Kids food: ಮಕ್ಕಳು ಲಂಬೂಜಿ ಆಗಬೇಕಾದರೆ ಅವರ ಆಹಾರದಲ್ಲಿ ಇವು ಇರಲಿ - Vistara News

ಆರೋಗ್ಯ

Kids food: ಮಕ್ಕಳು ಲಂಬೂಜಿ ಆಗಬೇಕಾದರೆ ಅವರ ಆಹಾರದಲ್ಲಿ ಇವು ಇರಲಿ

ಮಕ್ಕಳು ಉದ್ದ ಆಗುತ್ತಿಲ್ಲ ಎಂದು ಗೊಣಗಾಡಿಕೊಂಡರೆ ಸಾಲದು. ಅವರಿಗೆ ಉದ್ದವಾಗಿ ಬೆಳೆಯಲು ಪೂರಕವಾಗಿ ಯಾವ ಆಹಾರ ನೀಡಬೇಕು ಎಂಬುದೂ ಗೊತ್ತಿರಬೇಕು.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪ್ರತಿಯೊಬ್ಬರ ಉದ್ದವನ್ನು ವಂಶವಾಹಿಗಳು ನಿರ್ಧರಿಸುತ್ತವೆ ಎಂಬುದು ಸತ್ಯ. ಶೇಕಡಾ ೮೦ರಷ್ಟು ಇದು ವಂಶವಾಹಿಗಳನ್ನು ಅವಲಂಬಿಸಿದೆ ಎಂಬುದು ನಿಜವಾದರೂ, ಇನ್ನುಳಿದ ಶೇಕಡಾ ೨೦ ನಮ್ಮ ಕೈಯಲ್ಲೇ ಇದೆ. ಮಕ್ಕಳು ಬೆಳೆಯುವ ವಯಸ್ಸಿನಲ್ಲಿ ಅವರಿಗೆ ಯಾವ ಆಹಾರವನ್ನು ಕೊಟ್ಟೆವು, ಬೆಳವಣಿಗೆಗೆ ಬೇಕಾದಷ್ಟು ಪೋಷಣೆಯನ್ನು ಅವು ಹೊಂದಿವೆಯಾ ಎಂಬುದೂ ಬಹಳ ಮುಖ್ಯವಾಗುತ್ತವೆ ಎನ್ನುತ್ತದೆ ಸಂಶೋಧನೆ.

ವಂಶವಾಹಿಗಳ ಮುಖಾಂತರ ಬಂದದ್ದನ್ನು ನಾವು ಬದಲಾಯಿಸುವುದು ಸಾಧ್ಯವಿಲ್ಲವಾದರೂ, ಬೆಳವಣಿಗೆಗೆ ಪೂರಕ ವಾತಾವರಣ ಒದಗಿಸುವುದು ಬಹಳ ಅಗತ್ಯ. ಮಕ್ಕಳ ಅಕ್ಕರೆಯ ಚಿಪ್ಸ್‌, ಚಾಕೋಲೇಟ್‌, ಕುಕ್ಕೀಸ್‌, ಪಿಜ್ಜಾ, ಫ್ರೆಂಚ್‌ ಫ್ರೈಸ್‌, ಬರ್ಗರ್‌ ನಂತಹ ಜಂಕ್‌ಗಳನ್ನು ಆದಷ್ಟು ಕಡಿಮೆ ಮಾಡುತ್ತಾ, ಬೆಳೆಯುವ ಮಕ್ಕಳಿಗೆ ಕೊಡಬಹುದಾದ ಆಹಾರಗಳು ಯಾವುವು ಎಂಬುದನ್ನು ನೋಡೋಣ.

೧. ಮೊಟ್ಟೆ: ಮೊಟ್ಟೆಗಳು ದೇಹಕ್ಕೆ ಬೇಕಾದ ಪ್ರೊಟೀನನ್ನು ಭರಪೂರ ನೀಡುತ್ತವೆ. ಬೆಳಗ್ಗಿನ ಉಪಹಾರಕ್ಕೆ ಆಮ್ಲೆಟ್‌ ಮಾಡುವ ಮೂಲಕವೋ, ಮೊಟ್ಟೆಯ ಬಿಳಿ ಭಾಗ ಮಕ್ಕಳ ಆಹಾರದಲ್ಲಿ ದಿನನಿತ್ಯ ಸೇರಿಸಿದರೆ, ನಿಗದಿತ ಪ್ರೊಟೀನಿನ ಅವಶ್ಯಕತೆಯನ್ನು ತಲುಪುವುದು ಸುಲಭವಾಗುತ್ತದೆ. ಸಾಧಾರಣ ಊಟ ಉಪಚಾರದಿಂದ ಬೆಳೆದ ಮಕ್ಕಳಿಗೂ ಪ್ರೊಟೀನನ್ನು ಗಮನದಲ್ಲಿಟ್ಟುಕೊಂಡು ಆಹಾರ ನೀಡಿದ ಮಕ್ಕಳಿಗೂ ಬೆಳವಣಿಗೆಯಲ್ಲಿ ವ್ಯತ್ಯಾಸವಿದೆ. ಹಾಗಾಗಿ ಬೆಳೆಯುವ ಮಕ್ಕಳಿಗೆ ಪ್ರೊಟೀನ್‌ ಶ್ರೀಮಂತವಾಗಿರುವ ಮೊಟ್ಟೆ ನೀಡುವುದು ಒಳ್ಳೆಯದು.

೨. ಹಾಲು ಹಾಗೂ ಹಾಲಿನ ಉತ್ಪನ್ನಗಳು: ಹಾಲಿನಲ್ಲಿ ಕ್ಯಾಲ್ಶಿಯಂ ಇದೆ. ಮಕ್ಕಳ ಎಲುಬನ್ನು ಗಟ್ಟಿಯಾಗಿಸಿ ಮಕ್ಕಳ ಬಲವರ್ಧನೆಯಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಚೀಸ್‌, ಮೊಸರು, ಮಜ್ಜಿಗೆ, ಇವೆಲ್ಲವನ್ನು ಮಕ್ಕಳಿಗೆ ಕೊಡಬಹುದು. ಪ್ರತಿನಿತ್ಯ ಹಾಲು ಕುಡಿಯುವ ಅಭ್ಯಾಸವೂ ಒಳ್ಳೆಯದು.

೩. ಸೋಯಾಬೀನ್:‌ ಸೋಯಾಬೀನ್‌ನಲ್ಲಿ ಹೇರಳವಾಗಿ ಪ್ರೊಟೀನ್‌ ಇದೆ. ಎಲುಬಿನ ಆರೋಗ್ಯಕ್ಕೆ ಪೂರಕವಾದ ಪೋಷಕಾಂಶಗಳು ಇದರಲ್ಲಿವೆ. ಸೋಯಾಬೀನ್‌ನನ್ನು ಅಡುಗೆಗಳಲ್ಲಿ ಬಳಸುವ ಮೂಲಕ, ಹೊಸ ರೆಸಿಪಿಗಳ ಮೂಲಕ ಮಕ್ಕಳು ಇದನ್ನು ಟ್ರೈ ಮಾಡಬಹುದು.

೪. ಚಿಕನ್:‌ ಚಿಕನ್‌ ಮಕ್ಕಳಿಗೆ ಒಳ್ಳೆಯದು. ಚಿಕನ್‌ನಲ್ಲಿ ಪ್ರೊಟೀನ್‌ ಹಾಗೂ ವಿಟಮಿನ್‌ ಬಿ ಹೇರಳವಾಗಿದ್ದು, ಮಕ್ಕಳ ಬೆಳವಣಿಗೆಗೆ ಪೂರಕವಾದ ಪೋಷಕಾಂಶಗಳಿವೆ.

೫. ಹಸಿರು ಸೊಪ್ಪು: ಹಸಿರು ಸೊಪ್ಪು ಮಕ್ಕಳಿಗೆ ಶಕ್ತಿ ಸಾಮರ್ಥ್ಯ ನೀಡುವುದಲ್ಲದೆ, ಇದರಲ್ಲಿ ಅತ್ಯಧಿಕ ಮಟ್ಟದಲ್ಲಿ ಕ್ಯಾಲ್ಶಿಯಂ ಇದೆ. ಮಕ್ಕಳಲ್ಲಿ ಎಲುಬಿನ ರಚನೆ, ಅದನ್ನು ದೃಢವಾಗಿಸುವ ಬೆಳವಣಿಗೆ ಸುಮಾರು ೧೦ನೇ ವಯಸ್ಸಿನಲ್ಲಿ ಹೆಚ್ಚು ಆಗುವುದರಿಂದ ಅಂಥ ಸಮಯದಲ್ಲಿ ಆರೋಗ್ಯಕರವಾದ ಇಂಥ ಆಹಾರದ ಅವಶ್ಯಕತೆ ಹೆಚ್ಚಿರುತ್ತದೆ. ಬಸಳೆ, ಪಾಲಕ್‌, ದಂಟು, ಬ್ರೊಕೋಲಿ, ಕ್ಯಾಬೇಜ್‌ನಂತಹ ಸೊಪ್ಪು ತರಕಾರಿಗಳು ಅವುಗಳ ಕೊರತೆಯನ್ನು ನೀಗಿಸುತ್ತದೆ.

೬. ಕ್ಯಾರೆಟ್:‌ ಬೀಟಾ ಕ್ಯಾರೊಟಿನ್‌ ಹೆಚ್ಚಿರುವ ಹಾಗೂ ದೇಹಕ್ಕೆ ಭರಪೂರ ವಿಟಮಿನ್‌ ಎ ನೀಡಬಲ್ಲ ಆಹಾರವಿದು. ಹಸಿ ಕ್ಯಾರೆಟ್‌ ತಿನ್ನುವುದು ಇನ್ನೂ ಉತ್ತಮ. ಹಸಿ ಕ್ಯಾರೆಟ್‌ನ ಜ್ಯೂಸ್‌, ಸಲಾಡ್‌ ಮೂಲಕ ತಿನ್ನುವುದರಿಂದ ದೇಹ ಕ್ಯಾಲ್ಶಿಯಂನ್ನು ಇನ್ನೂ ಪಕ್ವವಾಗಿ ಹೀರಿಕೊಳ್ಳಲು ಇದು ಅನುವು ಮಾಡುತ್ತದೆ.

೭. ಹಣ್ಣುಗಳು: ಆಹಾರದಲ್ಲಿ ತರಕಾರಿಗಳಷ್ಟೇ ಹಣ್ಣುಗಳ ಪಾತ್ರ ದೊಡ್ಡದು. ಹಣ್ಣುಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವುದಲ್ಲದೆ, ದೇಹಕ್ಕೆ ಬೇಕಾದ ಎಲ್ಲ ಪೋಷಕಾಂಶಗಳನ್ನೂ ಒದಗಿಸುತ್ತದೆ. ದಿನನಿತ್ಯ ವಿವಿಧ ಬಣ್ಣಗಳ ಒಂದೆರಡು ಬಗೆಯ ಹಣ್ಣುಗಳನ್ನು ತಿನ್ನುವುದು ಒಳ್ಳೆಯದು.

೮. ಧಾನ್ಯಗಳು: ಆಹಾರದಲ್ಲಿ ಧಾನ್ಯಗಳ ಬಳಕೆ ಬಹುಮುಖ್ಯ. ಇದೂ ಕೂಡಾ ಮಕ್ಕಳ ಬೆಳವಣಿಗೆಯಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ.

೯. ಬೀಜಗಳು: ಕ್ಯಾಲ್ಶಿಯಂ, ವಿಟಮಿನ್‌ಗಳ ಜೊತೆಗೆ ದೇಹಕ್ಕೆ ಆರೋಗ್ಯಕರವಾದ ಕೊಬ್ಬಿನ ಅವಶ್ಯಕತೆಯೂ ಬಹಳವಿದೆ. ಬೀಜಗಳು ಈ ನಿಟ್ಟಿನಲ್ಲಿ ಉತ್ತಮವಾಗಿ ಕೆಲಸ ಮಾಡುತ್ತವೆ. ಮಕ್ಕಳ ಸರ್ವತೋಮುಖ ಬೆಳವಣಿಕೆಯಲ್ಲಿ ಒಣಹಣ್ಣುಗಳು ಹಾಗೂ ವಿವಿಧ ಬೀಜಗಳು ಬಹಳ ಅಗತ್ಯ.

೧೦. ಬೇಳೆಕಾಳುಗಳು: ಬೇಳೆಕಾಳುಗಳ ಅಗತ್ಯವನ್ನು ಪ್ರತ್ಯೇಕವಾಗಿ ವಿವರಿಸಿ ಹೇಳಬೇಕಾಗಿಲ್ಲ. ದೇಹಕ್ಕೆ ಬೇಕಾದ ಪ್ರೊಟೀನ್‌ ಅವಶ್ಯಕತೆಗಳನ್ನು ಮೊಳಕೆ ಬರಿಸಿದ ಕಾಳುಗಳು ನೀಗಿಸುತ್ತವೆ. ಮೊಟ್ಟೆ ತಿನ್ನಲಾಗದ, ಸಸ್ಯಾಹಾರಿಗಳು, ಬೇಳೆಕಾಳುಗಳ ಮೂಲಕವಾದರೂ ದಿನನಿತ್ಯ ಪ್ರೋಟೀನನ್ನು ಮಕ್ಕಳಿಗೆ ನೀಡಬಹುದು.

ಇದನ್ನೂ ಓದಿ | ಜಿಎಸ್‌ಟಿಗೆ ಮುನ್ನವೂ ಆಹಾರ ಧಾನ್ಯಗಳಿಗೆ ತೆರಿಗೆ ಇತ್ತು: ನಿರ್ಮಲಾ ಪ್ರತಿಪಾದನೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಆರೋಗ್ಯ

Tea Tips: ಹಾಲಿನ ಚಹಾ ಬದಲು ಬ್ಲ್ಯಾಕ್‌ ಟೀ ಕುಡಿಯಿರಿ!

ಕಾಫಿ ಮತ್ತು ಚಹಾ ಸೇವನೆ (Tea Tips) ಭಾರತ ಉಪಖಂಡದ ಸಂಸ್ಕೃತಿ ಎನಿಸಿದೆ. ಆದರೆ ಅದನ್ನು ಅತಿಯಾಗಿ ಸೇವಿಸುವುದರಿಂದ ಆಗುವ ಅಡ್ಡ ಪರಿಣಾಮಗಳ ಬಗ್ಗೆ ಐಸಿಎಂಆರ್‌ ಗಮನ ಸೆಳೆದಿದೆ. ಚಾ-ಕಾಪಿ ಕುಡಿಯುವುದಕ್ಕೆ ಮಿತಿ ಎಷ್ಟು, ಯಾವಾಗ ಕುಡಿಯಬಹುದು ಎಂಬಿತ್ಯಾದಿ ಮಾಹಿತಿಗಳನ್ನೂ ನೀಡಿದೆ. ಈ ಲೇಖನ ಓದಿ, ಟೀ ಬಗ್ಗೆ ಒಂದಿಷ್ಟು ಮಾಹಿತಿ ತಿಳಿದುಕೊಳ್ಳಿ.

VISTARANEWS.COM


on

Tea Tips
Koo

ಭಾರತೀಯರಿಗೆ ಕಾಫಿ-ಚಹಾ ಇಲ್ಲದೆ (Tea Tips) ಬೆಳಗಾಗುವುದೇ ಇಲ್ಲ. ಆದರೆ ಅತಿಯಾಗಿ ಕೆಫೇನ್‌ ಸೇವಿಸುವುದರಿಂದ ಆರೋಗ್ಯಕ್ಕೆ ಹಾನಿ ಎಂಬುದು ಎಲ್ಲರಿಗೂ ತಿಳಿದೇ ಇದೆ. ಇದೀಗ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಈ ಬಗ್ಗೆ ವಿಸ್ತೃತವಾದ ನಿರ್ದೇಶನಗಳನ್ನು ನೀಡಿದ್ದು, ಕೆಫೇನ್‌ ಎಷ್ಟು ಸೇವಿಸಬಹುದು ಮತ್ತು ಯಾವಾಗ ಸೇವಿಸಬಹುದು ಎಂಬ ಬಗ್ಗೆ ಉಪಯುಕ್ತ ಮಾಹಿತಿಗಳನ್ನು ನೀಡಿದೆ. ಮಾತ್ರವಲ್ಲ, ಅತಿಯಾದ ಕೆಫೇನ್‌ ಸೇವನೆಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆಯೂ ಎಚ್ಚರಿಕೆ ನೀಡಿದೆ.
ರಾಷ್ಟ್ರೀಯ ಪೌಷ್ಟಿಕಾಂಶ ಸಂಸ್ಥೆ (ಎನ್‌ಐಎನ್‌) ಜೊತೆಗೂಡಿ, 17 ಹೊಸ ಆಹಾರಕ್ರಮದ ನಿರ್ದೇಶನಗಳನ್ನು ಐಸಿಎಂಆರ್‌ ಬಿಡುಗಡೆ ಮಾಡಿದೆ. ಭಾರತೀಯರಿಗಾಗಿಯೇ ಬಿಡುಗಡೆ ಮಾಡಲಾಗಿರುವ ಈ ಮಾರ್ಗದರ್ಶಿ ಸೂತ್ರಗಳು ಆರೋಗ್ಯಕರ ಆಹಾರ ಕ್ರಮವನ್ನು ದೇಶದೆಲ್ಲೆಡೆ ಪ್ರಚುರಪಡಿಸುವ ಉದ್ದೇಶವನ್ನು ಹೊಂದಿವೆ. ಈ ನಿರ್ದೇಶನಗಳಲ್ಲಿ ಅತಿಯಾಗಿ ಕಾಫಿ-ಚಹಾ ಸೇವನೆಯ ಅಡ್ಡ ಪರಿಣಾಮಗಳನ್ನೂ ತಿಳಿಸಲಾಗಿದೆ.

Cup of Tea

ಹೆಚ್ಚಾದರೆ ಏನಾಗುತ್ತದೆ?

ಕಾಫಿ-ಚಹಾ ಹೆಚ್ಚು ಕುಡಿದರೆ ಏನಾಗುತ್ತದೆ ಎನ್ನುವುದಕ್ಕೆ ಸಂಸ್ಥೆ ಸ್ಪಷ್ಟ ಉತ್ತರ ನೀಡಿದೆ. ಚಹಾ, ಕಾಫಿ ಹೆಚ್ಚು ಕುಡಿಯುವುದರಿಂದ ಆಹಾರದಲ್ಲಿನ ಕಬ್ಬಿಣದ ಅಂಶವನ್ನು ಹೀರಿಕೊಳ್ಳಲು ದೇಹಕ್ಕೆ ತೊಡಕಾಗುತ್ತದೆ. ಕೆಫೇನ್‌ ಪೇಯಗಳಲ್ಲಿರುವ ಟ್ಯಾನಿನ್‌ಗಳು ಕಬ್ಬಿಣದಂಶ ಹೀರಿಕೊಳ್ಳಲು ಅಡ್ಡಿಪಡಿಸುತ್ತವೆ. ಇದರಿಂದ ಕಬ್ಬಿಣದಂಶದ ಕೊರತೆಯಾಗಿ ಅನೀಮಿಯ ಉಂಟಾಗಬಹುದು. ಜೊತೆಗೆ, ಕಾಫಿ-ಟೀ ಸೇವನೆ ಹೆಚ್ಚಾದರೆ ರಕ್ತದೊತ್ತಡ ಸ್ಥಿರವಾಗಿರದೆ, ಏರಿಳಿತ ಕಾಣಬಹುದು. ಹೃದಯದ ತೊಂದರೆಗಳು ಅಂಟಿಕೊಳ್ಳಬಹುದು.

ಯಾವಾಗ ಸೇವಿಸಬಹುದು?

ಹೊಟ್ಟೆ ತೀವ್ರವಾಗಿ ಹಸಿದಿದ್ದಾಗ, ಆಹಾರದ ಜೊತೆಗೆ ಅಥವಾ ಆಹಾರ ಸೇವಿಸಿದ ತಕ್ಷಣ ಕೆಫೇನ್‌ ಸೇವನೆ ಸರಿಯಲ್ಲ. ಬದಲಿಗೆ, ಆಹಾರ ಸೇವಿಸಿದ ಒಂದು ತಾಸಿನ ನಂತರ ಕಾಫಿ, ಚಹಾ ಕುಡಿಯಬಹುದು. ಇವುಗಳನ್ನು ಅತಿಯಾಗಿ ಕುಡಿಯುವುದು ಕೇಂದ್ರ ನರಮಂಡಲವನ್ನು ಪ್ರಚೋದಿಸುತ್ತದೆ. ಈ ಮೂಲಕ ವ್ಯಸನವನ್ನೂ ಉಂಟು ಮಾಡುತ್ತದೆ. ಹಾಗಾಗಿ ಇದನ್ನು ಮಿತಿಯಲ್ಲಿ ಇರಿಸಿಕೊಳ್ಳುವುದು ಸೂಕ್ತ.

Black and green tea

ದಿನಕ್ಕೆ ಎಷ್ಟು?

ಇದರರ್ಥ ಕಾಫಿ-ಚಹಾ ಕುಡಿಯುವುದೇ ಬೇಡ ಎಂಬುದಲ್ಲ. ಬದಲಿಗೆ ಮಿತಿ ನಿಗದಿ ಮಾಡಿಕೊಳ್ಳಿ ಎನ್ನುತ್ತದೆ ಈ ನಿರ್ದೇಶನ. ದಿನಕ್ಕೆ 300 ಎಂ.ಜಿ.ಗಿಂತ ಹೆಚ್ಚು ಕೆಫೇನ್‌ ಸೇವನೆ ಸೂಕ್ತವಲ್ಲ. ಆದರೆ ಅದನ್ನು ಲೆಕ್ಕ ಹಾಕುವುದು ಹೇಗೆ? ತಾಜಾ ಡಿಕಾಕ್ಷನ್‌ ತೆಗೆದ 150 ಎಂ.ಎಲ್‌. ಕಾಫಿಯಲ್ಲಿ 80ರಿಂದ 120 ಎಂ.ಜಿ. ಕೆಫೇನ್‌ ಇರುತ್ತದೆ. ಅಷ್ಟೇ ಪ್ರಮಾಣದ ಇನ್‌ಸ್ಟಂಟ್‌ ಕಾಫಿಯಲ್ಲಿ 50ರಿಂದ 65 ಎಂ.ಜಿ. ಕೆಫೇನ್‌ ಇರುತ್ತದೆ. ಒಂದು ಸರ್ವಿಂಗ್‌ ಚಹಾದಲ್ಲಿ 30ರಿಂದ 65 ಎಂ.ಜಿ.ವರೆಗೂ ಕೆಫೇನ್‌ ದೇಹಕ್ಕೆ ದೊರೆಯುತ್ತದೆ. ಈ ಪ್ರಮಾಣಗಳನ್ನು ತಿಳಿದುಕೊಂಡರೆ, ಕೆಫೇನ್‌ ಎಷ್ಟು ಸೇವಿಸುತ್ತಿದ್ದೇವೆ ಎಂಬುದನ್ನು ಲೆಕ್ಕ ಹಾಕುವುದಕ್ಕೆ ಕಷ್ಟವಾಗುವುದಿಲ್ಲ.

ಇದನ್ನೂ ಓದಿ: Hair Conditioner: ರಾಸಾಯನಿಕ ಹೇರ್‌ ಕಂಡೀಷನರ್‌ ಬಿಡಿ; ಈ 5 ನೈಸರ್ಗಿಕ ಹೇರ್ ಕಂಡೀಷನರ್ ಬಳಸಿ

ಹಾಲಿನ ಚಹಾ ಬೇಡ

ಭಾರತದಲ್ಲಿ ಚಹಾ ಎಂಬುದು ಪ್ರಾರಂಭವಾಗಿದ್ದು ಬ್ರಿಟೀಷರಿಂದ. ಇಂಗ್ಲಿಷ್‌ ಚಹಾ ಎಂದರೆ ಹಾಲು ಸೇರಿಸಿದ ಚಹಾ. ಬ್ಲ್ಯಾಕ್‌ ಟೀ, ಗ್ರೀನ್‌ ಟೀ, ಲೆಮೆನ್‌ ಟೀ ಇತ್ಯಾದಿಗಳೆಲ್ಲ ನಂತರದಲ್ಲಿ ಬಂದಿದ್ದು. ಆದರೆ ಹಾಲು ಬೆರೆಸಿದ ಚಹಾಗಿಂತ ಬ್ಲ್ಯಾಕ್‌ ಟೀ ಸೇವಿಸುವುದು ಒಳ್ಳೆಯದು ಎಂಬುದು ಐಸಿಎಂಆರ್‌ ಅಭಿಮತ. ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ಬ್ಲ್ಯಾಕ್‌ ಟೀ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಇದರಿಂದ ಹೃದಯದ ಆರೋಗ್ಯ ಸುಧಾರಿಸುವ ಸಂಭವವಿದೆ. ಜೊತೆಗೆ, ಹೊಟ್ಟೆಯ ಕ್ಯಾನ್ಸರ್‌ ಭೀತಿಯನ್ನೂ ಕಡಿಮೆ ಮಾಡುತ್ತದೆ. ಹಾಗಾಗಿ ಹಾಲು ಬೆರೆಸಿದ ಚಹಾ ಸೇವನೆಯನ್ನು ಕಡಿಮೆ ಮಾಡಿ ಎಂಬುದು ಸಂಸ್ಥೆಯ ಕಿವಿಮಾತು.

Continue Reading

ಆರೋಗ್ಯ

Nutrition Alert: ಎಳನೀರು ಕುಡಿಯುವುದರಿಂದಲೂ ನಮ್ಮ ದೇಹಕ್ಕೆ ಸೈಡ್‌ ಎಫೆಕ್ಟ್‌ ಇದೆಯೆ?

ಒಂದು ಕಪ್ ಎಳನೀರಿನಲ್ಲಿ ಎಷ್ಟು ಪೋಷ್ಟಿಕಾಂಶ ಇದೆ ಗೊತ್ತೇ? ಎಳನೀರು ಸೇವನೆಯಿಂದ ಆರೋಗ್ಯಕ್ಕೆ ಎಷ್ಟು ಪ್ರಯೋಜನಗಳಿವೆ ಎಂಬುದು ತಿಳಿದಿದೆಯೇ ? ಹೆಚ್ಚು ಎಳನೀರು ಸೇವನೆ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬಿರುವುದು ಎನ್ನುವ ಕುರಿತು ಮಾಹಿತಿ (Nutrition Alert) ಇಲ್ಲಿದೆ.

VISTARANEWS.COM


on

By

Nutrition Alert
Koo

ವ್ಯಾಯಾಮದ ಬಳಿಕ ಸುಸ್ತಾಗಿದ್ದೀರಾ, ಕೂಡಲೇ ರಿಫ್ರೆಶ್ (refreshing beverage) ಆಗಬೇಕು ಎಂದುಕೊಂಡು ಅತ್ಯಧಿಕ ಪೌಷ್ಠಿಕಾಂಶವುಳ್ಳ (Nutrition Alert) ನೈಸರ್ಗಿಕವಾದ ದಾರಿಯನ್ನು ಹುಡುಕುತ್ತಿರುವಾಗ ನೆನಪಿಗೆ ಬರುವುದು ತೆಂಗಿನ ನೀರು (coconut water). ಎಳೆಯ ಹಸಿರು ತೆಂಗಿನಕಾಯಿಗಳಿಂದ ಪಡೆದ ಈ ಪಾನೀಯವು ಇತ್ತೀಚಿನ ವರ್ಷಗಳಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸಿದೆ.

ರುಚಿಕರವಾದ ತೆಂಗಿನ ನೀರು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಎಲೆಕ್ಟ್ರೋಲೈಟ್‌ಗಳನ್ನು ಮರುಪೂರಣಗೊಳಿಸುವುದರಿಂದ ಹಿಡಿದು ಜೀರ್ಣಕ್ರಿಯೆಗೆ ಸಹಾಯ ಮಾಡುವವರೆಗೆ ಈ ನೈಸರ್ಗಿಕ ಮೂಲವು ದೇಹಕ್ಕೆ ಬೇಕಾದ ಎಲ್ಲ ಶಕ್ತಿಯನ್ನು ತುಂಬಿಸುವ ಮೂಲವಾಗಿದೆ. ಬೇಸಿಗೆಯ ತಿಂಗಳುಗಳಲ್ಲಿ ತೇವಾಂಶವನ್ನು ಉಳಿಸಿಕೊಳ್ಳಲು ತೆಂಗಿನ ನೀರು ಅತ್ಯುತ್ತಮ ಆಯ್ಕೆಯಾಗಿದೆ. ತೆಂಗಿನ ನೀರಿನಲ್ಲಿರುವ ಎಲೆಕ್ಟ್ರೋಲೈಟ್ ಅಂಶವು ಬೆವರುವಿಕೆಯ ಮೂಲಕ ಕಳೆದುಹೋದದ್ದನ್ನು ಪುನಃ ತುಂಬಲು ಸಹಾಯ ಮಾಡುತ್ತದೆ. ಇದು ಹೊರಾಂಗಣ ಚಟುವಟಿಕೆಗಳ ಅನಂತರ ಅಥವಾ ಬಿಸಿ ವಾತಾವರಣದಲ್ಲಿ ವ್ಯಾಯಾಮದ ಬಳಿಕ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ.

ಎಳನೀರಿನಲ್ಲಿರುವ ಪೌಷ್ಟಿಕಾಂಶ ಏನೇನು?

240 ಮಿಲಿ (ಒಂದು ಕಪ್) ಎಳನೀರಿನಲ್ಲಿ ಕ್ಯಾಲೋರಿಗಳು ಸುಮಾರು 45 ಕೆ.ಕೆ.ಎಲ್, ಕಾರ್ಬೋಹೈಡ್ರೇಟ್ ಗಳು ಸುಮಾರು 9 ಗ್ರಾಂ, ಸಕ್ಕರೆಗಳು ಪ್ರಾಥಮಿಕವಾಗಿ ಗ್ಲೂಕೋಸ್, ಫ್ರಕ್ಟೋಸ್ ಮತ್ತು ಸುಕ್ರೋಸ್ ಪ್ರೋಟೀನ್ 1 ಗ್ರಾಂಗಿಂತ ಕಡಿಮೆ, ಕೊಬ್ಬು ಅತ್ಯಲ್ಪ, ಸಾಮಾನ್ಯವಾಗಿ 1 ಗ್ರಾಂಗಿಂತ ಕಡಿಮೆ ಸೋಡಿಯಂ ಸುಮಾರು 45 ಮಿಗ್ರಾಂ, ಪೊಟ್ಯಾಸಿಯಮ್ ಸರಿಸುಮಾರು 600 ಮಿಗ್ರಾಂ ಅನ್ನು ಒಳಗೊಂಡಿದೆ. ಸೂಕ್ಷ್ಮ ಪೋಷಕಾಂಶಗಳು, ಸಣ್ಣ ಪ್ರಮಾಣದ ಕ್ಯಾಲ್ಸಿಯಂ, ಮೆಗ್ನೀಸಿಯಮ್, ರಂಜಕ ಮತ್ತು ವಿಟಮಿನ್ ಸಿ ಅನ್ನು ಎಳನೀರು ಹೊಂದಿರುತ್ತದೆ.

ಎಳನೀರಿನಿಂದ ಆರೋಗ್ಯ ಪ್ರಯೋಜನಗಳು ಹಲವು. ಎಳನೀರು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ:

ಹೈಡ್ರೇಶನ್ ಮಾಡುತ್ತದೆ:

ಎಳನೀರು ದೇಹದಲ್ಲಿ ನೀರಿನ ಅಂಶ ಇರುವಂತೆ ಮಾಡುತ್ತದೆ. ಇದು ವ್ಯಾಯಾಮದ ನಂತರ ಅಥವಾ ಬಿಸಿ ವಾತಾವರಣದಲ್ಲಿ ನಿರ್ಜಲೀಕರಣ ದೂರ ಮಾಡುತ್ತದೆ.

ದೇಹಕ್ಕೆ ಚೈತನ್ಯ

ಎಳನೀರಿನಲ್ಲಿರುವ ಪೊಟ್ಯಾಸಿಯಮ್ ಅಂಶವು ಬೆವರಿನ ಮೂಲಕ ಕಳೆದುಹೋದ ಚೈತನ್ಯವನ್ನು ಪುನಃ ತುಂಬಲು ಸಹಾಯ ಮಾಡುತ್ತದೆ. ಸ್ನಾಯುಗಳಿಗೆ ಶಕ್ತಿ ತುಂಬುತ್ತದೆ ಮತ್ತು ಸೆಳೆತವನ್ನು ತಡೆಯುತ್ತದೆ.

ರಕ್ತದೊತ್ತಡ ನಿಯಂತ್ರಣ

ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಪೊಟ್ಯಾಸಿಯಮ್ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಅಧಿಕ ರಕ್ತದೊತ್ತಡದ ಅಪಾಯವನ್ನು ಸಂಭಾವ್ಯವಾಗಿ ಕಡಿಮೆ ಮಾಡುತ್ತದೆ.

ಹೃದಯದ ಆರೋಗ್ಯ

ಕೆಲವು ಅಧ್ಯಯನಗಳು ತೆಂಗಿನ ನೀರಿನಲ್ಲಿರುವ ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸುವ ಮೂಲಕ ಮತ್ತು ರಕ್ತ ಹೆಪ್ಪುಗಟ್ಟುವಿಕೆಯ ರಚನೆಯನ್ನು ಕಡಿಮೆ ಮಾಡುವ ಮೂಲಕ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ರೋಗ ನಿರೋಧಕ ಗುಣಲಕ್ಷಣಗಳು

ತೆಂಗಿನ ನೀರಿನಲ್ಲಿ ವಿಟಮಿನ್ ಸಿ ನಂತಹ ಉತ್ಕರ್ಷಣ ನಿರೋಧಕಗಳಿವೆ. ಇದು ಸ್ವತಂತ್ರ ರಾಡಿಕಲ್ ಗಳನ್ನು ತಟಸ್ಥಗೊಳಿಸಲು ಮತ್ತು ದೇಹದಲ್ಲಿನ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಮಧುಮೇಹಿಗಳು ಎಳನೀರು ಸೇವಿಸಬಹುದೇ?

ಅನೇಕ ಹಣ್ಣಿನ ರಸಗಳಿಗೆ ಹೋಲಿಸಿದರೆ ತೆಂಗಿನ ನೀರಿನಲ್ಲಿ ಸಕ್ಕರೆಯ ಅಂಶ ಗಮನಾರ್ಹವಾಗಿ ಕಡಿಮೆಯಿದ್ದರೂ ಇದು ಇನ್ನೂ ನೈಸರ್ಗಿಕ ಸಕ್ಕರೆಗಳನ್ನು ಹೊಂದಿರುತ್ತದೆ. ಅದು ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಆದಾಗ್ಯೂ, ಅದರ ಗ್ಲೈಸೆಮಿಕ್ ಇಂಡೆಕ್ಸ್ (GI) ಹೆಚ್ಚಿನ ಹಣ್ಣಿನ ರಸಗಳು ಮತ್ತು ಸೋಡಾಗಳಿಗಿಂತ ಕಡಿಮೆಯಾಗಿದೆ. ಅಂದರೆ ಇದು ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ನಿಧಾನಗತಿಯ ಏರಿಕೆಗೆ ಕಾರಣವಾಗುತ್ತದೆ. ಎಳನೀರು ಸೇವಿಸುವ ಮಧುಮೇಹಿಗಳು ತಮ್ಮ ಸೇವನೆಯನ್ನು ಪ್ರಮಾಣದಲ್ಲಿ ಎಚ್ಚರಿಕೆ ವಹಿಸಬೇಕು.


ಗರ್ಭಿಣಿಯರಿಗೆ ಇದು ಪ್ರಯೋಜನಕಾರಿಯೇ?

ತೆಂಗಿನ ನೀರು ಅದರ ನಮ್ಮನ್ನು ಹೈಡ್ರೇಟ್ ಮಾಡುವುದರಿಂದ ಮತ್ತು ಇದು ಅನೇಕ ಪೌಷ್ಟಿಕಾಂಶಗಳನ್ನು ಹೊಂದಿರುವುದರಿಂದ ಗರ್ಭಿಣಿಯರಿಗೆ ಪ್ರಯೋಜನಕಾರಿಯಾಗಿದೆ.

ಗರ್ಭಾವಸ್ಥೆಯಲ್ಲಿ, ಹೈಡ್ರೀಕರಿಸಿದ ಸ್ಥಿತಿಯಲ್ಲಿರುವುದು ತಾಯಿಯ ಆರೋಗ್ಯ ಮತ್ತು ಮಗುವಿನ ಬೆಳವಣಿಗೆ ಎರಡಕ್ಕೂ ಮುಖ್ಯವಾಗಿದೆ. ತೆಂಗಿನ ನೀರಿನಲ್ಲಿರುವ ಎಲೆಕ್ಟ್ರೋಲೈಟ್‌ಗಳು ನಿರ್ಜಲೀಕರಣವನ್ನು ತಡೆಗಟ್ಟಲು ಮತ್ತು ವಾಕರಿಕೆ ಮತ್ತು ಮಲಬದ್ಧತೆಯಂತಹ ಸಾಮಾನ್ಯ ಗರ್ಭಧಾರಣೆಯ ಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ ಅದರ ನೈಸರ್ಗಿಕ ಮಾಧುರ್ಯವು ಸಕ್ಕರೆ ಪಾನೀಯಗಳ ಕಡುಬಯಕೆಗಳನ್ನು ಪೂರೈಸುತ್ತದೆ, ಆರೋಗ್ಯಕರ ಪ್ರಯೋಜನವನ್ನು ಒದಗಿಸುತ್ತದೆ.

ಇದನ್ನೂ ಓದಿ: Healthy Diet: ಬೆಣ್ಣೆ ಆರೋಗ್ಯಕ್ಕೆ ಒಳ್ಳೆಯದೇ ಕೆಟ್ಟದ್ದೇ? ಈ ಸಂಗತಿ ತಿಳಿದುಕೊಂಡಿರಿ

ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯಗಳು

ಅಲರ್ಜಿಗಳು

ತೆಂಗಿನಕಾಯಿಂದಾಗುವ ಅಲರ್ಜಿಗಳು ವಿರಳವಾಗಿದ್ದರೂ, ಅಲರ್ಜಿಯನ್ನು ಹೊಂದಿರುವ ವ್ಯಕ್ತಿಗಳು ಎಚ್ಚರ ವಹಿಸಬೇಕು. ತೆಂಗಿನ ಉತ್ಪನ್ನಗಳನ್ನು ಸೇವಿಸುವ ಮೊದಲು ಇದರ ಬಗ್ಗೆ ಗಮನ ಹರಿಸಬೇಕು. ಬಹುತೇಕ ಜನರಿಗೆ ಎಳನೀರು ಸೇವನೆಯಿಂದ ಯಾವುದೇ ಅಲರ್ಜಿ ಆಗುವುದಿಲ್ಲ.

ಸಕ್ಕರೆ ಅಂಶ

ತೆಂಗಿನ ನೀರು ನೈಸರ್ಗಿಕ ಸಕ್ಕರೆಗಳನ್ನು ಹೊಂದಿದ್ದರೂ ಇದು ಪ್ಯಾಕೆಟ್ ಜ್ಯೂಸ್ ಗಳಿಗಿಂತ ಕಡಿಮೆ ಸಕ್ಕರೆ ಅಂಶವನ್ನು ಹೊಂದಿದೆ. ಆದಾಗ್ಯೂ, ಮಧುಮೇಹಿಗಳು ಈ ಬಗ್ಗೆ ಎಚ್ಚರಿಕೆ ವಹಿಸಿದರೆ ಒಳ್ಳೆಯದು.

ಅತಿಯಾದ ಬಳಕೆ

ಅಧಿಕ ಪ್ರಮಾಣದಲ್ಲಿ ತೆಂಗಿನ ನೀರನ್ನು ಕುಡಿಯುವುದರಿಂದ ಹೆಚ್ಚು ಪೊಟ್ಯಾಸಿಯಮ್ ಸಂಗ್ರಹವಾಗುತ್ತದೆ. ಇದು ಹೈಪರ್‌ಕೆಲೆಮಿಯಾಕ್ಕೆ ಕಾರಣವಾಗಬಹುದು. ಹೈಪರ್‌ಕಲೇಮಿಯಾದ ಲಕ್ಷಣಗಳು ಸ್ನಾಯು ದೌರ್ಬಲ್ಯ, ಅನಿಯಮಿತ ಹೃದಯ ಬಡಿತ ಮತ್ತು ತೀವ್ರತರವಾದ ಪ್ರಕರಣಗಳಲ್ಲಿ ಹೃದಯ ಸ್ತಂಭನಕ್ಕೆ ಕಾರಣವಾಗಿರುವುದರಿಂದ ಮಿತವಾಗಿ ಸೇವಿಸುವುದು ಒಳ್ಳೆಯದು.

Continue Reading

ದೇಶ

Covaxin Safety: ಕೊವ್ಯಾಕ್ಸಿನ್‌ನಿಂದ ಅಡ್ಡ ಪರಿಣಾಮ ಎಂದು ಬನಾರಸ್‌ ವಿವಿ ವರದಿ; ವೈದ್ಯ ಸಂಶೋಧನಾ ಸಂಸ್ಥೆ ಆಕ್ಷೇಪ

Covaxin Safety: ಬಿಎಚ್‌ಯು ಸಂಶೋಧನೆ ಮಾಡುವ ಮುನ್ನ ಸರಿಯಾದ ವೈಜ್ಞಾನಿಕ ಕ್ರಮಗಳನ್ನು ಅನುಸರಿಸಿಲ್ಲ. ಸಂಶೋಧನೆಗೆ ಬಳಸಿರುವ ಜನಸಂಖ್ಯೆ ಪ್ರಮಾಣಕ್ಕೂ, ಸ್ಟಡಿ ವರದಿಗೂ ತುಂಬ ವ್ಯತ್ಯಾಸವಿದೆ. ಅಡ್ಡ ಪರಿಣಾಮ ಉಂಟಾಗಿದೆ ಎಂಬುದಾಗಿ ಹೇಳಿದವರನ್ನು ವರದಿ ತಯಾರಿಸಲು ಟೆಲಿಫೋನ್‌ ಮೂಲಕ ಸಂಪರ್ಕಿಸಲಾಗಿದೆಯೇ ಹೊರತು, ಅವರ ಅಭಿಪ್ರಾಯವನ್ನು ನೇರವಾಗಿ ಪಡೆದುಕೊಂಡಿಲ್ಲ ಎಂದು ಐಸಿಎಂಆರ್‌ ಅಸಮಾಧಾನ ವ್ಯಕ್ತಪಡಿಸಿದೆ.

VISTARANEWS.COM


on

Covaxin Safety
Koo

ನವದೆಹಲಿ: ಬ್ರಿಟನ್‌ನಲ್ಲಿ ಅಸ್ಟ್ರಾಜೆನಿನಾ ಕೊರೊನಾ ನಿರೋಧಕ ಕೋವಿಶೀಲ್ಡ್‌ ಲಸಿಕೆ ಪಡೆದವರಿಗೆ ಅಡ್ಡ ಪರಿಣಾಮ ಉಂಟಾಗಿದೆ ಎಂಬುದಾಗಿ ಸ್ವತಃ ಕಂಪನಿಯೇ ಒಪ್ಪಿಕೊಂಡ ಬಳಿಕ ಭಾರತದಲ್ಲೂ ಕೊರೊನಾ ನಿರೋಧಕ ಲಸಿಕೆಯ ಸುರಕ್ಷತೆಗೆ ಬಗ್ಗೆ ಚರ್ಚೆಯಾಗುತ್ತಿದೆ. ಅದರಲ್ಲೂ, ದೇಶೀಯವಾಗಿ ಭಾರತ್‌ ಬಯೋಟೆಕ್‌ (Bharat Biotech) ಅಭಿವೃದ್ಧಿಪಡಿಸಿದ ಕೊವ್ಯಾಕ್ಸಿನ್‌ ಅಡ್ಡಪರಿಣಾಮಗಳ ಕುರಿತು ಬನಾರಸ್‌ ಹಿಂದು ವಿವಿ (BHU) ವರದಿ ಬಿಡುಗಡೆ ಮಾಡಿದೆ. ಕೊವ್ಯಾಕ್ಸಿನ್‌ ಪಡೆದ ಮೂವರಲ್ಲಿ ಒಬ್ಬರಿಗೆ ಅಡ್ಡ ಪರಿಣಾಮ ಉಂಟಾಗಿದೆ ಎಂಬುದಾಗಿ ಬಿಎಚ್‌ಯು ಪ್ರಕಟಿಸಿದ ವರದಿಗೆ ಈಗ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ICMR) ಆಕ್ರೋಶ ವ್ಯಕ್ತಪಡಿಸಿದೆ.

ಐಸಿಎಂಆರ್‌ ಮಹಾ ನಿರ್ದೇಶಕ ರಾಜೀವ್‌ ಬಾಹ್ಲ್‌ ಅವರು ಬಿಎಚ್‌ಯು ಅಧ್ಯಯನ ವರದಿಯನ್ನು ನಿರಾಕರಿಸಿದ್ದಾರೆ. “ಬಿಎಚ್‌ಯು ಸಂಶೋಧನೆ ಮಾಡುವ ಮುನ್ನ ಸರಿಯಾದ ವೈಜ್ಞಾನಿಕ ಕ್ರಮಗಳನ್ನು ಅನುಸರಿಸಿಲ್ಲ. ಸಂಶೋಧನೆಗೆ ಬಳಸಿರುವ ಜನಸಂಖ್ಯೆ ಪ್ರಮಾಣಕ್ಕೂ, ಸ್ಟಡಿ ವರದಿಗೂ ತುಂಬ ವ್ಯತ್ಯಾಸವಿದೆ. ಅಡ್ಡ ಪರಿಣಾಮ ಉಂಟಾಗಿದೆ ಎಂಬುದಾಗಿ ಹೇಳಿದವರನ್ನು ವರದಿ ತಯಾರಿಸಲು ಟೆಲಿಫೋನ್‌ ಮೂಲಕ ಸಂಪರ್ಕಿಸಲಾಗಿದೆಯೇ ಹೊರತು, ಅವರ ಅಭಿಪ್ರಾಯವನ್ನು ನೇರವಾಗಿ ಪಡೆದುಕೊಂಡಿಲ್ಲ. ಸಂಶೋಧನೆಗೆ ಬಳಸಿರುವ ಅಂಕಿ-ಅಂಶಗಳನ್ನು ಸರಿಯಾಗಿ ಅವಲೋಕನ ಮಾಡಿಲ್ಲ” ಎಂಬುದಾಗಿ ರಾಜೀವ್‌ ಬಾಹ್ಲ್‌ ಹೇಳಿದ್ದಾರೆ.

“ಲಸಿಕೆಯ ಅಡ್ಡ ಪರಿಣಾಮ, ಲಸಿಕೆಯ ಸುರಕ್ಷತೆ ಬಗ್ಗೆ ಅಧ್ಯಯನ ಮಾಡಲು ತುಂಬ ಮಾನದಂಡಗಳನ್ನು ಅನುಸರಿಸಬೇಕಾಗುತ್ತದೆ. ಬಿಎಚ್‌ಯು ಇಂತಹ ಮಾನದಂಡಗಳನ್ನು ಅನುಸರಿಸುವುದು ಬಿಡಿ, ಅಧ್ಯಯನ ಮಾಡುವ ತಜ್ಞರಿಗೆ ತಾಂತ್ರಿಕ ಹಾಗೂ ಹಣಕಾಸು ನೆರವು ಕೂಡ ಒದಗಿಸಿಲ್ಲ. ಹಾಗಾಗಿ, ಲಸಿಕೆಯ ಸುರಕ್ಷತೆಯ ಬಗ್ಗೆ ಬನಾರಸ್‌ ಹಿಂದು ವಿವಿ ಮಾಡಿದ ಸಂಶೋಧನಾ ವರದಿಯು ವೈಜ್ಞಾನಿಕತೆಯ ಆಧಾರದ ಮೇಲಿಲ್ಲ” ಎಂದು ಹೇಳಿದ್ದಾರೆ.

ಕೊವ್ಯಾಕ್ಸಿನ್‌ ಲಸಿಕೆ ಪಡೆದ ಸುಮಾರು 926 ಜನರನ್ನು ಸಂಪರ್ಕಿಸಿ ಲಸಿಕೆಯ ಸುರಕ್ಷತೆ, ಅಡ್ಡ ಪರಿಣಾಮಗಳ ಕುರಿತು ಅಧ್ಯಯನ ವರದಿ ತಯಾರಿಸಿದೆ. ಲಸಿಕೆ ಪಡೆದ ಮೂವರಲ್ಲಿ ಒಬ್ಬರಿಗೆ ಅಡ್ಡ ಪರಿಣಾಮ ಉಂಟಾಗಿದೆ. ಲಸಿಕೆ ಪಡೆದವರಿಗೆ ಪಾರ್ಶ್ವವಾಯು, ನರಗಳಿಗೆ ಸಂಬಂಧಿಸಿದ ಕಾಯಿಲೆ, ಕೆಮ್ಮು, ಮೂಗು ಸೋರುವಿಕೆ, ಗಂಟಲು ಕೆರೆತ, ಉಸಿರಾಟ ಸಮಸ್ಯೆ ಸೇರಿ ಹಲವು ಅಡ್ಡ ಪರಿಣಾಮಗಳು ಕಾಣಿಸಿಕೊಂಡಿವೆ” ಎಂಬುದಾಗಿ ವರದಿ ತಿಳಿಸಿತ್ತು.

ಭಾರತ್‌ ಬಯೋಟೆಕ್‌ ಹೇಳುವುದೇನು?

“ಸುರಕ್ಷತೆ ಹಾಗೂ ದಕ್ಷತೆಯೇ ಮೊದಲು ಎಂಬ ದೃಷ್ಟಿಕೋನದಿಂದ ಹಲವು ಮಾನದಂಡಗಳನ್ನು ಇಟ್ಟುಕೊಂಡು ಲಸಿಕೆಯನ್ನು ಉತ್ಪಾದಿಸಲಾಗಿದೆ. ಭಾರತದಲ್ಲಿ ಕೇಂದ್ರ ಸರ್ಕಾರದ ಲಸಿಕಾಕರಣ ಯೋಜನೆಯ ವೇಳೆ ಅತಿ ಹೆಚ್ಚು ಪ್ರಯೋಗಕ್ಕೀಡಾದ ಲಸಿಕೆ ಎಂದರೆ ಅದು ಕೊವ್ಯಾಕ್ಸಿನ್‌ ಮಾತ್ರ. ಪರವಾನಗಿ ಪ್ರಕ್ರಿಯೆಯ ವೇಳೆ ಸುಮಾರು 27 ಸಾವಿರ ಅಂಶಗಳ ಕುರಿತು ಅಧ್ಯಯನ, ಪರಿಶೀಲನೆ ನಡೆಸಲಾಗಿದೆ. ವೈದ್ಯಕೀಯ ಪ್ರಯೋಗಕ್ಕೂ ಲಸಿಕೆಯನ್ನು ಒಳಪಡಿಸಲಾಗಿದೆ. ಹಾಗಾಗಿ, ಲಸಿಕೆಯು ಸಂಪೂರ್ಣವಾಗಿ ಸುರಕ್ಷಿತವಾಗಿದೆ” ಎಂಬುದಾಗಿ ಭಾರತ್‌ ಬಯೋಟೆಕ್‌ ಕಂಪನಿ ತಿಳಿಸಿದೆ.

ಇದನ್ನೂ ಓದಿ: Covaxin: ಕೊವ್ಯಾಕ್ಸಿನ್‌ ಸುರಕ್ಷಿತ ಲಸಿಕೆ ಎಂದ ಭಾರತ್‌ ಬಯೋಟೆಕ್;‌ ಸೈಡ್‌ ಎಫೆಕ್ಟ್‌ ಆರೋಪದ ಬೆನ್ನಲ್ಲೇ ಸ್ಪಷ್ಟನೆ!

Continue Reading

ಆರೋಗ್ಯ

Hair Conditioner: ರಾಸಾಯನಿಕ ಹೇರ್‌ ಕಂಡೀಷನರ್‌ ಬಿಡಿ; ಈ 5 ನೈಸರ್ಗಿಕ ಹೇರ್ ಕಂಡೀಷನರ್ ಬಳಸಿ

ನುಣುಪಾಗಿ ನಯವಾಗಿ ಹೊಳಪಾಗಿದ್ದ ಕೂದಲು ನಿಸ್ತೇಜವಾಗಿ ಬಾಡುತ್ತದೆ. ಮಾರುಕಟ್ಟೆಯ ಜಾಹೀರಾತುಗಳನ್ನು ನೋಡಿ, ಏನಾದರೊಂದು ಹೊಸ ಶಾಂಪೂ, ಕಂಡೀಶನರ್‌ ಪ್ರಯತ್ನಿಸುವ ಮಂದಿ ನೈಸರ್ಗಿಕವಾದ ಕಂಡೀಶನರ್‌ಗಳ ಮೊರೆ ಹೋದರೆ ಖಂಡಿತವಾಗಿಯೂ ಉತ್ತಮ ಪ್ರಯೋಜನ ಪಡೆಯಬಲ್ಲರು. ಮಾರುಕಟ್ಟೆಯ ಕಂಡೀಶನರ್‌ಗೆ ಸೆಡ್ಡು ಹೊಡೆಯುವಂಥ ನೈಸರ್ಗಿಕ ಕಂಡೀಷನರ್‌ಗಳ (Hair conditioner) ಬಗ್ಗೆ ಇಲ್ಲಿದೆ ಮಾಹಿತಿ.

VISTARANEWS.COM


on

Hair Conditioner
Koo

ಕೂದಲ ಪೋಷಣೆ ಎಷ್ಟು ಮಾಡಿದರೂ ಸಾಲದು. ಬಿಡದೆ ಕಾಡುವ ಕೂದಲ ಸಮಸ್ಯೆ ಒಂದೆರಡಲ್ಲ. ಒಂದೋ ತಲೆಹೊಟ್ಟು, ಸೀಳುತುದಿಗಳು, ಒಣಕಲಾಗುದು, ಉದುರುವುದು ಇತ್ಯಾದಿ ಇತ್ಯಾದಿ ಸಮಸ್ಯೆಗಳು ಕಾಡುತ್ತಲೇ ಇರುತ್ತವೆ. ಈಗ ಬೇಸಿಗೆಯಲ್ಲಂತೂ ತಿರುಗಾಡಿ ಮನೆಗೆ ಬಂದಾಗ ಕೂದಲು ಒಣಕಲಾಗಿ ಹಾರಾಡುತ್ತಾ, ಬಾಚಿಕೊಳ್ಳಲು ಕಷ್ಟವಾಗುತ್ತದೆ. ನುಣುಪಾಗಿ ನಯವಾಗಿ ಹೊಳಪಾಗಿದ್ದ ಕೂದಲು ನಿಸ್ತೇಜವಾಗಿ ಬಾಡುತ್ತದೆ. ಮಾರುಕಟ್ಟೆಯ ಜಾಹಿರಾತುಗಳನ್ನು ನೋಡಿ, ಏನಾದರೊಂದು ಹೊಸ ಶಾಂಪೂ, ಕಂಡೀಶನರ್‌ ಪ್ರಯತ್ನಿಸುವ ಮಂದಿ ನೈಸರ್ಗಿಕವಾದ ಕಂಡೀಶನರ್‌ಗಳ ಮೊರೆ ಹೋದರೆ ಖಂಡಿತವಾಗಿಯೂ ಉತ್ತಮ ಪ್ರಯೋಜನ ಪಡೆಯಬಲ್ಲರು. ಮಾರುಕಟ್ಟೆಯ ಕಂಡೀಶನರ್‌ಗೆ ಸೆಡ್ಡು ಹೊಡೆಯುವಂಥ ನೈಸರ್ಗಿಕ ಕಂಡೀಷನರ್‌ಗಳೇ ಇರುವಾಗ ರಾಸಾಯನಿಕ ಸಹಾಯ ಯಾಕೆ ಬೇಕು ಹೇಳಿ? ಬನ್ನಿ, ನೈಸರ್ಗಿಕ ಹೇರ್‌ ಕಂಡೀಷನರ್‌ಗಳಾಗಿ (Hair conditioner) ಯಾವುದನ್ನು ಬಳಸಬಹುದು ಎಂಬುದನ್ನು ನೋಡೋಣ.

Egg conditioner

ಮೊಟ್ಟೆಯ ಕಂಡೀಷನರ್‌

ಇದು ಕೂದಲ ಪೋಷಣೆಗೆ ಹೇಳಿ ಮಾಡಿಸಿದಂತಹ ಕಂಡೀಷನರ್‌. ಒಂದೇ ಬಳಕೆಯಲ್ಲಿ ನಿಮ್ಮ ಕೂದಲಲ್ಲಿ ಗಣನೀಯ ಬದಲಾವಣೆಯನ್ನು ನೀವು ಕಾಣುತ್ತೀರಿ. ಕೂದಲ ಮೇಳೆ ಅಡ್ಡ ಪರಿಣಾಮಗಳಾಗಬಹುದು ಎಂಬ ಭಯವೂ ಇಲ್ಲ. ಮೊಟ್ಟೆಯ ಬಿಳಿ ಲೋಳೆ, ಆಲಿವ್‌ ಎಣ್ಣೆ, ಜೇನುತುಪ್ಪ ಹಾಗೂ ವಿನೆಗರ್‌ ಇವನ್ನೆಲ್ಲ ಸೇರಿಸಿ ಚೆನ್ನಾಗಿ ಕಲಕಿಕೊಂಡು ಪೇಸ್ಟ್‌ನಂತೆ ತಲೆಗೆ ಕೂದಲ ಬುಡದಿಂದ ತುದಿಯವರೆಗೆ ಹಚ್ಚಿಕೊಳ್ಳಿ. ಹದಿನೈದರಿಂದ ಇಪ್ಪತ್ತು ನಿಮಿಷಗಳ ಕಾಲ ಇದನ್ನು ಹಾಗೆಯೇ ತಲೆಯಲ್ಲಿರಲು ಬಿಟ್ಟು ನಂತರ ಮೆದುವಾದ ಶಾಂಪೂವಿನಿಂದ ತೊಳೆಯಿರಿ. ಯಾವ ಕಂಡೀಷನರ್‌ ಅಗತ್ಯವೂ ಇಲ್ಲದೆ ನಿಮ್ಮ ಕೂದಲು ಕಂಡೀಷನರ್‌ ಬಳಸಿದಂತೆ ಪಳಪಳಿಸುತ್ತದೆ.

Banana conditioner

ಬಾಳೆಹಣ್ಣಿನ ಕಂಡೀಷನರ್

ಒಂದು ಚೆನ್ನಾಗಿ ಹಣ್ಣಾದ ಬಾಳೆಹಣ್ಣನ್ನು ತೆಗೆದುಕೊಂಡು ಒಂದು ಚಮಚ ಜೇನುತುಪ್ಪ, ಆಲಿವ್‌ ಎಣ್ಣೆ ಇವಿಷ್ಟನ್ನೂ ತೆಗೆದುಕೊಂಡು ಪೇಸ್ಟ್‌ ಮಾಡಿ ತಲೆಗೆ ಹಚ್ಚಿ. ಅರ್ಧ ಗಂಟೆ ಬಿಟ್ಟು ತಲೆಗೆ ಸ್ನಾನ ಮಾಡುವುದರಿಂದ ಕೂದಲು ನಯವಾಗಿ ಹೊಳೆಯುತ್ತದೆ.‌ ಈ ಪೇಸ್ಟ್‌ ಜೊತೆಗೆ ಏಕಿದ್ದರೆ ಮೊಟ್ಟೆಯ ಬಿಳಿ ಲೋಳೆಯನ್ನೂ ಸೇರಿಸಬಹುದು.

ತೆಂಗಿನೆಣ್ಣೆ ಕಂಡೀಷನರ್

ತೆಂಗಿನ ಎಣ್ಣೆಗೆ ಒಂದು ಚಮಚ ಜೇನುತುಪ್ಪ, ನಿಂಬೆಹಣ್ಣಿನ ರಸ, ಮೊಸರು ಹಾಗೂ ರೋಸ್‌ ವಾಟರ್‌ ಸೇರಿಸಿ. ಇವನ್ನು ಚೆನ್ನಾಗಿ ಮಿಕ್ಸ್‌ ಮಾಡಿ ತಲೆಗೆ ಹಚ್ಚಿ ಮಸಾಜ್‌ ಮಾಡಿಕೊಳ್ಳಿ. ನಂತರ ಅರ್ಧ ಗಂಟೆ ಬಿಟ್ಟು ಸ್ನಾನ ಮಾಡಿ. ಕೂದಲು ಆರೋಗ್ಯಯುತವಾಗಿ ಕಂಗೊಳಿಸುತ್ತದೆ.

ಇದನ್ನೂ ಓದಿ: Health Tips in Kannada: ಕುತ್ತಿಗೆ ನೋವಿನಿಂದ ಬಳಲುತ್ತಿದ್ದೀರಾ? ಈ ಸಂಗತಿ ತಿಳಿದುಕೊಂಡಿರಿ

ಅಗಸೆಬೀಜದ ಕಂಡೀಷನರ್

ಎರಡು ಚಮಚ ಅಗಸೆ ಬೀಜವನ್ನು ನೀರಿಗೆ ಹಾಕಿ ಸ್ವಲ್ಪ ಹೊತ್ತು ಕುದಿಸಿ. ಅದು ಕುದಿರುವ ಸಂದರ್ಭ ಜೆಲ್‌ನಂತಾಗುತ್ತದೆ. ಸ್ವಲ್ಪ ಆರಿದ ಮೇಲೆ ಅದನ್ನು ಸೋಸಿಕೊಂಡು ಅದರಿಂದ ದೊರೆತ ಜೆಲ್‌ಗೆ, ಆಲೊವೆರಾ ಜೆಲ್‌ ಹಾಗೂ ತೆಂಗಿನೆಣ್ಣೆ ಸ್ವಲ್ಪ ಸೇರಿಸಿ. ಈ ಮೂರನ್ನೂ ಚೆನ್ನಾಗಿ ಮಿಕ್ಸ್‌ ಮಾಡಿ, ಕೂದಲ ಬುಡದಿಂದ ತುದಿಯವರೆಗೂ ಹಚ್ಚಿ. ಅರ್ಧ ಗಂಟೆ ಬಿಟ್ಟು ತೊಳೆದರೆ, ಯಾವ ಕಂಡೀಷನರ್‌ ಕೂಡಾ ಅಗತ್ಯವೇ ಇಲ್ಲ. ನಿಸ್ತೇಜವಾಗಿದ್ದ ಕೂದಲು ಒಂದೇ ಸಲಕ್ಕೆ ಪಳಪಳಿಸುವ ಹೊಳಪನ್ನು ಪಡೆಯುತ್ತದೆ.

Tips To Prevent Curd

ಮೊಸರಿನ ಕಂಡೀಷನರ್

ಒಂದು ಬೌಲ್‌ನಲ್ಲಿ ಗಟ್ಟಿ ಮೊಸರು ತೆಗೆದುಕೊಂಡು ಅದಕ್ಕೆ, ಮೊಟ್ಟೆಯ ಬಿಳಿ ಲೋಳೆಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್‌ ಮಾಡಿ. ಈ ಮಿಶ್ರಣವನ್ನು ತಲೆ ಕೂದಲಿಂದ ಬುಡದವರೆಗೆ ಹಚ್ಚಿ ಅರ್ಧ ಗಂಟೆಯ ಬಳಿಕ ಕೂದಲು ತೊಳೆಯಿರಿ. ಯಾವ ಕಂಡೀಷನರ್‌ ಹಾಕುವ ಅಗತ್ಯವೇ ಇಲ್ಲ. ಕೂದಲು ಸೊಂಪಾಗಿ ಬೆಳೆಯುತ್ತದೆ. ಹೊಟ್ಟಿನ ಸಮಸ್ಯೆಯಿದ್ದರೂ ಮಂಗಮಾಯ. ರಾಸಾಯನಿಕಯುಕ್ತ ಕಂಡೀಷನರ್‌ ಬಳಸುವ ಬದಲು, ವಾರಕ್ಕೊಮ್ಮೆಯಾದರೂ ಇಂತಹ ನೈಸರ್ಗಿಕ ಕಂಡೀಷನಿಂಗ್‌ ಮಾಡುವುದರಿಂದ ಕೂದಲನ್ನು ಯಾವ ಸಮಸ್ಯೆಯೂ ಬಾಧಿಸುವುದಿಲ್ಲ.

Continue Reading
Advertisement
2nd PUC Exam 2 Result tomorrow
ಶಿಕ್ಷಣ6 mins ago

2nd PUC Exam 2 Result: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-2ರ ಫಲಿತಾಂಶ ಇಂದು; ಸಿಇಟಿ ಫಲಿತಾಂಶ ಯಾವಾಗ?

Karnataka Weather Forecast
ಮಳೆ34 mins ago

Karnataka Weather : ಗರಿಷ್ಠ ತಾಪಮಾನ ಇಳಿಕೆ; ಗುಡುಗು ಸಹಿತ ಭಾರಿ ಮಳೆ ಎಚ್ಚರಿಕೆ

Tea Tips
ಆರೋಗ್ಯ34 mins ago

Tea Tips: ಹಾಲಿನ ಚಹಾ ಬದಲು ಬ್ಲ್ಯಾಕ್‌ ಟೀ ಕುಡಿಯಿರಿ!

Sambita Patra
ದೇಶ1 hour ago

Sambit Patra: ಭಗವಾನ್‌ ಜಗನ್ನಾಥನೇ ಮೋದಿಯ ಭಕ್ತ ಎಂದ ಬಿಜೆಪಿ ನಾಯಕ; ಭುಗಿಲೆದ್ದ ವಿವಾದ

Anti Terrorism Day
ದೇಶ2 hours ago

Anti Terrorism Day: ಇಂದು ಭಯೋತ್ಪಾದನಾ ವಿರೋಧಿ ದಿನ; ಏನು ಈ ದಿನದ ಹಿನ್ನೆಲೆ?

Dina Bhavishya
ಭವಿಷ್ಯ2 hours ago

Dina Bhavishya : ಹೂಡಿಕೆ ವ್ಯವಹಾರದಲ್ಲಿ ಹೆಚ್ಚು ಲಾಭ; ಈ ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟ

Prajwal Revanna Case
ಕರ್ನಾಟಕ7 hours ago

Prajwal Revanna Case: ಪ್ರಜ್ವಲ್ ರೇವಣ್ಣ ಪಾಸ್‌ ಪೋರ್ಟ್ ರದ್ದು ಮಾಡಲು ವಿದೇಶಾಂಗ ಇಲಾಖೆಗೆ ಎಸ್‌ಐಟಿ ಪತ್ರ

Mobile
ದೇಶ7 hours ago

ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೊ ನೋಡಿ 15 ವರ್ಷದ ಅಕ್ಕನನ್ನೇ ಗರ್ಭಿಣಿ ಮಾಡಿದ 13 ವರ್ಷದ ಬಾಲಕ!

Army Officer
Lok Sabha Election 20247 hours ago

101ನೇ ವಯಸ್ಸಿನಲ್ಲೂ ‘ಕರ್ತವ್ಯ’ ಮರೆಯದೆ ವೋಟ್‌ ಮಾಡಿದ ನಿವೃತ್ತ ಯೋಧ; ಸೆಲ್ಯೂಟ್‌ ಎಂದರು ಜನ

Congress Guarantee
ಪ್ರಮುಖ ಸುದ್ದಿ8 hours ago

Congress Guarantee: ಗ್ಯಾರಂಟಿ ಯೋಜನೆಗಳಿಗೆ ಒಂದು ವರ್ಷಕ್ಕೆ ಸರ್ಕಾರ ಮಾಡಿದ ಖರ್ಚು ಎಷ್ಟು ಸಾವಿರ ಕೋಟಿ?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ17 hours ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ2 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ2 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ2 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ3 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ4 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ5 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು5 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

ಟ್ರೆಂಡಿಂಗ್‌