ಶಿಕಾರಿಪುರದಲ್ಲಿ ಜೂ.15ರಿಂದ 21ರವರೆಗೆ ಯೋಗ ಸಪ್ತಾಹ - Vistara News

ಯೋಗ ದಿನ

ಶಿಕಾರಿಪುರದಲ್ಲಿ ಜೂ.15ರಿಂದ 21ರವರೆಗೆ ಯೋಗ ಸಪ್ತಾಹ

ಶಿಕಾರಿಪುರದ ಭವಾನಿ ರಾವ್‌ ಕೇರಿಯಲ್ಲಿ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಯೋಗ ತರಬೇತಿ ನೀಡಲಾಗುತ್ತದೆ.

VISTARANEWS.COM


on

Mahantha swamiji
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶಿಕಾರಿಪುರ: ನಗರದ ಭವಾನಿ ರಾವ್ ಕೇರಿಯ ಮೈತ್ರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೂ.15ರಿಂದ 21ರವರೆಗೆ ಬೆಳಗ್ಗೆ ಹಾಗೂ ಸಂಜೆ 5.30ರಿಂದ 7 ಗಂಟೆಯವರೆಗೆ ಉಚಿತ ಯೋಗ ಸಪ್ತಾಹ ನಡೆಸಲಾಗುವುದು ಎಂದು ಜಡೆ ಸಂಸ್ಥಾನದ ಮಹಾಂತ ಸ್ವಾಮೀಜಿ ಹೇಳಿದ್ದಾರೆ.

ಮೊದಲನೇ ದಿನದ ಯೋಗ ಸಾನ್ನಿಧ್ಯವನ್ನು ಜಡೆ ಶ್ರಿಗಳು ವಹಿಸುತ್ತಿದ್ದು, ಸಂಸದ ಬಿ.ವೈ. ರಾಘವೇಂದ್ರ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಆಗಮಿಸಲಿದ್ದಾರೆ. ಸಂಜೆಯ ಕಾರ್ಯಕ್ರಮಕ್ಕೆ ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಗುರುಮೂರ್ತಿ ಭಾಗವಹಿಸಲಿದ್ದಾರೆ. ತರಬೇತುದಾರರಾಗಿ ಅಪರ್ಣ ಗುರು ಮೂರ್ತಿ, ಅರವಿಂದ, ರಾಮಾಜೋಯಿಸ್, ದಿಶಾ, ಭೋಜರಾಜ್ ಕೋರಿ ನಡೆಸಿಕೊಡಲಿದ್ದಾರೆ. ಧ್ಯಾನ, ಯೋಗಾಸನ, ಯೋಗ ಮುದ್ರೆ, ಸ್ತ್ರೀಯರ ಸಮಸ್ಯೆ, ಸಾಮಾನ್ಯ ಶಸ್ತ್ರಚಿಕಿತ್ಸೆ, ಉಪನ್ಯಾಸ ಮತ್ತು ಕ್ಯಾನ್ಸರ್ ಬಗ್ಗೆ ಮಾಹಿತಿ ದೊರೆಯಲಿದೆ. ಕೊನೆಯ ದಿನ ವಿಶ್ವ ಯೋಗ ದಿನಾಚರಣೆ ಅಂಗವಾಗಿ ವಿಶೇಷ ಸಾಮೂಹಿಕ ಯೋಗಾಭ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ | ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಪ್ರಜಾವಾಣಿಯ ಶಾಂತಕುಮಾರ್‌ ಸೇರಿ 6 ಸಾಧಕರಿಗೆ ಯೋಗ ರತ್ನ ಪ್ರಶಸ್ತಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರಿಕೆಟ್

Yoga Day 2023: ಯೋಗ ಮಾಡಿ ಮಿಂಚಿದ ಕ್ರಿಕೆಟ್​ ಆಟಗಾರರು

ಅಂತಾರಾಷ್ಟ್ರೀಯ ಯೋಗ ದಿನ (International Yoga Day 2023)ವನ್ನು ಟೀಮ್​ ಇಂಡಿಯಾದ ಮಾಜಿ ಆಟಗಾರರು ಯೋಗ ಮಾಡುವ ಮೂಲಕ ಆಚರಿಸಿದ್ದಾರೆ.

VISTARANEWS.COM


on

international yoga day
Koo

ಮುಂಬಯಿ: ಇಂದು ಅಂತಾರಾಷ್ಟ್ರೀಯ ಯೋಗ ದಿನ (International Yoga Day 2023)ವನ್ನು ವಿಶ್ವದಾದ್ಯಂತ ಆಚರಿಸಲಾಗಿದೆ. ದೊಡ್ಡ ಸಂಖ್ಯೆಯಲ್ಲಿ ಜನರು ಇಂದು ಯೋಗಾಸನಗಳನ್ನು ಮಾಡಿದ್ದಾರೆ. ಇದೀಗ ಕ್ರಿಕೆಟ್​ ಆಟಗಾರರು ಯೋಗ ಮಾಡಿದ ಫೋಟೊಗಳು ವೈರಲ್ ಆಗುತ್ತಿವೆ.

ಭಾರತದ ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ಗೌತಮ್ ಗಂಭೀರ್, ವೀರೇಂದ್ರ ಸಹವಾಗ್​,​ ವೆಂಕಟೇಶ್ ಪ್ರಸಾದ್ ಮತ್ತು ಪ್ರಗ್ಯಾನ್ ಓಜಾ ಯೋಗ ದಿನವನ್ನು ಉತ್ಸಾಹ ಹಾಗೂ ವಿಶಿಷ್ಟವಾಗಿ ಆಚರಿಸಿದ ಫೋಟೊವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.

ಮಾಜಿ ಕ್ರಿಕೆಟಿಗ ಹಾಗು ಜಿಜೆಪಿ ಸಂಸದ ಗೌತಮ್ ಗಂಭೀರ್ ಪ್ರಾಣಾಯಾಮ ಅಭ್ಯಾಸ ಮಾಡುತ್ತಿರುವ ಎರಡು ಫೋಟೊಗಳನ್ನು ಹಂಚಿಕೊಂಡು “ಯೋಗವು ದೇಹವನ್ನು ಮಾತ್ರವಲ್ಲ ಮನಸ್ಸು ಮತ್ತು ಆತ್ಮವನ್ನು ಸಮೃದ್ಧಗೊಳಿಸುತ್ತದೆ” ಎಂದು ಬರೆದುಕೊಂಡಿದ್ದಾರೆ.

ಸಚಿನ್ ತೆಂಡೂಲ್ಕರ್ ಕೆಲವು ಯೋಗಾಸನಗಳನ್ನು ಮಾಡುವ ಮೂಲಕ ಯೋಗದ ಮಹತ್ವವನ್ನು ಸಾರಿದರು. “ಯೋಗ ದೇಹ ಮತ್ತು ಮನಸ್ಸಿನ ನಡುವಿನ ಟೀಮ್ ವರ್ಕ್ ಹೆಚ್ಚಿಸಲು ಸಹಾಯ ಮಾಡುತ್ತದೆ. ನಿಮ್ಮ ನೆಚ್ಚಿನ ಯೋಗಾಸನ ಯಾವುದು ತಿಳಿಸಿ” ಎಂದು ವ್ಯಾಯಾಮದ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ Vijayanagara News: ಕೂಡ್ಲಿಗಿ, ಕೊಟ್ಟೂರಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ; ಇದು ವಿಸ್ತಾರ ನ್ಯೂಸ್‌ ಅಭಿಯಾನ

ಟೀಮ್​ ಇಂಡಿಯಾದ ಮಾಜಿ ವೇಗಿ, ಕನ್ನಡಿಗ ವೆಂಕಟೇಶ್ ಪ್ರಸಾದ್ ಅವರು ವಿಶಿಷ್ಟ ರೀತಿಯಲ್ಲಿ ಯೋಗ ದಿನಾಚರಣೆಯನ್ನು ಆಚರಿಸಿದ್ದಾರೆ. ಚಕ್ರಾಸನ ಭಂಗಿಯನ್ನು ಪ್ರದರ್ಶಿಸುವ ವಿಡಿಯೋ ಪೋಸ್ಟ್ ಮಾಡಿ ಯೋಗದ ಮಹತ್ವವನ್ನು ತೀಳಿಸಿದ್ದಾರೆ. “ಇದು ಚಕ್ರಾಸನ, ಅಥವಾ ಪೂರ್ಣಚಕ್ರ ಭಂಗಿ ಎಂದೂ ಕರೆಯುತ್ತಾರೆ. ಚಕ್ರಾಸನ ಯೋಗವು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಪ್ರಯೋಜನಕಾರಿ. ಇದು ದೇಹದ ನಮ್ಯತೆ ಹೆಚ್ಚಿಸಲು ಆರೋಗ್ಯಕರ ಸ್ನಾಯುಗಳು ಮತ್ತು ಮೂಳೆಗಳನ್ನು ಕಾಪಾಡಿಕೊಳ್ಳಲು ಹಾಗೂ ಮಾನಸಿಕ ಒತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ” ಎಂದು ವೆಂಕಟೇಶ್ ಪ್ರಸಾದ್ ಬರೆದುಕೊಂಡಿದ್ದಾರೆ.

ಡ್ಯಾಶಿಂಗ್​ ಓಪನರ್​ ಆಗಿದ್ದ ವೀರೇಂದ್ರ ಸೆಹವಾಗ್​ ಅವರು” ಎಲ್ಲರಿಗೂ ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳು. ಯೋಗಕ್ಕೆ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ವೃದ್ಧಿಸುವ ಶಕ್ತಿ ಇದೆ” ಎಂದು ಬರೆದುಕೊಂಡಿದ್ದಾರೆ. ಪ್ರಗ್ಯಾನ್ ಓಜಾ ಕೂಡ ಯೋಗ ಮಾಡುತ್ತಿರುವ ಫೋಟೊ ಹಂಚಿಕೊಂಡು” ಒತ್ತಡವನ್ನು ದೂರ ಮಾಡುವ ಮತ್ತು ಮನಸ್ಸಿಗೆ ಶಾಂತಿ ಸಹನೆ ನೆಮ್ಮದಿಗಾಗಿ ಯೋಗ ತುಂಬಾ ಉಪಯುಕ್ತ. ಆರೋಗ್ಯವನ್ನು ಹೆಚ್ಚಿಸಲು ಯೋಗದ ಶಕ್ತಿಯನ್ನು ಬಳಸಿಕೊಳ್ಳಿ” ಎಂದು ಬರೆದುಕೊಂಡಿದ್ದಾರೆ. ಹೀಗೆ ಅನೇಕ ಕ್ರೀಡಾಪಟುಗಳು ಯೋಗ ಮಾಡುವ ಮೂಲಕ ಯೋಗದಿನವನ್ನು ಆಚರಿಸಿದ್ದಾರೆ.

Continue Reading

ಫ್ಯಾಷನ್

Yoga Day 2023: ಪರ್ಫೆಕ್ಟ್ ಯೋಗ ಔಟ್‌ಫಿಟ್‌ ಆಯ್ಕೆ ಮಾಡುವುದು ಹೇಗೆ?

ನಿಮ್ಮ ಪರ್ಸನಾಲಿಟಿಗೆ ತಕ್ಕಂತೆ ಮ್ಯಾಚ್‌ ಆಗುವ ಹಾಗೂ ನೋಡಲು ಆಕರ್ಷಕವಾಗಿ ಕಾಣುವ ಯೋಗ ಔಟ್‌ಫಿಟ್‌ (Yoga Outfit) ಚೂಸ್‌ ಮಾಡುವುದು ಹೇಗೆ? ಅಥವಾ ವಾರ್ಡ್ರೋಬ್‌ನಲ್ಲಿರುವ ಉಡುಪುಗಳನ್ನೇ ಇದಕ್ಕಾಗಿ ಮರುಬಳಕೆ ಮಾಡುವುದು ಹೇಗೆ? ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಒಂದಿಷ್ಟು ಮಾಹಿತಿ ನೀಡಿದ್ದಾರೆ(yoga Day 2023).

VISTARANEWS.COM


on

Yoga Outfit
ಚಿತ್ರಕೃಪೆ : ಪಿಕ್ಸೆಲ್‌
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಯಾವುದೋ ಒಂದು ಉಡುಪು ಧರಿಸಿ, ಯೋಗ ಕ್ಲಾಸ್‌ಗೆ ಹೋಗುವ ಕಾಲ ಇದಲ್ಲ! ಶ್ರದ್ಧೆಯಿಂದ ಮಾಡುವ ಈ ಯೋಗಕ್ಕೂ ಆರಾಮ ಎನಿಸುವಂತಹ ಸೂಕ್ತವಾದ ಔಟ್‌ಫಿಟ್‌ (Yoga Outfit) ಧರಿಸುವ ಕಾಲವಿದು. ಇದಕ್ಕೆ ಪೂರಕ ಎಂಬಂತೆ, ಮಾರುಕಟ್ಟೆಯಲ್ಲೂ ಕೂಡ ನಾನಾ ಬಗೆಯ ವೈವಿಧ್ಯಮಯ ಯೋಗದ ಔಟ್‌ಫಿಟ್‌ಗಳು ಲಗ್ಗೆ ಹಾಕಿವೆ(Yoga Day 2023).

ಹಿಂದೆಲ್ಲಾ ಲೂಸಾದ ಟೀ ಶರ್ಟ್-ಪ್ಯಾಂಟ್‌, ಇಲ್ಲವೇ ಶಾರ್ಟ್ ಕುರ್ತಾ, ಸಲ್ವಾರ್‌ ಹಾಗೂ ದೊಗಲೆ ಪ್ಯಾಂಟ್ ಧರಿಸಿದರೇ ಸಾಕು ಎಂಬ ಮನೋಭಾವವಿತ್ತು. ಇದೀಗ ಅದು ಬದಲಾಗಿದೆ. ಆಯಾ ವರ್ಗ ಹಾಗೂ ವಯಸ್ಸಿನವರ ಮನೋಭಿಲಾಷೆಗೆ ಮ್ಯಾಚ್‌ ಆಗುವಂತಹ ನಾನಾ ಬಗೆಯ ಯೋಗ ಸೂಟ್‌ ಹಾಗೂ ಸೆಟ್‌ಗಳು ಆಗಮಿಸಿವೆ ಎನ್ನುವ ಸ್ಟೈಲಿಸ್ಟ್‌ ಒಂದಿಷ್ಟು ಸಲಹೆಗಳನ್ನು ನೀಡಿದ್ದಾರೆ.

Yoga Outfit fashion

ಪರ್ಫೆಕ್ಟ್‌ ಬಿಎಂಐಗೆ ಟೂ ಪೀಸ್‌ ಯೋಗ ಸೆಟ್‌

ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ, ಸೋಹಾ, ಸಾರಾ, ಸೋನಂ, ಜಾನ್ವಿ ಸೇರಿದಂತೆ ನಾನಾ ನಟಿಯರು ಯೋಗಾಭ್ಯಾಸಕ್ಕೆ ಧರಿಸುವ ಟೂ ಪೀಸ್‌ ಯೋಗ ಔಟ್‌ಫಿಟ್‌ಗಳು ಇಂದು ಹೆಚ್ಚು ಬೇಡಿಕೆಯಲ್ಲಿವೆ ಹಾಗೂ ಟ್ರೆಂಡ್‌ನಲ್ಲಿವೆ. ದೇಹವನ್ನು ಎಕ್ಸ್‌ಪೋಸ್‌ ಮಾಡುವ ಇವನ್ನು ಪರ್ಫೆಕ್ಟ್‌ ಬಾಡಿ ಮಾಸ್‌ ಇಂಡೆಕ್ಸ್‌ ಇರುವವರು ಮಾತ್ರ ಧರಿಸಬಹುದು.

ಸ್ಲಿಮ್‌ ಇರುವವರಿಗೆ ಕ್ರಾಪ್‌ ಟಾಪ್‌-ಟೈಟ್ಸ್

ತೆಳ್ಳಗಿರುವರಿಗೆ ಸ್ಪೋಟ್ರ್ಸ್ ಬ್ರಾಲೆಟ್‌ ಇರುವ ಟೂ ಪೀಸ್‌ ಕ್ರಾಪ್‌ ಟಾಪ್‌ ಯೋಗ ಸೆಟ್‌ ಓಕೆ. ನಮಗೆ ಎಕ್ಸ್‌ಪೋಸ್‌ ಬೇಡ ಎನ್ನುವವರು ಟ್ಯಾಂಕ್‌ ಟಾಪ್‌ ಅಥವಾ ಬ್ರಾಲೆಟ್‌ ಮೇಲೆ ಕ್ರಿಸ್‌ ಕ್ರಾಸ್‌ ಟೀ ಶರ್ಟ್ ಧರಿಸಬಹುದು.

Yoga Outfit for traditional women women

ಪ್ಲಂಪಿಯಾಗಿರುವವರಿಗೆ ಶಾರ್ಟ್ ಕುರ್ತಾ- ಪ್ಯಾಂಟ್‌

ದಪ್ಪಗಿರುವವರು ಆದಷ್ಟೂ ಲಾಂಗ್‌ ಟೀ ಶರ್ಟ್, ಪ್ಲಸ್‌ ಸೈಝ್‌ ಟಾಪ್‌ ಅಥವಾ ಶಾರ್ಟ್ ಕುರ್ತಾಗಳನ್ನು ಪ್ಯಾಂಟ್‌ ಮೇಲೆ ಧರಿಸಬಹುದು.

ಟ್ರೆಡಿಷನಲ್‌ ಇರುವವರಿಗೆ ಮಿಕ್ಸ್‌ ಮ್ಯಾಚ್‌

ವೆಸ್ಟರ್ನ್ ಔಟ್‌ಫಿಟ್ಸ್‌ ಬೇಡ! ಎನ್ನುವವರು ತಮ್ಮವಾರ್ಡ್ರೋಬ್‌ನಲ್ಲಿರುವ ಧೋತಿ ಪ್ಯಾಂಟ್‌, ಸ್ಟ್ರೇಟ್‌ ಸಲ್ವಾರ್‌ ಪ್ಯಾಂಟ್‌ಗಳ ಮೇಲೆ ಕೊಂಚ ಫಿಟ್ಟಿಂಗ್‌ ಇರುವಂತಹ ಕುರ್ತಾ ಧರಿಸಬಹುದು.

comfortable Yoga Outfit fashion

ಜೆನ್‌ ಜಿ ಚಾಯ್ಸ್‌

ಇನ್ನು, ಈ ಜನರೇಷನ್‌ನ ಚಾಯ್ಸ್‌ ಕಂಪ್ಲೀಟ್‌ ಬದಲಾಗಿದೆ. ಹಾಗಾಗಿ ಇವರಿಗೆ ಹೊಂದುವಂತಹ ಟ್ರೆಂಡಿಯಾಗಿರುವ ಟ್ಯಾಂಕ್‌ ಟಾಪ್ಸ್‌, ಕ್ರಿಸ್‌ ಕ್ರಾಸ್‌ ಬ್ರಾಲೆಟ್‌, ಹಾಲ್ಟರ್‌ ನೆಕ್‌ ಕ್ರಾಪ್‌ ಟಾಪ್‌, ಹಾರೆಮ್‌ ಪ್ಯಾಂಟ್ಸ್‌, 2 ಪೀಸ್‌ ಸೆಟ್‌, ಟೈಟ್‌ ಹಾಗೂ ಬ್ರಿಥೆಬಲ್‌ ಸ್ಕಿನ್‌ ಟೈಟ್ ಪ್ಯಾಂಟ್‌ಗಳನ್ನು ಧರಿಸಬಹುದು.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Yoga Day 2023: ವಿಧಾನಸೌಧದ ಎದುರು ಯೋಗ ಪ್ರದರ್ಶನ

Continue Reading

ದೇಶ

Yoga For Kids: ಮಕ್ಕಳ ಸಮಗ್ರ ಬೆಳವಣಿಗೆಗೆ ಸು’ಯೋಗ’, ಯಾವ ಆಸನಗಳು ಸೂಕ್ತ?

Yoga Day 2023: ಉಸಿರಾಟದ ತಂತ್ರಗಳು ಬೆಳೆಯುವ ಮಕ್ಕಳ ಶ್ವಾಸಕೋಶವನ್ನು ಬಲಗೊಳಿಸುತ್ತವೆ. ನಿದ್ರೆಯನ್ನು ಗಾಢವಾಗಿಸಿ, ಸಮೃದ್ಧ ಬೆಳವಣಿಗೆಯನ್ನು ಸಾಧ್ಯವಾಗಿಸುತ್ತವೆ. ಸ್ನಾಯುಗಳನ್ನು ಸುದೃಢಗೊಳಿಸಿ, ಕೀಲುಗಳನ್ನು ಪೋಷಿಸುತ್ತವೆ. ಇದರಿಂದ ಮಕ್ಕಳಲ್ಲಿ ತಮ್ಮ ದೇಹದ ಬಲದ ಕುರಿತಾಗಿಯೂ ವಿಶ್ವಾಸ ಹೆಚ್ಚುತ್ತದೆ.

VISTARANEWS.COM


on

Yoga by Kid
Koo

ಹುಟ್ಟುವಾಗಲೇ ಕೆಲವು ಸಾಮರ್ಥ್ಯಗಳು ನಮಗೆ ಬಂದಿರುತ್ತವೆ ಎಂಬುದೊಂದು ನಂಬಿಕೆ. ಉದಾ, ಪುಟ್ಟ ಮಕ್ಕಳಿಗೆ ಬೆರಳು ಚೀಪುವುದನ್ನು ಯಾರೂ ಹೇಳಿಕೊಟ್ಟಿರುವುದಿಲ್ಲ. ಮಲಗಿರುವ ಶಿಶುವನ್ನು ನೋಡಿದಾಗ ಕಾಣುವುದು ಹೆಬ್ಬೆರಳು ಮತ್ತು ತೋರು ಬೆರಳು ಒಂದಕ್ಕೊಂದು ಬೆಸೆದುಕೊಂಡಿರುವ ಚಿನ್ಮುದ್ರೆ, ಅಂಬೆಗಾಲಿಡುವ ಕೂಸಿನ ಭುಜಂಗಾಸನ ಅಥವಾ ತೊದಲು ಹೆಜ್ಜೆ ಇಡುವ ಚಿಣ್ಣರ ಅಧೋಮುಖ ಶ್ವಾನಾಸನಗಳು ಇನ್ನಷ್ಟು ಇಂತಹ ಉದಾಹರಣೆಗಳು. ಕೆಲವು ಸಾಧ್ಯತೆಗಳು ಹುಟ್ಟಾ ಇವೆಯೆಂದ ಮಾತ್ರಕ್ಕೆ ಅವುಗಳನ್ನು ಅಲ್ಲಿಯೇ ಬಿಡಬೇಕೆ ಅಥವಾ ಮುಂದುವರಿಸಬೇಕೆ? ಈ ಮೇಲಿನ ಸಾಧ್ಯತೆಯ ಪ್ರಕಾರ ಹೇಳುವುದಾದರೆ, ಪ್ರತಿಯೊಂದು ಮಗುವೂ ಯೋಗಪಟು! ಹಾಗಾಗಲು ಸಾಧ್ಯವೇ? ಒಂದೊಮ್ಮೆ ಹಾಗಾದರೆ… ನಷ್ಟವಿದೆಯೇ? ಮಕ್ಕಳಿಗೆ ಇರುವ ನೂರೆಂಟು ಒತ್ತಡಗಳ ನಡುವೆ ಈ ಯೋಗವೊಂದನ್ನು (yoga for kids) ತುರುಕಿ, ಅವರ ಜೀವನ ದುರ್ಭರ ಮಾಡುವ ಉದ್ದೇಶಕ್ಕಲ್ಲ ಇದನ್ನು ಹೇಳುತ್ತಿರುವುದು. ಬದಲಿಗೆ, ಇರುವ ನೂರೆಂಟು ಒತ್ತಡಗಳಿಂದ ಎಳೆಜೀವಗಳು ನಲುಗದಂತೆ ಮಾಡಲು ಸಾಧ್ಯವಿದೆ ಎಂಬುದು ಯೋಗಾಭ್ಯಾಸಿಗಳ ನಿರ್ಣಾಯಕ ನಿಲುವು. ಒಮ್ಮೆ ಶಾಲೆ, ಇನ್ನೊಮ್ಮೆ ಆಟೋಟ, ಮತ್ತೆ ಸಂಗೀತ/ ನೃತ್ಯದಂಥ ತರಗತಿಗಳು, ಅದಾದಮೇಲೆ ಕುಮಾನ್‌, ಅಬಾಕಸ್, ವೇದಗಣಿತ ಅಥವಾ ಮತ್ತೆಂಥದ್ದೋ. ಇವಿಷ್ಟರ ನಡುವೆ ಬೇಕಾದ್ದನ್ನು ಸಿಳ್ಳೆ ಹೊಡೆಯುತ್ತಾ ಖುಷಿಯಿಂದ ಮಾಡುವಷ್ಟು ಸಮಯ ಮಕ್ಕಳಿಗೆಲ್ಲಿದೆ? ಹಾಗಿರುವಾಗ ಯೋಗ ಕ್ಲಾಸಿಗೆ (yoga for kids) ಎಲ್ಲಿಂದ ಸಮಯ ತರುವುದು? ದಿನಕ್ಕೆ ಇಪ್ಪತ್ನಾಲ್ಕೇ ತಾಸಲ್ಲವೇ! (Yoga Day 2023)

ಇರುವ ಸಮಯದಲ್ಲೇ ಮಕ್ಕಳಿಗೆ ಕೆಲವು ಸರಳ ಯೋಗಾಭ್ಯಾಸವನ್ನು ಮನೆಯಲ್ಲಿ ಪಾಲಕರೇ ಮಾಡಿಸಬಹುದು. ಪಾಲಕರೂ ಯೋಗಾಭ್ಯಾಸಿಗಳಾಗಿದ್ದರೆ ಇದಕ್ಕೆಲ್ಲ ಅನುಕೂಲ. ಅದಿಲ್ಲದಿದ್ದರೆ ಮಕ್ಕಳಿಗಾಗಿಯೇ ಕೆಲವು ಆನ್‌ಲೈನ್‌ ಯೋಗ ತರಗತಿಗಳು ಇರುವುದಿದೆ. ಮೊದಲಿಗೆ ಗುರುಮುಖೇನ ಕಲಿತ ಯೋಗ ಪಾಠಗಳನ್ನು (yoga for kids) ಮಕ್ಕಳು ಇರುವ ಸಮಯದಲ್ಲಿ ಮನೆಯಲ್ಲೇ ರೂಢಿಸಿಕೊಳ್ಳಬಹುದು. ಆದರೆ ಅಷ್ಟೆಲ್ಲಾ ಮಾಡುವ ಅಗತ್ಯವಿದೆಯೇ? ಮಕ್ಕಳು ಯೋಗಾಭ್ಯಾಸ ಮಾಡುವುದರಿಂದ ಏನು ಪ್ರಯೋಜನ?

ಎಲ್ಲೆಡೆಯಿಂದ ಒತ್ತಡವೇ ಹರಿದು ಬರುತ್ತಿರುವ ಇಂದಿನ ಪ್ರಷರ್‌ ಕುಕ್ಕರ್‌ನಂಥ ವಾತಾವರಣದಲ್ಲಿ ಮಕ್ಕಳು ತಮ್ಮತನವನ್ನು ಉಳಿಸಿಕೊಂಡು ಬೆಳೆಯುವುದಕ್ಕೆ ಅಗತ್ಯವಾದದ್ದು ಒತ್ತಡ ಸಹಿಸಿಕೊಳ್ಳುವ ಸಾಮರ್ಥ್ಯ. ಅವರ ಬಲಿಯುತ್ತಿರುವ ವ್ಯಕ್ತಿತ್ವಗಳಿಗೆ ಶಕ್ತಿ ಮತ್ತು ಆತ್ಮವಿಶ್ವಾಸ ತುಂಬಿ, ಭೀತಿಯನ್ನು ಹೋಗಲಾಡಿಸುವ ಅನಿವಾರ್ಯತೆಯಿದೆ. ಇವೆಲ್ಲಾ ಕಾರಣಗಳಿಗಾಗಿ ಎಳೆಯರ ದೇಹ, ಮನಸ್ಸುಗಳು ಅವರ ಉಸಿರಿನೊಂದಿಗೆ ಏಕಸೂತ್ರದಲ್ಲಿ ಬೆಸೆಯುವ ಆವಶ್ಯಕತೆಯಿದೆ. ಇನ್ನೂ ಸರಳವಾಗಿ ಹೇಳುವುದಾದರೆ, ಯೋಗಾಭ್ಯಾಸ ಅವರಿಗೆ ಬೇಕಿದೆ.

ಮಕ್ಕಳಿಗೆ ಯೋಗ ಯಾಕೆ ಬೇಕು?

ನಮ್ಮ ಮನಸ್ಸನ್ನು ಕೇಂದ್ರೀಕರಿಸುವುದು ಕೆಲವೇ ಹೊತ್ತಿನವರೆಗೆ ಮಾತ್ರ ಸಾಧ್ಯ. ಅದರಲ್ಲೂ ಮಕ್ಕಳ ಗಮನ ಹಿಡಿದಿಡುವುದು ಇನ್ನೂ ಕಷ್ಟ. ಯೋಗಾಭ್ಯಾಸ ಮತ್ತು ಪ್ರಾಣಾಯಾಮದಿಂದ ಮಕ್ಕಳ ಗಮನದ ಅವಧಿಯನ್ನು ಹೆಚ್ಚಿಸಬಹುದು. ಏಕಾಗ್ರತೆಯ ಕೊರತೆಯನ್ನು ನೀಗಿಸಬಹುದು. ಮಾತ್ರವಲ್ಲ, ಅವರ ಕಲ್ಪನೆ ಮತ್ತು ಸೃಜನಶೀಲತೆಗಳನ್ನು ವಿಕಾಸಗೊಳಿಸಬಹುದು. ಯೋಗವೆಂದರೆ ಈಗ ಲೋಕವಿಖ್ಯಾತವಾಗಿರುವಂತೆ ಒಂದಿಷ್ಟು ಭಂಗಿಗಳಲ್ಲ. ಅದೊಂದು ಮಾನಸಿಕ ಸ್ಥಿತಿ. ಆ ಒತ್ತಡರಹಿತವಾದ ಮಾನಸಿಕ ಸ್ಥಿತಿಯಿಂದ ದೈಹಿಕ ಸುಧಾರಣೆಯೂ ಸಾಧ್ಯವಿದೆ. ಹಾಗಾಗಿ ಕುತ್ತಿಗೆ ಹಿಸುಕುವ ಒತ್ತಡದಿಂದ ಮಕ್ಕಳನ್ನು ಹೊರತಂದು, ಅವರ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಹೊಟ್ಟೆಕಿಚ್ಚು, ಕೋಪ, ಹೆದರಿಕೆ, ಹುಳುಕು ಮುಂತಾದ ಕ್ಷುಲ್ಲಕ ಭಾವಗಳಿಂದ ಮಕ್ಕಳನ್ನು ಧೀರೋದಾತ್ತ ಮನೋಸ್ಥಿತಿಯೆಡೆಗೆ ಒಯ್ಯುತ್ತದೆ.

ಇಷ್ಟಾಗಿ, ಯೋಗವೆಂದರೆ ವ್ಯಾಯಾಮವೂ ಹೌದು. ಹಾಗಾಗಿ ಉಸಿರಾಟದ ತಂತ್ರಗಳು ಬೆಳೆಯುವ ಮಕ್ಕಳ ಶ್ವಾಸಕೋಶವನ್ನು ಬಲಗೊಳಿಸುತ್ತವೆ. ನಿದ್ರೆಯನ್ನು ಗಾಢವಾಗಿಸಿ, ಸಮೃದ್ಧ ಬೆಳವಣಿಗೆಯನ್ನು ಸಾಧ್ಯವಾಗಿಸುತ್ತವೆ. ಸ್ನಾಯುಗಳನ್ನು ಸುದೃಢಗೊಳಿಸಿ, ಕೀಲುಗಳನ್ನು ಪೋಷಿಸುತ್ತವೆ. ಇದರಿಂದ ಮಕ್ಕಳಲ್ಲಿ ತಮ್ಮ ದೇಹದ ಬಲದ ಕುರಿತಾಗಿಯೂ ವಿಶ್ವಾಸ ಹೆಚ್ಚುತ್ತದೆ. ಹೆಚ್ಚಿನ ಸಾರಿ ನಾಲಿಗೆಯ ಚಪಲಕ್ಕೆ ಮನಸೋಲುವ ಮಕ್ಕಳನ್ನು ಆರೋಗ್ಯಕರ ಆಹಾರಗಳೆಡೆಗೆ ಕರೆದೊಯ್ಯುವುದು ಪೋಷಕರಿಗೆ ಸುಲಭವಾಗುತ್ತದೆ.

ಮಕ್ಕಳಿಗೆ ಯಾವೆಲ್ಲಾ ಯೋಗ ಆಸನಗಳು ಸೂಕ್ತ?

ಸರ್ವಾಂಗಾಸನ

ತಮ್ಮ ಹಠಗಳಿಂದ ಹೆತ್ತವರನ್ನು ತಲೆಕೆಳಗಾಗಿಸುವ ಮಕ್ಕಳನ್ನೇ ತಲೆಕೆಳಗಾಗಿಸುವ ಆಸನವಿದು. ಇದರಿಂದ ಮೆದುಳಿಗೆ ರಕ್ತ ಸಂಚಾರ ಹೆಚ್ಚಿ, ಪೋಷಣೆ ದೊರೆಯುತ್ತದೆ. ತೋಳು ಮತ್ತು ಭುಜಗಳ ದೃಢತೆ ಹೆಚ್ಚುತ್ತದೆ. ಬೆನ್ನುಹುರಿ ಜಡವಾಗದಂತೆ ಕಾಪಾಡುತ್ತದೆ.

ವೀರಭದ್ರಾಸನ

ತೋಳು ಮತ್ತು ಕಾಲುಗಳ ಸ್ನಾಯುಗಳನ್ನು ಬಲಗೊಳಿಸುತ್ತದೆ. ಶರೀರದ ಸಮತೋಲನ ಹೆಚ್ಚಿಸುತ್ತದೆ. ದೇಹದ ಒಟ್ಟಾರೆ ಬಲ ಮತ್ತು ಸಾಮರ್ಥ್ಯವೂ ಅಧಿಕವಾಗುತ್ತದೆ.

ವೃಕ್ಷಾಸನ

ತೋಳು, ಕಾಲುಗಳ ದೃಢತೆ ಹೆಚ್ಚಿಸುವ ಭಂಗಿಯಿದು. ಬೆನ್ನು ಹುರಿಯ ಚಟುವಟಿಕೆಯನ್ನು ಹೆಚ್ಚಿಸಿ, ದೇಹ ಬಾಗದಂತೆ ಕಾಪಾಡುತ್ತದೆ. ಎತ್ತರ ಇರುವ ಮಕ್ಕಳ ಬೆನ್ನು ಹುರಿ ಮುಂದೆ ಬಾಗುವುದು ಸಾಮಾನ್ಯವಾಗಿ ಕಂಡುಬರುವ ಸಂಗತಿ. ಇಂಥದಕ್ಕೆ ಅವಕಾಶವಾಗದೆ, ಮರದಂತೆ ನೇರವಾಗಿ ಮಕ್ಕಳನ್ನು ನಿಲ್ಲಿಸುತ್ತದೆ ಈ ಭಂಗಿ.

ಸೂರ್ಯ ನಮಸ್ಕಾರ

ಆಕಾಶವೇ ಮಕ್ಕಳ ತಲೆಯ ಮೇಲೆ ಬಿದ್ದಂತಹ ಇಂದಿನ ಸ್ಪರ್ಧೆಯ ಕಾಲದಲ್ಲಿ, ಪುಟಾಣಿಗಳ ನರಮಂಡಲದ ಮೇಲಿನ ಒತ್ತಡ ಇಳಿಸುತ್ತದೆ. ಅವರ ನೆನಪಿನ ಶಕ್ತಿಯನ್ನು ವೃದ್ಧಿಸುತ್ತದೆ. ಟಿವಿ, ಮೊಬೈಲ್‌ ಎಂದು ಗೆಜೆಟ್‌ಗಳ ಸಹವಾಸದಿಂದ ಜಡವಾದ ದೇಹವನ್ನು ಸಡಿಲ ಮಾಡುತ್ತದೆ. ಕಾಲು, ಕುತ್ತಿಗೆ ಮತ್ತು ಸೊಂಟಗಳ ಸ್ನಾಯುಗಳಿಗೆ ಇವು ನೆರವಾಗುತ್ತವೆ. ಯಾವುದೇ ಕ್ರೀಡಾ ಚಟುವಟಿಕೆಗಳಿಗೆ ದೇಹವನ್ನು ಸಿದ್ಧಮಾಡುವಂಥ ಸರಣಿ ಆಸನವಿದು. ಜೊತೆಗೆ ಸರಿಯಾದ ಉಸಿರಾಟ ಕ್ರಮವನ್ನು ಕಲಿತುಕೊಂಡರೆ, ಸೂರ್ಯ ನಮಸ್ಕಾರದ ಪ್ರಯೋಜನಗಳು ಮಕ್ಕಳಿಗೆ ಬಹಳಷ್ಟು ರೀತಿಯಲ್ಲಿ ಆಗುತ್ತವೆ.

ಧನುರಾಸನ

ಇಡೀ ಬೆನ್ನಿನ ಭಾಗದ ಶಕ್ತಿ ಹೆಚ್ಚಿಸುವ ಭಂಗಿಯಿದು. ಕಾಲಿಂದ ಕೈಯನ್ನೆಳೆದು, ಕೈಯಿಂದ ಕಾಲನ್ನೆಳೆಯುತ್ತಾ ದೇಹವನ್ನು ಸಮತೋಲನಕ್ಕೆ ತರುವ ಈ ಆಸನದಿಂದ ಕೈ-ಕಾಲುಗಳೂ ಸದೃಢಗೊಳ್ಳುತ್ತವೆ. ಆಯಾಸ ಮತ್ತು ಒತ್ತಡ ಪರಿಹಾರಕ್ಕೂ ಇದು ಬಳಕೆಯಾಗುತ್ತದೆ.

ಶವಾಸನ

ದಿನವಿಡೀ ಚಟುವಟಿಕೆಯಿಂದ ಆದಂಥ ಆಯಾಸವನ್ನು ಪರಿಹಾರ ಮಾಡುವಲ್ಲಿ ಇದು ಪ್ರಮುಖವಾದದ್ದು. ಮನಸ್ಸನ್ನು ವಿಶ್ರಾಂತಿಯತ್ತ ದೂಡಿ, ಗಮನ ಮತ್ತು ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಶರೀರದ ಶಕ್ತಿಯನ್ನು ಸಂಚಯನಕ್ಕೆ ನೆರವಾಗುತ್ತದೆ.

ಈ ಸುದ್ದಿಯನ್ನೂ ಓದಿ: Yoga Day 2023: ಎಲ್ಲೆಡೆ ಯೋಗ ದಿನ ಸಂಭ್ರಮ; ವಿಸ್ತಾರ ಅಭಿಯಾನಕ್ಕೆ ಫೋಟೊಗಳ ಮಹಾಪೂರ

ನೆನಪಿಡಿ

ಮಕ್ಕಳಿಗೆ ಪ್ರಿಯವಾದಂಥ ಆಟ ಅಥವಾ ಟಿವಿಯ ಹೊತ್ತನ್ನು ಕತ್ತರಿಸಿ, ಯೋಗ ತರಗತಿಗೆ ಅಟ್ಟಬೇಡಿ. ಇದರಿಂದ ಅವರಿಗೆ ಯೋಗವೇ ಶತ್ರುವಾಗಿ ಬಿಡಬಹುದು. ಔಷಧಿಯೇ ರೋಗವಾದರೆ ಗುಣಪಡಿಸುವುದು ಹೇಗೆ ಎನ್ನುವಂತಾದೀತು. ಆಸನಗಳನ್ನು ಬಾಯಲ್ಲಿ ಹೇಳುವ ಬದಲು, ಸರಿಯಾಗಿ ಮಾಡಿ ತೋರಿಸಿ. ಹೇಳುವುದನ್ನು ಕೇಳುವುದಕ್ಕಿಂತ ಮಾಡುವುದನ್ನು ಮಕ್ಕಳು ನೋಡಿ ಕಲಿಯುವುದೇ ಹೆಚ್ಚು. ಚೆನ್ನಾಗಿ ಮಾಡುವ ಇನ್ನೊಂದು ಮಗುವಿನೊಂದಿಗೆ ನಿಮ್ಮ ಮಗುವನ್ನು ಖಂಡಿತಕ್ಕೂ ಹೋಲಿಸಬೇಡಿ; ಬದಲಿಗೆ, ನಿನ್ನೆ ಮಾಡಿದ್ದಕ್ಕಿಂತ ಇವತ್ತು ಹೆಚ್ಚು ಚೆನ್ನಾಗಿ ಮಾಡುವಂತೆ ಮಗುವನ್ನು ಪ್ರೋತ್ಸಾಹಿಸಿ.

ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Continue Reading

ಫೋಟೊ

Ragini Dwivedi: ಮಾದಕ ನಟಿ ರಾಗಿಣಿಯ ಬಿಂದಾಸ್ ಯೋಗ ನೋಡುವುದೇ ಯೋಗ!

ರಾಗಿಣಿ ದ್ವಿವೇದಿ ಬಹುಭಾಷಾ ನಟಿ. ಮನಮೋಹಕ ನೋಟ ಹಾಗೂ ಮಾದಕ ಮೈಮಾಟಕ್ಕೆ ಹೆಸರಾದವರು. ಯೋಗ ದಿನದ ಸಂದರ್ಭದಲ್ಲಿ ಅವರು ಹಂಚಿಕೊಂಡ ಕೆಲವು ವಿಶೇಷ ಭಂಗಿಯ ಚಿತ್ರಗಳು ಇಲ್ಲಿವೆ.

VISTARANEWS.COM


on

Ragini Dwivedi yoga images
Koo
Multilingual actress Ragini Dwivedi

ಬಹುಭಾಷಾ ನಟಿ ರಾಗಿಣಿ ದ್ವಿವೇದಿ ಯೋಗದಿನದಂದು ಕೆಲ ಯೋಗಗಳನ್ನು ಮಾಡುತ್ತ ಸ್ಪೆಷಲ್‌ ಆಗಿ ವಿಷ್‌ ಮಾಡಿದ್ದಾರೆ.

Ragini devotes some time to yoga

ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಾಗಿಣಿ ಸ್ವಲ್ಪ ಸಮಯವನ್ನು ಯೋಗಕ್ಕೆಂದೇ ಮೀಸಲಿಡುತ್ತಾರೆ.

Ragini Dwivedi posing doing Chakrasana on Yoga Day

ಯೋಗದಿನದಂದು ಚಕ್ರಾಸನ ಮಾಡುತ್ತ ಪೋಸ್‌ ನೀಡುತ್ತಿರುವ ರಾಗಿಣಿ ದ್ವಿವೇದಿ

Ragini Dwivedis fitness photo is going viral on the internet

ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ರಾಗಿಣಿ ದ್ವಿವೇದಿ ಫಿಟ್‌ನೆಸ್‌ ಫೋಟೊ

Sandalwood Bedagi has great importance for beauty and fitness

ಬ್ಯೂಟಿಗೆ ಮತ್ತು ಫಿಟ್‌ನೆಸ್‌ಗೆ ಹೆಚ್ಚಿನ ಮಹತ್ವನೀಡುವ ಸ್ಯಾಂಡಲ್‌ವುಡ್‌ ಬೆಡಗಿ

Fat girl keeps fit with yoga workout despite busy schedule

ಬ್ಯುಸಿ ಶೆಡ್ಯೂಲ್‌ನಲ್ಲಿಯೂ ಯೋಗ ವರ್ಕೌಟ್‌ ಮಾಡುತ್ತ ಬಾಡಿಯನ್ನು ಫಿಟ್‌ ಆಗಿ ಇರಿಸಿಕೊಂಡ ತುಪ್ಪದ ಹುಡುಗಿ

ಇದನ್ನೂ ಓದಿ: Ragini Dwivedi: ಮಾದಕ ನಟಿ ರಾಗಿಣಿಯ ಬಿಂದಾಸ್ ಯೋಗ ನೋಡುವುದೇ ಯೋಗ!

Continue Reading
Advertisement
IPL Ticket Scam
ಕ್ರೀಡೆ16 mins ago

IPL Ticket Scam: ಆನ್​ಲೈನ್​ ಟಿಕೆಟ್​ ಖರೀದಿಸಲು ಹೋಗಿ 3 ಲಕ್ಷ ರೂ ಕಳೆದುಕೊಂಡ ಆರ್​ಸಿಬಿ ಅಭಿಮಾನಿ

Zakir Naik
ವಿದೇಶ22 mins ago

Zakir Naik: ಹಿಂದುಗಳನ್ನು ಮತಾಂತರಗೊಳಿಸುವ ಜಾಕೀರ್ ನಾಯ್ಕ್‌ನನ್ನು ಭಾರತದ ಚಕ್ರವರ್ತಿಯನ್ನಾಗಿಸಬೇಕು; ವಿವಾದ ಹುಟ್ಟುಹಾಕಿದ ಮೌಲ್ವಿ

prajwal revanna case bhavani revanna hd revanna
ಕ್ರೈಂ36 mins ago

Prajwal Revanna Case: ಕಷ್ಟಕ್ಕಾಗದ ಭವಾನಿ ರೇವಣ್ಣ ಮೇಲೆ ದೇವೇಗೌಡ ಫ್ಯಾಮಿಲಿ ಕೆಂಡಾಮಂಡಲ

Murder Case in Anekla
ಬೆಂಗಳೂರು ಗ್ರಾಮಾಂತರ44 mins ago

Murder case : ಬಯಲು ಶೌಚಾಲಯಕ್ಕೆ ಹೋದ ಬಾಲಕನ ದೊಣ್ಣೆಯಿಂದ ಹೊಡೆದು ಕೊಂದರು

Kannada New Movie tanush shivannas mr natwarlal In OTT
ಸ್ಯಾಂಡಲ್ ವುಡ್45 mins ago

Kannada New Movie: ಒಟಿಟಿಗೆ ಲಗ್ಗೆ ಇಟ್ಟ ತನುಷ್ ಶಿವಣ್ಣ ಅಭಿನಯದ ಕ್ರೈಮ್-ಆ್ಯಕ್ಷನ್ ಸಿನಿಮಾ ʻMr ನಟ್ವರ್ ಲಾಲ್ʼ!

Viral News
ವೈರಲ್ ನ್ಯೂಸ್48 mins ago

Viral News: ಅಂತ್ಯಕ್ರಿಯೆ ವೇಳೆ ಬದುಕಿ ಬಂದ ಮಗಳು; ಖುಷಿಯಾಗಿದ್ದ ಪೋಷಕರಿಗೆ ಕಾದಿತ್ತು ಮತ್ತೊಂದು ಶಾಕ್‌!

Aniruddha Jatkar Chef Chidambara Release Date announce
ಸ್ಯಾಂಡಲ್ ವುಡ್58 mins ago

Aniruddha Jatkar: ಅನಿರುದ್ದ್ ನಟನೆಯ “Chef ಚಿದಂಬರ” ರಿಲೀಸ್‌ ಡೇಟ್‌ ಅನೌನ್ಸ್‌!

Viral Video
ಕ್ರೀಡೆ1 hour ago

Viral Video: ಗಲ್ಲಿ ಕ್ರಿಕೆಟ್​ನಲ್ಲಿ ಎಡಗೈ ಬ್ಯಾಟಿಂಗ್​ ನಡೆಸಿದ ಕೆ.ಎಲ್​ ರಾಹುಲ್​

Physical Abuse
ಕ್ರೈಂ2 hours ago

Physical Abuse: ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅರ್ಚಕನಿಂದ ನಿರೂಪಕಿ ಮೇಲೆ ಅತ್ಯಾಚಾರ

anjali murder suspect girish2
ಕ್ರೈಂ2 hours ago

Anjali Murder Case: ಥಳಿಸಿದವರಿಗೆ ಈತ ಅಂಜಲಿ ಹಂತಕ ಎಂದು ಗೊತ್ತೇ ಇರಲಿಲ್ಲ! ಕೊಲೆಗಾರ ಸಿಕ್ಕಿಬಿದ್ದಿದ್ದು ಹೀಗೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ5 hours ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ7 hours ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ19 hours ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ22 hours ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು1 day ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ2 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ2 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ3 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20243 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20243 days ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌