oxygen shortage Cancer patient dies due to lack of oxygen at Kidwai HospitalOxygen Shortage: ಕಿದ್ವಾಯಿ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಕೊರತೆಯಿಂದ ಕ್ಯಾನ್ಸರ್‌ ರೋಗಿ ಸಾವು - Vistara News

ಆರೋಗ್ಯ

Oxygen Shortage: ಕಿದ್ವಾಯಿ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಕೊರತೆಯಿಂದ ಕ್ಯಾನ್ಸರ್‌ ರೋಗಿ ಸಾವು

Oxygen Shortage: ಕೋವಿಡ್‌ (Covid) ಸಮಯದಲ್ಲಿ ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಕೊರತೆ ಉಂಟಾಗಿತ್ತು. ಇದೀಗ ಮತ್ತೆ ಲಿಕ್ವಿಡ್ ಆಕ್ಸಿಜನ್ ಕೊರತೆಯಿಂದಾಗಿ ಕ್ಯಾನ್ಸರ್ ರೋಗಿಯೊಬ್ಬರು ಮೃತಪಟ್ಟಿದ್ದಾರೆ ಎಂಬ ಆರೋಪವೊಂದು ಕೇಳಿ ಬಂದಿದೆ.

VISTARANEWS.COM


on

Kidwai Hospital
ಕಿದ್ವಾಯಿ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಕೊರತೆ ಆರೋಪ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕಲಬುರಗಿ: ಇಲ್ಲಿನ ಕಿದ್ವಾಯಿ ಆಸ್ಪತ್ರೆಯಲ್ಲಿ (Kidwai Hospital) ಚಿಕಿತ್ಸೆ ಪಡೆಯುತ್ತಿದ್ದ ಕ್ಯಾನ್ಸರ್‌ ರೋಗಿಯೊಬ್ಬರು (Cancer patient) ಲಿಕ್ವಿಡ್ ಆಕ್ಸಿಜನ್ (Liquid Oxygen) ಕೊರತೆಯಿಂದಾಗಿ ಮೃತಪಟ್ಟಿರುವುದಾಗಿ ಆರೋಪ ಕೇಳಿ ಬಂದಿದೆ. ಬೀದರ್ ಮೂಲದ ಝಕೀರಾ ಬೇಗಂ (50) ಮೃತ ದುರ್ದೈವಿ.

Oxygen shortage at Kidwai Hospital
ಕಿದ್ವಾಯಿ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಕೊರತೆ

ಕಿದ್ವಾಯಿ ಆಸ್ಪತ್ರೆಯ ಐಸಿಯುನಲ್ಲಿ‌ ಮೂರು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರು. ಇದರಲ್ಲಿ ಒಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಝಕೀರಾ ಬೇಗಂ ಆಕ್ಸಿಜನ್ ಕೊರತೆಯಿಂದಾಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸದ್ಯ ಉಳಿದ ರೋಗಿಗಳನ್ನು ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Oxygen shortage at Kidwai Hospital
ಕಿದ್ವಾಯಿ ಆಸ್ಪತ್ರೆಯ ಐಸಿಯು ವಾರ್ಡ್‌

ಇದನ್ನೂ ಓದಿ: Praveen Nettaru: ಹೊಸ ಸರ್ಕಾರ ಅಸ್ತಿತ್ವದ ಬೆನ್ನಲ್ಲೇ ಪ್ರವೀಣ್‌ ನೆಟ್ಟಾರ್ ಪತ್ನಿ ಕೆಲಸಕ್ಕೆ ಕೊಕ್

ಕಿದ್ವಾಯಿ ಆಸ್ಪತ್ರೆಯಲ್ಲಿ ಬೆಳಗ್ಗೆ ಎರಡು ಗಂಟೆಗಳ ಕಾಲ ಆಕ್ಸಿಜನ್ ಖಾಲಿ ಆಗಿತ್ತು. ಆಕ್ಸಿಜನ್ ಖಾಲಿಯಾಗಿದ್ದರಿಂದಲೇ ಝಕೀರಾ ಬೇಗಂ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಆದರೆ, ಆಕ್ಸಿಜನ್ ಖಾಲಿಯಾಗಿರುವ ಬಗ್ಗೆ ಆಸ್ಪತ್ರೆ ವೈದ್ಯರು ಬೇರೆಯದ್ದೆ ಸಬೂಬು ಹೇಳುತ್ತಿದ್ದಾರೆ. 15 ರಿಂದ 20 ನಿಮಿಷದಲ್ಲಿ ಆಕ್ಸಿಜನ್ ಬರುತ್ತಿತ್ತು. ಆದರೆ ಝಕೀರಾ ಬೇಗಂ ಕ್ಯಾನ್ಸರ್‌ ತೀವ್ರತೆಯಿಂದ ಮೃತಪಟ್ಟಿದ್ದು ಎಂದು ವೈದ್ಯ ನವೀನ್ ಮಾಹಿತಿ ನೀಡಿದ್ದಾರೆ.‌

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Sweet Potatoes: ಗೆಣಸಿಗೆ ಮಧುಮೇಹ ನಿಯಂತ್ರಿಸುವ, ಕ್ಯಾನ್ಸರ್ ತಡೆಯುವ ಸಾಮರ್ಥ್ಯವಿದೆ!

ಗೆಣಸನ್ನು ವೈವಿಧ್ಯಮಯ ಅಡುಗೆಗಳಲ್ಲಿ ಉಪಯೋಗಿಸಬಹುದು. ಸುಮ್ಮನೆ ಬೇಯಿಸಿ, ಸುಲಿದು ತಿನ್ನುವುದರಿಂದ ಹಿಡಿದು, ಹೋಳಿಗೆ, ಪಾಯಸ, ಸಾಂಬಾರ್‌, ಪಲ್ಯ, ಅವಿಯಲ್‌, ಬಾಜಿ, ಕೂಟು, ರಾಯ್ತ, ಚಿಪ್ಸ್‌, ಕಟ್ಲೆಟ್‌, ಹಪ್ಪಳ ಮುಂತಾದ ಯಾವುದೇ ಬಗೆಯ ಅಡುಗೆಗೆ ಇದು ಸೈ. ಆದರೆ ಆರೋಗ್ಯಕ್ಕೇನು ಲಾಭ (Nutritional benefits of Sweet Potatoes) ಇದನ್ನು ತಿನ್ನುವುದರಿಂದ? ಇಲ್ಲಿದೆ ಮಾಹಿತಿ.

VISTARANEWS.COM


on

Sweet potatoes have the ability to control diabetes and prevent cancer
Koo

ಬೆಂಗಳೂರು: ಬಾಯಿಗೆ ರುಚಿ ಹತ್ತಿಸುವ ಸಿಹಿಯಾದ ಗೆಣಸಿನ (Sweet Potatoes) ಕಾಲವಿದು. ಕಾಲಕ್ಕೆ ತಕ್ಕ ಆಹಾರವನ್ನು ಸೇವಿಸಬೇಕು ಎನ್ನುವುದು ಭಾರತೀಯರಲ್ಲಿ ಪ್ರಾಚೀನ ದಿನಗಳಿಂದಲೂ ಚಾಲ್ತಿಯಲ್ಲಿರುವ ತತ್ವ. ಇತ್ತೀಚಿನ ವರ್ಷಗಳಲ್ಲಿ ಹೊತ್ತುಗೊತ್ತಿಲ್ಲದೆ ಸಿಕ್ಕಿದ್ದೆಲ್ಲಾ ತಿನ್ನುವ ರೂಢಿ ಬೆಳೆದು ಬಂದಿದೆ. ಆದರೆ ಚಳಿಗಾಲದಲ್ಲಿ ಬೆಳೆಯುವ ಬೆಳೆಗಳೇ ಆ ಕಾಲಕ್ಕೆ ದೇಹವನ್ನು ಆರೋಗ್ಯಪೂರ್ಣವಾಗಿ ಇಡಬಲ್ಲವು ಎನ್ನುವುದು ನೂರು ಪ್ರತಿಶತ ಸತ್ಯ.
ಗೆಣಸನ್ನು (Sweet Potatoes) ವೈವಿಧ್ಯಮಯ ಅಡುಗೆಗಳಲ್ಲಿ ಉಪಯೋಗಿಸಬಹುದು. ಸುಮ್ಮನೆ ಬೇಯಿಸಿ, ಸುಲಿದು ತಿನ್ನುವುದರಿಂದ ಹಿಡಿದು, ಹೋಳಿಗೆ, ಪಾಯಸ, ಸಾಂಬಾರ್‌, ಪಲ್ಯ, ಅವಿಯಲ್‌, ಬಾಜಿ, ಕೂಟು, ರಾಯ್ತ, ಚಿಪ್ಸ್‌, ಕಟ್ಲೆಟ್‌, ಹಪ್ಪಳ ಮುಂತಾದ ಯಾವುದೇ ಬಗೆಯ ಅಡುಗೆಗೆ ಇದು ಸೈ. ಕೊಂಚ ಸಿಹಿ ರುಚಿ ಇದ್ದರೂ, ಖಾರ ರುಚಿಯ ಅಡುಗೆಗೆ ಸಹ ಇದು ಯೋಗ್ಯವೆನಿಸಿದೆ. ಇವೆಲ್ಲ ಬಾಯಿ ರುಚಿಯ ಮಾತಾಯಿತು. ಆರೋಗ್ಯಕ್ಕೇನು ಲಾಭ ಇದನ್ನು ತಿನ್ನುವುದರಿಂದ ಎನ್ನುವುದನ್ನು ನೋಡೋಣ.

ಮಧುಮೇಹ ನಿಯಂತ್ರಣ

ಇದರ ರುಚಿ ಸಿಹಿಯೇ ಆದರೂ ರಕ್ತದಲ್ಲಿ ಸಕ್ಕರೆಯಂಶವನ್ನು ಏರಿಳಿತ ಮಾಡಿಸುವುದಿಲ್ಲ. ಇದರ ಗ್ಲೈಸೆಮಿಕ್‌ ಸೂಚಿ ಕಡಿಮೆ ಇದ್ದು, ಮಧುಮೇಹಿಗಳಿಗೆ ಇದು ಸೇವಿಸಬಹುದಾದ ಆಹಾರವೆನಿಸಿದೆ. ಇದರಲ್ಲಿ ನಾರಿನಂಶ ಹೇರಳವಾಗಿದ್ದು, ನಿಧಾನವಾಗಿ ಜೀರ್ಣವಾಗಿ ರಕ್ತವನ್ನು ಸೇರುತ್ತದೆ. ಹಾಗಾಗಿ ಇದನ್ನು ತಿಂದಾಕ್ಷಣ ರಕ್ತದಲ್ಲಿ ಸಕ್ಕರೆಯಂಶ ಧಿಡೀರ್‌ ಏರಿಕೆ ಆಗುವುದಿಲ್ಲ.

ಕ್ಯಾನ್ಸರ್‌ ತಡೆಯುವ ಸಾಮರ್ಥ್ಯ

ಇದರಲ್ಲಿರುವ ಬೀಟಾ ಕ್ಯಾರೊಟಿನ್‌ ಮತ್ತು ಆಂಥೋಸಯನಿನ್‌ಗಳು ದೇಹಕ್ಕೆ ಮಹತ್ವದ ಸತ್ವಗಳನ್ನು ನೀಡುತ್ತವೆ. ದೇಹದಲ್ಲಿ ತೇಲಾಡುವ ಮುಕ್ತ ಕಣಗಳನ್ನು ನಿರ್ಬಂಧಿಸುವ ಸಾಮರ್ಥ್ಯ ಈ ಪೋಷಕಾಂಶಗಳಿಗಿದ್ದು, ಕ್ಯಾನ್ಸರ್‌ನಂಥ ಮಾರಕ ರೋಗಗಳ ಭೀತಿಯನ್ನು ದೂರ ಮಾಡುತ್ತವೆ. ಅದಲ್ಲದೆ, ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುವಾದ ಇಂಥ ಉತ್ಕರ್ಷಣ ನಿರೋಧಕಗಳನ್ನು ಹೊಂದಿದ ಆಹಾರಗಳ ಸೇವನೆ ಅತಿ ಮುಖ್ಯ.

ಇದನ್ನೂ ಓದಿ: Navya Naveli Nanda: ಆರಾಧ್ಯ ಬಚ್ಚನ್‌ ನನಗಿಂತ ಹೆಚ್ಚು ಬುದ್ಧಿವಂತೆ ಎಂದ ಶ್ವೇತಾ ಬಚ್ಚನ್ ಮಗಳು!

ಪೋಷಕಾಂಶಗಳು ಹೇರಳ

ಇದರಲ್ಲಿ ದೇಹಕ್ಕೆ ಅಗತ್ಯವಾದ ನಾರಿನಂಶ ಭರಪೂರ ಇದೆ. ಇದರಿಂದ ಹೆಚ್ಚು ಕಾಲದವರೆಗೆ ಹೊಟ್ಟೆ ತುಂಬಿದ ಅನುಭವವಾಗಿ, ಕಳ್ಳ ಹಸಿವೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ವಿಟಮಿನ್‌ ಸಿ, ಎ ಮತ್ತು ಹಲವು ರೀತಿಯ ಬಿ ಜೀವಸತ್ವಗಳು ಇದರಲ್ಲಿವೆ. ಪೊಟಾಶಿಯಂ, ಕಬ್ಬಿಣ, ಮೆಗ್ನೀಶಿಯಂನಂಥ ಖನಿಜಗಳು ಸಾಕಷ್ಟಿದ್ದು, ದೇಹಕ್ಕೆ ಬೇಕಾದ ಸೂಕ್ಷ್ಮ ಪೋಷಕಾಂಶಗಳನ್ನು ಇದು ನೀಡುತ್ತದೆ. ಶರೀರದಲ್ಲಿ ಎಲೆಕ್ಟ್ರೊಲೈಟ್‌ ಸಮತೋಲನಕ್ಕೂ ಇದು ನೆರವಾಗುತ್ತದೆ

ತ್ವಚೆ, ಚರ್ಮಕ್ಕೆ ಲಾಭ

ಇದರಲ್ಲಿರುವ ವಿಟಮಿನ್‌ ಅಂಶಗಳಿಂದ ದೃಷ್ಟಿಯನ್ನು ಚುರುಕಾಗಿಸಬಹುದು ಮತ್ತು ತ್ವಚೆಯನ್ನು ಕಾಂತಿಯುಕ್ತಗೊಳಿಸಬಹುದು. ಇದರಲ್ಲಿರುವ ಕೊಲಿನ್‌ ಅಂಶವು ಕಣ್ಣಿಗೆ ಅಗತ್ಯವಾದ ಸತ್ವಗಳನ್ನು ನೀಡಿ, ದೃಷ್ಟಿಯನ್ನು ಕಾಪಾಡುತ್ತದೆ.

ಪಚನಕಾರಿ

ನಾರಿನಂಶ ಹೆಚ್ಚಿರುವುದರಿಂದ ಜೀರ್ಣಾಂಗಗಳ ದಕ್ಷತೆಯನ್ನು ಹೆಚ್ಚಿಸುತ್ತದೆ. ಮಲಬದ್ಧತೆಯನ್ನು ನಿವಾರಿಸಿ, ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಜೀರ್ಣಾಂಗಗಳು ಚುರುಕಾದರೆ ಶರೀರದಲ್ಲಿ ಅನಗತ್ಯ ಕೊಬ್ಬು ಜಮೆಯಾಗದಂತೆ ತಡೆಯುವುದು ಸುಲಭ. ಈ ಎಲ್ಲಾ ಕಾರಣಗಳಿಂದ ಇದು ತೂಕ ಇಳಿಸುವವರಿಗೂ ಉಪಯುಕ್ತ ತಿನಿಸು.

ರುಚಿಕರ ಖಾದ್ಯ

ಇದು ಭಾರತದಲ್ಲಿ ಮಾತ್ರವಲ್ಲ, ಜಗತ್ತಿನೆಲ್ಲೆಡೆ ಬಳಕೆಯಲ್ಲಿರುವ ಗಡ್ಡೆ. ಐರೋಪ್ಯ ಸೂಪ ಶಾಸ್ತ್ರಗಳಲ್ಲಿ, ಪೂರ್ವ ದೇಶಗಳ ಅಡುಗೆಗಳಲ್ಲಿ ಸಹ ಇದರ ಬಳಕೆಯಿದೆ. ಕೊರೆಯುವ ಚಳಿಯಿರುವ ದೇಶಗಳಲ್ಲಿ ಹಾಗೂ ದ್ವೀಪ ರಾಷ್ಟ್ರಗಳಲ್ಲಿ ಗಡ್ಡೆ-ಗೆಣಸುಗಳ ಬಳಕೆ ವ್ಯಾಪಕವಾಗಿರುವುದರಿಂದ ರಷ್ಯಾದಿಂದ ಹಿಡಿದು ಹವಾಯ್‌ ದ್ವೀಪಗಳವರೆಗೆ ಇದು ಸರ್ವವ್ಯಾಪಿ. ಇನ್ನು ಭಾರತದ ಎಲ್ಲಾ ಭಾಗಗಳಲ್ಲೂ ಗೆಣಸಿನ ಖಾದ್ಯಗಳು ಜನಪ್ರಿಯ. ಬೇಯಿಸಿ, ಕರಿದು, ಸುಟ್ಟು, ಬೇಕ್‌ ಮಾಡಿ, ಹೆಚ್ಚಿ ಒಗ್ಗರಣೆ ಹಾಕಿ, ರುಬ್ಬಿ ಸ್ಮೂದಿ ಮಾಡಿ- ಹೀಗೆ ನಮ್ಮ ಕಲ್ಪನೆಯ ಯಾವುದೇ ರೀತಿಯಲ್ಲಿ ಇವುಗಳನ್ನು ಅಡುಗೆಯಲ್ಲಿ ಬಳಸಬಹುದು. ಚಳಿಗಾಲದಲ್ಲಿ ಇದರ ಬಳಕೆ ಹೆಚ್ಚು. ಋತುಮಾನಕ್ಕೆ ಸರಿಯಾದ ಆಹಾರವೂ ಹೌದಾಗಿರುವ ಈ ಸತ್ವಶಾಲಿ ಗಡ್ಡೆಯನ್ನು ನಿಯಮಿತವಾಗಿ ತಿನ್ನಿ, ಆರೋಗ್ಯ ವೃದ್ಧಿಸಿಕೊಳ್ಳಿ.

Continue Reading

ತುಮಕೂರು

Food poisoning: ಪಾನಕ, ಮಜ್ಜಿಗೆ ಸೇವಿಸಿ ಒಂದೇ ಗ್ರಾಮದ 45 ಮಂದಿ ಅಸ್ವಸ್ಥ

Food poisoning: ಬುಧವಾರ ರಾಮನವಮಿ ಹಿನ್ನೆಲೆಯಲ್ಲಿ ಕುಣಿಗಲ್ ತಾಲೂಕಿನ ಮಂಗಳಾ ಗೇಟ್ ಬಳಿಯಿರುವ ಸುಬ್ರಮಣ್ಯ ದೇವಸ್ಥಾನದಲ್ಲಿ ಭಕ್ತರು ಮಜ್ಜಿಗೆ, ಪಾನಕವನ್ನು ಸೇವನೆ ಮಾಡಿದ್ದರು. ಇವರಿಗೆ ಮಧ್ಯರಾತ್ರಿಯಿಂದ ಹೊಟ್ಟೆನೋವು ಬಂದಿದೆ. ಬಳಿಕ ವಾಂತಿ- ಭೇದಿ ಶುರುವಾಗಿದೆ. ಯಡಿಯೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಲಾಗಿತ್ತು. ಅಲ್ಲಿ ಚಿಕಿತ್ಸೆ ನೀಡಲಾಯಿತಾದರೂ ಆರೋಗ್ಯ ಸುಧಾರಿಸದ ಹಿನ್ನೆಲೆಯಲ್ಲಿ ಕುಣಿಗಲ್ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

VISTARANEWS.COM


on

Food poisoning 45 people fall ill after consuming drink buttermilk
Koo

ತುಮಕೂರು: ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಕೊಡವತ್ತಿ ಕ್ರಾಸ್‌ನ ಗೊಲ್ಲರಹಟ್ಟಿಯಲ್ಲಿ ರಾಮನವಮಿಯಂದು ಪಾನಕ, ಮಜ್ಜಿಗೆ ಸೇವಿಸಿ ಒಂದೇ ಗ್ರಾಮದ 45 ಮಂದಿ ಅಸ್ವಸ್ಥರಾಗಿರುವ‌ (Food poisoning) ಪ್ರಕರಣ ನಡೆದಿದೆ.

ಬುಧವಾರ ರಾಮನವಮಿ ಹಿನ್ನೆಲೆಯಲ್ಲಿ ಕುಣಿಗಲ್ ತಾಲೂಕಿನ ಮಂಗಳಾ ಗೇಟ್ ಬಳಿಯಿರುವ ಸುಬ್ರಮಣ್ಯ ದೇವಸ್ಥಾನದಲ್ಲಿ ಭಕ್ತರು ಮಜ್ಜಿಗೆ, ಪಾನಕವನ್ನು ಸೇವನೆ ಮಾಡಿದ್ದರು. ಇವರಿಗೆ ಮಧ್ಯರಾತ್ರಿಯಿಂದ ಹೊಟ್ಟೆನೋವು ಬಂದಿದೆ. ಬಳಿಕ ವಾಂತಿ- ಭೇದಿ ಶುರುವಾಗಿದೆ.

ಹೀಗಾಗಿ ಬೆಳಗ್ಗೆ ಯಡಿಯೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಲಾಗಿತ್ತು. ಅಲ್ಲಿ ಚಿಕಿತ್ಸೆ ನೀಡಲಾಯಿತಾದರೂ ಆರೋಗ್ಯ ಸುಧಾರಿಸದ ಹಿನ್ನೆಲೆಯಲ್ಲಿ ಕುಣಿಗಲ್ ತಾಲೂಕು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ.

Student Death: ರೈಲಿಗೆ ತಲೆ ಕೊಟ್ಟು ಮಣಿಪಾಲ್‌ ಆಸ್ಪತ್ರೆಯ ಸ್ಟಾಫ್ ನರ್ಸ್ ಸೂಸೈಡ್‌

ಬೆಂಗಳೂರು: ರೈಲಿಗೆ ಸಿಲುಕಿ ಯುವಕನೊಬ್ಬ ಆತ್ಮಹತ್ಯೆಗೆ (Student death) ಶರಣಾಗಿದ್ದಾರೆ. ಬೆಂಗಳೂರಿನ ದೀಪಾಂಜಲಿನಗರ ರೈಲ್ವೆ ಟ್ರಾಕ್ ಬಳಿ ಘಟನೆ ನಡೆದಿದೆ. ವಿಜಯಪುರ ಮೂಲದ ಚನ್ನಬಸು ಅಶೋಕ್ (22) ಮೃತ ದುರ್ದೈವಿ.

ಚನ್ನಬಸು ಅಶೋಕ್‌ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ. ಬೆಂಗಳೂರಿನ ತನ್ನ ಚಿಕ್ಕಮ್ಮನೊಟ್ಟಿಗೆ ವಾಸವಾಗಿದ್ದ. ಇಂದು ಗುರುವಾರ ಮನೆಯಿಂದ ಹೊರಟವನು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸಿಟಿ ರೈಲ್ವೇ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ: Summer Special Trains: ಹಾಲಿಡೇ ಟ್ರಿಪ್‌ಗೆ ರೆಡಿನಾ? ಬೆಂಗಳೂರು-ಮೈಸೂರಿನಿಂದ ಈ ರಾಜ್ಯಗಳಿಗೆ ಸ್ಪೆಷಲ್‌ ಟ್ರೈನ್‌

ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

ಬೆಂಗಳೂರಿನ ಕಮ್ಮನಹಳ್ಳಿ ಮುಖ್ಯರಸ್ತೆಯ ಸುಖಸಾಗರ್ ಬಳಿ ವೃದ್ಧರೊಬ್ಬರ ಮೃತದೇಹ ಪತ್ತೆಯಾಗಿದೆ. ಮೃತದೇಹ ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ಕೊಟ್ಟಿರುವ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಗೆ ರವಾನಿಸಿದ್ದಾರೆ. ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೃತರ ಗುರುತು ಪತ್ತೆಯಾಗಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.

ಮಕ್ಕಳಾಗಿಲ್ಲವೆಂದು ಕಿರುಕುಳ; ಶೌಚಾಲಯದಲ್ಲಿ ನೇಣು ಬಿಗಿದುಕೊಂಡ ಗೃಹಿಣಿ

ಚಿತ್ರದುರ್ಗ: ಗಂಡನ ಮನೆಯವರ ಕಿರುಕುಳಕ್ಕೆ ಬೇಸತ್ತು ಮಹಿಳೆಯೊಬ್ಬರು ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾರೆ. ಚಿತ್ರದುರ್ಗದ ಹೊಸದುರ್ಗ ತಾಲೂಕಿನ ಮತ್ತೋಡು ಗ್ರಾಮದಲ್ಲಿ ಘಟನೆ ನಡೆದಿದೆ. ಆಶಾ (26) ಮೃತ ದುರ್ದೈವಿ.

ಮಕ್ಕಳಾಗಿಲ್ಲ ಎಂಬ ಕಾರಣವನ್ನೇ ನೆಪವನ್ನಾಗಿ ಇಟ್ಟುಕೊಂಡು ಪತಿ ಕುಟುಂಬಸ್ಥರು ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಬೇಕರಿಯಲ್ಲಿ ಕೆಲಸ ಮಾಡಿಕೊಂಡಿದ್ದ ಆಶಾಗೆ, ಮದುವೆ ಆಗಿ 5 ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಈ ಕಾರಣಕ್ಕೆ ಆಶಾಗೆ ತವರು ಮನೆಗೆ ವಾಪಸ್‌ ಕಳಿಸುತ್ತೇನೆ ಎಂದು ಅತ್ತೆ ಹಿಂಸೆ ನೀಡುತ್ತಿದ್ದರು.

ಪತಿ ಕುಟುಂಬಸ್ಥರ ಕಿರುಕುಳಕ್ಕೆ ಬೇಸತ್ತು ಆಶಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆಶಾ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Continue Reading

ಆರೋಗ್ಯ

Dental Braces: ಹಲ್ಲುಗಳ ಸೌಂದರ್ಯ ವೃದ್ಧಿಗೆ ಬ್ರೇಸಸ್‌ ಹಾಕುವ ಯೋಚನೆ ಇದೆಯೇ? ಈ ಮಾಹಿತಿ ತಿಳಿದಿರಲಿ

ಹಲ್ಲಿಗೆ ಬ್ರೇಸ್‌ (Dental braces) ಹಾಕಿಕೊಳ್ಳುವವರ ಸಂಖ್ಯೆ ಮೊದಲಿಗಿಂತ ಈಗೇಕೆ ಹೆಚ್ಚಿದೆ? ಮೊದಲನೇದಾಗಿ ಹೆಚ್ಚಿದ ಸೌಂದರ್ಯ ಪ್ರಜ್ಞೆ. ನಗು ಸುಂದರವಾಗಿರಬೇಕೆಂದು ಹಂಬಲಿಸುವವರ ಸಂಖ್ಯೆ ಹೆಚ್ಚಿದೆ. ಇದಕ್ಕಿಂತ ಮುಖ್ಯವಾಗಿ ಬದಲಾಗಿರುವ ನಮ್ಮ ಆಹಾರ ಶೈಲಿ. ಬ್ರೇಸ್‌ ಹಾಕುವ ಪ್ರಕ್ರಿಯೆ ಸುಲಭವಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ವರ್ಷಗಟ್ಟಲೆ ಸಮಯ ಹಿಡಿಯುವ ಚಿಕಿತ್ಸೆಯಿದು. ಬ್ರೇಸ್‌ ಹಾಕಿಕೊಳ್ಳುವ ಯೋಚನೆ ಇರುವಂಥವರು ಈ ಬಗ್ಗೆ ತಿಳಿದುಕೊಳ್ಳಲೇಬೇಕಾದ ಒಂದಿಷ್ಟು ಮಾಹಿತಿಗಳು ಇಲ್ಲಿವೆ.

VISTARANEWS.COM


on

Dental Braces
Koo

ನೋಡುವುದಕ್ಕೆ ಒಂದೇ ಸಾಲಿನಲ್ಲಿ ಮುತ್ತು ಪೋಣಿಸಿದಂತೆ ಕಾಣುವ ಹಲ್ಲುಗಳು ಯಾರಿಗೆ ಬೇಡ? ಹಾಗಾಗಿ ಹಲ್ಲುಗಳಿಗೆ ಬ್ರೇಸಸ್‌ (Dental braces) ಹಾಕಿಸಿಕೊಳ್ಳುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿದೆ. ದಂತಗಳ ವಕ್ರತೆ, ಬೈಟ್‌ ಸರಿಯಿಲ್ಲದಿರುವುದು, ಒಂದರಮೇಲೊಂದು ಹಲ್ಲುಗಳು ಬೆಳೆಯುವುದು- ಇಂಥ ನಾನಾ ಸಮಸ್ಯೆಗಳಿಗೆ ಹಲ್ಲುಗಳಿಗೆ ಬ್ರೇಸ್‌ ಹಾಕುವುದರಿಂದ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಆದರೆ ಬ್ರೇಸ್‌ ಹಾಕುವ ಪ್ರಕ್ರಿಯೆ ಸುಲಭವಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ವರ್ಷಗಟ್ಟಲೆ ಸಮಯ ಹಿಡಿಯುವ ಚಿಕಿತ್ಸೆಯಿದು. ಬ್ರೇಸ್‌ ಹಾಕಿಕೊಳ್ಳುವ ಯೋಚನೆ ಇರುವಂಥವರು ಈ ಬಗ್ಗೆ ತಿಳಿದುಕೊಳ್ಳಲೇಬೇಕಾದ ಒಂದಿಷ್ಟು ಮಾಹಿತಿಗಳು ಇಲ್ಲಿವೆ.

Young Woman Pointing at Her Braces

ಏಕೆ ಹೆಚ್ಚಿವೆ?

ಬ್ರೇಸ್‌ ಹಾಕಿಕೊಳ್ಳುವವರ ಸಂಖ್ಯೆ ಮೊದಲಿಗಿಂತ ಈಗೇಕೆ ಹೆಚ್ಚಿದೆ? ಮೊದಲನೇದಾಗಿ ಹೆಚ್ಚಿದ ಸೌಂದರ್ಯ ಪ್ರಜ್ಞೆ. ನಗು ಸುಂದರವಾಗಿರಬೇಕೆಂದು ಹಂಬಲಿಸುವವರ ಸಂಖ್ಯೆ ಹೆಚ್ಚಿದೆ. ಇದಕ್ಕಿಂತ ಮುಖ್ಯವಾಗಿ ಬದಲಾಗಿರುವ ನಮ್ಮ ಆಹಾರ ಶೈಲಿ. ಮೊದಲಿನವರಂತೆ ಕಬ್ಬು ಕಚ್ಚಿಕೊಂಡು ತಿನ್ನುವವರು, ಅಡಿಕೆಯಂಥ ಗಟ್ಟಿ ವಸ್ತುಗಳನ್ನು ಜಗಿಯುವವರ, ಪೇರಲೆ ಹಣ್ಣು ಕಚ್ಚಿ ತಿನ್ನುವವರ ಸಂಖ್ಯೆಯೇ ಕಡಿಮೆಯಾಗಿದೆ. ತಿನ್ನುವುದೆಲ್ಲವೂ ಮೆದುವಾದ, ಜಂಕ್‌ ಆಹಾರಗಳೇ. ಇದರಿಂದ ಒಡಸುಗಳು ಸಾಕಷ್ಟು ವಿಕಾಸವಾಗದೆ, ಬಿದ್ದು-ಹುಟ್ಟುವ ಹಲ್ಲುಗಳಿಗೆ ಜಾಗವೇ ಇರುವುದಿಲ್ಲ. ಇದರಿಂದ ಮಕ್ಕಳ ಬಾಯಲ್ಲಿ ಒಂದರಮೇಲೊಂದು ಹಲ್ಲು ಹುಟ್ಟುವುದು, ಸಾಲು ತಪ್ಪುವುದು, ವಕ್ರವಾಗುವುದು ಸಾಮಾನ್ಯ ಎನಿಸಿದೆ.

ಯಾವ ರೀತಿಯದು?

ಹೌದು, ಇದರಲ್ಲೂ ಹಲವಾರು ರೀತಿಯದ್ದು ಲಭ್ಯವಿದೆ. ಸಾಂಪ್ರದಾಯಕ ರೀತಿಯ ಲೋಹದ ಬ್ರೇಸ್‌, ಸೆರಾಮಿಕ್ ಬ್ರೇಸ್‌, ಲಿಂಗ್ವಲ್‌ ಬ್ರೇಸ್‌ ಮತ್ತು ಪಾರದರ್ಶಕ ಅಲೈನರ್‌ಗಳು ಎಂದು ಇವನ್ನು ವಿಂಗಡಿಸಬಹುದು. ಲೋಹದ ಬ್ರೇಸ್‌ಗಳು ಸಾಮಾನ್ಯವಾಗಿ ಹೆಚ್ಚಿನ ಜನರ ಹಲ್ಲುಗಳ ಮೇಲೆ ಕಾಣುವಂಥವು. ಪ್ರತಿಯೊಂದು ಹಲ್ಲಿಗೂ ಒಂದು ಬ್ರೇಸ್‌ ಅಂಟಿಸಿ, ಅದಕ್ಕೆ ತಂತಿಯ ಜಾಲದಿಂದ ಬಿಗಿಯಲಾಗುತ್ತದೆ. ಬಾಯಿ ತೆಗೆಯುತ್ತಿದ್ದಂತೆ ಎದ್ದು ಕಾಣುವಂಥ ಬ್ರೇಸ್‌ಗಳಿವು. ಸಿರಾಮಿಕ್‌ ಸಹ ಇದೇ ರೀತಿಯಲ್ಲಿ ಬಳಕೆಯಾಗುವುದಾದರೂ, ಪ್ರತೀ ಹಲ್ಲಿಗೂ ಅಂಟಿಸುವ ಲೋಹದ ಬ್ರೇಸ್‌ ಬದಲು, ಹಲ್ಲಿನ ಬಣ್ಣದ್ದೇ ಸಿರಾಮಿಕ್‌ ಬಳಕೆಯಾಗುತ್ತದಷ್ಟೇ. ಇದರಿಂದ ಬ್ರೇಸ್ ತೀರಾ ಎದ್ದು ಕಾಣುವುದಿಲ್ಲ. ಲಿಂಗ್ವಲ್‌ ಬ್ರೇಸ್‌ಗಳನ್ನು ಬಾಯೊಳಗೆ, ಅಂದರೆ ಹಲ್ಲಿನ ಹಿಂಬದಿಯಲ್ಲಿ ಹಾಕಲಾಗುತ್ತದೆ. ಇದು ಒಂದಿನಿತೂ ಹೊರಗೆ ಕಾಣುವುದಿಲ್ಲ. ಕ್ಲಿಯರ್‌ ಅಲೈನರ್‌ಗಳು ಸಂಪೂರ್ಣ ಪಾರದರ್ಶಕ. ಆಯಾ ಹಲ್ಲುಗಳ ಅಳತೆಗೆ ಹೊಂದಿಸಿ ಇವುಗಳನ್ನು ಮಾಡಿ ಕೂರಿಸಲಾಗುತ್ತದೆ. ಬ್ರೇಸ್‌ ಹಾಕಿದ್ದು ಮೇಲ್ನೋಟಕ್ಕೆ ಗೊತ್ತೇ ಆಗುವುದಿಲ್ಲ.

Beautiful Woman Pointing at Dental Braces on Red Background

ಎಷ್ಟು ದಿನ ಬೇಕು?

ಹಲ್ಲುಗಳ ಸಮಸ್ಯೆ ಏನು ಮತ್ತು ಎಷ್ಟು ತೀವ್ರ ಎನ್ನುವುದರ ಮೇಲೆ, ಚಿಕಿತ್ಸೆ ಪೂರ್ಣಗೊಳ್ಳುವುದಕ್ಕೆ ಎಷ್ಟು ಸಮಯ ಬೇಕು ಎಂಬುದು ನಿರ್ಧಾರವಾಗುತ್ತದೆ. ಕೆಲವೊಮ್ಮೆ ಆಯ್ಕೆ ಮಾಡಿಕೊಂಡ ಬ್ರೇಸ್‌ ಮೇಲೂ ಇದು ಅವಲಂಬಿತ ಆಗಿರುತ್ತದೆ. ಲೋಹದ ಬ್ರೇಸ್‌ಗಳು 18ರಿಂದ 24 ತಿಂಗಳುಗಳವರೆಗೆ ಸಮಯ ಬೇಡಿದರೆ, ಪಾರದರ್ಶಕ ಅಲೈನರ್‌ಗಳ ಸಮಯ 6ರಿಂದ 18 ತಿಂಗಳವರೆಗೂ ವ್ಯಾಪಿಸಬಹುದು.

ನೋವು ಮತ್ತು ಕಿರಿಕಿರಿ

ಯಾವುದೇ ರೀತಿಯ ಬ್ರೇಸ್‌ ಹಾಕಿದರೂ ಒಂದಿಷ್ಟು ನೋವು ಮತ್ತು ಕಿರಿಕಿರಿ ತಪ್ಪಿದ್ದಲ್ಲ. ಅದರಲ್ಲೂ ಮೊದಲಿಗೆ ಹಾಕಿದಾಗ, ಅದು ಒಗ್ಗುವುದಕ್ಕೆ ವಾರಗಟ್ಟಲೆ ಬೇಕಾಗುತ್ತದೆ. ಆವರೆಗೆ ಬಾಯಿ, ದಂತ, ಒಸಡು ಎಲ್ಲೆಲ್ಲೂ ನೋವು. ನಂತರ ತಿಂಗಳಿಗೊಮ್ಮೆ ಅದನ್ನು ಹೊಂದಿಸಿಕೊಳ್ಳಲು, ಚಿಕಿತ್ಸೆ ಎಷ್ಟು ಸರಿಯಾಗಿದೆ ನೋಡಲು ತಜ್ಞರಲ್ಲಿ ಹೋಗಲೇಬೇಕು. ಆಗಲೂ ಒಂದೆರಡು ದಿನ ನೋವು ಮತ್ತು ಕಿರಿಕಿರಿ ಕಟ್ಟಿಟ್ಟಿದ್ದು.

ಊಟದ ಪಥ್ಯ

ವರ್ಷಗಟ್ಟಲೆ ಪಾಲಿಸಬೇಕಾದ ಕ್ರಮಗಳಲ್ಲಿ ಇದೂ ಒಂದು. ತಿಂದರೆ ಆರೋಗ್ಯಕ್ಕೆ ಸಮಸ್ಯೆ ಎಂದಲ್ಲ, ತಿನ್ನುವುದಕ್ಕೆ ಕಷ್ಟ ಎನ್ನುವ ಕಾರಣಕ್ಕೆ ಪಾಲಿಸಬೇಕಾದ ಪಥ್ಯವಿದು. ಉದಾ, ಚಕ್ಕುಲಿ, ನಿಪ್ಪಟ್ಟು ಮುಂತಾದ ಗಟ್ಟಿ ತಿನಿಸುಗಳಿಂದ ಬ್ರೇಸ್‌ ಮುರಿಯುತ್ತದೆ. ಹೀಗೇ ಪದೇಪದೆ ಮುರಿಯುತ್ತಿದ್ದರೆ ಚಿಕಿತ್ಸೆಯ ಅವಧಿ ಇನ್ನಷ್ಟು ದೀರ್ಘವಾಗಬಹುದು. ಅಂಟಾದ ತಿನಿಸುಗಳು, ಸಕ್ಕರೆಭರಿತ ತಿಂಡಿಗಳು, ಗಮ್‌ ಅಥವಾ ಕ್ಯಾರಮಲ್‌ ಇರುವ ಚಾಕಲೇಟ್‌ ಇತ್ಯಾದಿಗಳು ಈ ಚಿಕಿತ್ಸೆ ಮುಗಿಯುವವರೆಗೆ ಮುಟ್ಟುವಂತಿಲ್ಲ.

Dental Braces clean

ಬಾಯಿಯ ಸ್ವಚ್ಛತೆ

ಇದಂತೂ ಕಟ್ಟುನಿಟ್ಟಾಗಿ ಪಾಲಿಸಲೇಬೇಕಾದ್ದು. ಬಾಯಿ ತುಂಬಾ ಹರಿದಾಡುವ ತಂತಿ-ಬೇಲಿಯಂಥ ವಸ್ತುಗಳಿಂದಾಗಿ ಆಹಾರದ ತುಣುಕುಗಳು ಎಲ್ಲೆಂದರಲ್ಲಿ ಅಡಗಿ ಕೂರುತ್ತವೆ. ಪ್ರತಿ ಬಾರಿ ಊಟ-ತಿಂಡಿಯ ನಂತರ ಹಲ್ಲುಜ್ಜಲೇಬೇಕು. ಹಲ್ಲುಗಳ ನಡುವಿನ ಶುಚಿತ್ವಕ್ಕೆ ಸಣ್ಣ ಇಂಟ್ರಾಡೆಂಟಲ್‌ ಬ್ರಷ್‌ಗಳನ್ನು ಬಳಸಲೇಬೇಕು. ದಿನಕ್ಕೆ ಒಂದಿಷ್ಟು ಹೊತ್ತು ಬಾಯಿಯ ಸ್ವಚ್ಛತೆಗೆಂದೇ ಸಮಯ ಮೀಸಲಿಡಬೇಕಾಗುತ್ತದೆ. ಈ ಬಗ್ಗೆ ಉದಾಸೀನ ಮಾಡಿದಲ್ಲಿ ಹಲ್ಲುಗಳು ಎರ್ರಾಬಿರ್ರಿ ಹುಳುಕಾಗುವುದು ನಿಶ್ಚಿತ.

ದುಬಾರಿಯೇ?

ಎಲ್ಲವೂ ಅಲ್ಲ! ಕೆಲವು ಬ್ರೇಸ್‌ಗಳು ಅಷ್ಟೇನೂ ತುಟ್ಟಿಯಲ್ಲ. ಸಾಮಾನ್ಯವಾದ ಲೋಹದ ಬ್ರೇಸ್‌ಗಳು ಕೈಗೆಟುಕುವ ಬೆಲೆಯೇ ಆಗಿರುತ್ತವೆ. ಪಾರದರ್ಶಕ ಅಲೈನರ್‌ಗಳು ದುಬಾರಿ ಬೆಲೆಯವು. ದಂತ ವಿಮೆಯಲ್ಲಿ ಬ್ರೇಸ್‌ಗಳು ಸಾಮಾನ್ಯವಾಗಿ ಸೇರಿರುತ್ತವೆ. ಅದಿಲ್ಲದಿದ್ದರೆ, ವೈದ್ಯರಲ್ಲೇ ಕಂತುಗಳಲ್ಲಿ ಪಾವತಿಸುವ ಆಯ್ಕೆಯೂ ಇರುತ್ತದೆ. ಈ ಎಲ್ಲವನ್ನೂ ಮೊದಲೇ ತಿಳಿದುಕೊಂಡು, ಚಿಕಿತ್ಸೆಗೆ ಕೈ ಹಾಕುವುದು ಜಾಣತನ.

dental braces checkup

ತೆಗೆದ ಮೇಲೆ?

ಇಲ್ಲಪ್ಪಾ, ಮುಗಿಯುವುದಿಲ್ಲ! ಬ್ರೇಸ್‌ನಿಂದ ಮುಕ್ತಿ ಪಡೆದ ನಂತರವೂ ಹಲವಾರು ತಿಂಗಳುಗಳವರೆಗೆ ರಿಟೈನರ್‌ಗಳನ್ನು ಧರಿಸಬೇಕಾಗುತ್ತದೆ. ತಮ್ಮ ಹೊಸ ಸ್ಥಾನದಲ್ಲಿ ಹಲ್ಲುಗಳು ನಿಲ್ಲಬೇಕು ಎಂದರೆ ಇವು ಬೇಕು. ಹಲ್ಲುಗಳ ಸಮಸ್ಯೆ ಮತ್ತು ಚಿಕಿತ್ಸೆಯ ಆಧಾರದ ಮೇಲೆ ಎಷ್ಟು ಸಮಯದವರೆಗೆ ರಿಟೈನರ್‌ ಧರಿಸಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ. ಇವುಗಳು ಬೇಕಾದಾಗ ತೆಗೆಯಬಲ್ಲ ಕ್ಲಿಪ್‌ಗಳಂತೆ ಇರುತ್ತವೆ. ಹಲ್ಲಿಗೆ ತೀರಾ ತೊಂದರೆಯನ್ನೇನೂ ನೀಡುವುದಿಲ್ಲ.

ಇದನ್ನೂ ಓದಿ: Weight Loss Tips: ಇದ್ದಕ್ಕಿದ್ದಂತೆ ದೇಹದ ತೂಕ ಇಳಿಸಲು ಹೋದರೆ ಏನಾಗುತ್ತದೆ ನೋಡಿ!

Continue Reading

ಆರೋಗ್ಯ

Eye Protection: ಡಿಜಿಟಲ್ ಪರದೆಗಳಿಂದ ಕಣ್ಣುಗಳನ್ನು ಕಾಪಾಡಿಕೊಳ್ಳುವುದು ಹೇಗೆ?

ಪ್ರತಿ ಸಣ್ಣ ವಿಷಯಕ್ಕೂ ಡಿಜಿಟಲ್‌ ತಂತ್ರಜ್ಞಾನವನ್ನು ನೆಚ್ಚಿಕೊಂಡಿರುವ ನಮಗೆ ಪರದೆಯನ್ನು ನೋಡದೆ ಹಗಲೂ ಇಲ್ಲ, ರಾತ್ರಿಯೂ ಇಲ್ಲ! ಇದರ ಫಲವೋ ಎಂಬಂತೆ ಕಣ್ಣುಗಳ ಮೇಲಿನ ಒತ್ತಡ ಹೆಚ್ಚುತ್ತಿದೆ. ದೃಷ್ಟಿ ದೋಷಗಳು ಎಲ್ಲಾ ವಯೋಮಾನದವರಿಗೂ ಅಮರಿಕೊಳ್ಳುತ್ತಿವೆ. ನಮ್ಮ ನೇತ್ರಗಳ ಸುರಕ್ಷತೆಯನ್ನು (Eye protection in Digital world) ಖಾತ್ರಿ ಮಾಡಿಕೊಳ್ಳುವುದು ಹೇಗೆ?

VISTARANEWS.COM


on

Eye Protection
Koo

ಇತ್ತೀಚಿನ ವರ್ಷಗಳ ಸ್ಕ್ರೀನ್‌ ಬಳಕೆಯನ್ನು ಅನಿವಾರ್ಯ ವ್ಯಸನ ಎಂದು ಕರೆಯಬಹುದೇನೋ. ಕಾರಣಗಳು ಏನೇ ಇದ್ದರೂ, ಮೊಬೈಲ್‌ ಮತ್ತು ಕಂಪ್ಯೂಟರ್‌ ಬಳಕೆ ಎದ್ವಾತದ್ವಾ ಹೆಚ್ಚಿದೆ. ಎಳನೀರಿನಾತನಿಗೆ ಹಣ ಕೊಡುವುದರಿಂದ ಹಿಡಿದು, ನಿತ್ಯದ ಉದ್ಯೋಗದವರೆಗೆ ಎಲ್ಲವೂ ಡಿಜಿಟಲ್‌ ಮಯ. ಇವು ಕಂಪ್ಯೂಟರ್‌, ಟ್ಯಾಬ್‌, ಮೊಬೈಲ್‌ ಪರದೆಗೆ ಕಣ್ಣು ಕೀಲಿಸಿಕೊಂಡಿರುವ ಅನಿವಾರ್ಯತೆಯನ್ನು ತಂದೊಡ್ಡುತ್ತಿವೆ. ಇದರಿಂದ ಸಹಜವಾಗಿ ದೊಡ್ಡವರು ಚಿಕ್ಕವರೆನ್ನದೆ ಬಹಳಷ್ಟು ಮಂದಿಯಲ್ಲಿ ಕಣ್ಣಿನ ಸಮಸ್ಯೆ ಕಾಣಿಸುತ್ತಿದೆ. ಇದರಿಂದಾಗಿ ಕಣ್ಣುರಿ, ಕಣ್ಣುಗಳಲ್ಲಿ ಆಯಾಸ, ಕಣ್ಣು ಒಣಗಿದಂತಾಗುವುದು, ತಲೆನೋವು ಮುಂತಾದ ಹಲವಾರು ಸಮಸ್ಯೆಗಳನ್ನು (Eye protection in Digital world) ಕಾಣಿಸಿಕೊಳ್ಳುತ್ತಿವೆ.

Closeup of woman eye with visual effects

ಏಕೆ ಹೀಗೆ?

ಸಾಮಾನ್ಯವಾಗಿ ನಿಮಿಷಕ್ಕೆ 15-20 ಬಾರಿ ಕಣ್ಣು ಮಿಟುಕಿಸುತ್ತೇವೆ ನಾವು. ಅಂದರೆ, ನೀರಿನ ಕಣಗಳು ಕಣ್ಣನ್ನು ಪದೇಪದೆ ಶುಚಿಗೊಳಿಸಿ, ಕಣ್ಣುರಿ ಮತ್ತು ನೇತ್ರಗಳು ಒಣಗುವುದನ್ನು ತಪ್ಪಿಸುತ್ತವೆ. ಆದರೆ ಓದುವಾಗ, ಆಡುವಾಗ ಮತ್ತು ಕಂಪ್ಯೂಟರ್‌ ಪರದೆ ನೋಡುವಾಗ ಕಣ್ಣು ಮಿಟುಕಿಸುವ ಪ್ರಮಾಣ ಕಡಿಮೆಯಾಗುತ್ತದೆ. ಪರದೆಯನ್ನು ನೋಡುವುದು, ಪುಸ್ತಕ ಓದಿದಷ್ಟು ಸರಳವಲ್ಲವಲ್ಲ. ಹಲವಾರು ಬಣ್ಣಗಳು, ಥಟ್ಟೆಂದು ಚಲಿಸುವ ಅಕ್ಷರ ಅಥವಾ ಚಿತ್ರಗಳು, ಹೊಳೆಯುವ ಮೇಲ್ಮೈ, ಬೆಳಕು ಬೀರುವ ಪರದೆ- ಇವೆಲ್ಲಾ ಸೇರಿ ಕಣ್ಣಿನ ಶ್ರಮವನ್ನು ಹೆಚ್ಚು ಮಾಡುತ್ತವೆ. ಇದರಿಂದ ಹೆಚ್ಚುವ ಡಿಜಿಟಲ್‌ ಆಯಾಸವನ್ನು ಕಂಪ್ಯೂಟರ್‌ ವಿಷನ್‌ ಸಿಂಡ್ರೋಮ್‌ ಎನ್ನಲಾಗುತ್ತದೆ.

ಏನು ಮಾಡಬಹುದು?

ನೇತ್ರಗಳ ರಕ್ಷಣೆಗೆ ಉಪಾಯವಿಲ್ಲವೆಂದಲ್ಲ. ಪರದೆ ನೋಡುವುದರಿಂದ ಆಗಾಗ ಬ್ರೇಕ್‌ ತೆಗೆದುಕೊಳ್ಳಿ. 20-20-20 ನಿಮಯವನ್ನು ಕಡ್ಡಾಯವಾಗಿ ಪಾಲಿಸಿ. ಅಂದರೆ, ಪ್ರತಿ 20 ನಿಮಿಷಗಳಿಗೆ ಒಮ್ಮೆ ಕನಿಷ್ಟ 20 ಅಡಿ ದೂರದ ವಸ್ತುವನ್ನು ಕನಿಷ್ಟ 20 ಸೆಕೆಂಡ್‌ಗಳ ಕಾಲ ವೀಕ್ಷಿಸಿ. ಪ್ರತಿ ಎರಡು ತಾಸುಗಳಿಗೊಮ್ಮೆ 15 ನಿಮಿಷದ ವಿರಾಮ ಅಗತ್ಯ. ಯಾವ ಕೋಣೆಯಲ್ಲಿ ಕಂಪ್ಯೂಟರ್‌ ಬಳಕೆ ಮಾಡುತ್ತೀರೋ, ಅಲ್ಲಿ ಆಗಾಗ ಹ್ಯುಮಿಡಿಫಯರ್‌ ಬಳಕೆ ಮಾಡಿ. ಇದರಿಂದ ಆ ಜಾಗದಲ್ಲಿ ಒಣಹವೆ ಇರುವುದಿಲ್ಲ. ಕಣ್ಣುಗಳು ಒಣಗುವುದೂ ಕಡಿಮೆಯಾಗುತ್ತದೆ.

sunbathing

ಸೂರ್ಯಸ್ನಾನ

ಏನೋ ವಿಪರೀತ ಚಿಕಿತ್ಸೆಯಲ್ಲ ಇದು. ಬೆಳಗಿನ ಎಳೆ ಬಿಸಿಲಿನಲ್ಲಿ ಕಣ್ಣು ಮುಚ್ಚಿಕೊಂಡು, ಕಣ್ಣಿಗೆ ಬಿಸಿಲು ತಾಗುವಂತೆ ಕೆಲವು ನಿಮಿಷ ನಿಲ್ಲುವುದಷ್ಟೆ. ಹೀಗೆ ನಿಲ್ಲುವಾಗ ಕನ್ನಡಕ, ಲೆನ್ಸ್‌ಗಳನ್ನು ತೆಗೆದಿರಿಸಬೇಕು. ಆದರೆ ಯಾವುದೇ ಕಾರಣಕ್ಕೂ ನೇರವಾಗಿ ಸೂರ್ಯನನ್ನು ದಿಟ್ಟಿಸುವಂತಿಲ್ಲ. ಕಣ್ಣು ಮುಚ್ಚಿ ನಿಂತಾಗ, ರೆಪ್ಪೆ ಬಿಸಿಯಾದರೆ ಸಾಕು. ಮಕ್ಕಳಿಗೂ ಈ ಕ್ರಮ ಉಪಯುಕ್ತ. ಹೀಗೆ ಮಾಡುವುದರಿಂದ ರೆಟಿನಾದಿಂದ ಬಿಡುಗಡೆಯಾಗುವ ಡೋಪಮಿನ್‌ ಚೋದಕಗಳು ದೃಷ್ಟಿಯನ್ನು ಚುರುಕಾಗಿಸುತ್ತವೆ.

ಬೆಚ್ಚಗಿನ ಮಸಾಜ್‌

ದೀರ್ಘ ಕಾಲ ಕಂಪ್ಯೂಟರ್‌ ನೋಡುವ ಅನಿವಾರ್ಯತೆಯಿದ್ದರೆ, ಬೆಚ್ಚಗಿನ ನೀರಲ್ಲಿ ಮೃದು ಮತ್ತು ಸ್ವಚ್ಛವಾದ ಹತ್ತಿ ಬಟ್ಟೆಯನ್ನು ಅದ್ದಿ, ಹಿಂಡಿ. ಅದು ಬೆಚ್ಚಗಿರುವವರೆಗೆ ಕಣ್ಣಿಗೆ ಇರಿಸಿಕೊಳ್ಳಿ. ಒಂದೊಂದು ಕಣ್ಣಿಗೂ ಕನಿಷ್ಟ ಮೂರು ಬಾರಿ ಮಾಡಿ. ಇದರಿಂದ ಕಣ್ಣಿನ ಆಯಾಸ ಕಡಿಮೆ ಮಾಡಬಹುದು. ಮಾತ್ರವಲ್ಲ, ಕೈ ಶುದ್ಧಗೊಳಿಸಿಕೊಳ್ಳಿ. ಕಣ್ಣಿನ ಸುತ್ತಲೂ ಮೃದುವಾಗಿ ಮಸಾಜ್‌ ಮಾಡಿ. ಅಗತ್ಯವಿದ್ದರೆ ಒಂದೆರಡು ಹನಿ ಬಾದಾಮಿ ಎಣ್ಣೆಯನ್ನು ಮಸಾಜ್‌ಗೆ ಉಪಯೋಗಿಸಬಹುದು. ಇದರಿಂದ ಈ ಭಾಗದಲ್ಲಿ ರಕ್ತ ಸಂಚಾರ ವೃದ್ಧಿಸಿ. ಆಯಾಸ ಕಡಿಮೆಯಾಗುತ್ತದೆ. ಕಣ್ಣಿನ ಸುತ್ತಲೂ ಉಬ್ಬಿದಂತಾಗಿದ್ದರೆ, ಅಲೊವೇರಾ ಜೆಲ್‌ ಹಾಕಿಯೂ ಮಸಾಜ್‌ ಮಾಡಬಹುದು. ಆದರೆ ಇವೆಲ್ಲಾ ಕಣ್ಣಿನ ಹೊರಭಾಗಕ್ಕೇ ಸೀಮಿತಗೊಳಿಸಬೇಕು. ವೈದ್ಯರು ಕೊಟ್ಟ ಡ್ರಾಪ್ಸ್‌ ಬಿಟ್ಟರೆ, ಇನ್ನೇನ್ನೇನ್ನೂ ಕಣ್ಣೊಳಗೆ ಹಾಕುವಂತಿಲ್ಲ.

Close-up human eye, lens, cornea and brown iris.

ದೂರವಿರಲಿ

ಈ ಪರದೆಗಳನ್ನು ಅತ್ಯಂತ ಹತ್ತಿರದಿಂದ ನೋಡುವ ಅಗತ್ಯವಿಲ್ಲ. ಕಣ್ಣಿನಿಂದ ಇವು ಕನಿಷ್ಟ 25 ಇಂಚಾದರೂ ದೂರವಿರಬೇಕು. ಅಂದಾಜಿಗೆ ಹೇಳುವುದಾದರೆ ಒಂದು ತೋಳಿನಷ್ಟು ದೂರವಿರಬೇಕು. ಕಂಪ್ಯೂಟರ್‌ ಪರದೆಯ ನಡುವಿನ ಭಾಗವು ಕಣ್ಣಿನ ಮಟ್ಟಕ್ಕಿಂದ 10 ಡಿಗ್ರಿಯಷ್ಟು ಕೆಳಗಿದ್ದರೆ ಸೂಕ್ತ. ಪರದೆಯ ಹೊಳಪನ್ನು ಕಡಿಮೆ ಮಾಡಲು ಸ್ಕ್ರೀನ್‌ ಫಿಲ್ಟರ್‌ ಬಳಸುವುದು ಒಳ್ಳೆಯದು. ಮಾತ್ರವಲ್ಲ, ಸುತ್ತಲಿನ ಬೆಳಕಿಗಿಂತ ಪರದೆಯ ಬೆಳಕು ಕಡಿಮೆಯೇ ಇರಬೇಕು. ನಿಯಮಿತವಾಗಿ ಕಣ್ಣುಗಳ ತಪಾಸಣೆ ಮಾಡಿಸಿಕೊಂಡರೆ, ಮುಂದಾಗುವ ತೊಂದರೆಗಳನ್ನು ತಪ್ಪಿಸುವುದಕ್ಕೆ ಅನುಕೂಲ. ಜೊತೆಗೆ, ಕಂಪ್ಯೂಟರ್‌ ಬಳಕೆಗೆ ಸರಿಹೊಂದುವಂಥ ಕನ್ನಡಕ ಧರಿಸುವ ಬಗ್ಗೆ ವೈದ್ಯರಲ್ಲಿ ಚರ್ಚಿಸಬಹುದು. ಡಿಜಿಟಲ್‌ ಜಗತ್ತಿನಲ್ಲಿ ಕಣ್ಣುಗಳ ರಕ್ಷಣೆ ಮಾಡಿಕೊಳ್ಳುವುದು ನಂನಮ್ಮ ಹೊಣೆ.

ಇದನ್ನೂ ಓದಿ: Eye protection in Digital world: ಪರದೆಗಳಿಂದ ನಮ್ಮ ಕಣ್ಣುಗಳನ್ನು ಕಾಪಾಡಿಕೊಳ್ಳುವುದು ಹೇಗೆ?

Continue Reading
Advertisement
Steet Food
ಆಹಾರ/ಅಡುಗೆ3 hours ago

ವಿಸ್ತಾರ ಸಂಪಾದಕೀಯ: ಸಾರ್ವಜನಿಕ ಆಹಾರದಲ್ಲಿ ಆರೋಗ್ಯ ಕಾಳಜಿ ಪ್ರಮುಖವಾಗಿರಲಿ

IPL 2024
ಪ್ರಮುಖ ಸುದ್ದಿ3 hours ago

IPL 2024 : ಪಂಜಾಬ್​ ತಂಡಕ್ಕೆ ವಿರೋಚಿತ 9 ರನ್ ಸೋಲು, ಜಯದ ಹಳಿಗೆ ಮರಳಿದ ಮುಂಬೈ

Physical Abuse
ದೇಶ3 hours ago

Physical Abuse : ಸ್ಪೇನ್​ನ ಮಹಿಳೆ ಮೇಲೆ ಜಾರ್ಖಂಡ್​ನಲ್ಲಿ ಗ್ಯಾಂಗ್​ ರೇಪ್​; ತಿಂಗಳ ಬಳಿಕ ಪ್ರಕರಣ ಬಯಲು

Amanatullah Khan
ದೇಶ4 hours ago

Amanatullah Khan: ಆಪ್‌ಗೆ ಮತ್ತಷ್ಟು ಸಂಕಷ್ಟ; ಶಾಸಕ ಅಮಾನತುಲ್ಲಾ ಖಾನ್ ಅರೆಸ್ಟ್‌

Moral policing
ಪ್ರಮುಖ ಸುದ್ದಿ4 hours ago

Moral policing : ನೈತಿಕ ಪೊಲೀಸ್​ಗಿರಿ; ಮುಸ್ಲಿಮರ ಗುಂಪಿನಿಂದ ಹಿಂದೂ ಯುವಕನ ಮೇಲೆ ಹಲ್ಲೆ

Rishab Shetty
ಸಿನಿಮಾ4 hours ago

Rishab Shetty: ರಿಷಬ್‌ ಮೀಟ್ಸ್‌ ಮೋಹನ್‌ಲಾಲ್‌; ʼಕಾಂತಾರʼ ಪ್ರೀಕ್ವೆಲ್​ನಲ್ಲಿ ಅಭಿನಯಿಸುತ್ತಾರಾ ಮಾಲಿವುಡ್‌ ಸೂಪರ್‌ ಸ್ಟಾರ್‌?

lok Sabha Election
ಪ್ರಮುಖ ಸುದ್ದಿ4 hours ago

Lok Sabha Election : ಕಾಂಗ್ರೆಸ್​​ಗೆ ಹಿನ್ನಡೆಯಾದರೆ ಸಿದ್ದರಾಮಯ್ಯ ಸ್ಥಾನಕ್ಕೆಕಂಟಕ​​​; ಚರ್ಚೆ ಹುಟ್ಟು ಹಾಕಿದ ಬೈರತಿ ಸುರೇಶ್​ ಹೇಳಿಕೆ

Hubli Murder Case
ಪ್ರಮುಖ ಸುದ್ದಿ5 hours ago

Hubli murder case : ನೇಹಾಳನ್ನು ಕೊಲ್ಲಲೆಂದೇ ಕಾಲೇಜಿಗೆ ಸಜ್ಜಾಗಿ ಬಂದಿದ್ದ ಶಿಕ್ಷಕರ ಪುತ್ರ ಫಯಾಜ್!

congress workers meeting in kudligi
ವಿಜಯನಗರ5 hours ago

Lok Sabha Election 2024: ಬಳ್ಳಾರಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಈ. ತುಕಾರಾಂ ಗೆಲ್ಲಿಸಲು ಸಂತೋಷ್‌ ಲಾಡ್‌ ಮನವಿ

Indian Railways
ದೇಶ6 hours ago

Indian Railways: ಹಿರಿಯ ನಾಗರಿಕ ರೈಲು ಪ್ರಯಾಣಿಕರಿಗೆ ಗುಡ್‌ನ್ಯೂಸ್‌; ಲೋವರ್ ಬರ್ತ್ ಕಾಯ್ದಿರಿಸುವಿಕೆಗೆ ಹೊಸ ನಿಯಮ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ2 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ3 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20244 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20244 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ5 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ6 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ7 days ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ7 days ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ1 week ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

ಟ್ರೆಂಡಿಂಗ್‌