Income tax return filing : ಆದಾಯ ತೆರಿಗೆ ವಿವರಗಳನ್ನು ಯಾರು, ಹೇಗೆ ಸಲ್ಲಿಸಬೇಕು? - Vistara News

ಮನಿ-ಗೈಡ್

Income tax return filing : ಆದಾಯ ತೆರಿಗೆ ವಿವರಗಳನ್ನು ಯಾರು, ಹೇಗೆ ಸಲ್ಲಿಸಬೇಕು?

Income tax return filing ಕಳೆದ 2022-23 ಸಾಲಿನ ಆದಾಯ ತೆರಿಗೆ ವಿವರಗಳನ್ನು ಯಾರು, ಯಾಕಾಗಿ ಹೇಗೆ ಸಲ್ಲಿಸಬೇಕು? ಇಲ್ಲಿದೆ ವಿವರ.

VISTARANEWS.COM


on

ITR
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕಳೆದ 2022-23ರ ಆದಾಯ ತೆರಿಗೆ ವಿವರ ಸಲ್ಲಿಕೆಗೆ ( Income tax return filing) ಜುಲೈ 31 ಕೊನೆಯ ದಿನಾಂಕವಾಗಿದೆ. ಹಾಗಾದರೆ ಯಾರು ಐಟಿ ರಿಟರ್ನ್‌ ಸಲ್ಲಿಸಬೇಕು? ಇಲ್ಲಿದೆ ವಿವರ.

ನಿಮ್ಮ ಒಟ್ಟು ಆದಾಯ (ಎಲ್ಲ ಡಿಡಕ್ಷನ್‌ ಮತ್ತು ವಿನಾಯಿತಿ ಕಳೆದ ಬಳಿಕ) 2.5 ಲಕ್ಷ ರೂ.ಗಿಂತ ಹೆಚ್ಚು ಇದ್ದರೆ, ಹಿರಿಯ ನಾಗರಿಕರಿಗೆ 3 ಲಕ್ಷ ರೂ, ಅತಿ ಹಿರಿಯ ನಾಗರಿಕರಿಗೆ 5 ಲಕ್ಷ ರೂ. ಇದ್ದರೆ ಐಟಿ ರಿಟರ್ನ್‌ ಸಲ್ಲಿಸಬೇಕಾಗುತ್ತದೆ.

ನಿಮ್ಮ ಒಟ್ಟು ಸೇಲ್ಸ್‌, ವಹಿವಾಟು, ಬಿಸಿನೆಸ್ ಗ್ರಾಸ್‌ ರಿಸಿಪ್ಸ್ಟ್‌ ‌ 60 ಲಕ್ಷ ರೂ.ಗಿಂತ ಮೇಲ್ಪಟ್ಟು ಇದ್ದರೆ ಐಟಿ ರಿಟರ್ನ್‌ ಸಲ್ಲಿಸಬೇಕಾಗುತ್ತದೆ. ಪ್ರೊಫೆಶನ್‌ಗಳಿಂದ ನಿಮ್ಮ ಒಟ್ಟು ರಿಸಿಪ್ಟ್ಸ್‌ 10 ಲಕ್ಷ ರೂ. ಮೀರಿದ್ದರೆ ಐಟಿ ರಿಟರ್ನ್‌ ಸಲ್ಲಿಸಬೇಕಾಗುತ್ತದೆ.

ನೀವು ವಿದೇಶಿ ಆಸ್ತಿ, ಆದಾಯ ಅಥವಾ ವಿದೇಶಿ ಬ್ಯಾಂಕ್‌ ಖಾತೆಯಲ್ಲಿ ಸೈನಿಂಗ್‌ ಅಥಾರಿಟಿಯನ್ನು ಹೊಂದಿದ್ದರೆ ಐಟಿ ರಿಟರ್ನ್‌ ಸಲ್ಲಿಸಬೇಕು. ಒಂದು ವರ್ಷದಲ್ಲಿ 1 ಲಕ್ಷ ರೂ.ಗಿಂತ ಹೆಚ್ಚು ಎಲೆಕ್ಟ್ರಿಸಿಟಿ ಬಿಲ್‌ ಬಂದಿದ್ದರೆ ಐಟಿಆರ್‌ ಸಲ್ಲಿಸಬೇಕು. ಉಳಿತಾಯ ಖಾತೆಯಲ್ಲಿ 50 ಲಕ್ಷ ರೂ. ಅಥವಾ ಹೆಚು ಮೊತ್ತವನ್ನು ಡಿಪಾಸಿಟ್‌ ಇಟ್ಟಿದ್ದರೆ ಐಟಿಆರ್‌ ಸಲ್ಲಿಸಬೇಕು. ಕರೆಂಟ್‌ ಅಕೌಂಟ್‌ನಲ್ಲಿ 1 ಕೋಟಿ ರೂ.ಗಿಂತ ಹೆಚ್ಚು ಹಣ ಠೇವಣಿ ಇಟ್ಟಿದ್ದರೆ ಐಟಿಆರ್‌ ಕಡ್ಡಾಯವಾಗಿ ಸಲ್ಲಿಸಬೇಕು.

ವಿದೇಶ ಪ್ರವಾಸದ ಸಂದರ್ಭ 2 ಲಕ್ಷ ರೂ.ಗಿಂತ ಹೆಚ್ಚು ಖರ್ಚು ಮಾಡಿದ್ದರೆ ಐಟಿಆರ್‌ ಸಲ್ಲಿಸಬೇಕು. ನಿಮ್ಮ ಟಿಡಿಎಸ್‌ ಅಥವಾ ಟಿಸಿಎಸ್‌ 25,000 ರೂ. (ಹಿರಿಯ ನಾಗರಿಕರಿಗೆ 50,000 ರೂ.) ನೀವು ಟಿಡಿಎಸ್‌ ಅಥವಾ ಟಿಸಿಎಸ್‌ ರಿಫಂಡ್‌ ನಿರೀಕ್ಷಿಸುತ್ತಿದ್ದರೆ ಐಟಿ ರಿಟರ್ನ್‌ ಕೊಡಬೇಕು. ಮುಂದಿನ ವರ್ಷಕ್ಕೆ ಕ್ಯಾರಿ ಫಾರ್‌ವರ್ಡ್‌ ಬಯಸಿದರೆ ಐಟಿ ರಿಟರ್ನ್‌ ಸಲ್ಲಿಸಬೇಕು.

ಐಟಿಆರ್‌ ಸಲ್ಲಿಸುವ ಸಂದರ್ಭ ಅವಶ್ಯಕವಾಗುವ ದಾಖಲೆಗಳಲ್ಲಿ ವಾರ್ಷಿಕ ಹಣಕಾಸು ವಿವರಗಳ ಹೇಳಿಕೆ ಅಥವಾ ಆನ್ಯುಯಲ್‌ ಇನ್‌ಫಾರ್ಮೇಶನ್‌ ಸ್ಟೇಟ್‌ಮೆಂಟ್‌ ( Annual Information Statement) ಒಂದಾಗಿದೆ. ಇದರಲ್ಲಿ ಬ್ಯಾಂಕ್‌ಗಳು, ಮ್ಯೂಚುವಲ್‌ ಫಂಡ್‌ಗಳು, ಸ್ಟಾಕ್‌ ಬ್ರೋಕರ್‌ಗಳು ಇತ್ಯಾದಿ ಮೂಲಗಳಿಂದ ಲಭಿಸಿದ ವಿವರಗಳನ್ನು ಪ್ರಿ-ಫಿಲ್ಡ್‌ ಮಾಡಿ ಶೇರ್‌ ಮಾಡಲಾಗುತ್ತದೆ. ಜತೆಗೆ ನಿಮ್ಮ ವೇತನ ವಿವರಗಳೂ ಇರುತ್ತದೆ. ಎಐಎಸ್‌ನಲ್ಲಿ ಮಾಹಿತಿಗಳು ಸರಿಯಾಗಿ ಇರುವುದು ಅವಶ್ಯಕ.

ತೆರಿಗೆ ಕಡಿತ ಆಗಿದ್ದರೂ, ಆಗದಿದ್ದರೂ ಎಐಎಸ್‌ ನಿರ್ಣಾಯಕ ದಾಖಲಾತಿ. ತೆರಿಗೆ ಇಲಾಖೆಯು 2021ರಲ್ಲಿ ಎಐಎಸ್‌ ಅನ್ನು ಪರಿಚಯಿಸಿದೆ. ತೆರಿಗೆ ಇಲಾಖೆ ನಾನಾ ಮೂಲಗಳಿಂದ ಸಂಗ್ರಹಿಸಿದ ವಿವರಗಳನ್ನು ಇದು ಒಳಗೊಂಡಿರುತ್ತದೆ. ಆದ್ದರಿಂದ ನೀವು ಇದರ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ. ಬ್ಯಾಂಕ್‌ಗಳು, ಮ್ಯೂಚುವಲ್‌ ಫಂಡ್‌ ಕಂಪನಿಗಳು, ನಿಮ್ಮ ಉದ್ಯೋಗದಾತರು, ವಿವರಗಳನ್ನು ಸಲ್ಲಿಸಬೇಕಾಗುತ್ತದೆ.

ಇದನ್ನೂ ಓದಿ: ವಿಸ್ತಾರ Money Guide: ಹಣ ಗಳಿಕೆಯ ಮೇಲೆ ಪ್ರಭಾವ ಬೀರುವ ಮೂರು ಮನಸ್ಥಿತಿಗಳು ಯಾವುವು?

ಒಂದು ವೇಳೆ ಎಐಎಸ್‌ನಲ್ಲಿ ಯಾವುದಾದರೂ ಅಸಮರ್ಪಕ ಮಾಹಿ ಇದ್ದರೆ ಅಥವಾ ಸರಿಯಾದ ಮಾಹಿತಿ ಬಿಟ್ಟು ಹೋಗಿದ್ದರೆ ಏನು ಮಾಡಬಹುದು? ಇದಕ್ಕೂ ಪರಿಹಾರ ಇದೆ. ಆನ್‌ಲೈನ್‌ ಮೂಲಕ ಸರಿಯಾದ ಮಾಹಿತಿ ನೀಡಬಹುದು. ಫೀಡ್‌ ಬ್ಯಾಕ್‌ ಕೊಡಬಹುದು ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (central board of direct taxes -CBDT) ತಿಳಿಸಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮನಿ-ಗೈಡ್

Money Guide: ನಿಮ್ಮ ಎಲ್‌ಐಸಿ ಪಾಲಿಸಿ ಲ್ಯಾಪ್ಸ್‌ ಆಗಿದೆಯಾ? ನವೀಕರಿಸಲು ಹೀಗೆ ಮಾಡಿ

Money Guide: ಭಾರತದ ಅತೀ ದೊಡ್ಡ ವಿಮಾ ಕಂಪನಿ ಎನಿಸಿಕೊಂಡಿರುವ ಭಾರತೀಯ ಜೀವ ವಿಮಾ ನಿಗಮದಲ್ಲಿ ನೀವು ಪಾಲಿಸಿ ಹೊಂದಿದ್ದೀರಾ? ಅನಿವಾರ್ಯ ಕಾರಣದಿಂದ ಪಾಲಿಸಿಯ ಕಂತು ಕಟ್ಟದೆ ಅದು ಮಧ್ಯದಲ್ಲೇ ಲ್ಯಾಪ್ಸ್‌ ಆಗಿದ್ದರೆ ಅದನ್ನು ಹೇಗೆ ನವೀಕರಿಸಬಹುದು ಎನ್ನುವ ವಿವರ ಇಂದಿನ ಮನಿಗೈಡ್‌ನಲ್ಲಿದೆ.

VISTARANEWS.COM


on

Money Guide
Koo

ಬೆಂಗಳೂರು: ಪ್ರತಿಯೊಬ್ಬರೂ ವಿಮೆ (Insurance) ಮಾಡಿಸಬೇಕು ಎನ್ನುತ್ತಾರೆ ಆರ್ಥಿಕ ತಜ್ಞರು. ಅದರಲ್ಲಿಯೂ ಅನಿಶ್ಚತೆಯಿಂದ ಕೂಡಿದ ಈ ಆಧುನಿಕ ಕಾಲಘಟ್ಟದಲ್ಲಿ ವಿಮೆ ಮಾಡಿಸುವುದು ಪ್ರತಿಯೊಬ್ಬರಿಗೂ ಅನಿವಾರ್ಯ ಎನಿಸಿಕೊಂಡಿದೆ. ಹೀಗಾಗಿ ಇಂದು ಅನೇಕ ಇನ್ಶೂರೆನ್ಸ್‌ ಕಂಪನಿಗಳು ಹುಟ್ಟಿಕೊಂಡಿವೆ. ಅದರಲ್ಲಿಯೂ ಭಾರತದ ಅತೀ ದೊಡ್ಡ ವಿಮಾ ಕಂಪನಿ ಎನಿಸಿಕೊಂಡಿರುವ ಭಾರತೀಯ ಜೀವ ವಿಮಾ ನಿಗಮ (Life Insurance Corporation of India-LIC) ವಿವಿಧ ಕೊಡುಗೆಗಳ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತದೆ. ಇದು ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಯಾದ ಕಾರಣ ಬಹುತೇಕರ ಮೊದಲ ಆಯ್ಕೆ ಎಲ್‌ಐಸಿಯೇ ಆಗಿರುತ್ತದೆ. ನೀವು ಎಲ್‌ಐಸಿ ಗ್ರಾಹಕರಾಗಿದ್ದು, ಅನಿವಾರ್ಯ ಕಾರಣದಿಂದ ಪಾಲಿಸಿಯ ಕಂತು ಕಟ್ಟದೆ ಅದು ಮಧ್ಯದಲ್ಲೇ ಲ್ಯಾಪ್ಸ್‌ ಆಗಿದ್ದರೆ ಅದನ್ನು ಹೇಗೆ ನವೀಕರಿಸಬಹುದು ಎನ್ನುವ ವಿವರ ಇಂದಿನ ಮನಿಗೈಡ್‌ (Money Guide)ನಲ್ಲಿದೆ.

ಹೇಗೆ ಲ್ಯಾಪ್ಸ್‌ ಆಗುತ್ತದೆ?

ಎಲ್‌ಐಸಿ ಪಾಲಿಸಿ ಹೇಗೆ ಲ್ಯಾಪ್ಸ್‌ ಆಗುತ್ತದೆ ಎನ್ನುವುದನ್ನು ಮೊದಲು ನೋಡೋಣ. ಸತತವಾಗಿ ಮೂರು ಪ್ರೀಮಿಯಂಗಳನ್ನು ಪಾವತಿಸದಿದ್ದ ಸಂದರ್ಭದಲ್ಲಿ ನಿಮ್ಮ ಪಾಲಿಸಿ ಲ್ಯಾಪ್ಸ್ ಆಗುತ್ತದೆ. ಸಾಮಾನ್ಯವಾಗಿ ಪಾಲಿಸಿದಾರರಿಗೆ 15 ಮತ್ತು 30 ದಿನಗಳ ನಡುವಿನ ಗ್ರೇಸ್‌ ಅವಧಿಯನ್ನು ನೀಡಲಾಗಿರುತ್ತದೆ. ಗ್ರೇಸ್‌ ಅವಧಿಯಲ್ಲಿಯೂ ನೀವು ಪ್ರೀಮಿಯಂ ಪಾವತಿಸಲು ವಿಫಲರಾದಾಗ ಲ್ಯಾಪ್ಸ್‌ ಮಾಡಲಾಗುತ್ತದೆ. ಒಂದುವೇಳೆ ಪಾಲಿಸಿ ಲ್ಯಾಪ್‌ ಆದರೆ ಯಾವ ಅನುಕೂಲವೂ ಲಭಿಸುವುದಿಲ್ಲ. ಅನಾರೋಗ್ಯ ಅಥವಾ ಅಂಗವೈಕಲ್ಯದ ಕಾರಣದಿಂದ ಪ್ರೀಮಿಯಂ ಪಾವತಿಸಲು ಸಾಧ್ಯವಾಗದಿದ್ದರೆ ಪಾಲಿಸಿ ಲ್ಯಾಪ್ಸ್ ಆಗುವುದಿಲ್ಲ. ಆದರೆ ಈ ಬಗ್ಗೆ ನೀವು ಎಲ್ಐಸಿಗೆ ವೈದ್ಯರ ಪ್ರಮಾಣ ಪತ್ರ ಸಲ್ಲಿಸಬೇಕಾಗುತ್ತದೆ.

ನವೀಕರಣ / ಪುನಶ್ಚೇತನ ಹೇಗೆ?

ಲ್ಯಾಪ್ಸ್ ಆದ ಪಾಲಿಸಿಗಳನ್ನು ನವೀಕರಿಸಲು ನೀವು ಮೊದಲ ಬಾರಿಗೆ ಪ್ರೀಮಿಯಂ ಮಿಸ್ ಮಾಡಿದ ದಿನಾಂಕದಿಂದ 2 ವರ್ಷಗಳವರೆಗೆ ಅವಕಾಶವಿದೆ. ಈ ಅವಧಿಯಲ್ಲಿ ನೀವು ಬಡ್ಡಿಯನ್ನು ಪಾವತಿಸಿ ನವೀಕರಿಸಬಹುದು. ಹೇಗೆ ನವೀಕರಿಸಬಹುದು ಎನ್ನುವುದರ ಹಂತ ಹಂತದ ಮಾಹಿತಿ ಇಲ್ಲಿದೆ.

  • ಎಲ್ಐಸಿಯನ್ನು ಸಂಪರ್ಕಿಸಿ: ಕಸ್ಟಮರ್ ಕೇರ್ ಸಂಖ್ಯೆ, ಇ-ಮೇಲ್ ಮೂಲಕ ಎಲ್‌ಐಸಿಯನ್ನು ಸಂಪರ್ಕಿಸಿ. ಇಲ್ಲದಿದ್ದರೆ ನಿಮ್ಮ ಸಮೀಪದ ಎಲ್ಐಸಿ ಶಾಖೆಗೆ ಭೇಟಿ ನೀಡಿ.
  • ಪುನಶ್ಚೇತನ ಅರ್ಜಿ (Revival form) ಸಲ್ಲಿಸಿ: ಲ್ಯಾಪ್ಸ್ ಆದ ಪಾಲಿಸಿಯನ್ನು ಮತ್ತೆ ಸಕ್ರಿಯಗೊಳಿಸಲು ಪುನಶ್ಚೇತನ ಅರ್ಜಿ (Revival form) ನಮೂನೆಯನ್ನು ಭರ್ತಿಗೊಳಿಸಿ ಎಲ್ಐಸಿಗೆ ಸಲ್ಲಿಸಿ.
  • ಬಾಕಿ ಪ್ರೀಮಿಯಂ ಮತ್ತು ಬಡ್ಡಿಯನ್ನು ಪಾವತಿಸಿ: ನೀವು ಮಿಸ್‌ ಮಾಡಿದ ಎಲ್ಲ ಪ್ರೀಮಿಯಂಗಳನ್ನು ಮತ್ತು ಆ ಪ್ರೀಮಿಯಂಗಳ ಮೇಲಿನ ಬಡ್ಡಿಯನ್ನು ಪಾವತಿಸಿ.
  • ವೈದ್ಯಕೀಯ ಪ್ರಮಾಣಪತ್ರ ಸಲ್ಲಿಸಿ: ದೀರ್ಘ ಸಮಯದಿಂದ ನಿಮ್ಮ ಎಲ್ಐಸಿ ಪಾಲಿಸಿ ಲ್ಯಾಪ್ಸ್ ಆಗಿದ್ದರೆ ವೈದ್ಯಕೀಯ ಪ್ರಮಾಣಪತ್ರ ಸಲ್ಲಿಸುವುದು ಅಗತ್ಯ.
  • ಮನವಿ ಪರಿಶೀಲನೆ: ನೀವು ಸಲ್ಲಿಸಿರುವ ಎಲ್ಲ ದಾಖಲೆಗಳು ಹಾಗೂ ಪಾವತಿಗಳನ್ನು ಎಲ್‌ಐಸಿ ಪರಿಶೀಲಿಸುತ್ತದೆ. ಒಂದು ವೇಳೆ ನಿಮ್ಮ ಮನವಿ ಅನುಮೋದನೆಗೊಂಡರೆ ಎಲ್ಐಸಿ ನಿಮ್ಮ ಪಾಲಿಸಿಯನ್ನು ಪುನಶ್ಚೇತನಗೊಳಿಸಿ, ಹೊಸ ಪಾಲಿಸಿ ದಾಖಲೆಯನ್ನು ನೀಡುತ್ತದೆ.
  • ಗಮನಿಸಿ ಪಾಲಿಸಿಯ ನವೀಕರಣ ಉದ್ದೇಶಕ್ಕಾಗಿ ಅಗತ್ಯವಿರುವ ವೈದ್ಯಕೀಯ ವರದಿಗಳು ಹಾಗೂ ವಿಶೇಷ ರಿಪೋರ್ಟ್ಸ್‌ಗಳ ವೆಚ್ಚವನ್ನು ವಿಮಾದಾರರೇ ಭರಿಸಬೇಕಾಗುತ್ತದೆ.

ನಿಮ್ಮ ಪಾಲಿಸಿಯನ್ನು ಪುನರುಜ್ಜೀವನಗೊಳಿಸಿದ ನಂತರ ನಿಯಮಿತವಾಗಿ ನಿಮ್ಮ ಪ್ರೀಮಿಯಂಗಳನ್ನು ಪಾವತಿಸುವುದನ್ನು ಮರೆಯಬೇಡಿ.

ವ್ಯಾಟ್ಸ್‌ಆ್ಯಪ್‌ ಮೂಲಕ ಎಲ್‌ಐಸಿ ಸೇವೆ

ಈಗ ಎಲ್‌ಐಸಿಯ ಕೆಲವು ಸೇವೆ ವ್ಯಾಟ್ಸ್‌ಆ್ಯಪ್‌ನಲ್ಲಿಯೂ ಲಭ್ಯ. ಅದಕ್ಕಾಗಿ ನೀವು ಮಾಡಬೇಕಾದದ್ದು ಇಷ್ಟೇ. Hi ಎಂದು ವ್ಯಾಟ್ಸ್‌ಆ್ಯಪ್‌ನಲ್ಲಿ ಟೈಪ್‌ ಮಾಡಿ 8976862090 ನಂಬರ್‌ಗೆ ಮೆಸೇಜ್‌ ಕಳಿಸಿ. ಆಗ 11 ಆಯ್ಕೆಗಳನ್ನು ನಿಮ್ಮ ಮುಂದಿರುತ್ತದೆ. ಉದಾಹರಣೆಗೆ ಚಾಟ್‌ ಬಾಕ್ಸ್‌ನಲ್ಲಿ ಆಪ್ಷನ್‌ ನಂಬರ್‌ ನಮೂದಿಸಿ. ಉದಾಹರಣೆಗೆ 1 ಎಂದು ಟೈಪ್‌ ಮಾಡಿದರೆ ನಿಮ್ಮ ಮುಂದಿನ ಎಲ್‌ಐಸಿ ಪ್ರೀಮಿಯಂ ಕಟ್ಟುವ ದಿನಾಂಕ ತಿಳಿಯಬಹುದು. ಎಷ್ಟು ಮೊತ್ತ ಎಂಬುದನ್ನೂ ತಿಳಿದುಕೊಳ್ಳಬಹುದು.

ಇದನ್ನೂ ಓದಿ: Retirement Planning: ನಿವೃತ್ತಿ ಬಳಿಕ 1 ಲಕ್ಷ ರೂ. ಪಿಂಚಣಿ ಗಳಿಸೋದು ಹೇಗೆ? ಸುಲಭ ಯೋಜನೆಯ ಮಾಹಿತಿ ಇಲ್ಲಿದೆ

Continue Reading

ಮನಿ-ಗೈಡ್

Money Guide: ಹಿರಿಯ ನಾಗರಿಕರು ಮಾಸಿಕ 20,000 ರೂ. ಆದಾಯ ಗಳಿಸಲು ಈ ಯೋಜನೆಯಲ್ಲಿ ಹೂಡಿಕೆ ಮಾಡಿ

Money Guide: 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಸೀನಿಯರ್‌ ಸಿಟಿಜನ್ಸ್‌ ಸೇವಿಂಗ್‌ ಸ್ಕೀಮ್‌ ಅತ್ಯತ್ತಮ ಹೂಡಿಕೆ ಯೋಜನೆ ಎನಿಸಿಕೊಂಡಿದೆ. ಸೀನಿಯರ್‌ ಸಿಟಿಜನ್ಸ್‌ ಸೇವಿಂಗ್‌ ಸ್ಕೀಮ್‌ ವಿಶೇಷವಾಗಿ ಹಿರಿಯ ನಾಗರಿಕರಿಗೆಂದೇ ರೂಪಿಸಲಾಗಿದೆ. ಇತ್ತೀಚೆಗೆ ಬಡ್ಡಿ ದರವೂ ಏರಿಕೆಯಾಗಿದೆ. ಸರ್ಕಾರಿ ಬೆಂಬಲಿತ ಯೋಜನೆ ಇದಾಗಿರುವುದರಿಂದ ಹೂಡಿಕೆ ಮಾಡುವುದರಿಂದ ಅಪಾಯವೂ ಕಡಿಮೆ. ಒಟ್ಟಿನಲ್ಲಿ ಸುರಕ್ಷಿತ ಹೂಡಿಕೆಗೆ ಆದ್ಯತೆ ನೀಡುವವರಿಗೆ ಇದು ಉತ್ತಮ ಆಯ್ಕೆ.

VISTARANEWS.COM


on

Money Guide
Koo

ಬೆಂಗಳೂರು: ನಿವೃತ್ತಿಯ ನಂತರ ಹಾಯಾಗಿ, ಯಾವುದೇ ಚಿಂತೆ ಇಲ್ಲದೆ ಜೀವನ ಕಳೆಯಬೇಕು ಎನ್ನುವುದು ಬಹುತೇಕರ ಕನಸು. ಈ ರೀತಿಯ ನೆಮ್ಮದಿಯ ಜೀವನಕ್ಕೆ ಆರ್ಥಿಕವಾಗಿ ಸ್ವಾವಲಂಬಿಯಾಗಿರುವುದು ಮುಖ್ಯ. ಮಾಸಿಕ ಪಿಂಚಣಿ ಇಲ್ಲದಿದ್ದರೂ ಚಿಂತೆ ಬೇಡ. ಈ ವಿಶೇಷ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ನಿರ್ದಿಷ್ಟ ಆದಾಯ ಗಳಿಬಹುದು. ಆ ಯೋಜನೆಯೇ ಸೀನಿಯರ್‌ ಸಿಟಿಜನ್ಸ್‌ ಸೇವಿಂಗ್‌ ಸ್ಕೀಮ್‌ (Senior Citizens Savings Scheme-SCSS). 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಇದು ಉತ್ತಮ ಹೂಡಿಕೆಯ ಆಯ್ಕೆ. ಈ ಬಗ್ಗೆ ವಿವರ ಮನಿಗೈಡ್‌ (Money Guide)ನಲ್ಲಿದೆ.

ಏನಿದು ಯೋಜನೆ?

ಸೀನಿಯರ್‌ ಸಿಟಿಜನ್ಸ್‌ ಸೇವಿಂಗ್‌ ಸ್ಕೀಮ್‌ ವಿಶೇಷವಾಗಿ ಹಿರಿಯ ನಾಗರಿಕರಿಗೆಂದೇ ರೂಪಿಸಲಾಗಿದೆ. ಇತ್ತೀಚೆಗೆ ಬಡ್ಡಿ ದರವೂ ಏರಿಕೆಯಾಗಿದೆ. ಈ ಯೋಜನೆಯಲ್ಲಿ 50,000 ರೂ. ತನಕದ ಬಡ್ಡಿ ಆದಾಯ ತೆರಿಗೆ ಮುಕ್ತ. ಪಿಪಿಎಫ್‌ಗಿಂತ ಹೆಚ್ಚಿನ ಆದಾಯವನ್ನು ನೀಡುತ್ತದೆ. ಹೀಗಿದ್ದರೂ ಇದರಲ್ಲಿ ವೈಯಕ್ತಿಕವಾಗಿ ಗರಿಷ್ಠ 15 ಲಕ್ಷ ರೂ. ಹೂಡಿಕೆ ಮಾಡಬಹುದು. ಈ ಯೋಜನೆಯು ಐದು ವರ್ಷಗಳ ಅವಧಿಯನ್ನು ಹೊಂದಿದೆ. ಇನ್ನೂ ಮೂರು ವರ್ಷಗಳವರೆಗೆ ವಿಸ್ತರಿಸಬಹುದು. ಎಸ್‌ಸಿಎಸ್‌ಎಸ್‌ ಯೋಜನೆಯಲ್ಲಿ ಸರ್ಕಾರ ಇತ್ತೀಚೆಗೆ ಹಲವು ಬದಲಾವಣೆಗಳನ್ನು ತಂದಿದೆ. ಒಬ್ಬ ವ್ಯಕ್ತಿಯು ನಿವೃತ್ತಿ ಹೊಂದಿದ ದಿನಾಂಕದಿಂದ ಮೂರು ತಿಂಗಳೊಳಗೆ ಹಿರಿಯ ನಾಗರಿಕರ ಉಳಿತಾಯ ಯೋಜನೆಯಡಿ ಖಾತೆಯನ್ನು ತೆರೆಯಬಹುದು. ಅಲ್ಲದೆ ಹೊಸ ಅಧಿಸೂಚನೆಯು, ಸರ್ಕಾರಿ ಉದ್ಯೋಗಿಯ ಸಂಗಾತಿಯೂ ಯೋಜನೆಯಲ್ಲಿ ಹೂಡಿಕೆ ಮಾಡಲು ಅನುವು ಮಾಡಿಕೊಡುತ್ತದೆ. 

ಮೊದಲೇ ಹೇಳಿದಂತೆ ಈ ಯೋಜನೆಯನ್ನು ಹಿರಿಯ ನಾಗರಿಕರಿಗೆಂದೇ ರೂಪಿಸಲಾಗಿದೆ. ಸರ್ಕಾರಿ ಬೆಂಬಲಿತ ಯೋಜನೆ ಇದಾಗಿರುವುದರಿಂದ ಹೂಡಿಕೆ ಮಾಡುವುದರಿಂದ ಅಪಾಯವೂ ಕಡಿಮೆ. ಒಟ್ಟಿನಲ್ಲಿ ಸುರಕ್ಷಿತ ಹೂಡಿಕೆಗೆ ಆದ್ಯತೆ ನೀಡುವವರಿಗೆ ಇದು ಉತ್ತಮ ಆಯ್ಕೆ ಎನಿಸಿಕೊಂಡಿದೆ.

ಯಾರೆಲ್ಲ ಹೂಡಿಕೆ ಮಾಡಬಹುದು?

ಸರ್ಕಾರದಿಂದಲೇ ನಡೆಸಲಾಗುವ ಸಣ್ಣ ಉಳಿತಾಯ ಯೋಜನೆ ಇದಾಗಿದ್ದು, 60 ವರ್ಷ ಮೇಲ್ಪಟ್ಟು ವಯಸ್ಸಿನವರು ಅಥವಾ ವಿಆರ್‌ಎಸ್‌ ನಿವೃತ್ತಿ ಪಡೆದ 55 ವರ್ಷ ವಯಸ್ಸಿನವರು ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಅರ್ಹರು. ವೈಯಕ್ತಿಕವಾಗಿ ಅಥವಾ ಸಂಗಾತಿಯೊಂದಿಗೆ ಜಂಟಿಯಾಗಿ ಖಾತೆಯನ್ನು ತೆರೆಯಬಹುದು.

ಬಡ್ಡಿ ದರ

ಅಂಚೆ ಕಚೇರಿ ಅಥವಾ ಬ್ಯಾಂಕ್‌ನಲ್ಲಿ ಎಸ್‌ಸಿಎಸ್‌ಎಸ್‌ ಖಾತೆ ತೆರೆಯಬಹುದು. ಸದ್ಯ ಈ ಯೋಜನೆಗೆ ವಾರ್ಷಿಕ ಶೇ. 8.2ರಷ್ಟು ಬಡ್ಡಿ ಇದೆ. ಕನಿಷ್ಠ ಹೂಡಿಕೆ 1,000 ರೂ. ಮತ್ತು ಗರಿಷ್ಠ ಹೂಡಿಕೆ 30 ಲಕ್ಷ ರೂ. ವಿಶೇಷ ಎಂದರೆ ತೆರಿಗೆ ಸೆಕ್ಷನ್‌ 80 ಸಿ ಅಡಿಯಲ್ಲಿ ಟ್ಯಾಕ್ಸ್‌ ಡಿಡಕ್ಷನ್‌ಗೂ ಅವಕಾಶ ಇದೆ.

ಮಾಸಿಕ 20 ಸಾವಿರ ರೂ. ಪಡೆಯುವುದು ಹೇಗೆ?

ಈ ಯೋಜನೆ ಮೂಲಕ ಮಾಸಿಕ 20 ಸಾವಿರ ರೂ. ಪಡೆಯುವುದು ಹೇಗೆ ಎನ್ನುವುದನ್ನು ಉದಾಹರಣೆ ಮೂಲಕ ನೋಡೋಣ. ಸದ್ಯ ಎಸ್‌ಸಿಎಸ್‌ಎಸ್‌ ಯೋಜನೆಗೆ 8.2 ಬಡ್ಡಿ ಲಭಿಸುವ ಹಿನ್ನೆಲೆಯಲ್ಲಿ ನೀವು 30 ಲಕ್ಷ ರೂ. ಹೂಡಿಕೆ ಮಾಡಿದರೆ ಪ್ರತಿ ವರ್ಷ 2.46 ಲಕ್ಷ ರೂ. ಬಡ್ಡಿ ಲಭಿಸುತ್ತದೆ. ಅಂದರೆ ಪ್ರತಿ ತಿಂಗಳು 20,000 ರೂ. ಸಿಕ್ಕಂತಾಗುತ್ತದೆ. ಒಟ್ಟಿನಲ್ಲಿ ಇದು ಹಿರಿಯ ನಾಗರಿಕರಿಗೆ ಉತತ್ಮ ಯೋಜನೆ ಎನಿಸಿಕೊಂಡಿದೆ.

ಇದನ್ನೂ ಓದಿ: Money Guide: ನಿವೃತ್ತಿಯ ನಂತರವೂ ಆರ್ಥಿಕವಾಗಿ ಸದೃಢರಾಗಬೇಕೆ?; ಈ ಯೋಜನೆಗಳಲ್ಲಿ ಹೂಡಿಕೆ ಮಾಡಿ

Continue Reading

ಮನಿ-ಗೈಡ್

Retirement Planning: ನಿವೃತ್ತಿ ಬಳಿಕ 1 ಲಕ್ಷ ರೂ. ಪಿಂಚಣಿ ಗಳಿಸೋದು ಹೇಗೆ? ಸುಲಭ ಯೋಜನೆಯ ಮಾಹಿತಿ ಇಲ್ಲಿದೆ

ವ್ಯವಸ್ಥಿತ ಹೂಡಿಕೆ ಯೋಜನೆ ಮೂಲಕ ಮ್ಯೂಚುಯಲ್ ಫಂಡ್ ಹೂಡಿಕೆಯು ಭಾರತದಲ್ಲಿ ಏಕರೂಪದ ಹೂಡಿಕೆಗಿಂತ ಹೆಚ್ಚು ಜನಪ್ರಿಯವಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಇದನ್ನು ಸಣ್ಣ ಮಾಸಿಕ ಹೂಡಿಕೆಯೊಂದಿಗೆ ಪ್ರಾರಂಭಿಸಬಹುದು. ಒಂದು ವೇಳೆ ನಿವೃತ್ತಿ ಬಗ್ಗೆ ಯೋಜನೆ (Retirement Planning) ರೂಪಿಸುತ್ತಿದ್ದರೆ ಎಸ್ ಐಪಿ ಬಗ್ಗೆ ತಿಳಿದುಕೊಂಡು ಹೂಡಿಕೆ ಮಾಡಿದರೆ ನಿವೃತ್ತಿ ಜೀವನವನ್ನು ಆರ್ಥಿಕ ಹೊರೆ ಇಲ್ಲದೆ ಕಳೆಯಬಹುದು. ದೊಡ್ಡ ಮೊತ್ತದ ನಿವೃತ್ತಿ ಪಡೆಯುವ ವಿಧಾನಗಳ ಮಾಹಿತಿ ಇಲ್ಲಿದೆ.

VISTARANEWS.COM


on

By

Retirement Panning
Koo

ನಿವೃತ್ತಿ ಯೋಜನೆ (Retirement Planning) ಮಾಡುತ್ತಿದ್ದೀರಾ. ಹಾಗಿದ್ದರೆ ಎಸ್‌ಐಪಿ ಬಗ್ಗೆ ತಿಳಿದುಕೊಳ್ಳಿ.. ವ್ಯವಸ್ಥಿತ ಹೂಡಿಕೆ ಯೋಜನೆ (SIP) ಮೂಲಕ ಮ್ಯೂಚುಯಲ್ ಫಂಡ್ (Mutual fund) ಹೂಡಿಕೆಯು ಭಾರತದಲ್ಲಿ (India) ಏಕರೂಪದ ಹೂಡಿಕೆಗಿಂತ ಹೆಚ್ಚು ಜನಪ್ರಿಯವಾಗುತ್ತಿದೆ ಎಂಬುದನ್ನು ಭಾರತದಲ್ಲಿ ಕಳೆದ ಒಂದು ವರ್ಷದ ಮ್ಯೂಚುಯಲ್ ಫಂಡ್‌ಗಳ ಅಸೋಸಿಯೇಷನ್ ​​ಡೇಟಾ ಹೇಳುತ್ತದೆ. ಇದರ ಹಿಂದಿರುವ ಪ್ರಮುಖ ಕಾರಣ 100 ರೂ. ನ ಸಣ್ಣ ಮಾಸಿಕ ಹೂಡಿಕೆಯೊಂದಿಗೆ ಜನಸಾಮಾನ್ಯರೂ ಪ್ರಾರಂಭಿಸಬಹುದು.

ಎಸ್‌ಐಪಿ ಹೂಡಿಕೆಯು ರೂಪಾಯಿ ವೆಚ್ಚ ಸರಾಸರಿ ಮತ್ತು ಸಂಯುಕ್ತ ಬೆಳವಣಿಗೆಯನ್ನು ಒದಗಿಸುತ್ತದೆ. ಸಂಯುಕ್ತ ಬೆಳವಣಿಗೆಯ ಪ್ರಯೋಜನವೆಂದರೆ ಒಂದು ಸಣ್ಣ ಮಾಸಿಕ ಎಸ್ ಐ ಪಿ ಕೊಡುಗೆಯು ದೀರ್ಘಾವಧಿಯವರೆಗೆ ಹೂಡಿಕೆಯಲ್ಲಿ ಉಳಿದಿದ್ದರೆ ದೊಡ್ಡ ನಿವೃತ್ತಿ ಪ್ರಯೋಜನವನ್ನು ಪಡೆಯಲು ಸಹಾಯ ಮಾಡುತ್ತದೆ.

ಮಾಸಿಕ 5,000 ರೂ.ಗಳ ಎಸ್ ಐ ಪಿನೊಂದಿಗೆ ಪ್ರಾರಂಭಿಸಿ ಅದನ್ನು 30 ವರ್ಷಗಳವರೆಗೆ ಇರಿಸಿದರೆ ದೊಡ್ಡ ಮೊತ್ತವನ್ನು ನಿರ್ಮಿಸಬಹುದು. ದೀರ್ಘಾವಧಿಯ ಕ್ಯಾಪಿಟಲ್ ಗೇನ್ಸ್ ತೆರಿಗೆಯನ್ನು ಪಾವತಿಸಿದ ಅನಂತರ ಆ ಹಣವನ್ನು ವ್ಯವಸ್ಥಿತ ಹಿಂತೆಗೆದುಕೊಳ್ಳುವ ಯೋಜನೆಯಲ್ಲಿ (ಎಸ್‌ಡಬ್ಲ್ಯೂಪಿ) ಹೂಡಿಕೆ ಮಾಡಿದರೆ ಅಲ್ಲಿ ಶೇ. 7ರಷ್ಟು ಆದಾಯವನ್ನು ಪಡೆಯಬಹುದು. ಅಂದರೆ ಮುಂದಿನ 30 ವರ್ಷಗಳವರೆಗೆ ಮಾಸಿಕ 1 ಲಕ್ಷ ರೂಪಾಯಿ ಪಿಂಚಣಿ ಪಡೆಯಬಹುದು.

ಎಸ್ ಐ ಪಿಯಲ್ಲಿ ಹೂಡಿಕೆ ಮಾಡುವ ಮುನ್ನ ಎಸ್ ಐ ಪಿ ಮತ್ತು ಎಸ್ ಡಬ್ಲ್ಯೂ ಪಿ ನಡುವಿನ ವ್ಯತ್ಯಾಸ ತಿಳಿಯಿರಿ.


ಎಸ್ ಐ ಪಿ ಎಂದರೇನು?

ಎಸ್ ಐ ಪಿ ಎನ್ನುವುದು ಮ್ಯೂಚುಯಲ್ ಫಂಡ್ ಹೂಡಿಕೆಯ ಒಂದು ವಿಧಾನವಾಗಿದೆ. ಒಟ್ಟು ಮೊತ್ತದ ವಿಧಾನಕ್ಕಿಂತ ಭಿನ್ನವಾಗಿ ಒಬ್ಬರು ಒಂದು ಬಾರಿ ಮೊತ್ತವನ್ನು ಠೇವಣಿ ಮಾಡುತ್ತಾರೆ. ಅವರು ದೈನಂದಿನ, ಮಾಸಿಕ ಅಥವಾ ವಾರ್ಷಿಕ ಆಧಾರದ ಮೇಲೆ ಎಸ್ ಐಪಿ ಮೂಲಕ ಪೂರ್ವ-ನಿಶ್ಚಿತ ಮೊತ್ತದಲ್ಲಿ ಹೂಡಿಕೆ ಮಾಡುತ್ತಾರೆ.

ಕೆಲವು ಮ್ಯೂಚುವಲ್ ಫಂಡ್ ಯೋಜನೆಗಳು ಎಸ್ ಐ ಪಿಗಳನ್ನು 100 ರೂ.ಗೆ ಪ್ರಾರಂಭಿಸಬಹುದು. ಮ್ಯೂಚುವಲ್ ಫಂಡ್ ಸ್ಕೀಮ್‌ನ ಕಾರ್ಯಕ್ಷಮತೆಯೊಂದಿಗೆ ಸಿಂಕ್ ಮಾಡುವ ಮೂಲಕ ಎನ್‌ಎವಿಯ ಬೆಲೆಯು ಪ್ರತಿ ತಿಂಗಳು ಬದಲಾಗುತ್ತಲೇ ಇರುವುದರಿಂದ ಎಸ್‌ಐಪಿ ರೂಪಾಯಿ ವೆಚ್ಚದ ಸರಾಸರಿಯನ್ನು ಒದಗಿಸುತ್ತದೆ. ಮಾರುಕಟ್ಟೆ ಮತ್ತು ಎನ್ ಎವಿ ದರಗಳು ಕಡಿಮೆಯಾದಾಗ ಹೂಡಿಕೆದಾರರು ಹೆಚ್ಚಿನ ಎನ್ ಎವಿ ಗಳನ್ನು ಖರೀದಿಸುತ್ತಾರೆ. ಮಾರುಕಟ್ಟೆ ದರ ಹೆಚ್ಚಾದಾಗ ಮತ್ತು ಎನ್‌ಎವಿ ದರವೂ ಹೆಚ್ಚಿರುವಾಗ, ಹೂಡಿಕೆದಾರರು ಕಡಿಮೆ ಎನ್‌ಎವಿಗಳನ್ನು ಖರೀದಿಸುತ್ತಾರೆ.

ಒಟ್ಟು ಮೊತ್ತದ ಹೂಡಿಕೆಗಳಂತೆ ಎಸ್‌ಐಪಿ ಹೂಡಿಕೆಗಳು ಕೂಡ ಸಂಯುಕ್ತ ಬೆಳವಣಿಗೆಯನ್ನು ನೀಡುತ್ತವೆ. ಆದ್ದರಿಂದ ನೀವು 1,000 ರೂ. ಸಣ್ಣ ಮೊತ್ತವನ್ನು ಹೂಡಿಕೆ ಮಾಡಿದರೂ ಸಹ 40 ವರ್ಷಗಳವರೆಗೆ ಹೂಡಿಕೆ ಮಾಡುವುದನ್ನು ಮುಂದುವರಿಸಿ ಮತ್ತು ಅದರ ಮೇಲೆ ಶೇ. 12ರಷ್ಟು ಪ್ರತಿಶತ ವಾರ್ಷಿಕ ಸಂಯುಕ್ತ ಬೆಳವಣಿಗೆಯನ್ನು ಪಡೆದರೆ 4.80 ಲಕ್ಷ ರೂ. ವರೆಗೆ ಹೂಡಿಕೆಯು ಬೆಳೆಯಬಹುದು. ಆ ಕಾಲಮಿತಿಯಲ್ಲಿ 1,18,82,420 ರೂ. ನಿವೃತ್ತಿ ಮೊತ್ತವನ್ನು ನಿರ್ಮಿಸಲು ಎಸ್ ಐಪಿ ಅನ್ನು ಸಾಧನವಾಗಿ ಪರಿಗಣಿಸುವ ಯಾರಾದರೂ ದೀರ್ಘಾವಧಿಯ ಹೂಡಿಕೆಯನ್ನು ಆಯ್ಕೆ ಮಾಡಬಹುದು.

ಎಸ್‌ಡಬ್ಲ್ಯೂಪಿ ಎಂದರೇನು?

ಎಸ್ಐಪಿನಲ್ಲಿ ಪ್ರತಿ ತಿಂಗಳು ಹಣವನ್ನು ಹೂಡಿಕೆ ಮಾಡಿದರೆ ಎಸ್‌ಡಬ್ಲ್ಯೂಪಿ ಯೋಜನೆಯ ಮ್ಯೂಚುವಲ್ ಫಂಡ್ ಯೋಜನೆಯಿಂದ ಪ್ರತಿ ತಿಂಗಳು ಹಣವನ್ನು ಹಿಂಪಡೆಯುತ್ತೀರಿ.

ಮ್ಯೂಚುಯಲ್ ಫಂಡ್‌ನಲ್ಲಿ ಒಟ್ಟು ಮೊತ್ತವನ್ನು ಹೂಡಿಕೆ ಮಾಡುವವರು ಎಸ್‌ಡಬ್ಲ್ಯೂಪಿ ಅನ್ನು ಆಯ್ಕೆ ಮಾಡುತ್ತಾರೆ ಮತ್ತು ನಿಗದಿತ ಮೊತ್ತವನ್ನು ಹಿಂಪಡೆಯುತ್ತಾರೆ. ಆ ಹಣವನ್ನು ನಿಮಗೆ ನೀಡಲು ಫಂಡ್ ಹೌಸ್ ಪ್ರತಿ ತಿಂಗಳು ಎನ್‌ಎವಿಗಳನ್ನು ಮಾರಾಟ ಮಾಡುತ್ತದೆ.

ಠೇವಣಿಗಳ ಮೇಲೆ ಆದಾಯವನ್ನು ಪಡೆಯುವುದರಿಂದ ಮಾಸಿಕ ಪಿಂಚಣಿ ಪಡೆದರೂ ಸಹ ಹೂಡಿಕೆಯಲ್ಲಿರುವ ಮೊತ್ತವು ಅವರಿಗೆ ಬಹು ವರ್ಷಗಳವರೆಗೆ ಮಾಸಿಕ ಆದಾಯವನ್ನು ನೀಡುತ್ತದೆ.

ವಾಪಸಾತಿ ದರವು ರಿಟರ್ನ್ ದರಕ್ಕಿಂತ ತುಂಬಾ ಕಡಿಮೆಯಿದ್ದರೆ ಅದು ಹಲವು ದಶಕಗಳವರೆಗೆ ಮಾಸಿಕ ಆದಾಯವನ್ನು ಒದಗಿಸುತ್ತದೆ.

ಎಸ್‌ಡಬ್ಲ್ಯೂಪಿ ಸಹ ರೂಪಾಯಿ ವೆಚ್ಚದ ಸರಾಸರಿಯನ್ನು ನೀಡುತ್ತದೆ. ಅಲ್ಲಿ ದರವು ಕಡಿಮೆಯಾದಾಗ ನಿಧಿಯು ಹೆಚ್ಚು ಎನ್ ಎವಿ ಗಳನ್ನು ಮಾರಾಟ ಮಾಡುತ್ತದೆ ಮತ್ತು ಎನ್ ಎವಿ ದರವು ಹೆಚ್ಚಾದಾಗ ಮಾರಾಟ ಕಡಿಮೆಯಾಗಿದೆ.

ಎಸ್‌ಐಪಿನಿಂದ 1 ಲಕ್ಷ ಪಿಂಚಣಿ ಹೇಗೆ ಪಡೆಯುವುದು?

30ನೇ ವಯಸ್ಸಿನಲ್ಲಿ 5,000 ಎಸ್‌ಐಪಿ ಅನ್ನು ಪ್ರಾರಂಭಿಸಿದರೆ ಅದನ್ನು 30 ವರ್ಷಗಳವರೆಗೆ ಮುಂದುವರಿಸಿ. ಆ ಅವಧಿಯಲ್ಲಿ ನಿಮ್ಮ ಒಟ್ಟು ಕೊಡುಗೆಗಳು 18,00,000 ರೂ. ಆಗಿರುತ್ತದೆ. ದೀರ್ಘಾವಧಿಯ ಬಂಡವಾಳ ಲಾಭಗಳು 1,58,49,569 ರೂ. ಆಗಿರುತ್ತದೆ ಮತ್ತು ಮೆಚ್ಯೂರಿಟಿ ಮೊತ್ತವು 1,76,49,569 ರೂ. ಆಗಿರುತ್ತದೆ. ಬಂಡವಾಳದ ಲಾಭವು ಹೂಡಿಕೆಗಿಂತ ಸುಮಾರು 10 ಪಟ್ಟು ಹೆಚ್ಚು. ಇದು ಸಂಯುಕ್ತ ಬೆಳವಣಿಗೆಯಿಂದಾಗಿ ಮಾತ್ರ. 60ನೇ ವಯಸ್ಸಿನಲ್ಲಿ ಇದು ನಿಮ್ಮ ನಿವೃತ್ತಿ ವೇತನವಾಗುತ್ತದೆ.


1 ಲಕ್ಷ ರೂ. ತೆರಿಗೆ ವಿನಾಯಿತಿ ಪಡೆದ ಅನಂತರ ನೀವು ಅದನ್ನು ಹಿಂತೆಗೆದುಕೊಂಡರೆ ಶೇ. 10ರಷ್ಟು ದೀರ್ಘಾವಧಿಯ ಬಂಡವಾಳ ಲಾಭ ತೆರಿಗೆಯನ್ನು ಪಾವತಿಸಿದರೆ ನಿಮ್ಮ ತೆರಿಗೆ ಮೊತ್ತವು 17,54,956.90 ರೂ. ತೆರಿಗೆ ಪಾವತಿಸಿದ ಅನಂತರ ಕೊನೆಯಲ್ಲಿ 1,58,94,612.10 ರೂ. ಉಳಿಯುತ್ತದೆ.

ಇದನ್ನೂ ಓದಿ: Price Hike: ಮೊಬೈಲ್ ಕಂಪನಿಗಳಿಂದ ದರ ಏರಿಕೆ; ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬಹುದೆ?

ಮಾಸಿಕ ಪಿಂಚಣಿ ಪಡೆಯಲು ಹೂಡಿಕೆ ಮಾಡುವುದರಿಂದ ಸಾಲ ನಿಧಿಯನ್ನು ಸುರಕ್ಷಿತ ಆಯ್ಕೆ ಮಾಡಬಹುದು. ಅಲ್ಲಿ ನಿಮ್ಮ ಹೂಡಿಕೆಯ ಮೇಲೆ ಸಾಧಾರಣ ಶೇ. 7ರಷ್ಟು ಲಾಭವನ್ನು ಪಡೆಯಬಹುದು.

1,58,94,612.10 ರೂ.ಗಳನ್ನು ಡೆಟ್ ಫಂಡ್‌ನಲ್ಲಿ ಹೂಡಿಕೆ ಮಾಡಿ ಶೇಕಡಾ ಏಳರಷ್ಟು ವಾರ್ಷಿಕ ಆದಾಯವನ್ನು ಪಡೆದರೆ 30 ವರ್ಷಗಳವರೆಗೆ 1 ಲಕ್ಷ ರೂಪಾಯಿಗಳ ಮಾಸಿಕ ಪಿಂಚಣಿಯನ್ನು ಸುಲಭವಾಗಿ ಡ್ರಾ ಮಾಡಬಹುದು ಮತ್ತು ಅದರ ಅನಂತರವೂ ನಿಮ್ಮ ಬಳಿ 62,99,829 ರೂ. ಮ್ಯೂಚುವಲ್ ಫಂಡ್ ಖಾತೆಯಲ್ಲಿ ಬಾಕಿ ಮೊತ್ತ ಉಳಿದಿರುತ್ತದೆ.

ಎಸ್‌ಐಪಿ ಈ ಯೋಜನೆಯ ಹೂಡಿಕೆ ಅವಧಿಯು 30 ವರ್ಷಗಳು ಮತ್ತು ಇದು ಸಾಕಷ್ಟು ದೀರ್ಘಾವಧಿಯದ್ದಾಗಿದೆ. ಆದರೆ ನಿವೃತ್ತಿ ಯೋಜನೆಯನ್ನು ಮೊದಲೇ ಪ್ರಾರಂಭಿಸಿದರೆ ಸುಲಭವಾಗುತ್ತದೆ. ಎಷ್ಟು ಬೇಗನೆ ಇದನ್ನು ಪ್ರಾರಂಭಿಸುತ್ತೀರೋ ಅಷ್ಟು ಹೆಚ್ಚಿನ ನಿವೃತ್ತಿ ಮೊತ್ತವನ್ನು ಪಡೆಯಲು ಸಾಧ್ಯವಾಗುತ್ತದೆ.

Continue Reading

ವಾಣಿಜ್ಯ

Credit Card New Rules: ಕ್ರೆಡಿಟ್ ಕಾರ್ಡ್‌ಗೆ ಹೊಸ ನಿಯಮ; ಗ್ರಾಹಕರು ಈಗ ಏನು ಮಾಡಬೇಕು?

ಎಲ್ಲಾ ಕ್ರೆಡಿಟ್ ಕಾರ್ಡ್ (Credit Card New Rules) ಬಿಲ್ ಪಾವತಿಗಳನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ನಿರ್ವಹಿಸುವ ಭಾರತ್ ಬಿಲ್ ಪಾವತಿ ವ್ಯವಸ್ಥೆ ಮೂಲಕ ರವಾನಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ನ ಆದೇಶ ಮಾಡಿದ್ದು, ಇದು ಕ್ರೆಡಿಟ್ ಕಾರ್ಡ್ ಬಳಸುತ್ತಿರುವ ಗ್ರಾಹಕರ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎನ್ನುವ ಮಾಹಿತಿ ಇಲ್ಲಿದೆ.

VISTARANEWS.COM


on

By

Credit Card New Rules
Koo

ಕ್ರೆಡಿಟ್ ಕಾರ್ಡ್ (Credit Card New Rules) ಬಿಲ್ ಪಾವತಿ (bill payment) ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಯನ್ನು ಮಾಡಲಾಗಿದ್ದು, ಇದು ಗ್ರಾಹಕರ ಮೇಲೆ ಪರಿಣಾಮ ಬೀರಲಿದೆ. ಎಲ್ಲಾ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗಳನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ನಿರ್ವಹಿಸುವ ಭಾರತ್ ಬಿಲ್ ಪಾವತಿ ವ್ಯವಸ್ಥೆ (BBPS) ಮೂಲಕ ರವಾನಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ನ (RBI) ಆದೇಶದಲ್ಲಿ ತಿಳಿಸಿದೆ.

ಆದರೆ, ಕ್ರೆಡಿಟ್ ಕಾರ್ಡ್ ಪಾವತಿಗಳಿಗಾಗಿ CRED ಮತ್ತು PhonePe ನಂತಹ ಜನಪ್ರಿಯ ಅಪ್ಲಿಕೇಶನ್‌ಗಳನ್ನು ಪರಿಣಾಮಕಾರಿಯಾಗಿ ಬಳಸುವಲ್ಲಿ ತಮ್ಮ ಬ್ಯಾಂಕ್‌ಗಳು ಇನ್ನೂ ಸಕ್ರಿಯವಾಗಿಲ್ಲ ಎಂದು ಅನೇಕ ಗ್ರಾಹಕರು ದೂರಿದ್ದಾರೆ.

ಬ್ಯಾಂಕ್ ಏಕೀಕರಣದ ಪ್ರಸ್ತುತ ಸ್ಥಿತಿ ಏನಿದೆ?

ಭಾರತದಲ್ಲಿ ಕ್ರೆಡಿಟ್ ಕಾರ್ಡ್‌ಗಳನ್ನು ವಿತರಿಸಲು ಅಧಿಕಾರ ಹೊಂದಿರುವ 34 ಬ್ಯಾಂಕ್‌ಗಳಲ್ಲಿ 12 ಮಾತ್ರ ಪ್ರಸ್ತುತ BBPS ಪ್ಲಾಟ್‌ಫಾರ್ಮ್‌ನಲ್ಲಿ ಇದೆ. ಉಳಿದ 22 ಬ್ಯಾಂಕ್‌ಗಳು ಇನ್ನೂ ವ್ಯವಸ್ಥೆಯೊಂದಿಗೆ ಸಂಯೋಜಿಸುವ ಪ್ರಕ್ರಿಯೆಯಲ್ಲಿವೆ. ಪ್ರಸ್ತುತ ಎಸ್‌ಬಿಐ ಕಾರ್ಡ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಎಯು ಸಣ್ಣ ಹಣಕಾಸು ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಕೆನರಾ ಬ್ಯಾಂಕ್, ಫೆಡರಲ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಐಡಿಬಿಐ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಸಾರಸ್ವತ್ ಬ್ಯಾಂಕ್ ಗಳು ಬಿಬಿಪಿಎಸ್ ಪ್ಲಾಟ್ ಫಾರ್ಮ್ ನಲ್ಲಿ ಇವೆ.

ಆಕ್ಸಿಸ್ ಬ್ಯಾಂಕ್, ಹೆಚ್ ಡಿಎಫ್ ಸಿ ಬ್ಯಾಂಕ್, ಐಡಿಎಫ್ ಸಿ ಫಸ್ಟ್ ಬ್ಯಾಂಕ್, ಇಂಡಿಯನ್ ಬ್ಯಾಂಕ್, ಇಂಡಿಯನ್ ಓವರ್ಸೀಸ್ ಬ್ಯಾಂಕ್, ಯೆಸ್ ಬ್ಯಾಂಕ್ ಗಳು ಸೇರಿದಂತೆ ಇನ್ನು ಹಲವು ಬ್ಯಾಂಕ್ ಗಳು ಬಿಬಿಪಿಎಸ್ ನೊಂದಿಗೆ ಸೇರುವ ಪ್ರಯತ್ನದಲ್ಲಿದೆ.

ಇನ್ನೂ ಅಪ್‌ಡೇಟ್‌ ಆಗಿಲ್ಲ ಏಕೆ?

ಕೆಲವು ಬ್ಯಾಂಕ್‌ಗಳು ಬಿಬಿಪಿಎಸ್ ಅನ್ನು ಅಳವಡಿಸಿಕೊಳ್ಳುವಲ್ಲಿ ವಿಳಂಬವನ್ನು ಅನುಸರಿಸಲು ಹಲವಾರು ಅಂಶಗಳು ಕಾರಣವೆಂದು ಹೇಳಬಹುದು. ಏಕೀಕರಣವು ಅಸ್ತಿತ್ವದಲ್ಲಿರುವ ಸಿಸ್ಟಮ್‌ಗಳಿಗೆ ಗಮನಾರ್ಹವಾದ ನವೀಕರಣಗಳ ಅಗತ್ಯವಿದೆ. ಇದು ಸಂಕೀರ್ಣವಾಗಿದ್ದು, ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಮತ್ತು ಇದು ದುಬಾರಿ ಪ್ರಕ್ರಿಯೆಯಾಗಿದೆ.

ಕೆಲವು ಬ್ಯಾಂಕುಗಳು ಈ ಪ್ರಕ್ರಿಯೆಯನ್ನು ಸಮರ್ಥವಾಗಿ ಕೈಗೊಳ್ಳಲು ಅಗತ್ಯವಾದ ಸಂಪನ್ಮೂಲಗಳು ಅಥವಾ ತಾಂತ್ರಿಕ ಸಾಮರ್ಥ್ಯಗಳನ್ನು ಹೊಂದಿಲ್ಲ. ಇದಲ್ಲದೆ, ಬ್ಯಾಂಕ್‌ಗಳು ಬಿಲ್ ಪಾವತಿ ಸೌಲಭ್ಯಕ್ಕಿಂತ ಹೆಚ್ಚು ನಿರ್ಣಾಯಕ ಅಥವಾ ಲಾಭದಾಯಕವೆಂದು ಪರಿಗಣಿಸುವ ಡಿಜಿಟಲ್ ಬ್ಯಾಂಕಿಂಗ್ ಅಥವಾ ಹಣಕಾಸು ಸೇವೆಗಳ ಇತರ ಕ್ಷೇತ್ರಗಳಿಗೆ ಆದ್ಯತೆ ನೀಡುತ್ತಿದೆ. ಹೆಚ್ಚುವರಿಯಾಗಿ, ಅನೇಕ ಬ್ಯಾಂಕುಗಳು ತಮ್ಮದೇ ಆದ ಪಾವತಿ ವ್ಯವಸ್ಥೆಯನ್ನು ಹೊಂದಿವೆ ಮತ್ತು ಗ್ರಾಹಕರನ್ನು ತಮ್ಮ ಪರಿಸರ ವ್ಯವಸ್ಥೆಯೊಳಗೆ ನಿಕಟ ಸಂಬಂಧಗಳನ್ನು ಕಾಪಾಡಿಕೊಳ್ಳಲು ಮತ್ತು ವಹಿವಾಟಿನ ಮೇಲೆ ನಿಯಂತ್ರಣವನ್ನು ಇರಿಸಿಕೊಳ್ಳಲು ಆದ್ಯತೆ ನೀಡುತ್ತಿವೆ. ಹಾಗಾಗಿ ಈ ಅಪ್‌ಡೇಟ್‌ ಪ್ರಕ್ರಿಯೆ ವಿಳಂಬವಾಗಿದೆ.

ಏನು ಇದರ ಪರಿಣಾಮ?

ಆರ್‌ಬಿಐನ ಹೊಸ ಆದೇಶವು ಪ್ರಾಥಮಿಕವಾಗಿ ಮೂರನೇ ವ್ಯಕ್ತಿಯ ಅಪ್ಲಿಕೇಶನ್‌ಗಳನ್ನು ಅವಲಂಬಿಸಿರುವ ಕ್ರೆಡಿಟ್ ಕಾರ್ಡ್ ಬಳಕೆದಾರರ ಮೇಲೆ ಪರಿಣಾಮ ಬೀರುತ್ತದೆ ಮತ್ತು ಈ ಪ್ಲಾಟ್‌ಫಾರ್ಮ್‌ಗಳು ಕೊಡುಗೆಗಳನ್ನು ನೀಡುತ್ತಿತ್ತು.

ಬ್ಯಾಂಕ್‌ಗಳು ಬಿಬಿಪಿಎಸ್ ಅನ್ನು ಅಳವಡಿಸಿಕೊಳ್ಳದಿದ್ದರೆ ಬಳಕೆದಾರರು ತಮ್ಮ ಪಾವತಿಗಳೊಂದಿಗೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಬಿಬಿಪಿಎಸ್‌ನ ಹಿಂದಿನ ಮುಖ್ಯ ಆಲೋಚನೆಯು ಬಿಲ್ ಪಾವತಿ ಪ್ರಕ್ರಿಯೆಯನ್ನು ಕೇಂದ್ರೀಕರಿಸುವುದು ಮತ್ತು ಸುಗಮಗೊಳಿಸುವುದು. ಬಳಕೆದಾರರಿಗೆ ಒಂದೇ ಪ್ಲಾಟ್‌ಫಾರ್ಮ್‌ನಿಂದ ಬಹು ಬಿಲ್‌ಗಳನ್ನು ನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಬಿಬಿಪಿಎಸ್ ಗೆ ಪ್ರವೇಶವಿಲ್ಲದೆ ಬಳಕೆದಾರರು ಹಲವಾರು ಪ್ಲಾಟ್‌ಫಾರ್ಮ್‌ಗಳನ್ನು ನ್ಯಾವಿಗೇಟ್ ಮಾಡಬೇಕಾಗಬಹುದು ಅಥವಾ ಹಲವಾರು ಪಾವತಿ ಸೆಟಪ್‌ಗಳನ್ನು ನಿರ್ವಹಿಸಬೇಕಾಗಬಹುದು. ಪ್ರಕ್ರಿಯೆಯನ್ನು ಸಂಕೀರ್ಣಗೊಳಿಸಬಹುದು.

ಬಿಬಿಪಿಎಸ್ ನೊಂದಿಗೆ ಬ್ಯಾಂಕ್‌ಗಳನ್ನು ಸಂಯೋಜಿಸದ ಕ್ರೆಡಿಟ್ ಕಾರ್ಡ್ ಬಳಕೆದಾರರು ಕೆಲವು ಬಿಲ್ ಪಾವತಿಗಳಿಗೆ ತಮ್ಮ ಕಾರ್ಡ್‌ಗಳನ್ನು ಬಳಸಲು ಸಾಧ್ಯವಾಗದಿರಬಹುದು.

ಇದನ್ನೂ ಓದಿ: SEBI: ಅದಾನಿ ವರದಿ: ಹಿಂಡನ್‌ಬರ್ಗ್‌ಗೆ ಸೆಬಿಯಿಂದ ಶೋಕಾಸ್ ನೋಟಿಸ್

ಹಾಗಾದರೆ ಗ್ರಾಹಕರು ಏನು ಮಾಡಬಹುದು?

ಸದ್ಯಕ್ಕೆ ಬಿಬಿಪಿಎಸ್ ಪ್ಲಾಟ್‌ಫಾರ್ಮ್‌ನಲ್ಲಿ ತಮ್ಮ ಬ್ಯಾಂಕ್ ಸಕ್ರಿಯವಾಗಿದೆಯೇ ಎಂಬುದನ್ನು ಪರಿಶೀಲಿಸಲು ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಸಲಹೆ ನೀಡಲಾಗುತ್ತಿದೆ. ಈ ಮಾಹಿತಿಯು ಸಾಮಾನ್ಯವಾಗಿ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಅಥವಾ ಗ್ರಾಹಕ ಸೇವಾ ಚಾನೆಲ್‌ಗಳ ಮೂಲಕ ಲಭ್ಯವಿರುತ್ತದೆ. ಬ್ಯಾಂಕ್‌ಗಳು ಇನ್ನೂ ಬಿಬಿಪಿಎಸ್ ನಲ್ಲಿ ಸೇರಿಕೊಳ್ಳದೇ ಇದ್ದರೆ ತಮ್ಮ ಬಿಲ್ ಪಾವತಿ ಕಷ್ಟವಾಗಬಹುದು. ಗಡುವು ಮೀರಿದ ದಂಡ ಶುಲ್ಕದಿಂದ ಪಾರಾಗಲು ಪರ್ಯಾಯ ಪಾವತಿ ವಿಧಾನಗಳನ್ನು ಹುಡುಕಿಕೊಳ್ಳಬೇಕಾಗುತ್ತದೆ. ಆಯಾ ಬ್ಯಾಂಕ್‌ನ ಕಾಲ್‌ ಸೆಂಟರ್‌ಗೆ ಕರೆ ಮಾಡಿ ನೆರವು ಕೋರಬೇಕು.

Continue Reading
Advertisement
ತುಮಕೂರು19 mins ago

Koratagere News: ವೀರಶೈವ ನೌಕರರ ಸಂಘದಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

Home remedies for Dengue
ಆರೋಗ್ಯ22 mins ago

Home remedies for Dengue: ಸರಳ ಮನೆ ಮದ್ದು ಬಳಸಿ; ಡೆಂಗ್ಯೂ ಅಪಾಯದಿಂದ ಪಾರಾಗಿ!

ಪ್ರಮುಖ ಸುದ್ದಿ23 mins ago

Menstrual Leave: ಋತುಸ್ರಾವದ ರಜೆ ಬಗ್ಗೆ ಮಾದರಿ ನೀತಿ ರೂಪಿಸಲು ಸರ್ಕಾರಕ್ಕೆ ಸುಪ್ರೀಂ ಕೋರ್ಟ್​​​ ನಿರ್ದೇಶನ

cm Siddaramaiah
ಪ್ರಮುಖ ಸುದ್ದಿ23 mins ago

CM Siddaramaiah: ರಾಜ್ಯದಲ್ಲಿ ಶೇ.80 ಬಿಪಿಎಲ್‌ ಕಾರ್ಡ್‌! ಕಡಿತ ಮಾಡಲು ಸಿಎಂ ಸೂಚನೆ

Narendra modi Russia visit
ದೇಶ25 mins ago

Narendra Modi Russia Visit: ಪ್ರಧಾನಿ ಮೋದಿ ಮೂರು ದಿನಗಳ ವಿದೇಶ ಪ್ರವಾಸ; ರಷ್ಯಾ, ಆಸ್ಟ್ರೀಯಾಕ್ಕೆ ಭೇಟಿ

ಕರ್ನಾಟಕ30 mins ago

Rain Affected areas: ಮಳೆ ಸಂತ್ರಸ್ತ ಪ್ರದೇಶಗಳಲ್ಲಿ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಿ: ಡಿಸಿಗಳಿಗೆ ಸಿಎಂ ಸೂಚನೆ

Murder Case
Latest53 mins ago

Murder Case: ಕದ್ದುಮುಚ್ಚಿ ಸರಸವಾಡುತ್ತಿದ್ದ ಮಹಿಳೆ ಸಿಕ್ಕಿಬಿದ್ದಾಗ ಗಂಡನನ್ನೇ ಕೊಂದಳು!

road Accident
ಕೊಪ್ಪಳ54 mins ago

Road Accident : ಕೊಪ್ಪಳದಲ್ಲಿ ಟಿಪ್ಪರ್‌ ಹರಿದು ಬೈಕ್‌ ಸವಾರ ಸಾವು

Abhishek Sharma
ಪ್ರಮುಖ ಸುದ್ದಿ55 mins ago

Abhishek Sharma : ಅಭಿಷೇಕ್​ ಶತಕಕ್ಕೆ ಸಹೋದರಿಯ ಚಪ್ಪಾಳೆ, ವಿಡಿಯೊ ಶೇರ್ ಮಾಡಿದ ಕೋಮಲ್​ ಶರ್ಮಾ

MUDA site scandal
ಕರ್ನಾಟಕ1 hour ago

MUDA site scandal: ಸಿಎಂ ಆಪ್ತ ರಾಕೇಶ್‌ ಪಾಪಣ್ಣಗೆ ಹಂಚಿಕೆಯಾಗಿದ್ದ ಮುಡಾ ಸೈಟ್‌ಗೂ ತಡೆ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ1 hour ago

Karnataka Rain : ಭಾರಿ ಮಳೆಗೆ ಉಕ್ಕಿ ಹರಿಯುತ್ತಿರುವ ಹಳ್ಳ; ಪ್ರಾಣದ ಹಂಗು ತೊರೆದು ಶಾಲೆಗೆ ಹೋಗಬೇಕು!

Karnataka weather Forecast
ಮಳೆ2 hours ago

Karnataka Rain : ರಕ್ಕಸ ಅಲೆಗಳ ಮಧ್ಯೆ ಈಜಲು ಹೋದ ಪ್ರವಾಸಿಗರಿಗೆ ಬಿತ್ತು ಬಿಸಿ ಬಿಸಿ ಕಜ್ಜಾಯ‌!

karnataka weather Forecast
ಮಳೆ19 hours ago

Karnataka weather : ನಾಳೆ ಭಾರಿ ಮಳೆ ಎಚ್ಚರಿಕೆ; ಕರಾವಳಿಯ ಈ ಶಾಲಾ-ಕಾಲೇಜುಗಳಿಗೆ ರಜೆ

Davanagere news
ಮಳೆ21 hours ago

Davanagere News : ಆ ಗ್ರಾಮಕ್ಕೆ ಕಾಲಿಡದ ವರುಣ! ಮಳೆಗಾಗಿ ಗ್ರಾಮಸ್ಥರಿಂದ ಕಂತೆ ಭಿಕ್ಷೆ

Karnataka Rain
ಮಳೆ22 hours ago

Karnataka Rain : ವೀಕೆಂಡ್‌ನಲ್ಲಿ ಸಿಲಿಕಾನ್‌ ಸಿಟಿಯಲ್ಲಿ ಮಳೆ ಮೋಡಿ; ಮತ್ತೆ ಗುಡ್ಡ ಕುಸಿತ ಶುರು

karnataka weather Forecast
ಮಳೆ1 day ago

Karnataka Weather : ವೇಗವಾಗಿ ಬೀಸುವ ಗಾಳಿ ಜತೆಗೆ ಅಬ್ಬರಿಸಲಿದೆ ಮಳೆ; ಈ ಜಿಲ್ಲೆಗಳಿಗೆ ಎಚ್ಚರಿಕೆ

karnataka weather Forecast
ಮಳೆ2 days ago

Karnataka Weather : ಚಾರಣಪ್ರಿಯರಿಗೆ ಶಾಕ್‌; ಭಾರಿ ಮಳೆಯಿಂದಾಗಿ ಈ ಜಾಗಗಳಿಗೆ ಟ್ರೆಕ್ಕಿಂಗ್‌ ನಿಷೇಧ

Murder case
ಯಾದಗಿರಿ2 days ago

Murder case : ಯಾದಗಿರಿಯಲ್ಲಿ ಹಸುಗೂಸನ್ನು ಬಾವಿಗೆ ಎಸೆದು ಕೊಂದರು ಹಂತಕರು

karnataka Rain
ಮಳೆ2 days ago

Karnataka Rain : ಭಾರಿ ಗಾಳಿ- ಮಳೆಗೆ ಹಾರಿದ ಅಂಗಡಿಯ ತಗಡು; ಮಾಗುಂಡಿ-ಬಾಳೆಹೊನ್ನೂರು ಮಾರ್ಗ ಬಂದ್

Food Poisoning
ರಾಯಚೂರು2 days ago

Food Poisoning : ಮೊರಾರ್ಜಿ ವಸತಿ ಶಾಲೆ ಅವ್ಯವಸ್ಥೆ; ಊಟ ಸೇವಿಸಿದ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

ಟ್ರೆಂಡಿಂಗ್‌