Medical negligence : ಜ್ವರ, ಮೈಕೈ ನೋವು ಎಂದು ಆಸ್ಪತ್ರೆ ಸೇರಿದ್ದ ಯುವಕ ಸಾವು; ವೈದ್ಯರ ವಿರುದ್ಧ ಕುಟುಂಬಸ್ಥರ ಪ್ರತಿಭಟನೆ - Vistara News

ಆರೋಗ್ಯ

Medical negligence : ಜ್ವರ, ಮೈಕೈ ನೋವು ಎಂದು ಆಸ್ಪತ್ರೆ ಸೇರಿದ್ದ ಯುವಕ ಸಾವು; ವೈದ್ಯರ ವಿರುದ್ಧ ಕುಟುಂಬಸ್ಥರ ಪ್ರತಿಭಟನೆ

Medical negligence : ಜ್ವರ, ಮೈ-ಕೈ ನೋವು ಎಂದು ನಡೆದುಕೊಂಡೇ ಬಂದು ಆಸ್ಪತ್ರೆಗೆ ದಾಖಲಾಗಿದ್ದ ಯುವಕನೊಬ್ಬ ಮೃತಪಟ್ಟಿದ್ದು, ವೈದ್ಯರು ಓವರ್‌ ಡೋಸ್‌ ನೀಡಿರುವುದೇ ಕಾರಣ ಎಂದು ಪೋಷಕರು ಪ್ರತಿಭಟಿಸಿದ್ದಾರೆ.

VISTARANEWS.COM


on

anekal medical issue ವೈದ್ಯರ ನಿರ್ಲಕ್ಷ್ಯಕ್ಕೆ ಯುವಕ ಬಲಿ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಆನೇಕಲ್: ಜ್ವರ, ಕೈ-ಕಾಲು ನೋವು ಎಂದು ಆಸ್ಪತ್ರೆಗೆ ದಾಖಲಾಗಿದ್ದ ಯುವಕನೊಬ್ಬ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯವೇ (Medical negligence) ತಮ್ಮ ಮಗನ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆಸ್ಪತ್ರೆ ಎದುರು ಪ್ರತಿಭಟನೆ ಮಾಡಿದ್ದಾರೆ. ಅಲ್ಲದೆ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

anekal medical issue ವೈದ್ಯರ ನಿರ್ಲಕ್ಷ್ಯಕ್ಕೆ ಯುವಕ ಬಲಿ Medical negligence

ಮುತ್ತಾನಲ್ಲೂರು ಗ್ರಾಮದ ಕೊಮ್ಮಸಂದ್ರದ ನಿವಾಸಿ ದೀಪಕ್ (೧೭) ಮೃತ ಯುವಕ. ಆನೇಕಲ್ ತಾಲೂಕಿನ ಸರ್ಜಾಪುರ ಸಮೀಪದ ಸೋಂಪುರದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಡಿಪ್ಲೊಮಾ ವಿದ್ಯಾರ್ಥಿಯಾಗಿರುವ ದೀಪಕ್‌ಗೆ ಜ್ವರ ಹಾಗೂ ಮೈಕೈ ನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಬರುವಾಗ ನಡೆದುಕೊಂಡೇ ಆಸ್ಪತ್ರೆಗೆ ಬಂದಿದ್ದು, ಈಗ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ ಎಂಬುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿತ್ತು,

anekal medical issue ವೈದ್ಯರ ನಿರ್ಲಕ್ಷ್ಯಕ್ಕೆ ಯುವಕ ಬಲಿ Medical negligence

21 ದಿನಗಳಿಂದ ಸೋಂಪುರದ ಸ್ಪಂದನ ಆಸ್ಪತ್ರೆಯಲ್ಲಿ ಜ್ವರಕ್ಕೆ ಚಿಕಿತ್ಸೆ ನೀಡಲಾಗುತ್ತಿತ್ತು. ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡುತ್ತಿದ್ದ ವೈದ್ಯರು, ಗುಣಪಡಿಸುವ ಭರವಸೆ ನೀಡಿದ್ದರು. ಆದರೆ, ಬುಧವಾರ ರಾತ್ರಿ ಆಸ್ಪತ್ರೆಯಲ್ಲಿ ದೀಪಕ್ ಮೃತಪಟ್ಟಿದ್ದಾನೆಂದು ವೈದ್ಯರು ತಿಳಿಸಿದ್ದಾರೆ. ಓವರ್ ಡೋಸ್ ನೀಡಿ ನಮ್ಮ ಮಗನನ್ನು ಸಾಯಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಆಸ್ಪತ್ರೆಯ ಹೊರಗೆ ಸಮಯ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಸ್ಥಳಕ್ಕೆ ಸರ್ಜಾಪುರ ಪೊಲೀಸರ ದೌಡಾಯಿಸಿದ್ದು, ಪರಿಸ್ಥಿತಿ ನಿಯಂತ್ರಿಸಲು ಶ್ರಮಿಸಿದ್ದಾರೆ. ಆಸ್ಪತ್ರೆ ಆವರಣದಲ್ಲಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಜಮಾಯಿಸಿ ತಪ್ಪಿತಸ್ಥ ವೈದ್ಯರ ಮೇಲೆ ಕ್ರಮವಹಿಸಲು ಆಗ್ರಹಿಸಿದ್ದಾರೆ.

ಇದನ್ನೂ ಓದಿ | Karnataka Election : ತುಮಕೂರಲ್ಲಿ ಹೊಸ ಟ್ರೆಂಡ್;‌ ರಾಜಕೀಯ ನಾಯಕರ ಫೋಟೊ ಹಿಡಿದು ಶಬರಿಮಲೆಯತ್ತ ಕಾರ್ಯಕರ್ತರು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

ವಿಸ್ತಾರ ಸಂಪಾದಕೀಯ: ಕೋವಿಶೀಲ್ಡ್‌ ಲಸಿಕೆಯ ಅಡ್ಡ ಪರಿಣಾಮ ಆತಂಕಕಾರಿ

ಕೋವಿಡ್‌ ನಂತರದ ದಿನಗಳಲ್ಲಿ ಯುವಜನರಲ್ಲಿಯೂ ವಿವರಿಸಲಾಗದ ತೀವ್ರ ಅಸ್ವಸ್ಥತೆ, ಹೃದಯಸ್ತಂಭನ ಮುಂತಾದವುಗಳು ಕಂಡುಬಂದಿವೆ. ಭಾರತದಲ್ಲಿಯೂ ಹಲವಾರು ಪ್ರಕರಣಗಳು ನಡೆದಿದ್ದು, ಕೋವಿಡ್‌ ಹಾಗೂ ಅದರ ಲಸಿಕೆಯ ಬಗ್ಗೆ ಅನುಮಾನ ಮೂಡಿಸಿದ್ದವು. ಕಳೆದ ವರ್ಷ ಕೇಂದ್ರ ಸರ್ಕಾರ, “ಕೊರೊನಾ ವೇಳೆ ಸಾವು ಗೆದ್ದು ಬಂದವರು ಜಾಸ್ತಿ ಕೆಲಸ ಮಾಡಬಾರದು” ಎಂದು ಸೂಚಿಸಿತ್ತು.

VISTARANEWS.COM


on

Covishield Vaccine
Koo

ಕೊರೊನಾ ಸೋಂಕು (coronavirus, Covid 19) ಎದುರಿಸಲು ನಾವು ನೀವೆಲ್ಲ ತೆಗೆದುಕೊಂಡ ಕೋವಿಶೀಲ್ಡ್‌ ಲಸಿಕೆ (Covishield Vaccine) ಅಡ್ಡ ಪರಿಣಾಮವನ್ನು (Side effects) ಹೊಂದಿದೆ ಎಂದು ಸ್ವತಃ ಅದನ್ನು ತಯಾರಿಸಿದ ಕಂಪನಿಯೇ ಇದೀಗ ಒಪ್ಪಿಕೊಂಡಿದೆ. ಇದರೊಂದಿಗೆ, ಕೊರೊನಾ ನಂತರದ ದಿನಗಳ ಅಸ್ವಸ್ಥತೆ, ಹೃದಯಾಘಾತಗಳ ಬಗ್ಗೆ ಮೂಡಿದ್ದ ಆತಂಕಕ್ಕೆ ಇನ್ನಷ್ಟು ಆಧಾರ ದೊರೆತಿದೆ. ಬ್ರಿಟಿಷ್ ಫಾರ್ಮಾ ದೈತ್ಯ ಅಸ್ಟ್ರಾಜೆನೆಕಾ (AstraZeneca) ತನ್ನ ಕೋವಿಡ್ ಲಸಿಕೆ ಕೋವಿಶೀಲ್ಡ್‌ ಅಪರೂಪವಾಗಿ ಅಡ್ಡ ಪರಿಣಾಮವನ್ನು ಉಂಟುಮಾಡಬಹುದು ಎಂದು ನ್ಯಾಯಾಲಯದಲ್ಲಿ ಒಪ್ಪಿಕೊಂಡಿದೆ. ರಕ್ತ ಹೆಪ್ಪುಗಟ್ಟುವಿಕೆ ಮತ್ತು ರಕ್ತದಲ್ಲಿ ಪ್ಲೇಟ್‌ಲೆಟ್ ಕಡಿಮೆಯಾಗುವ ಪರಿಸ್ಥಿತಿಯನ್ನು ಉಂಟುಮಾಡಬಹುದು ಎಂದು ಲಸಿಕೆ ತಯಾರಕರು ಹೇಳಿದ್ದಾರೆ. ಆದರೆ ಇದು ಅಪರೂಪದ ಸಂದರ್ಭಗಳಲ್ಲಿ ಆಗಬಹುದು ಎಂದಿದ್ದಾರೆ.

ಸಾಂಕ್ರಾಮಿಕ ಸಮಯದಲ್ಲಿ ಅಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಿಂದ ಅಭಿವೃದ್ಧಿಪಡಿಸಲಾದ ಕೋವಿಶೀಲ್ಡ್ ಅನ್ನು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸಿತ್ತು. ಭಾರತದಲ್ಲಿ ವ್ಯಾಪಕವಾಗಿ ಬಳಕೆಯಾದ ಲಸಿಕೆ ಇದೇ ಆಗಿದೆ. ಅಸ್ಟ್ರಾಜೆನೆಕಾ ಯುಕೆಯಲ್ಲಿ ತನ್ನ ಲಸಿಕೆಯು ಹಲವಾರು ಪ್ರಕರಣಗಳಲ್ಲಿ ಸಾವುಗಳು ಮತ್ತು ತೀವ್ರ ಅಸ್ವಸ್ಥತೆಗೆ ಕಾರಣವಾಯಿತು ಎಂಬ ಆರೋಪದ ಮೇಲೆ ಮೊಕದ್ದಮೆಯನ್ನು ಎದುರಿಸುತ್ತಿದೆ. 51 ಪ್ರಕರಣಗಳಲ್ಲಿ ಸಂತ್ರಸ್ತರು ಲಕ್ಷಗಟ್ಟಲೆ ಪೌಂಡ್‌ ನಷ್ಟ ಪರಿಹಾರ ಬಯಸಿದ್ದಾರೆ. ಅಸ್ಟ್ರಾಜೆನೆಕಾ ಒಪ್ಪಿಕೊಂಡಿರುವ ಆರೋಗ್ಯ ಸಮಸ್ಯೆಯ ಹೆಸರು ಥ್ರಂಬೋಸಿಸ್ ವಿಥ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ (Thrombosis with Thrombocytopenia Syndrome– TTS). ಇದರಲ್ಲಿ ದೇಹದಲ್ಲಿನ ಅಸಾಮಾನ್ಯ ಸ್ಥಳಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಉಂಟಾಗುತ್ತದೆ. ರಕ್ತದಲ್ಲಿನ ಪ್ಲೇಟ್‌ಲೆಟ್‌ಗಳ ಸಂಖ್ಯೆಯು ಕಡಿಮೆಯಾಗುತ್ತದೆ. ಪ್ಲೇಟ್‌ಲೆಟ್‌ಗಳು ರಕ್ತ ಹೆಪ್ಪುಗಟ್ಟಲು ಸಹಾಯ ಮಾಡುವ ಸಣ್ಣ ಕೋಶಗಳು. ಆದ್ದರಿಂದ ಅವು ತುಂಬಾ ಕಡಿಮೆ ಇರುವುದು ಅಪಾಯಕಾರಿ. ದೇಹದ ರೋಗನಿರೋಧಕ ವ್ಯವಸ್ಥೆಯು ಲಸಿಕೆಗೆ ಪ್ರತಿಕ್ರಿಯಿಸಿ, ರಕ್ತದ ಹೆಪ್ಪುಗಟ್ಟುವಿಕೆಯಲ್ಲಿ ಒಳಗೊಂಡಿರುವ ಪ್ರೋಟೀನ್ ಮೇಲೆ ದಾಳಿ ಮಾಡುವ ಪ್ರತಿಕಾಯಗಳನ್ನು ತಯಾರಿಸುವುದರಿಂದ TTS ಸಂಭವಿಸುತ್ತದೆ.

ಕೋವಿಡ್‌ ನಂತರದ ದಿನಗಳಲ್ಲಿ ಯುವಜನರಲ್ಲಿಯೂ ವಿವರಿಸಲಾಗದ ತೀವ್ರ ಅಸ್ವಸ್ಥತೆ, ಹೃದಯಸ್ತಂಭನ ಮುಂತಾದವುಗಳು ಕಂಡುಬಂದಿವೆ. ಭಾರತದಲ್ಲಿಯೂ ಹಲವಾರು ಪ್ರಕರಣಗಳು ನಡೆದಿದ್ದು, ಕೋವಿಡ್‌ ಹಾಗೂ ಅದರ ಲಸಿಕೆಯ ಬಗ್ಗೆ ಅನುಮಾನ ಮೂಡಿಸಿದ್ದವು. ಕಳೆದ ವರ್ಷ ಕೇಂದ್ರ ಸರ್ಕಾರ, “ಕೊರೊನಾ ವೇಳೆ ಸಾವು ಗೆದ್ದು ಬಂದವರು ಜಾಸ್ತಿ ಕೆಲಸ ಮಾಡಬಾರದು” ಎಂದು ಸೂಚಿಸಿತ್ತು. “ಕೊರೊನಾ ಸೋಂಕು ತಗುಲಿ, ಐಸಿಯುನಲ್ಲಿ ಚಿಕಿತ್ಸೆ ಪಡೆಯುವುದು ಸೇರಿ ಆರೋಗ್ಯ ಸ್ಥಿತಿ ಗಂಭೀರವಾಗಿ, ಬದುಕಿ ಬಂದವರು ಯಾವುದೇ ಕಾರಣಕ್ಕೂ ಹೆಚ್ಚು ದಣಿಯುವ ಕೆಲಸ ಮಾಡಬಾರದು. ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ICMR) ಅಧ್ಯಯನ ವರದಿ ಪ್ರಕಾರ, ಹೃದಯಾಘಾತದ ಭೀತಿ ಇರುವ ಕಾರಣ ಒಂದಷ್ಟು ಸಮಯದವರೆಗೆ ಕೊರೊನಾ ಸೋಂಕಿತರು ಹೆಚ್ಚು ಸಮಯದವರೆಗೆ ಅಥವಾ ಹೆಚ್ಚು ಭಾರ ಹೊರುವ ಕೆಲಸ ಮಾಡಬಾರದು. ಒಂದು ವರ್ಷ ಅಥವಾ ಎರಡು ವರ್ಷಗಳವರೆಗೆ ಇಂತಹ ವ್ಯಕ್ತಿಗಳು ಅತಿಯಾದ ವ್ಯಾಯಾಮ, ಜಿಮ್‌ನಲ್ಲಿ ವರ್ಕೌಟ್‌ ಕೂಡ ಮಾಡಬಾರದು” ಎಂದು ಅಧ್ಯಯನ ವರದಿ ಉಲ್ಲೇಖಿಸಿ ಕೇಂದ್ರ ಆರೋಗ್ಯ ಸಚಿವರು ತಿಳಿಸಿದ್ದರು.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಭಾರತದ ಉತ್ಪನ್ನಗಳ ರಫ್ತಿಗೆ ಕುಖ್ಯಾತಿ ಅಂಟದಿರಲಿ

ಕೊರೊನಾ ಸೋಂಕಿನ ನಂತರ ಹೃದಯಾಘಾತ ಪ್ರಮಾಣ ಏರಿಕೆಯಾಗಿರುವುದನ್ನು ಜಾಗತಿಕ ವರದಿಗಳೇ ದೃಢಪಡಿಸಿವೆ. ಜಾಗತಿಕ ವರದಿಯೊಂದರ ಪ್ರಕಾರ, ಸಾಂಕ್ರಾಮಿಕದ ನಂತರ 24-45 ವರ್ಷದೊಳಗಿನವರಲ್ಲಿ ಹೃದಯಾಘಾತ ಪ್ರಮಾಣ ಶೇ.30ರಷ್ಟು ಏರಿಕೆಯಾಗಿದೆ. ಆ ಮೂಲಕ ಅಂತಾರಾಷ್ಟ್ರೀಯವಾಗಿಯೂ ಕೊರೊನಾ ನಂತರ ಹೃದಯಾಘಾತ ಪ್ರಮಾಣ ಹೆಚ್ಚಾಗಿದೆ ಎಂಬುದು ದೃಢಪಟ್ಟಿದೆ. ಕೊರೊನಾ ನಂತರ ಹೃದಯಾಘಾತ ಪ್ರಮಾಣ ಶೇ.3ರಿಂದ ಶೇ.5ರಷ್ಟು ಏರಿಕೆಯಾಗಿದೆ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕರಾಗಿದ್ದ ಡಾ.ಸಿ.ಎನ್.ಮಂಜುನಾಥ್‌ ಕೂಡ ಹೇಳಿದ್ದರು. ಈಗ ಯುವಕರಿಗೂ ಹೃದಯಾಘಾತ ಹೆಚ್ಚುತ್ತಿದೆ. ಅಧಿಕ ಒತ್ತಡ, ಜೀವನ ಶೈಲಿ, ಆಹಾರ ಶೈಲಿ ಇದಕ್ಕೆ ಕಾರಣವಾಗಿದೆ ಎಂದಿದ್ದಾರೆ. ಇದರ ಜೊತೆಗೆ ಕೋವಿಶೀಲ್ಡ್‌ ಲಸಿಕೆಯ ಅಡ್ಡ ಪರಿಣಾಮ ಕೂಡ ಸೇರಿಕೊಂಡಿರುವುದು ಆತಂಕಕಾರಿ.

ಇವೆಲ್ಲ ಕಾರಣಗಳಿಂದಾಗಿ, ಕೊರೊನಾದಿಂದಾಗಿ ಪೀಡಿತರಾದವರು ಈ ಬಗ್ಗೆ ಅತೀವ ಎಚ್ಚರ ವಹಿಸಲೇಬೇಕಿದೆ. ಸೂಕ್ತ ಆಹಾರ ಸೇವನೆ, ವ್ಯಾಯಾಮ ಸೇರಿದಂತೆ ಆರೋಗ್ಯಕರ ಜೀವನಶೈಲಿಯನ್ನು ಬರಮಾಡಿಕೊಳ್ಳಬೇಕು. ಸರ್ಕಾರ ಎಷ್ಟೇ ಆರೋಗ್ಯಸೇವೆ ನೀಡಿದರೂ ವ್ಯಕ್ತಿ ತನ್ನ ಆರೋಗ್ಯವನ್ನು ನೋಡಿಕೊಳ್ಳದಿದ್ದರೆ ಯಾರೂ ಏನೂ ಮಾಡಲು ಸಾಧ್ಯವಿಲ್ಲ. ಕೋವಿಡ್‌ ಹಾಗೂ ಲಸಿಕೆಯಿಂದ ಉಂಟಾಗಿರಬಹುದಾದ ಆರೋಗ್ಯ ಸಮಸ್ಯೆಗಳನ್ನೂ ಇನ್ನೊಂದು ತುರ್ತುಸ್ಥಿತಿ ಎಂದೇ ತಿಳಿದು ಸರ್ಕಾರ ಕೂಡ ಕಾರ್ಯಪ್ರವೃತ್ತವಾಗಬೇಕು.

Continue Reading

ಕರ್ನಾಟಕ

Fortis Hospital: ಪಾರ್ಕಿನ್ಸನ್‌ ಕಾಯಿಲೆ ಚಿಕಿತ್ಸೆಗೆ ಪ್ರತ್ಯೇಕ ಕ್ಲಿನಿಕ್‌ ಆರಂಭಿಸಿದ ಫೋರ್ಟಿಸ್‌ ಆಸ್ಪತ್ರೆ

Fortis Hospital: ಪಾರ್ಕಿನ್ಸನ್‌ನಿಂದ ಉಂಟಾಗುವ ನರಮಂಡಲದ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆ ಹಾಗೂ ಥೆರಪಿಗಾಗಿ ಬೆಂಗಳೂರಿನ ಬನ್ನೇರುಘಟ್ಟ ಫೋರ್ಟಿಸ್‌ ಆಸ್ಪತ್ರೆಯಲ್ಲಿ ಪಾರ್ಕಿನ್ಸನ್‌ ಮತ್ತು ಡೀಪ್‌ ಬ್ರೇನ್‌ ಸ್ಟಿಮುಲೇಷನ್‌ (ಡಿಬಿಎಸ್) ಎನ್ನುವ ಪ್ರತ್ಯೇಕ ಕ್ಲಿನಿಕ್‌ನ ಉದ್ಘಾಟನೆ ನಡೆದಿದೆ. ಈ ಕುರಿತ ವರದಿ ಇಲ್ಲಿದೆ.

VISTARANEWS.COM


on

Fortis Hospital Launches Deep Brain Stimulation DBS Clinic to Treat Parkinson Disease
Koo

ಬೆಂಗಳೂರು: ಪಾರ್ಕಿನ್ಸನ್‌ನಿಂದ ಉಂಟಾಗುವ ನರಮಂಡಲದ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆ ಹಾಗೂ ಥೆರಪಿಗಾಗಿ ಬನ್ನೇರುಘಟ್ಟ ಫೋರ್ಟಿಸ್‌ ಆಸ್ಪತ್ರೆಯಲ್ಲಿ (Fortis Hospital) ಪಾರ್ಕಿನ್ಸನ್‌ ಮತ್ತು ಡೀಪ್‌ ಬ್ರೇನ್‌ ಸ್ಟಿಮುಲೇಷನ್‌ (ಡಿಬಿಎಸ್) ಎನ್ನುವ ಪ್ರತ್ಯೇಕ ಕ್ಲಿನಿಕ್‌ ಪ್ರಾರಂಭಿಸಲಾಗಿದೆ.

ಫೋರ್ಟಿಸ್‌ ಆಸ್ಪತ್ರೆಯ ನರಶಸ್ತ್ರಚಿಕಿತ್ಸಾ ವಿಭಾಗದ ನಿರ್ದೇಶಕ ಡಾ. ರಾಜಕುಮಾರ್ ದೇಶಪಾಂಡೆ, ನೂತನ ಕ್ಲಿನಿಕ್‌ ಅನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಇಂದು ಸಾಕಷ್ಟು ಜನರು ವಯಸ್ಸಾದ ಬಳಿಕ ಪಾರ್ಕಿನ್ಸನ್‌ ಕಾಯಿಲೆಗೆ ತುತ್ತಾಗುತ್ತಿದ್ದಾರೆ, ಇದಕ್ಕೆ ಸೂಕ್ತ ಚಿಕಿತ್ಸೆಯನ್ನು ಫೋರ್ಟಿಸ್‌ ಆಸ್ಪತ್ರೆ ಈಗಾಗಲೇ ಪರಿಚಯಿಸಿದೆ, ಆದರೆ ಕೆಲವರಿಗೆ ಚಿಕಿತ್ಸೆಗಿಂತ ಹೆಚ್ಚಾಗಿ ಕೆಲವು ದೈಹಿಕ ಅಭ್ಯಾಸಗಳ ಮೂಲಕವೂ ಪಾರ್ಕಿನ್ಸನ್‌ನ ಲಕ್ಷಣಗಳಾದ ಕೈ-ಕಾಲು ನಡುಕ ಇತರೆ ದೈಹಿಕ ಆರೋಗ್ಯವನ್ನು ಸುಧಾರಿಸಲು ಸಾಧ್ಯವಾಗಲಿದೆ. ಇದಕ್ಕಾಗಿಯೇ ಪ್ರತ್ಯೇಕ ಕ್ಲಿನಿಕ್‌ ತೆರೆದಿದ್ದೇವೆ. ಇದರ ಜತೆಗೆ, ಡೀಪ್‌ ಬ್ರೇನ್ ಸ್ಟಿಮ್ಯುಲೇಶನ್ (ಡಿಬಿಎಸ್‌) ಚಿಕಿತ್ಸೆಯೂ ದೊರೆಯಲಿದೆ. ಡೀಪ್‌ ಬ್ರೇನ್ ಸ್ಟಿಮ್ಯುಲೇಶನ್ ಪಾರ್ಕಿನ್ಸನ್‌ ಸಮಸ್ಯೆಗೆ ಚಿಕಿತ್ಸೆಯ ಭಾಗ ಎಂದು ವಿವರಿಸಿದರು.

ಇದನ್ನೂ ಓದಿ: Sharavathi Project: ಶರಾವತಿ ಜಲವಿದ್ಯುತ್ ಯೋಜನೆ; ಟೆಂಡರ್‌ ಪ್ರಶ್ನಿಸಿ ಎಲ್ & ಟಿ ಸಲ್ಲಿಸಿದ್ದ ಅರ್ಜಿ ಸುಪ್ರೀಂನಲ್ಲಿ ವಜಾ

ಫೋರ್ಟಿಸ್ ಆಸ್ಪತ್ರೆಯ ನರಶಸ್ತ್ರಚಿಕಿತ್ಸಾ ವಿಭಾಗದ ಹೆಚ್ಚುವರಿ ನಿರ್ದೇಶಕ ಡಾ. ರಘುರಾಮ್ ಜಿ. ಮಾತನಾಡಿ, ಪಾರ್ಕಿನ್ಸನ್‌ ಕಾಯಿಲೆಯಿಂದ ಕೈ-ಕಾಲುಗಳಲ್ಲಿ ನಡುಕ, ತಲೆಯಲ್ಲಿ ನಡುಕ, ಸ್ನಾಯುಗಳ ಬಿಗಿತ, ಚಲನೆಯ ನಿಧಾನತೆ, ಖಿನ್ನತೆ ಮತ್ತು ಭಾವನಾತ್ಮಕ ಬದಲಾವಣೆಗಳು ಸೇರಿದಂತೆ ಸಾಕಷ್ಟು ಸಮಸ್ಯೆಗಳು ಕಂಡು ಬರುತ್ತವೆ. ಇಂತಹ ಕಾಯಿಲೆಗೆ ಕೆಲವೊಮ್ಮೆ ಚಿಕಿತ್ಸೆಗಿಂತ ಥೆರಪಿ ಮುಖ್ಯವಾಗಲಿದೆ.

ಹೀಗಾಗಿ ಡೀಪ್‌ ಬ್ರೇನ್‌ ಸ್ಟಿಮುಲೇಷನ್‌ ಥೆರಪಿಗೆ ಇಲ್ಲಿ ಅವಕಾಶ ನೀಡಲಾಗಿದೆ. ವಯಸ್ಸಾದವರು ಈ ರೀತಿಯ ಕಾಯಿಲೆ ಹೊಂದಿದ್ದರೆ, ಈ ಥೆರಪಿ ತೆಗೆದುಕೊಳ್ಳಬಹುದು. ಈ ಕ್ಲಿನಿಕ್‌ ವಾರದ ದಿನಗಳಲ್ಲಿ ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 3:00 ರವರೆಗೆ ತೆರೆದಿರಲಿದೆ. ಇಂದು ಉದ್ಘಾಟನೆಗೊಂಡ ಕ್ಲಿನಿಕ್‌ನಲ್ಲಿ ಮಾನಸಿಕ ಆರೋಗ್ಯ ತಜ್ಞರು ಮತ್ತು ಯೋಗ ತರಬೇತುದಾರರು, ಮಾನಸಿಕ ಯೋಗಕ್ಷೇಮ ಮತ್ತು ಯೋಗ ಅಭ್ಯಾಸಗಳ ಕುರಿತು ಸೆಷನ್‌ಗಳನ್ನು ನಡೆಯಲಿದೆ ಎಂದರು.

ಇದನ್ನೂ ಓದಿ: Multivitamin Pill: ಮಲ್ಟಿವಿಟಮಿನ್‌ ಮಾತ್ರೆಗಳ ಮೊರೆ ಹೋಗದೆ, ನೈಸರ್ಗಿಕವಾಗಿ ಪೋಷಣೆ ಪಡೆಯುವುದು ಹೇಗೆ?

ಕಾರ್ಯಕ್ರಮದಲ್ಲಿ ಫೋರ್ಟಿಸ್ ಆಸ್ಪತ್ರೆಯ ನರವಿಜ್ಞಾನದ ಹೆಚ್ಚುವರಿ ನಿರ್ದೇಶಕ ಡಾ.ಗುರುಪ್ರಸಾದ್ ಹೊಸೂರ್ಕರ್, ಫೋರ್ಟಿಸ್ ಹಾಸ್ಪಿಟಲ್ಸ್ ಬೆಂಗಳೂರಿನ ಬಿಸಿನೆಸ್ ಹೆಡ್ ಅಕ್ಷಯ್ ಒಲೆಟಿ ಉಪಸ್ಥಿತರಿದ್ದರು.

Continue Reading

ಆರೋಗ್ಯ

Multivitamin Pill: ಮಲ್ಟಿವಿಟಮಿನ್‌ ಮಾತ್ರೆಗಳ ಮೊರೆ ಹೋಗದೆ, ನೈಸರ್ಗಿಕವಾಗಿ ಪೋಷಣೆ ಪಡೆಯುವುದು ಹೇಗೆ?

ನಾವು ಸೇವಿಸುವ ಎಲ್ಲವೂ ಸರಿಯಾದ ಮೂಲದಿಂದ ಬಂದ ಉತ್ತಮ ಪೋಷಣೆಯ ಮಾತ್ರೆಗಳೇ ಎಂಬ ಬಗ್ಗೆ ಗೊಂದಲಗಳು ಇದ್ದೇ ಇವೆ. ಆದರೆ, ನಾವು ಸರಿಯಾದ ಆಹಾರ ಸೇವನೆಯ ಮೂಲಕವೂ ನಮ್ಮ ದೇಹಕ್ಕೆ ಅಗತ್ಯವಾದ ಪೋಷಣೆಯನ್ನೂ ಆರೋಗ್ಯಯುತವಾದ ನೈಸರ್ಗಿಕ ಮಾರ್ಗದಲ್ಲಿಯೇ ಪಡೆದುಕೊಳ್ಳಬಹುದು. ಬನ್ನಿ, ಯಾವೆಲ್ಲ ಆಹಾರಗಳ ಸೇವನೆಯಿಂದ ನಿಮ್ಮ ಮಲ್ಟಿವಿಟಮಿನ್‌ ಮಾತ್ರೆಗಳಿಗಿಂತಲೂ (multivitamin pill) ಹೆಚ್ಚು ಪೋಷಣೆಯನ್ನು ಪಡೆಯಬಹುದು. ಈ ಬಗ್ಗೆ ಇಲ್ಲಿದೆ ವಿವರ.

VISTARANEWS.COM


on

Multivitamin Pill
Koo

ಈಗ ಏನಿದ್ದರೂ ರೆಡಿಮೇಡ್‌ ಕಾಲ. ಎಲ್ಲವೂ ದಿಢೀರ್‌ ಆಗಬೇಕು. ಕಾಯುವುದಕ್ಕೆ, ಮಾಡುವುದಕ್ಕೆ ಯಾರಿಗೂ ಸಮಯವಿಲ್ಲ. ಅಡುಗೆಯಿಂದ ಹಿಡಿದು ಪೋಷಣೆಯವರೆಗೆ ನಮಗೆ ಮಾರುಕಟ್ಟೆಯಲ್ಲಿ ಸಿಗುವ ರೆಡಿಮೇಡ್‌ ವಸ್ತುಗಳೇ ಬೇಕು. ಪ್ರೊಟೀನ್‌ಗಾಗಿ ಪ್ರೊಟೀನ್‌ ಮಿಕ್ಸ್‌ಗಳು, ಮಲ್ಟಿವಿಟಮಿನ್‌ ಮಾತ್ರೆಗಳು ಇತ್ಯಾದಿಗಳ ಸೇವನೆಯೂ ಸಹಜ ಎಂಬಷ್ಟು ಸಲೀಸಾಗಿದೆ. ಆದರೆ, ನಾವು ನಿತ್ಯವೂ ಸೇವಿಸುವ ಆಹಾರ ಮೂಲಗಳಲ್ಲೇ ನಾವು ಪೋಷಕಾಂಶಗಳನ್ನು ಕಡಿಮೆ ಮಾಡಿಕೊಳ್ಳುತ್ತಿದ್ದೇವೆ ಎಂಬುದು ವಿಪರ್ಯಾಸ. ಮಾರುಕಟ್ಟೆಯಲ್ಲೂ ವಿಧವಿಧವಾದ ಮಲ್ಟಿವಿಟಮಿನ್‌ಗಳು, ಪೋಷಣೆಯ ಡ್ರಿಂಕ್‌ಗಳೂ ಲಭ್ಯವಿರುವುದರಿಂದ ನಿತ್ಯದ ಪೋಷಣೆಯನ್ನು ಅವುಗಳ ಮೂಲಕವೇ ಸುಲಭವಾಗಿ ಪಡೆಯುವುದು ಬಹಳ ಮಂದಿಗೆ ಧಾವಂತದ ಜೀವನದಲ್ಲಿ ಅಭ್ಯಾಸವೂ ಆಗಿಬಿಟ್ಟಿದೆ. ಆದರೆ ಇವು ನಿಜಕ್ಕೂ, ಆಹಾರಗಳನ್ನು ಸೇವಿಸುವ ಮೂಲಕ ಪಡೆಯುವ ಪೋಷಣೆಯಂತೆ ಒಳ್ಳೆಯದನ್ನೇ ಮಾಡಬಲ್ಲವೇ? ನಾವು ಸೇವಿಸುವ ಎಲ್ಲವೂ ಸರಿಯಾದ ಮೂಲದಿಂದ ಬಂದ ಉತ್ತಮ ಪೋಷಣೆಯ ಮಾತ್ರೆಗಳೇ ಎಂಬ ಬಗ್ಗೆ ಗೊಂದಲಗಳು ಇದ್ದೇ ಇವೆ. ಆದರೆ, ನಾವು ಸರಿಯಾದ ಆಹಾರ ಸೇವನೆಯ ಮೂಲಕವೂ ನಮ್ಮ ದೇಹಕ್ಕೆ ಅಗತ್ಯವಾದ ಪೋಷಣೆಯನ್ನೂ ಆರೋಗ್ಯಯುತವಾದ ನೈಸರ್ಗಿಕ ಮಾರ್ಗದಲ್ಲಿಯೇ ಪಡೆದುಕೊಳ್ಳಬಹುದು. ಬನ್ನಿ, ಯಾವೆಲ್ಲ ಆಹಾರಗಳ ಸೇವನೆಯಿಂದ ನಿಮ್ಮ ಮಲ್ಟಿವಿಟಮಿನ್‌ ಮಾತ್ರೆಗಳಿಗಿಂತಲೂ (multivitamin pill) ಹೆಚ್ಚು ಪೋಷಣೆಯನ್ನು ಪಡೆಯಬಹುದು ಎಂಬುದನ್ನು ನೋಡೋಣ.

Yellow capsicum

ಹಳದಿ ಕ್ಯಾಪ್ಸಿಕಂ

ಹಳದಿ ಬಣ್ಣದ ಕ್ಯಾಪ್ಸಿಕಂ ವಿಟಮಿನ್‌ ಸಿ ನಮ್ಮ ದೇಹಕ್ಕೆ ಒದಗಿಸಬಲ್ಲ ಆಹಾರಗಳ ಪೈಕಿ ಬಹುಮುಖ್ಯವಾದುದು. ವಿಟಮಿನ್‌ ಸಿ ನೀರಿನಲ್ಲಿ ಕರಗಬಲ್ಲ ಹಾಗೂ ದೇಹ ಹೆಚ್ಚುವರಿಯನ್ನು ಶೇಖರಿಸಿ ಇಡಲಾಗದ ಪೋಷಕಾಂಶವಾದ್ದರಿಂದ ಇದು ನಿತ್ಯವೂ ನಮ್ಮ ದೇಹಕ್ಕೆ ಬೇಕಾದ ಪೋಷಣೆ. ವಿಟಮಿನ್‌ ಸಿ ಕೊರತೆಯಿಂದ ಸ್ಕರ್ವಿ ಸೇರಿದಂತೆ ತಲೆಸುತ್ತು, ಸುಸ್ತು, ಚರ್ಮದಲ್ಲಿ ಕಜ್ಜಿ-ಗುಳ್ಳೆಗಳು, ಮಾಂಸಖಂಡಗಳಲ್ಲಿ ಊತ ಹಾಗೂ ರಕ್ತಸ್ರಾವದಂತಹ ಸಮಸ್ಯೆಗಳೂ ಬರಬಹುದು. ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡಲು ವಿಟಮಿನ್‌ ಸಿ ಬೇಕೇಬೇಕು. ಒಂದು ಹಳದಿ ಕ್ಯಾಪ್ಸಿಕಂನಲ್ಲಿ 75-90 ಎಂಜಿಗಳಷ್ಟು ವಿಟಮಿನ್‌ ಸಿ ಇರುವುದರಿಂದ ಹಲವು ಹಲವು ಸಮಸ್ಯೆಗಳನ್ನು ಇದರ ಸೇವನೆಯಿಂದಲೇ ದೂರ ಇರಿಸಬಹುದಾಗಿದೆ.

Green vegetables

ಹಸಿರು ತರಕಾರಿಗಳು

ಹಸಿರು ಬಣ್ಣದ ತರಕಾರಿಗಳಲ್ಲಿ ಅತ್ಯಂತ ಹೆಚ್ಚು ಪೋಷಕಾಂಶಗಳಿರುತ್ತವೆ. ಪಾಲಕ್‌, ಬಸಳೆ, ನುಗ್ಗೆಸೊಪ್ಪು, ಕ್ಯಾಬೇಜ್‌ ಇತ್ಯಾದಿಗಳಲ್ಲಿ ಹೆಚ್ಚು ವಿಟಮಿನ್‌ ಇರುತ್ತದೆ. ವಿಟಮಿನ್‌ ಎ, ಕೆ, ಇ, ಸಿ, ಬೀಟಾ ಕೆರೋಟಿನ್‌, ಫೋಲೇಟ್‌, ವಿಟಮಿನ್‌ ಬಿ1, ಬಿ2, ಬಿ5, ಬಿ3 ಹಾಗೂ ಬಿ6ಗಳಿಗಾಗಿ ಈ ಹಸಿರು ಬಣ್ಣದ ತರಕಾರಿ ಸೊಪ್ಪುಗಳನ್ನು ಆಗಾಗ ಸೇವಿಸಿ.

Mackerel fish on ice

ಮೀನು

ಒಮೆಗಾ 3 ಫ್ಯಾಟಿ ಆಸಿಡ್‌ಗಳಿಗಾಗಿ ಮೀನಿನ ಸೇವನೆ ಬಹಳ ಮುಖ್ಯ. ಮೀನಿನಲ್ಲಿ ವಿಟಮಿನ್‌ ಬಿ೨, ವಿಟಮಿನ್‌ ಡಿ, ಕ್ಯಾಲ್ಶಿಯಂ, ಕಬ್ಬಿಣಾಂಶ, ಝಿಂಕ್‌, ಪಾಸ್ಪರಸ್‌, ಮೆಗ್ನೀಶಿಯಂ, ಅಯೋಡಿನ್‌, ಪೊಟಾಶಿಯಂ ಇವೆಲ್ಲ ಖನಿಜಾಂಶಗಳೂ ಇರುವುದರಿಂದ ಇದು ಅತ್ಯಂತ ಆರೋಗ್ಯಕರ.

Boiled Eggs

ಮೊಟ್ಟೆ

ಪ್ರೊಟೀನ್‌ಗಾಗಿ ರೆಡಿಮೇಡ್‌ ಡ್ರಿಂಕ್‌ಗಳನ್ನು ಕುಡಿಯುವ ಬದಲು ಮೊಟ್ಟೆ ಸೇವಿಸಿದರೆ ಸಾಕು. ಅತ್ಯಂತ ಸರಳ ಹಾಗೂ ಸುಲಭವಾದ ವಿಧಾನವಿದು. ಮೊಟ್ಟೆಯಲ್ಲಿ ಪ್ರೊಟೀನ್‌, ವಿಟಮಿನ್‌ ಎ, ಬಿ, ಬಿ೨, ಬಿ12 ಹಾಗೂ ವಿಟಮಿನ್‌ ಡಿ ಹೇರಳವಾಗಿದೆ. ಅಯೋಡಿನ್‌ ಹಾಗೂ ಸೆಲೆನಿಯಮ್‌ ಕೂಡಾ ಇವೆ.

Health Tips about curd

ಮೊಸರು

ಕ್ಯಾಲ್ಶಿಯಂ ದೇಹಕ್ಕೆ ಬೇಕೆಂದರೆ, ಮೊಸರು ತಿನ್ನುವುದನ್ನು ಬಿಡಬೇಡಿ. ಕ್ಯಾಲ್ಶಿಯಂ, ವಿಟಮಿನ್‌ ಬಿ, ಬಿ12 ಇತ್ಯಾದಿಗಳ ಆಗರ ಮೊಸರು. ಹಾಗೂ ಹಾಲಿನ ಉತ್ಪನ್ನಗಳು. ಹಾಗಾಗಿ, ಹಾಲು, ಮೊಸರು, ಪನೀರ್‌ನಂತಹ ಆಹಾರಗಳನ್ನು ಆಗಾಗ ಸೇವಿಸಿ. ದೇಹಕ್ಕೆ ನಿತ್ಯವೂ ಕ್ಯಾಲ್ಶಿಯಂ ಕೊರತೆಯಾಗದಂತೆ ನೋಡಿಕೊಳ್ಳಿ. ನೆನಪಿಡಿ, ಇವಿಷ್ಟಲ್ಲದೆ, ಒಣಹಣ್ಣುಗಳು, ಒಣ ಬೀಜಗಳು, ಧಾನ್ಯ ಬೇಳೆ ಕಾಳುಗಳು, ತರಕಾರಿ ಹಣ್ಣುಗಳು ಇತ್ಯಾದಿಗಳಿಂದ ಸಮೃದ್ಧವಾದ ಊಟವನ್ನು ನೀವು ನಿತ್ಯವೂ ಮಾಡುತ್ತಿದ್ದರೆ, ಖಂಡಿತವಾಗಿಯೂ ಮಲ್ಟಿ ವಿಟಮಿನ್‌ಗಳ ಸೇವನೆಯ ಅಗತ್ಯವೂ ಬಾರದು.

ಇದನ್ನೂ ಓದಿ: Sleeping Tips: ದಿನಕ್ಕೆಷ್ಟು ತಾಸು ನಿದ್ದೆ ಮಾಡುತ್ತೀರಿ ನೀವು? ಇದು ಗಂಭೀರ ವಿಷಯ!

Continue Reading

ಆರೋಗ್ಯ

Leg Swelling: ಪ್ರಯಾಣಿಸುವಾಗ ನಮ್ಮ ಕಾಲುಗಳು ಊದಿಕೊಳ್ಳುವುದೇಕೆ?

ಪ್ರಯಾಣಿಸುವಾಗ, ಕುಳಿತಲ್ಲಿಂದ ಕದಲದಿದ್ದಾಗ, ರಕ್ತ ಪರಿಚಲನೆಗೆ ಅಗತ್ಯವಾದ ದೈಹಿಕ ಚಲನೆಗಳು ಶರೀರದಲ್ಲಿ ಇರುವುದಿಲ್ಲ. ಇದರಿಂದ ನೀರಿನಂಶ ಕಾಲಿನ ಭಾಗದಲ್ಲಿ ತುಂಬಿಕೊಳ್ಳುತ್ತದೆ. ಇದರಿಂದ ಕಾಲುಗಳು ದಪ್ಪವಾದಂತೆ, ಊದಿಕೊಂಡಂತೆ ಕಾಣಬಹುದು. ಸಾಮಾನ್ಯವಾಗಿ ಇದಕ್ಕೆ ಸಿಕ್ಕಾಪಟ್ಟೆ ಚಿಂತೆ ಮಾಡುವ ಅಗತ್ಯವಿಲ್ಲದಿದ್ದರೂ, ಕೆಲವೊಮ್ಮೆ ಕಾಲು ಊದಿಕೊಳ್ಳುವುದರಲ್ಲಿ ಅಪಾಯದ ಮುನ್ಸೂಚನೆಗಳನ್ನು ಕಾಣಬಹುದು. ಏನದು? ಒಂದೆಡೆ ಹೆಚ್ಚು ಸಮಯ ಕೂತಿದ್ದರೆ ಕಾಲುಗಳು ಊದಿಕೊಳ್ಳುವುದೇಕೆ? ಈ ಬಗ್ಗೆ (Leg Swelling) ತಿಳಿದುಕೊಳ್ಳೋಣ.

VISTARANEWS.COM


on

Leg Swelling
Koo

ಪ್ರಯಾಣ ಮಾಡುತ್ತಿದ್ದೀರಿ, ಬಸ್ಸು, ಕಾರು, ವಿಮಾನ… ಯಾವುದೋ ಒಂದರಲ್ಲಿ. ನಾಲ್ಕಾರು ತಾಸುಗಳ ದಾರಿಯಲ್ಲಿ ಕೂತಲ್ಲೇ ಕೂತಿರುತ್ತೀರಿ. ನಿಮ್ಮ ಗಮ್ಯ ತಲುಪಿದ ಮೇಲೆ ನೋಡಿದರೆ, ಕಾಲುಗಳು ಊದಿಕೊಂಡಂತಿವೆ. ʻಅರೆ! ಏನಾಯ್ತು… ಚೆನ್ನಾಗೇ ಇತ್ತಲ್ಲ ಹೊರಡುವಾಗʼ ಎಂದು ಗಾಬರಿ ಬೀಳುತ್ತೀರಿ. ಇದು ನಿಮಗಷ್ಟೇ ಅಲ್ಲ, ಬಹಳಷ್ಟು ಮಂದಿಗೆ ಅನುಭವಕ್ಕೆ ಬಂದಿರಬಹುದು. ಒಂದೆಡೆ ದೀರ್ಘಕಾಲ ಕುಳಿತಿದ್ದರೆ ಕಾಲುಗಳು ಊದಿಕೊಂಡಂತಾಗಿ, ʻಏನಾಯ್ತಪ್ಪ!ʼ ಎಂದು ಚಿಂತಿಸುವಂತಾಗುತ್ತದೆ. ಸಾಮಾನ್ಯವಾಗಿ ಇದಕ್ಕೆ ಸಿಕ್ಕಾಪಟ್ಟೆ ಚಿಂತೆ ಮಾಡುವ ಅಗತ್ಯವಿಲ್ಲದಿದ್ದರೂ, ಕೆಲವೊಮ್ಮೆ ಕಾಲು ಊದಿಕೊಳ್ಳುವುದರಲ್ಲಿ ಅಪಾಯದ ಮುನ್ಸೂಚನೆಗಳನ್ನು ಕಾಣಬಹುದು. ಏನದು? ಒಂದೆಡೆ ಹೆಚ್ಚು ಸಮಯ ಕೂತಿದ್ದರೆ ಕಾಲುಗಳು (Leg Swelling) ಊದಿಕೊಳ್ಳುವುದೇಕೆ?

Middle aged woman suffer from Arthritis,Patellar Tendinitis

ಹೀಗೇಕಾಗುತ್ತದೆ?

ಇದಕ್ಕೆ ಹಲವು ಕಾರಣಗಳು ಇರಬಹುದು. ಆದರೆ ಕಾಲುಗಳಲ್ಲಿ ನೀರು ತುಂಬಿಕೊಳ್ಳುವುದು ಎಲ್ಲಕ್ಕಿಂತ ಪ್ರಮುಖ ಕಾರಣ. ಕುಳಿತಲ್ಲಿಂದ ಕದಲದಿದ್ದಾಗ, ರಕ್ತ ಪರಿಚಲನೆಗೆ ಅಗತ್ಯವಾದ ದೈಹಿಕ ಚಲನೆಗಳು ಶರೀರದಲ್ಲಿ ಇರುವುದಿಲ್ಲ. ಇದರಿಂದ ನೀರಿನಂಶ ಕಾಲಿನ ಭಾಗದಲ್ಲಿ ತುಂಬಿಕೊಳ್ಳುತ್ತದೆ. ಇದರಿಂದ ಕಾಲುಗಳು ದಪ್ಪವಾದಂತೆ, ಕೆಲವೊಮ್ಮೆ ಕೈಗಳು ಸಹ ಊದಿಕೊಂಡಂತೆ ಕಾಣಬಹುದು. ಇದಲ್ಲದೆ ಇನ್ನೂ ಕೆಲವು ಕಾರಣಗಳು ಈ ತೊಂದರೆಯ ಹಿಂದಿರುವುದಕ್ಕೆ ಸಾಧ್ಯವಿದೆ.

ಎತ್ತರದ ಜಾಗದಲ್ಲಿ ಪ್ರಯಾಣ ಮಾಡುತ್ತಿರುವಾಗ ಅಲ್ಲಿನ ಗಾಳಿಯ ಒತ್ತಡ ಮತ್ತು ಆಮ್ಲಜನಕದ ಲಭ್ಯತೆ ವ್ಯತ್ಯಾಸವಾದಾಗಲೂ ಅದು ದೇಹದ ಮೇಲೆ ಪರಿಣಾಮ ಬೀರುತ್ತದೆ. ಆಗಲೂ ಕಾಲುಗಳಲ್ಲಿ ನೀರು ತುಂಬಿಕೊಳ್ಳುವ ಸಾಧ್ಯತೆಯಿದೆ. ಅದಕ್ಕೆ ಸರಿಯಾಗಿ, ಹೆಚ್ಚು ಚಲನೆಯಿಲ್ಲದಂತೆ ಕುಳಿತಿದ್ದಾಗಲೂ ಇದರ ಪರಿಣಾಮ ಇನ್ನೂ ಹೆಚ್ಚಾದಂತೆ, ಪಾದ, ಕಾಲುಗಳಲ್ಲಿ ನೀರು ತುಂಬಿದಂತೆ ಕಾಣುತ್ತದೆ.

ಪ್ರಯಾಣದಲ್ಲಿ ಹೆಚ್ಚು ನೀರು ಕುಡಿಯದಿರುವುದು ಇದಕ್ಕೆ ಮತ್ತೊಂದು ಕಾರಣವಾಗಿರಬಹುದು. ಹೆಚ್ಚು ನೀರು ಕುಡಿದರೆ ಪದೇಪದೆ ಬಾತ್‌ರೂಂಗಳನ್ನು ಹುಡುಕಬೇಕು ಎನ್ನುವ ಕಾರಣಕ್ಕಾಗಿ ಬಹಳಷ್ಟು ಮಂದಿ ಪ್ರಯಾಣದ ಸಮಯದಲ್ಲಿ ನೀರು ಕುಡಿಯುವುದನ್ನು ಕಡಿಮೆ ಮಾಡುತ್ತಾರೆ. ಇದರಿಂದ ನೀರಿನ ಲಭ್ಯತೆ ಕಡಿಮೆಯಿದೆ ಎಂಬ ಭಾವ ದೇಹಕ್ಕೆ ಬರುತ್ತಿದ್ದಂತೆ, ಇರುವ ನೀರನ್ನು ಹಿಡಿದಿಟ್ಟುಕೊಳ್ಳಲು ಶರೀರ ಪ್ರಯತ್ನಿಸುತ್ತದೆ. ಆಗಲೂ ಕಾಲುಗಳಲ್ಲಿ ನೀರು ತುಂಬಿಕೊಂಡಂತಾಗುತ್ತದೆ. ಬಿಗಿಯಾದ ಉಡುಪುಗಳು, ಶೂಗಳನ್ನು ಧರಿಸಿ ಪ್ರಯಾಣಿಸುವುದು ಕೆಲವೊಮ್ಮೆ ಇದಕ್ಕೆ ಕಾರಣವಾಗುತ್ತದೆ. ಮೊದಲೇ ಚಲನೆಯಿಲ್ಲದೆ ಕುಳಿತಂಥ ಸ್ಥಿತಿಯಲ್ಲಿ ರಕ್ತಪರಿಚಲನೆ ಕಡಿಮೆಯೇ. ಅದರಲ್ಲಿ ಬಿಗಿಯಾದ ಧಿರಿಸುಗಳನ್ನು ತೊಟ್ಟರೆ, ಇನ್ನಷ್ಟು ತೊಂದರೆಯಾಗುತ್ತದೆ.

ಡಿವಿಟಿ

ಇವೆಲ್ಲಕ್ಕಿಂತ ಹೊರತಾಗಿ ಇನ್ನೊಂದು ಮುಖ್ಯ ಕಾರಣ ಕಾಲಿನ ಊತಕ್ಕೆ ಕಾರಣವಾಗಬಹುದು. ಡೀಪ್‌ ವೈಯ್ನ್‌ ಥ್ರೊಂಬೊಸಿಸ್‌ ಅಥವಾ ಡಿವಿಟಿ ಎಂದೇ ಕರೆಯಲಾಗುತ್ತದೆ ಈ ಕಾರಣವನ್ನು. ಕಾಲಿನ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟಿದಂತಾಗುತ್ತದೆ. ಇದರಿಂದ ಕಾಲು ದಪ್ಪವಾಗುತ್ತದೆ. ಹೀಗೆ ರಕ್ತ ಹೆಪ್ಪುಗಟ್ಟುವಂಥ ದೇಹಸ್ಥಿತಿ ಇದ್ದವರು ಪ್ರಯಾಣದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಈ ಸ್ಥಿತಿಯನ್ನು ತ್ವರಿತವಾಗಿ ಗ್ರಹಿಸಿ, ವೈದ್ಯರಲ್ಲಿ ಚಿಕಿತ್ಸೆಯನ್ನೂ ಪಡೆಯಬೇಕು. ಡಿವಿಟಿ ಇದ್ದರೇನಾಗುತ್ತದೆ? ಯಾವ ಲಕ್ಷಣಗಳನ್ನು ಗ್ರಹಿಸಬೇಕು?

ಲಕ್ಷಣಗಳು

ಊತ ಒಂದೇ ಕಾಲಿನಲ್ಲಿ ಕಾಣಬಹುದು. ಸಮಸ್ಯೆ ಇರುವ ಕಾಲು, ಇನ್ನೊಂದು ಕಾಲಿಗಿಂತ, ಭಾರವಾದ ಅನುಭವ ಆಗಬಹುದು. ಹೆಪ್ಪುಗಟ್ಟಿದ ಭಾಗದಲ್ಲಿ ನೋವು, ಉರಿ ಉಂಟಾದೀತು. ನಡೆದಾಡುವಾಗ, ನಿಂತಾಗ ಈ ನೋವು ಇನ್ನೂ ಹೆಚ್ಚು ಅನುಭವಕ್ಕೆ ಬರುತ್ತದೆ. ರಕ್ತ ಗರಣೆಯಾದಲ್ಲಿ ಚರ್ಮ ಕೆಂಪು, ನೀಲಿಯಂಥ ಗಾಢ ಬಣ್ಣದಲ್ಲಿ ಇರಬಹುದು, ಜೊತೆಗೆ ಚರ್ಮ ಬಿಸಿಯೂ ಅನಿಸಬಹುದು. ಆದರೆ ದೇಹದ ಉಳಿದೆಲ್ಲ ಭಾಗಗಳಲ್ಲಿ ಚರ್ಮ ಮಾಮೂಲಿ ಉಷ್ಣತೆಯಲ್ಲೇ ಇರುತ್ತದೆ. ರಕ್ತ ಹೆಪ್ಪುಗಟ್ಟಿದ ರಕ್ತನಾಳಗಳು ಉಬ್ಬಿದಂತೆ, ಎದ್ದುಬಂದಂತೆ ಕಾಣಬಹುದು. ಕಾಲಿನಲ್ಲಿ ಈ ಲಕ್ಷಣಗಳು ಕಂಡರೆ, ಉದಾಸೀನ ಮಾಡದೆ ವೈದ್ಯರನ್ನು ಸಂಪರ್ಕಿಸಬೇಕು. ಉಸಿರಾಟಕ್ಕೆ ತೊಂದರೆಯಾದರೆ ಶೀಘ್ರ ವೈದ್ಯಕೀಯ ನೆರವು ಪಡೆಯಬೇಕಾಗುತ್ತದೆ.

Ankle, Pain

ಮುನ್ನೆಚ್ಚರಿಕೆ

ಡಿವಿಟಿ ಇರುವವರು ದೀರ್ಘ ಪ್ರಯಾಣಕ್ಕೆ ಮುಂಚಿತವಾಗಿ ವೈದ್ಯರಲ್ಲಿ ಸಲಹೆ ಕೇಳುವುದು ಸೂಕ್ತ. ಅಂಥ ತೊಂದರೆಗಳಿಲ್ಲದೆ, ನೀರು ತುಂಬಿದಂತಾಗಿ ಕಾಲು ಊದಿಕೊಳ್ಳುವವರು ಕೆಲವು ಮುನ್ನೆಚ್ಚರಿಕೆಗಳನ್ನು ತೆಗದುಕೊಳ್ಳುವುದು ಒಳ್ಳೆಯದು. ಮೊದಲಿಗೆ, ದೀರ್ಘ ಪ್ರಯಾಣಕ್ಕೆ ಹಗುರವಾದ, ಸೆಡಿಲವಾದ, ಆರಾಮದಾಯಕ ವಸ್ತ್ರಗಳಿರಲಿ. ಬಿಗಿಯಾದ ಪಾದರಕ್ಷೆಗಳು ಬೇಡ, ಬೇಕೆಂದಾಗ ತೆಗೆಯುವಂಥ ಪಾದರಕ್ಷೆಗಳಲ್ಲಿ ಧರಿಸಿ. ಒಂದೇ ರೀತಿಯಲ್ಲಿ ಕಾಲುಗಳನ್ನು ನೇತಾಡಿಸುವ ಬದಲು, ಎತ್ತಿಟ್ಟುಕೊಳ್ಳಲು ಸಾಧ್ಯವೇ ಪರಿಶೀಲಿಸಿ. ಪ್ರಯಾಣದ ಸಂದರ್ಭದಲ್ಲಿ ಸಾಕಷ್ಟು ನೀರು ಕುಡಿಯಿರಿ. ಆಲ್ಕೊಹಾಲ್‌ ಮತ್ತು ಕೆಫೇನ್‌ ಸಮಸ್ಯೆಯನ್ನು ಹೆಚ್ಚಿಸುತ್ತವೆ, ಜೋಕೆ. ದೀರ್ಘ ಪ್ರಯಾಣದ ನಡುವೆ ಸಾಕಷ್ಟು ವಿರಾಮ ತೆಗೆದುಕೊಳ್ಳಿ. ಪ್ರತಿ ತಾಸಿಗೊಮ್ಮೆ ನಾಲ್ಕಾರು ನಿಮಿಷ ಓಡಾಡಿ. ಚೆನ್ನಾಗಿ ನೀರು ಕುಡಿದು, ಬಾತ್‌ರೂಮ್‌ ವಿರಾಮ ತೆಗೆದುಕೊಳ್ಳುವುದು ಹೆಚ್ಚು ಸೂಕ್ತ.

ಇದನ್ನೂ ಓದಿ: Stress can cause neck pain: ಕುತ್ತಿಗೆ ನೋವೇ?‌ ಮಾನಸಿಕ ಒತ್ತಡವೂ ಕಾರಣವಾಗಿರಬಹುದು!

Continue Reading
Advertisement
Kaladarpana-Art Reflects
ಬೆಂಗಳೂರು55 mins ago

Kaladarpana-Art Reflects: ಬೆಂಗಳೂರಿನಲ್ಲಿ ಮೇ 5ರಂದು ಪ್ರತಿಭಾ ವೇದಿಕೆ ಸೀಜನ್‌-4 ಪ್ರಶಸ್ತಿ ಪ್ರದಾನ, ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ

Covishield Vaccine
ಪ್ರಮುಖ ಸುದ್ದಿ1 hour ago

ವಿಸ್ತಾರ ಸಂಪಾದಕೀಯ: ಕೋವಿಶೀಲ್ಡ್‌ ಲಸಿಕೆಯ ಅಡ್ಡ ಪರಿಣಾಮ ಆತಂಕಕಾರಿ

Narendra modi
ಪ್ರಮುಖ ಸುದ್ದಿ1 hour ago

Narendra Modi : ನಾನು ಬದುಕಿರುವವರೆಗೂ ಮುಸ್ಲಿಮರಿಗೆ ಧರ್ಮದ ಆಧಾರದ ಮೀಸಲಾತಿ ಇಲ್ಲ ಎಂದ ಮೋದಿ

DK Shivakumar
ಪ್ರಮುಖ ಸುದ್ದಿ2 hours ago

DK Shivakumar: ಅಶ್ಲೀಲ ಚಿತ್ರಕ್ಕೆ ಡಿಕೆಶಿ ಫೋಟೊ ಮಾರ್ಫಿಂಗ್ ಆರೋಪ; ಮೂವರ ವಿರುದ್ಧ ಎಫ್‌ಐಆರ್‌

IPL 2024
Latest2 hours ago

IPL 2024 : ‘ಆಲ್​ರೌಂಡರ್​’ ಪಾಂಡ್ಯ ನೇತೃತ್ವದ ಮುಂಬೈ ತಂಡವನ್ನು ಸೋಲಿಸಿದ ರಾಹುಲ್ ನಾಯಕತ್ವದ ಲಕ್ನೊ

Union Minister Pralhad Joshi election campaign in Shiggavi
ಧಾರವಾಡ2 hours ago

Lok Sabha Election 2024: ಈ ಲೋಕಸಭಾ ಚುನಾವಣೆ ಭಾರತದ ಸುವರ್ಣ ಯುಗಕ್ಕೆ ನಾಂದಿ: ಪ್ರಲ್ಹಾದ್‌ ಜೋಶಿ

Lok Sabha Election 2024 Bike rally for voting awareness in Hosapete
ವಿಜಯನಗರ2 hours ago

Lok Sabha Election 2024: ಹೊಸಪೇಟೆಯಲ್ಲಿ ಮತದಾನ ಜಾಗೃತಿಗಾಗಿ ಬೈಕ್ ರ‍್ಯಾಲಿ

BJP National President JP Nadda Election Campaign for Haveri Gadag Lok Sabha Constituency BJP Candidate Basavaraj Bommai
ಕರ್ನಾಟಕ2 hours ago

Lok Sabha Election 2024: ಮೋದಿಯವರ ವಿಕಸಿತ ಭಾರತ ಸಾಕಾರಗೊಳಿಸಲು ಬೊಮ್ಮಾಯಿಯವರನ್ನು ಗೆಲ್ಲಿಸಿ: ಜೆಪಿ ನಡ್ಡಾ

2nd PUC Paper Leak
ಕರ್ನಾಟಕ2 hours ago

2nd PUC Paper Leak: ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ; ವಜಾಗೊಂಡಿದ್ದ ಎಸ್‌ಡಿಎ ಮರು ನೇಮಕ!

Lok Sabha Election
Lok Sabha Election 20242 hours ago

Lok Sabha Election: ಕಳೆದ ಬಾರಿಗೆ ಹೋಲಿಸಿದರೆ ಮೊದಲೆರಡು ಹಂತಗಳ ಮತದಾನದ ಪ್ರಮಾಣದಲ್ಲಿ ಕುಸಿತ; ಇಲ್ಲಿದೆ ಅಂಕಿ-ಅಂಶ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for April 30 2024
ಭವಿಷ್ಯ20 hours ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20242 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20242 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20242 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20242 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20243 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20243 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest3 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

ಟ್ರೆಂಡಿಂಗ್‌