Solo dining | ಹೆಚ್ಚುತ್ತಿರುವ ಸೋಲೋ ಡೈನಿಂಗ್:‌ ಒಬ್ಬರೇ ಕೂತುಂಡರೆ ಏನಾಗುತ್ತೆ? - Vistara News

ಲೈಫ್‌ಸ್ಟೈಲ್

Solo dining | ಹೆಚ್ಚುತ್ತಿರುವ ಸೋಲೋ ಡೈನಿಂಗ್:‌ ಒಬ್ಬರೇ ಕೂತುಂಡರೆ ಏನಾಗುತ್ತೆ?

ಊಟದ ಸಮಯ ಎಂದರೆ ಹೆಚ್ಚಿನ ದೇಶ-ಕಾಲ-ಸಂಸ್ಕೃತಿಗಳಲ್ಲಿ ಕುಟುಂಬಕ್ಕೆ ನೀಡುವ ಸಮಯವಾಗಿತ್ತು. ಆದರೆ ಇಂದು ರೆಸ್ಟೋರೆಂಟ್‌ಗಳಲ್ಲೂ ಮನೆಯಲ್ಲೂ ಒಬ್ಬರೇ ಊಟ ಮಾಡುವ ಸಂಸ್ಕೃತಿ ವಿಶ್ವದೆಲ್ಲೆಡೆ ಹೆಚ್ಚುತ್ತಿದೆ. ಯಾಕಾಗುತ್ತಿದೆ, ಏನಾಗುತ್ತಿದೆ?

VISTARANEWS.COM


on

solo dining
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಈಗಿನ ದಿನಗಳಲ್ಲಿ ಇದನ್ನು ʻಒಂಟಿ ಊಟದ ಸೆಳೆತʼ ಎನ್ನೋಣ ಬೇಕಿದ್ದರೆ. ಒಂಟಿಯಾಗಿರುವುದು ಊಟವೋ ಅಥವಾ ಊಟ ಮಾಡುವವರೋ ಎಂಬ ಪ್ರಶ್ನೆ ಸಹಜವಾಗಿಯೇ ಬಂದೀತು. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಎಲ್ಲಾ ದೇಶಗಳಲ್ಲೂ ಇಂಥದ್ದೊಂದು ಒಂಟಿತನ ಒಪ್ಪಿತವಾಗಿದೆ ಎಂದರೆ ಸುಳ್ಳಲ್ಲ. ಹಾಗಿಲ್ಲದಿದ್ದರೆ, ಊಟದ ಸಮಯ ಎಂದರೆ ಹೆಚ್ಚಿನ ದೇಶ-ಕಾಲ-ಸಂಸ್ಕೃತಿಗಳಲ್ಲಿ ಅದು ಕುಟುಂಬಕ್ಕೆ ನೀಡುವ, ನೀಡಲೇಬೇಕಾದ ಸಮಯ. ಪೂರ್ವ ದೇಶದ ಸಂಸ್ಕೃತಿಗಳಲ್ಲಿ ಇದು ಕೌಟುಂಬಿಕ ಸಮಯ ಎನಿಸಿಕೊಂಡರೆ, ಪಶ್ಚಿಮ ದೇಶಗಳಲ್ಲಿ ಇದೊಂದು ಸಭ್ಯತೆಯ ವಿಷಯ. ಮಂತ್ರಕ್ಕಿಂತ ಉಗುಳೇ ಹೆಚ್ಚು ಎನ್ನುವಂತೆ, ವಿಷಯಕ್ಕಿಂತ ಪೀಠಿಕೆಯೇ ಹೆಚ್ಚು ಎಂದು ಗೊಣಗಬೇಡಿ. ಹೊಟೇಲ್‌-ರೆಸ್ಟೋರೆಂಟ್‌ಗಳಲ್ಲಿ ಒಬ್ಬರೇ ಊಟ ಮಾಡುವ ಸಂಸ್ಕೃತಿ ವಿಶ್ವದೆಲ್ಲೆಡೆ ಹೆಚ್ಚುತ್ತಿರುವ ಕುರಿತಾಗಿ ಇದಿಷ್ಟೂ ಪ್ರವರವನ್ನು ಹೇಳಿದ್ದೀಗ.

solo dining

ನಾವು ಖಾಯಂ ಹೋಗುವ ದರ್ಶಿನಿಗಳೋ, ಖಾನಾವಳಿಗಳದ್ದೋ ಮಾತಲ್ಲ ಈಗ; ಅಲ್ಲಿ ಹೋಗುವುದೇ ಅವಸರಕ್ಕೆ ಒಂದಿಷ್ಟು ಹೊಟ್ಟೆಗೆ ಸುರಿದುಕೊಂಡು ಓಡುವುದಕ್ಕೆ. ಆದರೆ ದೊಡ್ಡ ಹೊಟೇಲ್‌ಗಳಿಗೆ ಹೋದಾಗ, ʻಟೇಬಲ್‌ ಎಷ್ಟು ಜನಕ್ಕೆ?ʼ ಎಂಬ ಸಿಬ್ಬಂದಿಯ ಸಹಜ ಪ್ರಶ್ನೆಗೆ, ʻಒಬ್ಬರಿಗೆʼ ಎಂಬುದನ್ನು ಗ್ರಾಹಕ ಮತ್ತು ಸಿಬ್ಬಂದಿಗಳಿಬ್ಬರೂ ಅತ್ಯಂತ ಸಹಜ ಎಂದು ನೋಡುವಂಥ ದೃಷ್ಟಿಕೋನ ಎಲ್ಲೆಡೆ ವ್ಯಾಪಿಸುತ್ತಿದೆ. ಹಾಗೆ ಡಿನ್ನರ್‌ಗೆಂದು ಹೊರಗೆ ಹೋಗುವುದೇ ಒಂದಿಷ್ಟು ಜನ ಸ್ನೇಹಿತರೋ, ಕುಟುಂಬದವರೋ ಸೇರಿ ಎಂಬಂಥ ಮನಸ್ಥಿತಿಯಲ್ಲಿ ನಿಧಾನವಾಗಿ ಆಗುತ್ತಿರುವ ಮತ್ತು ಆಗಲೇಬೇಕಾಗಿರುವ ಅನಿವಾರ್ಯ ಬದಲಾವಣೆಯಿದು. ಹಾಗಾದರೆ ಈ ʻಸೋಲೋ ಡೈನಿಂಗ್‌ʼ ಎನ್ನುವ ಬದಲಾವಣೆ ಏನನ್ನು ಪ್ರತಿಬಿಂಬಿಸುತ್ತದೆ?

ವಿಘಟನೆ ಹೆಚ್ಚಾಗುತ್ತಿದೆಯೇ?: ಮಾನವಶಾಸ್ತ್ರಗಳ ಪರಿಣತರನ್ನು ಈ ಬಗ್ಗೆ ಮಾತನಾಡಿಸಿದರೆ ಇನ್ನಷ್ಟು ವಿಕ್ಷಿಪ್ತ ಎನ್ನುವಂಥ ವಿಷಯಗಳು ನಮಗೆ ದೊರೆಯಬಹುದು. ಮೊದಲಿಗೆ ಕೋವಿಡ್‌ ಕಾಲದ್ದು. ಎಲ್ಲಾ ದೇಶಗಳಲ್ಲೂ ಇದ್ದಕ್ಕಿದ್ದಂತೆ ಲಾಕ್‌ಡೌನ್‌ ಹೇರಿದಾಗ ಕುಟುಂಬದ ಜೊತೆಗಿದ್ದವರು ಮುಂದಿನ ಹಲವಾರು ತಿಂಗಳುಗಳ ಕಾಲ ಕುಟುಂಬದ ಜೊತೆಗೇ ಉಳಿದರು. ಮನೆಯಿಂದ ಕೆಲಸ ಮಾಡುವುದು ಕೆಲವು ಉದ್ದಿಮೆಗಳಲ್ಲಿ ಸಾಧ್ಯವೂ ಆಯಿತು. ಎಲ್ಲರೂ ಇದ್ದಂಥ ಮನೆಗಳಲ್ಲಿ ಊಟ-ತಿಂಡಿಗಳು ಅತ್ಯಂತ ಆಪ್ತ ಕ್ಷಣಗಳು ಎನಿಸಿದವು. ಆದರೆ ಒಬ್ಬರೇ ಇದ್ದವರು ಸುದೀರ್ಘಕಾಲ ತಮ್ಮ ತಾವಿನಲ್ಲಿ ಒಬ್ಬರೇ ಉಳಿವಂತಾಯ್ತ. ಪರಿಣಾಮ, ಒಬ್ಬರಿಗಾಗಿಯೇ ಅಡುಗೆ ಮಾಡುವುದು, ಅಡುಗೆ ತರುವುದು, ತರಿಸಿಕೊಳ್ಳುವುದು- ಅಂದರೆ, ಆಹಾರದೊಂದಿಗಿನ ಕ್ಷಣಗಳೇ ಆಪ್ತ ಎನಿಸಿ, ಒಂಟಿ ಊಟ ಸಾಮಾನ್ಯ ಎನಿಸಲಾರಂಭಿಸಿತು. ವಿಚ್ಛೇದಿತರು, ಒಬ್ಬೊಂಟಿಗರು ಅಥವಾ ಕುಟುಂಬದ ಕವಚ ಇಲ್ಲದವರು ಒಬ್ಬರೇ ಡೈನಿಂಗ್‌ ಸುಖದಿಂದ ಹಿಂದೆ ಸರಿಯುವ ಬದಲು, ʻಹೀಗೂ ಇರಬಹುದುʼ ಎಂಬಂತೆ ಬದುಕಲಾರಂಭಿಸಿದರು. ಹಾಗಾದರೆ ಸಮಾಜ ಇನ್ನಷ್ಟು ವಿಘಟನೆಯತ್ತ ಹೋಗುತ್ತಿದೆಯೇ? ಅಂದರೆ, ಕುಟುಂಬಗಳ ಪರಿಧಿಯಿಂದ ಈಗಾಗಲೇ ದೂರವಾಗುತ್ತಿರುವ ಜನ, ʻನಾನು-ನನ್ನಿಷ್ಟʼ ಎಂಬತ್ತ ಇನ್ನಷ್ಟು ಸರಿಯುತ್ತಿರುವುದರ ದೂರಗಾಮಿ ಪರಿಣಾಮಗಳೇನು ಎಂಬುದರ ಬಗ್ಗೆ ಅಧ್ಯಯನ ಅಗತ್ಯ.

solo dining

ಊಟದ ಖುಷಿ ಇರುವುದೇ ಹಂಚಿ ಉಣ್ಣುವುದರಲ್ಲಿ ಎಂಬ ಸಂಸ್ಕೃತಿ ವಿಶ್ವದ ಬಹಳಷ್ಟು ದೇಶಗಳಲ್ಲಿದೆ. ಉಣ್ಣುವುದಷ್ಟೇ ಈ ಹೊತ್ತಿನ ಕಾರ್ಯಸೂಚಿ ಆಗಿರದೆ, ಒಬ್ಬರಿಗೊಬ್ಬರು ಆಪ್ತರಾಗುವ, ದಿನವಿಡೀ ನಡೆದಿದ್ದನ್ನು ಹಂಚಿಕೊಳ್ಳುವ, ಅಲ್ಲಿರುವವರ ನಡುವಿನ ನಂಟು ಬಲಗೊಳ್ಳುವ ಕೌಟುಂಬಿಕ ಮತ್ತು ಸಾಮಾಜಿಕ ಮನೋವ್ಯಾಪಾರವದು. ಒಬ್ಬರಿಗಾಗೇ ಅಡುಗೆ ಮಾಡುವುದಾದರೆ, ʻಏನೋ ಒಂದುʼ ಎಂದು ಬೇಯಿಸಿಡುವ ಜನರೂ, ಊಟಕ್ಕೆ ನಾಲ್ಕಾರು ಜನರಿದ್ದಾರೆ ಎನ್ನುವಾಗ ತುಂಬಾ ಮುತುವರ್ಜಿಯಿಂದ, ನಾನಾ ರುಚಿಗಳನ್ನು ತಯಾರಿಸುವುದು ಇದಕ್ಕೆ ಸಾಕ್ಷಿ. ಆಯಸ್ಸು ದೀರ್ಘವಾಗಿ, ಕಡೆಗಾಲದಲ್ಲಿ ಒಬ್ಬರೇ ಬದುಕುವ ಸಂದರ್ಭಗಳು ಜಗತ್ತಿನೆಲ್ಲೆಡೆ ಹೆಚ್ಚುತ್ತಿರುವ ಈ ದಿನಗಳಲ್ಲಿ, ʻಏನೋ ಒಂದುʼ ಬೇಯಿಸಿಕೊಂಡೇ ಅಪೌಷ್ಟಿಕತೆಗೆ ತುತ್ತಾಗುತ್ತಿರುವ ಪ್ರಕರಣಗಳು ಪಶ್ಚಿಮ ದೇಶಗಳಲ್ಲಿ ಹೆಚ್ಚುತ್ತಿವೆ.

ಇದಕ್ಕೆ ಒಂದಿಷ್ಟು ಕುತೂಹಲಕರ ಆಯಾಮಗಳೂ ಒದಗಿಬರುತ್ತಿವೆ. ಒಬ್ಬರಿಗಾಗಿಯೇ ಅಡುಗೆ ಮಾಡುವ ಪುಸ್ತಕಗಳು (ಕುಕ್‌ಬುಕ್‌) ಈಗ ಮಾರುಕಟ್ಟೆಯಲ್ಲಿ ಲಭ್ಯವಿದೆ. ಅಂದರೆ, ನಾಲ್ಕು ಜನರಿಗಾಗುವಷ್ಟು ಅಡುಗೆ ಮಾಡಿ, ಇರುವ ಒಬ್ಬ ವ್ಯಕ್ತಿ ಅದನ್ನೇ ಮೂರು ದಿನ ತಿನ್ನುವ ಅಗತ್ಯವಿಲ್ಲ. ಒಬ್ಬರಿಗೆ ಒಂದು ಹೊತ್ತಿಗೆ ಅಡುಗೆ ಮಾಡುವಾಗ ಯಾವುದನ್ನು ಎಷ್ಟು ಪ್ರಮಾಣದಲ್ಲಿ ಹಾಕಬೇಕು ಎಂದು ನಿಖರವಾಗಿ ತಿಳಿಸುವ ಪುಸ್ತಕಗಳಿವು! ಒಬ್ಬರೇ ತಿನ್ನುವಾಗ ಇಷ್ಟವಾಗುವ ತಿನಿಸುಗಳು ಯಾವುವು ಎಂಬ ಬಗ್ಗೆ ಹಲವಾರು ಖ್ಯಾತ ರೆಸ್ಟೋರೆಂಟ್‌ಗಳು ಮುತುವರ್ಜಿ ವಹಿಸುತ್ತಿವೆ. ಬ್ರಿಟನ್‌ನ ಹೊಟೇಲ್‌ಗಳ ಮಾಹಿತಿಯನ್ನು ನಂಬುವುದಾದರೆ ಕಳೆದೆರಡು ವರ್ಷಗಳಲ್ಲಿ ಒಂಟಿ ಗ್ರಾಹಕರ ಸಂಖ್ಯೆ ಸುಮಾರು ಶೇ. ೧೬೦ರಷ್ಟು ಹೆಚ್ಚಿದೆಯಂತೆ. ʻಸೋಲೊ ಟೇಬಲ್‌ಗಳ ಗ್ರಾಹಕರು ತಮ್ಮ ಸಿಬ್ಬಂದಿಯೊಂದಿಗೆ ಹೆಚ್ಚು ಮಾತನಾಡುತ್ತಾರೆ. ಇದರಿಂದ ಗ್ರಾಹಕರನ್ನು ತೃಪ್ತಿ ಪಡಿಸುವಲ್ಲಿ ನಮ್ಮ ಮನೋಬಲವೂ ಹೆಚ್ಚುತ್ತದೆʼ ಎಂಬುದು ಈ ರೆಸ್ಟೋರೆಂಟ್‌ಗಳ ಅಭಿಪ್ರಾಯ.

ಇದನ್ನೂ ಓದಿ| Cold Feeling | ಕೆಲವರಿಗೆ ಮಾತ್ರ ಏಕೆ ಚಳಿ ಹೆಚ್ಚು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕಲಬುರಗಿ

Kalaburagi News : ಆಕ್ಸಿಜನ್ ಸೋರಿಕೆ! ತಾಲೂಕು ಆಸ್ಪತ್ರೆಯಿಂದ ಹೊರಗೆ ಓಡಿದ ರೋಗಿಗಳು

Kalaburagi News : ತಾಲೂಕು ಆಸ್ಪತ್ರೆ ಆವರಣದಲ್ಲಿದ್ದ ಘಟಕದಿಂದ ಆಕ್ಸಿಜನ್‌ ಸೋರಿಕೆ ಆಗಿತ್ತು. ಈ ವಿಷಯ ತಿಳಿದ ಆಸ್ಪತ್ರೆ ಸಿಬ್ಬಂದಿ ಹಾಗೂ ರೋಗಿಗಳು ಹೊರಗೆ ಓಡಿ ಬಂದಿದ್ದರು. ಮುನ್ನೆಚ್ಚರಿಕಾ ಕ್ರಮವಾಗಿ ಅಗ್ನಿಶಾಮಕ ದಳ, ಪೊಲೀಸರು ದೌಡಾಯಿಸಿದ್ದರು.

VISTARANEWS.COM


on

By

kalaburagi news
Koo

ಕಲಬುರಗಿ: ಕಲಬುರಗಿ ಜಿಲ್ಲೆಯ (Kalaburagi News) ಚಿಂಚೊಳ್ಳಿ‌ ತಾಲೂಕು ಆಸ್ಪತ್ರೆಯಲ್ಲಿ ಆಕ್ಸಿಜನ್ ಸೋರಿಕೆ (Oxygen leakage) ಆಗಿದೆ ಎಂಬ ಸುದ್ದಿ ಕೇಳಿ ರೋಗಿಗಳು ಶಾಕ್‌ ಆಗಿದ್ದರು. ಆಸ್ಪತ್ರೆ ಹಿಂಭಾಗದಲ್ಲಿದ್ದ ಆಕ್ಸಿಜನ್ ಘಟಕದಿಂದ ಸೋರಿಕೆಯಾಗಿ ಅರ್ಧ ಕಿಮೀ ವ್ಯಾಪ್ತಿವರೆಗೂ ವಾಸನೆ ಮೂಗಿಗೆ ಬಡಿದಿತ್ತು.

ನೋಡನೋಡುತ್ತಿದ್ದ ಒಬ್ಬರಿಂದ ಒಬ್ಬರಿಗೆ ಆಕ್ಸಿಜನ್‌ ಸೋರಿಕೆ ಸುದ್ದಿ ಹರಿದಾಡಿದೆ. ಬಳಿಕ ಆಸ್ಪತ್ರೆಯೊಳಗೆ ಇದ್ದ ಸಿಬ್ಬಂದಿ, ರೋಗಿಗಳು ಭಯಭೀತರಾಗಿ ಹೊರಗೆ ಓಡಿ ಬಂದು ಆವರಣದೊಳಗೆ ಬಂದು ಕುಳಿತುಕೊಳ್ಳುವಂತಾಯಿತು. ಇತ್ತ ಆಕ್ಸಿಜನ್‌ ಟ್ಯಾಂಕ್‌ ಸ್ಫೋಟಗೊಂಡಿದೆ ಎಂಬ ಸುದ್ದಿಯಿಂದಾಗಿ ವೈದ್ಯರು ಮತ್ತು ಸಿಬ್ಬಂದಿ ತಗ್ಗಿದ ವಸತಿಗೃಹಗಳನ್ನು ಖಾಲಿ ಮಾಡಿದ್ದವು.

kalaburagi News

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಚಿಂಚೊಳ್ಳಿ ಪೊಲೀಸರು ದೌಡಾಯಿಸಿದ್ದರು. ಪರಿಶೀಲನೆ ನಡೆಸಿದಾಗ ಆಕ್ಸಿಜನ್‌ ಟ್ಯಾಂಕ್ ತುಂಬಿದ್ದರಿಂದ ಅದರ ಒತ್ತಡವನ್ನು ಹೊರಹಾಕಿದೆ ಎಂದು ಗೊತ್ತಾಗಿದೆ. ಈ ಕುರಿತು ಮಾಹಿತಿ ನೀಡಿರುವ ಕಲಬುರಗಿ ಡಿ.ಎಚ್.ಓ ಡಾ.ರತಿಕಾಂತ್ ಸ್ವಾಮಿ, ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂಬುದು ಸುಳ್ಳು ಸುದ್ದಿ. ಸಾರ್ವಜನಿಕರು ಆತಂಕ ಪಡಬೇಕಿಲ್ಲ ಎಂದು ಸ್ಪಷ್ಟಪಡಿಸಿದರು.

ಆಕ್ಸಿಜನ್‌ ಟ್ಯಾಂಕ್ ತುಂಬಿದ ನಂತರ ಅದರ ಒತ್ತಡವನ್ನು ಗ್ಯಾಸ್ ರೂಪದಲ್ಲಿ ಹೊರಹಾಕುವ ಸಾಮಾನ್ಯ ಪ್ರಕ್ರಿಯೆ ಆಗಿದೆ. ಆಸ್ಪತ್ರೆಯಲ್ಲಿನ 6 ಕೆ.ಎಲ್. ಸಾಮರ್ಥ್ಯದ ಟ್ಯಾಂಕಿಗೆ ಆಮ್ಲಜನಕ ಭರ್ತಿ ಮಾಡಿದೆ. ಒತ್ತಡ ಕಡಿಮೆ ಮಾಡಿಕೊಳ್ಳಲು ಎ, ಬಿ, ಸಿ ಎಂಬ ಸುರಕ್ಷತೆಯ ವಾಲ್‌ಗಳ ಮುಖೇನ ಹಂತ ಹಂತವಾಗಿ ಗ್ಯಾಸ್ ಲೀಕ್ ಮಾಡುತ್ತದೆ. ಹೀಗಾಗಿ ಸಾರ್ವಜನಿಕರು ಯಾರು ಆತಂಕ ಪಡಬೇಕಾಗಿಲ್ಲಾ ಎಂದರು.

ಇದನ್ನೂ ಓದಿ: Leopard attack : ರಾಯಚೂರಿನಲ್ಲಿ ಮೂವರ ಮೇಲೆ ದಾಳಿ ಮಾಡಿ ಕಾಲ್ಕಿತ್ತ ಚಿರತೆ!

ಐದು ಅಂತಸ್ತಿನ ಕಟ್ಟಡ ಧರಾಶಾಹಿ- ಏಳು ಜನ ದಾರುಣ ಸಾವು

ಅಹ್ಮದಾಬಾದ್‌: ಗೇಮಿಂಗ್‌ ಜೋನ್‌(Gaming zone)ನಲ್ಲಿ ಭಾರೀ ಬೆಂಕಿ ಅವಘಡ(Fire Accident)ದ ಬಳಿಕ ಗುಜರಾತ್‌(Gujarat)ನಲ್ಲಿ ಇದೀಗ ಮತ್ತೊಂದು ದುರಂತ ಸಂಭವಿಸಿದೆ. ಐದು ಅಂತಸ್ತಿನ ಕಟ್ಟಡ(Building Collapse) ಧರಾಶಾಹಿಯಾಗಿದ್ದು, ಏಳು ಜನ ಧಾರುಣವಾಗಿ ಮೃತಪಟ್ಟಿದ್ದಾರೆ. ಸೂರತ್‌ನಲ್ಲಿ ಈ ಘಟನೆ ನಡೆದಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಅವಶೇಷದಡಿಯಲ್ಲಿ ಹಲವು ಜನ ಸಿಲುಕಿರುವ ಸಾಧ್ಯತೆ ಇದೆ.

ಘಟನೆ ಬಗ್ಗೆ ಸೂರತ್‌ನ ಅಗ್ನಿಶಾಮಕ ಅಧಿಕಾರಿ ಬಸಂತ್‌ ಪರೀಕ್‌ ಮಾಹಿತಿ ನೀಡಿದ್ದು, ಶನಿವಾರ ರಾತ್ರಿ ಈ ದುರಂತ ಸಂಭವಿಸಿದೆ. ರಾತ್ರಿಯಿಡೀ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಏಳು ಮೃತ ದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಕನಿಷ್ಠ ಆರರಿಂದ ಏಳು ಜನರು ಇನ್ನೂ ಅವಶೇಷಗಳಲ್ಲಿ ಸಿಕ್ಕಿಬಿದ್ದಿರುವ ಭಯವಿದ್ದು, ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಎಸ್‌ಡಿಆರ್‌ಎಫ್ (ರಾಜ್ಯ ವಿಪತ್ತು ನಿರ್ವಹಣಾ ಪಡೆ) ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡಗಳು ನಡೆಸುತ್ತಿವೆ ಎಂದು ಹೇಳಿದ್ದಾರೆ.

ಸುಮಾರು ಐದು ಫ್ಲಾಟ್‌ಗಳಿಗಳನ್ನು ಹೊಂದಿರುವ ಈ ಕಟ್ಟಡವನ್ನು 2016-17ರಲ್ಲಿ ನಿರ್ಮಿಸಲಾಗಿದೆ. ಈ ಪ್ರದೇಶದಲ್ಲಿ ಕಾರ್ಖಾನೆಗಳಲ್ಲಿ ಕೆಲಸ ಮಾಡುವವರು ಈ ಫ್ಲ್ಯಾಟ್‌ನಲ್ಲಿ ವಾಸವಾಗಿದ್ದರು. ರಕ್ಷಣಾ ಕಾರ್ಯವನ್ನು ಪ್ರಾರಂಭಿಸಿದಾಗ, ಒಳಗೆ ಸಿಲುಕಿರುವವರ ಧ್ವನಿಯನ್ನು ನಾವು ಕೇಳಿದ್ದೇವೆ. ನಾವು ಮಹಿಳೆಯನ್ನು ಜೀವಂತವಾಗಿ ಅವಶೇಷಗಳಿಂದ ರಕ್ಷಿಸಿ ಆಸ್ಪತ್ರೆಗೆ ಕಳುಹಿಸಿದ್ದೇವೆ. ಸುಮಾರು ಐದು ಜನರು ಇನ್ನೂ ಒಳಗೆ ಸಿಲುಕಿರುವ ಶಂಕೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಗುಜರಾತ್‌ನ ರಾಜ್‌ಕೋಟ್‌ (Rajkot) ನಗರದಲ್ಲಿರುವ ಗೇಮಿಂಗ್‌ ಜೋನ್‌ (Gaming Zone) ಒಂದರಲ್ಲಿ ಮೇ 25ರಂದು ಸಂಜೆ ಭೀಕರ ಅಗ್ನಿ ದುರಂತ ಸಂಭವಿಸಿತ್ತು. ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 32ಕ್ಕೆ ಏರಿಕೆಯಾಗಿದೆ. 9 ಮಕ್ಕಳು, ಮಹಿಳೆಯರು ಸೇರಿ 32 ಮಂದಿ ಮೃತಪಟ್ಟಿರುವ ಪ್ರಕರಣವು ದೇಶವನ್ನೇ ಬೆಚ್ಚಿಬೀಳಿಸಿತ್ತು.

ಗೇಮಿಂಗ್‌ ಜೋನ್‌ ಕಟ್ಟಡದಲ್ಲಿ ನೂರಾರು ಮಕ್ಕಳು ಹಾಗೂ ಅವರ ತಾಯಂದಿರು ಇದ್ದರು. ವೀಕೆಂಡ್‌ ಇರುವ ಕಾರಣ ಮಕ್ಕಳು ಆಟವಾಡಲಿ ಎಂಬುದಾಗಿ ಟಿಆರ್‌ಪಿ ಗೇಮಿಂಗ್‌ ಜೋನ್‌ಗೆ ಕರೆದುಕೊಂಡು ಹೋಗಿದ್ದರು. ಇದೇ ವೇಳೆ ಏಕಾಏಕಿ ಅಗ್ನಿ ದುರಂತ ಸಂಭವಿಸಿದ ಕಾರಣ 32 ಜನ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಇವರಲ್ಲಿ ಮಹಿಳೆಯರು ಹಾಗೂ ಮಕ್ಕಳು ಕೂಡ ಸೇರಿದ್ದಾರೆ. ಗೇಮಿಂಗ್‌ ಜೋನ್‌ನಲ್ಲಿ ಅಗ್ನಿ ದುರಂತ ಸಂಭವಿಸಲು ನಿಖರ ಕಾರಣ ತಿಳಿದುಬಂದಿಲ್ಲ.

ರಾಜ್‌ಕೋಟ್‌ ಅಗ್ನಿ ದುರಂತದಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ತಲಾ 4 ಲಕ್ಷ ರೂ. ಪರಿಹಾರ ನೀಡುವುದಾಗಿ ಗುಜರಾತ್‌ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಘೋಷಿಸಿದ್ದಾರೆ. ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರವನ್ನೂ ಘೋಷಣೆ ಮಾಡಿದ್ದಾರೆ. ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನೂ (SIT) ರಚಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಫ್ಯಾಷನ್

Pearl Fashion: ಮುತ್ತಿನ ಹಾರಕ್ಕೆ ಸಿಕ್ತು ನ್ಯೂ ಲುಕ್‌!

Pearl fashion: ಮಹಿಳೆಯರನ್ನು ಸಿಂಗರಿಸುತ್ತಿದ್ದ ಮುತ್ತಿನ ಆಭರಣಗಳು ಟ್ರೆಡಿಷನಲ್‌ ಲುಕ್‌ನಿಂದ ಮುಕ್ತಿ ಪಡೆದು, ಇದೀಗ ನಯಾ ಜಮಾನದ ಯುವತಿಯರಿಗೂ ಪ್ರಿಯವಾಗುವಂತಹ ಫ್ಯಾಷನ್‌ ಜ್ಯುವೆಲರಿ ಡಿಸೈನ್‌ನಲ್ಲಿ ಬಂದಿವೆ. ಯಾವ್ಯಾವ ಡಿಸೈನ್‌ನವು ಈ ಸಾಲಿನ ಟ್ರೆಂಡ್‌ನಲ್ಲಿವೆ ಎಂಬುದರ ಬಗ್ಗೆ ಇಲ್ಲಿದೆ ವಿವರ.

VISTARANEWS.COM


on

Pearl Fashion
ಚಿತ್ರಕೃಪೆ : ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮುತ್ತಿನ ಹಾರಗಳು ಇದೀಗ ಫ್ಯಾಷನ್‌ (Pearl fashion) ಟಚ್‌ ಪಡೆದು ಹೊಸ ಲುಕ್‌ನಲ್ಲಿ ಎಂಟ್ರಿ ನೀಡಿವೆ.
ಹೌದು, ಸದಾ ಮಾನಿನಿಯರನ್ನು ಸಿಂಗರಿಸುತ್ತಿದ್ದ, ಬಗೆಬಗೆಯ ಮುತ್ತಿನ ಆಭರಣಗಳು ಹಳೆಯ ಕಾಲದ ಟ್ರೆಡಿಷನಲ್‌ ಲುಕ್‌ನಿಂದ ಮುಕ್ತಿ ಪಡೆದು, ಇದೀಗ ನಯಾ ಜಮಾನದ ಯುವತಿಯರಿಗೂ ಪ್ರಿಯವಾಗುವಂತಹ ಹೊಸ ಡಿಸೈನ್‌ನಲ್ಲಿ ಬಿಡುಗಡೆಗೊಂಡಿದ್ದು, ಫ್ಯಾಷನ್‌ ಜ್ಯುವೆಲರಿಗಳ ಟಾಪ್‌ ಲಿಸ್ಟ್ ಗೆ ಸೇರಿಕೊಂಡಿವೆ.

Pearl Fashion

ನ್ಯೂ ಲುಕ್‌ನಲ್ಲಿ ಮುತ್ತಿನ ಹಾರಗಳು

“ಮುತ್ತಿನ ಹಾರಗಳು ಬಹುತೇಕ ಮಾನಿನಿಯರ ಫೆವರೇಟ್‌ ಆಭರಣಗಳು. ಹಳೆ ಜನರೇಷನ್‌ ಮಹಿಳೆಯರ ಜ್ಯುವೆಲರಿ ಸಂಗ್ರಹಗಳಲ್ಲಿ ತಮ್ಮದೇ ಆದ ಸ್ಥಾನವನ್ನು ಗಳಿಸಿವೆ. ಟ್ರೆಡಿಷನಲ್‌ ಡಿಸೈನ್‌ನಲ್ಲಿ ಸಾಕಷ್ಟು ಪ್ರಚಲಿತದಲ್ಲಿದ್ದವು. ಬರಬರುತ್ತಾ ಈ ಮುತ್ತಿನ ಹಾರಗಳು ಜ್ಯುವೆಲ್‌ ಡಿಸೈನರ್‌ಗಳ ಕೈ ಸೇರಿ ನಾನಾ ಬಗೆಯ ವಿನ್ಯಾಸಕ್ಕೆ ಒಳಪಟ್ಟು, ಹೊಸ ರೂಪ ಪಡೆದವು. ಅಷ್ಟೇಕೆ! ಮುತ್ತಿನ ಹಾರಗಳು ಇಂತಹ ರೂಪ ಪಡೆಯಬಹುದೇ ಎನ್ನುವಷ್ಟರ ಮಟ್ಟಿಗೆ ಹೊಸ ಡಿಸೈನ್‌ಗಳಲ್ಲಿ ಇದೀಗ ಬಿಡುಗಡೆಗೊಳ್ಳಲಾರಂಭಿಸಿವೆ. ಒಂದಕ್ಕಿಂತ ಒಂದು ಹೊಸ ಹೊಸ ಡಿಸೈನ್‌ನಲ್ಲಿ ಎಂಟ್ರಿ ನೀಡಲಾರಂಭಿಸಿವೆ. ಪರಿಣಾಮ. ಈ ಜನರೇಷನ್‌ನ ಯುವತಿಯರು ಕೂಡ ಇವುಗಳತ್ತ ಆಕರ್ಷಿತರಾಗತೊಡಗಿದ್ದಾರೆ” ಎನ್ನುತ್ತಾರೆ ಆಭರಣ ವಿನ್ಯಾಸಕಾರರಾದ ರಚನಾ ಆಚಾರ್‌. ಅವರ ಪ್ರಕಾರ, ಮುತ್ತಿನ ಹಾರಗಳಿಗೆ ಅದರದ್ದೇ ಆದ ಹಿಸ್ಟರಿ ಇದೆ. ಕಾಲ ಬದಲಾದಂತೆ ತಮ್ಮ ರೂಪ ಬದಲಿಸಿಕೊಂಡಿವೆ ಅಷ್ಟೇ ಎನ್ನುತ್ತಾರೆ.

Pearl Fashion

ಟ್ರೆಂಡ್‌ನಲ್ಲಿರುವ ಮುತ್ತಿನ ಹಾರಗಳು

ಬಿಗ್‌ ಪೆಂಡೆಂಟ್‌ನ ಮುತ್ತಿನ ಹಾರ, ಪ್ರಿಶಿಯಸ್‌ ಸ್ಟೋನ್ಸ್ ಮಿಕ್ಸ್ ಮ್ಯಾಚ್‌ ಹೊಂದಿದ ಮುತ್ತಿನ ಹಾರ, ಲಾಂಗ್‌ ಚೈನ್‌ ಹೊಂದಿದ ಮುತ್ತಿನ ಹಾರ, ನಾಗರ, ಗಂಡು-ಭೇರುಂಡ, ನವಿಲು ಹೀಗೆ ನಾನಾ ಡಿಸೈನ್‌ನ ಅಗಲವಾದ ಪೆಂಡೆಂಟ್‌ ಹೊಂದಿರುವ ಹಾರ, ಟೈನಿ ಮುತ್ತಿನ ಎಳೆಗಳನ್ನು ಹೊಂದಿರುವ ಹಾರ, ಬಿಗ್‌ ಪರ್ಲ್ನ ವಿಕ್ಟೋರಿಯಾ ಸೆಟ್‌, ಜಿರ್ಕೊನಿ ಡಿಸೈನ್‌ ಪೆಂಡೆಂಟ್‌ನ ಹಾರ ಸೇರಿದಂತೆ ನಾನಾ ಬಗೆಯ ಮುತ್ತಿನ ಹಾರಗಳು ಟ್ರೆಂಡ್‌ನಲ್ಲಿವೆ.

Pearl Fashion

ಮುತ್ತಿನ ಹಾರದ ರಿಪ್ಲೀಕಾ

ಇದೀಗ ಫ್ಯಾಷನ್‌ ಜ್ಯುವೆಲರಿಗಳಲ್ಲಿ ಮುತ್ತಿನ ಹಾರದ ರಿಪ್ಲೀಕಾಗಳು ಬಂದಿವೆ. ಹೆಚ್ಚು ಬೆಲೆ ಇರದ ಫೇಕ್‌ ಮುತ್ತಿನಿಂದ ತಯಾರಿಸಲಾದ ಈ ಹಾರಗಳು ಕೂಡ ಟ್ರೆಂಡ್‌ನಲ್ಲಿವೆ. ಹೆಚ್ಚು ಬೆಲೆ ತೆತ್ತು ಕೊಳ್ಳಲಾಗದವರು ಇವನ್ನು ಧರಿಸಿ ಸಮಾಧಾನಪಟ್ಟುಕೊಳ್ಳಬಹುದು ಎನ್ನುತ್ತಾರೆ ಜ್ಯುವೆಲ್‌ ಡಿಸೈನರ್‌ ರಾಣಿ.

  • ಬಿಗ್‌ ಸ್ಟೋನ್‌ ಪೆಂಡೆಂಟ್‌ ಮುತ್ತಿನ ಹಾರ ಚಾಲ್ತಿಯಲ್ಲಿದೆ.
  • ಎಳೆಎಳೆಯಾಗಿರುವಂತಹ ಮುತ್ತಿನ ಹಾರಗಳು ಬೇಡಿಕೆ ಪಡೆದುಕೊಂಡಿವೆ.
  • ಸಮೀಕ್ಷೆಯೊಂದರ ಪ್ರಕಾರ, ನೂರರಲ್ಲಿ ಹತ್ತು ಮಹಿಳೆಯರ ಬಳಿ ಒಂದಲ್ಲ ಒಂದು ಮುತ್ತಿನ ಹಾರ ಇದ್ದೇ ಇರುತ್ತದಂತೆ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

ಇದನ್ನೂ ಓದಿ: New Fashion Trend: ಜೆನ್‌ ಜಿ ಹುಡುಗ-ಹುಡುಗಿಯರ ಬೆರಳನ್ನು ಆಕ್ರಮಿಸಿದ ಫಂಕಿ ಉಂಗುರಗಳು!

Continue Reading

ಆರೋಗ್ಯ

Health Food Tips: ಈ ಕೆಲವು ಆಹಾರಗಳ ಸೇವನೆಯಿಂದ ಬಾಯಾರಿ, ಗಂಟಲೊಣಗಿ ನೀರು ಬೇಕೆನಿಸುತ್ತದೆ!

Health Food Tips: ಉಪ್ಪು ತಿಂದವನು ನೀರು ಕುಡಿಯಲೇ ಬೇಕು ಎಂಬ ಗಾದೆಯೇ ಇದೆ. ಕೆಟ್ಟ ಕೆಲಸ ಮಾಡಿದವನು ಅದರ ಫಲ ಅನುಭವಿಸಲೇ ಬೇಕು ಎಂಬುದು ಇದರ ಒಳಾರ್ಥವಾದರೂ, ಉಪ್ಪಿನಂಶ ದೇಹಕ್ಕೆ ಹೆಚ್ಚು ಹೋದರೆ, ಸಹಜವಾಗಿಯೇ ನೀರು ಕುಡಿಯಲೇಬೇಕಾಗುತ್ತದೆ ಎಂಬುದು ಶಬ್ದಾರ್ಥವೂ ಹೌದು. ಇದು ನಿಜ ಕೂಡಾ. ಬನ್ನಿ, ಯಾವೆಲ್ಲ ಆಹಾರಗಳು ನಿಮ್ಮ ದೇಹದ ನೀರಿನಂಶವನ್ನು ಕ್ಷಣಮಾತ್ರದಲ್ಲಿ ಬಸಿದುಬಿಡುತ್ತದೆ ಎಂಬುದನ್ನು ನೋಡೋಣ ಬನ್ನಿ.

VISTARANEWS.COM


on

Health Food Tips
Koo

ಕೆಲವು ಆಹಾರಗಳೇ ಹಾಗೆ (Health Food Tips). ತಿಂದು ಸ್ವಲ್ಪ ಹೊತ್ತಿನಲ್ಲಿ ಬಾಯಾರುತ್ತದೆ. ಗಂಟಲು ಒಣಗುತ್ತದೆ. ದೇಹದ ನೀರೆಲ್ಲ ಬಸಿದು ಹೋದಂಥ ಅನುಭವ. ಮತ್ತೆ ಮತ್ತೆ ನೀರು ಕುಡಿಯಬೇಕೆನಿಸುತ್ತದೆ. ಎಷ್ಟು ನೀರು ಕುಡಿದರೂ, ಹೊಟ್ಟೆಯಲ್ಲಿ ನೀರು ಸದ್ದು ಮಾಡುವಷ್ಟರವರೆಗೆ ನೀರು ತುಂಬಿಸಿಕೊಂಡರೂ ಯಾಕೋ ತೃಪ್ತಿಯಿಲ್ಲದ ಅನುಭವ. ಪದೇ ಪದೇ ಗಂಟಲೊಣಗುವುದು, ಬಾತ್‌ರೂಂಗೆ ಹೋಗಬೇಕೆನಿಸುವುದು ಇತ್ಯಾದಿ ಸಾಮಾನ್ಯ. ಬೇಸಗೆಯಲ್ಲಂತೂ ಈ ಸಮಸ್ಯೆ ಹೇಳತೀರದು. ಉಪ್ಪು ತಿಂದವನು ನೀರು ಕುಡಿಯಲೇ ಬೇಕು ಎಂಬ ಗಾದೆಯೇ ಇದೆ. ಕೆಟ್ಟ ಕೆಲಸ ಮಾಡಿದವನು ಅದರ ಫಲ ಅನುಭವಿಸಲೇ ಬೇಕು ಎಂಬುದು ಇದರ ಒಳಾರ್ಥವಾದರೂ, ಉಪ್ಪಿನಂಶ ದೇಹಕ್ಕೆ ಹೆಚ್ಚು ಹೋದರೆ, ಸಹಜವಾಗಿಯೇ ನೀರು ಕುಡಿಯಲೇಬೇಕಾಗುತ್ತದೆ ಎಂಬುದು ಶಬ್ದಾರ್ಥವೂ ಹೌದು. ಇದು ನಿಜ ಕೂಡಾ. ಬನ್ನಿ, ಯಾವೆಲ್ಲ ಆಹಾರಗಳು ನಿಮ್ಮ ದೇಹದ ನೀರಿನಂಶವನ್ನು ಕ್ಷಣಮಾತ್ರದಲ್ಲಿ ಬಸಿದುಬಿಡುತ್ತದೆ ಎಂಬುದನ್ನು ನೋಡೋಣ ಬನ್ನಿ.

Salt is predominant in processed foods Keep this away Foods To Avoid For Blood Pressure

ಅತಿಯಾಗಿ ಸಂಸ್ಕರಿಸಿದ ಆಹಾರಗಳು

ಅತಿಯಾಗಿ ಸಂಸ್ಕರಿಸಿದ ಆಹಾರಗಳಾದ ಆಲೂಗಡ್ಡೆ ಚಿಪ್ಸ್‌, ಫ್ರೋಜನ್‌ ಪ್ಯಾಕೇಜ್ಡ್‌ ಆಹಾರಗಳು, ನಿಮ್ಮಿಷ್ಟದ ಕ್ಯಾಂಡಿ ಬಾರ್‌ ಇತ್ಯಾದಿಗಳಿಂದ ದೇಹದಲ್ಲಿ ನಿರ್ಜಲೀಕರಣದ ಸ್ಥಿತಿ ಅಂದರೆ ಡಿಹೈಡ್ರೇಶನ್‌ ಉಂಟಾಗುತ್ತದೆ. ಬಾಯಿ ಬಹುಬೇಗನೆ ಒಣಗಿದಂತಾಗುತ್ತದೆ. ನೀರು ಬೇಕೆನಿಸುತದೆ. ಈ ಆಹಾರಗಳಲ್ಲಿ ಸೋಡಿಯಂ ಹಾಗೂ ಸಕ್ಕರೆಯ ಪ್ರಮಾಣ ಹೆಚ್ಚಿರುವುದರಿಂದ ದೇಹಕ್ಕೆ ಈ ಸ್ಥಿತಿ ಬರುತ್ತದೆ.

Kerala Inji Curry Ginger Pickle Most Famous Indian Pickles And Their Origin Place

ಉಪ್ಪಿನಕಾಯಿ

ಉಪ್ಪಿನಕಾಯಿ ಇದ್ದರೆ ಊಟ ರುಚಿ ಹೌದು. ಆದರೆ, ಉಪ್ಪಿನಕಾಯಿಯಲ್ಲಿ ಉಪ್ಪು ಹೆಚ್ಚಿರುವುದರಿಂದ ಬಾಯಾರುವುದು ಹೆಚ್ಚು. ಈಗೆಲ್ಲ ಉಪ್ಪು ಕಡಿಮೆ ಇರುವ ಥರಥರದ ಉಪ್ಪಿನಕಾಯಿಗಳನ್ನೂ ಮಾಡಬಹುದಾದ್ದರಿಂದ ಅಥವಾ ಮಾರುಕಟ್ಟೆಯಲ್ಲಿ ಲಭ್ಯವಿರುವುದರಿಂದ ಉಪ್ಪಿನಕಾಯಿ ತಿನ್ನುವ ಆಸೆಯ ಮಂದಿ ತಮ್ಮ ಆಸೆಗೆ ಎಳ್ಳುನೀರು ಬಿಡಬೇಕಾಗಿಲ್ಲ.

Soy sauce

ಸೋಯಾ ಸಾಸ್‌

ಯಾವುದೇ ಚೈನೀಸ್‌ ಅಡುಗೆ ಮಾಡುವುದಿದ್ದರೂ ಸೋಯಾ ಸಾಸ್‌ ಬಹುಮುಖ್ಯವಾದ ಪದಾರ್ಥ. ಆದರೆ ಇದರಲ್ಲೂ ಅಧಿಕ ಸೋಡಿಯಂ ಹಾಗೂ ಬ್ರಿಮ್‌ ಇರುವುದರಿಂದ ಇದು ಡಿಹೈಡ್ರೇಶನ್‌ಗೆ ದೂಡುತ್ತದೆ. ಇದರಲ್ಲೂ ಈಗ ಮಾರುಕಟ್ಟೆಯಲ್ಲಿ ಕಡಿಮೆ ಸೋಡಿಯಂ ಇರುವ ವೆರೈಟಿಗಳು ಲಭ್ಯವಿವೆ. ಹಾಗಾಗಿ ಅಂಥವುಗಳ ಆಯ್ಕೆಯನ್ನೂ ಮಾಡಬಹುದು.

Heavy or Rich Desserts Healthy Foods That Are Harmful To Consume At Night

ಸಿಹಿತಿನಿಸುಗಳು/ಡೆಸರ್ಟ್‌ಗಳು

ಸಿಹಿತಿನಿಸಿನಲ್ಲಿ ಹಾಗೂ ಯಾವುದೇ ಡೆಸರ್ಟ್‌ ವಿಚಾರಕ್ಕೆ ಬಂದರೆ ಅದರಲ್ಲಿ ಸಕ್ಕರೆಯಂಶ ಹೆಚ್ಚೇ. ಕೃತಕ ಸಿಹಿಗಳು ಇಂದು ಎಲ್ಲದರಲ್ಲೂ ಇರುವುದರಿಂದ ಕೇಕ್, ಕುಕ್ಕೀಸ್‌, ಐಸ್‌ಕ್ರೀಂ ಸೇರಿದಂತೆ ಯಾವುದೇ ಡೆಸರ್ಟ್‌ ತಿಂದರೆ ನೀವು ನೀರು ಹೆಚ್ಚು ಕುಡಿಯಲೇಬೇಕು. ಗಂಟಲೊಣಗಿ, ಬಾಯಾರುವುದು ನಿಶ್ಚಿತ. ಅದಕ್ಕೇ, ಮದುವೆ ಮನೆ, ಪಾರ್ಟಿ, ಸಮಾರಂಭಗಳ ಊಟ ಉಂಡು ಬಂದ ಮೇಲೆ ಹೆಚ್ಚು ಸುಸ್ತೂ, ಬಾಯಾರಿಕೆಯೂ ಆಗುತ್ತದೆ.

Beetroot

ಬೀಟ್‌ರೂಟ್‌

ತರಕಾರಿಗಳ ವಿಚಾರಕ್ಕೆ ಬಂದರೆ ಬೀಟ್‌ರೂಟ್‌ ಡಿಹೈಡ್ರೇಶನ್‌ಗೆ ದೂಡುವ ತರಕಾರಿ. ಬೀಟ್‌ರೂಟಿನಲ್ಲಿ ಪೊಟಾಶಿಯಂ ಹೇರಳವಾಗಿದೆ. ಹೀಗಾಗಿ ಇದು ದೇಹದಿಂದ ನೀರಿನಂಶವನ್ನು ಹೊರಕ್ಕೆ ದೂಡುವಲ್ಲಿ ಸಹಾಯ ಮಾಡುತ್ತದೆ. ಹಾಗಾಗಿಯೇ ಬೀಟ್‌ರೂಟ್‌ ಜ್ಯೂಸ್‌ ಕುಡಿದರೆ ಹೆಚ್ಚು ಬಾತ್‌ರೂಂಗೆ ಹೋಗಬೇಕೆನಿಸುತ್ತದೆ.
ಹಾಗಾದರೆ ಇದಕ್ಕೆ ಪರಿಹಾರವೇ ಇಲ್ಲವೇ ಎಂದು ನೀವು ಕೇಳಬಹುದು. ಖಂಡಿತಾ ಇದೆ. ಇಷ್ಟದ ತಿನಿಸನ್ನು ಈ ಕಾರಣಕ್ಕೆ ಬಿಡಬೇಕಾಗಿಲ್ಲ. ಆದರೆ, ಅತಿಯಾಗಿ ತಿನ್ನದಿರಿ. ಇಂತಹ ಆಹಾರ ಹಿತಮಿತವಾಗಿರಲಿ. ಈ ಸಂದರ್ಭ ಹಣ್ಣು ಹಂಪಲು, ತರಕಾರಿಗಳೂ ಜೊತೆಯಲ್ಲೇ ಹೊಟ್ಟೆ ಸೇರಲಿ. ಇವನ್ನು ತಿಂದ ಮೇಲೆ ಬಾಯಾರಿದರೆ, ಕಾಫಿ, ಚಹಾದಂತಹ ಕೆಫಿನ್‌ಯುಕ್ತ ಪದಾರ್ಥಗಳ ಮೊರೆ ಹೋಗದಿರಿ. ಆದಷ್ಟೂ ನೀರನ್ನೇ ಕುಡಿಯಿರಿ. ಆರೋಗ್ಯಕರ ಆಹಾರ ಸೇವನೆ ನಿಮ್ಮ ಮಂತ್ರವಾಗಲಿ.

ಇದನ್ನೂ ಓದಿ: Brain Eating Amoeba: ಏನಿದು ಮೆದುಳು ತಿನ್ನುವ ಅಮೀಬಾ? ಇದರಿಂದ ನಮಗೂ ಅಪಾಯ ಇದೆಯೆ?

Continue Reading

ಲೈಫ್‌ಸ್ಟೈಲ್

Toothbrush Using Tips: ನಿಮ್ಮ ಬ್ರಷ್‌ ಬದಲಿಸಿದ್ದು ಯಾವಾಗ ನೆನಪಿದೆಯಾ?

Toothbrush Using Tips: ಬಾಯಿಯ ಆರೋಗ್ಯದ ವಿಷಯ ಬಂದಾಗ ನಾವೆಷ್ಟು ಜಾಗ್ರತೆ ವಹಿಸುತ್ತೇವೆ? ನಮ್ಮ ಬ್ರಷ್‌ಗಳನ್ನು ಯಾವಾಗ ಬದಲಿಸುತ್ತೇವೆ? ನಮಗೆ ಹೊಂದುವಂಥ ಬ್ರಷ್‌ ಖರೀದಿಸುವುದು ನಮಗೆ ತಿಳಿದಿದೆಯೇ? ಇನ್ನಷ್ಟು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

VISTARANEWS.COM


on

Toothbrush Using Tips
Koo

ನಮ್ಮ ವೈಯಕ್ತಿಕ ಶುಚಿತ್ವದ ವಿಷಯ ಬಂದಾಗ ನಾವೆಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ಉದಾ, ನಮ್ಮ ಬಾಚಣಿಕೆ ಅಥವಾ ನಮ್ಮ ಹಲ್ಲುಜ್ಜುವ ಬ್ರಷ್‌ಗಳ ಬಗ್ಗೆ (Toothbrush Using Tips) ನಾವೆಷ್ಟು ಗಮನ ನೀಡುತ್ತೇವೆ? ಬಾಚಣಿಕೆಯನ್ನು ಯಾವಾಗ ಶುಚಿ ಮಾಡುತ್ತೇವೆ? ಹಲ್ಲುಜ್ಜುವ ಬ್ರಷ್ ಎಷ್ಟು ತಿಂಗಳಿಗೊಮ್ಮೆ ಬದಲಾಯಿಸುತ್ತೇವೆ? ಇಂಥ ವಿಷಯಗಳು ಸಣ್ಣದಾದರೂ ಬಾಯಿಯ ಆರೋಗ್ಯದ ಬಗ್ಗೆ ಬಹಳಷ್ಟು ವಿಷಯಗಳನ್ನು ನಿರ್ಧರಿಸುತ್ತವೆ. ಈ ಕುರಿತಾದ ಇನ್ನಷ್ಟು ವಿವರಗಳು ಇಲ್ಲಿವೆ. ಯಾವ ವಸ್ತುವನ್ನು ಶುಚಿ ಮಾಡುವುದಕ್ಕೆ ಬಳಸುತ್ತೇವೋ ಅದನ್ನು ಮೊದಲು ಸ್ವಚ್ಛ ಮಾಡಿಕೊಳ್ಳಬೇಕಾದ್ದು ಅಗತ್ಯ. ಅದರಲ್ಲೂ ಬಾಯಿಯ ಆರೋಗ್ಯ ರಕ್ಷಣೆಗೆ ಉಪಯೋಗವಾಗುವ ಬ್ರಷ್‌ಗಳೇ ಕೊಳೆಯಾಗಿದ್ದರೆ ಹಲ್ಲು, ಒಸಡುಗಳ ಸ್ಥಿತಿ ಎನು? ಆದರೆ ಎಷ್ಟು ಜನ ಈ ಬಗ್ಗೆ ಲಕ್ಷ್ಯ ವಹಿಸುತ್ತಾರೆ? ಕಾಲಕಾಲಕ್ಕೆ ಅದನ್ನು ಬದಲಾಯಿಸುತ್ತಾರೆ? ಯಾವಾಗ ಬದಲಾಯಿಸಬೇಕು ಎನ್ನುವ ಮಾಹಿತಿ ಎಷ್ಟು ಜನರಲ್ಲಿ ಇರುತ್ತದೆ? ಅದನ್ನೆಲ್ಲ ಯಾಕಾಗಿ ತಿಳಿದುಕೊಳ್ಳಬೇಕು?

Toothbrush

ಬ್ರಷ್‌ ಹೇಗಿರಬೇಕು?

ಈ ಪ್ರಶ್ನೆಗೆ ಉತ್ತರ ಅವರವರ ಆಯ್ಕೆಗೆ ಬಿಟ್ಟಿದ್ದು. ಆದರೆ ಯಾವುದನ್ನೇ ತೆಗೆದುಕೊಂಡರು, ಅದರ ಬಳಕೆಯ ತುದಿ ಒರಟಾಗಿರಬಾರದು. ಹಾಗಿದ್ದರೆ ಹಲ್ಲು ಮತ್ತು ಒಸಡುಗಳಿಗೆ ಹಾನಿ. ಬದಲಿಗೆ, ಮೃದುವಾಗಿರುವ ಬ್ರಿಸಲ್‌ಗಳು ಇರುವುದನ್ನು ಆಯ್ದುಕೊಳ್ಳಿ. ಅವುಗಳಲ್ಲಿ ಹಾರ್ಡ್‌, ಮೀಡಿಯಂ, ಸಾಫ್ಟ್‌, ಅಲ್ಟ್ರಾ ಸಾಫ್ಟ್‌ ಎಂಬ ನಾಲ್ಕು ವಿಧಗಳಿವೆ.
ಸಾಫ್ಟ್‌ ಮತ್ತು ಅಲ್ಟ್ರಾ ಸಾಫ್ಟ್‌ ಬ್ರಷ್‌ಗಳು ಹಲ್ಲುಗಳು ಸುಂದರವಾಗಿ ಒಂದೇ ಸಾಲಿನಲ್ಲಿದ್ದು, ಹುಳುಕು-ಕಲೆಗಳು ಇಲ್ಲದವರಿಗೆ ಸೂಕ್ತವಾದದ್ದು. ಆದರೆ ಹಲ್ಲುಗಳು ಸಾಲಿನಲ್ಲಿದ್ದೆ ಸೊಟ್ಟವಾಗಿದ್ದರೆ, ಮೀಡಿಯಂ ಬೇಕಾಗಬಹುದು. ತೀರಾ ಅಡ್ಡಾದಿಡ್ಡಿಯಾಗಿದ್ದು, ಕಲೆಗಳೂ ಇದ್ದರೆ ಒರಟಾದವು ಅಗತ್ಯವಾಗಬಹುದು. ಆದರೆ ಯಾವುದನ್ನೇ ತೆಗೆದುಕೊಂಡರೂ, ಅದು ಬಾಯಿಯ ಎಲ್ಲಾ ದಿಕ್ಕಿಗೂ ಸುಲಭಕ್ಕೆ ಹೋಗಿ ಸ್ವಚ್ಛ ಮಾಡುವಂತಿರಬೇಕು.

ಯಾವಾಗ ಬದಲಿಸಬೇಕು?

ಪ್ರತಿ 3-4 ತಿಂಗಳಿಗೆ ಬ್ರಷ್‌ ಬದಲಿಸಬೇಕು ಎಂಬುದು ದಂತಾರೋಗ್ಯ ತಜ್ಞರ ಅಭಿಮತ. ಕೆಲವೊಮ್ಮೆ ಅದಕ್ಕೂ ಮುನ್ನವೇ ಬದಲಿಸುವುದು ಬೇಕಾಗಲೂಬಹುದು. ಬ್ರಷ್‌ ತುದಿಯ ಕೂದಲು ಆಕಾರಗೆಟ್ಟಿದ್ದರೆ, ಸೊಟ್ಟಗಾಗಿ ತನ್ನ ಕೆಲಸ ಮಾಡಲು ಅಸಮರ್ಥವಾಗಿದ್ದರೆ ಅದನ್ನು ಬದಲಾಯಿಸಬೇಕು. ಅದಿಲ್ಲದಿದ್ದರೆ, ಹಲ್ಲಿನ ಎನಾಮಲ್‌ ಕವಚಕ್ಕೆ ಹಾನಿಯಾಗಬಹುದು; ಒಸಡುಗಳು ಗಾಯವಾಗಿ ರಕ್ತ ಸೋರಬಹುದು; ಸೂಕ್ಷ್ಮ ಸಂವೇದನೆಗಳು ಹೆಚ್ಚಬಹುದು.
ಯಾವುದಾದರೂ ಸೋಂಕು ತಗುಲಿದ್ದರೆ ಬ್ರಷ್‌ ಬದಲಾವಣೆ ಅಗತ್ಯ. ಅಂದರೆ ಜ್ವರ, ಗಂಟಲುನೋವು, ಕೆಮ್ಮು, ಶ್ವಾಸಕೋಶದ ಸೋಂಕುಗಳು- ಇಂಥವು ಬಂದರೆ, ಸೋಂಕು ಗುಣವಾದ ಬಳಿಕ ಬ್ರಷ್‌ ಬದಲಿಸಿ. ಇದು ಬಾಯಿಯ ಆರೋಗ್ಯದ ದೃಷ್ಟಿಯಿಂದ ಅಗತ್ಯವಾದದ್ದು. ಒಂದೊಮ್ಮೆ ಸೋಂಕಿತರ ಆರೈಕೆಯನ್ನು ಯಾರಾದರೂ ಮಾಡುತ್ತಿದ್ದರೆ, ಅವರೂ ಬ್ರಷ್‌ ಬದಲಿಸುವುದು ಒಳ್ಳೆಯದು.

ಇದನ್ನೂ ಓದಿ: Saffron For Baby: ಗರ್ಭಿಣಿ ಕೇಸರಿ ಹಾಲು ಕುಡಿಯುವುದರಿಂದ ಮಗು ಬೆಳ್ಳಗಾಗುತ್ತದೆಯೇ?

ತಂತ್ರಗಳು

ಬ್ರಷ್‌ ಮಾಡುವ ತಂತ್ರಗಳನ್ನು ಸರಿಯಾಗಿ ರೂಢಿಸಿಕೊಳ್ಳಿ. ಅದಿಲ್ಲದಿದ್ದರೆ ಹಲ್ಲುಗಳ ಮೇಲೆ ಪ್ಲೇಕ್‌ನಂತೆ ಕೂರುವುದು, ಬಣ್ಣಗೆಡುವುದು, ಹುಳುಕಾಗುವುದು ಹೆಚ್ಚುತ್ತದೆ. ಒರಟಾಗಿ ಉಜ್ಜಿದರೆ ಎನಾಮಲ್‌ ಹಾಳಾಗಿಬಿಡುತ್ತದೆ. ಹಾಗಾಗಿ ಬಾಯಿಯ ಆರೋಗ್ಯ ರಕ್ಷಣೆಯಲ್ಲಿ ಈ ಎಲ್ಲ ಅಂಶಗಳೂ ಮುಖ್ಯವಾಗಿವೆ.
ಬ್ರಷ್‌ಗಳನ್ನು ಹೇಗೆ, ಎಲ್ಲಿ ಇರಿಸಿಕೊಳ್ಳುತ್ತೀರಿ ಎಂಬುದನ್ನು ಎಂದಾದರೂ ಗಮನಿಸಿದ್ದೀರಾ? ಒಂದೇ ಕಡೆ ಹತ್ತಾರು ಬ್ರಷ್‌ಗಳನ್ನು ತುರುಕಿದಂತೆ ಇರಿಸಿಕೊಳ್ಳುವವರು ನೀವಾಗಿದ್ದರೆ, ಈ ಮೂಲಕವೂ ಸೋಂಕುಗಳು ಬರಬಹುದು ಎನ್ನುವುದು ತಿಳಿದಿರಲಿ. ಹಾಗಾಗಿ ಬ್ರಷ್‌ ಮೂಲಕ ಬ್ಯಾಕ್ಟೀರಿಯ ಬರಬಾರದೆಂದರೆ, ಅದಕ್ಕೊಂದು ಸರಿಯಾದ ಕೇಸ್‌ ಹಾಕಿ ಇರಿಸಿಕೊಳ್ಳಿ.

Continue Reading
Advertisement
Davanagere news
ಮಳೆ4 mins ago

Davanagere News : ಆ ಗ್ರಾಮಕ್ಕೆ ಕಾಲಿಡದ ವರುಣ! ಮಳೆಗಾಗಿ ಗ್ರಾಮಸ್ಥರಿಂದ ಕಂತೆ ಭಿಕ್ಷೆ

Viral News
ದೇಶ21 mins ago

Viral News: ಶಾಕಿಂಗ್‌ ಘಟನೆ! ಬುದ್ದಿ ಹೇಳಿದ ಗುರುವನ್ನೇ ಚುಚ್ಚಿ ಕೊಂದ ವಿದ್ಯಾರ್ಥಿ

ಪ್ರಮುಖ ಸುದ್ದಿ29 mins ago

Ravi Bishnoi : ಭಾರತ ಪರ ಸ್ಪಿನ್​ ಬೌಲಿಂಗ್​​ನಲ್ಲಿ ವಿಶೇಷ ಸಾಧನೆ ಮಾಡಿದ ರವಿ ಬಿಷ್ಣೋಯ್​​

Shashi Tharoor
ಕ್ರೀಡೆ34 mins ago

Shashi Tharoor: ಜಿಂಬಾಬ್ವೆ ಎದುರು ಭಾರತಕ್ಕೆ ಸೋಲು: ಲೇವಡಿ ಮಾಡಿದ ಶಶಿ ತರೂರ್

Karnataka Rain
ಮಳೆ39 mins ago

Karnataka Rain : ವೀಕೆಂಡ್‌ನಲ್ಲಿ ಸಿಲಿಕಾನ್‌ ಸಿಟಿಯಲ್ಲಿ ಮಳೆ ಮೋಡಿ; ಮತ್ತೆ ಗುಡ್ಡ ಕುಸಿತ ಶುರು

Money Guide
ಮನಿ-ಗೈಡ್40 mins ago

Money Guide: ನಿಮ್ಮ ಎಲ್‌ಐಸಿ ಪಾಲಿಸಿ ಲ್ಯಾಪ್ಸ್‌ ಆಗಿದೆಯಾ? ನವೀಕರಿಸಲು ಹೀಗೆ ಮಾಡಿ

Mumbai Hit And Run
ದೇಶ40 mins ago

Mumbai Hit And Run: ಮುಂಬೈನಲ್ಲಿ ಹಿಟ್‌ ಆ್ಯಂಡ್‌ ರನ್‌ಗೆ ಮಹಿಳೆ ಬಲಿ; ಶಿವಸೇನೆ ನಾಯಕನ ಬಂಧನ!

Tharun Sudhir Bigg update marriage
ಸ್ಯಾಂಡಲ್ ವುಡ್50 mins ago

Tharun Sudhir: ಮದುವೆ ಬಗ್ಗೆ ಬಿಗ್‌ ಅಪ್‌ಡೇಟ್‌ ಕೊಟ್ಟ ತರುಣ್ ಸುಧೀರ್; ಹುಡುಗಿ ಹೇಗಿರಬೇಕು ಅಂದ್ರೆ….

Dengue Cases in Mysore
ಕರ್ನಾಟಕ52 mins ago

Dengue Cases in Mysore: ಮೈಸೂರಿನಲ್ಲಿ ಡೆಂಗ್ಯೂಗೆ ಜಯದೇವ ಆಸ್ಪತ್ರೆಯ ಡಾಟಾ ಎಂಟ್ರಿ ಆಪರೇಟರ್ ಸಾವು

ishan Kishan
ಪ್ರಮುಖ ಸುದ್ದಿ58 mins ago

Ishan Kishan : ನನ್ನನ್ನು ಹೊರಗಿಟ್ಟಿರುವ ತೀರ್ಮಾನ ಮೂರ್ಖತನದ್ದು; ಜಯ್​ ಶಾಗೆ ಟಾಂಗ್​ ಕೊಟ್ಟ ಇಶಾನ್​ ಕಿಶನ್​

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Davanagere news
ಮಳೆ4 mins ago

Davanagere News : ಆ ಗ್ರಾಮಕ್ಕೆ ಕಾಲಿಡದ ವರುಣ! ಮಳೆಗಾಗಿ ಗ್ರಾಮಸ್ಥರಿಂದ ಕಂತೆ ಭಿಕ್ಷೆ

Karnataka Rain
ಮಳೆ39 mins ago

Karnataka Rain : ವೀಕೆಂಡ್‌ನಲ್ಲಿ ಸಿಲಿಕಾನ್‌ ಸಿಟಿಯಲ್ಲಿ ಮಳೆ ಮೋಡಿ; ಮತ್ತೆ ಗುಡ್ಡ ಕುಸಿತ ಶುರು

karnataka weather Forecast
ಮಳೆ11 hours ago

Karnataka Weather : ವೇಗವಾಗಿ ಬೀಸುವ ಗಾಳಿ ಜತೆಗೆ ಅಬ್ಬರಿಸಲಿದೆ ಮಳೆ; ಈ ಜಿಲ್ಲೆಗಳಿಗೆ ಎಚ್ಚರಿಕೆ

karnataka weather Forecast
ಮಳೆ23 hours ago

Karnataka Weather : ಚಾರಣಪ್ರಿಯರಿಗೆ ಶಾಕ್‌; ಭಾರಿ ಮಳೆಯಿಂದಾಗಿ ಈ ಜಾಗಗಳಿಗೆ ಟ್ರೆಕ್ಕಿಂಗ್‌ ನಿಷೇಧ

Murder case
ಯಾದಗಿರಿ1 day ago

Murder case : ಯಾದಗಿರಿಯಲ್ಲಿ ಹಸುಗೂಸನ್ನು ಬಾವಿಗೆ ಎಸೆದು ಕೊಂದರು ಹಂತಕರು

karnataka Rain
ಮಳೆ1 day ago

Karnataka Rain : ಭಾರಿ ಗಾಳಿ- ಮಳೆಗೆ ಹಾರಿದ ಅಂಗಡಿಯ ತಗಡು; ಮಾಗುಂಡಿ-ಬಾಳೆಹೊನ್ನೂರು ಮಾರ್ಗ ಬಂದ್

Food Poisoning
ರಾಯಚೂರು1 day ago

Food Poisoning : ಮೊರಾರ್ಜಿ ವಸತಿ ಶಾಲೆ ಅವ್ಯವಸ್ಥೆ; ಊಟ ಸೇವಿಸಿದ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

Wild Animal Attack Elephant attack
ರಾಮನಗರ1 day ago

Wild Animal Attack : ತೋಟದಲ್ಲಿ ನೀರು ಹಾಯಿಸುತ್ತಿದ್ದವನ ತುಳಿದು ಸಾಯಿಸಿದ ಆನೆ

karnataka Weather Forecast
ಮಳೆ1 day ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಇಂದು ನಾನ್‌ ಸ್ಟಾಪ್‌ ಮಳೆ; ಬೆಂಗಳೂರಲ್ಲಿ ಹೇಗೆ?

karnataka Weather Forecast
ಮಳೆ2 days ago

Karnataka Weather: ಧಾರಾಕಾರ ಮಳೆಗೆ ಜನರ ಒದ್ದಾಟ- ಸೇತುವೆಗಳು ಮುಳುಗಿ ಪರದಾಟ; ಶಾಲಾ-ಕಾಲೇಜುಗಳಿಗೆ ರಜೆ

ಟ್ರೆಂಡಿಂಗ್‌