LIC New Jeevan Shanti Plan: ಒಮ್ಮೆ ಪಾವತಿಸಿದರೆ ಸಾಕು; ಜೀವನ ಪರ್ಯಂತ ಪಿಂಚಣಿ! - Vistara News

ಮನಿ-ಗೈಡ್

LIC New Jeevan Shanti Plan: ಒಮ್ಮೆ ಪಾವತಿಸಿದರೆ ಸಾಕು; ಜೀವನ ಪರ್ಯಂತ ಪಿಂಚಣಿ!

ಉದ್ಯೋಗದಲ್ಲಿದ್ದಾಗ ನಾವು ಮಾಡಬಹುದಾದ ಒಂದು ದೊಡ್ಡ ಮೊತ್ತದ ಉಳಿತಾಯವೂ ವೃದ್ಧಾಪ್ಯದಲ್ಲಿ ನಮ್ಮ ಎಲ್ಲಾ ಅಗತ್ಯಗಳನ್ನು ಪೂರೈಸುತ್ತದೆ. ಆದರೆ ದೈನಂದಿನ ಕೆಲಸಕ್ಕೆ ನಿಯಮಿತ ಆದಾಯದ ಅಗತ್ಯವಿರುತ್ತದೆ. ಇದಕ್ಕಾಗಿ ವ್ಯವಸ್ಥೆ ಇಲ್ಲದಿದ್ದರೆ, ವೃದ್ಧಾಪ್ಯದಲ್ಲಿ ಪ್ರತಿಯೊಂದು ಸಣ್ಣ ಮತ್ತು ದೊಡ್ಡ ಅಗತ್ಯಕ್ಕೂ ಇತರರನ್ನು ಅವಲಂಬಿಸಬೇಕಾಗುತ್ತದೆ. ಎಲ್ ಇಸಿಯ ಹೊಸ ಜೀವನ ಶಾಂತಿ ಯೋಜನೆಯು (LIC New Jeevan Shanti Plan) ಈ ಸಮಸ್ಯೆಯನ್ನು ದೂರಮಾಡಬಲ್ಲದು. ಈ ಯೋಜನೆಯ ವಿವರ ಇಲ್ಲಿದೆ.

VISTARANEWS.COM


on

LIC New Jeevan Shanti Plan
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವೃದ್ಧಾಪ್ಯದಲ್ಲಿ ಆರ್ಥಿಕ ತೊಂದರೆಯನ್ನು ದೂರ ಮಾಡಲು ಪಿಂಚಣಿ ಯೋಜನೆಯು (lifetime pension) ನಿಮಗೆ ಸಹಾಯ ಮಾಡುತ್ತದೆ. ಎಲ್‌ಐಸಿಯು (LIC) ಪರಿಚಯಿಸಿರುವ ಹೊಸ ಜೀವನ ಶಾಂತಿ ಯೋಜನೆಯು (LIC New Jeevan Shanti Plan) ವೃದ್ಧಾಪ್ಯದಲ್ಲಿ ಎದುರಾಗಬಹುದಾದ ಹಣಕಾಸಿನ ಸಮಸ್ಯೆಯನ್ನು ಪರಿಹರಿಸುತ್ತದೆ. ಇದಕ್ಕಾಗಿ ಒಮ್ಮೆ ಮಾತ್ರ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಬಳಿಕ ಜೀವಮಾನ ಪೂರ್ತಿ ಪಿಂಚಣಿ ಸೌಲಭ್ಯ ಪಡೆಯಬಹುದು.

ಇಂದಿನ ದಿನಗಳಲ್ಲಿ ಹೆಚ್ಚಿನ ಜನರು ಖಾಸಗಿ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕೆಲಸದ ಸಮಯದಲ್ಲಿ ಸಾಕಷ್ಟು ಹಣವನ್ನು ಗಳಿಸಬಹುದು ಮತ್ತು ವೃದ್ಧಾಪ್ಯಕ್ಕಾಗಿ ಅದನ್ನು ಉಳಿಸಬಹುದು.

ಒಂದು ದೊಡ್ಡ ಮೊತ್ತದ ಉಳಿತಾಯವೂ ಎಲ್ಲಾ ಅಗತ್ಯಗಳನ್ನು ಪೂರೈಸುತ್ತದೆ. ಆದರೆ ದೈನಂದಿನ ಕೆಲಸಕ್ಕೆ ನಿಯಮಿತ ಆದಾಯದ ಅಗತ್ಯವಿರುತ್ತದೆ. ನಿಮ್ಮಲ್ಲಿ ಈ ವ್ಯವಸ್ಥೆ ಇಲ್ಲದಿದ್ದರೆ, ವೃದ್ಧಾಪ್ಯದಲ್ಲಿ ಪ್ರತಿಯೊಂದು ಸಣ್ಣ ಮತ್ತು ದೊಡ್ಡ ಅಗತ್ಯಕ್ಕೂ ಇತರರನ್ನು ಅವಲಂಬಿಸಬೇಕಾಗುತ್ತದೆ. ಎಲ್ ಇಸಿಯ ಹೊಸ ಜೀವನ ಶಾಂತಿ ಯೋಜನೆಯು ಈ ಸಮಸ್ಯೆಯನ್ನು ಪರಿಹರಿಸುತ್ತದೆ.

ಹೊಸ ಜೀವನ್ ಶಾಂತಿ ಯೋಜನೆ

ಈ ಯೋಜನೆಯ ಅಡಿಯಲ್ಲಿ ಎರಡು ಹೂಡಿಕೆ ಆಯ್ಕೆಗಳನ್ನು ನೀಡಲಾಗಿದೆ. ಮೊದಲ ಏಕ ಜೀವನ ಮತ್ತು ಎರಡನೇ ಜಂಟಿ ಜೀವನ. ನೀವು ‘ಡಿಫರ್ಡ್ ಆನ್ಯುಟಿ ಫಾರ್ ಸಿಂಗಲ್ ಲೈಫ್’ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಮುಂದೂಡಲ್ಪಟ್ಟ ಅವಧಿ ಮುಗಿದ ಅನಂತರ ನಿಗದಿತ ಮೊತ್ತವನ್ನು ಪಿಂಚಣಿಯಾಗಿ ಪಡೆಯುತ್ತೀರಿ ಮತ್ತು ಮರಣದ ಅನಂತರ ಹೂಡಿಕೆ ಮಾಡಿದ ಹಣವನ್ನು ನಿಮ್ಮ ನಾಮಿನಿಗೆ ಹಿಂತಿರುಗಿಸಲಾಗುತ್ತದೆ.

ಜಂಟಿ ಜೀವನಕ್ಕಾಗಿ ಮುಂದೂಡಲ್ಪಟ್ಟ ವರ್ಷಾಶನದಲ್ಲಿ ಹೂಡಿಕೆ ಮಾಡುವುದರಿಂದ ಮುಂದೂಡಲ್ಪಟ್ಟ ಅವಧಿ ಮುಗಿದ ಅನಂತರ ನೀವು ಪಿಂಚಣಿ ಪಡೆಯಲು ಪ್ರಾರಂಭಿಸುತ್ತೀರಿ ಮತ್ತು ನಿಮ್ಮ ಮರಣದ ಅನಂತರ, ಯಾರ ಹೆಸರನ್ನು ಸೇರಿಸಲಾಗಿದೆಯೋ ಆ ವ್ಯಕ್ತಿಗೆ ಆಜೀವ ಪಿಂಚಣಿ ಸಿಗುತ್ತದೆ.

ಹೂಡಿಕೆ ಮಾಡಿದ ಮೊತ್ತವನ್ನು ಇಬ್ಬರ ಮರಣದ ಅನಂತರವೇ ನಾಮಿನಿಗೆ ನೀಡಲಾಗುತ್ತದೆ. ಅಜ್ಜ, ಪೋಷಕರು, ಮಕ್ಕಳು, ಮೊಮ್ಮಕ್ಕಳು, ಗಂಡ- ಹೆಂಡತಿ ಅಥವಾ ಒಡಹುಟ್ಟಿದವರಂತಹ ಹತ್ತಿರದ ಸಂಬಂಧಿಗಳೊಂದಿಗೆ ಜಂಟಿ ಜೀವನ ಯೋಜನೆಯನ್ನು ತೆಗೆದುಕೊಳ್ಳಬಹುದು. ಪಿಂಚಣಿಗಾಗಿ ನೀವು ವಾರ್ಷಿಕ, ಅರ್ಧ ವಾರ್ಷಿಕ, ತ್ರೈಮಾಸಿಕ ಮತ್ತು ಮಾಸಿಕ ಆಯ್ಕೆಯನ್ನು ಪಡೆಯುತ್ತೀರಿ.

LIC New Jeevan Shanti Plan
LIC New Jeevan Shanti Plan


ಕನಿಷ್ಠ 1.5 ಲಕ್ಷ ರೂ. ಹೂಡಿಕೆ ಅಗತ್ಯ

ಈ ಯೋಜನೆಯಲ್ಲಿ ಕನಿಷ್ಠ 1.5 ಲಕ್ಷ ರೂ. ಹೂಡಿಕೆ ಮಾಡುವುದು ಅವಶ್ಯಕ. ಗರಿಷ್ಠ ಖರೀದಿ ಬೆಲೆಗೆ ಯಾವುದೇ ಮಿತಿಯಿಲ್ಲ. 1.5 ಲಕ್ಷ ರೂ. ಹೂಡಿಕೆ ಮಾಡಿದರೆ ವಾರ್ಷಿಕವಾಗಿ 12 ಸಾವಿರ ರೂಪಾಯಿ ಪಿಂಚಣಿ ಮತ್ತು ಮಾಸಿಕ 1000 ರೂಪಾಯಿಗಳನ್ನು ಪಡೆಯಬಹುದು.

30ರಿಂದ 79 ವರ್ಷ ವಯಸ್ಸಿನ ಯಾವುದೇ ವ್ಯಕ್ತಿ ಈ ಪಾಲಿಸಿಯನ್ನು ಖರೀದಿಸಬಹುದು. ಪಾಲಿಸಿಯನ್ನು ಖರೀದಿಸಿದ ಅನಂತರ ನಿಮಗೆ ಇಷ್ಟವಾಗದಿದ್ದರೆ ನೀವು ಅದನ್ನು ಯಾವಾಗ ಬೇಕಾದರೂ ಸರೆಂಡರ್ ಮಾಡಬಹುದು. ಈ ಪಾಲಿಸಿಯಲ್ಲಿ ಸಾಲ ಪಡೆಯುವ ಸೌಲಭ್ಯವನ್ನೂ ನೀಡಲಾಗಿದೆ.

10 ಲಕ್ಷ ರೂ. ಹೂಡಿಕೆಗೆ ಎಷ್ಟು ಪಿಂಚಣಿ?

ಈ ಪಾಲಿಸಿಯನ್ನು ಖರೀದಿಸುವಾಗ ಮುಂದೂಡುವ ಅವಧಿ ಅಂದರೆ ಹೂಡಿಕೆ ಮತ್ತು ಪಿಂಚಣಿ ಆರಂಭದ ನಡುವಿನ ಅವಧಿ ಅಥವಾ ಹೆಚ್ಚಿನ ವಯಸ್ಸು ಹೂಡಿಕೆ ಮಾಡಿದರೆ ಹೆಚ್ಚಿನ ಪಿಂಚಣಿ ಪಡೆಯುತ್ತೀರಿ ಎಂಬುದನ್ನು ನೆನಪಿನಲ್ಲಿಡಿ.

45ನೇ ವಯಸ್ಸಿನಲ್ಲಿ ಹೊಸ ಜೀವನ ಶಾಂತಿ ಯೋಜನೆಯ ಏಕ ಜೀವನಕ್ಕಾಗಿ ಮುಂದೂಡಲ್ಪಟ್ಟ ವರ್ಷಾಶನವನ್ನು 10 ಲಕ್ಷ ರೂಪಾಯಿಗೆ ಖರೀದಿಸಿದರೆ ಮತ್ತು 12 ವರ್ಷಗಳ ಮುಂದೂಡುವ ಅವಧಿಯನ್ನು ಇಟ್ಟುಕೊಂಡರೆ 12 ವರ್ಷಗಳ ಅನಂತರ ವಾರ್ಷಿಕವಾಗಿ 1,42,500 ರೂಪಾಯಿಗಳನ್ನು ಪಡೆಯಲು ಪ್ರಾರಂಭಿಸುತ್ತೀರಿ.

ಇದನ್ನೂ ಓದಿ: LPG Price Hike: ತಿಂಗಳ ಆರಂಭದಲ್ಲೇ ಎಲ್‌ಪಿಜಿ ಗ್ರಾಹಕರಿಗೆ ಬೆಲೆ ಏರಿಕೆಯ ಶಾಕ್‌; ಬೆಂಗಳೂರಿನಲ್ಲಿ ಇಷ್ಟಾಗಿದೆ ದರ

ಅರ್ಧ ವಾರ್ಷಿಕ ಪಿಂಚಣಿ ಆಯ್ಕೆ ಮಾಡಿದರೆ ಪ್ರತಿ ಆರು ತಿಂಗಳಿಗೊಮ್ಮೆ 69,825 ರೂ.ಗಳನ್ನು, ತ್ರೈಮಾಸಿಕ ಪಿಂಚಣಿ ಆಯ್ಕೆಯನ್ನು ಮಾಡಿದರೆ 34,556 ಮತ್ತು ಮಾಸಿಕ ಪಿಂಚಣಿ ಆಯ್ಕೆ ಮಾಡಿದರೆ ಪ್ರತಿ ತಿಂಗಳು 11,400 ರೂ. ಪಡೆಯಬಹುದು.

45ನೇ ವಯಸ್ಸಿನಲ್ಲಿ ಜಂಟಿ ಜೀವನ ಯೋಜನೆಗಾಗಿ ಮುಂದೂಡಲ್ಪಟ್ಟ ವರ್ಷಾಶನವನ್ನು 12 ವರ್ಷಗಳ ಮುಂದೂಡಿಕೆ ಅವಧಿಯೊಂದಿಗೆ 10 ಲಕ್ಷಕ್ಕೆ ಖರೀದಿಸಿದರೆ ವಾರ್ಷಿಕವಾಗಿ 1,33,400 ರೂ., ಪ್ರತಿ ಆರು ತಿಂಗಳಿಗೊಮ್ಮೆ 65,366 ರೂ., ಮೂರು ತಿಂಗಳಿಗೊಮ್ಮೆ 32,350 ರೂ., ಮಾಸಿಕ 10,672 ರೂ. ಪಡೆಯಬಹುದು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮನಿ-ಗೈಡ್

National Pension System: ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆಗಾಗಿ ಎನ್‌ಪಿಎಸ್ ಯೋಜನೆ ಸೂಕ್ತ

ನಿವೃತ್ತಿ ಬಳಿಕ ಆರ್ಥಿಕ ಭದ್ರತೆ ಮತ್ತು ಸ್ಥಿರವಾದ ಬದುಕನ್ನು ಖಚಿತಪಡಿಸುವ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿ (National Pension System) 18 ವರ್ಷ ಮೇಲ್ಪಟ್ಟ ಎಲ್ಲರೂ ಹೂಡಿಕೆ ಮಾಡಬಹುದಾಗಿದೆ. ಹಣಕಾಸಿನ ವಿಚಾರದಲ್ಲಿ ಸರಿಯಾದ ಸಮಯದಲ್ಲಿ ಸರಿಯಾದ ಯೋಜನೆ ರೂಪಿಸಿಕೊಳ್ಳುವುದು ಸುಭದ್ರ ಭವಿಷ್ಯದ ದೃಷ್ಟಿಯಿಂದ ಅತ್ಯತ್ತಮ ಮಾರ್ಗವಾಗಿದೆ. ಎನ್‌ಪಿಎಸ್ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

VISTARANEWS.COM


on

By

India's National Pension System
Koo

ನಿವೃತ್ತಿ ಬಳಿಕ ಆರ್ಥಿಕ ಭದ್ರತೆ ಮತ್ತು ಸ್ಥಿರವಾದ ಬದುಕನ್ನು ಖಚಿತಪಡಿಸುವ ಉದ್ದೇಶದಿಂದ ಭಾರತದಲ್ಲಿ ಸರ್ಕಾರಿ ಪ್ರಾಯೋಜಿತ ಪಿಂಚಣಿ ಯೋಜನೆಯಾದ (pension scheme) ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (National Pension System) ಅನ್ನು ಜಾರಿಗೆ ತರಲಾಗಿದೆ. ಇದು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (Pension Fund Regulatory and Development Authority) ಅಡಿಯಲ್ಲಿ ಸ್ವಯಂಪ್ರೇರಿತ, ದೀರ್ಘಾವಧಿಯ ನಿವೃತ್ತಿ ಹೂಡಿಕೆ ಯೋಜನೆಯಾಗಿದೆ. ನಿವೃತ್ತಿ ಯೋಜನೆಗಾಗಿ ಉದ್ಯೋಗದ ಅವಧಿಯಲ್ಲಿ ವ್ಯವಸ್ಥಿತ ಉಳಿತಾಯಕ್ಕೆ ಆದ್ಯತೆ ನೀಡಲು ಎನ್ ಪಿಎಸ್ ಒಂದು ಅತ್ಯತ್ತಮ ಆಯ್ಕೆಯಾಗಿದೆ.

ದಾಖಲಾತಿ ಸುಲಭ

18ರಿಂದ 65 ವರ್ಷ ವಯಸ್ಸಿನ ಭಾರತೀಯ ನಾಗರಿಕರು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯನ್ನು ಆನ್‌ಲೈನ್‌ನಲ್ಲಿ eNPS ಪೋರ್ಟಲ್ ಮೂಲಕ ಅಥವಾ ಆಫ್‌ಲೈನ್‌ನಲ್ಲಿ ಯಾವುದೇ ಪಾಯಿಂಟ್ ಆಫ್ ಪ್ರೆಸೆನ್ಸ್-ಸರ್ವಿಸ್ ಪ್ರೊವೈಡರ್‌ನಲ್ಲಿ ಮಾಡಿಸಬಹುದು. ಇದಕ್ಕಾಗಿ ಗ್ರಾಹಕರ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ ಮತ್ತು ಚಂದಾದಾರರ ಫಾರ್ಮ್ ಅನ್ನು ಭರ್ತಿ ಮಾಡಬೇಕು.

ಖಾತೆಗಳಿಗೆ ಆರಂಭಿಕ 500 ರೂ. ಅಗತ್ಯವಿದ್ದು, ಕೆಲವು ವಿನಾಯಿತಿಗಳೊಂದಿಗೆ ನಿವೃತ್ತಿ ಅಥವಾ 60 ವರ್ಷವನ್ನು ತಲುಪುವವರೆಗೆ ಇವುಗಳನ್ನು ಹಿಂಪಡೆಯಲಾಗುವುದಿಲ್ಲ.


ಹೂಡಿಕೆಯ ಆಯ್ಕೆ

ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯು ಶ್ರೇಣಿ I ಮತ್ತು ಶ್ರೇಣಿ II ಖಾತೆಗಳನ್ನು ನೀಡುತ್ತದೆ. ಶ್ರೇಣಿ Iರಲ್ಲಿ ನಿವೃತ್ತಿಯ ಉಳಿತಾಯಕ್ಕಾಗಿ ಆದರೆ ಶ್ರೇಣಿ II ಸಕ್ರಿಯ ಸ್ವಯಂಪ್ರೇರಿತ ಪೂರಕ ಆಯ್ಕೆಯಾಗಿದೆ.

ಈಕ್ವಿಟಿ, ಕಾರ್ಪೊರೇಟ್ ಬಾಂಡ್‌ಗಳು, ಸರ್ಕಾರಿ ಭದ್ರತೆಗಳು ಮತ್ತು ಪರ್ಯಾಯ ಹೂಡಿಕೆಗಳ ನಡುವೆ ಸ್ವತ್ತುಗಳನ್ನು ನಿಯೋಜಿಸಲು ಚಂದಾದಾರರು ಸಕ್ರಿಯ ಆಯ್ಕೆಯನ್ನು ಮಾಡಬಹುದು ಅಥವಾ ಸ್ವಯಂ ಆಯ್ಕೆಯನ್ನು ಆರಿಸಿಕೊಳ್ಳಬಹುದು. ಇದು ಸ್ವಯಂಚಾಲಿತವಾಗಿ ವಯಸ್ಸಿನ ಆಧಾರದ ಮೇಲೆ ಬದಲಾಗುತ್ತದೆ.


ತೆರಿಗೆ ಉಳಿತಾಯ

ಎನ್‌ಪಿಎಸ್‌ನಲ್ಲಿ ತೆರಿಗೆ ಪ್ರಯೋಜನಗಳನ್ನು ನೀಡಲಾಗಿದೆ. ಎನ್‌ಪಿಎಸ್‌ನಲ್ಲಿನ ಹೂಡಿಕೆಗಳು ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80ಸಿಸಿಇ ಅಡಿಯಲ್ಲಿ ವಾರ್ಷಿಕ 1.5 ಲಕ್ಷ ರೂ.ವರೆಗಿನ ತೆರಿಗೆ ಪ್ರಯೋಜನಗಳನ್ನು ಒದಗಿಸುತ್ತದೆ. ಇದು ಸಂಬಳ ಪಡೆಯುವ ಮತ್ತು ಸ್ವಯಂ ಉದ್ಯೋಗಿ ಚಂದಾದಾರರಿಗೆ ಅನ್ವಯವಾಗುತ್ತದೆ. ಸೆಕ್ಷನ್ 80ಸಿಸಿಡಿ(1ಬಿ) ಅಡಿಯಲ್ಲಿ 50,000 ರೂ. ವರೆಗಿನ ವಿಶೇಷ ಕಡಿತ ಲಭ್ಯವಿದೆ.

ಇದನ್ನೂ ಓದಿ: ITR Filing: ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಯ ದಿನಾಂಕ 1 ತಿಂಗಳು ವಿಸ್ತರಣೆಗೆ ಮನವಿ

ಹಿಂತೆಗೆದುಕೊಳ್ಳಲು ಸರಳ ನಿಯಮ

ವಯಸ್ಸು 60 ತಲುಪಿದ ಅನಂತರ ಅಥವಾ ನಿವೃತ್ತಿಯಾದ ಬಳಿಕ ಚಂದಾದಾರರು ತಮ್ಮ ಕಾರ್ಪಸ್ ತೆರಿಗೆ- ಮುಕ್ತ ಶೇ. 60ರಷ್ಟನ್ನು ಮರಳಿ ಪಡೆಯಬಹುದು. ಉಳಿದ ಶೇ.40ರಷ್ಟನ್ನು ಸಾಮಾನ್ಯ ನಿವೃತ್ತಿ ಆದಾಯಕ್ಕಾಗಿ ವರ್ಷಾಶನವನ್ನು ಪಡೆಯಬಹುದಾಗಿದೆ.

60 ವರ್ಷಕ್ಕಿಂತ ಮೊದಲು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಿಂದ ನಿರ್ಗಮಿಸಲು ಸಾಧ್ಯ. ಆದರೆ ಇದು ಗಂಭೀರ ಅನಾರೋಗ್ಯದಂತಹ ಕಾರಣಗಳಿಗಾಗಿ ಮಾತ್ರ ಸಾಧ್ಯ.

Continue Reading

ಮನಿ-ಗೈಡ್

Money Guide: PPF v/s NPS Vatsalya ನಿಮ್ಮ ಮಕ್ಕಳಿಗೆ ಯಾವುದು ಉತ್ತಮ ಯೋಜನೆ? ಇಲ್ಲಿದೆ ವಿವರ

Money Guide: ಸಾರ್ವಜನಿಕರಲ್ಲಿ ಉಳಿತಾಯದ ಮನೋಭಾವವನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಸಾರ್ವಜನಿಕ ಭವಿಷ್ಯ ನಿಧಿ ಮತ್ತು ರಾಷ್ಟ್ರೀಯ ಪಿಂಚಣಿ ವಾತ್ಸಲ್ಯ ಯೋಜನೆಯನ್ನು ಆರಂಭಿಸಿದೆ. ಇವೆರಡು ಯೋಜನೆಗಳ ವೈಶಿಷ್ಟ್ಯ, ಯೋಜನೆ ನಡುವಿನ ವ್ಯತ್ಯಾಸ ಇಲ್ಲಿದೆ.

VISTARANEWS.COM


on

Money Guide
Koo

ಬೆಂಗಳೂರು: ಮಕ್ಕಳ ಜೀವನ, ಭವಿಷ್ಯ ಉತ್ತಮವಾಗಿರಬೇಕು ಎನ್ನುವುದು ಪ್ರತಿಯೊಬ್ಬ ಪೋಷಕರ ಕನಸು. ಈ ಕನಸು ನನಸಾಗಬೇಕಾದರೆ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕು. ಪ್ರಸ್ತುತ ಹೆಚ್ಚುತ್ತಿರುವ ಜೀವನ ವೆಚ್ಚ, ದುಬಾರಿಯಾಗುತ್ತಿರುವ ಶಿಕ್ಷಣ ಮುಂತಾದ ಕಾರಣಗಳಿಂದ ಇದಕ್ಕಾಗಿ ಈಗಲೇ ಒಂದಷ್ಟು ಯೋಜನೆ ರೂಪಿಸಬೇಕಾಗುತ್ತದೆ. ಜತೆಗೆ ಅವರ ನಿವೃತ್ತಿ ಜೀವನದ ಬಗ್ಗೆಯೂ ಚಿಂತನೆ ನಡೆಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಮಕ್ಕಳ ಹೆಸರಿನಲ್ಲಿ ಹೂಡಿಕೆ ಮಾಡುವುದು ಅತ್ಯುತ್ತಮ ನಿರ್ಧಾರ ಎನಿಸಿಕೊಳ್ಳಲಿದೆ ಎನ್ನುತ್ತಾರೆ ಆರ್ಥಿಕ ತಜ್ಞರು. ಇದೀಗ ಅಪ್ರಾಪ್ತ ವಯಸ್ಕರ ಹೆಸರಿನಲ್ಲಿಯೂ ಹೂಡಿಕೆ ಮಾಡಬಹುದಾದ ಆಯ್ಕೆ ಲಭ್ಯ. ಅವರ ಉನ್ನತ ಶಿಕ್ಷಣಕ್ಕೆ ಇದು ನೆರವಾಗುತ್ತದೆ. ಹಾಗಾದರೆ ಹೂಡಿಕೆಗೆ ಉತ್ತಮ ಆಯ್ಕೆ ಎನಿಸಿಕೊಂಡಿರುವ ಪಿಪಿಎಫ್‌ ಮತ್ತು ಇತ್ತೀಚೆಗೆ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿರುವ ಎನ್‌ಪಿಎಸ್ ವಾತ್ಸಲ್ಯ ಯೋಜನೆ ಪೈಕಿ ಯಾವುದು ಉತ್ತಮ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ (Money Guide).

ಸಾರ್ವಜನಿಕರಲ್ಲಿ ಉಳಿತಾಯದ ಮನೋಭಾವವನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಸಾರ್ವಜನಿಕ ಭವಿಷ್ಯ ನಿಧಿ (Public Provident Fund-PPF) ಮತ್ತು ರಾಷ್ಟ್ರೀಯ ಪಿಂಚಣಿ ವಾತ್ಸಲ್ಯ ಯೋಜನೆಯನ್ನು (National Pension Scheme Vatsalya) ಆರಂಭಿಸಿದೆ. ಇವೆರಡು ಯೋಜನೆಗಳ ವೈಶಿಷ್ಟ್ಯ, ಯೋಜನೆ ನಡುವಿನ ವ್ಯತ್ಯಾಸ ನೋಡೋಣ.

ಪಿಪಿಎಫ್‌

ಸಾರ್ವಜನಿಕ ಭವಿಷ್ಯ ನಿಧಿ-ಇದು ಸರ್ಕಾರ ನಿರ್ವಹಿಸುವ ಉಳಿತಾಯ ಯೋಜನೆಯಾಗಿರುವುದರಿಂದ ಇದರಲ್ಲಿ ಅಪಾಯ ಕಡಿಮೆ. ಜತೆಗೆ ತೆರಿಗೆ ಪ್ರಯೋಜವೂ ಲಭ್ಯ. ಮಕ್ಕಳಲ್ಲಿ ಉಳಿತಾಯ ಮನೋಭಾವವನ್ನು ಉತ್ತೇಜಿಸಲು ಸರ್ಕಾರ ಪಿಪಿಎಫ್‌ ಮೈನರ್‌ (PPF minor) ಖಾತೆಯನ್ನೂ ಜಾರಿಗೆ ತಂದಿದೆ. ಪಾಲಕರು ತಮ್ಮ ಅಪ್ರಾಪ್ತ ಮಗುವಿನ ಹೆಸರಿನಲ್ಲಿ ಪಿಪಿಎಫ್ ಖಾತೆಯನ್ನು ತೆರೆಯುವ ಆಯ್ಕೆಯನ್ನು ಹೊಂದಿದ್ದಾರೆ. ಆಕರ್ಷಕ ಬಡ್ಡಿದರ ಮತ್ತು ತೆರಿಗೆ ಪ್ರಯೋಜನಗಳನ್ನು ನೀಡುವ ಪಿಪಿಎಫ್ ಖಾತೆಯು ಮಕ್ಕಳಿಗಾಗಿಯೇ ವಿನ್ಯಾಸಗೊಳಿಸಲಾದ ಹೂಡಿಕೆ ಆಯ್ಕೆಗಳಲ್ಲಿ ಒಂದು. ಅಪ್ರಾಪ್ತ ಮಗುವಿಗೆ 18 ವರ್ಷ ತುಂಬುವವರೆಗೆ ಪಿಪಿಎಫ್ ಖಾತೆಯನ್ನು ಪಾಲಕರು ನಿರ್ವಹಿಸುತ್ತಾರೆ. ಬಳಿಕ ಆತ / ಅವಳು ತನ್ನ ಖಾತೆಯನ್ನು ಸ್ವತಂತ್ರವಾಗಿ ನಿರ್ವಹಿಸಬಹುದಾಗಿದೆ.

ಪಿಪಿಎಫ್‌ನ ವೈಶಿಷ್ಟ್ಯ

  • ವಾರ್ಷಿಕ ಗರಿಷ್ಠ 1,50,000 ರೂ.ಗಳಿಂದ ಕನಿಷ್ಠ 500 ರೂ.ಗಳವರೆಗೆ ಠೇವಣಿ ಇಡಬಹುದು.
  • ಮೂಲ ಅವಧಿ 15 ವರ್ಷಗಳು. ಅದರ ನಂತರ 5 ವರ್ಷಗಳ ಅವಧಿಗೆ ವಿಸ್ತರಿಸಬಹುದು. 
  • ಪ್ರತಿ ತ್ರೈಮಾಸಿಕದಲ್ಲಿ ಬಡ್ಡಿದರವನ್ನು ಕೇಂದ್ರ ಸರ್ಕಾರ ನಿರ್ಧರಿಸುತ್ತದೆ. ಪ್ರಸ್ತುತ ಬಡ್ಡಿದರ ವಾರ್ಷಿಕ ಶೇ. 7.10ರಷ್ಟಿದೆ.
  • ಖಾತೆಯ ತೆರೆದ ದಿನಾಂಕ ಆಧಾರದಲ್ಲಿ ಸಾಲ ಪಡೆಯಬಹುದು.
  • ಪಿಪಿಎಫ್ ಖಾತೆಗಳಲ್ಲಿನ ಹೂಡಿಕೆಗಳು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ವಿನಾಯಿತಿಗೆ ಅರ್ಹವಾಗಿವೆ.
  • ಒಂದು ಅಥವಾ ಹೆಚ್ಚು ವ್ಯಕ್ತಿಗಳ ನಾಮನಿರ್ದೇಶನ ಸೌಲಭ್ಯ ಇದೆ.
  • ಖಾತೆಯನ್ನು ಬ್ಯಾಂಕ್‌ ಅಥವಾ ಪೋಸ್ಟ್‌ ಆಫೀಸ್‌ನ ಇತರ ಶಾಖೆಗಳಿಗೆ ವರ್ಗಾಯಿಸಬಹುದು.

ಎನ್‌ಪಿಎಸ್‌ ವಾತ್ಯಲ್ಯ ಯೋಜನೆ

ಎನ್‌ಪಿಎಸ್‌ ವಾತ್ಸಲ್ಯ – 2024ರ ಕೇಂದ್ರ ಬಜೆಟ್‌ನಲ್ಲಿ ಪರಿಚಯಿಸಲಾದ ಹೊಸ ಪಿಂಚಣಿ ಯೋಜನೆಯಾಗಿದ್ದು, ಅಪ್ರಾಪ್ತ ವಯಸ್ಕ ಮಕ್ಕಳ ಹೆಸರಿನಲ್ಲಿ ಪೋಷಕ ಖಾತೆ ತೆರೆಯಬಹುದು. ಪೋಷಕರಿಗೆ ತಮ್ಮ ಅಪ್ರಾಪ್ತ ವಯಸ್ಸಿನ ಮಗುವಿನ ಎನ್‌ಪಿಎಸ್ ಖಾತೆಯನ್ನು ಪ್ರಾರಂಭಿಸಲು ಅವಕಾಶ ನೀಡುವ ಮೂಲಕ ಚಿಕ್ಕ ವಯಸ್ಸಿನಿಂದಲೇ ಜವಾಬ್ದಾರಿಯುತ ಹಣಕಾಸು ನಿರ್ವಹಣೆಗೆ ಅಡಿಪಾಯವನ್ನು ಹಾಕಿಕೊಟ್ಟಂತಾಗುತ್ತದೆ. ಪ್ರೌಢಾವಸ್ಥೆಯಲ್ಲಿ ಈ ಖಾತೆಗಳು ನಿಯಮಿತ ಎನ್‌ಪಿಎಸ್ ಯೋಜನೆಗಳಾಗಿ ಪರಿವರ್ತನೆಯಾಗುತ್ತವೆ. ಇದರಿಂದ ಮಕ್ಕಳ ಪ್ರೌಢಾವಸ್ಥೆಯಲ್ಲಿ ಉಳಿತಾಯ ಅಭ್ಯಾಸ ಸುಗಮವಾಗಿ ಮುಂದುವರಿಯುತ್ತದೆ.

ಎನ್‌ಪಿಎಸ್‌ ಅನ್ನು 18 ವರ್ಷದ ನಂತರ ಆರಂಭಿಸಬಹುದಾಗಿದ್ದರೆ ಎನ್‌ಪಿಎಸ್ ವಾತ್ಸಲ್ಯ ಯೋಜನೆಯಲ್ಲಿ ಪೋಷಕರು ತಮ್ಮ ಅಪ್ರಾಪ್ತ ವಯಸ್ಸಿನ ಮಕ್ಕಳ ಹೆಸರಿನಲ್ಲಿ ಹೂಡಿಕೆ ಮಾಡಬಹುದಾಗಿದೆ. ಎನ್‌ಪಿಎಸ್ ಯೋಜನೆಯಡಿ ಖಾತೆದಾರರು ನಿರ್ದಿಷ್ಟ ಮೊತ್ತದ ಬಡ್ಡಿಯನ್ನು ಪಡೆಯುತ್ತಾರೆ. ನಿಮ್ಮ ಮಕ್ಕಳು 60ರ ನಿವೃತ್ತಿ ವಯಸ್ಸನ್ನು ತಲುಪಿದ ಮೇಲೆ ಖಾತೆಯಲ್ಲಿರುವ ಸಂಗ್ರಹ ಮೊತ್ತದೊಂದಿಗೆ ಬಡ್ಡಿ ಸೇರಿ ಗಣನೀಯ ಮೊತ್ತವನ್ನು ಪಡೆಯುತ್ತಾರೆ.

ಯಾವುದು ಉತ್ತಮ?

ಎನ್‌ಪಿಎಸ್‌ ವಾತ್ಯಲ್ಯ ಯೋಜನೆಯನ್ನು ಸರ್ಕಾರ ಇತ್ತೀಚೆಗೆಷ್ಟೇ ಘೋಷಿಸಿದ್ದು ಹೂಡಿಕೆ ಮಾಡಬಹುದಾದ ಅಪ್ರಾಪ್ತ ವಯಸ್ಕರ ಕನಿಷ್ಠ ವಯಸ್ಸನ್ನು ಇನ್ನೂ ಬಹುರಂಗಪಡಿಸಿಲ್ಲ. ಎರಡೂ ಯೋಜನೆಗಳು ನಿಮ್ಮ ಮಕ್ಕಳ ಭವಿಷ್ಯ ದೃಷ್ಟಿಯಿಂದ ಉತ್ತಮ ಆಯ್ಕೆ ಎನಿಸಿಕೊಂಡಿದೆ. ನಿಮ್ಮ ಉದ್ದೇಶಕ್ಕೆ ಅನುಗುಣವಾದ, ಆರ್ಥಿಕ ಸ್ಥಿತಿಗೆ ಹೊಂದಿಕೆಯಾಗುವ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಿ ಎಂದು ಆರ್ಥಿಕ ತಜ್ಞರು ಸಲಹೆ ನೀಡುತ್ತಾರೆ.

ಇದನ್ನೂ ಓದಿ: Money Guide: ನಿಮ್ಮ ಎನ್‌ಪಿಎಸ್‌ ಖಾತೆ ಸ್ಥಗಿತಗೊಂಡಿದ್ದರೆ ಚಿಂತಿಸಬೇಡಿ; ಮನೆಯಲ್ಲೇ ಕೂತು ಸಕ್ರಿಯಗೊಳಿಸುವ ವಿಧಾನ ಇಲ್ಲಿದೆ

Continue Reading

ಮನಿ-ಗೈಡ್

Mahila Samman Savings Certificate: ಮಹಿಳಾ ಸಮ್ಮಾನ್‌‌ನಲ್ಲಿ ಹೂಡಿಕೆಯಿಂದ ಏನು ಲಾಭ?

2023ರ ಬಜೆಟ್ ನಲ್ಲಿ ಘೋಷಿಸಿರುವ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ (Mahila Samman Savings Certificate) ಮಹಿಳಾ ಹೂಡಿಕೆದಾರರಿಗೆ ಭಾರತ ಸರ್ಕಾರವು ನೀಡುವ ಸಣ್ಣ ಉಳಿತಾಯ ಪ್ರಮಾಣ ಪತ್ರವಾಗಿದೆ. ಕಡಿಮೆ ಸಮಯದಲ್ಲಿ ಮಹಿಳೆಯರಿಗೆ ಉತ್ತಮ ಆದಾಯವನ್ನು ನೀಡಲು ಈ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ. ಈ ಯೋಜನೆಯನ್ನು ಸರ್ಕಾರವು 2025 ರವರೆಗೆ ಮುಂದುವರಿಸಲಿದೆ. ಈ ಯೋಜನೆಯ ಪ್ರಯೋಜನಗಳ ವಿವರ ಇಲ್ಲಿದೆ.

VISTARANEWS.COM


on

By

Mahila Samman Savings Certificate
Koo

ಮಹಿಳಾ ಹೂಡಿಕೆದಾರರನ್ನು ಆಕರ್ಷಿಸಲು ಕೇಂದ್ರ ಸರ್ಕಾರ ವಿವಿಧ ಯೋಜನೆಗಳನ್ನು ಪ್ರಕಟಿಸುತ್ತಲೇ ಇರುತ್ತದೆ. ಇದರಲ್ಲಿ 2023ರ ಬಜೆಟ್ ನಲ್ಲಿ (Budget 2023) ಘೋಷಿಸಿರುವ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ (Mahila Samman Savings Certificate:) ಕೂಡ ಒಂದಾಗಿದೆ. ಇದು ಮಹಿಳಾ ಹೂಡಿಕೆದಾರರಿಗೆ ಭಾರತ ಸರ್ಕಾರವು ನೀಡುವ ಸಣ್ಣ ಉಳಿತಾಯ ಪ್ರಮಾಣ (small savings certificate) ಪತ್ರವಾಗಿದೆ.

ಇದರಲ್ಲಿ ಹೂಡಿಕೆ ಮಾಡುವ ಮೂಲಕ ಮಹಿಳೆಯರು ಮತ್ತು ಹೆಣ್ಣು ಮಕ್ಕಳು ಆರ್ಥಿಕವಾಗಿ ಸಬಲರಾಗಬಹುದು ಎಂದು ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಕಡಿಮೆ ಸಮಯದಲ್ಲಿ ಮಹಿಳೆಯರಿಗೆ ಉತ್ತಮ ಆದಾಯವನ್ನು ನೀಡಲು ಈ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ. ಈ ಯೋಜನೆಯನ್ನು ಸರ್ಕಾರವು 2025ರವರೆಗೆ ಮುಂದುವರಿಸಲಿದೆ.

2024ರಲ್ಲಿ ವಿಸ್ತರಿಸಲಾಗಿದೆಯೇ?

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರದ ಕುರಿತು 2024ರ ಬಜೆಟ್‌ನಲ್ಲಿ ಯಾವುದೇ ಪ್ರಕಟಣೆಯನ್ನು ಮಾಡಲಾಗಿಲ್ಲ. ಪ್ರಸ್ತುತ, ಬಡ್ಡಿ ದರ ಮತ್ತು ಹೂಡಿಕೆಯ ಸಮಯದ ಮಿತಿ ಮೊದಲಿನಂತೆಯೇ ಇರುತ್ತದೆ. ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರವು ಏಪ್ರಿಲ್ 2023 ರಿಂದ ಮಾರ್ಚ್ 2025 ರವರೆಗೆ 2 ವರ್ಷಗಳವರೆಗೆ ಲಭ್ಯವಿರುವ ಒಂದು ಬಾರಿಯ ಯೋಜನೆಯಾಗಿದೆ. ಇದರ ಖಾತೆಯನ್ನು ಯಾವುದೇ ಪೋಸ್ಟ್ ಆಫೀಸ್‌ನಲ್ಲಿ ತೆರೆಯಬಹುದು. ಆದರೆ, ಕೆಲವು ಬ್ಯಾಂಕ್‌ಗಳು ತಮ್ಮೊಂದಿಗೆ ಈ ಖಾತೆ ತೆರೆಯುವ ಸೌಲಭ್ಯವನ್ನೂ ಒದಗಿಸುತ್ತಿವೆ.

Mahila Samman Savings Certificate
Mahila Samman Savings Certificate


ಯಾರು ತೆರೆಯಬಹುದು?

ಈ ಯೋಜನೆಯ ಅಡಿಯಲ್ಲಿ ಯಾವುದೇ ವಯಸ್ಸಿನ ಭಾರತೀಯ ಮಹಿಳೆ ಖಾತೆಯನ್ನು ತೆರೆಯಬಹುದು. ಪುರುಷ ಪೋಷಕರು ತಮ್ಮ ಅಪ್ರಾಪ್ತ ಮಗಳಿಗೆ ಈ ಖಾತೆಯನ್ನು ತೆರೆಯಬಹುದು. ಈ ಯೋಜನೆಯು ಅಪ್ರಾಪ್ತ ಬಾಲಕಿಯರಿಗೆ ಹಣಕಾಸಿನ ಉತ್ಪನ್ನಗಳಲ್ಲಿ ಹೂಡಿಕೆ ಮಾಡಲು ಅವಕಾಶವನ್ನು ಒದಗಿಸುತ್ತದೆ.

ಬಡ್ಡಿ ಎಷ್ಟಿದೆ?

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರವು ವಾರ್ಷಿಕವಾಗಿ ಶೇ. 7.5ರ ಬಡ್ಡಿಯನ್ನು ನೀಡುತ್ತದೆ. ಇದನ್ನು ಪ್ರತಿ ತ್ರೈಮಾಸಿಕದಲ್ಲಿ ಖಾತೆಗೆ ಸೇರಿಸಲಾಗುತ್ತದೆ. ಆದರೆ ಬಡ್ಡಿ ಮತ್ತು ಅಸಲು ಮುಕ್ತಾಯದ ಮೇಲೆ ಮಾತ್ರ ಲಭ್ಯವಿರುತ್ತದೆ. ಈ ಯೋಜನೆಯ ಮುಕ್ತಾಯ ಅವಧಿಯು 2 ವರ್ಷಗಳು. ನೀವು 2 ವರ್ಷಗಳವರೆಗೆ ಈ ಯೋಜನೆಯಲ್ಲಿ 2 ಲಕ್ಷವನ್ನು ಹೂಡಿಕೆ ಮಾಡಿದರೆ ಮುಕ್ತಾಯದ ವೇಳೆಗೆ 2.32 ಲಕ್ಷ ರೂ. ವನ್ನು ಪಡೆಯಬಹುದು.

ಇದನ್ನೂ ಓದಿ: Mudra loan: ಕೇಂದ್ರ ಬಜೆಟ್‌ನಲ್ಲಿ ಮುದ್ರಾ ಸಾಲ ಮಿತಿ ಹೆಚ್ಚಳ; ಷರತ್ತುಗಳೇನು? ಯಾರಿಗೆ ಪ್ರಯೋಜನ?

ಹೂಡಿಕೆ ಮಿತಿ

ಈ ಯೋಜನೆಯಲ್ಲಿ ಕನಿಷ್ಠ 1,000 ರೂ. ಗಳನ್ನು 2 ವರ್ಷಗಳವರೆಗೆ ಹೂಡಿಕೆ ಮಾಡಬಹುದು. ಗರಿಷ್ಠ ಹೂಡಿಕೆ ಮಿತಿ ಪ್ರತಿ ಖಾತೆಗೆ 2 ಲಕ್ಷ ರೂ. 1000 ರೂ. ಗಿಂತ ಹೆಚ್ಚಿನ ಮೊತ್ತವನ್ನು 100 ರ ಗುಣಕಗಳಲ್ಲಿ ಮಾತ್ರ ಠೇವಣಿ ಮಾಡಬಹುದು. ಖಾತೆಯನ್ನು ತೆರೆದ 1 ವರ್ಷದ ಅನಂತರ ಒಟ್ಟು ಠೇವಣಿ ಮೊತ್ತದ ಶೇ. 40ರಷ್ಟನ್ನು ಹಿಂಪಡೆಯಬಹುದು.

Continue Reading

ಮನಿ-ಗೈಡ್

Money Guide: ಷೇರು V/S ಚಿನ್ನ: ಹೂಡಿಕೆಗೆ ಯಾವುದು ಬೆಸ್ಟ್‌? ಇಲ್ಲಿದೆ ತಜ್ಞರ ಸಲಹೆ

Money Guide: ವೃತ್ತಿ ಜೀವನದ ಆರಂಭಿಕ ದಿನಗಳಲ್ಲೇ ಹೂಡಿಕೆ ಮಾಡಲು ತೊಡಗಬೇಕು. ಭಾರತದಲ್ಲಿ ಹೂಡಿಕೆಯ ವೈವಿಧ್ಯ ಆಯ್ಕೆ ಲಭ್ಯವಿದ್ದು, ಸರಿಯಾಗಿ ಯೋಚಿಸಿ ನಿಮ್ಮ ಆರ್ಥಿಕ ಸ್ಥಿತಿಗೆ ಹೊಂದಿಕೆಯಾಗುವುದನ್ನು ಸೆಲೆಕ್ಟ್‌ ಮಾಡುವುದು ಮುಖ್ಯ. ಈ ಪೈಕಿ ಬಹು ಜನಪ್ರಿಯ ವಿಧವಾದ ಚಿನ್ನದ ಮೇಲೆ ಹೂಡಿಕೆ ಮಾಡೋದು ಉತ್ತಮವಾ ಅಥವಾ ಷೇರುಗಳ ಮೇಲಿನ ಹೂಡಿಕೆ ಉತ್ತಮವಾ ಎನ್ನುವ ಗೊಂದಲ ಬಹುತೇಕರನ್ನು ಕಾಡುತ್ತದೆ.

VISTARANEWS.COM


on

Money Guide
Koo

ಬೆಂಗಳೂರು: ನಮ್ಮ ಭವಿಷ್ಯ ಉತ್ತಮವಾಗಿರಬೇಕೆಂದರೆ, ಆರ್ಥಿಕ ಸಮಸ್ಯೆ ಎದುರಾಗಬಾರದು ಎಂದಿದ್ದರೆ ಬ್ಯಾಂಕ್‌ ಬ್ಯಾಲನ್ಸ್‌ ಚೆನ್ನಾಗಿರಬೇಕು. ಇದಕ್ಕಾಗಿ ಹೂಡಿಕೆಯತ್ತಲೂ ಗಮನ ಹರಿಸಬೇಕು ಎನ್ನುತ್ತಾರೆ ಆರ್ಥಿಕ ತಜ್ಞರು. ವೃತ್ತಿ ಜೀವನದ ಆರಂಭಿಕ ದಿನಗಳಲ್ಲೇ ಹೂಡಿಕೆ ಮಾಡಲು ತೊಡಗಬೇಕು. ಭಾರತದಲ್ಲಿ ಹೂಡಿಕೆಯ ವೈವಿಧ್ಯ ಆಯ್ಕೆ ಲಭ್ಯವಿದ್ದು, ಸರಿಯಾಗಿ ಯೋಚಿಸಿ ನಿಮ್ಮ ಆರ್ಥಿಕ ಸ್ಥಿತಿಗೆ ಹೊಂದಿಕೆಯಾಗುವುದನ್ನು ಸೆಲೆಕ್ಟ್‌ ಮಾಡುವುದು ಮುಖ್ಯ. ಈ ಪೈಕಿ ಬಹು ಜನಪ್ರಿಯ ವಿಧವಾದ ಚಿನ್ನದ ಮೇಲೆ ಹೂಡಿಕೆ ಮಾಡೋದು ಉತ್ತಮವಾ ಅಥವಾ ಷೇರುಗಳ ಮೇಲಿನ ಹೂಡಿಕೆ ಉತ್ತಮವಾ ಎನ್ನುವ ಗೊಂದಲ ಬಹುತೇಕರನ್ನು ಕಾಡುತ್ತದೆ. ಅದಕ್ಕೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಇಂದಿನ ಮನಿಗೈಡ್‌ (Money Guide)ನಲ್ಲಿದೆ.

ಹೂಡಿಕೆ ಯಾಕೆ ಮುಖ್ಯ?

ಹೂಡಿಕೆ ಯಾಕೆ ಮುಖ್ಯ? ಹೂಡಿಕೆಯಲ್ಲಿ ತೊಡಗುವ ಮುನ್ನ ಗಮನಿಸಬೇಕಾದ ಅಂಶಗಳು ಯಾವುವು ಎನ್ನುವುದನ್ನು ಮೊದಲು ನೋಡೋಣ. ದಿನ ಕಳೆದಂತೆ ವಸ್ತುಗಳು ದುಬಾರಿಯಾಗುತ್ತಿವೆ. ಜೀವನ ವೆಚ್ಚವೂ ಹೆಚ್ಚುತ್ತಾ ಸಾಗುತ್ತಿದೆ. ಇದರಿಂದ ಸಂಬಳವೊಂದನ್ನೇ ನಂಬಿಕೊಂಡರೆ ಸಾಕಾಗುವುದಿಲ್ಲ. ಹೀಗಾಗಿ ಹೂಡಿಕೆ ಮಾಡುವ ಮೂಲಕ ಆದಾಯ ಗಳಿಸುವತ್ತ ಚಿಂತನೆ ನಡೆಸಬೇಕು ಎನ್ನುತ್ತಾರೆ ತಜ್ಞರು. ಹಾಗಂತ ಕಷ್ಟಪಟ್ಟು ದುಡಿದಿರುವ ಹಣವನ್ನು ಸಿಕ್ಕ ಸಿಕ್ಕಲ್ಲಿ ಹೂಡಿಕೆ ಮಾಡುವುದು ಕೂಡ ಜಾಣ ನಡೆಯಲ್ಲ. ಹೀಗಾಗಿ ಯಾವುದೇ ಹೂಡಿಕೆಗೂ ಮುನ್ನ ಆ ಕುರಿತಾಗಿ ಕೂಲಂಕುಷ ಅಧ್ಯಯನ ಮಾಡುವುದನ್ನು ಮರೆಯಬೇಡಿ.

ಈ ಅಂಶಗಳನ್ನು ಗಮನಿಸಿ

ದೇಶದ ಮಧ್ಯಮ ವರ್ಗದವರು ತಮ್ಮ ಸಂಪತ್ತನ್ನು ಹೆಚ್ಚಿಸಲು ಹೂಡಿಕೆ ಅತ್ಯುತ್ತಮ ಮಾರ್ಗವೆಂದು ಪರಿಗಣಿಸುತ್ತಾರೆ. ಗಮನಿಸಿ ಮೊದಲೇ ಹೇಳಿದಂತೆ ದೊಡ್ಡದಾಗಿರಲಿ ಅಥವಾ ಚಿಕ್ಕದಾಗಿರಲಿ ಯಾವಾಗಲೂ ಪರಿಶೀಲಿಸಿದ ನಂತರ ಹೂಡಿಕೆ ಮಾಡಬೇಕು. ಇದರಲ್ಲಿ ಅಲ್ಪಾವಧಿ ಹೂಡಿಕೆ ಮತ್ತು ದೀರ್ಘಾವಧಿಯ ಹೂಡಿಕೆ ಎನ್ನುವ ಎರಡು ವಿಧವಿದೆ. ನಿಮ್ಮ ಹಣಕಾಸಿನ ಗುರಿಗೆ ಅನುಗುಣವಾಗಿ ಇದನ್ನು ಆಯ್ಕೆ ಮಾಡಿ. ಜತೆಗೆ ನಿಮ್ಮ ಹೂಡಿಕೆ ಮೇಲೆ ವಿಧಿಸಲಾಗುವ ತೆರಿಗೆ ಪ್ರಮಾಣವನ್ನೂ ತಿಳಿದುಕೊಳ್ಳಿ.

ಷೇರು V/S ಚಿನ್ನ

ಈ ಬಾರಿ ಬಜೆಟ್‌ ಮಂಡಿಸುವ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಚಿನ್ನದ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ. 6ಕ್ಕೆ ಇಳಿಸಿದ್ದು, ಹಳದಿ ಲೋಹದತ್ತ ಎಲ್ಲರ ಕಣ್ಣು ನೆಟ್ಟಿದೆ. ಇದರಿಂದ ಈಗಾಗಲೇ ಚಿನ್ನದ ಬೆಲೆ ಕಡಿಮೆಯಾಗಿದೆ. ಇನ್ನೂ ಇಳಿಕೆಯಾಗುವ ಸೂಚನೆ ಇದೆ. ಕಳೆದ ಐದು ವರ್ಷಗಳಲ್ಲಿ ಚಿನ್ನದ ಆದಾಯವು ಷೇರು ಆದಾಯವನ್ನು ಮೀರಿಸಿದೆ. ನಿಫ್ಟಿ 50 ಶೇಕಡಾ 13.95ರಷ್ಟು ಆದಾಯ ತಂದುಕೊಟ್ಟರೆ ಚಿನ್ನ ಶೇ. 16.21ರಷ್ಟು ನೀಡುತ್ತಿದೆ. ಆದಾಗ್ಯೂ ಷೇರುಗಳು 20 ವರ್ಷಗಳವರೆಗಿನ ದೀರ್ಘಾವಧಿಗೆ ಉತ್ತಮ ಆದಾಯವನ್ನು ಒದಗಿಸುತ್ತದೆ ಎನ್ನುವುದರಲ್ಲಿ ಸಂದೇಹವಿಲ್ಲ.

ಹೂಡಿಕೆ ತಜ್ಞರು 2024ರ ಉತ್ತರಾರ್ಧದಲ್ಲಿ ಎರಡೂ ವಿಧದಲ್ಲಿ ಸ್ಥಿರ ಬೆಳವಣಿಗೆಯನ್ನು ನಿರೀಕ್ಷಿಸುತ್ತಾರೆ. ವರ್ಷಾಂತ್ಯದ ವೇಳೆಗೆ ನಿಫ್ಟಿ 50 25,600ರಿಂದ 26,000 ಅಂಕ ತಲುಪಬಹುದು ಮತ್ತು ಚಿನ್ನದ ಬೆಲೆ 10 ಗ್ರಾಂಗೆ 81,500 ರೂ.ಗೆ ಏರಬಹುದು ಎಂದು ರೆಲಿಗೇರ್ ಬ್ರೋಕಿಂಗ್ ಲಿಮಿಟೆಡ್‌ನ ಅಜಿತ್ ಮಿಶ್ರಾ ಹೇಳಿದ್ದಾರೆ. ಹೀಗಾಗಿ ಸಮತೋಲಿತ ವಿಧಾನವನ್ನು ಕಾಪಾಡಿಕೊಳ್ಳಲು ಹಣವನ್ನು ಹಂಚಿಕೆ ಮಾಡಲು ಅವರು ಸಲಹೆ ನೀಡುತ್ತಾರೆ.

ಮೆಹ್ತಾ ಇಕ್ವಿಟೀಸ್ ಲಿಮಿಟೆಡ್‌ನ ರಾಹುಲ್ ಕಲಾಂತ್ರಿ ಅವರು, ಚಿನ್ನದ ಮಾನ್ಯತೆಯನ್ನು ಹೆಚ್ಚಿಸಲು ಪೋರ್ಟ್‌ಫೋಲಿಯೊ ಸರಿಹೊಂದಿಸಲು ಸಲಹೆ ನೀಡುತ್ತಾರೆ. ಚಿನ್ನದ ಮೇಲಿನ ಹಂಚಿಕೆಯನ್ನು ಶೇ. 10-15ರಿಂದ ಶೇ. 30-35ಕ್ಕೆ ಹೆಚ್ಚಿಸಬೇಕು ಎಂದಿದ್ದಾರೆ.

ಪ್ರಸ್ತುತ, ಷೇರುಗಳು ಮತ್ತು ಚಿನ್ನ ಎರಡೂ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿವೆ. ಇವೆರಡೂ ವಿಭಿನ್ನ ಹೂಡಿಕೆ ಉದ್ದೇಶಗಳನ್ನು ಪೂರೈಸುತ್ತಿವೆ. ದೀರ್ಘಾವಧಿಯಲ್ಲಿನ ಆದಾಯಕ್ಕೆ ಷೇರುಗಳು ಹೆಸರುವಾಸಿಯಾದರೆ ಇದಕ್ಕೆ ವಿರುದ್ಧವಾಗಿ ಆರ್ಥಿಕ ಅನಿಶ್ಚಿತತೆಯ ಅವಧಿಯಲ್ಲಿ ಚಿನ್ನವನ್ನು ಅಮೂಲ್ಯ ಆಸ್ತಿ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಎರಡರಲ್ಲೂ ಹೂಡಿಕೆ ಮಾಡುವುದು ಉತ್ತಮ ಎನ್ನುತ್ತಾರೆ ತಜ್ಞರು.

ಇದನ್ನೂ ಓದಿ: NPS Vatsalya Scheme: ಏನಿದು ಕೇಂದ್ರ ಬಜೆಟ್‌ನಲ್ಲಿ ಘೋಷಿಸಿರುವ ಎನ್‌ಪಿಎಸ್ ವಾತ್ಸಲ್ಯ ಯೋಜನೆ? ನಮ್ಮ ಮಕ್ಕಳಿಗೆ ಇದರಿಂದೇನು ಪ್ರಯೋಜನ?

Continue Reading
Advertisement
NEET-UG 2024
ದೇಶ5 mins ago

NEET UG 2024: ನೀಟ್ ಅಕ್ರಮ; ಇಂದು ಸುಪ್ರೀಂಕೋರ್ಟ್‌ನಿಂದ ಮಹತ್ವದ ತೀರ್ಪು-CBI ಮೊದಲ ಚಾರ್ಜ್‌ಶೀಟ್‌ ಸಲ್ಲಿಕೆ

KEA exams time table
ಪ್ರಮುಖ ಸುದ್ದಿ24 mins ago

KEA Exams Time Table: ಪಿಎಸ್‌ಐ ಸೇರಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ವಿವಿಧ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟ

instagram love story
ಕ್ರೈಂ49 mins ago

Instagram Love Story: ಮೂವರು ಗಂಡರ ಮುದ್ದಿನ ಹೆಂಡತಿ ಮೇಲೆ 2ನೇ ಗಂಡನ ದೂರು

Yogi Adityanath
ದೇಶ59 mins ago

Yogi Adityanath: ನೀರು ಎರಚಿ ಮಹಿಳೆಗೆ ಕಿರುಕುಳ ಕೇಸ್‌; ಇಡೀ ಪೊಲೀಸ್‌ ಚೌಕಿಯೇ ಅಮಾನತು; ಇನ್ಮುಂದೆ ʼಬುಲೆಟ್‌ ರೈಲ್‌ʼ ಓಡಿಸಲಾಗುತ್ತೆ ಎಂದು ವಾರ್ನಿಂಗ್‌

India's National Pension System
ಮನಿ-ಗೈಡ್1 hour ago

National Pension System: ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆಗಾಗಿ ಎನ್‌ಪಿಎಸ್ ಯೋಜನೆ ಸೂಕ್ತ

Karnataka Rain
ಮಳೆ1 hour ago

Karnataka Rain News: ಮಳೆ ಆರ್ಭಟ, ಇಂದು ಶಾಲೆ ಕಾಲೇಜುಗಳಿಗೆ ರಜೆ

wilma rudolph ರಾಜಮಾರ್ಗ ಅಂಕಣ
ಅಂಕಣ2 hours ago

ರಾಜಮಾರ್ಗ ಅಂಕಣ: ಬಾಲ್ಯದಲ್ಲಿ ಎರಡೂ ಕಾಲು ಪೋಲಿಯೋ ಪೀಡಿತಳಾದ ಹುಡುಗಿ ಮಹೋನ್ನತ ಕ್ರೀಡಾಪಟು ಆದ ಕಥೆ!

Things to Avoid Cleaning with Lemon
ಲೈಫ್‌ಸ್ಟೈಲ್2 hours ago

Things to Avoid Cleaning with Lemon: ಇವುಗಳನ್ನು ಸ್ವಚ್ಛ ಮಾಡಲು ಯಾವ ಕಾರಣಕ್ಕೂ ನಿಂಬೆಹಣ್ಣನ್ನು ಬಳಸಲೇಬೇಡಿ!

LIC New Jeevan Shanti Plan
ಮನಿ-ಗೈಡ್2 hours ago

LIC New Jeevan Shanti Plan: ಒಮ್ಮೆ ಪಾವತಿಸಿದರೆ ಸಾಕು; ಜೀವನ ಪರ್ಯಂತ ಪಿಂಚಣಿ!

Vastu Tips
ಧಾರ್ಮಿಕ3 hours ago

Vastu Tips: ಗಲ್ಲಾ ಪೆಟ್ಟಿಗೆಯಲ್ಲಿ ಇಂಥ ವಸ್ತುಗಳನ್ನು ಇಟ್ಟರೆ ಲಾಸ್‌!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ19 hours ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ19 hours ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ20 hours ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ3 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ3 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ4 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ4 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ4 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ5 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

ಟ್ರೆಂಡಿಂಗ್‌