Grater Care & Handling Tips: ನಿಮ್ಮ ಮನೆಯ ತುರಿಮಣೆಯನ್ನು ಚುರುಕಾಗಿಸಬೇಕೇ? ಇಲ್ಲಿವೆ ಟಿಪ್ಸ್ - Vistara News

ಲೈಫ್‌ಸ್ಟೈಲ್

Grater Care & Handling Tips: ನಿಮ್ಮ ಮನೆಯ ತುರಿಮಣೆಯನ್ನು ಚುರುಕಾಗಿಸಬೇಕೇ? ಇಲ್ಲಿವೆ ಟಿಪ್ಸ್

ತುರಿಮಣೆ ನಮ್ಮೆಲ್ಲರ ಅಡುಗೆ ಮನೆಗಳಲ್ಲಿ ಇರುವ ಒಂದು ಸರಳ ಸಾಧನ. ಹಾಗಾದರೆ ತುರಿಮಣೆಗಳು (grater care & handling tips) ಸರಿಯಾಗಿ ಇಟ್ಟುಕೊಳ್ಳುವುದು ಹೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ.

VISTARANEWS.COM


on

Grater Care & Handling Tips
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ತುರಿಮಣೆ ನಮ್ಮೆಲ್ಲರ ಅಡುಗೆ ಮನೆಗಳಲ್ಲಿ ಇರುವ ಒಂದು ಸರಳ ಸಾಧನ. ಚೀಸ್‌ನಿಂದ ಹಿಡಿದು ತರಕಾರಿಗಳವರೆಗೆ ಹಲವು ಆಹಾರ ಪದಾರ್ಥಗಳನ್ನು ತುರಿಯುವ ಕ್ರಿಯೆ ಅಡುಗೆಯ ಭಾಗವೂ ಹೌದು. ಹೆಚ್ಚು ಕಡಿಮೆ ನಿತ್ಯವೂ ಬಳಸುವ ಈ ಸಾಧನ ಕೆಲವೊಮ್ಮೆ ಅಂದುಕೊಂಡ ಹಾಗೆ ಕೆಲಸ ಮಾಡುವುದಿಲ್ಲ. ತೊಳೆದಿಟ್ಟ ತುರಿಮಣೆಯ ತೂತುಗಳಲ್ಲಿ ತುಣುಕುಗಳು ಸಿಕ್ಕಿ ಹಾಕಿಕೊಂಡೋ ಏನೋ ತುರಿಮಣೆ ಬಡ್ಡಾಗಿಬಿಡುತ್ತದೆ. ಅಂದುಕೊಂಡ ಹಾಗೆ ವೇಗವಾಗಿ ತುರಿಯಲು ಆಗುವುದಿಲ್ಲ. ಯಾಕೆಂದರೆ, ಅದನ್ನು ಸರಿಯಾಗಿ ಯಾವಾಗಲೂ ಕೆಲಸ ಮಾಡುತ್ತಿರುವಂತೆ ನೋಡಿಕೊಳ್ಳುವುದೂ ಕೂಡಾ ಒಂದು ಕಲೆ. ಹಾಗಾದರೆ ತುರಿಮಣೆಗಳು ಸರಿಯಾಗಿ ಇಟ್ಟುಕೊಳ್ಳುವುದು ಹೇಗೆ ಅಂತೀರಾ? ಇಲ್ಲಿ ಕೇಳಿ.

grater care
  • ನಿಮ್ಮ ತುರಿಮಣೆಯನ್ನು ಬಳಸಿದ ತಕ್ಷಣ ತೊಳೆದಿಡಿ. ಬಹಳ ಹೊತ್ತು ಸಿಂಕ್‌ನಲ್ಲಿ ಹಾಗೆಯೇ ಬಿಡಬೇಡಿ. ಸಣ್ಣ ಪುಟ್ಟ ಕಣಗಳು, ತುರಿದ ವಸ್ತುವಿನ ಉಳಿದ ತುಂಡುಗಳು ತುರಿಮಣೆಯ ತೂತುಗಳ ಮಧ್ಯದಲ್ಲಿ ಸಿಕ್ಕಿಹಾಕಿಕೊಂಡಿರುತ್ತವೆ. ತಕ್ಷಣ ತೊಳೆಯದಿದ್ದರೆ ಅದು ಅಲ್ಲೇ ಗಟ್ಟಿಯಾಗಿ ಬಿಟ್ಟು ಹಾಗೆಯೇ ಉಳಿಯಬಹುದು. ಆಮೇಲೆ ತೊಳೆದರೂ ಸುಲಭವಾಗಿ ಹೋಗದು. ಸ್ವಲ್ಪ ಬಿಸಿ ನೀರಿನಲ್ಲಿ ಅಥವಾ ಜೋರಾಗಿ ಹರಿವ ನೀರಿಗೆ ವಿರುದ್ಧ ದಿಕ್ಕಿನಲ್ಲಿ ಒಡ್ಡಿ ಹಿಡಿಯಬಹುದು. ಅಳಿದುಳಿದ ತುಣುಕುಗಳೂ ರಭಸಕ್ಕೆ ಸಿಕ್ಕಿ ತೊಳೆದು ಹೋಗುತ್ತದೆ.
  • ತುರಿಮಣೆಗಾಗಿಯೇ ಒಂದು ಬ್ರಷ್‌ ಅನ್ನು ತೆಗೆದಿಡಿ. ಈ ಬ್ರಷ್‌ನಿಂದ ಅಥವಾ ಯಾವುದಾದರೂ ಸ್ಪಾಂಜ್‌ ಸಹಾಐದಿಂದ ತುರಿಮಣೆಯನ್ನು ಸ್ವಚ್ಛಗೊಳಿಸಿ. ಉಗುರಿನ ಸಹಾಯದಿಂದ ಅಥವಾ ಕೈಯಲ್ಲೇ ತೊಳೆಯಲು ಹೋಗಬೇಡಿ. ಹರಿತವಾದ ಭಾಗಗಳಿಂದ ಕೈಗೆ ಗಾಯವೂ ಆಗಬಹುದು.
  • ಯಾವಾಗಲೂ ಒಂದೇ ದಿಕ್ಕಿನಿಂದ ತುರಿಯಿರಿ. ಇದರಿಂದ ತೂತಿನೊಳಗೆ ತುರಿದ ಭಾಗಗಳು ಸಿಕ್ಕಿ ಹಾಕುವುದಿಲ್ಲ. ದಿಕ್ಕು ಬದಲಾಯಿಸುತ್ತಿದ್ದರೆ, ತೂತಿನೊಳಗೆ ಸಣ್ಣ ತುಣುಕುಗಳು ಸಿಕ್ಕಿಹಾಕಿಕೊಳ್ಳುತ್ತವೆ.
  • ಪಾತ್ರೆ ತೊಳೆವ ಡಿಟರ್ಜೆಂಟ್‌ ನೀರಿನಲ್ಲಿ ಕೊಂಚ ಹೊತ್ತು ಮುಳುಗಿಸಿಡಿ. ಅದಕ್ಕೆ ಬಿಸಿ ನೀರು ಹಾಕಿ. ಕೂಡಲೇ ತೆಗೆಯಬೇಡಿ. ಕೆಲವು ಗಂಟೆಗಳ ನಂತರ ನಿಮ್ಮ ತುರಿಮಣೆ ಹೊಸತರಂತೆ ಫಳಪಳಿಸುತ್ತದೆ.
  • ಹಲ್ಲುಜ್ಜವ ಬ್ರಷ್‌ ಒಂದನ್ನು ಇದಕ್ಕಾಗಿಯೇ ಇಡಿ. ಹಲ್ಲುಜ್ಜುವ ಬ್ರಷ್‌ ಸಣ್ಣದಾಗಿರುವುದರಿಂದ ಇದು ತುರಿಮಣೆಯ ಸಂದಿಗೊಂದಿಗಳಲ್ಲಿ ಸಿಕ್ಕಿಹಾಕಿಕೊಂಡ ತುಣುಕುಗಳನ್ನೆಲ್ಲ ತೆಗೆದುಹಾಕುತ್ತದೆ. ಒಂದು ಟೂತ್‌ಬ್ರಷ್‌ ಅನ್ನು ಪೂರ್ತಿಯಾಗಿ ಅಡುಗೆ ಕೋಣೆಯ ಕೆಲಸಕ್ಕಾಗಿಯೇ ಮೀಸಲಿಡಿ.
  • ನಿಂಬೆಹಣ್ಣನ್ನು ಬಳಸಬಹುದಾದ ಸಂದರ್ಭಗಳಲ್ಲಿ ಬಳಸಿ. ಇಂತಹ ಸಮಯದಲ್ಲಿ ನಿಂಬೆಹಣ್ಣು ಬಹಳವಾಗಿ ಬಳಕೆಯಾಗುತ್ತದೆ. ಇದರಲ್ಲಿರುವ ಆಸಿಡ್‌ ಅಂಶವು ಪಾತ್ರೆಯೂ ಸೇರಿದಂತೆ ಹಲವು ವಸ್ತುಗಳನ್ನು ಕ್ಲೀನ್‌ ಮಾಡಲು ಬಳಕೆಯಾಗುತ್ತದೆ. ತುರಿಮಣೆಯ ಒಳಗೆ ಸಿಕ್ಕಿ ಹಾಕಿಕೊಂಡ ಕೊಳೆ ತೆಗೆಯಲೂ ಕೂಡಾ ಇದು ಸಹಾಯ ಮಾಡುತ್ತದೆ.
  • ಬೇಕಿಂಗ್‌ ಸೋಡಾಕ್ಕೆ ಕೊಂಚ ನೀರು ಸೇರಿಸಿ ಪೇಸ್ಟ್‌ ಮಾಡಿ ತುರಿಮಣೆಯ ತುರಿದ ಭಾಗಕ್ಕೆ ಹಚ್ಚಿ ಸ್ವಲ್ಪ ಗಂಟೆಗಳ ಕಾಲ ಹಾಗೆಯೇ ಬಿಡಿ. ಇದು ಕೂಡಾ ಅಂಟಿ ಹಿಡಿದ ಕೊಳಕುಗಳನ್ನು ತೆಗೆಯಲು ಸಹಾಯ ಮಾಡುತ್ತದೆ.
  • ಡಿಶ್‌ವಾಶರ್‌ ಮೂಲಕವೂ ತೊಳೆಯಬಹುದು. ಬಹುತೇಕ ಇಂದಿನ ತುರಿಮಣೆಗಳೆಲ್ಲವೂ ಸ್ಟೈನ್‌ಲೆಸ್‌ ಸ್ಟೀಲ್‌ನಲ್ಲಿ ಮಾಡಿರುವುದರಿಂದ ಡಿಶ್‌ವಾಶರ್‌ನಲ್ಲಿ ತೊಳೆಯುವುದಕ್ಕೆ ಏನೂ ಅಡ್ಡಿಯಿಲ್ಲ.
  • ತೊಳೆದ ಮೇಲೆ ಈ ತುರಿಮಣೆಯನ್ನು ಗಾಳಿಯಾಡಲು ಬಿಡಿ. ಕೂಡಲೇ ಒಳಗೆ ಎತ್ತಿಡಬೇಕು. ಇದರಲ್ಲಿ ಸಣ್ಣ ತೂತುಗಳಿರುವುದರಿಂದ ಕೊಂಚ ಹೊತ್ತು ಹಾಗೆಯೇ ಆರಲು ಬಿಡುವುದರಿಂದ ತುರಿಮಣೆ ಸ್ವಚ್ಛವಾಗಿರುತ್ತದೆ.

ಇದನ್ನೂ ಓದಿ: Health Tips for Winter: ಚಳಿಗಾಲದಲ್ಲಿ ನ್ಯುಮೋನಿಯಾ, ಶ್ವಾಸಕೋಶದ ಸಮಸ್ಯೆಗಳಿಂದ ದೂರ ಇರಲು ಹೀಗೆ ಮಾಡಿ…

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Saree Fashion: ಮಹಿಳೆಯರ ಮನಗೆದ್ದ ಕಟ್‌ ವರ್ಕ್ ಬಾರ್ಡರ್‌ ಪಾರ್ಟಿ ಸೀರೆ

ಇದೀಗ ಎಂಬ್ರಾಯ್ಡರಿ, ಸಿಕ್ವೀನ್ಸ್ ಹಾಗೂ ಎಂಬಾಲಿಶ್ಡ್ ಡಿಸೈನ್‌ ಇರುವಂತಹ ಕಟ್‌ ವರ್ಕ್ ಬಾರ್ಡರ್ ಪಾರ್ಟಿ ಸೀರೆಗಳು ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ. ಆಕರ್ಷಕ ಡಿಸೈನ್‌ಗಳಲ್ಲಿ ಎಂಟ್ರಿ ನೀಡಿವೆ. ಏನಿದು ಕಟ್‌ ವರ್ಕ್ ಸೀರೆಗಳು? ಎಂಬುದರ ಬಗ್ಗೆ ಫ್ಯಾಷನಿಸ್ಟ್‌ಗಳು (Saree Fashion) ಇಲ್ಲಿ ಡಿಟೇಲ್ಸ್ ನೀಡಿದ್ದಾರೆ.

VISTARANEWS.COM


on

Saree Fashion
ಚಿತ್ರಗಳು: ಜರೀನ್‌ ಖಾನ್‌, ನಟಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕಟ್‌ ವರ್ಕ್ ಬಾರ್ಡರ್‌ ಪಾರ್ಟಿವೇರ್‌ ಸೀರೆಗಳು (Saree Fashion) ಇದೀಗ ಮಾನಿನಿಯರ ಮನ ಗೆದ್ದಿವೆ. ನೋಡಲು ಆಕರ್ಷಕವಾಗಿ ಕಾಣುವ ಈ ಸೀರೆಗಳು ಪಾರ್ಟಿವೇರ್‌ ಡಿಸೈನರ್‌ ಸೀರೆಗಳ ಕೆಟಗರಿಯಲ್ಲಿಬಿಡುಗಡೆಗೊಂಡಿವೆ. “ಪ್ರತಿ ತಿಂಗಳು ಒಂದಲ್ಲ ಒಂದು ಹೊಸ ಡಿಸೈನ್‌ನಲ್ಲಿ ಅಥವಾ ಹೊಸ ರೂಪದಲ್ಲಿ ಪಾರ್ಟಿವೇರ್‌ ಸೀರೆಗಳು ಬಿಡುಗಡೆಗೊಳ್ಳುತ್ತಿರುತ್ತವೆ. ಕೆಲವು ಜಗಮಗಿಸುವ ಪ್ರಿಂಟ್ಸ್‌ನಲ್ಲಿ ವಿನ್ಯಾಸಗೊಂಡಿದ್ದರೇ, ಇನ್ನು ಕೆಲವು ಡಿಸೆಂಟ್‌ ಲುಕ್‌ ನೀಡುವಂತವು, ಮತ್ತೆ ಕೆಲವು ಪ್ರಿಂಟೆಡ್‌ ಶೈಲಿಯವು ಚಾಲ್ತಿಗೆ ಬರುತ್ತವೆ. ಮಹಿಳೆಯರು ಕೂಡ ತಮ್ಮ ಮನೋಭಿಲಾಷೆಗೆ ತಕ್ಕಂತೆ ಸೀರೆಗಳ ಆಯ್ಕೆ ಮಾಡುತ್ತಾರೆ. ನೋಡಲು ಡಿಸೆಂಟಾಗಿಯೂ ಕಾಣಿಸಬೇಕು. ಹೆಚ್ಚು ಎದ್ದು ಕಾಣುವಂತಹ ಡಿಸೈನ್‌ ಇರಬಾರದು, ಆಕರ್ಷಕ ಡಿಸೈನ್‌ ಕೂಡ ಇರಬೇಕು ಎನ್ನುವವರು ಈ ರೀತಿಯ ಸಾದಾ ಸೀರೆ ಅದರಲ್ಲಿ ಕಟ್‌ ವರ್ಕ್ ಬಾರ್ಡರ್‌ ಇರುವಂತವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇಂತಹ ಮಹಿಳೆಯರಿಗೆಂದೇ ನಾನಾ ಶೈಲಿಯ ಕಟ್‌ ವರ್ಕ್ ಬಾರ್ಡರ್‌ ಸೀರೆಗಳು ಹಲವು ವಿನ್ಯಾಸದಲ್ಲಿ ಬಂದಿವೆ” ಎನ್ನುತ್ತಾರೆ ಸೀರೆ ಎಕ್ಸ್‌ಫ ರ್ಟ್ ಜೀವಿತಾ. ಅವರ ಪ್ರಕಾರ, ಈ ಶೈಲಿಯ ಬಾರ್ಡರ್‌ ಸೀರೆಗಳು ಯೂನಿಕ್‌ ಲುಕ್‌ ನೀಡುತ್ತವಂತೆ.

Saree Fashion

ಏನಿದು ಕಟ್‌ ವರ್ಕ್ ಬಾರ್ಡರ್ ಸೀರೆ?

ಅಂಚು ಅಂದರೇ, ಬಾರ್ಡರ್ ಕಟ್‌ ಆಗಿರುವಂತಹ ವಿನ್ಯಾಸಗೊಂಡಿರುವಂತಹ ಶೈಲಿಯಲ್ಲಿರುತ್ತವೆ. ಇತರೇ ಬಾರ್ಡರ್‌ಗಳಂತೆ ಒಂದೇ ಲೈನ್‌ನಲ್ಲಿರುವುದಿಲ್ಲ! ಕೆಲವು ಅಟ್ಯಾಚ್‌ ಆದಂತೆ ಕಾಣಿಸುತ್ತವೆ. ಈ ಕಟ್ವರ್ಕ್ ಡಿಸೈನ್‌ ಇಡೀ ಸೀರೆಯ ಲುಕ್ಕನ್ನು ಬದಲಿಸುತ್ತವೆ ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.

Saree Fashion

ಟ್ರೆಂಡಿಯಾಗಿರುವ ಕಟ್‌ ವರ್ಕ್ ಬಾರ್ಡರ್ ಪಾರ್ಟಿವೇರ್‌ ಸೀರೆ

ಇದೀಗ ಬಾರ್ಡರ್‌ನಲ್ಲಿ ಹ್ಯಾಂಡ್‌ ವರ್ಕ್ ಅಥವಾ ಮೆಷಿನ್‌ ವರ್ಕ್ ಇರುವಂತಹ ನಾನಾ ಬಗೆಯ ಎಂಬ್ರಾಯ್ಡರಿ ಡಿಸೈನ್ಸ್, ಬಗೆಬಗೆಯ ಶೇಡ್‌ನ ಅಥವಾ ಮಾನೋಕ್ರೋಮ್‌ ವರ್ಣದ ಸಿಕ್ವೀನ್ಸ್ ಹಾಗೂ ವೆರೈಟಿ ಎಂಬಾಲಿಶ್ಡ್ ಡಿಸೈನ್‌ ಇರುವಂತಹ ಕಟ್‌ ವರ್ಕ್ ಬಾರ್ಡರ್ ಪಾರ್ಟಿ ಸೀರೆಗಳು ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ.

Saree Fashion

ಕಟ್‌ ವರ್ಕ್ ಬಾರ್ಡರ್ ಸೀರೆ ಬಗ್ಗೆ ತಿಳಿದಿರಬೇಕಾದ 3 ಸಂಗತಿಗಳು

  • ಜಾರ್ಜೆಟ್ ಸೀರೆಯಲ್ಲಿ ಕಟ್‌ ವರ್ಕ್ ಡಿಸೈನ್ಸ್ ಹೆಚ್ಚು ಹೈಲೈಟಾಗುತ್ತವೆ.
  • ಸೀರೆಯ ಫ್ಯಾಬ್ರಿಕ್‌ ನೋಡಿ, ಖರೀದಿಸುವುದು ಉತ್ತಮ.
  • ಸಾದಾ ಸೀರೆಯಲ್ಲಾದಲ್ಲಿ ಈ ಕಟ್‌ ವರ್ಕ್ ಡಿಸೈನ್ ಕಾಣುತ್ತವೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Jeans Fashion: ಜೀನ್ಸ್ ಪ್ಯಾಂಟ್‌ನಲ್ಲಿ ಇಂಡೋ-ವೆಸ್ಟರ್ನ್ ಲುಕ್‌ಗೆ 3 ಸಿಂಪಲ್‌ ಐಡಿಯಾ

Continue Reading

ಆರೋಗ್ಯ

Speech Fasting: ಸದಾ ವಟವಟ ಮಾತಾಡ್ತಾ ಇರ್ತೀರಾ? ʼಮೌನವ್ರತʼ ಮಾಡಿ, ಆರೋಗ್ಯ ಸುಧಾರಣೆ ನೋಡಿ!

ಮೌನವ್ರತವೆಂದರೆ ಕೆಲವೊಮ್ಮೆ ಹಾಸ್ಯಕ್ಕೆ ವಸ್ತುವಾಗುತ್ತದೆ. ಆದರೆ ಮೌನಕ್ಕೂ ಚಿಕಿತ್ಸಕ ಗುಣವಿದೆ. ದೈಹಿಕವಾಗಿ ಮತ್ತು ಮಾನಸಿಕವಾಗಿ ಇದು ಗುಣವಾಗುವುದಕ್ಕೆ ನೆರವಾಗುತ್ತದೆ. ಹಾಗಾಗಿ ಸದಾ ವಟವಟ ಮಾಡುವವರು ನೀವಾದರೆ, ಆಗೀಗ ಮೌನವ್ರತ ಇರಿಸಿಕೊಳ್ಳಿ (Speech Fasting), ಒಳ್ಳೆಯದು!

VISTARANEWS.COM


on

Speech Fasting
Koo

ಇಡೀ ಜಗತ್ತು ಸಂವಹನದ ಸೂತ್ರದಿಂದ ಬಂಧಿಸಲ್ಪಟ್ಟಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಇರಲಿ, ಮುಖಾಮುಖಿ ಭೇಟಿ ಇರಲಿ, ಅಂತೂ ಸಂವಹನ ನಡೆಯುತ್ತಲೇ ಇರಬೇಕು. ಅದರಲ್ಲೂ ಮಾತಿಗೆ ಕೂತರೆ ಸಾಮಾನ್ಯಕ್ಕೆ ನಿಲ್ಲಿಸುವುದಿಲ್ಲ ನಾವು. ಧ್ವನಿಪೆಟ್ಟಿಗೆಯನ್ನು ಶೋಷಿಸುತ್ತಲೇ ಇರುತ್ತೇವೆ. ನಮ್ಮ ದೇಹದ ಉಳಿದೆಲ್ಲ ಭಾಗಗಳಂತೆ ಧ್ವನಿ ಪೆಟ್ಟಿಗೆಗೂ ವಿಶ್ರಾಂತಿ ಬೇಕಾಗುತ್ತದೆ. ಅವಿಶ್ರಾಂತವಾಗಿ ಅದನ್ನು ದುಡಿಸುತ್ತಿದ್ದರೆ ಧ್ವನಿಪೆಟ್ಟಿಗೆಗೂ ಕಷ್ಟ ತಪ್ಪಿದ್ದಲ್ಲ. ಹಾಗಾಗಿಯೇ ಹಳೆಯ ಜನಗಳು ಹಲವಾರು ವ್ರತಗಳ ಜೊತೆಗೆ ʻಮೌನವ್ರತʼವನ್ನೂ ಆಗೀಗ ಇರಿಸಿಕೊಳ್ಳುತ್ತಿದ್ದರು. ಮೌನವ್ರತ ಎಂಬುದು ಕೆಲವೊಮ್ಮೆ ಹಾಸ್ಯಕ್ಕೆ ವಸ್ತುವಾದರೂ, ಇದರಿಂದ ಆರೋಗ್ಯಕ್ಕೆ ಲಾಭಗಳಿರುವುದು ಹೌದು. ಏನು ಪ್ರಯೋಜನ (Speech Fasting) ಮೌನದಿಂದ?

young woman covering closed mouth with hands.

ಏನು ಹಾಗೆಂದರೆ?

ಯಾವುದೇ ಧಾರ್ಮಿಕ ಆಚರಣೆಯ ಸಲುವಾಗಿ ಮಾಡುವಂಥ ವ್ರತವಲ್ಲ ಇದು. ಇದನ್ನು ʻವೋಕಲ್‌ ರೆಸ್ಟ್‌ʼ ಅಥವಾ ಧ್ವನಿಪೆಟ್ಟಿಗೆಗೆ ನೀಡುವ ವಿಶ್ರಾಂತಿ ಎಂದು ಕರೆಯಲಾಗುತ್ತದೆ. ನಿಗದಿತ ಸಮಯದಲ್ಲಿ ಮಾತನಾಡದೆ, ಧ್ವನಿಪೆಟ್ಟಿಗೆಯನ್ನು ಯಾವುದಕ್ಕೂ ಬಳಸದೆ ಇರುವುದು ಎಂದು ಅರ್ಥ. ಇದರಿಂದ ಧ್ವನಿಪೆಟ್ಟಿಗೆಯ ಸುಸ್ತು, ಆಯಾಸವೆಲ್ಲ ಕಡಿಮೆಯಾಗಿ, ದುರಸ್ತಿಯಾಗಲು ಅನುಕೂಲವಾಗುತ್ತದೆ. ಹಾಡುಗಾರರು, ನಟರು, ಪ್ರವಚನ ನೀಡುವವರು, ಉಪನ್ಯಾಸಕರು ಇತ್ಯಾದಿ ಧ್ವನಿಯನ್ನೇ ಪ್ರಧಾನವಾಗಿ ಬಳಸುವವರು ಈ ತಂತ್ರಗಳನ್ನು ಅಳವಡಿಸಿಕೊಂಡರೆ ಅನುಕೂಲವಾದೀತು. ಹಾಡು, ಮಾತು, ಪಿಸುಮಾತಿಗೂ ಸದಾ ಕಾಲ ಕಂಪಿಸುತ್ತಲೇ ಇರುವ ಧ್ವನಿಪೆಟ್ಟಿಗೆಗೆ ಸುಸ್ತಾಗುತ್ತದೆ. ಇದರಿಂದ ಧ್ವನಿ ಬೀಳುವುದು, ಗಂಟಲು ಉಬ್ಬಿದಂತಾಗಿ ನೋವು ಕಾಣುವುದು ಸಾಮಾನ್ಯ. ಇದರಿಂದ ಧ್ವನಿಪೆಟ್ಟಿಗೆಗೆ ಹಾನಿಯಾಗುತ್ತದೆ. ಅದನ್ನು ವಿಶ್ರಾಂತಿಗೆ ದೂಡಿದಾಗ ಆಗುವ ಅನುಕೂಲಗಳು ಬಹಳಷ್ಟು.

Children speech therapy concept.

ಆರೋಗ್ಯ ಮರಳಿಸುತ್ತದೆ

ದೇಹದ ಯಾವುದೇ ಭಾಗಕ್ಕೂ ಅತಿ ಬಳಕೆಯಿಂದ ಆಯಾಸವಾದರೆ ವಿಶ್ರಾಂತಿ ಅಗತ್ಯವಾಗುತ್ತದೆ. ಹೀಗೆ ಮಾತಿನ ಉಪವಾಸದ ಮೂಲಕ ವಿಶ್ರಾಂತಿ ನೀಡುವುದರಿಂದ ಕಳೆದು ಹೋದ ಆರೋಗ್ಯ ಮರಳು ದೊರೆಯುವುದಕ್ಕೆ ಸಾಧ್ಯ. ಇದು ಧ್ವನಿಪೆಟ್ಟಿಗೆಯ ವಿಷಯದಲ್ಲೂ ಹೌದು. ಧ್ವನಿ ಪೆಟ್ಟಿಗೆಯಲ್ಲಿನ ಊತ, ಕಿರಿಕಿರಿ ಮುಂತಾದವುಗಳನ್ನು ಗುಣಪಡಿಸಬಹುದು.

ಗುಣಮಟ್ಟ ಸುಧಾರಣೆ

ಪದೇಪದೆ ಧ್ವನಿ ಬೀಳುತ್ತಿದ್ದರೆ, ಧ್ವನಿಯ ಗುಣಮಟ್ಟ ಹಾಳಾಗಿದ್ದರೆ, ಶೃತಿಯ ಸಮಸ್ಯೆಯಿದ್ದರೆ, ಸ್ಪಷ್ಟತೆ ಕಡಿಮೆಯಿದ್ದರೆ- ಇಂಥ ಎಲ್ಲ ಸಮಸ್ಯೆಗಳಿಗೆ ಮೌನ ಅಥವಾ ಧ್ವನಿಪೆಟ್ಟಿಗೆಯ ವಿಶ್ರಾಂತಿ ಮದ್ದಾಗಬಲ್ಲದು. ಧ್ವನಿ ಚಿಕಿತ್ಸೆಯಲ್ಲಿ ಮೌನವನ್ನೂ ಒಂದು ಸಾಧನವಾಗಿ ಬಳಸಲಾಗುತ್ತದೆ. ಇದರಿಂದ ಧ್ವನಿಯ ಗುಣಮಟ್ಟವನ್ನು ಗಣನೀಯವಾಗಿ ಸುಧಾರಿಸಲು ಸಾಧ್ಯವಿದೆ.

ಹಾನಿ ಕಡಿಮೆ

ಧ್ವನಿಪೆಟ್ಟಿಗೆಯನ್ನು ಅತಿಯಾಗಿ ಮತ್ತು ಸತತ ಬಳಸುವುದರಿಂದ ಧ್ವನಿಪೆಟ್ಟಿಗೆಯಲ್ಲಿ ನಾಡ್ಯೂಲ್‌ ಅಥವಾ ಪಾಲಿಪ್‌ಗಳು ಕಾಣಿಸಿಕೊಳ್ಳಬಹುದು. ಇದಕ್ಕೆ ಸರಿಯಾಗಿ ಚಿಕಿತ್ಸೆ ತೆಗೆದುಕೊಳ್ಳದಿದ್ದರೆ ಧ್ವನಿಪೆಟ್ಟಿಗೆಗೆ ಹಾನಿ ಆಗುವ ಸಂಭವ ಇರುತ್ತದೆ. ಹಾಗಾಗಿ ಚಿಕಿತ್ಸಕ ಉದ್ದೇಶದಿಂದ ಮೌನ ವಹಿಸುವುದರಿಂದ ಇಂಥ ಹಾನಿಯನ್ನು ಕಡಿಮೆ ಮಾಡಲು ಸಾಧ್ಯವಿದೆ.

Mood Enhancement Dark Chocolate Benefits

ಮಾನಸಿಕ ನೆಮ್ಮದಿ

ಹೊರಗಿನ ವ್ಯವಹಾರವನ್ನು ಕೊಂಚ ನಿಲ್ಲಿಸಿದರೆ, ಒಳಗಿನ ಮನೋವ್ಯಾಪಾರಕ್ಕೆ ತೆರೆದುಕೊಳ್ಳುವುದಕ್ಕೆ ಸಾಧ್ಯ. ನಮ್ಮ ಬಗ್ಗೆ ನಮಗೆ ತಿಳಿಯುವುದಕ್ಕೆ, ನಾವೇನು ಮಾಡುತ್ತಿದ್ದೇವೆ, ಅದನ್ನು ಯಾಕಾಗಿ ಮಾಡುತ್ತಿದ್ದೇವೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಮೌನ ಸಾಧನವಾಗಬಲ್ಲದು. ಮಾನಸಿಕ ನೋವುಗಳನ್ನು ದೂರಮಾಡಿ, ಸಾಂತ್ವನಕ್ಕೆ ನಮ್ಮೊಳಗೇ ಜಾಗ ಮಾಡಿಕೊಡುತ್ತದೆ.

ಇದನ್ನೂ ಓದಿ: Egg Benefits: ನೀವು ಮೊಟ್ಟೆ ಪ್ರಿಯರೆ? ಹಾಗಾದರೆ ಎಷ್ಟು ಮೊಟ್ಟೆ ತಿನ್ನಬಹುದು ಎಂಬುದೂ ಅರಿವಿರಲಿ!

ಹೇಗೆ ಮಾಡಬೇಕು?

ಧ್ವನಿಗೆ ಎಷ್ಟು ಸಮಸ್ಯೆಯಾಗಿದೆ ಎಂಬುದರ ಮೇಲೆ ಎಷ್ಟು ಹೊತ್ತು ವಿಶ್ರಾಂತಿ ನೀಡಬೇಕು ಎಂಬುದನ್ನು ನಿರ್ಧರಿಸಬಹುದು. ದಿನದ ಒಂದಿಷ್ಟು ತಾಸು, ಇಡೀ ದಿನ, ವಾರದಲ್ಲಿ ಪ್ರತಿದಿನದ ಒಂದಿಷ್ಟು ಹೊತ್ತು- ಹೀಗೆ. ಮಾತಾಡುವುದಿಲ್ಲ ಎಂದರೆ ಗುನುಗಬಹುದು, ಪಿಸು ಮಾತಾಡಬಹುದು ಎಂದು ಅರ್ಥವಲ್ಲ, ಧ್ವನಿಪೆಟ್ಟಿಗೆಗೆ ಸಂಪೂರ್ಣ ವಿಶ್ರಾಂತಿ ನೀಡಬೇಕು. ಮೌನ ಮುರಿದ ಹೊತ್ತಿನಲ್ಲೂ ಸಿಕ್ಕಾಪಟ್ಟೆ ಕೂಗುವುದು, ಕಿರುಚುವುದು ಸಲ್ಲದು. ದಿನಕ್ಕೆ 3-4 ಲೀಟರ್‌ ನೀರು ಕುಡಿಯುವುದು ಅಗತ್ಯ. ಇದರಿಂದ ಧ್ವನಿಪೆಟ್ಟಿಗೆಗೆ ಬೇಕಾದ ತೇವವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಕೆಮ್ಮುವುದು, ಕ್ಯಾಕರಿಸುವುದು ಇತ್ಯಾದಿಗಳನ್ನು ಮಾಡುವ ಅಗತ್ಯವಿದ್ದರೆ, ನೆಗಡಿಯ ಸಮಸ್ಯೆಯಿದ್ದರೆ, ಬೆಚ್ಚಗಿನ ಉಪ್ಪು ನೀರಿನಿಂದ ಗಂಟಲನ್ನು ಚೆನ್ನಾಗಿ ಗಾರ್ಗಲ್‌ ಮಾಡುವುದು ಒಳ್ಳೆಯದು.

Continue Reading

ಆರೋಗ್ಯ

Life Expectancy: ಕೊರೊನಾದಿಂದ ನಮ್ಮ ಆಯುಷ್ಯದಲ್ಲಿ 2 ವರ್ಷ ಕಡಿತ; WHO ಭೀಕರ ವರದಿ

Life Expectancy: ಕೊರೊನಾ ಸೋಂಕಿನ ಪರಿಣಾಮವು ಜಗತ್ತಿನಾದ್ಯಂತ ಒಂದೇ ರೀತಿಯಾಗಿ ಪರಿಣಾಮ ಬೀರಿಲ್ಲ. ಆಯಾ ದೇಶ, ಖಂಡಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಪರಿಣಾಮ ಬೀರಿದೆ. ಅಮೆರಿಕ ಹಾಗೂ ಆಗ್ನೇಯ ಏಷ್ಯಾದ ಜನರ ಸರಾಸರಿ ಜೀವಿತಾವಧಿಯು 3 ವರ್ಷ ಕಡಿಮೆಯಾಗಿದೆ. ಆರೋಗ್ಯಯುತ ಜೀವನವು ಎರಡೂವರೆ ವರ್ಷ ಕಡಿಮೆಯಾಗಿದೆ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆಯು ವರದಿ ನೀಡಿದೆ.

VISTARANEWS.COM


on

Life Expectancy
Koo

ನ್ಯೂಯಾರ್ಕ್‌: ಚೀನಾದಲ್ಲಿ ಹರಡಿ, ಜಗತ್ತಿನಾದ್ಯಂತ ಪಸರಿಸಿ, ಕೋಟ್ಯಂತರ ಜನರ ಸಾವಿಗೆ ಕಾರಣವಾದ ಕೊರೊನಾ (Covid 19) ಮಹಾಮಾರಿಯ ಹಾವಳಿ ಕಡಿಮೆಯಾದರೂ ಅದು ಜನರ ಜೀವನದ ಮೇಲೆ ಬೀರುವ ಪರಿಣಾಮವು ಇನ್ನೂ ನಿಂತಿಲ್ಲ. ಕೊರೊನಾ ಲಸಿಕೆ ಪಡೆದವರಿಗೆ ಅಡ್ಡ ಪರಿಣಾಮ, ರೆಮ್ಡಿಸಿವಿರ್‌ ಪಡೆದವರು, ಐಸಿಯುಗೆ ದಾಖಲಾಗಿ ಜೀವಂತವಾಗಿ ಹೊರಬಂದವರು ಒಂದಲ್ಲ ಒಂದು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರ ಬೆನ್ನಲ್ಲೇ, ವಿಶ್ವ ಆರೋಗ್ಯ ಸಂಸ್ಥೆಯು (WHO) ಭೀಕರ ವರದಿ ಬಿಡುಗಡೆ ಮಾಡಿದ್ದು, ಕೊರೊನಾದಿಂದ ಜಾಗತಿಕವಾಗಿ ಜನರ ಜೀವಿತಾವಧಿಯು (Life Expectancy) 2 ವರ್ಷ ಕಡಿಮೆಯಾಗಿದೆ ಎಂದು ತಿಳಿಸಿದೆ.

“2019ರಿಂದ 2021ರ ಅವಧಿಯಲ್ಲಿ ಕೊರೊನಾ ಮಹಾಮಾರಿಯು ಜಗತ್ತಿನಾದ್ಯಂತ ಭೀಕರ ಪರಿಣಾಮ ಉಂಟುಮಾಡಿತು. ಇದರಿಂದಾಗಿ 2019-21ರ ಅವಧಿಯಲ್ಲಿ ಜಗತ್ತಿನಾದ್ಯಂತ ಮನುಷ್ಯರ ಸರಾಸರಿ ಜೀವಿತಾವಧಿಯು 71.4 ವರ್ಷಕ್ಕೆ ಇಳಿದಿದೆ. ಜನರ ಸರಾಸರಿ ಜೀವಿತಾವಧಿಯು 1.8 ವರ್ಷ ಕಡಿಮೆಯಾಗಿದೆ. ಅಷ್ಟೇ ಅಲ್ಲ, ಇದೇ ಅವಧಿಯಲ್ಲಿ ಜನರ ಆರೋಗ್ಯಯುತ ಜೀವನ ಪ್ರಮಾಣದಲ್ಲೂ 1.5 ವರ್ಷ ಕಡಿಮೆಯಾಗಿದ್ದು, 61.9 ವರ್ಷಕ್ಕೆ ಕುಸಿದಿದೆ” ಎಂಬುದಾಗಿ ಡಬ್ಲ್ಯೂಎಚ್‌ಒ ವರದಿಯಿಂದ ತಿಳಿದುಬಂದಿದೆ.

ಏಷ್ಯಾ ಭಾಗಕ್ಕೇ ತೀವ್ರ ಪರಿಣಾಮ

“ಕೊರೊನಾ ಸೋಂಕಿನ ಪರಿಣಾಮವು ಜಗತ್ತಿನಾದ್ಯಂತ ಒಂದೇ ರೀತಿಯಾಗಿ ಪರಿಣಾಮ ಬೀರಿಲ್ಲ. ಆಯಾ ದೇಶ, ಖಂಡಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಪರಿಣಾಮ ಬೀರಿದೆ. ಅಮೆರಿಕ ಹಾಗೂ ಆಗ್ನೇಯ ಏಷ್ಯಾದ ಜನರ ಸರಾಸರಿ ಜೀವಿತಾವಧಿಯು 3 ವರ್ಷ ಕಡಿಮೆಯಾಗಿದೆ. ಆರೋಗ್ಯಯುತ ಜೀವನವು ಎರಡೂವರೆ ವರ್ಷ ಕಡಿಮೆಯಾಗಿದೆ. ಇದು ಜಗತ್ತಿನಲ್ಲೇ ಕೊರೊನಾದಿಂದ ಅತಿ ಹೆಚ್ಚು ಪರಿಣಾಮ ಬೀರಿದ ಭಾಗಗಳಾಗಿವೆ. ವೆಸ್ಟರ್ನ್‌ ಪೆಸಿಫಿಕ್‌ ರೀಜನ್‌ನಲ್ಲಿ ಅತಿ ಕಡಿಮೆ ಪರಿಣಾಮ ಬೀರಿದೆ. ಈ ಭಾಗದಲ್ಲಿ ಜನರ ಸರಾಸರಿ ಜೀವಿತಾವಧಿಯು ಶೇ.0.1ರಷ್ಟು ಕಡಿಮೆಯಾಗಿದೆ” ಎಂಬುದಾಗಿ ವರದಿಯಿಂದ ತಿಳಿದುಬಂದಿದೆ.

ಮತ್ತೊಂದು ಸೋಂಕು ಸೃಷ್ಟಿಸಿದ ಚೀನಾ

ಕೊರೊನಾ ಮೂಲಕ ಕೋಟ್ಯಂತರ ಜನರ ಪ್ರಾಣಕ್ಕೆ ಕುತ್ತು ತಂದ ಚೀನಾ ಈಗ ಮತ್ತೊಂದು ಜೈವಿಕ ಯುದ್ಧಕ್ಕೆ ಮುಂದಾಗಿದೆ. ಮಾರಣಾಂತಿಕ ಎಬೋಲಾ ರೂಪಾಂತರಿ ಸೋಂಕನ್ನು (Ebola Mutant Virus) ಚೀನಾದ ವಿಜ್ಞಾನಿಗಳು ಸೃಷ್ಟಿಸಿದ್ದು, ಇದರಿಂದ ಜಗತ್ತಿಗೇ ಆತಂಕ ಎದುರಾಗಿದೆ. ಹೆಬೈ ಮೆಡಿಕಲ್‌ ಯುನಿವರ್ಸಿಟಿಯಲ್ಲಿ ವಿಜ್ಞಾನಿಗಳು ಎಬೋಲಾ ರೂಪಾಂತರಿ ವೈರಸ್‌ಅನ್ನು ಸೃಷ್ಟಿಸಿದ್ದಾರೆ. ಹ್ಯಾಮ್‌ಸ್ಟರ್‌ಗಳಿಗೆ (ಕಿರುಕಡಿಗ-ಇಲಿಯಂತ ಚಿಕ್ಕ ಪ್ರಾಣಿ) ವೈರಸ್‌ ಇಂಜೆಕ್ಟ್‌ ಮಾಡಿದರೆ, ಮೂರೇ ದಿನಗಳಲ್ಲಿ ಅವರು ಸಾಯುತ್ತವೆ ಎಂದು ಸೈನ್ಸ್‌ ಡೈರೆಕ್ಟ್‌ ಜರ್ನಲ್‌ನಲ್ಲಿ ವರದಿ ಪ್ರಕಟವಾಗಿದೆ.

ಇದನ್ನೂ ಓದಿ: Covaxin: ಕೋವಾಕ್ಸಿನ್‌ ಲಸಿಕೆ ಪಡೆದವರಿಗೂ ಬಿಗ್‌ ಶಾಕ್‌! ಆಘಾತಕಾರಿ ವರದಿ ಔಟ್‌

Continue Reading

ಆರೋಗ್ಯ

Egg Benefits: ನೀವು ಮೊಟ್ಟೆ ಪ್ರಿಯರೆ? ಹಾಗಾದರೆ ಎಷ್ಟು ಮೊಟ್ಟೆ ತಿನ್ನಬಹುದು ಎಂಬುದೂ ಅರಿವಿರಲಿ!

ಬಹಳಷ್ಟು ಮನೆಗಳಲ್ಲಿ ನಿತ್ಯದ ಬೆಳಗಿನ ಆಹಾರವಾಗಿ ಮೊಟ್ಟೆ ಸೇವನೆ ರೂಢಿಯಲ್ಲಿದೆ. ಬೆಳಗ್ಗೆದ್ದ ಕೂಡಲೇ ಉಪಹಾರಕ್ಕೆ ಮೊಟ್ಟೆಯ ಆಮ್ಲೆಟ್‌ ಬಹಳ ಸರಳವೂ ಸುಲಭವೂ ಆಗಿ ಮಾಡಿಕೊಳ್ಳಬಹುದಾದ್ದರಿಂದ ಅನೇಕರು ಇದನ್ನು ಅವಲಂಬಿಸಿರುತ್ತಾರೆ. ಹೆಚ್ಚು ಶ್ರಮ ಬೇಡದ, ಪೌಷ್ಟಿಕಾಂಶವೂ ಇರುವ ಆಹಾರ ಇದಾದ್ದರಿಂದ ಯಾವ ಯೋಚನೆಯೂ ಇಲ್ಲದೆ, ಮೊಟ್ಟೆಯ (Egg Benefits) ಬಗೆಬಗೆಯ ಆಹಾರಗಳನ್ನು ನಿತ್ಯವೂ ತಯಾರಿಸುತ್ತಾರೆ. ಆದರೆ…

VISTARANEWS.COM


on

Egg Benefits
Koo

ಮೊಟ್ಟೆ ಅತ್ಯಂತ ಪೌಷ್ಟಿಕವಾದ ಆಹಾರಗಳಲ್ಲಿ ಒಂದು ಎಂಬುದರ ಬಗ್ಗೆ ಯಾವ ಅನುಮಾನಗಳೂ ಇಲ್ಲ. ಇದರಲ್ಲಿ ದೇಹಕ್ಕೆ ಅಗತ್ಯವಾದ ಸಾಕಷ್ಟು ಒಳ್ಳೆಯ ಪೋಷಕಾಂಶಗಳು ಇರುವ ಹಾಗೆಯೇ ಕೊಬ್ಬೂ ಇವೆ. ಬಹಳಷ್ಟು ಮನೆಗಳಲ್ಲಿ ನಿತ್ಯದ ಬೆಳಗಿನ ಆಹಾರವಾಗಿ ಮೊಟ್ಟೆ ಸೇವನೆ ರೂಢಿಯಲ್ಲಿದೆ. ಬೆಳಗ್ಗೆದ್ದ ಕೂಡಲೇ ಉಪಹಾರಕ್ಕೆ ಮೊಟ್ಟೆಯ ಆಮ್ಲೆಟ್‌ ಬಹಳ ಸರಳವೂ ಸುಲಭವೂ ಆಗಿ ಮಾಡಿಕೊಳ್ಳಬಹುದಾದ್ದರಿಂದ ಅನೇಕರು ಇದನ್ನು ಅವಲಂಬಿಸಿರುತ್ತಾರೆ. ಹೆಚ್ಚು ಶ್ರಮ ಬೇಡದ, ಪೌಷ್ಟಿಕಾಂಶವೂ ಇರುವ ಆಹಾರ ಇದಾದ್ದರಿಂದ ಯಾವ ಯೋಚನೆಯೂ ಇಲ್ಲದೆ, ಮೊಟ್ಟೆಯ ಬಗೆಬಗೆಯ ಆಹಾರಗಳನ್ನು ನಿತ್ಯವೂ ತಯಾರಿಸುತ್ತಾರೆ. ತೂಕ ಇಳಿಸುವ ಮಂದಿ, ದೇಹದಾರ್ಢ್ಯ ಬಲಪಡಿಸುವ ಮಂದಿ, ಜಿಮ್‌ಗೆ ಹೋಗಿ ವರ್ಕೌಟ್‌ ಮಾಡುವ ಮಂದಿ ಎಲ್ಲರಿಗೂ ಮೊಟ್ಟೆಯೇ ಆರಾಧ್ಯ ದೈವ. ಧಾವಂತದ ಬದುಕಿಗೆ ಹೇಳಿ ಮಾಡಿಸಿದ ಆಹಾರ ಇದಾದರೂ, ಮೊಟ್ಟೆಯನ್ನು ಎಷ್ಟು ತಿನ್ನಬೇಕು, ಹೇಗೆ ತಿನ್ನಬೇಕು ಎಂಬ ಬಗ್ಗೆ ಹೆಚ್ಚು ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಮೊಟ್ಟೆ ಒಳ್ಳೆಯದೆಂದು ಕೇವಲ ಮೊಟ್ಟೆಯೊಂದನ್ನೇ ತಿಂದರೆ ಅದರಿಂದ ಖಂಡಿತ ಅಡ್ಡ ಪರಿಣಾಮಗಳೂ ಆದೀತು ಎಂಬುದನ್ನು ಪ್ರತಿಯೊಬ್ಬರೂ ನೆನಪಿಡಬೇಕು. ಯಾಕೆಂದರೆ ಮೊಟ್ಟೆಯಲ್ಲಿ ಪ್ರೊಟೀನ್‌ ಇರುವಂತೆಯೇ, ನಮ್ಮ ದೇಹದಲ್ಲಿ ಕೊಲೆಸ್ಟೆರಾಲ್‌ ಕೂಡಾ ಹೆಚ್ಚಿಸುವ ಅಪಾಯವಿದೆ. ಹಾಗಾಗಿ ಮೊಟ್ಟೆ ಎಷ್ಟು ತಿನ್ನಬೇಕು, ಹೇಗೆ ತಿನ್ನಬೇಕು ಎಂಬ ಅರಿವು (Egg Benefits) ಅತ್ಯಂತ ಅಗತ್ಯ.

the egg

ಮೊಟ್ಟೆಯಲ್ಲಿ ಏನೇನಿವೆ?

ಪ್ರೊಟೀನ್‌ನ ಜೊತೆಜೊತೆಗೇ, ಪೊಟಾಶಿಯಂ, ನಿಯಾಸಿನ್‌, ರೈಬೋ ಫ್ಲೇವಿನ್‌, ಮೆಗ್ನೀಷಿಯಂ, ಸೋಡಿಯಂ, ಫಾಸ್ಪರಸ್‌, ಕಬ್ಬಿಣಾಂಶ, ಝಿಂಕ್ ಮತ್ತಿತರ ಖನಿಜಾಂಶಗಳೂ, ವಿಟಮಿನ್‌ ಎ, ವಿಟಮಿನ್‌ ಡಿ, ವಿಟಮಿನ್‌ ಬಿ6, ಬಿ12, ಫೋಲಿಕ್‌ ಆಸಿಡ್‌, ಪ್ಯಾಂಟೋಥೆನಿಕ್‌ ಆಸಿಡ್‌, ಥೈಮೀನ್‌ ಇತ್ಯಾದಿಗಳೆಲ್ಲವೂ ಇವೆ. ಇವೆಲ್ಲವುಗಳ ಜೊತೆಗೆ, ಒಂದು ಮೊಟ್ಟೆಯಲ್ಲಿ 180ರಿಂದ 300 ಮಿಲಿಗ್ರಾಂಗಳಷ್ಟು ಕೊಲೆಸ್ಟೆರಾಲ್‌ ಇವೆ. ಇದು ಮೊಟ್ಟೆಯ ಹಳದಿ ಭಾಗವಾದ ಯೋಕ್‌ನಲ್ಲಿರುವುದರಿಂದ ಮೊಟ್ಟೆ ತಿನ್ನುವಾಗ ಇದನ್ನು ನೆನಪಿನಲ್ಲಿಟ್ಟಿರಬೇಕು. ಪ್ರತಿ ದಿನಕ್ಕೆ 300 ಎಂಜಿಗಿಂತ ಹೆಚ್ಚು ಕೊಲೆಸ್ಟೆರಾಲ್‌ ಸೇವನೆ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲವೆಂದು ತಜ್ಞರ ಲೆಕ್ಕಾಚಾರ. ಮೊಟ್ಟೆಯ ಬಿಳಿಲೋಳೆಯಲ್ಲಿ ಯಾವ ಕೊಲೆಸ್ಟೆರಾಲ್‌ ಕೂಡಾ ಇರುವುದರಿಂದ ಇದನ್ನು ಸೇವಿಸುವುದರಿಂದ ತೊಂದರೆಯಿಲ್ಲ. ಆದರೆ ಹಳದಿ ಭಾಗವನ್ನು ಸೇರಿಸಿಕೊಂಡು ನಿತ್ಯವೂ ಆಮ್ಲೆಟ್‌ ಮಾಡಿ ಸೇವಿಸುತ್ತಿದ್ದರೆ ಯೋಚನೆ ಮಾಡಲೇಬೇಕು. ಹೆಚ್ಚು ತಿನ್ನುವುದರಿಂದ ಕೊಲೆಸ್ಟೆರಾಲ್‌ ಅಗತ್ಯಕ್ಕಿಂತ ಹೆಚ್ಚು ದೇಹ ಸೇರಿ, ಹೃದಯದ ಸಮಸ್ಯೆ, ರಕ್ತದೊತ್ತಡ, ಪಾರ್ಶ್ವವಾಯು ಮತ್ತಿತರ ಸಮಸ್ಯೆಗಳು ಬರುವ ಅಪಾಯವೂ ಇವೆ.

Eggs with protein and micronutrients are also healthy for eyes Ophthalmia

ದಿನಕ್ಕೆ ಎಷ್ಟು ಮೊಟ್ಟೆ ತಿನ್ನಬಹುದು?

ಆರೋಗ್ಯಕರ ಆಹಾರ ಆಭ್ಯಾಸದ ಪ್ರಕಾರ, ಒಬ್ಬ ವ್ಯಕ್ತಿ ದಿನಕ್ಕೊಂದು ಮೊಟ್ಟೆಯಂತೆ ವಾರದಲ್ಲಿ ಮೂರರಿಂದ ನಾಲ್ಕು ಬಾರಿ ತಿನ್ನಬಹುದು. ಅಂದರೆ ವಾರಕ್ಕೆ ಹೆಚ್ಚೆಂದರೆ ನಾಲ್ಕು ಮೊಟ್ಟೆ ಸೇವನೆ ಆರೋಗ್ಯಕರ. ಮಕ್ಕಳು ದಿನಕ್ಕೊಂದರಂತೆ ಮೊಟ್ಟೆ ಸೇವಿಸಬಹುದು. ಹೃದ್ರೋಗ, ಅತಿಯಾದ ಕೊಲೆಸ್ಟೆರಾಲ್‌ ಇರುವ ಮಂದಿ ವಾರಕ್ಕೆ ಮೂರಕ್ಕಿಂತ ಹೆಚ್ಚು ಮೊಟ್ಟೆ ತಿನ್ನುವುದು ಒಳ್ಳೆಯದಲ್ಲ. ಆದರೆ ಮೊಟ್ಟೆಯ ಹಳದಿ ಭಾಗವನ್ನು ತೆಗೆದು ಕೇವಲ ಬಿಳಿ ಭಾಗವನ್ನು ಮಾತ್ರ ನೀವು ತಿನ್ನುವುದಾದರೆ ಈ ಸಂಖ್ಯೆಯನ್ನು ಅನುಸರಿಸಬೇಕಾಗಿಲ್ಲ.

ಇದನ್ನೂ ಓದಿ: Health Benefits Of Okra: ಬೆಂಡೆಕಾಯಿ ತಿನ್ನುತ್ತೀರಿ ನಿಜ; ಅದರಿಂದಾಗುವ ಪ್ರಯೋಜನಗಳೇನು ಗೊತ್ತಿದೆಯಾ?

Continue Reading
Advertisement
childrens summer camp closing ceremony at yallapur
ಉತ್ತರ ಕನ್ನಡ28 mins ago

Uttara Kannada News: ಭಾರತದ ಭವಿಷ್ಯ ಸಣ್ಣ ಸಣ್ಣ ಊರುಗಳಲ್ಲಿದೆ: ಹರಿಪ್ರಕಾಶ್‌ ಕೋಣೆಮನೆ

Hardik Pandya
ಪ್ರಮುಖ ಸುದ್ದಿ30 mins ago

Hardik Pandya : ಮೊದಲ ಲವ್​ ಬ್ರೇಕ್​ಅಪ್​ ಮಾಡಿಕೊಂಡಿದ್ದ ಪಾಂಡ್ಯ; ಇಲ್ಲಿದೆ ಆರಂಭದ ಪ್ರೇಮ ಕಹಾನಿ!

Siddaramaiah
ಕರ್ನಾಟಕ39 mins ago

Siddaramaiah: ನೀವು 2 ಸಾವಿರ ಕೊಟ್ಟಿದ್ದಕ್ಕೆ ದೇವರ ದರ್ಶನ; ಧರ್ಮಸ್ಥಳದಲ್ಲಿ ಸಿದ್ದರಾಮಯ್ಯಗೆ ಸ್ತ್ರೀಯರ ಮೆಚ್ಚುಗೆ

Shikhar Dhawan
ಪ್ರಮುಖ ಸುದ್ದಿ58 mins ago

Shikhar Dhawan : ಶಿಖರ್ ಧವನ್ ಮಿಥಾಲಿ ರಾಜ್ ಮದುವೆ? ಬಗ್ಗೆ ಮೌನ ಮುರಿದ ಭಾರತದ ಸ್ಟಾರ್

Union Minister Pralhad Joshi statement about Prajwal revanna case
ಕರ್ನಾಟಕ1 hour ago

Pralhad Joshi: ಸಿಎಂ ಪತ್ರ ಬರೆದು ರಾಜಕಾರಣ ಮಾಡಿದರೆ ಪ್ರಜ್ವಲ್ ಪಾಸ್‌ಪೋರ್ಟ್ ರದ್ದಾಗಲ್ಲ: ಪ್ರಲ್ಹಾದ್‌ ಜೋಶಿ

opposition of the girl friend family to the marriage Suicide of a offended lover
ಕ್ರೈಂ1 hour ago

Self Harming: ಮದುವೆಗೆ ಪ್ರೇಯಸಿ ಕುಟುಂಬಸ್ಥರ ವಿರೋಧ; ನೊಂದ ಪ್ರಿಯಕರ ಆತ್ಮಹತ್ಯೆ

International Suryamitra Annual Award Ceremony on 27th May
ಕರ್ನಾಟಕ1 hour ago

Selco India: ಬೆಂಗಳೂರಿನಲ್ಲಿ ಮೇ 27ರಂದು ಅಂತಾರಾಷ್ಟ್ರೀಯ ಸೂರ್ಯಮಿತ್ರ ವಾರ್ಷಿಕ ಪ್ರಶಸ್ತಿ ಪ್ರದಾನ

Engineers suspended
ಕರ್ನಾಟಕ1 hour ago

Engineers Suspended: ಸರ್ಕಾರಿ ಐಬಿಯಲ್ಲಿ ಕುಡಿದು ಮಜಾ ಮಾಡಿದ್ದ ಐವರು ಜಿಪಂ ಎಂಜಿನಿಯರ್‌ಗಳ ಅಮಾನತು

Lok Sabha Election
ದೇಶ2 hours ago

Lok Sabha Election: 6ನೇ ಹಂತದಲ್ಲಿ 59% ಮತದಾನ ; ಬಂಗಾಳದಲ್ಲಿ ವೋಟಿಂಗ್‌ ಹೆಚ್ಚು, ಹಿಂಸೆಯ ಕಿಚ್ಚು

Lockup Death
ಕರ್ನಾಟಕ2 hours ago

Lockup Death: ಚನ್ನಗಿರಿ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣ; 10 ಮಂದಿ ವಶಕ್ಕೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ7 hours ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ3 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ4 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು4 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು4 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ5 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ6 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ6 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ6 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

ಟ್ರೆಂಡಿಂಗ್‌