ವಿಸ್ತಾರ Money Guide: ಜೂನ್‌ನಿಂದ ಗೃಹ ಸಾಲ, ಬಡ್ಡಿ, ವಿಮೆ, ಚಿನ್ನ, ಐಪಿಪಿಬಿ ಸೇವೆಗಳಲ್ಲಿ ಹೊಸ ಬದಲಾವಣೆ ಜಾರಿ - Vistara News

ಮನಿ-ಗೈಡ್

ವಿಸ್ತಾರ Money Guide: ಜೂನ್‌ನಿಂದ ಗೃಹ ಸಾಲ, ಬಡ್ಡಿ, ವಿಮೆ, ಚಿನ್ನ, ಐಪಿಪಿಬಿ ಸೇವೆಗಳಲ್ಲಿ ಹೊಸ ಬದಲಾವಣೆ ಜಾರಿ

ವೈಯಕ್ತಿಕ ಹಣಕಾಸು ವಿಷಯಗಳಿಗೆ ಸಂಬಂಧಿಸಿದಂತೆ ಜೂನ್‌ 1 ರಿಂದ ಕೆಲವು ಮಹತ್ವದ ಬದಲಾವಣೆಗಳು ಜಾರಿಯಾಗುತ್ತಿವೆ. ಗೃಹ ಸಾಲ, ವಾಹನ ವಿಮೆ ಇತ್ಯಾದಿಗೆ ಸಂಬಂಧಿಸಿದ್ದು, ತಿಳಿದುಕೊಳ್ಳುವುದು ಸೂಕ್ತ.

VISTARANEWS.COM


on

RBI
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಮುಂಬರುವ ಜೂನ್‌ ತಿಂಗಳಿನಿಂದ ವೈಯಕ್ತಿಕ ಹಣಕಾಸು ವಿಚಾರಗಳಿಗೆ ಸಂಬಂಧಿಸಿದಂತೆ ಹೊಸ ಬದಲಾವಣೆಗಳು ಜಾರಿಯಾಗಲಿವೆ. ಈ ಉಪಯುಕ್ತ ಮಾಹಿತಿ ನಿಮಗಾಗಿ ಇಲ್ಲಿದೆ. ಮುಖ್ಯವಾಗಿ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಗೃಹ ಸಾಲಗಾರರು, ಇಂಡಿಯಾ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್‌ (ಐಪಿಪಿಬಿ) ಗ್ರಾಹಕರಿಗೆ, ವಾಹನ ಮಾಲೀಕರಿಗೆ ಇವುಗಳು ನೇರವಾಗಿ ಅನ್ವಯವಾಗಲಿದೆ.

ಎಸ್‌ಬಿಐ ಗೃಹ ಸಾಲ ಬಡ್ಡಿ ದರ ಹೆಚ್ಚಳ

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ತನ್ನ ಇಬಿಎಲ್‌ಆರ್‌ ಆಧಾರಿತ ಗೃಹ ಸಾಲದ ಬಡ್ಡಿ ದರದಲ್ಲಿ ಶೇ.0.40 ಏರಿಕೆ ಮಾಡಿದ್ದು, ಶೇ.7.05ಕ್ಕೆ ವೃದ್ಧಿಸಿದೆ. ಈ ಹಿಂದೆ ಇಬಿಎಲ್‌ಆರ್‌ ಶೇ.6.65 ಇತ್ತು. 2022ರ ಜೂನ್‌ 1ರಿಂದ ಪರಿಷ್ಕೃತ ಬಡ್ಡಿ ದರ ಜಾರಿಯಾಗಲಿದೆ. ಬ್ಯಾಂಕ್‌ನ ರೆಪೊ ದರ ಆಧಾರಿತ ಸಾಲದ ಬಡ್ಡಿ ದರ ಶೇ.6.25 ಆಗಿದೆ.

ಥರ್ಡ್‌ ಪಾರ್ಟಿ ಮೋಟಾರು ವಾಹನ ವಿಮೆ ಪ್ರೀಮಿಯಂ ಹೆಚ್ಚಳ

ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಧಿಸೂಚನೆಯ ಪ್ರಕಾರ, ಥರ್ಡ್‌ ಪಾರ್ಟಿ ವಾಹನ ವಿಮೆಯ ಪ್ರೀಮಿಯಂ ದರಗಳು ಜೂನ್‌ 1 ರಿಂದ ಏರಿಕೆಯಾಗುತ್ತಿವೆ.

1,000 ಸಿಸಿ ಒಳಗಿನ ಸಾಮರ್ಥ್ಯದ ಎಂಜಿನ್‌ ಇರುವ ಖಾಸಗಿ ಕಾರುಗಳಿಗೆ ಥರ್ಡ್‌ ಪಾರ್ಟಿ ವಿಮೆಯ ಪ್ರೀಮಿಯಂ ಮೊತ್ತವು 2,072 ರೂ.ಗಳಿಂದ 2,094 ರೂ.ಗೆ ಏರಿಕೆಯಾಗಲಿದೆ. 1000 ಸಿಸಿ ಮತ್ತು 1,500 ಸಿಸಿ ನಡುವಣ ಕಾರುಗಳಿಗೆ ಪ್ರೀಮಿಯಂ ಮೊತ್ತವು 3,221 ರೂ.ಗಳಿಂದ 3,416 ರೂ.ಗೆ ಏರಿಕೆಯಾಗಲಿದೆ. 1,500 ಸಿಸಿಗಿಂತ ಮೇಲ್ಪಟ್ಟ ವಾಹನಗಳಿಗೆ ಪ್ರೀಮಿಯಂ 7,890 ರೂ.ಗಳಿಂದ 7,892 ರೂ.ಗೆ ಏರಿಕೆಯಾಗಲಿದೆ.

ದ್ವಿಚಕ್ರ ವಾಹನಗಳಲ್ಲಿ 150 ಸಿಸಿಯಿಂದ ಮೇಲ್ಪಟ್ಟ ಹಾಗೂ 350 ಸಿಸಿ ಮೀರದ ವಾಹನಗಳಿಗೆ 1,366 ರೂ. ಪ್ರೀಮಿಯಂ ನಿಗದಿಯಾಗಿದೆ. 350 ಸಿಸಿ ಮೀರಿದ ದ್ವಿಚಕ್ರ ವಾಹನಗಳಿಗೆ ಪ್ರೀಮಿಯಂ 2.804 ರೂ.ಗಳಾಗಿದೆ. ಹೊಸ ಖಾಸಗಿ ಎಲೆಕ್ಟ್ರಿಕ್‌ ವಾಹನವನ್ನು ಮೂರು ವರ್ಷಗಳ ಅವಧಿಗೆ 5,543 ರೂ.ಗೆ ವಿಮೆ ಸೌಕರ್ಯ ಪಡೆಯಬಹುದು. ಆದರೆ ವಾಹನದ ಸಾಮರ್ಥ್ಯ 30 ಕಿಲೊವ್ಯಾಟ್‌ ಮೀರಕೂಡದು.

ಚಿನ್ನದ ಹಾಲ್‌ ಮಾರ್ಕ್‌ ಕಡ್ಡಾಯ

ಜೂನ್‌ 1 ರಿಂದ ಎರಡನೇ ಹಂತದ ಚಿನ್ನದ ಹಾಲ್‌ ಮಾರ್ಕ್‌ ಕಡ್ಡಾಯ ಪದ್ಧತಿ ಆರಂಭವಾಗಲಿದೆ. ಈಗಿನ 256 ಜಿಲ್ಲೆಗಳ ಜತೆಗೆ 32 ಹೊಸ ಜಿಲ್ಲೆಗಳಲ್ಲಿ ಚಿನ್ನದ ಹಾಲ್‌ ಮಾರ್ಕ್‌ ಕಡ್ಡಾಯವಾಗಲಿದೆ. ಆದ್ದರಿಂದ ಚಿನ್ನಾಭರಣ ಖರೀದಿಸುವವರು ಇದನ್ನು ಗಮನಿಸಬೇಕು.

ಐಪಿಪಿಬಿ ಸೇವಾ ಶುಲ್ಕ ಜಾರಿ

ಭಾರತೀಯ ಅಂಚೆ ಪಾವತಿ ಬ್ಯಾಂಕ್‌ (ಐಪಿಪಿಬಿ) ಆಧಾರ್‌ ಆಧಾರಿತ ಪೇಮೆಂಟ್‌ ಸೇವೆ ( ಎಇಪಿಎಸ್) ಆರಂಭಿಸಿದ್ದು, ಇದಕ್ಕೆ ಜೂನ್‌ 15ರಿಂದ ಶುಲ್ಕ ಅನ್ವಯವಾಗಲಿದೆ. ಪ್ರತಿ ತಿಂಗಳು ಮೊದಲ ಮೂರು ಎಇಪಿಎಸ್‌ ವರ್ಗಾವಣೆಗಳು ಉಚಿತವಾಗಿರುತ್ತದೆ. ಬಳಿಕ ಪ್ರತಿ ಒಂದು ನಗದು ಡಿಪಾಸಿಟ್‌ ಇಡಲು ಅಥವಾ ಹಿಂತೆಗೆಯಲು 20 ರೂ. ಶುಲ್ಕ ಅನ್ವಯವಾಗಲಿದೆ.

ಇದನ್ನೂ ಓದಿ: Money Guide: ಶೇ.7.79ಕ್ಕೆ ಜಿಗಿದ ಹಣದುಬ್ಬರ, ಉಳಿತಾಯ ಖಾತೆಗೆ ಸಾಲದು ಬಡ್ಡಿದರ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮನಿ-ಗೈಡ್

Money Guide: ನಿಮ್ಮ ಎಲ್‌ಐಸಿ ಪಾಲಿಸಿ ಲ್ಯಾಪ್ಸ್‌ ಆಗಿದೆಯಾ? ನವೀಕರಿಸಲು ಹೀಗೆ ಮಾಡಿ

Money Guide: ಭಾರತದ ಅತೀ ದೊಡ್ಡ ವಿಮಾ ಕಂಪನಿ ಎನಿಸಿಕೊಂಡಿರುವ ಭಾರತೀಯ ಜೀವ ವಿಮಾ ನಿಗಮದಲ್ಲಿ ನೀವು ಪಾಲಿಸಿ ಹೊಂದಿದ್ದೀರಾ? ಅನಿವಾರ್ಯ ಕಾರಣದಿಂದ ಪಾಲಿಸಿಯ ಕಂತು ಕಟ್ಟದೆ ಅದು ಮಧ್ಯದಲ್ಲೇ ಲ್ಯಾಪ್ಸ್‌ ಆಗಿದ್ದರೆ ಅದನ್ನು ಹೇಗೆ ನವೀಕರಿಸಬಹುದು ಎನ್ನುವ ವಿವರ ಇಂದಿನ ಮನಿಗೈಡ್‌ನಲ್ಲಿದೆ.

VISTARANEWS.COM


on

Money Guide
Koo

ಬೆಂಗಳೂರು: ಪ್ರತಿಯೊಬ್ಬರೂ ವಿಮೆ (Insurance) ಮಾಡಿಸಬೇಕು ಎನ್ನುತ್ತಾರೆ ಆರ್ಥಿಕ ತಜ್ಞರು. ಅದರಲ್ಲಿಯೂ ಅನಿಶ್ಚತೆಯಿಂದ ಕೂಡಿದ ಈ ಆಧುನಿಕ ಕಾಲಘಟ್ಟದಲ್ಲಿ ವಿಮೆ ಮಾಡಿಸುವುದು ಪ್ರತಿಯೊಬ್ಬರಿಗೂ ಅನಿವಾರ್ಯ ಎನಿಸಿಕೊಂಡಿದೆ. ಹೀಗಾಗಿ ಇಂದು ಅನೇಕ ಇನ್ಶೂರೆನ್ಸ್‌ ಕಂಪನಿಗಳು ಹುಟ್ಟಿಕೊಂಡಿವೆ. ಅದರಲ್ಲಿಯೂ ಭಾರತದ ಅತೀ ದೊಡ್ಡ ವಿಮಾ ಕಂಪನಿ ಎನಿಸಿಕೊಂಡಿರುವ ಭಾರತೀಯ ಜೀವ ವಿಮಾ ನಿಗಮ (Life Insurance Corporation of India-LIC) ವಿವಿಧ ಕೊಡುಗೆಗಳ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತದೆ. ಇದು ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಯಾದ ಕಾರಣ ಬಹುತೇಕರ ಮೊದಲ ಆಯ್ಕೆ ಎಲ್‌ಐಸಿಯೇ ಆಗಿರುತ್ತದೆ. ನೀವು ಎಲ್‌ಐಸಿ ಗ್ರಾಹಕರಾಗಿದ್ದು, ಅನಿವಾರ್ಯ ಕಾರಣದಿಂದ ಪಾಲಿಸಿಯ ಕಂತು ಕಟ್ಟದೆ ಅದು ಮಧ್ಯದಲ್ಲೇ ಲ್ಯಾಪ್ಸ್‌ ಆಗಿದ್ದರೆ ಅದನ್ನು ಹೇಗೆ ನವೀಕರಿಸಬಹುದು ಎನ್ನುವ ವಿವರ ಇಂದಿನ ಮನಿಗೈಡ್‌ (Money Guide)ನಲ್ಲಿದೆ.

ಹೇಗೆ ಲ್ಯಾಪ್ಸ್‌ ಆಗುತ್ತದೆ?

ಎಲ್‌ಐಸಿ ಪಾಲಿಸಿ ಹೇಗೆ ಲ್ಯಾಪ್ಸ್‌ ಆಗುತ್ತದೆ ಎನ್ನುವುದನ್ನು ಮೊದಲು ನೋಡೋಣ. ಸತತವಾಗಿ ಮೂರು ಪ್ರೀಮಿಯಂಗಳನ್ನು ಪಾವತಿಸದಿದ್ದ ಸಂದರ್ಭದಲ್ಲಿ ನಿಮ್ಮ ಪಾಲಿಸಿ ಲ್ಯಾಪ್ಸ್ ಆಗುತ್ತದೆ. ಸಾಮಾನ್ಯವಾಗಿ ಪಾಲಿಸಿದಾರರಿಗೆ 15 ಮತ್ತು 30 ದಿನಗಳ ನಡುವಿನ ಗ್ರೇಸ್‌ ಅವಧಿಯನ್ನು ನೀಡಲಾಗಿರುತ್ತದೆ. ಗ್ರೇಸ್‌ ಅವಧಿಯಲ್ಲಿಯೂ ನೀವು ಪ್ರೀಮಿಯಂ ಪಾವತಿಸಲು ವಿಫಲರಾದಾಗ ಲ್ಯಾಪ್ಸ್‌ ಮಾಡಲಾಗುತ್ತದೆ. ಒಂದುವೇಳೆ ಪಾಲಿಸಿ ಲ್ಯಾಪ್‌ ಆದರೆ ಯಾವ ಅನುಕೂಲವೂ ಲಭಿಸುವುದಿಲ್ಲ. ಅನಾರೋಗ್ಯ ಅಥವಾ ಅಂಗವೈಕಲ್ಯದ ಕಾರಣದಿಂದ ಪ್ರೀಮಿಯಂ ಪಾವತಿಸಲು ಸಾಧ್ಯವಾಗದಿದ್ದರೆ ಪಾಲಿಸಿ ಲ್ಯಾಪ್ಸ್ ಆಗುವುದಿಲ್ಲ. ಆದರೆ ಈ ಬಗ್ಗೆ ನೀವು ಎಲ್ಐಸಿಗೆ ವೈದ್ಯರ ಪ್ರಮಾಣ ಪತ್ರ ಸಲ್ಲಿಸಬೇಕಾಗುತ್ತದೆ.

ನವೀಕರಣ / ಪುನಶ್ಚೇತನ ಹೇಗೆ?

ಲ್ಯಾಪ್ಸ್ ಆದ ಪಾಲಿಸಿಗಳನ್ನು ನವೀಕರಿಸಲು ನೀವು ಮೊದಲ ಬಾರಿಗೆ ಪ್ರೀಮಿಯಂ ಮಿಸ್ ಮಾಡಿದ ದಿನಾಂಕದಿಂದ 2 ವರ್ಷಗಳವರೆಗೆ ಅವಕಾಶವಿದೆ. ಈ ಅವಧಿಯಲ್ಲಿ ನೀವು ಬಡ್ಡಿಯನ್ನು ಪಾವತಿಸಿ ನವೀಕರಿಸಬಹುದು. ಹೇಗೆ ನವೀಕರಿಸಬಹುದು ಎನ್ನುವುದರ ಹಂತ ಹಂತದ ಮಾಹಿತಿ ಇಲ್ಲಿದೆ.

  • ಎಲ್ಐಸಿಯನ್ನು ಸಂಪರ್ಕಿಸಿ: ಕಸ್ಟಮರ್ ಕೇರ್ ಸಂಖ್ಯೆ, ಇ-ಮೇಲ್ ಮೂಲಕ ಎಲ್‌ಐಸಿಯನ್ನು ಸಂಪರ್ಕಿಸಿ. ಇಲ್ಲದಿದ್ದರೆ ನಿಮ್ಮ ಸಮೀಪದ ಎಲ್ಐಸಿ ಶಾಖೆಗೆ ಭೇಟಿ ನೀಡಿ.
  • ಪುನಶ್ಚೇತನ ಅರ್ಜಿ (Revival form) ಸಲ್ಲಿಸಿ: ಲ್ಯಾಪ್ಸ್ ಆದ ಪಾಲಿಸಿಯನ್ನು ಮತ್ತೆ ಸಕ್ರಿಯಗೊಳಿಸಲು ಪುನಶ್ಚೇತನ ಅರ್ಜಿ (Revival form) ನಮೂನೆಯನ್ನು ಭರ್ತಿಗೊಳಿಸಿ ಎಲ್ಐಸಿಗೆ ಸಲ್ಲಿಸಿ.
  • ಬಾಕಿ ಪ್ರೀಮಿಯಂ ಮತ್ತು ಬಡ್ಡಿಯನ್ನು ಪಾವತಿಸಿ: ನೀವು ಮಿಸ್‌ ಮಾಡಿದ ಎಲ್ಲ ಪ್ರೀಮಿಯಂಗಳನ್ನು ಮತ್ತು ಆ ಪ್ರೀಮಿಯಂಗಳ ಮೇಲಿನ ಬಡ್ಡಿಯನ್ನು ಪಾವತಿಸಿ.
  • ವೈದ್ಯಕೀಯ ಪ್ರಮಾಣಪತ್ರ ಸಲ್ಲಿಸಿ: ದೀರ್ಘ ಸಮಯದಿಂದ ನಿಮ್ಮ ಎಲ್ಐಸಿ ಪಾಲಿಸಿ ಲ್ಯಾಪ್ಸ್ ಆಗಿದ್ದರೆ ವೈದ್ಯಕೀಯ ಪ್ರಮಾಣಪತ್ರ ಸಲ್ಲಿಸುವುದು ಅಗತ್ಯ.
  • ಮನವಿ ಪರಿಶೀಲನೆ: ನೀವು ಸಲ್ಲಿಸಿರುವ ಎಲ್ಲ ದಾಖಲೆಗಳು ಹಾಗೂ ಪಾವತಿಗಳನ್ನು ಎಲ್‌ಐಸಿ ಪರಿಶೀಲಿಸುತ್ತದೆ. ಒಂದು ವೇಳೆ ನಿಮ್ಮ ಮನವಿ ಅನುಮೋದನೆಗೊಂಡರೆ ಎಲ್ಐಸಿ ನಿಮ್ಮ ಪಾಲಿಸಿಯನ್ನು ಪುನಶ್ಚೇತನಗೊಳಿಸಿ, ಹೊಸ ಪಾಲಿಸಿ ದಾಖಲೆಯನ್ನು ನೀಡುತ್ತದೆ.
  • ಗಮನಿಸಿ ಪಾಲಿಸಿಯ ನವೀಕರಣ ಉದ್ದೇಶಕ್ಕಾಗಿ ಅಗತ್ಯವಿರುವ ವೈದ್ಯಕೀಯ ವರದಿಗಳು ಹಾಗೂ ವಿಶೇಷ ರಿಪೋರ್ಟ್ಸ್‌ಗಳ ವೆಚ್ಚವನ್ನು ವಿಮಾದಾರರೇ ಭರಿಸಬೇಕಾಗುತ್ತದೆ.

ನಿಮ್ಮ ಪಾಲಿಸಿಯನ್ನು ಪುನರುಜ್ಜೀವನಗೊಳಿಸಿದ ನಂತರ ನಿಯಮಿತವಾಗಿ ನಿಮ್ಮ ಪ್ರೀಮಿಯಂಗಳನ್ನು ಪಾವತಿಸುವುದನ್ನು ಮರೆಯಬೇಡಿ.

ವ್ಯಾಟ್ಸ್‌ಆ್ಯಪ್‌ ಮೂಲಕ ಎಲ್‌ಐಸಿ ಸೇವೆ

ಈಗ ಎಲ್‌ಐಸಿಯ ಕೆಲವು ಸೇವೆ ವ್ಯಾಟ್ಸ್‌ಆ್ಯಪ್‌ನಲ್ಲಿಯೂ ಲಭ್ಯ. ಅದಕ್ಕಾಗಿ ನೀವು ಮಾಡಬೇಕಾದದ್ದು ಇಷ್ಟೇ. Hi ಎಂದು ವ್ಯಾಟ್ಸ್‌ಆ್ಯಪ್‌ನಲ್ಲಿ ಟೈಪ್‌ ಮಾಡಿ 8976862090 ನಂಬರ್‌ಗೆ ಮೆಸೇಜ್‌ ಕಳಿಸಿ. ಆಗ 11 ಆಯ್ಕೆಗಳನ್ನು ನಿಮ್ಮ ಮುಂದಿರುತ್ತದೆ. ಉದಾಹರಣೆಗೆ ಚಾಟ್‌ ಬಾಕ್ಸ್‌ನಲ್ಲಿ ಆಪ್ಷನ್‌ ನಂಬರ್‌ ನಮೂದಿಸಿ. ಉದಾಹರಣೆಗೆ 1 ಎಂದು ಟೈಪ್‌ ಮಾಡಿದರೆ ನಿಮ್ಮ ಮುಂದಿನ ಎಲ್‌ಐಸಿ ಪ್ರೀಮಿಯಂ ಕಟ್ಟುವ ದಿನಾಂಕ ತಿಳಿಯಬಹುದು. ಎಷ್ಟು ಮೊತ್ತ ಎಂಬುದನ್ನೂ ತಿಳಿದುಕೊಳ್ಳಬಹುದು.

ಇದನ್ನೂ ಓದಿ: Retirement Planning: ನಿವೃತ್ತಿ ಬಳಿಕ 1 ಲಕ್ಷ ರೂ. ಪಿಂಚಣಿ ಗಳಿಸೋದು ಹೇಗೆ? ಸುಲಭ ಯೋಜನೆಯ ಮಾಹಿತಿ ಇಲ್ಲಿದೆ

Continue Reading

ಮನಿ-ಗೈಡ್

Money Guide: ಹಿರಿಯ ನಾಗರಿಕರು ಮಾಸಿಕ 20,000 ರೂ. ಆದಾಯ ಗಳಿಸಲು ಈ ಯೋಜನೆಯಲ್ಲಿ ಹೂಡಿಕೆ ಮಾಡಿ

Money Guide: 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಸೀನಿಯರ್‌ ಸಿಟಿಜನ್ಸ್‌ ಸೇವಿಂಗ್‌ ಸ್ಕೀಮ್‌ ಅತ್ಯತ್ತಮ ಹೂಡಿಕೆ ಯೋಜನೆ ಎನಿಸಿಕೊಂಡಿದೆ. ಸೀನಿಯರ್‌ ಸಿಟಿಜನ್ಸ್‌ ಸೇವಿಂಗ್‌ ಸ್ಕೀಮ್‌ ವಿಶೇಷವಾಗಿ ಹಿರಿಯ ನಾಗರಿಕರಿಗೆಂದೇ ರೂಪಿಸಲಾಗಿದೆ. ಇತ್ತೀಚೆಗೆ ಬಡ್ಡಿ ದರವೂ ಏರಿಕೆಯಾಗಿದೆ. ಸರ್ಕಾರಿ ಬೆಂಬಲಿತ ಯೋಜನೆ ಇದಾಗಿರುವುದರಿಂದ ಹೂಡಿಕೆ ಮಾಡುವುದರಿಂದ ಅಪಾಯವೂ ಕಡಿಮೆ. ಒಟ್ಟಿನಲ್ಲಿ ಸುರಕ್ಷಿತ ಹೂಡಿಕೆಗೆ ಆದ್ಯತೆ ನೀಡುವವರಿಗೆ ಇದು ಉತ್ತಮ ಆಯ್ಕೆ.

VISTARANEWS.COM


on

Money Guide
Koo

ಬೆಂಗಳೂರು: ನಿವೃತ್ತಿಯ ನಂತರ ಹಾಯಾಗಿ, ಯಾವುದೇ ಚಿಂತೆ ಇಲ್ಲದೆ ಜೀವನ ಕಳೆಯಬೇಕು ಎನ್ನುವುದು ಬಹುತೇಕರ ಕನಸು. ಈ ರೀತಿಯ ನೆಮ್ಮದಿಯ ಜೀವನಕ್ಕೆ ಆರ್ಥಿಕವಾಗಿ ಸ್ವಾವಲಂಬಿಯಾಗಿರುವುದು ಮುಖ್ಯ. ಮಾಸಿಕ ಪಿಂಚಣಿ ಇಲ್ಲದಿದ್ದರೂ ಚಿಂತೆ ಬೇಡ. ಈ ವಿಶೇಷ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ನಿರ್ದಿಷ್ಟ ಆದಾಯ ಗಳಿಬಹುದು. ಆ ಯೋಜನೆಯೇ ಸೀನಿಯರ್‌ ಸಿಟಿಜನ್ಸ್‌ ಸೇವಿಂಗ್‌ ಸ್ಕೀಮ್‌ (Senior Citizens Savings Scheme-SCSS). 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಇದು ಉತ್ತಮ ಹೂಡಿಕೆಯ ಆಯ್ಕೆ. ಈ ಬಗ್ಗೆ ವಿವರ ಮನಿಗೈಡ್‌ (Money Guide)ನಲ್ಲಿದೆ.

ಏನಿದು ಯೋಜನೆ?

ಸೀನಿಯರ್‌ ಸಿಟಿಜನ್ಸ್‌ ಸೇವಿಂಗ್‌ ಸ್ಕೀಮ್‌ ವಿಶೇಷವಾಗಿ ಹಿರಿಯ ನಾಗರಿಕರಿಗೆಂದೇ ರೂಪಿಸಲಾಗಿದೆ. ಇತ್ತೀಚೆಗೆ ಬಡ್ಡಿ ದರವೂ ಏರಿಕೆಯಾಗಿದೆ. ಈ ಯೋಜನೆಯಲ್ಲಿ 50,000 ರೂ. ತನಕದ ಬಡ್ಡಿ ಆದಾಯ ತೆರಿಗೆ ಮುಕ್ತ. ಪಿಪಿಎಫ್‌ಗಿಂತ ಹೆಚ್ಚಿನ ಆದಾಯವನ್ನು ನೀಡುತ್ತದೆ. ಹೀಗಿದ್ದರೂ ಇದರಲ್ಲಿ ವೈಯಕ್ತಿಕವಾಗಿ ಗರಿಷ್ಠ 15 ಲಕ್ಷ ರೂ. ಹೂಡಿಕೆ ಮಾಡಬಹುದು. ಈ ಯೋಜನೆಯು ಐದು ವರ್ಷಗಳ ಅವಧಿಯನ್ನು ಹೊಂದಿದೆ. ಇನ್ನೂ ಮೂರು ವರ್ಷಗಳವರೆಗೆ ವಿಸ್ತರಿಸಬಹುದು. ಎಸ್‌ಸಿಎಸ್‌ಎಸ್‌ ಯೋಜನೆಯಲ್ಲಿ ಸರ್ಕಾರ ಇತ್ತೀಚೆಗೆ ಹಲವು ಬದಲಾವಣೆಗಳನ್ನು ತಂದಿದೆ. ಒಬ್ಬ ವ್ಯಕ್ತಿಯು ನಿವೃತ್ತಿ ಹೊಂದಿದ ದಿನಾಂಕದಿಂದ ಮೂರು ತಿಂಗಳೊಳಗೆ ಹಿರಿಯ ನಾಗರಿಕರ ಉಳಿತಾಯ ಯೋಜನೆಯಡಿ ಖಾತೆಯನ್ನು ತೆರೆಯಬಹುದು. ಅಲ್ಲದೆ ಹೊಸ ಅಧಿಸೂಚನೆಯು, ಸರ್ಕಾರಿ ಉದ್ಯೋಗಿಯ ಸಂಗಾತಿಯೂ ಯೋಜನೆಯಲ್ಲಿ ಹೂಡಿಕೆ ಮಾಡಲು ಅನುವು ಮಾಡಿಕೊಡುತ್ತದೆ. 

ಮೊದಲೇ ಹೇಳಿದಂತೆ ಈ ಯೋಜನೆಯನ್ನು ಹಿರಿಯ ನಾಗರಿಕರಿಗೆಂದೇ ರೂಪಿಸಲಾಗಿದೆ. ಸರ್ಕಾರಿ ಬೆಂಬಲಿತ ಯೋಜನೆ ಇದಾಗಿರುವುದರಿಂದ ಹೂಡಿಕೆ ಮಾಡುವುದರಿಂದ ಅಪಾಯವೂ ಕಡಿಮೆ. ಒಟ್ಟಿನಲ್ಲಿ ಸುರಕ್ಷಿತ ಹೂಡಿಕೆಗೆ ಆದ್ಯತೆ ನೀಡುವವರಿಗೆ ಇದು ಉತ್ತಮ ಆಯ್ಕೆ ಎನಿಸಿಕೊಂಡಿದೆ.

ಯಾರೆಲ್ಲ ಹೂಡಿಕೆ ಮಾಡಬಹುದು?

ಸರ್ಕಾರದಿಂದಲೇ ನಡೆಸಲಾಗುವ ಸಣ್ಣ ಉಳಿತಾಯ ಯೋಜನೆ ಇದಾಗಿದ್ದು, 60 ವರ್ಷ ಮೇಲ್ಪಟ್ಟು ವಯಸ್ಸಿನವರು ಅಥವಾ ವಿಆರ್‌ಎಸ್‌ ನಿವೃತ್ತಿ ಪಡೆದ 55 ವರ್ಷ ವಯಸ್ಸಿನವರು ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಅರ್ಹರು. ವೈಯಕ್ತಿಕವಾಗಿ ಅಥವಾ ಸಂಗಾತಿಯೊಂದಿಗೆ ಜಂಟಿಯಾಗಿ ಖಾತೆಯನ್ನು ತೆರೆಯಬಹುದು.

ಬಡ್ಡಿ ದರ

ಅಂಚೆ ಕಚೇರಿ ಅಥವಾ ಬ್ಯಾಂಕ್‌ನಲ್ಲಿ ಎಸ್‌ಸಿಎಸ್‌ಎಸ್‌ ಖಾತೆ ತೆರೆಯಬಹುದು. ಸದ್ಯ ಈ ಯೋಜನೆಗೆ ವಾರ್ಷಿಕ ಶೇ. 8.2ರಷ್ಟು ಬಡ್ಡಿ ಇದೆ. ಕನಿಷ್ಠ ಹೂಡಿಕೆ 1,000 ರೂ. ಮತ್ತು ಗರಿಷ್ಠ ಹೂಡಿಕೆ 30 ಲಕ್ಷ ರೂ. ವಿಶೇಷ ಎಂದರೆ ತೆರಿಗೆ ಸೆಕ್ಷನ್‌ 80 ಸಿ ಅಡಿಯಲ್ಲಿ ಟ್ಯಾಕ್ಸ್‌ ಡಿಡಕ್ಷನ್‌ಗೂ ಅವಕಾಶ ಇದೆ.

ಮಾಸಿಕ 20 ಸಾವಿರ ರೂ. ಪಡೆಯುವುದು ಹೇಗೆ?

ಈ ಯೋಜನೆ ಮೂಲಕ ಮಾಸಿಕ 20 ಸಾವಿರ ರೂ. ಪಡೆಯುವುದು ಹೇಗೆ ಎನ್ನುವುದನ್ನು ಉದಾಹರಣೆ ಮೂಲಕ ನೋಡೋಣ. ಸದ್ಯ ಎಸ್‌ಸಿಎಸ್‌ಎಸ್‌ ಯೋಜನೆಗೆ 8.2 ಬಡ್ಡಿ ಲಭಿಸುವ ಹಿನ್ನೆಲೆಯಲ್ಲಿ ನೀವು 30 ಲಕ್ಷ ರೂ. ಹೂಡಿಕೆ ಮಾಡಿದರೆ ಪ್ರತಿ ವರ್ಷ 2.46 ಲಕ್ಷ ರೂ. ಬಡ್ಡಿ ಲಭಿಸುತ್ತದೆ. ಅಂದರೆ ಪ್ರತಿ ತಿಂಗಳು 20,000 ರೂ. ಸಿಕ್ಕಂತಾಗುತ್ತದೆ. ಒಟ್ಟಿನಲ್ಲಿ ಇದು ಹಿರಿಯ ನಾಗರಿಕರಿಗೆ ಉತತ್ಮ ಯೋಜನೆ ಎನಿಸಿಕೊಂಡಿದೆ.

ಇದನ್ನೂ ಓದಿ: Money Guide: ನಿವೃತ್ತಿಯ ನಂತರವೂ ಆರ್ಥಿಕವಾಗಿ ಸದೃಢರಾಗಬೇಕೆ?; ಈ ಯೋಜನೆಗಳಲ್ಲಿ ಹೂಡಿಕೆ ಮಾಡಿ

Continue Reading

ಮನಿ-ಗೈಡ್

Retirement Planning: ನಿವೃತ್ತಿ ಬಳಿಕ 1 ಲಕ್ಷ ರೂ. ಪಿಂಚಣಿ ಗಳಿಸೋದು ಹೇಗೆ? ಸುಲಭ ಯೋಜನೆಯ ಮಾಹಿತಿ ಇಲ್ಲಿದೆ

ವ್ಯವಸ್ಥಿತ ಹೂಡಿಕೆ ಯೋಜನೆ ಮೂಲಕ ಮ್ಯೂಚುಯಲ್ ಫಂಡ್ ಹೂಡಿಕೆಯು ಭಾರತದಲ್ಲಿ ಏಕರೂಪದ ಹೂಡಿಕೆಗಿಂತ ಹೆಚ್ಚು ಜನಪ್ರಿಯವಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಇದನ್ನು ಸಣ್ಣ ಮಾಸಿಕ ಹೂಡಿಕೆಯೊಂದಿಗೆ ಪ್ರಾರಂಭಿಸಬಹುದು. ಒಂದು ವೇಳೆ ನಿವೃತ್ತಿ ಬಗ್ಗೆ ಯೋಜನೆ (Retirement Planning) ರೂಪಿಸುತ್ತಿದ್ದರೆ ಎಸ್ ಐಪಿ ಬಗ್ಗೆ ತಿಳಿದುಕೊಂಡು ಹೂಡಿಕೆ ಮಾಡಿದರೆ ನಿವೃತ್ತಿ ಜೀವನವನ್ನು ಆರ್ಥಿಕ ಹೊರೆ ಇಲ್ಲದೆ ಕಳೆಯಬಹುದು. ದೊಡ್ಡ ಮೊತ್ತದ ನಿವೃತ್ತಿ ಪಡೆಯುವ ವಿಧಾನಗಳ ಮಾಹಿತಿ ಇಲ್ಲಿದೆ.

VISTARANEWS.COM


on

By

Retirement Panning
Koo

ನಿವೃತ್ತಿ ಯೋಜನೆ (Retirement Planning) ಮಾಡುತ್ತಿದ್ದೀರಾ. ಹಾಗಿದ್ದರೆ ಎಸ್‌ಐಪಿ ಬಗ್ಗೆ ತಿಳಿದುಕೊಳ್ಳಿ.. ವ್ಯವಸ್ಥಿತ ಹೂಡಿಕೆ ಯೋಜನೆ (SIP) ಮೂಲಕ ಮ್ಯೂಚುಯಲ್ ಫಂಡ್ (Mutual fund) ಹೂಡಿಕೆಯು ಭಾರತದಲ್ಲಿ (India) ಏಕರೂಪದ ಹೂಡಿಕೆಗಿಂತ ಹೆಚ್ಚು ಜನಪ್ರಿಯವಾಗುತ್ತಿದೆ ಎಂಬುದನ್ನು ಭಾರತದಲ್ಲಿ ಕಳೆದ ಒಂದು ವರ್ಷದ ಮ್ಯೂಚುಯಲ್ ಫಂಡ್‌ಗಳ ಅಸೋಸಿಯೇಷನ್ ​​ಡೇಟಾ ಹೇಳುತ್ತದೆ. ಇದರ ಹಿಂದಿರುವ ಪ್ರಮುಖ ಕಾರಣ 100 ರೂ. ನ ಸಣ್ಣ ಮಾಸಿಕ ಹೂಡಿಕೆಯೊಂದಿಗೆ ಜನಸಾಮಾನ್ಯರೂ ಪ್ರಾರಂಭಿಸಬಹುದು.

ಎಸ್‌ಐಪಿ ಹೂಡಿಕೆಯು ರೂಪಾಯಿ ವೆಚ್ಚ ಸರಾಸರಿ ಮತ್ತು ಸಂಯುಕ್ತ ಬೆಳವಣಿಗೆಯನ್ನು ಒದಗಿಸುತ್ತದೆ. ಸಂಯುಕ್ತ ಬೆಳವಣಿಗೆಯ ಪ್ರಯೋಜನವೆಂದರೆ ಒಂದು ಸಣ್ಣ ಮಾಸಿಕ ಎಸ್ ಐ ಪಿ ಕೊಡುಗೆಯು ದೀರ್ಘಾವಧಿಯವರೆಗೆ ಹೂಡಿಕೆಯಲ್ಲಿ ಉಳಿದಿದ್ದರೆ ದೊಡ್ಡ ನಿವೃತ್ತಿ ಪ್ರಯೋಜನವನ್ನು ಪಡೆಯಲು ಸಹಾಯ ಮಾಡುತ್ತದೆ.

ಮಾಸಿಕ 5,000 ರೂ.ಗಳ ಎಸ್ ಐ ಪಿನೊಂದಿಗೆ ಪ್ರಾರಂಭಿಸಿ ಅದನ್ನು 30 ವರ್ಷಗಳವರೆಗೆ ಇರಿಸಿದರೆ ದೊಡ್ಡ ಮೊತ್ತವನ್ನು ನಿರ್ಮಿಸಬಹುದು. ದೀರ್ಘಾವಧಿಯ ಕ್ಯಾಪಿಟಲ್ ಗೇನ್ಸ್ ತೆರಿಗೆಯನ್ನು ಪಾವತಿಸಿದ ಅನಂತರ ಆ ಹಣವನ್ನು ವ್ಯವಸ್ಥಿತ ಹಿಂತೆಗೆದುಕೊಳ್ಳುವ ಯೋಜನೆಯಲ್ಲಿ (ಎಸ್‌ಡಬ್ಲ್ಯೂಪಿ) ಹೂಡಿಕೆ ಮಾಡಿದರೆ ಅಲ್ಲಿ ಶೇ. 7ರಷ್ಟು ಆದಾಯವನ್ನು ಪಡೆಯಬಹುದು. ಅಂದರೆ ಮುಂದಿನ 30 ವರ್ಷಗಳವರೆಗೆ ಮಾಸಿಕ 1 ಲಕ್ಷ ರೂಪಾಯಿ ಪಿಂಚಣಿ ಪಡೆಯಬಹುದು.

ಎಸ್ ಐ ಪಿಯಲ್ಲಿ ಹೂಡಿಕೆ ಮಾಡುವ ಮುನ್ನ ಎಸ್ ಐ ಪಿ ಮತ್ತು ಎಸ್ ಡಬ್ಲ್ಯೂ ಪಿ ನಡುವಿನ ವ್ಯತ್ಯಾಸ ತಿಳಿಯಿರಿ.


ಎಸ್ ಐ ಪಿ ಎಂದರೇನು?

ಎಸ್ ಐ ಪಿ ಎನ್ನುವುದು ಮ್ಯೂಚುಯಲ್ ಫಂಡ್ ಹೂಡಿಕೆಯ ಒಂದು ವಿಧಾನವಾಗಿದೆ. ಒಟ್ಟು ಮೊತ್ತದ ವಿಧಾನಕ್ಕಿಂತ ಭಿನ್ನವಾಗಿ ಒಬ್ಬರು ಒಂದು ಬಾರಿ ಮೊತ್ತವನ್ನು ಠೇವಣಿ ಮಾಡುತ್ತಾರೆ. ಅವರು ದೈನಂದಿನ, ಮಾಸಿಕ ಅಥವಾ ವಾರ್ಷಿಕ ಆಧಾರದ ಮೇಲೆ ಎಸ್ ಐಪಿ ಮೂಲಕ ಪೂರ್ವ-ನಿಶ್ಚಿತ ಮೊತ್ತದಲ್ಲಿ ಹೂಡಿಕೆ ಮಾಡುತ್ತಾರೆ.

ಕೆಲವು ಮ್ಯೂಚುವಲ್ ಫಂಡ್ ಯೋಜನೆಗಳು ಎಸ್ ಐ ಪಿಗಳನ್ನು 100 ರೂ.ಗೆ ಪ್ರಾರಂಭಿಸಬಹುದು. ಮ್ಯೂಚುವಲ್ ಫಂಡ್ ಸ್ಕೀಮ್‌ನ ಕಾರ್ಯಕ್ಷಮತೆಯೊಂದಿಗೆ ಸಿಂಕ್ ಮಾಡುವ ಮೂಲಕ ಎನ್‌ಎವಿಯ ಬೆಲೆಯು ಪ್ರತಿ ತಿಂಗಳು ಬದಲಾಗುತ್ತಲೇ ಇರುವುದರಿಂದ ಎಸ್‌ಐಪಿ ರೂಪಾಯಿ ವೆಚ್ಚದ ಸರಾಸರಿಯನ್ನು ಒದಗಿಸುತ್ತದೆ. ಮಾರುಕಟ್ಟೆ ಮತ್ತು ಎನ್ ಎವಿ ದರಗಳು ಕಡಿಮೆಯಾದಾಗ ಹೂಡಿಕೆದಾರರು ಹೆಚ್ಚಿನ ಎನ್ ಎವಿ ಗಳನ್ನು ಖರೀದಿಸುತ್ತಾರೆ. ಮಾರುಕಟ್ಟೆ ದರ ಹೆಚ್ಚಾದಾಗ ಮತ್ತು ಎನ್‌ಎವಿ ದರವೂ ಹೆಚ್ಚಿರುವಾಗ, ಹೂಡಿಕೆದಾರರು ಕಡಿಮೆ ಎನ್‌ಎವಿಗಳನ್ನು ಖರೀದಿಸುತ್ತಾರೆ.

ಒಟ್ಟು ಮೊತ್ತದ ಹೂಡಿಕೆಗಳಂತೆ ಎಸ್‌ಐಪಿ ಹೂಡಿಕೆಗಳು ಕೂಡ ಸಂಯುಕ್ತ ಬೆಳವಣಿಗೆಯನ್ನು ನೀಡುತ್ತವೆ. ಆದ್ದರಿಂದ ನೀವು 1,000 ರೂ. ಸಣ್ಣ ಮೊತ್ತವನ್ನು ಹೂಡಿಕೆ ಮಾಡಿದರೂ ಸಹ 40 ವರ್ಷಗಳವರೆಗೆ ಹೂಡಿಕೆ ಮಾಡುವುದನ್ನು ಮುಂದುವರಿಸಿ ಮತ್ತು ಅದರ ಮೇಲೆ ಶೇ. 12ರಷ್ಟು ಪ್ರತಿಶತ ವಾರ್ಷಿಕ ಸಂಯುಕ್ತ ಬೆಳವಣಿಗೆಯನ್ನು ಪಡೆದರೆ 4.80 ಲಕ್ಷ ರೂ. ವರೆಗೆ ಹೂಡಿಕೆಯು ಬೆಳೆಯಬಹುದು. ಆ ಕಾಲಮಿತಿಯಲ್ಲಿ 1,18,82,420 ರೂ. ನಿವೃತ್ತಿ ಮೊತ್ತವನ್ನು ನಿರ್ಮಿಸಲು ಎಸ್ ಐಪಿ ಅನ್ನು ಸಾಧನವಾಗಿ ಪರಿಗಣಿಸುವ ಯಾರಾದರೂ ದೀರ್ಘಾವಧಿಯ ಹೂಡಿಕೆಯನ್ನು ಆಯ್ಕೆ ಮಾಡಬಹುದು.

ಎಸ್‌ಡಬ್ಲ್ಯೂಪಿ ಎಂದರೇನು?

ಎಸ್ಐಪಿನಲ್ಲಿ ಪ್ರತಿ ತಿಂಗಳು ಹಣವನ್ನು ಹೂಡಿಕೆ ಮಾಡಿದರೆ ಎಸ್‌ಡಬ್ಲ್ಯೂಪಿ ಯೋಜನೆಯ ಮ್ಯೂಚುವಲ್ ಫಂಡ್ ಯೋಜನೆಯಿಂದ ಪ್ರತಿ ತಿಂಗಳು ಹಣವನ್ನು ಹಿಂಪಡೆಯುತ್ತೀರಿ.

ಮ್ಯೂಚುಯಲ್ ಫಂಡ್‌ನಲ್ಲಿ ಒಟ್ಟು ಮೊತ್ತವನ್ನು ಹೂಡಿಕೆ ಮಾಡುವವರು ಎಸ್‌ಡಬ್ಲ್ಯೂಪಿ ಅನ್ನು ಆಯ್ಕೆ ಮಾಡುತ್ತಾರೆ ಮತ್ತು ನಿಗದಿತ ಮೊತ್ತವನ್ನು ಹಿಂಪಡೆಯುತ್ತಾರೆ. ಆ ಹಣವನ್ನು ನಿಮಗೆ ನೀಡಲು ಫಂಡ್ ಹೌಸ್ ಪ್ರತಿ ತಿಂಗಳು ಎನ್‌ಎವಿಗಳನ್ನು ಮಾರಾಟ ಮಾಡುತ್ತದೆ.

ಠೇವಣಿಗಳ ಮೇಲೆ ಆದಾಯವನ್ನು ಪಡೆಯುವುದರಿಂದ ಮಾಸಿಕ ಪಿಂಚಣಿ ಪಡೆದರೂ ಸಹ ಹೂಡಿಕೆಯಲ್ಲಿರುವ ಮೊತ್ತವು ಅವರಿಗೆ ಬಹು ವರ್ಷಗಳವರೆಗೆ ಮಾಸಿಕ ಆದಾಯವನ್ನು ನೀಡುತ್ತದೆ.

ವಾಪಸಾತಿ ದರವು ರಿಟರ್ನ್ ದರಕ್ಕಿಂತ ತುಂಬಾ ಕಡಿಮೆಯಿದ್ದರೆ ಅದು ಹಲವು ದಶಕಗಳವರೆಗೆ ಮಾಸಿಕ ಆದಾಯವನ್ನು ಒದಗಿಸುತ್ತದೆ.

ಎಸ್‌ಡಬ್ಲ್ಯೂಪಿ ಸಹ ರೂಪಾಯಿ ವೆಚ್ಚದ ಸರಾಸರಿಯನ್ನು ನೀಡುತ್ತದೆ. ಅಲ್ಲಿ ದರವು ಕಡಿಮೆಯಾದಾಗ ನಿಧಿಯು ಹೆಚ್ಚು ಎನ್ ಎವಿ ಗಳನ್ನು ಮಾರಾಟ ಮಾಡುತ್ತದೆ ಮತ್ತು ಎನ್ ಎವಿ ದರವು ಹೆಚ್ಚಾದಾಗ ಮಾರಾಟ ಕಡಿಮೆಯಾಗಿದೆ.

ಎಸ್‌ಐಪಿನಿಂದ 1 ಲಕ್ಷ ಪಿಂಚಣಿ ಹೇಗೆ ಪಡೆಯುವುದು?

30ನೇ ವಯಸ್ಸಿನಲ್ಲಿ 5,000 ಎಸ್‌ಐಪಿ ಅನ್ನು ಪ್ರಾರಂಭಿಸಿದರೆ ಅದನ್ನು 30 ವರ್ಷಗಳವರೆಗೆ ಮುಂದುವರಿಸಿ. ಆ ಅವಧಿಯಲ್ಲಿ ನಿಮ್ಮ ಒಟ್ಟು ಕೊಡುಗೆಗಳು 18,00,000 ರೂ. ಆಗಿರುತ್ತದೆ. ದೀರ್ಘಾವಧಿಯ ಬಂಡವಾಳ ಲಾಭಗಳು 1,58,49,569 ರೂ. ಆಗಿರುತ್ತದೆ ಮತ್ತು ಮೆಚ್ಯೂರಿಟಿ ಮೊತ್ತವು 1,76,49,569 ರೂ. ಆಗಿರುತ್ತದೆ. ಬಂಡವಾಳದ ಲಾಭವು ಹೂಡಿಕೆಗಿಂತ ಸುಮಾರು 10 ಪಟ್ಟು ಹೆಚ್ಚು. ಇದು ಸಂಯುಕ್ತ ಬೆಳವಣಿಗೆಯಿಂದಾಗಿ ಮಾತ್ರ. 60ನೇ ವಯಸ್ಸಿನಲ್ಲಿ ಇದು ನಿಮ್ಮ ನಿವೃತ್ತಿ ವೇತನವಾಗುತ್ತದೆ.


1 ಲಕ್ಷ ರೂ. ತೆರಿಗೆ ವಿನಾಯಿತಿ ಪಡೆದ ಅನಂತರ ನೀವು ಅದನ್ನು ಹಿಂತೆಗೆದುಕೊಂಡರೆ ಶೇ. 10ರಷ್ಟು ದೀರ್ಘಾವಧಿಯ ಬಂಡವಾಳ ಲಾಭ ತೆರಿಗೆಯನ್ನು ಪಾವತಿಸಿದರೆ ನಿಮ್ಮ ತೆರಿಗೆ ಮೊತ್ತವು 17,54,956.90 ರೂ. ತೆರಿಗೆ ಪಾವತಿಸಿದ ಅನಂತರ ಕೊನೆಯಲ್ಲಿ 1,58,94,612.10 ರೂ. ಉಳಿಯುತ್ತದೆ.

ಇದನ್ನೂ ಓದಿ: Price Hike: ಮೊಬೈಲ್ ಕಂಪನಿಗಳಿಂದ ದರ ಏರಿಕೆ; ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬಹುದೆ?

ಮಾಸಿಕ ಪಿಂಚಣಿ ಪಡೆಯಲು ಹೂಡಿಕೆ ಮಾಡುವುದರಿಂದ ಸಾಲ ನಿಧಿಯನ್ನು ಸುರಕ್ಷಿತ ಆಯ್ಕೆ ಮಾಡಬಹುದು. ಅಲ್ಲಿ ನಿಮ್ಮ ಹೂಡಿಕೆಯ ಮೇಲೆ ಸಾಧಾರಣ ಶೇ. 7ರಷ್ಟು ಲಾಭವನ್ನು ಪಡೆಯಬಹುದು.

1,58,94,612.10 ರೂ.ಗಳನ್ನು ಡೆಟ್ ಫಂಡ್‌ನಲ್ಲಿ ಹೂಡಿಕೆ ಮಾಡಿ ಶೇಕಡಾ ಏಳರಷ್ಟು ವಾರ್ಷಿಕ ಆದಾಯವನ್ನು ಪಡೆದರೆ 30 ವರ್ಷಗಳವರೆಗೆ 1 ಲಕ್ಷ ರೂಪಾಯಿಗಳ ಮಾಸಿಕ ಪಿಂಚಣಿಯನ್ನು ಸುಲಭವಾಗಿ ಡ್ರಾ ಮಾಡಬಹುದು ಮತ್ತು ಅದರ ಅನಂತರವೂ ನಿಮ್ಮ ಬಳಿ 62,99,829 ರೂ. ಮ್ಯೂಚುವಲ್ ಫಂಡ್ ಖಾತೆಯಲ್ಲಿ ಬಾಕಿ ಮೊತ್ತ ಉಳಿದಿರುತ್ತದೆ.

ಎಸ್‌ಐಪಿ ಈ ಯೋಜನೆಯ ಹೂಡಿಕೆ ಅವಧಿಯು 30 ವರ್ಷಗಳು ಮತ್ತು ಇದು ಸಾಕಷ್ಟು ದೀರ್ಘಾವಧಿಯದ್ದಾಗಿದೆ. ಆದರೆ ನಿವೃತ್ತಿ ಯೋಜನೆಯನ್ನು ಮೊದಲೇ ಪ್ರಾರಂಭಿಸಿದರೆ ಸುಲಭವಾಗುತ್ತದೆ. ಎಷ್ಟು ಬೇಗನೆ ಇದನ್ನು ಪ್ರಾರಂಭಿಸುತ್ತೀರೋ ಅಷ್ಟು ಹೆಚ್ಚಿನ ನಿವೃತ್ತಿ ಮೊತ್ತವನ್ನು ಪಡೆಯಲು ಸಾಧ್ಯವಾಗುತ್ತದೆ.

Continue Reading

ವಾಣಿಜ್ಯ

Credit Card New Rules: ಕ್ರೆಡಿಟ್ ಕಾರ್ಡ್‌ಗೆ ಹೊಸ ನಿಯಮ; ಗ್ರಾಹಕರು ಈಗ ಏನು ಮಾಡಬೇಕು?

ಎಲ್ಲಾ ಕ್ರೆಡಿಟ್ ಕಾರ್ಡ್ (Credit Card New Rules) ಬಿಲ್ ಪಾವತಿಗಳನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ನಿರ್ವಹಿಸುವ ಭಾರತ್ ಬಿಲ್ ಪಾವತಿ ವ್ಯವಸ್ಥೆ ಮೂಲಕ ರವಾನಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ನ ಆದೇಶ ಮಾಡಿದ್ದು, ಇದು ಕ್ರೆಡಿಟ್ ಕಾರ್ಡ್ ಬಳಸುತ್ತಿರುವ ಗ್ರಾಹಕರ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎನ್ನುವ ಮಾಹಿತಿ ಇಲ್ಲಿದೆ.

VISTARANEWS.COM


on

By

Credit Card New Rules
Koo

ಕ್ರೆಡಿಟ್ ಕಾರ್ಡ್ (Credit Card New Rules) ಬಿಲ್ ಪಾವತಿ (bill payment) ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಯನ್ನು ಮಾಡಲಾಗಿದ್ದು, ಇದು ಗ್ರಾಹಕರ ಮೇಲೆ ಪರಿಣಾಮ ಬೀರಲಿದೆ. ಎಲ್ಲಾ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗಳನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ನಿರ್ವಹಿಸುವ ಭಾರತ್ ಬಿಲ್ ಪಾವತಿ ವ್ಯವಸ್ಥೆ (BBPS) ಮೂಲಕ ರವಾನಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ನ (RBI) ಆದೇಶದಲ್ಲಿ ತಿಳಿಸಿದೆ.

ಆದರೆ, ಕ್ರೆಡಿಟ್ ಕಾರ್ಡ್ ಪಾವತಿಗಳಿಗಾಗಿ CRED ಮತ್ತು PhonePe ನಂತಹ ಜನಪ್ರಿಯ ಅಪ್ಲಿಕೇಶನ್‌ಗಳನ್ನು ಪರಿಣಾಮಕಾರಿಯಾಗಿ ಬಳಸುವಲ್ಲಿ ತಮ್ಮ ಬ್ಯಾಂಕ್‌ಗಳು ಇನ್ನೂ ಸಕ್ರಿಯವಾಗಿಲ್ಲ ಎಂದು ಅನೇಕ ಗ್ರಾಹಕರು ದೂರಿದ್ದಾರೆ.

ಬ್ಯಾಂಕ್ ಏಕೀಕರಣದ ಪ್ರಸ್ತುತ ಸ್ಥಿತಿ ಏನಿದೆ?

ಭಾರತದಲ್ಲಿ ಕ್ರೆಡಿಟ್ ಕಾರ್ಡ್‌ಗಳನ್ನು ವಿತರಿಸಲು ಅಧಿಕಾರ ಹೊಂದಿರುವ 34 ಬ್ಯಾಂಕ್‌ಗಳಲ್ಲಿ 12 ಮಾತ್ರ ಪ್ರಸ್ತುತ BBPS ಪ್ಲಾಟ್‌ಫಾರ್ಮ್‌ನಲ್ಲಿ ಇದೆ. ಉಳಿದ 22 ಬ್ಯಾಂಕ್‌ಗಳು ಇನ್ನೂ ವ್ಯವಸ್ಥೆಯೊಂದಿಗೆ ಸಂಯೋಜಿಸುವ ಪ್ರಕ್ರಿಯೆಯಲ್ಲಿವೆ. ಪ್ರಸ್ತುತ ಎಸ್‌ಬಿಐ ಕಾರ್ಡ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಎಯು ಸಣ್ಣ ಹಣಕಾಸು ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಕೆನರಾ ಬ್ಯಾಂಕ್, ಫೆಡರಲ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಐಡಿಬಿಐ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಸಾರಸ್ವತ್ ಬ್ಯಾಂಕ್ ಗಳು ಬಿಬಿಪಿಎಸ್ ಪ್ಲಾಟ್ ಫಾರ್ಮ್ ನಲ್ಲಿ ಇವೆ.

ಆಕ್ಸಿಸ್ ಬ್ಯಾಂಕ್, ಹೆಚ್ ಡಿಎಫ್ ಸಿ ಬ್ಯಾಂಕ್, ಐಡಿಎಫ್ ಸಿ ಫಸ್ಟ್ ಬ್ಯಾಂಕ್, ಇಂಡಿಯನ್ ಬ್ಯಾಂಕ್, ಇಂಡಿಯನ್ ಓವರ್ಸೀಸ್ ಬ್ಯಾಂಕ್, ಯೆಸ್ ಬ್ಯಾಂಕ್ ಗಳು ಸೇರಿದಂತೆ ಇನ್ನು ಹಲವು ಬ್ಯಾಂಕ್ ಗಳು ಬಿಬಿಪಿಎಸ್ ನೊಂದಿಗೆ ಸೇರುವ ಪ್ರಯತ್ನದಲ್ಲಿದೆ.

ಇನ್ನೂ ಅಪ್‌ಡೇಟ್‌ ಆಗಿಲ್ಲ ಏಕೆ?

ಕೆಲವು ಬ್ಯಾಂಕ್‌ಗಳು ಬಿಬಿಪಿಎಸ್ ಅನ್ನು ಅಳವಡಿಸಿಕೊಳ್ಳುವಲ್ಲಿ ವಿಳಂಬವನ್ನು ಅನುಸರಿಸಲು ಹಲವಾರು ಅಂಶಗಳು ಕಾರಣವೆಂದು ಹೇಳಬಹುದು. ಏಕೀಕರಣವು ಅಸ್ತಿತ್ವದಲ್ಲಿರುವ ಸಿಸ್ಟಮ್‌ಗಳಿಗೆ ಗಮನಾರ್ಹವಾದ ನವೀಕರಣಗಳ ಅಗತ್ಯವಿದೆ. ಇದು ಸಂಕೀರ್ಣವಾಗಿದ್ದು, ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಮತ್ತು ಇದು ದುಬಾರಿ ಪ್ರಕ್ರಿಯೆಯಾಗಿದೆ.

ಕೆಲವು ಬ್ಯಾಂಕುಗಳು ಈ ಪ್ರಕ್ರಿಯೆಯನ್ನು ಸಮರ್ಥವಾಗಿ ಕೈಗೊಳ್ಳಲು ಅಗತ್ಯವಾದ ಸಂಪನ್ಮೂಲಗಳು ಅಥವಾ ತಾಂತ್ರಿಕ ಸಾಮರ್ಥ್ಯಗಳನ್ನು ಹೊಂದಿಲ್ಲ. ಇದಲ್ಲದೆ, ಬ್ಯಾಂಕ್‌ಗಳು ಬಿಲ್ ಪಾವತಿ ಸೌಲಭ್ಯಕ್ಕಿಂತ ಹೆಚ್ಚು ನಿರ್ಣಾಯಕ ಅಥವಾ ಲಾಭದಾಯಕವೆಂದು ಪರಿಗಣಿಸುವ ಡಿಜಿಟಲ್ ಬ್ಯಾಂಕಿಂಗ್ ಅಥವಾ ಹಣಕಾಸು ಸೇವೆಗಳ ಇತರ ಕ್ಷೇತ್ರಗಳಿಗೆ ಆದ್ಯತೆ ನೀಡುತ್ತಿದೆ. ಹೆಚ್ಚುವರಿಯಾಗಿ, ಅನೇಕ ಬ್ಯಾಂಕುಗಳು ತಮ್ಮದೇ ಆದ ಪಾವತಿ ವ್ಯವಸ್ಥೆಯನ್ನು ಹೊಂದಿವೆ ಮತ್ತು ಗ್ರಾಹಕರನ್ನು ತಮ್ಮ ಪರಿಸರ ವ್ಯವಸ್ಥೆಯೊಳಗೆ ನಿಕಟ ಸಂಬಂಧಗಳನ್ನು ಕಾಪಾಡಿಕೊಳ್ಳಲು ಮತ್ತು ವಹಿವಾಟಿನ ಮೇಲೆ ನಿಯಂತ್ರಣವನ್ನು ಇರಿಸಿಕೊಳ್ಳಲು ಆದ್ಯತೆ ನೀಡುತ್ತಿವೆ. ಹಾಗಾಗಿ ಈ ಅಪ್‌ಡೇಟ್‌ ಪ್ರಕ್ರಿಯೆ ವಿಳಂಬವಾಗಿದೆ.

ಏನು ಇದರ ಪರಿಣಾಮ?

ಆರ್‌ಬಿಐನ ಹೊಸ ಆದೇಶವು ಪ್ರಾಥಮಿಕವಾಗಿ ಮೂರನೇ ವ್ಯಕ್ತಿಯ ಅಪ್ಲಿಕೇಶನ್‌ಗಳನ್ನು ಅವಲಂಬಿಸಿರುವ ಕ್ರೆಡಿಟ್ ಕಾರ್ಡ್ ಬಳಕೆದಾರರ ಮೇಲೆ ಪರಿಣಾಮ ಬೀರುತ್ತದೆ ಮತ್ತು ಈ ಪ್ಲಾಟ್‌ಫಾರ್ಮ್‌ಗಳು ಕೊಡುಗೆಗಳನ್ನು ನೀಡುತ್ತಿತ್ತು.

ಬ್ಯಾಂಕ್‌ಗಳು ಬಿಬಿಪಿಎಸ್ ಅನ್ನು ಅಳವಡಿಸಿಕೊಳ್ಳದಿದ್ದರೆ ಬಳಕೆದಾರರು ತಮ್ಮ ಪಾವತಿಗಳೊಂದಿಗೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಬಿಬಿಪಿಎಸ್‌ನ ಹಿಂದಿನ ಮುಖ್ಯ ಆಲೋಚನೆಯು ಬಿಲ್ ಪಾವತಿ ಪ್ರಕ್ರಿಯೆಯನ್ನು ಕೇಂದ್ರೀಕರಿಸುವುದು ಮತ್ತು ಸುಗಮಗೊಳಿಸುವುದು. ಬಳಕೆದಾರರಿಗೆ ಒಂದೇ ಪ್ಲಾಟ್‌ಫಾರ್ಮ್‌ನಿಂದ ಬಹು ಬಿಲ್‌ಗಳನ್ನು ನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಬಿಬಿಪಿಎಸ್ ಗೆ ಪ್ರವೇಶವಿಲ್ಲದೆ ಬಳಕೆದಾರರು ಹಲವಾರು ಪ್ಲಾಟ್‌ಫಾರ್ಮ್‌ಗಳನ್ನು ನ್ಯಾವಿಗೇಟ್ ಮಾಡಬೇಕಾಗಬಹುದು ಅಥವಾ ಹಲವಾರು ಪಾವತಿ ಸೆಟಪ್‌ಗಳನ್ನು ನಿರ್ವಹಿಸಬೇಕಾಗಬಹುದು. ಪ್ರಕ್ರಿಯೆಯನ್ನು ಸಂಕೀರ್ಣಗೊಳಿಸಬಹುದು.

ಬಿಬಿಪಿಎಸ್ ನೊಂದಿಗೆ ಬ್ಯಾಂಕ್‌ಗಳನ್ನು ಸಂಯೋಜಿಸದ ಕ್ರೆಡಿಟ್ ಕಾರ್ಡ್ ಬಳಕೆದಾರರು ಕೆಲವು ಬಿಲ್ ಪಾವತಿಗಳಿಗೆ ತಮ್ಮ ಕಾರ್ಡ್‌ಗಳನ್ನು ಬಳಸಲು ಸಾಧ್ಯವಾಗದಿರಬಹುದು.

ಇದನ್ನೂ ಓದಿ: SEBI: ಅದಾನಿ ವರದಿ: ಹಿಂಡನ್‌ಬರ್ಗ್‌ಗೆ ಸೆಬಿಯಿಂದ ಶೋಕಾಸ್ ನೋಟಿಸ್

ಹಾಗಾದರೆ ಗ್ರಾಹಕರು ಏನು ಮಾಡಬಹುದು?

ಸದ್ಯಕ್ಕೆ ಬಿಬಿಪಿಎಸ್ ಪ್ಲಾಟ್‌ಫಾರ್ಮ್‌ನಲ್ಲಿ ತಮ್ಮ ಬ್ಯಾಂಕ್ ಸಕ್ರಿಯವಾಗಿದೆಯೇ ಎಂಬುದನ್ನು ಪರಿಶೀಲಿಸಲು ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಸಲಹೆ ನೀಡಲಾಗುತ್ತಿದೆ. ಈ ಮಾಹಿತಿಯು ಸಾಮಾನ್ಯವಾಗಿ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಅಥವಾ ಗ್ರಾಹಕ ಸೇವಾ ಚಾನೆಲ್‌ಗಳ ಮೂಲಕ ಲಭ್ಯವಿರುತ್ತದೆ. ಬ್ಯಾಂಕ್‌ಗಳು ಇನ್ನೂ ಬಿಬಿಪಿಎಸ್ ನಲ್ಲಿ ಸೇರಿಕೊಳ್ಳದೇ ಇದ್ದರೆ ತಮ್ಮ ಬಿಲ್ ಪಾವತಿ ಕಷ್ಟವಾಗಬಹುದು. ಗಡುವು ಮೀರಿದ ದಂಡ ಶುಲ್ಕದಿಂದ ಪಾರಾಗಲು ಪರ್ಯಾಯ ಪಾವತಿ ವಿಧಾನಗಳನ್ನು ಹುಡುಕಿಕೊಳ್ಳಬೇಕಾಗುತ್ತದೆ. ಆಯಾ ಬ್ಯಾಂಕ್‌ನ ಕಾಲ್‌ ಸೆಂಟರ್‌ಗೆ ಕರೆ ಮಾಡಿ ನೆರವು ಕೋರಬೇಕು.

Continue Reading
Advertisement
Self Harming
ವಿಜಯನಗರ5 mins ago

Self Harming : ನಿದ್ದೆ ಇಲ್ಲದೇ ಒದ್ದಾಟ; ಬೇವಿನ ಮರಕ್ಕೆ ನೇಣು ಬಿಗಿದುಕೊಂಡ ಆಟೋ ಚಾಲಕ

Land Dispute
ಕರ್ನಾಟಕ9 mins ago

Land Dispute: ಬೆಂಗಳೂರಿನ 93 ವರ್ಷದ ಹಳೇ ಶಾಲೆಯ ಕಾಂಪೌಂಡ್‌ ಧ್ವಂಸ; ಮೂವರ ವಿರುದ್ಧ ಕೇಸ್‌

Vastu Tips
ಧಾರ್ಮಿಕ26 mins ago

Vastu Tips: ಆರ್ಥಿಕ ಸಂಕಷ್ಟ ದೂರವಾಗಿ ಶ್ರೀಮಂತರಾಗಬೇಕೆ? ಈ ವಾಸ್ತು ನಿಯಮ ಪಾಲಿಸಿ

Union Budget 2024
ಬಜೆಟ್ 202436 mins ago

Union Budget 2024: ಘೋಷಣೆ ಸೋರಿಕೆಯಿಂದ ಹಲ್ವಾ ತಿನ್ನುವವರೆಗೆ; ಕೇಂದ್ರ ಬಜೆಟ್‌ನ 10 ಆಸಕ್ತಿದಾಯಕ ಸಂಗತಿಗಳಿವು

Sanath Jayasuriya
ಪ್ರಮುಖ ಸುದ್ದಿ38 mins ago

Sanath Jayasuriya : ಬ್ಯಾಟಿಂಗ್​ ದಿಗ್ಗಜ ಸನತ್​ ಜಯಸೂರ್ಯ ಶ್ರೀಲಂಕಾ ಕ್ರಿಕೆಟ್​ ತಂಡದ ನೂತನ ಕೋಚ್​

Yogi Adityanath
ದೇಶ44 mins ago

Yogi Adityanath: ನಿಂತ ಜಾಗದಲ್ಲೇ ಬಡ ಮಹಿಳೆಗೆ ಮನೆ ಮಂಜೂರು ಮಾಡಿದ ಯೋಗಿ ಆದಿತ್ಯನಾಥ್;‌ ಇದು ‌Instant ಮಾನವೀಯತೆ

leopard attack
ರಾಯಚೂರು48 mins ago

Leopard Attack : ದಾಳಿ ಮಾಡಿದ ಚಿರತೆಯನ್ನು ಹೊಡೆದು ಕೊಂದು ಆಂಬ್ಯುಲೆನ್ಸ್‌ಗೆ ಹಾಕಿದ ಗ್ರಾಮಸ್ಥರು

Viral Video
ವೈರಲ್ ನ್ಯೂಸ್57 mins ago

Viral Video: ದುಬೈ ಮಾಲ್‌ನಲ್ಲಿ ಬೊಂಬೆಗಳೊಂದಿಗೆ ಬೊಂಬೆಯಾದ ಮಾಡೆಲ್‌! ಗ್ರಾಹಕರು ಕಕ್ಕಾಬಿಕ್ಕಿ

bomb threat
ಕರ್ನಾಟಕ57 mins ago

Bomb Threat: ಬಾಯ್‌ ಫ್ರೆಂಡ್‌ ಬಿಟ್ಟು ಹೋಗ್ತಾನೆ ಎಂದು ಬೆಂಗಳೂರು ಏರ್‌ಪೋರ್ಟ್‌ಗೆ ಹುಸಿ ಬಾಂಬ್‌ ಕರೆ ಮಾಡಿದ ಯುವತಿ!

Puri Jagannath Yatra
ಧಾರ್ಮಿಕ1 hour ago

Puri Jagannath Yatra: ಪ್ರತಿ ವರ್ಷ ಹೊಸ ರಥ, ಜಗನ್ನಾಥನಿಗೆ ಜ್ವರ! ಪುರಿ ರಥ ಯಾತ್ರೆ ವಿಶೇಷ ಹಲವು!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Davanagere news
ಮಳೆ1 hour ago

Davanagere News : ಆ ಗ್ರಾಮಕ್ಕೆ ಕಾಲಿಡದ ವರುಣ! ಮಳೆಗಾಗಿ ಗ್ರಾಮಸ್ಥರಿಂದ ಕಂತೆ ಭಿಕ್ಷೆ

Karnataka Rain
ಮಳೆ2 hours ago

Karnataka Rain : ವೀಕೆಂಡ್‌ನಲ್ಲಿ ಸಿಲಿಕಾನ್‌ ಸಿಟಿಯಲ್ಲಿ ಮಳೆ ಮೋಡಿ; ಮತ್ತೆ ಗುಡ್ಡ ಕುಸಿತ ಶುರು

karnataka weather Forecast
ಮಳೆ12 hours ago

Karnataka Weather : ವೇಗವಾಗಿ ಬೀಸುವ ಗಾಳಿ ಜತೆಗೆ ಅಬ್ಬರಿಸಲಿದೆ ಮಳೆ; ಈ ಜಿಲ್ಲೆಗಳಿಗೆ ಎಚ್ಚರಿಕೆ

karnataka weather Forecast
ಮಳೆ1 day ago

Karnataka Weather : ಚಾರಣಪ್ರಿಯರಿಗೆ ಶಾಕ್‌; ಭಾರಿ ಮಳೆಯಿಂದಾಗಿ ಈ ಜಾಗಗಳಿಗೆ ಟ್ರೆಕ್ಕಿಂಗ್‌ ನಿಷೇಧ

Murder case
ಯಾದಗಿರಿ1 day ago

Murder case : ಯಾದಗಿರಿಯಲ್ಲಿ ಹಸುಗೂಸನ್ನು ಬಾವಿಗೆ ಎಸೆದು ಕೊಂದರು ಹಂತಕರು

karnataka Rain
ಮಳೆ1 day ago

Karnataka Rain : ಭಾರಿ ಗಾಳಿ- ಮಳೆಗೆ ಹಾರಿದ ಅಂಗಡಿಯ ತಗಡು; ಮಾಗುಂಡಿ-ಬಾಳೆಹೊನ್ನೂರು ಮಾರ್ಗ ಬಂದ್

Food Poisoning
ರಾಯಚೂರು1 day ago

Food Poisoning : ಮೊರಾರ್ಜಿ ವಸತಿ ಶಾಲೆ ಅವ್ಯವಸ್ಥೆ; ಊಟ ಸೇವಿಸಿದ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

Wild Animal Attack Elephant attack
ರಾಮನಗರ1 day ago

Wild Animal Attack : ತೋಟದಲ್ಲಿ ನೀರು ಹಾಯಿಸುತ್ತಿದ್ದವನ ತುಳಿದು ಸಾಯಿಸಿದ ಆನೆ

karnataka Weather Forecast
ಮಳೆ2 days ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಇಂದು ನಾನ್‌ ಸ್ಟಾಪ್‌ ಮಳೆ; ಬೆಂಗಳೂರಲ್ಲಿ ಹೇಗೆ?

karnataka Weather Forecast
ಮಳೆ2 days ago

Karnataka Weather: ಧಾರಾಕಾರ ಮಳೆಗೆ ಜನರ ಒದ್ದಾಟ- ಸೇತುವೆಗಳು ಮುಳುಗಿ ಪರದಾಟ; ಶಾಲಾ-ಕಾಲೇಜುಗಳಿಗೆ ರಜೆ

ಟ್ರೆಂಡಿಂಗ್‌