ವಿಸ್ತಾರ Money Guide: ಏಪ್ರಿಲ್‌ 1ರಿಂದ ಚಿನ್ನ ಮಾರಾಟಕ್ಕೆ ಹಾಲ್‌ ಮಾರ್ಕ್‌ ಕಡ್ಡಾಯ, ಹಳೆ ಆಭರಣಗಳನ್ನು ಏನು ಮಾಡಬಹುದು? - Vistara News

ಮನಿ-ಗೈಡ್

ವಿಸ್ತಾರ Money Guide: ಏಪ್ರಿಲ್‌ 1ರಿಂದ ಚಿನ್ನ ಮಾರಾಟಕ್ಕೆ ಹಾಲ್‌ ಮಾರ್ಕ್‌ ಕಡ್ಡಾಯ, ಹಳೆ ಆಭರಣಗಳನ್ನು ಏನು ಮಾಡಬಹುದು?

2023ರ ಏಪ್ರಿಲ್‌ 1ರಿಂದ ಚಿನ್ನಾಭರಣಗಳ ಮಾರಾಟಕ್ಕೆ ಹಾಲ್‌ ಮಾರ್ಕ್‌ ಕಡ್ಡಾಯವಾಗಲಿದೆ. (Hallmark Unique Identification) ಹಾಗಾದರೆ ಹಳೆಯ ಆಭರಣಗಳಿಗೆ ಹಾಲ್‌ ಮಾರ್ಕ್ ಪಡೆಯುವುದು‌ ಹೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ.

VISTARANEWS.COM


on

gold rate in bangalore
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಏಪ್ರಿಲ್‌ 1ರಿಂದ ಹಾಲ್‌ ಮಾರ್ಕ್‌ ಇಲ್ಲದ (Hallmark Unique Identification- HUID) ಆಭರಣಗಳನ್ನು ಮಾರಾಟ ಮಾಡುವಂತಿಲ್ಲ ಎಂದು ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವಾಲಯ ತಿಳಿಸಿದೆ. ಗ್ರಾಹಕರ ಹಿತದೃಷ್ಟಿಯಿಂದ ಮಾರ್ಚ್‌ 31ರ ಬಳಿಕ ಹಾಲ್‌ ಮಾರ್ಕ್‌ ರಹಿತ ಚಿನ್ನಾಭರಣಗಳ ಮಾರಾಟಕ್ಕೆ ಅನುಮತಿ ಇರುವುದಿಲ್ಲ ಎಂದು ಇಲಾಖೆ ಹೇಳಿದೆ. ಹೀಗಾಗಿ ಸಾರ್ವಜನಿಕರು ತಿಳಿದುಕೊಳ್ಳಬೇಕಾದ ಉಪಯುಕ್ತ ಮಾಹಿತಿ ಇಲ್ಲಿದೆ.

6 ಅಂಕಿಗಳ ಹಾಲ್‌ ಮಾರ್ಕ್‌ (HUID):

ಈ ಹಿಂದೆ 4 ಅಂಕಿಗಳ ಎಚ್‌ಯುಐಡಿ ಬಳಸಲಾಗುತ್ತಿತ್ತು. ಈಗ 4 ಮತ್ತು 6 ಅಂಕಿಗಳನ್ನು ಬಳಸಲಾಗುತ್ತಿದೆ. ಆದರೆ ಮಾರ್ಚ್‌ 31ರ ಬಳಿಕ 6 ಅಂಕಿಗಳ ಕೋಡ್‌ ಮಾತ್ರ ಬಳಕೆಯಾಗಲಿದೆ. ಹಾಗಾದರೆ ಏನಿದು ಹಾಲ್‌ ಮಾರ್ಕ್?‌ ಚಿನ್ನದ ಒಡವೆಗಳಿಗೆ (Gold jewellery) ಯಾಕೆ ಇದು ಅಗತ್ಯ? ಇದರ ಮಹತ್ವ ಏನು? ಇದು ಗ್ರಾಹಕರ ಹಿತದೃಷ್ಟಿಯಿಂದ ಕೈಗೊಂಡಿರುವ ಕ್ರಮ ಎಂದು ಸರ್ಕಾರ ಏಕೆ ಹೇಳುತ್ತಿದೆ? ನೋಡೋಣ.

ಏನಿದು ಹಾಲ್‌ ಮಾರ್ಕ್?

ಎಚ್‌ಯುಐಡಿ ಸಂಖ್ಯೆ 6 ಅಂಕಿಗಳ ಕೋಡ್.‌ (Alphnumeric code) ಹಾಲ್‌ ಮಾರ್ಕ್‌ ಅನ್ನು ಮಾಡುವ ಸಂದರ್ಭ ಪ್ರತಿ ಆಭರಣಕ್ಕೂ ಇದನ್ನು ನೀಡಲಾಗುತ್ತದೆ. ಹಾಗೂ ಇದು ಪ್ರತಿಯೊಂದು ಆಭರಣಕ್ಕೂ ಭಿನ್ನವಾಗಿರುತ್ತದೆ. ಹಾಲ್‌ ಮಾರ್ಕಿಂಗ್‌ ಸೆಂಟರ್‌ನಲ್ಲಿ (Assaying & Hallmarking centre) ಹಾಲ್‌ ಮಾರ್ಕ್‌ ಗುರುತನ್ನು ಹಾಕಲಾಗುತ್ತದೆ. ಇಲಾಖೆಯ ಪ್ರಕಾರ ಹಾಲ್‌ ಮಾರ್ಕ್‌ ಗುರುತಿನಿಂದಾಗಿ ವೈಯಕ್ತಿಕ ಚಿನ್ನಾಭರಣವನ್ನು ಸುಲಭವಾಗಿ ಗುರುತಿಸಬಹುದು. ಪರಿಶುದ್ಧತೆಯನ್ನು ಅಳೆಯಲು ಇದುವೇ ಮಾನದಂಡ. ಗುಣಮಟ್ಟಕ್ಕೆ ಇದು ಖಾತರಿ ನೀಡುತ್ತದೆ.

HUID ಆಧರಿತ ಹಾಲ್‌ ಮಾರ್ಕ್‌ ಪದ್ಧತಿಯಲ್ಲಿ ತನ್ನಿಂತಾನೆ ಜ್ಯುವೆಲ್ಲರಿಗಳ ನೋಂದಣಿಯಾಗುತ್ತದೆ. ಚಿನ್ನದ ಮಾರಾಟದಲ್ಲಿ ಅಕ್ರಮ ನಡೆಯುವುದನ್ನು, ಗುಣಮಟ್ಟ ಮತ್ತು ಪಾರದರ್ಶಕತೆಯ ಕೊರತೆಯಾಗುವುದನ್ನು ಇದರಿಂದ ನಿವಾರಿಸಬಹುದು. ಹೀಗಾಗಿ ಇದು ಉದ್ದಿಮೆ ಮತ್ತು ಗ್ರಾಹಕ ಸ್ನೇಹಿ ನಿರ್ಧಾರ ಎಂದು ಸರ್ಕಾರ ತಿಳಿಸಿದೆ.

ಬ್ಯೂರೊ ಆಫ್‌ ಇಂಡಿಯನ್‌ ಸ್ಟ್ಯಾಂಡರ್ಸ್ಸ್‌ (Bureau of Indian Standards -BIS) ಮಾನ್ಯತೆ ಪಡೆದಿರುವ ಸಂಸ್ಥೆಯ ಮೂಲಕ ಹಾಲ್‌ ಮಾರ್ಕ್‌ ನೀಡುವುದರಿಂದ ಆಭರಣಗಳ ಗುಣಮಟ್ಟ ಮತ್ತು ಪರಿಶುದ್ಧತೆಯ ಖಾತರಿಗೆ ಸಹಾಯಕ. ಯಾವುದೇ ವಂಚನೆ ಆಗದಂತೆ ನೋಡಿಕೊಳ್ಳಲು ಹಾಲ್‌ ಮಾರ್ಕ್‌ ಅನ್ನು ಪರಿಶೀಲಿಸಿ ಆಭರಣಗಳನ್ನು ಖರೀದಿಸುವುದು ಸೂಕ್ತ.

ಹಾಲ್‌ ಮಾರ್ಕ್‌ನಲ್ಲಿ ಏನೇನಿದೆ?

ಬಿಐಎಸ್‌ ಹಾಲ್‌ ಮಾರ್ಕ್‌ನಲ್ಲಿ 3 ಸಂಕೇತಗಳು ಇರುತ್ತವೆ. BIS ಲೋಗೊ ಆಭರಣದ ಪರಿಶುದ್ಧತೆ ಗುಣಮಟ್ಟವನ್ನು ಖಾತರಿಪಡಿಸುತ್ತದೆ. ಯಾವುದೇ ಚಿನ್ನದ ಆಭರಣವು 100% ಬಂಗಾರದಲ್ಲಿ ತಯಾರಾಗುವುದಿಲ್ಲ. ಏಕೆಂದರೆ ಸ್ವತಃ ಚಿನ್ನ ಅತ್ಯಂತ ಮೆದು. ಆದ್ದರಿಂದ ಇತರ ಲೋಹಗಳನ್ನು ಸೇರಿಸಿ ಆಭರಣಗಳ ಆಕಾರವನ್ನು ನೀಡಬೇಕಾಗುತ್ತದೆ. ಹೆಚ್ಚು ಚಿನ್ನ ಇರುವ ಆಭರಣ ಹೆಚ್ಚು ದುಬಾರಿಯಾಗಿರುತ್ತದೆ.

ಹಾಲ್‌ ಮಾರ್ಕ್‌ ಆಭರಣಗಳಲ್ಲಿ ಮೂರು ವಿಧಗಳು ಇರುತ್ತವೆ. 22K916 ಎಂದರೆ 22 ಕ್ಯಾರಟ್‌ ಚಿನ್ನ ಮತ್ತು 91.6 ಪರ್ಸೆಂಟ್‌ ಬಂಗಾರ ಇರುತ್ತದೆ. 18K750 ಎಂದರೆ 18 ಕ್ಯಾರಟ್‌ ಚಿನ್ನ ಮತ್ತು 75 ಪರ್ಸೆಂಟ್‌ ಚಿನ್ನ ಇರುತ್ತದೆ. 14K585 ಎಂದರೆ 14 ಕ್ಯಾರಟ್‌ ಬಂಗಾರ ಮತ್ತು 58.5 ಪರ್ಸೆಂಟ್‌ ಬಂಗಾರ ಇರುತ್ತದೆ.

ಹಳೆಯ ಚಿನ್ನದ ಆಭರಣಗಳಿಗೆ ಹಾಲ್‌ ಮಾರ್ಕ್‌ ಪಡೆಯುವುದು ಹೇಗೆ?

ನಿಮ್ಮಲ್ಲಿ ಹಾಲ್‌ ಮಾರ್ಕ್‌ ಇಲ್ಲದಿರುವ ಹಳೆಯ ಆಭರಣಗಳು ಇವೆ ಎಂದಿಟ್ಟುಕೊಳ್ಳೋಣ. ಅವುಗಳಿಗೆ ಹಾಲ್‌ ಮಾರ್ಕ್‌ ಹೇಗೆ ಪಡೆಯಬಹುದು ಎನ್ನುತ್ತೀರಾ? ಅದಕ್ಕೂ ಅವಕಾಶ ಕಲ್ಪಿಸಲಾಗಿದೆ. ಬಿಐಎಸ್‌ ನೋಂದಾಯಿತ ಜ್ಯುವೆಲ್ಲರ್‌ ಅನ್ನು (BIS registered Jeweller) ನೀವು ಇದಕ್ಕಾಗಿ ಸಂಪರ್ಕಿಸಬಹುದು. ಅವರು ನಿಮ್ಮ ಆಭರಣಗಳನ್ನು ಬಿಐಎಸ್‌ ಮಾನ್ಯತೆ ಪಡೆದ A&H ಸೆಂಟರ್‌ನಲ್ಲಿ ಪರೀಕ್ಷಿಸಬಹುದು. ಅಲ್ಲಿ ಆಭರಣದ ಪರಿಶುದ್ಧತೆಯ ಅನುಸಾರ ಹಾಲ್‌ ಮಾರ್ಕ್‌ ಗುರುತನ್ನು ಪಡೆಯಬಹುದು. ಆದರೆ ಪರಿಶುದ್ಧತೆಯ ದರ್ಜೆಯನ್ನು ಆಭರಣ ಹೊಂದಿರಬೇಕು. ಚಿನ್ನದ ಶುದ್ಧತೆ ಪರಿಶೀಲನೆಗೆ 200 ರೂ. ಶುಲ್ಕವಾಗುತ್ತದೆ. ಗ್ರಾಹಕರು ನೇರವಾಗಿ Assaying and Hallmarking Centre ಅನ್ನು ಸಂಪರ್ಕಿಸಿ ಚಿನ್ನಕ್ಕೆ ಹಾಲ್‌ ಮಾರ್ಕ್‌ ಪಡೆಯಲು ಆಗುವುದಿಲ್ಲ. ಬಿಐಎಸ್‌ ನೋಂದಾಯಿತ ಜ್ಯುವೆಲ್ಲರ್‌ ಮೂಲಕ ಇದು ನಡೆಯಬೇಕಾಗುತ್ತದೆ.

ಹಾಲ್‌ ಮಾರ್ಕ್‌ನಿಂದ ಲಾಭವೇನು?

ಗ್ರಾಹಕರಿಗೆ ಚಿನ್ನದ ಗುಣಮಟ್ಟದ ಬಗ್ಗೆ ಯಾವುದೇ ಆತಂಕ ಇರುವುದಿಲ್ಲ. ಹಾಲ್‌ ಮಾರ್ಕ್‌ ಇರುವ ಚಿನ್ನದ ಮರು ಮಾರಾಟದ ವೇಳೆ ಆಗಿನ ದರ ಸಿಗುತ್ತದೆ. ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ಇದರ ಆಧಾರದಲ್ಲಿ ಸುಲಭವಾಗಿ ಸಾಲ ನೀಡುತ್ತವೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮನಿ-ಗೈಡ್

Money Guide: ಸಾಲಕ್ಕೆ ಅಪ್ಲೈ ಮಾಡುವ ಮುನ್ನ ಈ ಅಂಶ ನಿಮಗೆ ತಿಳಿದಿರಲೇ ಬೇಕು

Money Guide: ಈ ದುಬಾರಿ ದುನಿಯಾದಲ್ಲಿ, ಬೆಲೆ ಏರಿಕೆಯ ಈ ದಿನಗಳಲ್ಲಿ ಐಷಾರಾಮಿ ಬಿಡಿ ತೀರಾ ಅಗತ್ಯ ವಸ್ತುಗಳನ್ನು ಕೊಳ್ಳಲೂ ಸಾಲ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಅದಕ್ಕೆ ತಕ್ಕಂತೆ ವಿವಿಧ ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳು ಸರಳ ವಿಧಾನಗಳ ಮೂಲ ಲೋನ್‌ ನೀಡಲು ಮುಂದೆ ಬರುತ್ತಿವೆ. ನೆನಪಿಡಿ ತೀರಾ ಅನಿವಾರ್ಯವಲ್ಲದ ಹೊರತು ಸಾಲಕ್ಕೆ ಮುಂದಾಗಬೇಡಿ. ಸಾಲಕ್ಕೆ ಅರ್ಜಿ ಸಲ್ಲಿಸುವ ಮುನ್ನ ಯಾವೆಲ್ಲ ಅಂಶಗಳನ್ನು ಗಮನಿಸಬೇಕು ಎನ್ನುವ ವಿವರ ಇಲ್ಲಿದೆ.

VISTARANEWS.COM


on

Money Guide
Koo

ಬೆಂಗಳೂರು: ʼಸಾಲ ಮಾಡಿಯಾದ್ರೂ ತುಪ್ಪ ತಿನ್ನುʼ ಎನ್ನುವ ಗಾದೆ ಮಾತಿದೆ. ಅಂದರೆ ಐಷಾರಾಮಿ ಬುದುಕು ಬೇಕೆಂದಿದ್ದರೆ ಸಾಲ ಮಾಡಬೇಕಾಗುತ್ತದೆ ಎನ್ನುವ ಅರ್ಥದಲ್ಲಿ ಹಿರಿಯರು ಈ ಮಾತನ್ನು ಹೇಳಿದ್ದರು. ಆದರೆ ಈ ದುಬಾರಿ ದುನಿಯಾದಲ್ಲಿ, ಬೆಲೆ ಏರಿಕೆಯ ಈ ದಿನಗಳಲ್ಲಿ ಐಷಾರಾಮಿ ಬಿಡಿ ತೀರಾ ಅಗತ್ಯ ವಸ್ತುಗಳನ್ನು ಕೊಳ್ಳಲೂ ಸಾಲ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಅದಕ್ಕೆ ತಕ್ಕಂತೆ ವಿವಿಧ ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳು ಸರಳ ವಿಧಾನಗಳ ಮೂಲ ಲೋನ್‌ ನೀಡಲು ಮುಂದೆ ಬರುತ್ತಿವೆ. ನೆನಪಿಡಿ ತೀರಾ ಅನಿವಾರ್ಯವಲ್ಲದ ಹೊರತು ಸಾಲಕ್ಕೆ ಮುಂದಾಗಬೇಡಿ. ಇಂದಿನ ಮನಿಗೈಡ್‌ (Money Guide)ನಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸುವ ಮುನ್ನ ಯಾವೆಲ್ಲ ಅಂಶಗಳನ್ನು ಗಮನಿಸಬೇಕು ಎನ್ನುವುದನ್ನು ನೋಡೋಣ.

ಅಗತ್ಯ ನೋಡಿಕೊಳ್ಳಿ

ಮೊದಲಿನಂತೆ ಈಗ ಸಾಲ ಪಡೆದುಕೊಳ್ಳಲು ಅನೇಕ ಬಾರಿ ಬ್ಯಾಂಕ್‌ ಬಾಗಿಲಿಗೆ ಓಡಾಡಬೇಕಿಲ್ಲ, ದಿನಗಟ್ಟಲೆ ಕಾಯಬೇಕಾಗಿಲ್ಲ. ಅಗತ್ಯ ಡಾಕ್ಯುಮೆಂಟ್‌ ಹಾಜರುಪಡಿಸಿ ಆನ್‌ಲೈನ್‌ನಲ್ಲೇ, ಮನೆಯಲ್ಲಿ ಕುಳಿತು ಲೋನ್‌ಗೆ ಅಪ್ಲೈ ಮಾಡಬಹುದು. ಹಾಗಂತ ಸುಲಭವಾಗಿ ದೊರೆಯುತ್ತದೆ ಎನ್ನುವ ಕಾರಣಕ್ಕ ತೀರಾ ಸಣ್ಣ ಪುಟ್ಟ ವಿಚಾರಕ್ಕೂ ಸಾಲ ಮಾಡಬೇಡಿ. ತೀರಾ ಅನಿವಾರ್ಯವಲ್ಲದೆ ಹೊರತು ಲೋನ್‌ ತೆರೆಗೆದುಕೊಳ್ಳಲೇಬೇಡಿ. ಸಾಲ ಮಾಡಬೇಕಾ ಎನ್ನುವ ಬಗ್ಗೆ ಒಂದಲ್ಲ ನೂರಾರು ಬಾರಿ ಆಲೋಚಿಸಿ. ಮನೆಯ ಇತರ ಸದಸ್ಯರು, ಸ್ನೇಹಿತರ ಜತೆ ಚರ್ಚಿಸಿ. ಬೇಕೇ ಬೇಕೆ ಎಂದಾದರೆ ಮಾತ್ರ ಸಾಲಕ್ಕೆ ಅರ್ಜಿ ಸಲ್ಲಿಸಿ. ಸಾಧ್ಯವಾದಷ್ಟು ಹಾಸಿಗೆ ಇದ್ದಷ್ಟೇ ಕಾಲು ಚಾಚು ಪಾಲಿಸಿ ಫಾಲೋ ಮಾಡಿ.

ಕಡಿಮೆ ಅವಧಿಯನ್ನು ಅಯ್ದುಕೊಳ್ಳಿ

ಸರಿ, ನೀವು ಸಾಲ ಪಡೆದುಕೊಳ್ಳಲೇ ಬೇಕು ಎನ್ನುವ ತೀರ್ಮಾನಕ್ಕೆ ಬಂದಿದ್ದೀರಿ ಎಂದಿಟ್ಟುಕೊಳ್ಳೋಣ. ಈಗ ನೀವು ಗಮನಿಸಬೇಕಾದ ಇನ್ನೊಂದು ಮುಖ್ಯ ಅಂಶ ಎಂದರೆ ಸಾಲದ ಅವಧಿ. ಅಂದರೆ ನೀವು ಸಾಲ ತೀರಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತೀರಿ ಎನ್ನುವುದು ಕೂಡ ನಿಮ್ಮ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ. ಅಂದರೆ ಅವಧಿ ದೀರ್ಘವಾಗದ್ದಷ್ಟು ಬಡ್ಡಿ ಹೆಚ್ಚಾಗುತ್ತದೆ. ಆದ್ದರಿಂದ ಕಡಿಮೆ ಅವಧಿಯ ಸಾಲ ಮರುಪಾವತಿ ಆಯ್ಕೆಯನ್ನು ಆಯ್ದುಕೊಳ್ಳಿ. ಉದಾಹರಣೆಗೆ: ಹೋಮ್‌ ಲೋನ್‌ನ ಅವಧಿ ಗರಿಷ್ಠ 30 ವರ್ಷ ತನಕ ಇರುತ್ತದೆ. ಸಹಜವಾಗಿ ದೀರ್ಘ ಅವಧಿ ಹೊಂದಿದ್ದರೆ ಇಎಂಐ ಪಾವತಿಸಬೇಕಾದ ಮೊತ್ತವೂ ಕಡಿಮೆ ಇರುತ್ತದೆ. ಆದರೆ ನೀವು ಪಾವತಿಸಬೇಕಾದ ಬಡ್ಡಿಯ ಮೊತ್ತ ಹೆಚ್ಚಿರುತ್ತದೆ. 10 ವರ್ಷಗಳ ಸಾಲಕ್ಕೆ ನೀವು ಪಡೆದ ಮೊತ್ತದ ಜತೆಗೆ ಅದರ ಶೇ. 57ರಷ್ಟು ಬಡ್ಡಿ ಪಾವತಿಸಬೇಕು. ಇನ್ನು 20 ವರ್ಷಕ್ಕೆ ಇದೇ ಮೊತ್ತ ಶೇ. 128. ಒಂದುವೇಳೆ ನೀವು 50 ಲಕ್ಷ ರೂ. ಸಾಲವನ್ನು 25 ವರ್ಷಗಳ ಅವಧಿಗೆ ಪಡೆದುಕೊಂಡರೆ ನೀವು ಸುಮಾರು 83.5 ಲಕ್ಷ ರೂ. (ಶೇ. 167) ಪಾವತಿಸಬೇಕಾಗುತ್ತದೆ.

ಕೆಲವು ಸಂದರ್ಭದಲ್ಲಿ ಕಡಿಮೆ ಆದಾಯ ಹೊಂದಿದ್ದರೆ ದೀರ್ಘ ಅವಧಿಯ ಮರುಪಾವತಿಯನ್ನು ಆಯ್ದುಕೊಳ್ಳುವುದು ಅನಿವಾರ್ಯವಾಗುತ್ತದೆ. ಇದನ್ನು ಆಯ್ದುಕೊಂಡಿದ್ದರೂ ಪ್ರತಿವರ್ಷ ಸಾಲ ಮರುಪಾವತಿಸುವ ಆಯ್ಕೆಯನ್ನು ಹೆಚ್ಚಿಸಬೇಕು. ಆದಾಯ ಹೆಚ್ಚುತ್ತಿದ್ದಂತೆ ಇಎಂಐ ಮೊತ್ತವನ್ನೂ ಜಾಸ್ತಿ ಮಾಡಬೇಕು.

ನಿಯಮಿತ ಪಾವತಿ

ಇಎಂಐಯನ್ನು ನಿಯಮಿತವಾಗಿ ಪಾವತಿಸಿ. ಯಾವುದೇ ಕಾರಣಕ್ಕೂ ಇದನ್ನು ತಪ್ಪಿಸಬೇಡಿ. ಮರುಪಾವತಿ ಕಂತು ಸೂಕ್ತವಾಗಿ ಪಾವತಿಸದಿದ್ದರೆ ಅದು ನಿಮ್ಮ ಕ್ರೆಡಿಟ್‌ ಸ್ಕೋರ್‌ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅಲ್ಲದೆ ಇದು ಭಾರೀ ದಂಡಕ್ಕೂ ಕಾರಣವಾಗಬಹುದು.

ಹೂಡಿಕೆಗಾಗಿ ಸಾಲ ಮಾಡಬೇಡಿ

ಸಾಲ ಪಡೆದ ಹಣವನ್ನು ಹೂಡಿಕೆ ಮಾಡಲು ಎಂದಿಗೂ ಬಳಸಬೇಡಿ. ಈಕ್ವಿಟಿಗಳಂತಹ ಹೆಚ್ಚಿನ ಆದಾಯವನ್ನು ನೀಡುವ ಹೂಡಿಕೆಗಳು ತುಂಬಾ ಅಸ್ಥಿರವಾಗಿರುತ್ತವೆ. ಮಾರುಕಟ್ಟೆಗಳು ಕುಸಿದರೆ, ನೀವು ನಷ್ಟವನ್ನು ಅನುಭವಿಸಬೇಕಾಗುತ್ತದೆ.

ದೊಡ್ಡ ಮೊತ್ತದ ಸಾಲಕ್ಕೆ ವಿಮೆ ಮಾಡಿಸಿ

ಹೋಮ್‌ ಲೋನ್‌ ಮತ್ತು ವೆಹಿಕಲ್‌ ಲೋನ್‌ನಂತಗ ದೊಡ್ಡ ಮೊತ್ತದ ಸಾಲ ಪಡೆಯುವಾಗ ಅಷ್ಟೂ ಮೊತ್ತಕ್ಕೆ ವಿಮೆ ಮಾಡಿಸಿ. ಇದಕ್ಕಾಗಿ ಟರ್ಮ್‌ ಇನ್ಶೂರೆನ್ಸ್‌ ಉತ್ತಮ. ಇದರಿಂದ ಒಂದು ವೇಳೆ ನಿಮಗೆ ಏನಾದರೂ ಸಂಭವಿಸಿದರೆ ಸಾಲವು ನಿಮ್ಮ ಕುಟುಂಬ ಹೊರೆ ಆಗುವುದಿಲ್ಲ. ಇಎಂಐ ಪಾವತಿಸಲು ಸಾಧ್ಯವಾಗದಿದ್ದರೆ ಬ್ಯಾಂಕ್‌ನವರು ಮನೆ ಅಥವಾ ಕಾರು ಸ್ವಾಧೀನಪಡಿಸಿಕೊಳ್ಳುತ್ತಾರೆ. ಹೀಗಾಗಿ 50 ಲಕ್ಷ ರೂ.ಗಳ ಟರ್ಮ್ ಇನ್ಶೂರೆನ್ಸ್ ಯೋಜನೆ ಮಾಡಿಸುವುದು ಉತ್ತಮ ಎಂದು ಆರ್ಥಿಕ ತಜ್ಞರು ಸಲಹೆ ನೀಡುತ್ತಾರೆ.

ಬಡ್ಡಿ ಮೊತ್ತ ಲೆಕ್ಕ ಹಾಕಿ

ಸಾಲ ಪಡೆದುಕೊಳ್ಳಲು ನಿರ್ಧರಿಸಿದ ಬಳಿಕ ಬಡ್ಡಿದರವನ್ನು ಹೋಲಿಸಿ ನೋಡಿ. ವಿವಿಧ ಬ್ಯಾಂಕ್‌, ಸಾಲದಾತ ಸಂಸ್ಥೆಗಳ ಬಡ್ಡಿದರವನ್ನು ಗಮನಿಸಿ. ಜತೆಗೆ ಪ್ರತಿಯೊಂದು ಬ್ಯಾಂಕ್‌ ಕೂಡ ತನ್ನದೇ ಆದ ನಿಯಮಗಳನ್ನು ಹೊಂದಿರುತ್ತದೆ. ಆದ್ದರಿಂದ ಷರತ್ತುಗಳನ್ನು ಗಮನವಿಟ್ಟು ಓದಿ. ಅರ್ಜಿ ಶುಲ್ಕ ಇತ್ಯಾದಿ ವಿವರಗಳನ್ನು ಕೇಳಿ ತಿಳಿದುಕೊಳ್ಳಿ.

ಅಗತ್ಯ ದಾಖಲೆಗಳನ್ನು ಮುಂಚಿತವಾಗಿ ಸಿದ್ಧಪಡಿಸಿ

ತ್ವರಿತ ಲೋನ್ ಮಂಜೂರಾತಿಗಾಗಿ ಮುಂಚಿತವಾಗಿ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸುವುದು ಅತ್ಯಗತ್ಯ. ಸಾಮಾನ್ಯವಾಗಿ ಆಧಾರ್ ಕಾರ್ಡ್, ಪಾಸ್‌ಪೋರ್ಟ್‌, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಮತದಾರರ ಗುರುತಿನ ಚೀಟಿ ಮತ್ತು ಎರಡು ವರ್ಷಗಳ ಆದಾಯ ತೆರಿಗೆ ರಿಟರ್ನ್ (ಐಟಿಆರ್)ನಂತಹ ಗುರುತಿನ ಪುರಾವೆಗಳನ್ನು ಬ್ಯಾಂಕ್‌ಗಳು ಕೇಳುತ್ತವೆ. ಈ ದಾಖಲೆಗಳನ್ನು ಎಷ್ಟು ಬೇಗ ಸಲ್ಲಿಸುತ್ತೀರೋ ಅಷ್ಟು ಬೇಗ ಸಾಲ ಮಂಜೂರಾಗುತ್ತದೆ. ಜತೆಗೆ ಆದಾಯದ ಮೂಲ (ಸ್ಯಾಲರಿ ಸ್ಲಿಪ್‌ ಅಥವಾ ಬ್ಯಾಂಕ್‌ ಸ್ಟೇಟ್‌ಮೆಂಟ್‌) ಸಿದ್ಧವಾಗಿಟ್ಟುಕೊಳ್ಳಿ.

ಅರ್ಜಿ ಸಲ್ಲಿಸುವ ಮುನ್ನ ಮತ್ತೊಮ್ಮೆ ಗಮನಿಸಿ

ಭರ್ತಿ ಮಾಡಿದ ನಿಮ್ಮ ಪರ್ಸನಲ್‌ ಲೋನ್‌ ಅಪ್ಲಿಕೇಷನ್‌ ಫಾರಂ ಅನ್ನು ಕೂಡಲೇ ಸಲ್ಲಿಸಬೇಡಿ. ಮತ್ತೊಮ್ಮೆ ವಿವರಗಳನ್ನು ಕಣ್ಣಾಡಿಸಿ ಮಾಹಿತಿ ಸರಿಯಾಗಿದೆ ಎನ್ನುವುದು ಖಚಿತಪಡಿಸಿಕೊಳ್ಳಿ. ಕೆಲವೊಂದು ಬ್ಯಾಂಕ್‌ಗಳು ಡಾಕ್ಯಮೆಂಟ್‌ ಅಪ್‌ಲೋಡ್‌ ಮಾಡಲು ಕೇಳುತ್ತವೆ. ಇದನ್ನೂ ಗಮನಿಸಿ. ಪೂರ್ಣವಾಗದ ಅರ್ಜಿ ತಿರಸ್ಕೃತವಾಗುವ ಸಾಧ್ಯತೆ ಇದೆ. ಹೀಗಾಗಿ ಷರತ್ತುಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ.

ಇದನ್ನೂ ಓದಿ: Money Guide: 30 ಸಾವಿರ ಸಂಬಳ ಪಡೆಯುವವರೂ ಕೆಲವೇ ವರ್ಷಗಳಲ್ಲಿ ಕೋಟ್ಯಧಿಪತಿ ಆಗಲು ಸಾಧ್ಯ!

Continue Reading

ವಾಣಿಜ್ಯ

Income Tax Returns: ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡದಿದ್ದರೆ ಏನಾಗುತ್ತದೆ?

ಆರ್ಥಿಕ ಮೌಲ್ಯಮಾಪನ ವರ್ಷ 2024- 25 ಅಥವಾ ಹಣಕಾಸು ವರ್ಷ 2023- 24 ಕ್ಕಾಗಿ ಆದಾಯ ತೆರಿಗೆ ರಿಟರ್ನ್ಸ್ ಅನ್ನು ಸಲ್ಲಿಸಬೇಕೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಆದಾಯ ತೆರಿಗೆ ನಿಯಮಗಳ ಬಗ್ಗೆ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಈ ವರ್ಷ ಆದಾಯ ತೆರಿಗೆ ರಿಟರ್ನ್ಸ್ (Income Tax Returns) ಅನ್ನು ಸಲ್ಲಿಸುವ ಅಗತ್ಯವಿದೆಯೇ ಎಂಬುದನ್ನು ನೀವು ನಿರ್ಧರಿಸಲು ಬೇಕಾದ ಸಮಗ್ರ ಮಾಹಿತಿ ಇಲ್ಲಿದೆ.

VISTARANEWS.COM


on

By

Income Tax Returns
Koo

ಪ್ರತಿ ವರ್ಷ ಆದಾಯ ತೆರಿಗೆ ವಿವರ (Income Tax Returns) ಸಲ್ಲಿಸುತ್ತಿದ್ದರೂ ಇನ್ನೂ ಹಲವಾರು ಗೊಂದಲಗಳು ನಮ್ಮನ್ನು ಕಾಡುತ್ತಿರುತ್ತವೆ. ಮುಖ್ಯವಾಗಿ ಪ್ರತಿ ವರ್ಷ ಆದಾಯ ತೆರಿಗೆ (Income Tax) ವಿವರವನ್ನು ಸಲ್ಲಿಸಲೇಬೇಕೇ ? ಎನ್ನುವುದು. ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸುವುದು ಅನೇಕ ಭಾರತೀಯ (Indian’s) ತೆರಿಗೆದಾರರ (taxpayers) ಕರ್ತವ್ಯವಾಗಿದೆ.

ಆರ್ಥಿಕ ಮೌಲ್ಯಮಾಪನ ವರ್ಷ 2024- 25 ಅಥವಾ ಹಣಕಾಸು ವರ್ಷ 2023- 24 ಕ್ಕಾಗಿ ಆದಾಯ ತೆರಿಗೆ ರಿಟರ್ನ್ಸ್ ಅನ್ನು ಸಲ್ಲಿಸಬೇಕೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಆದಾಯ ತೆರಿಗೆ ನಿಯಮಗಳ ಬಗ್ಗೆ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಈ ವರ್ಷ ಆದಾಯ ತೆರಿಗೆ ರಿಟರ್ನ್ಸ್ ಅನ್ನು ಸಲ್ಲಿಸುವ ಅಗತ್ಯವಿದೆಯೇ ಎಂಬುದನ್ನು ನೀವು ನಿರ್ಧರಿಸಲು ಬೇಕಾದ ಸಮಗ್ರ ಮಾಹಿತಿ ಇಲ್ಲಿದೆ.

ಆದಾಯದ ಮಿತಿಗಳು

ಆದಾಯ ತೆರಿಗೆ ರಿಟರ್ನ್ಸ್ ಅನ್ನು ಸಲ್ಲಿಸುವ ಪ್ರಾಥಮಿಕ ಮಾನದಂಡವು ಆದಾಯದ ಮಟ್ಟವನ್ನು ಆಧರಿಸಿದೆ. ಆರ್ಥಿಕ ವರ್ಷ 2024- 25ರ ಆದಾಯ ಮಿತಿಗಳು ಈ ಕೆಳಗಿನಂತಿವೆ.

60 ವರ್ಷಕ್ಕಿಂತ ಕೆಳಗಿನ ವ್ಯಕ್ತಿಗಳು ಒಟ್ಟು ಆದಾಯ 2.5 ಲಕ್ಷ ರೂ., 60- 80 ವರ್ಷದ ಹಿರಿಯ ನಾಗರಿಕರ ಒಟ್ಟು ಆದಾಯ 3 ಲಕ್ಷ ರೂ., 80 ವರ್ಷ ಮೇಲ್ಪಟ್ಟ ಸೂಪರ್ ಸೀನಿಯರ್ ಸಿಟಿಜನ್ಸ್ ಒಟ್ಟು ಆದಾಯ 5 ಲಕ್ಷ ರೂ. ಗಳಿದ್ದರೆ ಸೆಕ್ಷನ್ 80C ನಿಂದ 80U ವರೆಗಿನ ಕಡಿತಗಳ ಮೊದಲು ನಿಮ್ಮ ಒಟ್ಟು ಆದಾಯವು ಈ ಮಿತಿಗಳನ್ನು ಮೀರಿದರೆ ಆದಾಯ ತೆರಿಗೆ ರಿಟರ್ನ್ಸ್ ಅನ್ನು ಸಲ್ಲಿಸಬೇಕು.

ಆದಾಯದ ವಿಧಗಳು

ಮೂಲ ಆದಾಯದ ಮಿತಿಗಳನ್ನು ಮೀರಿ ಆದಾಯ ತೆರಿಗೆ ರಿಟರ್ನ್ಸ್ ಅನ್ನು ಸಲ್ಲಿಸುವ ಅಗತ್ಯವು ವಿವಿಧ ರೀತಿಯ ಆದಾಯಗಳಿಗೆ ವಿಸ್ತರಿಸುತ್ತದೆ. ಇದರರ್ಥ ಕೆಳಗಿನ ಆದಾಯವನ್ನು ವರ್ಷವಿಡೀ ನಿಮ್ಮ ಆದಾಯವೆಂದು ಪರಿಗಣಿಸಲಾಗುತ್ತದೆ.

ಸಂಬಳ ಪಡೆಯುವ ವ್ಯಕ್ತಿಗಳು ನಿಗದಿತ ಮಿತಿಯನ್ನು ಮೀರಿದ ಸಂಬಳದಿಂದ ಬರುವ ಆದಾಯ, ಮನೆ ಆಸ್ತಿಯಿಂದ ಬಾಡಿಗೆ ಅಥವಾ ಇತರ ಆದಾಯ, ಆಸ್ತಿ, ಷೇರುಗಳು, ಮ್ಯೂಚುಯಲ್ ಫಂಡ್ಗಳು ಇತ್ಯಾದಿಗಳ ಮಾರಾಟದಿಂದ ಗಳಿಕೆಗಳು, ವ್ಯಾಪಾರ ಅಥವಾ ವೃತ್ತಿಪರ ಚಟುವಟಿಕೆಗಳಿಂದ ಆದಾಯ, ಬಡ್ಡಿ, ಲಾಭಾಂಶಗಳು, ಲಾಟರಿಗಳಿಂದ ಗೆಲುವುಗಳು ಇತ್ಯಾದಿಗಳಿಂದ ಬರುವ ಆದಾಯ.

ಷರತ್ತುಗಳು

ಆದಾಯವು ಮಿತಿಗಿಂತ ಕೆಳಗಿದ್ದರೂ ಕೆಲವು ಷರತ್ತುಗಳಿಗಾಗಿ ಆದಾಯ ತೆರಿಗೆ ರಿಟರ್ನ್ಸ್ ಅನ್ನು ಸಲ್ಲಿಸುವ ಅಗತ್ಯವಿದೆ.

ಚಾಲ್ತಿ ಖಾತೆಗಳಿಗೆ, ಒಂದು ಅಥವಾ ಹೆಚ್ಚಿನ ಬ್ಯಾಂಕ್ ಖಾತೆಗಳಲ್ಲಿ 1 ಕೋಟಿ ರೂ. ಉಳಿತಾಯ ಖಾತೆಗಳಿಗೆ, 50 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಠೇವಣಿ, ವಿದೇಶಿ ಪ್ರಯಾಣಕ್ಕೆ 2 ಲಕ್ಷ ರೂ. ವೆಚ್ಚ, ವಿದ್ಯುತ್ ಬಿಲ್‌ಗಳ ಮೇಲೆ ರೂ 1 ಲಕ್ಷಕ್ಕಿಂತ ಹೆಚ್ಚಿನ ಪಾವತಿಗಳು, ಹೆಚ್ಚುವರಿಯಾಗಿ ವಿದೇಶಿ ಆಸ್ತಿ ಅಥವಾ ಆದಾಯವನ್ನು ಹೊಂದಿದ್ದರೆ ಅಥವಾ ಭಾರತದ ಹೊರಗಿನ ಯಾವುದೇ ಖಾತೆಯಲ್ಲಿ ಸಹಿ ಮಾಡುವ ಅಧಿಕಾರವನ್ನು ಹೊಂದಿದ್ದರೆ ಆದಾಯದ ಮಟ್ಟವನ್ನು ಲೆಕ್ಕಿಸದೆ ಆದಾಯ ತೆರಿಗೆ ರಿಟರ್ನ್ಸ್ ಅನ್ನು ಸಲ್ಲಿಸಬೇಕು.

ಹೂಡಿಕೆ ಲಾಭ ಮತ್ತು ನಷ್ಟ

ಸ್ಟಾಕ್‌, ಮ್ಯೂಚುವಲ್ ಫಂಡ್‌ ಅಥವಾ ಇತರ ಸೆಕ್ಯುರಿಟಿಗಳಲ್ಲಿನ ಹೂಡಿಕೆದಾರರು ಐಟಿಆರ್ ಅನ್ನು ಫೈಲ್ ಮಾಡಬೇಕಾಗುತ್ತದೆ. ಅಲ್ಪಾವಧಿಯ ಅಥವಾ ದೀರ್ಘಾವಧಿಯ ಬಂಡವಾಳ ಲಾಭವನ್ನು ಗಳಿಸುತ್ತಿದ್ದರೆ, 10 ಲಕ್ಷದವರೆಗೆ ತೆರಿಗೆ-ಮುಕ್ತವಾಗಿದ್ದರೂ ಸಹ ಲಾಭಾಂಶವನ್ನು ಸ್ವೀಕರಿಸಿದ್ದರೆ, ಹೂಡಿಕೆಯ ನಷ್ಟವನ್ನು ವರದಿ ಮಾಡುವುದು ಸಹ ನಿರ್ಣಾಯಕವಾಗಿದೆ. ಏಕೆಂದರೆ ಇದು ಭವಿಷ್ಯದ ಲಾಭಗಳನ್ನು ಸರಿದೂಗಿಸಲು ನಷ್ಟವನ್ನು ಮುಂದಕ್ಕೆ ಸಾಗಿಸಲು ಅನುವು ಮಾಡಿಕೊಡುತ್ತದೆ. ಅನಂತರದ ವರ್ಷಗಳಲ್ಲಿ ನಿಮ್ಮ ತೆರಿಗೆ ಹೊಣೆಗಾರಿಕೆಯನ್ನು ಕಡಿಮೆ ಮಾಡುತ್ತದೆ.

ಮರುಪಾವತಿಗಳಿಗಾಗಿ ಕ್ಲೈಮ್

ತೆರಿಗೆ ಕಡಿತಗೊಳಿಸಲಾದ (ಟಿಡಿಎಸ್) ಅಥವಾ ಮುಂಗಡ ತೆರಿಗೆಯ ಮೂಲಕ ನೀವು ಹೆಚ್ಚುವರಿ ತೆರಿಗೆಯನ್ನು ಪಾವತಿಸಿದ್ದರೆ, ಮರುಪಾವತಿಯನ್ನು ಕ್ಲೈಮ್ ಮಾಡಲು ಐಟಿಆರ್ ಅನ್ನು ಸಲ್ಲಿಸುವುದು ಅವಶ್ಯಕ. ಸಲ್ಲಿಸದೆಯೇ, ಪಾವತಿಸಿದ ಹೆಚ್ಚುವರಿ ತೆರಿಗೆಯನ್ನು ಮರುಪಡೆಯಲು ಸಾಧ್ಯವಿಲ್ಲ.

ಯಾರಿಗೆ ಕಡ್ಡಾಯ?

ಆದಾಯದ ಮಟ್ಟವನ್ನು ಲೆಕ್ಕಿಸದೆ ಕೆಲವು ವರ್ಗದ ವ್ಯಕ್ತಿಗಳು ಮತ್ತು ಘಟಕಗಳು ಆದಾಯ ತೆರಿಗೆ ರಿಟರ್ನ್ಸ್ ಅನ್ನು ಸಲ್ಲಿಸಲು ಕಡ್ಡಾಯವಾಗಿ ಅಗತ್ಯವಿದೆ.

ಎಲ್ಲಾ ಕಂಪೆನಿ, ಸಂಸ್ಥೆಗಳು ಆದಾಯ ಅಥವಾ ನಷ್ಟವನ್ನು ಲೆಕ್ಕಿಸದೆ ಆದಾಯ ತೆರಿಗೆ ಸಲ್ಲಿಸಲೇಬೇಕು.
ಚಾರಿಟಬಲ್ ಟ್ರಸ್ಟ್‌ಗಳು ಮತ್ತು ಧಾರ್ಮಿಕ ಸಂಸ್ಥೆಗಳು ಸೆಕ್ಷನ್ 10 ರ ಅಡಿಯಲ್ಲಿ ವಿನಾಯಿತಿಯನ್ನು ಕ್ಲೈಮ್ ಮಾಡುತ್ತಿದ್ದರೆ ಆದಾಯ ತೆರಿಗೆ ಸಲ್ಲಿಸಬೇಕು.

ಇದನ್ನೂ ಓದಿ: PAN Card Safety: ಪಾನ್ ಕಾರ್ಡ್ ದುರ್ಬಳಕೆಯಿಂದ ಪಾರಾಗುವುದು ಹೇಗೆ?

ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡದಿದ್ದರೆ ಏನಾಗುತ್ತದೆ?

ಆದಾಯ ತೆರಿಗೆ ರಿಟರ್ನ್ಸ್ ಅನ್ನು ಸಲ್ಲಿಸಲು ವಿಫಲವಾದರೆ ದಂಡ ಮತ್ತು ಕಾನೂನು ಕ್ರಮಕ್ಕೆ ಕಾರಣವಾಗಬಹುದು. ತಡವಾಗಿ ಫೈಲಿಂಗ್ ಮಾಡಿದರೆ ದಂಡ ವಿಧಿಸಲಾಗುತ್ತದೆ. ನಿಗದಿತ ದಿನಾಂಕದ ಅನಂತರ ಆದರೆ ಮೌಲ್ಯಮಾಪನ ವರ್ಷದ ಡಿಸೆಂಬರ್ 31 ರ ಮೊದಲು ಸಲ್ಲಿಸಿದರೆ 5,000 ರೂ. ದಂಡ ಮತ್ತು ಅನಂತರ ಸಲ್ಲಿಸಿದರೆ ದಂಡ ಮೊತ್ತ ಹೆಚ್ಚಾಗುತ್ತದೆ. ಬಾಕಿ ಮೊತ್ತದ ಮೇಲಿನ ಬಡ್ಡಿ, ನಿಗದಿತ ದಿನಾಂಕದಿಂದ ಮಾಸಿಕವಾಗಿ ಲೆಕ್ಕಹಾಕಲಾಗುತ್ತದೆ.

ತೀವ್ರತರವಾದ ಪ್ರಕರಣಗಳಲ್ಲಿ ಪಾಲಿಸದಿರುವುದು ಕಾನೂನು ಕ್ರಮಕ್ಕೆ ಕಾರಣವಾಗಬಹುದು. ಮೂರು ತಿಂಗಳಿಂದ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದು.

Continue Reading

ಮನಿ-ಗೈಡ್

Money Guide: 30 ಸಾವಿರ ಸಂಬಳ ಪಡೆಯುವವರೂ ಕೆಲವೇ ವರ್ಷಗಳಲ್ಲಿ ಕೋಟ್ಯಧಿಪತಿ ಆಗಲು ಸಾಧ್ಯ!

ತಿಂಗಳಿಗೆ ಇರುವುದು ಕೇವಲ 25 ರಿಂದ 30 ಸಾವಿರ ಸಂಬಳ. ಇನ್ನು ಕೋಟ್ಯಧಿಪತಿ ಆಗುವುದು ಕನಸಿನ ಮಾತು ಎಂದು ನಿರಾಶೆಗೆ ಒಳಗಾಗುವರೇ ಹೆಚ್ಚು. ಆದರೆ ಮನಸ್ಸು ಮಾಡಿದರೆ ಕಡಿಮೆ ಸಂಬಳವಿದ್ದರೂ ಸರಿಯಾದ ಯೋಜನೆ (Money Guide) ಹಾಕಿಕೊಂಡರೆ ಕೆಲವೇ ವರ್ಷಗಳಲ್ಲಿ ಕೋಟ್ಯಾಧಿಪತಿಗಳಾಗಬಹುದು. ಕಡಿಮೆ ಸಂಬಳ ಇರುವವರೂ ಹೆಚ್ಚು ಸಂಪಾದನೆ ಮಾಡಲು ಸಾಧ್ಯವಿದೆ. ಅದಕ್ಕಾಗಿ ಇಲ್ಲಿದೆ ಕೆಲವು ಉಪಯುಕ್ತ ಟಿಪ್ಸ್.

VISTARANEWS.COM


on

By

Money Guide
Koo

ಕೋಟ್ಯಧಿಪತಿ (Crorepati) ಆಗುವ ಕನಸು (dream) ಪ್ರತಿಯೊಬ್ಬರಿಗೂ ಇದೆ. ಆದರೆ ಬರುವ ಸಂಬಳ (salary) ಮನೆ ಖರ್ಚಿಗೂ ಸಾಲುವುದಿಲ್ಲ ಎಂದು ದುಃಖಿಸುವವರೇ ಹೆಚ್ಚು. ಆದರೆ ಸರಿಯಾದ ಯೋಜನೆ (Money Guide ) ರೂಪಿಸಿಕೊಂಡರೆ ಇದು ಕಷ್ಟವೇನಲ್ಲ. ಹಣಕಾಸಿನ ಲೆಕ್ಕಾಚಾರದ ಜೊತೆಜೊತೆಗೆ ಒಂದಷ್ಟು ಯೋಜನೆ ಹಾಕಿಕೊಂಡರೆ ಬಹುತೇಕ ಎಲ್ಲರೂ ಕೋಟ್ಯಧಿಪತಿಗಳಬಹುದು.

ಈಗ ಬಹುತೇಕ ಮಂದಿ ದುಡಿಯುವವರೇ. ಇದರಲ್ಲಿ ಬಹುಪಾಲು ಮಂದಿ ದೊಡ್ಡದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುತ್ತಾರೆ ಮತ್ತು ಸಾಕಷ್ಟು ಹಣವನ್ನೂ ಗಳಿಸುತ್ತಿದ್ದಾರೆ. ಕೆಲವು ವರ್ಗದವರ ಆದಾಯ ಬಹುತೇಕ 1 ಕೋಟಿ ರೂ. ಹತ್ತಿರವೂ ಇದೆ. ತಿಂಗಳಿಗೆ 25 ರಿಂದ 30,000 ರೂಪಾಯಿ ಸಂಬಳ ಪಡೆಯುವವರಿಗೆ ಕೋಟ್ಯಾಧಿಪತಿ ಆಗುವ ಕನಸಿದೆ. ಆದರೆ ಇದು ಅಸಾಧ್ಯ ಎಂದು ಬಹುತೇಕ ಮಂದಿ ಕೈಚೆಲ್ಲುತ್ತಾರೆ. ಆದರೆ ಸರಿಯಾದ ಹಣಕಾಸು ಯೋಜನೆಯನ್ನು ರೂಪಿಸಿದರೆ ಇಂದಿನ ಕಾಲದಲ್ಲಿ ಕೋಟ್ಯಾಧಿಪತಿಯಾಗುವುದು ಕಷ್ಟವೇನಲ್ಲ.

ಕೋಟ್ಯಧಿಪತಿಗಳಾಗುವುದು ಇಂದಿನ ಕಾಲದಲ್ಲಿ ಕಷ್ಟವಲ್ಲ. ಇದಕ್ಕಾಗಿ ಅನೇಕ ಹೂಡಿಕೆಯ ವಿಧಾನಗಳಿವೆ. ಅದರ ಮೂಲಕ ಕಡಿಮೆ ಸಂಬಳ ಪಡೆಯುವ ಜನರೂ ಕೋಟ್ಯಾಧಿಪತಿಯಾಗುವ ತಮ್ಮ ಕನಸನ್ನು ನನಸಾಗಿಸಬಹುದು.
ಮ್ಯೂಚುವಲ್ ಫಂಡ್‌ಗಳಲ್ಲಿ ಎಸ್ ಐಪಿ ನಿಮ್ಮ ಕೋಟ್ಯಾಧಿಪತಿಯಾಗುವ ಕನಸನ್ನು ನನಸು ಮಾಡಬಹುದು. ಎಸ್ ಐಪಿ ಮಾಸಿಕ 30,000 ರೂಪಾಯಿಗಳನ್ನು ಗಳಿಸುವ ವ್ಯಕ್ತಿಯನ್ನು ಸಹ ಕೋಟ್ಯಾಧಿಪತಿಯನ್ನಾಗಿ ಮಾಡುತ್ತದೆ.

ಎಸ್ ಐ ಪಿ ಹೇಗೆ ಪ್ರಯೋಜನಕಾರಿ?

ಮ್ಯೂಚುವಲ್ ಫಂಡ್‌ಗಳು ಎಸ್ ಐ ಪಿ ಮಾರುಕಟ್ಟೆ- ಸಂಯೋಜಿತ ಯೋಜನೆಯಾಗಿದೆ. ಆದ್ದರಿಂದ ಅದರಲ್ಲಿ ಲಾಭದ ಗ್ಯಾರಂಟಿ ಇಲ್ಲ. ಆದರೆ ನೇರವಾಗಿ ಷೇರುಗಳಲ್ಲಿ ಹಣವನ್ನು ಹೂಡಿಕೆ ಮಾಡುವುದಕ್ಕೆ ಹೋಲಿಸಿದರೆ ಅಪಾಯವು ಕಡಿಮೆ. ದೀರ್ಘಾವಧಿಯಲ್ಲಿ ಅದರ ಸರಾಸರಿ ಆದಾಯವು ಸುಮಾರು ಶೇ. 12ರಷ್ಟು ಇದೆ ಎಂದು ತಜ್ಞರು ಹೇಳುತ್ತಾರೆ.

Money Guide


ಇದು ಯಾವುದೇ ಇತರ ಯೋಜನೆಗಳಿಗಿಂತ ಹೆಚ್ಚು ಲಾಭಕರ. ಕೆಲವೊಮ್ಮೆ ಅದರಿಂದ ಉತ್ತಮ ಆದಾಯ ಪಡೆಯುವ ಅವಕಾಶವಿರುತ್ತದೆ. ಈ ಸಂಯೋಜನೆಯಿಂದಾಗಿ ದೀರ್ಘಾವಧಿಯಲ್ಲಿ ಮ್ಯೂಚುವಲ್ ಫಂಡ್‌ಗಳಲ್ಲಿ ಹಣವು ವೇಗವಾಗಿ ಬೆಳೆಯುತ್ತದೆ. ಆದ್ದರಿಂದ, ಇಂದಿನ ಸಮಯದಲ್ಲಿ ಜನರು ಇದನ್ನು ಲಾಭದಾಯಕ ವ್ಯವಹಾರವೆಂದು ಪರಿಗಣಿಸುತ್ತಾರೆ ಮತ್ತು ಹೆಚ್ಚಿನ ತಜ್ಞರು ಅದನ್ನು ಪೋರ್ಟ್ ಫೋಲಿಯೋದಲ್ಲಿ ಸೇರಿಸಲು ಹೇಳುತ್ತಾರೆ.

ಮಿಲಿಯನೇರ್ ಆಗುವುದು ಹೇಗೆ?

ತಿಂಗಳಿಗೆ 30,000 ರೂ. ಸಂಬಳ ಪಡೆಯುವವರೂ ಮಿಲಿಯನೇರ್ ಆಗಬಹುದು. ಇದಕ್ಕಾಗಿ 50- 30- 20 ನಿಯಮವನ್ನು ಅನುಸರಿಸಬೇಕು. ಅಂದರೆ ಆದಾಯದ ಶೇ. 20ರಷ್ಟನ್ನು ಎಸ್ ಐ ಪಿಯಲ್ಲಿ ಹೂಡಿಕೆ ಮಾಡಬೇಕು. 30,000 ರೂ. ಶೇ. 20ರಷ್ಟು ಎಂದರೆ 6,000 ರೂ. ಆಗಿರುತ್ತದೆ. ಎಸ್ ಐಪಿಯಲ್ಲಿ ಪ್ರತಿ ತಿಂಗಳು 6,000 ರೂ. ಹೂಡಿಕೆ ಮಾಡಿದರೆ 24 ವರ್ಷಗಳಲ್ಲಿ ಕೋಟ್ಯಧಿಪತಿ ಆಗಬಹುದು.

ಇದನ್ನೂ ಓದಿ: GST Council Meet : ನಕಲಿ ಬಿಲ್​ ತಡೆಗೆ ಬಯೋಮೆಟ್ರಿಕ್​ ವ್ಯವಸ್ಥೆ; ಜಿಎಸ್​ಟಿ ಕೌನ್ಸಿಲ್​ ಸಭೆಯಲ್ಲಿ ಹಲವು ನಿರ್ಧಾರಗಳು ಪ್ರಕಟ

24 ವರ್ಷಗಳಲ್ಲಿ ಒಟ್ಟು 17,28,000 ರೂ. ಅಂದರೆ ಶೇ.12ರಷ್ಟು ಬಡ್ಡಿ ದರದಲ್ಲಿ 83,08,123 ರೂ. ಆಗುತ್ತದೆ. ಸಮಯದೊಂದಿಗೆ ಆದಾಯವೂ ಹೆಚ್ಚಾಗುವುದರಿಂದ ಹೂಡಿಕೆಯನ್ನು ಹೆಚ್ಚಿಸಿ 24 ವರ್ಷಗಳಲ್ಲಿ 1,00,36,123 ರೂ. ಗಳಿಸಿ 24 ವರ್ಷಗಳ ಮುಂಚೆಯೇ ಮಿಲಿಯನೇರ್ ಆಗಬಹುದು!

Continue Reading

ವಾಣಿಜ್ಯ

EPFO Balance Check: ಜುಲೈ ಅಂತ್ಯದಲ್ಲಿ ಪಿಎಫ್ ಖಾತೆಗೆ ಬಡ್ಡಿ ಹಣ ಬರಲಿದೆ; ಪರಿಶೀಲಿಸುವುದು ಹೇಗೆ?

ಉದ್ಯೋಗಿಗಳ ಭವಿಷ್ಯ ನಿಧಿ ಖಾತೆಗೆ ಶೀಘ್ರದಲ್ಲೇ ಬಡ್ಡಿ ಮೊತ್ತ (EPFO Balance Check) ಜಮೆಯಾಗಲಿದೆ. ಜುಲೈ ಅಂತ್ಯದ ವೇಳೆಗೆ ಬಡ್ಡಿ ಹಣ ಇಪಿಎಫ್ ಒ ಸದಸ್ಯರ ಖಾತೆಗೆ ತಲುಪೂವ ನಿರೀಕ್ಷೆ ಇದೆ. ಬಡ್ಡಿ ಹಣ ಖಾತೆಗೆ ಬಂದಿದೆಯೇ ಇಲ್ಲವೇ, ಎಷ್ಟು ಬಂದಿದೆ ಎಂಬುದನ್ನು ಪರಿಶೀಲಿಸಲು ಸಾಕಷ್ಟು ದಾರಿಗಳಿವೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

VISTARANEWS.COM


on

By

EPFO Balance Check
Koo

ಭವಿಷ್ಯ ನಿಧಿ (Employees’ Provident Fund) ಹೊಂದಿರುವ ಉದ್ಯೋಗಿಗಳು ತಮ್ಮ ಖಾತೆಗೆ ಬಡ್ಡಿ (interest) ಮೊತ್ತ ಜಮೆಯಾಗುವುದನ್ನು (EPFO Balance Check) ಕಾಯುತ್ತಿದ್ದಾರೆ. ಅಂತವರಿಗೆ ಇದೀಗ ಸಿಹಿ ಸುದ್ದಿ. ಜುಲೈ (july) ಅಂತ್ಯದ ವೇಳೆಗೆ ಬಡ್ಡಿ ಹಣ ಇಪಿಎಫ್ ಒ (EPFO) ಸದಸ್ಯರ ಖಾತೆಗೆ ತಲುಪಬಹುದು. ಇದಕ್ಕಾಗಿ ಶೀಘ್ರದಲ್ಲೇ ಹಣಕಾಸು ಸಚಿವಾಲಯ (Finance Ministry) ಅಧಿಕೃತ ಅಧಿಸೂಚನೆಯನ್ನು ಹೊರಡಿಸುವ ನಿರೀಕ್ಷೆ ಇದೆ.

ಉದ್ಯೋಗಿಗಳ ಭವಿಷ್ಯನಿಧಿ ಸಂಸ್ಥೆಯ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿಗಳು ಫೆಬ್ರವರಿಯಲ್ಲಿ ಆರ್ಥಿಕ ವರ್ಷ 2024 ಕ್ಕೆ ಶೇ. 8.25ರ ಬಡ್ಡಿ ದರವನ್ನು ಅನುಮೋದಿಸಿದೆ. ಆದರೆ ಔಪಚಾರಿಕ ಅಧಿಸೂಚನೆಯನ್ನು ಹೊರಡಿಸಲು ಹಣಕಾಸು ಸಚಿವಾಲಯವು ಇನ್ನೂ ಕಾಯುತ್ತಿದೆ. ಸಾರ್ವತ್ರಿಕ ಚುನಾವಣೆಗಳಿಂದಾಗಿ ಇದು ವಿಳಂಬವಾಗಿದೆ. ಇದು ಜುಲೈ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.

ಹಣ ಬಂದಿದೆಯೇ ತಿಳಿಯುವುದು ಹೇಗೆ?

ಇಪಿಎಫ್ ಖಾತೆಯ ಪಾಸ್‌ಬುಕ್ ಅನ್ನು ಪರಿಶೀಲಿಸುತ್ತಿದ್ದರೆ ನಿಮ್ಮ ಇಪಿಎಫ್ ಬಡ್ಡಿ ಹಣ ಬಂದಿದೆಯೋ ಇಲ್ಲವೋ ಎಂಬುದು ನಿಮಗೆ ತಿಳಿಯುತ್ತದೆ. ಮಿಸ್ಡ್ ಕಾಲ್ ಅಥವಾ ಎಸ್ ಎಂಎಸ್ ನಂತಹ ಸೌಲಭ್ಯಗಳ ಮೂಲಕ ಇಪಿಎಫ್ ಒ ​​ಪೋರ್ಟಲ್ ಮೂಲಕ ನೀವು ಇಪಿಎಫ್ ಪಾಸ್‌ಬುಕ್ ಅನ್ನು ಪರಿಶೀಲಿಸಬಹುದು.

EPFO Balance Check

ಇಪಿಎಫ್‌ಒ ​​ಪೋರ್ಟಲ್‌ನಲ್ಲಿ ಹೇಗೆ ಪರಿಶೀಲಿಸುವುದು?

ಮೊದಲನೆಯದಾಗಿ ಇಪಿಎಫ್ ಒ ​​ಪೋರ್ಟಲ್ https://www.epfindia.gov.in/site_en/index.php ಗೆ ಹೋಗಿ. ಇದಕ್ಕಾಗಿ ನಿಮ್ಮ ಯುಎಎನ್ (ಯುನಿವರ್ಸಲ್ ಖಾತೆ ಸಂಖ್ಯೆ) ಅನ್ನು ಸಕ್ರಿಯಗೊಳಿಸಬೇಕು. ಸೈಟ್ ತೆರೆದಾಗ, ನಮ್ಮ ಸೇವೆಗಳು ಟ್ಯಾಬ್‌ಗೆ ಹೋಗಿ ಮತ್ತು ಅನಂತರ ಡ್ರಾಪ್-ಡೌನ್ ಮೆನು ‘ಉದ್ಯೋಗಿಗಳಿಗಾಗಿ’ ಆಯ್ಕೆ ಮಾಡಿ. ಸೇವಾ ಕಾಲಂ ಅಡಿಯಲ್ಲಿ ಸದಸ್ಯರ ಪಾಸ್‌ಬುಕ್ ಮೇಲೆ ಕ್ಲಿಕ್ ಮಾಡಿ. ಮುಂದಿನ ಪುಟದಲ್ಲಿ ಯುಎಎನ್ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಬೇಕು. ಕ್ಯಾಪ್ಚಾವನ್ನು ನಮೂದಿಸುವ ಮೂಲಕ ಲಾಗ್ ಇನ್ ಮಾಡಿ. ಲಾಗಿನ್ ಆದ ಅನಂತರ ಸದಸ್ಯರ ಐಡಿ ಅನ್ನು ನಮೂದಿಸಿ. ಇದರ ಬಳಿಕ ಇಪಿಎಫ್ ಬ್ಯಾಲೆನ್ಸ್ ಗೋಚರಿಸುತ್ತದೆ.

ಇದನ್ನೂ ಓದಿ: PAN Card Safety: ಪಾನ್ ಕಾರ್ಡ್ ದುರ್ಬಳಕೆಯಿಂದ ಪಾರಾಗುವುದು ಹೇಗೆ?

ಮಿಸ್ಡ್ ಕಾಲ್ ಮೂಲಕ ಹೇಗೆ ಪರಿಶೀಲಿಸುವುದು?

011- 22901406ಗೆ ಮಿಸ್ಡ್ ಕಾಲ್ ನೀಡುವ ಮೂಲಕ ಇಪಿಎಫ್ ಬ್ಯಾಲೆನ್ಸ್ ಅನ್ನು ನೀವು ಪರಿಶೀಲಿಸಬಹುದು. ಕರೆ ಮಾಡಿದಾಗ, ಎಸ್ ಎಂಎಸ್ ಅನ್ನು ಪಡೆಯುತ್ತೀರಿ. ಅದರಲ್ಲಿ ಬ್ಯಾಲೆನ್ಸ್ ಗೋಚರಿಸುತ್ತದೆ. ಇದಕ್ಕಾಗಿ ಇಪಿಎಫ್ ಖಾತೆಯೊಂದಿಗೆ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ. ಪ್ಯಾನ್ ಮತ್ತು ಆಧಾರ್ ಸಂಖ್ಯೆಯೊಂದಿಗೆ ಬ್ಯಾಂಕ್ ಖಾತೆ ಸಂಖ್ಯೆಯನ್ನು ಸಹ ನಿಮ್ಮ ಯುಎಎನ್ ಗೆ ಲಿಂಕ್ ಮಾಡಬೇಕು.

ಎಸ್‌ಎಂಎಸ್ ಮೂಲಕ ಪರಿಶೀಲಿಸುವುದು ಹೇಗೆ?

ಮಿಸ್ಡ್ ಕಾಲ್ ಸೇವೆಯಂತೆಯೇ ಎಲ್ಲಾ ಪ್ರಮುಖ ದಾಖಲೆಗಳನ್ನು ಯುಎಎನ್‌ಗೆ ಲಿಂಕ್ ಮಾಡಬೇಕು. ಆಗ ಮಾತ್ರ ಈ ಸೇವೆಯನ್ನು ಬಳಸಲು ಸಾಧ್ಯವಾಗುತ್ತದೆ. ಇದಕ್ಕಾಗಿ EPFOHO UAN ENG ಅಥವಾ ENG ಬದಲಿಗೆ ನೀವು ಸಂದೇಶವನ್ನು ಬಯಸುವ ಭಾಷೆಯ ಕೋಡ್ ಅನ್ನು ಬರೆದು 7738299899 ಗೆ SMS ಮಾಡಬೇಕಾಗುತ್ತದೆ.

Continue Reading
Advertisement
Rohit Sharma
ಕ್ರೀಡೆ1 min ago

Rohit Sharma: ಲಿಯೋನೆಲ್ ಮೆಸ್ಸಿ ಶೈಲಿಯಲ್ಲಿ ವಿಶ್ವಕಪ್​ ಎತ್ತಿ ಹಿಡಿದ ರೋಹಿತ್​; ವಿಡಿಯೊ ವೈರಲ್​

Karave Protest
ಕರ್ನಾಟಕ2 mins ago

Karave Protest: ಕನ್ನಡಿಗರಿಗೆ ಉದ್ಯೋಗಕ್ಕಾಗಿ ಆಗ್ರಹ; ನಾಳೆ‌ ಕರುನಾಡಲ್ಲಿ ಮೊಳಗಲಿದೆ ಕರವೇ ಕಹಳೆ

T20 World Cup 2024
ಕ್ರೀಡೆ16 mins ago

T20 World Cup 2024: ಎರಡನೇ ವಿಶ್ವಕಪ್‌ಗೆ ತಾಳ್ಮೆಯಿಂದ ಕಾದಂತೆ ಟ್ರಾಫಿಕ್‌ ಸಿಗ್ನಲ್‌ನಲ್ಲೂ ಕಾಯಿರಿ; ದೆಹಲಿ ಪೊಲೀಸರ ಕ್ರಿಯೇಟಿವ್​ ವಿಷ್‌

Road Accident
ಮೈಸೂರು53 mins ago

Road Accident : ತಿರುವಿನಲ್ಲಿ ಕಂದಕಕ್ಕೆ ಉರುಳಿದ ಬಸ್‌; ಚಾಲಕ ಸೇರಿ ಮೂವರು ಗಂಭೀರ

KPCC President
ಪ್ರಮುಖ ಸುದ್ದಿ1 hour ago

KPCC President: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸುಳಿವು; ಲಿಂಗಾಯತರಿಗೆ ಅವಕಾಶ ನೀಡಲು ಒತ್ತಾಯ

Jayam Ravi married to superstar rajinikanth daughter
ಕಾಲಿವುಡ್1 hour ago

Jayam Ravi: ರಜನಿಕಾಂತ್‌ ಮಗಳ ಜತೆ ಜಯಂ ರವಿ ಮದುವೆ?

T20 World Cup 2024
ಕ್ರೀಡೆ1 hour ago

T20 World Cup 2024: ಸಂಭ್ರಮಾಚರಣೆ ವೇಳೆ ದುರಂತ: ಧ್ವಜ ಹಾರಿಸಲು ಹೋಗಿ ಬಿದ್ದ ಅಭಿಮಾನಿ; ವೈರಲ್‌ ವಿಡಿಯೊ ಇಲ್ಲಿದೆ

ಕ್ರೀಡೆ2 hours ago

Rohit Sharma: ವಿಶ್ವಕಪ್​ ಗೆದ್ದ ನಾಯಕ ರೋಹಿತ್​ಗೆ ಆಶೀರ್ವಾದ ಮಾಡಿದ ಕಾಂತಾರದ ‘ಪಂಜುರ್ಲಿ’ ದೈವ!

Actor Darshan
ಬೆಂಗಳೂರು2 hours ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

CM Siddaramaiah To Inaugurate Film Producers Association Building says build film city
ಸ್ಯಾಂಡಲ್ ವುಡ್2 hours ago

CM Siddaramaiah: ಡಾ.ರಾಜ್‍ಕುಮಾರ್ ಕನಸಿನಂತೆ ಫಿಲ್ಮ್ ಸಿಟಿ ನಿರ್ಮಾಣ ಮಾಡ್ತೇವೆ ಎಂದ ಸಿದ್ದರಾಮಯ್ಯ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಬೆಂಗಳೂರು2 hours ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ22 hours ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ1 day ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ2 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ3 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು3 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ3 days ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ6 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

ಟ್ರೆಂಡಿಂಗ್‌