Vijayanagara News: ತಾಯಿ, ಶಿಶು ಮರಣ ಪ್ರಕರಣ ಮರುಕಳಿಸಿದರೆ ಶಿಸ್ತು ಕ್ರಮ: ಡಿಸಿ ದಿವಾಕರ್ - Vistara News

ಆರೋಗ್ಯ

Vijayanagara News: ತಾಯಿ, ಶಿಶು ಮರಣ ಪ್ರಕರಣ ಮರುಕಳಿಸಿದರೆ ಶಿಸ್ತು ಕ್ರಮ: ಡಿಸಿ ದಿವಾಕರ್

Vijayanagara News: ಆರೋಗ್ಯ ಇಲಾಖೆಯ ಆಡಳಿತ ವ್ಯೆದ್ಯರ ನಿರ್ಲಕ್ಷ್ಯ ಅಥವಾ ಆಸ್ಪತ್ರೆಯ ಯಾವುದಾದರು ಸಿಬ್ಬಂದಿಯ ನಿರ್ಲಕ್ಷ್ಯತೆಯಿಂದ ತಾಯಿ ಅಥವಾ ಮಗು ಸಾವಿಗೀಡಾದ ಬಗ್ಗೆ ದೂರು ಬಂದಲ್ಲಿ ತಪ್ಪಿತಸ್ಥ ಅಧಿಕಾರಿಗಳು ಮತ್ತು ಸಿಬ್ಬಂದಿಯ ಮೇಲೆ ಎಫ್‌ಐಆರ್ ದಾಖಲಿಸಿ ಸೇವೆಯಿಂದ ಅಮಾನತು ಮಾಡುವುದಾಗಿ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್‌, ಎಚ್ಚರಿಕೆ ನೀಡಿದ್ದಾರೆ.

VISTARANEWS.COM


on

Disciplinary action if cases of mother and child deaths recur DC Diwakar warns
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೊಸಪೇಟೆ: ಆರೋಗ್ಯ ಇಲಾಖೆಯ ಆಡಳಿತ ವ್ಯೆದ್ಯರ ನಿರ್ಲಕ್ಷ್ಯ ಅಥವಾ ಆಸ್ಪತ್ರೆಯ ಯಾವುದಾದರು ಸಿಬ್ಬಂದಿಯ ನಿರ್ಲಕ್ಷ್ಯತೆಯಿಂದ ತಾಯಿ ಅಥವಾ ಮಗು ಸಾವಿಗೀಡಾದ ಬಗ್ಗೆ ದೂರು ಬಂದಲ್ಲಿ ತಪ್ಪಿತಸ್ಥ ಅಧಿಕಾರಿಗಳು ಮತ್ತು ಸಿಬ್ಬಂದಿಯ ಮೇಲೆ ಎಫ್‌ಐಆರ್ ದಾಖಲಿಸಿ ಸೇವೆಯಿಂದ ಅಮಾನತು ಮಾಡುವುದಾಗಿ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್‌, ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಎಚ್ಚರಿಕೆ (Vijayanagara News) ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಗುರುವಾರ ನಡೆದ ತಾಯಿ ಮತ್ತು ಶಿಶು ಮರಣ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇದನ್ನೂ ಓದಿ: World Environment Day: ಬೆಂಗಳೂರಿನಲ್ಲಿ ಎನ್‌ಸಿಸಿ ತಂಡದಿಂದ ವಿಶೇಷ ಪರಿಸರ ಜಾಗೃತಿ ಕಾರ್ಯಕ್ರಮ

ತಾಯಿ ಮತ್ತು ಶಿಶು ಮರಣ ತಡೆಗೆ ವಿಶೇಷ ಗಮನ ಹರಿಸಬೇಕು. ತಾಯಿ ಮತ್ತು ಶಿಶು ಮರಣಕ್ಕೆ ವೈದ್ಯರು ಅಥವಾ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎನ್ನುವ ದೂರು ಬಾರದ ಹಾಗೆ ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಬೇಕು. ಪ್ರತಿ ದಿನ ಆಸ್ಪತ್ರೆಗಳಲ್ಲಿ ದಾಖಲಾಗುವ ರೋಗಿಗಳ ಆರೈಕೆಯ ಬಗ್ಗೆ ಗಮನ ಹರಿಸಬೇಕು. ಶುಶ್ರೂಷಣಾ ಸಿಬ್ಬಂದಿ ರೋಗಿಗಳೊಂದಿಗೆ ಆತ್ಮೀಯತೆಯಿಂದ ನಡೆದುಕೊಳ್ಳಬೇಕು. ಚಿಕಿತ್ಸೆ ಕೊಡುವಾಗ ಜವಾಬ್ದಾರಿಯಿಂದ ವರ್ತಿಸಬೇಕು. ಬೇರೊಬ್ಬರನ್ನು ಹೊಣೆಯಾಗಿಸಬಾರದು. ಸಕಾಲದಲ್ಲಿ ಸಿಗಬೇಕಾಗಿದ್ದ ಆರೋಗ್ಯ ಸೇವೆ ಸಿಗದ ಕಾರಣಕ್ಕೆ ತಾಯಿ ಮರಣ, ಶಿಶುಮರಣ ಪ್ರಕರಣಗಳು ದಾಖಲಾಗುತ್ತಿವೆ ಎನ್ನುವ ದೂರುಗಳು ಬಂದಲ್ಲಿ ಮತ್ತು ತಾಯಿ ಮತ್ತು ಶಿಶು ಮರಣ ಪ್ರಕರಣಗಳು ಮತ್ತೆ ಮರುಕಳಿಸಿದಲ್ಲಿ ಯಾವುದೇ ಮುಲಾಜಿಲ್ಲದೇ ತನಿಖೆಗೊಳಪಡಿಸಿ ತಪ್ಪಿತಸ್ಥರೆಂದು ಕಂಡುಬಂದಲ್ಲಿ ಅಂತವರನ್ನು ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: Uric Acid: ಆರೋಗ್ಯ ಹದಗೆಡಿಸುವ ಯೂರಿಕ್ ಆಮ್ಲವನ್ನು ನಿಯಂತ್ರಿಸುವ ನೈಸರ್ಗಿಕ ವಿಧಾನಗಳಿವು

ಸರ್ಕಾರಿ ಆಸ್ಪತ್ರೆಗಳಿಗೆ ಬಹುತೇಕ ಕೃಷಿ ಕಾರ್ಮಿಕರು, ಕಡು ಬಡವರೇ ಹೆಚ್ಚಾಗಿ ಬರುತ್ತಾರೆ. ವೈದ್ಯರೇ ದೇವರೆಂದು ಭಾವಿಸಿ ಅವರು ಆಸ್ಪತ್ರೆಯಲ್ಲಿನ ವೈದ್ಯರು ಮತ್ತು ಸಿಬ್ಬಂದಿಯ ಮೇಲೆ ಪ್ರೀತಿ ವಿಶ್ವಾಸ ಇಟ್ಟುಕೊಂಡಿರುತ್ತಾರೆ. ವೈದ್ಯರು ಏನೇ ಹೇಳಿದರು ಅವರು ಅದಕ್ಕೆ ಸಮ್ಮತಿ ಸೂಚಿಸುತ್ತಾರೆ. ನನ್ನ ಮಗಳು ಆರಾಮಿರಬೇಕು. ಹೆರಿಗೆ ಸುಸೂತ್ರವಾಗಿ ನಡೆದು ಕೂಸು ಬದುಕಬೇಕು ಎಂಬುದು ಪ್ರತಿಯೊಬ್ಬ ತಂದೆ ತಾಯಿ ಪಾಲಕರ ಆಸೆ ಆಗಿರುತ್ತದೆ. ಆಸ್ಪತ್ರೆಗೆ ಯಾರೆ ಬರಲಿ ಅವರೊಂದಿಗೆ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಸರಿಯಾಗಿ ನಡೆದುಕೊಳ್ಳಬೇಕು. ಅವರಿಗೆ ಸರಿಯಾದ ಮಾರ್ಗದರ್ಶನ ಮಾಡಬೇಕು.

ಹೆರಿಗೆಯಂತಹ ಸಂದರ್ಭದಲ್ಲಿ ವಿಳಂಬಕ್ಕೆ ಆವಕಾಶ ಮಾಡಿಕೊಡದೇ ಸಕಾಲಕ್ಕೆ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು. ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದೆ ಎಂಬುದು ಗೊತ್ತಾದಾಗ ವಿಳಂಬ ಮಾಡದೇ ಮೇಲಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ ಕೂಡಲೇ ವ್ಯವಸ್ಥೆ ಮಾಡಬೇಕು. ಸಾರ್ವಜನಿಕರು ವೈದ್ಯರು ಮತ್ತು ಸಿಬ್ಬಂದಿಯ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವ ಹಾಗೆ ಅವರಿಗೆ ಚಿಕಿತ್ಸೆ ನೀಡಬೇಕು ಎಂದು ಸಲಹೆ ನೀಡಿದರು.

ಇದನ್ನೂ ಓದಿ: Money Guide: ಈ ಯೋಜನೆಯಲ್ಲಿ ಪ್ರತಿ ತಿಂಗಳು 3,475 ರೂ. ಹೂಡಿಕೆ ಮಾಡಿ 1 ಲಕ್ಷ ರೂ. ಮಾಸಿಕ ಪಿಂಚಣಿ ಪಡೆಯಿರಿ

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಸದಾಶಿವ ಪ್ರಭು, ಕಾರ್ಯಕ್ರಮಗಳ ಅನುಷ್ಠಾನಾಧಿಕಾರಿಗಳು, ಆಡಳಿತ ವ್ಯೆದ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಇತರರು ಹಾಜರಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಆರೋಗ್ಯ

Constipation Problem: ಮಲಬದ್ಧತೆಯ ಸಮಸ್ಯೆಯೇ? ಸರಳ ಪರಿಹಾರಗಳು ಇಲ್ಲಿವೆ!

ಮಲಬದ್ಧತೆಯ ಸಮಸ್ಯೆ (Constipation problem) ಇರುವ ಪ್ರತಿಯೊಬ್ಬರಿಗೂ ಇದರ ನೋವು ತಿಳಿದಿದೆ. ತಂಪು ಪ್ರಕೃತಿಯ ಆಹಾರವನ್ನೇ ಸೇವಿಸುವ ಮೂಲಕ ಮಲಬದ್ಧತೆ ಆಗದಂತೆ ಮುಂಜಾಗ್ರತೆ ವಹಿಸಬಹುದು. ಮಲಬದ್ಧತೆ ಆದರೆ ಯಾವೆಲ್ಲ ಮನೆಮದ್ದುಗಳ ಮೂಲಕ ಮಲಬದ್ಧತೆಯನ್ನು ಹತೋಟಿಗೆ ತರಬಹುದು ಎಂಬ ಮಾಹಿತಿ ಇಲ್ಲಿದೆ.

VISTARANEWS.COM


on

Constipation Problem
Koo

ಮಲಬದ್ಧತೆ ಎಂಬ ಸಮಸ್ಯೆ (Constipation problem) ನಾವು ಗಂಭೀರವಾಗಿ ಪರಿಗಣಿಸುವ ಆರೋಗ್ಯದ ಸಮಸ್ಯೆ ಅಲ್ಲವಾದರೂ, ಕೆಲವೊಮ್ಮೆ ಇದು ಗಂಭೀರ ಸ್ಥಿತಿಯನ್ನೇ ತಲುಪುತ್ತದೆ. ಎಲ್ಲ ಕಾಲದಲ್ಲೂ ಈ ಸಮಸ್ಯೆ ಬಾಧಿಸುತ್ತದೆ. ಯಾವುದೇ ಆಹಾರ ಹೊಟ್ಟೆಗೆ ಹೋದರೂ ಕೂಡ ಮಾರನೇ ದಿನ ಪಡುವ ಕಷ್ಟ ಅಷ್ಟಿಷ್ಟಲ್ಲ. ಮಲಬದ್ಧತೆಯ ಸಮಸ್ಯೆ ಇರುವ ಪ್ರತಿಯೊಬ್ಬರಿಗೂ ಇದರ ನೋವು ತಿಳಿದಿದೆ. ತಂಪು ಪ್ರಕೃತಿಯ ಆಹಾರವನ್ನೇ ಸೇವಿಸುವ ಮೂಲಕ ಮಲಬದ್ಧತೆ ಆಗದಂತೆ ಮುಂಜಾಗ್ರತೆ ವಹಿಸಬಹುದಾದರೂ, ಮಲಬದ್ಧತೆ ಆದರೆ, ಯಾವೆಲ್ಲ ಮನೆಮದ್ದುಗಳ ಮೂಲಕ ಮಲಬದ್ಧತೆಯನ್ನು ಹತೋಟಿಗೆ ತರಬಹುದು ಎಂಬುದನ್ನು ನೋಡೋಣ.

Drinking warm water with a little lemon juice on an empty stomach in the morning is beneficial for health Benefits Of Lemon Water

ನಿಂಬೆಹಣ್ಣಿನ ನೀರು

ನಿಂಬೆಹಣ್ಣಿನ ನೀರು ದೇಹಕ್ಕೆ ಬೇಕಾದ ನೀರಿನಂಶವನ್ನು ನೀಡುವ ಮೂಲಕ ದೇಹವನ್ನು ತಂಪಾಗಿಡುತ್ತದೆ. ಜೊತೆಗೆ ಪಚನಕ್ರಿಯೆ ಸರಿಯಾಗಿ ಆಗುತ್ತದೆ. ಇದರಲ್ಲಿರುವ ಸಿಟ್ರಿಕ್‌ ಆಸಿಡ್‌ ಜಠರ ರಸ ಬಿಡುಗಡೆಯಾಗುವಂತೆ ಪ್ರಚೋದಿಸುವ ಮೂಲಕ ಮಲವನ್ನು ಮೆದುವಾಗುವಂತೆ ಮಾಡುತ್ತದೆ. ಅರ್ಧ ನಿಂಬೆ ಹಣ್ಣನ್ನು ಉಗುರು ಬೆಚ್ಚಗೆ ನೀರಿಗೆ ಹಿಂಡಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಬೆಳಗ್ಗೆಯೇ ಮಲವಿಸರ್ಜನೆ ಸಹಜವಾಗಿ ಆಗುತ್ತದೆ.

Image Of Aloe Vera Juice Benefits

ಆಲೊವೆರಾ ಜ್ಯೂಸ್

ಆಲೊವೆರಾ ಜ್ಯೂಸ್‌ನಲ್ಲಿ ಸಹಜವಾಗಿಯೇ ಮಲವನ್ನು ಮೆದುಗೊಳಿಸುವ ತಾಕತ್ತಿರುವುದರಿಂದ ಇದು ಮಲಬದ್ಧತೆಗೆ ಒಳ್ಳೆಯದು. ಇದು ಕರುಳಿನಲ್ಲಿರುವ ಉರಿಯೂತವನ್ನು ಶಮನಗೊಳಿಸಿ, ಜೀರ್ಣನಾಳವನ್ನು ಆರೋಗ್ಯವಾಗಿರಿಸುತ್ತದೆ. ನಿತ್ಯವೂ ಎರಡರಿಂದ ಮೂರು ಚಮಚ ಅಲೊವೆರಾ ಜ್ಯೂಸ್‌ ಅನ್ನು ನೀರಿನ ಜೊತೆಗೆ ಸೇರಿಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬಹುದು.

Coconut water Foods For Fight Against Dengue Fever

ಎಳನೀರು

ಎಳನೀರಿನಲ್ಲಿ ನೈಸರ್ಗಿಕವಾದ ಎಲೆಕ್ಟ್ರೋಲೈಟ್‌ಗಳು ಇರುವುದರಿಂದ ಇದು ದೇಹವನ್ನು ಹೈಡ್ರೇಟ್‌ ಮಾಡುವುದಲ್ಲದೆ, ಜೀರ್ಣನಾಳದಲ್ಲಿ ಆಹಾರ ಸುಲಭವಾಗಿ ಸಾಗುವಂತೆ ಮಾಡುತ್ತದೆ. ಪಚನಕ್ರಿಯೆಯೂ ಸುಲಭವಾಗಿ ಆಗುತ್ತದೆ. ಇದು ನಾರಿನಂಶ ಹಾಗೂ ಜೀರ್ಣಕ್ರಿಯೆಯನ್ನು ಪ್ರಚೋದಿಸುವ ಕಿಣ್ವಗಳನ್ನು ಹೊಂದಿರುವುದರಿಂದ ಮಲಬದ್ಧತೆಯ ಸಮಸ್ಯೆಯನ್ನು ನೀಗಿಸುತ್ತದೆ.

Fenugreek greens Green Vegetables and Greens

ಮೆಂತ್ಯ ಕಾಳು

ಮೆಂತ್ಯಕಾಳು ತಂಪುಕಾರಕ ಗುಣಗಳನ್ನು ಹೊಂದಿದೆ. ಮೆಂತ್ಯಕಾಳನ್ನು ನೀರಿನಲ್ಲಿ ನೆನೆಹಾಕಿ ಮೊಳಗೆ ಬರಿಸಿ ಅಥವಾ ಮೆದುವಾಗಿಸಿ ಮಾರನೇ ದಿನ ತಿನ್ನುವುದರಿಂದ ದೇಹ ತಂಪಾಗುತ್ತದೆ. ಇದು ಗ್ಯಾಸ್‌ ಹಾಗೂ ಹೊಟ್ಟೆಯುಬ್ಬರದಂತಹ ಸಮಸ್ಯೆಗಳನ್ನು ನೀಗಿಸುತ್ತದೆ. ತೂಕ ಇಳಿಸಲೂ ಇದು ಒಳ್ಳೆಯದು. ಸಾಕಷ್ಟು ಪೋಷಕಾಂಶಗಳನ್ನೂ ಹೊಂದಿರುವ ಇದನ್ನು ಹಾಗೆಯೇ ತಿನ್ನಲು ಸಾಧ್ಯವಾಗದಿದ್ದರೆ, ಮೆಂತ್ಯಕಾಳನ್ನು ನೀರಿನಲ್ಲಿ ಕುದಿಸಿ ಚಹಾ ಮಾಡಿ ಕುಡಿಯಬಹುದು.

Peppermint tea

ಪುದಿನ ಚಹಾ

ಆಂಟಿಸೆಪ್ಟಿಕ್‌ ಗುಣಗಳನ್ನು ಹೊಂದಿರುವ ಪುದಿನವು ಜೀರ್ಣನಾಳ ಹಾಗೂ ಮಾಂಸಖಂಡಗಳನ್ನು ರಿಲ್ಯಾಕ್ಸ್‌ ಮಾಡಬಲ್ಲ ಗುಣವನ್ನು ಹೊಂದಿದೆ. ಜೀರ್ಣಕ್ರಿಯೆಗೂ ಇದು ಸಹಾಯ ಮಾಡುತ್ತದೆ. ಹೊಟ್ಟೆಯುಬ್ಬರ ಹಾಗೂ ಗ್ಯಾಸ್‌ನಂತಹ ಸಮಸ್ಯೆಗಳಿಗೂ ಇದು ರಾಮಬಾಣವಾಗಿ ಕೆಲಸ ಮಾಡುತ್ತದೆ.

Chia Seeds Black Foods

ಚಿಯಾ ಬೀಜಗಳು

ಎರಡು ಚಮಚ ಚಿಯಾ ಬೀಜಗಳನ್ನು ನೀರಿನಲ್ಲಿ ಒಂದು ಗಂಟೆ ನೆನೆಹಾಕಿ ಕುಡಿಯುವುದರಿಂದ ಮಲಬದ್ಧತೆಯ ಸಮಸ್ಯೆ ಮಾಯವಾಗುತ್ತದೆ. ಈ ಬೀಜಗಳು ನೀರಿನಲ್ಲಿ ನೆನೆದ ತಕ್ಷಣ ಜೆಲ್‌ನಂತಹ ಗುಣವನ್ನು ಪಡೆಯುವುದರಿಂದ ಸುಲಭವಾಗಿ ಕರಗಿದ ಆಹಾರವು ಜೀರ್ಣನಾಳದ ಮೂಲಕ ಜಾರಿಕೊಂಡು ಹೋಗುವುದರಿಂದ ಮಲವೂ ಸುಲಭವಾಗಿ ಜಾರಿ ಹೊರಗೆ ಬರುತ್ತದೆ. ಚಿಯಾ ಬೀಜಗಳಲ್ಲಿ ಪೋಷಕಾಂಶಗಳೂ ಇರುವುದರಿಂದ, ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವ ಗುಣವನ್ನು ಹೊಂದಿದೆ. ಇದನ್ನು ನಿತ್ಯವೂ ಕುಡಿಯಬಹುದು.

homemade curd in a clay pot Stomach Bloating Relief

ಮೊಸರು

ಮೊಸರು, ಮಜ್ಜಿಗೆಯಂತಹ ಪ್ರೊಬಯಾಟಿಕ್‌ ಪೇಯಗಳನ್ನೂ ನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳಿ. ಇದರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ. ಜೊತೆಗೆ ಇದು ಬೇಸಿಗೆಯಲ್ಲಿ ಹೊಟ್ಟೆಗೆ ತಂಪು ಕೂಡಾ. ಪೋಷಕಾಂಶಗಳೂ ಹೊಟ್ಟೆ ಸೇರುವುದರಿಂದ ಇವು ನಿತ್ಯಾಹಾರದಲ್ಲಿ ಬೇಕೇಬೇಕು.

ಇದನ್ನೂ ಓದಿ: Snoring problem: ಗೊರಕೆಯ ಸಮಸ್ಯೆಯೇ? ನಿಮ್ಮ ಗೊರಕೆಯ ಮೂಲ ಕಾರಣ ಯಾವುದೆಂದು ಗೊತ್ತಿರಲಿ!

Continue Reading

ಆರೋಗ್ಯ

Blood Pressure: ಬ್ಲಡ್‌ ಪ್ರೆಷರ್‌ ನಿಯಂತ್ರಣದಲ್ಲಿಡಲು ಸಾಧ್ಯ; ಈ ಸಲಹೆ ಫಾಲೋ ಮಾಡಿ

Blood Pressure: ರಕ್ತದೊತ್ತಡ ಇತ್ತೀಚಿನ ದಿನಗಳಲ್ಲಿ ಎಲ್ಲರನ್ನೂ ಕಾಡುವಂತಹ ಸಮಸ್ಯೆಯಾಗಿದೆ. ದೇಶದಲ್ಲಿ ಹಲವು ಮಂದಿ ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದನ್ನು ನಿಯಂತ್ರಿಸುವುದು ಅಗತ್ಯ. ಇಲ್ಲವಾದರೆ ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ರಕ್ತಪರಿಚಲನೆಯನ್ನು ಸುಧಾರಿಸಲು ವಾಕಿಂಗ್, ಯೋಗ , ತೈಚಿ, ಈಜು,ಸಹಾಯ ಮಾಡುತ್ತದೆ. ಇವು ಒತ್ತಡವನ್ನು ನಿವಾರಿಸುವುದಲ್ಲದೇ ತೂಕವನ್ನು ಕಡಿಮೆ ಮಾಡುತ್ತದೆ. ಆ ಮೂಲಕ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ.

VISTARANEWS.COM


on

Blood Pressure
Koo

ರಕ್ತದೊತ್ತಡ ಇತ್ತೀಚಿನ ದಿನಗಳಲ್ಲಿ ಎಲ್ಲರನ್ನೂ ಕಾಡುವಂತಹ ಸಮಸ್ಯೆಯಾಗಿದೆ. ದೇಶದಲ್ಲಿ ಹಲವು ಮಂದಿ ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದನ್ನು ನಿಯಂತ್ರಿಸುವುದು ಅಗತ್ಯ. ಇಲ್ಲವಾದರೆ ಇದರಿಂದ ಅನೆಕ ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಹಾಗಾಗಿ ಎಲ್ಲರೂ ಫಿಟ್ ಆಗಿ ಆರೋಗ್ಯ
ವಾಗಿರಲು ರಕ್ತದೊತ್ತಡವನ್ನು (Blood Pressure) ನಿಯಂತ್ರಿಸಿ ಅದಕ್ಕಾಗಿ ಬೆಳಿಗ್ಗೆ ಮೊದಲು ಈ ಕೆಲಸಗಳನ್ನು ಮಾಡಿ.

ವಾಕಿಂಗ್

ಇದು ರಕ್ತಪರಿಚಲನೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಮತ್ತು ಒತ್ತಡವನ್ನು ನಿವಾರಿಸುವುದಲ್ಲದೇ ತೂಕವನ್ನು ಕಡಿಮೆ ಮಾಡುತ್ತದೆ. ಆ ಮೂಲಕ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. ಹಾಗಾಗಿ ಪ್ರತಿದಿನ ಬೆಳಗ್ಗೆ ಚುರುಕಾಗಿ 30 ನಿಮಿಷಗಳ ಕಾಲ ವಾಕಿಂಗ್ ಮಾಡಿ.

ಯೋಗ

ಇದು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ. ಇದು ದೇಹಕ್ಕೆ ವಿಶ್ರಾಂತಿಯನ್ನು ಹಾಗೂ ಮನಸ್ಸಿಗೆ ಶಾಂತಿಯನ್ನು ನೀಡುವುದರಿಂದ ದೇಹದ ರಕ್ತದೊತ್ತಡ ಸಮತೋಲನದಲ್ಲಿರುತ್ತದೆ. ಹಾಗಾಗಿ ನೀವು ಮಗುವಿನ ಭಂಗಿ, ಮರದ ಭಂಗಿ ಮುಂತಾದ ಯೋಗಾಸನವನ್ನು ಮಾಡಿ.

ತೈಚಿ

ಇದು ನಿಧಾನವಾದ ಚಲನೆಗಳು ಮತ್ತು ಆಳವಾದ ಉಸಿರಾಟವನ್ನು ಒಳಗೊಂಡಿರುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡುವ ಮೂಲಕ ಮತ್ತು ರಕ್ತ ಪರಿಚಲನೆಯನ್ನು ಸುಧಾರಿಸುವುದ ಮೂಲಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹರಿಯುವ ಚಲನೆಗಳ ಮೇಲೆ ನಿಮ್ಮನ್ನು ಕೇಂದ್ರೀಕರಿಸುವ ಈ ತೈಚಿ ದಿನಚರಿಯನ್ನು ಅನುಸರಿಸಿ. ಇದನ್ನು ಬೆಳಿಗ್ಗೆ 20-30 ನಿಮಿಷಗಳ ಕಾಲ ಅಭ್ಯಾಸ ಮಾಡಿ.

ಆಳವಾದ ಉಸಿರಾಟದ ವ್ಯಾಯಾಮ

ಇದು ವಿಶ್ರಾಂತಿಯನ್ನು ನೀಡುತ್ತದೆ ಮತ್ತು ಒತ್ತಡದ ಹಾರ್ಮೋನ್ ಗಳನ್ನು ಕಡಿಮೆ ಮಾಡುವ ಮೂಲಕ ರಕ್ತದೊತ್ತಡವನ್ನು ಕಡಿಮೆಮಾಡುತ್ತದೆ. ಆರಾಮವಾಗಿ ಕುಳಿತುಕೊಂಡು ಅಥವಾ ಮಲಗಿಕೊಂಡು ನಿಮ್ಮ ಮೂಗಿನ ಮೂಲಕ ಆಳವಾದ ಉಸಿರನ್ನು ತೆಗದುಕೊಂಡು ಅದನ್ನು ಕೆಲವು ಸೆಕೆಂಡುಗಳ ಹಿಡಿದಿಟ್ಟು ನಂತರ ಬಾಯಿಯ ಮೂಲಕ ನಿಧಾನವಾಗಿ ಬಿಡಿ. ಇದನ್ನು ಬೆಳಗ್ಗೆ 15 ನಿಮಿಷಗಳ ಕಾಲ ಮಾಡಿ.

ಸೈಕ್ಲಿಂಗ್

ಇದು ಹೃದಯದ ರಕ್ತನಾಳಗಳನ್ನು ಆರೋಗ್ಯವಾಗಿಡುತ್ತದೆ. ಮತ್ತು ಇದರಿಂದ ತೂಕ ಕಡಿಮೆಯಾಗುತ್ತದೆ. ಇದರಿಂದ ರಕ್ತದೊತ್ತಡ ಕೂಡ ನಿಯಂತ್ರಣದಲ್ಲಿರುತ್ತದೆ. ಹಾಗಾಗಿ 20-30 ನಿಮಿಷಗಳ ಕಾಲ ಮಧ್ಯಮ ವೇಗದಲ್ಲಿ ಹೊರಗಡೆ ಸೈಕಲ್ ಸವಾರಿ ಮಾಡಿ.

ಈಜು

ಇದು ತುಂಬಾ ಸುಲಭವಾದ ವ್ಯಾಯಾಮವಾಗಿದೆ. ಇದು ನಿಮ್ಮ ಹೃದಯರಕ್ತನಾಳದ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ದೇಹಕ್ಕೆ ವಿಶ್ರಾಂತಿಯನ್ನು ನೀಡುತ್ತದೆ. ಮತ್ತು ಇದರಿಂದ ತೂಕವನ್ನು ನಿಯಂತ್ರಿಸಬಹುದು. ಹಾಗಾಗಿ ದಿನದಲ್ಲಿ 30 ನಿಮಿಷಗಳ ಕಾಲ ಈಜುವುದನ್ನು ಅಭ್ಯಾಸ ಮಾಡಿ.

ಸ್ಟ್ರೆಚಿಂಗ್

ಇದು ರಕ್ತಪರಿಚಲನೆಯನ್ನು ಸುಧಾರಿಸುತ್ತದೆ. ಸ್ನಾಯುಗಳ ಒತ್ತಡವನ್ನು ಕಡಿಮೆ ಮಾಡುತ್ತದೆ, ವಿಶ್ರಾಂತಿ ನೀಡುತ್ತದೆ. ಇದರಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ. ಪ್ರತಿದಿನ 20-30 ನಿಮಷಗಳ ಕಾಲ ಸ್ಟ್ರೆಚಿಂಗ್ ಮಾಡಿ. ಮಂಡಿರಜ್ಜುಗಳು, ಕರುಗಳು, ಭುಜಗಳು ಮತ್ತು ಹಿಂಭಾಗದಂತಹ ಸ್ನಾಯುಗಳ ಮೇಲೆ ಕೇಂದ್ರೀಕರಿಸಿ.

ಪ್ರತಿರೋಧ ತರಬೇತಿ

ಇದು ಸ್ನಾಯುಗಳ ಶಕ್ತಿಯನ್ನು ಸುಧಾರಿಸುತ್ತದೆ. ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಹೃದಯರಕ್ತನಾಳಗಳ ಆರೋಗ್ಯವನ್ನು ಕಾಪಾಡುತ್ತದೆ. ಇದರಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ. ಬೈಸೆಪ್ ಕರ್ಲ್ಸ್ , ಟ್ರೈಸ್ಪ್ ಎಕ್ಸ್‌ಟೆಶ್ಯನ್‌ಗಳು ಮತ್ತು ಸ್ಕ್ವಾಟ್‌ಗಳಂತಹ ವ್ಯಾಯಾಮಗಳನ್ನು ಮಾಡಲು ಪ್ರತಿರೋಧ ಬ್ಯಾಂಡ್‌ಗಳನ್ನು ಬಳಸಿ.

ಇದನ್ನೂ ಓದಿ: NEET UG 2024: ಮಗಳ ಜೊತೆ ಸೇರಿ ನೀಟ್ ಯುಜಿ ಪರೀಕ್ಷೆ ಬರೆದು ಪಾಸಾದ ಅಪ್ಪ!

ಹಾಗಾಗಿ ಪ್ರತಿದಿನ ಈ ವ್ಯಾಯಾಮಗಳನ್ನು ಅಭ್ಯಾಸ ಮಾಡುವ ಮೂಲಕ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ. ಆದರೆ ನೀವು ಯಾವುದೇ ವ್ಯಾಯಾಮಗಳನ್ನು ಮಾಡುವ ಮುನ್ನ ಅದಕ್ಕೆ ಸಂಬಂಧಪಟ್ಟ ತಜ್ಞರ ಸಲಹೆ ಪಡೆಯುವುದು ಸೂಕ್ತ.

Continue Reading

Latest

Mobile Addiction: ನಿಮ್ಮ ಮಗುವನ್ನು ಮೊಬೈಲ್ ಚಟದಿಂದ ತಪ್ಪಿಸಬೇಕೆ? ಈ 5 ಸಲಹೆ ಅನುಸರಿಸಿ

Mobile Addiction ಮನೆಯಲ್ಲಿ ದೊಡ್ಡವರು ಮಕ್ಕಳ ತಲೆ ನೇವರಿಸುವುದಕ್ಕಿಂತ ಹೆಚ್ಚು ಹೊತ್ತು ಮೊಬೈಲ್ ಸ್ಕ್ರೀನ್‌ನಲ್ಲಿ ಕೈಯಾಡಿಸುತ್ತ ಇರುತ್ತಾರೆ. ಮಕ್ಕಳು ನಮ್ಮನ್ನು ನೋಡಿಯೇ ಬೆಳೆಯುವುದರಿಂದ ಅವರು ಕೂಡ ಇದರಲ್ಲಿ ಏನೋ ವಿಶೇಷವಿರಬೇಕು ಎಂಬ ಕುತೂಹಲದಿಂದ ಮೊಬೈಲ್‌ನತ್ತ ಆಕರ್ಷಿತರಾಗಿದ್ದಾರೆ. ಪುಸ್ತಕ ಹಿಡಿಯಬೇಕಾದ ಕೈಗಳಲ್ಲಿ ಇಂದು ಮೊಬೈಲ್ ಇದೆ. ಇದರಿಂದ ಅವರು ಸಾಕಷ್ಟು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಊಟ ತಿನ್ನಿಸುವುದರಿಂದ ಹಿಡಿದು ರಾತ್ರಿ ಲಾಲಿ ಹಾಡಿ ಮಲಗಿಸುವವರೆಗೆ ತಂದೆ-ತಾಯಂದಿರು ಮೊಬೈಲ್ ಮೊರೆ ಹೋದ ಹಿನ್ನೆಲೆ ಮಕ್ಕಳು ಕೂಡ ಈ ಮೊಬೈಲ್ ಅನ್ನೇ ಜೀವನದ ಒಂದು ಭಾಗವನ್ನಾಗಿಸಿಕೊಂಡಿದ್ದಾರೆ. ಅವರನ್ನು ಮೊಬೈಲ್‌ ಚಟದಿಂದ ಪಾರು ಮಾಡುವ ಕ್ರಮ ಇಲ್ಲಿದೆ.

VISTARANEWS.COM


on

Mobile Addiction
Koo

ಇಂದಿನ ಕಾಲದಲ್ಲಿ ಮಕ್ಕಳು ಹೊರಗಡೆ ಫ್ರೆಂಡ್ಸ್ ಜೊತೆ ಆಟವಾಡುವುದಕ್ಕಿಂತ ಹೆಚ್ಚಾಗಿ ಮೊಬೈಲ್ (Mobile Addiction) ಜೊತೆ ಆಟವಾಡುತ್ತಾರೆ. ಅವರು ಇಡೀ ದಿನ ಟಿವಿ, ಮೊಬೈಲ್ ಎಂದೇ ಕಾಲ ಕಳೆಯುತ್ತಾರೆ. ಇದರಿಂದ ಮಕ್ಕಳು ಕಣ್ಣುಗಳ ಮೇಲೆ ಮಾತ್ರವಲ್ಲ ಅವರ ಒಟ್ಟಾರೆ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ನಿಮ್ಮ ಮಗುವನ್ನು ಮೊಬೈಲ್ ಚಟದಿಂದ ಬಿಡಿಸಲು ಈ ಸಲಹೆ ಅನುಸರಿಸಿ.

Chubby asian kid using mobile phone at home

1. ಸಮಯದ ಮಿತಿಯನ್ನು ಹೊಂದಿಸಿ

ನಿಮ್ಮ ಮಗು ಮೊಬೈಲ್ ಜೊತೆ ಹೆಚ್ಚು ಸಮಯ ಕಳೆಯುವುದನ್ನು ತಪ್ಪಿಸಲು ಇದು ಉತ್ತಮ ಮಾರ್ಗವಾಗಿದೆ. ಹಾಗಾಗಿ ನೀವು ಅವರ ದೈನಂದಿನ ಚಟುವಟಿಕೆಗಳ ಮೇಲೆ ನಿಗಾವಹಿಸಿ. ಸರಿಯಾದ ದಿನಚರಿಯನ್ನು ರೂಪಿಸಿ. ಮೊಬೈಲ್ ಫೋನ್ ಗಳನ್ನು ದಿನದಲ್ಲಿ ಸ್ವಲ್ಪ ಹೊತ್ತು ಮಾತ್ರ ಬಳಸುವಂತೆ ತಿಳಿಸಿ.

Indian kid eating banana outdoor.

2. ಆರೋಗ್ಯಕರ ಆಹಾರ ಕ್ರಮ

ನಿಮ್ಮ ಮಗುವಿನ ಆರೋಗ್ಯಕ್ಕಾಗಿ ಉತ್ತಮ ಆಹಾರ ಕ್ರಮಗಳನ್ನು ಪಾಲಿಸಿ. ಹಾಗೆಯೇ ಮಕ್ಕಳ ಕಣ್ಣು ಮತ್ತು ಮೆದುಳಿನ ಆರೋಗ್ಯವನ್ನು ಉತ್ತಮವಾಗಿಡುವಂತಹ ಆಹಾರ ಪದಾರ್ಥಗಳನ್ನು ಅವರಿಗೆ ನೀಡಿ. ಹಾಗೇ ಮೊಬೈಲ್ ಬಿಟ್ಟು ಹೊರಗಡೆ ಸ್ನೇಹಿತರೊಂದಿಗೆ ಆಟವಾಡಲು ಪ್ರಚೋದಿಸಿ.

3. ಆರೋಗ್ಯಕರ ನಿದ್ರೆ

ಮಕ್ಕಳಿಗೆ ಪ್ರತಿದಿನ ಉತ್ತಮ ನಿದ್ರಾ ಕ್ರಮವನ್ನು ಅನುಸರಿಸಿ. ಅವರು ನಿದ್ರೆಯ ಸಮಯದಲ್ಲಿ ಮೊಬೈಲ್ ನಲ್ಲಿ ಕಾಲ ಕಳೆಯುತ್ತಿದ್ದರೆ ಅವರಿಗೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ತಿಳಿಸಿ. ಮೊಬೈಲ್‌ನಿಂದ ಕಣ್ಣುಗಳ ಮೇಲೆ ಯಾವ ರೀತಿ ಹಾನಿಯಾಗುತ್ತದೆ ಎಂಬುದನ್ನು ತಿಳಿಸಿ. ನಿದ್ರೆ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಎಂದು ವಿವರಿಸಿ. ನಿದ್ರೆಗೂ ಮುನ್ನ 2 ಗಂಟೆಗಳ ಮೊದಲೇ ಮೊಬೈಲ್ ಪಕ್ಕಕ್ಕಿಡುವಂತೆ ತಿಳಿಸಿ.

Family with Kids at the Beach

4. ಅವರ ಸ್ನೇಹಿತರಾಗಿ

ನಿಮ್ಮ ಮಕ್ಕಳಿಗೆ ಉತ್ತಮ ಜೀವನಶೈಲಿಯನ್ನು ಅನುಸರಿಸಲು ಕಲಿಸುವುದಾದರೆ ಮೊದಲು ನೀವು ಅವರ ಸ್ನೇಹಿತರಾಗಿ. ಆಗ ಅವರು ತಮ್ಮ ಸುಖ, ದುಃಖಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಾರೆ. ಹಾಗಾಗಿ ದಿನದಲ್ಲಿ ನಿಮ್ಮ ಕೆಲಸಗಳಿಗೆ ಸ್ವಲ್ಪ ಹೊತ್ತು ಗುಡ್ ಬಾಯ್ ಹೇಳಿ ನಿಮ್ಮ ಮಕ್ಕಳ ಜೊತೆ ಸಮಯ ಕಳೆಯಿರಿ. ಇದರಿಂದ ಅವರು ಮೊಬೈಲ್ ಹೆಚ್ಚು ಬಳಸುವುದಿಲ್ಲ.

5. ಮೊಬೈಲ್‌ನಿಂದಾಗುವ ಹಾನಿಗಳ ಬಗ್ಗೆ ತಿಳಿಸಿ

ಮಕ್ಕಳಿಗೆ ಮೊಬೈಲ್, ಟಿವಿ ಬಳಸುವುದರಿಂದಾಗಿ ಆಗುವ ಹಾನಿಗಳ ಬಗ್ಗೆ ಮನದಟ್ಟು ಮಾಡಿ. ಇದರ ನೀಲಿ ಬೆಳಕು ಕಣ್ಣುಗಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ವಿವರಿಸಿ. ಇದರಿಂದ ಮೆದುಳು ಹೇಗೆ ಹಾನಿಗೊಳಗಾಗುತ್ತದೆ ಎಂಬುದನ್ನು ತಿಳಿಸಿ. ಆಗ ಮಕ್ಕಳು ಅದರಿಂದ ದೂರವಿರುತ್ತಾರೆ.

ಇದನ್ನೂ ಓದಿ:Viral News: 20 ತಿಂಗಳ ಮಗುವಿಗೆ ಸಿಗರೇಟ್ ಸೇದಿಸಲು, ಮದ್ಯ ಕುಡಿಸಲು ಯತ್ನಿಸಿದ ತಾಯಿ!

ಈ ರೀತಿಯಲ್ಲಿ ನಿಮ್ಮ ಮಕ್ಕಳನ್ನು ಮೊಬೈಲ್ , ಟಿವಿ ಮುಂತಾದವುಗಳಿಂದ ದೂರವಿರಿಸಿ. ಅವರ ಆರೋಗ್ಯದ ಬಗ್ಗೆ ಪೋಷಕರು ಹೆಚ್ಚು ಗಮನ ನೀಡಿ. ಇದರಿಂದ ಅವರಿಗೆ ಮುಂದಿನ ಭವಿಷ್ಯದಲ್ಲಾಗುವ ಹಾನಿಯನ್ನು ತಡೆಯಬಹುದು.

Continue Reading

ಆರೋಗ್ಯ

International Yoga Day 2024: ಹಿರಿಯರಿಗೆ ಸೂಕ್ತವಾದ ಯೋಗಾಸನಗಳಿವು

International Yoga Day 2024: ದೇಹಕ್ಕೆ ವಯಸ್ಸಾಗುವುದನ್ನು (Yoga Poses for Seniors) ತಡೆಯಲಾಗದು. ಆದರೆ ಮನಸ್ಸಿಗೆ ವಯಸ್ಸಾಗುವುದನ್ನು ಮುಂದೂಡಬೇಕೆಂದಿದ್ದರೆ ಯೋಗ ಮಾಡಿ! ಇದು 60 ದಾಟಿದವರಿಗೆ ಮಾತ್ರವಲ್ಲ, ಎಲ್ಲ ವಯಸ್ಸಿನವರಿಗೂ ಸಲ್ಲುವಂಥದ್ದು. ಆದರೆ ಹಿರಿಯರಿಗೆ ಸೂಕ್ತವಾಗುವಂಥ ಆಸನಗಳು ಇವೆಯೇ? ಯಾವುವು? ಇಲ್ಲಿದೆ ಮಾಹಿತಿ.

VISTARANEWS.COM


on

International Yoga Day 2024
Koo

ವಯಸ್ಸಾಗುವುದು ದೇಹಕ್ಕೆ (International Yoga Day 2024) ಮಾತ್ರ, ಮನಸ್ಸಿಗಲ್ಲ ಎನ್ನುವವರು ಬೇಕಷ್ಟು ಜನರಿದ್ದಾರೆ. ಆದರೆ ಅದನ್ನು ಸರಿಯಾಗಿ ಆಚರಣೆಗೆ ತರುವವರು ಕಡಿಮೆ. ಅಂದರೆ, ಹಿರಿಯ ನಾಗರಿಕರು ಎನಿಸಿಕೊಂಡ ಮೇಲೆ, ʻಇನ್ನೇನು ವ್ಯಾಯಾಮ ಮಾಡೋದು!ʼ ಎಂಬ ಮನಸ್ಥಿತಿ ಹಲವರದ್ದಿರುತ್ತದೆ. ಆದರೆ ದೈಹಿಕ ಚಟುವಟಿಕೆ ಎಂಬುದು ಯಾವುದೇ ವಯಸ್ಸಿನಲ್ಲೂ ಆರೋಗ್ಯವನ್ನು ಮೇಲ್ದರ್ಜೆಗೆ ಏರಿಸಬಲ್ಲದು. ನೆಮ್ಮದಿಯ ದಿನಗಳನ್ನು ಕಳೆಯಲು ನೆರವಾಗಬಲ್ಲದು. ಹಾಗಾಗಿ ಹಿರಿಯರಿಗೂ ಸರಳ ಯೋಗಾಭ್ಯಾಸಗಳು ಸೂಕ್ತವೇ. ಆದರೆ ಅವರವರ ದೇಹಧರ್ಮಕ್ಕೆ ಅನುಗುಣವಾಗಿ ವೈದ್ಯರಲ್ಲಿ ಕೇಳಿ ತಿಳಿದುಕೊಂಡರೆ, ಎಲ್ಲ ದೃಷ್ಟಿಯಲ್ಲೂ ಸೂಕ್ತ.
ವಯಸ್ಸಾಗುತ್ತಿದ್ದಂತೆ ರೋಗನಿರೋಧಕ ಶಕ್ತಿ ಸಹಜವಾಗಿ ಕುಂದುತ್ತದೆ. ಯೋಗದಿಂದ ದೇಹ ಮತ್ತು ಮನಸ್ಸನ್ನು ಸುದೃಢಗೊಳಿಸಿ, ಈ ಮೂಲಕ ಪ್ರತಿರೋಧಕ ಶಕ್ತಿಯನ್ನೂ ಹೆಚ್ಚಿಸಬಹುದು. ಮನಸ್ಸು, ದೇಹಗಳನ್ನು ಉಲ್ಲಾಸ ಮತ್ತು ಉತ್ಸಾಹದಿಂದ ಇರಿಸಿಕೊಳ್ಳಬಹುದು. ಯೋಗ ಎಂದರೆ ಕೈ-ಕಾಲು ತಿರುಚಿಕೊಂಡೇ ಮಾಡಬೇಕೆಂದಿಲ್ಲ. ಬೆನ್ನು ನೋವಿದ್ದರೆ, ಮಂಡಿಯ ತೊಂದರೆಯಿದ್ದರೆ ಅಥವಾ ಅವರವರ ಆರೋಗ್ಯಕ್ಕೆ ಅನುಗುಣವಾಗಿ ನಿಂತು, ಕುಳಿತು, ಮಲಗಿ ಅಥವಾ ಕುರ್ಚಿಯಲ್ಲಿ ಕುಳಿತು ಮಾಡುವಂಥ ಹಲವು ಆಸನಗಳು ಹಿರಿಯರಿಗೆ ಸೂಕ್ತ.

Utthita Trikonasana Yoga For Stamina Extended Triangle pose works on the legs, hips, and side body. It promotes both strength and flexibility, contributing to improved stamina.

ನಿಂತಲ್ಲೇ ಮಾಡುವಂಥ ಆಸನಗಳು

ತ್ರಿಕೋನಾಸನ

ಬೆನ್ನಿನ ಕೆಳಭಾಗ ಮತ್ತು ಪೃಷ್ಠದ ಭಾಗಗಳಲ್ಲಿ ನೋವು, ಅಸ್ಥಿರತೆ ವಯಸ್ಸು ಹೆಚ್ಚಿದಂತೆ ಸಾಮಾನ್ಯ. ತ್ರಿಕೋಣಾಸನದಿಂದ ದೇಹದ ಈ ಭಾಗಗಳನ್ನು ಸುದೃಢ ಮಾಡಬಹುದು. ರಕ್ತಸಂಚಾರವನ್ನೂ ಸರಾಗ ಮಾಡಿ, ಬಿಪಿ ನಿಯಂತ್ರಣಕ್ಕೆ ಈ ಆಸನ ನೆರವಾಗುತ್ತದೆ.

ಕಟಿಚಕ್ರಾಸನ

ಬೆನ್ನುಹುರಿಯನ್ನು ನೇರ ಮತ್ತು ಸಬಲವಾಗಿ ಇರಿಸಿಕೊಳ್ಳಲು ಈ ಆಸನ ಸಹಾಯ ಮಾಡುತ್ತದೆ. ಮಾತ್ರವಲ್ಲ, ತೋಳು ಮತ್ತು ಕಾಲಿನ ಮೂಳೆಗಳನ್ನು ದೃಢಗೊಳಿಸಿ, ತಮ್ಮ ಕಾಲಿನ ಮೇಲೆ ನಿಲ್ಲುವುದಕ್ಕೆ ಬಲ ನೀಡುತ್ತದೆ.

ಕುಳಿತ ಭಂಗಿಗಳ ಆಸನಗಳು

ಬದ್ಧಕೋನಾಸನ

ಪಚನ ಕ್ರಿಯೆಯನ್ನು ಸರಾಗ ಮಾಡಿ, ಹೊಟ್ಟೆ ಖಾಲಿ ಮಾಡುವುದನ್ನು ಸುಲಭ ಮಾಡುವ ಆಸನವಿದು. ತೊಡೆ ಮತ್ತು ಮಂಡಿಯ ಕೀಲುಗಳನ್ನು ಸಡಿಲ ಮಾಡಿ, ಈ ಭಾಗಗಳ ನೋವು ಕಡಿಮೆ ಮಾಡುತ್ತದೆ.

ಬಾಲಾಸನ

ನರಮಂಡಲದಿಂದ ಆಯಾಸ ಶಮನ ಮಾಡುತ್ತದೆ. ಬೆನ್ನಿನ ಭಾಗಗಳಲ್ಲಿ ಇರಬಹುದಾದ ನೋವುಗಳ ಶಮನಕ್ಕೆ ಇದು ಸಹಕಾರಿ.

ಮಾರ್ಜರಿಯಾಸನ

ಬೆಕ್ಕಿನಂತೆ ಬೆನ್ನುಹುರಿಯನ್ನು ಹೊರಳಿಸುವ ಆಸನವಿದು. ಇದನ್ನು ಮಾಡುವುದರಿಂದ ಬೆನ್ನು ನೋವಿಗೆ ಉಪಶಮನವಾಗುತ್ತದೆ. ಜೀರ್ಣಾಂಗಗಳಿಗೆ ವ್ಯಾಯಾಮ ನೀಡಿ, ಪಚನ ಕ್ರಿಯೆಯನ್ನು ಸುಸೂತ್ರ ಮಾಡುತ್ತದೆ. ಕಿಬ್ಬೊಟ್ಟೆಯ ಸ್ನಾಯುಗಳಿಗೆ ವ್ಯಾಯಾಮ ದೊರೆಯುತ್ತದೆ. ರಕ್ತಪರಿಚಲನೆಯನ್ನು ಹೆಚ್ಚಿಸಿ, ಮನಸ್ಸನ್ನು ಶಾಂತಗೊಳಿಸುತ್ತದೆ

Bhujangasana Yoga For Kids Have the child lie on their belly, place their palms on the ground beside their shoulders, and gently lift their upper body while keeping their lower body grounded. This pose strengthens the back muscles and opens up the chest.

ಹೊಟ್ಟೆ/ಬೆನ್ನಿನ ಮೇಲೆ ಮಲಗಿ ಮಾಡುವ ಆಸನಗಳು

ಭುಜಂಗಾಸನ

ದೇಹದ ರಕ್ತ ಪರಿಚಲನೆಯನ್ನು ಚುರುಕುಗೊಳಿಸುತ್ತದೆ. ಬೆನ್ನು, ಭುಜದ ಸ್ನಾಯುಗಳನ್ನು ಸಶಕ್ತಗೊಳಿಸಿ ವೃದ್ಧರಿಗೆ ಅಗತ್ಯವಾದ ಅನ್ಯರ ಅವಲಂಬನೆಯನ್ನು ಕಡಿಮೆ ಮಾಡುತ್ತದೆ.

ಶಲಭಾಸನ

ಕುತ್ತಿಗೆ ಮತ್ತು ಬೆನ್ನಿನ ಸ್ನಾಯುಗಳಿಗೆ ಸೂಕ್ತ ಬಲ ತುಂಬುವ ಆಸನವಿದು. ಶರೀರದ ಈ ಭಾಗಗಳನ್ನು ಸಡಿಲವಾಗಿಡುತ್ತದೆ. ಕಿಬ್ಬೊಟ್ಟೆ ಮತ್ತು ತೊಡೆಯ ಸ್ನಾಯುಗಳಿಗೆ ಬಲ ನೀಡುತ್ತದೆ.

ಪವನಮುಕ್ತಾಸನ

ಹೆಸರೇ ಸೂಚಿಸುವಂತೆ ಶರೀರವನ್ನು ವಾಯು ಮುಕ್ತ ಮಾಡುವ ಆಸನವಿದು. ಪೃಷ್ಠದ ಕೀಲುಗಳಿಗೆ ರಕ್ತದ ಹರಿವನ್ನು ಹೆಚ್ಚಿಸಿ, ಒತ್ತಡ ನಿವಾರಿಸುತ್ತದೆ.

ಇದನ್ನೂ ಓದಿ: International Yoga Day 2024: ಗರ್ಭಿಣಿಯರೂ ಯೋಗ ಮಾಡಬಹುದೇ? ಯಾವ ಆಸನಗಳು ಸೂಕ್ತ?

ಕುರ್ಚಿಯ ಮೇಲೆ ಕುಳಿತು ಮಾಡುವ ಆಸನಗಳು

ಕುತ್ತಿಗೆ, ಕೈ, ಮಂಡಿ ಮುಂತಾದ ಭಾಗಗಳಿಗೆ ಸೂಕ್ತವಾಗುವಂಥ, ಆದರೆ ಬೆನ್ನು ಮತ್ತು ಸೊಂಟದ ತೊಂದರೆ ಇರುವವರಿಗೆ ಕಷ್ಟವಾಗದೆ ಮಾಡುವಂಥ ಭಂಗಿಗಳಿವು. ಕುರ್ಚಿಯ ಮೇಲೆ ಕುಳಿತು ಮಾಡುವ ಸೂರ್ಯನಮಸ್ಕಾರದ ಭಂಗಿಗಳೂ ಈಗ ಜನಪ್ರಿಯ.
ಕುತ್ತಿಗೆ ಮತ್ತು ಬೆನ್ನಿನ ಮೇಲಿರುವ ಒತ್ತಡವನ್ನು ಈ ಮೂಲಕ ನಿವಾರಿಸಲು ಸಾಧ್ಯವಿದೆ. ಹಾಗಾಗಿ ಈ ಭಂಗಿಗಳು ವಯಸ್ಸಾದವರಿಗೆ ಮಾತ್ರವಲ್ಲ, ದೀರ್ಘ ಸಮಯ ಕುಳಿತು ಕೆಲಸ ಮಾಡುವವರಿಗೂ ಅನುಕೂಲಕರ. ಜೊತೆಗೆ, ಈ ಭಂಗಿಗಳು ದೇಹದ ಒಟ್ಟಾರೆ ಬಲವನ್ನು ವೃದ್ಧಿಸುತ್ತದೆ. ಮಾತ್ರವಲ್ಲ, ವೃದ್ಧಾಪ್ಯದಲ್ಲಿ ಕಾಡುವ ಬಲಹೀನತೆ ಮತ್ತು ಅಂಗಗಳ ನಡುವಿನ ಸಮನ್ವಯದ ಕೊರತೆಯನ್ನು ಸರಿದೂಗಿಸಬಹುದು.

Continue Reading
Advertisement
Hooch Tragedy
ದೇಶ54 mins ago

Hooch Tragedy: ಕಳ್ಳಬಟ್ಟಿ ಸೇವಿಸಿ 16 ಮಂದಿ ಸಾವು, 70ಕ್ಕೂ ಅಧಿಕ ಜನ ಅಸ್ವಸ್ಥ

Blacklist contractors who do not complete work within time says Minister Mankala Vaidya
ಉತ್ತರ ಕನ್ನಡ1 hour ago

Uttara Kannada News: ಅವಧಿಯೊಳಗೆ ಕಾಮಗಾರಿ ಮುಕ್ತಾಯಗೊಳಿಸದ ಗುತ್ತಿಗೆದಾರರನ್ನು ಬ್ಲ್ಯಾಕ್ ಲಿಸ್ಟ್‌ಗೆ ಸೇರಿಸಿ: ಸಚಿವ ಮಂಕಾಳ ವೈದ್ಯ

Appu Cup Season 2 to be held in July A team building event was held in Bengaluru
ಬೆಂಗಳೂರು1 hour ago

Appu Cup Badminton: ʼಅಪ್ಪು ಕಪ್ ಸೀಸನ್ 2ʼ; ಟೀಮ್ ಬಿಲ್ಡಿಂಗ್‌ಗೆ ಶುಭ ಕೋರಿದ ಅಶ್ವಿನಿ ಪುನೀತ್ ರಾಜಕುಮಾರ್

RSA vs USA
ಕ್ರೀಡೆ1 hour ago

SA vs USA: ಮಿಂಚಿದ ಡಿಕಾಕ್; ಯುಎಸ್‌ಎ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ 18 ರನ್‌ಗಳ ಜಯ

NET 2024
ದೇಶ2 hours ago

NET 2024: ಪರೀಕ್ಷೆ ನಡೆದ ಒಂದೇ ದಿನದಲ್ಲಿ ನೆಟ್ ರದ್ದುಗೊಳಿಸಿದ ಕೇಂದ್ರ ಸರ್ಕಾರ; ಏನಿದು ಕೇಸ್?‌

Hajj Pilgrims
ದೇಶ3 hours ago

Hajj Pilgrims: ಬಿಸಿಗಾಳಿ, ಬಿಸಿಲಿನ ಹೊಡೆತ; ಹಜ್‌ ಯಾತ್ರೆ ಕೈಗೊಂಡ 68 ಭಾರತೀಯರ ಸಾವು

Bescom complaint against false information video about electricity compensation for farmers
ಕರ್ನಾಟಕ3 hours ago

Fact Check: ಹೊಲದಲ್ಲಿ ಟ್ರಾನ್ಸ್‌ಫಾರ್ಮರ್‌ ಇದ್ದರೆ ರೈತರಿಗೆ ಪರಿಹಾರ? ಬೆಸ್ಕಾಂ ಹೇಳಿದ್ದೇನು?

Murder Case
ಕರ್ನಾಟಕ4 hours ago

Murder Case: 3 ವರ್ಷದ ಬಾಲಕನ ಕತ್ತು ಸೀಳಿ ಕೊಂದ ಚಿಕ್ಕಪ್ಪ; ನದಿಯಲ್ಲಿ ಈಜಲು ಹೋಗಿ ಇಬ್ಬರು ನಾಪತ್ತೆ

Suniel Shetty
ಬಾಲಿವುಡ್4 hours ago

Suniel Shetty: ಅಪ್ಪ ವೇಟರ್‌ ಆಗಿ ಕೆಲಸ ಮಾಡುತ್ತಿದ್ದ ರೆಸ್ಟೋರೆಂಟ್‌ಗೆ ಈಗ ಸುನೀಲ್‌ ಶೆಟ್ಟಿ ಒಡೆಯ; ಇದಪ್ಪ Success ಅಂದ್ರು ಜನ!

DCM DK Shivakumar visit Kengal Anjaneya temple
ಕರ್ನಾಟಕ4 hours ago

DK Shivakumar: ಕೆಂಗಲ್ ಆಂಜನೇಯ ಸ್ವಾಮಿ ದೇವಸ್ಥಾನದಿಂದ ನನ್ನ ಹೊಸ ರಾಜಕೀಯ ಅಧ್ಯಾಯ ಪ್ರಾರಂಭ: ಡಿ.ಕೆ.ಶಿ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಮೈಸೂರು2 days ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು3 days ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ3 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ3 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ4 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ4 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ5 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು5 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು5 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ5 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

ಟ್ರೆಂಡಿಂಗ್‌