Chaitra Kundapura : ವಂಚನೆ ಕಥೆ ಅತ್ಲಾಗಿರಲಿ, ಕಡುಬಡವ ಗೋವಿಂದ ಪೂಜಾರಿ ಮಹಾಸಾಧಕನಾದ Motivational ಕಥೆ ಕೇಳಿ - Vistara News

ಉಡುಪಿ

Chaitra Kundapura : ವಂಚನೆ ಕಥೆ ಅತ್ಲಾಗಿರಲಿ, ಕಡುಬಡವ ಗೋವಿಂದ ಪೂಜಾರಿ ಮಹಾಸಾಧಕನಾದ Motivational ಕಥೆ ಕೇಳಿ

Chaitra Kundapura : ಬೈಂದೂರು ವಿಧಾನಸಭಾ ಟಿಕೆಟ್‌ ಪಡೆಯಲು ಹೋಗಿ 5 ಕೋಟಿ ರೂ. ವಂಚನೆಗೆ ಒಳಗಾದ ಗೋವಿಂದ ಪೂಜಾರಿ ಯಾರು ಮಾರ‍್ರೆ ಎನ್ನುವುದು ಎಲ್ಲರೂ ಕೇಳುವ ಪ್ರಶ್ನೆ. ಎಲ್ಲರೂ ಭೋಳೇಬಸವ ಅಂದುಕೊಂಡಿರುವ ಈ ಮನುಷ್ಯನ ಬದುಕನ್ನೊಮ್ಮೆ ನೋಡಿಕೊಂಡು ಬನ್ನಿ.. ನಿಮ್ಮ ನಿಲುವು ಬದಲಾಗುತ್ತದೆ.

VISTARANEWS.COM


on

Govinda Poojari
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಇಡೀ ರಾಜ್ಯದಲ್ಲಿ ಈಗ ಅತಿ ಹೆಚ್ಚು ಸುದ್ದಿಯಲ್ಲಿರುವುದು ಬೆಂಕಿ ಭಾಷಣಕಾರ್ತಿ ಚೈತ್ರಾ ಕುಂದಾಪುರ (Chaitra Kundapura) ಎಂಡ್‌ ಟೀಮ್‌ ಮಾಡಿದ ಅತಿದೊಡ್ಡ ವಂಚನೆಯ ಕಥೆ. ಈ ಕಥೆಯಲ್ಲಿ ವಂಚನೆಗೆ ಒಳಗಾದವರು ಉದ್ಯಮಿ ಗೋವಿಂದ ಪೂಜಾರಿ (Govinda poojari). ಗೋವಿಂದ ಪೂಜಾರಿ ಅವರ ಕಥೆ ಕೇಳಿದಾಗ ಒಮ್ಮೆ ಅಯ್ಯೋ ಅನಿಸುತ್ತದೆ, ಹೀಗೆ ವಂಚನೆಗೆ ಒಳಗಾಗುವ ಭೋಳೆ ಬಸವನಂಥವರು ಎಂಎಲ್‌ಎ ಆದರೆ ಹೇಗಿದ್ದೀತು ಎನ್ನುವ ಪ್ರಶ್ನೆಯೂ ಹುಟ್ಟಿಕೊಳ್ಳುತ್ತದೆ. ಸಾಕಷ್ಟು ಜನ ಈ ನಿಟ್ಟಿನಲ್ಲಿ ತಮಾಷೆ ಮಾಡುತ್ತಿದ್ದಾರೆ.

ಒಂದು ಕ್ಷಣ ಚೈತ್ರಾ ಕುಂದಾಪುರ, ಬೈಂದೂರು ವಿಧಾನಸಭಾ ಕ್ಷೇತ್ರದ ಟಿಕೆಟ್‌ (Byndur MLA Ticket), ಅದಕ್ಕೆ ಸಂಬಂಧಿಸಿ ನಡೆದ ವಂಚನೆ, ಗೋವಿಂದ ಪೂಜಾರಿ ನೀಡಿದ ದೂರು.. ಈಗ ನಡೆಯುತ್ತಿರುವ ಅದಿಷ್ಟೂ ಬೆಳವಣಿಗೆಗಳನ್ನು ಮರೆತುಬಿಟ್ಟು ಒಂದು ಮೋಟಿವೇಷನಲ್‌ ಕಥೆ (Motivational story) ಕೇಳಿ.. ಕೊನೆಗೆ ಗೋವಿಂದ ಬಾಬು ಪೂಜಾರಿ ಅಂದ್ರೆ ಏನು ಎನ್ನುವುದು ನಿಮಗೇ ತಿಳಿಯುತ್ತದೆ.

ಇದು ಬಡತನದ ಬೇಗೆಯಲ್ಲಿ ಬೆಂದರೂ ದೊಡ್ಡದೇನೋ ಸಾಧನೆ ಮಾಡಲೇಬೇಕು ಎಂದು ಹಠ ತೊಟ್ಟು ಪರಿಶ್ರಮದಿಂದಲೇ ಮೇಲೆದ್ದು ನಿಂತ ವ್ಯಕ್ತಿಯೊಬ್ಬನ ಸಾಹಸದ ಕಥೆ. ಬೀದಿ ಬದಿಯಲ್ಲಿ ಕೆಲಸ ಮಾಡುವುದರಿಂದ ಆರಂಭಗೊಂಡು 5000 ಜನರಿಗೆ ಉದ್ಯೋಗ ನೀಡುತ್ತಿರುವ, ಕೋಟ್ಯಂತರ ರೂ. ದಾನ ಮಾಡುವವರೆಗೆ ಒಬ್ಬ ವ್ಯಕ್ತಿ ಹಂತ ಹಂತವಾಗಿ ಬೆಳೆದ ಯಶೋಗಾಥೆ. ಈ ಕಥೆಯನ್ನು ಅವರ ಬಾಲ್ಯದಿಂದಲೇ ಶುರು ಮಾಡೋಣ.

ಬಿಜೂರಿನ ಕಡುಬತನದ ಕುಟುಂಬದಲ್ಲಿ ಜನನ

ಗೋವಿಂದ ಪೂಜಾರಿ ಅವರು ಹುಟ್ಟಿದ್ದು ಕುಂದಾಪುರದ ಬಿಜೂರಿನ ಕಡುಬಡ ಕುಟುಂಬವೊಂದರಲ್ಲಿ. 1977ರಲ್ಲಿ ಹುಟ್ಟಿದ ಅವರಿಗೆ ಹೊಟ್ಟೆಗೆ ಸರಿಯಾಗಿ ಹಿಟ್ಟಿಲ್ಲದ ಸ್ಥಿತಿ. ತಂದೆ ಬಾಬು ಪೂಜಾರಿ ಸಾಮಾನ್ಯ ಸಣ್ಣ ಕೃಷಿಕರು. ಅದರಲ್ಲಿ ಬೆಳೆದದ್ದು ಅದಕ್ಕೇ ಎನ್ನುವ ಪರಿಸ್ಥಿತಿ.

ಇಂಥ ಕುಟುಂಬದಲ್ಲಿ ಹುಟ್ಟಿದ ಗೋವಿಂದ ಎಂಬ ಪುಟ್ಟ ಬಾಲಕನಿಗೆ ತಾನು ಕುಟುಂಬದ ಬಡತನವನ್ನು ನೀಗಬೇಕು, ಏನಾದರೂ ಒಂದು ಸಾಧನೆ ಮಾಡಬೇಕು ಎನ್ನುವ ಆಸೆ. ಆಗೆಲ್ಲ ವಿದ್ಯೆ ತಲೆಗೆ ಹತ್ತದ ಹುಡುಗರಿಗೆ, ಊರು ಬಿಟ್ಟು ಓಡುವ ಹುಡುಗರಿಗೆ ಆಸರೆ ಕೊಡುತ್ತಿದ್ದುದು ಮುಂಬಯಿ ಮಹಾನಗರಿ. ಅದರಲ್ಲೂ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದ ಕರಾವಳಿಯ ಮಕ್ಕಳೆಲ್ಲ ತಪ್ಪಿಸಿಕೊಂಡಿದ್ದಾರೆ ಎಂದರೆ ಮುಂಬಯಿಗೆ ಹೋಗಿದ್ದಾರೆ ಎಂದೇ ಅರ್ಥ.

Govinda pooajari representational

ಇಂಥ ಕಾಲದಲ್ಲಿ ತನ್ನ ಕುಟುಂಬಕ್ಕೆ ನೆರವಾಗಬೇಕು ಎಂಬ ದೊಡ್ಡದೊಂದು ಕನಸು ಕಟ್ಟಿಕೊಂಡು ಅಕ್ಷರಶಃ ಉಟ್ಟ ಬಟ್ಟೆಯಲ್ಲಿ ಮುಂಬಯಿ ಮಹಾನಗರವನ್ನು ತಲುಪಿದ್ದ ಆ ಗೋವಿಂದ. ಆಗ ಅವನಿಗೆ ಕೇವಲ ಕೇವಲ 13 ವರ್ಷ ಮಾತ್ರ. ಸರಿಯಾದ ಅಕ್ಷರಾಭ್ಯಾಸವಿಲ್ಲದ ಈ ಹುಡುಗ, ಕೈಯಲ್ಲಿ ಹಣವಿಲ್ಲದ ಹುಡುಗ ಅದು ಹೇಗೋ ಬಸ್‌ ಹತ್ತಿ ಮುಂಬಯಿ ತಲುಪಿದ್ದ.

ಅಲ್ಲಿ ಮಾರ್ಗದ ಬದಿಯಲ್ಲಿ ಒಂದು ಕ್ಯಾಂಟೀನ್‌ನಲ್ಲಿ ಚಹಾದ ಗ್ಲಾಸ್‌ ತೊಳೆಯುವ ಕೆಲಸ ಮಾಡಲು ಆರಂಭಿಸುತ್ತಾನೆ ಹುಡುಗ. ಗ್ಲಾಸ್‌ ತೊಳೆಯುವ ಜತೆಗೆ ಮೆಲ್ಲಮೆಲ್ಲನೆ ಚಹಾ ಮಾಡುವುದನ್ನು ಕಲಿತುಕೊಂಡ. ಆದರೆ ಗೋವಿಂದ ಪೂಜಾರಿಗೆ ಅದೊಂದೇ ಆಂತ್ಯಿಕ ಗುರಿಯಾಗಿರಲಿಲ್ಲ. ಏನೋ ಸಾಧನೆ ಮಾಡಬೇಕು ಎನ್ನುವ ತಹತಹ ಇತ್ತು. ಹೋಟೆಲ್‌ನಿಂದ ಹೋಟೆಲ್‌ಗೆ ಜಿಗಿದ. ಚಹಾದ ಜತೆಗೆ ಅಡುಗೆ ಮಾಡಲು ಕಲಿತ. ಹಾಗೆ ಸಾಗಿದ ಪಯಣ ಬಿಎಸ್‌ಟಿ ಕ್ಯಾಂಟೀನ್‌ನಲ್ಲಿ ಅಡುಗೆ ಸಹಾಯಕನಾಗುವವರೆಗೆ ಕರೆದುಕೊಂಡು ಹೋಯಿತು.

Govinda poojari representaional

ಮುಂದೆ ಗೋವಿಂದ ಪೂಜಾರಿ ವಯಸ್ಕನಾಗಿ ಬೆಳೆದು ನಿಲ್ಲುತ್ತಾರೆ. ಇರ್ಲಾದ ಸನ್ನಿ ಬಾರ್‌ನಲ್ಲಿ ಬಾಣಸಿಗನಾಗಿ ಕೆಲಸಕ್ಕೆ ಸೇರುತ್ತಾರೆ. ಆದರೆ, ಇದ್ಯಾವುದೂ ಅವರಿಗೆ ಅಷ್ಟೇನೂ ರುಚಿಸುವುದಿಲ್ಲ. ನಾನು ಏನೋ ಮಾಡಬೇಕು ಎನ್ನುವ ಉತ್ಸಾಹ… ಇದಲ್ಲ, ಇದಲ್ಲ ಎನ್ನುವ ನೇತಿ ಭಾವ. ಹೀಗಾಗಿ ಸ್ವ ಉದ್ಯೋಗದ ಮಾಡುವ ಕನಸಿನೊಂದಿಗೆ ಒಂದು ಜನರಲ್‌ ಸ್ಟೋರ್‌ ಓಪನ್‌ ಮಾಡ್ತಾರೆ. ಆದರೆ, ದುರದೃಷ್ಟ ಅದು ನಷ್ಟಕ್ಕೆ ಬಿತ್ತು.

ಆಗ ಅವರ ಕಣ್ಣಿಗೆ ಬಿದ್ದದ್ದು ಪಂಚತಾರಾ ಹೋಟೆಲ್‌. ಅಡುಗೆ ಕೆಲಸದಲ್ಲಿ ಆಸಕ್ತಿ ಹೊಂದಿದ್ದರೂ ಪಂಚತಾರಾ ಹೋಟೆಲ್‌ನಲ್ಲಿ ಅಡುಗೆ ಕೆಲಸ ಸಿಗಲಿಲ್ಲ. ಆಗ ಅವರು ಹೋಟೆಲ್‌ನ ಕ್ಲೀನರ್‌ ಆಗಿ ಎಂಟ್ರಿ ಪಡೆಯುತ್ತಾರೆ! ಅಲ್ಲಿ ಅಡುಗೆ ಕೆಲಸವನ್ನೂ ಜತೆಯಾಗಿ ಮಾಡುತ್ತಾ ರುಚಿಕರ ತಿನಿಸುಗಳಿಗೆ ಹೆಸರಾದರು. ಅದೊಂದು ದಿನ ಹೋಟೆಲ್‌ ಆಡಳಿತ ಮಂಡಳಿ ಅವರನ್ನು ಷೆಫ್‌ ಸ್ಥಾನಕ್ಕೆ ಏರಿಸಿತು. ಬಿಜೂರಿನ ಪುಟ್ಟ ಹಳ್ಳಿಯ ಕಡುಬಡ ಕುಟುಂಬದ ಹುಡುಗ ಮುಂಬಯಿಯ ಪಂಚತಾರಾ ಹೋಟೆಲ್‌ನ ಷೆಫ್‌ ಆಗುವುದು ಆಗಿನ ಕಾಲಕ್ಕೆ ದೊಡ್ಡ ಸುದ್ದಿ!

Chef Representational photo

ದೂರ ತೀರದಲ್ಲಿ ಕರೆಯುತ್ತಿತ್ತು ಮೋಹನ ಮುರಳಿ!

ಆದರೆ, ಗೋವಿಂದ ಪೂಜಾರಿ ಅವರಿಗೆ ನನ್ನ ಗುರಿ ಇದಿಷ್ಟೇ ಅಲ್ಲ ಅಲ್ಲ ಅಂತ ಅನಿಸುತ್ತಲೇ ಇತ್ತು. ಅವರಿಗೆ ಪಂಚ ತಾರಾ ಹೋಟೆಲ್‌ನ ಷೆಫ್‌ ಆಗುವುದಕ್ಕಿಂತಲೂ ಸ್ವಂತ ಉದ್ಯಮ ಮಾಡಿ ತಲೆ ಎತ್ತಿ ನಿಲ್ಲಬೇಕು ಎನ್ನುವ ಅತಿ ದೊಡ್ಡ ಆಸೆ ಇತ್ತು. ಹೀಗಾಗಿ ಅವರು ತಮ್ಮದೇ ಒಂದು ಕ್ಯಾಟರಿಂಗ್‌ ಸಂಸ್ಥೆಯನ್ನೇ ಕಟ್ಟಿಬಿಟ್ಟರು. 2007ರಲ್ಲಿ ಜನ್ಮ ತಳೆದ ಈ ಸಂಸ್ಥೆಯ ಹೆಸರು: ಶೆಫ್‌ ಟಾಕ್‌ ಕೇಟರಿಂಗ್‌ ಸರ್ವಿಸಸ್‌. ಮುಂದೆ ಇದೇ ಕಂಪನಿ ‘ಷೆಫ್ ಟಾಕ್ ಫುಡ್ ಆ್ಯಂಡ್ ಹಾಸ್ಪಿಟಾಲಿಟಿ ಸರ್ವಿಸಸ್ ಪ್ರೈ. ಲಿ. (Cheftalk Food And Hospitality Services Pvt.Ltd) ಅಂತ ಚೇಂಜ್‌ ಆಯಿತು. ಇದು ಗೋವಿಂದ ಪೂಜಾರಿ ಮತ್ತು ಅವರ ಜತೆಗೆ ಏಳು ಮಂದಿ ಸೇರಿ ಕಟ್ಟಿದ ಸಂಸ್ಥೆ.

Cheftalk Food And Hospitality Services Pvt.Ltd
ಷೆಪ್‌ ಟಾಕ್‌ ಫುಟ್‌ ಎಂಡ್‌ ಹಾಸ್ಪಿಟಾಲಿಟಿ ಪ್ರೈವೆಟ್‌ ಲಿಮಿಟೆಡ್‌

ಈ ಸಂಸ್ಥೆ ಬೆಳೆದುನಿಂತ ರೀತಿಯನ್ನೊಮ್ಮೆ ನೋಡಿ

ಒಮ್ಮೆ ಗೂಗಲ್‌ ಮಾಡಿ ನೋಡಿ.. ‘ಷೆಫ್ ಟಾಕ್ ಫುಡ್ ಆ್ಯಂಡ್ ಹಾಸ್ಪಿಟಾಲಿಟಿ ಸರ್ವಿಸಸ್ ಪ್ರೈ. ಲಿಮಿಟೆಡ್‌ ಎಂಬ ಸಂಸ್ಥೆ ಎಷ್ಟು ಅಗಾಧವಾಗಿ ಬೆಳೆದಿದೆ ಎಂದು ಗೊತ್ತಾಗುತ್ತದೆ. ಈ ಸಂಸ್ಥೆಯಲ್ಲಿ ಈಗ ಇರುವ ಉದ್ಯೋಗಿಗಳ ಸಂಖ್ಯೆ 5000. ಮಹಾರಾಷ್ಟ್ರದಲ್ಲಿ ಹುಟ್ಟಿದ ಈ ಸಂಸ್ಥೆ ಈಗ ಕರ್ನಾಟಕ, ಜಾರ್ಖಂಡ್‌, ಗುಜರಾತ್‌ನಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ.

Cheftalk Food And Hospitality Services Pvt.Ltd

ಅತ್ಯಾಧುನಿಕ ಕಿಚನ್‌ಗಳನ್ನು ನಿರ್ಮಿಸಿಕೊಂಡು ದೊಡ್ಡ ದೊಡ್ಡ ಕಾರ್ಪೊರೇಟ್‌ ಕಂಪನಿಗಳಿಗೆ ಕೇಟರಿಂಗ್‌ ಸೇವೆಯನ್ನು ನೀಡುತ್ತಿದೆ. ಗೊತ್ತಿರಲಿ, ಇದೇ ಸಂಸ್ಥೆ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ 25,000 ಚದರ ಅಡಿ ವಿಸ್ತೀರ್ಣದಲ್ಲಿ ಅತ್ಯಾಧುನಿಕ ಕಿಚನನ್ನು ಹೊಂದಿದೆ. ಇದು ಐಎಸ್ಒ ಮಾನ್ಯತೆಯನ್ನೂ ಪಡೆದುಕೊಳ್ಳುವಷ್ಟರ ಮಟ್ಟಿಗೆ ಬೆಳೆದಿದೆ.

ಎಷ್ಟೊಂದು ಬ್ಯುಸಿನೆಸ್‌ ಮಾಡುತ್ತಿದ್ದಾರೆ ನೋಡಿ…

Govinda poojary and team
ಗೋವಿಂದ ಪೂಜಾರಿ ಅವರು ಕಟ್ಟಿ ಬೆಳೆಸಿದ ಟೀಮ್‌

ಒಂದು ಕಾಲದಲ್ಲಿ ತುತ್ತು ಅನ್ನಕ್ಕಾಗಿ ಪರದಾಡುತ್ತಾ 13ನೇ ವಯಸ್ಸಿಗೆ ಮುಂಬಯಿಯ ಬೀದಿಯಲ್ಲಿ ನಿಂತಿದ್ದ ಹುಡುಗ ತನ್ನ 40ರ ವಯಸ್ಸಿನ ಹೊತ್ತಿಗೆ ದೊಡ್ಡ ಉದ್ಯಮಿಯಾಗಿ ಬೆಳೆದು ನಿಂತಿದ್ದರು. ಹಾಗಂತ ತಾವು ಬಂದ ದಾರಿಯನ್ನು ಮರೆಯಲಿಲ್ಲ. ತಾವೇ ಷೆಫ್‌ ಆಗಿ ನಿಂತು ಅಡುಗೆ ಮಾಡಲೂ ಹಿಂದೇಟು ಹಾಕುತ್ತಿರಲಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ತನ್ನ ಜತೆ ಕೆಲಸ ಮಾಡುವ ಹುಡುಗರನ್ನು ಸ್ವಯಂ ಉದ್ಯೋಗಕ್ಕೆ ಪ್ರೇರೇಪಿಸುವ ದೊಡ್ಡ ಗುಣ ತೋರಿದರು.

ಗೋವಿಂದ ಪೂಜಾರಿ ಅವರು ಕೇವಲ ಕ್ಯಾಟರಿಂಗ್‌ ಉದ್ಯಮಕ್ಕೂ ಸೀಮಿತವಾಗಲಿಲ್ಲ. ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮವು ಮತ್ಸ್ಯಬಂಧನ ಕಂಪನಿಯ ಸಹಯೋಗದಲ್ಲಿ ರಾಣಿ ಮೀನು ಮತ್ತು ಬೂತಾಯಿ ಮೀನುಗಳಿಂದ ಚಿಪ್ಸ್‌ ತಯಾರಿಸುವ ಕಂಪನಿ ಸ್ಥಾಪಿಸಿದರು.

ಪ್ರಜ್ಞಾ ಸಾಗರ್ ಹೋಟೆಲ್ ಮತ್ತು ರೆಸಾರ್ಟ್, ಶೆಫ್ ಟಾಕ್ ನ್ಯೂಟ್ರಿಫುಡ್ ಸಂಸ್ಥಗೆಳನ್ನು ಸ್ಥಾಪಿಸಿದರು. ಇವತ್ತು ಅವರದು ನೂರಾರು ಕೋಟಿ ವಹಿವಾಟು ನಡೆಸುವ ಚೈನ್‌ ಆಫ್‌ ಬ್ಯುಸಿನೆಸ್.‌

ನೆನಪಿರಲಿ, ಬೆಂಗಳೂರಿನಲ್ಲಿರುವ ಇಂದಿರಾ ಕ್ಯಾಂಟೀನ್‌ಗೆ ಕೆಲಸಗಾರರನ್ನು ಒದಗಿಸಿ ಕೊಡುವ ಕೆಲಸ ಮಾಡುತ್ತಿರುವುದು ಇದೇ ಗೋವಿಂದ ಪೂಜಾರಿ. ಅದರಲ್ಲೂ ತಮ್ಮೂರಿನ ಹುಡುಗರು ಎಂದು ಕುಂದಾಪುರ ಭಾಗದ ಹುಡುಗರನ್ನು ಬಸ್‌ಗಳಲ್ಲಿ ಹತ್ತಿಸಿ ಹತ್ತಿಸಿ ತರುತ್ತಿದ್ದಾರೆ.

ಸಂದಿರುವ ಪ್ರಶಸ್ತಿಗಳು ಹಲವಾರು

Govinda Poojari

ಕೇವಲ ಪರಿಶ್ರಮದಿಂದ, ಹಠದಿಂದ ದೊಡ್ಡ ಉದ್ಯಮ ಸಂಸ್ಥೆಯನ್ನು ಆರಂಭ ಮಾಡಿರುವ ಗೋವಿಂದ ಪೂಜಾರಿ ಅವರಿಗೆ ಫಾಸ್ಟೆಸ್ಟ್ ಗ್ರೋವಿಂಗ್ ಪುಡ್ ಸರ್ವೀಸ್ ಕಂಪನಿ – ಎಐಎಫ್ 2017, ಮೋಸ್ಟ್ ಹೈಜಿನಿಕ್ ಕೆಫೆಟೇರಿಯಾ – ಬಿಎಆರ್‌ಸಿ 2018, ಫಾಸ್ಟೆಸ್ಟ್ ಗ್ರೋವಿಂಗ್ ಎಂಟರ್‌ಪ್ರೈಸ್ – ಬಿಸಿಸಿಐ ಆ್ಯಂಡ್ ಎಚ್‌ಡಿಎಫ್‌ಸಿ ಬ್ಯಾಂಕ್ 2019 ಮತ್ತು ಆಹಾರೋದ್ಯಮ ಸಾಧನಶ್ರೀ ಸೇರಿದಂತೆ ಹತ್ತು ಹಲವಾರು ಪ್ರಶಸ್ತಿಗಳು ಸಿಕ್ಕಿವೆ.

ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಕುಂದಾಪುರ ದೇಶಮಂ!

Govinda Poojari
ಊರಿನ ಮಹಿಳೆಯರಿಗೆ ಬಾಗಿನ

ಇಷ್ಟೆಲ್ಲ ಸಾಧನೆ ಮಾಡಿದ ಬಳಿಕವೂ ಅವರಿಗೆ ನೆಮ್ಮದಿ ಇಲ್ಲ. ಹಾಗಂತ ಇನ್ನಷ್ಟು ದುಡ್ಡು ಮಾಡಬೇಕು ಎನ್ನುವ ಆಸೆಯಲ್ಲ. ಬದಲಾಗಿ ನಾನು ಸಮಾಜಕ್ಕೆ, ನನ್ನ ಊರಿಗೆ ಹೇಗೆ ಸಹಾಯ ಮಾಡಬಹುದು ಎನ್ನುವ ತವಕ. ತನ್ನ ಕೈಗೆ ದುಡ್ಡು ಬರಲಾರಂಭಿಸಿದ ದಿನದಿಂದಲೇ ಊರಿನ ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳಿಗೆ ಅವರು ದಾನ ನೀಡಲು ಶುರು ಮಾಡಿದ್ದರು.

Govinda Poojari

ಈಗ ಶ್ರೀವರಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ಸ್ಥಾಪನೆ ಮಾಡಿ ಅದರ ಮೂಲಕ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಸೇವೆ ಮಾಡುತ್ತಿದ್ದಾರೆ. ಉಪ್ಪುಂದದಲ್ಲಿ ಶ್ರೀ ವರಲಕ್ಷ್ಮೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಸ್ಥಾಪಿಸಿ ಅದರ ಅಧ್ಯಕ್ಷರಾಗಿದ್ದಾರೆ. ಹತ್ತಾರು ಸಂಘ ಸಂಸ್ಥೆಗೆ ಸಹಕಾರ ನೀಡುತ್ತಿದ್ದಾರೆ ಹುಟ್ಟೂರಲ್ಲಿ ಶಾಲೆ ಕಟ್ಟಬೇಕು, ಉದ್ದಿಮೆಯನ್ನು ವಿಸ್ತರಿಸಿ ಮತ್ತಷ್ಟು ಜನರಿಗೆ ಉದ್ಯೋಗ ನೀಡಬೇಕು ಎನ್ನುವ ದೊಡ್ಡ ಕನಸಿಗ ಇವರು.

ಅದ್ಯಾಕೋ ಹುಟ್ಟಿತು ಶಾಸಕನಾಗುವ ಕನಸು

ಇಷ್ಟೊಂದು ಸಾಧನೆ, ಸಾಮಾಜಿಕ ಕಳಕಳಿ ಮತ್ತು ಸಮಾಜಸೇವೆ ನಡೆಸುವ ಉಮೇದಿ ಹೊಂದಿದ್ದ ಅವರ ಕಿವಿಯೊಳಗೆ ಯಾರೋ ನೀವು ಶಾಸಕರಾದರೆ ಇನ್ನಷ್ಟು ಕೆಲಸ ಮಾಡಬಹುದು ಎಂಬ ಮಾತನ್ನು ಉಸುರಿದ್ದರು. ಹೌದಲ್ಲ ಎಂದು ಅನಿಸಿದ ಗೋವಿಂದ ಪೂಜಾರಿ ಅವರು ಆ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಾಗ ಸಿಕ್ಕಿದ್ದೇ ಚೈತ್ರಾ ಕುಂದಾಪುರ. ಮುಂದಿನ ಕಥೆ ಎಲ್ಲವೂ ಎಲ್ಲರಿಗೂ ಗೊತ್ತಿದೆ.

ಇದನ್ನೂ ಓದಿ : Chaithra Kundapura : ಅಬ್ಬಾ ಇವಳೆಂಥಾ ವಂಚಕಿ! 5 ಕೋಟಿ ವಂಚಿಸಿದ್ದಷ್ಟೇ ಅಲ್ಲ, ಮರ್ಡರ್‌ ಕೂಡಾ ಮಾಡಿದ್ದಾಳೆ ಚೈತ್ರಾ ಕುಂದಾಪುರ!

ಹಾಗಂತ, ಐದು ಕೋಟಿ ರೂ. ಕಳೆದುಕೊಂಡೆ ಎಂದು ಬೇಜಾರು ಮಾಡಿಕೊಂಡು ಕುಳಿತುಕೊಳ್ಳುವ ಜಾಯಮಾನ ಗೋವಿಂದ ಪೂಜಾರಿ ಅಲ್ಲ ಅನಿಸುತ್ತದೆ. ಬದುಕಿನುದ್ದಕ್ಕೂ ಹಲವು ಏಳುಬೀಳು, ಅಪಮಾನಗಳನ್ನು ಕಂಡೇ ಎದ್ದುನಿಂತವರು ಈ ಗೋವಿಂದ ಪೂಜಾರಿ. ಒಂದು ವಂಚನೆಯ ಕಥೆಯೊಳಗೆ ಹುದುಗಿದ್ದ ಸ್ಫೂರ್ತಿದಾಯಕ ಬದುಕು ಎಲ್ಲರಿಗೂ ಖಂಡಿತ ಇಷ್ಟವಾಗಲೇಬೇಕು.

ಇದನ್ನೂ ಓದಿ; Chaitra Kundapura : ಚೈತ್ರಾ ಕುಂದಾಪುರ; ಯಾರಿವಳು ಫೈರ್‌ಬ್ರಾಂಡ್‌ ಹುಡುಗಿ?, ಆಕೆ ಟಿವಿ ನಿರೂಪಕಿ, ಉಪನ್ಯಾಸಕಿ ಆಗಿದ್ದಳು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮಳೆ

Karnataka Weather : ಕರಾವಳಿಯಲ್ಲಿ ಬಿರುಗಾಳಿ ಮಳೆ; ಕಡಲಿಗಿಳಿಯದಂತೆ ಮೀನುಗಾರರಿಗೆ ಅಲರ್ಟ್!‌

karnataka Weather Forecast : ಒಳನಾಡು ಹಾಗೂ ಮಲೆನಾಡು, ಕರಾವಳಿಯಲ್ಲಿ ಮಳೆ (Rain News) ಅಬ್ಬರ ಜೋರಾಗಿ ಇರಲಿದ್ದು, ಮೀನುಗಾರರಿಗೆ ಕಡಲಿಗಿಳಿಯದಂತೆ ಎಚ್ಚರಿಕೆ (Fisher Waring) ನೀಡಲಾಗಿದೆ. ಬಿರುಗಾಳಿಯು 55 ಕಿ.ಮೀ ವೇಗದಲ್ಲಿ ಬೀಸಲಿದ್ದು, ಈ ವೇಳೆ ಸಮುದ್ರಕ್ಕೆ ಇಳಿಯಬಾರೆಂದು ಸೂಚಿಸಲಾಗಿದೆ.

VISTARANEWS.COM


on

By

karnataka weather Forecast
Koo

ಬೆಂಗಳೂರು: ರಾಜ್ಯಾದ್ಯಂತ ವರುಣಾರ್ಭಟ ಮುಂದುವರಿದಿದ್ದು, ಗುಡುಗು, ಮಿಂಚು ಸಹಿತ (Rain News) ಬಿರುಗಾಳಿಯೊಂದಿಗೆ ಮಳೆಯಾಗಲಿದೆ. ಕರಾವಳಿಯ ಉಡುಪಿ, ಉತ್ತರ ಕನ್ನಡ ಜಿಲ್ಲೆಯ ಹೆಚ್ಚಿನ ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗಾಳಿ ವೇಗವು ಗಂಟೆಗೆ 40-50 ಕಿ.ಮೀ ವ್ಯಾಪ್ತಿಯಲ್ಲಿ (Karnataka Weather Forecast) ಬೀಸಲಿದೆ.

ಇನ್ನೂ ದಕ್ಷಿಣ ಒಳನಾಡಿನ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ, ರಾಮನಗರ ಮತ್ತು ಶಿವಮೊಗ್ಗದಲ್ಲೂ ವ್ಯಾಪಕ ಮಳೆಯಾಗಲಿದೆ.

ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರಗಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಗಾಳಿಯೊಂದಿಗೆ (40-50 ಕಿಮೀ) ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಬಳ್ಳಾರಿ, ಚಿತ್ರದುರ್ಗ, ಚಿಕ್ಕಬಳ್ಳಾಪುರದ ಹಲವು ಕಡೆಗಳಲ್ಲಿ ಗಾಳಿಯು ರಭಸವಾಗಿ ಬೀಸಲಿದ್ದು, ಗುಡುಗು ಸಹಿತ ಮಳೆ ಲಘು ಮಳೆಯಾಗಲಿದೆ. ತುಮಕೂರು ಮತ್ತು ವಿಜಯನಗರ ಸೇರಿದಂತೆ ಬೀದರ್, ಕೊಪ್ಪಳ, ರಾಯಚೂರು ಮತ್ತು ಯಾದಗಿರಿಯಲ್ಲೂ ಗಾಳಿ ಸಹಿತ ಭಾರಿ ಮಳೆಯಾಗಲಿದೆ.

Karnataka Weather Forecast

ಇದನ್ನೂ ಓದಿ: SSLC Toper: ಓದೋಕೂ ಬರದವ ಎಸ್‌ಎಸ್‌ಎಲ್‌ಸಿ ಟಾಪರ್‌ ಆಗಿ ಜವಾನನಾದ! ಜಡ್ಜ್‌ ದೂರಿನಿಂದ ಹೊರ ಬಿತ್ತು ಅಸಲಿಯತ್ತು!

ಯೆಲ್ಲೋ ಅಲರ್ಟ್‌

ಗುಡುಗು ಸಹಿತ ಭಾರೀ ಮಳೆಯೊಂದಿಗೆ 40-50 ಕಿ.ಮೀ ವ್ಯಾಪ್ತಿಯಲ್ಲಿ ಬಿರುಗಾಳಿ ಬೀಸಲಿದ್ದು, ಹಳದಿ ಎಚ್ಚರಿಕೆ ನೀಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಮೈಸೂರು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ.

ಮೀನುಗಾರರಿಗೆ ಅಲರ್ಟ್‌

ಮೇ 24ರಂದು ಕರ್ನಾಟಕ ಕರಾವಳಿ ಭಾಗದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಗಾಳಿಯ ವೇಗವು ಗಂಟೆಗೆ 45 ಕಿ.ಮೀ ನಿಂದ 55 ಕಿ.ಮೀ ವೇಗದಲ್ಲಿ ಬೀಸುವ ಸಾಧ್ಯತೆ ಇದೆ. ಹಾಗಾಗಿ ಮೀನುಗಾರರು ಸಮುದ್ರ ಪ್ರದೇಶಗಳಿಗೆ ತೆರಳದಂತೆ ಸೂಚಿಸಲಾಗಿದೆ. ಪ್ರವಾಸಿಗರು ಕಡಲ ತೀರಕ್ಕೆ ಹೋಗದಂತೆ ಎಚ್ಚರಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಪ್ರವಾಸ

Udupi Tour: ಉಡುಪಿಗೆ ಹೋದಾಗ ನೀವು ನೋಡಲೇಬೇಕಾದ 10 ಸ್ಥಳಗಳಿವು

ಆಧ್ಯಾತ್ಮಿಕತೆ, ನೈಸರ್ಗಿಕ ಸೌಂದರ್ಯ ಮತ್ತು ಸಾಂಸ್ಕೃತಿಕ ಅನುಭವಗಳ ಪರಿಪೂರ್ಣ ಮಿಶ್ರಣವನ್ನು ನೀಡುವ ಉಡುಪಿ ಸ್ಮರಣೀಯ ಪ್ರವಾಸಕ್ಕೆ (Udupi Tour) ಸೂಕ್ತವಾದ ತಾಣವಾಗಿದೆ. ಸಾಹಸ, ವಿಶ್ರಾಂತಿ ಅಥವಾ ಆಧ್ಯಾತ್ಮಿಕತೆಯ ಅನುಭವದಲ್ಲಿ ಮಿಂದೇಳಲು ಬಯಸಿದರೆ ಇಲ್ಲಿಗೊಮ್ಮೆ ಭೇಟಿ ನೀಡಲು ಮರೆಯದಿರಿ.

VISTARANEWS.COM


on

By

Udupi Tour
Koo

ಕೃಷ್ಣನ ನಾಡು ಉಡುಪಿಯಲ್ಲಿ ಪ್ರವಾಸಿಗರನ್ನು (Udupi Tour) ಸೆಳೆಯುವ ಹಲವಾರು ತಾಣಗಳಿವೆ. ಸ್ನೇಹಿತರು, ಬಂಧುಗಳೊಂದಿಗೆ ಉಡುಪಿಗೆ ಭೇಟಿ ನೀಡಿದಾಗ ಇಲ್ಲಿನ ಸಾಂಸ್ಕೃತಿಕ ಶ್ರೀಮಂತಿಕೆ, ಪಾಕಶಾಲೆಯ ಸವಿರುಚಿ, ನಯನ ಮನೋಹರ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಮರೆಯದಿರಿ.

ಕರ್ನಾಟಕದ (karnataka) ಕರಾವಳಿ ಪ್ರದೇಶದಲ್ಲಿ ( coastal region) ನೆಲೆಸಿರುವ ಉಡುಪಿಯು ಹಲವಾರು ಸುಂದರ ಅನುಭವಗಳನ್ನು ನೀಡುತ್ತದೆ. ಸ್ಮರಣೀಯ ಪ್ರವಾಸಕ್ಕೆ ಇದೊಂದು ಸೂಕ್ತ ತಾಣವಾಗಿದೆ. ಪ್ರಾಚೀನ ದೇವಾಲಯಗಳಿಂದ (temples) ಹಿಡಿದು ಸುಂದರ ಕಡಲತೀರಗಳವರೆಗೆ (beach).. ಉಡುಪಿಯಲ್ಲಿ ಭೇಟಿ ನೀಡಬಹುದಾದ ಕೆಲವು ಅತ್ಯುತ್ತಮ ತಾಣಗಳಿವೆ.


ಶ್ರೀ ಕೃಷ್ಣ ದೇವಾಲಯ

ಉಡುಪಿಯ ಅತ್ಯಂತ ಪವಿತ್ರ ಕ್ಷೇತ್ರಗಳಲ್ಲಿ ಒಂದಾದ ಶ್ರೀ ಕೃಷ್ಣ ದೇವಸ್ಥಾನದಿಂದ ಪ್ರವಾಸವನ್ನು ಆರಂಭಿಸಬಹುದು. ಭಗವಾನ್ ಕೃಷ್ಣನಿಗೆ ಸಮರ್ಪಿತವಾಗಿರುವ ಈ ದೇವಾಲಯವು ವಿಶಿಷ್ಟವಾದ ವಾಸ್ತುಶಿಲ್ಪ ಮತ್ತು ಧಾರ್ಮಿಕ ಮಹತ್ವಕ್ಕಾಗಿ ಹೆಸರುವಾಸಿಯಾಗಿದೆ. ಇಲ್ಲಿನ ಹಲವು ಆಚರಣೆಗಳು ಯಾತ್ರಿಕರನ್ನು ಸಮ್ಮೋಹನಗೊಳಿಸುವುದು.


ಮಲ್ಪೆ ಬೀಚ್

ವಿಶ್ರಾಂತಿ ಬಯಸಿದರೆ ಮಲ್ಪೆ ಬೀಚ್‌ ಗಿಂತ ಉತ್ತಮ ತಾಣ ಬೇರೆ ಇಲ್ಲ. ಚಿನ್ನದ ಮರಳು ಮತ್ತು ಆಕಾಶ ನೀಲಿ ನೀರಿನ ಸುಂದರವಾದ ದೃಶ್ಯವನ್ನು ಇಲ್ಲಿ ಕಣ್ತುಂಬಿಕೊಳ್ಳಬಹುದು. ಬಿಸಿಲಿನಲ್ಲಿ ಬೇಯುತ್ತಿರಲಿ, ದಡದಲ್ಲಿ ಆರಾಮವಾಗಿ ಅಡ್ಡಾಡುತ್ತಿರಲಿ ಅಥವಾ ಪ್ಯಾರಾಸೈಲಿಂಗ್ ಮತ್ತು ಜೆಟ್-ಸ್ಕೀಯಿಂಗ್‌ನಂತಹ ರೋಮಾಂಚಕ ಜಲ ಕ್ರೀಡೆಗಳಲ್ಲಿ ಪಾಲ್ಗೊಳ್ಳಬಹುದು.


ಸೇಂಟ್ ಮೇರಿಸ್ ದ್ವೀಪ

ಮಲ್ಪೆ ಬೀಚ್‌ನಿಂದ ಸೇಂಟ್ ಮೇರಿಸ್ ದ್ವೀಪಕ್ಕೆ ಚಿಕ್ಕದಾದ ದೋಣಿ ವಿಹಾರವನ್ನು ನಡೆಸಬಹುದು. ಇದು ವಿಶಿಷ್ಟವಾದ ಕಲ್ಲಿನ ರಚನೆಗಳು ಮತ್ತು ಪ್ರಾಚೀನ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ.


ಮಣಿಪಾಲ

ಶೈಕ್ಷಣಿಕ ಸಂಸ್ಥೆಗಳು, ಉತ್ಸಾಹಭರಿತ ಕೆಫೆಗಳು ಮತ್ತು ಸಾಂಸ್ಕೃತಿಕ ಆಕರ್ಷಣೆಗಳಿಗೆ ನೆಲೆಯಾಗಿರುವ ಮಣಿಪಾಲದ ರೋಮಾಂಚಕ ಪಟ್ಟಣವನ್ನು ಸುತ್ತಾಡಬಹುದು. ಇಲ್ಲಿನ ಮಣಿಪಾಲ್ ವಿಶ್ವವಿದ್ಯಾನಿಲಯದ ಕ್ಯಾಂಪಸ್, ಹೆರಿಟೇಜ್ ವಿಲೇಜ್, ತಾರಾಲಯ ಸೇರಿದಂತೆ ಪ್ರವಾಸಿಗರು ಇಷ್ಟಪಡುವ ಇನ್ನೂ ಅನೇಕ ತಾಣಗಳು ಇಲ್ಲಿವೆ. ಸ್ಥಳೀಯ ತಿನಿಸುಗಳಲ್ಲಿ ರುಚಿಕರವಾದ ಬೀದಿ ಆಹಾರವನ್ನು ಇಲ್ಲಿ ಸವಿಯಬಹುದು.


ಪಡುಕೆರೆ ಬೀಚ್

ಪಡುಕೆರೆ ಬೀಚ್‌ನಲ್ಲಿ ನಗರದ ಜೀವನದ ಜಂಜಾಟದಿಂದ ದೂರವಾಗಿ ಪ್ರಶಾಂತ ಸಮುದ್ರ ತೀರದಲ್ಲಿ ಸುತ್ತಾಡಬಹುದು. ಕಡಲ ತೀರವಾಸಿಗಳ ಜನ ಜೀವನವನ್ನು ಕಾಣಬಹುದು. ಶಾಂತವಾದ ವಾತಾವರಣ ಮತ್ತು ವಿಹಂಗಮ ನೋಟಗಳಿಗೆ ಹೆಸರುವಾಸಿಯಾದ ಪ್ರಶಾಂತ ಕರಾವಳಿ ಇದನ್ನು ಸ್ವರ್ಗ ಮಾಡಿದೆ.


ಆನೆಗುಡ್ಡೆ ವಿನಾಯಕ ದೇವಸ್ಥಾನ

ಆನೆಗುಡ್ಡೆ ವಿನಾಯಕ ದೇವಸ್ಥಾನದಲ್ಲಿ ಗಣಪತಿಗೆ ಪೂಜೆ ಸಲ್ಲಿಸಿ. ಹಚ್ಚ ಹಸಿರಿನ ಬೆಟ್ಟಗಳ ನಡುವೆ ನೆಲೆಸಿರುವ ಈ ಪವಿತ್ರ ಕ್ಷೇತ್ರದಲ್ಲಿ ದೇವಾಲಯದ ಸಂಕೀರ್ಣ ವಾಸ್ತುಶೈಲಿಯನ್ನು ಗಮನಿಸಿ. ಹತ್ತಿರದಲ್ಲೇ ಇರುವ ನೀರಿನ ನಡುವೆ ನೆಲೆಯಾಗಿರುವ ಈಶ್ವರ ದೇವಾಲಯಕ್ಕೆ ಭೇಟಿ ನೀಡುವುದನ್ನು ತಪ್ಪಿಸಿಕೊಳ್ಳಬೇಡಿ.


ಕೂಡ್ಲು ಜಲಪಾತ

ಪಶ್ಚಿಮ ಘಟ್ಟಗಳಲ್ಲಿ ಅಡಗಿರುವ ಗುಪ್ತ ರತ್ನವಾದ ಕೂಡ್ಲು ಜಲಪಾತವನ್ನು ತಲುಪಲು ಹಸಿರು ಕಾಡುಗಳ ಮೂಲಕ ರಮಣೀಯವಾದ ಚಾರಣವನ್ನು ಪ್ರಾರಂಭಿಸಿ. ಹಸಿರು ಎಲೆಗಳು ಮತ್ತು ಚಿಲಿಪಿಲಿ ಹಕ್ಕಿಗಳಿಂದ ಸುತ್ತುವರೆದಿರುವ ನೀರಿನ ಸೌಂದರ್ಯ ನಿಮ್ಮ ತನುಮನವನ್ನು ತಣಿಸುವ ಅನುಭವ ಕೊಡುವುದು.


ಕಾಪು ಬೀಚ್

ಕಾಪು ಬೀಚ್‌ನ ಪ್ರಶಾಂತ ತೀರದಲ್ಲಿ ಪ್ರಾಚೀನ ಮರಳುಗಳು ಅರೇಬಿಯನ್ ಸಮುದ್ರದ ಶಾಂತ ಅಲೆಗಳನ್ನು ಸಂಧಿಸುತ್ತವೆ. ಸ್ನೇಹಿತರೊಂದಿಗೆ ವಿರಾಮದ ಪಿಕ್ನಿಕ್ ಅನ್ನು ಇಲ್ಲಿ ಆನಂದಿಸಬಹುದು. ಕಡಲತೀರದ ಮೇಲೆ ಮರಳು ಕೋಟೆಗಳನ್ನು ನಿರ್ಮಿಸಿ ಮತ್ತು ಕರಾವಳಿಯ ಉದ್ದಕ್ಕೂ ಇರುವ ಸ್ಥಳೀಯ ತಿನಿಸುಗಳಲ್ಲಿ ತಾಜಾ ಸಮುದ್ರಾಹಾರ ಭಕ್ಷ್ಯಗಳನ್ನು ಸವಿಯಬಹುದು.


ಅಂಬಲಪಾಡಿ ಮಹಾಕಾಳಿ ದೇವಸ್ಥಾನ

ದೈವಿಕ ಸೆಳವು ಕೊಡುವ ಅಂಬಲಪಾಡಿ ಮಹಾಕಾಳಿ ದೇವಾಲಯ ಸಾಕಷ್ಟು ಪ್ರವಾಸಿಗರನ್ನು ತನ್ನತ್ತ ಸೆಳೆಯುವುದು. ದೇವಾಲಯದ ವಾಸ್ತುಶಿಲ್ಪದ ಭವ್ಯತೆಗೆ ಸಾಕ್ಷಿಯಾಗಿದೆ. ಇಲ್ಲಿನ ಉತ್ಸವಗಳು ರೋಮಾಂಚನ ಉಂಟು ಮಾಡುತ್ತದೆ.


ಇದನ್ನೂ ಓದಿ: Mangalore Tour: ಮಂಗಳೂರಿಗೆ ಬಂದರೆ ಈ ಸ್ಥಳಗಳಿಗೆ ಭೇಟಿ ಕೊಡಲು ಮರೆಯದಿರಿ

ಉಡುಪಿ ಪಾರಂಪರಿಕ ಗ್ರಾಮ

ಶ್ರೀಮಂತ ಪರಂಪರೆ ಮತ್ತು ಸಂಪ್ರದಾಯಗಳನ್ನು ಪ್ರದರ್ಶಿಸುವ ಸಾಂಸ್ಕೃತಿಕ ಎನ್‌ಕ್ಲೇವ್ ಉಡುಪಿ ಹೆರಿಟೇಜ್ ವಿಲೇಜ್‌ ಗೆ ಭೇಟಿ ನೀಡಲು ಸಮಯ ಮೀಸಲಿಡಿ. ಪಾರಂಪರಿಕ ಮನೆಗಳಿಂದ ಕೂಡಿದ ವಿಲಕ್ಷಣ ಬೀದಿಗಳಲ್ಲಿ ಸ್ಥಳೀಯ ಕುಶಲಕರ್ಮಿಗಳ ಕಾರ್ಯಾಗಾರಗಳನ್ನು ಕಾಣಬಹುದು.

Continue Reading

ಮಳೆ

Karnataka Rain : ಮಳೆ ಅವಘಡಕ್ಕೆ ಜನರು ತತ್ತರ; ಧರೆಗುರುಳಿದ ಮರಗಳು, ಕುಸಿದು ಬಿದ್ದ ಮನೆಗಳು

Rain News : ರಾಜ್ಯದ ಹಲವೆಡೆ ಮಳೆಯು (Karnataka Rain) ಅಬ್ಬರಿಸುತ್ತಿದೆ. ಮೈಸೂರಿನ ಹುಣಸೂರಿನಲ್ಲಿ ಜೋರು ಮಳೆಗೆ ಮನೆ ಕುಸಿದು ಬಿದ್ದರೆ, ಬೆಳಗಾವಿಯಲ್ಲಿ ಗಾಳಿ ಮಳೆಗೆ ಶಾಲೆಯ ಶೆಡ್‌
(Karnataka Weather Forecast) ಹಾರಿ ಹೋಗಿದೆ. ಯಾದಗಿರಿ, ಧಾರವಾಡದಲ್ಲಿ ಮರಗಳು ಧರೆಗುರುಳಿದ್ದವು.

VISTARANEWS.COM


on

By

Karnataka rain
Koo

ಮೈಸೂರು: ಮೈಸೂರಿನ ಹುಣಸೂರು ಭಾಗದಲ್ಲಿ ವರುಣನ (Rain News) ಅಬ್ಬರ ಜೋರಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಗೆ (Karnataka Rain) ತಾಲೂಕಿನ ಹಲವು ಗ್ರಾಮಗಳಲ್ಲಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಕಾಳೇನಹಳ್ಳಿಯಲ್ಲಿ ಶ್ರೀನಿವಾಸ್ ಎಂಬುವರಿಗೆ ಸೇರಿದ ಮನೆಯು ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಜೋರಾಗಿ ಸುರಿದ ಮಳೆಗೆ ಮನೆಯಲ್ಲಿದ್ದ ವಸ್ತುಗಳೆಲ್ಲ ನಾಶವಾಗಿದೆ. ವಾಸಕ್ಕೆ ಮನೆಯಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ಕುಟುಂಬಸ್ಥರು ಪರಿಹಾರಕ್ಕಾಗಿ ಮನವಿ ಮಾಡಿದ್ದಾರೆ.

ಇತ್ತ ಹನಗೋಡಿನಲ್ಲಿ ಭಾರಿ ಮಳೆಗೆ ಜನರು ತತ್ತರಿಸಿದ್ದರು. ಹುಣಸೂರು ತಾಲೂಕಿನ ಹನಗೋಡಿ ಗ್ರಾಮದಲ್ಲಿ ವಾರದಿಂದ ಸುರಿಯುತ್ತಿರುವ ಮಳೆಗೆ ಮನೆ ಅಂಗಡಿಗಳಿಗೆ ನೀರು ನುಗ್ಗಿ ಸಂಪೂರ್ಣ ಜಲಾವೃತಗೊಂಡಿತ್ತು. ಬಸ್ ನಿಲ್ದಾಣ ಕೆರೆಯಂತಾಗಿತ್ತು. ಚರಂಡಿಗಳ ವ್ಯವಸ್ಥೆ ಸರಿಯಿಲ್ಲದೆ ನೀರು ಹೋಗದೆ ನಿಂತಲ್ಲೇ ನಿಂತು ಜನರಿಗೆ ತೊಂದರೆಯಾಗಿತ್ತು.

ಇದನ್ನೂ ಓದಿ: Accident Case : ಇಳಿಜಾರಿನಲ್ಲಿ ತಪ್ಪಿದ ಕಂಟ್ರೋಲ್‌; ಟ್ರ್ಯಾಕ್ಟರ್‌ ಪಲ್ಟಿಯಾಗಿ ಯುವಕ ಮೃತ್ಯು

ಗಾಳಿ ಮಳೆಗೆ ಹಾರಿ ಹೋದ ಶಾಲೆಯ ಶೆಡ್‌

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಜುಗೂಳ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಜೋರು ಗಾಳಿ ಮಳೆಗೆ ಶೆಡ್ ಹಾರಿ ಹೋಗಿತ್ತು. ಶಾಲೆಗೆ ರಜೆ ಇದ್ದಿದ್ದರಿಂದ ಭಾರಿ ಅನಾಹುತ ತಪ್ಪಿತ್ತು. ಶಾಲೆಯ ಶೆಡ್ ಹಾರಿ ಅಕ್ಕಪಕ್ಕದ ಮನೆಗಳು ಹಾಗೂ ವಿದ್ಯುತ್ ತಂತಿಗಳು ಮೇಲೆ ಬಿದ್ದು ಹಾನಿಯಾಗಿತ್ತು.

ಯಾದಗಿರಿಯಲ್ಲಿ ಧರೆಗುರುಳಿದ ಮರಗಳು

ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆಗೆ ಬೃಹತ್ ಮರಗಳು ಧರೆಗುರುಳಿದ್ದವು. ಸತತ ಒಂದು ಗಂಟೆಗೂ ಹೆಚ್ಚು ಸಮಯ ಸುರಿದ ಮಳೆಗೆ ಮರಗಳ ಮೇಲ್ಭಾಗದ ರಂಬೆ, ಕೊಂಬೆಗಳು ಸಂಪೂರ್ಣ ಗಾಳಿಗೆ ಮುರಿದು ಬೋಳಾಗಿದ್ದವು. ಕೆಲವೆಡೆ ಮನೆ ಮುಂದೆ ಇದ್ದ ಮರಗಳು ನೆಲಕ್ಕುರುಳಿದ್ದವು. ಭಾರಿ ಮಳೆಗೆ ಸುಭಾಷ್ ವೃತ್ತದ ಸಮೀಪದ ಪಿಡ್ಲೂಡಿ ಕಚೇರಿ ಆವರಣದೊಳಗೆ ಮಳೆ ನೀರು ನುಗ್ಗಿತ್ತು. ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರ ಜನಸಂಪರ್ಕದ ಕಚೇರಿ ಆವರಣದಲ್ಲಿ ಮರಗಳು ಧರೆಗುರುಳಿದ್ದವು.

ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಗೆ ಆರು ಜನರ ಕುಟುಂಬವೊಂದು ಪ್ರಾಣಾಪಾಯದಿಂದ ಜಸ್ಟ್ ಮಿಸ್ ಆಗಿದೆ. ಯಾದಗಿರಿಯ ಮಾತಾಮಣಿಕೇಶ್ವರಿ ನಗರದಲ್ಲಿ ಭಾರೀ ಮಳೆ ಗಾಳಿಗೆ ಮನೆಗೆ ಹಾಕಿದ ಟಿನ್ ಶೆಡ್ ಹಾರಿಹೋಗಿದೆ. ಮಳೆ ಗಾಳಿ ಜೋರಾಗುತ್ತಿದ್ದಂತೆ ಇಡೀ ಕುಟುಂಬ ಮನೆಯಿಂದ ಹೊರಬಂದು ಬಚಾವ್ ಆಗಿದ್ದಾರೆ. ಮನೆಯಿಂದ ಹೊರ ಬಂದ ಕೆಲವೇ ಕ್ಷಣದಲ್ಲಿ ಟಿನ್ ಶೆಡ್ ಕುಸಿದು ಬಿದ್ದಿದೆ. ಇತ್ತ ದಿನಸಿ ಸಾಮಾನು ಸೇರಿದಂತೆ ಎಲ್ಲ ವಸ್ತುಗಳು ಹಾಳಾಗಿವೆ.

ಧಾರಾವಾಡದಲ್ಲಿ ಧಾರಾಕಾರ ಮಳೆಗೆ ರಸ್ತೆ ಮೇಲೆ ನಿಂತ ನೀರು

ಧಾರವಾಡದಲ್ಲಿ ಗುರುವಾರದಂದು ಅರ್ಧ ಗಂಟೆಗೂ ಹೆಚ್ಚು ಸಮಯ ಮಳೆಯಾಗಿತ್ತು. ಎರಡು ದಿನದಿಂದ ಬ್ರೇಕ್‌ ಕೊಟ್ಟಿದ್ದ ಮಳೆಯು ಗುರುವಾರ ದಿಢೀರ್‌ ಅಪ್ಪಳಿಸಿತ್ತು. ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಧಾರವಾಡ ಹೊರವಲಯದ ಕೆಎಂಎಫ್ ಬಳಿ ಧಾರಾಕಾರ ಮಳೆಗೆ ರಸ್ತೆಯಲ್ಲೇ ನೀರು ನಿಂತಿತ್ತು. ಬಿಆರ್‌ಟಿಎಸ್ ಕಾರಿಡಾರ್‌ನಿಂದ ಹರಿದು ಹೋಗದೇ ಇರುವುದೇ ಕಾರಣ ಎಂದು ಸ್ಥಳೀಯರು ಆಕ್ರೋಶಿಸಿದರು.

ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಬಸರೀಕಟ್ಟೆ, ತರೀಕೆರೆಯಲ್ಲೂ ಭಾರೀ ಮಳೆಯಾಗಿದ್ದು ರಸ್ತೆಯಲ್ಲಿ ಎರಡು ಅಡಿ ನೀರು ನಿಂತಿತ್ತು. ತರೀಕೆರೆ ಪಟ್ಟಣದ ಗಣಪತಿ ಪೆಂಡಾಲ್ ಮುಂಭಾಗ ಕಾರು, ಬೈಕ್‌ಗಳು ಅರ್ಧದಷ್ಟು ಮುಳುಗಿತ್ತು. ಎನ್ಆರ್‌ ಪುರ ತಾಲೂಕಿನ ಬಾಳೆಹೊನ್ನೂರಿನಲ್ಲೂ ಮಳೆಯಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

Karnataka Weather: ಇಂದು ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ

Karnataka Weather: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ, ಅಂದರೆ ಮೇ 29ರವರೆಗೆ ಗುಡುಗು ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ಸಂಭವವಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

VISTARANEWS.COM


on

Karnataka Weather
Koo

ಬೆಂಗಳೂರು: ಮೇ 23ರಂದು ಗುರುವಾರ ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಹುತೇಕ ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗುವ (Karnataka Weather) ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇನ್ನು ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ, ರಾಮನಗರ, ಶಿವಮೊಗ್ಗ, ಜಿಲ್ಲೆಗಳಲ್ಲಿ ಕೂಡ ಗುರುವಾರ ಹಲವೆಡೆ ಗುಡುಗು ಸಹಿತ ಗಾಳಿ (40-50 ಕಿ.ಮೀ) ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಹಾಗೆಯೇ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರ್ಗಿ, ವಿಜಯಪುರ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಗಾಳಿಯೊಂದಿಗೆ (40-50 ಕಿ.ಮೀ) ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಬಳ್ಳಾರಿ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಹಲವೆಡೆ ಗುಡುಗು ಸಹಿತ ಗಾಳಿಯೊಂದಿಗೆ (40-45 ಕಿ.ಮೀ) ಹಗುರ ಮಳೆಯಾಗುವ ಸಾಧ್ಯತೆಯಿದೆ. ಬೀದರ್, ಕೊಪ್ಪಳ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಗಾಳಿಯೊಂದಿಗೆ (40-45 ಕಿ.ಮೀ) ಹಗುರ ಮಳೆಯಾಗುವ ಸಾಧ್ಯತೆಯಿದೆ ಎಂದು ಮಾಹಿತಿ ನೀಡಿದೆ.

ಇದನ್ನೂ ಓದಿ | Rain News: ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ; ಹಾರಿದ 10ಕ್ಕೂ ಹೆಚ್ಚು ಮನೆಗಳ ಮೇಲಿನ ಶೀಟ್, ಇಬ್ಬರಿಗೆ ಗಾಯ

ಇದೇ ರೀತಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ, ಅಂದರೆ ಮೇ 29ರವರೆಗೆ ಗುಡುಗು ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ಸಂಭವವಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಮೇ 23ರಂದು ಕೊಡಗು, ಮೈಸೂರು ಜಿಲ್ಲೆಗಳಲ್ಲಿ ಒಂದೆರಡು ಸ್ಥಳಗಳಲ್ಲಿ ಗುಡುಗು, ಬಿರುಗಾಳಿ ಸಹಿತ (40-50 ಕಿ.ಮೀ) ಭಾರಿ ಮಳೆ ಸಂಭವಿಸುವ ಸಾಧ್ಯತೆಯಿದೆ. ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ಒಂದೆರೆಡು ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಅದೇ ರೀತಿ ಮೇ 24ರಂದು ಕೊಡಗು, ಮಂಡ್ಯ, ಹಾಸನ, ಚಾಮರಾಜನಗರ, ಚಿಕ್ಕಮಗಳೂರು ಜಿಲ್ಲೆಗಳ ಒಂದೆರೆಡು ಸ್ಥಳಗಳಲ್ಲಿ ಭಾರೀ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಒಂದೆರೆಡು ಸ್ಥಳಗಳಲ್ಲಿ ಭಾರೀ ಮಳೆಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.

ತಾಪಮಾನದ ಮುನ್ಸೂಚನೆ

ಮೇ 23 ರಿಂದ ಉತ್ತರ ಒಳನಾಡಿನಲ್ಲಿ ಗರಿಷ್ಠ ತಾಪಮಾನ 2-3 ಡಿಗ್ರಿ ಸೆಲ್ಲಿಯನ್ ಹೆಚ್ಚಾಗುವ ಸಾಧ್ಯತೆ ಇದೆ.

ಮೀನುಗಾರರಿಗೆ ಎಚ್ಚರಿಕೆ

ಕರಾವಳಿಯಲ್ಲಿ 55 ಕಿ.ಮೀ. ವೇಗದಲ್ಲಿ ಗಂಟೆಗೆ 40 ಕಿ.ಮೀ. ನಿಂದ 45 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ.

ಇದನ್ನು ಓದಿ | Hampi Monument: ಹಂಪಿಯಲ್ಲಿ ಭಾರಿ ಮಳೆಗೆ ಕುಸಿದು ಬಿದ್ದ ವಿಜಯನಗರ ಅರಸರ ಕಾಲದ ಕಲ್ಲು ಮಂಟಪ

ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮುನ್ಸೂಚನೆ

ಮುಂದಿನ 48 ಗಂಟೆಗಳ ಕಾಲ ಬೆಂಗಳೂರು ಮತ್ತು ಸುತ್ತಲಿನ ಪ್ರದೇಶದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಹಗುರದಿಂದ ಸಾಧಾರಣ ಮಳೆಗುಡುಗು ಸಹಿತ ಮಳೆಯಾಗುವ ಸಂಭವವಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 32°C ಮತ್ತು 23°C ಇರುವ ಸಾಧ್ಯತೆ ಇದೆ.

Continue Reading
Advertisement
bomb threat
ಪ್ರಮುಖ ಸುದ್ದಿ3 mins ago

Bomb Threat : ಶಾಲೆಗೆ ಬಾಂಬ್​ ಬೆದರಿಕೆ ಮೇಲ್ ಕಳುಹಿಸಿದ ವಿದ್ಯಾರ್ಥಿಗಳು!

belagavi violence
ಕ್ರೈಂ28 mins ago

Belagavi Violence: ಕ್ರಿಕೆಟ್‌ ವಿಚಾರಕ್ಕೆ ಗಲಾಟೆ, 8 ಮಂದಿಗೆ ಗಾಯ, ಪೊಲೀಸರ ಮುಂದೆಯೇ ತಲ್ವಾರ್‌ ಎಸೆದು ಅಟ್ಟಹಾಸ!

karnataka weather Forecast
ಮಳೆ1 hour ago

Karnataka Weather : ಕರಾವಳಿಯಲ್ಲಿ ಬಿರುಗಾಳಿ ಮಳೆ; ಕಡಲಿಗಿಳಿಯದಂತೆ ಮೀನುಗಾರರಿಗೆ ಅಲರ್ಟ್!‌

COMEDK UGET 2024
ಪ್ರಮುಖ ಸುದ್ದಿ2 hours ago

COMEDK UGET 2024 : ಇಂದು ಮಧ್ಯಾಹ್ನ ಕಾಮೆಡ್‌ – ಕೆ ಫಲಿತಾಂಶ; ರಿಸಲ್ಟ್​ ನೋಡೋದು, ಡೌನ್‌ಲೋಡ್‌ ಮಾಡಿಕೊಳ್ಳೋದು ಹೇಗೆ?

Tips On Tea
ಆರೋಗ್ಯ2 hours ago

Tips On Tea: ಚಹಾ ಅತಿಯಾಗಿ ಕುದಿಸುವುದು ಒಳ್ಳೆಯದಲ್ಲ! ಏಕೆ ಗೊತ್ತಾ?

Dina Bhavishya
ಭವಿಷ್ಯ3 hours ago

Dina Bhavishya : ಆತುರದಲ್ಲಿ ಈ ರಾಶಿಯವರು ಯಾವುದೇ ತೀರ್ಮಾನ ತೆಗೆದುಕೊಳ್ಳಬೇಡಿ

Narendra Modi
ದೇಶ8 hours ago

PM Modi: 400 ಸೀಟು, 400 ಸೀಟು ಎಂದು ಪ್ರತಿಪಕ್ಷಗಳನ್ನು ಮಂಗ್ಯಾ ಮಾಡಿದ ಮೋದಿ; ಅವರ ಮಾತಲ್ಲೇ ಕೇಳಿ!

Rajakaluve
ಸಂಪಾದಕೀಯ8 hours ago

ವಿಸ್ತಾರ ಸಂಪಾದಕೀಯ: ಮುಂಗಾರಿಗೆ ಮುನ್ನವೇ ರಾಜಕಾಲುವೆ ಒತ್ತುವರಿ ತೆರವಾಗಲಿ

IPL 2024
ಪ್ರಮುಖ ಸುದ್ದಿ8 hours ago

IPL 2024 : ಅಭಿಮಾನಿಗಳ ದುರಂಹಕಾರವೇ ಆರ್​​ಸಿಬಿ ಸೋಲಿಗೆ ಕಾರಣ ಎಂದ ಮಾಜಿ ಕ್ರಿಕೆಟಿಗ

DCM D K Shivakumar instructed to test drinking water everywhere including Bengaluru
ಕರ್ನಾಟಕ8 hours ago

Bengaluru News: ಬೆಂಗಳೂರು ಸೇರಿದಂತೆ ಎಲ್ಲೆಡೆ ಕುಡಿಯುವ ನೀರಿನ ಪರೀಕ್ಷೆಗೆ ಸೂಚನೆ ನೀಡಿದ ಡಿ.ಕೆ.ಶಿವಕುಮಾರ್

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for May 23 2024
ಭವಿಷ್ಯ1 day ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ2 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು3 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು3 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ4 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ5 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ5 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ5 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ6 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

ಟ್ರೆಂಡಿಂಗ್‌