Robotic Technology | ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಗೆ ಮ್ಯಾಕೋ ರೋಬೊಟಿಕ್‌ ತಂತ್ರಜ್ಞಾನ - Vistara News

ಆರೋಗ್ಯ

Robotic Technology | ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಗೆ ಮ್ಯಾಕೋ ರೋಬೊಟಿಕ್‌ ತಂತ್ರಜ್ಞಾನ

ನಗರದ ಫೋರ್ಟಿಸ್‌ ಆಸ್ಪತ್ರೆಯು ನೂತನ ತಂತ್ರಜ್ಞಾನದಿಂದ ಕೇವಲ ಒಂದು ತಿಂಗಳಲ್ಲಿ 50ಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಿದೆ. ಮೊದಲ ಬಾರಿಗೆ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಗೆ ಮ್ಯಾಕೋ ರೋಬೊಟಿಕ್‌ ತಂತ್ರಜ್ಞಾನವನ್ನು (Robotic Technology) ಬಳಸಲಾಗಿದೆ.

VISTARANEWS.COM


on

Robotic Technology ಫೋರ್ಟಿಸ್‌ ಆಸ್ಪತ್ರೆ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಫೋರ್ಟಿಸ್ ಆಸ್ಪತ್ರೆಯೂ ಇದೇ ಮೊದಲ ಬಾರಿಗೆ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಗೆ ಮ್ಯಾಕೋ ರೋಬೊಟಿಕ್‌ (Robotic Technology) ತಂತ್ರಜ್ಞಾನವನ್ನು ಪರಿಚಯಿಸಿದೆ. ಈ ತಂತ್ರಜ್ಞಾನದ ಮೂಲಕ ಕೇವಲ ಒಂದು ತಿಂಗಳಲ್ಲಿ 50ಕ್ಕೂ ಹೆಚ್ಚು ರೋಗಿಗಳಿಗೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಮೂಳೆ ಮತ್ತು ಜಂಟಿ ಶಸ್ತ್ರಚಿಕಿತ್ಸಾ ವಿಭಾಗದ ನಿರ್ದೇಶಕ ಡಾ. ನಾರಾಯಣ ಹುಲ್ಸೆ, ಮ್ಯಾಕೋ ರೋಬೊಟಿಕ್ ಆರ್ಮ್ ಅಸಿಸ್ಟೆಡ್ ಟೆಕ್ನಾಲಜಿ ಬಳಸಿ ಬಹು ಅಸ್ವಸ್ಥತೆಯಿಂದ ಬಳಲುತ್ತಿದ್ದ 66 ವರ್ಷದ ಆಫ್ರಿಕನ್ ರೋಗಿಗೆ ಹೊಸ ಜೀವನ ನೀಡುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು.

ಈ ಆಫ್ರಿಕನ್‌ ರೋಗಿಯು ಕಳೆದ 15 ವರ್ಷಗಳಿಂದ ಮೊಣಕಾಲು ನೋವಿನಿಂದ ಬಳಲುತ್ತಿದ್ದರು. ಕಾಲಕ್ರಮೇಣ ಅವರ ಆರೋಗ್ಯ ಸ್ಥಿತಿ ಕ್ಷೀಣಿಸತೊಡಗಿತು. ಮೊಣಕಾಲು ನೋವಿನ ಜತೆಗೆ ಅಧಿಕ ರಕ್ತದೊತ್ತಡ, ಆಸ್ತಮಾ, ಜನ್ಮಜಾತ ಹೃದಯ ದೋಷಗಳು ಅವರನ್ನು ಬಹುವಾಗಿ ಕಾಡಿತ್ತು. ರೋಗಿಯು ಸಂಧಿವಾತದಿಂದಾಗಿ ಅವರ ಎರಡೂ ಮೊಣಕಾಲುಗಳು ಸಂಪೂರ್ಣವಾಗಿ ಹಾನಿಗೊಳಗಾದವು. ರೋಗಿಯು ಫೊರ್ಟಿಸ್‌ ಆಸ್ಪತ್ರೆಗೆ ದಾಖಲಾದ ಬಳಿಕ ಅವರ ಎರಡೂ ಮೊಣಕಾಲುಗಳಿಗೆ ಪ್ರತ್ಯೇಕವಾಗಿ 3 ದಿನಗಳ ಅಂತರದಲ್ಲಿ ಶಸ್ತ್ರಚಿಕಿತ್ಸೆಯನ್ನು ನಡೆಸಿದೆವು. 3D ವರ್ಚುವಲ್ ಮಾದರಿ ಹಾಗೂ ಶಸ್ತ್ರಚಿಕಿತ್ಸೆ ನಡೆಸಲು ನೂತನ ತಂತ್ರಜ್ಞಾನವಾದ ಮ್ಯಾಕೋ ರೋಬೊಟಿಕ್ ತಂತ್ರಜ್ಞಾನವು ನಮಗೆ ಸಹಾಯ ಮಾಡಿತು. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ರೊಬೊಟಿಕ್-ಆರ್ಮ್ ಮೂಳೆಯನ್ನು ಸರಿಯಾದ ಕೋನದಲ್ಲಿ ವಿಭಜಿಸಲು ನೆರವು ನೀಡಿತು. ಈ ಮೂಲಕ ಅವರಿಗೆ ಸೂಕ್ತ ರೀತಿಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿ, ಅದರಲ್ಲಿ ಯಶಸ್ವಿ ಕಂಡೆವು ಎಂದು ವಿವರಿಸಿದರು.

ವೇಗ ಚೇತರಿಕೆ ಸಾಧ್ಯ
ಸಾಂಪ್ರದಾಯಿಕ ಮೊಣಕಾಲು ಅಥವಾ ಸೊಂಟ ಬದಲಿ ಶಸ್ತ್ರಚಿಕಿತ್ಸೆಗಳು ಕಳೆದ ಮೂರು ದಶಕಗಳಲ್ಲಿ ರೋಗಿಗಳ ಜೀವನದ ಗುಣಮಟ್ಟವನ್ನು ಗಣನೀಯವಾಗಿ ಸುಧಾರಿಸುತ್ತಾ ಬಂದಿದೆ. ಆದರೆ, ಈ ನೂತನ ಮ್ಯಾಕೋ ರೋಬೊಟಿಕ್‌ ತಂತ್ರಜ್ಞಾನವೂ ಮೂಳೆಗಳ ಜೋಡಣೆಯ ನಿಖರತೆಯನ್ನು ಇನ್ನಷ್ಟು ಸ್ವಷ್ಟಗೊಳಿಸಿದೆ. ತಂಡಾದ ಮೂಳೆ ಮತ್ತು ಮೃದು ಅಂಗಾಂಶಗಳ ಸಂರಕ್ಷಣೆ, ಶಸ್ತ್ರಚಿಕಿತ್ಸೆಯ ನಂತರದ ಅಸ್ವಸ್ಥತೆಯನ್ನು ಕಡಿಮೆ ಮಾಡಿದೆ. ವೇಗವಾಗಿ ಚೇತರಿಕೆಯಾಗುವುದರ ಜತೆಗೆ ರಕ್ತದ ನಷ್ಟವೂ ತಗ್ಗಲಿದೆ. ಇದೊಂದು ಅತ್ಯಂತ ಪ್ರಯೋಜನಕಾರಿ ತಂತ್ರಜ್ಞಾನವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಬೆಂಗಳೂರಿನ ಫೋರ್ಟಿಸ್ ಹಾಸ್ಪಿಟಲ್‌ನ ಬಿಸಿನೆಸ್ ಹೆಡ್ ಅಕ್ಷಯ್ ಒಲೇಟಿ, ಮ್ಯಾಕೋ ಎಂಬ ರೋಬೊಟಿಕ್ ಪ್ಲಾಟ್‌ಫಾರ್ಮ್‌ ಅನ್ನು ಪರಿಚಯಿಸಲಾಗಿದ್ದು, ಒಂದೇ ವೇದಿಕೆಯಲ್ಲಿ ಮೊಣಕಾಲು ಮತ್ತು ಸಂಪೂರ್ಣ ಹಿಪ್ ರಿಪ್ಲೇಸ್‌ಮೆಂಟ್ ಶಸ್ತ್ರಚಿಕಿತ್ಸೆಯನ್ನು ಅತ್ಯಂತ ಸುಲಭಗೊಳಿಸಿದೆ ಎಂದಿದ್ದಾರೆ.

ಇದನ್ನೂ ಓದಿ | KFD vaccine | ಮಂಗನ ಕಾಯಿಲೆ ತಡೆ ಲಸಿಕೆಗೆ ಅನುಮತಿಯೇ ಇಲ್ಲ; ಆದರೂ ಜನರಿಗೆ ನೀಡುತ್ತಿದ್ದೆ ಸರ್ಕಾರ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Nutritional Supplements: ನಿತ್ಯವೂ ಪೋಷಕಾಂಶಗಳ ಸಪ್ಲಿಮೆಂಟ್‌ ಸೇವನೆ ಆರೋಗ್ಯಕ್ಕೆ ವರವೇ? ಶಾಪವೇ?

Nutritional supplements: ಹಲವು ಸಪ್ಲಿಮೆಂಟ್‌ಗಳನ್ನು ಸೇವಿಸುವುದರಿಂದ ನಮ್ಮ ದೇಹಕ್ಕೆ ಬೇಕಾದ ಹೆಚ್ಚುವರಿ, ಅಗತ್ಯ ಪೋಷಕಾಂಶಗಳು ಲಭ್ಯವಾಗಿ ಖಂಡಿತವಾಗಿಯೂ ಆರೋಗ್ಯ ವೃದ್ಧಿಯಾಗಿ, ತೂಕ ಹಿತಮಿತವಾಗಿರಿಸಿಕೊಳ್ಳುವಲ್ಲಿ ಸಹಾಯವಾಗಬಹುದು. ವಿಟಮಿನ್‌ ಸಪ್ಲಿಮೆಂಟ್‌ಗಳ ಸೇವನೆಯಿಂದ ದೇಹದ ಪಚನಕ್ರಿಯೆಯೂ ವೃದ್ಧಿಯಾಗಿ ಆ ಮೂಲಕ ಶಕ್ತಿ ಸರಿಯಾಗಿ ದೇಹಕ್ಕೆ ಲಭ್ಯವಾಗಿ, ದೇಹ ಚುರುಕಾಗಿ, ಎಲ್ಲ ಕೆಲಸ ಕಾರ್ಯಗಳು ಸಹಜವಾಗಿ ಆಗುತ್ತದೆ. ಆದರೆ, ಅತಿಯಾಗಿ ಸಪ್ಲಿಮೆಂಟ್‌ಗಳ ಸೇವನೆಯಿಂದ ಅಡ್ಡ ಪರಿಣಾಮಗಳೂ ಆಗಬಹುದು. ಈ ಬಗ್ಗೆ ಮಾಹಿತಿ ಇಲ್ಲಿದೆ.

VISTARANEWS.COM


on

Nutritional Supplements
Koo

ಕಳೆದ ಕೆಲವು ದಶಕಗಳಿಂದ ತೂಕ ಏರಿಕೆ ಎನ್ನುವುದೇ ಬಹುತೇಕ ಎಲ್ಲರ ಸಮಸ್ಯೆಯಾಗಿದೆ. ವೃತ್ತಿಯಲ್ಲಿನ ಒತ್ತಡ, ನಗರ ಜೀವನ, ವ್ಯಾಯಾಮದ ಕೊರತೆ, ಆಹಾರ ಪದ್ಧತಿ, ಜೀವನಕ್ರಮದಲ್ಲಿ ಬದಲಾವಣೆ ಇತ್ಯಾದಿಗಳೇ ತೂಕದ ಸಮಸ್ಯೆಯನ್ನೂ ಹಲವು ಆರೋಗ್ಯದ ಸಮಸ್ಯೆಗಳನ್ನೂ ಸಣ್ಣ ವಯಸ್ಸಿನಲ್ಲಿಯೇ ಹಲವರಿಗೆ ತಂದೊಡ್ಡಿದೆ ನಿಜ. ಸಣ್ಣ ವಯಸ್ಸಿನಲ್ಲಿಯೇ ಮಧುಮೇಹ, ಅಧಿಕ ರಕ್ತದೊತ್ತಡ, ಕೊಲೆಸ್ಟೆರಾಲ್‌ ಸಮಸ್ಯೆ, ಬೊಜ್ಜು ಇತ್ಯಾದಿ ಸಮಸ್ಯೆಗಳೆಲ್ಲ ಕಾಣಿಸಿಕೊಳ್ಳಲು ಆರಂಭವಾಗುತ್ತದೆ. ಹಲವು ಪೋಷಕಾಂಶಗಳ ಕೊರತೆ ಇತ್ಯಾದಿಗಳ ಸಮಸ್ಯೆಯೂ ಜೊತೆಗೆ ಸೇರಿಕೊಂಡು ಅನಾರೋಗ್ಯ, ಶಕ್ತಿಹೀನತೆಯಂಥ ಒಂದಿಲ್ಲೊಂದು ಸಮಸ್ಯೆಗಳು ಎಡತಾಕುತ್ತವೆ. ಇಂತಹ ಸಂದರ್ಭ ಇತ್ತೀಚೆಗಿನ ದಿನಗಳಲ್ಲಿ ಸಪ್ಲಿಮೆಂಟ್‌ಗಳ ಸೇವನೆಯೂ ಹೆಚ್ಚುತ್ತಿದೆ. ಹಲವು ಸಪ್ಲಿಮೆಂಟ್‌ಗಳನ್ನು ಜೊತೆಗೆ ಸೇವಿಸುವುದರಿಂದ ನಮ್ಮ ದೇಹಕ್ಕೆ ಬೇಕಾದ ಹೆಚ್ಚುವರಿ, ಅಗತ್ಯ ಪೋಷಕಾಂಶಗಳು ಲಭ್ಯವಾಗಿ ಖಂಡಿತವಾಗಿಯೂ ಆರೋಗ್ಯ ವೃದ್ಧಿಯಾಗಿ, ತೂಕ ಹಿತಮಿತವಾಗಿರಿಸಿಕೊಳ್ಳುವಲ್ಲಿ ಸಹಾಯವಾಗಬಹುದು. ವಿಟಮಿನ್‌ ಸಪ್ಲಿಮೆಂಟ್‌ಗಳ ಸೇವನೆಯಿಂದ ದೇಹದ ಪಚನಕ್ರಿಯೆಯೂ ವೃದ್ಧಿಯಾಗಿ ಆ ಮೂಲಕ ಶಕ್ತಿ ಸರಿಯಾಗಿ ದೇಹಕ್ಕೆ ಲಭ್ಯವಾಗಿ, ದೇಹ ಚುರುಕಾಗಿ, ಎಲ್ಲ ಕೆಲಸ ಕಾರ್ಯಗಳು ಸಹಜವಾಗಿ ಆಗುತ್ತದೆ. ಆದರೆ, ಅತಿಯಾಗಿ ಸಪ್ಲಿಮೆಂಟ್‌ಗಳ ಸೇವನೆ (Nutritional Supplements), ಸರಿಯಾದ ಸಪ್ಲಿಮೆಂಟ್‌ ಸೇವಿಸದೆ ಇರುವುದು, ಅಗತ್ಯವಿಲ್ಲದಿದ್ದರೂ ಸಪ್ಲಿಮೆಂಟ್‌ ಸೇವನೆ ಮಾಡುವುದು, ಅಥವಾ ತಪ್ಪುತಪ್ಪಾಗಿ ಸೇವಿಸುವುದು ಇತ್ಯಾದಿ ಮಾಡುವುದರಿಂದ ಅಡ್ಡ ಪರಿಣಾಮಗಳೂ ಆಗಬಹುದು. ಈಗ ಸಪ್ಲಿಮೆಂಟ್‌ಗಳ ಹೆಸರಿನಲ್ಲಿ ಮಾರುಕಟ್ಟೆಗೆ ಬಂದಿರುವ ಅನೇಕ ಫೇಕ್‌ ಸಪ್ಲಿಮೆಂಟ್‌ಗಳ ಬಗ್ಗೆಯೂ ಎಚ್ಚರಿಕೆ ವಹಿಸಬೇಕಾಗಿದೆ. ಹೀಗಾಗಿ, ಸಪ್ಲಿಮೆಂಟ್‌ ವರವಾಗುವ ಜೊತೆಗೆ ಕೆಲವೊಮ್ಮೆ ಶಾಪವಾಗಿಯೂ ಪರಿಣಮಿಸಬಹುದು. ಕೆಲವೊಮ್ಮೆ ಇದರಿಂದ ದೇಹಕ್ಕೆ ತೊಂದರೆಯೂ ಆಗಬಹುದು. ತೂಕ ಇಳಿಕೆಗೆಂದೇ ಸೇವಿಸುವ ಸಪ್ಲಿಮೆಂಟ್‌ಗಳು, ದಿಢೀರ್‌ ತೂಕ ಇಳಿಸಬಹುದೆಂದು ಹೇಳಿಕೊಳ್ಳುವ ಮಾತ್ರೆಗಳು, ಪುಡಿಗಳು ಇತ್ಯಾದಿಗಳ ಬಗ್ಗೆ ಸದಾ ಎಚ್ಚರಿಕೆ ಇರುವುದು ಒಳ್ಲೆಯದು. ಸಪ್ಲಿಮೆಂಟ್‌ಗಳ ಹೆಸರಿನಲ್ಲಿ ಇವು ದೇಹಕ್ಕೆ ಒಳ್ಳೆಯದು ಮಾಡುವ ಬದಲು ಹಾನಿಯನ್ನೇ ಮಾಡುವುದು ಹೆಚ್ಚು.

Healthy vitamins and supplements on wooden teaspoons against

ಎಚ್ಚರಿಕೆ ವಹಿಸಬೇಕಾದ್ದೇನು?

ಹಾಗಾದರೆ, ಸಪ್ಲಿಮೆಂಟ್‌ ಸೇವನೆಯ ಸಂದರ್ಭ ಎಚ್ಚರಿಕೆ ವಹಿಸಬೇಕಾದ್ದೇನು ಎಂಬ ಗೊಂದಲ ನಿಮಗಾಗಿರಬಹುದು. ಯಾವಾಗಲೂ ಸಮಸ್ಯೆಯ ಮೂಲವನ್ನು ಕಂಡು ಹಿಡಿಯದೆ, ನೀವೇ ವೈದ್ಯರಾಗಲು ಹೊರಡಬೇಡಿ. ನಿಮ್ಮ ಆರೋಗ್ಯದ ಸಮಸ್ಯೆಗೆ, ತೂಕ ಹೆಚ್ಚಳಕ್ಕೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚಿ. ವೈದ್ಯರ, ಪೋಷಕಾಂಶ ತಜ್ಞರ ಸಲಹೆ ಪಡೆಯಿರಿ. ದೇಹಕ್ಕೆ ಯಾವ ಪೋಷಕಾಂಶದ ಕೊರತೆಯಾಗಿದೆ ಎಂದು ಅವರ ಸಲಹೆಯ ಮೇರೆಗೆ ಪರೀಕ್ಷೆ ಮಾಡಿಸಿಕೊಂಡು, ಅವರ ಸಲಹೆಯ ಮೇರೆಗೆ ಸಪ್ಲಿಮೆಂಟ್‌ ತೆಗೆದುಕೊಳ್ಳಿ. ನೀವೇ ನೇರವಾಗಿ ಸಪ್ಲಿಮೆಂಟ್‌ಗಳ ಸೇವನೆಗೆ ಇಳಿಯಬೇಡಿ. ವೈದ್ಯರ ಅನುಮತಿಯ ಮೇರೆಗೆ ಸಂಬಂಧಿಸಿದ ಸಪ್ಲಿಮೆಂಟ್‌ ಸೇವಿಸಿ.

ಇದನ್ನೂ ಓದಿ: Mint Leaf Water: ಪುದಿನ ಎಲೆಗಳ ನೀರನ್ನು ನಿತ್ಯವೂ ಕುಡಿಯಿರಿ, ಈ ಲಾಭಗಳನ್ನು ಪಡೆಯಿರಿ!

ಜೀವನಕ್ರಮವನ್ನು ರೂಢಿಸಿಕೊಳ್ಳುವುದು ಮುಖ್ಯ

ಎಲ್ಲಕ್ಕಿಂತ ಹೆಚ್ಚಾಗಿ ಆರೋಗ್ಯಕರ ಜೀವನಕ್ರಮವನ್ನು ರೂಢಿಸಿಕೊಳ್ಳುವುದು ಮುಖ್ಯ. ಸಪ್ಲಿಮೆಂಟ್‌ಗಳನ್ನು ತಿನ್ನುತ್ತೇನಲ್ಲ, ಇನ್ನು ಪೋಷಕಾಂಶಗಳ ಬಗ್ಗೆ ನಾನು ತಿನ್ನುವ ಆಹಾರದ ನಿಗಾ ಇರಿಸಿಕೊಳ್ಳುವ ಅಗತ್ಯವಿಲ್ಲ ಎಂದು ಬೇಕಾಬಿಟ್ಟಿ, ನಾಲಿಗೆಗೆ ಹಿತವೆನಿಸಿದ್ದನ್ನೆಲ್ಲ ತಿನ್ನಲು ಹೊರಡಬೇಡಿ. ನಾಲಿಗೆ ಬಯಸಿದ್ದನ್ನೆಲ್ಲ ನಾಲಿಗೆಗೆ ಕೊಡುವ ಮೊದಲು ಯೋಚಿಸಿ. ದೇಹಕ್ಕೆ ಒಳ್ಳೆಯದನ್ನು ಬಯಸುವ ಆಹಾರಗಳನ್ನು ಸೇವಿಸುವುದನ್ನು ಅಭ್ಯಾಸ ಮಾಡಿ. ದೇಹವನ್ನು ಚುರುಕಾಗಿರಿಸುವುದನ್ನು, ಅಭ್ಯಾಸ ಮಾಡಿ. ವ್ಯಾಯಾಮ, ಯೋಗ, ವಾಕಿಂಗ್‌, ಉತ್ತಮ ಆಹಾರಭ್ಯಾಸಗಳೇ ಇದರಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂಬುದನ್ನು ಮರೆಯಬೇಡಿ.

Continue Reading

ಆರೋಗ್ಯ

Oats For Weight Loss: ಓಟ್ಸ್‌ ತಿನ್ನುವುದರಿಂದ ತೂಕ ಇಳಿಯುತ್ತದೆಯೇ? ಉತ್ತರ ಇಲ್ಲಿದೆ

Oats For Weight Loss: ಓಟ್ಸ್‌ ಎಂಬುದು ಅತ್ಯಂತ ಹಳೆಯ ದವಸ ಧಾನ್ಯಗಳ ಪೈಕಿ ಒಂದು. ಇದರಲ್ಲಿ ನಮ್ಮ ದೇಹಕ್ಕೆ ಬೇಕಾಗುವ ಸಾಕಷ್ಟು ಮೈಕ್ರೋ ಹಾಗೂ ಮ್ಯಾಕ್ರೋ ಪೋಷಕಾಂಶಗಳಿವೆ. ಇವುಗಳಲ್ಲಿ ಪ್ರೊಟೀನ್‌ ಹೆಚ್ಚಿದ್ದು, ಇತರ ಧಾನ್ಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನಾರಿನಂಶವೂ, ಪೋಷಕಾಂಶಗಳೂ ಇರುತ್ತವೆ. ಪೋಷಕಾಂಶ ತಜ್ಞರ ಪ್ರಕಾರ, ಓಟ್ಸ್‌ನಲ್ಲಿ ಸಾಕಷ್ಟು ಕರಗಬಲ್ಲ ನಾರಿನಂಶವಿರುವುದರಿಂದ ಇದು ಕೊಲೆಸ್ಟೆರಾಲ್‌ ಮಟ್ಟವನ್ನು ತಗ್ಗಿಸಲು ನೆರವಾಗುತ್ತದೆ. ಅಷ್ಟೇ ಅಲ್ಲ, ದೇಹಕ್ಕೆ ಗ್ಲುಕೋಸ್‌ ಬೇಗನೆ ಸೇರದಂತೆಯೂ ಇವು ಮಾಡುತ್ತದೆ.

VISTARANEWS.COM


on

Oats For Weight Loss
Koo

ಎಲ್ಲರಿಗೂ ಒಂದಲ್ಲ ಒಂದು ಹಂತದಲ್ಲಿ ತಾವು ತೂಕ ಇಳಿಸಿಕೊಂಡು ಫಿಟ್‌ ಆಗಬೇಕು ಎಂಬ ಬಯಕೆ ಬಂದೇ ಬರುತ್ತದೆ. ಕಾರಣ ಇಂದಿನ ಒತ್ತಡದ ಜೀವನಕ್ರಮದಲ್ಲಿ, ಗೊತ್ತೇ ಆಗದಂತೆ ತೂಕ ಏರಿಸಿಕೊಂಡು ಒಂದು ದಿನ, ಅಯ್ಯೋ ಹೆಂಗಿದ್ದ ನಾನು ಹೆಂಗಾಗಿಬಿಟ್ಟೆ ಎಂಬ ಮರುಕ ಬಂದೇ ಬರುತ್ತದೆ. ಜ್ಞಾನೋದಯವಾಗುವ ಆ ಹಂತದಲ್ಲಿ, ಒಂದಿಷ್ಟು ಆರೋಗ್ಯಕರ ಅಭ್ಯಾಸಗಳು, ನಡಿಗೆ, ವ್ಯಾಯಾಮ ಸೇರಿದಂತೆ ತೂಕ ಇಳಿಸಿಕೊಳ್ಳುವ ಕಾರ್ಯಕ್ರಮ ಶುರುಹಚ್ಚಿಕೊಳ್ಳುತ್ತೇವೆ. ಅವರಿವರಿಂಧ ಕೇಳಿ, ಓದಿ ಪಡೆದುಕೊಂಡ ಮಾಹಿತಿಗಳ ಆಧಾರದಲ್ಲಿ ತೂಕ ಇಳಿಕೆಗೆ ತೊಡಗುವುದೇ ಹೆಚ್ಚು. ಹೀಗೆ ತೂಕ ಇಳಿಕೆಗೆ ಹೊರಟ ಪ್ರತಿಯೊಬ್ಬರೂ ಓಟ್ಸ್‌ ಕಡೆಗೆ ಒಂದಲ್ಲ ಒಂದು ದಿನ ಮುಖ ಮಾಡುತ್ತಾರೆ. ಓಟ್ಸ್‌ ಎಂಬುದು ಅತ್ಯಂತ ಹಳೆಯ ದವಸ ಧಾನ್ಯಗಳ ಪೈಕಿ ಒಂದು. ಇದರಲ್ಲಿ ನಮ್ಮ ದೇಹಕ್ಕೆ ಬೇಕಾಗುವ ಸಾಕಷ್ಟು ಮೈಕ್ರೋ ಹಾಗೂ ಮ್ಯಾಕ್ರೋ ಪೋಷಕಾಂಶಗಳಿವೆ. ಇವುಗಳಲ್ಲಿ ಪ್ರೊಟೀನ್‌ ಹೆಚ್ಚಿದ್ದು, ಇತರ ಧಾನ್ಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನಾರಿನಂಶವೂ, ಪೋಷಕಾಂಶಗಳೂ ಇರುತ್ತವೆ. ಪೋಷಕಾಂಶ ತಜ್ಞರ ಪ್ರಕಾರ, ಓಟ್ಸ್‌ನಲ್ಲಿ ಸಾಕಷ್ಟು ಕರಗಬಲ್ಲ ನಾರಿನಂಶವಿರುವುದರಿಂದ ಇದು ಕೊಲೆಸ್ಟೆರಾಲ್‌ ಮಟ್ಟವನ್ನು ತಗ್ಗಿಸಲು ನೆರವಾಗುತ್ತದೆ. ಅಷ್ಟೇ ಅಲ್ಲ, ದೇಹಕ್ಕೆ ಗ್ಲುಕೋಸ್‌ ಬೇಗನೆ ಸೇರದಂತೆಯೂ ಇವು ಮಾಡುತ್ತದೆ. ಕರುಳಿನಲ್ಲಿ ಆಹಾರ ಸುಲಭವಾಗಿ ಪ್ರವಹಿಸಲು ಕೂಡಾ ಇದು ನೆರವಾಗುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ದೇಹದಲ್ಲಿ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಇವೆಲ್ಲ ನಿಜವೇ ಆದರೂ, ಓಟ್ಸ್‌ನ ನಿತ್ಯದ ಸೇವನೆಯಿಂದ ತೂಕ (Oats For Weight Loss) ಇಳಿಸಬಹುದಾ? ಇದರ ಸೇವನೆ ಒಳ್ಳೆಯದಾ ಎಂದು ಪ್ರಶ್ನಿಸಿದರೆ ಖಂಡಿತವಾಗಿಯೂ ಗೊಂದಲ ಹುಟ್ಟಿಸದೆ ಇರದು.

Oats Vegetarian foods for stamina

ತೂಕ ಇಳಿಸುತ್ತದೆಯೆ?

ಈ ಓಟ್ಸ್‌ ಸೇವನೆಯಿಂದ ನಿಜವಾಗಿಯೂ ತೂಕ ಇಳಿಯುತ್ತದೆಯೇ ಎಂಬುದು ಎಲ್ಲರ ಪ್ರಶ್ನೆ. ಈ ಪ್ರಶ್ನೆ ಹೊಸತೇನಲ್ಲ. ಯಾಕೆಂದರೆ ಓಟ್ಸ್‌ನಲ್ಲಿ ಸಾಕಷ್ಟು ಪೋಷಕಾಂಶಗಳೂ, ನಾರಿನಂಶವೂ ಇರುವುದರಿಂದ ಇದರಿಂದ ತೂಕ ಇಳಿಯಬಹುದು ಎಂಬುದು ನಿಜವೇ ಆದರೂ, ಸರಿಯಾಗಿ ಹಿತಮಿತವಾಗಿ ಸೇವನೆ ಮಾಡಿದರೆ ಮಾತ್ರ ಇದು ಸಾಧಯ ಎಂಬುದೂ ಸತ್ಯವೇ. ಯಾಕೆಂದರೆ ಓಟ್ಸ್‌ನಲ್ಲಿ ಸ್ಟಾರ್ಚ್‌ ಕೂಡಾ ಇರುವುದರಿಂದ ಹಾಗೂ ಹೆಚ್ಚು ಕಾರ್ಬೋಹೈಡ್ರೇಟ್‌ ಇರುವ ಕಾರಣದಿಂದ ಹೆಚ್ಚು ಗ್ಲಿಸೆಮಿಕ್‌ ಇಂಡೆಕ್ಸ್‌ ಹೊಂದಿರುತ್ತದೆ. ಹಾಗಾಗಿ ದೇಹದಲ್ಲಿ ಸಕ್ಕರೆಯ ಪ್ರಮಾಣ ಏರುವ ಅಪಾಯವೂ ಇದೆ. ಹಿತಮಿತವಾಗಿ ಸೇವಿಸಿದರೆ ಮಾತ್ರ ಪ್ರಯೋಜನ ಪಡೆಯಬಹುದು ಎನ್ನುತ್ತಾರೆ.

ಇದನ್ನೂ ಓದಿ: Monsoon Hair care: ಮಳೆಗಾಲದಲ್ಲಿ ಕೂದಲಿನ ಆರೈಕೆಗೆ ಈ ಸಲಹೆ ಪಾಲಿಸಿ

ಇನ್‌ಸ್ಟ್ಯಾಂಟ್‌ ಓಟ್ಸ್‌ ಬೇಡ

ಓಟ್ಸ್‌ನನ್ನು ನಾವು ಹೇಗೆ ಬಳಸುತ್ತೇವೆ ಎಂಬುದರಲ್ಲಿ ಸತ್ಯ ಅಡಗಿದೆ ಎನ್ನುತ್ತಾರೆ ತಜ್ಞರು. ಯಾಕೆಂದರೆ ಓಟ್ಸ್‌ನಿಂದ ಲಾಭ ಇರುವಷ್ಟೇ ಅಪಾಯವೂ ಇದೆ. ಮಾರುಕಟ್ಟೆಯಲ್ಲಿ ಈಗ ಸುಲಭವಾಗಿ ಬಗೆಬಗೆಯ ಫ್ಲೇವರ್‌ಗಳ ಮಸಾಲೆಗಳ ಜೊತೆಗೆ ಲಭ್ಯವಾಗುವ ಇನ್‌ಸ್ಟ್ಯಾಂಟ್‌- ದಿಢೀರ್‌ ಓಟ್ಸ್‌ಗಳಲ್ಲಿ ಗ್ಲಿಸೆಮಿಕ್‌ ಇಂಡೆಕ್ಸ್‌ ಹೆಚ್ಚಿರುತ್ತದೆ. ಹಣ್ಣುಗಳನ್ನು ಸೇರಿಸಿ, ಇನ್‌ಸ್ಟ್ಯಾಂಟ್‌ ಓಟ್ಸ್‌ ಮಾಡಿ ತಿನ್ನುವುದರಿಂದ ರಕ್ತದಲ್ಲಿ ಸಕ್ಕರೆ ದಿಢೀರ್‌ ಹೆಚ್ಚಾಗುವ ಸಾಧ್ಯತೆ ಹೆಚ್ಚಿದೆ ಎನ್ನುತ್ತಾರೆ ತಜ್ಞರು.
ಹಾಗಾದರೆ, ತೂಕ ಇಳಿಸುವ ಉದ್ದೇಶದಿಂದ ಓಟ್ಸ್‌ ತಿನ್ನಲು ಬಯಸುವ ಮಂದಿ ಯಾವ ಕ್ರಮದಲ್ಲಿ ತಿಂದರೆ ಲಾಭ ಪಡೆಯಬಹುದು ಎಂಬ ಪ್ರಶ್ನೆ ನಿಮ್ಮದಾಗಿದ್ದರೆ, ಉತ್ತರ ಇಲ್ಲಿದೆ. ಇನ್‌ಸ್ಟ್ಯಾಂಟ್‌ಗಳ ಬದಲಾಗಿ ಸ್ಟೀಲ್‌ ಕಟ್‌ ಓಟ್ಸ್‌ಗಳ ಬಳಕೆ ಮಾಡುವುದು ಒಳ್ಳೆಯದು. ಇದು ನಿಧಾನವಾಗಿ ಶಕ್ತಿ ನೀಡುತ್ತದೆ. ಹಾಗೂ ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಓಟ್ಸ್‌ ಒಳ್ಳೆಯದೆಂದು ಅಂದುಕೊಂಡು ಅತಿಯಾಗಿ ಓಟ್ಸನ್ನೇ ನಿತ್ಯವೂ ತಿನ್ನುವುದೂ ಕೂಡಾ ಒಳ್ಳೆಯದಲ್ಲ. ಹಿತಮಿತವಾಗಿ ತಿಂದರೆ ಮಾತ್ರ ಅವುಗಳ ನಿಜವಾದ ಪ್ರಯೋಜನ ಪಡೆಯಲು ಸಾಧ್ಯವಾಗಬಹುದು.

Continue Reading

ಆರೋಗ್ಯ

Seeds For Men Sexual Power: ಪುರುಷರ ಲೈಂಗಿಕ ಶಕ್ತಿ ಹೆಚ್ಚಳಕ್ಕೆ ಈ ಬೀಜಗಳು ಪರಿಣಾಮಕಾರಿ!

Seeds For Men Sexual power: ಒಳ್ಳೆಯ ಆಹಾರ ಸೇವನೆ ಮಾಡುತ್ತಾ, ನಿಯಮಿತ ವ್ಯಾಯಾಮ ಮಾಡುತ್ತಾ ಆರೋಗ್ಯಕರ ಜೀವನ ನಡೆಸುವುದು ವಯಸ್ಸಿನ ಹಂಗಿಲ್ಲದೆ ಬಹಳ ಮುಖ್ಯವಾಗುತ್ತದೆ. ಹೀಗೆ ಪುರುಷರ ಆರೋಗ್ಯಕ್ಕೆ ಪೂರಕವಾಗಿರುವ ಅತ್ಯಂತ ಒಳ್ಳೆಯದನ್ನೇ ಮಾಡುವ ಆಹಾರಗಳ ಪೈಕಿ ಒಣಹಣ್ಣುಗಳು ಹಾಗೂ ಬೀಜಗಳ ಪಾತ್ರವೂ ದೊಡ್ಡದು. ಅದರಲ್ಲೂ, ಸಿಹಿಕುಂಬಳದ ಬೀಜ ಪುರುಷನ ಆರೋಗ್ಯದ ಬಹುದೊಡ್ಡ ಮಿತ್ರ. ಯಾವ ಮಿತ್ರನನ್ನು ಮರೆತರೂ,ಈ ಸಿಹಿಕುಂಬಳದ ಬೀಜಗಳನ್ನು ಮಾತ್ರ ಮರೆಯಬೇಡಿ! ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

Seeds For Men Sexual Power
Koo

ಆರೋಗ್ಯದ ವಿಚಾರ ಬಂದಾಗ ಮಹಿಳೆಯರಷ್ಟೇ ಪುರುಷರೂ ಆರೋಗ್ಯದ ಕಾಳಜಿ ವಹಿಸಲೇಬೇಕು. ಏನೇನೂ ಕಾಳಜಿ ವಹಿಸದೆ, ನಮಗೇನಾಗಿದೆ, ನಾವು ಆರಾಮವಾಗಿದ್ದೇವೆ, 50 ವರ್ಷ ದಾಟಿದ ಮೇಲೆ ನೋಡಿಕೊಂಡರಾಯಿತು ಎಂದುಕೊಂಡರೆ, ಅದು ಖಂಡಿತ ನಿಮ್ಮ ಮೂರ್ಖತನ. ಒಳ್ಳೆಯ ಆಹಾರ ಸೇವನೆ ಮಾಡುತ್ತಾ, ನಿಯಮಿತ ವ್ಯಾಯಾಮ ಮಾಡುತ್ತಾ ಆರೋಗ್ಯಕರ ಜೀವನ ನಡೆಸುವುದು ವಯಸ್ಸಿನ ಹಂಗಿಲ್ಲದೆ ಬಹಳ ಮುಖ್ಯವಾಗುತ್ತದೆ. ಹೀಗೆ ಪುರುಷರ ಆರೋಗ್ಯಕ್ಕೆ ಪೂರಕವಾಗಿರುವ ಅತ್ಯಂತ ಒಳ್ಳೆಯದನ್ನೇ ಮಾಡುವ ಆಹಾರಗಳ ಪೈಕಿ ಒಣಹಣ್ಣುಗಳು ಹಾಗೂ ಬೀಜಗಳ ಪಾತ್ರವೂ ದೊಡ್ಡದು. ಅದರಲ್ಲೂ, ಸಿಹಿಕುಂಬಳದ ಬೀಜ ಪುರುಷನ ಆರೋಗ್ಯದ ಬಹುದೊಡ್ಡ ಮಿತ್ರ. ಯಾವ ಮಿತ್ರನನ್ನು ಮರೆತರೂ,ಈ ಸಿಹಿಕುಂಬಳದ ಬೀಜಗಳನ್ನು ಮಾತ್ರ ಮರೆಯಬೇಡಿ! ಬನ್ನಿ, ಈ ಬೀಜಗಳಿಂದ ಪುರುಷರ ಆರೋಕ್ಕಾಗುವ (Seeds For Men Sexual power) ಲಾಭಗಳನ್ನು ತಿಳಿಯೋಣ.

Sweet Couple During Sunset

ಪುರುಷರ ಲೈಂಗಿಕ ಆರೋಗ್ಯ ವೃದ್ಧಿ

ಪುರುಷರ ಲೈಂಗಿಕ ಆರೋಗ್ಯ ಹೆಚ್ಚಿಸುವಲ್ಲಿ ಈ ಬೀಜಗಳು ಮುಖ್ಯ ಕೊಡುಗೆ ನೀಡುತ್ತವೆ. ವಯಸ್ಸಾದಂತೆ ಕೆಲವರಿಗೆ ಆಗುವ ವೃಷಣದ ಹಿಗ್ಗುವುಕೆಯಿಂದಾಗಿ, ಮೂತ್ರವಿಸರ್ಜನೆಯ ಸಮಸ್ಯೆ ಉಂಟಾಗುತ್ತದೆ. ಈ ಸಮಸ್ಯೆಗೆ ಇದು ಅತ್ಯುತ್ತಮ ಪರಿಹಾರ ನೀಡುತ್ತದೆ. ವೃಷಣಗಳಿಗೆ ಶಕ್ತಿ ನೀಡಿ, ಲೈಂಗಿಕ ಹಾರ್ಮೋನಿನ ಉತ್ಪತ್ತಿಯನ್ನು ಸಮತೋಲನೆಗೊಳಿಸುತ್ತದೆ.

ವೀರ್ಯವೃದ್ಧಿ

ಸಿಹಿ ಕುಂಬಳದ ಬೀಜದಲ್ಲಿ ಝಿಂಕ್‌ ಸಾಕಷ್ಟು ಪ್ರಮಾಣದಲ್ಲಿ ಇರುವುದರಿಂದ ಇದು ವೀರ್ಯವೃದ್ಧಿಗೆ ಸಹಾಯ ಮಾಡುತ್ತದೆ. ವೀರ್ಯದ ಸಂಖ್ಯೆಯಲ್ಲಿ ಕೊರತೆ ಕಾಣವು ಮಂದಿಗೆ ಇದು ಅತ್ಯಂತ ಒಳ್ಳೆಯ ಆಹಾರ. ವೀರ್ಯದ ಗುಣಮಟ್ಟವನ್ನೂ ಹೆಚ್ಚಿಸಿ, ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಲೈಂಗಿಕ ಹಾರ್ಮೋನು ಟೆಸ್ಟೋಸ್ಟೀರಾನ್‌ ಉತ್ಪತ್ತಿಗೆ ಪ್ರಚೋದನೆ ನೀಡುತ್ತದೆ.

ಪ್ರೊಟೀನ್‌ ಮೂಲ

ನಾವು ಸೇವಿಸುವ ಪೋಷಕಾಂಶಗಳ ಜೊತೆಯಲ್ಲಿ ಪ್ರೊಟೀನ್‌ನ ಅಂಶ ಇರುವುದು ಅತ್ಯಂತ ಮುಖ್ಯ. ಪ್ರತಿ 100 ಗ್ರಾಂ ಬೀಜಗಳಲ್ಲಿ 23.3 ಗ್ರಾಂನಷ್ಟು ಪ್ರೊಟೀನ್‌ ಇದ್ದು ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳನ್ನು ಪೂರೈಕೆ ಮಾಡುತ್ತದೆ. ಹಾಗಾಗಿ, ಪ್ರೊಟೀನ್‌ ಮೂಲಗಳನ್ನು ನೀವು ಹುಡುಕುತ್ತಿದ್ದರೆ, ಇದೂ ಉತ್ತಮ ಆಯ್ಕೆ.

ಇದನ್ನೂ ಓದಿ: Empty Stomach Foods: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಆಹಾರಗಳನ್ನು ಸೇವಿಸಿದರೆ ಆರೋಗ್ಯಕ್ಕೆ ಉತ್ತಮ!

ಉತ್ತಮ ಕೊಬ್ಬು

ನೈಸರ್ಗಿಕ ಎಣ್ಣೆಯಂಶ ಹೊಂದರುವ ಉತ್ತಮ ಕೊಬ್ಬಿನ ಮೂಲ ಈ ಬೀಜಗಳು. ಅತಿಯಾದ ಸೇವನೆ ತೂಕ ಹೆಚ್ಚಿಸುವ ಸಾಧ್ಯತೆ ಇದ್ದರೂ, ನಿತ್ಯವೂ ಸ್ವಲ್ಪ ಸೇವನೆ ಮಾಡುವುದರಿಂದ ಉತ್ತಮ ಆರೋಗ್ಯ ಲಾಭಗಳನ್ನು ಪಡೆಯಬಹುದು.

May aid heart health Peach Benefits

ಹೃದಯದ ಆರೋಗ್ಯಕ್ಕೆ

ಈ ಬೀಜಗಳಲ್ಲಿ ಪಾಸ್ಪರಸ್‌ ಹೆಚ್ಚಿರುವುದರಿಂದ ಪಚನಕ್ರಿಯೆಗೂ ಇದು ಒಳ್ಳೆಯದು. ಮೆಗ್ನೀಶಿಯಂ ಕೂಡಾ ಉತ್ತಮ ಪ್ರಮಾಣದಲ್ಲಿರುವುದರಿಂದ ಹೃದಯದ ಆರೋಗ್ಯಕ್ಕೆ ಇದು ಅತ್ಯಂತ ಒಳ್ಳೆಯದು. ಹೃದಯಕ್ಕೆ ರಕ್ತ ಪಂಪ್‌ ಮಾಡುವ ಸಾಮರ್ಥ್ಯವನ್ನು ಹೆಚ್ಚಿಸುವುದಲ್ಲದೆ, ರಕ್ತನಾಳಗಳ ಶಕ್ತಿ ಸಾಮರ್ಥ್ಯವನ್ನೂ ಹೆಚ್ಚಿಸುತ್ತದೆ.

Image Of Mental Health

ಮಾನಸಿಕ ಆರೋಗ್ಯಕ್ಕೆ

ಮಾನಸಿಕ ಆರೋಗ್ಯಕ್ಕೂ ಇದು ಅತ್ಯಂತ ಒಳ್ಳೆಯದು. ಇದರಲ್ಲಿ ಟ್ರಿಪ್ಟೋಫನ್‌ ಹೆಚ್ಚಿರುವುದರಿಂದ ಖಿನ್ನತೆಗೂ ಇದು ಒಳ್ಳೆಯದು.

Continue Reading

ಆರೋಗ್ಯ

Monsoon Hair care: ಮಳೆಗಾಲದಲ್ಲಿ ಕೂದಲಿನ ಆರೈಕೆಗೆ ಈ ಸಲಹೆ ಪಾಲಿಸಿ

Monsoon Hair care: ಮಳೆಯಲ್ಲಿ ಒದ್ದೆಯಾದ ಕೂದಲನ್ನು ಒಣಗಿಸಿಕೊಳ್ಳುವುದಕ್ಕೆಂದು ತಾರಾಮಾರಿ ಉಜ್ಜಬೇಡಿ. ಒದ್ದೆಯಾಗಿರುವ ಚರ್ಮದಿಂದ ಕೂದಲು ಕಿತ್ತು ಬರುವುದಕ್ಕೆ ಇಷ್ಟು ಕಾರಣ ಸಾಕಾಗುತ್ತದೆ. ಇದಲ್ಲದೆ, ಮಳೆಗಾಲದಲ್ಲಿ ಕೂದಲ ಆರೈಕೆಗೆ ಇನ್ನೂ ಏನೇನು ಮಾಡಬೇಕು? ವಿವರ ಇಲ್ಲಿದೆ.

VISTARANEWS.COM


on

Monsoon Hair care
Koo

ಮಳೆಗಾಲವೆಂದರೆ ಕೇವಲ ಶೀತ-ನೆಗಡಿಗಳ ಕಾಲ ಮಾತ್ರವಲ್ಲ, ಚರ್ಮ-ಕೂದಲುಗಳಿಗೂ ಮೋಡ ಮುಸುಕಬಲ್ಲದು. ಚಳಿಗಾಲದಲ್ಲಿ ಮಾತ್ರವೇ ಕೂದಲು ಉದುರುತ್ತದೆ ಎಂದು ಭಾವಿಸಿದರೆ, ಹಾಗೇನಿಲ್ಲ. ಮಳೆಗಾಲವೂ ಕೂದಲು ಉದುರುವುದಕ್ಕೆ ಸಾಕಷ್ಟು ಕೊಡುಗೆಯನ್ನು ನೀಡಬಲ್ಲದು. ಮಳೆಗಾಲ ಮಾತ್ರವೇ ಅಲ್ಲ, ಅದರೊಂದಿಗೆ ಆಹಾರದಲ್ಲಿನ ಅಪೌಷ್ಟಿಕತೆ, ಕೂದಲಿಗೆ ಬಳಸುವ ರಾಸಾಯನಿಕಗಳು ಮತ್ತು ಕೃತಕ ಬಣ್ಣಗಳು, ಹಾರ್ಮೋನಿನ ವ್ಯತ್ಯಾಸಗಳೆಲ್ಲ ಕೂದಲು ಉದುರುವುದಕ್ಕೆ ಕಾರಣವಾಗುತ್ತವೆ. ವಾತಾವರಣದಲ್ಲಿರುವ ತೇವಾಂಶವು ತಲೆಯ ಚರ್ಮದ ಮೇಲೂ ಪರಿಣಾಮ ಬೀರಿ, ಸಮಸ್ಯೆಗಳನ್ನು ತರುತ್ತದೆ. ಹಾಗಾಗಿ ಮಳೆಗಾಲದಲ್ಲಿ ಉಂಟಾಗುವ ಕೂದಲಿನ ತೊಂದರೆಗಳ ಬಗ್ಗೆ (Monsoon Hair care) ಇಲ್ಲಿದೆ ಮಾಹಿತಿ. ವಾತಾವರಣದಲ್ಲಿ ತೇವಾಂಶ ಹೆಚ್ಚಾದಂತೆ ಬೆವರುವುದು ಹೆಚ್ಚು. ಇದರಿಂದಾಗಿ ತಲೆಯ ಚರ್ಮಕ್ಕೆ ಉಸಿರಾಡಲಾಗದಂತೆ ಕಟ್ಟಿಕೊಳ್ಳುತ್ತದೆ. ಒಮ್ಮೆ ಈ ಸೂಕ್ಷ್ಮ ಗ್ರಂಥಿಗಳು ಕಟ್ಟಿಕೊಂಡರೆ, ಕೂದಲಿನ ಬುಡವೆಲ್ಲ ಸಡಿಲವಾಗಿ ಉದುರುವುದಕ್ಕೆ ಪ್ರಾರಂಭವಾಗುತ್ತದೆ. ಜೊತೆಗೆ ಮಳೆಯಲ್ಲಿ ತಲೆಗೂದಲು ನೆನೆದರೂ ಸಂಕಟ ತಪ್ಪಿದ್ದಲ್ಲ. ಈ ಎಲ್ಲವುಗಳ ಫಲವಾಗಿ ತಲೆಯ ಚರ್ಮದಲ್ಲಿರುವ ನೈಸರ್ಗಿಕ ತೈಲದಂಶ ಹೊರಟುಹೋಗಿ, ಕೂದಲು ಉದುರುವುದು, ತುಂಡಾಗುವುದು ಸಾಮಾನ್ಯವಾಗುತ್ತದೆ. ಹೀಗಾಗದಂತೆ ತಡೆಯುವುದು ಹೇಗೆ? ಇಲ್ಲಿವೆ ಸಲಹೆಗಳು.

head bath

ಒದ್ದೆಗೂದಲು

ಎಲ್ಲಕ್ಕಿಂತ ಮೊದಲು, ಒದ್ದೆ ಕೂದಲಿನ ಕಾಳಜಿ ಮಾಡುವುದು ಹೇಗೆ ಎನ್ನುವುದನ್ನು ಅರಿಯುವುದು ಮುಖ್ಯ. ಸ್ನಾನ ಮಾಡಿದ ನಂತರ ಕೂದಲು ಒದ್ದೆಯಿರಲಿ ಅಥವಾ ಮಳೆಯಲ್ಲಿ ನೆನೆದು ಒದ್ದೆಯಾಗಿರಲಿ, ಒಣಗಿಸಿಕೊಳ್ಳುವುದಕ್ಕೆಂದು ತಾರಾಮಾರಿ ಉಜ್ಜಬೇಡಿ. ಒದ್ದೆಯಾಗಿರುವ ಚರ್ಮದಿಂದ ಕೂದಲು ಕಿತ್ತು ಬರುವುದಕ್ಕೆ ಇಷ್ಟು ಕಾರಣ ಸಾಕಾಗುತ್ತದೆ. ಅದರಲ್ಲೂ ಒದ್ದೆಗೂದಲನ್ನು ಬಾಚಲೇಬೇಡಿ. ಮೊದಲು ಸ್ವಚ್ಛ ಬಟ್ಟೆಯಲ್ಲಿ ಹಗುರವಾಗಿ ಒರೆಸಿ, ಒಣಗಿಸಿಕೊಳ್ಳಿ. ಇದಕ್ಕಾಗಿ ಸಿಕ್ಕಾಪಟ್ಟೆ ಡ್ರೈಯರ್‌ ಉಪಯೋಗಿಸಿದರೆ ಸಮಸ್ಯೆಗಳು ಹೆಚ್ಚುತ್ತವೆ. ಕೂದಲು ಸುರುಳಿಯಾಗಿ ಸಿಕ್ಕಾಗಿದೆ ಎಂದಾದರೆ, ತುದಿಯಿಂದ ಸಿಕ್ಕುಗಳನ್ನು ಬಿಡಿಸುತ್ತಾ ಬುಡದತ್ತ ಬನ್ನಿ. ಬಾಚಣಿಕೆಯಲ್ಲಿ ಬಲಪ್ರಯೋಗಿಸಿದರೆ ಕೂದಲು ಹೇಗೆಂದರೆ ಹಾಗೆ ಕಿತ್ತು ಬರುತ್ತದೆ. ಮಳೆಯಲ್ಲಿ ನೆನೆದಾಗಲೂ ಕೂದಲನ್ನು ಗಾಳಿಗೆ ಆರಿಸಿಕೊಂಡು ನಂತರವೇ ಬಾಚಿ.

ಸ್ವಚ್ಛ ಮಾಡಿ

ಬೇಸಿಗೆಯಲ್ಲಿ ಬೆವರಿ ಕೊಳೆಯಾಗುವಂತೆ, ಮಳೆಯಲ್ಲೂ ಕೂದಲು ಕೊಳೆಯಾಗುತ್ತದೆ. ಹಾಗಾಗಿ ವಾರಕ್ಕೆರಡು ಬಾರಿ ತಲೆಸ್ನಾನ ಮಾಡುವ ಅಭ್ಯಾಸವನ್ನು ಮುಂದುವರೆಸಿ; ಈವರೆಗೆ ಆ ಅಭ್ಯಾಸ ಇಲ್ಲದಿದ್ದರೆ, ಈಗ ಪ್ರಾರಂಭಿಸಿ. ಇದರಿಂದ ಕೂದಲ ಬುಡಕ್ಕೆ ಮತ್ತು ತಲೆಯ ಚರ್ಮಕ್ಕೆ ತೊಂದರೆ ಕೊಡುವ ಸೂಕ್ಷ್ಮಾಣುಗಳನ್ನು ತೆಗೆಯಬಹುದು. ವಾತಾವರಣದ ಧೂಳು, ಹೊಗೆಯಂಥ ಮಾಲಿನ್ಯವನ್ನು ದೂರ ಮಾಡಬಹುದು. ಹೆಚ್ಚುವರಿ ತೈಲವನ್ನೂ ಸ್ವಚ್ಛ ಮಾಡಿ, ಕೂದಲಿನ ಆರೋಗ್ಯ ಕಾಪಾಡಿಕೊಳ್ಳಬಹುದು.

ಇದನ್ನೂ ಓದಿ: Sleep After Lunch: ಊಟದ ನಂತರ ನಮಗೆ ಆಕಳಿಕೆ, ನಿದ್ದೆ ಬರುವುದೇಕೆ?

ಕೇಶ ವಿನ್ಯಾಸಗಳು

ಬಿಗಿಯಾಗಿ ಕಟ್ಟಿದಂಥ ಕೇಶ ವಿನ್ಯಾಸಗಳು ಕೂದಲಿಗೆ ಹಾನಿ ಮಾಡುತ್ತವೆ. ಕೂದಲನ್ನು ತುಂಡರಿಸಿ, ಬುಡದಿಂದ ಬೇರ್ಪಡಿಸಿ, ಹೆಚ್ಚು ಸಿಕ್ಕಾಗಿಸುತ್ತವೆ. ಇವೆಲ್ಲವುಗಳ ಫಲವೆಂದರೆ ಹೆಚ್ಚೆಚ್ಚು ಕೂದಲು ಉದುರುವುದು. ಜೊತೆಗೆ, ಅತಿಯಾಗಿ ಹೀಟ್‌ಸ್ಟೈಲಿಂಗ್‌ ಮಾಡುವುದು ಸಹ ಹಾನಿಕರ. ಹೇರ್‌ ಡ್ರೈಯರ್‌ ಹೆಚ್ಚಾಗಿ ಬಳಸುವುದು, ಕೂದಲು ನೇರವಾಗಿಸಲು ಅಥವಾ ಸುರುಳಿ ಮಾಡಿಸಲು ಬಿಸಿ ಮಾಡುವುದು- ಇವೆಲ್ಲ ಸಮಸ್ಯೆಗಳಿಗೆ ನಾಂದಿ ಹಾಡುತ್ತವೆ.
ಕೂದಲನ್ನು ಡೈ ಮಾಡುವಾಗಲೂ ಹೆಚ್ಚಿನ ಎಚ್ಚರಿಕೆ ಅಗತ್ಯ. ಬಣ್ಣ ಹಾಕುವುದಕ್ಕಾಗಿ ಕಠಿಣವಾದ ರಾಸಾಯನಿಕಗಳನ್ನು ಬಳಸುವುದು ತೊಂದರೆ ತರಬಹುದು. ಮಳೆಗಾಲದಲ್ಲಿ ಕೂದಲಿಗೆ ಬಣ್ಣ ಹಾಕುವುದು ಅಗತ್ಯ ಎನಿಸಿದರೆ, ಅಮೋನಿಯ ರಾಸಾಯನಿಕ ಇಲ್ಲದಂಥ ಬಣ್ಣಗಳನ್ನು ಬಳಸಿ. ಇವು ಕೂದಲಿಗೆ ಹಾನಿ ಆಗದಂತೆ ನಾಜೂಕಾಗಿ ಕೆಲಸವನ್ನು ಮಾಡುತ್ತವೆ. ಜೊತೆಗೆ ಕೇಶಾರೈಕೆಗೆ ಈವರೆಗೆ ಏನೆಲ್ಲವನ್ನೂ ಮಾಡುತ್ತಿದ್ದಿರೊ, ಅವೆಲ್ಲವನ್ನೂ ಮುಂದುವರಿಸಿ.

Dieting concept. Healthy Food. Beautiful Young Asian Woman

ಆಹಾರ

ಮಳೆಯಲ್ಲಿ ಕರುಂಕುರುಂ ತಿನ್ನುವ ಬಯಕೆಯಾಗುವುದು ಸಹಜ. ಹಾಗೆಂದು ಶರೀರಕ್ಕೆ ಬೇಕಾದ ಸತ್ವಗಳನ್ನು ಬಿಟ್ಟು ಅತಿಯಾಗಿ ಜಿಡ್ಡಿನ, ಕರಿದ ತಿಂಡಿಗಳನ್ನು ತಿನ್ನುವುದು ಕೂದಲಿನ ಆರೋಗ್ಯಕ್ಕೆ ಹೇಳಿಸಿದ್ದಲ್ಲ. ಮಳೆಗಾಲದ ಋತುವಿನಲ್ಲಿ ದೊರೆಯುವ ಹಣ್ಣು-ತರಕಾರಿಗಳಿಗೆ ಆದ್ಯತೆ ನೀಡಿ. ಚೆನ್ನಾಗಿ ನೀರು ಕುಡಿಯಿರಿ. ಸತ್ವಯುತ ಆಹಾರ ಸೇವಿಸಿ. ಅಹಾರದಲ್ಲಿ ವಿಟಮಿನ್‌ ಬಿ12, ಫೋಲೇಟ್‌, ಬಯೋಟಿನ್‌, ಪ್ರೊಟೀನ್‌ನಂಥವು ಹೇರಳವಾಗಿರಲಿ. ಇದರಿಂದ ಕಾಲ ಯಾವುದಾದರೂ, ಸುಂದರ ಕೂದಲು ನಿಮ್ಮದಾಗಲಿದೆ.

Continue Reading
Advertisement
Women's Asia Cup
ಪ್ರಮುಖ ಸುದ್ದಿ5 hours ago

Women’s Asia Cup 2024 : ಮಹಿಳೆಯರ ಏಷ್ಯಾ ಕಪ್​ ಕ್ರಿಕೆಟ್​ನ ವೇಳಾಪಟ್ಟಿ ಬಿಡುಗಡೆ, ಜುಲೈ 19ಕ್ಕೆ ಭಾರತ- ಪಾಕ್ ಪಂದ್ಯ

minister mb patil visit japan and discuss about investment in Karnataka
ಕರ್ನಾಟಕ5 hours ago

Foreign Investment: 100 ಕೋಟಿ ರೂ. ವೆಚ್ಚದ ತ್ಯಾಜ್ಯ ನೀರು ನಿರ್ವಹಣಾ ಉಪಕರಣಗಳ ತಯಾರಿಕಾ ಘಟಕ ಸ್ಥಾಪನೆಗೆ ಒಪ್ಪಂದ

Arvind Kejriwal
ಪ್ರಮುಖ ಸುದ್ದಿ5 hours ago

Arvind Kejriwal : ಜಾಮೀನು ಅರ್ಜಿ ವಿಚಾರಣೆಗೂ ಮುನ್ನ ಅರವಿಂದ್ ಕೇಜ್ರಿವಾಲ್ ಬಂಧಿಸಿದ ಸಿಬಿಐ

Kodagu News
ಕೊಡಗು5 hours ago

Kodagu News: ಕಳೆದುಕೊಂಡಿದ್ದ ಚಿನ್ನದ ನಾಣ್ಯ ವಾರಸುದಾರನ ಕೈ ಸೇರುವಂತೆ ಮಾಡಿದ ಪೊಲೀಸರು!

Lok Sabha Speaker
ಪ್ರಮುಖ ಸುದ್ದಿ6 hours ago

Lok Sabha Speaker : ಸ್ಪೀಕರ್​ ಚುನಾವಣೆಯಲ್ಲಿ ವೈಎಸ್​ಆರ್​ ಪಕ್ಷದಿಂದ ಬಿಜೆಪಿಗೆ ಬೆಂಬಲ

Rahul Gandhi
ಪ್ರಮುಖ ಸುದ್ದಿ6 hours ago

Rahul Gandhi : ಲೋಕ ಸಭೆಯಲ್ಲಿ ಪ್ರತಿ ಪಕ್ಷದ ನಾಯಕರಾಗಿ ರಾಹುಲ್ ಗಾಂಧಿ ಆಯ್ಕೆ

Ayodhya Ram Mandir
ಪ್ರಮುಖ ಸುದ್ದಿ7 hours ago

Ayodhya Ram Mandir : ಅಯೋಧ್ಯೆಯಲ್ಲಿ ನಿರ್ಮಾಣವಾಗಲಿದೆ ‘ಟೆಂಪಲ್ ಮ್ಯೂಸಿಯಮ್​’; ಯೋಗಿ ಸಂಪುಟದ ಸಮ್ಮತಿ

Milk Price
ಪ್ರಮುಖ ಸುದ್ದಿ7 hours ago

Milk Price: ನಂದಿನಿ ಹಾಲಿನ ಹೊಸ ದರ ಹೇಗಿದೆ; ಯಾವುದಕ್ಕೆ ಎಷ್ಟು ಹೆಚ್ಚಳ?

Ayodhya Ram Mandir:
ಪ್ರಮುಖ ಸುದ್ದಿ7 hours ago

Ayodhya Ram Mandir : ರಾಮಮಂದಿರದ ಚಾವಣಿ ಸೋರುತ್ತಿಲ್ಲ; ನಿರ್ಮಾಣ ಸಮಿತಿ ಸ್ಪಷ್ಟನೆ

Bengaluru Power Cut power outage in many parts of Bengaluru On June 27
ಬೆಂಗಳೂರು7 hours ago

Bengaluru Power Cut: ಜೂ.27ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ1 day ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ4 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ5 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ5 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 weeks ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

ಟ್ರೆಂಡಿಂಗ್‌