Mobile Battery Tips : ನಿಮ್ಮ ಮೊಬೈಲ್‌ ಬ್ಯಾಟರಿ ಹೆಚ್ಚು ಬಾಳಿಕೆ ಬರಬೇಕೆ? ಹೀಗೆ ಮಾಡಿ - Vistara News

ಲೈಫ್‌ಸ್ಟೈಲ್

Mobile Battery Tips : ನಿಮ್ಮ ಮೊಬೈಲ್‌ ಬ್ಯಾಟರಿ ಹೆಚ್ಚು ಬಾಳಿಕೆ ಬರಬೇಕೆ? ಹೀಗೆ ಮಾಡಿ

ನಿಮ್ಮ ಸ್ಮಾರ್ಟ್‌ಫೋನ್‌ ಬ್ಯಾಟರಿಯ ಆಯಸ್ಸನ್ನು ಹೆಚ್ಚಾಗಿಸಿಕೊಳ್ಳಬೇಕೆಂದರೆ ಏನು ಮಾಡಬೇಕು ಎನ್ನುವ ಬಗ್ಗೆ ಇಲ್ಲಿ ಕೆಲವು ಮಾಹಿತಿಗಳನ್ನು (Mobile Battery Tips) ಹಂಚಿಕೊಂಡಿದ್ದೇವೆ.

VISTARANEWS.COM


on

Mobile Charage
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಎಲ್ಲ ಬ್ಯಾಟರಿಗಳಿಗೂ ಒಂದು ಅಂತ್ಯವೆನ್ನುವುದು ಇದ್ದೇ ಇರುತ್ತದೆ. ಅದೇ ರೀತಿ ನಿಮ್ಮ ಫೋನ್‌ನೊಳಗಿರುವ ಬ್ಯಾಟರಿಗೆ ಕೂಡ. ಆದರೆ ಫೋನ್‌ನ ಬ್ಯಾಟರಿಗಳ ವ್ಯಾಲಿಡಿಟಿ ನಿರ್ಧಾರವಾಗುವುದು ನೀವು ಅವುಗಳನ್ನು ಹೇಗೆ ಬಳಸಿಕೊಳ್ಳುತ್ತೀರಿ ಎನ್ನುವುದರ ಮೇಲೆ. ಬ್ಯಾಟರಿ ಹಲವು ವರ್ಷಗಳ ಕಾಲ ಚೆನ್ನಾಗಿಯೇ ಇರಬೇಕು ಎನ್ನುವುದಾದರೆ ನೀವು ಅದರ ಬಗ್ಗೆ ಸ್ವಲ್ಪ ಕಾಳಜಿ ವಹಿಸಲೇಬೇಕಾಗುತ್ತದೆ. ಹೇಗೆ ನೀವು ನಿಮ್ಮ ಫೋನ್‌ ಬ್ಯಾಟರಿ ಬಗ್ಗೆ ಕಾಳಜಿ ವಹಿಸಬಹುದು (Mobile Battery Tips) ಎನ್ನುವುದಕ್ಕೆ ಇಲ್ಲಿದೆ ಮಾಹಿತಿ.

ಚಾರ್ಜರ್‌ ಯಾವುದು?

ಸಾಮಾನ್ಯವಾಗಿ ಎಲ್ಲರಿಗೂ ಒಂದು ಅಭ್ಯಾಸವಿರುತ್ತದೆ. ನಿಮ್ಮ ಫೋನ್‌ಗೆ ಸರಿಹೊಂದುವಂತಹ ಯಾವುದೇ ಚಾರ್ಜರ್‌ ಆದರೂ ಸರಿಯೇ, ಚಾರ್ಜ್‌ಗೆ ಹಾಕಿಬಿಡುತ್ತೀರಿ. ಆದರೆ ಇದರಿಂದ ನಿಮ್ಮ ಬ್ಯಾಟರಿ ಆದಷ್ಟು ಬೇಗ ಹಾಳಾಗಿಬಿಡಬಹುದು. ನಿಮ್ಮ ಫೋನ್‌ಗೆ ಬ್ಯಾಟರಿ ಚಾರ್ಜಿಂಗ್‌ ಕ್ಯಾಪಾಸಿಟಿ ಇರುತ್ತದೆ. ಅದು ಎಷ್ಟು ವೋಲ್ಟೇಜ್‌ ಇದೆಯೋ ಅಷ್ಟೇ ವೋಲ್ಟೇಜ್‌ನದ್ದು ಚಾರ್ಜರ್‌ ಅನ್ನು ಫೋನ್‌ನೊಂದಿಗೆ ಕೊಡಲಾಗಿರುತ್ತದೆ. ನೀವು ಅದನ್ನು ಬಿಟ್ಟು ಬೇರೆ ಚಾರ್ಜರ್‌ಗೆ ಹಾಕಿದಾಗ ಅದರಲ್ಲಿ ವೋಲ್ಟೇಜ್‌ ಹೆಚ್ಚು ಕಡಿಮೆಯಾಗುತ್ತದೆ. ಅದು ನಿಮ್ಮ ಬ್ಯಾಟರಿ ಸಾಮರ್ಥ್ಯವನ್ನು ಕುಗ್ಗಿಸುತ್ತದೆ.

ಇದನ್ನೂ ಓದಿ: ರಿಕವರಿಗೆ ತೆರಳಿದ್ದ ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ಕೇರಳದಲ್ಲಿ ಅರೆಸ್ಟ್‌!

ಅಗ್ಗದ ಚಾರ್ಜರ್‌


ನಿಮ್ಮ ಒರಿಜಿನಲ್‌ ಚಾರ್ಜರ್‌ ಕಳೆದುಹೋಯಿತು ಎನ್ನುವ ಕಾರಣಕ್ಕೆ ಮಾರುಕಟ್ಟೆಯಲ್ಲಿ ಕಡಿಮೆ ದರದಲ್ಲಿ ಯಾವುದು ಸಿಗುತ್ತದೆ ಎಂದು ಅಗ್ಗದ ಚಾರ್ಜರ್‌ ತಂದು ಚಾರ್ಜಿಂಗ್‌ ಹಾಕಬೇಡಿ. ಸ್ಥಳೀಯವಾಗಿ ಮಾಡುವ ಅಗ್ಗದ ಚಾರ್ಜರ್‌ಗಳು ನಿಮಗೆ ಸುರಕ್ಷತೆ ಬಗ್ಗೆ ಯಾವುದೇ ಗ್ಯಾರಂಟಿ ಕೊಡುವುದಿಲ್ಲ. ಇದರಿಂದಾಗಿ ನಿಮ್ಮ ಫೋನ್‌ ಹಾಳಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಫೋನ್‌ ಕವರ್‌ ಬೇಡ

ಫೋನ್‌ ಸುರಕ್ಷಿತವಾಗಿರಬೇಕೆಂದರೆ ಅದಕ್ಕೆ ಫೋನ್‌ ಕವರ್‌ ಹಾಕಬೇಕು. ಆದರೆ ಅದನ್ನು ಚಾರ್ಜ್‌ ಮಾಡುವ ಸಮಯದಲ್ಲಿ ಫೋನ್‌ ಕವರ್‌ ತೆಗೆಯುವುದು ಒಳಿತು. ಸಾಮಾನ್ಯವಾಗಿ ಚಾರ್ಜ್‌ ಆಗುವಾಗ ಬ್ಯಾಟರಿ ಬಿಸಿಯಾಗುತ್ತವೆ. ಆದರೆ ಅದಕ್ಕೆ ಫೋನ್‌ ಕವರ್‌ಗಳು ಅಡ್ಡಿಯುಂಟುಮಾಡಬಹುದು. ಹಾಗಾಗಿ ಕವರ್‌ ತೆಗೆದು ಫೋನ್‌ ಚಾರ್ಜ್‌ಗೆ ಹಾಕಿ ಅದನ್ನು ಯಾವುದಾದರೂ ಮೆತ್ತಗಿನ ಸ್ಥಳದಲ್ಲಿ ಉಲ್ಟಾ ಇಡುವುದು ಒಳಿತು.

ಫಾಸ್ಟ್‌ ಚಾರ್ಜರ್‌ ಏಕೆ?

ಫಾಸ್ಟ್‌ ಚಾರ್ಜ್‌ ಮಾಡಿಕೊಳ್ಳುವುದು ನಿಮಗೆ ಸಮಯ ಉಳಿತಾಯ ಮಾಡುತ್ತದೆ ಹೌದು. ಆದರೆ ಯಾವಾಗಲೂ ಫಾಸ್ಟ್‌ ಚಾರ್ಜಿಂಗ್‌ ಮೊರೆಹೋಗುವುದು ಸೂಕ್ತವಲ್ಲ. ಫಾಸ್ಟ್‌ ಚಾರ್ಜಿಂಗ್‌ನಿಂದಾಗಿ ಫೋನ್‌ ಬ್ಯಾಟರಿಗೆ ಹೆಚ್ಚಿನ ವೋಲ್ಟೇಜ್‌ ಹೋಗುತ್ತದೆ. ಅದರಿಂದಾಗಿ ಬ್ಯಾಟರಿ ಬೇಗನೆ ಬಿಸಿ ಆಗಬಹುದು. ಹಾಗಾಗಿ ಆಗಾಗ ಸಾಮಾನ್ಯ ಚಾರ್ಜರ್‌ನಲ್ಲೂ ಚಾರ್ಜಿಂಗ್‌ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ.

ರಾತ್ರಿ ಚಾರ್ಜಿಂಗ್‌

ಬೆಳಗ್ಗೆಯೆಲ್ಲ ಫೋನ್‌ ಬಳಸಿ, ರಾತ್ರಿ ಮಲಗುವ ವೇಳೆ ಅದನ್ನು ಚಾರ್ಜ್‌ಗೆ ಹಾಕಿ ಮಲಗುವ ಅಭ್ಯಾಸ ಅನೇಕರಿಗಿದೆ. ಆದರೆ ಇದು ಫೋನ್‌ಗೆ ಒಳ್ಳೆಯದಲ್ಲ. ಓವರ್‌ ಚಾರ್ಜಿಂಗ್‌ ಆಗುವುದರಿಂದ ಬ್ಯಾಟರಿ ಸಾಮರ್ಥ್ಯ ಬೇಗ ಕಡಿಮೆಯಾಗುತ್ತದೆ.

ಥರ್ಡ್‌ ಪಾರ್ಟಿ ಬ್ಯಾಟರಿ ಆಪ್‌

ಬ್ಯಾಟರಿ ಸೇವ್‌ ಮಾಡುತ್ತೇವೆ ಎನ್ನುವಂತಹ ಹಲವಾರು ಆಪ್‌ಗಳಿವೆ. ಆದರೆ ಅದನ್ನು ಡೌನ್‌ಲೋಡ್‌ ಮಾಡಿಕೊಳ್ಳುವಂತಹ ತಪ್ಪನ್ನು ಮಾಡಲು ಹೋಗಬೇಡಿ. ಥರ್ಡ್‌ ಪಾರ್ಟಿ ಬ್ಯಾಟರಿ ಆಪ್‌ಗಳು ನಿಮ್ಮ ಮೊಬೈಲ್‌ ಬ್ಯಾಟರಿಗೆ ಋಣಾತ್ಮಕವಾಗಿಯೇ ಕೆಲಸ ಮಾಡುತ್ತವೆ. ಇದರಿಂದ ನಿಮ್ಮ ಫೋನಿನ ಬ್ಯಾಟರಿ ಲೈಫ್‌ ಕಡಿಮೆಯಾಗುತ್ತದೆ.

80% ಆದರೂ ಚಾರ್ಜ್‌ ಆಗಲಿ

ಫೋನ್‌ ಚಾರ್ಜ್‌ ತೀರಾ ಕಡಿಮೆಯಾದಾಗ ಚಾರ್ಜ್‌ಗೆ ಹಾಕಿ ಒಂದು ಹತ್ತಿಪ್ಪತ್ತು % ಆದ ತಕ್ಷಣ ಅದನ್ನು ತೆಗೆದು ಫೋನ್‌ ಅನ್ನು ಮತ್ತೆ ಬಳಸುವ ಅಭ್ಯಾಸ ನಿಮಗಿರಬಹುದು. ಅದು ಕೂಡ ಫೋನ್‌ ಬ್ಯಾಟರಿಗೆ ಒಳ್ಳೆಯದಲ್ಲ. ನಿಮ್ಮ ಫೋನ್‌ ಕೊನೆ ಪಕ್ಷ 80% ಆದರೂ ಚಾರ್ಜ್‌ ಆಗಲು ಬಿಡಿ.

ಪದೇಪದೆ ಚಾರ್ಜಿಂಗ್‌ ಬೇಡ

ಕೆಲವರಿಗೆ ಫೋನ್‌ನಲ್ಲಿ ಚಾರ್ಜ್‌ ಕಡಿಮೆ ಇರುವುದನ್ನು ನೋಡಲಾಗುವುದಿಲ್ಲ. ಹಾಗಾಗಿ ಪದೇಪದೆ ಫೋನ್‌ ಅನ್ನು ಚಾರ್ಜ್‌ಗೆ ಹಾಕುತ್ತಿರುತ್ತಾರೆ. ಈ ರೀತಿ ಮಾಡುವುದು ಕೂಡ ನಿಮ್ಮ ಫೋನ್‌ ಬ್ಯಾಟರಿಗೆ ತೊಂದೆಯನ್ನುಂಟುಮಾಡುತ್ತದೆ. ಒಮ್ಮೆ ಫೋನ್‌ ಅನ್ನು ಚಾರ್ಜ್‌ ಮಾಡಿದ ಮೇಲೆ ಅದರ ಚಾರ್ಜ್‌ 20%ಗಿಂತ ಕಡಿಮೆ ಬರುವವರೆಗೆ ಮತ್ತೆ ಚಾರ್ಜ್‌ಗೆ ಹಾಕಲು ಹೋಗಬೇಡಿ. 20%ಕ್ಕಿಂತ ಕಡಿಮೆ ಆದ ಮೇಲೆ ಚಾರ್ಜ್‌ಗೆ ಹಾಕಿ 80% ಆಗುವವರೆಗೆ ತೆಗೆಯಲು ಹೋಗಬೇಡಿ.

ಪವರ್‌ ಬ್ಯಾಂಕ್‌ ಆಯ್ಕೆ


ಪವರ್‌ ಬ್ಯಾಂಕ್‌ ನಿಜಕ್ಕೂ ಉಪಯುಕ್ತ. ಹಾಗೆಂದ ಮಾತ್ರಕ್ಕೆ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯ ಪವರ್‌ ಬ್ಯಾಂಕ್‌ ತೆಗೆದುಕೊಂಡು ಬಳಸಲು ಹೋಗಬೇಡಿ. ವೋಲ್ಟೇಜ್‌ ಏರಿಳಿತ, ಶಾರ್ಟ್‌ ಸರ್ಕ್ಯೂಟ್‌, ಹೆಚ್ಚಿನ ವಿದ್ಯುತ್‌ ವಿರುದ್ಧ ಸುರಕ್ಷತೆ ನೀಡುವಂತಹ ಪವರ್‌ ಬ್ಯಾಂಕ್‌ ಅನ್ನೇ ಖರೀದಿಸಿ ಉಪಯೋಗಿಸಿ. ಇದರಿಂದಾಗಿ ನಿಮ್ಮ ಫೋನಿನ ಬ್ಯಾಟರಿಯ ಆಯಸ್ಸು ಕಡಿಮೆಯಾಗುವುದು ತಪ್ಪುತ್ತದೆ.

ಫೋನ್‌ ಬಳಕೆ ಹೇಗೆ?

ಪವರ್‌ ಬ್ಯಾಂಕ್‌ಗೆ ನಿಮ್ಮ ಫೋನ್‌ ಅನ್ನು ಕನೆಕ್ಟ್‌ ಮಾಡಿರುವಾಗ ಫೋನ್‌ ಅನ್ನು ಬಳಸಲು ಹೋಗಬೇಡಿ. ಪವರ್‌ ಬ್ಯಾಂಕ್‌ನಿಂದ ಫೋನ್‌ ಚಾರ್ಜ್‌ ಆಗುತ್ತಿರುವಾಗ ಅದನ್ನು ಬಳಸಿದರೆ ಫೋನಿನಲ್ಲಿ ಬಿಸಿ ಜಾಸ್ತಿಯಾಗಿ ಫೋನಿನ ಬ್ಯಾಟರಿಗೆ ತೊಂದರೆಯುಂಟಾಗುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಲೈಫ್‌ಸ್ಟೈಲ್

Weight Loss Tips Kannada: ಈ ಐದರಲ್ಲಿ ಒಂದು ಜ್ಯೂಸ್‌ ಕುಡಿಯುತ್ತಿದ್ದರೂ ಸಾಕು, ನಿಮ್ಮ ದೇಹ ತೂಕ ಇಳಿಯುತ್ತದೆ!

ಒಮ್ಮೆ ಹೆಚ್ಚಾದ ತೂಕವನ್ನು ನಿಯಂತ್ರಿಸುವುದು ಬಹು ಕಷ್ಟ. ಆದರೆ ನಿತ್ಯ ಈ ಐದು ಪಾನೀಯಗಳನ್ನು ಸೇವಿಸುವುದರಿಂದ ಉತ್ತಮ ಆರೋಗ್ಯದೊಂದಿಗೆ ದೇಹದ ತೂಕ ನಷ್ಟವನ್ನು (Weight Loss Tips Kannada) ಸುಲಭವಾಗಿ ಮಾಡಬಹುದು. ತೂಕ ಇಳಿಸುವ ಸುಲಭ ವಿಧಾನಗಳ ಪರಿಚಯ ಇಲ್ಲಿದೆ.

VISTARANEWS.COM


on

By

Weight Loss Tips kannada
Koo

ದೇಹದ ತೂಕವನ್ನು ಸಮತೋಲನದಲ್ಲಿ ಇರಿಸುವುದು ಸುಲಭದ ಕೆಲಸವೇನಲ್ಲ. ಅದಕ್ಕಾಗಿ ನಾವು ತಿನ್ನುವ ಆಹಾರ (food), ನಿತ್ಯದ ದೈಹಿಕ ಚಟುವಟಿಕೆ (exercise) ಕೂಡ ಕಾರಣವಾಗುತ್ತದೆ. ಒಮ್ಮೆ ತೂಕ ಹೆಚ್ಚಾದರೆ ಅದನ್ನು ಇಳಿಸುವುದು ಸುಲಭದ ಪ್ರಕ್ರಿಯೆಯಲ್ಲ. ದೇಹದ ತೂಕ ಹೆಚ್ಚಳವು ಸಾಮಾನ್ಯವಾಗಿ ಆತಂಕ ಉಂಟು ಮಾಡುತ್ತದೆ. ಆದರೆ ಸರಿಯಾದ ಆಹಾರ ಮತ್ತು ದೈಹಿಕ ಚಟುವಟಿಕೆಯಿಂದ ದೇಹದ ತೂಕವನ್ನು ನಿಯಂತ್ರಿಸಿ (Weight Loss Tips Kannada) ಮತ್ತೆ ಹಿಂದಿನಂತೆ ಸ್ಮಾರ್ಟ್ ಆಂಡ್ ಸ್ಲಿಮ್ (smart and slim) ಆಗಲು ಸಾಧ್ಯವಿದೆ.

ತೂಕ ಇಳಿಸುವ ಪ್ರಕ್ರಿಯೆಯಲ್ಲಿ ಒಂದು ಆಹಾರದ ಸಲಹೆಯನ್ನು ನಿತ್ಯ ಪಾಲಿಸಿದರೆ ಆರೋಗ್ಯವಾಗಿಯೂ ಇರಬಹುದು ಮತ್ತು ದೇಹದ ತೂಕವನ್ನು ಸಮತೋಲನದಲ್ಲಿಯೂ ಇರಿಸಬಹುದು. ನಿತ್ಯವೂ ಬೆಳಗ್ಗೆ ಖಾಲಿ ಹೊಟ್ಟೆಗೆ ಕೆಲವು ಫ್ರೆಶ್ ಜ್ಯೂಸ್‌ಗಳನ್ನು ಕುಡಿಯುವುದರಿಂದ ದೇಹಕ್ಕೆ ಬೇಕಾದ ಫೈಬರ್, ಖನಿಜಾಂಶ ಮತ್ತು ವಿಟಮಿನ್‌ ಗಳನ್ನು ಪಡೆಯಬಹುದು. ಅಲ್ಲದೇ ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಿ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಡುತ್ತದೆ. ದೇಹದ ತೂಕ ಇಳಿಸಬೇಕು ಎನ್ನುವ ಯೋಜನೆ ಇದ್ದರೆ ನಿತ್ಯವೂ ಕುಡಿಯಬೇಕಾದ ಕೆಲವು ಅದ್ಭುತ ಜ್ಯೂಸ್‌ ಗಳಿವೆ.


ಕೊತ್ತಂಬರಿ ನೀರು

ಖಾಲಿ ಹೊಟ್ಟೆಯಲ್ಲಿ ಬೆಳಗ್ಗೆ ಒಂದು ಲೋಟ ಕೊತ್ತಂಬರಿ ಸೊಪ್ಪಿನ ನೀರನ್ನು ಸೇವಿಸಿ. ಕೊತ್ತಂಬರಿ ನೈಸರ್ಗಿಕ ಮೂತ್ರವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ, ದೇಹದಲ್ಲಿ ನೀರಿನ ಧಾರಣವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. ಯಕೃತ್ತಿನ ಆರೋಗ್ಯ ಮತ್ತು ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಚಯಾಪಚಯವನ್ನು ಧನಾತ್ಮಕವಾಗಿ ವೃದ್ಧಿಸುತ್ತದೆ.


ನಿಂಬೆ ನೀರು

ತೂಕ ನಷ್ಟ ಮಾಡಬೇಕು ಎಂದು ಬಯಸುವವರು ನಿಂಬೆ ನೀರಿನ ಬಗ್ಗೆ ಸಾಕಷ್ಟು ಕೇಳಿರುತ್ತಾರೆ. ಆದರೆ ಬಹುತೇಕ ಮಂದಿ ಪ್ರಯೋಗ ಮಾಡಿರುವುದಿಲ್ಲ. ಮಾಡಿದ್ದರೂ ಒಂದೆರಡು ದಿನ ಮಾಡಿ ಸುಮ್ಮನಾಗಿರುತ್ತಾರೆ. ನಿಂಬೆ ನೀರು ತೂಕವನ್ನು ಅತ್ಯಂತ ವೇಗವಾಗಿ ನಷ್ಟ ಮಾಡುತ್ತದೆ. ಇದು ದೇಹದಲ್ಲಿ ಚಯಾಪಚಯ ಕ್ರಿಯೆಯನ್ನು ವೃದ್ಧಿಸುತ್ತದೆ.


ನೆಲ್ಲಿಕಾಯಿ ಜ್ಯೂಸ್

ನೆಲ್ಲಿಕಾಯಿ ಚಯಾಪಚಯವನ್ನು ಉತ್ತೇಜಿಸಲು ಮತ್ತು ಜೀರ್ಣಕ್ರಿಯೆಯ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ತ್ವರಿತವಾಗಿ ತೂಕವನ್ನು ಕಳೆದುಕೊಳ್ಳಲು ಬಯಸುವವರು ಆರೋಗ್ಯಕರ ಚಯಾಪಚಯವನ್ನು ಹೊಂದಿರುವುದು ಅಗತ್ಯ. ನೈಸರ್ಗಿಕ ಸಕ್ಕರೆಯ ರೂಪದಲ್ಲಿ ಒಂದು ಹನಿ ಜೇನುತುಪ್ಪವನ್ನು ಸೇರಿಸಿ ಸೇವಿಸಿದರೆ ಅದು ದಿನವಿಡೀ ನಮ್ಮನ್ನು ಶಕ್ತಿಯುತವಾಗಿರಿಸುತ್ತದೆ.


ಹಾಗಲಕಾಯಿ ಜ್ಯೂಸ್

ಹಾಗಲಕಾಯಿಯ ರಸವು ತೂಕ ನಷ್ಟಕ್ಕೆ ಉತ್ತಮವಾದ ಕೊಬ್ಬನ್ನು ಸುಡುವ ರಸಗಳಲ್ಲಿ ಒಂದಾಗಿದೆ. ಹಾಗಲಕಾಯಿ ಜ್ಯೂಸ್ ಅನ್ನು ನಿಯಮಿತವಾಗಿ ಕುಡಿಯುವುದರಿಂದ ಚಯಾಪಚಯ ಕ್ರಿಯೆಯಲ್ಲಿ ಸುಧಾರಣೆಯಾಗುತ್ತದೆ. ಇದು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ತೂಕವನ್ನು ಕಳೆದುಕೊಳ್ಳಲು ಸಾಕಷ್ಟು ಪ್ರಯೋಜನಕಾರಿಯಾಗಿದೆ.


ಇದನ್ನೂ ಓದಿ: Blood Pressure: ರಕ್ತದೊತ್ತಡ ನಿಯಂತ್ರಿಸಲು ಈ ಆಹಾರಗಳು ಸೂಕ್ತ

ಸೌತೆಕಾಯಿ ಜ್ಯೂಸ್

ನೀರು ಸಮೃದ್ಧವಾಗಿರುವ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವ ಸೌತೆಕಾಯಿ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಅದ್ಭುತವಾದ ಆಹಾರ. ಇದರಲ್ಲಿರುವ ಅತಿಯಾದ ನೀರು ಮತ್ತು ನಾರಿನಂಶವು ನಿಮ್ಮನ್ನುದೀರ್ಘಕಾಲದವರೆಗೆ ಹಸಿವನ್ನು ತಡೆಯಲು ಸಹಾಯ ಮಾಡುತ್ತದೆ. ಇದರಿಂದಾಗಿ ಅನಗತ್ಯ ಕಡುಬಯಕೆಗಳನ್ನು ನಿಯಂತ್ರಿಸಿ ದೇಹದ ತೂಕ ನಿರ್ವಹಣೆ ಮಾಡಬಹುದು.

Continue Reading

ಲೈಫ್‌ಸ್ಟೈಲ್

Akshaya Tritiya 2024: ಅಕ್ಷಯ ತೃತೀಯದಂದು ಏನು ಮಾಡಬೇಕು, ಏನು ಮಾಡಬಾರದು?

ಅಕ್ಷಯ ತೃತೀಯವನ್ನು ಈ ಬಾರಿ ಮೇ 10ರಂದು ಆಚರಿಸಲಾಗುತ್ತಿದ್ದು, ಈ ದಿನ ಮನೆಮನೆಯಲ್ಲಿ ಸಮೃದ್ಧಿ (Akshaya Tritiya 2024) ತುಂಬ ಬೇಕಾದರೆ ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ಸಂಗತಿಗಳಿವೆ. ಅವುಗಳು ಯಾವುದು ಗೊತ್ತೇ? ಈ ಲೇಖನ ಓದಿ.

VISTARANEWS.COM


on

By

Akshaya Tritiya-2024
Koo

ಸಮೃದ್ಧಿಯ ಸಂಕೇತ ಅಕ್ಷಯ ತೃತೀಯವನ್ನು (Akshaya Tritiya 2024) ಮಂಗಳಕರ ದಿನವೆಂದು ಕರೆಯಲಾಗುತ್ತದೆ. ಈ ದಿನ ಏನೇ ಖರೀದಿ ಮಾಡಿದರೂ ಅದು ದ್ವಿಗುಣವಾಗುತ್ತದೆ ಎಂಬ ನಂಬಿಕೆ ಇದೆ. ಈ ವರ್ಷ ಮೇ 10ರಂದು ಅಕ್ಷಯ ತೃತೀಯವನ್ನು ಆಚರಿಸಲಾಗುತ್ತದೆ. ಈ ದಿನ ಮಾಡಬೇಕಾದ (dos) ಮತ್ತು ಮಾಡಬಾರದ (dont) ಕೆಲವು ಸಂಗತಿಗಳಿವೆ. ಈ ಬಗ್ಗೆ ತಿಳಿದುಕೊಂಡು ಅನುಸರಿಸಿದರೆ ಮನೆಮನೆಯಲ್ಲೂ ಸುಖ ಶಾಂತಿ ಸಮೃದ್ಧಿಯನ್ನು ತುಂಬಿಸಿಕೊಳ್ಳಬಹುದು.

ಅಕ್ತಿ ಅಥವಾ ಅಖಾ ತೀಜ್ ಎಂದೂ ಕರೆಯಲ್ಪಡುವ ಅಕ್ಷಯ ತೃತೀಯವನ್ನು ಹಿಂದೂಗಳು ಮತ್ತು ಜೈನರು ಆಚರಿಸುತ್ತಾರೆ. ಇದು ‘ಅಂತ್ಯವಿಲ್ಲದ ಸಮೃದ್ಧಿಯ ಮೂರನೇ ದಿನ’ ಎಂದು ನಂಬಲಾಗುತ್ತದೆ.


ಈ ದಿನವನ್ನು ತಮ್ಮನ್ನು ತೊರೆದ ಪ್ರೀತಿಪಾತ್ರರನ್ನು ನೆನಪಿಸಲಾಗುತ್ತದೆ. ಉಪವಾಸ, ದಾನ ಮತ್ತು ಪರಸ್ಪರ ಸಹಾಯ ಮಾಡುವ ಮೂಲಕ ಅಕ್ಷಯ ತೃತೀಯವನ್ನು ಆಚರಿಸಲಾಗುತ್ತದೆ. ಹೊಸ ಉದ್ಯಮ, ಮದುವೆಗಳು, ಚಿನ್ನ ಅಥವಾ ಇತರ ಆಸ್ತಿಯಂತಹ ಹೂಡಿಕೆಗಳಿಗೆ ಅಕ್ಷಯ ತೃತೀಯವನ್ನು ಮಂಗಳಕರವೆಂದು ಪರಿಗಣಿಸಲಾಗಿದೆ.

ಅಕ್ಷಯ ತೃತೀಯದ ಮಹತ್ವ

ಅಕ್ಷಯ ತೃತೀಯವು ಕೆಲವು ಪ್ರದೇಶದ ಮಹಿಳೆಯರಿಗೆ ತಮ್ಮ ಜೀವನದಲ್ಲಿ ಅಥವಾ ಭವಿಷ್ಯದಲ್ಲಿ ಮದುವೆಯಾಗುವ ಪುರುಷರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುವ ಹಬ್ಬವಾಗಿದೆ.

ಈ ದಿನ ದ್ರೌಪದಿಗೆ ಅಕ್ಷಯ ಪಾತ್ರೆ ಎಂಬ ಮಾಂತ್ರಿಕ ಬಟ್ಟಲನ್ನು ಕೃಷ್ಣ ನೀಡಿದ ಎನ್ನುವ ಕಥೆ ಇದೆ. ಅವಳು ತನ್ನ ಪತಿಯರೊಂದಿಗೆ ವನವಾಸದಲ್ಲಿದ್ದರು. ಈ ಸಂದರ್ಭದಲ್ಲಿ ಅವರ ಮನೆಗೆ ಅತಿಥಿಯಾಗಿ ಕೋಪಕ್ಕೆ ಹೆಸರುವಾಸಿಯಾದ ದೂರ್ವಾಸ ಋಷಿ ತಮ್ಮ ಶಿಷ್ಯರೊಂದಿಗೆ ಆಗಮಿಸುತ್ತಾರೆ. ಆಗ ದ್ರೌಪದಿಯ ಬಳಿ ಅವರಿಗೆ ನೀಡಲು ಏನೂ ಇರುವುದಿಲ್ಲ. ಕೃಷ್ಣ ಅಲ್ಲಿಗೆ ಬಂದು ಅವರ ಬಟ್ಟಲಿನಲ್ಲಿದ್ದ ಒಂದು ಅಗುಳು ಅನ್ನವನ್ನು ತಿಂದು ಋಷಿ ಮುನಿಗಳೆಲ್ಲ ಸಂತೃಪ್ತರಾಗುವಂತೆ ಮಾಡಿದ. ಅಲ್ಲದೇ ಋಷಿಯು ಪಾಂಡವರನ್ನು ಶಪಿಸದಂತೆ ತಡೆದ. ಈ ದಿನವು ಭಗವಾನ್ ವಿಷ್ಣುವಿನ ಆರನೇ ಅವತಾರವಾದ ಪರಶುರಾಮನ ಜನ್ಮದಿನವೆಂದೂ ನಂಬಲಾಗಿದೆ. ಈ ಬಾರಿ ಅಕ್ಷಯ ತೃತೀಯವನ್ನು ಮೇ 10ರಂದು ಆಚರಿಸಲಾಗುತ್ತಿದ್ದು, ಮನೆಯಲ್ಲಿ ಸಮೃದ್ಧಿ ತುಂಬ ಬೇಕಾದರೆ ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ಸಂಗತಿಗಳಿವೆ.


ಏನು ಮಾಡಬಹುದು?

ಚಿನ್ನವನ್ನು ಖರೀದಿಸಿ

ಅಕ್ಷಯ ತೃತೀಯದ ಪವಿತ್ರ ಸಂದರ್ಭದಲ್ಲಿ ಚಿನ್ನವನ್ನು ಖರೀದಿಸಬಹುದು. ಯಾಕೆಂದರೆ ಅದು ನಿಮ್ಮನ್ನು ಶ್ರೀಮಂತಗೊಳಿಸುತ್ತದೆ ಅಥವಾ ನಿಮ್ಮ ಬಳಿ ಇರುವ ಹಣವನ್ನು ದುಪ್ಪಟ್ಟು ಮಾಡಲು ಸಹಾಯ ಮಾಡುತ್ತದೆ.

ಹೊಸ ವ್ಯವಹಾರ ಪ್ರಾರಂಭ

ಅಕ್ಷಯ ತೃತೀಯ ಹೊಸ ಉದ್ಯಮವನ್ನು ಪ್ರಾರಂಭಿಸಲು ಒಳ್ಳೆಯ ದಿನ ಎಂದು ನಂಬಲಾಗಿದೆ. ಉದಾಹರಣೆಗೆ ಹೊಸ ವ್ಯಾಪಾರವನ್ನು ಪ್ರಾರಂಭಿಸುವುದು ಅಥವಾ ಕಾರು ಖರೀದಿಸುವುದನ್ನು ಈ ದಿನ ಮಾಡಬಹುದು.

ಹೂಡಿಕೆ

ಅಕ್ಷಯ ತೃತೀಯದಂದು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಲು ಮಂಗಳಕರ ದಿನವಾಗಿದೆ. ಯಾಕೆಂದರೆ ಇದು ಅದೃಷ್ಟವನ್ನು ತರುತ್ತದೆ ಎಂದು ನಂಬಲಾಗಿದೆ.

ಆಧ್ಯಾತ್ಮಿಕ ಚಟುವಟಿಕೆ

ಅಕ್ಷಯ ತೃತೀಯದ ಶುಭ ಸಂದರ್ಭದಲ್ಲಿ ಪ್ರಾರ್ಥನೆ, ಧ್ಯಾನ ಮತ್ತು ಯಜ್ಞದಂತಹ ಆಧ್ಯಾತ್ಮಿಕ ಚಟುವಟಿಕೆಗಳನ್ನು ಮಾಡಬೇಕು.

ಸಾತ್ವಿಕ ಆಹಾರ

ಈ ದಿನ ವಿಷ್ಣುವನ್ನು ಪೂಜಿಸುವಾಗ ಈರುಳ್ಳಿ ಮತ್ತು ಬೆಳ್ಳುಳ್ಳಿ ಬಳಸದೆ ಶುದ್ಧ ಸಾತ್ವಿಕ ಆಹಾರವನ್ನೇ ದೇವರಿಗೆ ಅರ್ಪಿಸಿ.

ಇದನ್ನೂ ಓದಿ: Gold Rate Today: ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ; ಇಂದು ಖರೀದಿಗೆ ಮುನ್ನ ದರದ ಜೊತೆಗೆ ಇದು ತಿಳಿದಿರಲಿ

ಏನು ಮಾಡಬಾರದು?
ಕತ್ತಲೆ ದೂರ ಮಾಡಿ

ಅಕ್ಷಯ ತೃತೀಯದಂದು ಮನೆಯ ಕೋಣೆಯನ್ನು ಕತ್ತಲೆ ಮಾಡಬೇಡಿ. ಈ ಅದೃಷ್ಟದ ದಿನದಂದು ಅದೃಷ್ಟದ ಬೆಳಕು ನಿಮ್ಮ ಮನೆಯ ಪ್ರತಿಯೊಂದು ಕೋಣೆಯನ್ನು ಬೆಳಗಿಸಲಿ ಮತ್ತು ಯಾವುದೇ ಕೋಣೆ ಕತ್ತಲೆಯಾಗದಂತೆ ನೋಡಿಕೊಳ್ಳಿ.

ಒಟ್ಟಿಗೆ ಪೂಜಿಸಿ

ಗಣೇಶ ಮತ್ತು ಲಕ್ಷ್ಮಿ ದೇವರನ್ನು ಪ್ರತ್ಯೇಕವಾಗಿ ಪೂಜಿಸಬೇಡಿ. ಈ ದಿನ ಈ ಎರಡೂ ದೇವರನ್ನು ಒಟ್ಟಿಗೆ ಪ್ರಾರ್ಥಿಸುವುದು ಹೆಚ್ಚು ಸಮೃದ್ಧಿಯನ್ನು ತರುತ್ತದೆ.

ಬರಿಗೈಯಲ್ಲಿ ಬರಬೇಡಿ

ಅಕ್ಷಯ ತೃತೀಯದಂದು ಶಾಪಿಂಗ್ ಮಾಡಲು ಹೋದಾಗ ಏನನ್ನಾದರೂ ಖರೀದಿಸಿ. ಚಿನ್ನ ಅಥವಾ ಬೆಳ್ಳಿ ಅಲ್ಲದಿದ್ದರೂ, ಲೋಹದ ಆಭರಣವನ್ನು ಪಡೆಯುವುದು ನಿಮ್ಮ ಮನೆಗೆ ಸಂಪತ್ತನ್ನು ತರುತ್ತದೆ.

ಪವಿತ್ರ ದಾರ

ಅಕ್ಷಯ ತೃತೀಯದಂದು ಹೆಚ್ಚು ಹೊತ್ತು ಪವಿತ್ರ ದಾರವನ್ನು ಧರಿಸುವುದು ಒಳ್ಳೆಯದಲ್ಲ ಎಂಬ ಅಭಿಪ್ರಾಯವಿದೆ.

Continue Reading

ಆರೋಗ್ಯ

No Diet Day: ಬೇಕಾಬಿಟ್ಟಿ ಡಯಟ್‌ ಮಾಡಿದರೆ ಏನಾಗುತ್ತದೆ? ಈ ಸಂಗತಿ ತಿಳಿದಿರಲಿ

ಹಲವರು ತಪ್ಪು ಸಲಹೆಗಳಿಂದ ಡಯಟ್‌ ಮಾಡಲು ಹೋಗಿ ಬೇಗ ತೂಕ ಇಳಿಸಿಕೊಳ್ಳುವ ಆಹಾರ ಕ್ರಮಗಳನ್ನು ಅನುಸರಿಸುತ್ತಾರೆ. ಇದರಿಂದ ತೂಕ ಕಡಿಮೆಯಾಗುವ ಬದಲು ಆಸ್ಪತ್ರೆಗೆ ಸೇರಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಡಯಟ್ ಮಾಡುವುದು ಮುಖ್ಯ, ಆದರೆ ಪರಿಶೀಲಿಸದೆ ವಾಟ್ಸಾಪ್ ಅಥವಾ ಬೇರೆ ಎಲ್ಲೋ ಕೇಳಿದ ಮಾಹಿತಿಯನ್ನು ಅನುಸರಿಸುವುದಕ್ಕಿಂತ, ನಿಪುಣ ಆಹಾರ ತಜ್ಞರು ಅಥವಾ ವೈದ್ಯರ ಶಿಫಾರಸ್ಸುಗಳನ್ನು ಪಾಲಿಸುವುದು ಮುಖ್ಯವಾಗಿರುತ್ತದೆ. ಈ ಕುರಿತು (No Diet Day) ತಜ್ಞ ವೈದ್ಯರ ಸಲಹೆ ಇಲ್ಲಿದೆ.

VISTARANEWS.COM


on

No Diet Day
Koo

ಡಯಟ್‌ ಎಂಬುದು ಇಂದಿನ ಜೀವನಶೈಲಿಯ ಭಾಗವಾಗಿ ಮಾರ್ಪಟ್ಟಿದೆ. ಏನು ತಿನ್ನಬೇಕು? ಏಷ್ಟು ತಿನ್ನಬೇಕು..? ಎಂಬುದರ ಕುರಿತಂತೆ ತರಹೇವಾರಿ ಪುಕ್ಕಟೆ ಸಲಹೆಗಳು ಇಂಟರ್‌ನೆಟ್‌ ತುಂಬಾ ಹರದಾಡುತ್ತವೆ. ಇಂಥ ಸಮಯದಲ್ಲಿ ಹಲವರು ತಪ್ಪು ಸಲಹೆಗಳಿಂದ ಬೇಗ ತೂಕ ಇಳಿಸಿಕೊಳ್ಳುವ ಆಹಾರ ಕ್ರಮಗಳನ್ನು ಅನುಸರಿಸುತ್ತಾರೆ, ಇದರಿಂದ ತೂಕ ಕಡಿಮೆಯಾಗುವ ಬದಲು ಆಸ್ಪತ್ರೆಗೆ ಸೇರಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಡಯಟ್ ಮಾಡುವುದು ಮುಖ್ಯ, ಆದರೆ ಪರಿಶೀಲಿಸದೆ ವಾಟ್ಸಾಪ್ ಅಥವಾ ಬೇರೆ ಎಲ್ಲೋ ಕೇಳಿದ ಮಾಹಿತಿಯನ್ನು ಅನುಸರಿಸುವುದಕ್ಕಿಂತ, ನಿಪುಣ ಆಹಾರ ತಜ್ಞರು ಅಥವಾ ವೈದ್ಯರ ಶಿಫಾರಸ್ಸುಗಳನ್ನು ಪಾಲಿಸುವುದು (No Diet Day) ಮುಖ್ಯವಾಗಿರುತ್ತದೆ.

Girl having a cheat day

ಪ್ರತಿ ವರ್ಷ ಮೇ 6 ರಂದು ಅಂತಾರಾಷ್ಟ್ರೀಯ ನೋ ಡಯಟ್ ದಿನವನ್ನು ಆಚರಿಸಲಾಗುತ್ತದೆ. ಈ ಮೂಲಕ ಉತ್ತಮ ಆಹಾರ ಸೇವನೆಯೊಂದಿಗೆ ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಲು ಪ್ರೇರಣೆ ನೀಡುವುದಾಗಿದೆ. ಈ ಕುರಿತಂತೆ ಕಿಂಡರ್‌ ಆಸ್ಪತ್ರೆಯ ಡಯಟಿಷಿಯನ್ ತಜ್ಞೆ ಆಗಿರುವ ಡಾ. ಸಂಜನಾ ಪ್ರೇಮಲಾಲ್‌ ಮಾತನಾಡಿ, ಎಲ್ಲದಕ್ಕೂ ಡಯಟ್‌ ನೆಪವೊಡ್ಡಿ ನಿರಾಕರಿಸುವುದಕ್ಕಿಂತ ಸಮತೋಲಿತ ಪೋಷಣೆಯುಳ್ಳ ಆಹಾರ ಸೇವನೆಯ ಬಗ್ಗೆ ಈ ದಿನ ಅರಿವು ಮೂಡಿಸುವುದಾಗಿದೆ.
ಸಾಮಾನ್ಯವಾಗಿ ಬಹುಪಾಲು ಜನರ ಡಯಟ್‌ ಕೆಲ ದಿನ, ತಿಂಗಳು ಅವಧಿಗೆ ಮಾತ್ರ ಸೀಮಿತವಾಗಿರುತ್ತದೆ. ತೂಕ ಇಳಿಸಿಕೊಳ್ಳಲು ಅಥವಾ ಸಮಾಜದಲ್ಲಿ ದೈಹಿಕ ಸೌಂದರ್ಯಕ್ಕೆ ಪ್ರಾಧಾನ್ಯತೆ ನೀಡಲಾಗುತ್ತದೆ ಎಂಬ ಕಾರಣಕ್ಕೆ. ಆದ್ರೆ ನೋ ಡಯಟ್‌ ಡೇ ದೈಹಿಕ ಕ್ಷಮತೆ ಕಾಪಾಡಿಕೊಳ್ಳುವುದರ ಜೊತೆಗೆ ಕೆಟ್ಟ ಡಯಟ್‌ ಪದ್ಧತಿಗಳನ್ನ ತಿರಸ್ಕರಿಸುವ ಕುರಿತಂತೆ ಜಾಗೃತಿ ಮೂಡಿಸುತ್ತದೆ ಎಂದವರು ಹೇಳುತ್ತಾರೆ.

Diet women

ಅಸಂಬದ್ಧ ಡಯಟ್‌ನಿಂದ ಆಸ್ಪತ್ರೆ ಸೇರಬಹುದು

ಹಲವು ಕಾರಣಗಳಿಗಾಗಿ ಆರೋಗ್ಯಕರವಲ್ಲದ ಡಯಟ್‌ ಮಾಡಿ ಜನರು ಆಸ್ಪತ್ರೆಗೆ ದಾಖಲಾಗುತ್ತಾರೆ. ಸಾಮಾನ್ಯ ಸನ್ನಿವೇಶಗಳಲ್ಲಿ ಅಗತ್ಯ ಪೋಷಕಾಂಶಗಳನ್ನ ಸೇವಿಸದೆ, ಕ್ಯಾಲೋರಿಗಳುಳ್ಳ ಆಹಾರದಿಂದ ದೂರ ಉಳಿಯುವ ಮೂಲಕ ಅಪೌಷ್ಟಿಕತೆಗೆ ತುತ್ತಾಗುತ್ತಾರೆ. ಇದಲ್ಲದೆ, ಬಹುಅಂಗಾಂಗ ವೈಫಲ್ಯ ಉಂಟಾಗಬಹುದು. ಎಲೆಕ್ಟ್ರೋಲೈಟ್‌ ಅಸಮತೋಲನ, ಹೃದಯಾಘಾತ ಹಾಗೂ ಮೂತ್ರಪಿಂಡದ ಸಮಸ್ಯೆಗಳು ಕೂಡ ಎದುರಾಗುತ್ತವೆ. ಅಗತ್ಯ ಆಹಾರ ಪದಾರ್ಥಗಳನ್ನು ಸೇವಿಸದಿದ್ದರೆ, ನಿರ್ಜಲೀಕರಣ, ದೌರ್ಬಲ್ಯ, ವಾಕರಿಕೆ, ಮಲಬದ್ಧತೆ ಜೊತೆಗೆ ವಿಟಮಿನ್ಸ್‌ ಹಾಗೂ ಖನಿಜಗಳ ಅಸರ್ಮಕ ಸೇವನೆಯಿಂದ ಪೋಷಕಾಂಶಗಳ ಕೊರತೆ ಉಂಟಾಗುತ್ತದೆ. ಉತ್ತಮ ಆಹಾರ ಸೇವನೆಯನ್ನು ಬಿಡುವುದು ಎಂದರೆ ದೇಹದ ರಕ್ಷಣಾ ವ್ಯವಸ್ಥೆಗೆ ಹಾನಿ ಮಾಡುವುದಾಗಿದೆ. ಉತ್ತಮ ಆಹಾರ ಪದ್ದತಿ ದೀರ್ಘಕಾಲ ಪರಿಣಾಮಕಾರಿಯಾಗುವುದರ ಜೊತೆಗೆ ಸಮತೋಲಿತ ಆಹಾರ ಕ್ರಮವನ್ನು ಅಳವಡಿಸಿಕೊಳ್ಳುವ ಅಗತ್ಯವನ್ನು ಎತ್ತಿ ತೋರಿಸುತ್ತದೆ ಎಂದು ಡಾ. ಸಂಜನಾ ಪ್ರೇಮ್‌ಲಾಲ್‌ ಹೇಳಿದರು.

ಸೇವನೆಯಲ್ಲಿ ತಪ್ಪಾದ ಕ್ರಮಗಳು

ಅತಿಯಾದ ಡಯಟ್‌ನಿಂದಾಗಿ ಅನೋರೆಕ್ಸಿಯಾ ನರ್ವೋಸಾ ಅಥವಾ ಬುಲಿಮಿಯಾ ನರ್ವೋಸಾದಂತಹ ಸೇವನೆಯ ಅಸ್ವಸ್ಥತೆ ಉಂಟಾಗುತ್ತದೆ. ಇದರಿಂದ ಗಂಭೀರವಾದ ದೈಹಿಕ ಮತ್ತು ಮಾನಸಿಕ ಪರಿಣಾಮಗಳು ಉಂಟಾಗುತ್ತವೆ. ಆಗ ವೈದ್ಯರ ಸಲಹೆ ಹಾಗೂ ಚಿಕಿತ್ಸೆಯ ಮೊರೆ ಹೋಗುವುದು ಅನಿವಾರ್ಯವಾಗುತ್ತದೆ. ಕೆಲ ಸಂದರ್ಭಗಳಲ್ಲಿ ಅಸಮರ್ಪಕ ಪೋಷಣೆಯೊಂದಿಗೆ ಅತಿಯಾದ ವ್ಯಾಯಾಮದಿಂದ ಗಾಯಗಳು, ನಿರ್ಜಲೀಕರಣ ಮತ್ತು ಎಲೆಕ್ಟ್ರೋಲೈಟ್ ಅಸಮತೋಲನ ಕೂಡ ಉಂಟಾಗುತ್ತದೆ. ಆಗ ವೈದ್ಯರನ್ನ ಕಾಣಬೇಕಾಗುತ್ತದೆ. ತಪ್ಪಾದ ಡಯಟ್ನಿಂದ ಆಸ್ಪತ್ರೆಗೆ ದಾಖಲಾಗುವುದನ್ನು ತಪ್ಪಿಸಲು ನಿಪುಣ ಆರೋಗ್ಯ ತಜ್ಞರಿಂದ ಮಾಗರ್ದರ್ಶನ ಪಡೆದುಕೊಳ್ಳುವುದು ಮುಖ್ಯವಾಗಿರುತ್ತದೆ. ಜೊತೆಗೆ ಪೋಷಣೆ ಹಾಗೂ ತೂಕ ನಿರ್ವಹಣೆಗೆ ಸಮತೋಲಿತ ಆಹಾರ ಸೇವನೆಯ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ಡಾ. ಸಂಜನಾ ಪ್ರೇಮ್‌ಲಾಲ್ ಸಲಹೆ ನೀಡುತ್ತಾರೆ.

Woman dieting and eating a salad

ಋಣಾತ್ಮಕ ಪರಿಣಾಮಗಳು

ತಪ್ಪಾದ ಡಯಟ್‌ ಅನುಸರಿಸುವುದು ಹಾಗೂ ಕಡಿಮೆ ಕ್ಯಾಲೋರಿ ಆಹಾರ ಸೇವನೆಯಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ನೆಗೆಟಿವ್ ಪರಿಣಾಮಗಳು ಉಂಟಾಗುತ್ತವೆ. ಅತೃಪ್ತಿ, ಸ್ವಗೌರವ ಕಡಿಮೆ ಆಗುವುದು, ತಿನ್ನುವ ಅಸ್ವಸ್ಥತೆ, ಮಾಂಸಖಂಡಗಳು ಬಲಹೀನವಾಗುವುದು, ಮೂಳೆಗಳು ದುರ್ಬಲಗೊಳ್ಳುವುದು, ಹೃದ್ರೋಗ ಹಾಗೂ ಹಾರ್ಮೋನ್‌ಗಳ ಅಸಮತೋಲನದಂತಹ ಹಾನಿಕಾರಕ ಅಡ್ಡಪರಿಣಾಮಗಳು ಎದುರಾಗುತ್ತವೆ. ಇವುಗಳನ್ನು ತಡೆಗಟ್ಟಲು ಕೆಟೋಜೆನಿಕ್‌ ಆಹಾರವನ್ನು ಸೇವಿಸುವುದು ಉತ್ತಮ ಪರಿಣಾಮಗಳನ್ನು ಉಂಟು ಮಾಡುತ್ತದೆ. ಆದರೆ ತುಂಬಾ ದಿನಗಳ ಕಾಲ ಸೇವಿಸುವುದರಿಂದ ಹೆಪಾಟಿಕ್ ಸ್ಟೀಟೋಸಿಸ್, ಮೂತ್ರಪಿಂಡದ ಕಲ್ಲುಗಳು, ಹೈಪೋಪ್ರೋಟೀನೆಮಿಯಾ ಮತ್ತು ವಿಟಮಿನ್ ಕೊರತೆಯಂತಹ ದೀರ್ಘಕಾಲಿಕ ಪರಿಣಾಮಗಳು ಎದುರಾಗುತ್ತವೆ. ಆಗ ಕೆಟೋಜೆನಿಕ್‌ ಆಹಾರ ಸೇವಿಸುವುದನ್ನು ನಿಲ್ಲಿಸಬೇಕಾಗುತ್ತದೆ ಎಂದು ಡಾ.. ಸಂಜನಾ ಪ್ರೇಮ್‌ಲಾಲ್‌ ಹೇಳುತ್ತಾರೆ

ಇದನ್ನೂ ಓದಿ: Pain Relievers: ಸೈಡ್‌ ಎಫೆಕ್ಟ್‌ ಇಲ್ಲದ ಪ್ರಕೃತಿದತ್ತ ನೋವು ನಿವಾರಕಗಳಿವು

ಪರಿಪೂರ್ಣ ಆರೋಗ್ಯ

ತಪ್ಪಾದ ಡಯಟ್ ಆರೋಗ್ಯ ಮತ್ತು ದೈಹಿಕ ಕ್ಷಮತೆಯ ಮೇಲೆ ದುಷ್ಪಾರಿಣಾಮವನ್ನು ಬೀರುತ್ತದೆ. ಹೀಗಾಗಿ ಜೀವಶೈಲಿಗೆ ಅನುಗುಣವಾಗಿ ಪೋಷಣೆಗೆ ಬೇಕಾದಂತಹ ಸಮತೋಲಿತ ಆಹಾರ ಸೇವಿಸುವ ವಿಧಾನಕ್ಕೆ ಆದ್ಯತೆ ನೀಡಿದರೆ ಹಲವು ಆರೋಗ್ಯಕರ ಪ್ರಯೋಜನಗಳನ್ನ ಪಡೆದುಕೊಳ್ಳಬಹುದು ಎನ್ನುತ್ತಾರೆ ಡಾ. ಸಂಜನಾ ಪ್ರೇಮ್‌ಲಾಲ್‌.

Continue Reading

ಆರೋಗ್ಯ

No Diet Day 2024: ಇಂದು ಡಯೆಟ್‌ ರಹಿತ ದಿನ ಆಚರಿಸುವುದೇಕೆ?

ಸಮಾಜದಲ್ಲಿ ಎಲ್ಲರೂ ಒಪ್ಪುವಂಥ, ಮೆಚ್ಚುವಂಥ ದೇಹವನ್ನು ಹೊಂದಬೇಕೆಂಬ (No Diet Day 2024) ಆಸೆ ಜನರಿಗೆ ಇರುತ್ತದೆ. ಹಾಗಾಗಿ, ಹೇಗೆಹೇಗೋ ಡಯೆಟ್‌ ಮಾಡುತ್ತಾ, ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಇದನ್ನು ತಡೆದು ದೇಹದ ಬಗ್ಗೆ ಧನಾತ್ಮಕ ಚಿಂತನೆ ಬೆಳೆಸಿಕೊಳ್ಳಲೆಂದು ʻಡಯೆಟ್‌ ರಹಿತ ದಿನʼ ಆಚರಿಸಲಾಗುತ್ತದೆ. ʻನೊ ಡಯೆಟ್‌ʼ ಎನ್ನುತ್ತಿದ್ದಂತೆ ಸಿಕ್ಕಿದ್ದೆಲ್ಲಾ ಕಬಳಿಸುವ ದಿನ ಎಂದು ಗ್ರಹಿಸುವುದಲ್ಲ. ಧನಾತ್ಮಕವಾಗಿ ದೇಹವನ್ನು ಗ್ರಹಿಸುವ ಮತ್ತು ಸೌಂದರ್ಯದ ಭ್ರಮೆಯಲ್ಲಿ ಶರೀರದ ಮೇಲೆ ಹುಚ್ಚು ಡಯೆಟ್‌ ಪ್ರಯೋಗಗಳನ್ನು ಮಾಡುವುದನ್ನು ನಿಲ್ಲಿಸಬೇಕೆಂಬ ಸಂದೇಶವನ್ನು ಸಾರುವ ದಿನವಿದು. ಈ ಕುರಿತ ವಿವರ ಇಲ್ಲಿದೆ.

VISTARANEWS.COM


on

No Diet Day 2024
Koo

ಪ್ರತಿಯೊಬ್ಬರಿಗೂ ಲೋಕದ ಅತಿ ಸುಂದರ (No Diet Day 2024) ಕಾಯವನ್ನೇ ಹೊಂದಬೇಕೆಂಬ ಅಭಿಲಾಷೆ ಇದ್ದರೆ, ಅದೇನು ಅತಿಯಲ್ಲ. ಫ್ಯಾಷನ್‌ ನಿಯತಕಾಲಿಕಗಳಲ್ಲಿ ಫೋಟೋಶಾಪ್‌ ಮಾಡಿದ ತಾರೆಗಳ ಚಿತ್ರಗಳು ಇದಕ್ಕೆ ಇನ್ನಷ್ಟು ಪ್ರೇರಣೆ ನೀಡುತ್ತವೆ. ಹುಡುಗಿಯರಿಗೆ ಬೆನ್ನು-ಹೊಟ್ಟೆ ಒಂದಾಗಿರುವಂತೆ, ಬಳುಕುವ ದೇಹ ಹೊಂದುವ ಮಹದಾಸೆಯಿದ್ದರೆ, ಹುಡುಗರಿಗೆ ದೇಹದ ನರ-ನರಗಳೆಲ್ಲ ಎದ್ದುಬರುವಂತೆ ಸ್ನಾಯುಗಳನ್ನು ಬೆಳೆಸಬೇಕೆಂಬ ಬಯಕೆ ಇರುತ್ತದೆ. ಇವುಗಳ ಹಿಂದೆ ಫಿಟ್‌ನೆಸ್‌ ಉದ್ದೇಶ ಇದ್ದರೆ ಒಂದು ಲೆಕ್ಕ. ಹೆಚ್ಚಿನ ಬಾರಿ ಹಾಗಾಗುವುದೇ ಇಲ್ಲ. ಬದಲಿಗೆ, ಸಮಾಜದಲ್ಲಿ ಎಲ್ಲರೂ ಒಪ್ಪುವಂಥ ಮೆಚ್ಚುವಂಥ ದೇಹವನ್ನು ಹೊಂದಬೇಕೆಂಬ ಆಸೆ ಇದರ ಹಿಂದಿರುತ್ತದೆ. ಹಾಗಾಗಿ, ಹುಕಿಗೆ ಬಿದ್ದವರಂತೆ ಏನಕ್ಕೇನೋ ಡಯೆಟ್‌ ಮಾಡುತ್ತಾ, ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಾರೆ ಅಥವಾ ಜೀವವನ್ನೇ ಕಳೆದುಕೊಳ್ಳುತ್ತಾರೆ. ಇಂಥ ಅನಾರೋಗ್ಯಕರ ಪ್ರವೃತ್ತಿಗೆ ಕಡಿವಾಣ ಹಾಕುವ ಉದ್ದೇಶದಿಂದಲೇ ʻಅಂತಾರಾಷ್ಟ್ರೀಯ ಡಯೆಟ್‌ ರಹಿತ ದಿನʼವನ್ನಾಗಿ ಮೇ ತಿಂಗಳ 6ನೇ ದಿನವನ್ನು ಗುರುತಿಸಲಾಗಿದೆ.

Girl having a cheat day

ಏನಿದರರ್ಥ?

ʻನೊ ಡಯೆಟ್‌ʼ ಎನ್ನುತ್ತಿದ್ದಂತೆ ಸಿಕ್ಕಿದ್ದೆಲ್ಲಾ ಕಬಳಿಸುವ ದಿನ ಎಂದು ಗ್ರಹಿಸುವುದಲ್ಲ. ನಮ್ಮ ದೇಹದ ಬಗೆಗಿನ ಕೀಳರಿಮೆಯನ್ನು ಬಿಟ್ಟು, ಧನಾತ್ಮಕವಾಗಿ ದೇಹವನ್ನು ಗ್ರಹಿಸುವ ಮತ್ತು ಸೌಂದರ್ಯದ ಭ್ರಮೆಯಲ್ಲಿ ಶರೀರದ ಮೇಲೆ ಹುಚ್ಚು ಡಯೆಟ್‌ ಪ್ರಯೋಗಗಳನ್ನು ಮಾಡುವುದನ್ನು ನಿಲ್ಲಿಸಬೇಕೆಂಬ ಸಂದೇಶವನ್ನು ಸಾರುವ ದಿನವಿದು. ನಾವಿದ್ದಂತೆಯೇ ನಮ್ಮನ್ನು ಒಪ್ಪಿಕೊಳ್ಳುವುದು ಸಕಾರಾತ್ಮಕ ಜೀವನಕ್ಕೆ ಎಷ್ಟು ಮುಖ್ಯ ಎಂಬ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶ. ಸೌಂರ್ಯದ ಹೆಸರಿನಲ್ಲಿ ಎಲ್ಲರೂ ಒಂದೇ ಮಾನದಂಡಕ್ಕೆ ಒಳಪಡುವುದು ಸಾಧ್ಯವಿಲ್ಲ. ಬದಲಿಗೆ, ವಿವಿಧತೆಯೇ ಸೌಂದರ್ಯ ಎಂಬ ಸರಳ ಸೂತ್ರ ಇದರ ಹಿಂದಿದೆ.

ಯಾಕೆ ಬಂತು ಈ ದಿನ?

ಇದು ಪ್ರಾರಂಭವಾಗಿದ್ದು ಬ್ರಿಟನ್‌ನಲ್ಲಿ 1992ರಲ್ಲಿ. ಅಲ್ಲಿನ ಮೇರಿ ಇವಾನ್ಸ್‌ ಯಂಗ್‌ ಈ ದಿನವನ್ನು ಮೊದಲಿಗೆ ಉದ್ದೇಶಿಸಿದ್ದು. ತನ್ನ ದೇಹ ಇರುವ ರೀತಿಯನ್ನು ಒಪ್ಪಿಕೊಳ್ಳಲಾರದೆ, ಆಹಾರ ಕ್ರಮವನ್ನು ಸಿಕ್ಕಾಪಟ್ಟೆ ಏರುಪೇರಾಗಿಸಿಕೊಂಡು, ಅದರಿಂದ ಅನೊರೆಕ್ಸಿಯ ರೋಗಕ್ಕೆ ಆಕೆ ತುತ್ತಾಗಿದ್ದರು. ಇದರಿಂದ ಚೇತರಿಸಿಕೊಂಡ ನಂತರ, ಸೌಂದರ್ಯದ ಹೆಸರಿನಲ್ಲಿ ಅವೈಜ್ಞಾನಿಕ ಡಯೆಟ್‌ಗಳನ್ನು ಪಾಲಿಸುವ ಪದ್ಧತಿಯ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶದಿಂದ, ಲಂಡನ್‌ನ ಹೈಡ್‌ ಪಾರ್ಕ್‌ನಲ್ಲಿ ಇದನ್ನು ಪ್ರಾರಂಭಿಸಿದರು. ಅದೊಂದು, ಹತ್ತಿಪ್ಪತ್ತು ಮಂದಿ ಮಹಿಳೆಯರು ಭಾಗವಹಿಸಿದ್ದ, ಸಣ್ಣ ಪಿಕ್‌ನಿಕ್‌ ರೂಪದಲ್ಲಿ ಮೊದಲಾಯಿತು. ಡಯೆಟ್‌ ಹೆಸರಿನಲ್ಲಿ ತಲೆಬುಡವಿಲ್ಲದ ಆಹಾರ ಕ್ರಮಗಳಿಂದ ದೇಹ-ಮನಸ್ಸುಗಳ ಮೇಲೆ ಆಗುವ ವಿಪರೀತ ಪರಿಣಾಮಗಳನ್ನು ತಿಳಿಸುವುದು ಅಂದಿನ ಉದ್ದೇಶವಾಗಿತ್ತು. ತೂಕದ ವಿಷಯಕ್ಕೆ ಅತಿ ಮಹತ್ವ ನೀಡುವುದು, ಯಾವುದೋ ಒಪ್ಪಿತ ಅಳತೆಗಳಿಗೆ ಒಗ್ಗದವರತ್ತ ತಾರತಮ್ಯ ಮಾಡುವುದು ಇಂಥವನ್ನೆಲ್ಲ ಬಿಟ್ಟು, ಆಹಾರದೊಂದಿಗೆ ಆರೋಗ್ಯಕರ ನಂಟು ಬೆಳೆಸಿಕೊಳ್ಳುವುದು ಅಗತ್ಯ. ಇದನ್ನೇ ಇಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ಮಾಡಲಾಗುತ್ತಿದೆ. ಆದರೆ ಡಯೆಟ್‌ ಮಾಡಬಾರದೆಂದರೆ ಏನೆಂಬುದನ್ನು ಇನ್ನಷ್ಟು ನಿಖರವಾಗಿ ಸ್ಪಷ್ಟಪಡಿಸುವ ಅಗತ್ಯವಿದೆ. ಹಾಗಲ್ಲದಿದ್ರೆ ತಪ್ಪು ಕಲ್ಪನೆಗಳಿಗೆ ಎಡೆಯಾಗಬಹುದು.

Woman dieting and eating a salad

ಏನು ಮಾಡಬೇಕು?

ಮನಸ್ಸಿಗೆ ಬಂದಿದ್ದೆಲ್ಲ ತಿನ್ನುವುದನ್ನು ಪ್ರಚಾರ ಮಾಡುವ ದಿನವಲ್ಲ ಇದು. ಬದಲಿಗೆ ಆರೋಗ್ಯಕರ ಆಹಾರ ಕ್ರಮವನ್ನು ರೂಢಿಸಿಕೊಳ್ಳಲು ಅಂದು ಪ್ರೋತ್ಸಾಹ ನೀಡುವುದು ಮಹತ್ವದ್ದು. ದೇಹ-ಮನಸ್ಸಿಗೆ ಚೈತನ್ಯ ನೀಡುವಂಥ ಸಮತೋಲಿತ ಆಹಾರವನ್ನು ಸೇವಿಸುವುದಕ್ಕಿಂತ ದೇಹದ ತೂಕ, ಸಪೂರ ಕಾಣುವುದು ಮುಖ್ಯವಲ್ಲ. ದೇಹದ ತೂಕ ಕೆಲವೊಮ್ಮೆ ಆನುವಂಶಿಕವಾಗಿ ಬರಬಹುದು, ಹಾರ್ಮೋನುಗಳ ಏರುಪೇರಿನಿಂದ ಬರಬಹುದು, ಔಷಧಿಗಳ ಅಡ್ಡ ಪರಿಣಾಮಗಳಾಗಿರಬಹುದು. ಹಾಗಾಗಿ ಎಲ್ಲವನ್ನೂ ಒಂದೇ ತಕ್ಕಡಿಯಲ್ಲಿ ಹಾಕದೆ, ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳುವತ್ತ ಗಮನ ಕೊಡಿ. ಯಾರದ್ದೋ ಫೋಟೋಶಾಪ್‌ ಮಾಡಿದ ದೇಹಗಳಂತೆ ತಮ್ಮದಿಲ್ಲ ಎಂದು ಕೊರಗಬೇಡಿ. ಒತ್ತಡ ರಹಿತವಾಗಿ ಬದುಕುವತ್ತ ಗಮನ ನೀಡಿ. ಧನಾತ್ಮಕ ಸಿಂತನೆಗಳನ್ನು ಬೆಳೆಸಿಕೊಳ್ಳಿ. ಆರೋಗ್ಯವಂತ ದೇಹದ ಸುಂದರ ನಗುವಿಗಿಂತ ಸುಂದರವಾಗಿದ್ದು ಲೋಕದಲ್ಲಿ ಇನ್ನಾವುದೂ ಇಲ್ಲ.

ಇದನ್ನೂ ಓದಿ: Cooking Oils: ಈ 5 ಅಡುಗೆ ಎಣ್ಣೆಗಳು ನಮ್ಮ ಆರೋಗ್ಯಕ್ಕೆ ಅಪಾಯಕಾರಿ!

Continue Reading
Advertisement
Weight Loss Tips kannada
ಲೈಫ್‌ಸ್ಟೈಲ್2 mins ago

Weight Loss Tips Kannada: ಈ ಐದರಲ್ಲಿ ಒಂದು ಜ್ಯೂಸ್‌ ಕುಡಿಯುತ್ತಿದ್ದರೂ ಸಾಕು, ನಿಮ್ಮ ದೇಹ ತೂಕ ಇಳಿಯುತ್ತದೆ!

Laborer died by falling tree in Somawarpet
ಕೊಡಗು3 mins ago

Kodagu News: ಸೋಮವಾರಪೇಟೆಯಲ್ಲಿ ಮರ ಬಿದ್ದು ಕಾರ್ಮಿಕ ಸಾವು

Akshaya Tritiya-2024
ಲೈಫ್‌ಸ್ಟೈಲ್8 mins ago

Akshaya Tritiya 2024: ಅಕ್ಷಯ ತೃತೀಯದಂದು ಏನು ಮಾಡಬೇಕು, ಏನು ಮಾಡಬಾರದು?

Rahul Gandi
ದೇಶ12 mins ago

Rahul Gandhi : ಸುಳ್ಳು ಹರಡಬೇಡಿ, ಸುಮ್ಮನಿರಿ; ರಾಹುಲ್​ ಗಾಂಧಿಗೆ ಬಹಿರಂಗ ಪತ್ರ ಬರೆದು ಕುಟುಕಿದ ಯೂನಿವರ್ಸಿಟಿಗಳ ಕುಲಪತಿಗಳು

Lok Sabha Election 2024
ಬಾಗಲಕೋಟೆ21 mins ago

Lok Sabha Election 2024: ಚುನಾವಣಾ ಕರ್ತವ್ಯದ ಮೇಲೆ ತೆರಳುತ್ತಿದ್ದ ಮುಖ್ಯ ಶಿಕ್ಷಕ ಹೃದಯಾಘಾತದಿಂದ ಸಾವು

The Goat Life OTT Release Date Fix
ಒಟಿಟಿ30 mins ago

The Goat Life: ಪೃಥ್ವಿರಾಜ್ ಸುಕುಮಾರನ್ ಅಭಿನಯದ ʻಆಡುಜೀವಿತಂʼ ಒಟಿಟಿ ರಿಲೀಸ್‌ ಎಲ್ಲಿ?

No Diet Day
ಆರೋಗ್ಯ30 mins ago

No Diet Day: ಬೇಕಾಬಿಟ್ಟಿ ಡಯಟ್‌ ಮಾಡಿದರೆ ಏನಾಗುತ್ತದೆ? ಈ ಸಂಗತಿ ತಿಳಿದಿರಲಿ

Dead Body Found
ಕ್ರೈಂ36 mins ago

Dead Body Found: ಕಾಫಿ ತೋಟದ ಮಧ್ಯೆ ನೇತಾಡುತ್ತಿತ್ತು ವ್ಯಕ್ತಿ ಶವ; ಕೆರೆಯಲ್ಲಿ ತೇಲಿ ಬಂದ ಅಪರಿಚಿತ

Medical Students
ದೇಶ41 mins ago

Medical Students: ಸಮುದ್ರದಲ್ಲಿ ಮುಳುಗಿ 5 ಮೆಡಿಕಲ್‌ ವಿದ್ಯಾರ್ಥಿಗಳ ಸಾವು!

India's T20 World Cup Jersey
ಕ್ರೀಡೆ49 mins ago

India’s T20 World Cup Jersey: ಟಿ20 ವಿಶ್ವಕಪ್​ಗೆ ಹೊಸ ಜೆರ್ಸಿಯಲ್ಲಿ ಆಡಲಿದೆ ಭಾರತ; ಜೆರ್ಸಿ ಫೋಟೊ ವೈರಲ್​

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina bhavishya
ಭವಿಷ್ಯ13 hours ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ22 hours ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ23 hours ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ24 hours ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ3 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ3 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ4 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ4 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ5 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

ಟ್ರೆಂಡಿಂಗ್‌