Skin Care | ಕಾಂತಿಯುಕ್ತ ತ್ವಚೆ ಬೇಕೆ?: ಈ ಆಹಾರಗಳು ನಿಮ್ಮ ಹೊಟ್ಟೆ ಸೇರಲಿ - Vistara News

ಆರೋಗ್ಯ

Skin Care | ಕಾಂತಿಯುಕ್ತ ತ್ವಚೆ ಬೇಕೆ?: ಈ ಆಹಾರಗಳು ನಿಮ್ಮ ಹೊಟ್ಟೆ ಸೇರಲಿ

ವಯಸ್ಸಾಗುವುದು ಸಾಮಾನ್ಯ ದೈಹಿಕ ಪ್ರಕ್ರಿಯೆ. ಆಂತರಿಕವಾಗಿ ಕಾಲಕ್ರಮೇಣ ವಯಸ್ಸಾಗುವುದನ್ನು ತಡೆಯಲು ಸಾಧ್ಯವಿಲ್ಲ.

VISTARANEWS.COM


on

Skin Care
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಊಟ ಬಲ್ಲವನಿಗೆ ರೋಗವಿಲ್ಲ ಎಂಬುದು ಮಾತ್ರವೇ ಅಲ್ಲ, ಊಟ ಬಲ್ಲವನಿಗೆ ವಯಸ್ಸೂ ಆಗುವುದಿಲ್ಲ ಎನ್ನುತ್ತಾರೆ ಆಹಾರ ತಜ್ಞರು. ಅಂದರೆ ಸರಿಯಾಗಿ ಊಟ ಮಾಡುವವರು ಚಿರಯೌವನಿಗರು ಎಂದಲ್ಲ, ಆದರೆ ಅವರಿಗೆ ಬೇಗ ವಯಸ್ಸಾದಂತೆ ಕಾಣುವುದಿಲ್ಲ ಎಂಬುದು ತಾತ್ಪರ್ಯ. ಯಾವುದೋ ಮದುವೆ- ಕೂಟಗಳಿಗೆ ಹೋಗುವುದಿದ್ದರೆ ತುರ್ತಾಗಿ ಮುಖದ ಕಾಂತಿ ಹೆಚ್ಚಿಸಿಕೊಳ್ಳುವುದಕ್ಕೆ ಎಲ್ಲರಲ್ಲಿಯೂ ಏನಾದರೊಂದು ಉಪಾಯ ಇರುತ್ತದೆ. ಆದರೆ ಇವೆಲ್ಲಾ ತಾತ್ಕಾಲಿಕ ಎಂದಾಯಿತು. ಒಳಗಿನಿಂದ ಚರ್ಮದ ಕಾಂತಿಯನ್ನು ಹೆಚ್ಚಿಸಿಕೊಳ್ಳಬೇಕು ಎಂದಾದರೆ, ತ್ವಚೆಗೆ ಸತ್ವವೂ ಒಳಗಿನಿಂದಲೇ ದೊರೆಯಬೇಕೆ ಹೊರತು ಮೇಲಿನಿಂದ ಅಲ್ಲ. ದೇಹಕ್ಕೆ ವಯಸ್ಸಾಗುತ್ತಿದ್ದಂತೆ ಸಾಯುವ ಜೀವಕೋಶಗಳನ್ನು ಮತ್ತೆ ಮತ್ತೆ ಸೃಷ್ಟಿಸಿಕೊಳ್ಳಲು ಸೂಕ್ತವಾದ ಆಹಾರ ಸೇವಿದಾಗ ಮಾತ್ರವೇ, ಚರ್ಮಕ್ಕಾಗುವ ಹಾನಿಯನ್ನು ತುಂಬಲು ಸಾಧ್ಯ. ಅದಕ್ಕಾಗಿ ಏನು ಮಾಡಬೇಕು?

Skin Care

ವಯಸ್ಸಾಗುವುದು ಸಾಮಾನ್ಯ ದೈಹಿಕ ಪ್ರಕ್ರಿಯೆ. ಆಂತರಿಕವಾಗಿ ಕಾಲಕ್ರಮೇಣ ವಯಸ್ಸಾಗುವುದನ್ನು ತಡೆಯಲು ಸಾಧ್ಯವಿಲ್ಲ. ಆದರೆ ಬಾಹ್ಯಸ್ವರೂಪದಲ್ಲಿ, ಅಂದರೆ ನಿದ್ದೆ ಸಾಕಾಗದೆ, ಪೋಷಣೆ ಕಡಿಮೆಯಾಗಿ, ಧೂಳು, ಹೊಗೆಯಂಥ ಮಾಲಿನ್ಯಗಳಿಂದ ಚರ್ಮ ಸುಕ್ಕಾಗುವುದನ್ನು ತಡೆಯುವುದು ಅಸಾಧ್ಯವೇನಲ್ಲ. ಜೀವನಶೈಲಿಯನ್ನು ಆರೋಗ್ಯಕರವಾಗಿ ಉಳಿಸಿಕೊಂಡು, ಖನಿಜಗಳು ಮತ್ತು ಜೀವಸತ್ವಗಳನ್ನು ಒಳಗೊಂಡ ಆಹಾರ ನಮ್ಮ ಬದುಕಿನ ಭಾಗವಾದರೆ ಚರ್ಮವನ್ನು ನಳನಳಿಸುವಂತೆ ಇರಿಸಿಕೊಳ್ಳಲು ಆಗುತ್ತದೆ. ಯಾವೆಲ್ಲಾ ಪೋಷಕಾಂಶಗಳು ನಮ್ಮ ಚರ್ಮಕ್ಕೆ ಬೇಕು?

Skin Care

ಸೂಕ್ತ ಪೋಷಣೆ: ವಿಟಮಿನ್‌ ಎ ಅಥವಾ ಕೆರೋಟಿನಾಯ್ಡ್‌ನಂಥ ಸತ್ವಗಳು ಪ್ರಮುಖವಾಗಿ ಬೇಕು. ಕ್ಯಾರೆಟ್‌, ಗೆಣಸು, ದಪ್ಪ ಮೆಣಸು, ಪಪ್ಪಾಯಿ, ಮಾವು ಮುಂತಾದ ಹಣ್ಣು-ತರಕಾರಿಗಳಲ್ಲಿ ವಿಟಮಿನ್‌ ಎ ಯಥೇಚ್ಛವಾಗಿ ದೊರೆಯುತ್ತದೆ. ಇವುಗಳನ್ನು ಊಟದ ತಟ್ಟೆಗೆ ಸೇರಿಸಿಕೊಳ್ಳುವುದಕ್ಕೆ ದಾಕ್ಷಿಣ್ಯ ಮಾಡದಿದ್ದರಾಯಿತು.

ಲೈಕೋಪೇನ್:‌ ಟೊಮೇಟೊದಂಥ ಅಚ್ಚಕೆಂಪು ಬಣ್ಣದ ಹಣ್ಣು-ತರಕಾರಿಗಳಲ್ಲಿ ದೊರೆಯುವ ಸತ್ವವಿದು. ಗಾಯಗಳನ್ನು ಗುಣಪಡಿಸುವ, ಉರಿಯೂತವನ್ನು ತಗ್ಗಿಸುವ ಮತ್ತು ಕೊಲಾಜಿನ್‌ ಉತ್ಪತ್ತಿಮಾಡುವ ಸಾಮರ್ಥ್ಯವನ್ನು ಲೈಕೋಪೇನ್‌ಗಳು ಹೊಂದಿವೆ. ಚರ್ಮಕ್ಕಾಗುವ ಯಾವುದೇ ಹಾನಿಯನ್ನು ಗುಣಪಡಿಸಲು ಲೈಕೋಪೇನ್‌ ನೆರವು ಬೇಕು.

Skin Care

ವಿಟಮಿನ್‌ ಬಿ೩: ಈರುಳ್ಳಿ, ಬೆಳ್ಳುಳ್ಳಿ, ಬಾಳೆಹಣ್ಣು, ಬಾರ್ಲಿ, ಓಟ್ಸ್‌ ಮುಂತಾದವುಗಳಿಂದ ದೊರೆಯುವ ಜೀವಸತ್ವವಿದು. ಚರ್ಮದ ಮೇಲೆ ಅತಿಯಾದ ಪಿಗ್‌ಮೆಂಟ್‌ಗಳನ್ನು ತಡೆಯಲು, ಸೂರ್ಯನ ಬಿಸಿಲಿನಿಂದಾಗುವ ಹಾನಿಯನ್ನು ಚರ್ಮ ಒಣಗುವುದನ್ನು ಕಡಿಮೆ ಮಾಡಲು ಅವಶ್ಯವಾಗಿ ಬೇಕಾದ ಪೋಷಣೆಯಿದು.

ವಿಟಮಿನ್‌ ಸಿ: ದೇಹದಲ್ಲಿರುವ ಮುಕ್ತ ರ್ಯಾಡಿಕಲ್‌ಗಳನ್ನು ನಿರ್ಬಂಧಿಸಿ, ಕೊಲಾಜಿನ್‌ ಹೆಚ್ಚಿಸುವ ಅತಿ ಮುಖ್ಯ ಆಂಟಿಆಕ್ಸಿಡೆಂಟ್‌ ಇದು. ಹುಳಿ ಹಣ್ಣುಗಳಲ್ಲಿ, ಪೇರಲೆ, ಕಿವಿ ಹಣ್ಣು, ಬ್ರೊಕೊಲಿ, ದಪ್ಪಮೆಣಸು- ಹೀಗೆ ಸಿ-ಜೀವಸತ್ವ ಇರುವಂಥ ಹಣ್ಣುತರಕಾರಿಗಳು ಬಹಳಷ್ಟಿವೆ.

Skin Care

ವಿಟಮಿನ್‌ ಡಿ: ಚರ್ಮದ ಜೀವಕೋಶಗಳ ಬೆಳವಣಿಗೆ ಮತ್ತು ಗುಣಪಡಿಸುವಲ್ಲಿ ಡಿ-ಜೀವಸತ್ವವೂ ಸಹಕಾರಿ. ಮಾತ್ರವಲ್ಲ, ಸೋಂಕುಗಳು ಕಾಡದಂತೆ ಚರ್ಮವನ್ನು ಕಾಪಾಡುತ್ತದೆ ಇದು. ಸೂರ್ಯರಶ್ಮಿಯ ಹೊರತಾಗಿ, ತೈಲಭರಿತ ಮೀನುಗಳಲ್ಲಿ, ಕೆಂಪು ಮಾಂಸ ಮತ್ತು ಮೊಟ್ಟೆಯ ಹಳದಿಭಾಗಗಳಲ್ಲಿ ಇದು ದೊರೆಯುತ್ತದೆ.

ವಿಟಮಿನ್‌ ಇ: ಎಂಟು ಬೇರೆಬೇರೆ ವಸ್ತುಗಳು ಒಟ್ಟಾಗಿ ಸೇರಿ ಇ-ಜೀವಸತ್ವವನ್ನು ಪೂರ್ಣಗೊಳಿಸುತ್ತವೆ. ಇವೆಲ್ಲ ಸೇರಿ ವಿಟಮಿನ್‌ ಸಿ ಜೊತೆಗೂಡಿ ದೇಹದಲ್ಲಿನ ಮುಕ್ತ ರ್ಯಾಡಿಕಲ್‌ಗಳನ್ನು ನಿರ್ಬಂಧಿಸುತ್ತವೆ. ಸೂರ್ಯಕಾಂತಿ ಬೀಜ, ಬಾದಾಮಿ, ಅವಕಾಡೊ (ಬೆಣ್ಣೆ ಹಣ್ಣು), ಕೆಲವು ಸಸ್ಯಜನ್ಯ ಎಣ್ಣೆಗಳು, ಸಾಲ್ಮನ್‌ನಂಥ ಮೀನುಗಳಲ್ಲಿ ವಿಟಮಿನ್‌ ಇ ಲಭ್ಯವಿದೆ.

ಇದನ್ನೂ ಓದಿ| Skin care Foods | ತ್ವಚೆಯ ಕಾಂತಿ ವೃದ್ಧಿಗಾಗಿ ಈ ಆಹಾರ ತಪ್ಪದೇ ಸೇವಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Health Tips: ನೀವು ಕುಡಿಯುವ ಹಾಲಿನಲ್ಲಿ ಕಲಬೆರಕೆಯೇ? ಹೀಗೆ ಸುಲಭವಾಗಿ ಪತ್ತೆ ಹಚ್ಚಿ!

Health Tips: ಒಂದಿಲ್ಲೊಂದು ಬಗೆಯಲ್ಲಿ ದಿನವೂ ಚಹಾ, ಕಾಫಿ, ಡೆಸರ್ಟ್‌ಗಳು, ಪನೀರ್‌, ತುಪ್ಪ, ಬೆಣ್ಣೆ ಹೀಗೆ ಹಲವಾರು ಹಾಲಿನ ಉತ್ಪನ್ನಗಳು ನಮ್ಮ ಹೊಟ್ಟೆ ಸೇರುತ್ತಲೇ ಇರುತ್ತವೆ. ಹಾಲಿನ ಹಾಗೂ ಹಾಲಿನ ಉತ್ಪನ್ನಗಳ ಮೂಲಕ ದೇಹಕ್ಕೆ ಸಾಕಷ್ಟು ಪೋಷಕಾಂಶಗಳು ಸೇರುತ್ತಿವೆ ಅಂದುಕೊಂಡರೆ ಕೆಲವೊಮ್ಮೆ ನಮ್ಮ ಲೆಕ್ಕಾಚಾರ ತಪ್ಪಾಗಬಹುದು ಕಾರಣ ಇಂದು ಎಲ್ಲ ಆಹಾರ ವಸ್ತುಗಳಲ್ಲೂ ಇರುವ ಕಲಬೆರಕೆ ಸಾಮಾನ್ಯ. ನೀವು ಖರೀದಿ ಮಾಡುವ ಹಾಲು ಸರಿಯಾದ ಆರೋಗ್ಯಕರ ಮಾದರಿಯಲ್ಲಿ ಪ್ಯಾಕೇಜ್‌ ಮಾಡಿಲ್ಲವಾದರೆ, ಅದರಲ್ಲಿ ಕಲಬೆರೆಕೆಯಾಗಿರುವ ಸಾಧ್ಯತೆಗಳು ಹೆಚ್ಚು.

VISTARANEWS.COM


on

Health Tips
Koo

ಭಾರತದಲ್ಲಿ ನಾವು ಹೆಚ್ಚಿನ ಮಂದಿ (Health Tips) ನಿತ್ಯವೂ ಹಾಲು ಕುಡಿಯುವುದು ರೂಢಿ. ಮಕ್ಕಳಿಗೂ ಹಾಲು ನಿತ್ಯವೂ ಎರಡೆರಡು ಬಾರಿ ಕುಡಿಸುತ್ತೇವೆ. ಅಷ್ಟೇ ಅಲ್ಲ, ಹಾಲಿನ ಉಪಯೋಗವೂ ಜಾಸ್ತಿಯೇ. ನೇರವಾಗಿ ಹಾಲು ಕುಡಿಯದಿದ್ದರೂ ಒಂದಿಲ್ಲೊಂದು ಬಗೆಯಲ್ಲಿ ದಿನವೂ ಚಹಾ, ಕಾಫಿ, ಡೆಸರ್ಟ್‌ಗಳು, ಪನೀರ್‌, ತುಪ್ಪ, ಬೆಣ್ಣೆ ಹೀಗೆ ಹಲವಾರು ಹಾಲಿನ ಉತ್ಪನ್ನಗಳು ನಮ್ಮ ಹೊಟ್ಟೆ ಸೇರುತ್ತಲೇ ಇರುತ್ತವೆ. ಹಾಲಿನ ಹಾಗೂ ಹಾಲಿನ ಉತ್ಪನ್ನಗಳ ಮೂಲಕ ದೇಹಕ್ಕೆ ಸಾಕಷ್ಟು ಪೋಷಕಾಂಶಗಳು ಸೇರುತ್ತಿವೆ ಅಂದುಕೊಂಡರೆ ಕೆಲವೊಮ್ಮೆ ನಮ್ಮ ಲೆಕ್ಕಾಚಾರ ತಪ್ಪಾಗಬಹುದು ಕಾರಣ ಇಂದು ಎಲ್ಲ ಆಹಾರ ವಸ್ತುಗಳಲ್ಲೂ ಇರುವ ಕಲಬೆರಕೆ ಸಾಮಾನ್ಯ. ನೀವು ಖರೀದಿ ಮಾಡುವ ಹಾಲು ಸರಿಯಾದ ಆರೋಗ್ಯಕರ ಮಾದರಿಯಲ್ಲಿ ಪ್ಯಾಕೇಜ್‌ ಮಾಡಿಲ್ಲವಾದರೆ, ಅದರಲ್ಲಿ ಕಲಬೆರೆಕೆಯಾಗಿರುವ ಸಾಧ್ಯತೆಗಳು ಹೆಚ್ಚು. ಕೇವಲ ನೀರಷ್ಟೇ ಅಲ್ಲ, ಡಿಟರ್ಜೆಂಟ್‌ಗಳು, ಯೂರಿಯಾ, ಸ್ಟಾರ್ಚ್‌, ಗ್ಲೂಕೋಸ್‌ ಇತ್ಯಾದಿಗಳ ಕಲಬೆರಕೆಯೂ ಹಾಲಿನ ಜೊತೆಗೆ ಸೇರಿರುವ ಸಂಭವವಿದೆ.

glass of milk

ಪೋಷಕಾಂಶದಲ್ಲಿ ನಷ್ಟ

ಹಾಲಿಗೆ ನೀರು ಸೇರಿಸುವುದರಿಂದ ಪೋಷಕಾಂಶದಲ್ಲಿ ನಷ್ಟವಾಗುತ್ತದೆ. ಹಾಲಿಗೆ ಸೇರಿಸುವ ನೀರು ಉತ್ತಮ ಗುಣಮಟ್ಟದ್ದಲ್ಲವಾದರೆ, ಅಥವಾ ಕಲುಷಿತವಾಗಿದ್ದರೆ ಅದು ಇದು ಆರೋಗ್ಯಕ್ಕೂ ಅಪಾಯವೇ. ಇನ್ನಷ್ಟು ರೋಗಗಳನ್ನೂ ಆಹ್ವಾನಿಸುತ್ತದೆ. ಸಂಶೋಧನಾ ವರದಿಗಳ ಪ್ರಕಾರ, ಹಾಲಿಗೆ ನೀರು ಸೇರಿಸುವುದರಿಂದ ಹಾಲಿನಲ್ಲಿರುವ ಘನ ಅಂಶಗಳ ಕಡಿಮೆಯಾಗುವುದಷ್ಟೇ ಅಲ್ಲ, ಅದರ ನೊರೆ ಹಾಗೂ ಕ್ರೀಮೀ ಗುಣವೂ ಕಡಿಮೆಯಾಗುತ್ತದೆ. ತೆಳುವಾಗುತ್ತದೆ. ಹಾಗಾಗಿ ಇದಕ್ಕೆ ಯೂರಿಯಾದಂತಹ ರಾಸಾಯನಿಕಗಳನ್ನು ಹಾಕುವುದರಿಂದ ಮತ್ತೆ ಹಾಲು ದಪ್ಪವಾಗಿ ಕ್ರೀಮೀ ಗುಣವನ್ನು ಪಡೆಯುತ್ತದೆ. ಹೀಗೂ ಕಲಬೆರಕೆಯನ್ನು ಮಾಡುವ ಮೂಲಕ ಕಲಬೆರಕೆಯಾಗಿರುವುದೇ ತಿಳಿಯದಂತೆ ಮಾಡುತ್ತಾರೆ. ಹೀಗಾಗಿ, ಯೂರಿಯಾದಂತಹ ರಾಸಾಯನಿಕ ಬೆರಕೆಯಾದರೆ ಹಾಲು ಉತ್ತಮ ಹಾಲಿನಂತೆಯೇ ಮೇಲ್ನೋಟಕ್ಕೆ ಕಂಡುಬರುವುದರಿಂದ ಮೋಸ ಹೋಗುವ ಸಾಧ್ಯತೆಗಳೇ ಹೆಚ್ಚು. ಜೊತೆಗೆ ಕಿಡ್ನಿ ಹಾಗೂ ಹೊಟ್ಟೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳನ್ನು ಆಹ್ವಾನಿಸಿಕೊಂಡಂತೆ ಎಂಬುದರಲ್ಲಿ ಅನುಮಾನವೇ ಇಲ್ಲ.
ಇತ್ತೀಚೆಗೆ ಎಫ್‌ಎಸ್‌ಎಸ್‌ಎಐ ಹಂಚಿಕೊಂಡ ಸರಳವಾದ ಹಾಗೂ ಸುಲಭವಾದ ಹಾಲಿನ ಪರೀಕ್ಷೆಯನ್ನು ನೀವೂ ನಿಮ್ಮ ಮನೆಗಳಲ್ಲಿ ಮಾಡಿಕೊಳ್ಳಬಹುದು. ನಿಮ್ಮ ಹಾಲಿಗೆ ನೀರು ಸೇರಿಸಲಾಗಿದೆಯೋ ಎಂಬುದನ್ನು ನೀವು ಈ ಮೂಲಕ ಪತ್ತೆ ಹಚ್ಚಬಹುದು ಎಂದು ಅದು ತನ್ನ ವರದಿಯಲ್ಲಿ ಹೇಳಿದೆ.

ಗಾಜಿನ ತಟ್ಟೆಯ ಮೇಲೆ ಹಾಕಿ

ಒಂದು ಸ್ವಚ್ಛವಾದ ಗ್ಲಾಸ್‌ ಸ್ಲೈಡ್‌ ಅಥವಾ ಪ್ಲೇಟ್‌ ಅನ್ನು ತೆಗೆದುಕೊಳ್ಳಿ. ಒಂದೆರಡು ಎಂಎಲ್‌ ಹಾಲನ್ನು ಈ ಪ್ಲೇಟ್‌ ಅಥವಾ ಗಾಜಿನ ತಟ್ಟೆಯ ಮೇಲೆ ಹಾಕಿ. ಆ ಹಾಲಿನ ಬಿಂದು ಬಹಳ ನಿಧಾನವಾಗಿ ಹರಿದರೆ ಹಾಗೂ ಹರಿದ ಜಾಗದಲ್ಲಿ ಬಿಳಿಯ ಮಾರ್ಕ್‌ ಅನ್ನು ಉಳಿಸಿದೆ ಎಂದಾದಲ್ಲಿ ನಿಮ್ಮ ಹಾಲು ಶುದ್ಧವಾಗಿದೆ ಎಂದರ್ಥ. ಹಾಲು ತಕ್ಷಣ ಹರಿದು ಹೋದರೆ ಹಾಗೂ ಯಾವುದೇ ಮಾರ್ಕ್‌ ಅನ್ನು ಉಳಿಸಿಲ್ಲವಾದರೆ, ಖಂಡಿತವಾಗಿ ಆ ಹಾಲಿಗೆ ನೀರು ಸೇರಿಸಲಾಗಿದೆ ಎಂದರ್ಥ.

ಇದನ್ನೂ ಓದಿ: Constipation Problem: ಮಲಬದ್ಧತೆಯ ಸಮಸ್ಯೆಯೇ? ಸರಳ ಪರಿಹಾರಗಳು ಇಲ್ಲಿವೆ!

ಯೂರಿಯಾ ಕಲಬರಕೆ ಪತ್ತೆ ಹೇಗೆ?

ಹಾಗಾದರೆ ನಿಮ್ಮ ಹಾಲಿಗೆ ಯೂರಿಯಾ ಸೇರಿಸಿ ಕಲಬರಕೆ ಮಾಡಿದ್ದಾರೆ ಎಂದರೆ ಅದನ್ನು ಕಂಡು ಹಿಡಿಯುವುದು ಹೇಗೆ ಅಂತೀರಾ? ಅದಕ್ಕೂ ಎಫ್‌ಎಸ್‌ಎಸ್‌ಎಐ ಸರಳ ಉಪಾಯವನ್ನು ಹೇಳಿದೆ. ಒಂದು ಟೆಸ್ಟ್‌ ಟ್ಯೂಬ್‌ನಲ್ಲಿ ಒಂದು ಚಮಚದಷ್ಟು ಹಾಲನ್ನು ತೆಗೆದುಕೊಳ್ಳಿ. ಅದಕ್ಕೆ ಅರ್ಧ ಚಮಚದಷ್ಟು ಸೋಯಾಬೀನ್‌ ಅಥವಾ ಗೊಗರಿ ಬೇಳೆಯ ಪುಡಿಯನ್ನು ಸೇರಿಸಿ. ಟೆಸ್ಟ್‌ ಟ್ಯೂಬ್‌ ಅನ್ನು ಚೆನ್ನಾಗಿ ಕುಲುಕಿಸುವ ಮೂಲಕ ಅವನ್ನು ಮಿಕ್ಸ್‌ ಮಾಡಿ. ನಂತರ ಐದು ನಿಮಿಷಗಳ ಕಾಲ ಹಾಗೆಯೇ ಬಿಡಿ. ಕೆಂಪು ಲಿಟ್ಮಸ್‌ ಪೇಪರನ್ನು ಟೆಸ್ಟ್‌ ಟ್ಯೂಬ್‌ ಒಳಗೆ ಮುಳುಗಿಸಿ. ಒಂದರ್ಧ ನಿಮಿಷ ಕಾಯಿರಿ. ನಂತರ ಈ ಪೇಪರನ್ನು ಅದರಿಂದ ಹೊರಗೆ ತೆಗೆಯಿರಿ. ಯಾವುದೇ ಕಲಬೆರಕೆಯಾಗಿರದಿದ್ದರೆ ಈ ಲಿಟ್ಮಸ್‌ ಪೇಪರ ನತನ ಬಣ್ಣ ಬದಲಾಯಿಸದು. ಆದರೆ, ಕಲಬೆರಕೆಯ ಹಾಲು ನಿಮ್ಮದಾಗಿದ್ದರೆ ನಿಮ್ಮ ಈ ಕೆಂಪು ಲಿಟ್ಮಸ್‌ ಪೇಫರ್‌ ನೀಲಿಯಾಗಿ ಬದಲಾಗುತ್ತದೆ.

Continue Reading

ಆರೋಗ್ಯ

International Yoga Day 2024: ಈ 5 ಯೋಗ ಭಂಗಿಗಳು ಬೆನ್ನು ನೋವನ್ನು ನಿವಾರಿಸುತ್ತವೆ!

ಈಗ ಏನಿದ್ದರೂ ಹೆಚ್ಚು ಕಾಲ ಕುಳಿತು ಮಾಡುವ ಕೆಲಸಗಳೇ ಅಧಿಕ. ಹೀಗಾಗಿ ಬೆನ್ನು ನೋವು ಎಲ್ಲರಿಗೂ ಸಾಮಾನ್ಯ ಎಂಬಂತಾಗಿದೆ. ಯೋಗದಿಂದ ನಾವು ಬೆನ್ನು ನೋವನ್ನು ದೂರ ಮಾಡಲು ಸಾಧ್ಯವಿದೆ. ಅದಕ್ಕಾಗಿ ಪೂರಕ ಯೋಗ (International Yoga Day 2024) ಭಂಗಿಗಳ ಸಂಪೂರ್ಣ ಮಾಹಿತಿ ಇಲ್ಲಿದೆ. ಮನೆಯಲ್ಲೇ ಇದ್ದು ನೀವು ಇದನ್ನು ಪ್ರಯತ್ನಿಸಬಹುದು.

VISTARANEWS.COM


on

By

International Yoga Day 2024
Koo

ಹೆಚ್ಚು ಹೊತ್ತು ಕುಳಿತುಕೊಳ್ಳುವುದು ಬೆನ್ನುನೋವಿಗೆ (back pain) ಕಾರಣವಾಗಬಹುದು. ವಿಶೇಷವಾಗಿ ಕಳಪೆ ಭಂಗಿಯಲ್ಲಿ (posture) ಕುಳಿತುಕೊಳ್ಳುವುದು ಅಥವಾ ಆಸನ ವ್ಯವಸ್ಥೆ ( seating arrangement) ಸೂಕ್ತವಾಗಿ ಇಲ್ಲದೇ ಇದ್ದರೆ ಇದು ಬೆನ್ನು ಮೂಳೆಯ (Back bone) ಮೇಲೆ ಪರಿಣಾಮ ಬೀರುತ್ತದೆ. ಬೆನ್ನುಮೂಳೆಯನ್ನು ಬೆಂಬಲಿಸುವ ಸ್ನಾಯುಗಳನ್ನು ವಿಸ್ತರಿಸುವ ಮತ್ತು ಬಲಪಡಿಸುವ ಮೂಲಕ ಬೆನ್ನು ಮೂಳೆಯನ್ನು ಬಲ ಪಡಿಸಬಹುದು. ಬೆನ್ನು ನೋವನ್ನು ದೂರ ಮಾಡಬಹುದು.

ದೀರ್ಘಕಾಲ ಕುಳಿತುಕೊಳ್ಳುವ ಋಣಾತ್ಮಕ ಪರಿಣಾಮಗಳನ್ನು ಎದುರಿಸಲು ಯೋಗವು (International Yoga Day 2024) ಪರಿಣಾಮಕಾರಿ ಮಾರ್ಗವಾಗಿದೆ. ಇದಕ್ಕೆ ಸೂಕ್ತವಾದ ಭಂಗಿಗಳು ಹಂತ- ಹಂತವಾಗಿ ಇಲ್ಲಿ ವಿವರಿಸಲಾಗಿದೆ. ಈ ಆಸನಗಳನ್ನು ಮಾಡುವ ಮೂಲಕ ಬೆನ್ನು ನೋವನ್ನು ದೂರ ಮಾಡಬಹುದು.


ಬಾಲಾಸನ

ಕಾಲುಗಳನ್ನು ಮಡಚಿ ನೇರವಾಗಿ ಕುಳಿತುಕೊಳ್ಳಿ. ಈ ಹಂತದಲ್ಲಿ ಪಾದಗಳು ಮೇಲ್ಮುಖವಾಗಿ ಇರುತ್ತವೆ. ಬಳಿಕ ನಿಧಾನವಾಗಿ ನಿಮ್ಮ ತಲೆಯನ್ನು ನೆಲದ ಮೇಲೆ ಮುಂದಕ್ಕೆ ಬಾಗಿಸಿ. ಈ ಹಂತದಲ್ಲಿ ನಿಮ್ಮ ತೋಳುಗಳನ್ನು ಸಾಧ್ಯವಾದಷ್ಟು ಮುಂದಕ್ಕೆ ಚಾಚಬೇಕು. ಮುಖ ಮತ್ತು ಅಂಗೈ ನೇರವಾಗಿ ನೆಲಕ್ಕೆ ತಾಕಬೇಕು. ಇದು ವಿಶ್ರಾಂತಿ ಭಂಗಿಯಾಗಿರುವುದರಿಂದ ಆರಾಮ ಮತ್ತು ವಿಶ್ರಾಂತಿ ನೀಡುತ್ತದೆ. 10- 15 ಸೆಕೆಂಡುಗಳ ಕಾಲ ಹಿಡಿದುಕೊಳ್ಳಿ ಮತ್ತು ಪ್ರತಿದಿನ 4- 5 ಬಾರಿ ಇದನ್ನು ಮಾಡಿ.


ಅಧೋ ಮುಖ ಶ್ವಾನಾಸನ

ನೆಲಕ್ಕೆ ಮುಖಮಾಡಿ ನೆಲದ ಮೇಲೆ ಮಲಗಿಕೊಳ್ಳಿ. ಮುಂಡವನ್ನು ನಿಧಾನವಾಗಿ ಮೇಲಕ್ಕೆತ್ತಿ ಮತ್ತು ದೇಹವನ್ನು ಪರ್ವತದಂತಹ ರಚನೆಯನ್ನು ರೂಪಿಸಿ. ಭುಜಗಳಿಗೆ ಹೋಲಿಸಿದರೆ ಅಂಗೈಗಳು ಹೆಚ್ಚು ದೂರದಲ್ಲಿರಬೇಕು. ಪಾದಗಳನ್ನು ಪರಸ್ಪರ ಪಕ್ಕದಲ್ಲಿ ಇರಿಸಬೇಕು. ಈ ಹಂತದಲ್ಲಿ, ನೆಲವನ್ನು ಸ್ಪರ್ಶಿಸುವ ಏಕೈಕ ದೇಹದ ಭಾಗಗಳು ನಿಮ್ಮ ಅಂಗೈ ಮತ್ತು ಪಾದಗಳಾಗಿರಬೇಕು. ಮುಖವು ತೋಳು ಮಧ್ಯೆ ಒಳಮುಖವಾಗಿ ಮತ್ತು ಕೆಳಮುಖವಾಗಿರಬೇಕು. ದೇಹವನ್ನು ತ್ರಿಕೋನವನ್ನಾಗಿ ರೂಪಿಸಬೇಕು. ಕೈಗಳು, ಸೊಂಟ ಮತ್ತು ಪಾದಗಳು ಮೂಲೆಗಳಾಗಿವೆ. ಈ ಭಂಗಿಯಲ್ಲಿ ಕೆಲವು ಸೆಕೆಂಡುಗಳ ಕಾಲ ಇರಬೇಕು. ಕನಿಷ್ಠ 10 ಬಾರಿ ಪುನರಾವರ್ತಿಸಿ.


ಭುಜಂಗಾಸನ

ನೆಲದ ಮೇಲೆ ಮಲಗಿ, ನೆಲಕ್ಕೆ ಮುಖ ಮಾಡಿ. ಅಂಗೈಗಳನ್ನು ಬದಿಗಳಲ್ಲಿ ಇರಿಸಿ ಮತ್ತು ನಿಧಾನವಾಗಿ ಮುಂಡವನ್ನು ಮೇಲಕ್ಕೆತ್ತಿ. ಈ ಹಂತದಲ್ಲಿ ನೆಲವನ್ನು ಅಂಗೈಗಳು ಮತ್ತು ಸೊಂಟದ ಕೆಳಗಿನ ಭಾಗ ನೆಲವನ್ನು ಸ್ಪರ್ಶಿಸಲಿ. ಇದರಲ್ಲಿ 30 ಸೆಕೆಂಡುಗಳ ಇರಿ. ದಿನಕ್ಕೆ 3- 4 ಬಾರಿ ಇದನ್ನು ಪುನರಾವರ್ತಿಸಿ.


ಪಶ್ಚಿಮೋತ್ತನಾಸನ

ಕಾಲುಗಳಲ್ಲಿ ನೇರವಾಗಿ ಚಾಚಿ ಕುಳಿತುಕೊಳ್ಳಿ ಪಾದಗಳ ಅಡಿಭಾಗವು ಮುಂಭಾಗದಲ್ಲಿ ಇರಬೇಕು. ಮುಂಡವನ್ನು ಕಾಲುಗಳಿಗೆ ಮತ್ತು ಸಾಧ್ಯವಾದಷ್ಟು ಹತ್ತಿರಕ್ಕೆ ತನ್ನಿ. ಪಾದಗಳನ್ನು ಹಿಡಿದಿಡಲು ಕೈಗಳನ್ನು ಬಳಸಬಹುದು.ಹೊಟ್ಟೆ ಮತ್ತು ಎದೆಯು ತೊಡೆಯನ್ನು ಸ್ಪರ್ಶಿಸುತ್ತಿರಬೇಕು. ಮುಖವು ಮುಂಭಾಗದಲ್ಲಿ ಅಥವಾ ಕಾಲುಗಳ ಕಡೆಗೆ ಮುಖ ಮಾಡಬಹುದು. ಈ ಭಂಗಿಯಲ್ಲಿ 10- 20 ಸೆಕೆಂಡುಗಳ ಕಾಲ ಇರಿ. ಮತ್ತೆ ಕುಳಿತುಕೊಳ್ಳಿ. ಇದನ್ನು ಅನುಕೂಲಕ್ಕೆ ತಕ್ಕಂತೆ ಕೆಲವು ಬಾರಿ ಪುನರಾವರ್ತಿಸಬಹುದು.

ಇದನ್ನೂ ಓದಿ: International Yoga Day 2024: ನಗುವುದೂ ಒಂದು ಯೋಗ; ನಕ್ಕರೆ ಅದೇ ಸ್ವರ್ಗ!


ಸೇತು ಬಂಧಾಸನ

ಬೆನ್ನಿನ ಮೇಲೆ ಮಲಗಿ ಮೊಣಕಾಲುಗಳನ್ನು ಬಾಗಿಸಿ. ಪಾದಗಳನ್ನು ನೆಲದ ಮೇಲೆ ದೃಢವಾಗಿ ಇರಿಸಿ. ಅಂಗೈಗಳು ಕೆಳಮುಖವಾಗಿ ಬದಿಗಳಲ್ಲಿ ಇರಿಸಿ. ಉಸಿರನ್ನು ತೆಗೆದುಕೊಂಡು ಸೊಂಟದಿಂದ ಬೆನ್ನನ್ನು ಮೇಲಕ್ಕೆ ಎತ್ತಿ. ಸೊಂಟವನ್ನು ಎತ್ತರಕ್ಕೆ ಹೆಚ್ಚಿಸಲು ಪ್ರಯತ್ನಿಸಿ. 4- 8 ಬಾರಿ ಇದನ್ನು ಮಾಡಿ.

ಯೋಗ ಮಾಡುವಾಗ ಪ್ರತಿ ಭಂಗಿಯಲ್ಲೂ ಹಾಯಾಗಿ ಇರುವಂತೆ ಕಾಳಜಿ ವಹಿಸಿ. ಒಂದು ವೇಳೆ ಬೆನ್ನಿನ ಸಮಸ್ಯೆ ಕಾಣಿಸಿಕೊಂಡರೆ, ಹೆಚ್ಚಾದರೆ ಯೋಗ ಬೋಧಕ ಅಥವಾ ಆರೋಗ್ಯ ವೃತ್ತಿಪರರೊಂದಿಗೆ ಸಮಾಲೋಚಿಸುವುದು ಯಾವಾಗಲೂ ಒಳ್ಳೆಯದು.

Continue Reading

ದೇಶ

International Yoga Day 2024: ‘ಯೋಗ’ ವಿಶ್ವಕ್ಕೆ ಭಾರತದ ಕೊಡುಗೆ; ಇದರ ಪಿತಾಮಹ ಮಹರ್ಷಿ ಪತಂಜಲಿ

ಅಂತಾರಾಷ್ಟ್ರೀಯ ಯೋಗ ದಿನದಂದು (International Yoga Day 2024) ಯೋಗಾಭ್ಯಾಸದ ಮಹತ್ವ ಮತ್ತು ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರಪಂಚದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಈ ಸಂದರ್ಭದಲ್ಲಿ ಯೋಗದ ಹಿನ್ನೆಲೆಯನ್ನು ತಿಳಿದುಕೊಳ್ಳುವುದು ಕೂಡ ಬಹು ಮುಖ್ಯವಾಗಿದೆ. ಯೋಗ ಯಾರಿಂದ, ಯಾವಾಗ ಹುಟ್ಟಿಕೊಂಡಿತು ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.

VISTARANEWS.COM


on

By

International Yoga Day 2024
Koo

ಮನಸ್ಸು (mind) ಮತ್ತು ದೇಹವನ್ನು (body) ಸಮತೋಲನಗೊಳಿಸುವ ಯೋಗ ಒಂದು ರೀತಿಯ ಆಧ್ಯಾತ್ಮಿಕ ಅಭ್ಯಾಸವಾಗಿದೆ. ಯೋಗ ಪದವು ಸಂಸ್ಕೃತದ “ಯುಜ್” (Yuj) ಎಂಬ ಪದದಿಂದ ಉತ್ಪತ್ತಿಯಾಗಿದೆ. ಇದರ ಅರ್ಥ “ಸೇರಲು” (join), “ನೊಗಕ್ಕೆ” (yoke) ಅಥವಾ “ಒಗ್ಗೂಡಿಸಲು” ( unite) ಎಂಬ ಅರ್ಥವಿದೆ.

ಯೋಗದ ಬೋಧನೆಗಳ ಪ್ರಕಾರ ಯೋಗವನ್ನು ಅಭ್ಯಾಸ ಮಾಡುವುದರಿಂದ ನಮ್ಮ ಸ್ವಂತ ಪ್ರಜ್ಞೆಯು ಬ್ರಹ್ಮಾಂಡದೊಂದಿಗೆ ಏಕೀಕರಣಗೊಳ್ಳುತ್ತದೆ. ಇದು ಮಾನವ ಮನಸ್ಸು ಮತ್ತು ದೇಹದ ನಡುವೆ ಮತ್ತು ಮಾನವರು ಮತ್ತು ನೈಸರ್ಗಿಕ ಪ್ರಪಂಚದ ನಡುವೆ ಸಂಪೂರ್ಣ ಸಾಮರಸ್ಯವನ್ನು ಸೂಚಿಸುತ್ತದೆ. ವಿಶ್ವದಾದ್ಯಂತ 2024ರ ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ. ಪ್ರತಿ ವರ್ಷ ಈ ದಿನವನ್ನು ವಿಶಿಷ್ಟ ಮತ್ತು ವಿಭಿನ್ನ ಥೀಮ್‌ನೊಂದಿಗೆ ಗೌರವಿಸಲಾಗುತ್ತದೆ.

ಅಂತರಾಷ್ಟ್ರೀಯ ಯೋಗ ದಿನ 2024ರ ವಿಷಯ ‘ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ’. ಯೋಗವು ಜನರು ಆರೋಗ್ಯಕರ ಮತ್ತು ಸಮತೋಲಿತ ಜೀವನಶೈಲಿಯನ್ನು ನಡೆಸಲು ಸಹಾಯ ಮಾಡುತ್ತದೆ. ಅಂತಾರಾಷ್ಟ್ರೀಯ ಯೋಗ ದಿನದಂದು ಯೋಗಾಭ್ಯಾಸದ ಮಹತ್ವ ಮತ್ತು ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸಲು ದೇಶಾದ್ಯಂತ ಮತ್ತು ಪ್ರಪಂಚದಾದ್ಯಂತ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.

ಈ ಸಂದರ್ಭದಲ್ಲಿ ಯೋಗದ ಹಿನ್ನೆಲೆಯನ್ನು ತಿಳಿದುಕೊಳ್ಳುವುದು ಕೂಡ ಬಹು ಮುಖ್ಯವಾಗಿದೆ. ಯೋಗ ಯಾರಿಂದ, ಯಾವಾಗ ಹುಟ್ಟಿಕೊಂಡಿತು ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.

ಯೋಗದ ಪಿತಾಮಹ ಯಾರು?

ಅನೇಕ ಜನರು ಮಹರ್ಷಿ ಪತಂಜಲಿ ಅವರನ್ನು ಇತಿಹಾಸದಲ್ಲಿ ಮೊದಲ ಯೋಗ ಗುರು ಎಂದು ಉಲ್ಲೇಖಿಸುತ್ತಾರೆ. ಅವರ ಪುಸ್ತಕ “ಯೋಗ ಸೂತ್ರಗಳು” ಯೋಗ ಸಿದ್ಧಾಂತ ಮತ್ತು ಅಭ್ಯಾಸವನ್ನು ಯುಗಗಳಿಂದಲೂ ರೂಪಿಸಿದೆ. ಜೀವನದ ಮೇಲೆ ಪರಿಣಾಮ ಬೀರುವ ಅವರು ಹೇಳಿರುವ ಯೋಗ ಭಂಗಿಗಳು ಅನೇಕ ತಲೆಮಾರುಗಳು ಅಭ್ಯಾಸ ನಡೆಸುತ್ತೀಯೆ. ಅವರು 196 ಯೋಗ ಭಂಗಿಗಳನ್ನು ಹೇಳಿದ್ದಾರೆ.

ಮಹರ್ಷಿ ಪತಂಜಲಿಯ ಜನನದ ಸುತ್ತ ಅನೇಕ ದಂತಕಥೆಗಳಲ್ಲಿವೆ. ಅವುಗಳಲ್ಲಿ ಇದು ಒಂದು. ಪುಷ್ಯಮಿತ್ರ ಸುಂಗನ ಆಳ್ವಿಕೆಯಲ್ಲಿ (ಕ್ರಿ.ಪೂ. 195-142) ಉತ್ತರ ಪ್ರದೇಶದ ಗೊಂಡಾದಲ್ಲಿ ಪತಂಜಲಿಯವರು ಜನಿಸಿದರು. ಬಳಿಕ ಅವರು ಕಾಶಿಯಲ್ಲಿ ನೆಲೆಸಿದರು ಎಂದು ಭಾವಿಸಲಾಗಿದೆ. ಕಾಶಿಯಲ್ಲಿ ಪತಂಜಲಿಯು ಶೇಷನಾಗನ ಅವತಾರ ಎಂದೇ ಜನರು ಭಾವಿಸಿ ಪೂಜಿಸುತ್ತಿದ್ದರು. ಇತರ ದಂತಕಥೆಗಳಲ್ಲಿ ಅವರನ್ನು ಸಂತ ಪಾಣಿನಿಯ ವಿದ್ಯಾರ್ಥಿ ಎಂದು ಪರಿಗಣಿಸಲಾಗಿದ್ದು, ಆದರೆ ಇದಕ್ಕೆ ಯಾವುದೇ ಪುರಾವೆಗಳಿಲ್ಲ.

ಅಷ್ಟಾಂಗ ಯೋಗ ಸಾಧಕರು

ಯೋಗ ಸೂತ್ರಗಳನ್ನು ಜೋಡಿಸಿ ಮಹರ್ಷಿ ಪತಂಜಲಿಯವರು ಅಷ್ಟಾಂಗ ಯೋಗವನ್ನು ಅಭಿವೃದ್ಧಿಪಡಿಸಿದರು. ಈ ಮೂಲಕ ಯೋಗಕ್ಕೆ ಕ್ರಮಬದ್ಧ ರೂಪ ನೀಡಿದರು. ಭಾರತೀಯ ಸಮಾಜದಲ್ಲಿ ಯೋಗವನ್ನು ಸಾವಿರಾರು ವರ್ಷಗಳಿಂದ ಅಭ್ಯಾಸ ಮಾಡಲಾಗುತ್ತಿದೆ ಎಂಬ ವಾಸ್ತವದ ಹೊರತಾಗಿಯೂ, ಅಭ್ಯಾಸದ ಯಾವುದೇ ಲಿಖಿತ ದಾಖಲೆಗಳು ಅಸ್ತಿತ್ವದಲ್ಲಿಲ್ಲ ಎಂದು ಭಾವಿಸಲಾಗಿದೆ.

ಮಹರ್ಷಿ ಪತಂಜಲಿ ಯೋಗವನ್ನು ದಾಖಲಿಸಿದ್ದಾರೆ ಎಂದು ಹೇಳಲಾಗುತ್ತದೆ. ಅವರು ಅಷ್ಟಾಂಗ ಯೋಗ ಸಾಧಕರಾಗಿದ್ದರು. ಇದರಲ್ಲಿ ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ ಈ ಭಂಗಿಗಳನ್ನು ಒಳಗೊಂಡಿದೆ. ಮಹರ್ಷಿ ಪತಂಜಲಿ ಯೋಗವನ್ನು ನಿರ್ವಹಿಸಬಹುದಾದ ಭಾಗಗಳಾಗಿ ವಿಭಜಿಸಿದರು ಮತ್ತು ವಿವಿಧ ರೀತಿಯಲ್ಲಿ ಸಾರ್ವಜನಿಕರು ಅನುಷ್ಠಾನಗೊಳಿಸುವಂತೆ ಮಾಡಿದರು.

ಇದನ್ನೂ ಓದಿ: International Yoga Day 2024: ಈ ಉಸಿರಾಟದ ತಂತ್ರಗಳು ಮಾನಸಿಕ ಒತ್ತಡ ನಿವಾರಿಸುತ್ತವೆ!

ಯೋಗದ ಸರಳೀಕರಣ

ಮಹರ್ಷಿ ಪತಂಜಲಿ ಯೋಗವನ್ನು ಸರಳೀಕರಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದರಿಂದ ಸಾಧ್ಯವಾದಷ್ಟು ಜನರು ಅದನ್ನು ಅಭ್ಯಾಸ ಮಾಡಬಹುದು. ಆದರೂ ಯೋಗ ಪತಂಜಲಿಗಿಂತ ಹಿಂದಿನದು. ಧರ್ಮ ಮತ್ತು ಮೂಢನಂಬಿಕೆಗಳ ಪ್ರಭಾವದಿಂದಾಗಿ ಹಲವರು ಯೋಗವನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಅಥವಾ ಅಭ್ಯಾಸ ಮಾಡಲಿಲ್ಲ.
ಪತಂಜಲಿಯು ಮೂಢನಂಬಿಕೆ ಮತ್ತು ಧರ್ಮದ ಕ್ಷೇತ್ರದಿಂದ ಯೋಗವನ್ನು ಬಿಡುಗಡೆ ಮಾಡಿದೆ ಎನ್ನಲಾಗುತ್ತದೆ.

ಅವರು ಅದನ್ನು ಜಾತ್ಯತೀತ ಆಚರಣೆಯನ್ನಾಗಿ ಮಾಡಿದರು. ಹೆಚ್ಚಿನ ಸಂಖ್ಯೆಯ ಜನರು ಅದನ್ನು ಅಭ್ಯಾಸ ಮಾಡಲು ಅನುವು ಮಾಡಿಕೊಟ್ಟರು. ಈ ರೀತಿಯಾಗಿ ಯೋಗವು ವ್ಯಾಪಕವಾದ ಆಕರ್ಷಣೆಯನ್ನು ಗಳಿಸಿತು ಮತ್ತು ಜನರು ಅದರ ಪ್ರಯೋಜನಗಳನ್ನು ಗುರುತಿಸಲು ಪ್ರಾರಂಭಿಸಿದರು.

Continue Reading

ಆರೋಗ್ಯ

International Yoga Day 2024: ವಿಶ್ವಕ್ಕೆ ಯೋಗವನ್ನು ಪರಿಚಯಿಸಿದವರು ಕನ್ನಡಿಗ ಬಿಕೆಎಸ್ ಅಯ್ಯಂಗಾರ್!

“ಆಧುನಿಕ ಯೋಗದ ಪಿತಾಮಹ” ಎಂದು ಕರೆಯಲ್ಪಡುವ ಅಯ್ಯಂಗಾರ್ ಅವರು ಪೂರ್ವದಿಂದ ಪಶ್ಚಿಮಕ್ಕೆ ಯೋಗದ ಸಂದೇಶವನ್ನು ರವಾನಿಸಿದರು. ಸುಮಾರು 60 ದೇಶಗಳಿಗೆ ಯೋಗದ ಪ್ರಯೋಜನಗಳನ್ನು ತಿಳಿಸಿ ಅಭ್ಯಾಸ ಮಾಡಲು ಪ್ರೇರೇಪಣೆ ನೀಡಿದ ಕೀರ್ತಿ ಇವರದ್ದಾಗಿದೆ. ವಿಶ್ವ ಯೋಗ ದಿನಾಚರಣೆಯ (International Yoga Day 2024) ಈ ಸಂದರ್ಭದಲ್ಲಿ ಅವರ ಯೋಗ ಪಯಣ ಹೇಗಿತ್ತು ಎಂಬುದನ್ನು ತಿಳಿಯೋಣ.

VISTARANEWS.COM


on

By

International Yoga Day 2024
Koo

ವಿಶ್ವದಾದ್ಯಂತ ಇಂದು (ಜೂನ್ 21) ಯೋಗ ದಿನವನ್ನು (International Yoga Day 2024) ಆಚರಿಸಲಾಗುತ್ತಿದೆ. ಯೋಗದ (yoga) ಕುರಿತಾಗಿ ಜಾಗತಿಕ ಅರಿವು ಮೂಡಿಸುವುದು, ದೈಹಿಕ ಮತ್ತು ಮಾನಸಿಕ ಯೋಗಕ್ಷೇಮಕ್ಕಾಗಿ (physical and mental well-being) ಅದರ ಬಹುಮುಖಿ ಪ್ರಯೋಜನಗಳನ್ನು ತಿಳಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ವಿದೇಶಿಯರು, ಸೆಲೆಬ್ರಿಟಿಗಳಲ್ಲಿ ಯೋಗವು ಸಾಕಷ್ಟು ಜನಪ್ರಿಯವಾಗಿದೆ. ಜಾಗತಿಕವಾಗಿ ಯೋಗದ ಕುರಿತು ಅರಿವು ಮೂಡಿಸುವಲ್ಲಿ ಭಾರತೀಯ ಯೋಗ ಗುರು ಬಿಕೆಎಸ್ ಅಯ್ಯಂಗಾರ್ (BKS Iyengar) ಅವರ ಪ್ರಮುಖ ಪಾತ್ರವಿದೆ.

“ಆಧುನಿಕ ಯೋಗದ ಪಿತಾಮಹ” ಎಂದು ಕರೆಯಲ್ಪಡುವ ಅಯ್ಯಂಗಾರ್ ಅವರು ಪೂರ್ವದಿಂದ ಪಶ್ಚಿಮಕ್ಕೆ ಯೋಗದ ಸಂದೇಶವನ್ನು ಸಾಗಿಸಿದರು. ಸುಮಾರು 60 ದೇಶಗಳಿಗೆ ಯೋಗದ ಪ್ರಯೋಜನಗಳನ್ನು ತಿಳಿಸಿ ಅಭ್ಯಾಸ ಮಾಡಲು ಪ್ರೇರೇಪಣೆ ನೀಡಿದ ಕೀರ್ತಿ ಇವರದ್ದಾಗಿದೆ.

2002ರಲ್ಲಿ ನ್ಯೂಯಾರ್ಕ್ ಟೈಮ್ಸ್ ಒಂದು ಲೇಖನದಲ್ಲಿ ಹೀಗೆ ಬರೆದಿದೆ: ಪ್ರಾಯಶಃ ಯೋಗವನ್ನು ಪಶ್ಚಿಮಕ್ಕೆ ತರಲು ಅಯ್ಯಂಗಾರ್ ಅವರಿಗಿಂತ ಹೆಚ್ಚಿನದನ್ನು ಯಾರೂ ಮಾಡಿಲ್ಲ. ಅಯ್ಯಂಗಾರ್ ಅವರು ಅಮೆರಿಕನ್ನರಿಗೆ ಜಗತ್ತಿನ ಇತರರ ಜೊತೆ ಆಸನಗಳು ಮತ್ತು ಉಸಿರಾಟದ ನಿಯಂತ್ರಣದ ತಂತ್ರಗಳನ್ನು ಕಲಿಸುತ್ತಿದ್ದರು. ಬಿಕೆಎಸ್ ಅಯ್ಯಂಗಾರ್ ಅವರು ಯೋಗವು ದೈಹಿಕ ಅಭ್ಯಾಸಕ್ಕಿಂತ ಹೆಚ್ಚಿನದು. ಅದು ಕಲೆ, ವಿಜ್ಞಾನ ಮತ್ತು ತತ್ತ್ವ ಶಾಸ್ತ್ರ ಎಂದು ನಂಬಿದ್ದರು.


ಬಿಕೆಎಸ್ ಅಯ್ಯಂಗಾರ್ ಪ್ರಯಾಣ ಹೇಗಿತ್ತು?

1950ರ ದಶಕದಲ್ಲಿ ಮುಂಬಯಿ ಪ್ರವಾಸದ ಸಮಯದಲ್ಲಿ ಅಯ್ಯಂಗಾರ್ ಅವರನ್ನು ಕಂಡ ಅಮೆರಿಕನ್- ಬ್ರಿಟಿಷ್ ಪಿಟೀಲು ವಾದಕ ಯೆಹೂದಿ ಮೆನುಹಿನ್ ಅವರೊಂದಿಗಿನ ಮುಖಾಮುಖಿಯಾಯಿತು. ಇದು ಯೋಗವನ್ನು ಜಾಗತಿಕವಾಗಿ ಪ್ರಚಾರ ಪಡಿಸಲು ಪ್ರೇರೇಪಿಸಿತು. 1952ರಲ್ಲಿ ಭಾರತಕ್ಕೆ ಭೇಟಿ ನೀಡಿದ ಮೆನುಹಿನ್ ಅವರು ಅಯ್ಯಂಗಾರ್‌ ಬಳಿ ಯೋಗಾಭ್ಯಾಸದ ಬಗ್ಗೆ ಕೇಳಿದರು. ಅವರು ಎಷ್ಟು ಪ್ರಭಾವಿತರಾದರೆಂದರೆ, ಕೇವಲ ಹತ್ತು ನಿಮಿಷಗಳಿಗೆಂದು ನಿಗದಿಯಾಗಿದ್ದ ಇವರ ನಡುವಿನ ಸಂಭಾಷಣೆಯು ಮೂರು ಗಂಟೆಗಳಿಗೂ ಹೆಚ್ಚು ಕಾಲ ಮುಂದುವರಿಯಿತು! ಅಯ್ಯಂಗಾರ್ ಅವರನ್ನು ಮೆನುಹಿನ್ ತಮ್ಮೊಂದಿಗೆ ಸ್ವಿಟ್ಜರ್ಲೆಂಡ್‌ಗೆ ಮತ್ತು ಅನಂತರ ಲಂಡನ್‌ಗೆ ಕರೆತಂದರು. ಇತರ ಪ್ರಭಾವಿ ವ್ಯಕ್ತಿಗಳಿಗೆ ಪರಿಚಯಿಸಿದರು.

1956ರಲ್ಲಿ ನ್ಯೂಯಾರ್ಕ್‌ಗೆ ಅಯ್ಯಂಗಾರ್ ಅವರು ಮೊದಲ ಬಾರಿಗೆ ಭೇಟಿ ನೀಡಿದರು. ಅಲ್ಲಿನವರಿಗೆ ಯೋಗದ ಬಗ್ಗೆ ಹೆಚ್ಚಿನ ಆಸಕ್ತಿ ಇರಲಿಲ್ಲ. ಅಲ್ಲಿ ದಶಕಗಳ ಕಾಲ ಕಾಲ ಅವರು ಜನರನ್ನು ಆಕರ್ಷಿಸಲು ಪ್ರಾರಂಭಿಸಿದರು. ಅನಂತರ ಅವರು ಅಂತಿಮವಾಗಿ ಆರು ಖಂಡಗಳಲ್ಲಿ ಯೋಗ ಸಂಸ್ಥೆಗಳನ್ನು ತೆರೆಯಲು ಹೋದರು. ಯೋಗ ಗುರುಗಳು ಆ ಸಮಯದಲ್ಲಿ 85 ವರ್ಷದ ಬೆಲ್ಜಿಯಂನ ರಾಣಿ ಎಲಿಸಬೆತ್‌ಗೆ ತಲೆಯ ಮೇಲೆ ನಿಲ್ಲುವ ಶಿರ್ಷಾಸನ ಕಲಿಸಿದರು.

1966ರಲ್ಲಿ ಅವರು ತಮ್ಮ ಮೊದಲ ಪುಸ್ತಕ ʼಲೈಟ್ ಆನ್ ಯೋಗʼ (1966) ಅನ್ನು ಪ್ರಕಟಿಸಿದರು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಮಾರಾಟವಾದ ಕೃತಿಯಾಯಿತು.


ಬಿಕೆಎಸ್ ಅಯ್ಯಂಗಾರ್ ಯಾರು?

ಅಯ್ಯಂಗಾರ್ ಅವರು 1918ರ ಡಿಸೆಂಬರ್ 14ರಂದು ಕರ್ನಾಟಕದ ಕೋಲಾರ ಜಿಲ್ಲೆಯ ಬೆಳ್ಳೂರಿನಲ್ಲಿ ಜನಿಸಿದರು. ಅವರು 1937ರಲ್ಲಿ ಮಹಾರಾಷ್ಟ್ರದ ಪುಣೆಗೆ ಬಂದರು. ‘ಅಯ್ಯಂಗಾರ್ ಯೋಗ’ ಎಂದು ಕರೆಯಲ್ಪಡುವ ತಮ್ಮ ಯೋಗ ಶೈಲಿಯನ್ನು ಅವರು ಅಲ್ಲಿ ಪ್ರಚಾರಪಡಿಸಿದರು. ಗಮನಾರ್ಹ ವಿಷಯವೆಂದರೆ ಅವರು ಬಾಲ್ಯದಲ್ಲಿ ಕ್ಷಯರೋಗ, ಟೈಫಾಯಿಡ್ ಮತ್ತು ಮಲೇರಿಯಾಗೆ ತುತ್ತಾಗಿ ಬದುಕುಳಿದರು. ಯೋಗವು ಅವರ ಜೀವವನ್ನು ಉಳಿಸಿದ ಕೀರ್ತಿಗೆ ಕಾರಣವಾಯಿತು.


ಯೋಗದ ಜ್ಞಾನವನ್ನು ಹರಡಿದ ಅನಂತರ ಅವರು 1975ರಲ್ಲಿ ತಮ್ಮದೇ ಆದ ‘ಯೋಗವಿದ್ಯಾ’ ಸಂಸ್ಥೆಯನ್ನು ಸ್ಥಾಪಿಸಿದರು. ಅನಂತರ ಅವರು ದೇಶ ಮತ್ತು ವಿದೇಶದ ವಿವಿಧ ಶಾಖೆಗಳಿಗೆ ವಿಸ್ತರಿಸಿದರು. ವಿಶ್ವದ ಅತ್ಯುತ್ತಮ ಯೋಗ ಗುರುಗಳಲ್ಲಿ ಒಬ್ಬರು ಎಂದು ಪರಿಗಣಿಸಲ್ಪಟ್ಟಿರುವ ಅಯ್ಯಂಗಾರ್ ಅವರು ಯೋಗದ ಕುರಿತು ‘ಲೈಟ್ ಆನ್ ಯೋಗ’, ‘ಲೈಟ್ ಆನ್ ಪ್ರಾಣಾಯಾಮ’ ಮತ್ತು ‘ಲೈಟ್ ಆನ್ ದಿ ಯೋಗ ಸೂತ್ರಾಸ್ ಆಫ್ ಪತಂಜಲಿ’ ಸೇರಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. “ಆಧುನಿಕ ಋಷಿ” ಎಂದು ಪ್ರಶಂಸಿಸಲ್ಪಟ್ಟ ಅಯ್ಯಂಗಾರ್ ಅವರು ವಿವಿಧ ದೇಶಗಳಲ್ಲಿ ತಮ್ಮ ಸಂಸ್ಥೆಯ 100 ಶಾಖೆಗಳನ್ನು ಸ್ಥಾಪಿಸಿದರು.

ಅಂತಾರಾಷ್ಟ್ರೀಯ ಖ್ಯಾತಿಯ ಯೋಗ ಗುರು ಶ್ರೀಸಾಮಾನ್ಯರ ಜೊತೆಗೆ ಅನೇಕ ಪ್ರಮುಖ ವ್ಯಕ್ತಿಗಳಿಗೆ ಯೋಗಾಸನಗಳನ್ನು ಕಲಿಸಿದರು. ಅವರಿಂದ ಯೋಗವನ್ನು ಕಲಿತವರಲ್ಲಿ ಪ್ರಖ್ಯಾತ ಸಮಾಜವಾದಿ ನಾಯಕ ಜಯಪ್ರಕಾಶ್ ನಾರಾಯಣ್ ಮತ್ತು ಪ್ರಸಿದ್ಧ ತತ್ತ್ವಜ್ಞಾನಿ ಜೆ. ಕೃಷ್ಣಮೂರ್ತಿ ಸೇರಿದ್ದಾರೆ. ಅಯ್ಯಂಗಾರ್‌ ಅವರ ಯೋಗ ವಿಧಾನವು ಅನೇಕರನ್ನು ಆಕರ್ಷಿಸಿತು. ಅವರಲ್ಲಿ ನಟಿ ಕರೀನಾ ಕಪೂರ್, ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ನಟಿ ಆನೆಟ್ ಬೆನಿಂಗ್, ಡಿಸೈನರ್ ಡೊನ್ನಾ ಕರಂಟೊ ಮತ್ತು ಬರಹಗಾರ ಅಲ್ಡಸ್ ಹಕ್ಸ್ಲೆ ಸೇರಿದ್ದಾರೆ.


ಇದನ್ನೂ ಓದಿ: International Yoga Day 2024: ಹಿರಿಯರಿಗೆ ಸೂಕ್ತವಾದ ಯೋಗಾಸನಗಳಿವು

ಇವರಿಗೆ ಸಂದ ಪ್ರಶಸ್ತಿಗಳು

ಯೋಗಕ್ಕೆ ನೀಡಿರುವ ಅಪಾರ ಕೊಡುಗೆಗಾಗಿ ಅಯ್ಯಂಗಾರ್ ಅವರಿಗೆ 1991ರಲ್ಲಿ ಪದ್ಮಶ್ರೀ, 2002ರಲ್ಲಿ ಪದ್ಮಭೂಷಣ ಮತ್ತು 2014ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

2004ರಲ್ಲಿ ಅವರು ಅಮೆರಿಕದ ಪ್ರತಿಷ್ಠಿತ ʼಟೈಮ್ʼ ಮ್ಯಾಗಜೀನ್‌ನಿಂದ ವಿಶ್ವದ 100 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರೆಂದು ಅಯ್ಯಂಗಾರ್‌ ಹೆಸರಿಸಲ್ಪಟ್ಟರು. 2014ರ ಆಗಸ್ಟ್ 20ರಂದು ಅಯ್ಯಂಗಾರ್ ಅವರು ಹೃದಯ ಮತ್ತು ಮೂತ್ರಪಿಂಡ ವೈಫಲ್ಯದಿಂದ ಪುಣೆಯಲ್ಲಿ ನಿಧನರಾದರು. ಆಗ ಅವರಿಗೆ 95 ವರ್ಷ ವಯಸ್ಸಾಗಿತ್ತು.

Continue Reading
Advertisement
Engineering Seats
ಶಿಕ್ಷಣ16 mins ago

Engineering Seats: ಎಂಜಿನಿಯರಿಂಗ್ ಆಕಾಂಕ್ಷಿಗಳಿಗೆ ಸಿಹಿಸುದ್ದಿ; ಈ ಬಾರಿ ಹೆಚ್ಚು ಸೀಟುಗಳು ಲಭ್ಯ!

Pavithra Gowda Number 6024 in parappana jail
ಕ್ರೈಂ17 mins ago

Pavithra Gowda: ಪವಿತ್ರಾ ಗೌಡ ಈಗ ಕೈದಿ ನಂಬರ್ 6024; ಹೈಫೈ ಲೈಫ್ ಲೀಡ್ ಮಾಡಿದ್ದ ನಟಿ ಈಗ ಜೈಲು ಹಕ್ಕಿ!

assault Case
ಕ್ರೈಂ31 mins ago

Assault Case: 3 ವರ್ಷದ ಮಗಳ ಗುಪ್ತಾಂಗ ಕಚ್ಚಿ ಮಲತಂದೆಯ ಕ್ರೌರ್ಯ; ಸಿಗರೇಟ್‌ನಿಂದ ಸುಟ್ಟು ವಿಕೃತಿ

ram mohan raju actor darshan
ಪ್ರಮುಖ ಸುದ್ದಿ35 mins ago

Actor Darshan: ದರ್ಶನ್‌ಗೆ 40 ಲಕ್ಷ ರೂ ನೀಡಿದ ವ್ಯಕ್ತಿ ಈಗ ನಾಪತ್ತೆ! ಯಾರೀ ಆಸಾಮಿ?

Darshan Arrested in IT trouble! Is the money paid to a MLA's friend
ಸ್ಯಾಂಡಲ್ ವುಡ್38 mins ago

Darshan Arrested: ದರ್ಶನ್‌ಗೆ ಕೊಲೆ ಆರೋಪದ ಜತೆಗೆ ಐಟಿ ಸಂಕಷ್ಟ! ಹಣ ಸಂದಾಯ ಮಾಡಿದ್ರಾ ಶಾಸಕರೊಬ್ಬರ ಆಪ್ತ?

IRCTC Ticket Booking
Latest54 mins ago

IRCTC Ticket Booking: ರೈಲ್ವೆ ಟಿಕೆಟ್ ಈ ರೀತಿ ಬುಕ್ ಮಾಡಿದರೆ ಜೈಲೂಟ ಗ್ಯಾರಂಟಿ!

Viral Video
Latest57 mins ago

Viral Video : ಇನ್‌ಸ್ಟಾಗ್ರಾಂ ರೀಲ್ಸ್ ಕ್ರೇಜ್‌; ಪಾಳುಬಿದ್ದ ಕಟ್ಟಡದ ಮೇಲಿಂದ ನೇತಾಡಿದ ಹುಡುಗಿ!

Israel-Hamas Conflict
ವಿದೇಶ1 hour ago

Israel-Hamas Conflict: ಇಸ್ರೇಲ್‌ ಏರ್‌ಸ್ಟ್ರೈಕ್- ಹಮಾಸ್‌ ಕಮಾಂಡರ್‌ ಹತ್ಯೆ

Actor Darshan case sanjana galrani Reaction about ramya statement
ಸ್ಯಾಂಡಲ್ ವುಡ್2 hours ago

Actor Darshan: ದರ್ಶನ್‌ಗೆ ಗಲ್ಲು ಶಿಕ್ಷೆ ಆಗಬೇಕು ಎಂದ ರಮ್ಯಾಗೆ ಕೌಂಟರ್‌ ಕೊಟ್ಟ ಸಂಜನಾ ಗಲ್ರಾನಿ!

Liquor Price Karnataka
ಪ್ರಮುಖ ಸುದ್ದಿ2 hours ago

Liquor Price Karnataka: ಮದ್ಯ ಪ್ರಿಯರಿಗೆ ಕಿಕ್‌ ಏರಿಸುವ ನ್ಯೂಸ್‌; ಜುಲೈ 1ರಿಂದ ಬೆಲೆ ಇಳಿಕೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ17 hours ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು4 days ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು4 days ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ5 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ5 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ5 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ6 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ7 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು7 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು7 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

ಟ್ರೆಂಡಿಂಗ್‌