Money Guide: ಹಿರಿಯರಿಗೆ ಆರೋಗ್ಯ ವಿಮೆ: ಯಾಕಾಗಿ? ಏನಿದರ ಉಪಯೋಗ? - Vistara News

ಮನಿ-ಗೈಡ್

Money Guide: ಹಿರಿಯರಿಗೆ ಆರೋಗ್ಯ ವಿಮೆ: ಯಾಕಾಗಿ? ಏನಿದರ ಉಪಯೋಗ?

Money Guide: ಕೆಲವೊಂದು ಸಮಯೋಚಿತ ನಿರ್ಧಾರ ತೆಗೆದುಕೊಳ್ಳುವುದಿಂದ ಆರ್ಥಿಕ ಸಮಸ್ಯೆಯಿಂದ ಪಾರಾಗಬಹುದು. ಆ ಪೈಕಿ ಆರೋಗ್ಯ ವಿಮೆ ಮಾಡಿಸುವುದು ಮುಖ್ಯವಾದುದು. ಈಗ ಕಿರಿಯರು ಮಾತ್ರವಲ್ಲ ಹಿರಿಯರಿಗೂ ಹೆಲ್ತ್‌ ಇನ್ಶೂರೆನ್ಸ್‌ ಲಭ್ಯ. ಹೆಚ್ಚುತ್ತಿರುವ ಚಿಕಿತ್ಸಾ ವೆಚ್ಚವನ್ನು ಕಡಿಮೆ ಮಾಡಲು ಮಾತ್ರವಲ್ಲ ಹಿರಿಯ ನಾಗರಿಕರಿಗೆ ಉತ್ತಮ ಚಿಕಿತ್ಸೆಯನ್ನು ಖಚಿತಪಡಿಸಲು ಆರೋಗ್ಯ ವಿಮೆ ಮಾಡಿಸಬೇಕು ಎಂದು ಆರ್ಥಿಕ ತಜ್ಞರು ಸಲಹೆ ನೀಡುತ್ತಾರೆ.

VISTARANEWS.COM


on

Money Guide
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಬದಲಾದ ಜೀವನ ಶೈಲಿ, ಒತ್ತಡ ಬದುಕು ಇತ್ಯಾದಿ ಕಾರಣಗಳಿಂದ ದಿನ ಕಳೆದಂತೆ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದೆ. ಹಿರಿಯ ನಾಗರಿಕರಿಂದ ಹಿಡಿದು ಮಕ್ಕಳಿಂದ ಹಿಡಿದು ಮಕ್ಕಳ ಆರೋಗ್ಯದ ಕಡೆಗೂ ಹೆಚ್ಚು ಗಮನ ಹರಿಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದೇವೆ. ಅದರಲ್ಲಿಯೂ ಕೆಲವೊಮ್ಮೆ ಆದಾಯದ ಬಹುಪಾಲು ಚಿಕಿತ್ಸೆಗಾಗಿಯೇ ವ್ಯಯಿಸಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಇದೇ ಕಾರಣಕ್ಕೆ ಹಲವರು ಸೋತು ಹೈರಾಣಾಗುತ್ತಾರೆ. ಆದರೆ ನೆನಪಿರಲಿ ಕೆಲವೊಂದು ಸಮಯೋಚಿತ ನಿರ್ಧಾರ ತೆಗೆದುಕೊಳ್ಳುವುದಿಂದ ಇಂತಹ ಸಂದಿಗ್ಧ ಪರಿಸ್ಥಿತಿಯಿಂದ ಪಾರಾಗಬಹುದು. ಆ ಪೈಕಿ ಆರೋಗ್ಯ ವಿಮೆ (Health Insuranceಮಾಡಿಸುವುದು ಮುಖ್ಯವಾದುದು. ಈಗ ಕಿರಿಯರು ಮಾತ್ರವಲ್ಲ ಹಿರಿಯರಿಗೂ ಹೆಲ್ತ್‌ ಇನ್ಶೂರೆನ್ಸ್‌ ಲಭ್ಯ (Senior Health Insurance). ಈ ಬಗೆಗಿನ ಮಾಹಿತಿ ಇಂದಿನ ಮನಿಗೈಡ್‌ (Money Guide)ನಲ್ಲಿದೆ.

ಯಾಕಾಗಿ ಅಗತ್ಯ?

ವಯಸ್ಸಾದವರಲ್ಲಿ ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಗಳ ಹೊರತಾಗಿಯೂ ಭಾರತದಲ್ಲಿನ ಬಹುಪಾಲು ಹಿರಿಯ ನಾಗರಿಕರು ಆರೋಗ್ಯ ವಿಮೆ ಹೊಂದಿಲ್ಲ. ಆರೋಗ್ಯ ಸೇವೆಗಳ ವೆಚ್ಚಗಳು ಏರುತ್ತಲೇ ಇದ್ದರೂ ಹೆಚ್ಚಿನ ಸಂಖ್ಯೆಯ ಹಿರಿಯ ನಾಗರಿಕರು ಹೆಲ್ತ್‌ ಇನ್ಶೂರೆನ್ಸ್‌ ಮಾಡಿಸಿಲ್ಲ ಎನ್ನುವ ಕಳವಳಕಾರಿ ಅಂಶ ಬಹಿರಂಗಗೊಂಡಿದೆ. ಜನಗಣತಿ ವರದಿಗಳ ಪ್ರಕಾರ ಭಾರತದಲ್ಲಿ ಪ್ರಸ್ತುತ 13.8 ಕೋಟಿಗೂ ಹೆಚ್ಚು ವೃದ್ಧರಿದ್ದಾರೆ. 2031ರ ವೇಳೆಗೆ ಈ ಸಂಖ್ಯೆ ಸುಮಾರು 19 ಕೋಟಿಗೆ ತಲುಪಲಿದೆ. ಹೀಗಾಗಿ ಹಿರಿಯ ನಾಗರಿಕರ ಆರೋಗ್ಯಕ್ಕಾಗಿ ಈಗಿನಿಂದಲೇ ಯೋಜನೆ ರೂಪಿಸುವುದು ಅಗತ್ಯ. ಹೆಚ್ಚುತ್ತಿರುವ ಚಿಕಿತ್ಸಾ ವೆಚ್ಚವನ್ನು ಕಡಿಮೆ ಮಾಡಲು ಮಾತ್ರವಲ್ಲ ಹಿರಿಯ ನಾಗರಿಕರಿಗೆ ಉತ್ತಮ ಚಿಕಿತ್ಸೆಯನ್ನು ಖಚಿತಪಡಿಸಲು ಆರೋಗ್ಯ ವಿಮೆ ಮಾಡಿಸಬೇಕಾಗಿದೆ.

ಹಿರಿಯ ನಾಗರಿಕರ ಆರೋಗ್ಯ ವಿಮೆಯಲ್ಲಿನ ವಿಧಗಳು

ಫ್ಯಾಮಿಲಿ ಫ್ಲೋಟರ್ ಯೋಜನೆ: ಹಿರಿಯರು ಸೇರಿದಂತೆ ಇಡೀ ಕುಟುಂಬವನ್ನು ಒಳಗೊಂಡಿರುವ ಒಂದೇ ಪಾಲಿಸಿ.

ವೈಯಕ್ತಿಕ ಯೋಜನೆ: ಹಿರಿಯರ ಆರೋಗ್ಯ ಪರಿಸ್ಥಿತಿಗಳಿಗೆ ಅನುಗುಣವಾಗಿ ಅವರ ಹೆಸರಿನಲ್ಲಿ ಮಾಡಿಸುವ ಪಾಲಿಸಿ.

ಹಿರಿಯ ನಾಗರಿಕರ ಆರೋಗ್ಯ ಯೋಜನೆ: ವೃದ್ಧರ ಸಾಮಾನ್ಯ ಆರೋಗ್ಯ ಸಮಸ್ಯೆಗಳಿಗಾಗಿ ಜಾರಿಯಲ್ಲಿರುವ ಪಾಲಿಸಿ. ಮೊದಲೇ ಅಸ್ತಿತ್ವದಲ್ಲಿರುವ ಆರೋಗ್ಯ ಸಮಸ್ಯೆಯನ್ನು ಇದು ಒಳಗೊಂಡಿರುತ್ತದೆ.

ಗಂಭೀರ ಆರೋಗ್ಯ ಸಮಸ್ಯೆಯಿಂದ ರಕ್ಷಣೆ: ಕ್ಯಾನ್ಸರ್, ಹೃದಯಾಘಾತ ಮತ್ತು ಪಾರ್ಶ್ವವಾಯುವಿನಂತಹ ನಿರ್ದಿಷ್ಟ ಗಂಭೀರ ಕಾಯಿಲೆಗಳಿಗೆ ಮಾಡಿಬಹುದಾದ ವಿಮೆ.

ವೈಯಕ್ತಿಕ ಅಪಘಾತ(ಪಿಎ)ದಿಂದ ರಕ್ಷಣೆ: ಆಕಸ್ಮಿಕವಾಗಿ ಉಂಟಾಗುವ ಗಾಯಗಳು, ಸಾವು, ಅಂಗವೈಕಲ್ಯ ಮತ್ತು ಅನಾರೋಗ್ಯದ ವೈದ್ಯಕೀಯ ವೆಚ್ಚಗಳಿಗೆ ಮಾಡಿಸಬಹುದಾದ ಪಾಲಿಸಿ.

ಆರೈಕೆ ಯೋಜನೆ: ಒಟ್ಟಾರೆ ಆರೋಗ್ಯ, ನಿಯಮಿತ ತಪಾಸಣೆ, ಲಸಿಕೆಗಳ ಅಗತ್ಯಕ್ಕಾಗಿ ಮಾಡಿಸಬಹುದಾದ ವಿಮಾ ಯೋಜನೆ.

ಆರೋಗ್ಯ ಸಂಜೀವಿನಿ ಯೋಜನೆ: ಹಿರಿಯರು ಮಾತ್ರವಲ್ಲ ಎಲ್ಲ ವಯಸ್ಸಿನವರಿಗೆ ಸರಳೀಕೃತ ಆಯ್ಕೆ.

ಹೊಸ ನಿಯಮ ಏನು ಹೇಳುತ್ತದೆ?

ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ಇತ್ತೀಚೆಗೆ ಹಿರಿಯರ ಆರೋಗ್ಯ ವಿಮೆಯಲ್ಲಿ ಹಲವಾರು ಸುಧಾರಣೆಗಳನ್ನು ಪರಿಚಯಿಸಿದೆ. ಆರೋಗ್ಯ ವಿಮಾ ಪಾಲಿಸಿಯನ್ನು ಖರೀದಿಸಲು ಒಬ್ಬ ವ್ಯಕ್ತಿಗೆ ಇದ್ದ 65 ವರ್ಷಗಳ ಮಿತಿಯನ್ನು ತೆಗೆದುಹಾಕಿದೆ. ಆರೋಗ್ಯ ವಿಮೆಯ ಕಾಯುವ ಅವಧಿಯನ್ನು (Waiting period) 48 ತಿಂಗಳಿಂದ 36ಕ್ಕೆ ಇಳಿಸಲಾಗಿದೆ. ನಿರ್ಧಿಷ್ಟ ಕಾಯಿಲೆಗಳಿಗೆ ಕಾಯುವ ಅವಧಿಯನ್ನು 8ರಿಂದ 5 ವರ್ಷಗಳಿಗೆ ಕಡಿಮೆ ಮಾಡಲಾಗಿದೆ. 

ಭವಿಷ್ಯದ ಭರವಸೆ

ಒಟ್ಟಿನಲ್ಲಿ ಹಲವು ಸುಧಾರಣೆಗಳ ಮೂಲಕ ಹಿರಿಯರ ಆರೋಗ್ಯ ವಿಮೆಯ ಭವಿಷ್ಯದ ಭರವಸೆಯಾಗಿ ಗೋಚರಿಸುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಉದ್ಯಮವು ವಿಕಸನಗೊಳ್ಳುತ್ತಲೇ ಇರುವುದರಿಂದ ಮುಂದೆ ನಾವು ಹೆಚ್ಚು ಸೂಕ್ತವಾದ ಯೋಜನೆ, ವರ್ಧಿತ ವ್ಯಾಪ್ತಿಯ ಆಯ್ಕೆಗಳನ್ನು ನಿರೀಕ್ಷಿಸಬಹುದು. ಜತೆಗೆ ವಿಮಾ ಪೂರೈಕೆದಾರರು ಹಿರಿಯರ ವೈವಿಧ್ಯಮಯ ಆರೋಗ್ಯ ಅಗತ್ಯಗಳನ್ನು ಪೂರೈಸುವ ಹೊಸ ಪಾಲಿಸಿಗಳನ್ನು ಅಭಿವೃದ್ಧಿಪಡಿಸುವ ಸಾಧ್ಯತೆಯಿದೆ ಎಂದು ಹಲವರು ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ: Health Insurance: ಆರೋಗ್ಯ ವಿಮೆ ಖರೀದಿಗೆ ಇನ್ನು ವಯಸ್ಸಿನ ನಿರ್ಬಂಧ ಇಲ್ಲ; ಹೊಸ ಬದಲಾವಣೆ ಏನೇನು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮನಿ-ಗೈಡ್

Employees’ Provident Fund: ಪಿಂಚಣಿ ಲಾಭ ಹೆಚ್ಚಳಕ್ಕಾಗಿ EPFOಗೆ ಸಂಬಂಧಿಸಿ ವೇತನ ಮಿತಿ ಏರಿಸಲು ಚಿಂತನೆ

ಕೇಂದ್ರ ಸರ್ಕಾರವು ನೌಕರರ ಭವಿಷ್ಯ ನಿಧಿ (Employees’ Provident Fund) ಸಂಸ್ಥೆ ಮತ್ತು ನೌಕರರ ರಾಜ್ಯ ವಿಮಾ ನಿಗಮ (ESIC) ಗಳಿಗೆ ವೇತನ ಮಿತಿಯನ್ನು ಹೆಚ್ಚಿಸಲು ಯೋಜನೆ ಮಾಡುತ್ತಿದೆ. ವೇತನ ಮಿತಿ ಕ್ರಮವಾಗಿ 15,000 ರೂ ಮತ್ತು 21,000 ರೂ ಆಗಿದ್ದು, ಇದನ್ನು 25,000 ರೂ. ಗೆ ಹೆಚ್ಚಿಸಲು ಸರ್ಕಾರ ಯೋಜನೆ ಮಾಡುತ್ತಿದೆ ಎನ್ನಲಾಗಿದೆ.

VISTARANEWS.COM


on

By

Employees' Provident Fund
Koo

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು (Employees’ Provident Fund) ಭಾರತದ (India) ಸಾಮಾಜಿಕ ಭದ್ರತಾ ರಚನೆಯ ಮೇಲೆ ಪರಿಣಾಮ ಬೀರುವ ಬಹುದೊಡ್ಡ ಕ್ರಮಕ್ಕೆ ಮುಂದಾಗಿದೆ. ಕೇಂದ್ರ ಸರ್ಕಾರವು (central govt) ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಮತ್ತು ನೌಕರರ ರಾಜ್ಯ ವಿಮಾ ನಿಗಮ (ESIC) ಗಳಿಗೆ ವೇತನ ಮಿತಿಯನ್ನು ಹೆಚ್ಚಿಸಲು ಯೋಜನೆ ಮಾಡುತ್ತಿದೆ ಎನ್ನಲಾಗಿದೆ.

ನೌಕರರ ಭವಿಷ್ಯ ನಿಧಿ ಸಂಸ್ಥೆ ಮತ್ತು ಉದ್ಯೋಗಿಗಳ ರಾಜ್ಯ ವಿಮಾ ನಿಗಮಗಳ (ಇಎಸ್‌‌ಐ) ವೇತನ ಮಿತಿ ಈಗ ಕ್ರಮವಾಗಿ 15,000 ರೂ ಮತ್ತು 21,000 ರೂ ಆಗಿದ್ದು, ಇದನ್ನು 25,000 ರೂ. ಗೆ ಹೆಚ್ಚಿಸಲು ಸರ್ಕಾರ ಚಿಂತನೆ ಮಾಡುತ್ತಿದೆ. ಔಪಚಾರಿಕ ವಲಯದ ಉದ್ಯೋಗಿಗಳೆಂದು ವರ್ಗೀಕರಿಸಲಾದ ಕಾರ್ಮಿಕರ ಸಾಮಾಜಿಕ ಭದ್ರತೆಗಾಗಿ ಈ ಕ್ರಮ ಕೈಗೊಳ್ಳಲಾಗುವುದು ಎನ್ನಲಾಗಿದೆ. ಈಗ 15 ಸಾವಿರ ಮಿತಿ ಇರುವುದರಿಂದ 1250 ರೂ. ಮಾತ್ರ ಪಿಂಚಣಿ ಪ್ರಯೋಜನಗಳ ಖಾತೆಗೆ ಜಮೆಯಾಗುತ್ತದೆ. ಇದನ್ನು 25 ಸಾವಿರ ರೂ.ಗೆ ಏರಿಸಿದರೆ ಉದ್ಯೋಗಿಗಳು ನಿವೃತ್ತರಾದಾಗ ಸಿಗುವ ಮೊತ್ತವೂ ಗಣನೀಯವಾಗಿ ಏರುತ್ತದೆ.

20 ಅಥವಾ ಅದಕ್ಕಿಂತ ಹೆಚ್ಚಿನ ಉದ್ಯೋಗಿಗಳನ್ನು ಹೊಂದಿರುವ ಕಂಪೆನಿಗಳಲ್ಲಿ ಉದ್ಯೋಗದಲ್ಲಿರುವ ವ್ಯಕ್ತಿಗಳ ಅರ್ಹತೆಯನ್ನು ನಿರ್ಧರಿಸುವ ಗರಿಷ್ಠ ಗಳಿಕೆಯ ಮಿತಿ ಮತ್ತು ವಯಸ್ಸಿನ ನವೀಕರಣ ಮಾಡಿಲ್ಲ. ಇಪಿಎಫ್ ಒ ಗಾಗಿ ಕೊನೆಯ ಪರಿಷ್ಕರಣೆಯು 2014ರಲ್ಲಿ ನಡೆದಿತ್ತು ಮತ್ತು ಇಎಸ್ ಇಸಿಗಾಗಿ 2017ರಲ್ಲಿ ನವೀಕರಣ ನಡೆಸಲಾಗಿತ್ತು.
ಈ ವರ್ಷದ ಏಪ್ರಿಲ್‌ನಲ್ಲಿ ಇಪಿಎಫ್‌ಒ ದಾಖಲೆಯ 18.92 ಲಕ್ಷ ಸದಸ್ಯರನ್ನು ಸೇರಿಸಿಕೊಂಡಿದೆ. ಏಪ್ರಿಲ್ 2018 ರಲ್ಲಿ ಮೊದಲ ವೇತನದಾರರ ಡೇಟಾವನ್ನು ಪ್ರಕಟಿಸಿದ ಅನಂತರ ಇದು ಗರಿಷ್ಠ ದಾಖಲೆಯಾಗಿದೆ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಗುರುವಾರ ಬಿಡುಗಡೆ ಮಾಡಿದ ಅಂಕಿಅಂಶಗಳು ತಿಳಿಸಿವೆ.

ನಿವ್ವಳ ಸದಸ್ಯರ ಸಂಖ್ಯೆಯು ಮಾರ್ಚ್ 2024 ರ ಅನುಗುಣವಾದ ಅಂಕಿ ಅಂಶಕ್ಕಿಂತ ಶೇ. 31.29ರಷ್ಟು ಹೆಚ್ಚಾಗಿದೆ ಎಂದು ತಾತ್ಕಾಲಿಕ ವೇತನದಾರರ ಡೇಟಾ ತೋರಿಸುತ್ತದೆ. ವರ್ಷದಿಂದ ವರ್ಷಕ್ಕೆ ಹೋಲಿಸಿದರೆ ನಿವ್ವಳ ಸದಸ್ಯರ ಸೇರ್ಪಡೆಯಲ್ಲಿ ಶೇ.10 ರಷ್ಟು ಬೆಳವಣಿಗೆಯಾಗಿದೆ. ಸದಸ್ಯತ್ವದಲ್ಲಿನ ಈ ಹೆಚ್ಚಳವು ಹೆಚ್ಚಿದ ಉದ್ಯೋಗಾವಕಾಶಗಳು, ಉದ್ಯೋಗಿಗಳ ಪ್ರಯೋಜನಗಳ ಬಗ್ಗೆ ಹೆಚ್ಚುತ್ತಿರುವ ಅರಿವು ಮತ್ತು ಇಪಿಎಫ್ ಓ ​​ನ ಕಾರ್ಯಕ್ರಮಗಳ ಪರಿಣಾಮಕಾರಿತ್ವಕ್ಕೆ ಉದಾಹರಣೆಯಾಗಿದೆ ಎಂದು ಕೇಂದ್ರ ಸಚಿವಾಲಯ ಹೇಳಿದೆ.


ಹೊಸ ಸದಸ್ಯರ ಸಂಖ್ಯೆಯಲ್ಲಿ ಹೆಚ್ಚಳ

ಏಪ್ರಿಲ್ 2024ರಲ್ಲಿ ಸುಮಾರು 8.87 ಲಕ್ಷ ಹೊಸ ಸದಸ್ಯರು ಸೇರಿಕೊಂಡಿದ್ದಾರೆ ಎಂದು ಡೇಟಾ ಸೂಚಿಸುತ್ತದೆ. ಡೇಟಾದ ಗಮನಾರ್ಹ ಅಂಶವೆಂದರೆ 18- 25 ವಯೋಮಾನದವರ ಪ್ರಾಬಲ್ಯ ಹೆಚ್ಚಾಗಿದೆ. 2024ರ ಏಪ್ರಿಲ್ ನಲ್ಲಿ ಸೇರಿಸಲಾದ ಸದಸ್ಯರ ಪೈಕಿ ಇವರ ಪ್ರಮಾಣ ಶೇ. 55.5ರಷ್ಟಿದೆ.

ಮರು ಸೇರ್ಪಡೆ

ವೇತನದಾರರ ಅಂಕಿಅಂಶಗಳ ಪ್ರಕಾರ ಸರಿಸುಮಾರು 14.53 ಲಕ್ಷ ಸದಸ್ಯರು ನಿರ್ಗಮಿಸಿದರು ಮತ್ತು ಅನಂತರ ಇಪಿಎಫ್‌ಒಗೆ ಮರುಸೇರ್ಪಡೆಯಾದರು. ಮಾರ್ಚ್ 2024 ರ ಹಿಂದಿನ ತಿಂಗಳಿಗೆ ಹೋಲಿಸಿದರೆ ಈ ಅಂಕಿ ಅಂಶವು ಶೇ. 23.15 ರಷ್ಟು ಹೆಚ್ಚಳವನ್ನು ತೋರಿಸಿದೆ. ಈ ಸದಸ್ಯರು ತಮ್ಮ ಉದ್ಯೋಗಗಳನ್ನು ಬದಲಾಯಿಸಿದರು ಮತ್ತು ಇಪಿಎಫ್ ಒ ​​ವ್ಯಾಪ್ತಿಗೆ ಒಳಪಡುವ ಸಂಸ್ಥೆಗಳಿಗೆ ಮರು ಸೇರ್ಪಡೆಗೊಂಡರು ಮತ್ತು ಅಂತಿಮ ಇತ್ಯರ್ಥಕ್ಕೆ ಅರ್ಜಿ ಸಲ್ಲಿಸುವ ಬದಲು ತಮ್ಮ ಸಂಗ್ರಹಣೆಯನ್ನು ವರ್ಗಾಯಿಸಲು ನಿರ್ಧರಿಸಿದರು. ಹೀಗಾಗಿ, ರಕ್ಷಣೆ ದೀರ್ಘಾವಧಿಯ ಆರ್ಥಿಕ ಯೋಗಕ್ಷೇಮ ಮತ್ತು ಅವರ ಸಾಮಾಜಿಕ ಭದ್ರತೆ ರಕ್ಷಣೆಯನ್ನು ವಿಸ್ತರಿಸುವುದು.

ಮಹಿಳಾ ಸದಸ್ಯರು

ವೇತನದಾರರ ದತ್ತಾಂಶದ ಲಿಂಗವಾರು ವಿಶ್ಲೇಷಣೆಯು 8.87 ಲಕ್ಷ ಹೊಸ ಸದಸ್ಯರಲ್ಲಿ ಸುಮಾರು 2.49 ಲಕ್ಷ ಹೊಸ ಮಹಿಳಾ ಸದಸ್ಯರನ್ನು ಹೊಂದಿದೆ.

ತಿಂಗಳಿನಲ್ಲಿ ನಿವ್ವಳ ಮಹಿಳಾ ಸದಸ್ಯರ ಸೇರ್ಪಡೆಯು ಸುಮಾರು 3.91 ಲಕ್ಷದಷ್ಟಿತ್ತು, ಇದು ಮಾರ್ಚ್ 2024 ರ ಹಿಂದಿನ ತಿಂಗಳಿಗೆ ಹೋಲಿಸಿದರೆ ಸರಿಸುಮಾರು ಶೇ. 35.06ರಷ್ಟು ಹೆಚ್ಚಳವನ್ನು ತೋರಿಸಿದೆ. ಮಹಿಳಾ ಸದಸ್ಯರ ಹೆಚ್ಚಳವು ಹೆಚ್ಚು ಅಂತರ್ಗತ ಮತ್ತು ವೈವಿಧ್ಯಮಯ ಕಡೆಗೆ ವ್ಯಾಪಕ ಬದಲಾವಣೆಯನ್ನು ಸೂಚಿಸುತ್ತದೆ.

ಮಹಾರಾಷ್ಟ್ರ ಮುಂಚೂಣಿಯಲ್ಲಿ

ವೇತನದಾರರ ದತ್ತಾಂಶದ ರಾಜ್ಯವಾರು ವಿಶ್ಲೇಷಣೆಯು ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಗುಜರಾತ್ ಮತ್ತು ಹರಿಯಾಣದ ಐದು ರಾಜ್ಯಗಳಲ್ಲಿ ನಿವ್ವಳ ಸದಸ್ಯರ ಸೇರ್ಪಡೆ ಅತ್ಯಧಿಕವಾಗಿದೆ ಎಂದು ಸೂಚಿಸುತ್ತದೆ.

ಇದನ್ನೂ ಓದಿ: Forex Reserves: ವಿದೇಶಿ ವಿನಿಮಯ ಸಂಗ್ರಹದಲ್ಲಿ 43,081 ಕೋಟಿ ರೂ. ಏರಿಕೆ; ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ ಒಟ್ಟು ಮೌಲ್ಯ

ಈ ರಾಜ್ಯಗಳು ನಿವ್ವಳ ಸದಸ್ಯರ ಸೇರ್ಪಡೆಯಲ್ಲಿ ಸುಮಾರು ಶೇ. 58.3ರಷ್ಟನ್ನು ಹೊಂದಿದ್ದು, ತಿಂಗಳಲ್ಲಿ ಒಟ್ಟು 11.03 ಲಕ್ಷ ನಿವ್ವಳ ಸದಸ್ಯರನ್ನು ಸೇರಿಸುತ್ತವೆ. ಎಲ್ಲಾ ರಾಜ್ಯಗಳಲ್ಲಿ, ಮಹಾರಾಷ್ಟ್ರವು ತಿಂಗಳಲ್ಲಿ ಶೇ. 20.42 ರಷ್ಟು ನಿವ್ವಳ ಸದಸ್ಯರನ್ನು ಸೇರಿಸುವ ಮೂಲಕ ಮುಂಚೂಣಿಯಲ್ಲಿದೆ.

ಒಟ್ಟು ನಿವ್ವಳ ಸದಸ್ಯತ್ವದಲ್ಲಿ ಸುಮಾರು ಶೇ. 41.41 ರಷ್ಟು ಸೇರ್ಪಡೆಯು ಪರಿಣಿತ ಸೇವೆಗಳಿಂದ ಅಂದರೆ ಮಾನವಶಕ್ತಿ ಪೂರೈಕೆದಾರರು, ಸಾಮಾನ್ಯ ಗುತ್ತಿಗೆದಾರರು, ಭದ್ರತಾ ಸೇವೆಗಳು, ವಿವಿಧ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ.

Continue Reading

ಮನಿ-ಗೈಡ್

Money Guide: ಸುಕನ್ಯಾ ಸಮೃದ್ಧಿ; ತಿಂಗಳಿಗೆ 10 ಸಾವಿರ ರೂ. ಹೂಡಿಕೆ ಮಾಡಿದರೆ 55 ಲಕ್ಷ ರೂ. ರಿಟರ್ನ್!

ಪ್ರತಿ ಹಣಕಾಸು ವರ್ಷದಲ್ಲಿ ಗರಿಷ್ಠ 1.50 ಲಕ್ಷ ರೂ.ಗಳನ್ನು ಸುಕನ್ಯಾ ಸಮೃದ್ಧಿ ಯೋಜನೆ ಖಾತೆಯಲ್ಲಿ (Money Guide) ಇಡಬಹುದು. ಇದರಲ್ಲಿ ತೆರಿಗೆ ಪ್ರಯೋಜನಗಳೂ ಇವೆ. ಶೇ. 8.2 ಬಡ್ಡಿ ದರವನ್ನು ಇದು ಒಳಗೊಂಡಿದೆ. ತಿಂಗಳಿಗೆ 10,000 ರೂ ಉಳಿತಾಯ ಮಾಡಿದರೆ 15 ವರ್ಷಗಳಲ್ಲಿ ಎಷ್ಟು ಆರ್ಥಿಕ ಭದ್ರತೆ ಪಡೆಯಬಹುದು ಎಂಬುದನ್ನು ನೋಡೋಣ.

VISTARANEWS.COM


on

By

Money Guide
Koo

ಭಾರತದಲ್ಲಿ (india) ಹೆಣ್ಣು ಮಕ್ಕಳ (girls child) ಭವಿಷ್ಯವನ್ನು ಸುರಕ್ಷಿತವಾಗಿ (Money Guide) ಇರಿಸಲು ವಿನ್ಯಾಸಗೊಳಿಲಾದ ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana) ಯೋಜನೆಯು ಹಲವು ಆಕರ್ಷಕ ಪ್ರಯೋಜನಗಳನ್ನು ಹೊಂದಿದೆ. ಈ ಯೋಜನೆಯು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಗುವಿನ ಹೆಸರಿನಲ್ಲಿ ಖಾತೆಯನ್ನು ತೆರೆಯಲು ಪೋಷಕರಿಗೆ ಅವಕಾಶ ನೀಡುತ್ತದೆ. ಭಾರತದಾದ್ಯಂತ ಪ್ರತಿ ಮಗುವಿಗೆ ಒಂದು ಖಾತೆಯನ್ನು ಮಾತ್ರ ಅನುಮತಿಸಲಾಗಿದೆ.

ಪ್ರತಿ ಹಣಕಾಸು ವರ್ಷದಲ್ಲಿ ಗರಿಷ್ಠ 1.50 ಲಕ್ಷ ರೂ.ಗಳನ್ನು ಸುಕನ್ಯಾ ಸಮೃದ್ಧಿ ಯೋಜನೆ ಖಾತೆಯಲ್ಲಿ ಇಡಬಹುದು. ಇದರಲ್ಲಿ ತೆರಿಗೆ ಪ್ರಯೋಜನಗಳೂ ಇವೆ. ಶೇ. 8.2 ಬಡ್ಡಿ ದರವನ್ನು ಇದು ಒಳಗೊಂಡಿದೆ. ತಿಂಗಳಿಗೆ 10,000 ರೂ ಉಳಿತಾಯ ಮಾಡಿದರೆ 15 ವರ್ಷಗಳಲ್ಲಿ ಎಷ್ಟು ಆರ್ಥಿಕ ಭದ್ರತೆ ಪಡೆಯಬಹುದು ಎಂಬುದನ್ನು ನೋಡೋಣ.

ಎಷ್ಟು ಮೊತ್ತ ಕೈ ಸೇರುತ್ತದೆ?

ಸುಕನ್ಯಾ ಸಮೃದ್ಧಿ ಯೋಜನೆ ಲೆಕ್ಕಾಚಾರದ ಪ್ರಕಾರ ಪ್ರತಿ ತಿಂಗಳು 10,000 ರೂ. ಠೇವಣಿ ಮಾಡುವುದರಿಂದ ಒಬ್ಬರು 15 ವರ್ಷಗಳಲ್ಲಿ ಒಟ್ಟು 18,00,000 ರೂ. ಹೂಡಿಕೆ ಮಾಡುತ್ತಾರೆ. ಶೇ. 8.2 ರ ಬಡ್ಡಿದರದಲ್ಲಿ ಮೆಚ್ಯೂರಿಟಿ ಮೊತ್ತವು 55,46,118 ರೂಪಾಯಿಗಳಾಗುತ್ತದೆ. ಇದರಲ್ಲಿ ಹೂಡಿಕೆಯ ಅವಧಿಯ ಬಡ್ಡಿ 37,46,118 ರೂ. ಗಳಾಗಿರುತ್ತದೆ. ಹೆಣ್ಣು ಮಕ್ಕಳು‌ 18 ವರ್ಷ ತುಂಬುವವರೆಗೆ ಮಾತ್ರ ಹಣ ಹೂಡಿಕೆ ಮಾಡಲು ಅವಕಾಶ ಇರುತ್ತದೆ.

ಎಷ್ಟು ಹೂಡಿಕೆ ಮಾಡಬಹುದು?

ಸುಕನ್ಯಾ ಸಮೃದ್ಧಿ ಖಾತೆಯಲ್ಲಿ ಆರ್ಥಿಕ ವರ್ಷ ಕನಿಷ್ಠ 250 ರೂ. ನಿಂದ ಗರಿಷ್ಠ 1,50,000 ರೂ. ವರೆಗೆ ಠೇವಣಿ ಮಾಡಬಹುದು. ಒಂದು ತಿಂಗಳು ಅಥವಾ ಆರ್ಥಿಕ ವರ್ಷದಲ್ಲಿ ಒಂದೇ ಬಾರಿಗೆ ಠೇವಣಿಯನ್ನು ಮಾಡಬಹುದು.


ಹಿಂಪಡೆಯುವ ನಿಯಮ

ಭಾರತೀಯ ಅಂಚೆ ಕಚೇರಿಯಲ್ಲಿ ಸುಕನ್ಯಾ ಸಮೃದ್ಧಿ ಖಾತೆಯನ್ನು ಪ್ರತಿ ಹೆಣ್ಣು ಮಗುವಿಗೆ 18 ವರ್ಷಗಳು ತಲುಪುವವರೆಗೆ ಪೋಷಕರು ನಿರ್ವಹಿಸುತ್ತಾರೆ. ಹೆಣ್ಣು ಮಗುವಿಗೆ 18 ವರ್ಷ ತುಂಬಿದ ಅನಂತರ ಹಿಂಪಡೆಯಲು ಅನುಮತಿ ಇದೆ.

ಹಿಂಪಡೆಯುವಿಕೆಯನ್ನು ಶೈಕ್ಷಣಿಕ ಅಥವಾ ಮದುವೆಯ ವೆಚ್ಚಗಳನ್ನು ಅವಲಂಬಿಸಿ ಐದು ವರ್ಷಗಳವರೆಗೆ ಒಂದನ್ನು ಮೀರದಂತೆ ಒಟ್ಟು ಮೊತ್ತ ಅಥವಾ ಕಂತುಗಳಲ್ಲಿ ಪಡೆಯಬಹುದು.

ಸುಕನ್ಯಾ ಸಮೃದ್ಧಿ ಖಾತೆಯನ್ನು ಅಕಾಲಿಕವಾಗಿ ಮುಚ್ಚುವುದು ಐದು ವರ್ಷಗಳ ಅನಂತರ ಖಾತೆದಾರರ ಮರಣ ಅಥವಾ ತೀವ್ರ ಸಹಾನುಭೂತಿಯಂತಹ ಕೆಲವು ಷರತ್ತುಗಳ ಅಡಿಯಲ್ಲಿ ಖಾತೆಯನ್ನು ಅಕಾಲಿಕವಾಗಿ ಮುಚ್ಚಲು ಅನುಮತಿ ಇದೆ.

ಇದನ್ನೂ ಓದಿ: Income Tax Returns: ಆದಾಯ ತೆರಿಗೆ ರಿಟರ್ನ್ಸ್; ಯಾವ ಆದಾಯದವರಿಗೆ ಯಾವ ಫಾರ್ಮ್?

ಖಾತೆ ತೆರೆಯಲು ಮತ್ತು ಮುಚ್ಚಲು ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಖಾತೆ ತೆರೆಯುವ ದಿನಾಂಕದಿಂದ 21 ವರ್ಷಗಳ ಅನಂತರ ಅಥವಾ 18 ವರ್ಷಗಳನ್ನು ತಲುಪಿದ ಬಳಿಕ ಹುಡುಗಿಯ ಮದುವೆಯ ಸಮಯದಲ್ಲಿ ಮುಕ್ತಾಯಗೊಳ್ಳುತ್ತದೆ.

Continue Reading

ಮನಿ-ಗೈಡ್

EMI Loan: ಇಎಂಐನಲ್ಲಿ ಫೋನ್ ಖರೀದಿ ಮಾಡುವುದು ಲಾಭವೇ ಅಥವಾ ನಷ್ಟವೇ? ಇಲ್ಲಿದೆ ಲೆಕ್ಕಾಚಾರ

ಹೊಸ ಫೋನ್ ಮಾರುಕಟ್ಟೆಗೆ ಬಂದ ತಕ್ಷಣ ಅದನ್ನು ತಮ್ಮದಾಗಿಸಿಕೊಳ್ಳಬೇಕು ಎನ್ನುವ ಹಂಬಲ ಎಲ್ಲರಿಗೂ ಇದ್ದೇ ಇರುತ್ತದೆ. ಇದಕ್ಕಾಗಿ ಕಂಪೆನಿಗಳು ನಾನಾ ಯೋಜನೆಗಳನ್ನು ಪ್ರಕಟಿಸುತ್ತದೆ. ಅದರಲ್ಲಿ ಇಎಂಐ ಕೂಡ ಒಂದು. ಇಎಂಐನಲ್ಲಿ (EMI Loan) ಮೊಬೈಲ್ ಖರೀದಿಸುವುದು ಲಾಭದಾಯಕವಾಗಿ ಕಾಣುತ್ತದೆ. ಆದರೆ ಈ ನಿರ್ಧಾರವನ್ನು ಕೈಗೊಳ್ಳುವ ಮೊದಲು ಕೆಲವೊಂದು ಅಂಶಗಳನ್ನು ತಿಳಿದುಕೊಳ್ಳುವುದು ಬಹುಮುಖ್ಯ. ಇಎಂಐ ವ್ಯವಸ್ಥೆಯ ಲಾಭ ನಷ್ಟಗಳ ಸರಳ ಮಾಹಿತಿ ಇಲ್ಲಿದೆ.

VISTARANEWS.COM


on

By

EMI Loan
Koo

ಮೊಬೈಲ್ (mobile), ಲ್ಯಾಪ್ ಟಾಪ್ (laptop), ಕಂಪ್ಯೂಟರ್ (computer).. ಹೀಗೆ ತಮ್ಮ ಅಗತ್ಯಕ್ಕೆ ಬೇಕಾಗುವ ವಸ್ತುಗಳನ್ನು ಖರೀದಿ ಮಾಡುವುದು ಈಗ ಕಷ್ಟವೇನಲ್ಲ. ಯಾಕೆಂದರೆ ದೊಡ್ಡ ಮೊತ್ತವನ್ನು ಒಂದೇ ಬಾರಿ ಪಾವತಿ ಮಾಡುವ ಅಗತ್ಯ ಈಗ ಇಲ್ಲ. ಇಎಂಐನಲ್ಲಿ (EMI Loan) ಈಗ ನಮಗಿಷ್ಟವಾಗಿರುವ ಯಾವುದೇ ವಸ್ತುವನ್ನು ಖರೀದಿ ಮಾಡಲು ಸಾಕಷ್ಟು ಅವಕಾಶಗಳು ಇವೆ.

ಇಎಂಐನಲ್ಲಿ ಮೊಬೈಲ್ ಫೋನ್ ಖರೀದಿಸುವುದು ಎಂದರೆ ಹೊಸ ಫೋನ್‌ನ ಮೊತ್ತವನ್ನು ಕಾಲಾನಂತರದಲ್ಲಿ ಪಾವತಿ ಮಾಡುವ ಒಂದು ಸ್ಮಾರ್ಟ್ ವಿಧಾನವಾಗಿದೆ. ಇಎಂಐಯು ಪಾವತಿಯನ್ನು ಕಂತುಗಳಾಗಿ ವಿಭಜಿಸುವ ಮೂಲಕ ಅದನ್ನು ಸುಲಭವಾಗಿ ಎಲ್ಲರ ಕೈಗೆಟಕುವಂತೆ ಮಾಡುತ್ತದೆ. ಆದರೂ ಇಎಂಐ ಪಾವತಿಗಾಗಿ ಕಾರ್ಡ್ ಅನ್ನು ಸ್ವೈಪ್ ಮಾಡುವ ಮೊದಲು, ಪರಿಗಣಿಸಬೇಕಾದ ಹಲವಾರು ಸಂಗತಿಗಳಿವೆ.

ಇಎಂಐ ಎಂದರೆ ಈಕ್ವೇಟೆಡ್ ಮಾಸಿಕ ಕಂತು. ಇದು ಪ್ರತಿ ಕ್ಯಾಲೆಂಡರ್ ತಿಂಗಳ ನಿರ್ದಿಷ್ಟ ದಿನಾಂಕದಂದು ಸಾಲಗಾರನು ಮಾಡಿದ ಸ್ಥಿರ ಪಾವತಿ ಮೊತ್ತವಾಗಿದೆ. ಪ್ರತಿ ತಿಂಗಳು ಬಡ್ಡಿ ಮತ್ತು ಅಸಲು ಎರಡನ್ನೂ ಪಾವತಿಸಲು ಇಎಂಐಗಳನ್ನು ಬಳಸಲಾಗುತ್ತದೆ. ಇದರಿಂದ ನಿರ್ದಿಷ್ಟ ಸಂಖ್ಯೆಯ ವರ್ಷಗಳಲ್ಲಿ ಸಾಲವನ್ನು ಪೂರ್ಣವಾಗಿ ಪಾವತಿಸಲಾಗುತ್ತದೆ.

ವೈಯಕ್ತಿಕ, ಗೃಹ, ಕಾರು ಮತ್ತು ಎಸಿ, ಮೊಬೈಲ್‌ ಇತ್ಯಾದಿಗಳಿಗೆ ಸಿಗುವ ಸಾಲಗಳು ಸೇರಿದಂತೆ ವಿವಿಧ ರೀತಿಯ ಸಾಲಗಳಿಗೆ ಇಎಂಐಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ.


ಇಎಂಐನಲ್ಲಿ ಫೋನ್ ಖರೀದಿಸುವುದು ಒಳ್ಳೆಯದೇ ?

ಬಡ್ಡಿ ದರ, ಗುಪ್ತ ಶುಲ್ಕ ಮತ್ತು ಇಎಂಐ ಪಾವತಿಸಿದಾಗ ಫೋನ್‌ನ ಒಟ್ಟು ವೆಚ್ಚವನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ನಿಯಮ ಮತ್ತು ಷರತ್ತುಗಳ ಬಗ್ಗೆ ತಿಳಿದಿರುವುದು ಅಷ್ಟೇ ಅಗತ್ಯ. ಈ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುವುದು ಹೆಚ್ಚು ತಿಳುವಳಿಕೆಯುಳ್ಳ ನಿರ್ಧಾರವನ್ನು ತೆಗೆದುಕೊಳ್ಳಲು ಮತ್ತು ಯಾವುದೇ ಹಣಕಾಸಿನ ಅಪಾಯಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ.

ಇರಲಿ ಎಚ್ಚರ

ಸಾಮಾನ್ಯವಾಗಿ ಗ್ರಾಹಕರು ಇಎಂಐನಲ್ಲಿ ಮೊಬೈಲ್ ಖರೀದಿ ಮಾಡುವಾಗ ಕೆಲವೊಂದು ತಪ್ಪುಗಳನ್ನು ಮಾಡುತ್ತಾರೆ. ಅದರಲ್ಲಿ ಮುಖ್ಯವಾಗಿ ಈ ಐದು ತಪ್ಪುಗಳನ್ನು ಮಾಡದಂತೆ ಎಚ್ಚರ ವಹಿಸುವುದು ಬಹುಮುಖ್ಯ.

ಸುಖಾಸುಮ್ಮನೆ ಶಾಪಿಂಗ್ ಬೇಡ

ಸಾಲದಾತರು ಮತ್ತು ಚಿಲ್ಲರೆ ವ್ಯಾಪಾರಿಗಳು ಮೊಬೈಲ್ ಫೋನ್‌ ಗಳಿಗೆ ಇಎಂಐ ಹಣಕಾಸು ಒದಗಿಸುತ್ತಾರೆ. ಸಾಲವನ್ನು ನಿರ್ಧರಿಸುವ ಮೊದಲು ಶಾಪಿಂಗ್ ಮಾಡುವುದು ಮತ್ತು ಬಡ್ಡಿ ದರಗಳು, ಸಂಸ್ಕರಣಾ ಶುಲ್ಕಗಳು ಮತ್ತು ಇತರ ನಿಯಮಗಳನ್ನು ಹೋಲಿಸುವುದು ಮುಖ್ಯವಾಗಿದೆ.

ಬಜೆಟ್ ಪರಿಗಣಿಸಿ

ಇಎಂಐನಲ್ಲಿ ಫೋನ್‌ ಖರೀದಿಗೆ ಹಣಕಾಸು ಒದಗಿಸಲು ನೀವು ಶಕ್ತರಾಗಿದ್ದೀರಿ ಎಂದರ್ಥವಲ್ಲ. ಹೊಸ ಫೋನ್‌ಗಾಗಿ ಬಜೆಟ್ ಮಾಡುವಾಗ ಬಡ್ಡಿ ಮತ್ತು ಶುಲ್ಕಗಳು ಸೇರಿದಂತೆ ಸಾಲದ ಒಟ್ಟು ವೆಚ್ಚದ ಪ್ರತಿಯೊಂದು ಅಂಶವನ್ನು ಖಚಿತಪಡಿಸಿಕೊಳ್ಳಿ.

ಒಪ್ಪಂದವನ್ನು ಓದಿ

ಯಾವುದೇ ಲೋನ್ ಒಪ್ಪಂದಕ್ಕೆ ಸಹಿ ಹಾಕುವ ಮೊದಲು ಫೈನ್ ಪ್ರಿಂಟ್ ಅನ್ನು ಎಚ್ಚರಿಕೆಯಿಂದ ಓದಲು ಮರೆಯದಿರಿ. ಬಡ್ಡಿ ದರ, ಸಂಸ್ಕರಣಾ ಶುಲ್ಕಗಳು ಮತ್ತು ಅನ್ವಯಿಸಬಹುದಾದ ಯಾವುದೇ ಇತರ ಶುಲ್ಕಗಳನ್ನು ಅರ್ಥಮಾಡಿಕೊಳ್ಳಿ. ನಿಯಮಗಳು ಮತ್ತು ಷರತ್ತುಗಳನ್ನು ಎಚ್ಚರಿಕೆಯಿಂದ ಓದಿ. ಇದು ಇಎಂಐ ಯೋಜನೆಯ ಅವಧಿ, ಪೆನಾಲ್ಟಿಗಳಿಲ್ಲದೆ ಪೂರ್ವಪಾವತಿ ಮಾಡುವ ನಮ್ಯತೆ ಮತ್ತು ನೀವು ಪಾವತಿಯನ್ನು ತಪ್ಪಿಸಿಕೊಂಡರೆ ಅನ್ವಯಿಸಬಹುದಾದ ಯಾವುದೇ ಷರತ್ತುಗಳನ್ನು ಒಳಗೊಂಡಿರುತ್ತದೆ.

ಇದನ್ನೂ ಓದಿ: Anant Ambani-Radhika Wedding: ಅನಂತ್ ಅಂಬಾನಿ- ರಾಧಿಕಾ ಮದುವೆ; ಮುಂಬಯಿನಲ್ಲಿ ಗಗನಕ್ಕೇರಿದ ಹೊಟೇಲ್ ರೂಮ್ ಚಾರ್ಜ್!

ಸಾಲದ ಅವಧಿ ವಿಸ್ತರಣೆ

ಕಡಿಮೆ ಮಾಸಿಕ ಪಾವತಿ ಸೌಲಭ್ಯವನ್ನು ಪಡೆಯಲು ಸಾಲದ ಅವಧಿಯನ್ನು ವಿಸ್ತರಿಸುವುದು ಮೇಲ್ನೋಟಕ್ಕೆ ಲಾಭದಾಯಕ ಎಂದೆನಿಸಿದರೂ ಒಟ್ಟಾರೆ ಹೆಚ್ಚಿನ ಬಡ್ಡಿಯನ್ನು ಪಾವತಿಸುತ್ತಿದ್ದೀರಿ ಎಂಬುದು ನೆನಪಿರಲಿ.

ವಿಮೆಯನ್ನು ಪಡೆಯುತ್ತಿಲ್ಲ

ಇಎಂಐನಲ್ಲಿ ಖರೀದಿ ಮಾಡಿದ ಫೋನ್ ಹಾನಿಗೊಳಗಾಗಿದ್ದರೆ ಅಥವಾ ಅದಕ್ಕೆ ಹಣಕಾಸು ಒದಗಿಸುತ್ತಿರುವಾಗ ಕದ್ದಿದ್ದರೆ ಸಾಲವನ್ನು ಪಾವತಿಸಲು ನೀವು ಇನ್ನೂ ಜವಾಬ್ದಾರರಾಗಿರುತ್ತೀರಿ. ಈ ಅನಿರೀಕ್ಷಿತ ವೆಚ್ಚಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಫೋನ್ ವಿಮೆಯನ್ನು ಮಾಡಿಕೊಳ್ಳುವುದು ಒಳ್ಳೆಯದು.

Continue Reading

ಮನಿ-ಗೈಡ್

Income Tax Returns: ಆದಾಯ ತೆರಿಗೆ ರಿಟರ್ನ್ಸ್; ಯಾವ ಆದಾಯದವರಿಗೆ ಯಾವ ಫಾರ್ಮ್?

ಐಟಿಆರ್ (Income Tax Returns) ಸಲ್ಲಿಸುವಾಗ ಸರಿಯಾದ ಅರ್ಜಿ ನಮೂನೆಯನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಆದಾಯ ತೆರಿಗೆ ಇಲಾಖೆಯು ಏಳು ವಿಧದ ಅರ್ಜಿ ನಮೂನೆಗಳನ್ನು ನೀಡುತ್ತದೆ. ಪ್ರತಿಯೊಂದೂ ವಿಭಿನ್ನ ಮಾನದಂಡಗಳನ್ನು ಹೊಂದಿರುತ್ತದೆ. ಯಾವ ಆದಾಯ ವರ್ಗದವರಿಗೆ ಯಾವ ಫಾರ್ಮ್ ಸೂಕ್ತ ಎಂಬ ಮಾಹಿತಿ ಇಲ್ಲಿದೆ.

VISTARANEWS.COM


on

By

Income Tax Returns
Koo

ಎಲ್ಲ ತೆರಿಗೆದಾರರೇ ಗಮನಿಸಿ. ಈವರೆಗೂ ನೀವು ಆದಾಯ ತೆರಿಗೆ ರಿಟರ್ನ್ (Income Tax Returns) ಫೈಲ್ ಮಾಡದೇ ಇದ್ದರೆ ದಂಡ (fine) ಕಟ್ಟಬೇಕಾಗಬಹುದು. ಹೀಗಾಗಿ ಕೂಡಲೇ ಆದಾಯ ತೆರಿಗೆ ರಿಟರ್ನ್ ಅನ್ನು ಫೈಲ್ ಮಾಡಿ. ಯಾಕೆಂದರೆ 2023- 24 ಹಣಕಾಸು ವರ್ಷಕ್ಕೆ (financial year) ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಕೊನೆಯ ದಿನ ಜುಲೈ 31.

ಈಗಾಗಲೇ ಅನೇಕ ತೆರಿಗೆದಾರರು ತಮ್ಮ ಐಟಿಆರ್ ಅನ್ನು ಸಲ್ಲಿಸಿದ್ದಾರೆ. ಆದರೂ ನೀವು ಸಲ್ಲಿಸಿರುವ ಐಟಿಆರ್ ಸರಿಯಾಗಿದೆಯೇ ಎನ್ನುವುದನ್ನು ಮರು ಪರಿಶೀಲನೆ ಮಾಡುವುದು ಒಳ್ಳೆಯದು. ಐಟಿಆರ್ ಸಲ್ಲಿಸುವಾಗ ಸರಿಯಾದ ಅರ್ಜಿ ನಮೂನೆಯನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.

ಆದಾಯ ತೆರಿಗೆ ಇಲಾಖೆಯು ಏಳು ವಿಧದ ಅರ್ಜಿ ನಮೂನೆಗಳನ್ನು ನೀಡುತ್ತದೆ. ಪ್ರತಿಯೊಂದೂ ವಿಭಿನ್ನ ಮಾನದಂಡಗಳನ್ನು ಹೊಂದಿರುತ್ತದೆ. ಮೊದಲ ಬಾರಿಗೆ ಐಟಿಆರ್ ಅನ್ನು ಸಲ್ಲಿಸುತ್ತಿದ್ದರೆ ಯಾವ ಫಾರ್ಮ್ ಅನ್ನು ಭರ್ತಿ ಮಾಡಬೇಕೆಂದು ನಿರ್ಧರಿಸಲು ಸಹಾಯ ಮಾಡುವ ಮಾಹಿತಿ ಇಲ್ಲಿದೆ.

ಐಟಿಆರ್ ಫಾರ್ಮ್ 1

ವಾರ್ಷಿಕ ಆದಾಯ 50 ಲಕ್ಷ ರೂ. ವರೆಗಿನ ಸಂಬಳ ಪಡೆಯುವ ವ್ಯಕ್ತಿಗಳು ರಿಟರ್ನ್ಸ್ ಸಲ್ಲಿಸಲು ಈ ಫಾರ್ಮ್ ಅನ್ನು ಬಳಸುತ್ತಾರೆ. 50 ಲಕ್ಷ ರೂ. ವರೆಗಿನ ಆದಾಯವು ಸಂಬಳ, ಪಿಂಚಣಿ, ಒಂದು ಮನೆಯ ಆಸ್ತಿಯಿಂದ ಆದಾಯ ಮತ್ತು ಇತರ ಮೂಲಗಳನ್ನು ಒಳಗೊಂಡಿರುತ್ತದೆ. 5,000 ರೂ. ವರೆಗಿನ ಕೃಷಿ ಆದಾಯವೂ ಸೇರಿದೆ.
ಕಂಪೆನಿಯ ನಿರ್ದೇಶಕರಾಗಿದ್ದರೆ, ಪಟ್ಟಿ ಮಾಡದ ಕಂಪೆನಿಯಲ್ಲಿ ಹೂಡಿಕೆ ಮಾಡಿದ್ದರೆ, ಬಂಡವಾಳದಿಂದ ಲಾಭ ಗಳಿಸಿದರೆ, ಒಂದಕ್ಕಿಂತ ಹೆಚ್ಚು ಮನೆ ಆಸ್ತಿಯಿಂದ ಆದಾಯವನ್ನು ಹೊಂದಿದ್ದರೆ ಅಥವಾ ವ್ಯಾಪಾರದಿಂದ ಗಳಿಸಿದರೆ ಈ ಫಾರ್ಮ್ ಅನ್ನು ಬಳಸಲಾಗುವುದಿಲ್ಲ.

ಐಟಿಆರ್ ಫಾರ್ಮ್ 2

ಆದಾಯವು 50 ಲಕ್ಷ ರೂ. ಗಿಂತ ಹೆಚ್ಚಿದ್ದರೆ ಫಾರ್ಮ್ 2 ಬಳಸಿ. ಈ ನಮೂನೆಯು ಒಂದಕ್ಕಿಂತ ಹೆಚ್ಚು ವಸತಿ ಆಸ್ತಿಯಿಂದ ಬರುವ ಆದಾಯ, ಹೂಡಿಕೆಯ ಮೇಲಿನ ಬಂಡವಾಳ ಲಾಭಗಳು ಅಥವಾ ನಷ್ಟಗಳು, 10 ಲಕ್ಷ ರೂ. ಗಿಂತ ಹೆಚ್ಚಿನ ಲಾಭಾಂಶ ಆದಾಯ ಮತ್ತು 5000 ರೂ. ಗಿಂತ ಹೆಚ್ಚಿನ ಕೃಷಿ ಆದಾಯವನ್ನು ಒಳಗೊಂಡಿರುತ್ತದೆ. ಪಿಎಫ್ ಮೇಲಿನ ಬಡ್ಡಿಯಿಂದ ಆದಾಯವನ್ನು ಹೊಂದಿದ್ದರೆ ಈ ಫಾರ್ಮ್ ಸಹ ಅನ್ವಯಿಸುತ್ತದೆ.


ಐಟಿಆರ್ ಫಾರ್ಮ್ 3

ಫಾರ್ಮ್ 3 ವ್ಯಾಪಾರ ಮಾಲೀಕರು, ಪಟ್ಟಿ ಮಾಡದ ಈಕ್ವಿಟಿ ಷೇರುಗಳಲ್ಲಿನ ಹೂಡಿಕೆದಾರರು ಅಥವಾ ಸಂಸ್ಥೆಯಲ್ಲಿ ಪಾಲುದಾರರಾಗಿ ಗಳಿಸುವವರಿಗೆ, ಬಡ್ಡಿ, ಸಂಬಳ, ಬೋನಸ್, ಬಂಡವಾಳ ಲಾಭಗಳು, ಕುದುರೆ ರೇಸಿಂಗ್, ಲಾಟರಿ ಅಥವಾ ಬಹು ಆಸ್ತಿಗಳಿಂದ ಬಾಡಿಗೆಯಿಂದ ಆದಾಯವನ್ನು ಹೊಂದಿದ್ದರೆ ಇದು ಅನ್ವಯಿಸುತ್ತದೆ. ಸ್ವತಂತ್ರೋದ್ಯೋಗಿಗಳು ಸಹ ಈ ಫಾರ್ಮ್ ಅನ್ನು ಬಳಸಬೇಕು.

ಐಟಿಆರ್ ಫಾರ್ಮ್ 4

ಈ ನಮೂನೆಯು 50 ಲಕ್ಷ ರೂ. ನಿಂದ 2 ಕೋಟಿ ರೂಪಾಯಿಗಳ ನಡುವಿನ ಆದಾಯವಿರುವ ವ್ಯವಹಾರಗಳು, ವೈದ್ಯರು ಅಥವಾ ವಕೀಲರಿಗಾಗಿ ಆಗಿದೆ. 50 ಲಕ್ಷಕ್ಕಿಂತ ಹೆಚ್ಚಿನ ವಾರ್ಷಿಕ ಆದಾಯ ಹೊಂದಿರುವ ಸ್ವತಂತ್ರೋದ್ಯೋಗಿಗಳು ಸಹ ಈ ಫಾರ್ಮ್ ಅನ್ನು ಬಳಸಬೇಕು.

ಇದನ್ನೂ ಓದಿ: Money Guide: ನಿಮ್ಮ ಎಲ್‌ಐಸಿ ಪಾಲಿಸಿ ಲ್ಯಾಪ್ಸ್‌ ಆಗಿದೆಯಾ? ನವೀಕರಿಸಲು ಹೀಗೆ ಮಾಡಿ

ಐಟಿಆರ್ ಫಾರ್ಮ್ 5

ಫಾರ್ಮ್ 5 ಸಂಸ್ಥೆಗಳು, ಎಲ್‌ಎಲ್‌ಪಿಗಳು, ಎಒಪಿಗಳು ಅಥವಾ ಬಿಒಐಗಳಾಗಿ ನೋಂದಾಯಿಸಲಾದ ಘಟಕಗಳಿಗೆ ಆಗಿದೆ. ಇದನ್ನು ಸಂಘಸಂಸ್ಥೆಗಳಿಗೂ ಬಳಸಲಾಗುತ್ತದೆ.

ಐಟಿಆರ್ ಫಾರ್ಮ್ 6 ಮತ್ತು 7

ಫಾರ್ಮ್ 6 ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 11 ರ ಅಡಿಯಲ್ಲಿ ವಿನಾಯಿತಿ ಪಡೆಯದ ಕಂಪೆನಿಗಳಿಗೆ. ಫಾರ್ಮ್ 7 ಕಂಪೆನಿಗಳು ಮತ್ತು ವ್ಯಕ್ತಿಗಳಿಗೆ 139(4A), 139(4B), 139(4C), ಅಥವಾ 139(4D) ಅಡಿಯಲ್ಲಿ ರಿಟರ್ನ್ಸ್ ಸಲ್ಲಿಸಲು ಅಗತ್ಯವಿದೆ.

Continue Reading
Advertisement
Ananth Ambani Fashion
ಫ್ಯಾಷನ್3 mins ago

Ananth Ambani Fashion: ಅನಂತ್‌ ಅಂಬಾನಿ ಬಳಿ ಇದೆ ಡೈಮಂಡ್‌ ಬ್ರೂಚ್‌ಗಳ ಕಲೆಕ್ಷನ್‌! ಇವುಗಳ ಮೌಲ್ಯ ಎಷ್ಟಿರಬಹುದು?

Entrepreneurship Development Training Concluding Ceremony at Kanakagiri
ಕೊಪ್ಪಳ9 mins ago

Koppala News: ಕನಕಗಿರಿಯಲ್ಲಿ ಉದ್ಯಮಶೀಲತಾಭಿವೃದ್ಧಿ ತರಬೇತಿಯ ಸಮಾರೋಪ

Pooja Khedkar
ದೇಶ11 mins ago

Pooja Khedkar: ಪೂಜಾ ಖೇಡ್ಕರ್‌ಗೆ ಮತ್ತೊಂದು ಬಿಗ್‌ ಶಾಕ್‌; ತರಬೇತಿಗೆ ತಡೆ, ಅಕಾಡೆಮಿಗೆ ವಾಪಸ್‌

Clearance of footpaths in Shira
ತುಮಕೂರು11 mins ago

Shira News: ಶಿರಾದಲ್ಲಿ ಫುಟ್‌ಪಾತ್‌ಗಳ ತೆರವು ಕಾರ್ಯಾಚರಣೆ

karnataka weather Forecast
ಮಳೆ13 mins ago

Karnataka Weather : ನಾಳೆಗೂ ಮಳೆ ಮುನ್ನೆಚ್ಚರಿಕೆ; ಸೆ.30ರವರೆಗೆ ಈ ಪ್ರವಾಸಿ ತಾಣಗಳಲ್ಲಿ ಟ್ರಕ್ಕಿಂಗ್‌ ನಿಷೇಧ

R Ashok demands that Valmiki Development Corporation scam should be investigated by CBI and CM Siddaramaiah should resign
ಕರ್ನಾಟಕ14 mins ago

Assembly Session: ಸರ್ಕಾರಕ್ಕೆ ವಾಲ್ಮೀಕಿ ಜನಾಂಗದ ಶಾಪ ತಟ್ಟಬಾರದೆಂದರೆ ಸಿದ್ದರಾಮಯ್ಯ ರಾಜೀನಾಮೆ ನೀಡಲಿ; ಆರ್‌. ಅಶೋಕ್‌ ಆಗ್ರಹ

Necessary action will be taken for salary revision of special schools teachers says minister Lakshmi Hebbalkar
ಕರ್ನಾಟಕ17 mins ago

Lakshmi Hebbalkar: ವಿಶೇಷ ಶಾಲೆಗಳ ಶಿಕ್ಷಕರ ವೇತನ ಪರಿಷ್ಕರಣೆಗೆ ಅಗತ್ಯ ಕ್ರಮ: ಹೆಬ್ಬಾಳಕರ್ ಭರವಸೆ

Assembly Session Minister Santosh Lad gave a huge gift to the film workers from the labor department
ಕರ್ನಾಟಕ19 mins ago

Assembly Session: ಕಾರ್ಮಿಕ ಇಲಾಖೆಯಿಂದ ಸಿನಿ ಕಾರ್ಮಿಕರಿಗೆ ಭರ್ಜರಿ ಗಿಫ್ಟ್!

Sadananda Suvarna
ಕರ್ನಾಟಕ38 mins ago

Sadananda Suvarna : ʼಗುಡ್ಡದ ಭೂತʼ ಖ್ಯಾತಿಯ ಹಿರಿಯ ರಂಗಕರ್ಮಿ, ನಿರ್ದೇಶಕ ಸದಾನಂದ ಸುವರ್ಣ ಇನ್ನಿಲ್ಲ

DS Veeraiah
ಕರ್ನಾಟಕ45 mins ago

D. S. Veeraiah: ಅರಸು ಟ್ರಕ್ ಟರ್ಮಿನಲ್ ಹಗರಣ;‌ ಡಿ.ಎಸ್‌.ವೀರಯ್ಯಗೆ ಜು.30ರವರೆಗೆ ನ್ಯಾಯಾಂಗ ಬಂಧನ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ6 hours ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ7 hours ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ1 day ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ1 day ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ2 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ2 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ2 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ2 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ2 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ3 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

ಟ್ರೆಂಡಿಂಗ್‌