ಕರ್ನಾಟಕ
Halashri Swameeji: ಹಾಲ ಮಠದ ಚರಿತ್ರೆಯಲ್ಲಿ ಕಪ್ಪು ಚುಕ್ಕೆ; ಕರ್ನಾಟಕದ ಯೋಗಿಯಾಗುವ ಕನಸು ಹೊತ್ತಿದ್ದ ಹಾಲಶ್ರೀ!
Halashri swameeji : ದೊಡ್ಡ ಹೆಸರಿದ್ದ ಮಠಕ್ಕೆ ಕಳಂಕ ಹಚ್ಚಿದ ಅಪಕೀರ್ತಿ ಈಗ ಹಾಲಶ್ರೀಗಳ ಮೇಲಿದೆ. ತನ್ನ ಮಾತೇ ಅಂತಿಮ ಎಂಬ ಭ್ರಮೆಯಲ್ಲಿ ಬದುಕಿದ ಅವರಿಗೆ ರಾಜಕೀಯದ ವಾಸ್ತವ ಈಗ ಅರಿವಾಗಿದೆ ಅನಿಸುತ್ತದೆ.
ಬೆಂಗಳೂರು: ವಿಜಯ ನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಹಿರೇಹಡಗಲಿ ಹಾಲ ಸಂಸ್ಥಾನ ಮಠದ ಶ್ರೀ ಅಭಿನವ ಹಾಲಶ್ರೀ ಸ್ವಾಮೀಜಿಯವರ ಬಂಧನ (Halashri swameeji Arrest) ಈ ಮಠದ ಅಕಳಂಕ ಚರಿತ್ರೆಯಲ್ಲೊಂದು ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ. ಅತಿಯಾದ ರಾಜಕೀಯ ಆಸಕ್ತಿ, ಪ್ರಚಾರಪ್ರಿಯತೆಯಿಂದ ಕಿಂಗ್ ಮೇಕರ್ ತಾನೆಂದು ಬೀಗುತ್ತಿದ್ದ ಹಾಲಶ್ರೀ ಸ್ವಾಮೀಜಿ (Halashri Swameeji) ಈಗ ಕಟಕ್ನ ರೈಲ್ವೇ ನಿಲ್ದಾಣದಲ್ಲಿ ಏಕಾಂಗಿಯಾಗಿ ಕಾವಿ ಕಳಚಿಟ್ಟು ಟೀ ಶರ್ಟ್ ಹಾಕಿಕೊಂಡು ಅನಾಥನಾಗಿ ನಿಲ್ಲಬೇಕಾಗಿ ಬಂದಿದೆ ಎನ್ನುವುದು ಪ್ರಕರಣದ ಒಟ್ಟಾರೆ ವಿಶ್ಲೇಷಣೆ.
ಚೈತ್ರಾ ಕುಂದಾಪುರ (Chaitra Kundapura) ಗ್ಯಾಂಗ್ ಉದ್ಯಮಿ ಗೋವಿಂದ ಪೂಜಾರಿ (Govinda Poojari) ಅವರಿಗೆ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ (Bynduru BJP Ticket) ಕೊಡಿಸುವುದಾಗಿ ನಂಬಿಸಿ ವಂಚಿಸಿದ ಪ್ರಕರಣದಲ್ಲಿ ಹಾಲಶ್ರೀ ನಂಬರ್ ಮೂರನೇ ಆರೋಪಿ. ಅವರು ಗೋವಿಂದ ಪೂಜಾರಿ ಅವರಿಂದ ನೇರವಾಗಿ 1.5 ಕೋಟಿ ರೂ.ಯನ್ನು ಸ್ವೀಕರಿಸಿದ್ದನ್ನು ಸ್ವತಃ ಅವರೇ ಒಪ್ಪಿಕೊಂಡಿದ್ದಾರೆ. ಟಿಕೆಟ್ಗೆ ಶಿಫಾರಸು ಮಾಡಲು ಅವರು ಕೇಳಿದ ಮೊತ್ತವಿದು. ಈಗ ಚೈತ್ರಾ ಟೀಮ್ ನಡೆಸಿದ ಉಳಿದ 3.5 ಕೋಟಿ ರೂ. ಗೋಲ್ಮಾಲ್ ಒಟ್ಟಾರೆ ಭಾಗಿದಾರನಾಗಿ ಕಳಂಕ ಹೊತ್ತು ನಿಂತಿದ್ದಾರೆ. ಎಂಥಾ ಪೀಠಕ್ಕೆ ಇವರೆಂಥಾ ಪೀಠಾಧಿಪತಿ ಎಂದು ಭಕ್ತರು ಬೇಸರದಿಂದ ಕೇಳುವಂತಾಗಿದೆ.
ಇದು ಪವಾಡದ ಮಠ, ಕಾಯಕ ಮಠ
ಹಿರೇಹಡಗಲಿ ಹಾಲ ಸಂಸ್ಥಾನ ಮಠ ಎನ್ನುವುದು ವೀರಶೈವ ಮಠ (Veerashaiva Matt) ಪರಂಪರೆಯ ಅಪೂರ್ವ ಮಠ. ಇದಕ್ಕೆ ಪುತ್ರ ವರ್ಗ ಮಠ ಎಂಬ ಹೆಸರೂ ಇದೆ. ಇಲ್ಲಿನ ಪೀಠಾಧಿಪತಿಗಳು ಮದುವೆಯಾಗಬಾರದು ಎಂಬ ನಿಯಮವಿಲ್ಲ. ನಿಜವೆಂದರೆ ಮದುವೆ ಆಗಬೇಕು ಎನ್ನುವುದೇ ಇಲ್ಲಿನ ನಿಯಮ! ಯಾಕೆಂದರೆ ಮಠದ ಶ್ರೀಗಳ ಪುತ್ರರೇ ಮಠದ ಉತ್ತರಾಧಿಕಾರಿಗಳು. ಇದೇ ಕಾರಣಕ್ಕೆ ಇದನ್ನು ಸಂಸಾರಿ ಮಠವೆಂತಲೂ ಸಂಸ್ಕಾರಿಕ ಮಠವೆಂತಲೂ ಕರೆಯುತ್ತಾರೆ.
ಇದಕ್ಕೆ ಅದೆಷ್ಟೋ ಶತಮಾನಗಳ ಇತಿಹಾಸವಿದೆ. ಶತಮಾನಗಳ ಹಿಂದೆ ಇಲ್ಲಿ ನಡೆಯುತ್ತಿದ್ದ ಪವಾಡ ಸದೃಶ ಘಟನೆಗಳ ಹಿನ್ನೆಲೆಯಲ್ಲಿ ಇದನ್ನು ಪವಾಡ ಮಠ ಎಂದೂ ಕರೆಯುತಿದ್ದರು.
ವೀರಶೈವ ಪರಂಪರೆಯ ಧಾರ್ಮಿಕ ಕಾರ್ಯ, ಸಾಮೂಹಿಕ ವಿವಾಹ, ಉಳ್ಳು ಗದ್ದುಗೆ ಮಹೋತ್ಸವ. ದಾಸೋಹ ಮೂಲಕ ಈ ಸಂಸ್ಥಾನ ಮಠ ತನ್ನ ಸಾಮಾಜಿಕ ಸೇವಾ ಕಾರ್ಯಗಳನ್ನು ನಡೆಸುತ್ತಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಹಾಲ ಮಠ 100ಕ್ಕೂ ಹೆಚ್ಚು ಶಾಖಾ ಮಠಗಳನ್ನ ಹೊಂದಿದೆ ಎಂದರೆ ನಿಮಗೆ ಅಚ್ಚರಿಯಾಗಬಹುದು.
ಪೀಠಾಧಿಪತಿಗಳು ಉತ್ತಮ ಬೇಸಾಯಗಾರ
ಈಗ ಪೀಠಾಧಿಪತಿಗಳಾಗಿರುವ ಅಭಿನವ ಹಾಲಶ್ರೀ ಅವರ ತಂದೆ ಹಾಲ ವೀರಭದ್ರಜ್ಜ ಅವರು ಉತ್ತಮ ವ್ಯವಸಾಯಿಯಾಗಿದ್ದರು (Good Agriculturist). ಅವರ ಪುತ್ರ ಈಗಿನ ಅಭಿನವ ಹಾಲಶ್ರೀ (ವೀರಪ್ಪಜ್ಜ) ಅವರು ಕೂಡಾ ಇದರಲ್ಲಿ ಪಳಗಿದವರೆ. ಅಭಿನವ ಹಾಲಶ್ರೀ ತಂದೆಯ ಸಹೋದರರು ಹಾಲ ಸೋಮಜ್ಜ, ಸಿದ್ದಪ್ಪ, ಸಣ್ಣ ಹಾಲ ಸ್ವಾಮೀಜಿ ಕೂಡಾ ಕಠಿಣ ಶ್ರಮಜೀವಿಗಳೇ. ಮಠದ ಎಲ್ಲ ಶ್ರೀಗಳಿಗೆ ಸೇರಿದಂತೆ 40 ಎಕರೆ ಜಮೀನಿದೆ.
ಸರ್ವ ಧರ್ಮ ಸಮಭಾವದ ಪೀಠ
ಸರ್ವಧರ್ಮ ಸಮನ್ವಯವನ್ನು ಸಾರುವ ಶ್ರೇಷ್ಠ ಮಠ ಇದು. ಜಾತಿ, ಪಕ್ಷ ಮೀರುವಂತೆ ನಡೆದುಕೊಂಡ ಪರಂಪರೆ ಇದಕ್ಕಿದೆ. ಕಾಯಕವನ್ನೇ ನಂಬಿದವನಿಗೆ ಒಂದೇ ಜಾತಿ ಒಂದೇ ಧರ್ಮ ಎನ್ನುತ್ತಿತ್ತು ಹಾಲ ಮಠ. ಕಾಯಕ ಜೀವಿಗಳದ್ದು ಧರ್ಮ ಮೀರಿದ ಬದುಕು ಎನ್ನುವುದು ನಂಬಿಕೆ. ಮುಳ್ಳುಗದ್ದುಗೆ ಜಾತ್ರೆಯಲ್ಲಿ ಮುಸ್ಲಿಂ ಮತ್ತು ಎಲ್ಲ ಜಾತಿ ಜನಾಂಗೀಯರು ಜಾತ್ರೆಯ ಮುಂದಾಳತ್ವ ವಹಿಸುವುದು ಮಠದ ವಿಶೇಷ.
ಈ ಪರಂಪರೆಗೆ ಕೊಂಡಿಯಾಗದೆ ಕೊಳ್ಳಿ ಇಟ್ಟರೇ ಅಭಿನವ ಹಾಲಶ್ರೀ?
ವೀರಪ್ಪಜ್ಜ ಎಂಬ ಮೂಲ ನಾಮಾಂಕಿತವನ್ನು ಹೊಂದಿರುವ ಅಭಿನವ ಹಾಲಶ್ರೀಗಳು ಕೂಡಾ ಉತ್ತಮ ಬೇಸಾಯಗಾರ. ಕೃಷಿಯ ಬಗ್ಗೆ ಒಲವಿತ್ತು. ಆದರೆ, ಅದರ ಜತೆಗೆ ಮಠದ ಪರಂಪರೆಯ ಕೊಂಡಿಯನ್ನು ಸ್ವಲ್ಪ ಸ್ವಲ್ಪವೇ ಕಳಚಿಕೊಳ್ಳುತ್ತಾ, ಸೌಹಾರ್ಯ ಪರಂಪರೆ ಬಿಟ್ಟು ಹಿಂದುತ್ವದ ಅದರಲ್ಲೂ ಉಗ್ರ ಹಿಂದುತ್ವದ ಪ್ರತಿಪಾದಕರಾದರು.
ಬಹುಶ ಅವರ ರಾಜಕೀಯ ಮಹತ್ವಾಕಾಂಕ್ಷೆ ಅವರನ್ನು ಈ ನಿಟ್ಟಿನಲ್ಲಿ ಕರೆದುಕೊಂಡು ಹೋಯಿತೇ? ಗೊತ್ತಿಲ್ಲ. ಪ್ರಖರ ಹಿಂದುತ್ವವಾದಿಯಾಗಿ ಬದಲಾದ ಅವರು ಹಿಂದೂಪರ ಸಂಘಟನೆಗಳ ಮುಂಚೂಣಿ ಮುಖಂಡರ ಜೊತೆಗೆ ಗುರುತ್ತಿಸಿಕೊಳ್ಳಲು ಶುರು ಮಾಡಿದರು. ಪ್ರಖರ ಭಾಷಣ ಮೂಲಕ ರಾಜ್ಯಾದ್ಯಂತ ಫೈರ್ ಬ್ರಾಂಡ್ ಸ್ವಾಮೀಜಿ ಎಂದು ಗುರುತಿಸಿಕೊಂಡರು.
ಹಾಲ ಮಠ ಮೂಲ ತತ್ವ ಸಿದ್ಧಾಂತ ಮರೆತು ಹಿಂದುತ್ವದ ಪ್ರತಿಪಾದನೆಯಲ್ಲಿ ಕಳೆದುಹೋದ ಅಭಿನವ ಹಾಲಶ್ರೀಗಳನ್ನು ಅವರ ಚಿಕ್ಕಪ್ಪಂದಿರು ಎಚ್ಚರಿಸಿದ್ದರು. ನಮ್ದು ಜಾತ್ಯತೀತ , ಪಕ್ಷಾತೀತ ಮಠ. ಮಠ ವ್ಯಾಪ್ತಿಯ ಧಾರ್ಮಿಕ ಕಾರ್ಯ ಮಾತ್ರ ನಿಭಾಯಿಸು ಎಂದು ಬುದ್ಧಿವಾದ ಹೇಳಿದ್ದರು.
ಆದರೆ, ಹಾಲಶ್ರೀ ಸ್ವಾಮೀಜಿಗಳು ಹಿಂದುತ್ವದ ಮೂಲಕ ರಾಜಕೀಯ ಪ್ರವೇಶದ ಹಾದಿ ಹುಡುಕುತ್ತಿದ್ದರು. ಪ್ರಬಲ ರಾಜಕೀಯ ನಾಯಕ ಎಂದು ಗುರುತಿಸುವ ಹಂಬಲ ಅವರಿಗಿತ್ತು.
ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಅವರು ಧಾರ್ಮಿಕತೆ ಮತ್ತು ರಾಜಕೀಯವನ್ನು ಸರಿದೂಗಿಸಿಕೊಂಡು ಹೋಗುತ್ತೇನೆ, ಕರ್ನಾಟಕದ ಯೋಗಿಯಾಗುತ್ತೇನೆ ಎನ್ನುವುದು ಅವರ ಕನಸಾಗಿತ್ತು. ಅದಕ್ಕೆ ಸರಿಯಾಗಿ ಅವರ ಹಿಂದುತ್ವದ ಪ್ರಖರ ಭಾಷಣ, ಗೋಪ್ರೇಮದ ಚಟುವಟಿಕೆಗಳಿಂದಾಗಿ ಬಿಜೆಪಿ ಮತ್ತು ಆರೆಸ್ಸೆಸ್ ನಾಯಕರಿಗೆ ಪ್ರಿಯರಾದರು. ಅವರೆಲ್ಲ ಮಠದ ಕಡೆಗೆ ನಡೆದುಬರುವಂತಾಯಿತು.
ಉತ್ತರ ಕರ್ನಾಟಕ, ಅಖಂಡ ಬಳ್ಳಾರಿಗೆ ಬಿಜೆಪಿ ನಾಯಕರು ಭೇಟಿ ನೀಡಿದರೆ ಹಾಲ ಮಠಕ್ಕೂ ಭೇಟಿ ನೀಡುತ್ತಿದ್ದರು. ಹೀಗಾಗಿ ಮಠ ಎನ್ನುವುದು ರಾಜಕೀಯದ ಮನೆ ಎಂಬಂತಾಯಿತು. ಈ ರೀತಿಯ ರಾಜಕೀಯ ಚಟುವಟಿಕೆಗಳು ಶುರುವಾದ ಮೇಲೆ ಸ್ವಾಮೀಜಿಗೆ ಮಠದ ಮೇಲಿನ ಆಸಕ್ತಿಯೂ ಕಡಿಮೆಯಾಯಿತು. ಅವರು ಮಠದಲ್ಲೂ ಸರಿಯಾಗಿ ಉಳಿಯುತ್ತಿರಲಿಲ್ಲ ಎನ್ನಲಾಗಿದೆ.
ಎಲ್ಲರೂ ನನ್ನ ಮಾತು ಕೇಳುತ್ತಾರೆ ಎಂದು ಅಂದುಕೊಂಡಿದ್ದರು!
ಬಿಎಸ್ ಯಡಿಯೂರಪ್ಪ, ಈಶ್ವರಪ್ಪ, ಬೊಮ್ಮಾಯಿ ಮೊದಲಾದ ಟಾಪ್ ಲೀಡರ್ಗಳು ಮಠಕ್ಕೆ ಬಂದು ತನ್ನ ಜತೆ ರಾಜಕೀಯ ಮತ್ತಿತರ ವಿಚಾರಗಳನ್ನು ಮಾತನಾಡುವಾಗ ತಾನೊಬ್ಬ ರಾಜಕೀಯ ಮುತ್ಸದ್ಧಿಯಾಗುತ್ತಿದ್ದೇನೆ ಎಂಬ ಭ್ರಮೆ ಅವರಿಗೆ ಶುರುವಾಗಿತ್ತು. ಆ ಭಾಗದಲ್ಲಿ ಯಾರಿಗೆ ಟಿಕೆಟ್ ಕೊಡಬಹುದು ಎಂದು ಚರ್ಚೆ ಮಾಡಿದರೆ ನಾನೇ ಇಲ್ಲಿ ಟಿಕೆಟ್ ಫೈನಲ್ ಮಾಡುವವನು ಎಂಬಂತೆ ಅವರು ಅಂದುಕೊಂಡಿದ್ದರು.
ಹೀಗೆ ರಾಜಕೀಯ ಚರ್ಚೆ ನಡೆಯುತ್ತಿದ್ದಾಗ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹಿಂದುತ್ವ ಪ್ರಬಲವಾಗಿರುವ ಒಂದು ಕ್ಷೇತ್ರದಲ್ಲಿ ಅವರು ಕಣಕ್ಕಿಳಿಯಲು ಬಯಸಿದ್ದರು. ಆದರೆ, ಕೊನೆಯ ಹಂತದಲ್ಲಿ ಸ್ವಾಮೀಜಿ ರಾಜಕೀಯ ಪ್ರವೇಶಕ್ಕೆ ಕಾಲ ಕೂಡಿ ಬರಲಿಲ್ಲ.
ರಾಜಕೀಯ ಪ್ರಭಾವದ ಬಡಾಯಿ
ಬಿಜೆಪಿ ನಾಯಕರ ಜತೆಗೆ ಸಂಪರ್ಕದಿಂದಾಗಿ ಅವರಿಗೆ ಕೆಲವೊಂದು ಆಂತರಂಗಿಕ ವಿಚಾರಗಳು ಗೊತ್ತಾಗುತ್ತಿದ್ದವು ಅನಿಸುತ್ತದೆ. ಅವುಗಳನ್ನು ಬಳಸಿಕೊಂಡು ಕಥೆಗಳನ್ನು ಹೆಣೆಯುತ್ತಿದ್ದರು ಸ್ವಾಮೀಜಿ. ಆ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ಕೊಡೋಣ ಎಂದು ಕೇಳಿದರು. ನಾನು ಅವನ ಹೆಸರು ಶಿಫಾರಸು ಮಾಡಿದೆ, ಅಲ್ಲಿ ಹಾಗಾಯಿತು, ಇಲ್ಲಿ ಹೀಗಾಯಿತು ಎಂದು ಕತೆ ಹೇಳುತ್ತಿದ್ದರು. ಇದನ್ನೆಲ್ಲ ಕೇಳಿದವರಿಗೆ ಇವರು ನಿಜಕ್ಕೂ ಮಹಾಪ್ರಭಾವಿ ಎಂದು ಅನಿಸುತ್ತಿತ್ತು.
ಹಾಗೆ ಚುನಾವಣೆಯ ಸಂದರ್ಭದಲ್ಲಿ ಹಲವಾರು ಮಂದಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಸ್ವಾಮೀಜಿ ಪ್ರಭಾವ ಬಳಕೆ ಮಾಡಿಕೊಳ್ಳಲು ಮುಂದಾಗಿದ್ದರು.
ಗೋವಿಂದ ಪೂಜಾರಿ ಪ್ರಕರಣದಲ್ಲೂ ಆಗಿದ್ದು ಇದೇ!
ಹಿಂದು ಸಂಘಟನೆಗಳ ನಾಯಕರ ಅತಿ ಪ್ರಿಯ ಸ್ವಾಮೀಜಿ ಹಾಲಶ್ರೀ. ಚೈತ್ರಾ ಕುಂದಾಪುರಳನ್ನು ಆ ಭಾಗಕ್ಕೆ ಕರೆಸಿಕೊಳ್ಳುವುದು, ಆತಿಥ್ಯ ನೀಡುವುದು, ಭಾಷಣ ಮಾಡುವುದು ಮೊದಲಾದ ಕಾಯಕ ಇವರದಾಗಿತ್ತು. ಚಕ್ರವರ್ತಿ ಸೂಲಿಬೆಲೆ, ಪುನೀತ್ ಕೆರೆಹಳ್ಳಿಯಂಥ ಸಾಮಾಜಿಕ ಸಂಘಟಕರು, ಹೋರಾಟಗಾರರಿಗೂ ಇದು ಉತ್ತರ ಕರ್ನಾಟಕದ ಪೀಠ.
ಹಾಗೆ ಬಂದಾಗಲೆಲ್ಲ ಸ್ವಾಮೀಜಿ ಹೇಳುವ ವಿಚಾರಗಳು, ಅಲ್ಲಿ ಭೇಟಿ ನೀಡುವವರ ಕಥೆಗಳು ಇವರು ಬಿಜೆಪಿಯಲ್ಲೂ ಪ್ರಭಾವಿಗಳು ಎಂಬಂತೆ ಭಾಸಗೊಳಿಸುತ್ತಿದ್ದವು ಅನಿಸುತ್ತದೆ. ಹೀಗಾಗಿ ಗೋವಿಂದ ಪೂಜಾರಿ ಅವರು ಟಿಕೆಟ್ನ ಬಗ್ಗೆ ಮಾತನಾಡಿದಾಗ ಚೈತ್ರಾ ಕುಂದಾಪುರಗೆ ಮೊದಲು ನೆನಪಾದದ್ದು ಹಾಲಶ್ರೀ. ಅವರನ್ನು ಹಾಲ ಮಠಕ್ಕೆ ಕರೆದುಕೊಂಡು ಹೋಗಿ ಮಾತುಕತೆ ನಡೆಸಿದ್ದು ಕೂಡಾ ಅಲ್ಲೇ. ಮುಂದೆ ಹಲವು ಬಾರಿ ಭೇಟಿಯಾದಾಗ ಬಹುಶಃ ಗೋವಿಂದ ಪೂಜಾರಿಗೂ ಈ ಸ್ವಾಮಿ ಪವರ್ಫುಲ್ ಅನಿಸಿರಬಹುದು.
ಹೀಗಾಗಿಯೇ ಹೆಸರು ಶಿಫಾರಸು ಮಾಡಲು 1.5 ಕೋಟಿ ರೂ. ಕೊಡಬೇಕಾಗುತ್ತದೆ ಎಂಬ ಬೇಡಿಕೆ ಇಟ್ಟಿದ್ದು. ಹಾಲಶ್ರೀ ಅವರು ಈ ವಿಚಾರದ ಬಗ್ಗೆ ಬಿಜೆಪಿ ನಾಯಕರ ಜತೆ ಗೋವಿಂದ ಪೂಜಾರಿಯನ್ನು ಭೇಟಿ ಮಾಡಿಸಿದ್ದರ ಚಿತ್ರಗಳೂ ಓಡಾಡುತ್ತಿವೆ. ಇತ್ತ ಗೋವಿಂದ ಪೂಜಾರಿ ತನಗೆ ಸ್ವಾಮೀಜಿ ಹೇಳಿದರೆ ಟಿಕೆಟ್ ಸಿಗುತ್ತದೆ ಎಂಬ ನಂಬಿಕೆ ಇತ್ತು. ನಾನು ಹೇಳಿದರೆ ಕೊಡದಿರುವುದಿಲ್ಲ ಎಂಬ ಅತಿಯಾದ ನಂಬಿಕೆ ಹಾಲಶ್ರೀಗಳಿಗೂ ಇತ್ತು. ಆದರೆ, ಬಿಜೆಪಿ ಟಿಕೆಟ್ ಎನ್ನುವುದು ಯಾರ ಕೈಯಲ್ಲೂ ಇರುವುದಿಲ್ಲ ಎಂಬ ಸಿ.ಟಿ. ರವಿ ಮಾತೇ ನಿಜವಾಗಿ ಹೋಯಿತು. ಹೀಗಾಗಿ ಗೋವಿಂದ ಪೂಜಾರಿಗೆ ಟಿಕೆಟ್ ಸಿಗಲಿಲ್ಲ.
ಆದರೆ ರಾಜಕೀಯದಲ್ಲಿ ಕೊಟ್ಟ ಹಣ ಮರಳಿ ಬರುವುದಿಲ್ಲ ಎಂದು ಹಾಲಶ್ರೀ ತಿಳಿದಿದ್ದರು. ಇತ್ತ ಗೋವಿಂದ ಪೂಜಾರಿ ಬೆಂಬಿಡದ ಬೇತಾಳವಾದರು. ಅಷ್ಟು ಹೊತ್ತಿಗೆ ಹಣವನ್ನೆಲ್ಲ ಭೂಮಿ, ಪೆಟ್ರೋಲ್ ಪಂಪ್, ಕಾರು ಅಂತ ಖರ್ಚು ಮಾಡಿದ್ದರು. ಕೆಲವೆಡೆ ಹೂಡಿಕೆ ಮಾಡಿದ್ದರು. ಗೋವಿಂದ ಪೂಜಾರಿ ಕೇಳುವಾಗ ಎಲ್ಲ ಹಣ ಖಾಲಿಯಾಗಿತ್ತು.
ಅಷ್ಟಾದರೂ ಅವರಿವರಲ್ಲಿ ಕೇಳಿ ಐವತ್ತು ಲಕ್ಷ ರೂ. ಮರಳಿಸಿದ್ದಾರೆ ಎನ್ನಲಾಗಿದೆ. ಉಳಿದ ಹಣವನ್ನೂ ಕೊಡುತ್ತೇನೆ ಎನ್ನುವ ಭರವಸೆ ನೀಡಿದ್ದರು ಸ್ವಾಮೀಜಿ. ಆದರೆ, ನಂಬುವ ಸ್ಥಿತಿಯಲ್ಲಿ ಗೋವಿಂದ ಪೂಜಾರಿ ಇರಲಿಲ್ಲ. ಅಚ್ಚರಿ ಎಂದರೆ ಆಗ ಯಾವ ದೊಡ್ಡ ದೊಡ್ಡ ನಾಯಕರೂ ಸ್ವಾಮೀಜಿಯ ಬೆಂಬಲಕ್ಕೆ ಬರಲಿಲ್ಲ.
ಇದನ್ನೂ ಓದಿ: Chaitra Kundapura : ಚೈತ್ರಾ ಕುಂದಾಪುರ; ಯಾರಿವಳು ಫೈರ್ಬ್ರಾಂಡ್ ಹುಡುಗಿ?, ಆಕೆ ಟಿವಿ ನಿರೂಪಕಿ, ಉಪನ್ಯಾಸಕಿ ಆಗಿದ್ದಳು!
ಅಂತಿಮವಾಗಿ ಒಂಟಿಯಾಗಿ ಮಠ ತೊರೆದು ಹೋಗುವ ಸನ್ನಿವೇಶ, ದೂರದ ಕಟಕ್ನ ರೈಲು ನಿಲ್ದಾಣದಲ್ಲಿ ಕಾವಿ ಕಳಚಿ ಸಾಮಾನ್ಯ ವ್ಯಕ್ತಿಯಾಗುವ ಸನ್ನಿವೇಶ ನಿರ್ಮಾಣವಾಗಿದೆ.
ಅವರು ಮತ್ತೆ ಬೆಂಗಳೂರಿಗೆ ಬರುತ್ತಾರೆ, ಪ್ರಕರಣದ ತನಿಖೆ ಎದುರಿಸುತ್ತಾರೆ. ಮಠಕ್ಕೆ ಮರಳುತ್ತಾರಾ? ಕಳಚಿದ ಕಾವಿಯನ್ನು ಮತ್ತೆ ತೊಡುತ್ತಾರಾ? ಕಾಲವೇ ಉತ್ತರ ಹೇಳಬೇಕು.
ಕರ್ನಾಟಕ
CM Siddaramaiah: CWRC ಆದೇಶಕ್ಕೆ ಆಕ್ಷೇಪಣೆ ಸಲ್ಲಿಸಲು ನಿರ್ಧಾರ ಎಂದ ಸಿದ್ದರಾಮಯ್ಯ
CM Siddaramaiah: ಮತ್ತೆ 18 ದಿನ 3000 ಕ್ಯುಸೆಕ್ ನೀರು ಬಿಡಬೇಕು ಎಂಬ ಆದೇಶವನ್ನು ಪ್ರಶ್ನೆ ಮಾಡಲಾಗುವುದು ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ.
ಚಾಮರಾಜನಗರ (ಹನೂರು): ಕಾವೇರಿ ನೀರು ನಿಯಂತ್ರಣ ಸಮಿತಿಯು (Cauvery water regulation Committee) ತಮಿಳುನಾಡಿಗೆ ಪ್ರತಿದಿನ 3000 ಕ್ಯೂಸೆಕ್ ನೀರನ್ನು (3000 Cusec water) ಹರಿಸಲು ಆದೇಶಿಸಿದೆ. ಈ ಬಗ್ಗೆ ಕಾನೂನು ತಂಡದೊಂದಿಗೆ ಚರ್ಚಿಸಿದ್ದು ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಕಾನೂನು ತಂಡ ಸಲಹೆ ನೀಡಿದೆ. ನೀರು ಬಿಡಲು ನಮ್ಮ ಬಳಿ ನೀರಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು. ಅವರು ಶ್ರೀ ಮಲೈ ಮಹದೇಶ್ವರ ಬೆಟ್ಟದ (Male mahadeshwara betta) ಬಳಿ ಮಾಧ್ಯಮದವರಿಗೆ ಬುಧವಾರ ಪ್ರತಿಕ್ರಿಯೆ ನೀಡಿದರು.
ಕಾವೇರಿ ನೀರು ನಿಯಂತ್ರಣ ಸಮಿತಿಯು ಮಂಗಳವಾರ ನೀಡಿದ ಆದೇಶದಲ್ಲಿ ಸೆ. 28ರಿಂದ ಅಕ್ಟೋಬರ್ 15ರವರೆಗೆ ಪ್ರತಿದಿನವೂ 3000 ಕ್ಯೂಸೆಕ್ ನೀರು ಬಿಡಲು ಆದೇಶ ನೀಡಿತ್ತು. ಇದನ್ನು ಪ್ರಾಧಿಕಾರದ ಮುಂದೆ ಪ್ರಶ್ನಿಸುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ಸುಪ್ರೀಂಕೋರ್ಟ್ನಲ್ಲಿ ಪ್ರಶ್ನೆ ಮಾಡಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿವೆ.
ಸಿಎಂ ಮತ್ತು ಡಿಸಿಎಂ ಇಬ್ಬರೂ ನಮ್ಮಲ್ಲಿ ನೀರು ಇಲ್ಲ ಎಂದು ಹೇಳುತ್ತಲೇ ಪ್ರಾಧಿಕಾರ ಹೇಳಿದಷ್ಟು ನೀರು ಬಿಡುಗಡೆ ಮಾಡಿದ್ದೇ ಸಮಿತಿಗೆ ಸರಾಗ ಆದೇಶ ನೀಡಲು ಕಾರಣವಾಗಿದೆ ಎಂದು ಆರೋಪಿಸಲಾಗಿದೆ. ಇದೀಗ ಸೆ. 29ರಂದು ಇದರ ವಿರುದ್ಧ ರಾಜ್ಯವ್ಯಾಪಿ ಬಂದ್ಗೆ ಕರೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಮಳೆಗಾಗಿ ಮಹದೇಶ್ವರನಲ್ಲಿ ಪ್ರಾರ್ಥನೆ
ಮಳೆ ಕೈಕೊಟ್ಟು 195 ತಾಲ್ಲೂಕು ಗಳನ್ನು ಬರಪೀಡಿತ ಎಂದು ಘೋಷಿಸಿದ್ದು, ಮಹದೇಶ್ವರನಲ್ಲಿ ಮಳೆಗಾಗಿ, ರಾಜ್ಯದ ಜನರಿಗೆ, ರೈತರಿಗೆ ಸೌಖ್ಯವಾಗಲಿ ಎಂದು ಪ್ರಾರ್ಥಿಸಿರುವುದಾಗಿ ಸಿದ್ದರಾಮಯ್ಯ ತಿಳಿಸಿದರು.
ಮೂಢನಂಬಿಕೆ, ಮೌಢ್ಯ, ಕಂದಾಚಾರದಲ್ಲಿ ನಂಬಿಕೆ ಇಲ್ಲ
ಮೂಢನಂಬಿಕೆ, ಮೌಢ್ಯ, ಕಂದಾಚಾರದಲ್ಲಿ ನಂಬಿಕೆ ಇಲ್ಲ. ಅದಕ್ಕಾಗಿಯೇ ಹಿಂದೆ ಮುಖ್ಯಮಂತ್ರಿ ಯಾದ ಕೂಡಲೇ ಚಾಮರಾಜನಗರಕ್ಕೆ ಭೇಟಿ ನೀಡಿದೆ. ಸುಮಾರು 12 ಬಾರಿ ಭೇಟಿ ನೀಡಿದ್ದು, 5 ವರ್ಷ ಗಟ್ಟಿಯಾಗಿ ಇದ್ದೆ. ಚಾಮರಾಜನಗರ ಕ್ಕೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೌಢ್ಯ ಈಗ ಹೋಗಿದೆ ಎಂದರು.
ಬಂದ್ನಿಂದ ಯಾರಿಗೂ ತೊಂದರೆಯಾಗಬಾರದು
ಸೆಪ್ಟೆಂಬರ್ 29 ರಂದು ಕರ್ನಾಟಕ ಬಂದ್ ಗೆ ಕರೆನೀಡಿರುವ ಬಗ್ಗೆ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಗೆ ಅವಕಾಶವಿದೆ. ಆದರೆ ಇತರರಿಗೆ ತೊಂದರೆಯಾಗಬಾರದು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ. ನಾವು ಈ ಆದೇಶ ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸುತ್ತೇವೆ ಎಂದರು.
ಇದನ್ನೂ ಓದಿ: CM Siddaramaiah: ಕೃಷಿಗೆ ಸಾಲ ಮಾಡಿ ಮದುವೆ ಛಮಾಡುವುದನ್ನು ನಿಲ್ಲಿಸಿ: ಸಿಎಂ ಸಿದ್ದರಾಮಯ್ಯ ಮನವಿ
ಕರ್ನಾಟಕ
BJP JDS alliance : ವಿಜಯದಶಮಿ ನಂತರ ಜೆಡಿಎಸ್ ಸೀಟು ಹಂಚಿಕೆ ಅಂತಿಮ ಮಾತುಕತೆ!
BJP JDS alliance : ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜತೆಗೆ ಸೀಟು ಹಂಚಿಕೆ ಯಾವಾಗ ಎಂಬ ಬಗ್ಗೆ ಎಚ್.ಡಿ. ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ. ವಿಜಯದಶಮಿ ನಂತರ ಈ ಬಗ್ಗೆ ಬಿಜೆಪಿ ವರಿಷ್ಠರೊಂದಿಗೆ ಚರ್ಚೆ ನಡೆಸುವುದಾಗಿ ಹೇಳಿಕೆ ನೀಡಿದ್ದಾರೆ.
ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆ (Lok Sabha Election 2024) ಸಂಬಂಧ ಬಿಜೆಪಿ ಜತೆ ಕೈಜೋಡಿಸಿರುವ ಜೆಡಿಎಸ್ ರಾಜ್ಯದಲ್ಲಿ ಹಲವಾರು ರಾಜಕೀಯ ತಂತ್ರಗಳನ್ನು (Political Strategy) ಹೆಣೆಯುತ್ತಿದೆ. ಈ ಸಂಬಂಧ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ (Former Prime Minister and JDS supremo HD DeveGowda) ಅವರು ಬುಧವಾರ (ಸೆಪ್ಟೆಂಬರ್ 27) ಸುದ್ದಿಗೋಷ್ಠಿ ನಡೆಸಿ ತಾವು ಗೃಹ ಸಚಿವ ಅಮಿತ್ ಶಾ (Home Minister Amit Shah) ಅವರ ಜತೆ ಮೈತ್ರಿ (BJP JDS alliance) ಕುರಿತಾಗಿ ಮೊದಲು ಚರ್ಚೆ ನಡೆಸಿದ್ದಾಗಿ ಹೇಳಿದ್ದಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಬಳಿ ಈ ಬಗ್ಗೆ ಮಾತನಾಡಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ಸೀಟು ಹಂಚಿಕೆ ಬಗ್ಗೆ ಪ್ರಶ್ನೆ ಕೇಳಿದಾಗ ವಿಜಯದಶಮಿ ಹಬ್ಬದ (Vijayadashami Festival) ಬಳಿಕ ಬಿಜೆಪಿಯೊಂದಿಗೆ ಈ ಬಗ್ಗೆ ಮಾತುಕತೆ ನಡೆಸಲಾಗುವುದು ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಸ್ಪಷ್ಟಪಡಿಸಿದ್ದಾರೆ. ಇದರ ಜತೆಗೆ ಆ ಸನ್ನಿವೇಶ ಬಂದಾಗ ಚರ್ಚೆ ಮಾಡುತ್ತೇವೆ ಎಂದು ದೇವೇಗೌಡರು ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ ಅವರು, ಮೈತ್ರಿ ಸೀಟು ಹಂಚಿಕೆ ಸಂಬಂಧ ವಿಜಯದಶಮಿ ಮುಗಿದ ಬಳಿಕ ಬಿಜೆಪಿ ವರಿಷ್ಠರ ಜತೆ ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ. ಅದಕ್ಕೆ ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ ಸಹ ಧನಿಗೂಡಿಸಿದ್ದು, ಆ ಸನ್ನಿವೇಶ ಬರಲಿ, ಆಗ ಚರ್ಚೆ ಮಾಡುತ್ತೇವೆ ಎಂದು ಸೂಚ್ಯವಾಗಿ ಉತ್ತರಿಸಿದ್ದಾರೆ.
ಮೈತ್ರಿಕೂಟ ಸೇರಿದ್ದಷ್ಟೇ
ಈಚೆಗೆ ನವದೆಹಲಿಗೆ ಎಚ್.ಡಿ. ಕುಮಾರಸ್ವಾಮಿ ಅವರು ಭೇಟಿ ನೀಡಿದ್ದಾಗ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಜತೆ ಪ್ರಾಥಮಿಕ ಹಂತದ ಮಾತುಕತೆಯನ್ನು ನಡೆಸಿದ್ದರು. ಇದರ ಭಾಗವಾಗಿ ಅಂದೇ ಬಿಜೆಪಿ – ಜೆಡಿಎಸ್ ಮೈತ್ರಿ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಲಾಗಿತ್ತು. ಎನ್ಡಿಎ ಮೈತ್ರಿಕೂಟವನ್ನು ಜೆಡಿಎಸ್ ಸೇರಿದೆ ಎಂದು ಅಧಿಕೃತವಾಗಿ ಪ್ರಕಟಿಸಲಾಗಿತ್ತು. ಆದರೆ, ಇದರ ನಂತರ ಸೀಟು ಹಂಚಿಕೆ ಸಂಬಂಧ ಯಾವುದೇ ರೀತಿಯ ಅಂತಿಮ ಹಂತದ ಚರ್ಚೆ ಆಗಿಲ್ಲ ಎಂದು ಹೇಳಲಾಗಿದೆ.
ಐದು ಕ್ಷೇತ್ರ ಕೇಳಿರುವ ಜೆಡಿಎಸ್
ಮೂಲಗಳ ಪ್ರಕಾರ ಜೆಡಿಎಸ್ ಒಟ್ಟು ಐದು ಲೋಕಸಭಾ ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ರಾಯಚೂರು ಸೇರಿದಂತೆ ಇತ್ತ ಮಂಡ್ಯ, ಹಾಸನ, ಕೋಲಾರ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಕೇಳಿತ್ತು. ಆದರೆ, ಈ ಸಂಬಂಧ ಬಿಜೆಪಿ ನಾಯಕರಲ್ಲಿ ಒಮ್ಮತ ಮೂಡಿಲ್ಲ.
ಇದನ್ನೂ ಓದಿ: BJP JDS alliance : ಜೆಡಿಎಸ್ಗೆ ಕಾಂಗ್ರೆಸ್ ಮಾಡಿದ ಮೋಸದ ಬಗ್ಗೆ 100 ಕಾರಣ ಹೇಳುವೆ: ಗುಡುಗಿದ ದೇವೇಗೌಡ
ಬಿಜೆಪಿ ನಾಯಕರ ವಿರೋಧ
ಜೆಡಿಎಸ್ಗೆ ಯಾವುದೇ ಕಾರಣಕ್ಕೂ ಐದು ಸೀಟನ್ನು ಬಿಟ್ಟುಕೊಡುವುದು ಬೇಡ. ಮೂರು ಕ್ಷೇತ್ರವನ್ನು ಬಿಟ್ಟುಕೊಟ್ಟರೆ ಸಾಕು. ಉಳಿದ ಕಡೆ ಅವರಿಗೆ ಕೊಟ್ಟರೆ ಸೋಲು ನಿಶ್ಚಿತ. ಇದು ಬಿಜೆಪಿಗೆ ನಷ್ಟವನ್ನುಂಟು ಮಾಡುತ್ತದೆ ಎಂದು ರಾಜ್ಯದ ಕೆಲವು ನಾಯಕರು ಈಗಾಗಲೇ ವರದಿ ಒಪ್ಪಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ವಿಜಯ ದಶಮಿ ನಂತರ ನಡೆಯುವ ಮಾತುಕತೆ ಕುತೂಹಲ ಮೂಡಿಸಿದೆ.
ಕರ್ನಾಟಕ
Murder Case : ಕುಡಿದ ಮತ್ತಿನಲ್ಲಿ ಮೂತ್ರ ಸಿಡಿಸಿದ; ಪ್ರಶ್ನೆ ಮಾಡಿದ ವ್ಯಾಪಾರಿಯ ಮನೆಗೆ ನುಗ್ಗಿ ಕೊಂದ ಕಿರಾತಕ!
Murder Case: ತನ್ನ ಮೇಲೆ ಮೂತ್ರ ಮಾಡಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ಧೂರ್ತನೊಬ್ಬ ಕೊಲೆಯನ್ನೇ ಮಾಡಿದ್ದಾನೆ. ಅದೂ ಆತನ ಮನೆಗೆ ನುಗ್ಗಿ. ಒಬ್ಬ ಸಜ್ಜನನ ಕೊಲೆ ಗೌನಿಪಲ್ಲಿಯ ಜನರ ಮನ ಕಲಕಿದೆ.
ಕೋಲಾರ: ಕುಡಿತದ ಮತ್ತು ಹಾಗೂ ದುರಂಹಕಾರ ಸೇರಿಕೊಂಡರೆ ಒಬ್ಬ ಮನುಷ್ಯ ಅದೆಷ್ಟು ಕ್ರೂರಿಯಾಗಬಲ್ಲ ಎನ್ನುವುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಇದೆ. ಕುಡಿತದ ಮತ್ತಿನಲ್ಲಿದ್ದ (Alcoholic) ಆತ ಮೂತ್ರ (Urination) ಮಾಡುವಾಗ ಇನ್ನೊಬ್ಬನ ಮೇಲೆ ಸಿಡಿಸಿದ. ಅದನ್ನು ಪ್ರಶ್ನೆ ಮಾಡಿದ್ದಕ್ಕೆ ಆತನ ಮೇಲೆ ಹಲ್ಲೆ ಮಾಡಿದ್ದು ಮಾತ್ರವಲ್ಲ, ಮನೆಗೇ ನುಗ್ಗಿ ಕೊಲೆ (Murder Case) ಮಾಡಿದ್ದಾನೆ.
ಇಂಥಹುದೊಂದು ಭಯಾನಕ ಘಟನೆ ನಡೆದಿರುವುದು ಕೋಲಾರ ಜಿಲ್ಲೆಯ (Kolara News) ಶ್ರೀನಿವಾಸಪುರ ತಾಲ್ಲೂಕಿನ ಗೌನಿಪಲ್ಲಿ ಗ್ರಾಮದಲ್ಲಿ. ಮಂಗಳವಾರ ಸಂಜೆ ಇಬ್ಬರು ವ್ಯಕ್ತಿಗಳ ನಡುವಿನ ಒಂದು ಕ್ಷುಲ್ಲಕ ಜಗಳ ಸಾವಿನಲ್ಲಿ ಅಂತ್ಯಗೊಂಡಿದೆ.
ಗೌನಿಪಲ್ಲಿ ತರಕಾರಿ ವ್ಯಾಪಾರ ಮಾಡುತ್ತಾ ಎಲ್ಲರ ಜತೆ ಒಳ್ಳೆಯತನದಿಂದ ಬೆರೆಯುತ್ತಾ ಜನಮನ್ನಣೆ ಪಡೆದಿದ್ದ ಸಂಸಾವಂದಿಗ ವೆಂಕಟರಾಯಪ್ಪ ಅವರೇ ಪ್ರಾಣ ಕಳೆದುಕೊಂಡ ದುರ್ದೈವಿ. ಅವರಿಗೆ ವಯಸ್ಸು 55. ಅವರ ಮೇಲೆ ಮೂತ್ರ ಸಿಡಿಸಿದ್ದಲ್ಲದೆ ಪ್ರಶ್ನೆ ಮಾಡಿದ್ದಕ್ಕೆ ಕೊಂದೇ ಹಾಕಿದವನ ಹೆಸರು ಶಂಕರಪ್ಪ. ಸುಮಾರು 45 ವರ್ಷದ ಇವನು ಸದಾ ಕುಡಿದ ಮತ್ತಿನಲ್ಲೇ ಇರುತ್ತಾನೆ, ಸದಾ ಜಗಳ, ಹೊಡೆದಾಟಗಳೇ ಇವನ ಐಡೆಂಟಿಟಿ ಎನ್ನುತ್ತಾರೆ ಗೌನಿಪಲ್ಲಿ ಜನ.
ಮಂಗಳವಾರ ಸಂಜೆ ಏನಾಯಿತು?
ಮಂಗಳವಾರ ಸಂಜೆಯ ಹೊತ್ತಿಗೆ ವೆಂಕಟರಾಯಪ್ಪ ಅವರು ತಮ್ಮ ವ್ಯಾಪಾರ ನಡುವೆ ಮೂತ್ರ ಬರುತ್ತದೆ ಎಂದು ಸಂತೆ ಮೈದಾನದ ಕೊನೆಗೆ ಹೋದರು. ಆಗ ಅವರ ಹಿಂದೆಯೇ ಶಂಕರಪ್ಪ ಕೂಡಾ ಬಂದಿದ್ದ. ಅವರಿಬ್ಬರೂ ಹತ್ತಿರ ಹತ್ತಿರ ನಿಂತೇ ಮೂತ್ರ ಮಾಡಿದ್ದರು. ಈ ವೇಳೆ ಕುಡಿತದ ಮತ್ತಿನಲ್ಲಿದ್ದ ಮನೋಹರ ಬೇಕು ಎಂತಲೇ ವೆಂಕಟರಾಯಪ್ಪ ಅವರ ಮೇಲೆಯೇ ಮೂತ್ರ ಸಿಡಿಸಿದ್ದ.
ವೆಂಕಟರಾಯಪ್ಪ ಅವರು ಇದನ್ನು ಪ್ರಶ್ನೆ ಮಾಡಿದ್ದಾರೆ. ನೀನು ಮಾಡಿದ್ದು ಸರಿಯಾ ಎಂದು ಕೇಳಿದ್ದಾರೆ. ಆದರೆ, ಶಂಕರಪ್ಪ ತನ್ನ ತಪ್ಪನ್ನು ಒಪ್ಪಿಕೊಳ್ಳುವ ಬದಲು ಅವರ ಮೇಲೆಯೇ ಎಗರಾಡಿದ್ದಾನೆ. ನಾನು, ನನ್ನ ಮೂತ್ರ ಎಲ್ಲಿ ಬೇಕಾದರೂ ಮಾಡುತ್ತೇನೆ, ನೀನು ಯಾರು ಕೇಳುವುದಕ್ಕೆ ಎಂದೆಲ್ಲ ಗಲಾಟೆ ಮಾಡಿದ್ದಾನೆ.
ಇವನ ಬಳಿ ಮಾತನಾಡುವುದು ಬೇಡ ಎಂದು ವೆಂಕಟರಾಯಪ್ಪ ತನ್ನ ಅಂಗಡಿ ಕಡೆಗೆ ಬಂದಿದ್ದಾರೆ. ಆದರೆ, ಮನೋಹರ ಅವರನ್ನು ಬೆನ್ನಟ್ಟಿಕೊಂಡೇ ಬಂದು ನನ್ನನ್ನು ಪ್ರಶ್ನೆ ಮಾಡುತ್ತೀಯಾ ಎಂದು ಕೇಳಿ ಹಲ್ಲೆ ಮಾಡಿದ್ದಾನೆ. ಆಗ ಗೌನಿಪಲ್ಲಿ ಸಂತೆ ಮೈದಾನದಲ್ಲಿದ್ದವರು ಮತ್ತು ವ್ಯಾಪಾರಿಗಳು ಸೇರಿ ಜಗಳ ಬಿಡಿಸಿದ್ದಾರೆ.
ವೆಂಕಟರಾಯಪ್ಪ ಅವರ ಮೇಲೆ ಹಲ್ಲೆ ಮಾಡಿದ್ದರಿಂದ ಸಿಟ್ಟುಕೊಂಡ ವ್ಯಾಪಾರಿಗಳೆಲ್ಲ ಸೇರಿ ಈ ಗುಂಡ್ರುಗೋವಿ ಶಂಕರಪ್ಪನನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಬುದ್ಧಿ ಮಾತೂ ಹೇಳಿದ್ದಾರೆ. ಅಲ್ಲಿಗೆ ಅದು ಮುಕ್ತಾಯಗೊಂಡಿದೆ.
ಮನೆಗೇ ಬಂದು ಬಾಗಿಲು ಬಡಿದ ಕಿರಾತಕ
ರಾತ್ರಿಯಾಗುತ್ತಿದ್ದಂತೆಯೇ ವೆಂಕಟರಾಯಪ್ಪ ಅವರು ವ್ಯಾಪಾರ ಮುಗಿಸಿ ಮನೆಗೆ ತೆರಳಿದ್ದಾರೆ. ಸ್ವಲ್ಪ ಹೊತ್ತಿಗೆ ಮನೆಯ ಬಾಗಿಲು ಬಡಿಯಿತು. ಯಾರೆಂದು ಬಾಗಿಲು ತೆರೆದು ನೋಡಿದರೆ ಶಂಕರಪ್ಪ ನಿಂತಿದ್ದ. ಏನು ಎಂದು ಕೇಳಲೂ ಅವಕಾಶವಿಲ್ಲದಂತೆ ಶಂಕರಪ್ಪ ಮನೆಯೊಳಗೆ ನುಗ್ಗಿದ್ದ.
ಮನೆಯಲ್ಲಿ ವೆಂಕಟರಾಯಪ್ಪ ಅವರ ಪುತ್ರ ಮನೋಹರ, ಪತ್ನಿ ಮತ್ತು ಇತರರು ಇದ್ದರು. ಅವರೆಲ್ಲ ಏನಾಗುತ್ತಿದೆ ಎಂದು ನೋಡನೋಡುತ್ತಿದ್ದಂತೆಯೇ ಶಂಕರಪ್ಪ ವೆಂಕಟರಾಯಪ್ಪರನ್ನು ನೆಲಕ್ಕೆ ಕೆಡವಿ ಹಾಕಿ ಎದೆಗೆ ಗುದ್ದತೊಡಗಿದ್ದಾನೆ. ಜತೆಗೆ ಮೂತ್ರ ಮಾಡುವ ವಿಷಯದಲ್ಲಿ ಜಗಳ ಮಾಡುತ್ತೀಯಾ ಎಂದು ಮೂತ್ರ ಮಾಡುವ ಜಾಗಕ್ಕೂ ಹೊಡೆದಿದ್ದಾನೆ. 55 ವರ್ಷದ ಸಜ್ಜನ ಹಿರಿಯ ಜೀವ ವೆಂಕಟರಾಯಪ್ಪ ಅವರು ಶಂಕರಪ್ಪನ ಹೊಡೆತಗಳಿಗೆ ತತ್ತರಿಸಿ ಹೋಗಿದ್ದಾರೆ. ಸ್ವಲ್ಪ ಹೊತ್ತು ಹಾಗೆಯೇ ಹೊಡೆದ ಶಂಕರಪ್ಪ ಮನೆಯವರನ್ನು ಹೆದರಿಸಿ ಹೊರಗೆ ಹೋಗಿದ್ದಾನೆ.
ಎದೆಗೆ, ಮರ್ಮಾಂಗಕ್ಕೆ ಗುದ್ದಿದ್ದ ಧೂರ್ತ
ಅದಾದ ಕೂಡಲೇ ಮನೆಯವರು ವೆಂಕಟರಾಯಪ್ಪ ಅವರನ್ನು ಆಸ್ಪತ್ರೆಗೆ ದಾಖಲಿಸಲು ಮುಂದಾದರು. ಆದರೆ, ಎದೆಗೆ, ಮರ್ಮಾಂಗಕ್ಕೆ ಬಿದ್ದ ಹೊಡೆತಗಳಿಂದ ತತ್ತರಿಸಿ ಜರ್ಜರಿತರಾಗಿದ್ದ ವೆಂಕಟರಾಯಪ್ಪ ಅವರು ಶ್ರೀನಿವಾಸಪುರ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದರು.
ಇದನ್ನೂ ಓದಿ: Instagram fight: ಇನ್ಸ್ಟಾಗ್ರಾಂನಲ್ಲಿ ಬೈದ ಎಂದು 16ರ ಬಾಲಕನನ್ನು ತಲ್ವಾರ್ನಿಂದ ಕಡಿದು ಕೊಂದ ಸ್ನೇಹಿತರು!
ಗೌನಿಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ. ಗೌನಿಪಲ್ಲಿಯ ವ್ಯಾಪಾರಸ್ಥರು, ನಾಗರಿಕರು ವೆಂಕಟರಾಯಪ್ಪ ಅವರ ಸಾವಿಗೆ ಕಂಬನಿ ಮಿಡಿದಿದ್ದಾರೆ.
ಅಂದ ಹಾಗೆ, ವೆಂಕಟರಾಯಪ್ಪ ಅವರಿಗೂ ಶಂಕರಪ್ಪ ಅವರಿಗೂ ಮುಖ ಪರಿಚಯ ಇಲ್ಲವೇ ಇಲ್ಲ. ಅವರಿಬ್ಬರು ಹಿಂದೆಂದು ಮುಖಾಮುಖಿ ಆಗಿರಲೇ ಇಲ್ಲ. ಯಾರೆಂದು ಗೊತ್ತೇ ಇಲ್ಲ. ಕೇವಲ ಒಂದು ಮೂತ್ರದ ಸಿಡಿತದಿಂದ ಒಂದು ಮನೆಯ ಬೆಳಕು ಆರಿತು. ಹೀಗೆ ಕೊಲೆ ಮಾಡಿದ ಧೂರ್ತನಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಜನರು ಒತ್ತಾಯಿಸಿದ್ದಾರೆ.
ಕರ್ನಾಟಕ
BJP JDS alliance : ಜೆಡಿಎಸ್ಗೆ ಕಾಂಗ್ರೆಸ್ ಮಾಡಿದ ಮೋಸದ ಬಗ್ಗೆ 100 ಕಾರಣ ಹೇಳುವೆ: ಗುಡುಗಿದ ದೇವೇಗೌಡ
BJP JDS alliance : ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರು ಬಿಜೆಪಿ ಜತೆಗಿನ ಮೈತ್ರಿ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ, ಕಾಂಗ್ರೆಸ್ನಿಂದ ಪಕ್ಷಕ್ಕಾದ ಅನ್ಯಾಯದ ಬಗ್ಗೆ ಹೇಳಿದ್ದಾರೆ. ಈ ಹಿಂದೆ ಕುಮಾರಸ್ವಾಮಿ ಸರ್ಕಾರವನ್ನು ಬೀಳಿಸಿದ್ದು ಯಾರು ಎಂಬ ಬಗ್ಗೆಯೂ ಚರ್ಚೆ ಮಾಡೋಣ ಎಂದು ಸವಾಲು ಹಾಕಿದ್ದಾರೆ.
ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಬಿಜೆಪಿ – ಜೆಡಿಎಸ್ ಮೈತ್ರಿ (BJP JDS alliance) ಬಗ್ಗೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ (Former Prime Minister and JDS supremo HD DeveGowda) ಅಧಿಕೃತವಾಗಿ ಮಾತನಾಡಿದ್ದಾರೆ. ಮೈತ್ರಿ ಹಿಂದಿನ ಉದ್ದೇಶ ಏನು ಎಂಬುದನ್ನು ಹೇಳಿದ್ದಾರೆ. ಅಲ್ಲದೆ, ಮುಸ್ಲಿಂ ಮುಖಂಡರನ್ನು (Muslim leaders) ಜೆಡಿಎಸ್ ತೊರೆಯುತ್ತಿರುವ ಬಗ್ಗೆ ಪ್ರಸ್ತಾಪ ಮಾಡುತ್ತಾ, ಮುಸ್ಲಿಂ ನಾಯಕರನ್ನು ಕಾಂಗ್ರೆಸ್ ಸೋಲಿಸಿಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ. ಬಿಜೆಪಿ ಪಕ್ಷದ ಬಿ ಟಿಂ ಜೆಡಿಎಸ್ ಎಂದು ಹೇಳುವವರು ಮೊದಲು ತಾವೇನು ಮಾಡಿದ್ದಾರೆಂಬುದನ್ನು ನೋಡಬೇಕು. ಈ ಹಿಂದೆ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ಸರ್ಕಾರವನ್ನು ಕೆಡವಿದ್ದು ಯಾರು ಎಂಬುದನ್ನು ಚರ್ಚೆ ಮಾಡೋಣ ಎಂದು ಪಂಥಾಹ್ವಾನ ನೀಡಿದ್ದಾರೆ. ಜತೆಗೆ ಕಾಂಗ್ರೆಸ್ ಮಾಡಿರುವ ಮೋಸದ ಬಗ್ಗೆ 100 ಕಾರಣಗಳನ್ನು ಹೇಳುವೆ ಎಂದು ದೇವೇಗೌಡರು ಗುಡುಗಿದ್ದಾರೆ. ಇದೆಕ್ಕೆಲ್ಲ ವಿ ಡೋಂಟ್ ಕೇರ್ ಎಂದು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡ, ರಾಜ್ಯಸಭೆಯಲ್ಲಿ ಫಾರೂಕ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದೆ, ಯಾರು ಸೋತರು? 8 ಜನ ನಾಯಕರನ್ನು ಕರೆದುಕೊಂಡು ಹೋದಿರಿ. ಅಲ್ಪಸಂಖ್ಯಾತರನ್ನು ಆ ದಿನ ಸೋಲಿಸಿದ್ದು ಯಾರು? ಜೆಡಿಎಸ್ಗೆ ಕಾಂಗ್ರೆಸ್ ಮೋಸ ಮಾಡಿರುವ 100 ಉದಾಹರಣೆಗಳನ್ನು ಕೊಡುತ್ತೇನೆ. ಕಾಂಗ್ರೆಸ್ ಹಲವಾರು ಬಾರಿ ಬ್ಲಂಡರ್ ಮಾಡಿದೆ. ನೀವು ಜಾತ್ಯತೀತ ಬಗ್ಗೆ ಮಾತನಾಡುತ್ತಿರಾ? ನಾವು ಯಾವುದಕ್ಕೂ ಕೇರ್ ಮಾಡಲ್ಲ ಎಂದು ಹೇಳಿದರು.
ಅಮಿತ್ ಶಾ ಜತೆ ಮೈತ್ರಿ ಚರ್ಚೆ ಮಾಡಿದ್ದೇನೆ
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಭಾರತೀಯ ಜನತಾ ಪಾರ್ಟಿಯ ಜತೆ ಹೋಗಬೇಕಾದರೆ, ನಾನು ಮೊದಲು ಗೃಹ ಸಚಿವ ಅಮಿತ್ ಶಾ (Home Minister Amit Shah) ಅವರ ಜತೆ ಚರ್ಚೆ ಮಾಡಿದ್ದೆ. ನಾವು ಕಳೆದ 60 ವರ್ಷದಿಂದ ಯಾವುದೇ ಸಮಯಕ್ಕೆ ಅನ್ಯಾಯವಾಗಲು ಬಿಟ್ಟಿಲ್ಲ. ಕರ್ನಾಟಕದಲ್ಲಿ ಕುಮಾರಸ್ವಾಮಿಯವರ ಸರ್ಕಾರದಲ್ಲಿದ್ದ 17 ಜನರು ಶಾಸಕರನ್ನು ಮುಂಬೈಗೆ ಕರೆಸಿಕೊಂಡವರು ಯಾರು? ಇದೆಲ್ಲವೂ ಚರ್ಚೆಯಾಗಲಿ, ಚರ್ಚೆ ಮಾಡೋಣ. ಕರ್ನಾಟಕದಲ್ಲಿ ಕುಮಾರಸ್ವಾಮಿ ಅವನ ಸರ್ಕಾರನ್ನ ತೆಗೆದಿದ್ದು ಯಾರು? ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರೋದಕ್ಕೆ ಅವಕಾಶ ಮಾಡಿದ ಬಗ್ಗೆ ಚರ್ಚೆ ಮಾಡೋಣ. ಯಾರು ಇದಕ್ಕೆ ಜವಾಬ್ದಾರಿ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ದೇವೇಗೌಡ ಪ್ರಶ್ನಿಸಿದರು.
ಎಚ್ಡಿಕೆಯನ್ನು ಸಿಎಂ ಮಾಡುವಂತೆ ಒತ್ತಾಯ ಮಾಡಿದ್ದು ಯಾರು?
ಎಚ್.ಡಿ. ಕುಮಾರಸ್ವಾಮಿ ಅವರನ್ನು ಸಿಎಂ ಮಾಡಬೇಕೆಂದು ಯಾರು ಬಂದಿದ್ದು? ನನಗೆ ಅವರನ್ನೇ ಸಿಎಂ ಮಾಡುವಂತೆ ಒತ್ತಾಯ ಮಾಡಿದರು. ಯಾವ ಕಾರಣಕ್ಕೂ ನಿಮ್ಮ ಸಹವಾಸ ಬೇಡ ಅಂತಾ ಹೇಳಿದ್ದೆ. ರಾತ್ರಿ 12 ಗಂಟೆಗೆ ಸುಪ್ರೀಂ ಕೋರ್ಟ್ಗೆ ಹೋಗಿದ್ದಾರೆ. ಇವತ್ತು ಬಿಜೆಪಿ ಜತೆ ಸಂಬಂಧ ಯಾಕೆ ಬೆಳೆಸಿದ್ದೀರಿ ಎಂದು ಮಾಧ್ಯಮಗಳಲ್ಲಿ ಕೇಳುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದರು.
ಇದನ್ನೂ ಓದಿ: Weather report : ಇನ್ನೆರಡು ದಿನ ಉತ್ತರ ಕರ್ನಾಟಕದ 7 ಜಿಲ್ಲೆ ಸೇರಿ ಕರಾವಳಿಯಲ್ಲಿ ಭಾರಿ ಮಳೆ
ದೇಶದಲ್ಲಿ ಒಂದೇ ಕುಟುಂಬ ಆಡಳಿತ ಮಾಡಬೇಕಾ?
ನಾನು ಯಾವುದೇ ಕಾರಣಕ್ಕೂ ಅಧಿಕಾರಕ್ಕಾಗಿ ರಾಜಕೀಯ ಮಾಡಿಲ್ಲ. ರಾಹುಲ್ ಗಾಂಧಿ ಕೈಯಲ್ಲಿ ಜೆಡಿಎಸ್ ಬಿಜೆಪಿ ಬಿ ಟೀಮ್ ಅಂತ ಹೇಳಿಸಿದರು. ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡಾಗ ಏನ್ ಮಾಡಿದ್ರು ಅಂತ ನಾನು ನೋಡಲಿಲ್ವಾ? ಈಗ ಮೈತ್ರಿ ಬಗ್ಗೆ ಚರ್ಚೆ ಮಾಡ್ತಿದ್ದಾರೆ. ದೇಶದಲ್ಲಿ ಒಂದೇ ಕುಟುಂಬ ಆಡಳಿತ ಮಾಡಬೇಕಾ? ನಾನು 10 ವರ್ಷದಲ್ಲಿ ಮೊದಲ ಬಾರಿ ಮೈತ್ರಿ ಬಗ್ಗೆ ಮಾತನಾಡಿದ್ದೇನೆ ಎಂದು ಎಚ್.ಡಿ. ದೇವೇಗೌಡ ಹೇಳಿದರು.
-
ದೇಶ13 hours ago
UNGA Speech: ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಿ, ವಿಶ್ವ ಸಂಸ್ಥೆಯಲ್ಲಿ ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಪಾಠ!
-
ವಿದೇಶ21 hours ago
Great auction: ಅಮೆರಿಕದ ಅಪರೂಪದ ನೋಟು 3.9 ಕೋಟಿ ರೂ.ಗೆ ಮಾರಾಟ!
-
South Cinema24 hours ago
Heart attack : ಹಿರಿಯ ನಟ ಬ್ಯಾಂಕ್ ಜನಾರ್ದನ್ಗೆ ಹೃದಯಾಘಾತ?
-
ಸುವಚನ8 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ದೇಶ14 hours ago
Manipur Horror: ಅಪಹರಿಸಿ ಕೊಂದ್ರಲ್ಲಾ… ನಮ್ಮ ಮಕ್ಕಳು ಮಾಡಿದ ತಪ್ಪಾದ್ರೂ ಏನು? ಹತ್ಯೆಗೀಡಾದ ವಿದ್ಯಾರ್ಥಿಗಳ ಪೋಷಕರ ಪ್ರಶ್ನೆ
-
ದೇಶ15 hours ago
GST Evasion: ಜಿಎಸ್ಟಿ ವಂಚಿಸಿದ ಬಿಜೆಪಿ ನಾಯಕಿಯ ಸಕ್ಕರೆ ಕಾರ್ಖಾನೆಯ 19 ಕೋಟಿ ರೂ. ಮೌಲ್ಯದ ಸೊತ್ತು ಜಪ್ತಿ!
-
ಆಟೋಮೊಬೈಲ್20 hours ago
Viral News : ಅಮ್ಮನ ಕಾರಿನಲ್ಲಿಯೇ ಮನೆ ಬಿಟ್ಟು ಹೋದ ಪುಟಾಣಿ ಮಕ್ಕಳು, 300 ಕಿ. ಮೀ ದೂರ ಹೋಗಿ ಸಿಕ್ಕಿಬಿದ್ದರು
-
ಕರ್ನಾಟಕ21 hours ago
Assault Case : ರಸ್ತೆ ವಿಚಾರಕ್ಕೆ ವಕೀಲನಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು!