; ಏನಿರುತ್ತೆ? ಏನಿರಲ್ಲ?‌

Swara Bhasker and Fahad Ahmad With Baby Girl
ದೇಶ2 hours ago

Swara Bhasker: ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಸ್ವರಾ ಭಾಸ್ಕರ್, ಮಗಳ ಹೆಸರು ‘ರಾಬಿಯಾ’

TA Narayana Gowda
ಕರ್ನಾಟಕ2 hours ago

Bangalore Bandh : ಯಾವ ಬಂದ್‌ಗೂ ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲ ಇಲ್ಲ; ನಾರಾಯಣ ಗೌಡ ಘೋಷಣೆ

Uttara Kannada District Incharge Minister Mankalu S Vaidya speech in Janata Darshan programme in Karwar
ಉತ್ತರ ಕನ್ನಡ2 hours ago

Uttara Kannada News: ಜನತಾ ದರ್ಶನದ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ: ಸಚಿವ ಮಂಕಾಳ ವೈದ್ಯ

Minister Zameer Ahmed Khan received the applications from the public at the Janata Darshan program in Hospete
ವಿಜಯನಗರ2 hours ago

Vijayanagara News: ವಿಜಯನಗರದಲ್ಲಿ ಜನತಾ ದರ್ಶನ ಕಾರ್ಯಕ್ರಮಕ್ಕೆ ಸಚಿವ ಜಮೀರ್ ಅಹ್ಮದ್ ಖಾನ್ ಚಾಲನೆ

Ripponpet Govt PU College students selected for state level in sports
ಶಿವಮೊಗ್ಗ2 hours ago

Shivamogga News: ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ರಿಪ್ಪನ್‌ಪೇಟೆ ಸರ್ಕಾರಿ ಪಿಯು ಕಾಲೇಜು ವಿದ್ಯಾರ್ಥಿಗಳು

Protest in Honnali demanding not to release Cauvery water to TamilNadu
ದಾವಣಗೆರೆ2 hours ago

Davanagere News: ತಮಿಳುನಾಡಿಗೆ ಕಾವೇರಿ ನೀರು ಬಿಡದಂತೆ ಒತ್ತಾಯಿಸಿ ಹೊನ್ನಾಳಿಯಲ್ಲಿ ಬೃಹತ್ ಪ್ರತಿಭಟನೆ

7th Pay Commission
ನೌಕರರ ಕಾರ್ನರ್11 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ8 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ4 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Govt employees ssociation
ಕರ್ನಾಟಕ8 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

kpsc recruitment 2023 pdo recruitment 2023
ಉದ್ಯೋಗ2 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Rajendra Singh Gudha
ದೇಶ3 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Village Accountant Recruitment
ಉದ್ಯೋಗ7 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike; Order from Govt
ನೌಕರರ ಕಾರ್ನರ್7 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ9 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

7th Pay Commission
ಕರ್ನಾಟಕ11 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

At the Janata Darshan event MP S Muniswamy MLA SN Narayanaswamy is fighting
ಕರ್ನಾಟಕ5 hours ago

Janata Darshan : ವೇದಿಕೆಯಲ್ಲಿ ಭೂ ಗಲಾಟೆ; ಹೊಡೆದಾಟಕ್ಕೆ ಮುಂದಾದ ಶಾಸಕ-ಸಂಸದ

Davanagere bandh
ಕರ್ನಾಟಕ7 hours ago

Davanagere bandh : ಭದ್ರಾ ನೀರಿಗಾಗಿ ಬೀದಿಗಿಳಿಯಲಿಲ್ಲ ಭತ್ತ ಬೆಳೆಗಾರರು!

HD Devegowda Press meet
ಕರ್ನಾಟಕ9 hours ago

Cauvery water dispute : ಜಲ ಶಕ್ತಿ ಇಲಾಖೆಯಿಂದ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಲಿ, ಮೋದಿ ಮಧ್ಯ ಪ್ರವೇಶಿಸಲಿ: ಎಚ್.ಡಿ. ದೇವೇಗೌಡ

Farmers protest Mundargi bandh
ಕರ್ನಾಟಕ10 hours ago

Mundargi Bandh : ಬರ ಪೀಡಿತ ತಾಲೂಕು ಘೋಷಣೆಗೆ ಒತ್ತಾಯಿಸಿ ಮುಂಡರಗಿ ಬಂದ್!

Dina bhavishya
ಪ್ರಮುಖ ಸುದ್ದಿ18 hours ago

Dina Bhavishya : ಈ ರಾಶಿಯವರಿಗೆ ಇಂದು ಹೂಡಿಕೆ ಬೇಡ! ಕೆಲ ವಿಷಯದಲ್ಲಿ ಇರಲಿ ಗೌಪ್ಯತೆ

Actor padhmini Kirk
ಕರ್ನಾಟಕ1 day ago

Viral News : ಕಿರುತೆರೆ ನಟಿ ಕಿರಿಕ್‌; ಕೆಲಸ ಕಳೆದುಕೊಂಡ ಓಲಾ ಆಟೋ ಡ್ರೈವರ್‌!

dina bhavishya
ಪ್ರಮುಖ ಸುದ್ದಿ2 days ago

Dina Bhavishya : ಈ ರಾಶಿಯವರಿಗೆ ಕೋಪವೇ ಮುಳುವು!

Dina bhavishya
ಪ್ರಮುಖ ಸುದ್ದಿ3 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಇಂದು ಬಾಸ್‌ನಿಂದ ಕಿರಿಕ್‌!

Dina Bhavishya
ಪ್ರಮುಖ ಸುದ್ದಿ4 days ago

Dina Bhavishya : ದಿನದ ಮಟ್ಟಿಗೆ ಈ ರಾಶಿಯವರು ಹೂಡಿಕೆ ಮಾಡ್ಬೇಡಿ!

Dina Bhavishya
ಪ್ರಮುಖ ಸುದ್ದಿ6 days ago

Dina Bhavishya : ನಂಬಿದ ವ್ಯಕ್ತಿಗಳು ಮೋಸ ಮಾಡ್ತಾರೆ ಹುಷಾರ್‌!

ಟ್ರೆಂಡಿಂಗ್‌