Mobile Battery Tips : ನಿಮ್ಮ ಮೊಬೈಲ್‌ ಬ್ಯಾಟರಿ ಹೆಚ್ಚು ಬಾಳಿಕೆ ಬರಬೇಕೆ? ಹೀಗೆ ಮಾಡಿ - Vistara News

ಲೈಫ್‌ಸ್ಟೈಲ್

Mobile Battery Tips : ನಿಮ್ಮ ಮೊಬೈಲ್‌ ಬ್ಯಾಟರಿ ಹೆಚ್ಚು ಬಾಳಿಕೆ ಬರಬೇಕೆ? ಹೀಗೆ ಮಾಡಿ

ನಿಮ್ಮ ಸ್ಮಾರ್ಟ್‌ಫೋನ್‌ ಬ್ಯಾಟರಿಯ ಆಯಸ್ಸನ್ನು ಹೆಚ್ಚಾಗಿಸಿಕೊಳ್ಳಬೇಕೆಂದರೆ ಏನು ಮಾಡಬೇಕು ಎನ್ನುವ ಬಗ್ಗೆ ಇಲ್ಲಿ ಕೆಲವು ಮಾಹಿತಿಗಳನ್ನು (Mobile Battery Tips) ಹಂಚಿಕೊಂಡಿದ್ದೇವೆ.

VISTARANEWS.COM


on

Mobile Charage
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಎಲ್ಲ ಬ್ಯಾಟರಿಗಳಿಗೂ ಒಂದು ಅಂತ್ಯವೆನ್ನುವುದು ಇದ್ದೇ ಇರುತ್ತದೆ. ಅದೇ ರೀತಿ ನಿಮ್ಮ ಫೋನ್‌ನೊಳಗಿರುವ ಬ್ಯಾಟರಿಗೆ ಕೂಡ. ಆದರೆ ಫೋನ್‌ನ ಬ್ಯಾಟರಿಗಳ ವ್ಯಾಲಿಡಿಟಿ ನಿರ್ಧಾರವಾಗುವುದು ನೀವು ಅವುಗಳನ್ನು ಹೇಗೆ ಬಳಸಿಕೊಳ್ಳುತ್ತೀರಿ ಎನ್ನುವುದರ ಮೇಲೆ. ಬ್ಯಾಟರಿ ಹಲವು ವರ್ಷಗಳ ಕಾಲ ಚೆನ್ನಾಗಿಯೇ ಇರಬೇಕು ಎನ್ನುವುದಾದರೆ ನೀವು ಅದರ ಬಗ್ಗೆ ಸ್ವಲ್ಪ ಕಾಳಜಿ ವಹಿಸಲೇಬೇಕಾಗುತ್ತದೆ. ಹೇಗೆ ನೀವು ನಿಮ್ಮ ಫೋನ್‌ ಬ್ಯಾಟರಿ ಬಗ್ಗೆ ಕಾಳಜಿ ವಹಿಸಬಹುದು (Mobile Battery Tips) ಎನ್ನುವುದಕ್ಕೆ ಇಲ್ಲಿದೆ ಮಾಹಿತಿ.

ಚಾರ್ಜರ್‌ ಯಾವುದು?

ಸಾಮಾನ್ಯವಾಗಿ ಎಲ್ಲರಿಗೂ ಒಂದು ಅಭ್ಯಾಸವಿರುತ್ತದೆ. ನಿಮ್ಮ ಫೋನ್‌ಗೆ ಸರಿಹೊಂದುವಂತಹ ಯಾವುದೇ ಚಾರ್ಜರ್‌ ಆದರೂ ಸರಿಯೇ, ಚಾರ್ಜ್‌ಗೆ ಹಾಕಿಬಿಡುತ್ತೀರಿ. ಆದರೆ ಇದರಿಂದ ನಿಮ್ಮ ಬ್ಯಾಟರಿ ಆದಷ್ಟು ಬೇಗ ಹಾಳಾಗಿಬಿಡಬಹುದು. ನಿಮ್ಮ ಫೋನ್‌ಗೆ ಬ್ಯಾಟರಿ ಚಾರ್ಜಿಂಗ್‌ ಕ್ಯಾಪಾಸಿಟಿ ಇರುತ್ತದೆ. ಅದು ಎಷ್ಟು ವೋಲ್ಟೇಜ್‌ ಇದೆಯೋ ಅಷ್ಟೇ ವೋಲ್ಟೇಜ್‌ನದ್ದು ಚಾರ್ಜರ್‌ ಅನ್ನು ಫೋನ್‌ನೊಂದಿಗೆ ಕೊಡಲಾಗಿರುತ್ತದೆ. ನೀವು ಅದನ್ನು ಬಿಟ್ಟು ಬೇರೆ ಚಾರ್ಜರ್‌ಗೆ ಹಾಕಿದಾಗ ಅದರಲ್ಲಿ ವೋಲ್ಟೇಜ್‌ ಹೆಚ್ಚು ಕಡಿಮೆಯಾಗುತ್ತದೆ. ಅದು ನಿಮ್ಮ ಬ್ಯಾಟರಿ ಸಾಮರ್ಥ್ಯವನ್ನು ಕುಗ್ಗಿಸುತ್ತದೆ.

ಇದನ್ನೂ ಓದಿ: ರಿಕವರಿಗೆ ತೆರಳಿದ್ದ ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ಕೇರಳದಲ್ಲಿ ಅರೆಸ್ಟ್‌!

ಅಗ್ಗದ ಚಾರ್ಜರ್‌


ನಿಮ್ಮ ಒರಿಜಿನಲ್‌ ಚಾರ್ಜರ್‌ ಕಳೆದುಹೋಯಿತು ಎನ್ನುವ ಕಾರಣಕ್ಕೆ ಮಾರುಕಟ್ಟೆಯಲ್ಲಿ ಕಡಿಮೆ ದರದಲ್ಲಿ ಯಾವುದು ಸಿಗುತ್ತದೆ ಎಂದು ಅಗ್ಗದ ಚಾರ್ಜರ್‌ ತಂದು ಚಾರ್ಜಿಂಗ್‌ ಹಾಕಬೇಡಿ. ಸ್ಥಳೀಯವಾಗಿ ಮಾಡುವ ಅಗ್ಗದ ಚಾರ್ಜರ್‌ಗಳು ನಿಮಗೆ ಸುರಕ್ಷತೆ ಬಗ್ಗೆ ಯಾವುದೇ ಗ್ಯಾರಂಟಿ ಕೊಡುವುದಿಲ್ಲ. ಇದರಿಂದಾಗಿ ನಿಮ್ಮ ಫೋನ್‌ ಹಾಳಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಫೋನ್‌ ಕವರ್‌ ಬೇಡ

ಫೋನ್‌ ಸುರಕ್ಷಿತವಾಗಿರಬೇಕೆಂದರೆ ಅದಕ್ಕೆ ಫೋನ್‌ ಕವರ್‌ ಹಾಕಬೇಕು. ಆದರೆ ಅದನ್ನು ಚಾರ್ಜ್‌ ಮಾಡುವ ಸಮಯದಲ್ಲಿ ಫೋನ್‌ ಕವರ್‌ ತೆಗೆಯುವುದು ಒಳಿತು. ಸಾಮಾನ್ಯವಾಗಿ ಚಾರ್ಜ್‌ ಆಗುವಾಗ ಬ್ಯಾಟರಿ ಬಿಸಿಯಾಗುತ್ತವೆ. ಆದರೆ ಅದಕ್ಕೆ ಫೋನ್‌ ಕವರ್‌ಗಳು ಅಡ್ಡಿಯುಂಟುಮಾಡಬಹುದು. ಹಾಗಾಗಿ ಕವರ್‌ ತೆಗೆದು ಫೋನ್‌ ಚಾರ್ಜ್‌ಗೆ ಹಾಕಿ ಅದನ್ನು ಯಾವುದಾದರೂ ಮೆತ್ತಗಿನ ಸ್ಥಳದಲ್ಲಿ ಉಲ್ಟಾ ಇಡುವುದು ಒಳಿತು.

ಫಾಸ್ಟ್‌ ಚಾರ್ಜರ್‌ ಏಕೆ?

ಫಾಸ್ಟ್‌ ಚಾರ್ಜ್‌ ಮಾಡಿಕೊಳ್ಳುವುದು ನಿಮಗೆ ಸಮಯ ಉಳಿತಾಯ ಮಾಡುತ್ತದೆ ಹೌದು. ಆದರೆ ಯಾವಾಗಲೂ ಫಾಸ್ಟ್‌ ಚಾರ್ಜಿಂಗ್‌ ಮೊರೆಹೋಗುವುದು ಸೂಕ್ತವಲ್ಲ. ಫಾಸ್ಟ್‌ ಚಾರ್ಜಿಂಗ್‌ನಿಂದಾಗಿ ಫೋನ್‌ ಬ್ಯಾಟರಿಗೆ ಹೆಚ್ಚಿನ ವೋಲ್ಟೇಜ್‌ ಹೋಗುತ್ತದೆ. ಅದರಿಂದಾಗಿ ಬ್ಯಾಟರಿ ಬೇಗನೆ ಬಿಸಿ ಆಗಬಹುದು. ಹಾಗಾಗಿ ಆಗಾಗ ಸಾಮಾನ್ಯ ಚಾರ್ಜರ್‌ನಲ್ಲೂ ಚಾರ್ಜಿಂಗ್‌ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ.

ರಾತ್ರಿ ಚಾರ್ಜಿಂಗ್‌

ಬೆಳಗ್ಗೆಯೆಲ್ಲ ಫೋನ್‌ ಬಳಸಿ, ರಾತ್ರಿ ಮಲಗುವ ವೇಳೆ ಅದನ್ನು ಚಾರ್ಜ್‌ಗೆ ಹಾಕಿ ಮಲಗುವ ಅಭ್ಯಾಸ ಅನೇಕರಿಗಿದೆ. ಆದರೆ ಇದು ಫೋನ್‌ಗೆ ಒಳ್ಳೆಯದಲ್ಲ. ಓವರ್‌ ಚಾರ್ಜಿಂಗ್‌ ಆಗುವುದರಿಂದ ಬ್ಯಾಟರಿ ಸಾಮರ್ಥ್ಯ ಬೇಗ ಕಡಿಮೆಯಾಗುತ್ತದೆ.

ಥರ್ಡ್‌ ಪಾರ್ಟಿ ಬ್ಯಾಟರಿ ಆಪ್‌

ಬ್ಯಾಟರಿ ಸೇವ್‌ ಮಾಡುತ್ತೇವೆ ಎನ್ನುವಂತಹ ಹಲವಾರು ಆಪ್‌ಗಳಿವೆ. ಆದರೆ ಅದನ್ನು ಡೌನ್‌ಲೋಡ್‌ ಮಾಡಿಕೊಳ್ಳುವಂತಹ ತಪ್ಪನ್ನು ಮಾಡಲು ಹೋಗಬೇಡಿ. ಥರ್ಡ್‌ ಪಾರ್ಟಿ ಬ್ಯಾಟರಿ ಆಪ್‌ಗಳು ನಿಮ್ಮ ಮೊಬೈಲ್‌ ಬ್ಯಾಟರಿಗೆ ಋಣಾತ್ಮಕವಾಗಿಯೇ ಕೆಲಸ ಮಾಡುತ್ತವೆ. ಇದರಿಂದ ನಿಮ್ಮ ಫೋನಿನ ಬ್ಯಾಟರಿ ಲೈಫ್‌ ಕಡಿಮೆಯಾಗುತ್ತದೆ.

80% ಆದರೂ ಚಾರ್ಜ್‌ ಆಗಲಿ

ಫೋನ್‌ ಚಾರ್ಜ್‌ ತೀರಾ ಕಡಿಮೆಯಾದಾಗ ಚಾರ್ಜ್‌ಗೆ ಹಾಕಿ ಒಂದು ಹತ್ತಿಪ್ಪತ್ತು % ಆದ ತಕ್ಷಣ ಅದನ್ನು ತೆಗೆದು ಫೋನ್‌ ಅನ್ನು ಮತ್ತೆ ಬಳಸುವ ಅಭ್ಯಾಸ ನಿಮಗಿರಬಹುದು. ಅದು ಕೂಡ ಫೋನ್‌ ಬ್ಯಾಟರಿಗೆ ಒಳ್ಳೆಯದಲ್ಲ. ನಿಮ್ಮ ಫೋನ್‌ ಕೊನೆ ಪಕ್ಷ 80% ಆದರೂ ಚಾರ್ಜ್‌ ಆಗಲು ಬಿಡಿ.

ಪದೇಪದೆ ಚಾರ್ಜಿಂಗ್‌ ಬೇಡ

ಕೆಲವರಿಗೆ ಫೋನ್‌ನಲ್ಲಿ ಚಾರ್ಜ್‌ ಕಡಿಮೆ ಇರುವುದನ್ನು ನೋಡಲಾಗುವುದಿಲ್ಲ. ಹಾಗಾಗಿ ಪದೇಪದೆ ಫೋನ್‌ ಅನ್ನು ಚಾರ್ಜ್‌ಗೆ ಹಾಕುತ್ತಿರುತ್ತಾರೆ. ಈ ರೀತಿ ಮಾಡುವುದು ಕೂಡ ನಿಮ್ಮ ಫೋನ್‌ ಬ್ಯಾಟರಿಗೆ ತೊಂದೆಯನ್ನುಂಟುಮಾಡುತ್ತದೆ. ಒಮ್ಮೆ ಫೋನ್‌ ಅನ್ನು ಚಾರ್ಜ್‌ ಮಾಡಿದ ಮೇಲೆ ಅದರ ಚಾರ್ಜ್‌ 20%ಗಿಂತ ಕಡಿಮೆ ಬರುವವರೆಗೆ ಮತ್ತೆ ಚಾರ್ಜ್‌ಗೆ ಹಾಕಲು ಹೋಗಬೇಡಿ. 20%ಕ್ಕಿಂತ ಕಡಿಮೆ ಆದ ಮೇಲೆ ಚಾರ್ಜ್‌ಗೆ ಹಾಕಿ 80% ಆಗುವವರೆಗೆ ತೆಗೆಯಲು ಹೋಗಬೇಡಿ.

ಪವರ್‌ ಬ್ಯಾಂಕ್‌ ಆಯ್ಕೆ


ಪವರ್‌ ಬ್ಯಾಂಕ್‌ ನಿಜಕ್ಕೂ ಉಪಯುಕ್ತ. ಹಾಗೆಂದ ಮಾತ್ರಕ್ಕೆ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯ ಪವರ್‌ ಬ್ಯಾಂಕ್‌ ತೆಗೆದುಕೊಂಡು ಬಳಸಲು ಹೋಗಬೇಡಿ. ವೋಲ್ಟೇಜ್‌ ಏರಿಳಿತ, ಶಾರ್ಟ್‌ ಸರ್ಕ್ಯೂಟ್‌, ಹೆಚ್ಚಿನ ವಿದ್ಯುತ್‌ ವಿರುದ್ಧ ಸುರಕ್ಷತೆ ನೀಡುವಂತಹ ಪವರ್‌ ಬ್ಯಾಂಕ್‌ ಅನ್ನೇ ಖರೀದಿಸಿ ಉಪಯೋಗಿಸಿ. ಇದರಿಂದಾಗಿ ನಿಮ್ಮ ಫೋನಿನ ಬ್ಯಾಟರಿಯ ಆಯಸ್ಸು ಕಡಿಮೆಯಾಗುವುದು ತಪ್ಪುತ್ತದೆ.

ಫೋನ್‌ ಬಳಕೆ ಹೇಗೆ?

ಪವರ್‌ ಬ್ಯಾಂಕ್‌ಗೆ ನಿಮ್ಮ ಫೋನ್‌ ಅನ್ನು ಕನೆಕ್ಟ್‌ ಮಾಡಿರುವಾಗ ಫೋನ್‌ ಅನ್ನು ಬಳಸಲು ಹೋಗಬೇಡಿ. ಪವರ್‌ ಬ್ಯಾಂಕ್‌ನಿಂದ ಫೋನ್‌ ಚಾರ್ಜ್‌ ಆಗುತ್ತಿರುವಾಗ ಅದನ್ನು ಬಳಸಿದರೆ ಫೋನಿನಲ್ಲಿ ಬಿಸಿ ಜಾಸ್ತಿಯಾಗಿ ಫೋನಿನ ಬ್ಯಾಟರಿಗೆ ತೊಂದರೆಯುಂಟಾಗುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Healthy Sandwich Spread: ಮನೆಯಲ್ಲೇ ಮಾಡಿ ಕಡಿಮೆ ಕ್ಯಾಲರಿಯ ಆರೋಗ್ಯಕರ ಸ್ಯಾಂಡ್‌ವಿಚ್‌ ಸ್ಪ್ರೆಡ್‌!

ಮಕ್ಕಳಿರುವ ಹೆತ್ತವರಿಗಂತೂ, ವಾರದಲ್ಲಿ ಎರಡು ಸಲವಾದರೂ ಮನೆಯಲ್ಲಿ ಸ್ಯಾಂಡ್‌ವಿಚ್‌ ಮಾಡಬೇಕಾದ ಪ್ರಸಂಗಗಳು ಇದ್ದೇ ಇರುತ್ತವೆ. ಕಚೇರಿ ಕೆಲಸಕ್ಕೆ ಬೇಗ ಹೋಗಬೇಕಾದಾಗ, ಅತೀವ ಕೆಲಸದ ಒತ್ತಡದಲ್ಲಿರುವಾಗ, ಅಡುಗೆ ಮಾಡಲು ಪುರುಸೊತ್ತು, ವ್ಯವಧಾನ ಇರದಿದ್ದಾಗ, ಬೇರೆ ಅಡುಗೆ ಮಾಡಲು ಗೊತ್ತಿಲ್ಲದೇ ಇದ್ದಾಗ, ಏನಾದರೂ ರುಚಿಯಾಗಿ ತಿನ್ನಬೇಕೆಂದು ಬಯಕೆಯಾದಾಗ, ಹೀಗೆ ನಾನಾ ಕಾರಣಗಳಲ್ಲಿ ಸ್ಯಾಂಡ್‌ವಿಚ್‌ ಎಂಬ ತಿನಿಸು ಅಡುಗೆಮನೆಯಲ್ಲಿ ಹೊತ್ತಲ್ಲದ ಹೊತ್ತಿನಲ್ಲೆಲ್ಲ ಪ್ರತ್ಯಕ್ಷವಾಗುತ್ತದೆ. ಮನೆಯಲ್ಲೇ ಮಾಡಬಹುದಾದ ಸ್ಯಾಂಡ್‌ವಿಚ್‌ ಸ್ಪ್ರೆಡ್‌ಗಳ (healthy sandwich spread) ವಿವರ ಇಲ್ಲಿದೆ.

VISTARANEWS.COM


on

Healthy Sandwich Spread
Koo

ಸ್ಯಾಂಡ್‌ವಿಚ್‌ ಎಂಬ ತಿನಿಸು, ಬೆಳಗ್ಗೆ, ಮಧ್ಯಾಹ್ನ ಸಂಜೆ ರಾತ್ರಿಯೆನ್ನದೆ, ಯಾವುದೇ ಹೊತ್ತಿಗೂ ಹೊಟ್ಟೆ ತುಂಬಿಸಬಲ್ಲ ಒಂದು ಸುಲಭವಾದ ತಿನಿಸು. ಅಷ್ಟೇ ರುಚಿಯಾದ ತಿನಸು ಎಂಬುದರಲ್ಲೂ ಎರಡು ಮಾತಿಲ್ಲ. ಮಕ್ಕಳಿರುವ ಹೆತ್ತವರಿಗಂತೂ, ವಾರದಲ್ಲಿ ಎರಡು ಸಲವಾದರೂ ಮನೆಯಲ್ಲಿ ಸ್ಯಾಂಡ್‌ವಿಚ್‌ ಮಾಡಬೇಕಾದ ಪ್ರಸಂಗಗಳು ಇದ್ದೇ ಇರುತ್ತವೆ. ಕಚೇರಿ ಕೆಲಸಕ್ಕೆ ಬೇಗ ಹೋಗಬೇಕಾದಾಗ, ಅತೀವ ಕೆಲಸದ ಒತ್ತಡದಲ್ಲಿರುವಾಗ, ಅಡುಗೆ ಮಾಡಲು ಪುರುಸೊತ್ತು, ವ್ಯವಧಾನ ಇರದಿದ್ದಾಗ, ಬೇರೆ ಅಡುಗೆ ಮಾಡಲು ಗೊತ್ತಿಲ್ಲದೇ ಇದ್ದಾಗ, ಏನಾದರೂ ರುಚಿಯಾಗಿ ತಿನ್ನಬೇಕೆಂದು ಬಯಕೆಯಾದಾಗ, ಹೀಗೆ ನಾನಾ ಕಾರಣಗಳಲ್ಲಿ ಸ್ಯಾಂಡ್‌ವಿಚ್‌ ಎಂಬ ತಿನಿಸು ಅಡುಗೆಮನೆಯಲ್ಲಿ ಹೊತ್ತಲ್ಲದ ಹೊತ್ತಿನಲ್ಲೆಲ್ಲ ಪ್ರತ್ಯಕ್ಷವಾಗುತ್ತದೆ. ಬ್ರೆಡ್‌ ಆರೋಗ್ಯಕ್ಕೆ ಅಷ್ಟೇನೂ ಒಳ್ಳೆಯದಲ್ಲ ಎಂದು ತಿಳಿದಿದ್ದರೂ, ಬಹುತೇಕರ ಮನೆಗಳಲ್ಲಿ ಬ್ರೆಡ್‌ ಬಳಕೆ ಸಾಮಾನ್ಯ. ಈ ಬ್ರೆಡ್‌ ಒಳಗೆ ಮೆಯೋನೀಸ್‌ ಅಥವಾ ಇನ್ನೇನೋ ಅದರೊಳಗೆ ಸುರಿದು ಇನ್ನಷ್ಟು ಅನಾರೋಗ್ಯಕರ ವಾತಾವರಣವನ್ನು ಅಲ್ಲಿ ಸೃಷ್ಟಿಸುವುದು ಬೇಡವೆನಿಸಿದವರೆಲ್ರೂ, ಸ್ಯಾಂಡ್‌ವಿಚ್‌ನಲ್ಲೂ ಆರೋಗ್ಯಕರ ವಿಧಾನಗಳನ್ನು ಹುಡುಕುತ್ತಾರೆ. ಆದರಷ್ಟೂ ಬ್ರೆಡ್‌ ಜೊತೆಗೆ ಒಂದಷ್ಟು ತರಕಾರಿ, ಪ್ರೊಟೀನ್‌, ನೈಸರ್ಗಿಕ ಆಹಾರಗಳು ಹೊಟ್ಟೆ ಸೇರಲಿ ಎಂದು ಬಯಸುತ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ಬಗೆಬಗೆಯ ಸ್ಪ್ರೆಡ್‌ಗಳು ರುಚಿಕರವಾಗಿ ಕಂಡರೂ, ಅದರಲ್ಲಿರುವ ಆರೋಗ್ಯಕರ ಅಂಶಗಳು ಅಷ್ಟಕ್ಕಷ್ಟೇ ಎಂಬ ಸತ್ಯವೂ ತಿಳಿದಿರುವುದರಿಂದ ಒಂದಿಷ್ಟಿ ಒಳ್ಳೆಯ ಆರೋಗ್ಯಕರ, ಹಾಗೂ ಕಡಿಮೆ ಕ್ಯಾಲರಿಯ ಮನೆಯಲ್ಲೇ ಮಾಡಬಹುದಾದ ಸ್ಯಾಂಡ್‌ವಿಚ್‌ ಸ್ಪ್ರೆಡ್‌ಗಳ ವಿವರ ಇಲ್ಲಿದೆ. ಸಾಕಷ್ಟು ಪೋಷಕಾಂಶವನ್ನು ನೀಡುವ ಈ ಆರೋಗ್ಯಕರ ಸ್ಪ್ರೆಡ್‌ಗಳು (healthy sandwich spread) ಇವು.

Hummus Sandwich Spread

ಹುಮಸ್‌

ಚೆನ್ನಾ, ಎಳ್ಳು ಹಾಗೂ ಆಲಿವ್‌ ಎಣ್ಣೆಯಿಂದ ಮಾಡಬಹುದಾದ ಹುಮಸ್‌, ಪ್ರೊಟೀನ್‌ನಿಂದ ಸಮೃದ್ಧವಾಗಿರುವ ಸ್ಪ್ರೆಡ್‌. ಇದರಲ್ಲಿ ದೇಹಕ್ಕೆ ಅಗತ್ಯವಾದ ಒಳ್ಳೆಯ ಕೊಬ್ಬಿದೆ. ಇದನ್ನು ತಯಾರಿಸಿ, ಸ್ಯಾಂಡ್‌ವಿಚ್‌ ಮಾಡುವಾಗ ಒಳಗೆ ಲೇಪಿಸಿ ಟೊಮೇಟೋ, ಸೌತೆಕಾಯಿ ಇತ್ಯಾದಿಗಳನ್ನೂ ಇಟ್ಟು ಸ್ಯಾಂಡ್‌ವಿಚ್‌ ಮಾಡಬಹುದು.

Avocado Sandwich Spread

ಬೆಣ್ಣೆಹಣ್ಣು

ಅವಕಾಡೋ ಅಥವಾ ಬೆಣ್ಣೆಹಣ್ಣನ್ನು ಸ್ಯಾಂಡ್‌ವಿಚ್‌ ಒಳಗೆ ಸ್ಪ್ರೆಡ್‌ನಂತೆ ಬಳಸಬಹುದು. ರುಚಿಯಾದ ಹಾಗೂ ಅಷ್ಟೇ ಪೋಷಕಾಂಶಯುಕ್ತವೂ ಆಗಿರುವ ಈ ಸ್ಪ್ರೆಡ್‌ ಮಾಡಲು ಬೆಣ್ಣೆಹಣ್ಣಿಗೆ ವಿವಿಧ ಮಿಕ್ಸ್‌ಡ್‌ ಹರ್ಬ್ಸ್‌ ಹಾಗೂ ಮಸಾಲೆಗಳನ್ನು ಬಳಸಬಹುದು. ಸಿಹಿಯಾದ ಹಾಗೂ ಸ್ಪೈಸೀಯಾದ ಸ್ಯಾಂಡ್‌ವಿಚ್‌ಗಳೆರಡಕ್ಕೂ ಇದು ಸೂಕ್ತವಾದ ಆಯ್ಕೆ.

Berries Sandwich Spread

ಬೆರ್ರಿಗಳು

ನಿಮಗೆ ಅಥವಾ ನಿಮ್ಮ ಮಕ್ಕಳಿಗೆ ಸಿಹಿಯಾದ ಸ್ಯಾಂಡ್‌ವಿಚ್‌ ಇಷ್ಟವಾಗುತ್ತಿದ್ದರೆ, ಮಾರುಕಟ್ಟೆಯಿಂದ ಜ್ಯಾಮ್‌ ತಂದು ಸುರಿಯುವ ಬದಲು ಬೆರ್ರಿ ಹಣ್ಣುಗಳನ್ನು ಮ್ಯಾಶ್‌ ಮಾಡಿ ಬಳಸಬಹುದು. ನಿಮಗಿಷ್ಟವಾದ ಬೆರ್ರಿ ಹಣ್ಣುಗಳನ್ನು ಕೊಂಡು ತಂದು ಅವನ್ನೆಲ್ಲ ಮ್ಯಾಶ್‌ ಮಾಡಿ, ಸ್ವಲ್ಪ ಜೇನುತುಪ್ಪ ಸೇರಿಸಿ ಪೇಸ್ಟ್‌ ತರಹ ಮಾಡಿ, ನೈಸರ್ಗಿಕವಾದ ಸಿಹಿಯಾದ ಸ್ಯಾಂಡ್‌ವಿಚ್‌ಗಳನ್ನು ಮಾಡಬಹುದು. ಬೆಳಗಿನ ಹಗುರವಾದ ಉಪಹಾರಕ್ಕೆ ಇದನ್ನು ಮಾಡಬಹುದು.

Peanut Butter Sandwich Spread

ಪೀನಟ್‌ ಬಟರ್‌

ಮಾರುಕಟ್ಟೆಯಿಂದ ದೊಡ್ಡ ಜಾರ್‌ನಲ್ಲಿ ಪೀನಟ್‌ ಬಟರ್‌ ತಂದು ಸ್ಯಾಂಡ್‌ವಿಚ್‌ಗೆ ಸ್ಪ್ರೆಡ್‌ ಮಾಡಿ ಕೊಡುವ ಬದಲು ನೀವೇ ಏಕೆ ಪೀನಟ್‌ ಬಟರನ್ನು ಮನೆಯಲ್ಲಿಯೇ ಮಾಡಬಾರದು? ನೆಲಗಡಲೆಯಿಂದ ಪೀನಟ್‌ ಬಟರ್‌ ಮಾಡಿ ಅದರ ಜೊತೆಗೆ ಬಾಳೆಹಣ್ಣಿನ ತುಣುಕುಗಳನ್ನೂ ಸೇರಿಸಿ ಅದನ್ನು ಸ್ಯಾಂಡ್‌ವಿಚ್‌ ಸ್ಪ್ರೆಡ್‌ ಆಗಿ ಬಳಸಬಹುದು. ಬೇಕಾದರೆ ಜೇನುತುಪ್ಪವನ್ನೂ ಸೇರಿಸಬಹುದು.

Paneer Mayonnaise Sandwich Spread

ಪನೀರ್‌ನ ಮೆಯೋನೀಸ್‌

ನಿಮಗೆ ಮೆಯೋನೀಸ್‌ ಅತ್ಯಂತ ಪ್ರಿಯವಾದ ಸ್ಯಾಂಡ್‌ವಿಚ್‌ ಸ್ಪ್ರೆಡ್‌ ಆಗಿದ್ದರೆ, ನೀವು ಪನೀರ್‌ ಅಥವಾ ಮೊಸರಿನಿಂದ ಇಂತಹ ಸ್ಯಾಂಡ್‌ವಿಚ್‌ ಸ್ಪ್ರೆಡ್‌ ಮಾಡಬಹುದು. ಯಾವುದೇ ಕಷ್ಟವಿಲ್ಲದ, ರುಚಿಯಲ್ಲೂ ರಾಜಿ ಮಾಡಿಕೊಳ್ಳದ ಈ ಸ್ಪ್ರೆಡ್‌ ಮಕ್ಕಳಿಗೂ ಬಹಳ ಪ್ರಿಯವಾಗುತ್ತದೆ. ಮೊಸರಿನ ನೀರನ್ನು ಸಂಪೂರ್ಣವಾಗಿ ಒಂದು ಬಟ್ಟೆಯಲ್ಲಿ ಹಿಂಡಿ ತೆಗೆದು ಅಥವಾ ಪನೀರ್‌ರನ್ನು ಚೆನ್ನಾಗಿ ಮ್ಯಾಶ್‌ ಮಾಡಿ ಅದಕ್ಕೆ ಒಂದಿಷ್ಟು ನೆನೆಸಿದ ಗೋಡಂಬಿ ಹಾಗೂ ಒಂದು ಹಸಿ ಬೆಳ್ಳುಳ್ಳಿಯನ್ನು ಹಾಕಿ ಮಿಕ್ಸಿಯಲ್ಲಿ ರುಬ್ಬಿಕೊಂಡು ಪೇಸ್ಟ್‌ ತಯಾರಿಸಿ. ರುಚಿಗೆ ತಕ್ಕಷ್ಟು ಉಪ್ಪು, ಮಿಕ್ಸ್ಡ್‌ ಹರ್ಬ್ಸ್‌ ಸೇರಿಸಿದರೆ, ಮಾರುಕಟ್ಟೆಯ ಮೆಯೋನೀಸ್‌ಗಳೆಲ್ಲ ಮಕಾಡೆ ಮಲಗಬೇಕು!

ಇದನ್ನೂ ಓದಿ: Heatwave Effect: ಬೇಸಿಗೆಗೂ ಕಣ್ಣಿನ ಸಮಸ್ಯೆಗೂ ಇದೆ ನಂಟು!

Continue Reading

ಆರೋಗ್ಯ

Health Tips For Rainy Season: ಮಳೆಗಾಲ ಶುರುವಾಗಿದೆ, ಅನಾರೋಗ್ಯಕ್ಕೆ ತುತ್ತಾಗದಿರಲು ಈ ಸಲಹೆ ಪಾಲಿಸಿ

ಮಳೆಗಾಲದಲ್ಲಿ ಆರೋಗ್ಯವನ್ನು (Health Tips For Rainy Season) ಕಾಪಾಡಿಕೊಳ್ಳುವುದು ಬಹುಮುಖ್ಯ,. ಇದಕ್ಕಾಗಿ ಕೆಲವೊಂದು ಸಲಹೆಗಳನ್ನು ಪಾಲಿಸುವುದು ಒಳ್ಳೆಯದು. ಆಹಾರ ಮತ್ತು ಆರೋಗ್ಯದ ಕಾಳಜಿ ಹೆಚ್ಚಾಗಿದ್ದರೆ ಈ ಬಾರಿ ಮಳೆಗಾಲವನ್ನು ಸಂತೋಷದಿಂದ ಕಳೆಯಬಹುದು. ಮಳೆಗಾಲದಲ್ಲಿ ಆರೋಗ್ಯವಾಗಿರಲು ಏನು ಮಾಡಬೇಕು? ಇಲ್ಲಿದೆ ಉಪಯುಕ್ತ ಸಲಹೆ.

VISTARANEWS.COM


on

By

Man
Koo

ಮಳೆ ಆರಂಭವಾದಾಗ ಬಿಸಿಬಿಸಿ ಪಕೋಡ, ಚಹಾ, ಕಾಫಿ ಎಲ್ಲವೂ ನೆನಪಾಗುತ್ತದೆ. ಆದರೆ ಮಳೆಗಾಲ (Health Tips For Rainy Season) ಎಂದರೆ ನಾವು ಆರೋಗ್ಯದ (health) ಜೊತೆಜೊತೆಗೆ ಆಹಾರದ (food) ಬಗ್ಗೆಯೂ ಎಚ್ಚರವಹಿಸಬೇಕು. ಮಳೆಗಾಲ (Rainy Season) ಪ್ರಕೃತಿಯಲ್ಲಿ ಉಲ್ಲಾಸಕರ ಅನುಭವವನ್ನು ತುಂಬುವ ಸಮಯ. ಈ ಋತು ಎಲ್ಲರಿಗೂ ಅಚ್ಚುಮೆಚ್ಚಿನದ್ದಾಗಿದೆ.

ಮಳೆಗಾಲದ ಸಮಯದಲ್ಲಿ ಆರೋಗ್ಯದ ಬಗ್ಗೆ ಜಾಗೃತರಾಗಿದ್ದರೆ ರೋಗ ಮತ್ತು ಸೋಂಕುಗಳಿಂದ ದೂರವಿರಬಹುದು. ಇದಕ್ಕೆ ಸಹಾಯ ಮಾಡಲು ಟಾಪ್ 10 ಸಲಹೆಗಳು ಇಲ್ಲಿವೆ.

ಆರೋಗ್ಯದ ಅವಶ್ಯಕತೆಗಳನ್ನು ಅರ್ಥಮಾಡಿಕೊಳ್ಳುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಆರೋಗ್ಯ ಸೇವೆಗಳ ತಜ್ಞರು ಹೇಳುವ ಮಳೆಗಾಲದಲ್ಲಿ ಪಾಲಿಸಬೇಕಾದ ಕೆಲವು ವಿಚಾರಗಳ ಬಗ್ಗೆ ತಿಳಿದುಕೊಳ್ಳೋಣ.


ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ

ಇದು ಮಳೆಗಾಲದಲ್ಲಿ ನಾವು ತೆಗೆದುಕೊಳ್ಳಬೇಕಾದ ಮೊದಲ ಹೆಜ್ಜೆ. ರೋಗನಿರೋಧಕ ಶಕ್ತಿಯ ಕೊರತೆಯಿಂದಾಗಿ ಮಳೆಗಾಲದಲ್ಲಿ ಹೆಚ್ಚಿನ ರೋಗ ಮತ್ತು ಸೋಂಕುಗಳು ಹರಡುತ್ತವೆ. ಅಲ್ಲದೇ ವಾತಾವರಣದಲ್ಲಿ ಅತಿಯಾದ ತೇವಾಂಶದ ಪರಿಣಾಮವಾಗಿ ಕೆಮ್ಮು, ಶೀತ ಮತ್ತು ಜ್ವರ ಕಾಣಿಸಿಕೊಳ್ಳುತ್ತದೆ. ಮಳೆಗಾಲದಲ್ಲಿ ಸಂರಕ್ಷಿತವಾಗಿರಲು ಸೂಪ್‌ಗೆ ಬೆಳ್ಳುಳ್ಳಿಯನ್ನು ಸೇರಿಸುವುದು ಮತ್ತು ಚಹಾಕ್ಕೆ ಶುಂಠಿಯನ್ನು ಸೇರಿಸುವುದು ಮೊದಲಾದವುಗಳನ್ನು ಪ್ರಯತ್ನಿಸಬಹುದು.

ಕಹಿ ತರಕಾರಿಗಳನ್ನು ಸೇವಿಸಿ

ತಜ್ಞರು ಸೂಚಿಸುವಂತೆ ಇದು ಅತ್ಯಗತ್ಯ ಸಲಹೆಯಾಗಿದೆ. ಕೆಲವು ಸಂಸ್ಕೃತಿಯಲ್ಲಿ ಹಾಗಲಕಾಯಿಯಂತಹ ತರಕಾರಿಗಳನ್ನು ತಿನ್ನುವುದು ವಿಶೇಷವಾಗಿ ಮಳೆಗಾಲದಲ್ಲಿ ಸಂಪ್ರದಾಯದ ಒಂದು ಭಾಗವಾಗಿದೆ. ಅಂತಹ ತರಕಾರಿಗಳಿಂದ ನೀವು ಪಡೆಯುವ ಹಲವಾರು ಪ್ರಯೋಜನಗಳಿವೆ ಮತ್ತು ಆದ್ದರಿಂದ ನಿಮ್ಮ ದೈನಂದಿನ ಊಟದಲ್ಲಿ ಅದನ್ನು ಸೇರಿಸಿಕೊಳ್ಳಬೇಕು.

ಕುದಿಸಿದ ನೀರು ಕುಡಿಯಿರಿ

ಮಳೆಗಾಲದಲ್ಲಿ ಕಲುಷಿತ ನೀರಿನಿಂದ ಹಲವಾರು ರೋಗಗಳು ಬರಬಹುದು. ಆದ್ದರಿಂದ ಶುದ್ಧ ಮತ್ತು ಸುರಕ್ಷಿತ ನೀರನ್ನು ಮಾತ್ರ ಕುಡಿಯುತ್ತೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಕೆಲವೊಂದು ಕಾಯಿಲೆಗಳನ್ನು ತೊಡೆದುಹಾಕಲು ಮನೆಯಲ್ಲಿ ಕುದಿಸಿ ಆರಿಸಿದ ನೀರು ಬಳಸುವುದು ಉತ್ತಮ ಮಾರ್ಗವಾಗಿದೆ.


ಹಾಲಿನ ಉತ್ಪನ್ನಗಳನ್ನು ಸೇವಿಸಿ

ಮಳೆಗಾಲದಲ್ಲಿ ಹಾಲು ಅಜೀರ್ಣವನ್ನು ಉಂಟುಮಾಡಬಹುದು. ಇದಕ್ಕೆ ಪರ್ಯಾಯವಾಗಿ ಕಾಟೇಜ್ ಚೀಸ್, ತಾಜಾ ಮೊಸರು ಮತ್ತು ಮಜ್ಜಿಗೆಯಂತಹ ಇತರ ಡೈರಿ ಉತ್ಪನ್ನಗಳನ್ನು ಆಯ್ಕೆ ಮಾಡಬಹುದು. ಈ ಉತ್ಪನ್ನಗಳು ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಗಿಡಮೂಲಿಕೆ ಚಹಾಗಳನ್ನು ಸೇರಿಸಿ

ಗಿಡಮೂಲಿಕೆಯ ಚಹಾ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಉತ್ತಮ ಆರೋಗ್ಯವನ್ನು ಖಚಿತಪಡಿಸಿಕೊಳ್ಳಲು ಸಾಮಾನ್ಯ ಚಹಾಕ್ಕೆ ಬದಲಾಗಿ ಗಿಡಮೂಲಿಕೆ ಚಹಾಗಳಿಗೆ ಬದಲಾಯಿಸುವ ಸಮಯ. ಇದು ರೋಗನಿರೋಧಕ ಶಕ್ತಿ ಮತ್ತು ಹಸಿವನ್ನು ಹೆಚ್ಚಿಸುವುದು. ಒಂದೆರಡು ದಿನಗಳಲ್ಲೇ ಇದರ ಪರಿಣಾಮ ಗಮನಿಸಬಹುದು.

ಹಣ್ಣುಗಳ ಆಯ್ಕೆ ಮಾಡುವಾಗ ಜಾಗರೂಕರಾಗಿರಿ

ಎಲ್ಲಾ ಹಣ್ಣುಗಳನ್ನು ತಿನ್ನುವುದು ಉತ್ತಮ ಅಭ್ಯಾಸವಾಗಿದೆ. ಯಾಕೆಂದರೆ ಪ್ರತಿಯೊಂದರಿಂದಲೂ ಬಹು ಪೋಷಕಾಂಶಗಳೊಂದಿಗೆ ಪೂರ್ಣ ಪೋಷಣೆಯನ್ನು ಪಡೆಯುತ್ತೀರಿ. ಆದರೂ ಮಳೆಗಾಲದಲ್ಲಿ ಕಲ್ಲಂಗಡಿ ಸೇರಿದಂತೆ ಕೆಲವು ನಿರ್ದಿಷ್ಟ ಹಣ್ಣುಗಳನ್ನು ತ್ಯಜಿಸುವುದು ಒಳ್ಳೆಯದು. ಪೇರಳೆ, ಮಾವಿನ ಹಣ್ಣು, ಸೇಬು, ದಾಳಿಂಬೆ ಮೊದಲಾದ ಹಣ್ಣುಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಬಹುದು.

ಮಸಾಲೆಯುಕ್ತ ಆಹಾರದಿಂದ ದೂರವಿರಿ

ಮಸಾಲೆಯುಕ್ತ ಆಹಾರಕ್ಕಾಗಿ ಹಂಬಲಿಸುತ್ತಿದ್ದರೆ ಮಳೆಗಾಲದಲ್ಲಿ ಅದನ್ನು ಸೇವಿಸುವುದನ್ನು ನಿರ್ಬಂಧಿಸಬೇಕಾದ ಸಮಯವಾಗಿದೆ. ಇಂತಹ ಆಹಾರಗಳು ಚರ್ಮದ ಅಲರ್ಜಿ ಮತ್ತು ಕಿರಿಕಿರಿಯನ್ನು ಉಂಟು ಮಾಡುತ್ತದೆ. ಬದಲಾಗಿ ಆರೋಗ್ಯಕರ ಸೂಪ್‌ ಮತ್ತು ಕಡಿಮೆ ಅಥವಾ ಮಧ್ಯಮ ಮಸಾಲೆಯುಕ್ತ ಬೆಚ್ಚಗಿನ ಆಹಾರವನ್ನು ಸೇವಿಸಿ.

ನೀರು ನಿಲ್ಲದಂತೆ ಮಾಡಿ

ಮನೆಯ ಸುತ್ತಮುತ್ತ ಮಳೆಯಿಂದ ನಿಂತ ನೀರು ತೀವ್ರ ರೋಗಗಳಿಗೆ ಕಾರಣವಾಗಬಹುದು. ಆದ್ದರಿಂದ ಬಳಕೆಯಾಗದ ಟ್ಯಾಂಕ್, ವಾಟರ್ ಕೂಲರ್ ಮತ್ತು ಹೂವಿನ ಕುಂಡಗಳೊಳಗೆ ನೀರು ನಿಲ್ಲದಂತೆ ಮಾಡಿ. ನೀರಿನ ಮೇಲ್ಮೈಗಳನ್ನು ಸ್ವಚ್ಛವಾಗಿ ಮತ್ತು ಶುಷ್ಕವಾಗಿ ಇಟ್ಟುಕೊಳ್ಳುವುದು ಅಪಾರ ಪ್ರಯೋಜನವನ್ನು ನೀಡುತ್ತದೆ.

ಇದನ್ನೂ ಓದಿ: Hair Growth Tips: ಕೂದಲು ಉದುರುವುದಕ್ಕೆ ಬೀಟಾ ಕ್ಯಾರೊಟಿನ್‌ ಮದ್ದು!


ಸೊಳ್ಳೆ ನಿವಾರಕವನ್ನು ಬಳಸಿ

ಮಳೆಗಾಲದಲ್ಲಿ ಸೊಳ್ಳೆಗಳು ವೇಗವಾಗಿ ಬೆಳೆಯುತ್ತವೆ ಮತ್ತು ಇವು ದೊಡ್ಡ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಬಹುದು. ಈ ಸಮಯದಲ್ಲಿ ರೂಮ್ ಫ್ರೆಶ್ನರ್, ಸೌಮ್ಯವಾದ ಮಾರ್ಜಕ ಮತ್ತು ಸುಗಂಧ ದ್ರವ್ಯಗಳಂತಹ ಸೊಳ್ಳೆ ನಿವಾರಕಗಳು ಅತ್ಯಗತ್ಯವಾಗಿರುತ್ತದೆ.

ಛತ್ರಿ ಮತ್ತು ರೈನ್‌ಕೋಟ್‌ಗಳನ್ನು ಒಯ್ಯಿರಿ

ಮನೆಯಿಂದ ಹೊರಗೆ ಹೋಗುವಾಗ ಮಳೆಗಾಲದಲ್ಲಿ ಅಗತ್ಯವಿರುವ ಛತ್ರಿ ಅಥವಾ ರೈನ್ ಕೋಟ್ ಅಥವಾ ಎರಡನ್ನೂ ಒಯ್ಯಲು ಪ್ರಯತ್ನಿಸಿ. ಶೀತ, ಕೆಮ್ಮು, ಜ್ವರ ಮತ್ತು ಜ್ವರದಂತಹ ಕಾಯಿಲೆಗಳನ್ನು ತಪ್ಪಿಸಲು ನಿಮ್ಮನ್ನು ಶುಷ್ಕ, ತಾಜಾ ಮತ್ತು ಸ್ವಚ್ಛವಾಗಿರಿಸಿಕೊಳ್ಳುವುದು ಉತ್ತಮ ಮಾರ್ಗವಾಗಿದೆ.

Continue Reading

ಆರೋಗ್ಯ

Heatwave Effect: ಬೇಸಿಗೆಗೂ ಕಣ್ಣಿನ ಸಮಸ್ಯೆಗೂ ಇದೆ ನಂಟು!

ಬೇಸಿಗೆಯಿನ್ನೂ ಮುಗಿದಿಲ್ಲ. ದೆಹೆಲಿಯಲ್ಲಿ ತಾಪಮಾನ 50 ಡಿ.ಸೆ. ದಾಟಿದೆ. ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವಂತೆ ಆರೋಗ್ಯ ತಜ್ಞರು ಎಚ್ಚರಿಕೆ ನೀಡುತ್ತಿದ್ದಾರೆ. ಉಷ್ಣತೆಗೂ ಕಣ್ಣಿಗೂ ಏನು ಸಂಬಂಧ? ಇದರಿಂದ ಕಣ್ಣುಗಳಿಗೆ ಆಗುವ ಹಾನಿಯೇನು? ಹಾಗಾಗದಂತೆ ಕಾಪಾಡಿಕೊಳ್ಳುವುದು ಹೇಗೆ- ಇತ್ಯಾದಿ ವಿವರಗಳು (Heatwave Effect) ಇಲ್ಲಿವೆ.

VISTARANEWS.COM


on

Heatwave Effect
Koo

ದೆಹೆಲಿಯಲ್ಲಿ ತಾಪಮಾನ (Heatwave Effect) 50 ಡಿಗ್ರಿ ಸೆಲ್ಶಿಯಸ್‌ ದಾಟಿಯಾಗಿದೆ. ದೇಶದ ಇನ್ನೂ ಕೆಲವೆಡೆಗಳಲ್ಲಿ ತಾಪಮಾನ ಗಗನಕ್ಕೇರಿದೆ. ದಕ್ಷಿಣದ ರಾಜ್ಯಗಳು ಮುಂಗಾರಿನ ಪ್ರವೇಶಕ್ಕೆ ಅಣಿಯಾಗುತ್ತಿದ್ದರೆ, ಉತ್ತರ ಭಾರತದಲ್ಲಿನ್ನೂ ಉಷ್ಣತೆಯ ಹೊಡೆತ ನಿಂತಿಲ್ಲ. ಬಿಸಿಲಿಗೆ ಎಚ್ಚರ ತಪ್ಪುವುದು, ನಿರ್ಜಲೀಕರಣದಿಂದ ಪ್ರಾಣಾಪಾಯಕ್ಕೆ ಒಳಗಾಗುವುದು ನಿಂತಿಲ್ಲ. ಮಾತ್ರವಲ್ಲ, ಕಣ್ಣಿನ ಪಾರ್ಶ್ವವಾಯುವಿಗೆ ತುತ್ತಾಗುವ ಪ್ರಕರಣಗಳೂ ವರದಿಯಾಗುತ್ತಿವೆ. ಏನು ಹಾಗೆಂದರೆ? ಬಿಸಿಲಿ ಹೆಚ್ಚಾದರೆ ಕಣ್ಣಿಗೆ ಏನಾಗುತ್ತದೆ?

Protection From Heatwave

ಏನು ನಂಟು?

ಅತಿಯಾದ ಬಿಸಿಲಿನ ಅಥವಾ ಉಷ್ಣತೆಯ ಹೊಡೆತವೇ ಈ ಸಮಸ್ಯೆಗೆ ನೇರವಾದ ಕಾರಣವಲ್ಲ. ಇದರಿಂದಾಗಿ ಉಂಟಾಗುವ ನಿರ್ಜಲೀಕರಣದಿಂದ ರಕ್ತ ಮಂದವಾಗುವುದು ಅಥವಾ ಹೆಪ್ಪುಗಟ್ಟುವಂತಾಗಬಹುದು. ಹೀಗೆ ಹೆಪ್ಪುಗಟ್ಟಿದ ರಕ್ತವು ಕಣ್ಣಿನ ಸಣ್ಣ ರಕ್ತನಾಳಗಳಲ್ಲಿ ಜಮೆಯಾಗಿ, ಕಣ್ಣಿಗೆ ಅಗತ್ಯವಾಗಿ ಬೇಕಾದ ರಕ್ತಸಂಚಾರವನ್ನು ತಡೆಯುತ್ತದೆ. ಇದರಿಂದ ಪಾರ್ಶ್ವವಾಯುವಿಗೆ ಕಾರಣವಾಗಿ, ಅಕ್ಯುಲರ್‌ ಸ್ಟ್ರೋಕ್‌ ಎಂದು ಕರೆಯಲಾಗುವ ಈ ಸಮಸ್ಯೆಯಿಂದ ದೃಷ್ಟಿಹೀನತೆಯೂ ಉಂಟಾಗಬಹುದು. ರಕ್ತ ಹೆಪ್ಪುಗಟ್ಟುವುದರಿಂದ ನಾಳಗಳು ಮುಚ್ಚಿಹೋಗಿ ಅಥವಾ ರಕ್ತಸಂಚಾರ ಸರಾಗ ಆಗದಿರುವಾಗ, ಮೆದುಳಿನಲ್ಲಿ ಸಂಭವಿಸುವ ಪಾರ್ಶ್ವವಾಯುವಿನ ಮಾದರಿಯಲ್ಲಿಯೇ ಇದು ಕಣ್ಣಿನಲ್ಲಿ ಸಂಭವಿಸುವಂಥದ್ದು. ಆಪ್ಟಿಕ್‌ ನರಗಳ ಮುಂಭಾಗಕ್ಕೆ ರಕ್ತಸಂಚಾರ ಇಲ್ಲದಿರುವಾಗ ಈ ತೊಂದರೆ ತಲೆದೋರುತ್ತದೆ. ಅಂದರೆ ಆಪ್ಟಿಕ್‌ ನರಗಳಿಗೆ ರಕ್ತ ಸಂಚಾರ ನಿಂತಾಗ ಹೀಗಾಗುತ್ತದೆ.

ಲಕ್ಷಣಗಳೇನು?

ಮೊದಲಿಗೆ ನಿರ್ಜಲೀಕರಣದ ಲಕ್ಷಣಗಳು ಕಂಡುಬರಬಹುದು. ಕೆಲವೊಮ್ಮೆ ಅದೂ ಕಾಣುವುದಿಲ್ಲ. ಬದಲಿಗೆ, ಯಾವುದೇ ನೋವಿಲ್ಲದೆ ಕಣ್ಣಿನ ಬೆಳಕು ಇದ್ದಕ್ಕಿದ್ದಂತೆ ಆರಬಹುದು. ಕಣ್ಣು ಪೂರ್ಣವಾಗಿ ಕಾಣದೆ ಹೋಗಬಹುದು ಅಥವಾ ಅರ್ಧ ಮಾತ್ರವೇ ಕಾಣಿಸಬಹುದು. ದೃಷ್ಟಿ ಮಸುಕಾಗಬಹುದು, ನೆರಳು ಬಿದ್ದಂತೆ ಕಾಣಬಹುದು, ಎದುರಿಗಿನ ವಸ್ತುವಿನ ನಡುವಿನ ಭಾಗ ಕಾಣದೆ ಕೇವಲ ಹೊರಗಿನ ಆವರಣವಷ್ಟೇ ಕಾಣಬಹುದು. ಕಪ್ಪಾಗಿ ಅಥವಾ ಅಸ್ಪಷ್ಟವಾಗಿ ಕಾಣಬಹುದು.

What is a heatwave?

ಏನು ಮಾಡಬೇಕು?

ಇಂಥ ಸಂದರ್ಭದಲ್ಲಿ ತ್ವರಿತವಾಗಿ ವೈದ್ಯರನ್ನು ಕಾಣಬೇಕು. ತಡಮಾಡಿದರೆ ದೃಷ್ಟಿಯನ್ನು ಶಾಶ್ವತವಾಗಿ ಕಳೆದುಕೊಳ್ಳುವ ಸಾಧ್ಯತೆಯಿದೆ. ಹೆಪ್ಪುಗಟ್ಟಿರುವ ರಕ್ತಕಣಗಳನ್ನು ಕರಗಿಸಲು ವೈದ್ಯರು ತುರ್ತಾಗಿ ಔಷಧಿ ನೀಡುತ್ತಾರೆ. ರೆಟಿನಾಗೆ ಶಾಶ್ವತ ಹಾನಿ ಆಗದಂತೆ, ದೇಹಕ್ಕೆ ಹೆಚ್ಚಿನ ಪ್ರಮಾಣದ ಆಮ್ಲಜನಕವನ್ನು ಪೂರೈಕೆ ಮಾಡುವ ಅಗತ್ಯ ಬರಬಹುದು. ಹೃದಯ ಸಮಸ್ಯೆಗಳಿದ್ದರೆ, ರಕ್ತ ನೀರಾಗಿಸುವ ಬಗ್ಗೆ ಮತ್ತು ರಕ್ತದೊತ್ತಡವನ್ನು ನಿರ್ವಹಿಸುವ ಬಗ್ಗೆ ಇನ್ನಷ್ಟು ಎಚ್ಚರಿಕೆಯನ್ನು ವೈದ್ಯರು ತೆಗೆದುಕೊಳ್ಳಬೇಕಾಗಬಹುದು.

ಇದನ್ನೂ ಓದಿ: Nosebleeds In Summer: ಬೇಸಿಗೆಯ ತಾಪಕ್ಕೆ ಮೂಗಿನಲ್ಲಿ ರಕ್ತಸ್ರಾವವೇ? ತಡೆಯಲು ಇಲ್ಲಿವೆ ಸರಳ ಉಪಾಯ

ತಡೆಯುವುದು ಹೇಗೆ?

ಉಷ್ಣತೆ ತೀವ್ರವಾಗಿರುವಾಗ, ತಾಪಮಾನ 42 ಡಿಗ್ರಿ ಸೆಲ್ಶಿಯಸ್‌ ದಾಟಿದರೆ, ಮನೆಯಿಂದ ಹೊರಗೆ ಹೋಗುವುದು ಅಪಾಯ ತರಬಹುದು. ಮನೆಯೊಳಗೇ ಇದ್ದರೂ ಚೆನ್ನಾಗಿ ನೀರು ಕುಡಿಯುವುದು ಕಡ್ಡಾಯ. ಬಿಸಿಲಿನಲ್ಲಿದ್ದರಂತೂ ನಿರ್ಜಲೀಕರಣದ ಅಪಾಯದಿಂದ ಪಾರಾಗಲು ಆ ಕುರಿತ ಮಾರ್ಗಸೂಚಿಯನ್ನು ಪಾಲಿಸದಿದ್ದರೆ ಪ್ರಾಣಾಪಾಯವೇ ಉಂಟಾಗಬಹುದು. ಜೀವನಶೈಲಿಯನ್ನು ಆರೋಗ್ಯವಾಗಿ ಇರಿಸಿಕೊಳ್ಳಿ. ಬೇಸಿಗೆಗೆ ಸೂಕ್ತವಾದ ಆಹಾರವನ್ನೇ ಸೇವಿಸಿ. ಎಣ್ಣೆ-ಜಿಡ್ಡಿನ ಆಹಾರಗಳು, ಕರಿದ ಪದಾರ್ಥಗಳು ಬೇಡ. ಋತುಮಾನದ ಹಣ್ಣು-ತರಕಾರಿ ಮತ್ತು ಡೇರಿ ಉತ್ಪನ್ನಗಳು ಆಹಾರದಲ್ಲಿ ಸೇರಿರಲಿ. ನೀರು ಕುಡಿಯುವುದಕ್ಕೆ ಬೋರು ಎನ್ನುವಂಥ ನೆವಗಳನ್ನು ಹೇಳಿ ಯದ್ವಾತದ್ವಾ ಫ್ರೂಟ್‌ಜ್ಯೂಸ್‌ ಗಳನ್ನು ಕುಡಿಯಬೇಡಿ. ಇದರಿಂದ ರಕ್ತದಲ್ಲಿನ ಸಕ್ಕರೆಯಂಶ ಹೆಚ್ಚಾಗಿ, ಮಧುಮೇಹವಿದ್ದರೆ ಕಣ್ಣಿನ ಸಮಸ್ಯೆ ಬರಬಹುದು. ಮಧುಮೇಹ, ಹೃದ್ರೋಗಗಳಿದ್ದರೆ ಕಾಲಕಾಲಕ್ಕೆ ಕಣ್ಣಿನ ತಪಾಸಣೆಯನ್ನೂ ಮಾಡಿಸಿಕೊಳ್ಳಿ. ಧೂಮಪಾನ ಬೇಡ, ಆಲ್ಕೋಹಾಲ್‌ ನಿರ್ಜಲೀಕರಣವನ್ನು ಹೆಚ್ಚಿಸುತ್ತದೆ ಎನ್ನುವುದನ್ನು ನೆನಪಿಡಿ.

Continue Reading

ಫ್ಯಾಷನ್

Star Saree Fashion: ಡಿಸೈನರ್‌ ಸೀರೆಯಲ್ಲಿ ನಟಿ ತಾನ್ಯಾ ಹೋಪ್‌ರಂತೆ ಕಾಣಲು ಈ 5 ಸಿಂಪಲ್‌ ರೂಲ್ಸ್ ಫಾಲೋ ಮಾಡಿ!

ಡಿಸೈನರ್‌ ಪಾರ್ಟಿವೇರ್‌ ಸೀರೆಯಲ್ಲಿ (Star Saree Fashion) ನಟಿ ತಾನ್ಯಾ ಹೋಪ್‌ರಂತೆ ಗ್ಲಾಮರಸ್‌ ಆಗಿ ಕಾಣಿಸಲು ನಿಮಗೂ ಆಸೆಯಾಗಿದೆಯೇ! ಹಾಗಾದಲ್ಲಿ, 5 ಸಿಂಪಲ್‌ ರೂಲ್ಸ್ ಫಾಲೋ ಮಾಡಿ ಎನ್ನುವ ಸ್ಟೈಲಿಸ್ಟ್ ಗಳು ಒಂದಿಷ್ಟು ಸಲಹೆ ನೀಡಿದ್ದಾರೆ.

VISTARANEWS.COM


on

Star Saree Fashion
ಚಿತ್ರಗಳು: ತಾನ್ಯಾ ಹೋಪ್‌, ನಟಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸ್ಯಾಂಡಲ್‌ವುಡ್‌ ಹಾಗೂ ಬಹುಭಾಷಾ ನಟಿ ತಾನ್ಯಾ ಹೋಪ್‌ ಸೀರೆಯಲ್ಲಿ (Star Saree Fashion) ಸಖತ್‌ ಗ್ಲಾಮರಸ್‌ ಆಗಿ ಕಾಣಿಸಿಕೊಂಡಿದ್ದಾರೆ. ಡಿಸೈನರ್‌ ಪಾರ್ಟಿವೇರ್‌ ಸೀರೆಯುಟ್ಟರೂ ಆಕರ್ಷಕವಾಗಿ ಹಾಗೂ ಗ್ಲಾಮರಸ್‌ ಆಗಿ ಕಾಣಿಸಬಹುದು ಎಂಬುದನ್ನು ನಟಿ ತಾನ್ಯಾ ಪ್ರೂವ್‌ ಮಾಡಿದ್ದಾರೆ. ಅವರು ಧರಿಸಿರುವ ಸೀರೆ ಅವರ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ. “ಪಾರ್ಟಿವೇರ್‌ ಸೀರೆಗಳು ಇದೀಗ ಅತಿ ಹೆಚ್ಚು ಟ್ರೆಂಡಿಯಾಗಿರುವ ಸೀರೆಗಳು! ಶಿಮ್ಮರ್‌ ಸೀರೆಗಳನ್ನು ಹೊರತುಪಡಿಸಿದಲ್ಲಿ, ಜಾರ್ಜೆಟ್ ಶೈಲಿಯ ಡಿಸೈನರ್‌ ಸೀರೆಗಳು ಇದೀಗ ಪಾರ್ಟಿ ಪ್ರಿಯ ಮಾನಿನಿಯರನ್ನು ಆಕರ್ಷಿಸಿವೆ. ಹಾಗೆಂದು ಇವುಗಳ ಬೆಲೆಯೇನೂ ಕಡಿಮೆಯೇನಿಲ್ಲ! ಎಂಬ್ರಾಯ್ಡರಿ ಹಾಗೂ ಅವುಗಳ ಡಿಸೈನ್‌ ಮತ್ತು ಫ್ಯಾಬ್ರಿಕ್‌ನ ಆಧಾರದ ಮೇಲೆ ಬೆಲೆ ನಿಗಧಿಯಾಗಿರುತ್ತವೆ. ಇನ್ನು ಇತ್ತೀಚೆಗೆ ಸೆಲೆಬ್ರೆಟಿಗಳು ಕೂಡ ಇಂತಹ ಸೀರೆಗಳತ್ತ ವಾಲಿದ್ದಾರೆ. ಮಾಮೂಲಿಯಂತೆ ಸ್ಟೈಲಿಂಗ್‌ ಮಾಡುವ ಬದಲು ಗ್ಲಾಮರಸ್‌ ಆಗಿ ಮಾಡುತ್ತಾರೆ. ಹಾಗಾಗಿ ನೋಡಲು ಚೆಂದನಾಗಿ ಕಾಣಿಸುತ್ತಾರೆ” ಎನ್ನುತ್ತಾರೆ ಸೀರೆ ಡ್ರೇಪಿಸ್ಟ್ ಧವನ್‌. ಇನ್ನು, ನಟಿ ತಾನ್ಯಾ ಹೋಪ್‌ರಂತೆ ಡಿಸೈನರ್‌ ಪಾರ್ಟಿವೇರ್‌ ಸೀರೆಯಲ್ಲಿ ಗ್ಲಾಮರಸ್‌ ಆಗಿ ಕಾಣಿಸಲು ಯಾರಿಗೆ ಇಷ್ಟವಿಲ್ಲ ಹೇಳಿ! ಹಾಗಾದಲ್ಲಿ ಒಂದಿಷ್ಟು ಸಿಂಪಲ್‌ ಟಿಪ್ಸ್ ಫಾಲೋ ಮಾಡಿ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಈ ಕುರಿತಂತೆ 5 ಟಿಪ್ಸ್ ನೀಡಿದ್ದಾರೆ.

Star Saree Fashion

ಪಾರ್ಟಿ ಥೀಮ್‌ಗೆ ತಕ್ಕ ಸೀರೆ ಆಯ್ಕೆ ಮಾಡಿ

ನೀವು ಭಾಗವಹಿಸುವ ಕಾಯರ್ಕ್ರಮಕ್ಕೆ ತಕ್ಕಂತೆ ಮ್ಯಾಚ್‌ ಆಗುವಂತಹ ಡಿಸೈನರ್‌ ಪಾರ್ಟಿವೇರ್ ಸೀರೆಗಳನ್ನು ಆಯ್ಕೆ ಮಾಡಿ. ಅದು ಟ್ರೆಡಿಷನಲ್‌ ಸಮಾರಂಭವೇ ಅಥವಾ ಕ್ಯಾಶುವಲ್‌ ಪಾರ್ಟಿಯಾ ಎಂಬುದು ತಿಳಿದು ಆರಿಸಿ.

ಮಿನುಗುವ ಡಿಸೈನ್ಸ್/ ಹ್ಯಾಂಡ್‌ವರ್ಕ್ ಸೀರೆಯ ಆಯ್ಕೆ

ಪಾರ್ಟಿಗೆ ಧರಿಸುವ ಸೀರೆಗಳು ಆದಷ್ಟೂ ಮಿನುಗುವ ಡಿಸೈನ್ಸ್ ಹೊಂದಿರಲಿ. ಎಂಬ್ರಾಯ್ಡರಿ ಹ್ಯಾಂಡ್‌ ವರ್ಕ್, ಕಟ್‌ವರ್ಕ್ ಡಿಸೈನ್ಸ್ ಇರುವಂತಹ ಡಿಸೈನರ್‌ ಸೀರೆ ಆಯ್ಕೆ ಮಾಡಿ. ಟ್ರೆಡಿಷನಲ್‌ ಲುಕ್‌ ಇರುವಂತವು ಬೇಡ!

Star Saree Fashion

ಡಿಸೈನರ್ ಸೀರೆಗೆ ಗ್ಲಾಮರಸ್‌ ಬ್ಲೌಸ್‌

ಡಿಸೈನರ್‌ ಸೀರೆಗೆ ಯಾವುದೇ ಕಾರಣಕ್ಕೂ ಟ್ರೆಡಿಷನಲ್‌ ಲುಕ್‌ ನೀಡುವಂತಹ ಎಥ್ನಿಕ್‌ ಡಿಸೈನ್‌ನ ಬ್ಲೌಸ್‌ ಆಯ್ಕೆ ಮಾಡಬೇಡಿ. ಹಾಲ್ಟರ್‌ ನೆಕ್‌ ಬ್ಲೌಸ್‌, ಸ್ಲಿವ್‌ಲೆಸ್‌ ಬ್ಲೌಸ್‌, ಬ್ಯಾಕ್‌ ಬಟನ್‌ ಬ್ಲೌಸ್‌, ಸ್ಟ್ರಾಪ್‌ ಬ್ಲೌಸ್‌ ಹಾಗೂ ಡಿಸೈನರ್‌ ಸ್ಲೀವ್‌ ಬ್ಲೌಸ್‌ಗಳನ್ನು ಸೆಲೆಕ್ಟ್ ಮಾಡಿ, ಧರಿಸಿ.

ಮಿನಿಮಲ್‌ ಆಭರಣ ಧರಿಸಿ

ಮೊದಲೇ ಪಾರ್ಟಿವೇರ್‌ ಡಿಸೈನರ್‌ ಸೀರೆಗಳು ಜಗಮಗಿಸುತ್ತಿರುತ್ತವೆ. ಇಲ್ಲವೇ ಎಂಬ್ರಾಯ್ಡರಿ ಹೈಲೈಟಾಗುತ್ತಿರುತ್ತವೆ. ಇವುಗಳನ್ನು, ಮಾಸುವಂತೆ ಮಾಡುವ ಹೆವ್ವಿ ಜ್ಯುವೆಲರಿಗಳನ್ನು ಧರಿಸುವುದು ಬೇಡ. ಬದಲಿಗೆ ಮಿನಿಮಲ್‌ ಆಭರಣಗಳನ್ನು ಧರಿಸಿ. ಸೀರೆ ಎದ್ದು ಕಾಣಿಸುವುದು.

Star Saree Fashion

ಸೀರೆಯ ಡ್ರೇಪಿಂಗ್‌

ಉಡುವ ಸೀರೆಯ ಡ್ರೇಪಿಂಗ್‌ ಬಾಡಿ ಮಾಸ್‌ ಇಂಡೆಕ್ಸ್ ಹೈ ಲೈಟ್‌ ಮಾಡುವಂತಿರಲಿ. ಆಗಷ್ಟೇ ಬಳುಕುವ ಬಳ್ಳಿಯಂತೆ ಕಾಣಬಹುದು. ಡ್ರೇಪಿಂಗ್‌ ಮಾಡುವ ಶೈಲಿ ಸೀರೆಯ ಇಡೀ ಲುಕ್ಕನ್ನು ಬದಲಿಸಬಲ್ಲದು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Holiday Fashion: ಹಾಲಿ ಡೇ ಫ್ಯಾಷನ್‌ಗೆ ಮರಳಿ ಬಂತು ಹಿಪ್ಪಿ ಪ್ಯಾಂಟ್ಸ್!

Continue Reading
Advertisement
Kannada New Movie chef chidambara Trailer out
ಸ್ಯಾಂಡಲ್ ವುಡ್6 mins ago

Kannada New Movie: ‘ಶೆಫ್​ ಚಿದಂಬರ’ ಸಿನಿಮಾ ಟ್ರೈಲರ್‌​ ಅನಾವರಣ ಮಾಡಿ ಹಾರೈಸಿದ ರಮೇಶ್ ಅರವಿಂದ್!

Virat Kohli
ಕ್ರೀಡೆ16 mins ago

Virat Kohli: ಸಿಕ್ಸ್​ ಪ್ಯಾಕ್​ ತೋರಿಸಿ ಡ್ಯಾನ್ಸ್​ ಮಾಡಿದ ವಿರಾಟ್​ ಕೊಹ್ಲಿ; ವಿಡಿಯೊ ವೈರಲ್​

CET Ranking
ಬೆಂಗಳೂರು16 mins ago

CET Ranking : 3 ಸಾವಿರ ಅಭ್ಯರ್ಥಿಗಳಿಗೆ ಸಿಕ್ಕಿಲ್ಲ ಸಿಇಟಿ ರ‍್ಯಾಂಕ್‌! ಮುಂದೇನು ಮಾಡ್ಬೇಕು?

Valmiki Corporation Scam
ಕರ್ನಾಟಕ18 mins ago

Valmiki Corporation Scam: ವಾಲ್ಮೀಕಿ ನಿಗಮ ಹಗರಣ; ವರ್ಗಾವಣೆಯಾದ ಹಣ ಹಿಂಪಡೆಯಲು ಸರ್ಕಾರ ಕಸರತ್ತು

Assembly election 2024
ದೇಶ56 mins ago

Assembly Election Results 2024: ಅಸ್ಸಾಂ ಬಿಜೆಪಿಗೆ, ಸಿಕ್ಕಿಂನಲ್ಲಿ SKMಗೆ ಪ್ರಚಂಡ ಗೆಲುವು

MLC Election
ಕರ್ನಾಟಕ1 hour ago

MLC Election: ವಿಧಾನ ಪರಿಷತ್‌ ಚುನಾವಣೆ; ಸಿ.ಟಿ.ರವಿ, ಎನ್.ರವಿಕುಮಾರ್‌ ಸೇರಿ ಮೂವರಿಗೆ ಬಿಜೆಪಿ ಟಿಕೆಟ್‌

Actor Dhanush unveils new poster from Ilaiyaraaja biopic
ಕಾಲಿವುಡ್2 hours ago

Actor Dhanush: ಇಳಯರಾಜ ಬಯೋಪಿಕ್‌ ಹೊಸ ಪೋಸ್ಟರ್‌ ಔಟ್‌; ಸಹೋದರರು ಎಂದು ಕಮಲ್‌ ಹಾಸನ್‌ ಹೇಳಿದ್ಯಾರಿಗೆ?

Murder Case
ಚಾಮರಾಜನಗರ2 hours ago

Murder Case : ಚಾಮರಾಜನಗರದಲ್ಲಿ ಅತ್ತಿಗೆ ಮೇಲಿನ ಮೋಹಕ್ಕೆ ಅಣ್ಣನನ್ನೇ ಕೊಂದ ಕಾಮುಕ ತಮ್ಮ

Venkatesh Iyer Marriage
ಕ್ರೀಡೆ2 hours ago

Venkatesh Iyer Marriage: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ವೆಂಕಟೇಶ್​ ಅಯ್ಯರ್​

West Bengal
ದೇಶ2 hours ago

West Bengal: ಬಿಜೆಪಿ ಕಾರ್ಯಕರ್ತನ ಬರ್ಬರ ಹತ್ಯೆ; ಗುಂಡಿಕ್ಕಿ ಕೊಂದು, ರುಂಡ ಕಡಿದು ಒಯ್ದ ದುಷ್ಕರ್ಮಿಗಳು

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ5 hours ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು23 hours ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ3 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ5 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು5 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ6 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ7 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು7 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

ಟ್ರೆಂಡಿಂಗ್‌