Covid Cases: ಕೋವಿಡ್ ಕೇಸ್ ಹೆಚ್ಚಳ! ಇನ್‌ಫ್ಲುಯೆಂಜಾ ರೀತಿ ಅನಾರೋಗ್ಯದ ವರದಿಗೆ ರಾಜ್ಯಗಳಿಗೆ ಕೇಂದ್ರ ಸೂಚನೆ - Vistara News

ಆರೋಗ್ಯ

Covid Cases: ಕೋವಿಡ್ ಕೇಸ್ ಹೆಚ್ಚಳ! ಇನ್‌ಫ್ಲುಯೆಂಜಾ ರೀತಿ ಅನಾರೋಗ್ಯದ ವರದಿಗೆ ರಾಜ್ಯಗಳಿಗೆ ಕೇಂದ್ರ ಸೂಚನೆ

ಕೋವಿಡ್ ಕೇಸ್ ಹೆಚ್ಚಳ! ಇನ್‌ಫ್ಲುಯೆಂಜಾ ತರಹದ ಅನಾರೋಗ್ಯದ ವರದಿಗೆ ರಾಜ್ಯಗಳಿಗೆ ಕೇಂದ್ರ ಸೂಚನೆ

VISTARANEWS.COM


on

Influenza-Like Illness must report As Covid Cases Rise Says Central
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ (Covid Cases) ಮಧ್ಯೆ ಯಾವುದೇ ಇನ್‌ಫ್ಲುಯೆಂಜಾ (Influenza-Like Illness) ತರಹದ ಅನಾರೋಗ್ಯದ ಬಗ್ಗೆ ನಿಗಾ ವಹಿಸಲು ಮತ್ತು ವರದಿ ಮಾಡಲು ಕೇಂದ್ರ ಸರ್ಕಾರವು (Central Governemt) ಸೋಮವಾರ ರಾಜ್ಯಗಳಿಗೆ ಸಲಹೆಯನ್ನು (Advisory To states) ನೀಡಿದೆ. ಇದರಲ್ಲಿ ಕೊರೋನಾದ ಉಪತಳಿ ಜೆನ್.1 ಕೂಡ ಸೇರಿದೆ(JN.1 Subvariant).

ಕೋವಿಡ್ -19 ವೈರಸ್ ಪ್ರಸರಣ ಹೆಚ್ಚುತ್ತಿರುವುದರಿಂದ ಮತ್ತು ಅದರ ಸಾಂಕ್ರಾಮಿಕ ರೋಗಶಾಸ್ತ್ರದ ನಡವಳಿಕೆಯು ಭಾರತೀಯ ಹವಾಮಾನ ಪರಿಸ್ಥಿತಿಗಳು ಮತ್ತು ಇತರ ಸಾಮಾನ್ಯ ರೋಗಕಾರಕಗಳ ಪ್ರಸರಣದಲ್ಲಿ ನೆಲೆಗೊಂಡಿರುವುದರಿಂದ, ಕೋವಿಡ್ ಪರಿಸ್ಥಿತಿಯ ಮೇಲೆ ನಿರಂತರ ಜಾಗರೂಕತೆಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ತಿಳಿಸಿದೆ.

ಭಾರತದಲ್ಲಿ ಕೋವಿಡ್ ಪರಿಸ್ಥಿತಿಯು ನಿಯಂತ್ರಣದಲ್ಲಿದೆ. ಸದ್ಯಕ್ಕೆ 1,828 ಪ್ರಕರಣಗಳಿದ್ದು, ಇತ್ತೀಚೆಗೆ ಕೊರೋನಾದ ಉಪತಳಿ ಜೆನ್.1 ಪತ್ತೆಯಾಗಿರುವ ಕೇರಳದಲ್ಲಿ ಒಂದು ಸಾವು ಕೂಡ ದಾಖಲಾಗಿದೆ. ಮುಂಬರುವ ಹಬ್ಬದ ಋತುವನ್ನು ಉಲ್ಲೇಖಿಸಿರುವ ಕೇಂದ್ರ ಸರ್ಕಾರವು, ಉಸಿರಾಟದ ನೈರ್ಮಲ್ಯವನ್ನು ಅನುಸರಿಸುವ ಮೂಲಕ ರೋಗಗಳ ಹರಡುವಿಕೆಯ ಅಪಾಯವನ್ನು ಕಡಿಮೆ ಮಾಡಲು ಅಗತ್ಯವಿರುವ ಸಾರ್ವಜನಿಕ ಆರೋಗ್ಯ ಕ್ರಮಗಳು ಮತ್ತು ಇತರ ವ್ಯವಸ್ಥೆಗಳನ್ನು ಕೈಗೊಳ್ಳುವ ಅಗತ್ಯ ಎಂದು ಹೇಳಿದೆ.

ಎಲ್ಲಾ ಆರೋಗ್ಯ ಸೌಲಭ್ಯಗಳಲ್ಲಿ ನಿಯಮಿತವಾಗಿ ಜಿಲ್ಲಾವಾರು ಇನ್‌ಫ್ಲುಯೆಂಜಾ ತರಹದ ಅನಾರೋಗ್ಯ ಮತ್ತು ತೀವ್ರತರವಾದ ಉಸಿರಾಟದ ಕಾಯಿಲೆ ಪ್ರಕರಣಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಆ ಬಗ್ಗೆ ಕೇಂದ್ರ ಸರ್ಕಾರಕ್ಕೆ ವರದಿ ಮಾಡಲು ರಾಜ್ಯಗಳಿಗೆ ಸೂಚಿಸಲಾಗಿದೆ.

ಈ ಸುದ್ದಿಯನ್ನೂ ಓದಿ: Nobel Prize 2023: ಕೋವಿಡ್ ಲಸಿಕೆ ಅಭಿವೃದ್ಧಿಗೆ ಕಾರಣರಾದ ಇಬ್ಬರಿಗೆ ವೈದ್ಯಕೀಯ ನೊಬೆಲ್ ಅವಾರ್ಡ್!

ಉಸಿರಾಟದ ಕಾಯಿಲೆಗಳ ಉಲ್ಬಣ ಮತ್ತು ಹೊಸ ಜೆನ್.1 ಕೋವಿಡ್ ಹಿನ್ನೆಲೆಯಲ್ಲಿ, ವಿಶ್ವ ಆರೋಗ್ಯ ಸಂಸ್ಥೆಯು ವೈರಸ್ ವಿಕಸನಗೊಳ್ಳುತ್ತಿದೆ ಮತ್ತು ಬದಲಾಗುತ್ತಿದೆ. ಇದಕ್ಕೆ ಬಲವಾದ ಕಣ್ಗಾವಲು ಮತ್ತು ಅನುಕ್ರಮ ಹಂಚಿಕೆಯನ್ನು ಮುಂದುವರಿಸಲು ಸದಸ್ಯ ರಾಷ್ಟ್ರಗಳನ್ನು ಒತ್ತಾಯಿಸಿದೆ ಎಂದು ತಿಳಿದು ಬಂದಿದೆ.

ಹೆಚ್ಚಿನ ಸಂಖ್ಯೆಯ ಆರ್‌ಟಿ-ಪಿಸಿಆರ್ ಪರೀಕ್ಷೆಗಳನ್ನು ಖಚಿತಪಡಿಸಿಕೊಳ್ಳಬೇಕು. ಜೀನೋಮ್ ಅನುಕ್ರಮಕ್ಕಾಗಿ ಪಾಸಿಟಿವ್ ಮಾದರಿಗಳನ್ನು ಭಾರತೀಯ ಸಾರ್ಸ್ ಕೋವ್-2 ಜೀನೋಮಿಕ್ಸ್ ಕನ್ಸೋರ್ಟಿಯಮ್ (INSACOG) ಪ್ರಯೋಗಾಲಯಗಳಿಗೆ ಕಳುಹಿಸಬೇಕು. ಇದರಿಂದಾಗಿ ದೇಶದಲ್ಲಿ ಹೊಸ ರೂಪಾಂತರಗಳನ್ನು ಸಮಯೋಚಿತವಾಗಿ ಪತ್ತೆಹಚ್ಚಲು ಸಾಧ್ಯವಾಗುತ್ತದೆ ಎಂದು ಕೇಂದ್ರ ಸರ್ಕಾರಕ್ಕೆ ತಿಳಿಸಿದರು.

ಈ ಸುದ್ದಿಗೆ ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮಾಡಿ ತಿಳಿಸಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Super Food For Kids: ನಿಮ್ಮ ಮಕ್ಕಳು ಜಾಣರಾಗಿ ಹೆಚ್ಚು ಅಂಕ ಗಳಿಸಬೇಕೆ? ಈ ಆಹಾರಗಳನ್ನು ಕೊಡಿ

ಮಕ್ಕಳಿಗೆ ಹೆಚ್ಚಿನ ಪೋಷಕಾಂಶಗಳ ಅಗತ್ಯವಿರುತ್ತದೆ. ಹೀಗಾಗಿ ಅವರ ನಿತ್ಯದ ಆಹಾರದಲ್ಲಿ ಕೆಲವೊಂದು ಪದಾರ್ಥಗಳು ಇರಲೇಬೇಕು. ಇದು ಅವರ ದೇಹಾರೋಗ್ಯ ಮಾತ್ರವಲ್ಲ ಮೆದುಳಿನ ಆರೋಗ್ಯಕ್ಕೂ ಬಹಳ ಒಳ್ಳೆಯದು. ಅಂತಹ ಆಹಾರ ಪದಾರ್ಥಗಳು (Super Food For Kids) ಯಾವುದು ಗೊತ್ತೇ? ಇಲ್ಲಿದೆ ಪೋಷಕರಿಗೆ ಉಪಯುಕ್ತ ಮಾಹಿತಿ.

VISTARANEWS.COM


on

By

Super Food For Kids
Koo

ನೆನಪಿನ ಶಕ್ತಿ (memory), ಏಕಾಗ್ರತೆ (concentration) ಮತ್ತು ಮೆದುಳಿನ ಕಾರ್ಯವನ್ನು (brain function) ಸುಧಾರಿಸುವ ಪ್ರಮುಖ ಅಂಶಗಳಲ್ಲಿ ಒಂದಾಗಿರುವುದರಿಂದ ಮಕ್ಕಳಿಗೆ (childrens) ಸರಿಯಾದ ಆಹಾರವನ್ನು (Super Food For Kids) ಆಯ್ಕೆ ಮಾಡುವುದು ಬಹಳ ಮುಖ್ಯ. ಮಕ್ಕಳು ಮೆದುಳು ಉತ್ತೇಜಕವಾಗಿ ಕಾರ್ಯನಿರ್ವಹಿಸುವ ಪೌಷ್ಟಿಕ ಆಹಾರಗಳನ್ನು (nutritious foods) ಸೇವಿಸಬೇಕು. ಮಗುವಿನ ಮೆದುಳನ್ನು ಶಕ್ತಿಯುತವಾಗಿ ಮತ್ತು ಚುರುಕಾಗಿಸಬಲ್ಲ ಕೆಲವು ಆಹಾರ ಪದಾರ್ಥಗಳು ಹೀಗಿವೆ.


ಹಾಲು

ಹೆಚ್ಚಿನ ಮಕ್ಕಳು ಹಾಲನ್ನು ಕುಡಿಯಲು ಇಷ್ಟಪಡುವುದಿಲ್ಲ. ಆದರೆ ಇದು ಮಗುವಿನ ಮೆದುಳನ್ನು ಚುರುಕುಗೊಳಿಸುವ ಅತ್ಯಂತ ಪ್ರಮುಖ ಆಹಾರ ಪದಾರ್ಥವಾಗಿದೆ. ಹಾಲಿನಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ, ವಿಟಮಿನ್ ಡಿ ಮತ್ತು ಪ್ರೊಟೀನ್ ಇದ್ದು ಇದು ಮಗುವಿನ ಮೆದುಳಿನ ಕಾರ್ಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.


ಮೊಟ್ಟೆ

ಮೊಟ್ಟೆಗಳಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಡಿ ಮತ್ತು ಪ್ರೊಟೀನ್ ಇದೆ. ಇದು ನಮ್ಮ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಮಗುವಿನ ಮೆದುಳನ್ನು ಆರೋಗ್ಯಕರವಾಗಿ ಮತ್ತು ತೀಕ್ಷ್ಣವಾಗಿಡುವಲ್ಲಿ ಮೊಟ್ಟೆಗಳು ತುಂಬಾ ಪರಿಣಾಮಕಾರಿಯಾಗಿರುವುದರಿಂದ ದೈನಂದಿನ ಆಹಾರದಲ್ಲಿ ಮೊಟ್ಟೆಗಳನ್ನು ಅಳವಡಿಸಿಕೊಳ್ಳಬೇಕು. ಮೊಟ್ಟೆಗಳಲ್ಲಿ ಇರುವ ಕೋಲೀನ್ ಮಕ್ಕಳ ಜ್ಞಾಪಕಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.


ಗೋಡಂಬಿ

ಹೆಚ್ಚಿನ ಪ್ರಮಾಣದಲ್ಲಿ ಪ್ರೋಟೀನ್, ವಿಟಮಿನ್‌ ಮತ್ತು ಖನಿಜಗಳನ್ನು ಒಳಗೊಂಡಿರುವ ಕಾರಣ ವಯಸ್ಸಿನ ಹೊರತಾಗಿಯೂ ಗೋಡಂಬಿ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಮಗುವಿನ ಮೆದುಳನ್ನು ಆರೋಗ್ಯವಾಗಿಡಲು ಅವರ ದೈನಂದಿನ ಆಹಾರದಲ್ಲಿ ಗೋಡಂಬಿಯನ್ನು ಸೇರಿಸಲು ಪ್ರಯತ್ನಿಸಿ.


ಧಾನ್ಯಗಳು

ಧಾನ್ಯಗಳು ಮಕ್ಕಳಿಗೆ ಪ್ರೋಟೀನ್, ವಿಟಮಿನ್ ಮತ್ತು ಖನಿಜಗಳ ಉತ್ತಮ ಮೂಲವಾಗಿದೆ. ಕಿಡ್ನಿ ಮತ್ತು ಪಿಂಟೋ ಧಾನ್ಯಗಳು ಯಾವುದೇ ರೀತಿಯ ಧಾನ್ಯಗಳು ಹೆಚ್ಚು ಒಮೆಗಾ 3 ಅನ್ನು ಹೊಂದಿರುತ್ತದೆ. ಧಾನ್ಯಗಳು ಅನ್ನು ಸಲಾಡ್‌ನೊಂದಿಗೆ ಬೆರೆಸಿ ಅಥವಾ ಕರಿ ಮಾಡುವ ಮೂಲಕ ಬಡಿಸಬಹುದು. ಧಾನ್ಯಗಳು ಜ್ಞಾಪಕ ಶಕ್ತಿ ಹೆಚ್ಚಿಸಲು ಮತ್ತು ಮೆದುಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Benefits Of Cherries: ಚೆರ್ರಿ ಹಣ್ಣು ರುಚಿಗಷ್ಟೇ ಅಲ್ಲ, ಉತ್ತಮ ಆರೋಗ್ಯಕ್ಕೂ ಹಿತಕರ!


ಮೀನು

ಮಕ್ಕಳಿಗೆ ಪ್ರತಿದಿನ ಮೀನನ್ನು ಬಡಿಸಲು ಪ್ರಯತ್ನಿಸಿ. ಯಾಕೆಂದರೆ ಇದು ಆರೋಗ್ಯದ ಒಟ್ಟಾರೆ ಬೆಳವಣಿಗೆಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಮೀನಿನಲ್ಲಿ ಹೆಚ್ಚಿನ ಪ್ರಮಾಣದ ಒಮೆಗಾ 3 ಇದ್ದು ಇದು ಜೀವಕೋಶಗಳ ನಿರ್ಮಾಣಕ್ಕೆ ಸಹಾಯ ಮಾಡುತ್ತದೆ.


ತರಕಾರಿಗಳು

ತರಕಾರಿಗಳು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಮೆದುಳಿನ ಕೋಶಗಳನ್ನು ಆರೋಗ್ಯಕರವಾಗಿಡಲು ತರಕಾರಿಗಳು ಸಹಾಯ ಮಾಡುತ್ತದೆ. ಟೊಮ್ಯಾಟೊ, ಸಿಹಿ ಆಲೂಗಡ್ಡೆ, ಕುಂಬಳಕಾಯಿ, ಕ್ಯಾರೆಟ್ ಮತ್ತು ಪಾಲಕ್ ಮೊದಲಾದ ತರಕಾರಿಗಳನ್ನು ಮಗುವಿನ ನಿಯಮಿತ ಆಹಾರದಲ್ಲಿ ಸೇರಿಸಬೇಕು.

Continue Reading

ಆರೋಗ್ಯ

Lotus Seeds Benefits: ತಾವರೆ ಬೀಜಗಳನ್ನು ಸೇವಿಸಿ; ಇದು ರುಚಿಗೂ ಒಳ್ಳೆಯದು, ಹೃದಯಕ್ಕೂ ಒಳ್ಳೆಯದು

ತಾವರೆ ಬೀಜ ಖೀರು, ಸ್ನ್ಯಾಕ್‌ ಸೇರಿದಂತೆ ಅನೇಕ ಬಗೆಗಳಲ್ಲಿ ಇದು ಹೊಟ್ಟೆ ಸೇರುತ್ತದೆ. ಯಾವುದೇ ಹೇಳಿಕೊಳ್ಳುವ ರುಚಿ ಇರದ, ತಾವರೆಯ ಗಿಡದಿಂದ ಸಿಗುವ ಈ ಬೀಜಗಳು ಬಿಹಾರ ರಾಜ್ಯದಲ್ಲಿ ಹೇರಳವಾಗಿ ಸಿಗುತ್ತದೆ. ತನ್ನ ಪರಿಮಳ ಹಾಗೂ ರುಚಿಯಿಂದ ಇದು ಯಾರನ್ನೂ ಅಷ್ಟಾಗಿ ಆಕರ್ಷಿಸದಿದ್ದರೂ, ಇದು ತನ್ನ ಗುಣದಿಂದ ಇತ್ತೀಚೆಗೆ ಬಹುತೇಕರನ್ನು ಆಕರ್ಷಿಸಿರುವ ಆಹಾರ. ಪೊಟಾಶಿಯಂ, ಕಬ್ಬಿಣಾಂಶ, ಮೆಗ್ನೀಶಿಯಂ ಸೇರಿದಂತೆ ಹಲವು ಪೋಷಕಾಂಶಗಳು (Lotus Seeds Benefits) ಇದರಲ್ಲಿವೆ.

VISTARANEWS.COM


on

Lotus Seeds Benefits
Koo

ತಾವರೆ ಬೀಜಗಳು ಅಥವಾ ಮಖಾನಾ ಇಂದು ಬಹುತೇಕ ಎಲ್ಲರ ಮನೆಗಳಲ್ಲಿ ಸಾಮಾನ್ಯ. ಉತ್ತರ ಭಾರತವೂ ಸೇರಿದಂತೆ ಹಲವೆಡೆ ಇದು ಪ್ರಸಾದ ರೂಪದಲ್ಲಿ ದೇವಸ್ಥಾನಗಳಲ್ಲಿ ಸಿಗುತ್ತವೆ. ಇದರ ಹೊರತಾಗಿ, ದಕ್ಷಿಣ ಭಾರತದಲ್ಲಿ ಇದರ ಬಳಕೆ ಕಡಿಮೆಯಾದರೂ ಉತ್ತರ ಭಾರತದಲ್ಲಿ ಇದು ಸಾಮಾನ್ಯ ಆಹಾರ. ಇದರ ಖೀರು, ಸ್ನ್ಯಾಕ್‌ ಸೇರಿದಂತೆ ಅನೇಕ ಬಗೆಗಳಲ್ಲಿ ಇದು ಹೊಟ್ಟೆ ಸೇರುತ್ತದೆ. ಯಾವುದೇ ಹೇಳಿಕೊಳ್ಳುವ ರುಚಿ ಇರದ, ತಾವರೆಯ ಗಿಡದಿಂದ ಸಿಗುವ ಈ ಬೀಜಗಳು ಬಿಹಾರ ರಾಜ್ಯದಲ್ಲಿ ಹೇರಳವಾಗಿ ಸಿಗುತ್ತದೆ. ತನ್ನ ಪರಿಮಳ ಹಾಗೂ ರುಚಿಯಿಂದ ಇದು ಯಾರನ್ನೂ ಅಷ್ಟಾಗಿ ಆಕರ್ಷಿಸದಿದ್ದರೂ, ಇದು ತನ್ನ ಗುಣದಿಂದ ಇತ್ತೀಚೆಗೆ ಬಹುತೇಕರನ್ನು ಆಕರ್ಷಿಸಿರುವ ಆಹಾರ. ಪೊಟಾಶಿಯಂ, ಕಬ್ಬಿಣಾಂಶ, ಮೆಗ್ನೀಶಿಯಂ ಸೇರಿದಂತೆ ಹಲವು ಪೋಷಕಾಂಶಗಳು ಇದರಲ್ಲಿವೆ. ಮುಖ್ಯವಾಗಿ ತೂಕ ಇಳಿಸುವ ಮಂದಿಯನ್ನು ಆಕರ್ಷಿಸಿರುವ ಈ ಬೀಜದ ಲಾಭಗಳೇನು (Lotus Seeds Benefits) ಎಂಬುದನ್ನು ನೋಡೋಣ. ಮಖಾನ ಅಥವಾ ಈ ತಾವರೆಯ ಬೀಜದಲ್ಲಿ ಎಲ್ಲವೂ ಇದೆ. ಪೋಷಕಾಂಶಗಳ ಮಟ್ಟಿಗೆ ಹೇಳಿವುದಾದರೆ ಇದು ಚಿನ್ನ. ಇದರಲ್ಲಿ ನಮ್ಮ ದೇಹಕ್ಕೆ ಬೇಕಾದ ಖನಿಜಾಂಶಗಳೂ, ಪ್ರೊಟೀನ್‌, ಕಾರ್ಬೋಹೈಡ್ರೇಟ್‌, ಒಳ್ಳೆಯ ಕೊಬ್ಬು ಸೇರಿದಂತೆ ಎಲ್ಲವೂ ಇದೆ. ಸಕ್ಕರೆ ಇಲ್ಲ. ನಾರಿನಂಶವಿದ್ದು, ಜೀರ್ಣಕ್ರಿಯೆಗೆ ಅತ್ಯಂತ ಒಳ್ಳೆಯದು.

Masala Fox Nuts Weight Loss Snacks

ಅಧಿಕ ಪೋಷಕಾಂಶ

ತೂಕ ಇಳಿಸುವ ಮಂದಿಗೆ ಇದರಲ್ಲಿರುವ ಖುಷಿ ಸುದ್ದಿ ಎಂದರೆ ಇದು ಅತ್ಯಂತ ಕಡಿಮೆ ಕ್ಯಾಲರಿ ಹೊಂದಿದ ಆಹಾರಗಳಲ್ಲಿ ಒಂದು. ಹಾಗಂತ ಪೋಷಕಾಂಶಗಳ ವಿಷಯದಲ್ಲಿ ಯಾವುದೇ ರಾಜಿ ಇದು ಮಾಡಿಕೊಳ್ಳುವುದಿಲ್ಲ. ಹಸಿವಾದಾಗ ತಿನ್ನಬಹುದಾದ ಕಡಿಮೆ ಕ್ಯಾಲರಿಯ ಆಹಾರವಿದು. ಸ್ವಲ್ಪ ಮಸಾಲಾದ ಜೊತೆಗೆ ಹಗುರವಾಗಿ ಹುರಿದು ತಿಂದರೆ ರುಚಿಯಾದ ಆಹಾರವೂ ಹೌದು. ಸ್ವಲ್ಪವೇ ಸ್ವಲ್ಪ ತಿಂದರೂ ಹೊಟ್ಟೆ ತುಂಬಿರುವ ಭಾವವನ್ನು ಇದು ನೀಡುತ್ತದೆ.

ನಾರಿನಂಶ ಹೇರಳ

ಇದು ನಾರಿನಂಶದಿಂದ ಸಮೃದ್ಧವಾಗಿರುವ ಆಹಾರವಾದ್ದರಿಂದ ಜೀರ್ಣಕ್ರಿಯೆಗೆ ಅತ್ಯಂತ ಒಳ್ಳೆಯದು. ಹುರಿದಾಗ ಕ್ರಂಚೀಯಾಗಿ ಅತ್ಯಂತ ರುಚಿಯಾಗಿ ಇರುತ್ತದೆ. ಮಲಬದ್ಧತೆ ಸೇರಿದಂತೆ ಯಾವ ಸಮಸ್ಯೆಗಳೂ ಇದರ ಹತ್ತಿರ ಸುಳಿಯದು.

Skin Care

ಚರ್ಮದ ಆರೋಗ್ಯಕ್ಕೆ ಸೂಕ್ತ

ಮಖಾನಾದಲ್ಲಿ ಆಂಟಿ ಆಕ್ಸಿಡೆಂಟ್‌ ಗುಣಗಳಿದ್ದು, ಇದು ಆಂಟಿ ಏಜಿಂಗ್‌ ಕೂಡಾ ಹೌದು. ಫಿನಾಲಿಕ್‌ ಆಸಿಡ್‌ ಹಾಗೂ ಫ್ಲೇವನಾಯ್ಡ್‌ಗಳಿರುವ ಆಹಾರಗಳು ಫ್ರೀ ರ್ಯಾಡಿಕಲ್‌ಗಳ ವಿರುದ್ಧ ಹೋರಾಡುತ್ತವೆ. ಈ ಗುಣ ಮಖಾನಾದಲ್ಲಿರುವುದರಿಂದ, ನಿತ್ಯವೂ ಸೇವನೆ ಮಾಡುವುದರಿಂದ ಇದು ಚರ್ಮ ಬಹುಬೇಗನೆ ಸುಕ್ಕಾಗುವುದನ್ನು ತಡೆಯುತ್ತದೆ.

Heart Health Fish Benefits

ಹೃದಯಸ್ನೇಹಿ

ಮಖಾನಾ ಹೃದಯಸ್ನೇಹಿ ಕೂಡಾ ಹೌದು. ಇದರಲ್ಲಿರುವ ಒಳ್ಳೆಯ ಕೊಬ್ಬು ಹೃದಯಕ್ಕೆ ಒಳ್ಳೆಯದನ್ನೇ ಮಾಡುತ್ತದೆ. ಇದರಲ್ಲಿ ಮೆಗ್ನೀಶಿಯಂ ಅಧಿಕವಾಗಿದ್ದು ಕಡಿಮೆ ಕೊಲೆಸ್ಟೆರಾಲ್‌ ಇರುವುದರಿಂದ ಹೃದಯಕ್ಕೆ ಒಳ್ಳೆಯದು.

ಇದನ್ನೂ ಓದಿ: Benefits Of Cherries: ಚೆರ್ರಿ ಹಣ್ಣು ರುಚಿಗಷ್ಟೇ ಅಲ್ಲ, ಉತ್ತಮ ಆರೋಗ್ಯಕ್ಕೂ ಹಿತಕರ!

ಮಧುಮೇಹಿಗಳಿಗೆ ಸೂಕ್ತ

ಮಧುಮೇಹಿಗಳಿಗೂ ಇದು ಒಳ್ಳೆಯದು. ಇದರ ನಿತ್ಯ ಸೇವನೆಯಿಂದ ಮಧುಮೇಹಕ್ಕೆ ಏನೂ ತೊಂದರೆಯಾಗದು ಹಾಗೂ ಇದರಲ್ಲಿರುವ ಪೋಷಕಾಂಶಗಳು ಮಧುಮೇಹವನ್ನು ದೂರ ಇರಿಸುವಲ್ಲಿ ಸಹಾಯವನ್ನೇ ಮಾಡುತ್ತದೆ.

Continue Reading

ಆರೋಗ್ಯ

Whitening Toothpaste: ವೈಟ್ನಿಂಗ್‌ ಪೇಸ್ಟ್‌ಗಳಿಂದ ಹಲ್ಲುಗಳಿಗೆ ಹಾನಿ ಆಗುತ್ತಾ?

ಹಲ್ಲುಗಳು ಬಣ್ಣಗೆಡದಂತೆ ಕಾಪಾಡಿಕೊಳ್ಳಲು ಕೆಲವರು ಬಿಳಿಯಾಗಿಸುವ ಟೂತ್‌ಪೇಸ್ಟ್‌ ಉಪಯೋಗಿಸುತ್ತಾರೆ. ಆದರೆ ಅತಿಯಾಗಿ ವೈಟ್ನಿಂಗ್‌ ಪೇಸ್ಟ್‌ಗಳನ್ನು ಉಪಯೋಗಿಸಿದರೆ ಅದೇ ಸಮಸ್ಯೆಗಳನ್ನು ಸೃಷ್ಟಿಸಬಹುದು. ಹಾಗಾದರೆ ವೈಟ್ನಿಂಗ್‌ ಟೂತ್‌ಪೇಸ್ಟ್‌ಗಳಿಂದ (Whitening Toothpaste) ಹಲ್ಲುಗಳಿಗೆ ಹಾನಿಯಾಗುತ್ತದೆಯೇ? ಇಲ್ಲಿದೆ ಹೆಚ್ಚಿನ ಮಾಹಿತಿ.

VISTARANEWS.COM


on

Whitening Toothpaste
Koo

ನಿಮ್ಮಿಷ್ಟದ ಯಾವುದೋ ಆಹಾರ ತಿಂದಿದ್ದೀರಿ. ಕೆಲ ಸಮಯದ ನಂತರ ನೋಡಿದರೆ ನಿಮ್ಮ ಹಲ್ಲುಗಳು ಎಂದಿನಷ್ಟು ಬೆಳ್ಳಗಿಲ್ಲದೆ, ನೀವು ಸೇವಿಸಿದ ಆಹಾರದ ಬಣ್ಣವನ್ನು ಹೊತ್ತು ನಿಂತಂತೆ ಕಾಣುತ್ತಿವೆಯೇ? ಇದರಲ್ಲಿ ಅಚ್ಚರಿಯೇನಿಲ್ಲ. ಚಹಾ, ಕಾಫಿ, ಕೆಂಪು ವೈನ್‌, ಕೆಲವು ಬೆರ್ರಿಗಳು, ಫ್ರೂಟ್‌ ಜ್ಯೂಸ್‌ಗಳಂಥವು ಕೆಲವೊಮ್ಮೆ ಹಲ್ಲಿನ ಬಣ್ಣಗೆಡಿಸುತ್ತವೆ. (ಗುಟ್ಕಾ ತಿನ್ನುವವರು ಅಥವಾ ಧೂಮಪಾನಿಗಳಾದರಂತೂ ಹಲ್ಲುಗಳ ಬಣ್ಣ ಹಾಳಾಗುವುದು ನಿಶ್ಚಿತ) ನಿಯಮಿತವಾಗಿ ದಂತ ವೈದ್ಯರಲ್ಲಿ ಹೋಗಿ ಹಲ್ಲುಗಳನ್ನು ಶುಚಿ ಮಾಡಿಸುವಾಗ ಅದಕ್ಕೆ ಬಿಳಿ ಬಣ್ಣವನ್ನೂ ವೈದ್ಯರು ಬರಿಸಿಕೊಡುವುದು ಮಾಮೂಲಿ. ಕ್ಲಿನಿಕ್‌ಗಳಲ್ಲಿ ಮಾಡಿಸಿಕೊಳ್ಳುವ ಇಂಥ ಚಿಕಿತ್ಸೆಗಳು ಹಲ್ಲುಗಳ ಆರೋಗ್ಯ ಕಾಪಾಡಿಕೊಳ್ಳಲು ನೆರವಾಗುತ್ತವೆ. ಇದಲ್ಲದೆ, ಹಲ್ಲುಗಳು ಬಣ್ಣಗೆಡದಂತೆ ಕಾಪಾಡಿಕೊಳ್ಳಲು ಕೆಲವರು ಬಿಳಿಯಾಗಿಸುವ ಟೂತ್‌ಪೇಸ್ಟ್‌ ಸಹ ಉಪಯೋಗಿಸುತ್ತಾರೆ. ವೈಟ್ನಿಂಗ್‌ ಪೇಸ್ಟ್‌ಗಳನ್ನು ಉಪಯೋಗಿಸುವುದು ಸಹ ಹಲ್ಲುಗಳನ್ನು ಬಿಳಿಯಾಗಿಸುವಲ್ಲಿ ನೆರವಾಗುತ್ತದೆ. ಆದರೆ ಅತಿಯಾಗಿ ವೈಟ್ನಿಂಗ್‌ ಪೇಸ್ಟ್‌ಗಳನ್ನು ಉಪಯೋಗಿಸಿದರೆ ಹಲ್ಲುಗಳ ಸಂವೇದನೆ ಹೆಚ್ಚುತ್ತದೆ, ಬಿಸಿ ತಿಂದರೂ ಕಷ್ಟ, ತಣ್ಣಗಿರುವುದನ್ನೂ ಬಾಯಿಗೆ ಹಾಕಲಾಗದು, ಹಲ್ಲುಗಳಲ್ಲಿನ ʻಝುಂʼ ಅನುಭವ ಹೆಚ್ಚುತ್ತದೆ ಎಂದು ಕೆಲವರು ದೂರುವುದಿದೆ. ಹಾಗಾದರೆ ಹಲ್ಲುಗಳನ್ನು ಬಿಳಿಯಾಗಿಸಲೆಂದು ವೈಟ್ನಿಂಗ್‌ ಟೂತ್‌ಪೇಸ್ಟ್‌ಗಳನ್ನು ಉಪಯೋಗಿಸುವುದು ತಪ್ಪೇ? ಇದರಿಂದ (Whitening Toothpaste) ಹಲ್ಲುಗಳಿಗೆ ಹಾನಿಯಾಗುತ್ತದೆಯೇ?

Whitening Toothpaste image

ಏನು ಹಾಗೆಂದರೆ?

ಹಲ್ಲುಗಳ ಮೇಲ್ಮೈಯಲ್ಲಿರುವ ಕಲೆಗಳನ್ನು ತೆಗೆಯುವುದಕ್ಕೆಂದೇ ನಿರ್ಮಿಸಲಾದ ವಿಶೇಷ ಟೂತ್‌ಪೇಸ್ಟ್‌ಗಳಿವು. ಈ ಮೂಲಕ ಹಲ್ಲುಗಳ ನೈಸರ್ಗಿಕ ಬಿಳುಪನ್ನು ಕಾಪಾಡಿ, ದಂತಪಂಕ್ತಿಗಳ ಒಟ್ಟಾರೆ ಸೌಂದರ್ಯವನ್ನು ವೃದ್ಧಿಸುವುದಕ್ಕೆ ಇವುಗಳನ್ನು ಬಳಕೆ ಮಾಡಲಾಗುತ್ತದೆ. ಇದಕ್ಕಾಗಿ ಕೆಲವು ರಾಸಾಯನಿಕಗಳನ್ನು ಬಳಕೆ ಮಾಡಲಾಗುತ್ತದೆ. ಸಿಲಿಕಾ, ಕ್ಯಾಲ್ಸಿಯಂ ಕಾರ್ಬೊನೇಟ್‌ ಅಥವಾ ಬೇಕಿಂಗ್‌ ಸೋಡಾದಂಥ ಲಘುವಾದ ಅಪಘರ್ಷಕಗಳನ್ನು ಇವು ಹೊಂದಿರುತ್ತವೆ. ಈ ರಾಸಾಯನಿಕಗಳು ಸಾಮಾನ್ಯವಾಗಿ ಹಲ್ಲುಗಳ ಎನಾಮಲ್‌ಗೆ ಹಾನಿ ಮಾಡದೆಯೇ ಮೇಲ್ಮೈಯನ್ನು ಶುಚಿ ಮಾಡುತ್ತವೆ. ಹಲ್ಲುಗಳಿಗೆ ತಮ್ಮ ನೈಸರ್ಗಿಕ ಬಣ್ಣ, ಹೊಳಪು ಹೊಂದಲು ನೆರವಾಗುತ್ತವೆ.
ಆದರೆ, ಕೆಲವೊಂದು ಟೂತ್‌ಪೇಸ್ಟ್‌ಗಳಲ್ಲಿ ಬ್ಲೀಚಿಂಗ್‌ ಏಜೆಂಟ್‌ಗಳನ್ನು ಬಳಸಲಾಗುತ್ತದೆ. ಹೈಡ್ರೋಜೆನ್‌ ಪೆರಾಕ್ಸೈಡ್‌ ಅಥವಾ ಕಾರ್ಬಮೈಡ್‌ ಪೆರಾಕ್ಸೈಡ್‌ ಅಂಥವನ್ನು ಬಳಸಲಾಗುತ್ತದೆ. ಇವುಗಳು ಅಪಘರ್ಷಣ ಮಾಡದೆಯೇ, ರಾಸಾಯನಿಕ ಮಾರ್ಗದಿಂದ ಕಲೆಗಳನ್ನು ತೆಗೆಯುತ್ತವೆ. ಅಂದರೆ ಹಲ್ಲಿನ ಎನಾಮನ್‌ ಕವಚವನ್ನು ಭೇದಿಸಿ ಕೆಲಸ ಮಾಡುತ್ತವೆ. ಅದರಲ್ಲೂ ಪಪೈನ್‌, ಬ್ರೋಮೆಲಿನ್‌ನಂಥ ಕಿಣ್ವಗಳನ್ನು ಟೂತ್‌ಪೇಸ್ಟ್‌ಗಳಿಗೆ ಸೇರಿಸಿದರೆ ಹಲ್ಲುಗಳ ಮೇಲೆ ತೀವ್ರ ಪರಿಣಾಮವನ್ನೇ ಬೀರುತ್ತದೆ. ಇವೆಲ್ಲವುಗಳಿಂದ ಹಲ್ಲು ಸ್ವಚ್ಛವಾಗಿ, ಬೆಳ್ಳಗೆ ಹೊಳೆಯುವುದು ನಿಜವಾದರೂ, ನಿಯಮಿತವಾಗಿ ಉಪಯೋಗಿಸುತ್ತಿದ್ದರೆ ಹಲ್ಲುಗಳು ಸಂಕಷ್ಟಕ್ಕೆ ಈಡಾಗಬಹುದು. ವೈಟ್ನಿಂಗ್‌ ಟೂತ್‌ಪೇಸ್ಟ್‌ಗಳನ್ನು ಸದಾ ಬಳಸುವುದರಿಂದ ಆಗುವ ಅಡ್ಡ ಪರಿಣಾಮಗಳೇನು?

ಸಂವೇದನೆ ಹೆಚ್ಚು

ಈ ವೈಟ್ನಿಂಗ್‌ ಪೇಸ್ಟ್‌ಗಳಲ್ಲಿ ಅಪಘರ್ಷಕಗಳಿದ್ದರೂ, ಬ್ಲೀಚಿಂಗ್‌ ಅಂಶಗಳಿದ್ದರೂ- ಇವು ಹಲ್ಲುಗಳ ಸಂವೇದನೆಯನ್ನು ಹೆಚ್ಚಿಸುತ್ತವೆ. ಹಲ್ಲುಗಳಲ್ಲಿ ʻಝುಂʼ ಎನ್ನುವ ಅನುಭವ, ತಣ್ಣಗಿನ ವಸ್ತುಗಳನ್ನು ಕುಡಿದರೆ ಚುಚ್ಚಿದಂತಾಗುವುದು, ಬಿಸಿ ಕುಡಿಯುವುದಕ್ಕೂ ಕಷ್ಟವಾಗುವುದು- ಇಂಥ ಅನುಭವಗಳು ತೊಂದರೆ ಕೊಡುತ್ತವೆ.

Irritation of the gums

ಒಸಡುಗಳ ಕಿರಿಕಿರಿ

ಪೆರಾಕ್ಸೈಡ್‌ ಹೊಂದಿರುವ ಜೆಲ್‌ಗಳನ್ನು ಉಪಯೋಗಿಸಿದಾಗ ಒಸಡುಗಳಲ್ಲಿ ಕಿರಿಕಿರಿ ಉಂಟಾಗುವ ಸಾಧ್ಯತೆ ಹೆಚ್ಚು. ಈ ಜೆಲ್‌ಗಳನ್ನು ಉಪಯೋಗಿಸುವ ರೀತಿ ತಪ್ಪಾದರೂ ತೊಂದರೆಯಾಗಬಹುದು. ಇವುಗಳನ್ನು ಬಳಸುವುದಕ್ಕೆ ನೀಡಿರುವ ಮಾರ್ಗಸೂಚಿಯನ್ನು ಸರಿಯಾಗಿ ಅನುಸರಿಸಿದರೆ ಈ ಕಿರಿಕಿರಿಯನ್ನು ಕಡಿಮೆ ಮಾಡಬಹುದು. ಆದರೆ ಈಗಾಗಲೇ ಒಸಡುಗಳ ಸಮಸ್ಯೆ ಇದ್ದರೆ ಇಂಥವುಗಳ ಬಳಕೆ ಯೋಗ್ಯವಲ್ಲ.

ಇದನ್ನೂ ಓದಿ: Microplastics: ನಮಗೆ ಗೊತ್ತೇ ಆಗದಂತೆ ನಮ್ಮ ದೇಹ ಸೇರುತ್ತಿದೆ ಅಪಾಯಕಾರಿ ಪ್ಲಾಸ್ಟಿಕ್‌!

ಎನಾಮಲ್‌ ಹಾಳು

ಯಾವುದೇ ರೀತಿಯ ವೈಟ್ನರ್‌ಗಳನ್ನಾದರೂ ಸದಾ ಉಪಯೋಗಿಸುವುದಲ್ಲ. ಅಪರೂಪಕ್ಕೆ ಉಪಯೋಗಿಸುವುದಕ್ಕೆ ತೊಂದರೆಯಿಲ್ಲ. ಪದೇಪದೆ ಉಪಯೋಗಿಸುತ್ತಿದ್ದರೆ, ಹಲ್ಲುಗಳ ಮೇಲ್ಮೈ ಮಾತ್ರವಲ್ಲ ಕ್ರಮೇಣ ಎನಾಮಲ್‌ನ ರಕ್ಷಾ ಕವಚವೂ ಸವೆಯತೊಡಗುತ್ತದೆ. ಒಂದೊಮ್ಮೆ ಪದೇಪದೆ ಉಪಯೋಗಿಸುವ ಅನಿವಾರ್ಯತೆ ಇದೆಯೆಂದಾದರೆ, ಇದಕ್ಕಾಗಿ ಕಡಿಮೆ ತೀವ್ರತೆಯ ವೈಟ್ನರ್‌ಗಳನ್ನು ಆಯ್ದುಕೊಳ್ಳುವುದು ಸೂಕ್ತ.

Continue Reading

ಆರೋಗ್ಯ

New Cancer Drug: ಕ್ಯಾನ್ಸರ್‌ ಚಿಕಿತ್ಸೆಯಲ್ಲಿ ಕ್ರಾಂತಿ; ಹೊಸ ಔಷಧ ಪ್ರಯೋಗ ಶೇ. 100 ಯಶಸ್ವಿ!

ಕ್ಯಾನ್ಸರ್ ಗೆ ಹೊಸ ಔಷಧವೊಂದನ್ನು (New Cancer Drug) ಕಂಡುಹಿಡಿಯಲಾಗಿದ್ದು, ಇದು ಶೇಕಡ ನೂರರಷ್ಟು ಪರಿಣಾಮಕಾರಿಯಾಗಿದೆ. ಜೆಂಪರ್ಲಿ ದೋಸ್ಟರಲಿಮ್ಬ್-ಜಿಎಕ್ಸ್ಎಲ್ ವೈ ಹೆಸರಿನ ಕ್ಯಾನ್ಸರ್ ಔಷಧ ಗುದನಾಳದ ಕ್ಯಾನ್ಸರ್ ಹೊಂದಿದ್ದ 42 ರೋಗಿಗಳಿಗೆ ಪರೀಕ್ಷಿಸಲಾಗಿದ್ದು, ಎಲ್ಲರ ಕ್ಯಾನ್ಸರ್ ಗೆಡ್ಡೆಗಳನ್ನು ಅದು ಯಶಸ್ವಿಯಾಗಿ ತೆಗೆದುಹಾಕಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಇದು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಒಂದು ಅಭೂತಪೂರ್ವ ಯಶಸ್ಸು ಎಂದೇ ಹೇಳಬಹುದು.

VISTARANEWS.COM


on

By

New Cancer Drug
Koo

ಕ್ಯಾನ್ಸರ್‌ಗೆ (cancer) ಹೊಸ ಔಷಧವೊಂದನ್ನು (New Cancer Drug) ಕಂಡುಹಿಡಿಯಲಾಗಿದ್ದು, ಇದು ಶೇಕಡ ನೂರರಷ್ಟು ಪರಿಣಾಮಕಾರಿ ಎಂದು ವಿಜ್ಞಾನಿಗಳು (Scientists) ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜೆಂಪರ್ಲಿ ದೋಸ್ಟರಲಿಮ್ಬ್-ಜಿಎಕ್ಸ್ಎಲ್ ವೈ (Jemperli-dostarlimab-gxly) ಎಂಬ ಹೆಸರಿನ ಕ್ಯಾನ್ಸರ್ ಗುಣಪಡಿಸುವ ಔಷಧ ಗುದನಾಳದ ಕ್ಯಾನ್ಸರ್ (colorectal cancers) ಹೊಂದಿದ್ದ 42 ರೋಗಿಗಳಿಗೆ ಪರೀಕ್ಷಿಸಲಾಗಿದ್ದು, ಎಲ್ಲರ ಕ್ಯಾನ್ಸರ್ ಗಡ್ಡೆಗಳನ್ನು ಅದು ಯಶಸ್ವಿಯಾಗಿ ತೆಗೆದುಹಾಕಿದೆ ಎಂದು ಹೇಳಿದ್ದಾರೆ. ಎರಡನೇ ಹಂತದಲ್ಲಿ ಈ ಔಷಧ ಪ್ರಯೋಗ ಯಶಸ್ವಿಯಾಗಿದ್ದು, ಔಷಧವು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಗುದನಾಳದ ಕ್ಯಾನ್ಸರ್ ಅನ್ನು ಕೊಲೊರೆಕ್ಟಲ್ ಕ್ಯಾನ್ಸರ್ ಎಂದು ಕರೆಯಲಾಗುತ್ತದೆ. ಎರಡನೇ ಹಂತದ ಔಷಧ ಪ್ರಯೋಗದ ಬಳಿಕ ಮೊದಲ 24 ರೋಗಿಗಳಲ್ಲಿ ಉತ್ತಮ ಚೇತರಿಕೆ ಕಂಡು ಬಂದಿದೆ. ಸುಮಾರು ಎರಡು ವರ್ಷದ ಬಳಿಕ ಅವರಲ್ಲಿ ಯಾವುದೇ ಕ್ಯಾನ್ಸರ್ ಲಕ್ಷಣಗಳು ಕಂಡು ಬಂದಿಲ್ಲ.

ಮೆಮೋರಿಯಲ್ ಸ್ಲೋನ್ ಕೆಟರಿಂಗ್ ಕ್ಯಾನ್ಸರ್ ಸೆಂಟರ್‌ನ ಆಂಕೊಲಾಜಿಸ್ಟ್ ಡಾ. ಆಂಡ್ರಿಯಾ ಸೆರ್ಸೆಕ್ ಅವರ ಪ್ರಕಾರ Dostarlimab-gxly ಕ್ಯಾನ್ಸರ್ ಔಷಧವು ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡುವಲ್ಲಿ ಉತ್ತಮ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ಕ್ಯಾನ್ಸರ್ ರೋಗಿಗಳಿಗೆ ಕಿಮೊಥೆರಪಿ ಮತ್ತು ವಿಕಿರಣದ ಅಗತ್ಯ ಮೊದಲ ಹಂತದಲ್ಲಿ ನೀಡಲಾಗುತ್ತದೆ. ಇದು ಚಿಕಿತ್ಸಾ ಆಯ್ಕೆಯ ಭರವಸೆಯನ್ನು ನೀಡುತ್ತದೆ, ಇವೆರಡೂ ಜೀವನದ ಗುಣಮಟ್ಟದ ಮೇಲೆ ತೀವ್ರ ಪರಿಣಾಮ ಬೀರುತ್ತದೆ.

ಅಡ್ಡ ಪರಿಣಾಮ ಕಡಿಮೆ

ಕ್ಯಾನ್ಸರ್ ಶಸ್ತ್ರಚಿಕಿತ್ಸೆಗೆ ಒಳಗಾಗುವವರಿಗೆ ಸಾಮಾನ್ಯವಾಗಿ ಕರುಳು, ಮೂತ್ರ, ಲೈಂಗಿಕ ಕ್ರಿಯೆಯಲ್ಲಿ ತೊಂದರೆ, ಎರಡನೇ ಬಾರಿ ಮತ್ತೆ ಕ್ಯಾನ್ಸರ್ ಬರುವ ಅಪಾಯ ಮತ್ತು ಬಂಜೆತನವನ್ನು ಉಂಟು ಮಾಡುತ್ತದೆ. ಇದು ಜೀವನದ ಮೇಲೆ ತೀವ್ರ ಪರಿಣಾಮವನ್ನು ಬೀರುತ್ತದೆ. ಕ್ಯಾನ್ಸರ್ ಕೋಶಗಳ ಮೇಲೆ ದಾಳಿ ಮಾಡಲು ಪ್ರತಿರಕ್ಷಣಾ ವ್ಯವಸ್ಥೆಯನ್ನು ಉತ್ತೇಜಿಸಲು ಇಮ್ಯುನೊಥೆರಪಿಯನ್ನು ಬಳಸಿಕೊಂಡು ಈ ಔಷಧವು ಕಾರ್ಯನಿರ್ವಹಿಸುತ್ತದೆ. ಇದು ಸಾಂಪ್ರದಾಯಿಕ ಕಿಮೊಥೆರಪಿಗಿಂತ ಭಿನ್ನವಾಗಿದೆ. ಈ ಔಷಧವು ಅತ್ಯಂತ ಕಡಿಮೆ ಅಡ್ಡಪರಿಣಾಮಗಳನ್ನು ತೋರಿಸಿದೆ.

ಕ್ಯಾನ್ಸರ್ ಚಿಕಿತ್ಸೆಯಲ್ಲಿ ಕ್ರಾಂತಿ

ಕ್ಯಾನ್ಸರ್ ಚಿಕಿತ್ಸೆಯಲ್ಲಿ ಇದೊಂದು ಕ್ರಾಂತಿಯನ್ನು ಉಂಟು ಮಾಡಿದೆ. ಜೆಂಪರ್ಲಿ ದೋಸ್ಟರಲಿಮ್ಬ್-ಜಿಎಕ್ಸ್ಎಲ್ ವೈ ಔಷಧದ ಪರಿಣಾಮಗಳ ಕುರಿತು ತಿಳಿದುಕೊಳ್ಳಲು ವಿವಿಧ ಕೊಲೊರೆಕ್ಟಲ್ ಕ್ಯಾನ್ಸರ್ ಮೇಲೆ ಪ್ರಯೋಗಗಳನ್ನು ಮುಂದುವರಿಸಲಾಗುತ್ತದೆ.

ಎರಡನೇ ಹಂತದ ಯಶಸ್ವಿ ಪ್ರಯೋಗದ ಬಳಿಕ ಜೆಂಪರ್ಲಿ ದೋಸ್ಟರಲಿಮ್ಬ್-ಜಿಎಕ್ಸ್ಎಲ್ ವೈ ಅನ್ನು ಚಿಕಾಗೋದ 2024 ರ ಅಮೆರಿಕನ್ ಸೊಸೈಟಿ ಆಫ್ ಕ್ಲಿನಿಕಲ್ ಆಂಕೊಲಾಜಿ (ASCO) ವಾರ್ಷಿಕ ಸಭೆಯಲ್ಲಿ ಪ್ರಸ್ತುತಪಡಿಸಲಾಯಿತು.

ಕಳೆದ ವರ್ಷ ಎಂಡೊಮೆಟ್ರಿಯಲ್ ಕ್ಯಾನ್ಸರ್ ಗೆ ಕಿಮೊಥೆರಪಿ ಜೊತೆಗೆ ಪೂರಕ ಚಿಕಿತ್ಸೆಯಾಗಿ ಔಷಧೀಯ ಕಂಪೆನಿಯಾದ ಎಫ್ ಡಿಎಯಿಂದ ಔಷಧವನ್ನು ಅನುಮೋದಿಸಲಾಗಿದೆ. ಇದೀಗ ಔಷಧೀಯ ಕಂಪೆನಿ ಜಿಎಸ್ ಕೆ ಇತರ ರೀತಿಯ ಕೊಲೊರೆಕ್ಟಲ್ ಕ್ಯಾನ್ಸರ್‌ಗಳ ಅಧ್ಯಯನವನ್ನು ನಡೆಸುತ್ತಿದೆ.

ಔಷಧ ಪ್ರಯೋಗದ ಕುರಿತು ಪ್ರತಿಕ್ರಿಯಿಸಿರುವ ಜಿಎಸ್‌ಕೆ ಹಿರಿಯ ಉಪಾಧ್ಯಕ್ಷ ಅಬ್ದುಲ್ಲಾ ಹೆಶಮ್, 42 ರೋಗಿಗಳಲ್ಲಿ ಔಷಧ ಬೀರಿರುವ ಪರಿಣಾಮ ಅತ್ಯದ್ಭುತವಾಗಿದೆ. ಈ ಫಲಿತಾಂಶಗಳು ನಮ್ಮನ್ನು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಒಂದು ಹೆಜ್ಜೆ ಹತ್ತಿರಕ್ಕೆ ತಂದಿದೆ ಎಂದು ತಿಳಿಸಿದ್ದಾರೆ.

ಈ ಚಿಕಿತ್ಸೆಯ ಉದ್ದೇಶ ಮತ್ತು ವಿಧಾನಗಳ ಬಗ್ಗೆ ರೋಗಿಗಳು ಅರ್ಥ ಮಾಡಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಸ್ಥಳೀಯವಾಗಿ ಪ್ರಯೋಗಗಳನ್ನು ಮುಂದುವರಿಸಲಾಗಿದೆ. ಕೆಲವು ಕೊಲೊರೆಕ್ಟಲ್ ಕ್ಯಾನ್ಸರ್‌ಗಳಲ್ಲಿ dostarlimabgxly ಮೌಲ್ಯಮಾಪನ ಮಾಡಲು ನಾವು ಎದುರು ನೋಡುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಈ ಔಷಧದಿಂದ ಯಾವುದೇ ಅಡ್ಡ ಪರಿಣಾಮಗಳು ಇಲ್ಲ ಎಂದು ಜಿಎಸ್ ಕೆ ಹೇಳಿಕೆಯಲ್ಲಿ ಉಲ್ಲೇಖಿಸಿದೆ.

Continue Reading
Advertisement
Love Jihad
ಪ್ರಮುಖ ಸುದ್ದಿ10 mins ago

Love jihad : ಬಿಹಾರದ ಹಿಂದೂ ಯುವತಿಯನ್ನು ಉತ್ತರಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ ಆರಿಫ್; ಲವ್​ ಜಿಹಾದ್ ಆರೋಪ

Road Accident
ಕ್ರೈಂ11 mins ago

Road Accident : ಬೈಕ್‌ಗಳಿಗೆ ಗುದ್ದಿ ಸವಾರರನ್ನು ಕೊಂದು ಪರಾರಿಯಾಗಲು ಯತ್ನಿಸಿದ ಕಾರು ಚಾಲಕ

Election Results 2024
ದೇಶ20 mins ago

Election Results 2024: ರಾಮನೂರಿನಲ್ಲೇ ಬಿಜೆಪಿ ಹಿನ್ನಡೆ; ಹೀನಾಯ ಸೋಲಿಗೆ ಕಾರಣ ಏನು?

Sonu Nigam Hit Backs To Ayodhya People For Not Vote For BJP
ಬಾಲಿವುಡ್24 mins ago

Sonu Nigam: ಅಯೋಧ್ಯೆ ಜನರಿಗೆ ಛೀಮಾರಿ ಹಾಕಿದ್ರಾ ಸೋನು ನಿಗಮ್?

K Annamalai
ವೈರಲ್ ನ್ಯೂಸ್27 mins ago

K Annamalai: ಮೇಕೆಯ ತಲೆಗೆ ಅಣ್ಣಾಮಲೈ ಫೋಟೊ ಅಂಟಿಸಿ ಕಡಿದ ಡಿಎಂಕೆ ಕಾರ್ಯಕರ್ತರು!

hd kumaraswamy nitish kumar
ಪ್ರಮುಖ ಸುದ್ದಿ30 mins ago

HD Kumaraswamy: ಎಚ್‌ಡಿ ಕುಮಾರಸ್ವಾಮಿ ಕೇಳಿದ ಕೃಷಿ ಖಾತೆ ಮೇಲೇ ನಿತೀಶ್‌ ಕಣ್ಣು; ಯಾರಿಗೆ ಒಲಿಯತ್ತೆ ಇಲಾಖೆ?

Virat Kohli
ಕ್ರೀಡೆ34 mins ago

Virat Kohli: ‘ಕೊಹ್ಲಿ ಕೊ ಬೌಲಿಂಗ್​ ದೋ’ ನ್ಯೂಯಾರ್ಕ್​ ಸ್ಟೇಡಿಯಂನಲ್ಲಿ ಮೊಳಗಿದ ಅಭಿಮಾನಿಗಳ ಕೂಗು

Kannada Serials TRP arce Ninagaagi shri gowri
ಕಿರುತೆರೆ46 mins ago

Kannada Serials TRP: ಟಿಆರ್‌ಪಿ ರೇಸ್‌ನಲ್ಲಿ ʻಶ್ರೀಗೌರಿ,ʼ ʻನಿನಗಾಗಿʼ; ʻಅಮೃತಧಾರೆʼ ಜಿಗಿತ!

A rider standing on a bike and Young man and woman fight in road
ಕ್ರೈಂ56 mins ago

ಯುವಕನ ಕಾಲರ್ ಪಟ್ಟಿ ಹಿಡಿದು ಜಾಡಿಸಿ ಒದ್ದ ಯುವತಿ; ಎರಡು ಕೈ ಮೇಲೆತ್ತಿ ಬೈಕ್‌ ಸವಾರಿ, ಸವಾರನ ಹುಚ್ಚಾಟಕ್ಕೆ ಕಿಡಿ

Valmiki Corporation Scam
ಪ್ರಮುಖ ಸುದ್ದಿ1 hour ago

Valmiki Corporation Scam: ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮ; ಸಚಿವ ನಾಗೇಂದ್ರ ರಾಜೀನಾಮೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ4 hours ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ2 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ3 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ3 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ4 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು5 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ1 week ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ1 week ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 week ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ1 week ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

ಟ್ರೆಂಡಿಂಗ್‌