Red Line on Medicine Strip: ಔಷಧ ಪ್ಯಾಕೇಟ್‌ ಮೇಲೆ ಕೆಂಪು ಗೆರೆ ಏಕಿರುತ್ತದೆ ಅನ್ನೋದು ಗೊತ್ತಾ? - Vistara News

ಆರೋಗ್ಯ

Red Line on Medicine Strip: ಔಷಧ ಪ್ಯಾಕೇಟ್‌ ಮೇಲೆ ಕೆಂಪು ಗೆರೆ ಏಕಿರುತ್ತದೆ ಅನ್ನೋದು ಗೊತ್ತಾ?

ಸಾಮಾನ್ಯವಾಗಿ ಔಷಧಗಳ (Medicine Check) ಪ್ಯಾಕೆಟ್ ಮೇಲೆ ಕೆಂಪು ಬಣ್ಣದ ಪಟ್ಟಿಯನ್ನು ಗಮನಿಸಿರಬಹುದು. ಇದು ಔಷಧ, ಮಾತ್ರೆಗಳ ಬಗ್ಗೆ ಬಹಳ ಮುಖ್ಯವಾದುದನ್ನು ಸೂಚಿಸುತ್ತದೆ ಎಂಬುದು ಎಷ್ಟೋ ಜನರಿಗೆ ಗೊತ್ತಿರಲಿಕ್ಕಿಲ್ಲ. ಈ ಕೆಂಪು ಗೆರೆಯ ಅರ್ಥವೇನು, ಇದನ್ನು ಯಾಕೆ ಔಷಧಗಳ ಮೇಲೆ ಹಾಕಲಾಗುತ್ತದೆ ಎನ್ನುವ ಕುರಿತು ಮಾಹಿತಿ ಇಲ್ಲಿದೆ.

VISTARANEWS.COM


on

Medicine
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೆಲವರು ಔಷಧಗಳ ಮೇಲೆ ಹೆಚ್ಚು ಅವಲಂಬಿತರಾಗಿರುತ್ತಾರೆ. ತಲೆನೋವಿನಿಂದ ಹಿಡಿದು ದೀರ್ಘಕಾಲದ ಕಾಯಿಲೆಗಳವರೆಗೆ ಪರಿಹಾರಕ್ಕಾಗಿ ಔಷಧವನ್ನು (Medicine) ಅವಲಂಬಿಸಿರುವ ಅನೇಕರಿದ್ದಾರೆ. ವೈದ್ಯರ ಸಮಾಲೋಚನೆ (doctors prescription) ಇಲ್ಲದೆ ಯಾವುದೇ ಔಷಧವನ್ನು (Check Medicine) ತೆಗೆದುಕೊಳ್ಳಬಾರದು ಎನ್ನುವ ನಿಯಮವಿದ್ದರೂ ಹೆಚ್ಚಿನವರು ಔಷಧಾಲಯಗಳಿಂದ (Pharmacy) ಔಷಧ ತಂದು ತೆಗೆದುಕೊಳ್ಳುತ್ತಾರೆ. ಬಳಿಕ ಅದರ ಅಡ್ಡ ಪರಿಣಾಮಗಳನ್ನು ಎದುರಿಸುತ್ತಾರೆ. ಕೆಲವೊಮ್ಮೆ ಇದು ಜೀವಕ್ಕೆ ಅಪಾಯ ಉಂಟು ಮಾಡಬಹುದು.

ಈ ಕುರಿತು ಜಾಗೃತಿ ಮೂಡಿಸುವ ಸಲುವಾಗಿ 2016ರಲ್ಲಿ ಭಾರತ ಸರ್ಕಾರದ ಆರೋಗ್ಯ ಸಚಿವಾಲಯವು ಔಷಧದ ಮೇಲೆ ಕೆಂಪು ರೇಖೆಯನ್ನು (Red Line on Medicine Packets) ಹಾಕಿ ಜನರಿಗೆ ಅರಿವು ಮೂಡಿಸುವ ಪ್ರಯತ್ನ ಮಾಡಿತ್ತು. ಈ ಕುರಿತು ಟ್ವಿಟ್ಟರ್‌ನಲ್ಲಿ ಪೋಸ್ಟ್ ಅನ್ನೂ ಹಂಚಿಕೊಂಡಿತ್ತು. ಔಷಧದ ಮೇಲೆ ಕೆಂಪು ಪಟ್ಟಿಯಿರುವ ಯಾವುದೇ ಔಷಧಗಳನ್ನು ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ತೆಗೆದುಕೊಳ್ಳಬಾರದು. ಹೀಗಾಗಿ ಔಷಧದ ಮುಕ್ತಾಯ ದಿನಾಂಕವನ್ನು ಪರಿಶೀಲಿಸುವಾಗ ಪ್ಯಾಕೆಟ್ ಮೇಲಿರುವ ಕೆಂಪು ಪಟ್ಟಿಯನ್ನೂ ಗಮನಿಸುವುದು ಮುಖ್ಯವಾಗಿದೆ ಎಂದು ಸಚಿವಾಲಯ ಈ ಪೋಸ್ಟ್ ನಲ್ಲಿ ತಿಳಿಸಿದೆ.


ಸಾಮಾನ್ಯವಾಗಿ ಈ ಗೆರೆ ಆಂಟಿ ಬಯೋಟಿಕ್ ಔಷಧಗಳ ಮೇಲೆ ಇರುತ್ತದೆ. ಇವುಗಳನ್ನು ಅತಿಯಾಗಿ ತೆಗೆದುಕೊಂಡರೆ ಕೆಲವು ವರ್ಷಗಳ ಅನಂತರ ಅವು ದೇಹದ ಮೇಲೆ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ ಎಂದು ಇಲಾಖೆ ಎಚ್ಚರಿಸಿದೆ.

ಔಷದ ಖರೀದಿ ಮಾಡುವಾಗ ಗಮನಿಸಬೇಕಾದ ಸಂಗತಿಗಳು ಇಲ್ಲಿವೆ.


ಡೋಸೇಜ್

ಕೆಂಪು ಔಷಧ ಪಟ್ಟಿಯು ಮಾತ್ರೆಗಳು ಅಥವಾ ಬಾಟಲಿಯಲ್ಲಿ ಗುರುತಿಸಲು ಸುಲಭವಾಗಿದೆ. ಇದು ವಯಸ್ಕರು ಸೇವಿಸಬಹುದಾದ ಡೋಸೇಜ್ ಅನ್ನು ಒಳಗೊಂಡಿದೆ. ಔಷಧವು ವಯಸ್ಕರು ಮತ್ತು ಮಕ್ಕಳಿಗೆ ವಿಭಿನ್ನ ಡೋಸೇಜ್ ಗಳನ್ನು ಒಳಗೊಂಡಿರುತ್ತದೆ. ಔಷಧವನ್ನು ನಿಯಮಿತವಾಗಿ ಸೇವಿಸುತ್ತಿದ್ದರೂ ಖರೀದಿಸುವ ಮೊದಲು ಯಾವಾಗಲೂ ಡೋಸೇಜ್ ಅನ್ನು ಪರಿಶೀಲಿಸಿ.

ಅಡ್ಡಪರಿಣಾಮ

ಔಷಧಗಳು ಅಲರ್ಜಿಯನ್ನು ಉಂಟು ಮಾಡುವ ಅಂಶವನ್ನು ಸೂಚಿಸುವ ಎಚ್ಚರಿಕೆಯ ಲೇಬಲ್ ಅನ್ನು ಹೊಂದಿರುತ್ತವೆ. ಅದನ್ನು ಓದಿ ಮತ್ತು ನಿಮ್ಮ ವೈದ್ಯರಿಗೆ ತಿಳಿಸಿ. ಇದರಿಂದ ಔಷಧವನ್ನು ಬದಲಾಯಿಸಬಹುದು ಮತ್ತು ಅದರ ಬದಲಿಗೆ ಬೇರೆ ಯಾವುದನ್ನಾದರೂ ಶಿಫಾರಸು ಮಾಡಬಹುದು. ರೋಗಿಗಳು ಮತ್ತು ಆರೈಕೆ ಮಾಡುವವರು ಸಂಭಾವ್ಯ ಅಡ್ಡಪರಿಣಾಮಗಳು, ಔಷಧಗಳ ಪರಸ್ಪರ ಕ್ರಿಯೆಗಳು, ಅಲರ್ಜಿಯ ಪ್ರತಿಕ್ರಿಯೆಗಳು ಮತ್ತು ವಿಶೇಷ ಸೂಚನೆಗಳ ಬಗ್ಗೆ ಎಚ್ಚರಿಕೆಯಿಂದ ಗಮನಿಸಬೇಕು.

ಸಂಗ್ರಹ

ಎಲ್ಲ ಔಷಧಗಳು ಹೆಚ್ಚು ಕಾಲ ಸಂಗ್ರಹಕ್ಕೆ ಯೋಗ್ಯವಾಗಿರುವುದಿಲ್ಲ. ಸಂಗ್ರಹಕ್ಕೆ ನಿರ್ದಿಷ್ಟ ಸ್ಥಿತಿಗಳನ್ನು ಸೂಚಿಸಲಾಗಿರುತ್ತದೆ. ಶೇಖರಣಾ ಪರಿಸ್ಥಿತಿಗಳು ಔಷಧೀಯ ಸ್ಥಿರತೆ ಮತ್ತು ಸಾಮರ್ಥ್ಯವನ್ನು ಕಾಪಾಡಿಕೊಳ್ಳಲು ಅಗತ್ಯವಿರುವ ಪರಿಸರ ಅಂಶಗಳನ್ನು ಸೂಚಿಸುತ್ತವೆ. ಅಸಮರ್ಪಕ ಶೇಖರಣೆಯು ಔಷಧಿಗಳ ಪರಿಣಾಮಕಾರಿತ್ವವನ್ನು ಕಡಿಮೆ ಮಾಡಿ ಪ್ರತಿಕೂಲ ಪರಿಣಾಮಗಳ ಅಪಾಯವನ್ನು ಹೆಚ್ಚಿಸಬಹುದು.

Medicine
Medicine


ಮುಕ್ತಾಯ ದಿನಾಂಕ

ಯಾವತ್ತೂ ಔಷಧದ ಮುಕ್ತಾಯ ದಿನಾಂಕವನ್ನು ಪರಿಶೀಲಿಸದೆ ಔಷಧ ಖರೀದಿಸಬೇಡಿ. ರೋಗಿಗಳು ಅವಧಿ ಮೀರಿದ ಔಷಧಗಳನ್ನು ಬಳಸಬಾರದು. ಇದು ಪ್ರತಿಕೂಲ ಪರಿಣಾಮ ಅಥವಾ ಚಿಕಿತ್ಸೆಯ ವೈಫಲ್ಯಕ್ಕೆ ಕಾರಣವಾಗಬಹುದು.

ಬ್ಯಾಚ್ ಸಂಖ್ಯೆ

ಇದು ಔಷಧಗಳ ತಯಾರಿಕೆಯ ಇತಿಹಾಸವನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ. ಕೆಲವು ಔಷಧಗಳು ಎಕ್ಸ್‌ಪೈರಿ ಕೋಡ್ ಅನ್ನು ಸಹ ಒಳಗೊಂಡಿರುತ್ತದೆ. ಇದು ಮುಕ್ತಾಯ ದಿನಾಂಕ ಅಥವಾ ಬ್ಯಾಚ್ ಗುರುತಿನ ಕುರಿತು ಹೆಚ್ಚುವರಿ ಮಾಹಿತಿಯನ್ನು ಒದಗಿಸುತ್ತದೆ.

ಇದನ್ನೂ ಓದಿ: Multivitamins: ನಮಗೆ ವಿಟಮಿನ್‌ ಪೂರಕಗಳು ಅಗತ್ಯವೆಂದು ತಿಳಿಯುವುದು ಹೇಗೆ?

ಕರಪತ್ರ

ಪ್ರತಿಯೊಂದು ಔಷಧದಲ್ಲೂ ಕಾಗದದ ಕರಪತ್ರವಿರುತ್ತದೆ. ಇದನ್ನು ಓದುವುದು ಬಹಳ ಮುಖ್ಯ. ಇದು ಔಷಧಿಯ ಬಳಕೆ, ಅಡ್ಡ ಪರಿಣಾಮ, ಮುನ್ನೆಚ್ಚರಿಕೆಗಳು ಮತ್ತು ಬಳಕೆಗೆ ಸೂಚನೆಗಳನ್ನು ಒಳಗೊಂಡಂತೆ ಸಮಗ್ರ ಮಾಹಿತಿಯನ್ನು ಒದಗಿಸುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Benefits of weight training for women: ತೂಕ ಎತ್ತುವ ವ್ಯಾಯಾಮ ಮಹಿಳೆಯರಿಗೆ ಏಕೆ ಬೇಕು?

Benefits of weight training for women: ವೇಯ್ಟ್‌ ಲಿಫ್ಟಿಂಗ್‌ ಎನ್ನುತ್ತಿದ್ದಂತೆ ಅದು ಮಹಿಳೆಯರಿಗಲ್ಲ ಎನ್ನುವ ಭಾವ ಬಹಳ ಜನರಲ್ಲಿದೆ. ಇದೇನು ಒಲಿಂಪಿಕ್ಸ್‌ಗಾಗಿ ನಡೆಸುವ ಭಾರ ಎತ್ತುವ ತಾಲೀಮಲ್ಲ. ಸ್ನಾಯುಗಳ ಬಲ ಹೆಚ್ಚಿಸಿ, ದೇಹಸ್ವಾಸ್ಥ್ಯ ವೃದ್ಧಿಸಿಕೊಳ್ಳಲು ಮಹಿಳೆಯರಿಗೆ ಅನುಕೂಲವಾಗುವ ವೇಯ್ಟ್‌ ಟ್ರೇನಿಂಗ್.‌ ಇದನ್ನು ಯಾಕಾಗಿ ಮಾಡಬೇಕು? ಇದನ್ನು ಮಾಡುವುದರಿಂದ ಏನೆಲ್ಲ ಪ್ರಯೋಜನಗಳಿವೆ? ಈ ಕುರಿತ ಮಾಹಿತಿ.

VISTARANEWS.COM


on

Benefits of weight training for women
Koo

ತೂಕ ಎತ್ತುವುದಕ್ಕೂ ಮಹಿಳೆಯರಿಗೂ (Benefits of weight training for women) ಅಂಥ ಅನುಬಂಧವೇನಿಲ್ಲ. ಹಾಗೆಂದು ಬಾವಿಯಿಂದ ನೀರೆತ್ತುವುದರಿಂದ ಹಿಡಿದು, ಸೌದೆ ಹೊರೆ ಹೊರುವವರೆಗೆ ನಮ್ಮ ಗ್ರಾಮೀಣ ಮಹಿಳೆಯರ ಸಾಮರ್ಥ್ಯ ಊಹೆಗೆ ಮೀರಿದ್ದು. ಇದೀಗ ವ್ಯಾಯಾಮಕ್ಕಾಗಿ ತೂಕ ಎತ್ತುವ ಬಗ್ಗೆ ಹೇಳುವುದಾದರೆ, ಹಲವಾರು ಸ್ತ್ರೀಯರು ಇದನ್ನು ಇಷ್ಟಪಡುವುದಿಲ್ಲ. ಆದರೂ ತೂಕ ಎತ್ತುವ ಮೂಲಕ ಸ್ನಾಯುಗಳಿಗೆ ಪ್ರತಿರೋಧಕತೆಯನ್ನು ಒಡ್ಡಿ, ಈ ಮೂಲಕ ಮಾಂಸಪೇಶಿಗಳನ್ನು ಸಬಲಗೊಳಿಸುವ ಕ್ರಿಯೆ ಹೊಸದೇನಲ್ಲ, ತೀರಾ ಹಳೆಯದ್ದೆ. ಹೀಗೆನ್ನುತ್ತಿದ್ದಂತೆ ವೇಯ್ಟ್‌ ಲಿಫ್ಟರ್‌ಗಳಂತೆ ತೂಕ ಎತ್ತಿ ಹೊಟ್ಟೆ ಕರಗಿಸಿ, ರಟ್ಟೆ ಬೆಳೆಸುವುದು ಎಂಬ ತೀರ್ಮಾನಕ್ಕೆ ಬರುವ ಅಗತ್ಯವಿಲ್ಲ. ದೇಹದ ಒಟ್ಟು ಸ್ವಾಸ್ಥ್ಯಕ್ಕೆ ಇವೆಲ್ಲ ಹಲವು ರೀತಿಯಲ್ಲಿ ಇಂಬು ನೀಡುತ್ತವೆ. ಏನು ಲಾಭಗಳಿವೆ ಮಹಿಳೆಯರಿಗೆ ತೂಕ ಎತ್ತುವುದರಿಂದ?

Weight Training for Women

ಶಕ್ತಿ ಹೆಚ್ಚಳ

ಭಾರ ಎತ್ತುವ ವ್ಯಾಯಾಮವೆಂದರೆ ಹತ್ತಿಪ್ಪತ್ತು ಕೇಜಿಗಳನ್ನೇ ಎತ್ತಬೇಕೆಂದಿಲ್ಲ. ನಾಲ್ಕಾರು ಕೇಜಿ ಭಾರವೂ ಉಪಯುಕ್ತವೇ. ಸ್ನಾಯುಬಲ ಹೆಚ್ಚಿಸಿಕೊಳ್ಳುವುದಕ್ಕೆ ಮೊದಲಿಗೆ ಕಡಿಮೆ ಭಾರದ ಪ್ರತಿರೋಧವೇ ಸಾಕಾಗುತ್ತದೆ. ಇದನ್ನು ಕ್ರಮೇಣ ಹೆಚ್ಚಿಸುತ್ತಾ ಹೋದಂತೆ ದೇಹದ ಶಕ್ತಿಯೂ ವೃದ್ಧಿಯಾಗುತ್ತದೆ. ಮಹಿಳೆಯರ ಪ್ರಾಯ ಹೆಚ್ಚಿದಂತೆ ಸ್ನಾಯುಗಳು ಕಡಿಮೆಯಾಗಿ ಕೊಬ್ಬು ಹೆಚ್ಚುವುದು ಸಾಮಾನ್ಯವಾದ್ದರಿಂದ, ತೂಕ ಎತ್ತುವ ವ್ಯಾಯಾಮಗಳು ಅಗತ್ಯವಾಗಿ ಬೇಕಾಗುತ್ತವೆ.

ಕೊಬ್ಬು ಕರಗಿಸಲು

ತೋಳು, ಹೊಟ್ಟೆ ಮತ್ತು ತೊಡೆಗಳಲ್ಲಿನ ಕೊಬ್ಬು ಕೊಂಚ ಹೆಚ್ಚೇ ಹಠಮಾರಿ. ಇದನ್ನು ಕರಗಿಸಲು ಬೆವರು ಹರಿಸಬೇಕು. ಆದರೆ ವೇಯ್ಟ್‌ ಟ್ರೈನಿಂಗ್‌ ನಿಂದ ಹಠಮಾರಿ ಕೊಬ್ಬನ್ನೂ ಕರಗಿಸಬಹುದು. ಇದಕ್ಕಾಗಿ ತೂಕದ ಉಪಕರಣಗಳು ಮಾತ್ರವಲ್ಲ, ರೆಸಿಸ್ಟೆನ್ಸ್‌ ಬ್ಯಾಂಡ್‌ ಸಹ ಪ್ರಯೋಜನಕಾರಿ. ಅಂತೂ ಸ್ನಾಯುಗಳಿಗೆ ಪ್ರತಿರೋಧ ಒಡ್ಡಿದಾಗಲೇ ಕೊಬ್ಬು ಕರಗಿ, ದೃಢತೆ ಹೆಚ್ಚುವುದು.

Although menopause is natural it brings about many changes in the body Menopause

ಋತುಬಂಧದ ನಂತರ

ಮಹಿಳೆಯರಿಗೆ ಋತುಬಂಧ ಸಮೀಪಿಸುತ್ತಿದ್ದಂತೆ ಸಪೂರನೆಯ ದೇಹ ಉದ್ದುರುಟು ಗಾತ್ರಕ್ಕೆ ತಿರುಗುತ್ತದೆ. ಅಷ್ಟೇ ಅಲ್ಲ, ಸ್ನಾಯುಗಳ ಜಾಗವನ್ನು ಕೊಬ್ಬು ಆಕ್ರಮಿಸಿಕೊಂಡು, ಮೂಳೆಗಳಿಗೆ ಆಧಾರ ಕಡಿಮೆಯಾಗುತ್ತದೆ. ಕೀಲುಗಳು ಸವೆಯುವುದು, ಮೂಳೆ ದುರ್ಬಲವಾಗುವಂಥ ತೊಂದರೆಗಳು ಪ್ರಾರಂಭವಾಗುತ್ತವೆ. ಆದರೆ ತೂಕ ಎತ್ತುವ ವ್ಯಾಯಾಮದ ಮೂಲಕ ಕೊಬ್ಬು ಕರಗಿಸಿ, ಮಾಂಸಪೇಶಿಗಳಿಗೆ ಬಲ ತುಂಬುವುದರಿಂದ ಮೂಳೆಗಳು ದುರ್ಬಲವಾಗದಂತೆ ಕಾಪಾಡಿಕೊಳ್ಳಬಹುದು.

ಹಾರ್ಮೋನುಗಳ ಸಮತೋಲನೆಗೆ

ಹಲವು ರೀತಿಯ ಚೋದಕಗಳನ್ನು ಸರಿದಾರಿಗೆ ತರುವುದಕ್ಕೆ ಇವು ಸಹಕಾರಿ. ಭಾರ ಎತ್ತುವ ಮೂಲಕ ತೂಕ ನಿರ್ವಹಣೆ ಮಾಡುವುದರಿಂದ ದೇಹದ ಇನ್‌ಸುಲಿನ್‌ ಪ್ರತಿರೋಧಕತೆಯನ್ನು ನಿಯಂತ್ರಣದಲ್ಲಿ ಇರಿಸಬಹುದು. ಜೊತೆಗೆ ಮಾನಸಿಕ ಒತ್ತಡ ಹೆಚ್ಚಾದಾಗ ದೇಹದಲ್ಲಿ ಏರುಮುಖವಾಗುವ ಕಾರ್ಟಿಸೋಲ್‌ಗಳನ್ನು ಕಡಿಮೆ ಮಾಡುವುದಕ್ಕೆ ಇದರಿಂದ ಅನುಕೂಲ. ಕ್ಸೆನೊಈಸ್ಟ್ರೋಜೆನ್‌ ಮಟ್ಟ ಕುಸಿದರೆ ಶರೀರದಲ್ಲಿ ಉರಿಯೂತದ ಲಕ್ಷಣಗಳು ಕಾಣುತ್ತವೆ. ಪಿಸಿಒಎಸ್‌ ತೊಂದರೆ ಇದ್ದರೂ ತೂಕ ನಿಯಂತ್ರಣದಲ್ಲಿ ಇರಿಸಿಕೊಳ್ಳುವುದು ಮುಖ್ಯವಾಗುತ್ತದೆ.

ಇದನ್ನೂ ಓದಿ: Health Tips: ಅನೀಮಿಯ ತಡೆಯುವುದಕ್ಕೆ ದಿನಕ್ಕೆಷ್ಟು ಕಬ್ಬಿಣದಂಶ ಬೇಕು? ಇದನ್ನು ಆಹಾರದಿಂದ ಪಡೆಯುವುದು ಹೇಗೆ?

ಮಾನಸಿಕ ತೃಪ್ತಿ

ಆರೋಗ್ಯಕರ ಶರೀರವು ಮಾನಸಿಕ ಸಂತೋಷವನ್ನು ಹೆಚ್ಚಿಸುತ್ತದೆ. ಅದರಲ್ಲೂ ಇಡೀ ದಿನದ ಎಲ್ಲ ಕೆಲಸಗಳಲ್ಲಿ ಈ ಸಂತೋಷವು ವ್ಯಾಪಿಸಿಕೊಳ್ಳುವುದು, ಇಡೀ ಜೀವನದ ಮಟ್ಟವನ್ನೇ ಸುಧಾರಿಸುತ್ತದೆ. ೨೦೧೮ರಲ್ಲಿ ಲಿಮೆರಿಕ್‌ ವಿಶ್ವವಿದ್ಯಾಲಯದಲ್ಲಿ ನಡೆಸಲಾದ ಅಧ್ಯಯನದ ಪ್ರಕಾರ, ಮೂಡ್‌ ಬಲದಾವಣೆ, ಜೀವನವೇ ನಶ್ವರವೆಂಬ ಭಾವನೆ ಮತ್ತು ಖಿನ್ನತೆಯಂಥ ಮಾನಸಿಕ ಸಮಸ್ಯೆಗಳಿಗೆ, ಪ್ರತಿರೋಧ ಒಡ್ಡುವ ವ್ಯಾಯಾಮಗಳು ಮದ್ದಾಗಿ ಪರಿಣಮಿಸಬಲ್ಲವು.

Continue Reading

ಆರೋಗ್ಯ

Benefits Of Onion Hair Oil: ಕೂದಲು ಬಿಳಿಯಾಗುತ್ತಿದೆಯೆ? ಈರುಳ್ಳಿ ತೈಲವನ್ನು ಈ ರೀತಿ ಬಳಸಿ

Benefits Of Onion Hair Oil: ತಲೆಕೂದಲಿಗೆ ಈರುಳ್ಳಿ ಎಣ್ಣೆ ಎನ್ನುತ್ತಿದ್ದಂತೆ ಮುಖ ಕಿವುಚಬೇಡಿ. ಈರುಳ್ಳಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ಕೂದಲು ಬಿಳಿಯಾಗುವುದನ್ನು ಮುಂದೂಡುತ್ತವೆ. ಜೊತೆಗೆ, ಇದರ ಬ್ಯಾಕ್ಟೀರಿಯ ವಿರೋಧಿ ಅಂಶಗಳು ತಲೆಯ ಚರ್ಮದ ಆರೋಗ್ಯವನ್ನು ಕಾಪಾಡಲು ನೆರವಾಗುತ್ತವೆ. ಇನ್ನೂ ಏನೆಲ್ಲ ಸದ್ಗುಣಗಳು ಈರುಳ್ಳಿ ತೈಲದಲ್ಲಿವೆ? ಇಲ್ಲಿದೆ ಮಾಹಿತಿ.

VISTARANEWS.COM


on

Benefits Of Onion Hair Oil
Koo

ಈರುಳ್ಳಿಯ ಭಕ್ತರು ಇದ್ದಷ್ಟೇ ಸಂಖ್ಯೆಯಲ್ಲಿ ವಿರೋಧಿಗಳೂ ಇದ್ದಾರೆ. ರುಚಿಗಾಗಲಿ, ಮದ್ದಿಗಾಗಲಿ ಈರುಳ್ಳಿಗೆ ಸಮನಾದದ್ದಿಲ್ಲ ಎಂದು ಹೊಗಳುವವರು ಒಂದೆಡೆಯಾದರೆ, ಬೆಳಗ್ಗೆ ತಿಂದರೆ ಸಂಜೆಯವರೆಗೂ ಬಾಯೆಲ್ಲ ವಾಸನೆ ಎಂದು ಮುಖ ಕಿವುಚುವವರಿದ್ದಾರೆ. ಇದೀಗ ತಿನ್ನುವ ವಿಷಯವಲ್ಲ, ತಲೆಕೂದಲಿಗೆ ಈರುಳ್ಳಿ ಉಪಯೋಗಿಸಿದರೆ? ʻತಲೆಯೆಲ್ಲ ಒಗ್ಗರಣೆ ವಾಸನೆʼ ಎಂದು ಬೊಬ್ಬೆ ಹೊಡೆಯುವವರಿದ್ದಾರೆ. ಆದರೆ ಕೂದಲಿನ ಸಮಸ್ಯೆಗಳಿಗೆ ಈರುಳ್ಳಿ ಎಣ್ಣೆ ಅತ್ತ್ಯುತ್ತಮ ಮದ್ದಿನಂತೆ ಕೆಲಸ ಮಾಡಬಲ್ಲದು (Benefits Of Onion Hair Oil) ಎಂಬುದು ತಿಳಿದಿದೆಯೇ?
ಹೇರಳವಾಗಿ ಸಲ್ಫರ್‌ ಅಂಶವನ್ನು ಹೊಂದಿರುವ ಈರುಳ್ಳಿಯು ಕೂದಲಿನ ಪೋಷಣೆಯನ್ನು ಹಲವು ರೀತಿಯಲ್ಲಿ ಮಾಡುತ್ತದೆ. ಕೂದಲ ಕೋಶಗಳ ಪೋಷಣೆ ಮಾಡಿ, ಕೂದಲು ಉದುರುವುದನ್ನು ಕಡಿಮೆ ಮಾಡಿ, ತುಂಡಾಗುವ ತೊಂದರೆಯನ್ನೂ ಪರಿಹಾರ ಮಾಡುತ್ತದೆ. ಸಲ್ಫರ್‌ ಅಥವಾ ಗಂಧಕದ ಅಂಶವು ಹೆಚ್ಚಿನ ಪ್ರಮಾಣದ ಕೊಲಾಜಿನ್‌ ಉತ್ಪಾದನೆಗೆ ಪ್ರೋತ್ಸಾಹ ನೀಡುತ್ತದೆ. ಕೂದಲ ಬೆಳವಣಿಗೆಯಲ್ಲಿ ಕೊಲಾಜಿನ್‌ ಮಹತ್ವ ಅಧಿಕವಾಗಿದೆ. ಈರುಳ್ಳಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ಕೂದಲು ಬಿಳಿಯಾಗುವುದನ್ನು ಮುಂದೂಡುತ್ತವೆ. ಜೊತೆಗೆ, ಇದರ ಬ್ಯಾಕ್ಟೀರಿಯ ವಿರೋಧಿ ಅಂಶಗಳು ತಲೆಯ ಚರ್ಮದ ಆರೋಗ್ಯವನ್ನು ಕಾಪಾಡಲು ನೆರವಾಗುತ್ತವೆ.

Onion Hair Oil
Dandruff

ಮಾಡುವುದು ಹೇಗೆ?

ಈರುಳ್ಳಿ ತೈಲವನ್ನು ಮಾಡುವ ಕ್ರಮವನ್ನೂ ಈಗ ತಿಳಿಯೋಣ. ಈರುಳ್ಳಿಯ ಸಿಪ್ಪೆಗಳನ್ನು ಬಿಡಿಸಿ, ಹೆಚ್ಚಿ ರಸ ತೆಗೆದು ಇರಿಸಿ. ಇದರ ರಸ ತೆಗೆಯುವುದಕ್ಕೆಂದು ಮಿಕ್ಸಿ ಮಾಡುವಾಗ ಜೊತೆಗೆ ಎರಡು ಚಮಚ ಮೆಂತೆ ಬೀಜಗಳನ್ನೂ ಸೇರಿಸಿಕೊಳ್ಳಬಹುದು. ಈ ರಸಕ್ಕೆ ಶುದ್ಧ ಕೊಬ್ಬರಿ ಎಣ್ಣೆಯನ್ನು ಸೇರಿಸಿ, ಸಣ್ಣ ಉರಿಯಲ್ಲಿ ಕುದಿಸಿ. ಈರುಳ್ಳಿಯ ಹಸಿ ವಾಸನೆಯೆಲ್ಲ ಹೋಗಿ, ತಿಳಿಯಾದ ಘಮ ವ್ಯಾಪಿಸುತ್ತದೆ. ಈರುಳ್ಳಿ ಮತ್ತು ಮೆಂತೆಯ ಅಂಶಗಳೆಲ್ಲ ತಮ್ಮ ಸತ್ವವನ್ನು ಬಿಟ್ಟು ಎಣ್ಣೆಯ ಮೇಲೆ ತೇಲತೊಡಗುತ್ತವೆ. ಇದೀಗ ಈರುಳ್ಳಿ ಎಣ್ಣೆ ಸಿದ್ಧವಾಗಂತೆ. ಇದನ್ನು ತೆಳುವಾದ ಬಟ್ಟೆಯಲ್ಲಿ ಶೋಧಿಸಿ, ಗಾಜಿನ ಬಾಟಲಿಯಲ್ಲಿ ಶೇಖರಿಸಿಟ್ಟುಕೊಂಡು ಉಪಯೋಗಿಸಿಕೊಳ್ಳಿ.

ಹೊಳಪಿನ ಕೇಶರಾಶಿ

ಕೂದಲಿನ ಹೊಳಪು ಹೆಚ್ಚಿಸುವಲ್ಲಿ ಈರುಳ್ಳಿ ಎಣ್ಣೆ ಒಳ್ಳೆಯ ಕೆಲಸ ಮಾಡುತ್ತದೆ. ಇದನ್ನು ಕೂದಲ ಬುಡಕ್ಕೆ ಮಾತ್ರವಲ್ಲ, ತುದಿಯವರೆಗೂ ಹಚ್ಚಿ ಒಂದರಡು ತಾಸಿನ ನಂತರ ತಲೆ ಸ್ನಾನ ಮಾಡಿ. ಇಷ್ಟೇ ಅಲ್ಲ, ಘಾಟು ಸಹಿಸಿಕೊಳ್ಳಬಹುದು ಎನಿಸಿದರೆ ಹಸಿ ಈರುಳ್ಳಿ ಪೇಸ್ಟ್‌ ಮಾಡಿ, ನೇರವಾಗಿ ತಲೆಗೂದಲಿಗೆ ಲೇಪಿಸಿಕೊಳ್ಳಿ. ಒಂದೆರಡು ತಾಸುಗಳ ನಂತರ ತಲೆಸ್ನಾನ ಮಾಡಿ. ಹೀಗೆ ಮಾಡುವುದರಿಂದ ನೈಸರ್ಗಿಕ ಕಂಡೀಶನರ್‌ ರೀತಿಯಲ್ಲಿ ಇದು ಕೆಲಸ ಮಾಡಿ, ಕೂದಲಿನ ಹೊಳಪು ಹೆಚ್ಚಿಸುತ್ತದೆ.

Onion Hair Oil Benefits
Dandruff

ಕೂದಲು ಉದುರುತ್ತಿದ್ದರೆ

ನಿಯಮಿತವಾಗಿ ಈರುಳ್ಳಿ ಎಣ್ಣೆಯ ಬಳಕೆಯಿಂದ ಕೂದಲು ಉದುರುವುದನ್ನು ತಡೆಗಟ್ಟಬಹುದು. ಇದರಲ್ಲಿರುವ ಸಲ್ಫರ್‌ ಅಂಶವು ಹೆಚ್ಚಿನ ಕೊಲಾಜಿನ್‌ ಉತ್ಪಾದನೆಗೆ ಪ್ರಚೋದನೆ ನೀಡುತ್ತದೆ. ಈ ತೈಲವನ್ನು ಕೂದಲಿನ ಬುಡಕ್ಕೆ ಮಸಾಜ್‌ ಮಾಡುವುದರಿಂದ, ಕೂದಲಿನ ಬೇರುಗಳು ಸದೃಢವಾಗಿ, ಉದುರುವುದು ಕಡಿಮೆಯಾಗಿ, ಕೇಶರಾಶಿ ದಟ್ಟವಾಗಿ ಬೆಳೆಯುತ್ತದೆ.

ಬಿಳಿಕೂದಲಿಗೆ

ಇದಕ್ಕೂ ಸಹ ಹಸಿ ಈರುಳ್ಳಿ ಪೇಸ್ಟ್‌ ಪರಿಣಾಮಕಾರಿ. ಒಂದೊಮ್ಮೆ ಆ ಘಾಟನ್ನು ಸಹಿಸಲು ಸಾಧ್ಯವಿಲ್ಲ ಎನಿಸಿದರೆ, ರಾತ್ರಿಯೇ ತಲೆಯ ಚರ್ಮಕ್ಕೆ ಈರುಳ್ಳಿ ಎಣ್ಣೆಯಿಂದ ಲಘುವಾಗಿ ಮಸಾಜ್‌ ಮಾಡಿ. ಬೆಳಗಿನವರೆಗೆ ತೈಲ ಕೂದಲಿನಲ್ಲಿ ಉಳಿಯಲಿ. ನಂತರ ತಲೆಸ್ನಾನ ಮಾಡಿ. ಇದನ್ನು ನಿಯಮಿತವಾಗಿ ಮಾಡುವುದರಿಂದ ತಲೆಗೂದಲು ಬಿಳಿಯಾಗುವುದನ್ನು ಮುಂದೂಡಬಹುದು.

Dandruff

ತಲೆಹೊಟ್ಟು ದೂರ

ಈ ಘಾಟುಮದ್ದಿಗೆ ಬ್ಯಾಕ್ಟೀರಿಯದೊಂದಿಗೆ ಹೋರಾಡುವ ಗುಣವಿದೆ. ಜೊತೆಗೆ ಫಂಗಸ್‌ ವಿರೋಧಿ ಸಾಮರ್ಥ್ಯವೂ ಉಂಟು. ಹಾಗಾಗಿ ತಲೆಯ ಚರ್ಮಕ್ಕೆ ಅಂಟುವಂಥ ಸೋಂಕುಗಳನ್ನು ದೂರ ಇರಿಸುವ ಕ್ಷಮತೆ ಈರುಳ್ಳಿ ಎಣ್ಣೆಗಿದೆ. ಯಾವುದೇ ಕಾರಣಕ್ಕೆ ತಲೆಯಲ್ಲಿ ಹೊಟ್ಟಾಗಿದ್ದರೂ, ಅದನ್ನು ನಿವಾರಿಸಿ, ಚರ್ಮದ ಆರೋಗ್ಯ ಸುಧಾರಿಸುತ್ತದೆ.

ಇದನ್ನೂ ಓದಿ: How safe are apples to eat: ನೀವು ತಿನ್ನುವ ಸೇಬು ಎಷ್ಟು ಸುರಕ್ಷಿತ? ಸೇಬು ಬಾಯಿಗಿಡುವ ಮುನ್ನ ಯೋಚಿಸಿ!

ಉತ್ಕರ್ಷಣ ನಿರೋಧಕಗಳು

ಈರುಳ್ಳಿಯಲ್ಲಿ ಹಲವು ರೀತಿಯ ಉತ್ಕರ್ಷಣ ನಿರೋಧಕಗಳಿವೆ. ಇವುಗಳಿಂದ ಕೂದಲು ಕಪ್ಪಾಗುವುದು ಮಾತ್ರವಲ್ಲ, ತುರಿಕೆಯಂಥ ಸಮಸ್ಯೆಗಳು ದೂರವಾಗುತ್ತದೆ. ಕೂದಲಿಗೆ ಕಡುಕಪ್ಪಾದ ನೈಸರ್ಗಿಕ ಬಣ್ಣ ಹಿಂದಿರುಗುತ್ತದೆ. ಶುಷ್ಕತೆಯೆಲ್ಲ ದೂರವಾಗಿ, ಕೂದಲು ನಯವಾಗಿ ನಳನಳಿಸುತ್ತದೆ. ಈ ಎಣ್ಣೆಯನ್ನು ಕೂದಲಿನ ಬುಡಕ್ಕೆ ಲಘುವಾಗಿ ಮಸಾಜ್‌ ಮಾಡುವುದರಿಂದ, ಆ ಭಾಗದಲ್ಲಿ ರಕ್ತ ಸಂಚಾರವೂ ಹೆಚ್ಚುತ್ತದೆ.

Continue Reading

ಆಹಾರ/ಅಡುಗೆ

Health Tips: ಮತ್ತೆ ಮತ್ತೆ ಬಿಸಿ ಮಾಡಿ ಸೇವಿಸುವುದರಿಂದ ಇವು ದೇಹಕ್ಕೆ ವಿಷವಾಗಬಹುದು ಎಚ್ಚರ!

ಆಹಾರವನ್ನು ತಾಜಾವಾಗಿ ಸೇವಿಸಿದರೆ ಮಾತ್ರ ಒಳ್ಳೆಯ ಪರಿಣಾಮ (Health Tips) ಬೀರುತ್ತದೆ. ಆದರೆ ಹೆಚ್ಚಿನವರು ಆಹಾರವನ್ನು ಅನೇಕ ಬಾರಿ ಬಿಸಿ ಮಾಡಿ ಸೇವಿಸುತ್ತಾರೆ. ಇದು ಒಳ್ಳೆಯದಲ್ಲ. ಕೆಲವು ಆಹಾರಗಳನ್ನು ಪದೇಪದೇ ಬಿಸಿ ಮಾಡುವುದು ಅದರಲ್ಲೂ ಮುಖ್ಯವಾಗಿ ಚಹಾ, ಪಾಲಕ್, ಅಕ್ಕಿ, ಅಣಬೆ, ಅಡುಗೆ ಎಣ್ಣೆಯನ್ನು ಬಿಸಿ ಮಾಡಿದರೆ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟು ಮಾಡುತ್ತದೆ. ಈ ಅಭ್ಯಾಸಗಳು ಯಾಕೆ ಒಳ್ಳೆಯದಲ್ಲ ಎನ್ನುವ ಕುರಿತು ಮಾಹಿತಿ ಇಲ್ಲಿದೆ.

VISTARANEWS.COM


on

By

Health Tips
Koo

ಬೆಳಗ್ಗೆ ಮಾಡಿರುವ ಅನ್ನ, ಸಾಂಬಾರ್ ಬಿಸಿಬಿಸಿಯಾಗಿರಬೇಕು ಎಂದು ಹಲವಾರು ಮನೆಗಳಲ್ಲಿ ಪದೇಪದೇ ಬಿಸಿ ಮಾಡುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಇನ್ನು ಕೆಲವರು ರಾತ್ರಿ ಉಳಿದ ಅಡುಗೆಯನ್ನು (food) ಬಿಸಿ ಮಾಡಿ (reheat) ಮರುದಿನ ಸೇವಿಸುತ್ತಾರೆ. ಹೀಗೆ ಆಹಾರ ಬಿಸಿ ಮಾಡಿ ತಿನ್ನುವುದು ಅದರಲ್ಲೂ ವಿಶೇಷವಾಗಿ ಕೆಲವೊಂದು ಆಹಾರಗಳನ್ನು ಎರಡನೇ ಬಾರಿ ಬಿಸಿ ಮಾಡುವುದು ಆರೋಗ್ಯಕ್ಕೆ (Health Tips) ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು.

ಕೆಲವು ಆಹಾರವನ್ನು ಬಿಸಿ ಮಾಡಿದಾಗ ಅದು ವಿಷವಾಗಬಹುದು. ಇನ್ನು ಕೆಲವು ಆಹಾರಗಳಲ್ಲಿರುವ ಪೌಷ್ಟಿಕಾಂಶ ನಷ್ಟವಾಗಬಹುದು ಎನ್ನುತ್ತಾರೆ ಆಹಾರ ಪರಿಣತರು. ಕೆಲವು ಆಹಾರ ಪದಾರ್ಥಗಳನ್ನು ಎರಡನೇ ಬಾರಿ ಬಿಸಿ ಮಾಡಲೇಬಾರದು. ಅವು ಯಾವುದು ಎನ್ನುವ ಕುರಿತು ಇಲ್ಲಿದೆ ಮಾಹಿತಿ.

Health Tips
Health Tips


ಚಹಾ

ಚಹಾದಲ್ಲಿ ಆಂಟಿಆಕ್ಸಿಡೆಂಟ್‌ಗಳು ಮತ್ತು ಪಾಲಿಫಿನಾಲ್‌ಗಳಂತಹ ಸೂಕ್ಷ್ಮ ಸಂಯುಕ್ತಗಳಿರುತ್ತವೆ. ಇದು ಚಹಾಕ್ಕೆ ಸುವಾಸನೆ ಮತ್ತು ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಕೊಡುತ್ತದೆ. ಚಹಾವನ್ನು ಆರಂಭದಲ್ಲಿ ತಯಾರಿಸಿದಾಗ ಇದು ಟ್ಯಾನಿನ್‌ ಮತ್ತು ಕ್ಯಾಟೆಚಿನ್‌ಗಳನ್ನು ಒಳಗೊಂಡಂತೆ ವಿವಿಧ ಸಂಯುಕ್ತಗಳನ್ನು ಬಿಡುಗಡೆ ಮಾಡುತ್ತದೆ. ಚಹಾವನ್ನು ಮತ್ತೆ ಬಿಸಿ ಮಾಡುವುದರಿಂದ ಈ ಸಂಯುಕ್ತಗಳು ನಷ್ಟವಾಗುತ್ತದೆ. ಇದರಿಂದ ಚಹಾ ಸುವಾಸನೆಯನ್ನು ಕಳೆದುಕೊಳ್ಳುತ್ತದೆ ಮತ್ತು ಅದರಲ್ಲಿರುವ ಒಳ್ಳೆಯ ಅಂಶಗಳು ನಷ್ಟವಾಗುತ್ತದೆ.

ಚಹಾವು ಕೆಫೀನ್ ಅನ್ನು ಹೊಂದಿರುತ್ತದೆ. ಇದನ್ನು ಪುನಃ ಬಿಸಿ ಮಾಡುವುದರಿಂದ ಇದು ಹೆಚ್ಚಾಗಿ ಜಿಗುಪ್ಸೆ, ನಿದ್ರಾಹೀನತೆಯಂತಹ ಅಡ್ಡ ಪರಿಣಾಮವನ್ನು ಉಂಟು ಮಾಡುತ್ತದೆ. ಚಹಾವನ್ನು ಮತ್ತೆ ಬಿಸಿ ಮಾಡಿ ಸೇವಿಸುವುದು ಆಮ್ಲೀಯತೆಯನ್ನು ಹೆಚ್ಚಿಸಬಹುದು.

ಇದಲ್ಲದೇ ಚಹಾವನ್ನು ಕುದಿಸಿದ ಬಳಿಕ ದೀರ್ಘಕಾಲದವರೆಗೆ ಇಡುವುದು ಕೂಡ ಒಳ್ಳೆಯದಲ್ಲ. ಚಹಾವನ್ನು ಮಾಡಿ ಹತ್ತು ನಿಮಿಷಗಳ ಒಳಗೆ ಸೇವಿಸಬೇಕು. ಇಲ್ಲವಾದರೆ ಅದು ಹೆಚ್ಚು ಆಮ್ಲೀಯವಾಗಬಹುದು. ಇದು ಹೊಟ್ಟೆಗೆ ಸಂಬಂಧಿಸಿದ ಕೆಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ.


ಪಾಲಕ್

ಪಾಲಕ್ ಸೊಪ್ಪು ನೈಟ್ರೇಟ್‌ಗಳನ್ನು ಹೊಂದಿರುತ್ತದೆ. ಇದನ್ನು ಮತ್ತೆ ಬಿಸಿ ಮಾಡಿದಾಗ ನೈಟ್ರೈಟ್‌ಗಳಾಗಿ ಪರಿವರ್ತನೆಯಾಗುತ್ತದೆ. ನೈಟ್ರೈಟ್‌ಗಳು ಅನಂತರ ಅಮೈನೋ ಆಮ್ಲಗಳೊಂದಿಗೆ ಪ್ರತಿಕ್ರಿಯಿಸಿ ನೈಟ್ರೊಸಮೈನ್‌ ಗಳಾಗುತ್ತವೆ. ಅವುಗಳು ಕ್ಯಾನ್ಸರ್ ಜನಕಗಳಾಗಿವೆ. ಪಾಲಕ್ ಅನ್ನು ಮತ್ತೆ ಬಿಸಿ ಮಾಡುವುದರಿಂದ ವಿಟಮಿನ್ ಸಿ ಮತ್ತು ಬಿ ವಿಟಮಿನ್‌ಗಳು ನಷ್ಟವಾಗುತ್ತದೆ. ಅದರ ಪೌಷ್ಟಿಕಾಂಶದ ಮೌಲ್ಯ ಕುಗ್ಗುತ್ತದೆ.

ಪಾಲಕ್ ಕಬ್ಬಿಣದ ಸಮೃದ್ಧ ಮೂಲವಾಗಿದೆ. ಪಾಲಕ್ ಸೊಪ್ಪನ್ನು ಬೇಯಿಸಿ ಮತ್ತೆ ಬಿಸಿ ಮಾಡಿದಾಗ ಕಬ್ಬಿಣವು ಗಾಳಿಯಲ್ಲಿ ಆಮ್ಲಜನಕದ ಸಂಪರ್ಕಕ್ಕೆ ಬಂದಾಗ ರಾಸಾಯನಿಕ ಕ್ರಿಯೆಯು ಸಂಭವಿಸಿ ಕಬ್ಬಿಣದ ಆಕ್ಸೈಡ್‌ಗಳ ರಚನೆಗೆ ಕಾರಣವಾಗಬಹುದು. ಇದು ಪಾಲಕ್ ನ ಬಣ್ಣ ಮತ್ತು ರುಚಿಯನ್ನು ಬದಲಾಯಿಸುತ್ತದೆ.

ಪಾಲಕ್ ನಲ್ಲಿರುವ ಕಬ್ಬಿನಾಂಶದ ಆಕ್ಸಿಡೀಕರಣವು ಅದರ ಪೌಷ್ಟಿಕಾಂಶದ ಮೌಲ್ಯದ ಮೇಲೆ ಪರಿಣಾಮ ಬೀರಬಹುದು. ಆಕ್ಸಿಡೀಕೃತ ಕಬ್ಬಿಣವು ದೇಹದಲ್ಲಿ ಸುಲಭವಾಗಿ ಹೀರಲ್ಪಡುವುದಿಲ್ಲ. ಮತ್ತೆ ಮತ್ತೆ ಪಾಲಕ್ ಅನ್ನು ಬಿಸಿ ಮಾಡುವುದು ಲೋಳೆಯ ರಚನೆ ಮತ್ತು ಕಹಿ ರುಚಿಯನ್ನು ಉಂಟು ಮಾಡುತ್ತದೆ. ಹೀಗಾಗಿ ಪಾಲಕ್‌ನಲ್ಲಿರುವ ಪೋಷಕಾಂಶಗಳನ್ನು ಪಡೆಯಲು ಅದನ್ನು ತಾಜಾ ಆಗಿ ಸೇವಿಸುವುದು ಉತ್ತಮ.


ಅಡುಗೆ ಎಣ್ಣೆ

ಅಡುಗೆ ಎಣ್ಣೆಯನ್ನು ಮತ್ತೆ ಬಿಸಿ ಮಾಡಿದಾಗ ಅದರ ಗುಣಮಟ್ಟ ಮತ್ತು ಸುರಕ್ಷತೆ ಕೆಡಿಸುವ ರಾಸಾಯನಿಕ ಬದಲಾವಣೆಗಳಿಗೆ ಒಳಗಾಗುತ್ತದೆ. ಇದು ಟ್ರಾನ್ಸ್ ಕೊಬ್ಬುಗಳು ಮತ್ತು ಅಲ್ಡಿಹೈಡ್‌ಗಳಂತಹ ಹಾನಿಕಾರಕ ಸಂಯುಕ್ತಗಳ ರಚನೆಗೆ ಕಾರಣವಾಗಬಹುದು. ಇದು ಉರಿಯೂತ ಮತ್ತು ಹೃದಯರಕ್ತನಾಳದ ಕಾಯಿಲೆಯನ್ನು ಉಂಟು ಮಾಡುತ್ತದೆ. ಅಡುಗೆ ಎಣ್ಣೆಯ ಸಮಗ್ರ ಪ್ರಯೋಜನ ಪಡೆಯಲು ಪ್ರತಿ ಬಾರಿಯೂ ತಾಜಾ ಎಣ್ಣೆಯನ್ನು ಬಳಸುವುದು ಮತ್ತು ತೈಲವನ್ನು ಅನೇಕ ಬಾರಿ ಬಿಸಿ ಮಾಡುವುದನ್ನು ತಪ್ಪಿಸುವುದು ಒಳ್ಳೆಯದು.


ಅಣಬೆ

ಅಣಬೆಗಳು ಮತ್ತೆ ಬಿಸಿ ಮಾಡುವುದರಿಂದ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಆಹಾರದಿಂದ ಹರಡುವ ಅನಾರೋಗ್ಯದ ಅಪಾಯವನ್ನು ಹೆಚ್ಚಿಸುತ್ತದೆ. ಅಣಬೆಗಳು ಪಾಲಿಸ್ಯಾಕರೈಡ್‌ಗಳಂತಹ ಕೆಲವು ಸಂಯುಕ್ತಗಳನ್ನು ಹೊಂದಿರುತ್ತವೆ. ಇದು ಮತ್ತೆ ಬಿಸಿ ಮಾಡಿದಾಗ ಕಿಣ್ವಕ ಪ್ರತಿಕ್ರಿಯೆಗಳಿಗೆ ಒಳಗಾಗಬಹುದು. ಅವುಗಳ ರುಚಿ ಮತ್ತು ವಿನ್ಯಾಸವನ್ನು ಬದಲಾಯಿಸುತ್ತದೆ.

ಮತ್ತೆ ಬಿಸಿ ಮಾಡಿದ ಅಣಬೆಗಳನ್ನು ಸೇವಿಸುವುದರಿಂದ ತಾಜಾತನ ಮತ್ತು ರುಚಿಯನ್ನು ಕಳೆದುಕೊಳ್ಳಬಹುದು. ಅಣಬೆಗಳು ಕಿಣ್ವ, ರಚನಾತ್ಮಕ ಪ್ರೋಟೀನ್‌ಗಳನ್ನು ಒಳಗೊಂಡಂತೆ ವಿವಿಧ ಪ್ರೋಟೀನ್‌ಗಳನ್ನು ಹೊಂದಿರುತ್ತವೆ. ಇದು ಅವುಗಳ ವಿನ್ಯಾಸ ಮತ್ತು ಪೌಷ್ಟಿಕಾಂಶದ ಪ್ರೊಫೈಲ್‌ಗೆ ಕೊಡುಗೆ ನೀಡುತ್ತದೆ. ಅಣಬೆಗಳನ್ನು ಬೇಯಿಸಿದಾಗ, ಈ ಪ್ರೋಟೀನ್ ಗಳು ಡಿನಾಟರೇಶನ್ ಎಂಬ ಪ್ರಕ್ರಿಯೆಯ ಮೂಲಕ ರಚನಾತ್ಮಕ ಬದಲಾವಣೆಗಳಿಗೆ ಒಳಗಾಗುತ್ತವೆ. ಅಣಬೆಗಳನ್ನು ಮತ್ತೆ ಬಿಸಿ ಮಾಡಿದ ಅನಂತರ ಪ್ರೋಟೀನ್ ಸಂಯೋಜನೆಯಲ್ಲಿ ಮತ್ತಷ್ಟು ಬದಲಾವಣೆಗಳನ್ನು ಉಂಟುಮಾಡುತ್ತದೆ.

ಇದು ಅಣಬೆಗಳ ವಿನ್ಯಾಸ, ಸುವಾಸನೆ ಮತ್ತು ಪೌಷ್ಟಿಕಾಂಶದ ಗುಣಲಕ್ಷಣಗಳಲ್ಲಿ ವ್ಯತ್ಯಾಸವನ್ನು ಉಂಟು ಮಾಡುತ್ತದೆ. ಅಣಬೆಗಳನ್ನು ಮತ್ತೆ ಬಿಸಿ ಮಾಡುವುದರಿಂದ ಜಲವಿಚ್ಛೇದನೆಯಂತಹ ಪ್ರಕ್ರಿಯೆಗಳ ಮೂಲಕ ಸಣ್ಣ ಪೆಪ್ಟೈಡ್‌ಗಳು ಮತ್ತು ಅಮೈನೋ ಆಮ್ಲಗಳಾಗಿ ಕೆಲವು ಪ್ರೋಟೀನ್ ಅಣುಗಳ ವಿಭಜನೆಗೆ ಕಾರಣವಾಗಬಹುದು. ಇದು ಅಣಬೆಗಳ ಒಟ್ಟಾರೆ ಪ್ರೋಟೀನ್ ಅಂಶ ಮತ್ತು ಸಂಯೋಜನೆಯ ಮೇಲೆ ಪರಿಣಾಮ ಬೀರುತ್ತದೆ. ಇದು ಅವುಗಳ ರುಚಿ ಮತ್ತು ಜೀರ್ಣಸಾಧ್ಯತೆಯ ಮೇಲೆ ಪರಿಣಾಮ ಬಿರುವುದು. ಅಣಬೆಗಳ ಗುಣಮಟ್ಟವನ್ನು ಕಾಪಾಡಲು, ಅವುಗಳನ್ನು ದೀರ್ಘಕಾಲದವರೆಗೆ ಬಿಸಿ ಮಾಡದೇ ಇರುವುದು ಒಳ್ಳೆಯದು ಎನ್ನುತ್ತಾರೆ ಆಹಾರ ತಜ್ಞರು.


ಇದನ್ನೂ ಓದಿ: Intermittent Fasting: ಇಂಟರ್‌ ಮಿಟೆಂಟ್‌ ಫಾಸ್ಟಿಂಗ್‌ ಡಯಟ್‌ ಮಾಡುವವರೇ ಹುಷಾರ್! ಈ ಸಂಗತಿ ಗೊತ್ತಿರಲಿ


ಅಕ್ಕಿ

ಅಕ್ಕಿಯಲ್ಲಿ ಸಾಮಾನ್ಯವಾಗಿ ಕಂಡುಬರುವ ಬ್ಯಾಸಿಲಸ್ ಸೆರಿಯಸ್ ಎಂಬ ಬ್ಯಾಕ್ಟೀರಿಯಂ ಅಡುಗೆ ಪ್ರಕ್ರಿಯೆಯಲ್ಲಿ ಬದುಕುಳಿಯುತ್ತದೆ. ಅನ್ನ ಮಾಡಿ ಅದನ್ನು ದೀರ್ಘಕಾಲದವರೆಗೆ ಇಟ್ಟರೆ ಅದು ದ್ವಿಗುಣವಾಗುತ್ತಾ ಹೋಗುತ್ತದೆ. ಅನ್ನವನ್ನು ಮತ್ತೆ ಬಿಸಿ ಮಾಡುವುದರಿಂದ ಯಾವಾಗಲೂ ಬ್ಯಾಕ್ಟೀರಿಯಾ ಮತ್ತು ಅವುಗಳ ವಿಷಕಾರಿ ಅಂಶಗಳು ಹೋಗುವುದಿಲ್ಲ. ಇದು ಆಹಾರವನ್ನು ವಿಷವಾಗಿಸುತ್ತದೆ. ಬಿಸಿ ಮಾಡಿದ ಅನ್ನ ತೇವಾಂಶ, ಪೌಷ್ಟಿಕಾಂಶ ಕಳೆದುಕೊಳ್ಳುತ್ತದೆ. ಆಹಾರದಿಂದ ಹರಡುವ ಅನಾರೋಗ್ಯವನ್ನು ತಡೆಗಟ್ಟಲು ಬೇಯಿಸಿದ ಅನ್ನವನ್ನು ರೆಫ್ರಿಜರೇಟರ್ ನಲ್ಲಿ ಸರಿಯಾಗಿ ಸಂಗ್ರಹಿಸುವುದು ಮತ್ತು ಒಂದೆರಡು ದಿನಗಳಲ್ಲಿ ಅದನ್ನು ಸೇವಿಸುವುದು ಮುಖ್ಯವಾಗಿದೆ.

Continue Reading

ಆರೋಗ್ಯ

How safe are apples to eat: ನೀವು ತಿನ್ನುವ ಸೇಬು ಎಷ್ಟು ಸುರಕ್ಷಿತ? ಸೇಬು ಬಾಯಿಗಿಡುವ ಮುನ್ನ ಯೋಚಿಸಿ!

How safe are apples to eat: ಪಳಪಳ ಹೊಳೆವ ಸೇಬನ್ನು ಆಹಾ ಎಂದು ಬಾಯಿಗಿಡುವ ಮುನ್ನ ಇವು ಎಷ್ಟು ಸುರಕ್ಷಿತ ಎಂಬುದರ ಬಗ್ಗೆ ಚಿಂತಿಸಿ. ಯಾಕೆಂದರೆ, ಹೆಚ್ಚು ಕೀಟನಾಶಕಗಳನ್ನು ತನ್ನ ಮೈಮೇಲೆ ಹೊದ್ದು ಪಳಪಳಿಸಿ ಮಾರುಕಟ್ಟೆಗೆ ಕಾಲಿಡುವ ಈ ಸೇಬನ್ನು ನಾವು ಸಿಪ್ಪೆ ಸುಲಿಯದೆ ತಿಂದರೆ ಅಪಾಯ ಖಚಿತ! ಈ ಕುರಿತ ಎಚ್ಚರಿಕೆಯ ಮಾಹಿತಿ ಇಲ್ಲಿದೆ.

VISTARANEWS.COM


on

apple eating
Koo

ಸೇಬುಹಣ್ಣು ಅಥವಾ ಆಪಲ್‌ ಎಂದರೆ ನಿಮಗೆ ಇಷ್ಟವೇ? ನಿತ್ಯವೂ ಸೇಬು ಹಣ್ಣು ಸೇವಿಸುತ್ತೀರಾ? (How safe are apples to eat) ದಿನಕ್ಕೊಂದು ಸೇಬು ತಿನ್ನುವ ಮೂಲಕ ವೈದ್ಯರಿಂದ ದೂರವಿರಬಹುದು ಎಂಬ ವಿಶ್ವಾಸದಿಂದ ದಿನಾ ಒಂದೊಂದು ಸೇಬು ತಿನ್ನುತ್ತೀರಾ? ಹಾಗಿದ್ದರೆ ಕೊಂಚ ಯೋಚಿಸಿ. ಪಳಪಳ ಹೊಳೆವ ಸೇಬನ್ನು ಆಹಾ ಎಂದು ಬಾಯಿಗಿಡುವ ಮುನ್ನ ಇವು ಎಷ್ಟು ಸುರಕ್ಷಿತ ಎಂಬುದರ ಬಗ್ಗೆ ಚಿಂತಿಸಿ. ಯಾಕೆಂದರೆ, ಹೆಚ್ಚು ಕೀಟನಾಶಕಗಳನ್ನು ತನ್ನ ಮೈಮೇಲೆ ಹೊದ್ದು ಪಳಪಳಿಸಿ ಮಾರುಕಟ್ಟೆಗೆ ಕಾಲಿಡುವ ಈ ಸೇಬನ್ನು ನಾವು ಸಿಪ್ಪೆ ಸುಲಿಯದೆ ತಿಂದರೆ ಹಲವು ವೈದ್ಯರಿಂದ ದೂರವಿರುವ ಮಾತೇಕೆ, ವೈದ್ಯರ ಹತ್ತಿರ ಹೋಗಬೇಕಾಗಬಹುದು ಎಚ್ಚರ! ಹೌದು. ಹೊಸ ಸಂಶೋಧನೆಯೊಂದರ ಪ್ರಕಾರ, ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ತೊಳೆಯುತ್ತಿರುವ ಶೈಲಿಯಿಂದ ಎಲ್ಲ ಬಗೆಯ ಕೀಟನಾಶಕಗಳೂ ತೊಳೆದು ಹೋಗುತ್ತಿಲ್ಲ. ಬದಲಾಗಿ ನಾವು ತಿನ್ನುತ್ತಿರುವ ಹಣ್ಣುಗಳಲ್ಲಿ ಇನ್ನೂ ಅಂಟಿಕೊಂಡೇ ಇರುತ್ತವೆಯಂತೆ. ಅಮೆರಿಕನ್‌ ಕೆಮಿಕಲ್‌ ಸೊಸೈಟಿ ಜರ್ನಲ್‌ನಲ್ಲಿ ಪ್ರಕಟವಾದ ಈ ಸಂಶೋಧನಾ ವರದಿಯ ಪ್ರಕಾರ, ಹಣ್ಣುಗಳನ್ನು ಹೀಗೆ ತಿನ್ನುವ ಕಾರಣದಿಂದ ನಾವು ಅನೇಕ ಬಗೆಯ ಆರೋಗ್ಯದ ಪರಿಣಾಮಗಳನ್ನೂ ಮುಂದೆ ಅನುಭವಿಸಬೇಕಾಗುತ್ತದೆ ಎಂದಿದೆ. ಕೊಳೆ ತೊಳೆಯುವ ಪ್ರಕ್ರಿಯೆ ನೀರಿನಿಂದ ತೊಳೆಯುವಾಗ ತೊಳೆದುಹೋಗುತ್ತದೆಯೇ ವಿನಃ ಎಲ್ಲ ಬಗೆಯ ರಾಸಾಯನಿಕಗಳೂ ಹಣ್ಣುಗಳ ಮೇಲ್ಮೈನಿಂದ ತೊಳೆದು ಹೋಗದು. ಬದಲಾಗಿ ಅವು ಹಣ್ಣಿನ ಮೇಲ್ಮೈ ಮೇಲೆ ಅಂಟಿಕೊಂಡೇ ಇರುತ್ತವೆ. ಜೊತೆಗೆ ಕತ್ತರಿಸಿ ತಿನ್ನುವಾಗ ನಮ್ಮ ದೇಹಕ್ಕೆ ಸೇರುತ್ತವೆ ಎಂದಿದೆ. ಮುಖ್ಯವಾಗಿ ಸೇಬುಹಣ್ಣನ್ನು ತೊಳೆಯುವ ಬಗೆಯನ್ನು ಪರೀಕ್ಷಿಸಿರುವ ಈ ಸಂಶೋಧನೆಯಲ್ಲಿ, ಸೇಬು ಹಣ್ಣನ್ನು ನಾವು ಬಹಳ ಅವೈಜ್ಞಾನಿಕವಾಗಿ ತೊಳೆಯುತ್ತೇವೆ. ಅದರ ಸಿಪ್ಪೆಯ ಮೇಲಷ್ಟೇ ಅಲ್ಲ, ಅದರ ಒಳಗಿನ ಹಣ್ಣಿನ ಭಾಗದವರೆಗೂ ರಾಸಾಯನಿಕಗಳ ಪ್ರಭಾವ ಹೋಗಿರುತ್ತವೆ. ಹೀಗಾಗಿ, ಸುಮ್ಮನೆ ನೀರಿನಲ್ಲಿ ತೊಳೆಯುವುದರಿಂದ ಯಾವ ರಾಸಾಯನಿಕಗಳೂ ಹೋಗಿರುವುದಿಲ್ಲ. ಹಾಗಾಗಿ, ಸೇಬು ಹಣ್ಣನ್ನು ತಿನ್ನುವ ಸಂದರ್ಭ ಅದರ ಸಿಪ್ಪೆಯನ್ನು ತೆಗೆದು ತಿನ್ನುವುದೇ ಒಳ್ಳೆಯದು ಎಂದು ವರದಿ ಸಲಹೆ ಮಾಡಿದೆ. ಇದರಿಂದ ಒಂದಿಷ್ಟು ಪ್ರಮಾಣದಲ್ಲಿ ರಾಸಾಯನಿಕ ಹೊಟ್ಟೆ ಸೇರುವುದನ್ನು ತಪ್ಪಿಸಬಹುದು ಎಂದಿದೆ.

Child Kid Eating Apple Fruit Outdoor Autumn Fall Nature Healthy

ಸಿಪ್ಪೆ ಒಳ್ಳೆಯದು, ಅದರಲ್ಲಿ ನಾರಿನಂಶ ಹೆಚ್ಚಿದೆ ಎಂದು ವಾದಿಸುವವರೆಲ್ಲ, ಒಮ್ಮೆ ಇಂತಹ ಹಣ್ಣುಗಳಿಗೆ ಬಳಸುವ ರಾಸಾಯನಿಕಗಳನ್ನು ಗಮನಿಸಿ. ಸಿಪ್ಪೆ ಒಳ್ಳೆಯದು ಎಂದು ತಿನ್ನುವ ಮೂಲಕ ರಾಸಾಯನಿಕವನ್ನು ಬೇಕೆಂದೆ ಹೊಟ್ಟೆಗೆ ಹಾಕುತ್ತೀರಿ ಖಂಡಿತವಾಗಿಯೂ, ಸಿಪ್ಪೆ ಬಿಸಾಕುವುದರಿಂದ ಪೋಷಕಾಂಶ ನಷ್ಟವಾಗುತ್ತದೆ. ಆದರೆ, ಬೇರೆ ಉಪಾಯವಿಲ್ಲ ಎಂದೂ ಅದು ಹೇಳಿದೆ.
ಸೇಬು ಹಣ್ಣಿನ ಸಿಪ್ಪೆಯಲ್ಲಿ ವಿಟಮಿನ್‌ ಕೆ, ವಿಟಮಿನ್‌ ಎ, ವಿಟಮಿನ ಸಿ, ಪೊಟಾಶಿಯಂ ಇತ್ಯಾದಿಗಳು ಅಪಾರ ಪ್ರಮಾಣದಲ್ಲಿವೆ. ಹಣ್ಣಿಗಿಂತ ಈ ಪೋಷಕಾಂಶಗಳು ಅದರ ಸಿಪ್ಪೆಯಲ್ಲಿರುವುದೇ ಹೆಚ್ಚು ನಿಜವಾದರೂ, ಇಂದು ಹಣ್ಣುಗಳಿಗೆ ವ್ಯಾಪಕವಾಗಿ ಕೀಟನಾಶಕಗಳನ್ನು ಬಳಸುವ ಕಾರಣದಿಂದ ಈ ಮುಂಜಾಗರೂಕತಾ ಕ್ರಮವನ್ನು ಪ್ರತಿಯೊಬ್ಬರೂ ತೆಗೆದುಕೊಳ್ಳುವುದು ಅತ್ಯವಶ್ಯಕ ಎಂದಿದೆ.
ಇಷ್ಟಾಗಿಯೂ ನೀವು ನಿಮ್ಮ ಸೇಬು ಹಣ್ಣನ್ನು ಸಿಪ್ಪೆ ಸಮೇತ ತಿನ್ನಬಯಸುವುರಾದರೆ, ಕನಿಷ್ಟ ತೊಳೆಯುವಾಗ ಈ ಎಚ್ಚರವಹಿಸಿ

ಬಿಸಿ ನೀರಿನಲ್ಲಿ ನೆನೆಸಿ

ಬಿಸಿನೀರಿನಲ್ಲಿ ಸೇಬು ಹಣ್ಣನ್ನು ಕೆಲ ಸೆಕೆಂಡುಗಳ ಕಾಲ ನೆನೆಸಿ. ಕೂಡಲೇ ಹೊರತೆಗೆದು ಒಂದು ಒರಟು ಟವೆಲ್‌ನಲ್ಲಿ ಉಜ್ಜಿ. ಇದು ಅದರ ವ್ಯಾಕ್ಸ್‌ ಕೋಟನ್ನು ತೆಗೆಯಲು ಸಹಾಯ ಮಾಡುತ್ತದೆ. ಜೊತೆಗೆ ರಾಸಾಯನಿಕಗಳೂ ಗಣನೀಯವಾಗಿ ಕಡಿಮೆಯಾಗುತ್ತದೆ.

Apples Fruits To Eat On Empty Stomach

ತೆಗೆದು ಒರಸಿಡಿ

ವಿನೆಗರ್‌ ಅಥವಾ ನಿಂಬೆರಸವನ್ನು ಹಾಕಿದ ನೀರಿನಲ್ಲಿ ಸೇಬುಹಣ್ಣನ್ನು ಸ್ವಲ್ಪ ಹೊತ್ತು ನೆನೆಸಿ ತೆಗೆದು ಒರಸಿಡಿ. ಬೇಕಿಂಗ್‌ ಸೋಡಾ ಹಾಗೂ ನಿಂಬೆರಸ ಮಿಶ್ರ ಮಾಡಿ ನೀರಿನಲ್ಲಿ ಹಾಕಿ ತೊಳೆದರೂ ಆದೀತು.

ಇದನ್ನೂ ಓದಿ: Health Tips: ಅನೀಮಿಯ ತಡೆಯುವುದಕ್ಕೆ ದಿನಕ್ಕೆಷ್ಟು ಕಬ್ಬಿಣದಂಶ ಬೇಕು? ಇದನ್ನು ಆಹಾರದಿಂದ ಪಡೆಯುವುದು ಹೇಗೆ?

ಸಿಪ್ಪೆ ಸುಲಿದೇ ತಿನ್ನಿ:
ಆದಷ್ಟೂ ಸಿಪ್ಪೆ ಸುಲಿದೇ ತಿನ್ನಿ. ಯಾಕೆಂದರೆ, ಈ ವರದಿ ಹೇಳುವಂತೆ, ಸಿಪ್ಪೆಯ ಸಣ್ಣ ರಂಧ್ರಗಳ ಮೂಲಕ ರಾಸಾಯನಿಕಗಳು ಹಣ್ಣಿನ ಒಳಮೈಯವರೆಗೂ ಪ್ರವೇಶ ಪಡೆದಿರುತ್ತವೆ. ಹಾಗಾಗಿ ಸಿಪ್ಪೆ ತೆಗೆದು ತಿನ್ನುವುದರಿಂದ ಹೆಚ್ಚು ಭರವಸೆ ಹೊಂದಬಹುದು.

Continue Reading
Advertisement
Employee ID card
ಕರ್ನಾಟಕ9 mins ago

Employee ID card: ರಾಜ್ಯ ಸರ್ಕಾರಿ ನೌಕರರಿಗೆ ಕೆಂಪು-ಹಳದಿ ಬಣ್ಣದ ಗುರುತಿನ ಚೀಟಿಯ ಟ್ಯಾಗ್‌ ಕಡ್ಡಾಯ

Rishab Shetty first reaction after kantara national award
ಸ್ಯಾಂಡಲ್ ವುಡ್14 mins ago

Rishab Shetty: ಈ ಪ್ರಶಸ್ತಿ ದೈವಕ್ಕೆ ಸಲ್ಲಬೇಕು ಎಂದ ರಿಷಬ್ ಶೆಟ್ಟಿ; ನಟನ ಫಸ್ಟ್‌ ರಿಯಾಕ್ಷನ್‌ ಹೀಗಿತ್ತು!

Kannada New Movie
ಬೆಂಗಳೂರು17 mins ago

Kannada New Movie: ತೆರೆಯ‌ ಮೇಲೆ‌ ಚಿತ್ರವಾಗಿ ಬರಲಿದೆ ಡಿ.ವಿ.ಜಿ ಅವರ ʼಮಂಕುತಿಮ್ಮನ ಕಗ್ಗʼ; ಮೊದಲ ಹಾಡು ರಿಲೀಸ್‌

70th National Film Award
ಪ್ರಮುಖ ಸುದ್ದಿ24 mins ago

70th National Film Awards : ಕನ್ನಡಿಗರಿಗೆ ಹೆಮ್ಮೆ ತಂದ ರಿಷಭ್​ ಶೆಟ್ಟಿ, ಕೆಜಿಎಫ್​​; ಮಲಯಾಳಂನ ‘ಆಟಂ’ ಅತ್ಯುತ್ತಮ ಸಿನೆಮಾ; ಸಂಪೂರ್ಣ ಲಿಸ್ಟ್‌ ಇಲ್ಲಿದೆ

Rishab Shetty cinema Journey before Kantara
ಸ್ಯಾಂಡಲ್ ವುಡ್29 mins ago

Rishab Shetty: ಅಣ್ಣಾವ್ರ ಅಪ್ಪಟ ಅಭಿಮಾನಿ ರಿಷಬ್‌ ಶೆಟ್ಟಿ ಸಿನಿ ಜರ್ನಿ ಹೀಗಿತ್ತು! ನಾಡಿಗೆ ಕೀರ್ತಿ ತಂದ ಕುಂದಾಪುರದ ಹುಡುಗ!

Virat Kohli
ಕ್ರಿಕೆಟ್44 mins ago

Virat Kohli: ಲಂಡನ್​ನ ಸಿಗ್ನಲ್​ನಲ್ಲಿ ಸಾಮಾನ್ಯರಲ್ಲಿ ಸಾಮಾನ್ಯರಂತೆ ನಿಂತ ಕೊಹ್ಲಿ; ವಿಡಿಯೊ ವೈರಲ್

Teachers Transfer
ಕರ್ನಾಟಕ53 mins ago

Teachers Transfer: ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಗುಡ್‌ ನ್ಯೂಸ್‌; ನಾಳೆಯಿಂದ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಪ್ರಕ್ರಿಯೆ

Bengaluru Power Cut
ಕರ್ನಾಟಕ1 hour ago

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಆ.17ರಂದು ಪವರ್‌ ಕಟ್‌!

70th National Film Awards Rishabh Shetty Best Actor, KGF 2 Best Kannada Movie
ಸ್ಯಾಂಡಲ್ ವುಡ್1 hour ago

70th National Film Awards: ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ; ರಿಷಬ್‌ ಶೆಟ್ಟಿ ಅತ್ಯುತ್ತಮ ನಟ, ಕೆಜಿಎಫ್‌ 2 ಅತ್ಯುತ್ತಮ ಕನ್ನಡ ಚಿತ್ರ

Kolkata doctor rape case
ಪ್ರಮುಖ ಸುದ್ದಿ1 hour ago

Kolkata doctor rape case : ದುಡ್ಡು ಪಡೆದರೆ ಮೃತಪಟ್ಟ ಮಗಳಿಗೆ ಅವಮಾನ ಮಾಡಿದಂತೆ; ಪರಿಹಾರದ ಮೊತ್ತ ನಿರಾಕರಿಸಿದ ಕೋಲ್ಕೊತಾ ಅತ್ಯಾಚಾರ ಸಂತ್ರಸ್ತೆಯ ಅಪ್ಪ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ1 week ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 week ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 week ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು1 week ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 week ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌