Thyroid Awareness Month | ನಮ್ಮ ಆರೋಗ್ಯದಲ್ಲಿ ಥೈರಾಯ್ಡ್‌ ಪಾತ್ರ ಅತಿ ಮುಖ್ಯ, ತಿಳಿದಿರಲಿ! - Vistara News

ಆರೋಗ್ಯ

Thyroid Awareness Month | ನಮ್ಮ ಆರೋಗ್ಯದಲ್ಲಿ ಥೈರಾಯ್ಡ್‌ ಪಾತ್ರ ಅತಿ ಮುಖ್ಯ, ತಿಳಿದಿರಲಿ!

ಗಂಟಲಿನ ಮುಂಭಾಗದಲ್ಲಿರುವ ಚಿಟ್ಟೆಯಾಕಾರದ ಪುಟ್ಟ ಗ್ರಂಥಿ ಥೈರಾಯ್ಡ್. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ, ಈ ಪುಟ್ಟ ಗ್ರಂಥಿ ಸ್ರವಿಸುವ ಚೋದಕಗಳು ನಮ್ಮ ಆರೋಗ್ಯ ರಕ್ಷಣೆಗೆ ಬಹಳ ಮುಖ್ಯವಾದದ್ದು.

VISTARANEWS.COM


on

Thyroid Awareness Month
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನಮ್ಮ ದೇಹವನ್ನು ಆರೋಗ್ಯವಾಗಿಡುವುದಕ್ಕೆ ಮತ್ತು ಅದರ ಸೂಕ್ಷ್ಮಾತಿಸೂಕ್ಷ್ಮ ಅಗತ್ಯಗಳನ್ನು ಪೂರೈಸುವುದಕ್ಕೆ ನಮ್ಮದೇ ದೇಹದಲ್ಲಿನ ವ್ಯವಸ್ಥೆ ಸಕ್ಷಮವಾಗಿದೆ. ಆದರೆ ಯಾವುದೇ ಅಂಗ ಹೇಗೆ ಕೆಲಸ ಮಾಡುತ್ತದೆ ಮತ್ತು ಅದು ವ್ಯತ್ಯಾಸವಾದರೆ ಏನಾಗುತ್ತದೆ ಎಂಬ ಬಗ್ಗೆ ನಮಗೆ ಅರಿವಿರುವುದು ಅಗತ್ಯ. ಹಾಗಾಗಿಯೇ ಜನವರಿ ತಿಂಗಳನ್ನು ಥೈರಾಯ್ಡ್‌ ಜಾಗೃತಿ ಮಾಸ ಎಂದು ಆಚರಿಸಲಾಗುತ್ತದೆ.

Thyroid Awareness Month

ನಮ್ಮ ಗಂಟಲಿನ ಮುಂಭಾಗದಲ್ಲಿರುವ ಚಿಟ್ಟೆಯಾಕಾರದ ಪುಟ್ಟ ಗ್ರಂಥಿಯಿದು. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ, ಈ ಪುಟ್ಟ ಗ್ರಂಥಿ ಸ್ರವಿಸುವ ಚೋದಕಗಳು ನಮ್ಮ ಆರೋಗ್ಯ ರಕ್ಷಣೆಗೆ ಬಹಳ ಮುಖ್ಯವಾದದ್ದು. ದೇಹದ ಉಷ್ಣತೆಯನ್ನು ನಿಯಂತ್ರಿಸುವುದು, ಹೃದಯದ ಬಡಿತವನ್ನು ಸರಾಗ ಮಾಡುವುದು, ಶರೀರದ ಚಯಾಪಚಯ ಕ್ರಿಯೆಯನ್ನು ನಿರ್ವಹಿಸುವುದು- ಇಂಥ ಕೆಲವು ಮುಖ್ಯ ಹೊಣೆಗಳನ್ನು ಈ ಗ್ರಂಥಿ ನಿರ್ವಹಿಸುತ್ತದೆ. ಈ ಗ್ರಂಥಿಗಳು ಉತ್ಪಾದಿಸುವ ಚೋದಕಗಳ ಅಥವಾ ಹಾರ್ಮೋನುಗಳ ಪ್ರಮಾಣ ಹೆಚ್ಚು ಇಲ್ಲವೇ ಕಡಿಮೆಯಾದರೆ ಥೈರಾಯ್ಡ್‌ ಸಮಸ್ಯೆ ಇದೆಯೆಂದು ಅರ್ಥ. ಹೈಪರ್‌ ಥೈರಾಯ್ಡಿಸಂ, ಹೈಪೋ ಥೈರಾಯ್ಡಿಸಂ, ಥೈರಾಯ್ಡೈಟಿಸ್‌ ಮತ್ತು ಹಶಿಮೊಟೊ ಥೈರಾಯ್ಡೈಟಿಸ್‌- ಇವು ಸಾಮಾನ್ಯವಾಗಿ ಕಾಡುವ ಥೈರಾಯ್ಡ್‌ ಗ್ರಂಥಿಯ ಸಮಸ್ಯೆಗಳು.

ಈ ಗ್ರಂಥಿ ಸ್ರವಿಸುವ ಟಿ3 ಮತ್ತು ಟಿ4 ಚೋದಕಗಳು (T3 and T4 hormones) ಏರಿಳಿತವಾಗುವ ಸಮಸ್ಯೆ ಯಾರಲ್ಲೂ ಉಂಟಾಗಬಹುದು. ಆದರೆ ಪುರುಷರಿಗಿಂತ ಮಹಿಳೆಯರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುವುದು ಸುಮಾರು ಎಂಟು ಪಟ್ಟು ಹೆಚ್ಚು. ಕೆಲವೊಮ್ಮೆ ಬಾಲ್ಯದಲ್ಲೇ ಈ ಸಮಸ್ಯೆ ಕಾಣಿಸಿಕೊಳ್ಳಬಹುದು. ಆದರೆ ವಯಸ್ಸು ಮಾಗಿದಂತೆ ಈ ಸಮಸ್ಯೆ ಕಾಣಿಸಿಕೊಳ್ಳುವ ಪ್ರಮಾಣ ಏರುತ್ತದೆ. ಶಿಶು ಜನನದ ನಂತರ, ಋತುಬಂಧದ ಸಮಯದಲ್ಲಿ ಅಥವಾ 60ರ ನಂತರ ಥೈರಾಯ್ಡ್‌ ಸಮಸ್ಯೆ ಉಂಟಾಗಬಹುದು. ಸರಳ ರಕ್ತ ಪರೀಕ್ಷೆಯಿಂದ ಈ ಸಮಸ್ಯೆಯನ್ನು ಪತ್ತೆ ಮಾಡಬಹುದು.

Thyroid Awareness Month

ಹೈಪೋ ಥೈರಾಯ್ಡಿಸಂ
ಚೋದಕಗಳ ಸ್ರವಿಸುವಿಕೆ ಕಡಿಮೆಯಾದಾಗ ಕಾಣುವ ಸಮಸ್ಯೆಯಿದು. ಈ ಸಮಸ್ಯೆ ಆರಂಭದಲ್ಲಿ ಅಷ್ಟಾಗಿ ಗಮನಕ್ಕೆ ಬಾರದಿರಬಹುದು. ಆದರೆ ಸುಸ್ತು, ಆಯಾಸ, ಸುಮ್ಮನೆ ಚಳಿಯಾಗುವುದು, ಮಲಬದ್ಧತೆ, ಒಣ ಚರ್ಮ, ತೂಕ ಹೆಚ್ಚಳ, ಧ್ವನಿ ಒರಟಾಗುವುದು, ಮಾಂಸಖಂಡಗಳಲ್ಲಿ ನೋವು, ಕೂದಲು ಉದುರುವುದು, ಖಿನ್ನತೆ, ಫಲವಂತಿಕೆಯ ಸಮಸ್ಯೆ, ಮಾಸಿಕ ಸ್ರಾವ ಏರುಪೇರಾಗುವುದು- ಇಂಥ ಲಕ್ಷಣಗಳು ಉಂಟಾಗಬಹುದು.

Thyroid Awareness Month

ಹೈಪರ್‌ ಥೈರಾಯ್ಡಿಸಂ
ಹಾರ್ಮೋನುಗಳ ಸ್ರಾವ ಹೆಚ್ಚಾದಾಗ ಬರುವ ಸಮಸ್ಯೆಯಿದು. ಹೃದಯದ ಬಡಿತ ಏರುಪೇರಾಗುವುದು, ಹಸಿವು ಹೆಚ್ಚಾಗಿ ಹೆಚ್ಚು ತಿಂದರೂ ಇಳಿಯುವ ತೂಕ, ಹೊಟ್ಟೆ ಸರಿ ಇಲ್ಲದಂತಾಗುವುದು, ದೃಷ್ಟಿ ಸಮಸ್ಯೆ, ಋತುಚಕ್ರ ಏರುಪೇರು, ನಿದ್ರಾಹೀನತೆ, ಗಂಟಲು ಊದಿಕೊಂಡಂತೆ ಕಾಣುವುದು, ಕೂದಲು ತುಂಡಾಗಿ ಉದುರುವುದು, ಬೆವರುವ ಪ್ರಮಾಣ ಹೆಚ್ಚುವುದು- ಇಂಥ ಲಕ್ಷಣಗಳಿದ್ದರೆ ಎಚ್ಚರಿಕೆ ಅಗತ್ಯ.

ಇದನ್ನೂ ಓದಿ| Mental Health | ಒತ್ತಡ ಹೆಚ್ಚಿದೆಯೇ? ಇವು ನೆರವಾಗಬಹುದು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Tongue Reveals Health: ನಮ್ಮ ಆರೋಗ್ಯದ ಚರಿತ್ರೆಯನ್ನು ನಮ್ಮ ನಾಲಿಗೆಯೇ ಹೇಳುತ್ತದೆ!

ದೇಹದೊಳಗೆ ಏನಾಗುತ್ತಿದೆ ಎಂಬುದನ್ನು ತಿಳಿಯಬೇಕಾದರೆ ನಮ್ಮ ನಾಲಿಗೆಯನ್ನೂ ತಿಳಿಯಬೇಕು ನಾವು. ಅದರ ಬಣ್ಣ ಮತ್ತು ಮೇಲ್ಮೈ ಹೇಗಿದೆ ಎನ್ನುವುದರ ಮೇಲೆ ಬಹಳಷ್ಟು ವಿಷಯಗಳನ್ನು ತಿಳಿಯಬಹುದು. ಏನು ಮಾಹಿತಿಯನ್ನು ನೀಡುತ್ತದೆ (Tongue Reveals Health) ನಾಲಿಗೆ? ಈ ಲೇಖನ ಓದಿ.

VISTARANEWS.COM


on

Tongue Reveals Health
Koo

ನಾಲಿಗೆಯು (Tongue Reveals Health) ಆರೋಗ್ಯದ ಕನ್ನಡಿ ಎನ್ನುವ ಮಾತಿದೆ. ನಮ್ಮ ದೇಹದ ಸ್ಥಿತಿ-ಗತಿಗಳ ಬಗ್ಗೆ ಅರಿಯುವುದಕ್ಕೆ ನಾಲಿಗೆ ಸಹಾಯಕ. ಅದರ ಬಣ್ಣ, ಮೇಲ್ನೋಟಗಳಿಂದ ದೇಹದೊಳಗೆ ಹೇಗಿದೆ, ಏನಾಗುತ್ತಿದೆ ಎಂಬುದನ್ನು ಅರಿಯಬಹುದು. ದೇಹಾರೋಗ್ಯದ ದಿಕ್ಸೂಚಿಯಂತೆ ಜಿಹ್ವೆ ಕೆಲಸ ಮಾಡುತ್ತದೆ. ಇದನ್ನು ಸರಿಯಾಗಿ ಅವಲೋಕಿಸಿದರೆ, ನಮಗೆ ತಿಳಿಯುವ ಮಾಹಿತಿಗಳು ಹಲವಾರು. ನಾಲಿಗೆ ತಿಳಿಸುವುದೇನು ಎಂಬ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

Woman's tongue

ಗುಲಾಬಿ ಬಣ್ಣ

ಸುಂದರ ಗುಲಾಬಿ ಬಣ್ಣದ ನಾಲಿಗೆಯಿದ್ದರೆ, ಅದು ಸ್ವಸ್ಥ ಆರೋಗ್ಯದ ಸಂಕೇತ. ಇಷ್ಟೇ ಅಲ್ಲ, ರಸ ಒಸರುವ, ಮೃದುವಾದ ಮೇಲ್ಮೈ ಹೊಂದಿರುವ ನಾಲಿಗೆಯು ದೇಹಕ್ಕೆ ಅಗತ್ಯವಾದ ನೀರಿನಂಶ ಒದಗುತ್ತಿದೆ ಎಂಬುದನ್ನು ಸೂಚಿಸುತ್ತದೆ. ಜೊತೆಗೆ, ಜೀರ್ಣಾಂಗಗಳು ಚೆನ್ನಾಗಿ ಕೆಲಸ ಮಾಡುತ್ತಿವೆ ಎಂಬ ಸಂದೇಶವನ್ನೂ ನೀಡುತ್ತದೆ.

ಬಿಳಿ ನಾಲಿಗೆ

ನಾಲಿಗೆಯ ಮೇಲೆ ಬಿಳಿ ಬಣ್ಣದ ಹೊದಿಕೆಯಿದ್ದರೆ ಇದು ಬಹಳಷ್ಟನ್ನು ಸೂಚಿಸುತ್ತದೆ. ಈ ಬಿಳಿಯ ಬಣ್ಣವು ಬಾಯಿಯ ಭಾಗಕ್ಕೆ ಅಂಟಿಕೊಂಡ ಫಂಗಸ್‌ ಸೋಂಕಿನ ಲಕ್ಷಣವಿರಬಹುದು; ಬಾಯಿಯ ಸ್ವಚ್ಛತೆಯ ಕೊರತೆಯನ್ನು ಸೂಚಿಸಬಹುದು; ಬ್ಯಾಕ್ಟೀರಿಯ ದಾಳಿ ಮಾಡಿದ್ದರಿಂದಲೂ ಇರಬಹುದು. ಇದಲ್ಲದೆ, ದೇಹಕ್ಕೆ ಅಗತ್ಯವಾದಷ್ಟು ನೀರು ದೊರೆಯದಿದ್ದರೆ ಹೀಗಾಗುತ್ತದೆ. ಜೊತೆಗೆ, ಜೀರ್ಣಾಂಗಗಳ ಕೆಲಸದಲ್ಲಿ ಏರುಪೇರಾದರೆ, ಅಜೀರ್ಣ ಅಥವಾ ಮಲಬದ್ಧತೆಯಿದ್ದರೂ ನಾಲಿಗೆಯ ಮೇಲೆ ಬಿಳಿಯ ಹೊದಿಕೆಯನ್ನು ಕಾಣಬಹುದು.

Little kid sticking out his tongue

ಕೆಂಪು ನಾಲಿಗೆ

ಸ್ಟ್ರಾಬೆರಿಯಂಥ ಕೆಂಪು ನಾಲಿಗೆಯು ದೇಹದಲ್ಲಿ ಅಗತ್ಯ ಸತ್ವಗಳ ಕೊರತೆಯನ್ನು ಸೂಚಿಸುತ್ತದೆ. ವಿಟಮಿನ್‌ಗಳ ಕೊರತೆಯಿದ್ದರೆ, ಅದರಲ್ಲೂ ಮುಖ್ಯವಾಗಿ ವಿಟಮಿನ್‌ ಬಿ೧೨ ಕಡಿಮೆಯಿದ್ದರೆ ನಾಲಿಗೆಯು ಹೀಗೆ ಸ್ಟ್ರಾಬೆರಿ ಕೆಂಪಿನ ಬಣ್ಣದಲ್ಲಿ ಗೋಚರಿಸುತ್ತದೆ. ಕಬ್ಬಿಣದಂಶ ಕಡಿಮೆಯಿದ್ದರೂ ನಾಲಿಗೆ ಕೆಂಪಾಗುತ್ತದೆ. ರಕ್ತನಾಳಗಳಲ್ಲಿ ಉರಿಯೂತ ತರುವ ಕವಾಸಾಕಿ ಎನ್ನುವ ರೋಗವೂ ಅಪರೂಪಕ್ಕೆ ಈ ಕೆನ್ನಾಲಗೆಗೆ ಕಾರಣವಾಗಬಹುದು.

ಕಪ್ಪು ನಾಲಿಗೆ

ಕೆಲವೊಮ್ಮೆ ಕಪ್ಪಾದ ರೋಮಭರಿತ ಲಕ್ಷಣಗಳನ್ನು ನಾಲಿಗೆ ತೋರಿಸಬಹುದು. ಇದು ಸಹ ಬ್ಯಾಕ್ಟೀರಿಯ ಸೋಂಕಿನಿಂದ ಆಗುವಂಥದ್ದು. ಕೆಲವು ಔಷಧಿಗಳಿಂದ ನಾಲಿಗೆ ಕಪ್ಪಾಗಬಹುದು. ಧೂಮಪಾನ ಅತಿಯಾದರೂ ನಾಲಿಗೆ ಹೀಗೆ ಬಣ್ಣಗೆಡಬಹುದು. ಆದರೆ ನಾಲಿಗೆಯಲ್ಲಿ ನೋವು, ಊತ ಇದ್ದು, ಬಾಯಿಯ ರುಚಿ ವಾಸನೆಗಳು ಬದಲಾಗಿದ್ದರೆ ವೈದ್ಯರನ್ನು ಕಾಣಬೇಕಾಗುತ್ತದೆ.

ನಕಾಶೆ ನಾಲಿಗೆ

ಅಂದರೆ ನಾಲಿಗೆ ಮೇಲೆ ಕೆಂಪು ಬಣ್ಣದ ಮಚ್ಚೆಯಂಥ ಆಕೃತಿಗಳು ಕಾಣಬಹುದು. ನೋಡುವುದಕ್ಕೆ ಯಾವುದೇ ಭೂಪಟ ಅಥವಾ ನಕಾಶೆಯಂತೆ ಕಾಣುವ ಈ ಕೆಂಪು ಆಕೃತಿಗಳು ಸಾಮಾನ್ಯವಾಗಿ ಅಪಾಯ ಮಾಡುವುದಿಲ್ಲ. ಆದರೆ ಕೆಲವು ಆಹಾರಗಳಿಗೆ ಅಥವಾ ತೀಕ್ಷ್ಣ ರುಚಿಗಳಿಗೆ ಇವು ಪ್ರತಿಕ್ರಿಯಿಸಿ, ನೋವು ನೀಡುತ್ತವೆ. ಇದಕ್ಕೆ ನಿರ್ದಿಷ್ಟವಾದ ಕಾರಣಗಳು ತಿಳಿದಿಲ್ಲ.

Woman with halitosis for candida albicans pointing her tongue

ಸೀಳು ನಾಲಿಗೆ

ನಾಲಿಗೆಯ ಮೇಲ್ಮೈಯಲ್ಲಿ ಸೀಳಿನಂಥ ಆಳವಾದ ಗೆರೆಗಳು ಕಾಣಬಹುದು. ಕೆಲವೊಮ್ಮೆ ಇವು ಆನುವಂಶಿಕವಾಗಿ ಬರಬಹುದು. ಅದಿಲ್ಲದಿದ್ದರೆ, ಸೋರಿಯಾಸಿಸ್‌ ಅಥವಾ ಡೌನ್ಸ್‌ ಸಿಂಡ್ರೋಮ್‌ ಸಹ ಕಾರಣವಾಗಿರಬಹುದು. ಹೆಚ್ಚಿನ ಸಾರಿ ಈ ಗೆರೆಗಳು ಯಾವುದೇ ತೊಂದರೆ ನೀಡುವುದಿಲ್ಲ.

ಹುಣ್ಣುಗಳು

ಬಾಯಲ್ಲಿ ಹುಣ್ಣಾದಂತೆಯೇ ನಾಲಿಗೆ ಮೇಲೂ ಹುಣ್ಣುಗಳಾಗುತ್ತವೆ. ಇದಕ್ಕೆ ಹಲವು ಕಾರಣಗಳಿರಬಹುದು. ಕೆಲವೊಮ್ಮೆ ಸತ್ವಗಳ ಕೊರತೆ, ಸೋಂಕು ಅಥವಾ ಬ್ರೇಸಸ್‌ ಹಾಕಿದ ಕಾರಣಕ್ಕೂ ಆಗಿರಬಹುದು. ಹಲವು ವಾರಗಳಿಂದ ಈ ಹುಣ್ಣುಗಳು ಕಡಿಮೆಯಾಗದೆ ಮುಂದುವರಿಯುತ್ತಿದ್ದರೆ ಬಾಯಿ ಕ್ಯಾನ್ಸರ್‌ ಸೂಚನೆಯೂ ಇರಬಹುದು. ಗುಣವಾಗದ ಹುಣ್ಣುಗಳಿದ್ದರೆ ವೈದ್ಯರಲ್ಲಿ ತೋರಿಸುವುದು ಅಗತ್ಯ.

Woman With Wide Open Mouth and Tongue Out

ಗಮನ ಕೊಡಿ

ಕೆಂಪು, ಬಿಳಿಯ ಮಚ್ಚೆಯಂಥವು ನಾಲಿಗೆಯ ಮೇಲೆ ಕಾಣಿಸಿಕೊಂಡು ನೋವು ಕೊಡುತಿದ್ದರೆ, ಬಾಯಿ ವಾಸನೆ ಬರುತ್ತಿದ್ದರೆ, ಹುಣ್ಣುಗಳು ಗುಣವಾಗದೆ ಉಳಿದಿದ್ದರೆ, ಬಾಯಿ ಅಥವಾ ನಾಲಿಗೆಯಲ್ಲಿ ಕಾಣಿಸಿಕೊಂಡ ಯಾವುದೇ ಹುಣ್ಣು, ವ್ರಣ, ಮಚ್ಚೆಗಳು ಸಾಮಾನ್ಯಕ್ಕಿಂತ ಭಿನ್ನ ಲಕ್ಷಣಗಳನ್ನು ಹೊಂದಿದ್ದರೆ, ವೈದ್ಯರನ್ನು ಕಾಣುವುದು ಸೂಕ್ತ. ಇಂಥ ಯಾವುದೇ ಲಕ್ಷಣಗಳು ಕ್ಯಾನ್ಸರ್‌ನ ಸೂಚಕಗಳಾಗಿರಬಹುದು.

ಇದನ್ನೂ ಓದಿ:Health Tips: ಒಂದೇ ಕಡೆ ಕೂತಿರುತ್ತೀರಾ? ಸಮಸ್ಯೆಗಳು ಒಂದೆರಡಲ್ಲ!

Continue Reading

ಆರೋಗ್ಯ

Benefits Of Black Raisins: ರಕ್ತದೊತ್ತಡ, ಕೊಲೆಸ್ಟ್ರಾಲ್‌ ನಿಯಂತ್ರಿಸಬೇಕೆ? ಕಪ್ಪು ಒಣದ್ರಾಕ್ಷಿ ನೆನೆಸಿ ತಿನ್ನಿ

ಕಪ್ಪು ಒಣದ್ರಾಕ್ಷಿಗಳನ್ನು ಯಾರಾದರೂ ಕೈಗಿತ್ತರೆ, ನೇರ ಬಾಯಿಯ ದಾರಿಯನ್ನೇ ಕಾಣಿಸುತ್ತೇವೆ ನಾವು. ಎಲ್ಲರಿಗೂ ಇಷ್ಟವಾಗುವ ಈ ಪುಟ್ಟ ತಿನಿಸಿನಲ್ಲಿ ಆರೋಗ್ಯಕ್ಕೆ ಲಾಭವಾಗುವ ಅಂಶಗಳು ಭರಪೂರ ಇವೆ. ಅವುಗಳನ್ನು ನೆನೆಸಿ ತಿಂದರೆ (benefits of black raisins) ಇನ್ನೂ ಒಳ್ಳೆಯದು.

VISTARANEWS.COM


on

Benefits Of Black Raisins
Koo

ಒಣ ಹಣ್ಣುಗಳನ್ನು ಮೆಲ್ಲುವುದನ್ನು ಇಷ್ಟಪಡದವರು ವಿರಳ. ಸುಮ್ಮನೆ ಕೂತಿದ್ದಾಗಲೂ ನಾಲ್ಕು ಒಣ ದ್ರಾಕ್ಷಿ ಕೈಗಿತ್ತರೆ ಬಾಯಿಗೆ ಒಗೆದುಕೊಳ್ಳಲು ಯಾರಿಗೂ ಬೇಸರವಿರುವುದಿಲ್ಲ. ಹಲ್ಲಿಲ್ಲದ ಬಾಯಲ್ಲಿ ಒತ್ತರಿಸಿಟ್ಟುಕೊಳ್ಳುವ ವೃದ್ಧರಿಂದ ಹಿಡಿದು, ಹಲ್ವಾ, ಪಾಯಸದಲ್ಲಿ ಹೆಕ್ಕಿ ತಿನ್ನುವ ಮಕ್ಕಳವರೆಗೆ ಒಣ ದ್ರಾಕ್ಷಿ ಎಲ್ಲರಿಗೂ ಮೆಚ್ಚು. ಸಾಮಾನ್ಯವಾಗಿ ಬಳಸುವ ಹೊಂಬಣ್ಣದ ದ್ರಾಕ್ಷಿಗಳ ಬದಲಿಗೆ ಕಪ್ಪು ದ್ರಾಕ್ಷಿಗಳ ಬಗ್ಗೆ ಇವತ್ತಿನ ನಮ್ಮ ಗಮನ. ಏನಿವುಗಳ ವಿಶೇಷತೆ?
ಒಣ ದ್ರಾಕ್ಷಿಯನ್ನು ನೆನೆಸಿ ತಿನ್ನಬೇಕೆನ್ನುತ್ತದೆ ಪರಂಪರಾಗತ ವೈದ್ಯ ಶಾಸ್ತ್ರ. ಯಾವುದೇ ಒಣ ಹಣ್ಣು, ಬೀಜಗಳನ್ನು ನೆನೆಸಿ ತಿನ್ನುವುದೇ ಶ್ರೇಷ್ಠ ಎಂಬುದನ್ನು ಆಹಾರ ತಜ್ಞರೂ ಅನುಮೋದಿಸುತ್ತಾರೆ. ಇದು ಒಣ ದ್ರಾಕ್ಷಿಯ ಮಟ್ಟಿಗೂ ನಿಜ. ಹಸಿರು, ಹೊಂಬಣ್ಣದ್ದು, ಕಪ್ಪು- ಹೀಗೆ ದ್ರಾಕ್ಷಿಯ ಬಣ್ಣ ಯಾವುದೇ ಇದ್ದರೂ, ಅವುಗಳ ಲಾಭಗಳು ಹೆಚ್ಚಿನ ಪ್ರಮಾಣದಲ್ಲಿ ದೊರೆಯಬೇಕೆಂದರೆ ನೆನೆಸಿ ತಿನ್ನುವುದು, ಅದರಲ್ಲೂ ಖಾಲಿ ಹೊಟ್ಟೆಯಲ್ಲಿ ಮೆಲ್ಲುವುದು ಇನ್ನೂ ಉತ್ತಮ. ಏನಿದೆ ಇದನ್ನು ತಿನ್ನುವುದರ (benefits of black raisins) ಪ್ರಯೋಜನಗಳು?

ealthy internal organs of human digestive system / highlighted blue organs

ಜೀರ್ಣಾಂಗಗಳು ಸುಸೂತ್ರ

ನಾರಿನಂಶ ಹೆಚ್ಚಿರುವ ಈ ಹಣ್ಣುಗಳನ್ನು ತಿನ್ನುವುದರಿಂದ ಪಚನಾಂಗಗಳ ಮೇಲೆ ಪೂರಕ ಪರಿಣಾಮ ಉಂಟಾಗುತ್ತದೆ. ನೆನೆಸಿದ ಕಪ್ಪುದ್ರಾಕ್ಷಿಯು ಮಲಬದ್ಧತೆಯನ್ನು ನಿವಾರಿಸಿ, ಹೊಟ್ಟೆಯನ್ನು ಶುದ್ಧವಾಗಿಡುತ್ತದೆ. ಆಸಿಡಿಟಿಯನ್ನು ದೂರ ಮಾಡಿ, ಹೊಟ್ಟೆಯ ತೊಂದರೆಯನ್ನು ತಹಬಂದಿಗೆ ತರುತ್ತದೆ.

ಮೂಳೆಗಳು ಸದೃಢ

ಕಪ್ಪು ದ್ರಾಕ್ಷಿಯಲ್ಲಿ ಕ್ಯಾಲ್ಶಿಯಂ ಮತ್ತು ಪೊಟಾಶಿಯಂ ಅಂಶಗಳು ವಿಫುಲವಾಗಿವೆ. ಇದರಿಂದ ಸಣ್ಣ ಪ್ರಮಾಣದಲ್ಲೇ ಆದರೂ, ನಿಯಮಿತ ಸೇವನೆಯಿಂದ ಈ ಖನಿಜಗಳು ದೇಹಕ್ಕೆ ಸದಾ ದೊರೆಯುವಂತೆ ನೋಡಿಕೊಳ್ಳಬಹುದು. ಹೀಗೆ ನಿರಂತರವಾಗಿ ಈ ಪೋಷಕಗಳು ದೊರೆತರೆ, ಕ್ರಮೇಣ ಮೂಳೆಗಳು ಗಟ್ಟಿಯಾಗುತ್ತವೆ. ಅದರಲ್ಲೂ ಬೆಳೆಯುವ ಮಕ್ಕಳಿಗೆ ಮತ್ತು ವೃದ್ಧರಿಗೆ ಮೂಳೆ ಸಬಲವಾಗಿರಬೇಕಾದರೆ ಇಂಥ ಆಹಾರಗಳು ಅಗತ್ಯವಾಗುತ್ತವೆ.

Indian Male Doctor Check BP or Blood Pressure of a Patient L

ರಕ್ತದೊತ್ತಡ ನಿಯಂತ್ರಣ

ಕಪ್ಪು ದ್ರಾಕ್ಷಿಯಲ್ಲಿರುವ ಪೊಟಾಶಿಯಂ ಅಂಶವು ರಕ್ತದಲ್ಲಿರುವ ಸೋಡಿಯಂ ಅಂಶವನ್ನು ತಗ್ಗಿಸುವ ಕೆಲಸವನ್ನು ಮಾಡುತ್ತದೆ. ಇದರಿಂದ ರಕ್ತದ ಒತ್ತಡ ಏರಿಳಿತವಾಗದಂತೆ ನಿರ್ವಹಿಸುವುದು ಸುಲಭವಾಗುತ್ತದೆ. ಇದರಲ್ಲಿರುವ ಕರಗದಿರುವ ನಾರಿನಂಶವು ದೇಹದಲ್ಲಿ ಜಮೆಯಾಗಿರುವ ಕೊಬ್ಬು ಕರಗಿಸುವುದಕ್ಕೂ ಅಳಿಲುಸೇವೆ ಮಾಡುತ್ತದೆ.

ಕೊಲೆಸ್ಟ್ರಾಲ್‌ ನಿಯಂತ್ರಣ

ಶರೀರದಲ್ಲಿ ಕೊಲೆಸ್ಟ್ರಾಲ್‌ ಜಮೆಯಾದರೆ ಆಗುವಂಥ ಸಮಸ್ಯೆಗಳು ಒಂದೆರಡೇ ಅಲ್ಲ. ರಕ್ತನಾಳಗಳಲ್ಲಿ ಜಮೆಯಾಗುವ ಕೊಬ್ಬು ಕ್ರಮೇಣ ಹೃದಯಕ್ಕೆ ಅಳಿಸಲಾಗದ ಬರೆಯನ್ನೇ ಹಾಕಿಬಿಡುತ್ತದೆ. ಹಾಗಾಗಿ ಕೊಲೆಸ್ಟ್ರಾಲ್‌ ಕಡಿಮೆ ಮಾಡುವಂಥ ಆಹಾರಗಳಿಗೆ ಆದ್ಯತೆ ನೀಡುವುದು ಜಾಣತನ. ಕಪ್ಪು ಒಣದ್ರಾಕ್ಷಿಯಲ್ಲಿರುವ ಪಾಲಿಫೆನಾಲ್‌ಗಳಲ್ಲಿ ದೇಹದಲ್ಲಿನ ಕೆಟ್ಟ ಕೊಬ್ಬು ಕಡಿಮೆ ಮಾಡುವ ಗುಣವಿದೆ. ಜೊತೆಗೆ ರಕ್ತದೊತ್ತಡವನ್ನೂ ಇದು ಕಡಿಮೆ ಮಾಡುವುದರಿಂದ, ಹೃದಯದ ಸ್ನೇಹಿತ ಎನಿಸುತ್ತದೆ ಕಪ್ಪು ದ್ರಾಕ್ಷಿ.

ಹಲ್ಲುಗಳ ಆರೋಗ್ಯ ಸುಧಾರಣೆ

ಕಪ್ಪುದ್ರಾಕ್ಷಿಯಲ್ಲಿರುವ ಫೈಟೊ ಕೆಮಿಕಲ್‌ಗಳು ಹಲ್ಲುಗಳಲ್ಲಿ ಹುಳುಕಾಗುವುದನ್ನು ತಪ್ಪಿಸುತ್ತವೆ. ಒಸಡಿನ ಆರೋಗ್ಯವನ್ನೂ ಕಾಪಾಡಿ, ಬಾಯಿಯ ದುರ್ಗಂಧವನ್ನು ನಿವಾರಣೆ ಮಾಡುತ್ತವೆ. ನೆನೆಸಿದ ಕಪ್ಪು ದ್ರಾಕ್ಷಿಗಳನ್ನು ಜಗಿದು ತಿನ್ನುವುದರಿಂದ, ಹಲ್ಲುಗಳ ಎನಾಮಲ್‌ ಹೊದಿಕೆಯನ್ನು ಕ್ಷೇಮವಾಗಿ ಇರಿಸಬಹುದು.

Woman anemia image Coriander Benefits

ರಕ್ತಹೀನತೆ ದೂರ

ದ್ರಾಕ್ಷಿಯಲ್ಲಿ ಕಬ್ಬಿಣದಂಶ ಅಧಿಕವಾಗಿದೆ. ದೇಹದಲ್ಲಿ ಅಗತ್ಯ ಹಿಮೋಗ್ಲೋಬಿನ್‌ ಮಟ್ಟವನ್ನು ಕಾಯ್ದುಕೊಂಡು, ಆಮ್ಲಜನಕದ ಪ್ರಮಾಣದ ಕಡಿಮೆಯಾಗದಂತೆ ನಿರ್ವಹಿಸಲು ಕಬ್ಬಿಣದಂಶ ಅಗತ್ಯ. ಒಂದೊಮ್ಮೆ ಇದು ಕೊರತೆಯಾದರೆ ರಕ್ತಹೀನತೆ ಕಾಡುತ್ತದೆ. ಹಾಗಾಗಿ ನಿಯಮಿತವಾಗಿ ಕಪ್ಪು ದ್ರಾಕ್ಷಿಗಳನ್ನು ಸೇವಿಸುವುದರಿಂದ ಅಗತ್ಯ ಕಬ್ಬಿಣದಂಶವನ್ನು ಪೂರೈಸಿ, ರಕ್ತಹೀನತೆಯನ್ನು ದೂರ ಮಾಡಬಹುದು.

ಕೂದಲು, ಕಣ್ಣುಗಳಿಗೆ ಒಳ್ಳೆಯದು

ಇದರಲ್ಲಿರುವ ವಿಟಮಿನ್‌ ಸಿ ಮತ್ತು ಪಾಲಿಫೆನಾಲ್‌ ಅಂಶಗಳು ದೃಷ್ಟಿಯನ್ನು ಚುರುಕಾಗಿಸುತ್ತವೆ. ಇವುಗಳ ಜೊತೆಗೆ, ಉಳಿದ ಉತ್ಕರ್ಷಣ ನಿರೋಧಕಗಳೂ ಸೇರಿ, ತಲೆಯ ಚರ್ಮದ ಆರೋಗ್ಯವನ್ನು ಸುಧಾರಿಸುತ್ತವೆ. ಇದರಿಂದ ಕೂದಲಿನ ಆರೋಗ್ಯವನ್ನೂ ಸುಧಾರಿಸಲು ಸಾಧ್ಯವಿದೆ. ಕೂದಲು ಉದುರುವುದು, ಬೆಳ್ಳಗಾಗುವುದು, ಸೀಳುಗೂದಲು ಮುಂತಾದವನ್ನು ಕಡಿಮೆ ಮಾಡಲು ಅನುಕೂಲ.

ಇದನ್ನೂ ಓದಿ: Eye Protection: ಡಿಜಿಟಲ್ ಪರದೆಗಳಿಂದ ಕಣ್ಣುಗಳನ್ನು ಕಾಪಾಡಿಕೊಳ್ಳುವುದು ಹೇಗೆ?

Continue Reading

ಆರೋಗ್ಯ

Baby’s Food: ಶಿಶು ಆಹಾರಗಳಲ್ಲಿ ಸಕ್ಕರೆ ಅಂಶ ಇರಬೇಕೆ?

ಆಹಾರದಲ್ಲಿ ನೈಸರ್ಗಿಕವಾಗಿ ಇರುವಂಥ ಸಕ್ಕರೆಯ ಹೊರತಾಗಿ ಹೆಚ್ಚುವರಿಯಾಗಿ ಸಕ್ಕರೆಯನ್ನು ಸೇರಿಸುವುದರ ಹಿಂದೆ ಹಲವು ಕಾರಣಗಳಿಗೆ. ಆದರೆ ಸಂಸ್ಕರಿಸಿದ ಸಿಹಿ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ಸಾಬೀತಾಗಿದ್ದರೂ, ಎಳೆಯ ಮಕ್ಕಳ (Baby’s Food) ಆಹಾರಕ್ಕೂ ಇದನ್ನು ಸೇರಿಸುವುದೇಕೆ? ಇಲ್ಲಿದೆ ಮಾಹಿತಿ.

VISTARANEWS.COM


on

Baby's Food
Koo

ಜನಪ್ರಿಯ ಬ್ರಾಂಡ್‌ಗಳ ಶಿಶು ಆಹಾರಗಳಲ್ಲಿ (Baby’s Food) ಅತಿ ಹೆಚ್ಚಿನ ಪ್ರಮಾಣದ ಸಕ್ಕರೆ ಸೇರಿರುವ ಬಗ್ಗೆ ಇತ್ತೀಚೆಗಷ್ಟೇ ವಿಸ್ತೃತವಾಗಿ ಚರ್ಚೆಯಾಗಿತ್ತು. ಶಿಶು ಆಹಾರಗಳಲ್ಲಿ ಸಕ್ಕರೆ ಅಥವಾ ಸಿಹಿ ಸೇರಿಸುವ ಪರಿಪಾಠ ಸುಮಾರು 50 ವರ್ಷಗಳಷ್ಟು ಹಿಂದಿನದ್ದು. ಅದು ಕೇವಲ ಶಿಶು ಅಹಾರಗಳಲ್ಲಿ ಮಾತ್ರವಲ್ಲ, ಸೀರಿಯಲ್‌ಗಳು, ಫ್ಲೇವರ್‌ ಇರುವ ಪೇಯಗಳು, ಬೇಕ್‌ ಮಾಡಿದ ತಿನಿಸುಗಳಿಂದ ಹಿಡಿದು ಲೆಕ್ಕವಿಲ್ಲದಷ್ಟು ಆಹಾರಗಳಲ್ಲಿ ನಮಗರಿವಿಲ್ಲದಂತೆಯೇ ಸಕ್ಕರೆ ವಕ್ಕರಿಸಿದೆ. ಸಂಸ್ಕರಿಸಿದ ಸಿಹಿ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ಸಾಬೀತಾಗಿದ್ದರೂ, ಎಳೆಯ ಮಕ್ಕಳ ಆಹಾರದಿಂದ ಹಿಡಿದು ದೊಡ್ಡವರ ತಿನಿಸುಗಳವರೆಗೆ ಇದನ್ನು ಸೇರಿಸುವುದೇಕೆ? ಮಕ್ಕಳಿಗೂ ಹೀಗೆ ಬಾಯಿ ಸಿಹಿ ಮಾಡುವ ಉದ್ದೇಶವೇನು?
ಆಹಾರದಲ್ಲಿ ನೈಸರ್ಗಿಕವಾಗಿ ಇರುವಂಥ ಸಕ್ಕರೆಯ ಹೊರತಾಗಿ ಹೆಚ್ಚುವರಿಯಾಗಿ ಸಕ್ಕರೆಯನ್ನು ಸೇರಿಸುವುದರ ಹಿಂದೆ ಹಲವು ಕಾರಣಗಳಿಗೆ. ಆ ತಿನಿಸು ಅಥವಾ ಪೇಯದ ರುಚಿ, ಬಣ್ಣ ಮತ್ತು ಮೇಲ್ಮೈಯನ್ನು ಆಕರ್ಷಕವಾಗಿ ಮಾಡುವುದು ಎಲ್ಲಕ್ಕಿಂತ ಮೊದಲ ಕಾರಣ. ಎರಡನೆಯದು, ಸಕ್ಕರೆ ಎಂಬ ಗ್ಲೂಕೋಸ್‌ ಮತ್ತು ಫ್ರಕ್ಟೋಸ್‌ಗಳ ಮಿಶ್ರಣವು ವ್ಯಸನವನ್ನು ಉಂಟುಮಾಡುವಂಥದ್ದು. ಒಮ್ಮೆ ಸಕ್ಕರೆಯ ರುಚಿ ಕಂಡುಕೊಳ್ಳುವ ಪುಟ್ಟ ಮಕ್ಕಳನ್ನು ಅದರಿಂದ ಹೊರತಾಗಿಸುವುದು ಕಷ್ಟದ ಕೆಲಸ. ಅದು ಮಕ್ಕಳಿಗೆ ಮಾತ್ರ ಸೀಮಿತವಲ್ಲ, ಸಿಹಿ ಇಷ್ಟ ಎನ್ನುವ ಎಲ್ಲರ ವಿಷಯದಲ್ಲೂ ಇದು ಸತ್ಯ. ಇದಲ್ಲದೆಯೇ ಬೇರೆ ಕಾರಣಗಳೂ ಸಕ್ಕರೆ ಸೇರಿಸುವುದಕ್ಕಿರಬಹುದು. ಉಪ್ಪಿನಂತೆಯೇ ಸಕ್ಕರೆಯನ್ನೂ ಸಂರಕ್ಷಕವಾಗಿ ಕೆಲವೊಮ್ಮೆ ಬಳಸುವುದಿದೆ.

Colorful Baby Food Purees in Glass Jars

ಮಿತಿ ಇದೆ

ಆಹಾರ ತಜ್ಞರ ಪ್ರಕಾರ, ನೈಸರ್ಗಿಕವಾಗಿ ಹಣ್ಣು, ತರಕಾರಿ, ಅಂಜೂರ, ಖರ್ಜೂರದಂಥ ಆಹಾರಗಳಲ್ಲಿ ದೊರೆಯುವ ಸಕ್ಕರೆಯ ಬಗ್ಗೆ ತೀರಾ ಗಾಬರಿ ಬೀಳಬೇಕಿಲ್ಲ. ಸ್ವಲ್ಪ ಆಚೀಚೆ ಆದರೂ ದೇಹ ಸುಧಾರಿಸಿಕೊಳ್ಳುತ್ತದೆ. ಆದರೆ ಹೆಚ್ಚುವರಿ ಸಕ್ಕರೆಯನ್ನು ಸೇವಿಸುವುದಕ್ಕೆ ಮಿತಿಯಿದೆ. 2 ವರ್ಷದ ನಂತರದ ಮಕ್ಕಳಿಗೆ, ದಿನಕ್ಕೆ ಹೆಚ್ಚೆಂದರೆ ನಾಲ್ಕು ಟೀ ಚಮಚ ಹೆಚ್ಚುವರಿಯಾಗಿ ಸಕ್ಕರೆ ನೀಡಬಹುದು. ಅದರಲ್ಲಿ ಮಕ್ಕಳು ತಿನ್ನುವ ನಿತ್ಯದ ಆಹಾರ, ಸಿಹಿ ತಿನಿಸುಗಳು, ಬಿಸ್ಕೆಟ್‌ನಂಥವು, ಹಾಲಿಗೆ ಬೆರೆಸುವ ಪುಡಿಗಳು ಎಲ್ಲವೂ ಸೇರಿವೆ. ಅದಕ್ಕಿಂತ ಪುಟ್ಟ ಮಕ್ಕಳಿಗೆ ಹೆಚ್ಚುವರಿ ಸಕ್ಕರೆಯನ್ನು ನೀಡುವುದೇ ಬೇಡ ಎನ್ನುತ್ತಾರೆ ಆಹಾರ ತಜ್ಞರು. ಹಾಗಿರುವಾಗ ಶಿಶುಪೋಷಣೆಯ ಆಹಾರಗಳಲ್ಲೇ ಸಕ್ಕರೆ ಸೇರಿಸಬಹುದೇ?

ವ್ಯತ್ಯಾಸವಿದೆ

ಮಾರುಕಟ್ಟೆಯಲ್ಲಿ ದೊರೆಯುವ ಬೇಬಿ ಸೀರಿಯಲ್‌ಗಳಲ್ಲಿನ ಸಕ್ಕರೆಯ ಅಂಶದಲ್ಲಿ ವ್ಯತ್ಯಾಸವಿದೆ. ಒಂದೇ ಬ್ರಾಂಡ್‌ನ ಭಿನ್ನ ವೇರಿಯೆಂಟ್‌ಗಳಲ್ಲಿ ಮಾತ್ರವಲ್ಲ, ಅದೇ ಹೆಸರಿನ ಸೀರಿಯಲ್‌ಗಳು ಬೇರೆ ಬೇರೆ ದೇಶಗಳಲ್ಲಿ ಮಾರಾಟ ಆಗುವಾಗಲೂ ಸಿಹಿ ಪ್ರಮಾಣ ವ್ಯತ್ಯಾಸವಾಗುತ್ತದೆ. ಅಂದರೆ ಬಡ ಮತ್ತು ಅಭಿವೃದ್ಧಶೀಲ ದೇಶಗಳ ಮಾರುಕಟ್ಟೆಯಲ್ಲಿ ಮಾರಾಟವಾಗುವ ಸೀರಿಯಲ್‌ಗಳಲ್ಲಿ ಸಾಮಾನ್ಯವಾಗಿ ಸಿಹಿ ಹೆಚ್ಚಿರುತ್ತದೆ. ಇದರಿಂದ ಮಕ್ಕಳು ಅವುಗಳನ್ನೇ ಹೆಚ್ಚು ಬಯಸಿ, ಕಂಪೆನಿಗಳ ಮಾರಾಟವೂ ಹೆಚ್ಚಲೆಂಬ ಸರಳ ಹುನ್ನಾರವಷ್ಟೇ ಇವುಗಳ ಹಿಂದಿದೆ. ಹಾಗಾಗಿಯೇ ಇಂಥ ಸಕ್ಕರೆಭರಿತ ಪೇಯಗಳನ್ನು ʻಹೆಲ್ತ್‌ ಡ್ರಿಂಕ್‌ʼಗಳ ಪಟ್ಟಿಯಿಂದ ತೆಗೆಯುವಂತೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಇತ್ತೀಚೆಗೆ ಆದೇಶಿಸಿದ್ದು.

ಏನು ಸಮಸ್ಯೆ?

ಮಕ್ಕಳಿಗೆ ಆಹಾರ ತಿನ್ನಿಸುವುದಕ್ಕೆ ಬಹಳಷ್ಟು ಹೆತ್ತವರು ಸರ್ಕಸ್‌ ಮಾಡಬೇಕು. ಹಾಗಿರುವಾಗ ಸಿಹಿಭರಿತ ಸೀರಿಯಲ್‌ಗಳನ್ನು ಅವು ರಗಳೆಯಿಲ್ಲದೆ ತಿನ್ನುತ್ತವೆ ಎಂದಾದರೆ, ಯಾಕೆ ಬೇಡ? ಆಹಾರ ಮತ್ತು ಆರೋಗ್ಯ ತಜ್ಞರ ಪ್ರಕಾರ, ಎಳೆಯ ವಯಸ್ಸಿನಲ್ಲಿ ಸಿಹಿ ತಿನ್ನಿಸುವುದರಿಂದ ಆಗುವ ತೊಂದರೆಗಳು ಬಹಳಷ್ಟು. ಮೊದಲಿಗೆ, ಹಾಲು ಹಲ್ಲುಗಳು ಮೊಳೆಯುತ್ತಲೇ ಹುಳುಕಾಗುತ್ತವೆ. ಪುಟಾಣಿಗಳು ಹಲ್ಲುನೋವಿನ ಪ್ರಕೋಪವನ್ನು ಮೂರ್ನಾಲ್ಕು ವರ್ಷಗಳ ಪ್ರಾಯದಲ್ಲೇ ಎದುರಿಸಬೇಕಾಗುತ್ತದೆ. ಇದಕ್ಕಿಂತ ಚಿಂತೆಯ ವಿಷಯವೆಂದರೆ ಮಕ್ಕಳಲ್ಲಿ ಪೇರಿಸಿಕೊಳ್ಳುವ ಬೊಜ್ಜು.

ರುಚಿಯೆಂದರೆ…!

ಇಷ್ಟಕ್ಕೇ ಮುಗಿಯುವುದಿಲ್ಲ. ಷಡ್ರಸೋಪೇತ ಆಹಾರ ಎನ್ನುವ ಕಲ್ಪನೆ ಈಗಲೇ ಮಕ್ಕಳ ಮನಕ್ಕೆ ನಿಲುಕುತ್ತಿಲ್ಲ. ಕಹಿ, ಒಗರು ಮುಂತಾದ ರುಚಿಗಳನ್ನೆಲ್ಲ ಬದಿಗೊತ್ತಿದ್ದಾಗಿದೆ. ಇದನ್ನೂ ಮೀರಿ, ರುಚಿಯೆಂದರೆ ಸಿಹಿ ಮಾತ್ರ ಎನ್ನುವಂತಾಗುತ್ತದೆ. ಜೀವನದುದ್ದಕ್ಕೂ ಇದನ್ನೇ ರೂಢಿಸಿಕೊಂಡರೆ ಮಧುಮೇಹ, ಹೃದ್ರೋಗಗಳೆಲ್ಲ ಮುತ್ತಿಕೊಳ್ಳುವುದಕ್ಕೆ ದೀರ್ಘ ಸಮಯ ಬೇಡ. ಇದೇ ಪರಿಪಾಠ ಉಪ್ಪಿಗೂ ಅನ್ವಯಿಸುತ್ತದೆ. ಹೆಚ್ಚು ಸೋಡಿಯಂ ಇರುವಂಥ ಪ್ಯಾಕೆಟ್‌ ತಿನಿಸುಗಳು ಮತ್ತು ಸಂಸ್ಕರಿತ ಆಹಾರಗಳು ಆರೋಗ್ಯವನ್ನು ಬುಡಮೇಲು ಮಾಡುತ್ತವೆ.

baby boy eating food by himself

ಪರ್ಯಾಯ ಉಂಟೇ?

ಯಾಕಿಲ್ಲ! ಮಾರುಕಟ್ಟೆಯಲ್ಲಿ ದೊರೆಯುವ ಸೀರಿಯಲ್‌ಗಳನ್ನೇ ತಿಂದು ಮಕ್ಕಳು ಬದುಕಬೇಕಿಲ್ಲ, ಬೆಳೆಯಬೇಕಿಲ್ಲ. ಮನೆಯಲ್ಲೇ ಮಾಡುವ ಆರೋಗ್ಯಕರ ಗಂಜಿಗಳು, ಅಂಬಲಿಗಳು ಯಾವತ್ತಿಗೂ ಶ್ರೇಷ್ಠ. ಇದಕ್ಕೆಲ್ಲ ಸಮಯವಿಲ್ಲ ಎಂದಿದ್ದರೆ, ಹಲವು ರೀತಿಯ ಮೊಳಕೆ ಕಟ್ಟಿದ ಪುಡಿಗಳನ್ನು ಮಾಡಿರಿಸಿಕೊಳ್ಳುವುದು ಲಾಗಾಯ್ತಿನಿಂದಲೂ ಬಂದ ಕ್ರಮ. ಇದಕ್ಕೆ ಹೆಚ್ಚುವರಿ ಸಿಹಿಯ ಬದಲಿಗೆ ಹಣ್ಣಿನ ರಸಗಳು, ಋತುವಿನ ತರಕಾರಿಗಳು, ಖರ್ಜೂರ ಅಥವಾ ಅಂಜೂರದ ಪೇಸ್ಟ್‌ ಇತ್ಯಾದಿಗಳನ್ನು ಸೇರಿಸಿ ರುಚಿ ಹೆಚ್ಚಿಸಬಹುದು.

ಇದನ್ನೂ ಓದಿ: Dental Braces: ಹಲ್ಲುಗಳ ಸೌಂದರ್ಯ ವೃದ್ಧಿಗೆ ಬ್ರೇಸಸ್‌ ಹಾಕುವ ಯೋಚನೆ ಇದೆಯೇ? ಈ ಮಾಹಿತಿ ತಿಳಿದಿರಲಿ

Continue Reading

ಆರೋಗ್ಯ

Health Tips: ಒಂದೇ ಕಡೆ ಕೂತಿರುತ್ತೀರಾ? ಸಮಸ್ಯೆಗಳು ಒಂದೆರಡಲ್ಲ!

ಜಡ ಜೀವನವೆಂದರೆ (Health Tips) ಎಚ್ಚರವಿದ್ದಾಗ ಒಂದೆಡೆ ಕೂರುವ ಅಥವಾ ಮಲಗುವ ಮೂಲಕ ಅತಿ ಕಡಿಮೆ ಶಕ್ತಿಯನ್ನು ವ್ಯಯಿಸುವುದು- ಟಿವಿ ನೋಡುವುದರಿಂದ ಹಿಡಿದು, ಮೊಬೈಲು ಇಲ್ಲವೇ ಕಂಪ್ಯೂಟರ್‌ ಹಿಡಿದು ಕೂರುವುದು ಅಥವಾ ಬಿದ್ದುಕೊಂಡು ಓದುವವರೆಗೆ ಯಾವುದೇ ಕೆಲಸಗಳು ಇದರಲ್ಲಿ ಬರಬಹುದು. ಇದರಿಂದ ದೇಹದಲ್ಲಿ ರಕ್ತಸಂಚಾರ ಕಡಿಮೆಯಾಗಿ, ಸ್ನಾಯುಗಳಲ್ಲಿ ಸಂಚಲನ ಕುಂಠಿತವಾಗಿ, ಚಯಾಪಚಯ ಏರುಪೇರಾಗಿ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮಗಳು ಉಂಟಾಗುತ್ತವೆ. ಇದನ್ನು ಸರಿಪಡಿಸಲು ಕಠಿಣವಾದ ವ್ಯಾಯಾಮದಿಂದಲೂ ಕಷ್ಟಸಾಧ್ಯ ಎನ್ನುತ್ತಾರೆ ಅಧ್ಯಯನಕಾರರು.

VISTARANEWS.COM


on

Health Tips
Koo

ದೀರ್ಘಕಾಲ ಒಂದೇ ಕಡೆ ಕೂತು ಕೆಲಸ ಮಾಡುವವರೇ ನೀವು? (Health Tips) ಹಾಗಾದರೆ ನೀವಿದನ್ನು ಓದಲೇಬೇಕು. ಕಾರಣ ಯಾವುದೇ ಇರಲಿ, ಒಂದೆಡೆ ದೀರ್ಘ ಕಾಲ ಕೂತಿರುತ್ತೀರಿ ಎಂದಾದರೆ ಸಾವಿಗೆ ಬೇಗ ಹತ್ತಿರವಾಗುತ್ತೀರಿ ಎನ್ನುತ್ತಾರೆ ಹೃದಯ ತಜ್ಞರು. ಜಡ ಜೀವನದಿಂದ ಸಾವು ಬೇಗನೇ ಆಕ್ರಮಿಸುವ ಸಾಧ್ಯತೆ ಶೇ. ೩೦ರಷ್ಟು ಹೆಚ್ಚುತ್ತದೆ ಎನ್ನುವುದು ಅಧ್ಯಯನಗಳು ಕಂಡುಕೊಂಡ ಸತ್ಯ. ಏನು ಹೀಗೆಂದರೆ? ಅದು ಹೇಗೆ ಸಾಧ್ಯ?
ಜಡ ಜೀವನವೆಂದರೆ ಎಚ್ಚರವಿದ್ದಾಗ ಒಂದೆಡೆ ಕೂರುವ ಅಥವಾ ಮಲಗುವ ಮೂಲಕ ಅತಿ ಕಡಿಮೆ ಶಕ್ತಿಯನ್ನು ವ್ಯಯಿಸುವುದು- ಟಿವಿ ನೋಡುವುದರಿಂದ ಹಿಡಿದು, ಮೊಬೈಲು ಇಲ್ಲವೇ ಕಂಪ್ಯೂಟರ್‌ ಹಿಡಿದು ಕೂರುವುದು ಅಥವಾ ಬಿದ್ದುಕೊಂಡು ಓದುವವರೆಗೆ ಯಾವುದೇ ಕೆಲಸಗಳು ಇದರಲ್ಲಿ ಬರಬಹುದು. ಇದರಿಂದ ದೇಹದಲ್ಲಿ ರಕ್ತಸಂಚಾರ ಕಡಿಮೆಯಾಗಿ, ಸ್ನಾಯುಗಳಲ್ಲಿ ಸಂಚಲನ ಕುಂಠಿತವಾಗಿ, ಚಯಾಪಚಯ ಏರುಪೇರಾಗಿ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮಗಳು ಉಂಟಾಗುತ್ತವೆ. ಇದನ್ನು ಸರಿಪಡಿಸಲು ಕಠಿಣವಾದ ವ್ಯಾಯಾಮದಿಂದಲೂ ಕಷ್ಟಸಾಧ್ಯ ಎನ್ನುತ್ತಾರೆ ಅಧ್ಯಯನಕಾರರು. ಏನೆಲ್ಲ ಸಮಸ್ಯೆಗಳು ಎದುರಾಗುತ್ತವೆ ದೀರ್ಘಕಾಲ ಒಂದೇ ಕಡೆ ಕೂತಿರುವುದರಿಂದ?

Belly Fat Reduction

ಕಿಣ್ವಗಳ ಕ್ಷಮತೆ ಕಡಿಮೆಯಾಗುತ್ತದೆ

ಬೊಜ್ಜು, ಮಧುಮೇಹ, ಬಿಪಿ: ಬಹಳ ಹೊತ್ತಿನವರೆಗೆ ಜಡವಾಗಿ ಕೂತಿರುವುದರಿಂದ, ನಮ್ಮ ದೇಹದಲ್ಲಿ ಕೊಬ್ಬಿನಾಂಶಗಳನ್ನು ವಿಘಟಿಸುವ ಲಿಪೊಪ್ರೊಟೀನ್‌ ಲಿಪೇಸ್‌ ಎಂಬ ಕಿಣ್ವಗಳ ಕ್ಷಮತೆ ಕಡಿಮೆಯಾಗುತ್ತದೆ. ಈ ಕಿಣ್ವಗಳ ಚಟುವಟಿಕೆ ಕಡಿಮೆಯಾದರೆ ಟ್ರೈಗ್ಲಿಸರೈಡ್‌ ಮಟ್ಟ ಏರಿ, ಬೊಜ್ಜು ಹೆಚ್ಚುತ್ತದೆ. ರಕ್ತದಲ್ಲಿ ಸಕ್ಕರೆಯ ಅಂಶ ಏರಿಕೆಯಾಗಿ ಕ್ರಮೇಣ ಮಧುಮೇಹಕ್ಕೆ ಆಹ್ವಾನ ನೀಡುತ್ತದೆ. ಬದಲಿಗೆ, ಪ್ರತಿ 30-60 ನಿಮಿಷಗಳಿಗೆ ಒಮ್ಮೆ ಎದ್ದು ನಾಲ್ಕಾರು ನಿಮಿಷಗಳ ಚಟುವಟಿಕೆಯಲ್ಲಿ ತೊಡಗಿಕೊಂಡರೆ ಈ ಕಿಣ್ವಗಳ ಮಟ್ಟ ಕುಸಿಯದಂತೆ ನೋಡಿಕೊಳ್ಳಬಹುದು.

Muscle weakness

ಸ್ನಾಯುಗಳ ಬಲಹೀನತೆ

ಮಾಂಸಖಂಡಗಳ ತತ್ವ ಒಂದೇ- ಬಳಸಿ ಇಲ್ಲವೇ ಕಳೆದುಕೊಳ್ಳಿ (ಯೂಸ್ ಇಟ್‌ ಆರ್‌ ಲೂಸ್‌ ಇಟ್‌) ಸ್ನಾಯುಗಳನ್ನು ಬಳಸದೆ, ಅವುಗಳಲ್ಲಿ ಸಂಕೋಚ-ವಿಕಾಸಗಳಿಲ್ಲದೆ ಜಡವಾಗಿದ್ದರೆ ಅವು ಕ್ರಮೇಣ ಬಲಹೀನಗೊಳ್ಳುತ್ತವೆ. ಸ್ನಾಯುಗಳಲ್ಲಿ ಹುದುಗಿರುವ ಪ್ರೊಟೀನ್‌ಗಳು ನಶಿಸಿ, ಉಬ್ಬಿರುವ ಮಾಂಸಪೇಶಿಗಳ ಬದಲಿಗೆ ಕೊಬ್ಬಿರುವ ಭಾಗಗಳು ಕಾಣತೊಡಗುತ್ತವೆ. ಆಗಾಗ ಸ್ನಾಯುಗಳಲ್ಲಿ ಸಂಚಲನವಿದ್ದರೆ, ಅವುಗಳು ದುರ್ಬಲವಾಗದಂತೆ ತಡೆಯಬಹುದು. ಹಾಗಾಗಿ ಆಗಾಗ ಎದ್ದು ಓಡಾಡಿ.

Improved Blood Circulation Health Benefits Of Hot Water Bath

ರಕ್ತಸಂಚಾರ ಕುಂಠಿತ

ಒಂದೇ ಕಡೆ ಕೂತಿದ್ದರೆ ರಕ್ತನಾಳಗಳಿಗೂ ತೊಂದರೆ. ನಾಳಗಳು ಬಿಗಿದಂತಾಗಿ ರಕ್ತಸಂಚಾರಕ್ಕೆ ತೊಡಕಾಗುತ್ತದೆ. ಪರಿಣಾಮವೆಂದರೆ ಉಬ್ಬಿದ ವೆರಿಕೋಸ್‌ ವೇನ್‌, ರಕ್ತ ಹೆಪ್ಪುಗಟ್ಟುವುದು, ರಕ್ತದೊತ್ತಡ ಏರುವುದು- ಇಂಥವು ಗಂಟುಬೀಳಬಹುದು. ಹಾಗಾಗಿ ಚಟುವಟಿಕೆಯನ್ನು ಆಗಾಗ ಇರಿಸಿಕೊಳ್ಳುವುದು, ಚುಟುಕು ವ್ಯಾಯಾಮಗಳು, ನೀರು ಕುಡಿಯಲೋ ಅಥವಾ ಬಾತ್‌ರೂಮಿಗಾಗಿಯೋ ಎದ್ದು ಓಡಾಡುವುದು ಹಲವು ರೀತಿಯಲ್ಲಿ ಉಪಯುಕ್ತ.

ಬೆನ್ನು, ಕುತ್ತಿಗೆ ನೋವು

ಸದಾ ಕಾಲ ಕೂತೇ ಇರುವುದರಿಂದ ಬೆನ್ನುಹುರಿ, ಕುತ್ತಿಗೆಯ ಸ್ನಾಯುಗಳು, ಸೊಂಟದ ಡಿಸ್ಕ್‌ ಮೇಲೆ ಅತಿ ಹೆಚ್ಚಿನ ಒತ್ತಡ ಉಂಟಾಗುತ್ತದೆ. ಇದರಿಂದ ಬೆನ್ನಿನ ಕೆಳಭಾಗದಲ್ಲಿ ನೋವು, ಕುತ್ತಿಗೆ, ಭುಜ, ನಡು ಬೆನ್ನಲ್ಲೂ ತೀವ್ರ ನೋವು ಕಾಣಬಹುದು. ಜೊತೆಗೆ, ಕೆಲವೇ ಸ್ನಾಯುಗಳನ್ನು ವಿಪರೀತ ಉಪಯೋಗಿಸುವುದರಿಂದ, ಅಡ್ಡ ಪರಿಣಾಮಗಳು ಅಲ್ಲೂ ಕಾಣುತ್ತವೆ.

Cardiac Arrest

ಹೃದ್ರೋಗಗಳ ಭೀತಿ ಹೆಚ್ಚಳ

ಹೆಚ್ಚಿನ ಸಮಸ್ಯೆ ಇರುವುದು ಇಲ್ಲಿ. ಮೇಲ್ನೋಟಕ್ಕೆ ಬೊಜ್ಜಿಲ್ಲದಂತೆ ಕಾಣುವವರಲ್ಲೂ ಹೃದಯ ತೊಂದರೆ ಕೊಡುತ್ತಿದೆ. ಜಡಜೀವನದಿಂದ ಹೃದಯದ ತೊಂದರೆಗಳು ಶೇ.147ರಷ್ಟು ಹೆಚ್ಚುತ್ತವೆ ಎಂಬುದು ಅ‍ಧ್ಯಯನಗಳ ಮಾತು. ಇದರ ಬದಲಿಗೆ, ಆಗಾಗ ಚಲನೆಯಲ್ಲಿರುವುದು ಮತ್ತು ವಾರಕ್ಕೆ 150 ನಿಮಿಷಗಳ ಮಧ್ಯಮಗತಿಯ ವ್ಯಾಯಾಮದಿಂದ ಹೃದಯವನ್ನು ಆರೋಗ್ಯವಾಗಿ ಇರಿಸಬಹುದು.

Bone Health In Winter

ದುರ್ಬಲ ಮೂಳೆಗಳು

ಸ್ನಾಯುಗಳ ದೌರ್ಬಲ್ಯವು ಕ್ರಮೇಣ ಮೂಳೆಗಳನ್ನೂ ದುರ್ಬಲಗೊಳಿಸುತ್ತದೆ. ಇದರಿಂದ ಆಸ್ಟಿಯೊಪೊರೊಸಿಸ್‌ನಂಥ ತೊಂದರೆಗಳು ಅಮರಿಕೊಳ್ಳಬಹುದು. ಹಾಗಾಗಿ ಅಲ್ಪ ಪ್ರಮಾಣದ ತೂಕ ಎತ್ತುವುದು, ಪ್ರತಿರೋಧಕತೆಯ ತರಬೇತಿ, ಕಾರ್ಡಿಯೊ ಮಾದರಿಯ ವ್ಯಾಯಾಮಗಳು ಮೂಳೆಗಳ ಆರೋಗ್ಯಕ್ಕೆ ಒಳಿತನ್ನು ಮಾಡುತ್ತವೆ.

ಇದನ್ನೂ ಓದಿ: Stress can cause neck pain: ಕುತ್ತಿಗೆ ನೋವೇ?‌ ಮಾನಸಿಕ ಒತ್ತಡವೂ ಕಾರಣವಾಗಿರಬಹುದು!

Continue Reading
Advertisement
Bengaluru karaga
ಕರ್ನಾಟಕ57 mins ago

Bengaluru Karaga: ಐತಿಹಾಸಿಕ ಬೆಂಗಳೂರು ಕರಗಕ್ಕೆ ಅದ್ಧೂರಿ ಚಾಲನೆ; ಉತ್ಸವ ವೀಕ್ಷಿಸಲು ಹರಿದು ಬಂದ ಜನಸಾಗರ

vistara Editorial ವಿಸ್ತಾರ ಸಂಪಾದಕೀಯ
ದೇಶ3 hours ago

ವಿಸ್ತಾರ ಸಂಪಾದಕೀಯ: ರಕ್ಷಣಾ ರಫ್ತು ಕ್ಷೇತ್ರದಲ್ಲಿ ಬೆಳವಣಿಗೆ ನಮ್ಮ ಹೆಗ್ಗಳಿಕೆ

IPL 2024
ಪ್ರಮುಖ ಸುದ್ದಿ3 hours ago

IPL 2024 : ಸ್ಟೊಯ್ನಿಸ್​​ ಶತಕ, ಚೆನ್ನೈ ವಿರುದ್ಧ 6 ವಿಕೆಟ್​ ಗೆಲವು ಸಾಧಿಸಿದ ಲಕ್ನೊ

Voters' Pledge
ಬೆಂಗಳೂರು3 hours ago

Voters Pledge: ಸಹಕಾರ ಸಂಘಗಳ ಕಾರ್ಯದರ್ಶಿಗಳು, ಸಿಬ್ಬಂದಿಗೆ ಮತದಾನ ಪ್ರತಿಜ್ಞಾವಿಧಿ ಬೋಧನೆ

Lok Sabha Election 2024
Lok Sabha Election 20244 hours ago

Lok Sabha Election 2024: ರಾಹುಲ್‌ ಗಾಂಧಿಯ ಡಿಎನ್‌ಎ ಪರೀಕ್ಷಿಸಬೇಕು; ವಿವಾದ ಹುಟ್ಟುಹಾಕಿದ ಶಾಸಕ ಅನ್ವರ್ ಹೇಳಿಕೆ

DCM DK Shivakumar Election campaign for Bangalore Rural Lok Sabha Constituency Congress candidate DK Suresh In Ramanagara
ರಾಮನಗರ4 hours ago

Lok Sabha Election 2024: ಕೇಂದ್ರ ಸರ್ಕಾರದಿಂದ ರಾಜ್ಯದ ಬಗ್ಗೆ ತಾರತಮ್ಯ ಧೋರಣೆ: ಡಿ.ಕೆ. ಸುರೇಶ್

Priyanka Gandhi
ಕರ್ನಾಟಕ4 hours ago

Priyanka Gandhi: ನಿರುದ್ಯೋಗಿಗಳಿಗೆ ಉದ್ಯೋಗ ನೀಡಿ ಮಂಗಳಸೂತ್ರ ಉಳಿಸೋದು ಗೊತ್ತಿಲ್ಲವೇ?; ಮೋದಿ ವಿರುದ್ಧ ಪ್ರಿಯಾಂಕ ಗಾಂಧಿ ವಾಗ್ದಾಳಿ

Lok Sabha Election 2024
Lok Sabha Election 20245 hours ago

Lok Sabha Election 2024: ಕಾಂಗ್ರೆಸ್‌ ಅಧಿಕಾರಕ್ಕೆ ಬಂದೆ ದೇಶದಲ್ಲಿ ಶರಿಯಾ ಕಾನೂನು ಜಾರಿ; ಯೋಗಿ ಆದಿತ್ಯನಾಥ್ ವಾಗ್ದಾಳಿ

Amit Shah
ಕರ್ನಾಟಕ5 hours ago

Amit Shah: ಬೆಂಗಳೂರಲ್ಲಿ ಅಮಿತ್‌ ಶಾ ಹವಾ; ತೇಜಸ್ವಿ ಸೂರ್ಯ ಪರ ಭರ್ಜರಿ ರೋಡ್‌ ಶೋ

Public Sector Banks
ಪ್ರಮುಖ ಸುದ್ದಿ6 hours ago

Public Sector Banks : ಸಾರ್ವಜನಿಕ ಬ್ಯಾಂಕ್​ಗಳು ಸಾಲ ಕಟ್ಟದವರಿಗೆ ಲುಕ್ ಔಟ್ ನೋಟಿಸ್​ ನೀಡುವಂತಿಲ್ಲ, ಕೋರ್ಟ್​​ ಆದೇಶ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ22 hours ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು1 day ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ1 day ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು2 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು2 days ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ2 days ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ3 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ3 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20243 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Modi in Karnataka Here live video of Modi rally in Chikkaballapur
Lok Sabha Election 20244 days ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

ಟ್ರೆಂಡಿಂಗ್‌