Lucid dreaming : ಏನಿದು ಸ್ಪಷ್ಟ ಕನಸು? ಏನಿದರ ಪ್ರಯೋಜನ? - Vistara News

ಆರೋಗ್ಯ

Lucid dreaming : ಏನಿದು ಸ್ಪಷ್ಟ ಕನಸು? ಏನಿದರ ಪ್ರಯೋಜನ?

ಕನಸು ಕಾಣುವುದನ್ನು ಅಥವಾ ಕನಸು ಬೀಳುವುದನ್ನು ನಾವು ತಡೆಯಲು ಮಾತ್ರ ಸಾಧ್ಯವಿಲ್ಲ. ಆದರೆ ಸ್ಪಷ್ಟ ಕನಸು (Lucid dreaming) ಒಂದಲ್ಲಾ ಒಂದು ಬಾರಿ ಎಲ್ಲರಿಗೂ ಅನುಭವಕ್ಕೆ ಬಂದೇ ಇರುತ್ತದೆ. ಏನಿದರ ಎಫೆಕ್ಟ್?

VISTARANEWS.COM


on

Lucid dreaming
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕನಸುಗಳು ಒಂಥರಾ ಪುರಾಣ ಕಾಲದ ನಾರದರ ಹಾಗೆ! ಬೇಕೆಂದಾಗ ಬಾರದೆ, ಬೇಡ ಎಂದಾಗ ಖಂಡಿತಾ ಬಂದು, ಕೆಲವು ಬಾರಿ ತಲೆಬಿಸಿ ತಂದು, ಹಲವು ಬಾರಿ ಒಳ್ಳೆಯದನ್ನು ಮಾಡುತ್ತವೆ. ಸ್ವಪ್ನಗಳ ಬಗ್ಗೆ ಸಿಕ್ಕಾಪಟ್ಟೆ ಸಂಶೋಧನೆ, ಅಧ್ಯಯನಗಳು ನಡೆದಿವೆ, ನಡೆಯುತ್ತಿವೆ. ಮನಸ್ಶಾಸ್ತ್ರಜ್ಞರಿಗೂ ಈ ಬಗ್ಗೆ ತೀರದ ಕುತೂಹಲಗಳಿವೆ. ʻಕನಸು ಕಾಣುತ್ತಲೇ ಇರಿ, ಆಗಷ್ಟೇ ನನಸಾಗುವುದಕ್ಕೆ ಸಾಧ್ಯʼ ಎಂಬ ಖ್ಯಾತನಾಮರ ಮಾತುಗಳಿಗೆ, ʻಅಂದರೆ ನಿದ್ದೆ ಮಾಡುತ್ತಲೇ ಇರಿʼ ಎಂದು ಅರ್ಥೈಸಿದ ಕಿಡಿಗೇಡಿಗಳಿಗೂ ಬರವಿಲ್ಲ. ಅದೇನೇ ಇರಲಿ, ನಮ್ಮ ಕನಸುಗಳನ್ನು ನಾವು ನಿಯಂತ್ರಿಸಬಹುದೇ? ಹಗಲುಗನಸಿನ ಬಗ್ಗೆಯಲ್ಲ ಇಲ್ಲಿ ಹೇಳುತ್ತಿರುವುದು, ಮಲಗಿದಾಗ ಬೀಳುವ ಸ್ವಪ್ನಗಳ ಬಗ್ಗೆ.

lucid dreaming facts

ಮಾನವನ ಮನಸ್ಸು ಅಚ್ಚರಿಗಳ ಆಗರ. ಹಾಗಾಗಿಯೇ ಕನಸು ಕಾಣುವುದನ್ನು ಅಥವಾ ಕನಸು ಬೀಳುವುದನ್ನು ತಡೆಯಲು ಮಾತ್ರ ಸಾಧ್ಯವಿಲ್ಲ. ಆದರೆ ಸ್ಪಷ್ಟ ಕನಸು (Lucid dreaming) ಒಂದಲ್ಲಾ ಒಂದು ಬಾರಿ ಎಲ್ಲರಿಗೂ ಅನುಭವಕ್ಕೆ ಬಂದೇ ಇರುತ್ತದೆ. ಅಂದರೆ ಕನಸು ಕಾಣುತ್ತಿರುವ ವ್ಯಕ್ತಿಗೆ, ಇದು ನಿಜವಲ್ಲ- ಕನಸು ಎಂಬುದು ತಿಳಿದಿರುತ್ತದೆ. ಇಡೀ ಕನಸಿನ ವಿವರಗಳನ್ನು ತಾನೇ ನಿರ್ದೇಶಿಸಬಲ್ಲೆ ಎಂದು ಭಾಸವಾಗುತ್ತದೆ. ತನ್ನದೇ ನಿರ್ದೇಶನದ ಸಿನೆಮಾ ಇದು ಎಂಬಂತೆ, ಎಚ್ಚರವೋ ಅಥವಾ ನಿದ್ದೆಯೋ ತಿಳಿಯದ ಸ್ಥಿತಿಯಲ್ಲಿ ಕನಸು ಬೀಳುತ್ತಲೇ ಹೋಗುತ್ತದೆ. ಆದರೆ ಇವೆಲ್ಲವೂ ಕನಸು ಎಂಬುದು ಕಾಣುತ್ತಿರುವ ವ್ಯಕ್ತಿಗೆ ಸ್ಪಷ್ಟವಾಗಿ ಗೊತ್ತಿರುತ್ತದೆ.

ನಿದ್ದೆಯ ಆರ್‌ಇಎಂ (rapid eye movement ) ಹಂತದಲ್ಲಿ ಸ್ಪಷ್ಟ ಕನಸುಗಳು ಬೀಳುತ್ತದೆ ಎನ್ನುತ್ತಾರೆ ವಿಜ್ಞಾನಿಗಳು. ಇದೇ ಕಾರಣಕ್ಕಾಗಿ ಕನಸು ನೆನಪಿರುತ್ತದೆ ಮತ್ತು ಅದನ್ನು ನಿರ್ದೇಶಿಸಲು ತನಗೆ ಸಾಧ್ಯ ಎಂಬ ಭಾವ ಕನಸುಗಾರನಿಗೆ ಬರುತ್ತದೆ. ತಮ್ಮ ಅನುಭವಕ್ಕೆ ಬಂದಿದ್ದು ನಿಜವೋ ಕನಸೋ ಎಂದು ಗೊಂದಲ ಮೂಡುವುದೂ ಇದೇ ಹಂತದಲ್ಲಿ. ಆದರೆ ಸ್ಪಷ್ಟ ಕನಸುಗಳಿಗೆ ಚಿಕಿತ್ಸಕ ಗುಣವಿದೆ. ಇಂಥ ಕನಸುಗಳ ಮೂಲಕ ಮಾನಸಿಕ ಚಿಕಿತ್ಸೆಯನ್ನೂ ನೀಡಬಹುದು ಎಂಬುದು ಮನೋಚಿಕಿತ್ಸಕರ ಮಾತು. ಹೇಗೆ, ನೋಡೋಣ ಬನ್ನಿ.

lucid dreaming facts

ಚಿಕಿತ್ಸೆ ಸಾಧ್ಯ
ನಿದ್ದೆಯಲ್ಲಿ ಕಂಡಿದ್ದು ಜಾಗೃತ ಮನಸ್ಸಿಗೆ ಹೇಗೆ ಲಾಭದಾಯಕ ಎನ್ನುವುದು ಪ್ರಶ್ನೆ. ದುಃಸ್ವಪ್ನಗಳಿಂದ ಪದೇಪದೆ ತೊಂದರೆಗೀಡಾಗುವವರಲ್ಲಿ, ಮಾನಸಿಕ ಒತ್ತಡಕ್ಕೆ ಒಳಗಾದವರಲ್ಲಿ, ನಾನಾ ಭೀತಿಗಳಿಗೆ ತುತ್ತಾದವರಲ್ಲಿ ಈ ಮೂಲಕ ಧೈರ್ಯ ತುಂಬಲು ಸಾಧ್ಯವಿದೆ ಎನ್ನುತ್ತಾರೆ ಚಿಕಿತ್ಸಕರು. ಬೀಳುತ್ತಿರುವುದು ಕನಸು ಮತ್ತೆ ಈ ಬಗ್ಗೆ ಹೆದರುವ ಅಗತ್ಯವಿಲ್ಲ; ತನ್ನ ಕನಸಿನಂತೆಯೇ ತನ್ನ ಬದುಕನ್ನೂ ತಾನೇ ನಿರ್ದೇಶಿಸಿಕೊಳ್ಳಬಹುದು ಎಂಬಂಥ ಭರವಸೆಯ ಭಾವಗಳು ಕನಸುಗಾರನಲ್ಲಿ ಬಂದರೆ, ಮನಸ್ಸಿನ ಹಲವು ತೊಂದರೆಗಳು ದೂರಾಗುತ್ತವೆ.

ಸ್ಪಷ್ಟ ಕನಸಿನ ಸಂದರ್ಭದಲ್ಲಿ ನಮ್ಮ ಮೆದುಳಿನ ಕೆಲವು ಭಾಗ ಜಾಗೃತ ಅವಸ್ಥೆಯಲ್ಲೇ ಇರುತ್ತದೆ. ಇಂಥ ಸ್ಥಿತಿಯಲ್ಲಿ ಮಾಡುವಂಥ ಅಭ್ಯಾಸಗಳು ಜಾಗೃತ ಬದುಕಿನಲ್ಲಿ ಲಾಭದಾಯಕವಾಗಬಲ್ಲವು. ಉದಾ, ಪಿಯಾನೊ ಕಲಿಯುವವರು ಚುರುಕಾಗಿ ಬೆರಳಾಡಿಸುವುದನ್ನು ಸ್ಪಷ್ಟ ಸ್ವಪ್ನದ ಸ್ಥಿತಿಯಲ್ಲಿ ರೂಢಿಸಿಕೊಂಡರೆ, ಎಚ್ಚೆತ್ತಾಗಲೂ ಈ ಅಭ್ಯಾಸ ಕೈಬಿಡುವುದಿಲ್ಲ.

ಸ್ಪಷ್ಟ ಸ್ವಪ್ನಗಳು ಹೆಚ್ಚಿಗೆ ಕಾಣಿಸಿಕೊಳ್ಳುವವರು ಎಂಥ ಮನಸ್ಥಿತಿಯವರು ಎಂಬುದನ್ನೂ ಅಧ್ಯಯನ ನಡೆಸಲಾಗಿದೆ. ಮಾನಸಿಕ ದೃಢತೆ ಮತ್ತು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವಂಥವರಲ್ಲಿ ಲೂಸಿಡ್‌ ಡ್ರೀಮಿಂಗ್‌ ಹೆಚ್ಚು ಎನ್ನಲಾಗುತ್ತದೆ. ಅಥವಾ ಲೂಡಿಸ್‌ ಡ್ರೀಮ್‌ಗಳು ಹೆಚ್ಚು ಕಾಣಿಸಿಕೊಳ್ಳುವವರಲ್ಲಿ ಚಿತ್ತ ಸ್ವಾಸ್ಥ್ಯ ಹೆಚ್ಚು ಎಂದೂ ಇರಬಹುದಲ್ಲ. ಒಟ್ಟಿನಲ್ಲಿ, ಸ್ಪಷ್ಟ ಸ್ವಪ್ನಗಳಿಂದ ಸಿಕ್ಕುಗಳನ್ನು ಬಿಡಿಸುವ ಸಾಮರ್ಥ್ಯ ಹೆಚ್ಚುತ್ತದೆ ಮತ್ತು ಅಂಥವರು ಹೆಚ್ಚು ಕ್ರಿಯಾಶೀಲರು ಎನ್ನುತ್ತದೆ ಮನೋವಿಜ್ಞಾನ.

ಇದನ್ನೂ ಓದಿ: Healthy Pasta | ಪಾಸ್ತಾ ಎಂಬ ಮೋಡಿಗಾರ: ತೂಕ ಇಳಿಸುವ ಮಂದಿ ಪಾಸ್ತಾ ತಿನ್ನಬಾರದೇ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Ways to Prevent Gray Hair: 30 ದಾಟುವ ಮೊದಲೇ ಕೂದಲು ಬೆಳ್ಳಗಾಗುತ್ತಿದೆಯೇ? ಇದಕ್ಕಿದೆ ಸರಳ ಪರಿಹಾರ

Ways to Prevent Gray Hair: ಮೂವತ್ತು ವರ್ಷವಾಗುವ ಮೊದಲೇ ಅಲ್ಲಲ್ಲಿ ಇಣುಕುವ ಬಿಳಿಕೂದಲು, ಮೂವತ್ತು ದಾಟುತ್ತಿದ್ದಂತೆಯೇ ದುಪ್ಪಟ್ಟಾಗುತ್ತದೆ. ನಾಲ್ಕೈದು ವರ್ಷಗಳೊಳಗಾಗಿ, ತಲೆಯ ಅರ್ಧಕ್ಕಿಂತ ಹೆಚ್ಚು ಕೂದಲು ಬೆಳ್ಳಗಾಗಿರುತ್ತದೆ. ಸಾಲ್ಟ್‌ ಅಂಡ್‌ ಪೆಪ್ಪರ್‌ ಲುಕ್‌ ಎಂದು ಹೇಳಿಕೊಂಡು ಟ್ರೆಂಡ್‌ ಜೊತೆ ಫ್ಯಾಷನ್‌ ಹೆಸರಿನಲ್ಲಿ ಸುತ್ತಾಡಿದರೂ, ಆತ್ಮವಿಶ್ವಾಸಕ್ಕೆ ಅಲ್ಲಿ ಸಣ್ಣ ಪೆಟ್ಟು ಬಿದ್ದಿರುತ್ತದೆ. ಇದ್ಕಕೇನು ಪರಿಹಾರ? ಈ ಲೇಖನ ಓದಿ.

VISTARANEWS.COM


on

The woman shows gray hair on her head. Hair with fragments of gray hair, hair roots requiring dyeing
Koo

ಸದ್ಯದ ಯುವಜನರನ್ನು ಕಾಡುವ ಬಹುದೊಡ್ಡ ಸಮಸ್ಯೆ ಎಂದರೆ, ಸಣ್ಣ ವಯಸ್ಸಿನಲ್ಲಿಯೇ ಕೂದಲು ಹಣ್ಣಾಗುವುದು. ಮೂವತ್ತು ವರ್ಷವಾಗುವ ಮೊದಲೇ ಅಲ್ಲಲ್ಲಿ ಇಣುಕುವ ಬಿಳಿಕೂದಲು, ಮೂವತ್ತು ದಾಟುತ್ತಿದ್ದಂತೆಯೇ ದುಪ್ಪಟ್ಟಾಗುತ್ತದೆ. ನಾಲ್ಕೈದು ವರ್ಷಗಳೊಳಗಾಗಿ, ತಲೆಯ ಅರ್ಧಕ್ಕಿಂತ ಹೆಚ್ಚು ಕೂದಲು ಬೆಳ್ಳಗಾಗಿರುತ್ತದೆ. ಸಾಲ್ಟ್‌ ಅಂಡ್‌ ಪೆಪ್ಪರ್‌ ಲುಕ್‌ ಎಂದು ಹೇಳಿಕೊಂಡು ಟ್ರೆಂಡ್‌ ಜೊತೆ ಫ್ಯಾಷನ್‌ ಹೆಸರಿನಲ್ಲಿ ಸುತ್ತಾಡಿದರೂ, ಆತ್ಮವಿಶ್ವಾಸಕ್ಕೆ ಅಲ್ಲಿ ಸಣ್ಣ ಪೆಟ್ಟು ಬಿದ್ದಿರುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಬಗೆಬಗೆಯ ಬಣ್ಣಗಳ ಸಹಾಯದಿಂದ ಕಾಲಕ್ಕೆ ತಕ್ಕಂತೆ ಕೂದಲ ಶೃಂಗಾರ ಮಾಡಿಸಿಕೊಂಡರೂ, ಕೃತಕ ರಸಾಯನಿಕಗಳನ್ನು ಪದೇ ಪದೇ ಕೂದಲಿಗೆ ಸೋಕಿಸಿಕೊಳ್ಲೂವ ಕಾರಣದಿಂದಲೋ, ಆಗಾಗ ಪಾರ್ಲರಿಗೆ ಎಡತಾಕಿ ಕೂದಲ ಮೇಲೆ ವಿಪರೀತ ರಾಸಾಯನಿಕಗಳ ಬಳಕೆಯಿಂದಲೋ, ಕೂದಲು (Ways to Prevent Gray Hair) ಇನ್ನಷ್ಟು ಹದಗೆಡುತ್ತದೆ. ಸಮಸ್ಯೆ ವಿಕೋಪಕ್ಕೆ ಹೋಗುತ್ತದೆ.

Ways to Prevent Gray Hair

ಎಲ್ಲ ಸಮಸ್ಯೆಗಳಿಗೂ ಉತ್ತರವಿದೆ

ಪ್ರಕೃತಿಯಲ್ಲಿ ನಮ್ಮ ಎಲ್ಲ ಸಮಸ್ಯೆಗಳಿಗೂ ಉತ್ತರವಿದೆ. ಆದರೆ, ಅವನ್ನು ನಿಯಮಿತವಾಗಿ ಬಳಸುವ ತಾಳ್ಮೆ ನಮಗೆ ಇರಬೇಕು ಅಷ್ಟೇ. ಜೊತೆಗೆ ಪ್ರಕೃತಿಗೆ ವಿರುದ್ಧವಾಗಿ ಹೋಗದೆ, ಪ್ರಕೃತಿದತ್ತ ವಿಧಾನಗಳನ್ನು ಅಪ್ಪಿಕೊಂಡರೆ ಸಮಸ್ಯೆಗಳು, ಅಡ್ಡ ಪರಿಣಾಮಗಳು ಇರದು. ಬನ್ನಿ, ಯಾವೆಲ್ಲ ಆಹಾರಗಳ ಸೇವನೆಯಿಂದ, ಸಣ್ಣ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗುವುದರಿಂದ ಪಾರಾಗಬಹುದು ಎಂಬುದನ್ನು ನೋಡೋಣ.

The vitamin C content in it strengthens the immune system Gooseberry Benefits

ನೆಲ್ಲಿಕಾಯಿ

ನೆಲ್ಲಿಕಾಯಿಯ ಆರೋಗ್ಯದ ಲಾಭಗಳು ನಮಗೆಲ್ಲರಿಗೂ ಗೊತ್ತು. ಹೆಚ್ಚು ಸಿ ವಿಟಮಿನ್‌ ಇರುವ ಆಹಾರಗಳ ಪೈಕಿ ನೆಲ್ಲಿಕಾಯಿಗೆ ಅಗ್ರಸ್ಥಾನ. ನೆಲ್ಲಿಕಾಯಿಯ ಸೇವನೆಯಿಂದ ನಮ್ಮ ಕೂದಲ ಆರೋಗ್ಯಕ್ಕೂ ಲಾಭಗಳಿವೆ. ಕೂದಲ ನೈಸರ್ಗಿಕ ಪಿಗ್‌ಮೆಂಟ್‌ಗಳನ್ನು ಹಾಗೆಯೇ ಇರಿಸಲು ಸಹಾಯ ಮಾಡುವ ಆಹಾರವಿದು. ಬೆಳಗ್ಗೆ ನಿತ್ಯವೂ 15 ಎಂಎಲ್‌ನಷ್ಟು ನೆಲ್ಲಿಕಾಯಿ ಜ್ಯೂಸ್‌ ಕುಡಿಯುವುದರಿಂದ ಕೂದಲ ಆರೋಗ್ಯದಲ್ಲಿ ಗಣನೀಯ ಲಾಭ ಕಾಣಬಹುದು.

ಕಾಲೊಂಜಿ ಬೀಜಗಳು

ಕಪ್ಪನೆಯ ಕಾಲೊಂಜಿ ಬೀಜಗಳಿಂದ ಕೂದಲ ಆರೋಗ್ಯಕ್ಕೆ ಸಾಕಷ್ಟು ಲಾಭಗಳಿವೆ. ಇದು ಕೂದಲ ಬುಡದಲ್ಲಿ ರಕ್ತ ಪರಿಚಲನೆಯನ್ನು ಉದ್ದೀಪಿಸುತ್ತದೆ. ಅಷ್ಟೇ ಅಲ್ಲ, ಕೂದಲು ಬೆಳ್ಳಗಾಗುವುದನ್ನೂ ಮುಂದೂಡುತ್ತದೆ. ವಾರಕ್ಕೆರಡು ಬಾರಿ ಕಾಲೊಂಜಿ ಬೀಜಗಳ ಮಾಸ್ಕ್‌ ಮಾಡಿ ಕೂದಲಿಗೆ ಹಚ್ಚುವ ಮೂಲಕ ಉತ್ತಮ ಲಾಭ ಪಡೆಯಬಹುದು.

Neem Leaves Medicinal Leaves

ಕರಿಬೇವು

ಕರಿಬೇವು ಕೂದಲಲ್ಲಿ ಮೆಲನಿನ್‌ ಉತ್ಪಾದನೆಯನ್ನು ಪ್ರಚೋದಿಸುವ ಕಾರಣ ಕೂದಲು ಕಪ್ಪಾಗಿಡುವಲ್ಲಿ ಸಹಾಯ ಮಾಡುತ್ತದೆ. ಬಾಲನೆರೆಯಂತಹ ಸಮಸ್ಯೆಯಿದ್ದರೆ ಖಂಡಿತವಾಗಿಯೂ ಕರಿಬೇವು ರಾಮಬಾಣ. ಇದು ಬಹುಬೇಗನೆ ಕೂದಲು ಬೆಳ್ಳಗಾಗುವುದನ್ನೂ ತಡೆಯುತ್ತದೆ. ಇದರ ಸೇವನೆ, ಕರಿಬೇವಿನ ಎಣ್ಣೆಯಿಂದಲೂ ಲಾಭ ಪಡೆಯಬಹುದು. ನಿತ್ಯವೂ ಮೂರ್ನಾಲ್ಕು ಕರಿಬೇವನ್ನು ಹಾಗೆಯೇ ಸೇಔಇಸುವ ಮೂಲಕವೂ ಲಾಭ ಪಡೆಯಬಹುದು.

ಗೋಧಿಹುಲ್ಲು

ಕೂದಲಿಗೆ ಗೋಧಿ ಹುಲ್ಲೂ ಅತ್ಯಂತ ಒಳ್ಳೆಯದು. ಇದು ಕೂದಲ ಬುಡಕ್ಕೆ ಪೋಷಣೆ ನೀಡುತ್ತದೆ. ದೇಹದಲ್ಲಿರುವ ಕಶ್ಮಲಗಳನ್ನು ಹೊರಹಾಕುತ್ತದೆ. ಬೆಳಗ್ಗೆದ್ದ ಕೂಡಲೇ ಗೋಧಿಹುಲ್ಲಿನ ಜ್ಯೂಸ್‌ ಕುಡಿಯುವ ಮೂಲಕ ಇದರ ಲಾಭ ಪಡೆಯಬಹುದು.

Black Sesame Seeds Black Foods

ಕರಿಎಳ್ಳು

ಕೂದಲ ಆರೋಗ್ಯಕ್ಕೆ ಕರಿಎಳ್ಳು ಉತ್ತಮ ಆಹಾರ. ಎಳ್ಳಿನ ಸೇವನೆಯಿಂದ ಕೂದಲು ಬೆಳ್ಳಾಗುಗುವುದು ನಿಧಾನವಾಗುತ್ತದೆ. ನಿತ್ಯವೂ ಒಂದು ಚಮಚ ಕರಿಎಳ್ಳು ಸೇವನೆ ಮಾಡುವುದರಿಂದ ಹಾಗೂ ಆಗಾಗ ಎಳ್ಳೆಣ್ಣೆಯನ್ನು ಕೂದಲಿಗೆ ಹಚ್ಚಿ ಮಸಾಜ್‌ ಮಾಡುವ ಮೂಲಕ ಇದರ ಲಾಭ ಪಡೆಯಬಹುದು.

Continue Reading

ಆರೋಗ್ಯ

Vaccine for HIV: ವರ್ಷಕ್ಕೆರಡು ಬಾರಿ ಈ ಇಂಜೆಕ್ಷನ್‌ ತೆಗೆದುಕೊಂಡರೆ ಎಚ್‌ಐವಿ ಭಯವೇ ಬೇಡ!

Vaccin for Hiv: ಪ್ರಯೋಗದಲ್ಲಿರುವ ಚುಚ್ಚುಮದ್ದೊಂದು ಎಚ್‌ಐವಿ ಸೋಂಕು ಅಂಟದಂತೆ ತಡೆಯುವಲ್ಲಿ ಶೇ. ನೂರರಷ್ಟು ಸಾಮರ್ಥ್ಯವನ್ನು ತೋರಿಸಿದ್ದು, ಈ ಮಾರಕ ರೋಗವನ್ನು ತಡೆಯುವಲ್ಲಿ ಹೊಸ ಆಶಾಕಿರಣವೊಂದು ಮೂಡಿದೆ. ಎಲ್ಲಿ, ಯಾರ ಮೇಲೆ ನಡೆದ ಪ್ರಯೋಗಗಳಿವು? ಏನೀ ಅಧ್ಯಯನದ ವಿವರಗಳು? ಇಲ್ಲಿದೆ ಮಾಹಿತಿ.

VISTARANEWS.COM


on

Vaccin for Hiv
Koo

ಎಚ್‌ಐವಿ ಸೋಂಕು ಬಾರದಂತೆ (Vaccine for HIV) ತಡೆಯುವಲ್ಲಿ ಹೊಸ ಆಶಾಕಿರಣವೊಂದು ಕಂಡು ಬಂದಿದ್ದು, ವರ್ಷಕ್ಕೆ ಎರಡು ಡೋಸ್‌ನಂತೆ ನೀಡಲಾಗುತ್ತಿರುವ ಚುಚ್ಚುಮದ್ದೊಂದು ಕಿಶೋರಿಯರು ಮತ್ತು ಯುವತಿಯರಲ್ಲಿ ಸೋಂಕುಗಳನ್ನು ಪೂರ್ಣ ಪ್ರಮಾಣದಲ್ಲಿ ತಡೆಗಟ್ಟುವ ಭರವಸೆಯನ್ನು ಮೂಡಿಸಿದೆ. ಈಗಾಗಲೇ ಮೂರನೇ ಹಂತದ ಪ್ರಯೋಗದಲ್ಲಿರುವ ಲೇನಕಾಪವಿರ್‌ (lenacapavir) ಎನ್ನುವ ಚುಚ್ಚುಮದ್ದಿನ ಬಗೆಗೆ ಆಫ್ರಿಕಾದಲ್ಲಿ ನಡೆಸಲಾದ ಪ್ರಯೋಗದ ದತ್ತಾಂಶಗಳು ಈ ಹೊಸ ಭರವಸೆಯನ್ನು ಮೂಡಿಸಿವೆ. ಈ ಚುಚ್ಚುಮದ್ದನ್ನು ಎಚ್‌ಐವಿ ಸೋಂಕು ಇಲ್ಲದಿರುವ ಸುಮಾರು 5000 ಯುವತಿಯರು ಮತ್ತು ಹದಿಹರೆಯದ ಹುಡುಗಿಯರಿಗೆ ನೀಡಲಾಗಿತ್ತು. ಈ ಅಧ್ಯಯನ ನಡೆಯುತ್ತಿರುವಾಗ ಇವರಾರಿಗೂ ಎಚ್‌ಐವಿ ಸೋಂಕು ಹೊಸದಾಗಿ ಅಂಟಿಲ್ಲ ಎನ್ನುವುದು, ಈ ಸೋಂಕನ್ನು ಶೇ. ನೂರರಷ್ಟು ತಡೆಯಲು ಸಾಧ್ಯವಾಗುವ ಆಸೆಯನ್ನು ಹುಟ್ಟಿಸಿದೆ. ಎಚ್‌ಐವಿ ಸೋಂಕುಗಳನ್ನು ತಡೆಗಟ್ಟಲು ಟ್ರುವಾಡದಂಥ ಮಾತ್ರೆಗಳು ಈಗಾಗಲೇ ಬಳಕೆಯಲ್ಲಿವೆ. ಈ ಭೀತಿಯನ್ನು ಕಡಿಮೆ ಮಾಡುವ ಇಂಜೆಕ್ಷನ್‌ಗಳು ಸಹ ಈಗಾಗಲೇ ಚಾಲ್ತಿಯಲ್ಲಿವೆ.

HIV vaccine

ಏನಿದರ ಪ್ರಾಮುಖ್ಯತೆ?

ಈ ಸೂಜಿಮದ್ದಿನ ಪ್ರಾಮುಖ್ಯತೆಯನ್ನು ಅರಿಯುವುದಕ್ಕೆ ಪ್ರಯೋಗದ ವಿವರಗಳನ್ನು ಚುಟುಕಾಗಿಯಾದರೂ ತಿಳಿದುಕೊಳ್ಳಬೇಕು. ದಕ್ಷಿಣ ಆಫ್ರಿಕಾ ಮತ್ತು ಉಗಾಂಡ ದೇಶಗಳ ಯುವತಿಯರು ಮತ್ತು ಕಿಶೋರಿಯರನ್ನು ಒಳಗೊಂಡು ಈ ಪ್ರಯೋಗ ನಡೆಸಲಾಗಿದೆ. ಈ ಪ್ರದೇಶಗಳಲ್ಲಿ ಎಚ್‌ಐವಿ ಸೋಂಕು ತೀರಾ ವ್ಯಾಪಕವಾಗಿದ್ದು, ಅರಿವು ಮತ್ತು ಮುನ್ನೆಚ್ಚರಿಕೆಯ ಕೊರತೆಯೇ ಇದಕ್ಕೆ ಪ್ರಮುಖ ಕಾರಣವೆಂದು ಹೇಳಬಹುದು. 26 ವಾರಗಳ ಅವಧಿಯಲ್ಲಿ ಒಂದು ಬಾರಿಯಂತೆ ಲೇನಕಾಪವಿರ್‌ ಇಂಜೆಕ್ಷನ್‌ ನೀಡಿದ ಒಂದು ಗುಂಪು, ಖಾಲಿ ಇಂಜೆಕ್ಷನ್‌ ನೀಡಿದ ಇನ್ನೊಂದು ಗುಂಪು, ನಿತ್ಯವೂ ಎಚ್‌ಐವಿ ನಿರೋಧಕ ಮಾತ್ರೆ ತೆಗೆದುಕೊಳ್ಳುವ ಮತ್ತೊಂದು ಗುಂಪುಗಳು ಅಧ್ಯಯನಕ್ಕೆ ಒಳಪಟ್ಟಿದ್ದವು.

ಪ್ರಯೋಗ ಯಶಸ್ವಿ

26 ವಾರಗಳ ನಂತರ ಈ ಗುಂಪುಗಳನ್ನು ಪರಿಶೀಲಿಸಿದಾಗ 55 ಮಂದಿಗೆ ಸೋಂಕು ಉಂಟಾಗಿತ್ತು. ಅದರಲ್ಲಿ ಲೇನಕಾಪವಿರ್‌ ತೆಗೆದುಕೊಂಡಿದ್ದ ಗುಂಪಿನಲ್ಲಿ ಮಾತ್ರ ಯಾರೊಬ್ಬರಿಗೂ ಸೋಂಕು ತಾಗಿರಲಿಲ್ಲ. ಉಳಿದ ಗುಂಪುಗಳಲ್ಲಿ- ಒಂದರಲ್ಲಿ 39 ಮಂದಿಗೆ, ಇನ್ನೊಂದರಲ್ಲಿ 16 ಮಂದಿಗೆ ಸೋಂಕು ಅಂಟಿತ್ತು. ಹಾಗಾಗಿ ಎಚ್‌ಐವಿ ಹೊಸದಾಗಿ ಅಂಟದಂತೆ ತಡೆಯುವಲ್ಲಿ ಈ ಔಷಧಿ ಶೇ. ನೂರರಷ್ಟು ಪರಿಣಾಮ ಬೀರಬಹುದು ಎಂಬ ಭರವಸೆ ಇಡೀ ಜಗತ್ತಿನ ಸಂಶೋಧಕರ ಪಾಲಿಗೆ ಮಹತ್ವದ್ದೆನಿಸಿದೆ.
ಯುವತಿಯರಲ್ಲಿ ಮಾತ್ರವೇ ಈ ಔಷಧಿ ಕೆಲಸ ಮಾಡುತ್ತದೆಯೇ ಎಂಬುದನ್ನೂ ಪರಿಶೀಲಿಸಲಾಗುತ್ತಿದೆ. ಇದನ್ನು ಪುರುಷರಿಗೆ ನೀಡಿ ನಡೆಸಲಾಗುತ್ತಿರುವ ಅಧ್ಯಯನ ಇನ್ನೂ ಚಾಲ್ತಿಯಲ್ಲಿದೆ. ಅಲ್ಲಿಂದ ಹೊರಹೊಮ್ಮುವ ದತ್ತಾಂಶಗಳ ಬಗೆಗೂ ಸಂಶೋಧಕರು ಕುತೂಹಲ ಹೊಂದಿದ್ದಾರೆ. ಮುಂದಿನ ಹಂತದ ಪ್ರಯೋಗಗಳಲ್ಲಿ ಪುರುಷರು, ಲಿಂಗ ಬದಲಾಯಿಸಿಕೊಂಡಿರುವ ಮತ್ತು ಲಿಂಗತ್ವ ಅಲ್ಪಸಂಖ್ಯಾತರನ್ನೂ ಒಳಗೊಳ್ಳಲಾಗಿದೆ. ಅರ್ಜೆಂಟೀನಾ, ಬ್ರೆಜಿಲ್, ಮೆಕ್ಸಿಕೊ, ಪೆರು, ಥಾಯ್ಲೆಂಡ್, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ನಡೆಯುತ್ತಿದೆ.

ಚುಚ್ಚು ಮದ್ದಿನಿಂದ ರಕ್ಷಣೆ

ಈಗಾಗಲೇ ಪರಿಣಾಮಕಾರಿ ಎನಿಸಿಕೊಂಡಿರುವ Pre-exposure prophylaxis (or PrEP) ಮಾತ್ರೆಗಳ ಜೊತೆಗೆ, ಈ ಚುಚ್ಚುಮದ್ದು ಸಹ ಹೆಚ್ಚಿನ ರಕ್ಷಣೆಯನ್ನು ನೀಡಲಿದೆ. PrEP ಮಾತ್ರೆಗಳನ್ನು ಪ್ರತಿದಿನ ಅಥವಾ ವೈದ್ಯರು ಸೂಚಿಸಿದ ರೀತಿಯಲ್ಲೇ ತೆಗೆದುಕೊಳ್ಳುವುದು ಅಗತ್ಯ. ಆದರೆ ಈ ಹೊಸ ಭರವಸೆಯನ್ನು ಆರು ತಿಂಗಳಿಗೊಮ್ಮೆ ಮಾತ್ರವೇ ತೆಗೆದುಕೊಂಡರೆ ಸಾಕು ಎನ್ನುವುದು, ಬಳಕೆಯನ್ನು ಇನ್ನಷ್ಟು ಸರಳಗೊಳಿಸುವ ಮತ್ತು ಪರಿಣಾಮಕಾರಿ ಫಲಿತಾಂಶವನ್ನು ಪಡೆಯುವ ನಿಟ್ಟಿನಲ್ಲಿ ಮಹತ್ವದ್ದು ಎನಿಸಿದೆ.

ಇದನ್ನೂ ಓದಿ: Health Tips Kannada: ಚಹಾ, ಕಾಫಿಯನ್ನು ಯಾವ ಸಮಯದಲ್ಲಿ ಕುಡಿಯಬಾರದು ಗೊತ್ತೇ?

ಈಗ ಪ್ರಯೋಗದಲ್ಲಿರುವ ಲೇನಕಾಪವಿರ್‌ ಚುಚ್ಚುಮದ್ದು ವಿಶ್ವದಲ್ಲಿ ಎಲ್ಲಿಯೂ ಎಚ್‌ಐವಿ ತಡೆಯುವ ಔಷಧಿಯೆಂದು ಮಾನ್ಯತೆ ಪಡೆದಿಲ್ಲ. ಆದರೆ ಇನ್ನೂ ಕೆಲವು ಔಷಧಿಗಳ ಜೊತೆಯಲ್ಲಿ ಇದನ್ನೂ ನೀಡುವುದಕ್ಕೆ ಅಮೆರಿಕದಲ್ಲಿ ಪರವಾನಗಿ ಇದೆ. ಇದಕ್ಕೆ ವರ್ಷಕ್ಕೆ ಸುಮಾರು 40,000 ಡಾಲರ್‌ ವೆಚ್ಚ ಈಗಾಗಲೇ ತಗುಲುತ್ತಿದೆ. ಒಂದೊಮ್ಮೆ ಎಚ್‌ಐವಿ ಸೋಂಕು ಬಾರದಂತೆ ತಡೆಯುವಲ್ಲಿ ಇದು ಸಂಪೂರ್ಣ ಯಶಸ್ವಿ ಎಂದಾದರೆ, ಈ ವೆಚ್ಚವನ್ನು ತಗ್ಗಿಸದಿದ್ದರೆ ಬಳಕೆದಾರರಿಗೆ ಪ್ರಯೋಜನ ಆಗದಿರಬಹುದು ಎನ್ನುತ್ತಾರೆ ಅಧ್ಯಯನಕಾರರು.

Continue Reading

ದೇಶ

Chandipura Virus: ಗುಜರಾತ್‌ನಲ್ಲಿ ತೀವ್ರವಾದ ಎನ್ಸೆಫಾಲಿಟಿಸ್ ಸಿಂಡ್ರೋಮ್‌ಗೆ 48 ಬಲಿ; 39 ಮಂದಿಗೆ ಚಾಂದಿಪುರ ವೈರಸ್ ದೃಢ

Chandipura Virus: ಕಳೆದ ಒಂದು ತಿಂಗಳಲ್ಲಿ ಗುಜರಾತ್‌ನಲ್ಲಿ ಮಾರಣಾಂತಿಕ ತೀವ್ರವಾದ ಎನ್ಸೆಫಾಲಿಟಿಸ್ ಸಿಂಡ್ರೋಮ್‌ನಿಂದ ಕನಿಷ್ಠ 48 ಮಂದಿ ಮೃತಪಟ್ಟಿದ್ದಾರೆ. ಆ ಪೈಕಿ ಹೆಚ್ಚಿನವರ ಸಾವಿಗೆ ಚಾಂದಿಪುರ ವೈರಸ್ ಕಾರಣ ಎಂದು ರಾಜ್ಯ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಗುಜರಾತ್‌ನಲ್ಲಿ ಜುಲೈ 26ರವರೆಗೆ ಒಟ್ಟು 127 ಎಇಎಸ್ (AES) ಪ್ರಕರಣಗಳು ವರದಿಯಾಗಿವೆ.

VISTARANEWS.COM


on

Koo

ಗಾಂಧಿನಗರ: ಕಳೆದ ಒಂದು ತಿಂಗಳಲ್ಲಿ ಗುಜರಾತ್‌ (Gujarat)ನಲ್ಲಿ ಮಾರಣಾಂತಿಕ ತೀವ್ರವಾದ ಎನ್ಸೆಫಾಲಿಟಿಸ್ ಸಿಂಡ್ರೋಮ್ (Acute Encephalitis Syndrome)ನಿಂದ ಕನಿಷ್ಠ 48 ಮಂದಿ ಮೃತಪಟ್ಟಿದ್ದಾರೆ. ಆ ಪೈಕಿ ಹೆಚ್ಚಿನವರ ಸಾವಿಗೆ ಚಾಂದಿಪುರ ವೈರಸ್ (Chandipura Virus) ಕಾರಣ ಎಂದು ರಾಜ್ಯ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಗುಜರಾತ್‌ನಲ್ಲಿ ಜುಲೈ 26ರವರೆಗೆ ಒಟ್ಟು 127 ಎಇಎಸ್ (AES) ಪ್ರಕರಣಗಳು ವರದಿಯಾಗಿವೆ. ಈ ಪೈಕಿ 39 ಮಂದಿಗೆ ಚಾಂದಿಪುರ ವೈರಸ್ (CHPV) ಇರುವುದು ದೃಢಪಟ್ಟಿದೆ. ಪಾಸಿಟಿವ್ ಪ್ರಕರಣಗಳನ್ನು ಹೊಂದಿರುವ ಸಬರ್ಕಾಂತ ಮತ್ತು ಪಚ್ಮಹಲ್‌ನಲ್ಲಿ ತಲಾ 6, ಅರಾವಳಿ ಮತ್ತು ಖೇಡಾದಲ್ಲಿ ತಲಾ 3, ಮೆಹ್ಸಾನಾದಲ್ಲಿ 4, ಅಹಮದಾಬಾದ್ ನಗರದಲ್ಲಿ 3 ಮತ್ತು ದಾಹೋಡ್‌ನಲ್ಲಿ 2 ಪ್ರಕರಣಗಳು ವರದಿಯಾಗಿವೆ.

ಜುಲೈ 17ರಂದು ಅರಾವಳಿಯ ಮೋಟಾ ಕಾಂತರಿಯಾ ಎಂಬ ನಾಲ್ಕು ವರ್ಷದ ಮಗು ಸಬರ್ಕಾಂತದ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಇದು ಚಾಂದಿಪುರ ವೈರಸ್‌ನಿಂದ ರಾಜ್ಯದಲ್ಲಿ ಸಂಭವಿಸಿದ ಮೊದಲ ಸಾವಿನ ಪ್ರಕರಣ ಎಂದು ಗುಜರಾತ್ ಸರ್ಕಾರ ದೃಢಪಡಿಸಿತ್ತು. ಮುಖ್ಯವಾಗಿ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಪರಿಣಾಮ ಬೀರುವ ಚಾಂದಿಪುರ ವೈರಸ್ ಸದ್ಯ ಆತಂಕಕ್ಕೆ ಕಾರಣವಾಗಿದೆ. ಸೋಂಕು ತಗುಲಿದಾಗ ಜ್ವರ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಮಾರಣಾಂತಿಕವಾಗುತ್ತದೆ.

ಮೆದುಳಿನ ಉರಿಯೂತ

ಎಇಎಸ್ ಮೆದುಳಿನ ಉರಿಯೂತವನ್ನು ಉಂಟು ಮಾಡುತ್ತದೆ. ಜತೆಗೆ ತೀವ್ರವಾದ ಎನ್ಸೆಫಾಲಿಟಿಕ್ ಕಾಯಿಲೆಗೆ ಕಾರಣವಾಗುತ್ತದೆ. ಇದು ಹರ್ಪಿಸ್ ಸಿಂಪ್ಲೆಕ್ಸ್ ವೈರಸ್, ಎಂಟರೊವೈರಸ್‌, ಮತ್ತು ಚಾಂದಿಪುರ ವೈರಸ್‌ಗಳಿಂದ ಕಾಣಿಸಿಕೊಳ್ಳುತ್ತದೆ. ಪ್ರಸ್ತುತ ಈ ರೋಗ ಲಕ್ಷಣವಿರುವ 54 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 26 ಮಂದಿ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ರೋಗ ಲಕ್ಷಣ

ಚಾಂದಿಪುರ ವೈರಸ್ ಸೋಂಕು ಬಾಧಿತರಲ್ಲಿ ಸಾಮಾನ್ಯ ಜ್ವರದ ಲಕ್ಷಣವೇ ಕಂಡು ಬರುತ್ತದೆ. ಬಾಧಿತರಲ್ಲಿ ದಿಢೀರ್ ಜ್ವರ, ತೀವ್ರ ತಲೆನೋವು, ವಾಂತಿ, ಸ್ನಾಯು ಸೆಳೆತ, ಪ್ರಜ್ಞಾಹೀನತೆ, ಅರೆನಿದ್ರಾವಸ್ಥೆ ಕಂಡು ಬರುತ್ತದೆ. ತಕ್ಷಣ ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಮಾರಣಾಂತಿಕವಾಗಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ರಾಬ್ಡೋವೆರಿಡೆ ವರ್ಗಕ್ಕೆ ಸೇರಿದ ವೈರಸ್ ಈ ರೋಗಕ್ಕೆ ಕಾರಣ.

ಆರೋಗ್ಯ ಅಧಿಕಾರಿಗಳಿಂದ ಕ್ರಮ

ಆರೋಗ್ಯ ಅಧಿಕಾರಿಗಳು ಸಕ್ರಿಯವಾಗಿ ಕಾರ್ಯ ಪ್ರವೃತ್ತರಾಗಿದ್ದು, ರೋಗ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದಾರೆ. ರಾಜ್ಯವು ಕ್ಷಿಪ್ರ ಪ್ರತಿಕ್ರಿಯೆ ತಂಡಗಳನ್ನು ಸಜ್ಜುಗೊಳಿಸಿದೆ. ಪೀಡಿತ ಪ್ರದೇಶಗಳು 41,000ಕ್ಕೂ ಹೆಚ್ಚು ಮನೆಗಳನ್ನು ಒಳಗೊಂಡಿದೆ. ರಾಜ್ಯಾದ್ಯಂತ ಸುಮಾರು 5,00,000 ಮನೆಗಳು, 19,000ಕ್ಕೂ ಹೆಚ್ಚು ಶಾಲೆಗಳು ಮತ್ತು 21,000ಕ್ಕೂ ಹೆಚ್ಚು ಅಂಗನವಾಡಿಗಳಲ್ಲಿ ಕೀಟನಾಶಕಗಳನ್ನು ಸಿಂಪಡಿಸುವ ಕಾರ್ಯ ನಡೆಯುತ್ತಿದೆ. ಮಲಾಥಿಯಾನ್ ಫಾಗಿಂಗ್, ಸ್ಯಾಂಡ್ ಫ್ಲೈಗಳು ಮತ್ತು ಸೊಳ್ಳೆಗಳ ಸಂಖ್ಯೆಯನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ವಿಶೇಷವಾಗಿ ಹೆಚ್ಚಿನ ಪ್ರಕರಣಗಳು ವರದಿಯಾದ ಪ್ರದೇಶಗಳಲ್ಲಿ ತಡೆಗಟ್ಟುವ ಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Chandipura Virus: ಡೆಂಗ್ಯೂ ಹಾವಳಿ ನಡುವೆ ಕಾಡುತ್ತಿದೆ ಚಾಂದಿಪುರ ವೈರಸ್; ಇದುವರೆಗೆ 6 ಮಕ್ಕಳು ಬಲಿ: ಏನಿದರ ಲಕ್ಷಣ?

Continue Reading

ಆರೋಗ್ಯ

Health Tips Kannada: ಚಹಾ, ಕಾಫಿಯನ್ನು ಯಾವ ಸಮಯದಲ್ಲಿ ಕುಡಿಯಬಾರದು ಗೊತ್ತೇ?

Health Tips Kannada: ಎದ್ದ ಕೂಡಲೇ ಚಹಾ ಕುಡಿಯದಿದ್ದರೆ ಅದೇನೋ ಕಳೆದುಕೊಂಡ ಭಾವ ಹಲವರನ್ನು ಕಾಡುತ್ತದೆ. ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದು ಒಳ್ಲೆಯದಲ್ಲ ಎಂಬುದು ಗೊತ್ತಿದ್ದರೂ, ಈ ಚಹಾ ಕುಡಿಯುವ ಅಭ್ಯಾಸವನ್ನು ಬಿಡಲು ಬಹುತೇಕರಿಗೆ ಸಾಧ್ಯವಾಗುವುದಿಲ್ಲ. ಅದೇನೇ ಆಗಲಿ, ಚಹಾ ಮಾತ್ರ ಬೇಕು. ಆದರೆ, ನೆನಪಿಡಿ. ಎಲ್ಲ ಸಮಯದಲ್ಲೂ ಚಹಾ ಕಾಫಿ ಸೇವನೆ ಒಳ್ಳೆಯದಲ್ಲ.

VISTARANEWS.COM


on

Health Tips Kannada
Koo

ಬಹುತೇಕರಿಗೆ ದಿನದ ಆರಂಭ ಎಂದರೆ ಒಂದು ಕಪ್‌ ಚಹಾ ಅಥವಾ ಕಾಫಿ. ಇದೊಂದು ಸಂಪ್ರದಾಯದಂತೆ ಎಷ್ಟೋ ವರ್ಷಗಳಿಂದ ನಮ್ಮನ್ನು ಪೊರೆಯುತ್ತಿದೆ. ಎದ್ದ ಕೂಡಲೇ ಚಹಾ ಕುಡಿಯದಿದ್ದರೆ ಅದೇನೋ ಕಳೆದುಕೊಂಡ ಭಾವ ಹಲವರನ್ನು ಕಾಡುತ್ತದೆ. ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದು ಒಳ್ಲೆಯದಲ್ಲ ಎಂಬುದು ಗೊತ್ತಿದ್ದರೂ, ಈ ಚಹಾ ಕುಡಿಯುವ ಅಭ್ಯಾಸವನ್ನು ಬಿಡಲು ಬಹುತೇಕರಿಗೆ ಸಾಧ್ಯವಾಗುವುದಿಲ್ಲ. ಅದೇನೇ ಆಗಲಿ, ಚಹಾ ಮಾತ್ರ ಬೇಕು. ಆದರೆ, ನೆನಪಿಡಿ. ಎಲ್ಲ ಸಮಯದಲ್ಲೂ ಚಹಾ ಕಾಫಿ ಸೇವನೆ ಒಳ್ಳೆಯದಲ್ಲ. ಕೆಲವು ಸಮಯಗಳಲ್ಲಿ ಇವುಗಳ ಸೇವನೆ ಮಾಡುವುದರಿಂದ ನಾವು ಸೇವಿಸುವ ಆಹಾರಗಳಲ್ಲಿರುವ ಪೋಷಕಾಂಶಗಳು ದೇಹಕ್ಕೆ ಸರಿಯಾಗಿ ಸೇರದೆ ನಷ್ವಾಗಬಹುದು. ಇನ್ನೂ ಕೆಲವೊಮ್ಮೆ ಇವು ಜೀರ್ಣಕ್ರಿಯೆಯನ್ನೇ ಬಾಧಿಸಬಹುದು. ಅಷ್ಟೇ ಅಲ್ಲ, ನಮ್ಮ ದೇಹದ ಹಲವು ಸಮಸ್ಯೆಗಳಿಗೆ ಮೂಲ ಕಾರಣ ಈ ನಮ್ಮ ಕೆಟ್ಟ ಅಭ್ಯಾಸದಿಂದಲೂ ಇರಬಹುದು. ಬನ್ನಿ, ಚಹಾ ಹಾಗೂ ಕಾಫಿಯನ್ನು ನಾವು ಯಾವ ಸಮಯದಲ್ಲಿ ಕುಡಿಯಬಾರದು (Health Tips Kannada) ಎಂಬುದನ್ನು ನೋಡೋಣ.

drink tea

ಬೆಳಗ್ಗೆ ಎದ್ದ ಕೂಡಲೇ

ಬಹುತೇಕ ಎಲ್ಲರಿಗೂ ಇರುವ ಅಭ್ಯಾಸವಿದು. ಬೆಳಗ್ಗೆ ಎದ್ದ ಕೂಡಲೇ ಒಂದು ಕಪ್‌ ಚಹಾ ಕೈಯಲ್ಲಿದ್ದರೇ ದಿನ ಆರಂಭವಾದ ಹಾಗೆ. ಈ ಅಭ್ಯಾಸ ಅನೇಕರಿಗಿದೆ. ಇದನ್ನು ಬಿಡುವುದು ಕಷ್ಟ ನಿಜವೇ. ಆದರೆ, ಬೆಳಗ್ಗೆ ಎದ್ದ ಕೂಡಲೇ ಚಹಾ ಅಥವಾ ಕಾಫಿಯನ್ನು ಹೊಟ್ಟೆಗಿಳಿಸುವುದರಿಂದ ಇದರಲ್ಲಿರುವ ಕೆಫೀನ್‌ ಅಂಶವು ಖಾಲಿ ಹೊಟ್ಟೆಯ ವ್ಯವಸ್ಥೆಯನ್ನು ಹದಗೆಡಿಸುತ್ತದೆ. ಹಾರ್ಮೋನ್‌ ಉತ್ಪಾದನೆಯ ವ್ಯವಸ್ಥೆಯನ್ನೂ ಇದೂ ಹದಗೆಡಿಸುವುದಲ್ಲದೆ, ಇದರಿಂದ ಮಾನಸಿಕವಾಗಿಯೂ ಒತ್ತಡ ಇತ್ಯಾದಿ ಸಮಸ್ಯೆಗಳು ಬರಬಹುದು.

ಇದನ್ನೂ ಓದಿ: Contact Lens: ಕಾಂಟ್ಯಾಕ್ಟ್‌ ಲೆನ್ಸ್‌ ಬಳಸುತ್ತೀರಾ? ಈ ವಿಷಯಗಳು ತಿಳಿದಿರಲಿ!

ಊಟ ತಿಂಡಿಯ ಜೊತೆಗೆ

ನಿಮಗೆ ಊಟ ತಿಂಡಿಯ ಜೊತೆಗೆ ಕಾಫಿ ಅಥವಾ ಚಹಾ ಕುಡಿಯುವ ಅಭ್ಯಾಸ ಇದ್ದರೆ ಮತ್ತೊಮ್ಮೆ ಯೋಚಿಸಿ. ಚಹಾ ಮತ್ತು ಕಾಫಿ ಆಮ್ಲೀಯ ಗುಣವನ್ನೂ ಹೊಂದಿರುವುದರಿಂದ ಇದು ನಿಮ್ಮ ಜೀರ್ಣಕ್ರಿಯೆಯನ್ನೇ ಹಾಳುಗೆಡವಬಹುದು. ನೀವು ಪ್ರೊಟೀನ್‌ಯುಕ್ತ ಆಹಾರ ತೆಗೆದುಕೊಂಡರೆ, ಅದರ ಜೊತೆಗೆ ಚಹಾ/ಕಾಫಿಯನ್ನೂ ಸೇವಿಸಿದರೆ ಪ್ರೊಟೀನ್‌ ನಿಮ್ಮ ದೇಹದಕ್ಕೆ ಒದಗದು. ಅಷ್ಟೇ ಅಲ್ಲ, ಪ್ರೊಟೀನ್‌ ಕರಗಲು ಕಷ್ಟವಾಗುತ್ತದೆ. ನಿಮ್ಮ ಆಹಾರದಲ್ಲಿರುವ ಕಬ್ಬಿಣದಂಶವೂ ಕೂಡಾ ದೇಹಕ್ಕೆ ಸೇರಲು ಕಷ್ಟವಾಗಬಹುದು. ಹಾಗಾಗಿ, ಆಹಾರದ ಜೊತೆಗೆ ಚಹಾ ಕಾಫಿ ಸೇವನೆ ಮಾಡುವುದರಿಂದ ನಿಮ್ಮ ಆಹಾರದಲ್ಲಿರುವ ಪೋಷಕಾಂಶಗಳು ಕರಗಿ ನಿಮ್ಮ ದೇಹಕ್ಕೆ ಸೇರುವ ಕ್ರಿಯೆ ನಿಧಾನವಾಗುತ್ತದೆ. ಹಾಗೆಯೇ ಪೋಷಕಾಂಶಗಳು ನಷ್ಟವಾಗಲೂಬಹುದು.

drink coffe

ಸಂಜೆ ನಾಲ್ಕು ಗಂಟೆಯ ನಂತರ

ಸಂಜೆ ಕಾಫಿ ಅಥವಾ ಚಹಾ ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡ ಮಂದಿ ಇಲ್ಲೊಮ್ಮೆ ಕೇಳಿ. ಚಹಾ ಅಥವಾ ಕಾಫಿಯನ್ನು ನೀವು ಮಲಗುವುದಕ್ಕೂ ಹತ್ತು ಗಂಟೆಗಳ ಮೊದಲು ಸೇವಿಸಬೇಕಂತೆ. ಆದರೆ ಇದು ಸಾಧ್ಯವಾಗದಿದ್ದರೆ, ಕನಿಷ್ಟ ಆರು ಗಂಟೆಗಳ ಮೊದಲು ಸೇವಿಸಬಹುದಂತೆ. ಅಂದರೆ, ಸಂಜೆ ನಾಲ್ಕು ಗಂಟೆಗೂ ಮೊದಲು ಕಾಫಿ ಚಹಾ ಸೇವಿಸಿ. ಇದು ನಿಮ್ಮ ನಿದ್ದೆಯ ಗುಣಮಟ್ಟವನ್ನು ಹೆಚ್ಚಿಸುವುದಲ್ಲದೆ, ಪಿತ್ತಕೋಶವನ್ನೂ ಆರೋಗ್ಯವಾಗಿಡುತ್ತದೆ. ಕಾರ್ಟಿಸಾಲ್‌ ಮಟ್ಟವನ್ನೂ ಕಡಿಮೆ ಮಾಡುತ್ತದೆ. ಜೀರ್ಣಕ್ರಿಯೆಯನ್ನು ಪ್ರಚೋದಿಸುತ್ತದೆ.
ಈ ಸಮಯವನ್ನು ಹೊರತುಪಡಿಸಿ, ಉಳಿದ ಸಮಯಗಳಲ್ಲಿ ನೀವು ನಿಮ್ಮ ಇಷ್ಟದ ಚಹಾ ಕಾಫಿಯನ್ನು ಕುಡಿಯಬಹುದು. ಆದರೆ, ಇದು ಅತಿಯಾಗದಿರಲಿ. ಅಂದು ದಿನಕ್ಕೆ 300 ಮಿಲಿಗ್ರಾಂಗಿಂತ ಹೆಚ್ಚಿನ ಕೆಫೀನ್‌ ನಿಮ್ಮ ಹೊಟ್ಟೆ ಸೇರದಿರಲಿ. ಸುಮಾರು 150 ಎಂಎಲ್‌ ಕಾಫಿಯಲ್ಲಿ 80ರಿಂದ 120 ಮಿಲಿಗ್ರಾಂ ಕೆಫೀನ್‌ ಇದೆ. ಇನ್‌ಸ್ಟ್ಯಾಂಟ್‌ ಕಾಫಿಯಲ್ಲಿ 50-65 ಎಂಜಿ ಕೆಫೀನ್‌ ಇದ್ದರೆ, ಚಹಾದಲ್ಲಿ 30-65 ಎಂಜಿ ಕೆಫೀನ್‌ ಇದೆ. ಹೀಗಾಗಿ, ಈ ಬಗ್ಗೆ ಎಚ್ಚರ ವಹಿಸಿ ಹಿತಮಿತವಾಗಿ ನಿಮ್ಮ ಪ್ರೀತಿಯ ಪೇಯವನ್ನು ನಿತ್ಯವೂ ಕುಡಿಯಬಹುದು ಎಂಬುದು ತಜ್ಞರ ಮಾತು.

Continue Reading
Advertisement
Delhi Floods
ಪ್ರಮುಖ ಸುದ್ದಿ4 hours ago

Delhi Floods: ದೆಹಲಿಯಲ್ಲಿ ಭಾರಿ ಮಳೆ; ಕೋಚಿಂಗ್‌ ಸೆಂಟರ್‌ಗೆ ನೀರು ನುಗ್ಗಿ ಇಬ್ಬರು ವಿದ್ಯಾರ್ಥಿನಿಯರ ಸಾವು!

Paris Olympics 2024
ಕ್ರೀಡೆ4 hours ago

Paris Olympics 2024 : ಭಾರತಕ್ಕೆ ಒಲಿಂಪಿಕ್ ಕ್ರೀಡಾಕೂಟ ತರುವ ದಿನ ದೂರವಿಲ್ಲ; ಇಂಡಿಯಾ ಹೌಸ್ ಉದ್ಘಾಟನೆಯಲ್ಲಿ ನೀತಾ ಅಂಬಾನಿ

Pervez Musharraf
ದೇಶ4 hours ago

Pervez Musharraf: ಭಾರತ ವಿರೋಧಿ ಪರ್ವೇಜ್‌ ಮುಷರ‍್ರಫ್‌ಗೆ ಕೇರಳ ಬ್ಯಾಂಕ್‌ ಗೌರವ; ಭುಗಿಲೆದ್ದ ವಿವಾದ

Paris Olympics 2024
ಪ್ರಮುಖ ಸುದ್ದಿ4 hours ago

Paris Olympics 2024 : ಷಟ್ಲರ್​ಗಳ ಪರಾಕ್ರಮ ಆರಂಭ; ಸಿಂಗಲ್ಸ್​ನಲ್ಲಿ ಲಕ್ಷ್ಯ ಸೇನ್​, ಡಬಲ್ಸ್​ನಲ್ಲಿ ಸಾತ್ವಿಕ್​- ಚಿರಾಗ್ ಜೋಡಿಗೆ ಗೆಲುವು

Paris Olympics 2024
ಪ್ರಮುಖ ಸುದ್ದಿ5 hours ago

Paris Olympics 2024 : ಭಾರತ ಹಾಕಿ ತಂಡದ ಶುಭಾರಂಭ; ನ್ಯೂಜಿಲ್ಯಾಂಡ್ ವಿರುದ್ಧ 3-2 ಗೋಲ್​ಗಳ ಗೆಲುವು

Tihar Jail
ದೇಶ5 hours ago

Tihar Jail: ತಿಹಾರ ಜೈಲಿನ 125 ಕೈದಿಗಳಿಗೆ ಎಚ್‌ಐವಿ ಪಾಸಿಟಿವ್‌; ಇವರು ‘ಬೇಲಿ’ ಹಾರಿದ್ದು ಎಲ್ಲಿ?

IND vs SL
ಪ್ರಮುಖ ಸುದ್ದಿ5 hours ago

IND vs SL : ಶ್ರೀಲಂಕಾ ವಿರುದ್ಧ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತಕ್ಕೆ 43 ರನ್​ ಭರ್ಜರಿ ಜಯ

Rishabh Pant
ಪ್ರಮುಖ ಸುದ್ದಿ6 hours ago

Rishabh Pant : ಧೋನಿಯಂತೆ ಭರ್ಜರಿ ಹೆಲಿಕಾಪ್ಟರ್​ ಶಾಟ್​​ ಮೂಲಕ ಸಿಕ್ಸರ್ ಬಾರಿಸಿದ ರಿಷಭ್ ಪಂತ್​

Puneeth Kerehalli
ಕರ್ನಾಟಕ6 hours ago

Puneeth Kerehalli: ಪುನೀತ್‌ ಕೆರೆಹಳ್ಳಿಗೆ ನ್ಯಾಯಾಂಗ ಬಂಧನ; 14 ದಿನ ಪರಪ್ಪನ ಅಗ್ರಹಾರವೇ ಗತಿ!

Mumbai Girl
ದೇಶ6 hours ago

ಬಾರೆ ಸಖಿ ಎಂದು 20 ವರ್ಷದ ಯುವತಿಯನ್ನು ಕರೆದುಕೊಂಡು ಹೋದ, ಕೊಂದು ಪೊದೆಯಲ್ಲಿ ಬಿಸಾಡಿದ; ಕೃತ್ಯಕ್ಕೆ ಕಾರಣವೇನು?

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ9 hours ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ14 hours ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ15 hours ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

Ankola landslide
ಉತ್ತರ ಕನ್ನಡ1 day ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ1 day ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ1 day ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ2 days ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ2 days ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್3 days ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ3 days ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

ಟ್ರೆಂಡಿಂಗ್‌