Vastu Tips: ಮನೆಯ ವಾಸ್ತು ದೋಷಗಳನ್ನು ಹೀಗೆ ಹೋಗಲಾಡಿಸಿ - Vistara News

ಲೈಫ್‌ಸ್ಟೈಲ್

Vastu Tips: ಮನೆಯ ವಾಸ್ತು ದೋಷಗಳನ್ನು ಹೀಗೆ ಹೋಗಲಾಡಿಸಿ

Vastu Tips: ಕೆಲವೊಮ್ಮೆ ಮನೆಯಲ್ಲಿ ಆಗಾಗ ಕಂಡು ಬರುವ ಸಮಸ್ಯೆಗಳು ಮತ್ತು ಕುಟುಂಬ ಸದಸ್ಯರ ನಡುವೆ ವೈಮನಸ್ಸು ಮೂಡಲು ವಾಸ್ತು ದೋಷ ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ ವಾಸ್ತು ದೋಷ ನಿವಾರಣೆಗೆ ಸರಳ ಮಾರ್ಗಗಳ ಪರಿಚಯ ಇಲ್ಲಿದೆ.

VISTARANEWS.COM


on

home
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನಮ್ಮ ಬದುಕಿನ ಮೇಲೆ ವಾಸ್ತು ಬಹಳ ಗಾಢವಾದ ಪರಿಣಾಮ ಬೀರುತ್ತದೆ. ಅದರಲ್ಲೂ ಮನೆಯನ್ನು ವಾಸ್ತು ಪ್ರಕಾರ ನಿರ್ಮಿಸಿದರೆ ಕೆಲವೊಂದು ಸಮಸ್ಯೆಗಳಿಂದ ಮುಕ್ತರಾಗಿ, ನೆಮ್ಮದಿಯ ಜೀವನವನ್ನು ಕಂಡುಕೊಳ್ಳಬಹುದು. ಆದರೆ ಕೆಲವೊಮ್ಮೆ ನಮಗೆ ತಿಳಿದೋ ತಿಳಿಯದೆಯೋ ವಾಸ್ತು ಶಾಸ್ತ್ರದ ಕೆಲವೊಂದು ನಿಯಮವನ್ನು ಮುರಿದಿರುತ್ತೇವೆ. ಇದರ ಪರಿಣಾಮವಾಗಿ ಕೆಲವೊಂದು ಸಮಸ್ಯೆ ನಮ್ಮನ್ನು ಬಿಟ್ಟೂ ಬಿಡದೆ ಕಾಡುತ್ತದೆ. ಇಂದಿನ ವಾಸ್ತು ಟಿಪ್ಸ್‌(Vastu Tips)ನಲ್ಲಿ ಇಂತಹ ವಾಸ್ತು ದೋಷಗಳನ್ನು ಹೇಗೆ ನಿವಾರಿಸಿಕೊಳ್ಳಬಹುದು ಎನ್ನುವುದನ್ನು ನೋಡೋಣ.

ಉಪ್ಪನ್ನು ಹೀಗೆ ಬಳಸಿ

ವಾಸ್ತು ಶಾಸ್ತ್ರದಲ್ಲಿ ಸಮುದ್ರದ ಉಪ್ಪಿಗೆ ಪ್ರಮುಖ ಸ್ಥಾನವಿದೆ. ಹೀಗಾಗಿ ಇದನ್ನು ವಾಸ್ತು ದೋಷ ನಿವಾರಣೆಗೆ ಬಳಸಲಾಗುತ್ತದೆ. ಕಲ್ಲುಪ್ಪನ್ನು ಒಂದು ತಟ್ಟೆಯಲ್ಲಿ ಹಾಕಿ ಮನೆಯೊಳಗೆ ಇಟ್ಟು ಬಿಡಿ. ದಿನ ಬಿಟ್ಟು ದಿನ ಈ ಉಪ್ಪನ್ನು ಬದಲಾಯಿಸುವುದನ್ನು ಮರೆಯಬೇಡಿ. ಇದು ಮನೆಯಿಂದ ಎಲ್ಲ ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುತ್ತದೆ. ಇದರ ಜತೆಗೆ ನೀವು ನೆಲವನ್ನು ಸ್ವಚ್ಛಗೊಳಿಸಲು ಬಳಸುವ ನೀರಿನಲ್ಲಿ ಒಂದು ಚಿಟಿಕೆ ಸಮುದ್ರದ ಉಪ್ಪನ್ನು ಸಹ ಬೆರೆಸಬಹುದು.

ಕನ್ನಡಿ ಹೀಗಿರಲಿ

ಸರಿಯಾದ ಸ್ಥಳದಲ್ಲಿ ಕನ್ನಡಿಗಳನ್ನು ಇರಿಸುವುದರಿಂದಲೂ ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಬಹುದು. ಗಮನಿಸಿ ಕನ್ನಡಿಯನ್ನು ಎಂದಿಗೂ ಮುಖ್ಯ ಬಾಗಿಲಿನ ಎದುರು ಇಡಬೇಡಿ. ಮಾತ್ರವಲ್ಲ ಮಲಗುವ ಕೋಣೆಯಲ್ಲಿರುವ ಕನ್ನಡಿ ಹಾಸಿಗೆಯನ್ನು ಪ್ರತಿಬಿಂಬಿಸುವುದಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಅಲ್ಲದೆ ಕನ್ನಡಿಯನ್ನು ಉತ್ತರ ಅಥವಾ ಪೂರ್ವ ಗೋಡೆಗಳ ಮೇಲೆ ಅಳವಡಿಸಿ. ಎಲ್ಲ ಕನ್ನಡಿಗಳು ನೆಲದಿಂದ ಕನಿಷ್ಠ 4ರಿಂದ 5 ಅಡಿ ಎತ್ತರದಲ್ಲಿರುವುದು ಮುಖ್ಯ.

ಕರ್ಪೂರದಿಂದ ದೋಷ ನಿವಾರಣೆ

ದೇವರ ಪೂಜೆಗೆ ಬಳಸುವ ಕರ್ಪೂರವನ್ನು ಮನೆಯ ವಾಸ್ತು ದೋಷ ನಿವಾರಣೆಗೂ ಉಪಯೋಗಿಸಬಹುದು. ನೀವು ಅಂದುಕೊಂಡ ಕೆಲಸಗಳು ಸರಿಯಾಗಿ ನಡೆಯುತ್ತಿಲ್ಲ ಎಂದಾದರೆ ಅದು ಖಂಡಿತವಾಗಿಯೂ ವಾಸ್ತು ದೋಷದ ಪರಿಣಾಮವೇ. ಇದಕ್ಕಾಗಿ ನೀವು ಮನೆಯ ಒಳಗೆ ತೆರೆದ ಸ್ಥಳದಲ್ಲಿ ಎರಡು ಕರ್ಪೂರದ ಹರಳುಗಳನ್ನು ಇರಿಸಿ ಮತ್ತು ಅವು ಕುಗ್ಗಿದಾಗ ಬದಲಿಸಿ.

ಪಿರಮಿಡ್‌ ತಂತ್ರ

ವಾಸ್ತು ದೋಷ ಪರಿಹಾರವಾಗಿ ಪಿರಮಿಡ್ ಯಂತ್ರದ ಬಳಕೆ ಇತ್ತೀಚಿನ ದಿನಗಳಲ್ಲಿ ಜನಪ್ರಿಯವಾಗುತ್ತಿದೆ. ಕಲ್ಲು, ಲೋಹ, ಗಾಜು ಅಥವಾ ಕಾರ್ಡ್ ಬೋರ್ಡ್ ಬಳಸಿ ತಯಾರಿಸಲಾಗುವ ಸಣ್ಣ ಪಿರಮಿಡ್ ಆಕಾರವನ್ನು ಮನೆಯಲ್ಲಿ ಇರಿಸಬಹುದು. ನಕಾರಾತ್ಮಕ ಶಕ್ತಿಯಿಂದ ಮುಕ್ತಿ ಪಡೆಯಲು ಈ ಪಿರಮಿಡ್ ಯಂತ್ರವನ್ನು ಮನೆಯ ಪ್ರವೇಶದ್ವಾರದಲ್ಲಿ ಇರಿಸಬೇಕು.

ವಿಂಡ್ ಚೈಮ್ಸ್ ಅಲಂಕಾರಕ್ಕಾಗಿ ಮಾತ್ರವಲ್ಲ…

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮನೆಗಳಲ್ಲಿ ವಿಂಡ್ ಚೈಮ್‌ಗಳನ್ನು ಅಲಂಕಾರಕ್ಕಾಗಿ ಬಳಸಲಾಗುತ್ತದೆ. ಇದನ್ನು ಮನೆಯ ಸೌಂದರ್ಯ ಹೆಚ್ಚಿಸಲು ಬಳಸುವ ಜತೆಗೆ ವಾಸ್ತು ದೋಷದಿಂದ ಮುಕ್ತರಾಗಲೂ ಉಪಯೋಗಿಸಬಹುದಾಗಿದೆ. ನೀವು 6 ಅಥವಾ 8 ಟೊಳ್ಳಾದ ರಾಡ್‌ಗಳನ್ನು ಹೊಂದಿರುವ ವಿಂಡ್ ಚೈಮ್‌ಗಳನ್ನು ತೂಗು ಹಾಕಿದರೆ ಮನೆಯೊಳಗೆ ಧನಾತ್ಮಕ ಶಕ್ತ ಹೆಚ್ಚುತ್ತದೆ.

ಹಾರ್ಸ್‌ ಶೂ ಪ್ರಯೋಜನ ಗೊತ್ತೆ?

ವಾಸ್ತು ಶಾಸ್ತ್ರದ ಪ್ರಕಾರ ಹಾರ್ಸ್‌ ಶೂ ಅನ್ನು ಮನೆಯೊಳಗೆ ಅದೃಷ್ಟವನ್ನು ತರಬಲ್ಲ ಅತ್ಯಂತ ಪ್ರಮುಖ ವಸ್ತು ಎಂದು ಪರಿಗಣಿಸಲಾಗುತ್ತದೆ. ಇದು ಅದೃಷ್ಟ ಮತ್ತು ಸಂಪತ್ತನ್ನು ಆಕರ್ಷಿಸುತ್ತದೆ. ನೀವು ಅದರ ತುದಿಗಳನ್ನು ಮೇಲ್ಮುವಾಗಿ ನಿಲ್ಲುವಂತೆ ತೂಗು ಹಾಕಬೇಕು. ಇದರಿಂದ ಹಾದುಹೋಗುವ ಎಲ್ಲ ಉತ್ತಮ ಶಕ್ತಿಗಳನ್ನು ಆಕರ್ಷಿಸಬಹುದಾಗಿದೆ. ಮುಖ್ಯ ದ್ವಾರವು ಇದಕ್ಕೆ ಸೂಕ್ತವಾದ ಸ್ಥಳ. ಹಾರ್ಸ್‌ ಶೂ ಅನ್ನು ತಲೆಕೆಳಗಾಗಿ ನೇತು ಹಾಕಿದರೆ ಅದು ಮನೆಯಿಂದ ಅದೃಷ್ಟವನ್ನು ಹೊರಹಾಕುತ್ತದೆ ಎಂದು ತಜ್ಞರು ಎಚ್ಚರಿಸುತ್ತಾರೆ.

ಮನೆಯ ಬಣ್ಣ ಗಮನಿಸಿ

ಗೋಡೆಯ ಬಣ್ಣ ಯಾವಾಗಲೂ ಮನೆಯ ಮೇಲೆ, ಸದಸ್ಯರ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲೂ ಕೆಲವು ಬಣ್ಣಗಳು ಸಕಾರಾತ್ಮಕ ಶಕ್ತಿಯನ್ನು ಆಹ್ವಾನಿಸುತ್ತವೆ. ಗುಲಾಬಿ, ನೀಲಿ ಮತ್ತು ಹಸುರು ಬಣ್ಣಗಳು ಲಿವಿಂಗ್ ಮತ್ತು ಮಾಸ್ಟರ್ ಬೆಡ್ ರೂಮ್‌ಗೆ ಸೂಕ್ತವಾಗಿದ್ದರೆ, ಹಳದಿ ಮತ್ತು ಕಿತ್ತಳೆ ಬಣ್ಣಗಳು ಮಕ್ಕಳ ಕೋಣೆಗಳಿಗೆ ಉತ್ತಮ ಆಯ್ಕೆ. ಹೀಗಾಗಿ ಮನೆಗೆ ಪೇಂಟ್ ಬಳಿಯುವ ಮುನ್ನ ಈ ಅಂಶಗಳತ್ತ ಗಮನ ಹರಿಸಿ.

ಕುಟುಂಬಸ್ಥರ ಫೋಟೊದ ಸ್ಥಾನ ಎಲ್ಲಿ?

ವಾಸ್ತು ಶಾಸ್ತ್ರದ ಪ್ರಕಾರ ಲಿವಿಂಗ್ ರೂಮ್‌ನಲ್ಲಿ ನಿಮ್ಮ ಕುಟುಂಬಸ್ಥರ ಫೋಟೋಗಳನ್ನು ಅಳವಡಿಸುವುದು ಬಹಳ ಮುಖ್ಯ. ನಿಮ್ಮ ನೆಚ್ಚಿನ ಕುಟುಂಬ ಫೋಟೊ, ಕೆಲವು ಟ್ರೆಂಡಿ ಫ್ರೇಮ್‌ಗಳೊಂದಿಗೆ ಲಿವಿಂಗ್‌ ರೂಮ್‌ ಅನ್ನು ಅಲಂಕರಿಸಿ.

ಅಕ್ವೇರಿಯಮ್‌ ಎಲ್ಲಿರಬೇಕು?

ವಾಸ್ತು ಪ್ರಕಾರ ಮೀನು ಮತ್ತು ಅಕ್ವೇರಿಯಂಗಳು ಸಕಾರಾತ್ಮಕ ಶಕ್ತಿಯನ್ನು ಸೆಳೆಯುತ್ತವೆ. ಹೀಗಾಗಿ ವಾಸ್ತು ದೋಷದ ಲಕ್ಷಣ ಕಂಡು ಬಂದರೆ ಮನೆಗೆ ಅಕ್ವೇರಿಯಂ ತನ್ನಿ. ಇದನ್ನು ನಿಮ್ಮ ಲಿವಿಂಗ್ ರೂಮ್‌ನ ಈಶಾನ್ಯ ಭಾಗದಲ್ಲಿ ಇರಿಸಲು ಮರೆಯದಿರಿ.

ಇದನ್ನೂ ಓದಿ: Vastu Tips: ಮನೆಯ ಪ್ರವೇಶದ್ವಾರದ ವಿಚಾರದಲ್ಲಿ ಈ ತಪ್ಪುಗಳನ್ನು ಮಾಡಬೇಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Covishield: ಭಾರತದಲ್ಲೂ ಎಲ್ಲಾ ಕೋವಿಡ್ ಲಸಿಕೆಗಳ ಸೈಡ್‌ ಎಫೆಕ್ಟ್‌ ಪರಿಶೀಲಿಸಿ: ವೈದ್ಯರ ಒತ್ತಾಯ

Covishield: ಬ್ರಿಟನ್‌ ಅಸ್ಟ್ರಾಜೆನೆಕಾ ತನ್ನ ಕೋವಿಶೀಲ್ಡ್‌ ಲಸಿಕೆಯನ್ನು ಜಾಗತಿಕವಾಗಿ ಹಿಂತೆಗೆದುಕೊಳ್ಳಲು ಪ್ರಾರಂಭಿಸಿದೆ. ಇದನ್ನು ಭಾರತದಲ್ಲಿ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಹಭಾಗಿತ್ವದಲ್ಲಿ ʼಕೋವಿಶೀಲ್ಡ್’ ಎಂದು ಒದಗಿಸಲಾಗಿದೆ. ಇದು ರಕ್ತ ಹೆಪ್ಪುಗಟ್ಟುವಿಕೆ ಮತ್ತು ಪ್ಲೇಟ್‌ಲೆಟ್‌ಗಳನ್ನು ಕಡಿಮೆ ಮಾಡುವ ಅಪರೂಪದ ಅಡ್ಡಪರಿಣಾಮಗಳನ್ನು ಉಂಟುಮಾಡುತ್ತದೆ ಎಂದು ಕಂಪನಿ ಒಪ್ಪಿಕೊಂಡಿದೆ.

VISTARANEWS.COM


on

Covishield Vaccine
Koo

ಹೊಸದಿಲ್ಲಿ: ಔಷಧೀಯ ದಿಗ್ಗಜ ಆಸ್ಟ್ರಾಜೆನೆಕಾ (AstraZeneca) ತನ್ನ ಕೋವಿಡ್ ಲಸಿಕೆ (Covid Vaccine) ಅಪರೂಪದ ಸಂದರ್ಭಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಗೆ (Blood clotting) ಕಾರಣವಾಗಬಹುದು ಎಂದು ಯುಕೆ ನ್ಯಾಯಾಲಯದಲ್ಲಿ ಒಪ್ಪಿಕೊಂಡ ಹಿನ್ನೆಲೆಯಲ್ಲಿ, ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿದ ಕೋವಿಶೀಲ್ಡ್ ಲಸಿಕೆಯ (Covishield Vaccine) ಸುರಕ್ಷತೆಯ ಬಗ್ಗೆಯೂ ಭಾರತೀಯ ವೈದ್ಯರ ಗುಂಪು ತೀವ್ರ ಕಳವಳ ವ್ಯಕ್ತಪಡಿಸಿದೆ.

ʼಅವೇಕನ್ ಇಂಡಿಯಾ ಮೂವ್‌ಮೆಂಟ್ʼ (ಎಐಎಂ) ಬ್ಯಾನರ್‌ನಡಿಯಲ್ಲಿ ಒಗ್ಗೂಡಿರುವ ವೈದ್ಯರು, ಎಲ್ಲಾ ಕೋವಿಡ್ ಲಸಿಕೆಗಳ ಹಿಂದಿನ ವೈಜ್ಞಾನಿಕತೆಯನ್ನು ಪರಿಶೀಲಿಸಲು, ಅವುಗಳ ವಾಣಿಜ್ಯೀಕರಣದ ಪ್ರಮಾಣವನ್ನು ಲೆಕ್ಕ ಹಾಕಲು, ಜೊತೆಗೆ ಲಸಿಕೆಯ ಅಡ್ಡ ಪರಿಣಾಮಗಳ (side effects) ಮೇಲೆ ನಿಗಾ ಇಡಲು ಸಕ್ರಿಯ ಕಣ್ಗಾವಲು ಮತ್ತು ಮೇಲ್ವಿಚಾರಣೆ ಕಾರ್ಯವಿಧಾನ ರೂಢಿಸಿಕೊಳ್ಳಲು ಸರ್ಕಾರವನ್ನು ಒತ್ತಾಯಿಸಿದ್ದಾರೆ.

“ಸರ್ಕಾರವು ಕೋವಿಡ್ ಲಸಿಕೆ ನೀಡುವಿಕೆಯ ನಂತರದ ದುರಂತ ಸಾವಿನ ಪ್ರಕರಣಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ವೈಜ್ಞಾನಿಕ ತನಿಖೆ ಮತ್ತು ಸಾಂಕ್ರಾಮಿಕ ರೋಗಶಾಸ್ತ್ರದ ಮೂಲ ಪರಿಶೀಲಿಸದೆ ಕೋವಿಡ್ ಲಸಿಕೆಗಳನ್ನು ʼಸುರಕ್ಷಿತ ಮತ್ತು ಪರಿಣಾಮಕಾರಿʼ ಎಂದು ಪ್ರಚಾರ ಮಾಡುವುದನ್ನು ಮುಂದುವರೆಸಿದೆ” ಎಂದು ವಿಕಿರಣಶಾಸ್ತ್ರಜ್ಞ ಮತ್ತು ತರುಣ್ ಕೊಠಾರಿ ಹೇಳಿದ್ದಾರೆ.

ಥ್ರಂಬೋಸಿಸ್ ವಿತ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ (ಟಿಟಿಎಸ್) ಎಂಬ ಕೋವಿಡ್ ಲಸಿಕೆಯ ಅಡ್ಡ ಪರಿಣಾಮದ ಬಗ್ಗೆ ಈಗ ಜಗತ್ತು ತಿಳಿಯುತ್ತಿದೆ. ಕೋವಿಡ್-19 ಲಸಿಕೆಗಳನ್ನು ನೀಡುತ್ತಿರುವಾಗ, ಹಂತ-3 ಪ್ರಯೋಗಗಳನ್ನು ಪೂರ್ಣಗೊಳಿಸದೆಯೇ ಇದನ್ನು ಮಾಡಲಾಗುತ್ತಿದೆ ಎಂದು ಅನೇಕ ಜನರಿಗೆ ತಿಳಿದಿರಲಿಲ್ಲ. ಕೋವಿಡ್-19 ಲಸಿಕೆಗಳ ತಯಾರಕರು ಅಲ್ಪಾವಧಿಯ ಅಥವಾ ದೀರ್ಘಾವಧಿಯ ಅಡ್ಡಪರಿಣಾಮಗಳು ಅಥವಾ ಸಾವುಗಳ ಬಗ್ಗೆ ಸಂಪೂರ್ಣ ಮಾಹಿತಿ ಮತ್ತು ಡೇಟಾವನ್ನು ಹೊಂದಿರದೆ ಲಸಿಕೆ ನೀಡಲು ಪ್ರಾರಂಭಿಸಿದ್ದರು ಎಂದು ಸ್ತ್ರೀರೋಗತಜ್ಞ ಮತ್ತು ಆಂಕೊಲಾಜಿಸ್ಟ್ ಡಾ ಸುಜಾತಾ ಮಿತ್ತಲ್ ಹೇಳಿದ್ದಾರೆ.

ಲಸಿಕೆ ಬಳಿಕ ಸಾವಿರಾರು ಮಹಿಳೆಯರು ತಮ್ಮ ಋತುಚಕ್ರದಲ್ಲಿ ಅಸಹಜತೆಗಳನ್ನು ವರದಿ ಮಾಡಿದ್ದಾರೆ. ಇದು ಸೆಪ್ಟೆಂಬರ್ 2022ರಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಕಂಡುಬಂದಿದೆ ಎಂದು ಅವರು ಹೇಳಿದರು.

“ಅವೇಕನ್ ಇಂಡಿಯಾ ಮೂವ್‌ಮೆಂಟ್ (ಎಐಎಂ) ಭಾರತದಲ್ಲಿ ಕೋವಿಡ್ ಲಸಿಕೆ ಸಾವಿನ ವಿವರಗಳನ್ನು ಸಂಗ್ರಹಿಸುತ್ತಿದೆ. ಲಸಿಕೆ ಪ್ರಾರಂಭವಾದ 2021ರಿಂದ ದೇಶದ ವಿವಿಧ ಉನ್ನತ ಅಧಿಕಾರಿಗಳಿಂದ ಈ ಮಾಹಿತಿಯನ್ನು ಪಡೆಯುತ್ತಿದೆ. ಸರ್ಕಾರ ನಮಗೆ ಪ್ರತಿಕ್ರಿಯಿಸಲು ವಿಫಲವಾಗಿದೆ” ಎಂದು ಡಾ. ಕೊಥಾರಿ ಹೇಳಿದರು.

ಲಸಿಕೆ ತಯಾರಕ ಕಂಪನಿಗಳನ್ನೂ ಹೊಣೆಯಾಗಿಸಿಕೊಂಡು, ಕೋವಿಡ್ ಲಸಿಕೆಗಳ ಬಲಿಪಶುಗಳ ಕುಟುಂಬ ಸದಸ್ಯರಿಗೆ ಪರಿಹಾರವನ್ನು ನೀಡುವಂತೆ AIM ಭಾರತ ಸರ್ಕಾರವನ್ನು ಒತ್ತಾಯಿಸಿದೆ. “ಲಸಿಕೆಯಿಂದ ಅಸ್ವಸ್ಥಗೊಂಡವರು ಮತ್ತು ಅವರ ಕುಟುಂಬಗಳಿಗೆ ತ್ವರಿತ ನ್ಯಾಯ ಒದಗಿಸಲು ತ್ವರಿತ ನ್ಯಾಯಾಲಯಗಳು ಮತ್ತು ಲಸಿಕೆ ನ್ಯಾಯಾಲಯಗಳನ್ನು ಸ್ಥಾಪಿಸಲು ನಾವು ಒತ್ತಾಯಿಸುತ್ತೇವೆ” ಎಂದು ಡಾ. ಮಿತ್ತಲ್ ಹೇಳಿದರು.

ಲಸಿಕೆ ಅಡ್ಡ ಪರಿಣಾಮ ಘಟನೆಗಳನ್ನು ಸಾಧ್ಯವಾದಷ್ಟು ಬೇಗ ಗುರುತಿಸಲು ಸಕ್ರಿಯ ಕಣ್ಗಾವಲು ಮತ್ತು ಮೇಲ್ವಿಚಾರಣಾ ಕಾರ್ಯವಿಧಾನಗಳನ್ನು ಅಳವಡಿಸಬೇಕು. ಆರಂಭಿಕ ಚಿಕಿತ್ಸಾ ಪ್ರೋಟೋಕಾಲ್‌ಗಳನ್ನು ರೂಪಿಸಬೇಕು ಮತ್ತು ವ್ಯಾಪಕವಾಗಿ ಪ್ರಚಾರ ಮಾಡಬೇಕು. ಇದರಿಂದ ಜೀವಗಳನ್ನು ಉಳಿಸಬಹುದು ಎಂದು ಅವರು ಹೇಳಿದರು.

ಬ್ರಿಟನ್‌ ಅಸ್ಟ್ರಾಜೆನೆಕಾ ತನ್ನ ಕೋವಿಶೀಲ್ಡ್‌ ಲಸಿಕೆಯನ್ನು ಜಾಗತಿಕವಾಗಿ ಹಿಂತೆಗೆದುಕೊಳ್ಳಲು ಪ್ರಾರಂಭಿಸಿದೆ. ಇದನ್ನು ಭಾರತದಲ್ಲಿ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಹಭಾಗಿತ್ವದಲ್ಲಿ ʼಕೋವಿಶೀಲ್ಡ್’ ಎಂದು ಒದಗಿಸಲಾಗಿದೆ. ಇದು ರಕ್ತ ಹೆಪ್ಪುಗಟ್ಟುವಿಕೆ ಮತ್ತು ಪ್ಲೇಟ್‌ಲೆಟ್‌ಗಳನ್ನು ಕಡಿಮೆ ಮಾಡುವ ಅಪರೂಪದ ಅಡ್ಡಪರಿಣಾಮಗಳನ್ನು ಉಂಟುಮಾಡುತ್ತದೆ ಎಂದು ಕಂಪನಿ ಒಪ್ಪಿಕೊಂಡಿದೆ.

ಭಾರತದಲ್ಲಿ, ಕಂಪನಿಯ ಪಾಲುದಾರ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಡಿಸೆಂಬರ್ 2021ರಿಂದ ಕೋವಿಶೀಲ್ಡ್‌ನ ಹೆಚ್ಚುವರಿ ಡೋಸ್‌ಗಳ ತಯಾರಿಕೆ ಮತ್ತು ಪೂರೈಕೆಯನ್ನು ನಿಲ್ಲಿಸಿದೆ ಎಂದು ಹೇಳಿದೆ. ಆದರೆ 2021ರಲ್ಲಿಯೇ ಲಸಿಕೆಯ ಪ್ಯಾಕೇಜಿಂಗ್ ಇನ್ಸರ್ಟ್‌ನಲ್ಲಿ TTS ಸೇರಿದಂತೆ ಎಲ್ಲಾ ಅಪರೂಪದ ಮತ್ತು ಅತ್ಯಂತ ಅಪರೂಪದ ಅಡ್ಡಪರಿಣಾಮಗಳನ್ನು ತಿಳಿಸಲಾಗಿದೆ ಎಂದು ಪುನರುಚ್ಚರಿಸಿದೆ. ಕೋವಿಶೀಲ್ಡ್‌ ಲಸಿಕೆಯನ್ನು ಅಸ್ಟ್ರಾಜೆನೆಕಾ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದೊಂದಿಗೆ ಸೇರಿ ಅಭಿವೃದ್ಧಿಪಡಿಸಿದೆ. ಇದನ್ನು ಯುರೋಪ್‌ನಲ್ಲಿ ವ್ಯಾಕ್ಸ್‌ಜೆವ್ರಿಯಾ ಎಂದು ಮಾರಾಟ ಮಾಡಲಾಯಿತು.

ಇದನ್ನೂ ಓದಿ: Covishield: ಭಾರತದಲ್ಲಿ ಕೋವಿಶೀಲ್ಡ್‌ ಸೈಡ್‌ ಎಫೆಕ್ಟ್‌ನ ಎಲ್ಲ ಮಾಹಿತಿ ಬಹಿರಂಗ ಎಂದ ಕಂಪನಿ, ಉತ್ಪಾದನೆಯೂ ಸ್ಥಗಿತ!

Continue Reading

ಆರೋಗ್ಯ

ICMR Dietary Guidelines: ಬೊಜ್ಜು ತಡೆಯಲು ಏನು ಮಾಡಬೇಕು? ಮಾರ್ಗಸೂಚಿ ಬಿಡುಗಡೆ ಮಾಡಿದ ಸಂಶೋಧನಾ ಸಂಸ್ಥೆ

ಭಾರತದಲ್ಲಿ ಪೌಷ್ಟಿಕಾಂಶದ ಕೊರತೆ ಮತ್ತು ಸ್ಥೂಲಕಾಯತೆ, ಮಧುಮೇಹ ಮತ್ತು ಹೃದಯರಕ್ತನಾಳದ ಕಾಯಿಲೆಗಳಂತಹ ಇತರ ಸಾಂಕ್ರಾಮಿಕವಲ್ಲದ ಕಾಯಿಲೆಗಳನ್ನು ತಡೆಯಲು ಸಹಾಯ ಮಾಡುವ ಆಹಾರ ಕ್ರಮದ ಮಾರ್ಗಸೂಚಿಗಳನ್ನು (ICMR Dietary Guidelines) ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ (ICMR- NIN) ಬಿಡುಗಡೆ ಮಾಡಿದ್ದು, ಅವುಗಳು ಇಂತಿವೆ.

VISTARANEWS.COM


on

By

ICMR Dietary Guidelines
Koo

ದೇಶದ ಉನ್ನತ ಸಂಶೋಧನಾ ಸಂಸ್ಥೆಗಳಾಗಿರುವ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ (ICMR-NIN) ಪೌಷ್ಟಿಕಾಂಶದ ಕೊರತೆಯನ್ನು (nutrient deficiencies) ತಡೆಗಟ್ಟಲು 17 ಆಹಾರ ಮಾರ್ಗಸೂಚಿಗಳನ್ನು (ICMR Dietary Guidelines) ಬಿಡುಗಡೆ ಮಾಡಿದೆ. ಭಾರತದಲ್ಲಿ ಸ್ಥೂಲಕಾಯತೆ (obesity), ಮಧುಮೇಹ (diabetes) ಮತ್ತು ಹೃದಯರಕ್ತನಾಳದ ಕಾಯಿಲೆಗಳಂತಹ (cardiovascular diseases) ಸಾಂಕ್ರಾಮಿಕವಲ್ಲದ ರೋಗಗಳ (NCDs) ಹೆಚ್ಚುತ್ತಿರುವ ಅಪಾಯವನ್ನು ಪರಿಹರಿಸಲು ಸಹಾಯ ಮಾಡುವ ಆಹಾರ ಕ್ರಮದ ಮಾರ್ಗಸೂಚಿಯನ್ನು ಇದು ಒಳಗೊಂಡಿದೆ.

ಹೊಸ ಮಾರ್ಗಸೂಚಿಗಳು ಆಹಾರ ಮತ್ತು ಜೀವನಶೈಲಿ ಸಂಬಂಧಿತ ಶಿಫಾರಸುಗಳನ್ನು ಒಳಗೊಂಡಿದ್ದು, ಇದು ಕಠಿಣವಾದ ಶೈಕ್ಷಣಿಕ ಮತ್ತು ವೈಜ್ಞಾನಿಕ ವಿಮರ್ಶೆಗೆ ಒಳಪಟ್ಟಿವೆ ಎಂದು ತಿಳಿಸಿದೆ.

ಪೋಷಕಾಂಶಗಳ ಅವಶ್ಯಕತೆಗಳನ್ನು ಪೂರೈಸಲು ಮತ್ತು ಭಾರತದಾದ್ಯಂತ ಎಲ್ಲಾ ವಯಸ್ಸಿನ ಜನರಲ್ಲಿ ಎನ್ ಸಿಡಿ ಗಳನ್ನು ತಡೆಗಟ್ಟಲು ಆಹಾರದ ವೈವಿಧ್ಯತೆಯನ್ನು ಖಚಿತಪಡಿಸಿಕೊಳ್ಳಲು ಸುಲಭವಾಗಿ ಅರ್ಥವಾಗುವ ಮತ್ತು ಪ್ರಾಯೋಗಿಕ ವಿಧಾನಗಳಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಐಸಿಎಂಆರ್-ಎನ್‌ಐಎನ್‌ನ ನಿರ್ದೇಶಕಿ ಹೇಮಲತಾ ಆರ್. ಅವರ ನೇತೃತ್ವದ ತಜ್ಞರ ಸಮಿತಿಯು 17 ವಿವರವಾದ ಮಾರ್ಗಸೂಚಿಗಳನ್ನು ರಚಿಸಿದೆ.

ಆಹಾರ ಪದ್ಧತಿಯಲ್ಲಿ ಬದಲಾವಣೆ

ಐಸಿಎಂಆರ್ ಪ್ರಧಾನ ಕಚೇರಿಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಆರೋಗ್ಯ ಸಂಶೋಧನಾ ವಿಭಾಗದ ಕಾರ್ಯದರ್ಶಿ, ಐಸಿಎಂಆರ್ ಮಹಾನಿರ್ದೇಶಕ ರಾಜೀವ್ ಬಹ್ಲ್ ಮಾತನಾಡಿ, ಕಳೆದ ಕೆಲವು ದಶಕಗಳಲ್ಲಿ ಭಾರತೀಯರ ಆಹಾರ ಪದ್ಧತಿಯು ಗಮನಾರ್ಹ ಬದಲಾವಣೆಗಳಾಗಿದೆ. ಇದು ಅಪೌಷ್ಟಿಕತೆಯ ಕೆಲವು ಸಮಸ್ಯೆಗಳು ಮಾತ್ರವಲ್ಲದೇ ಸಾಂಕ್ರಾಮಿಕವಲ್ಲದ ರೋಗಗಳ ಹೆಚ್ಚಳಕ್ಕೆ ಕಾರಣವಾಗಿದೆ. ಭಾರತದಲ್ಲಿ ಬದಲಾಗುತ್ತಿರುವ ಆಹಾರ ಸನ್ನಿವೇಶಕ್ಕೆ ಬಹಳ ಪ್ರಸ್ತುತವಾದ ಮಾರ್ಗಸೂಚಿಗಳನ್ನು ಮಾಡಲಾಗಿದೆ ಎಂದು ಹೇಳಿದರು.

ಪೌಷ್ಟಿಕಾಂಶ-ಭರಿತ ಆಹಾರ ಲಭ್ಯವಾಗಬೇಕು

ಹೇಮಲತಾ ಆರ್. ಮಾತನಾಡಿ, ಆಹಾರದ ಮಾರ್ಗಸೂಚಿಗಳ ಮೂಲಕ ಎಲ್ಲಾ ರೀತಿಯ ಅಪೌಷ್ಟಿಕತೆಗೆ ಅತ್ಯಂತ ತಾರ್ಕಿಕ, ಸಮರ್ಥನೀಯ ಮತ್ತು ದೀರ್ಘಕಾಲೀನ ಪರಿಹಾರವೆಂದರೆ ವೈವಿಧ್ಯಮಯ ಆಹಾರಗಳ ಬಳಕೆಯನ್ನು ಉತ್ತೇಜಿಸುವಾಗ ಪೌಷ್ಟಿಕಾಂಶ-ಭರಿತ ಆಹಾರಗಳ ಲಭ್ಯತೆ, ಮತ್ತು ಕೈಗೆಟುಕುವಿಕೆಯನ್ನು ಖಚಿತಪಡಿಸಿಕೊಳ್ಳುವುದಾಗಿದೆ ಎಂದು ತಿಳಿಸಿದರು.


ಎಷ್ಟು ಕ್ಯಾಲೋರಿ ಬೇಕು?

ಸಮತೋಲಿತ ಆಹಾರವು ಧಾನ್ಯ ಮತ್ತು ರಾಗಿಗಳಿಂದ ಶೇ. 45ಕ್ಕಿಂತ ಹೆಚ್ಚು ಕ್ಯಾಲೊರಿಗಳನ್ನು ನೀಡಬಾರದು. ಧಾನ್ಯ ಮತ್ತು ದ್ವಿದಳ ಧಾನ್ಯಗಳು, ಬೀನ್ಸ್, ಮಾಂಸ, ಬೀಜ, ತರಕಾರಿ, ಹಣ್ಣು ಮತ್ತು ಹಾಲಿನಿಂದ ಶೇ. 15ರಷ್ಟು ಕ್ಯಾಲೋರಿಗಳು ಬರಬೇಕು. ಕಾರ್ಬೋಹೈಡ್ರೇಟ್‌ಗಳಿಂದ ಒಟ್ಟು ಕ್ಯಾಲೊರಿಗಳಲ್ಲಿ ಶೇ. 50ರಿಂದ 55, ಪ್ರೋಟೀನ್‌ಗಳಿಂದ ಶೇ. 10ರಿಂದ 15 ಮತ್ತು ಆಹಾರದ ಕೊಬ್ಬಿನಿಂದ ಶೇ.20ರಿಂದ 30ರಷ್ಟು ಖಚಿತವಾಗಿ ಸಿಗಬೇಕು.

ಆಹಾರ ಹೇಗಿರಬೇಕು?

ಕನಿಷ್ಠ ಎಂಟು ಆಹಾರಗಳು ಸೇವಿಸಬೇಕು. ಇದರಲ್ಲಿ ತರಕಾರಿ, ಹಣ್ಣು, ಹಸಿರು ಎಲೆ, ಬೇರು ಮತ್ತು ಗೆಡ್ಡೆಗಳು ದಿನಕ್ಕೆ ಶಿಫಾರಸು ಮಾಡಲಾದ ಪ್ಲೇಟ್‌ನ ಅರ್ಧದಷ್ಟು ಭಾಗ ಇರಬೇಕು. ತಟ್ಟೆಯ ಇತರ ಭಾಗವು ಧಾನ್ಯ, ರಾಗಿ, ಕಾಳು, ಮಾಂಸದ ಆಹಾರ, ಮೊಟ್ಟೆ, ಬೀಜ, ಎಣ್ಣೆ ಬೀಜಗಳನ್ನು ಮತ್ತು ಹಾಲು ಅಥವಾ ಮೊಸರನ್ನು ಒಳಗೊಂಡಿರಬೇಕು.

ಸುರಕ್ಷಿತ, ಶುದ್ಧ ಆಹಾರ ನಮ್ಮದಾಗಿರಬೇಕು

ತರಕಾರಿ ಮತ್ತು ದ್ವಿದಳ ಧಾನ್ಯಗಳನ್ನು ಒಳಗೊಂಡಿರುವ ಸಮತೋಲಿತ ಆಹಾರವನ್ನು ಸೇವಿಸುವಂತೆ ಮಾರ್ಗಸೂಚಿಗಳು ಶಿಫಾರಸು ಮಾಡುತ್ತವೆ. ಇದು ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರಿಗೆ ಪೌಷ್ಟಿಕಾಂಶವನ್ನು ಎತ್ತಿ ತೋರಿಸುತ್ತದೆ; ಶಿಶು, ಮಕ್ಕಳು ಮತ್ತು ಹದಿಹರೆಯದವರಿಗೆ ಆಹಾರ, ವಯಸ್ಸಾದವರಿಗೆ ಪೌಷ್ಟಿಕಾಂಶ-ಭರಿತ ಆಹಾರಗಳು ಸೇರಿದಂತೆ ಸುರಕ್ಷಿತ, ಶುದ್ಧ ಆಹಾರವನ್ನು ತಿನ್ನುವುದು ಮತ್ತು ಸಾಕಷ್ಟು ಪ್ರಮಾಣದ ನೀರನ್ನು ಕುಡಿಯುವುದು ಅಗತ್ಯವಾಗಿದೆ.

ಇದನ್ನೂ ಓದಿ: Cooking Oils: ಭಾರತೀಯ ಅಡುಗೆ ಶೈಲಿಗೆ ಯೋಗ್ಯವಾದ 7 ಅಡುಗೆ ಎಣ್ಣೆಗಳಿವು

ಪ್ರೋಟೀನ್ ಪೂರಕಗಳು ಬೇಡ

ದೇಹಕ್ಕೆ ಪ್ರೋಟೀನ್ ಪೂರಕಗಳನ್ನು ಹೆಚ್ಚಿಗೆ ಸೇವಿಸುವುದು ಒಳ್ಳೆಯದಲ್ಲ. ಉಪ್ಪು ಸೇವನೆಯನ್ನು ನಿರ್ಬಂಧಿಸುವುದು, ಎಣ್ಣೆ ಮತ್ತು ಕೊಬ್ಬಿನ ಸೇವನೆಯನ್ನು ಮಿತಗೊಳಿಸುವುದು ಸ್ಥೂಲಕಾಯತೆಯನ್ನು ತಡೆಗಟ್ಟಲು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು, ಸರಿಯಾದ ವ್ಯಾಯಾಮ ನಡೆಸುವುದು, ಸಂಸ್ಕರಿಸಿದ ಆಹಾರಗಳನ್ನು ಕಡಿಮೆ ಮಾಡುವುದು ಆರೋಗ್ಯಕರ ಆಹಾರ ಆಯ್ಕೆಗಳಾಗಿವೆ ಎಂದು ವರದಿ ಹೇಳುತ್ತದೆ.

Continue Reading

ಆರೋಗ್ಯ

Digestion Tips: ಜೀರ್ಣಾಂಗಗಳ ಕ್ಷಮತೆ ಹೆಚ್ಚಿಸುವುದು ಹೇಗೆ?

ಹಳೆಯ ತಲೆಮಾರಿನವರು ಕಲ್ಲನ್ನಾದರೂ ತಿಂದು ಅರಗಿಸುತ್ತಿದ್ದರು. ನಮಗೆ ಅನ್ನವೇ ಅರಗುವುದಿಲ್ಲ ಎಂದು ಹಳಹಳಿಸುವವರ ಸಂಖ್ಯೆ ಹೆಚ್ಚುತ್ತಿದೆ. ಹೌದು, ನಮ್ಮ ಊಟದ ಅಭ್ಯಾಸಗಳೇ ಕೆಲವೊಮ್ಮೆ ನಮಗೆ ಶತ್ರುವಾಗುವುದಿದೆ. ಹಾಗಾದರೆ ಜೀರ್ಣಾಂಗಗಳ ಸಾಮರ್ಥ್ಯವನ್ನು ಹೆಚ್ಚಿಸಲು ಏನು ಮಾಡಬಹುದು? ಇಲ್ಲಿದೆ (Digestion Tips) ಉಪಯುಕ್ತ ಮಾಹಿತಿ.

VISTARANEWS.COM


on

Digestion Tips
Koo

ನಮ್ಮ ಜೀರ್ಣಾಂಗಗಳ ಕ್ಷಮತೆಯನ್ನು ಹೆಚ್ಚಿಸುವುದಕ್ಕೆ ಸಾಧ್ಯವೇ? ತಿಂದಿದ್ದು ಅರಗುವುದೇ ಇಲ್ಲ ಎನ್ನುವ ದೂರು ಹೇಳುವವರು ಬಹಳ ಮಂದಿ ಇದ್ದಾರು ಲೋಕದಲ್ಲಿ. ಇದರಿಂದ ಅಜೀರ್ಣದ ಸಮಸ್ಯೆ ಮಾತ್ರವಲ್ಲ, ಸರಣಿ ಸಮಸ್ಯೆಗಳು ಬೆನ್ನು ಹತ್ತುತ್ತವೆ. ಹಸಿವಿಲ್ಲದಿರುವುದು, ವಾಯು ಪ್ರಕೋಪ, ಆಸಿಡಿಟಿ, ಮಲಬದ್ಧತೆ… ಇವೆಲ್ಲ ಸೇರಿ ಜೀವವನ್ನು ಹೈರಾಣಾಗಿಸುತ್ತವೆ. ಮಾತ್ರವಲ್ಲ, ಟಾಕ್ಸಿನ್‌ಗಳ ಗುಡಾಣವಾಗುತ್ತದೆ ದೇಹ. ಹಾಗಾದರೆ ಇವುಗಳನ್ನು ದೂರ ಮಾಡಲು ಇರುವ ದಾರಿ ಯಾವುದು? ಜೀರ್ಣಾಂಗಗಳ ದಕ್ಷತೆಯನ್ನು ಹೆಚ್ಚಿಸುವುದರಿಂದ ಇಂಥ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದೇ? ಹೌದಾದರೆ (Digestion Tips) ಏನು ಮಾಡಬೇಕು?

Detox

ಡಿಟಾಕ್ಸ್‌ ಮಾಡಿ

ದೇಹವನ್ನು ಕಾಲಕಾಲಕ್ಕೆ ವಿಷಮುಕ್ತ ಮಾಡುವುದು ಅಗತ್ಯ. ಬೇಡದ್ದನ್ನೇ ದೇಹದಲ್ಲಿ ತುಂಬಿಕೊಂಡಿದ್ದರೆ, ಲಿವರ್‌ ಅತಿಯಾಗಿ ಕೆಲಸ ಮಾಡುವುದು ಹೌದು. ಆದರೆ ಪ್ರಯೋಜನ ದೊರೆಯುವುದಿಲ್ಲ. ಇಂಥ ಸಂದರ್ಭದಲ್ಲಿ ಏಕಾದಶಿ ಅಥವಾ ಸಂಕಷ್ಟಿಯ ನೆವದಲ್ಲಿ ಉಪವಾಸ, ಇನ್ಯಾವುದೋ ವ್ರತದ ಹೆಸರಿನಲ್ಲಿ ದ್ರವಾಹಾರ ಮುಂತಾದ ಕ್ರಮಗಳು ಜೀರ್ಣಾಂಗಗಳಿಗೆ ಬೇಕಾದ ವಿಶ್ರಾಂತಿಯನ್ನು ನೀಡುತ್ತವೆ. ಒಂದೊಮ್ಮೆ ಉಪವಾಸ ಕಷ್ಟ ಎಂದೆನಿಸಿದರೆ ಜ್ಯೂಸ್‌ಫಾಸ್ಟ್‌ ನಿಯಮಗಳನ್ನೂ ಅನುಸರಿಸಬಹುದು. ಇದರಿಂದ ಶರೀರವನ್ನು ಡಿಟಾಕ್ಸ್‌ ಮಾಡಲ್ ಸಾಧ್ಯವಾಗುತ್ತದೆ.

Young Woman in the Lotus Position While Meditating Mindfulness Practice Well-Being and Self-Concept Brain Exercises To Improve Memory

ಧ್ಯಾನ

ಎತ್ತಣ ಮಾಮರ ಎತ್ತಣ ಕೋಗಿಲೆ ಎಂದು ಯೋಚಿಸಬೇಡಿ. ಮಾನಸಿಕ ಒತ್ತಡವು ದೇಹದ ಜೀರ್ಣಾಂಗಗಳ ಆರೋಗ್ಯವನ್ನು ಸಂಪೂರ್ಣ ಹಾಳು ಮಾಡುತ್ತದೆ ಎಂಬುದನ್ನು ಬಹಳಷ್ಟ್ ಅ‍ಧ್ಯಯನಗಳು ದೃಢಪಡಿಸಿವೆ. ಮನಸ್ಸನ್ನು ಒತ್ತಡ ಮುಕ್ತ ಮಾಡುವುದರಿಂದ, ಇಡೀ ಶರೀರದ ಮೇಲೆ ಧನಾತ್ಮಕ ಪರಿಣಾಮ ಬೀರುವುದನ್ನು ಕಾಣಬಹುದು ನಾವು. ಹಾಗಾಗಿ ಪ್ರತಿದಿನ 30 ನಿಮಿಷಗಳ ಧ್ಯಾನ ಮಾಡುವುದರಿಂದ ಜೀರ್ಣಾಂಗಗಳ ಆರೋಗ್ಯವನ್ನೂ ಸುಧಾರಿಸಬಹುದು.

Female runner doing stretching exercise, preparing for morni

ವ್ಯಾಯಾಮ

ಶಾರೀರಿಕ ಚಟುವಟಿಕೆಯು ಜೀರ್ಣಾಂಗಗಳನ್ನೂ ಚುರುಕಾಗಿಸುತ್ತದೆ. ಯಾವುದೇ ರೀತಿಯ ಏರೋಬಿಕ್‌ ಮಾದರಿಯ ವ್ಯಾಯಾಮಗಳು ದೇಹಕ್ಕೆ ಒಳ್ಳೆಯದು. ಚುರುಕು ನಡಿಗೆ, ಈಜು, ಸೈಕಲ್‌ ಹೊಡೆಯುವುದು, ನೃತ್ಯ, ಪಿಲಾಟೆ, ಯೋಗ ಮುಂತಾದ ಯಾವುದನ್ನಾದರೂ ಅಭ್ಯಾಸ ಮಾಡಬಹುದು. ಊಟದ ನಂತರ ಹತ್ತು ನಿಮಿಷಗಳ ನಡಿಗೆಯೂ ಆಹಾರವನ್ನು ಚೆನ್ನಾಗಿ ಪಚನ ಮಾಡುತ್ತದೆ. ಅದರಲ್ಲೂ ಮಧುಮೇಹ ಇರುವವರಲ್ಲಿ ಇಂಥ ಚಟುವಟಿಕೆಗಳು ಸಕ್ಕರೆಯಂಶದ ನಿಯಂತ್ರಣಕ್ಕೆ ಬಹಳಷ್ಟು ನೆರವು ನೀಡುತ್ತದೆ.

ಇದನ್ನೂ ಓದಿ: Olive Oil Benefits: ಆಲಿವ್‌ ಎಣ್ಣೆ ಕೇವಲ ಅಡುಗೆಗಲ್ಲ, ಮುಖದ ಚರ್ಮ ಹಾಗೂ ಕೂದಲ ಸೌಂದರ್ಯಕ್ಕೂ ಬೇಕು!

ಅತಿಯಾಗಿ ತಿನ್ನುವುದಲ್ಲ

ಊಟ ಎಷ್ಟೇ ರುಚಿಯಾಗಿದ್ದರೂ, ಅದೇನು ಬದುಕಿನ ಕಡೆಯ ಊಟ ಎಂಬಂತೆ ಉಣ್ಣಬೇಕಿಲ್ಲ. ಅಲ್ಪತೃಪ್ತನಿಗೆ ರುಚಿ ಹೆಚ್ಚು ಎನ್ನುವ ಮಾತಿನಂತೆ, ಸ್ವಲ್ಪ ತಿಂದಿದ್ದನ್ನೂ ಪ್ರೀತಿಯಿಂದ ಹೊಟ್ಟೆ ಸೇರಿಸಿದರೆ, ಅದೇ ಪ್ರಿಯವಾಗುತ್ತದೆ. ಊಟಕ್ಕೆ ಕೂತಾಗ ಸಿಕ್ಕಾಪಟ್ಟೆ ತಿನ್ನುವುದು ಮಾತ್ರವಲ್ಲ, ಆಗಾಗ ತಿನ್ನುತ್ತಿರುವುದು, ಅನಾರೋಗ್ಯಕರ ತಿಂಡಿಗಳನ್ನೇ ತಿನ್ನುವುದು- ಇಂಥ ಆಹಾರಭ್ಯಾಸಗಳು ಜೀರ್ಣಾಂಗಗಳನ್ನು ಹಿಂಡಿ ಹಿಪ್ಪೆ ಮಾಡುತ್ತವೆ. ಬದಲಿಗೆ, ಸತ್ವಯುತವಾದ ಮಧ್ಯಮ ಗಾತ್ರದ ಊಟವನ್ನು ಅಳವಡಿಸಿಕೊಂಡರೆ ಒಳ್ಳೆಯದು

Herbal Tea with Honey Late Night Snacks

ಹರ್ಬಲ್‌ ಚಹಾಗಳು

ನೈಸರ್ಗಿಕ ಹರ್ಬಲ್‌ ಚಹಾಗಳು ಹೊಟ್ಟೆಯ ಆರೋಗ್ಯವನ್ನು ವೃದ್ಧಿಸುತ್ತವೆ. ಶುಂಠಿ ಚಹಾ, ಚಕ್ಕೆಯ (ಸಿನ್ನಮನ್) ಚಹಾ, ಕ್ಯಾಮೊಮೈಲ್‌ ಚಹಾ ಮುಂತಾದವು ಆಹಾರ ಪಚನವಾಗಲು ನೆರವು ನೀಡುತ್ತವೆ. ಜೊತೆಗೆ ಇವುಗಳಲ್ಲಿರುವ ಉತ್ಕರ್ಷಣ ನಿರೋಧಕಗಳು ಜೀರ್ಣಾಂಗಗಳಲ್ಲಿನ ಉರಿಯೂತ ಕಡಿಮೆ ಮಾಡಲೂ ಸಹಾಯ ಮಾಡುತ್ತವೆ. ಕೊತ್ತಂಬರಿ ನೀರು, ಜೀರಿಗೆ ನೀರು ಇತ್ಯಾದಿಗಳು ಗ್ಯಾಸ್‌, ಆಸಿಡಿಟಿಗಳ ನಿಯಂತ್ರಣಕ್ಕೂ ನೆರವಾಗುತ್ತವೆ. ಇಂಥ ಯಾವುದೇ ಚಹಾಗಳ ಡಿಪ್‌ ಟೀ ಬ್ಯಾಗ್ ಬಳಸಿದರೆ‌ ತಯಾರಿಕೆ ಸುಲಭ. ಹಾಗಲ್ಲದೆ, ನೀವೆ ಮಾಡಿಕೊಳ್ಳುವ ಉದ್ದೇಶವಿದ್ದರೆ ತಯಾರಿಸುವ ಕ್ರಮ ಹೀಗಿದೆ- ಶುಂಠಿ ಅಥವಾ ಚಕ್ಕೆಯ ಚಹಾ ಮಾಡುವುದಿದ್ದರೆ, ಒಂದು ಕಪ್‌ ನೀರಿಗೆ ಒಂದಿಂಚು ಚಕ್ಕೆ ಅಥವಾ ಅರ್ಧ ಇಂಚು ಶುಂಠಿಯನ್ನು ಹಾಕಿ. ೫ ನಿಮಿಷಗಳ ಕಾಲ ಈ ನೀರು ಚೆನ್ನಾಗಿ ಕುದಿಯಲಿ. ನಂತರ ಇದನ್ನು ಬೇಕಾದ ಉಷ್ಣತೆಯಲ್ಲಿ ಸೇವಿಸಬಹುದು. ಊಟದ ಒಂದು ತಾಸಿನ ನಂತರ ಹರ್ಬಲ್‌ ಟೀ ಅಥವಾ ಗ್ರೀನ್‌ ಟೀಗಳ ಸೇವನೆ ಹೆಚ್ಚಿನ ಪರಿಣಾಮಗಳನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಹಾಗೆಂದು ದಿನದ ಉಳಿದ ಸಮಯದಲ್ಲಿ ಇದನ್ನು ಸೇವಿಸಬಾರದೆಂದಲ್ಲ. ಆದರೆ ಹಸಿದ ಹೊಟ್ಟೆಯಲ್ಲಿ ಶುಂಠಿ ಚಹಾ ಸೇವಿಸುವುದು ಸಮಸ್ಯೆಗಳನ್ನು ತರಬಹುದು.

Continue Reading

ಆರೋಗ್ಯ

Which Sweetener Is Better: ಸಕ್ಕರೆ, ಬೆಲ್ಲ, ಕಲ್ಲುಸಕ್ಕರೆ- ಯಾವುದು ಒಳ್ಳೆಯದು?

ಬಹಳಷ್ಟು ಮಂದಿಗೆ ಬಾಯಿ ಸಿಹಿ ಆಗದಿದ್ದರೆ ಅಡುಗೆ ರುಚಿಸುವುದೇ ಇಲ್ಲ. ಹಾಗಂತ ಮಾಡುವ ಅಡಿಗೆಗೆಲ್ಲ ಸಕ್ಕರೆ ಹಾಕಿಕೊಂಡು ಕೂತಿರುವುದಕ್ಕಾಗದು. ಹಲವು ರೀತಿಯ ವಸ್ತುಗಳನ್ನು ಬಳಸಿ ಪಾಕ ತಯಾರಿಸುವುದು ವಾಡಿಕೆ. ಯಾವ ಸಿಹಿ ವಸ್ತುಗಳಿಂದ ಎಂಥ ಪರಿಣಾಮ ಆರೋಗ್ಯದ ಮೇಲಾಗುತ್ತದೆ ಎಂಬ (Which Sweetener Is Better) ಮಾಹಿತಿ ಇಲ್ಲಿದೆ.

VISTARANEWS.COM


on

Which Sweetener Is Better
Koo

ಅಡುಗೆ ಮಾಡುವಾಗ ಹಲವು ರೀತಿಯನ್ನು ಸಿಹಿಯನ್ನು ಬಳಸುತ್ತೇವೆ. ಕೆಲವು ಪಾಕಗಳಿಗೆ ಸಕ್ಕರೆಯನ್ನೇ ನೇರವಾಗಿ ಸೇರಿಸಿದರೆ, ಇನ್ನೂ ಕೆಲವು ಅಡುಗೆಗಳಿಗೆ ಬೆಲ್ಲ ಅಥವಾ ಇನ್ನಾವುದಾದರೂ ಸಿಹಿಯನ್ನು ಬಳಸಬಹುದು. ಕೆಲವೊಮ್ಮೆ ಸಿಹಿ ಹಣ್ಣುಗಳನ್ನು ಬಳಸುವ ಮೂಲಕ, ಅಡುಗೆಯೊಂದನ್ನು ಸಿಹಿಯಾಗಿರಬಹುದು. ಹಲವು ರೀತಿಯ ಸಿಹಿಗಳನ್ನು ಬಳಸುವ ಹಿನ್ನೆಲೆಯಲ್ಲಿ, ಸಕ್ಕರೆ, ಬೂರಾ ಸಕ್ಕರೆ, ಕಲ್ಲು ಸಕ್ಕರೆ ಮತ್ತು ಬೆಲ್ಲ- ಇವುಗಳ ಸೇವನೆಯಿಂದ ಆರೋಗ್ಯದ ಮೇಲಾಗುವ ಪರಿಣಾಮಗಳೇನು (Which Sweetener Is Better) ಎಂಬ ಮಾಹಿತಿಯಿದು. ಮೊದಲಿಗೆ ಈ ವಸ್ತುಗಳು ಏನು ಎಂಬುದನ್ನು ಅರ್ಥ ಮಾಡಿಕೊಂಡರೆ, ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದು ಸಹ ಅರ್ಥ ಮಾಡಿಕೊಳ್ಳಬಹುದು. ಮಾತ್ರವಲ್ಲ, ಎಲ್ಲಕ್ಕಿಂತ ಆರೋಗ್ಯಕರ ಯಾವುದು ಎಂಬುದನ್ನು ನಿರ್ಧರಿಸಲು ಸಾಧ್ಯವಾಗುತ್ತದೆ. ಮೇಲ್ನೋಟಕ್ಕೆ ಎಲ್ಲವೂ ಸಿಹಿ ವಸ್ತುಗಳು ಎಂಬಂತೆ ಕಂಡರೂ, ಪ್ರತಿಯೊಂದೂ ಭಿನ್ನವಾಗಿವೆ. ಕೆಲವು ಸಿಹಿಗಳು ಗ್ಲೈಸೆಮಿಕ್‌ ಸೂಚಿ, ಉಳಿದವುಗಳಿಗಿಂತ ಕಡಿಮೆ ಇರಬಹುದು. ಕೆಲವು ಸಿಹಿಗಳಲ್ಲಿ ಖನಿಜಗಳ ಪ್ರಮಾಣ ಹೆಚ್ಚಿರಬಹುದು. ಯಾವುದರಲ್ಲಿ ಏನೇನಿದೆ ಎಂಬುದನ್ನು ನೋಡೋಣ.

white sugar

ಬಿಳಿ ಸಕ್ಕರೆ

ಇದು ಅತ್ಯಂತ ಹೆಚ್ಚು ಸಂಸ್ಕರಣಗೊಳ್ಳುವ ಸಕ್ಕರೆ. ಪೌಷ್ಟಿಕಾಂಶಗಳು ಯಾವುದೂ ಇಲ್ಲದೆ ಕೇವಲ ಸಕ್ಕರೆಯ ಕ್ಯಾಲರಿಯನ್ನಷ್ಟೇ ಇದು ನೀಡುತ್ತದೆ. ಹಾಗಾಗಿ ಇದರಲ್ಲಿ ಗ್ಲೈಸೆಮಿಕ್‌ ಸೂಚಿ ಹೆಚ್ಚು. ಮಧುಮೇಹಿಗಳಿಗೆ ಇದು ಸೂಕ್ತವಲ್ಲದ್ದು. ಅಂದರೆ, 70ಕ್ಕಿಂತ ಹೆಚ್ಚಿನ ಜಿಐ ಇರುವ ವಸ್ತುಗಳ ಸಾಲಿಗೆ ಇದು ಸೇರುತ್ತದೆ. ೫೫ಕ್ಕಿಂತ ಕಡಿಮೆ ಜಿಐ ಇರುವ ತಿನಿಸುಗಳನ್ನು ಕಡಿಮೆ ಎಂತಲೂ, 56-69 ಜಿಐ ಇರುವ ವಸ್ತುಗಳಿಗೆ ಮಧ್ಯಮ ಪ್ರಮಾಣದ್ದೆಂತಲೂ, 70ಕ್ಕಿಂತ ಹೆಚ್ಚಿನ ಜಿಐ ಇರುವ ತಿನಿಸುಗಳು ಹೆಚ್ಚಿನ ಜಿಐ ಹೊಂದಿದವು ಎಂತಲೂ ಹೇಳಲಾಗುತ್ತದೆ. ಜಿಐ ಪ್ರಮಾಣ ಕಡಿಮೆ ಇದ್ದಷ್ಟೂ ರಕ್ತದಲ್ಲಿ ಸಕ್ಕರೆ ಅಂಶ ಸ್ಥಿರವಾಗಿರುತ್ತದೆ ಎನ್ನಬಹುದು.

Rock sugar

ಕಲ್ಲು ಸಕ್ಕರೆ

ಇದು ಆಕಾರದಲ್ಲಿ ಬಿಳಿಸಕ್ಕರೆಯಂತೆ ಕಾಣುವುದಿಲ್ಲ ಎನ್ನುವುದನ್ನು ಬಿಟ್ಟರೆ, ಸತ್ವದಲ್ಲಿ ಇದು ಸಹ ಖಾಲಿ. ಸಕ್ಕರೆಯ ಕ್ಯಾಲರಿಗಳನ್ನು ಬಿಟ್ಟರೆ ಬೇರೇನನ್ನೂ ನೀಡುವುದಿಲ್ಲ. ಹಾಗಾಗಿ ಇದರದ್ದೂ ಗ್ಲೈಸೆಮಿಕ್‌ ಸೂಚಿ ಅಧಿಕ. ಮಧುಮೇಹಿಗಳಿಗೆ ಕಲ್ಲುಸಕ್ಕರೆಯೂ ಸೂಕ್ತವಲ್ಲ. ಇದನ್ನು ಸೇವಿಸಿದ ಅಲ್ಪಕಾಲದಲ್ಲೇ ಹೆಚ್ಚಿನ ಗ್ಲೂಕೋಸನ್ನು ಇದು ರಕ್ತಕ್ಕೆ ಬಿಡುಗಡೆ ಮಾಡುತ್ತದೆ. ರುಚಿಯೂ ಸಹ ಬಿಳಿ ಸಕ್ಕರೆಗಿಂತ ಹೆಚ್ಚು ಭಿನ್ನವಲ್ಲ.

bura sugar

ಬೂರಾ ಸಕ್ಕರೆ

ಇದು ಸಹ ಸಕ್ಕರೆಯೆ. ಆದರೆ ಸಂಸ್ಕರಣಗೊಳ್ಳದ ಸಕ್ಕರೆ. ಬಿಳಿ ಸಕ್ಕರೆಗಿಂತ ಇದು ಬಳಕೆಗೆ ಸೂಕ್ತ. ಕಾರಣ, ಇದರ ಗ್ಲೈಸೆಮಿಕ್‌ ಸೂಚಿ ಉಳಿದೆಲ್ಲ ಸಕ್ಕರೆಗಳಿಗಿಂತ ಕಡಿಮೆ. ಅಷ್ಟಾದರೂ ಹೇಳುವಂಥ ಖನಿಜಾಂಶಗಳನ್ನೇನೂ ಇದು ಹೊಂದಿರುವುದಿಲ್ಲ. ಆದರೂ ಬಿಳಿ ಸಕ್ಕರೆ ಮತ್ತು ಕಲ್ಲು ಸಕ್ಕರೆಗಿಂತ ಮಧುಮೇಹಿಗಳು ಇದನ್ನು ಬಳಸಬಹುದು. ಹಾಗೆಂದು ಇದರ ಬಳಕೆಗಾದರೂ ಮಿತಿ ಬೇಕಾಗುತ್ತದೆ.

jaggery

ಬೆಲ್ಲ

ಇದರ ಗ್ಲೈಸೆಮಿಕ್‌ ಸೂಚಿ ಮಧ್ಯಮ ಪ್ರಮಾಣದಲ್ಲಿದೆ. ಅಂದರೆ ಸಂಸ್ಕರಿತ ಸಕ್ಕರೆಗಳಿಗಿಂತ ಇದು ಬಳಕೆಗೆ ಸೂಕ್ತ. ಇದರಲ್ಲಿ ಮೊಲಾಸಿಸ್‌ ಅಂಶ ಉಳಿದಿರುವುದರಿಂದ ಕಬ್ಬಿಣ, ಪೊಟಾಶಿಯಂ, ಮೆಗ್ನೀಶಿಯಂ ಮತ್ತು ಹಲವು ರೀತಿಯ ಬಿ ವಿಟಮಿನ್‌ಗಳು ಬೆಲ್ಲದಲ್ಲಿ ಸೇರಿಸುತ್ತವೆ. ಜೊತೆಗೆ, ಉತ್ಕರ್ಷಣ ನಿರೋಧಕಗಳಿಂದಲೂ ಕೂಡಿದೆ. ಅಲ್ಪ ಪ್ರಮಾಣದಲ್ಲಿ ಮಧುಮೇಹಿಗಳು ಇದನ್ನು ಬಳಸಬಹುದು. ಹೆಚ್ಚಿನ ಜಿಐ ಇರುವಂಥ ವಸ್ತುಗಳಿಗಾಗಿ ಹೆಚ್ಚಿನ ಪ್ರಮಾಣದಲ್ಲಿ ಇನ್‌ಸುಲಿನ್‌ ಉತ್ಪತ್ತಿಯಾಗುತ್ತದೆ. ಇದ್ದಕ್ಕಿದ್ದಂತೆ ಸಿಕ್ಕಾಪಟ್ಟೆ ಗ್ಲೂಕೋಸ್‌ ದೇಹಕ್ಕೆ ದೊರೆತರೆ, ಅದನ್ನು ನಿರ್ವಹಿಸಲು ಶರೀರ ಯತ್ನಿಸುತ್ತದೆ. ಆಗ ರಕ್ತದಲ್ಲಿ ಸಕ್ಕರೆಯಂಶದ ಏರಿಳಿತ ಕಾಣುವುದು ಸಾಮಾನ್ಯ. ಇದರ ಬದಲಿಗೆ ಕಡಿಮೆ ಜಿಐ ಇರುವಂಥ ಆಹಾರ ಸೇವಿಸುವುದರಿಂದ, ರಕ್ತಕ್ಕೆ ಗ್ಲೂಕೋಸ್‌ ಬಿಡುಗಡೆ ಆಗುವ ಪ್ರಮಾಣವೂ ನಿಧಾನವೇ ಆಗುತ್ತದೆ. ಹಾಗಾಗಿ, ನಾರುಭರಿತ ಆಹಾರಗಳು, ಇಡೀ ಧಾನ್ಯಗಳು, ಹಣ್ಣು-ತರಕಾರಿಗಳು ಆಹಾರದಲ್ಲಿ ಸೇರಿಸಕೊಂಡಿರಬೇಕು.

ಇದನ್ನೂ ಓದಿ: Cooking Oils: ಭಾರತೀಯ ಅಡುಗೆ ಶೈಲಿಗೆ ಯೋಗ್ಯವಾದ 7 ಅಡುಗೆ ಎಣ್ಣೆಗಳಿವು

Continue Reading
Advertisement
Rahul gandhi
ದೇಶ13 seconds ago

Rahul Gandhi: “ಅದಾನಿ-ಅಂಬಾನಿ ಕಾಪಾಡಿ..ಕಾಪಾಡಿ ಅಂತಿದ್ದಾರೆ ಪ್ರಧಾನಿ ಮೋದಿ” ; ರಾಹುಲ್‌ ಗಾಂಧಿ ವ್ಯಂಗ್ಯ

Madhavi Latha
ದೇಶ4 mins ago

ಹೈದರಾಬಾದ್ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿ, ಮುಸ್ಲಿಂ ಗಲ್ಲಿಗಳಲ್ಲಿ ಪ್ರಚಾರ ಮಾಡಿದ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ

Covishield Vaccine
ಪ್ರಮುಖ ಸುದ್ದಿ14 mins ago

Covishield: ಭಾರತದಲ್ಲೂ ಎಲ್ಲಾ ಕೋವಿಡ್ ಲಸಿಕೆಗಳ ಸೈಡ್‌ ಎಫೆಕ್ಟ್‌ ಪರಿಶೀಲಿಸಿ: ವೈದ್ಯರ ಒತ್ತಾಯ

Kannada New Movie
ಸಿನಿಮಾ30 mins ago

Kannada New Movie: ‘ಗಾಡ್ ಪ್ರಾಮಿಸ್’ ಚಿತ್ರಕ್ಕೆ ಮುನ್ನುಡಿ; ಆನೆಗುಡ್ಡೆ ಗಣಪತಿ ದೇಗುಲದಲ್ಲಿ ಮುಹೂರ್ತ

Aravind Kejriwal
ಪ್ರಮುಖ ಸುದ್ದಿ56 mins ago

Arvind Kejriwal: ಜೂನ್‌ 1ರವರೆಗೆ ಕೇಜ್ರಿವಾಲ್‌ಗೆ ಜಾಮೀನು, ಮತದಾನ ಮುಗಿಯುವವರೆಗೆ ರಿಲೀಫ್‌

KIA bengaluru terminal 2
ಪ್ರಮುಖ ಸುದ್ದಿ1 hour ago

Terminal 2: ಭಾರಿ ಮಳೆಗೆ ಬೆಂಗಳೂರು ವಿಮಾನ ನಿಲ್ದಾಣದ 2ನೇ ಟರ್ಮಿನಲ್‌ ಸೋರಿಕೆ; ವಿಮಾನ ಹಾರಾಟ ಅಸ್ತವ್ಯಸ್ತ

Prajwal Revanna Case Pen drive case personal quarrel No threat to BJP and JDS alliance says R Ashoka
ರಾಜಕೀಯ1 hour ago

Prajwal Revanna Case: ಪೆನ್‌ಡ್ರೈವ್‌ ಕೇಸ್‌ ವೈಯಕ್ತಿಕ ಜಗಳ; ಬಿಜೆಪಿ – ಜೆಡಿಎಸ್‌ ಮೈತ್ರಿಗೆ ಧಕ್ಕೆ ಇಲ್ಲ: ಆರ್.‌ ಅಶೋಕ್‌

Physical Abuse The public prosecutor called the client woman to the lodge
ಕ್ರೈಂ1 hour ago

Physical Abuse : ಲೈಂಗಿಕ ದೌರ್ಜನ್ಯ; ಕಕ್ಷಿದಾರ ಮಹಿಳೆಯನ್ನು ಮಂಚಕ್ಕೆ ಕರೆದ ಪಬ್ಲಿಕ್ ಪ್ರಾಸಿಕ್ಯೂಟರ್!

Roopa Iyer
ಕ್ರೈಂ2 hours ago

Roopa Iyer: ನಿರ್ದೇಶಕಿ ರೂಪಾ ಅಯ್ಯರ್‌ಗೂ ಆನ್‌ಲೈನ್‌ ಕಳ್ಳರ ಕಾಟ; ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡಿ 30 ಲಕ್ಷ ರೂ.ಗೆ ಬೇಡಿಕೆ

Viral video
ಕ್ರೈಂ2 hours ago

Viral Video:ಛೀ.. ಎಂಥಾ ಹೇಯ ಕೃತ್ಯ! ಶಾಲಾ ಬಾಲಕಿ ಮೇಲೆ ಆಟೋ ಚಾಲಕನ ನೀಚ ಕೃತ್ಯ; ಶಾಕಿಂಗ್‌ ವಿಡಿಯೋ ವೈರಲ್‌

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Physical Abuse The public prosecutor called the client woman to the lodge
ಕ್ರೈಂ1 hour ago

Physical Abuse : ಲೈಂಗಿಕ ದೌರ್ಜನ್ಯ; ಕಕ್ಷಿದಾರ ಮಹಿಳೆಯನ್ನು ಮಂಚಕ್ಕೆ ಕರೆದ ಪಬ್ಲಿಕ್ ಪ್ರಾಸಿಕ್ಯೂಟರ್!

murder case kalaburagi
ಕಲಬುರಗಿ3 hours ago

Murder Case : ಕಾಂಗ್ರೆಸ್‌ಗೆ ವೋಟ್‌ ಹಾಕಿದ್ದಕ್ಕೆ ಅಮಾವಾಸ್ಯೆ ದಿನ ಕರೆದು ಕೊಂದರು

Rain Effect In karnataka
ಮಳೆ4 hours ago

Rain Effect : ಬಿರುಗಾಳಿ ರಭಸಕ್ಕೆ ಮನೆಯ ಗೇಟ್ ಬಿದ್ದು ಬಾಲಕಿ ಸಾವು; ಸಿಡಿಲಿಗೆ ಎತ್ತುಗಳು ಬಲಿ

Dina Bhavishya
ಭವಿಷ್ಯ10 hours ago

Dina Bhavishya: ಶುಭ ಶುಕ್ರವಾರ ಈ ರಾಶಿಯವರಿಗೆ ಖುಲಾಯಿಸಲಿದೆ ಲಕ್‌

Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ18 hours ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

Prajwal Revanna Case Hasanambe is going to destroy this government HD Kumaraswamy curse
ರಾಜಕೀಯ19 hours ago

Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

Prajwal Revanna Case DK Shivakumar alleged mastermind in 25000 pen drive allotment
ಹಾಸನ19 hours ago

Prajwal Revanna Case: 25,000 ಪೆನ್ ಡ್ರೈವ್ ಹಂಚಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮಾಸ್ಟರ್ ಮೈಂಡ್ ಎಂದು ರಾಜ್ಯಪಾಲರಿಗೆ ದೂರು!

SSLC Result 2024 what is the reason for most of the students fail in SSLC
ಕರ್ನಾಟಕ1 day ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಮಕ್ಕಳು ಫೇಲ್‌ ಆಗಲು ಶಿಕ್ಷಣ ಇಲಾಖೆಯ ಈ ನಿರ್ಧಾರವೇ ಕಾರಣ!

Sslc exam Result 2024
ಶಿಕ್ಷಣ1 day ago

SSLC Result 2024 : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದರೂ, ಕಡಿಮೆ ಅಂಕ ಬಂದರೂ ಡೋಂಟ್‌ ವರಿ; ಇನ್ನೂ ಇದೆ ಎರಡು ಚಾನ್ಸ್‌!

SSLC Result 2024 secret behind 20 percent grace marks
ಕರ್ನಾಟಕ1 day ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಈ ಬಾರಿ ನೂರಕ್ಕೆ 25 ಅಂಕ ಪಡೆದವರೂ ಪಾಸ್! ಶೇ. 20 ಗ್ರೇಸ್ ಮಾರ್ಕ್ಸ್ ಕೊಟ್ಟಿದ್ದರ ಹಿಂದಿದೆ ಇಂಟರೆಸ್ಟಿಂಗ್ ಕತೆ!

ಟ್ರೆಂಡಿಂಗ್‌