Clay Pot Cooking: ಮಣ್ಣಿನ ಪಾತ್ರೆಗಳಲ್ಲಿ ಅಡುಗೆ ಮಾಡಲು ಬಯಸಿದ್ದೀರಾ? ಹಾಗಿದ್ದರೆ ಇವಿಷ್ಟು ಸಂಗತಿ ನೆನಪಿರಲಿ! - Vistara News

ಲೈಫ್‌ಸ್ಟೈಲ್

Clay Pot Cooking: ಮಣ್ಣಿನ ಪಾತ್ರೆಗಳಲ್ಲಿ ಅಡುಗೆ ಮಾಡಲು ಬಯಸಿದ್ದೀರಾ? ಹಾಗಿದ್ದರೆ ಇವಿಷ್ಟು ಸಂಗತಿ ನೆನಪಿರಲಿ!

ತಲೆತಲಾಂತರದಿಂದ ಬಳಕೆಯಲ್ಲಿದ್ದ ವಸ್ತುಗಳೂ ಹೊಸ ರೂಪ ತಳೆದು ಮತ್ತೆ ಅಡುಗೆ ಮನೆಯಲ್ಲಿ ಸ್ಥಾನ ಪಡೆಯುತ್ತಿವೆ. ಅಂಥ ಹಳೆಯ ವಸ್ತುಗಳ ಪೈಕಿ ಈಗಲೂ ಬೇಡಿಕೆಯಿರುವ ಅಡುಗೆಮನೆಯ ವಸ್ತುಗಳ ಪೈಕಿ ಮಣ್ಣಿನ ಮಡಕೆಗೆ ಮಹತ್ವದ ಸ್ಥಾನವಿದೆ. ಮಣ್ಣಿನ ಮಡಕೆಗಳು, ಪಾತ್ರೆಗಳಲ್ಲಿ ಅಡುಗೆ ಮಾಡುವ ಪದ್ಧತಿ ಮತ್ತೆ ಜಾಲ್ತಿಯಲ್ಲಿ ಬರುತ್ತಿವೆ. ಟ್ರೆಂಡ್‌ ಆಗುತ್ತಿವೆ. ಬನ್ನಿ, ಮಣ್ಣಿನ ಪಾತ್ರೆಗಳಲ್ಲಿ ಅಡುಗೆ ಮಾಡುವ ಮಂದಿ, ಇಂಡಿಯಲ್‌ ಕೌನ್ಸಿಲ್‌ ಫಾರ್‌ ಮೆಡಿಕಲ್‌ ರೀಸರ್ಚ್‌ ಇತ್ತೀಚೆಗಷ್ಟೇ ಬಿಡುಗಡೆ ಮಾಡಿದ ಮಣ್ಣಿನ ಪಾತ್ರೆಗಳ ಬಗೆಗಿನ ಆರೋಗ್ಯ ಸೂಚಿಗಳನ್ನು (clay pot cooking) ಗಮನಿಸಿ.

VISTARANEWS.COM


on

Clay Pot Cooking
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಅಡುಗೆ ಮನೆ ಇಂದು ಪ್ರತಿ ಮನೆಯ ಅತ್ಯಂತ ಮುಖ್ಯವಾದ ಕೋಣೆ. ಒಂದು ಕುಟುಂಬಕ್ಕೆ ಅನ್ನ ನೀಡುವ ಕುಟುಂಬ ಕಣ್ಣು ಇದು. ಅಡುಗೆ ಮನೆಯೆಂದರೆ, ಕಪ್ಪಾಗಿ ಮಸಿ ಹಿಡಿದ, ಎಣ್ಣೆಯುಕ್ತ ಕಿಟಕಿ ಬಾಗಿಲುಗಳೆಂಬ, ಬೆಳಕೇ ಇಲ್ಲದ ಕತ್ತಲ ಕೋಣೆಗಳಂತೆ ಕಾಣುವ, ಕೇವಲ ಮನೆಯೊಡತಿ ಮಾತ್ರ ಗಂಟೆಗಟ್ಟಲೆ ಇರುವ ಕೋಣೆಯಾಗಿ ಉಳಿದಿಲ್ಲ. ಸಕಲ ಸೌಲಭ್ಯಗಳಿಂದ, ಹೊಸ ಹೊಸ ತಂತ್ರಜ್ಞಾನಗಳಿಂದ ವಿನ್ಯಾಸಗಳಿಂದ ಮನ ಸೆಳೆಯುತ್ತದೆ. ಸಾಕಷ್ಟು ಗಾಳಿ ಬೆಳಕುಗಳಿರುವ, ಮನೆಯ ಎಲ್ಲರೂ ಸಂತೋಷವಾಗಿ ಜೊತೆಗೇ ಕಾಲ ಕಳೆಯಬಲ್ಲ ಕೋಣೆಯಾಗಿ ಬದಲಾಗುತ್ತಿದೆ. ಹೊಸ ಹೊಸ ಉತ್ಪನ್ನಗಳು ಬರುವ ಜೊತೆಗೇ, ತಲೆತಲಾಂತರದಿಂದ ಬಳಕೆಯಲ್ಲಿದ್ದ ವಸ್ತುಗಳೂ ಹೊಸ ರೂಪ ತಳೆದು ಮತ್ತೆ ಅಡುಗೆ ಮನೆಯಲ್ಲಿ ಸ್ಥಾನ ಪಡೆಯುತ್ತಿವೆ. ಅಂಥ ಹಳೆಯ ವಸ್ತುಗಳ ಪೈಕಿ ಈಗಲೂ ಬೇಡಿಕೆಯಿರುವ ಅಡುಗೆಮನೆಯ ವಸ್ತುಗಳ ಪೈಕಿ ಮಣ್ಣಿನ ಮಡಕೆಗೆ ಮಹತ್ವದ ಸ್ಥಾನವಿದೆ. ಮಣ್ಣಿನ ಮಡಕೆಗಳು, ಪಾತ್ರೆಗಳಲ್ಲಿ ಅಡುಗೆ ಮಾಡುವ ಪದ್ಧತಿ ಮತ್ತೆ ಜಾಲ್ತಿಯಲ್ಲಿ ಬರುತ್ತಿವೆ. ಟ್ರೆಂಡ್‌ ಆಗುತ್ತಿವೆ. ಬನ್ನಿ, ಮಣ್ಣಿನ ಪಾತ್ರೆಗಳಲ್ಲಿ ಅಡುಗೆ ಮಾಡುವ ಮಂದಿ, ಇಂಡಿಯಲ್‌ ಕೌನ್ಸಿಲ್‌ ಫಾರ್‌ ಮೆಡಿಕಲ್‌ ರೀಸರ್ಚ್‌ ಇತ್ತೀಚೆಗಷ್ಟೇ ಬಿಡುಗಡೆ ಮಾಡಿದ ಮಣ್ಣಿನ ಪಾತ್ರೆಗಳ ಬಗೆಗಿನ ಆರೋಗ್ಯ ಸೂಚಿಗಳನ್ನು (clay pot cooking) ಗಮನಿಸಿ.

Clay pot for cooking
  • ಮಣ್ಣಿನ ಪಾತ್ರೆಗಳನ್ನು ಬೇರೆ ಪಾತ್ರೆಗಳ ಜತೆಗೆ ಇಡಬೇಡಿ. ಮಣ್ಣಿನ ಪಾತ್ರೆಗಳಿಗೇ ಪ್ರತ್ಯೇಕ ಜಾಗವನ್ನು ಮಾಡಿ. ಯಾಕೆಂದರೆ ಮಣ್ಣಿನ ಮಡಿಕೆಗಳು ಬೇರೆ ಪಾತ್ರೆಗಳಿಗೆ ತಾಕಿ ಒಡೆಯಲೂಬಹುದು. ಅವುಗಳನ್ನು ಮೇಲಿಂದ ಮೇಲೆಯೂ ಇಡಬೇಡಿ. ಬಹಳ ಜಾಗರೂಕತೆಯಿಂದ ಬಳಸಬೇಕಾದವು ಇವು. ಸಣ್ಣ ಬಿರುಕು ಬಂದರೂ ಪಾತ್ರೆಯಲ್ಲಿ ಅಡುಗೆ ಮಾಡಲು ಸಾಧ್ಯವಾಗದು.
  • ಮಣ್ಣಿನ ಪಾತ್ರೆಗಳಲ್ಲಿ ಅಡುಗೆ ಮಾಡುವ ಸಂದರ್ಭ ಲೋಹದ ಸೌಟುಗಳನ್ನು ಬಳಸಬೇಡಿ. ಮರದ ಸೌಟನ್ನೇ ಬಳಸಿ. ಸ್ಟೀಲ್‌ ಅಥವಾ ಬೇರೆ ಲೋಹದ ಸೌಟು ಮಣ್ಣಿನ ಮಡಕೆಯನ್ನು ಹಾಳು ಮಾಡುವ ಅಪಾಯವಿದೆ. ಹೀಗಾಗಿ ಮರದ ಸೌಟನ್ನೇ ಬಳಸಿ.
  • ಮಡಕೆಗಳನ್ನು ಸ್ವಚ್ಛಗೊಳಿಸಲು ನೀವು ಬೇರೆ ಪಾತ್ರೆಗಳನ್ನು ಸ್ವಚ್ಛಗೊಳಿಸಲು ನಿತ್ಯವೂ ಬಳಸುವ ರಾಸಾಯನಿಕಯುಕ್ತ ಡಿಟರ್ಜೆಂಟ್‌ ಅನ್ನು ಬಳಸಬೇಡಿ. ಲೋಹದ ಸ್ಕ್ರಬರ್‌ ಅನ್ನೂ ಬಳಸಬೇಡಿ. ತೆಂಗಿನಕಾಯಿಯ ಜುಟ್ಟಿನಿಂದ ಮಾಡಿದ ನೈಸರ್ಗಿಕ ಸ್ಕ್ರಬರ್‌ ಅನ್ನು ಬಳಸಬಹುದು. ಅಥವಾ ಬೇಕಿಂಗ್‌ ಸೋಡಾ ಹಾಗೂ ಉಪ್ಪನ್ನು ಹಾಕಿ ಪಾತ್ರೆಯನ್ನು ಕ್ಲೀನ್‌ ಮಾಡಬಹುದು.
  • ಮಡಕೆಗಳನ್ನು ಸದಾ ತೊಳೆದ ಮೇಳೆ ಆರಲು ಬಿಟ್ಟು ಒಣಗಿದ ಮೇಲೆಯೇ ಒಳಗಿಡಿ. ಒದ್ದೆಯಾಗಿ ಬಿಡಬೇಡಿ. ಅಡುಗೆ ಮಾಡುವಾಗಲೂ ಒಣಗಿದ ಮಡಕೆಗಳನ್ನೇ ಬಳಸಿ. ಇದರಿಂದ ಮಡಕೆ ಹಾಳಾಗುವ ಅಪಾಯವಿದೆ.
  • ಮಣ್ಣಿನ ಮಡಕೆಗಳಲ್ಲಿ ಸಿಟ್ರಿಕ್‌ ಆಸಿಡ್‌ ಇರುವ ವಸ್ತುಗಳನ್ನು, ಆಹಾರಗಳನ್ನು ಇಡಬೇಡಿ. ನಿಂಬೆಹಣ್ಣಿನ ಜ್ಯೂಸ್‌, ನಿಂಬೆಹಣ್ಣು ಹಾಕಿ ಮಾಡಿದ ಆಹಾರಗಳು, ಅಥವಾ ಸಿಟ್ರಸ್‌ ಹಣ್ಣುಗಳ ಜ್ಯೂಸ್‌ ಇತ್ಯಾದಿಗಳಿಗೆ ಮಣ್ಣಿನ ಮಡಕೆ ಬಳಸಬೇಡಿ. ಅಂಥವುಗಳಿಗೆ ಗಾಜು, ಅಥವಾ ಸ್ಟೀಲ್‌ ಪಾತ್ರೆಗಳು ಉತ್ತಮ. ಇವುಗಳಲ್ಲಿರು ಆಮ್ಲೀಯತೆ ಮಣ್ಣಿನ ಜೊತೆಗೆ ವರ್ತಿಸುವ ಅಪಾಯವಿರುವುದರಿಂದ ಈ ವಿಚಾರದಲ್ಲಿ ಎಚ್ಚರಿಕೆ ವಹಿಸಿ.

ಇದನ್ನೂ ಓದಿ: Toothpaste Hacks: ಟೂತ್‌ಪೇಸ್ಟ್‌ನಿಂದ ಯಾವೆಲ್ಲ ವಸ್ತುಗಳನ್ನು ಹೊಳೆಯುವಂತೆ ಮಾಡಬಹುದು ನೋಡಿ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಆರೋಗ್ಯ

Weight Loss Tips: ನಲವತ್ತರ ನಂತರ ತೂಕ ಇಳಿಸುವುದು ಹೇಗೆ?

Weight loss Tips: ವಯಸ್ಸೆಂಬುದು ಒಂದು ಸಂಖ್ಯೆ ಮಾತ್ರ ಎನ್ನುವವರು ಲೋಕದ ತುಂಬೆಲ್ಲ ಇದ್ದಾರೆ. ಹಾಗಾದರೆ ವಯಸ್ಸೆಷ್ಟು ಎಂದು ಕೇಳಿದರೆ, ಅದೊಂದು ಸಂಖ್ಯೆಯನ್ನು ಹೇಳಲು ಸಿದ್ಧರಿರುವುದಿಲ್ಲ! ವಯಸ್ಸನ್ನು ಹೇಳಿದರೂ ಹೇಳದಿದ್ದರೂ ಆಗುವುದಂತೂ ಹೌದಲ್ಲ? ಅದರಲ್ಲೂ ನಮ್ಮ ಅಂಗಾಂಗಗಳು ತಮ್ಮ ಕ್ಷಮತೆಯಲ್ಲಿ ಅದನ್ನು ತೋರಿಸಿಯೇ ಬಿಡುತ್ತವೆ. ಉದಾ, ಹಿಂದೊಮ್ಮೆ ಕಲ್ಲನ್ನಾದರೂ ತಿಂದು ಕರಗಿಸುತ್ತಿದ್ದ ಹೊಟ್ಟೆ, ಈಗೀಗ ಊಟವನ್ನೇ ಅರಗಿಸುವುದಕ್ಕೆ ಉಸ್ಸಪ್ಪ ಎನ್ನುವುದಾದರೆ, ವಯಸ್ಸು 40 ದಾಟಿದ್ದು ಹೌದು ಎಂದರ್ಥ. ಹಾಗಾದರೆ ಪ್ರಾಯ 40 ಆದ ಮೇಲೆ ದೇಹದ ಕೊಬ್ಬು ಕರಗಿಸುವುದು ಹೇಗೆ?

VISTARANEWS.COM


on

Weight Loss Tips
Koo

ಹಿಂದೆ ಕಲ್ಲನ್ನಾದರೂ ತಿಂದು (Weight loss Tips) ಕರಗಿಸುತ್ತಿದ್ದ ಹೊಟ್ಟೆ, ಈಗೀಗ ಊಟವನ್ನೇ ಅರಗಿಸುವುದಕ್ಕೆ ಉಸ್ಸಪ್ಪ ಎನ್ನುವುದಾದರೆ, ವಯಸ್ಸು 40 ದಾಟಿದ್ದು ಹೌದು ಎಂದರ್ಥ. ಈ ಗುಟ್ಟನ್ನು ದೇಹದ ಚಯಾಪಚಯ ಹೇಳಿಯೇ ಬಿಡುತ್ತದೆ. ತಿಂದಿದ್ದು ಕರಗುತ್ತಿಲ್ಲ ಎಂದಾದರೆ ಆ ಕೊಬ್ಬೆಲ್ಲ ಕುಳಿತುಕೊಳ್ಳುವುದು ದೇಹದಲ್ಲೇ ತಾನೆ? ಹಾಗಾದರೆ ಪ್ರಾಯ 40 ಆದ ಮೇಲೆ ದೇಹದ ಕೊಬ್ಬು ಕರಗಿಸುವುದು ಹೇಗೆ?

Weight Loss Benefits Of Eating Roasted Peanuts Daily

ವಯಸ್ಸೆಂಬುದು ಒಂದು ಸಂಖ್ಯೆ ಮಾತ್ರ ಎನ್ನುವವರು ಲೋಕದ ತುಂಬೆಲ್ಲ ಇದ್ದಾರೆ. ಹಾಗಾದರೆ ವಯಸ್ಸೆಷ್ಟು ಎಂದು ಕೇಳಿದರೆ, ಅದೊಂದು ಸಂಖ್ಯೆಯನ್ನು ಹೇಳಲು ಸಿದ್ಧರಿರುವುದಿಲ್ಲ! ಇರಲಿ, ವಿಷಯ ಅದಲ್ಲ. ವಯಸ್ಸನ್ನು ಹೇಳಿದರೂ ಹೇಳದಿದ್ದರೂ, ಆಗುವುದಂತೂ ಹೌದಲ್ಲ. ಅದರಲ್ಲೂ ನಮ್ಮ ಅಂಗಾಂಗಗಳು ತಮ್ಮ ಕ್ಷಮತೆಯಲ್ಲಿ ಅದನ್ನು ತೋರಿಸಿಯೇ ಬಿಡುತ್ತವೆ. ಉದಾ, ಹಿಂದೊಮ್ಮೆ ಕಲ್ಲನ್ನಾದರೂ ತಿಂದು ಕರಗಿಸುತ್ತಿದ್ದ ಹೊಟ್ಟೆ, ಈಗೀಗ ಊಟವನ್ನೇ ಅರಗಿಸುವುದಕ್ಕೆ ಉಸ್ಸಪ್ಪ ಎನ್ನುವುದಾದರೆ, ವಯಸ್ಸು ೪೦ ದಾಟಿದ್ದು ಹೌದು. ಈ ಗುಟ್ಟನ್ನು ದೇಹದ ಚಯಾಪಚಯ ಹೇಳಿಯೇ ಬಿಡುತ್ತದೆ. ತಿಂದಿದ್ದು ಕರಗುತ್ತಿಲ್ಲ ಎಂದಾದರೆ ಆ ಕೊಬ್ಬೆಲ್ಲ ಕುಳಿತುಕೊಳ್ಳುವುದು ದೇಹದಲ್ಲೇ ತಾನೆ? ಹಾಗಾದರೆ ಪ್ರಾಯ 40 ಆದ ಮೇಲೆ ದೇಹದ ಕೊಬ್ಬು ಕರಗಿಸುವುದು ಹೇಗೆ? ಹೆಚ್ಚಿನ ಸಾರಿ ತೂಕ ಕರಗಿಸುವ ಭರದಲ್ಲಿ ಚುಟುಕು ಡಯೆಟ್‌ಗಳ ಮೊರೆ ಹೋಗುತ್ತೇವೆ. ಆಗದಿರುವಂಥ ಸರ್ಕಸ್‌ಗಳಲ್ಲಿ ತೊಡಗಿಸಿಕೊಳ್ಳುತ್ತೇವೆ. ಇದರ ಪರಿಣಾಮವೇನೆಂದರೆ ದೇಹದಲ್ಲಿ ಕೊಬ್ಬು ಕರಗುವ ಬದಲು, ನೀರಿನಿಂದ ಇರುವಂಥ ತೂಕ ಮಾತ್ರವೇ ಕ್ಷಿಪ್ರವಾಗಿ ಕರಗುತ್ತದೆ. ಅದೂ ಇಲ್ಲದಿದ್ದರೆ ಸ್ನಾಯುಗಳು ಮಾಯವಾಗಿ ದೇಹ ತೊಂದರೆಗೆ ಸಿಲುಕುತ್ತದೆ. ಇದರ ಜೊತೆಗೆ ತಪ್ಪಾಗಿ ವ್ಯಾಯಾಮಗಳನ್ನೂ ಮಾಡಿದರೆ, ಗಾಯಗಳ ಸಮಸ್ಯೆ ತಲೆದೋರುತ್ತದೆ. ಪ್ರಾಯ ಹೆಚ್ಚುತ್ತಿದ್ದಂತೆ ಗಾಯ ಮಾಯುವುದು ನಿಜಕ್ಕೂ ಕಷ್ಟ. ಹಾಗಾದರೆ ಸುಸ್ಥಿರವಾಗಿ ಮತ್ತು ಸುರಕ್ಷಿತವಾಗಿ ತೂಕ ಇಳಿಸುವುದಕ್ಕೆ 40ರ ನಂತರ ಏನು ಮಾಡಬೇಕು?

Dieting concept. Healthy Food. Beautiful Young Asian Woman

ಆಹಾರದ ಬಗ್ಗೆ ಗಮನ

ಬೆಳಗಿನ ಉಪಾಹಾರದಲ್ಲಿ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಪ್ರೊಟೀನ್‌ ಒದಗಿಸಬೇಕು ಜೊತೆಗೆ ಕ್ಯಾಲರಿ ಇಳಿಸಬೇಕು. ಅಂದರೆ, ನಿಮಗೆ ಬೆಳಗ್ಗೆ 1200 ಕ್ಯಾಲರಿಯ ಆಹಾರ ಬೇಕು ಎಂದಿದ್ದರೆ, ಅದನ್ನು ಅಂದಾಜು 900 ಕ್ಯಾಲರಿಗಳಿಗೆ ಇಳಿಸುವುದು. ಈ ಆಹಾರದಲ್ಲಿ ಪ್ರೊಟೀನ್‌ ಮತ್ತು ಸಂಕೀರ್ಣ ಪಿಷ್ಟಗಳು ಭರಿತವಾಗಿ ಇರಬೇಕು. ಇದರಿಂದ ಶರೀರ ಸೊರಗುವುದಿಲ್ಲ ಮತ್ತು ಹಸಿವೂ ಆಗುವುದಿಲ್ಲ. ದೇಹಕ್ಕೆ ಬೇಕಾದ ಉಳಿದ 300 ಕ್ಯಾಲರಿಯನ್ನು ಶರೀರ ತನ್ನ ಕೊಬ್ಬಿನ ದಾಸ್ತಾನಿನಿಂದ ತೆಗೆದುಕೊಳ್ಳುತ್ತದೆ. ಇದನ್ನು ಎಲ್ಲಾ ಹೊತ್ತಿನ ಆಹಾರಗಳಲ್ಲೂ ಕ್ರಮೇಣ ಅಳವಡಿಸಿಕೊಳ್ಳಬಹುದು. ಋತುಮಾನದ ಸೊಪ್ಪು-ಹಣ್ಣು-ತರಕಾರಿಗಳು ಊಟದಲ್ಲಿ ಸಾಕಷ್ಟಿರಲಿ. ಇದರಿಂದ ನಾರು ಭರಪೂರ ದೊರೆಯುತ್ತದೆ. ಖನಿಜಗಳು ಕೊರತೆಯಾಗದಂತೆ ನೋಡಿಕೊಳ್ಳಲು ಇದಿಷ್ಟು ಆಹಾರಗಳು ಸಾಕಾಗುತ್ತವೆ. ಜೊತೆಗೆ ಚೆನ್ನಾಗಿ ನೀರು ಕುಡಿಯಿರಿ.

Asia woman doing yoga fitness exercise Inflammation

ವ್ಯಾಯಾಮ

ಯೋಗದಂಥ ವ್ಯಾಯಾಮಗಳು ಸರಳ ಎನ್ನಿಸಿದರೂ ಹಲವು ರೀತಿಯಲ್ಲಿ ಪ್ರಯೋಜನಕಾರಿ. ದೇಹ-ಮನಸ್ಸುಗಳನ್ನು ಶಾಂತವಾಗಿಸುವುದರ ಜೊತೆಗೆ, ದೇಹದ ವಿವಿಧ ಸ್ನಾಯುಗಳನ್ನು ಸಶಕ್ತಗೊಳಿಸುತ್ತವೆ. ಕೀಲುಗಳ ಆರೋಗ್ಯ ಸುಧಾರಿಸಿ ದೇಹದ ನಮ್ಯತೆಯನ್ನೂ ಹೆಚ್ಚಿಸುತ್ತದೆ. ಇವೆಲ್ಲ ಕ್ರಮೇಣ ನೆರವಾಗುವುದು ದೇಹದ ಕೊಬ್ಬು ಕರಗಿಸುವಲ್ಲಿ.

ಇದನ್ನೂ ಓದಿ: Seeds For Men Sexual Power: ಪುರುಷರ ಲೈಂಗಿಕ ಶಕ್ತಿ ಹೆಚ್ಚಳಕ್ಕೆ ಈ ಬೀಜಗಳು ಪರಿಣಾಮಕಾರಿ!

ಕಾರ್ಡಿಯೊ

ಇದಕ್ಕಾಗಿ ಥ್ರೆಡ್‌ಮಿಲ್‌ಗಳ ಮೇಲೆ ಉಸಿರುಗಟ್ಟಿ ಓಡಬೇಕೆಂದಿಲ್ಲ. ಸರಳವಾಗಿ ಬೀಸು ನಡಿಗೆ, ಜಾಗಿಂಗ್‌ ಸಹ ಸಾಕಾಗುತ್ತದೆ. ನಿಮ್ಮಿಷ್ಟದ ಇಂಥ ಯಾವುದೇ ವ್ಯಾಯಾಮ ಮಾಡಬಹುದು. ಕಾರ್ಡಿಯೊ ವ್ಯಾಯಾಮಗಳು ದೇಹಕ್ಕೆ ಆಮ್ಲಜನಕದ ಪ್ರಮಾಣವನ್ನು ಹೆಚ್ಚಿಸಿ, ಹೃದಯದ ಆರೋಗ್ಯ ಹೆಚ್ಚಿಸುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಕ್ಯಾಲರಿ ಕರಗುವ ಪ್ರಮಾಣವನ್ನು ಅಧಿಕಗೊಳಿಸುತ್ತವೆ.

May Improve Sleep Quality Fish Benefits

ನಿದ್ದೆ

ಆರೋಗ್ಯದ ವಿಷಯ ಹೇಳುವಾಗ ನಿದ್ದೆಯನ್ನುಳಿದು ಮುಂದೆ ಹೋಗುವಂತೆಯೇ ಇಲ್ಲ. ತೂಕ ಇಳಿಸುವುದು, ಫಿಟ್‌ನೆಸ್‌ ಇತ್ಯಾದಿಗಳ ವಿಷಯ ಮಾತಾಡುವಾಗ ನಿದ್ದೆಯನ್ನು ಸಂಪೂರ್ಣ ಮರೆತೇ ಬಿಟ್ಟಿರುತ್ತೇವೆ. ದೇಹದ ರಿಪೇರಿಗೆ ಅಗತ್ಯ ಅವಕಾಶವನ್ನು ನೀಡದಿದ್ದರೆ ಯಾವುದೂ ಸರಿಯಾಗಿ ಆಗುವುದಿಲ್ಲ. ಆದರೆ ದಿನಕ್ಕೆ ಕಡ್ಡಾಯ 7-8 ತಾಸು ನಿದ್ದೆ ಮಾಡಿ. ಜೊತೆಗೆ, ನಿದ್ರೆಗೆಟ್ಟರೆ ತೂಕ ಹೆಚ್ಚುತ್ತದೆ. ನಿದ್ದೆ ಇಲ್ಲದಿದ್ದರೆ ಮಾನಸಿಕ ಒತ್ತಡ ಹೆಚ್ಚುತ್ತದೆ, ಇದರಿಂದಲೂ ತೂಕ ಏರುತ್ತದೆ. ಮತ್ತೆ ತೂಕ ಇಳಿಸುವುದು ಹೇಗೆ ಸಾಧ್ಯ?

Continue Reading

ಫ್ಯಾಷನ್

Paris Fashion Week: ಪ್ಯಾರಿಸ್‌ ಹಾಟ್‌ ಕೌಚರ್‌ ಫ್ಯಾಷನ್‌ ವೀಕ್ 2024ರ ಹೈಲೈಟ್ಸ್

Paris fashion week: ಪ್ರತಿಬಾರಿಯಂತೆ ಈ ಬಾರಿಯೂ ಕೂಡ ಪ್ಯಾರಿಸ್‌ ಹಾಟ್‌ ಕೌಚರ್‌ಫ್ಯಾಷನ್‌ ವೀಕ್‌ನಲ್ಲಿ, ಸೆಲೆಬ್ರೆಟಿಗಳ ಚಿತ್ರ-ವಿಚಿತ್ರ ಡಿಸೈನರ್‌ವೇರ್‌ಗಳು ಫ್ಯಾಷನ್‌ ಪ್ರಿಯರ ಹುಬ್ಬೇರಿಸಿದವು. ಇದರೊಂದಿಗೆ ನಮ್ಮ ದೇಸಿ ಸ್ಟಾರ್‌ಗಳು ಹೇಗೆಲ್ಲಾ ಮೆರುಗು ಹೆಚ್ಚಿಸಿದರು? ಎಂಬುದರ ಬಗ್ಗೆ ಫ್ಯಾಷನ್‌ ವಿಮರ್ಶಕರು ಚಿಕ್ಕ ಚಿತ್ರಣ ನೀಡಿದ್ದಾರೆ.

VISTARANEWS.COM


on

Paris Fashion Week
ಚಿತ್ರಗಳು: ಪ್ಯಾರಿಸ್‌ ಹಾಟ್‌ ಕೌಚರ್‌ ಫ್ಯಾಷನ್‌ ವೀಕ್‌ 2024 ಚಿತ್ರಗಳು
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪ್ಯಾರಿಸ್‌ ಹಾಟ್‌ ಕೌಚರ್‌ ಫ್ಯಾಷನ್‌ ವೀಕ್‌ 2024 ಎಂದಿನಂತೆ (Paris fashion week) ಹೊಸ ಪ್ರಯೋಗಾತ್ಮಕ ಡಿಸೈನರ್‌ವೇರ್‌, ವೇರಬಲ್‌-ನಾನ್‌ ವೇರಬಲ್‌ ಉಡುಗೆ-ತೊಡುಗೆಗಳಿಗೆ ಸಾಕ್ಷಿಯಾಯಿತು. ದೇಶ-ವಿದೇಶದಿಂದ ಆಗಮಿಸಿದ್ದ ಸೆಲೆಬ್ರೆಟಿ ಡಿಸೈನರ್‌ಗಳು, ಬ್ರಾಂಡ್‌ ಡಿಸೈನರ್‌ಗಳು ಈ ಫ್ಯಾಷನ್‌ ವೀಕ್‌ನಲ್ಲಿ ತಮ್ಮದೇ ಆದ ಪ್ರಯೋಗಾತ್ಮಕ ಡಿಸೈನರ್‌ವೇರ್‌ಗಳನ್ನು ಯಶಸ್ವಿಯಾಗಿ ಪ್ರದರ್ಶಿಸಿದರು. ಹೌದು, ಪ್ರತಿಬಾರಿಯಂತೆ ಈ ಬಾರಿಯೂ ಕೂಡ ಪ್ಯಾರಿಸ್‌ ಫ್ಯಾಷನ್‌ ವೀಕ್‌ನಲ್ಲಿ ವಾಕ್‌ ಮಾಡಿದ ಹಾಗೂ ಕಾಣಿಸಿಕೊಂಡ ಸೆಲೆಬ್ರೆಟಿಗಳ ಚಿತ್ರ-ವಿಚಿತ್ರ ಡಿಸೈನರ್‌ವೇರ್‌ಗಳು ಜಗತ್ತಿನಾದಾದ್ಯಂತ ಕಾತುರದಿಂದ ಕಾಯುತ್ತಿದ್ದ ಫ್ಯಾಷನ್‌ ಪ್ರಿಯರ ಹುಬ್ಬೇರಿಸಿದವು. ಇದಕ್ಕೆ ನಾವೇನೂ ಕಡಿಮೆ ಇಲ್ಲ ಎಂಬಂತೆ, ನಮ್ಮ ದೇಸಿ ಸ್ಟಾರ್‌ಗಳು ಭಾಗವಹಿಸಿ ಹಿರಿಮೆ ಹೆಚ್ಚಿಸಿದರು ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

ದೇಸಿ ಸ್ಟಾರ್‌ಗಳ ಕಲರವ

ಡಿಸೈನರ್‌ ರಾಹುಲ್‌ ಮಿಶ್ರಾ ಅವರ ಡಿಸೈನರ್‌ವೇರ್‌ನಲ್ಲಿ, ಬಾಲಿವುಡ್‌ ನಟಿ ಜಾನ್ವಿ ಕಪೂರ್‌ ಮೊತ್ತ ಮೊದಲ ಬಾರಿಗೆ ಪ್ಯಾರೀಸ್‌ನ ಫ್ಯಾಷನ್‌ ವೀಕ್‌ನಲ್ಲಿ ಭಾಗವಹಿಸಿದರೇ, ನಟಿ ರಾಧಿಕಾ ಆಪ್ಟೆ ಕೂಡ ಅವರ ಡಿಸೈನರ್‌ವೇರ್‌ನಿಂದಲೇ ಎಲ್ಲರ ಗಮನಸೆಳೆದರು. ಇನ್ನು ನಟಿ ಪ್ರೀತಿ ಜಿಂಟಾ, ಐವರಿ ಒಂಬ್ರೆ ವಿನ್ಯಾಸದ ಶೋಲ್ಡರ್‌ಲೆಸ್‌ ಬಾಡಿಕಾನ್‌ ಗೌನ್‌ ಸೇರಿದಂತೆ ನಾನಾ ಡಿಸೈನರ್‌ವೇರ್‌ಗಳಲ್ಲಿ ಫ್ಯಾಷನ್‌ ವೀಕ್‌ನ ಮುಂದಿನ ಸಾಲಿನ ಅತಿಥಿಯಾಗಿ ಆಗಮಿಸಿ, ವೀಕ್ಷಿಸಿದರು. ನಟಿ ಸೋನಂ ಕಪೂರ್‌ ಕೂಡ ಇದೇ ಕೆಲಸವನ್ನು ಮಾಡಿದರು. ಒಟ್ಟಾರೆ, ಇವರೆಲ್ಲರೂ ಟ್ರೆಂಡಿ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡರು. ದೇಸಿ ಔಟ್‌ಫಿಟ್‌ಗಳನ್ನು ಧರಿಸದಿದ್ದರೂ, ನಾವೇನು ಕಡಿಮೆ ಇಲ್ಲ ಎಂಬಂತೆ, ಇಂಟರ್‌ನ್ಯಾಷನಲ್‌ ಶೋನಲ್ಲಿ ಭಾಗವಹಿಸಿದ್ದು, ಜಾಗತೀಕ ಮಟ್ಟದಲ್ಲಿ ಮತ್ತೊಮ್ಮೆ ಭಾರತವೂ ಫ್ಯಾಷನ್‌ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿತು ಎನ್ನುತ್ತಾರೆ ಫ್ಯಾಷನ್ ವಿಮರ್ಶಕರಾದ ಮಿಂಚು.

Paris Fashion Week

500 ಅಡಿ ಉದ್ದದ ಡ್ರೆಸ್‌ ಟೇಲ್‌

ತಮ್ಮ ಆಲ್ಬಂನ ಪ್ರಮೋಷನ್‌ ಮಾಡಲು ವಿದೇಶಿ ಸ್ಟಾರ್‌ ಕೆಟಿ ಪೆರಿ ಆಯ್ಕೆ ಮಾಡಿಕೊಂಡದ್ದು ತಾನು ಧರಿಸಿದ ಮಿನಿ ವೆಲ್ವೆಟ್‌ ರೆಡ್‌ ಡ್ರೆಸ್‌. ಅದರ ಬಾಲದಂತಿರುವ ಟೇಲ್‌ ನ 500 ಅಡಿ ಉದ್ದದ ಡಿಸೈನ್‌ನಲ್ಲಿ ಹಾಡಿನ ಸಾಲುಗಳನ್ನು ಪ್ರಿಂಟ್‌ ಮಾಡಲಾಗಿತ್ತು. ಈ ಔಟ್‌ಫಿಟ್‌ನ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುವುದರೊಂದಿಗೆ ಹೀಗೂ ಉಂಟಾ ಎಂದೆನಿತು! ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕ ಜಾನ್‌.

Paris Fashion Week

ಜಡೆ ಸೂಟ್‌ನ ಟೈ ಆದಾಗ

ಇನ್ನು, ನಟಿ ಸಲ್ಮಾ ಬ್ಲೈರ್‌ ತಾವು ಧರಿಸಿದ್ದ ಸೂಟ್‌ಗೆ ಟೈ ಧರಿಸುವ ಬದಲು ಆರ್ಟಿಫಿಶಿಯಲ್‌ ಹೇರ್‌ನ ಟೈ ಧರಿಸಿದ್ದು ಎಲ್ಲರ ಹುಬ್ಬೇರಿಸಿತು. ಒಟ್ಟಾರೆ, ಡಿಯೋರ್‌ ಬ್ರಾಂಡ್‌ನಿಂದಿಡಿದು ಶಾಪೊರೆಲಿಯಂತಹ ನಾನಾ ಹೈ ಫ್ಯಾಷನ್‌ ಬ್ರಾಂಡ್‌ಗಳು ಈ ಫ್ಯಾಷನ್‌ ವೀಕ್‌ನಲ್ಲಿ ಭಾಗವಹಿಸಿ, ಮುಂಬರುವ ಡಿಸೈನರ್‌ವೇರ್‌ಗಳ ಪ್ರದರ್ಶನ ಮಾಡಿದವು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Paris Fashion Week: ಪ್ಯಾರಿಸ್‌ ಹಾಟ್‌ ಕೌಚರ್‌ ಫ್ಯಾಷನ್‌ ವೀಕ್‌ನಲ್ಲಿ ಮೊದಲ ಬಾರಿ ಹೆಜ್ಜೆ ಹಾಕಿದ ಜಾನ್ವಿ ಕಪೂರ್‌!

Continue Reading

ಆರೋಗ್ಯ

Health Tips Kannada: ಕುಂಬಳಕಾಯಿ ಬೀಜದಲ್ಲಿದೆ ನಮ್ಮ ಆರೋಗ್ಯದ ಗುಟ್ಟು!

Health Tips Kannada: ʻಅಲ್ಲೇನಿದೆ? ಕುಂಬಳಕಾಯಿ!ʼ ಎಂದು ಸಸಾರ ಮಾಡುವಂತಿಲ್ಲ ಈ ತರಕಾರಿಯನ್ನು. ಕುಂಬಳಕಾಯಿಯ ಸತ್ವಗಳ ಬಗ್ಗೆ ತಿಳಿದರೆ, ಆಡಿಕೊಳ್ಳುವ ಬಾಯಿಗಳೆಲ್ಲ ಮುಚ್ಚಿಕೊಳ್ಳಬಹುದು. ಇಡೀ ಕುಂಬಳಕಾಯಿ ಬಿಡಿ, ಅದರ ಬೀಜಗಳ ಮಹಾತ್ಮೆಯನ್ನು ತಿಳಿದುಕೊಂಡರೂ ಸಾಕು ಎಷ್ಟೊಂದು ಆರೋಗ್ಯಕರ ಲಾಭಗಳನ್ನು ಪಡೆಯಬಹುದು ಗೊತ್ತೇ? ಹೆಚ್ಚಿನ ಮಾಹಿತಿ ಈ ಲೇಖನದಲ್ಲಿದೆ.

VISTARANEWS.COM


on

Health Tips Kannada
Koo

ಕುಂಬಳಕಾಯಿ ಎನ್ನುತ್ತಿದ್ದಂತೆ (Health Tips Kannada) ಹೆಗಲು ಮುಟ್ಟಿಕೊಳ್ಳುವ ವಿಷಯ ಅಲ್ಲವಿದು. ಕುಂಬಳಬೀಜದ ವಿಷಯ ನಾವಿಲ್ಲಿ ಮಾತಾಡುತ್ತಿರುವುದು. ʻಅಲ್ಲೇನಿದೆ. ಬರೀ ಕುಂಬಳಕಾಯಿʼ ಎನ್ನುವಂಥ ಮಾತುಗಳಿಂದ ಅದೊಂದು ಕೇವಲವಾದ ವಸ್ತು ಎನ್ನುವಂಥ ಭಾವ ಮೂಡುತ್ತದೆ. ಆದರೆ ಕುಂಬಳಕಾಯಿಯ ಸತ್ವಗಳ ಬಗ್ಗೆ ತಿಳಿದರೆ, ಆಡಿಕೊಳ್ಳುವ ಬಾಯಿಗಳೆಲ್ಲ ಮುಚ್ಚಿಕೊಳ್ಳಬಹುದು. ಇಡೀ ಕುಂಬಳಕಾಯಿ ಬಿಡಿ, ಅದರ ಬೀಜಗಳ ಮಹಾತ್ಮೆಯನ್ನು ತಿಳಿದುಕೊಂಡರೂ ಸಾಕು. ನಾವಿಂದು ಮಾಡುವುದಕ್ಕೆ ಹೊರಟಿರುವುದು ಅದನ್ನೇ… ಕುಂಬಳ ಬೀಜಗಳ ಸದ್ಗುಣಗಳನ್ನು ತಿಳಿಯಲು. ಹಲವು ಸಮಸ್ಯೆಗಳಿಗೆ ಸರಳ ಸಮಾಧಾನದಂತೆ ಈ ಪುಟ್ಟ ಬೀಜಗಳು ಕಂಡುಬರುತ್ತವೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ಹಿಡಿದು, ಹೃದಯದ ಆರೋಗ್ಯ ಸುಧಾರಿಸುವವರೆಗೆ ಹಲವು ರೀತಿಯಲ್ಲಿ ಕುಂಬಳಬೀಜ ನಮಗೆ ಉಪಕಾರಿಯಾಗಬಲ್ಲದು. ಹಲವು ರೀತಿಯ ಖನಿಜಗಳು ಮತ್ತು ವಿಟಮಿನ್‌ಗಳಿಂದ ಸಮೃದ್ಧವಾಗಿರುವ ಈ ಜೀವಗಳು, ಹಸಿವಾದಾಗ ಅಥವಾ ಕಳ್ಳ ಹಸಿವೆಯನ್ನು ನಿವಾರಿಸುವುದನ್ನು ಸುಮ್ಮನೆ ಬಾಯಾಡುವುದಕ್ಕೆ ಜೊತೆಯಾಗುತ್ತವೆ. ಇದನ್ನು ಗೋಡಂಬಿಯಂತೆ ಹಲವು ಖಾದ್ಯಗಳಿಗೆ ಬಳಸಬಹುದು. ಚಿಟಿಕೆ ಉಪ್ಪಿನೊಂದಿಗೆ ಹುರಿದರೆ, ಚಹಾ ಜೊತೆಗೆ ಬಾಯಿಗೆಸೆದುಕೊಳ್ಳಬಹುದು.

Immunity Against Diseases Kantola Benefits

ಪ್ರತಿರೋಧಕತೆ ಹೆಚ್ಚಳ

ವಿಟಮಿನ್‌ ಇ ಮತ್ತು ಜಿಂಕ್‌ ಸತ್ವಗಳಿಂದ ಸಮೃದ್ಧವಾಗಿರುವ ಈ ಬೀಜಗಳು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಲ್ಲವು. ಸೋಂಕುಗಳ ವಿರುದ್ಧ ಹೋರಾಡುವಂಥ ಸಾಮರ್ಥ್ಯ ವಿಟಮಿನ್‌ ಇ ಗಿದೆ. ದೇಹದಲ್ಲಿ ಅಂಡಲೆಯುವ ಮುಕ್ತ ಕಣಗಳನ್ನು ಕಟ್ಟಿಹಾಕುವ ಸಾಧ್ಯತೆಯೂ ಇ ಜೀವಸತ್ವಕ್ಕಿದೆ. ಪ್ರತಿರೋಧಕ ಶಕ್ತಿಯನ್ನು ಜಾಗೃತಗೊಳಿಸುವ ಬಗ್ಗೆ ಸತುವಿನ ಕಾರ್ಯಸಾಮರ್ಥ್ಯ ಕಡಿಮೆಯೇನಿಲ್ಲ. ಹಾಗಾಗಿ ಮಳೆಗಾಲದ ಸೋಂಕುಗಳನ್ನು ಮಟ್ಟ ಹಾಕುವುದಕ್ಕೆ ಉಳಿದೆಲ್ಲ ಕ್ರಮಗಳ ಜೊತೆಗೆ ಕುಂಬಳಬೀಜ ಬಾಯಾಡಿಸುವುದನ್ನು ಮರೆಯಬೇಡಿ.

Vastu Tips

ನಿದ್ದೆ ಹೆಚ್ಚಳ

ಕುಂಬಳಬೀಜದಲ್ಲಿ ಟ್ರಿಪ್ಟೊಫ್ಯಾನ್‌ ಎಂಬ ಅಮೈನೊ ಆಮ್ಲವಿದೆ. ಇದು ಸೆರೊಟೋನಿನ್‌ ಮತ್ತು ಮೆಲಟೋನಿನ್‌ನಂಥ ಹ್ಯಾಪಿ ಹಾರ್ಮೋನುಗಳ ಉತ್ಪಾದನೆಗೆ ಪ್ರಚೋದನೆ ನೀಡುತ್ತದೆ. ಈ ಹಾರ್ಮೋನುಗಳು ನಮ್ಮ ಮೂಡ್‌ ಮತ್ತು ನಿದ್ದೆಯನ್ನು ನಿಯಂತ್ರಿಸುತ್ತವೆ. ಹಾಗಾಗಿ ನಿದ್ರಾಹೀನತೆಯನ್ನು ದೂರ ಮಾಡಿ, ಕಣ್ತುಂಬಾ ನಿದ್ದೆ ತರಿಸಿ, ದೇಹ-ಮನಸ್ಸುಗಳ ಆರೋಗ್ಯವನ್ನು ಕಾಪಾಡುವಲ್ಲಿ ಈ ಕಿರುಬೀಜಗಳದ್ದು ದೊಡ್ಡ ಕಾಣಿಕೆ.

ಉತ್ಕರ್ಷಣ ನಿರೋಧಕತೆ

ಇದರಲ್ಲಿ ವಿಟಮಿನ್‌ ಇ ಮಾತ್ರವಲ್ಲ, ದೊಡ್ಡ ಪ್ರಮಾಣದಲ್ಲಿ ಕೆರೊಟಿನಾಯ್ಡ್‌ಗಳೂ ಇವೆ. ಇವೆಲ್ಲ ದೇಹವನ್ನು ಉರಿಯೂತದಿಂದ ಕಾಪಾಡುವ ಗುಣವನ್ನು ಹೊಂದಿವೆ. ದೇಹದ ಕೋಶಗಳನ್ನು ಮುಕ್ತಕಣಗಳಿಂದ ಕಾಪಾಡಿ, ಅವುಗಳ ಜೀವಿತಾವಧಿಯನ್ನು ಹೆಚ್ಚಿಸುತ್ತವೆ. ಇದರಿಂದ ದಾಂಗುಡಿಯಿಡುವ ಮಾರಕ ರೋಗಗಳನ್ನು ದೂರ ಮಾಡುವುದಕ್ಕೆ ಸಾಧ್ಯವಾಗುತ್ತದೆ.

healthy internal organs of human digestive system

ಜೀರ್ಣಕಾರಿ

ಇದರಲ್ಲಿರುವ ನಾರಿನಂಶದಿಂದಾಗಿ ಜೀರ್ಣಾಂಗಗಳ ಆರೋಗ್ಯ ಸುಧಾರಿಸುತ್ತದೆ. ಮಲಬದ್ಧತೆಯನ್ನು ನಿವಾರಿಸಿ, ಪಚನಕ್ರಿಯೆಯನ್ನು ಚುರುಕಾಗಿಸುತ್ತದೆ. ನಾರುಯುಕ್ತ ಆಹಾರಗಳು ಜೀರ್ಣಾಂಗಗಳ ಆರೋಗ್ಯಕ್ಕೆ ಮಾತ್ರವಲ್ಲ, ತೂಕ ಇಳಿಕೆಗೂ ಸೂಕ್ತವಾದವು. ಇಂಥ ಆಹಾರಗಳು ಬೇಗನೇ ಹೊಟ್ಟೆ ತುಂಬಿದ ಅನುಭವವನ್ನು ನೀಡಿ, ಬೇಗ ಹಸಿವಾಗದಂತೆ ತಡೆಯುತ್ತವೆ.

ಮೆಗ್ನೀಶಿಯಂ ವಿಫುಲ

ದೇಹದ ಹಲವು ಕೆಲಸಗಳನ್ನು ನಿರ್ವಹಿಸುವುದಕ್ಕೆ ನಮಗೆ ಮೆಗ್ನೀಶಿಯಂ ಅಗತ್ಯವಾದ ಖನಿಜ. ರಕ್ತದೊತ್ತಡ ಸಮತೋಲನದಲ್ಲಿ ಇರಿಸುವುದು, ಸ್ನಾಯು ಮತ್ತು ನರಗಳ ಆರೋಗ್ಯ ರಕ್ಷಣೆ, ಮೂಳೆಗಳನ್ನು ಭದ್ರಗೊಳಿಸುವುದು ಮತ್ತು ದೇಹಕ್ಕೆ ಬೇಕಾದ ಶಕ್ತಿ ಒದಗಿಸುವಂಥ ಹಲವು ಕೆಲಸಗಳು ಈ ಖನಿಜದ ಪಾಲಿಗಿದೆ. ಜೊತೆಗೆ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ, ಬದುಕಿನ ಸ್ವಾಸ್ಥ್ಯ ಹೆಚ್ಚಿಸುವುದಕ್ಕೆ ಮೆಗ್ನೀಶಿಯಂ ಬೇಕು. ಈ ಖನಿಜ ಕುಂಬಳ ಬೀಜದಲ್ಲಿ ಹೇರಳವಾಗಿದೆ.

Obese male suffering from chest pain high blood pressure cholesterol level Sesame Benefits

ಕೊಲೆಸ್ಟ್ರಾಲ್‌ ಕಡಿಮೆ

ಕುಂಬಳಕಾಯಿ ಬೀಜಗಳಲ್ಲಿ ಆರೋಗ್ಯಯುತ ಕೊಬ್ಬು ಮತ್ತು ಪ್ರೊಟೀನ್‌ಗಳು ತುಂಬಿವೆ. ಆರೋಗ್ಯಕರ ಕೊಬ್ಬಿನ ಸೇವನೆಯಿಂದ ದೇಹದಲ್ಲಿರುವ ಕೊಲೆಸ್ಟ್ರಾಲ್‌ನಂಥ ಬೇಡದ ಕೊಬ್ಬು ಜಮೆಯಾಗುವುದನ್ನು ತಡೆಯಬಹುದು. ಇದರಿಂದ ಹೃದಯದ ತೊಂದರೆಗಳನ್ನೂ ದೂರ ಇರಿಸಬಹುದು. ಹಾಗಾಗಿ ಸುಮ್ಮನೆ ತಿನ್ನಿ, ಹುರಿದು ತಿನ್ನಿ, ಟೋಸ್ಟ್‌ ಮಾಡಿ ತಿನ್ನಿ, ಬೇರೆ ಖಾದ್ಯಗಳಿಗೆ ಬಳಸಿ- ಹೇಗಾದರೂ ಸರಿ, ಕುಂಬಳ ಬೀಜವನ್ನು ನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳಿ, ಆರೋಗ್ಯ ಹೆಚ್ಚಿಸಿಕೊಳ್ಳಿ.

Continue Reading

ಆರೋಗ್ಯ

Fatty Lever Disease: ಎಚ್ಚರ ವಹಿಸಿ, ಮಕ್ಕಳನ್ನು ಸದ್ದಿಲ್ಲದೆ ಕಾಡುತ್ತಿದೆ ಫ್ಯಾಟಿ ಲಿವರ್‌ ಕಾಯಿಲೆ!

Fatty lever disease: ಮಕ್ಕಳ ಆಟವೆಂದರೆ ಏನೂ ಆದೀತು. ಕುಂಟಾಬಿಲ್ಲೆಯಿಂದ ಹಿಡಿದು, ಕಣ್ಣಾಮುಚ್ಚಾಲೆ, ಗಾಳಿಪಟ, ಮರಕೋತಿ, ಜೂಟಾಟ, ಜೋಕಾಲಿ… ಪಟ್ಟಿ ಉದ್ದವಾಗುತ್ತದೆ. ಆದರೆ ಈ ಯಾವ ಆಟಗಳೂ ಈಗಿನ ಮಕ್ಕಳಿಗಲ್ಲ, ಹಳೆಯ ಕಾಲದ ಚಿಣ್ಣರಿಗೆ. ಈಗಿನ ಮಕ್ಕಳ ಆಟದ ಪಟ್ಟಿಯನ್ನು ಕೊಡುವುದಾದರೆ ಫ್ರೀಫಯರ್‌, ಪಬ್‌ಜೀ, ಸಬ್‌ವೇ ಸರ್ಫರ್‌, ಕ್ಯಾಂಡಿ ಕ್ರಷ್…‌ ಇಂಥವೇ ಇರುತ್ತವೆ ಅದರಲ್ಲಿ. ಸದಾ ಕಾಲ ಪರದೆಗೇ ಅಂಟಿಕೊಂಡಿರುವ ಈ ಮಕ್ಕಳಲ್ಲಿ ಹೊರಗಿನ ಆಟ ಲುಪ್ತವಾದ್ದರಿಂದ ಆಗುತ್ತಿರುವ ಸಮಸ್ಯೆಗಳು ಒಂದೆರಡೇ ಅಲ್ಲ. ಕೇವಲ ದೃಷ್ಟಿದೋಷವನ್ನು ಮಾತ್ರವೇ ಪರದೆಯ ವ್ಯಸನ ನೀಡುತ್ತಿಲ್ಲ, ಜೊತೆಗೆ ಫ್ಯಾಟಿ ಲಿವರ್‌ನಂಥ ಗಂಭೀರವಾದ ಯಕೃತ್ತಿನ ಸಮಸ್ಯೆಗಳನ್ನು ಸಹ ನೀಡುತ್ತವೆ.

VISTARANEWS.COM


on

Fatty Lever Disease
Koo

ಟಿ ಲಿವರ್‌ ಸಮಸ್ಯೆ ಕೇವಲ (Fatty lever disease) ವಯಸ್ಕರಿಗೆ ಎಂದು ಭಾವಿಸಬೇಡಿ, ಮಕ್ಕಳಲ್ಲೂ ವ್ಯಾಪಕವಾಗುತ್ತಿದೆ ಎಂದು ಅಧ್ಯಯನಗಳು ಎಚ್ಚರಿಸುತ್ತಿವೆ. ದೋಷಪೂರಿತ ಆಹಾರಶೈಲಿಯ ಜೊತೆಗೆ ಆಟ, ಓಟಗಳೂ ಮಕ್ಕಳಲ್ಲಿ ಕಾಣೆಯಾಗಿರುವುದು ಆತಂಕವನ್ನು ಹೆಚ್ಚಿಸುತ್ತಿದೆ. ಮಕ್ಕಳ ಆಟವೆಂದರೆ ಏನೂ ಆದೀತು. ಕುಂಟಾಬಿಲ್ಲೆಯಿಂದ ಹಿಡಿದು, ಕಣ್ಣಾಮುಚ್ಚಾಲೆ, ಗಾಳಿಪಟ, ಮರಕೋತಿ, ಜೂಟಾಟ, ಜೋಕಾಲಿ… ಪಟ್ಟಿ ಉದ್ದವಾಗುತ್ತದೆ. ಆದರೆ ಈ ಯಾವ ಆಟಗಳೂ ಈಗಿನ ಮಕ್ಕಳಿಗಲ್ಲ, ಹಳೆಯ ಕಾಲದ ಚಿಣ್ಣರಿಗೆ. ಈಗಿನ ಮಕ್ಕಳ ಆಟದ ಪಟ್ಟಿಯನ್ನು ಕೊಡುವುದಾದರೆ ಫ್ರೀಫಯರ್‌, ಪಬ್‌ಜೀ, ಸಬ್‌ವೇ ಸರ್ಫರ್‌, ಕ್ಯಾಂಡಿ ಕ್ರಷ್…‌ ಇಂಥವೇ ಇರುತ್ತವೆ ಅದರಲ್ಲಿ. ಸದಾ ಕಾಲ ಪರದೆಗೇ ಅಂಟಿಕೊಂಡಿರುವ ಈ ಮಕ್ಕಳಲ್ಲಿ ಹೊರಗಿನ ಆಟ ಲುಪ್ತವಾದ್ದರಿಂದ ಆಗುತ್ತಿರುವ ಸಮಸ್ಯೆಗಳು ಒಂದೆರಡೇ ಅಲ್ಲ. ಕೇವಲ ದೃಷ್ಟಿದೋಷವನ್ನು ಮಾತ್ರವೇ ಪರದೆಯ ವ್ಯಸನ ನೀಡುತ್ತಿಲ್ಲ, ಜೊತೆಗೆ ಫ್ಯಾಟಿ ಲಿವರ್‌ನಂಥ ಗಂಭೀರವಾದ ಯಕೃತ್ತಿನ ಸಮಸ್ಯೆಗಳನ್ನು ಸಹ ನೀಡುತ್ತವೆ. ಅದರಲ್ಲೂ ಭಾರತದಲ್ಲಿ ಪ್ರತಿ ಮೂರನೇ ಮಗುವಿಗೆ ಯಕೃತ್ತಿನ ಕೊಬ್ಬು ಕಾಡುತ್ತಿದೆ ಎನ್ನುವುದು ಇತ್ತೀಚಿನ ಅಧ್ಯಯನಗಳ ಸಾರ.

Fatty Lever

ವಿವರಗಳು ಇಂತಿವೆ

ದಿನಕ್ಕೆ ಆರು ತಾಸುಗಳ ದೈಹಿಕ ಚಟುವಟಿಕೆಯನ್ನು ಮಾಡದ ಮಕ್ಕಳು ಯಕೃತ್ತಿನ ಸಮಸ್ಯೆಗೆ ಒಳಗಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ದೈಹಿಕ ಚಟುವಟಿಕೆಯೆಂದರೆ ಯಾವುದೋ ಕ್ರಮಬದ್ಧವಾದ ಆಟವನ್ನೇ ಮಕ್ಕಳು ಆಡಬೇಕೆಂದಿಲ್ಲ. ಕಳೆಯ ಕಾಲದ ಕುಂಟಾಬಿಲ್ಲೆ, ಜೂಟಾಟಗಳಿಂದ ಹಿಡಿದು ಯಾವುದೇ ರೀತಿಯ ಆಡುವ, ಓಡುವ, ಕುಣಿದು ಕುಪ್ಪಳಿಸುವ ಚಟುವಟಿಕೆಯೂ ಮಕ್ಕಳನ್ನು ಆರೋಗ್ಯಪೂರ್ಣವಾಗಿ ಇರಿಸುತ್ತದೆ. ಇಂಥ ಯಾವುದೇ ಚಟುವಟಿಕೆಗಳು ಮಕ್ಕಳಲ್ಲಿ ಫ್ಯಾಟಿ ಲಿವರ್‌ ಬಾರದಂತೆ ತಡೆಯುವಲ್ಲಿ ಶೇ. 33ರಷ್ಟು ಯಶಸ್ವಿಯಾಗುತ್ತವೆ ಎನ್ನುತ್ತವೆ ಕ್ಲಿನಿಕಲ್‌ ಮತ್ತು ಪ್ರಾಯೋಗಿಕ ಹೆಪಟಾಲಜಿ ವಿಭಾಗದ ಅಧ್ಯಯನಗಳು.

ಮುಂಚೂಣಿಯಲ್ಲಿ ಭಾರತ

ಮಧುಮೇಹ ಮತ್ತು ಬೊಜ್ಜಿನ ಸಮಸ್ಯೆಯ ನಂತರದ ಸ್ಥಾನವನ್ನು ಫ್ಯಾಟಿ ಲಿವರ್‌ ಆಕ್ರಮಿಸಿದೆ. ಈ ನಿಟ್ಟಿನಲ್ಲಿ ಯಕೃತ್ತಿನ ಕೊಬ್ಬನ್ನು ಹೊತ್ತ ಅತಿಹೆಚ್ಚು ಜನರನ್ನು ಹೊಂದಿರುವ ದೇಶವಾಗಿ ಭಾರತ ಹೊರಹೊಮ್ಮಲು ಸಿದ್ಧತೆ ನಡೆಸಿದೆ. ಅಂದರೆ, ಸುಮಾರು ೫೦ ಕೋಟಿ ಜನಕ್ಕೆ ಯಕೃತ್‌ನ ತೊಂದರೆ ಕಾಡುತ್ತಿದೆ. ಪ್ರತಿ ಮೂರನೇ ಮಗು ಯಕೃತ್ತಿನ ತೊಂದರೆಗೆ ತುತ್ತಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಗುಜರಿ ತಿನಿಸುಗಳು, ಜಿಡ್ಡುಭರಿತ ಆಹಾರದ ಸೇವನೆ ಮಿತಿಮೀರಿ ಹೆಚ್ಚಿದೆ. ಹಾಗೆ ತಿಂದ ಮೇಲೆ ಅದನ್ನು ಕರಗಿಸಲು ವ್ಯಾಯಾಮ ಮಾಡಿ ಶಕ್ತಿ ವ್ಯಯಿಸುವ ಬದಲು, ಜೀರ್ಣಾಂಗಗಳೇ ಚೂರ್ಣಿಸುವ ಕೆಲಸವನ್ನು ಮಾಡಬೇಕೆಂದು ಅಪೇಕ್ಷಿಸುತ್ತೇವೆ. ಇಂಥ ಸಂದರ್ಭಗಳಲ್ಲಿ ಯಕೃತ್ತಿನಲ್ಲಿ ಕೊಬ್ಬು ಶೇಖರವಾಗತೊಡಗುತ್ತದೆ. ಇದು ಮಕ್ಕಳು-ವಯಸ್ಕರೆನ್ನದೆ ಎಲ್ಲರನ್ನೂ ಕಾಡುತ್ತಿದೆ. ಇದರಿಂದಾಗಿ ಅಲ್ಕೋಹಾಲ್‌ನಿಂದಾಗುವ ಫ್ಯಾಟಿ ಲಿವರ್‌ಗಿಂತಲೂ ಹೆಚ್ಚು ಅಲ್ಕೋಹಾಲ್‌ ಜನ್ಯವಲ್ಲದ ಫ್ಯಾಟಿಲಿವರ್‌ ಸಮಸ್ಯೆ ಕಂಡುಬರುತ್ತಿದೆ. ಇದಕ್ಕೆ ಮುಖ್ಯ ಕಾರಣಗಳು ಹಲವಿವೆ. ದೈಹಿಕ ಚಟುವಟಿಕೆ ಕ್ಷೀಣವಾಗಿರುವುದು ಎಲ್ಲಕ್ಕಿಂತ ಮು‍ಖ್ಯವಾಗಿದ್ದು. ಜೊತೆಗೆ, ಕರಿದ ತಿಂಡಿಗಳು, ಮಸಾಲೆ ಭರಿತ ಜಿಡ್ಡಿನ ಆಹಾರಗಳು, ಗುಜರಿ ತಿನಿಸುಗಳು, ಸಂಸ್ಕರಿತ ಸಕ್ಕರೆಯ ಪದಾರ್ಥಗಳ ಸೇವನೆ ಎಲ್ಲ ವಯೋಮಾನದವರಲ್ಲೂ ಹೆಚ್ಚಿದೆ. ಇದರಿಂದ ಯಕೃತ್ತಿನ ಸಮಸ್ಯೆ ಮಾತ್ರವಲ್ಲದೆ, ಕೊಲೆಸ್ಟ್ರಾಲ್‌, ಬೊಜ್ಜು, ಮಧುಮೇಹ, ಥೈರಾಯ್ಡ್‌ ಏರುಪೇರು, ಅಜೀರ್ಣ, ನಿದ್ರಾಹೀನತೆಯಂಥ ತೊಂದರೆಗಳು ಗಂಟು ಬೀಳುತ್ತವೆ.

ಇದನ್ನೂ ಓದಿ: Constipation Problem: ಮಲಬದ್ಧತೆಯ ಸಮಸ್ಯೆಯೇ? ಸರಳ ಪರಿಹಾರಗಳು ಇಲ್ಲಿವೆ!

ಬದಲಾವಣೆ ಅಗತ್ಯ

ನಿಯಮಿತವಾದ ವ್ಯಾಯಾಮ, ಸಂತುಲಿತ ಆಹಾರ, ಅಲ್ಕೋಹಾಲ್‌ ಮತ್ತು ಸಂಸ್ಕರಿತ ಆಹಾರಗಳ ಸೇವನೆಯಿಂದ ದೂರ ಇರುವುದು ಮುಂತಾದ ಕೆಲವು ಸರಳ ಬದಲಾವಣೆಗಳಿಂದ ನಮ್ಮ ಯಕೃತ್ತನ್ನು ಕ್ಷೇಮವಾಗಿ ಕಾಪಾಡಿಕೊಂಡು, ರೋಗಮುಕ್ತರಾಗಿ ಬದುಕುವುದಕ್ಕೆ ಸಾಧ್ಯವಿದೆ. ಆಹಾರದಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿಕೊಳ್ಳುವುದರಿಂದ ಯಕೃತ್ತಿನ ಆರೋಗ್ಯ ಗಣನೀಯ ಪ್ರಮಾಣದಲ್ಲಿ ಸುಧಾರಿಸಬಲ್ಲದು. ಇವುಗಳ ಜೊತೆಗೆ ದಿನಕ್ಕೆ 30 ನಿಮಿಷಗಳ ದೈಹಿಕ ಚಟುವಟಿಕೆ ಕಡ್ಡಾಯವಾಗಿಬೇಕು.

Green tea

ಗ್ರೀನ್‌ ಟೀ

ಹಲವು ರೀತಿಯ ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ಈ ಪೇಯ, ದೇಹದಲ್ಲಿ ಉರಿಯೂತ ಶಮನ ಮಾಡಬಲ್ಲದು. ಇದರಿಂದ ಯಕೃತ್ತಿನ ಆರೋಗ್ಯವೂ ಸುಧಾರಿಸುತ್ತದೆ.

Green vegetables

ಹಸಿರು ತರಕಾರಿಗಳು

ಎಲೆಕೋಸು, ಹೂಕೋಸು, ಬ್ರೊಕೊಲಿಯಂಥ ತರಕಾರಿಗಳು ಸಹ ಪಿತ್ತಜನಕಾಂಗದ ಆರೋಗ್ಯ ರಕ್ಷಣೆಗೆ ನೆರವಾಗಬಲ್ಲವು.

Seeds Assortment

ಬೀಜಗಳು

ಆರೋಗ್ಯಕರ ಕೊಬ್ಬು ಮತ್ತು ಉತ್ಕರ್ಷಣ ನಿರೋಧಕಗಳಿಂದ ತುಂಬಿರುವ ಬಾದಾಮಿ, ವಾಲ್‌ನಟ್‌ ಮುಂತಾದ ಬೀಜಗಳು ಲಿವರ್‌ನ ಕ್ಷಮತೆಯನ್ನು ಹೆಚ್ಚಿಸಬಲ್ಲವು

Garlic cloves

ಬೆಳ್ಳುಳ್ಳಿ

ಪಿತ್ತಜನಕಾಂಗದ ಉರಿಯೂತವನ್ನು ಕಡಿಮೆ ಮಾಡಿ, ಉತ್ಕರ್ಷಣ ನಿರೋಧಕವಾಗಿಯೂ ಬೆಳ್ಳುಳ್ಳಿ ಕೆಲಸ ಮಾಡಬಲ್ಲದು.

Berries

ಬೆರ್ರಿಗಳು

ಬ್ಲೂಬೆರ್ರಿ, ಸ್ಟ್ರಾಬೆರ್ರಿಯಂಥವು ದೇಹಕ್ಕೆ ಹೆಚ್ಚಿನ ನಾರಿನಂಶದೊಂದಿಗೆ ಪಿತ್ತಜನಕಾಂಗದ ರಕ್ಷಣೆಗೆ ಅಗತ್ಯ ಸತ್ವಗಳನ್ನು ನೀಡಬಲ್ಲವು.

Continue Reading
Advertisement
Weight Loss Tips
ಆರೋಗ್ಯ2 mins ago

Weight Loss Tips: ನಲವತ್ತರ ನಂತರ ತೂಕ ಇಳಿಸುವುದು ಹೇಗೆ?

Nadaprabhu Kempegowda
ಬೆಂಗಳೂರು8 mins ago

Essay on Kempegowda in Kannada: ನಾಡಪ್ರಭು ಕೆಂಪೇಗೌಡರು ಆಧುನಿಕ ಬೆಂಗಳೂರಿನ ಮೂಲ ಶಿಲ್ಪಿ!

Nitin Gadkari
ದೇಶ42 mins ago

Nitin Gadkari: ಜಿಪಿಎಸ್‌ ತಂತ್ರಜ್ಞಾನದಿಂದ ಹೆದ್ದಾರಿ ಪ್ರಾಧಿಕಾರಕ್ಕೆ ಬಂಪರ್;‌ 10 ಸಾವಿರ ಕೋಟಿ ರೂ. ಆದಾಯ!

Paris Fashion Week
ಫ್ಯಾಷನ್54 mins ago

Paris Fashion Week: ಪ್ಯಾರಿಸ್‌ ಹಾಟ್‌ ಕೌಚರ್‌ ಫ್ಯಾಷನ್‌ ವೀಕ್ 2024ರ ಹೈಲೈಟ್ಸ್

Anant Ambani
ದೇಶ58 mins ago

Anant Ambani Video: ಮಹಾರಾಷ್ಟ್ರ ಸಿಎಂ ಹೆಗಲ ಮೇಲೆ ಕೈ ಹಾಕಿದ ಅಂಬಾನಿ ಮಗ! ನೀವೇನಂತೀರಿ?

Viral Video
Latest1 hour ago

Viral Video: ಜಿಮ್‌ಗೆ ಹೋಗುವವರೇ ಹುಷಾರ್‌! ಈ ವಿಡಿಯೊ ನೋಡಿ!

Acharya Pramod Krishnam
ದೇಶ2 hours ago

ಕಾಂಗ್ರೆಸ್‌ನಂತೆ 15 ತಿಂಗಳಲ್ಲಿ ಪ್ರತಿಪಕ್ಷಗಳೂ ರಾಹುಲ್‌ ಗಾಂಧಿಯಿಂದ ನಿರ್ನಾಮ; ಆಚಾರ್ಯ ಪ್ರಮೋದ್‌ ಸ್ಫೋಟಕ ಹೇಳಿಕೆ!

Viral Video
Latest2 hours ago

Viral Video: ಬಾಗಿಲ ಬಳಿ ಇದ್ದ ಆಹಾರ ಪ್ಯಾಕೆಟ್‌ ಕದ್ದೊಯ್ದ ಜೊಮ್ಯಾಟೊ ಡೆಲಿವರಿ ಬಾಯ್‌!

Rohit Sharma
ಕ್ರೀಡೆ2 hours ago

Rohit Sharma: ವಿಶ್ವ ದಾಖಲೆ ಮೇಲೆ ಕಣ್ಣಿಟ್ಟ ಹಿಟ್​ಮ್ಯಾನ್​ ರೋಹಿತ್​; ಲಂಕಾ ಆಟಗಾರನಿಗೆ ನಡುಕ

Viral Video
Latest2 hours ago

Viral Video: ಪ್ರೇಯಸಿ ಹೆಜ್ಜೆ ಇರಿಸಲು ಕಂತೆಕಂತೆ ನೋಟಿನ ಮೆಟ್ಟಿಲು! ಪ್ರಿಯತಮನ ಹುಚ್ಚು ಪ್ರೀತಿ ನೋಡಿ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ2 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ5 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ5 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ6 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 weeks ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

ಟ್ರೆಂಡಿಂಗ್‌