All-Weather Cricket Stadium: ಮಳೆ ಬಂದರೂ ಪಂದ್ಯ ನಿಲ್ಲದು; ಆಸೀಸ್​ನಲ್ಲಿ ನಿರ್ಮಾಣಗೊಳ್ಳಲಿದೆ ಹೊಸ ಕ್ರಿಕೆಟ್ ಸ್ಟೇಡಿಯಂ - Vistara News

ಕ್ರೀಡೆ

All-Weather Cricket Stadium: ಮಳೆ ಬಂದರೂ ಪಂದ್ಯ ನಿಲ್ಲದು; ಆಸೀಸ್​ನಲ್ಲಿ ನಿರ್ಮಾಣಗೊಳ್ಳಲಿದೆ ಹೊಸ ಕ್ರಿಕೆಟ್ ಸ್ಟೇಡಿಯಂ

All-Weather Cricket Stadium: ಸ್ಟೇಡಿಯಂನ ಮೇಲ್ಛಾವಣಿಗೆ ಗೋಲಾಕಾರದಲ್ಲಿ ಗ್ಲಾಸ್​ಗಳನ್ನು ನೀಡಲಾಗಿದೆ. ಹೀಗಾಗಿ ಮಳೆಯ ನಡುವೆಯೂ ಪಂದ್ಯವು ಸರಾಗವಾಗಿ ನಡೆಯಲಿದೆ. ಈ ಸ್ಟೇಡಿಯಂನಲ್ಲಿ 23,000-ಆಸನಗಳು ಇರಲಿದೆ.

VISTARANEWS.COM


on

All-Weather Cricket
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸಿಡ್ನಿ: ಮಳೆ ಬಂದರೂ ಕೂಡ ಪಂದ್ಯಗಳನ್ನು ಯಾವುದೇ ಅಡೆತಡೆ ಇಲ್ಲದೆ ಆಯೋಜಿಸಲು ಅನುಕೂಲವಾಗುವಂತಹ ಒಳಾಂಗಣ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಮಾಡುವ ಸಾಹಸಕ್ಕೆ ಆಸ್ಟ್ರೇಲಿಯಾ(Australia ) ಸರ್ಕಾರ ಕೈ ಹಾಕಿದೆ. ವಿಶ್ವದ ಮೊದಲ ಆಲ್-ವೆದರ್ ಕ್ರಿಕೆಟ್ ಸ್ಟೇಡಿಯಂ(All-Weather Cricket Stadium) ಇದಾಗಲಿದೆ.

ಈ ಸ್ಟೇಡಿಯಂನ ವಿನ್ಯಾಸಗಳ ಸಾಂಕೇತಿಕ ಫೋಟೊಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ಸ್ಟೇಡಿಯಂನ ಮೇಲ್ಛಾವಣಿಗೆ ಗೋಲಾಕಾರದಲ್ಲಿ ಗ್ಲಾಸ್​ಗಳನ್ನು ನೀಡಲಾಗಿದೆ. ಹೀಗಾಗಿ ಮಳೆಯ ನಡುವೆಯೂ ಪಂದ್ಯವು ಸರಾಗವಾಗಿ ನಡೆಯಲಿದೆ. ಈ ಸ್ಟೇಡಿಯಂನಲ್ಲಿ 23,000-ಆಸನಗಳು ಇರಲಿದ್ದು, ಕ್ರಿಕೆಟ್ ಪಂದ್ಯಗಳು ಇಲ್ಲದ ಸಮಯದಲ್ಲಿ ಇತರೆ ಕ್ರೀಡೆಗಳಿಗೂ ಬಳಸುವಂತಹ ವ್ಯವಸ್ಥೆಯನ್ನು ನಿರ್ಮಿಸಲಾಗಿದೆ ಎಂದು ತಿಳಿದುಬಂದಿದೆ.

ಈ ಸ್ಟೇಡಿಯಂ ನಿರ್ಮಾಣಕ್ಕೆ ತಗಲುವು ಅಂದಾಜು ವೆಚ್ಚ ಮತ್ತು ಯಾವಾಗ ಕಾಮಗಾರಿ ಶುರುವಾಗಲಿದೆ ಎನ್ನುವ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ. ಸದ್ಯ ಕಾಕ್ಸ್ ಆರ್ಕಿಟೆಕ್ಚರ್ ಸಿಇಒ ಅಲಿಸ್ಟೈರ್ ರಿಚರ್ಡ್‌ಸನ್ ಅವರು, ಈ ಕ್ರೀಡಾಂಗಣದ ವಿನ್ಯಾಸವು ಎಲ್ಲಾ ಸಮಯದಲ್ಲೂ ಕ್ರಿಕೆಟ್ ಆಡಲು ಅನುಕೂಲವಾಗುವಂತೆ ಮಾಡಲಾಗುವುದು, ವಿಶೇಷವಾಗಿ ಇದರ ಮೇಲ್ಛಾವಣಿಯು ಅತೀ ಎತ್ತರದಲ್ಲಿರಲಿದೆ ಎಂದು ಹೇಳಿದ್ದಾರೆ.


ಮೆಲ್ಬೋರ್ನ್​ನಲ್ಲಿ ಮೇಲ್ಛಾವಣಿ ಮುಚ್ಚುವಂತಹ ಟೆನಿಸ್​ ಕೋರ್ಟ್​​​ ಇದೆ. ಇದೀಗ ಕ್ರಿಕೆಟ್​ನಲ್ಲಿಯೂ ಇದೇ ರೀತಿಯ ಸ್ಟೇಡಿಯಂ ನಿರ್ಮಾಣಕ್ಕೆ ಆಸೀಸ್​ ಸರ್ಕಾರ ಮುಂದಾಗಿದೆ. ಆದರೆ ಈ ಸ್ಟೇಡಿಯಂ ಕ್ರಿಕೆಟ್​ ಆಡಲು ನೆರವಾಗಲಿದೆಯಾ ಎನ್ನುವುದು ಕ್ರಿಕೆಟ್​ ಅಭಿಮಾನಿಗಳ ಸಹಜ ಪ್ರಶ್ನೆಯಾಗಿದೆ. ಏಕೆಂದರೆ ಬ್ಯಾಟರ್​ಗಳು ಚೆಂಡನ್ನು ಎಷ್ಟು ಎತ್ತರಕ್ಕೆ ಹೊಡೆಯಬಲ್ಲರು ಎಂದು ಊಹಿಸಲು ಅಸಾಧ್ಯ. ಚೆಂಡು ಮೇಲ್ಛಾವಣಿಗೆ ಬಡಿಯುವ ಸಾಧ್ಯತೆಯೂ ಅಧಿಕವಾಗಿದೆ.

ಇದನ್ನೂ ಓದಿ Team India : ಭಾರತ ತಂಡಕ್ಕೆ ಸಿಕ್ಕಿದ 125 ಕೋಟಿ ರೂ. ಬಹುಮಾನದಲ್ಲಿ ಯಾರಿಗೆ ಎಷ್ಟು? ಮಾಹಿತಿ ಬಹಿರಂಗ

ಇತ್ತೀಚೆಗೆ ಹಿಮಾಚಲ ಪ್ರದೇಶ ಕ್ರಿಕೆಟ್‌ ಸಂಸ್ಥೆ (ಎಚ್‌ಪಿಸಿಎ)ಯ ಕ್ರೀಡಾಂಗಣದಲ್ಲಿ ಹೈಬ್ರಿಡ್‌ ಕ್ರಿಕೆಟ್‌ ಅಳವಡಿಸಲಾಗಿತ್ತು. ಇದು ಭಾರತದ ಮೊದಲ ಹೈಬ್ರಿಡ್‌ ಕ್ರಿಕೆಟ್‌ ಪಿಚ್‌ ಆಗಿದೆ. ನೆದರ್‌ಲೆಂಡ್ಸ್‌ ಮೂಲದ ಎಸ್‌ಐಎಸ್‌ ಸಂಸ್ಥೆಯು ಈ ಪಿಚ್‌ ಅಳವಡಿಕೆ ಮಾಡಿದ್ದು, ಶೇ.95ರಷ್ಟು ನೈಸರ್ಗಿಕ ಟರ್ಫ್‌ ಜತೆಗೆ ಶೇ.5ರಷ್ಟು ಸಿಂಥೆಟಿಕ್‌ ಫೈಬರನ್ನು ಈ ಪಿಚ್‌ ಒಳಗೊಂಡಿರಲಿದೆ. ಹೈಬ್ರಿಡ್‌ ಪಿಚ್‌ ಸಾಮಾನ್ಯ ಪಿಚ್‌ಗಿಂತ ಹೆಚ್ಚು ಸಮಯ ಬಳಕೆಗೆ ಯೋಗ್ಯವಾಗಿರಲಿದೆ. ಚೆಂಡಿನ ಬೌನ್ಸ್‌ನಲ್ಲಿ ಯಾವುದೇ ಏರುಪೇರು ಇರುವುದಿಲ್ಲ. ಪಿಚ್‌ ಮೇಲಿನ ತೇವಾಂಶವನ್ನು ಅಗತ್ಯ ಎನಿಸಿದಷ್ಟು ಮಟ್ಟಕ್ಕೆ ಕಾಯ್ದುಕೊಳ್ಳಬಹುದಾಗಿದೆ. ಇದರಿಂದಾಗಿ ಮೈದಾನ ಸಿಬ್ಬಂದಿಯ ಮೇಲಿನ ಒತ್ತಡ ಕಡಿಮೆಯಾಗಲಿದೆ. ಜತೆಗೆ ಆಟದ ಗುಣಮಟ್ಟವೂ ಹೆಚ್ಚಾಗಲಿದೆ. ಈಗಾಗಲೇ ಈ ಪಿಚ್​ಗಳು ಇಂಗ್ಲೆಂಡ್‌ನ ಐತಿಹಾಸಿಕ ಲಾರ್ಡ್ಸ್‌ ಹಾಗೂ ದಿ ಓವಲ್‌ ಕ್ರೀಡಾಂಗಣಗಳಲ್ಲಿ ಬಳಕೆಯಾಗುತ್ತಿದೆ.

ಈ ಪಿಚ್​ನಲ್ಲಿ ಸದ್ಯ ಐಪಿಎಲ್​ ಪಂದ್ಯಗಳು ನಡೆಯುವುದಿಲ್ಲ. ಕೇವಲ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ದೇಶೀಯ ಪಂದ್ಯಗಳು ಲಭ್ಯವಿಲ್ಲ. ಇತ್ತೀಚೆಗೆ ಟಿ20 ಹಾಗೂ ಏಕದಿನ ಪಂದ್ಯಗಳಿಗೆ ಹೈಬ್ರಿಡ್‌ ಪಿಚ್‌ಗಳ ಬಳಕೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಂಸ್ಥೆ (ಐಸಿಸಿ) ಒಪ್ಪಿಗೆ ನೀಡಿತ್ತು. ಹೈಬ್ರಿಡ್‌ ಪಿಚ್‌ಗಳ ಪರಿಚಯದಿಂದ ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಕ್ರಾಂತಿಯಾಗುವುದಂತು ನಿಜ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

IND vs SL : ಅಪರೂಪದ ದೃಶ್ಯ; ಎರಡೂ ಕೈಯಲ್ಲಿ ಬೌಲಿಂಗ್ ಮಾಡಿದ ಲಂಕಾದ ಬೌಲರ್​ ಕಮಿಂಡು ಮೆಂಡಿಸ್​!

IND vs SL: ಭಾರತೀಯ ಆರಂಭಿಕರ ಆಕ್ರಮಣಕಾರಿ ಬ್ಯಾಟಿಂಗ್ ಮತ್ತು ಫರ್ನಾಂಡೊ ಅವರ ಅದ್ಭುತ ಕ್ಯಾಚ್ ಹೊರತುಪಡಿಸಿ, ಎಲ್ಲರ ಗಮನ ಸೆಳೆದಿರುವುದು ಕಮಿಂಡು ಮೆಂಡಿಸ್ ಅವರ ಬೌಲಿಂಗ್. 2018ರಲ್ಲಿ ಅಂತಾರರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ 25 ವರ್ಷದ ಆಟಗಾರ, ಎಲ್ಲ ಸ್ವರೂಪದಲ್ಲಿ ಭಾರತದ ವಿರುದ್ಧ ತಮ್ಮ ಮೊದಲ ಪಂದ್ಯ ಆಡಿದರು. ತಮ್ಮ ವಿಶೇಷ ಸಾಮರ್ಥ್ಯವನ್ನು ತೋರಿಸಿದರು.

VISTARANEWS.COM


on

ind vs sl
Koo

ಪಲ್ಲೆಕೆಲೆ: ಭಾರತ ಹಾಗೂ ಶ್ರೀಲಂಕಾ (IND vs SL) ನಡುವಿನ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಲಂಕಾದ ಬೌಲರ್​ ಕಮಿಂಡು ಮೆಂಡಿಸ್​ ಅಪರೂಪದ ದೃಶ್ಯವನ್ನು ಕ್ರಿಕೆಟ್​ ಪ್ರೇಮಿಗಳಿಗೆ ತೋರಿಸಿದ್ದಾರೆ. ಅವರು ಭಾರತ ಬ್ಯಾಟರ್​ಗಳಾದ ಸೂರ್ಯಕುಮಾರ್ ಯಾದವ್ ಹಾಗೂ ರಿಷಭ್ ಪಂತ್ ವಿರುದ್ಧ ಎಡ ಹಾಗೂ ಬಲಗೈಯಲ್ಲಿ ಬೌಲಿಂಗ್​ ಮಾಡಿದ್ದಾರೆ. ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ನಾಯಕ ಚರಿತ್ ಅಸಲಂಕಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು. ಆತಿಥೇಯ ತಂಡದ ಬೌಲರ್​ಗಳು ತಮ್ಮ ತಂಡಕ್ಕೆ ಉತ್ತಮ ಆರಂಭವನ್ನು ನೀಡಲು ವಿಫಲವಾದರು. ಶುಬ್ಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ ಮೊದಲ ವಿಕೆಟ್​ಗೆ 50 + ಜೊತೆಯಾಟ ಆಡಿದರು. ನಂತರ ಅಸಿತಾ ಫರ್ನಾಂಡೊ ಅವರ ಅದ್ಭುತ ಕ್ಯಾಚ್ ಶ್ರೀಲಂಕಾಕ್ಕೆ ಮೊದಲ ಪ್ರಗತಿಯನ್ನು ನೀಡಿತ್ತು.

ಭಾರತೀಯ ಆರಂಭಿಕರ ಆಕ್ರಮಣಕಾರಿ ಬ್ಯಾಟಿಂಗ್ ಮತ್ತು ಫರ್ನಾಂಡೊ ಅವರ ಅದ್ಭುತ ಕ್ಯಾಚ್ ಹೊರತುಪಡಿಸಿ, ಎಲ್ಲರ ಗಮನ ಸೆಳೆದಿರುವುದು ಕಮಿಂಡು ಮೆಂಡಿಸ್ ಅವರ ಬೌಲಿಂಗ್. 2018ರಲ್ಲಿ ಅಂತಾರರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ 25 ವರ್ಷದ ಆಟಗಾರ, ಎಲ್ಲ ಸ್ವರೂಪದಲ್ಲಿ ಭಾರತದ ವಿರುದ್ಧ ತಮ್ಮ ಮೊದಲ ಪಂದ್ಯ ಆಡಿದರು. ತಮ್ಮ ವಿಶೇಷ ಸಾಮರ್ಥ್ಯವನ್ನು ತೋರಿಸಿದರು.

ಅವರನ್ನು ಹತ್ತನೇ ಓವರ್​ಗೆ ಬೌಲಿಂಗ್ ಮಾಡಲು ಕರೆಯಲಾಯಿತು. ಅವರು ಸೂರ್ಯಕುಮಾರ್ ಯಾದವ್ ವಿರುದ್ಧ ತಮ್ಮ ಎಡಗೈಯಿಂದ ಬೌಲಿಂಗ್ ಮಾಡಿ ಸ್ಪೆಲ್ ಅನ್ನು ಪ್ರಾರಂಭಿಸಿದರು. ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿದ ಸೂರ್ಯ, ಕಮಿಂಡು ಮೆಂಡಿಸ್​ಗೆ ಆಘಾತಕಾರಿ ಸ್ವಾಗತ ನೀಡಿದರು. ಎರಡನೇ ಎಸೆತದಲ್ಲಿ ಒಂದು ರನ್​ ಪಡೆದು ರಿಷಭ್ ಪಂತ್​ಗೆ ಸ್ಟ್ರೈಕ್ ಕೊಟ್ಟರು.

ಇದನ್ನೂ ಓದಿ: Team India Coach : ಕೋಚ್​​ ಗೌತಮ್ ಗಂಭೀರ್ ವೈಭವೀಕರಣ; ಮಾಜಿ ಆಟಗಾರನ ಆಕ್ಷೇಪ

ಭಾರತದ ಎಡಗೈ ವಿಕೆಟ್ ಕೀಪರ್-ಬ್ಯಾಟರ್​ ಸ್ಟ್ರೈಕ್ ತೆಗೆದುಕೊಂಡ ಕೂಡಲೇ, ಕಮಿಂಡು ಮೆಂಡಿಸ್ ತಮ್ಮ ಬಲಗೈಯಿಂದ ಆಫ್-ಬ್ರೇಕ್ ಎಸೆಯಲು ನಿರ್ಧರಿಸಿದರು. ಮೆಂಡಿಸ್ ತಮ್ಮ ಮೊದಲ ಓವರ್​ನಲ್ಲಿ ಯಾವುದೇ ವಿಕೆಟ್ ಪಡೆಯಲು ಸಾಧ್ಯವಾಗದಿದ್ದರೂ, ಮೊದಲ ಎಸೆತದಲ್ಲಿ ಬೌಂಡರಿ ಬಿಟ್ಟುಕೊಟ್ಟ ನಂತರ ಅವರು ಯಾವುದೇ ಬೌಂಡರಿ ಹೊಡೆಸಿಕೊಳ್ಳಲಿಲ್ಲ.

Continue Reading

ಪ್ರಮುಖ ಸುದ್ದಿ

Team India Coach : ಕೋಚ್​​ ಗೌತಮ್ ಗಂಭೀರ್ ವೈಭವೀಕರಣ; ಮಾಜಿ ಆಟಗಾರನ ಆಕ್ಷೇಪ

Team India Coach : ರಾಹುಲ್ ದ್ರಾವಿಡ್ ಅವರಿಂದ ಅಧಿಕಾರ ವಹಿಸಿಕೊಂಡ ಗಂಭೀರ್ ಅವರು ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ನೇಮಕಗೊಳ್ಳುವ ಮೊದಲು ದೊಡ್ಡ ಮಟ್ಟಿಗೆ ಚರ್ಚೆ ನಡೆದಿತ್ತು. ಇದೀಗ ಅವರು ಮಹತ್ವದ ಪಾತ್ರಕ್ಕೆ ಕಾಲಿಡುತ್ತಿರುವುದರಿಂದ ಅಭಿಮಾನಿಗಳು, ಆಟಗಾರರು ಮತ್ತು ಪ್ರಸಾರಕರು ತಮ್ಮ ನಿರೀಕ್ಷೆಗಳನ್ನು ವ್ಯಕ್ತಪಡಿಸಿದ್ದಾರೆ.

VISTARANEWS.COM


on

Team India Coach
Koo

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ (Team India Coach) ಆಗಿ ಗೌತಮ್ ಗಂಭೀರ್ (Gautam Gambhir) ತಮ್ಮ ಚೊಚ್ಚಲ ಪಂದ್ಯವನ್ನು ಆಡಿಸುತ್ತಿರುವ ನಡುವೆ ಅವರ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಗಳು ನಡೆದಿವೆ. ಇದನ್ನು ಮಾಜಿ ಕ್ರಿಕೆಟಿಗ ಮತ್ತು ವೀಕ್ಷಕವಿವರಣೆಗಾರ ಸಂಜಯ್ ಮಂಜ್ರೇಕರ್ (Sanjay Majrekar) ಆಕ್ಷೇಪಿಸಿದ್ದಾರೆ. ಈ ವೇಳೆ ಅವರು ಮಾಜಿ ಕೋಚ್​​ ದ್ರಾವಿಡ್​ ಬಗ್ಗೆಯೂ ಉಲ್ಲೇಖಿಸಿದ್ದಾರೆ. ಭಾರತ ತಂಡ ಮುಖ್ಯ. ಯಾರು ಕೋಚ್ ಎಂಬುದು ಮುಖ್ಯವಲ್ಲ ಎಂಬುದಾಗಿ ಹೇಳಿದ್ದಾರೆ.

ರಾಹುಲ್ ದ್ರಾವಿಡ್ ಅವರಿಂದ ಅಧಿಕಾರ ವಹಿಸಿಕೊಂಡ ಗಂಭೀರ್ ಅವರು ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ನೇಮಕಗೊಳ್ಳುವ ಮೊದಲು ದೊಡ್ಡ ಮಟ್ಟಿಗೆ ಚರ್ಚೆ ನಡೆದಿತ್ತು. ಇದೀಗ ಅವರು ಮಹತ್ವದ ಪಾತ್ರಕ್ಕೆ ಕಾಲಿಡುತ್ತಿರುವುದರಿಂದ ಅಭಿಮಾನಿಗಳು, ಆಟಗಾರರು ಮತ್ತು ಪ್ರಸಾರಕರು ತಮ್ಮ ನಿರೀಕ್ಷೆಗಳನ್ನು ವ್ಯಕ್ತಪಡಿಸಿದ್ದಾರೆ.

ವ್ಯಕ್ತಿಗಳು ಅಥವಾ ಹೊಸ ತರಬೇತುದಾರ ಗಂಭೀರ್ ಅವರಿಗಿಂತ ಹೆಚ್ಚಾಗಿ ಒಟ್ಟಾರೆಯಾಗಿ ಭಾರತೀಯ ಕ್ರಿಕೆಟ್ ತಂಡದ ಮೇಲೆ ಗಮನ ಹರಿಸಬೇಕು ಎಂದು ಮಂಜ್ರೇಕರ್​ ಹೇಳಿದ್ದಾರೆ. ಭಾರತೀಯ ಕ್ರಿಕೆಟ್​​ನ ಯಶಸ್ಸಿಗೆ ಕೋಚ್ ಸೇರಿದಂತೆ ಯಾವುದೇ ಒಬ್ಬ ವ್ಯಕ್ತಿ ಮಾತ್ರವಲ್ಲ, ತಂಡದ ಸಾಮೂಹಿಕ ಪ್ರಯತ್ನಗಳು ಕಾರಣ ಎಂದು ನುಡಿದಿದ್ದಾರೆ.

ಗಂಭೀರ್ ಎರಡು ಬಾರಿ ವಿಶ್ವಕಪ್ ವಿಜೇತ ಮತ್ತು ಭಾರತೀಯ ಕ್ರಿಕೆಟ್​​ನ ಪ್ರಮುಖ ವ್ಯಕ್ತಿಯಾಗಿದ್ದಾರೆ. ಆದರೆ ಕ್ರೀಡೆ ಯಶಸ್ವು ಮೂಲಭೂತವಾಗಿ ತಂಡದ ಸಾಮೂಹಿಕ ಪ್ರಯತ್ನವೇ ಹೊರತು ತರಬೇತುದಾರನಲ್ಲ ಎಂದು ಮಂಜ್ರೇಕರ್ ಹೇಳಿದ್ದಾರೆ. ಇತ್ತೀಚೆಗೆ ಐಸಿಸಿ ಟಿ 20 ವಿಶ್ವಕಪ್ 2024 ಗೆದ್ದ ದ್ರಾವಿಡ್ ಅವರನ್ನು ಗುರಿಯಾಗಿಸಿಕೊಂಡ ಸಂಜಯ್​, ಭಾರತದ ನಾಲ್ಕು ವಿಶ್ವಕಪ್ ಗೆಲುವುಗಳು ಪ್ರಯತ್ನದಿಂದ ಬಂದಿದೆಯೇ ಹೊರತು ತರಬೇತುದಾರರಿಂದಲ್ಲ ಎಂದು ಹೇಳಿದ್ದಾರೆ.

ಬಾರ್ಬಡೋಸ್​​ನಲ್ಲಿ ನಡೆದ ಟಿ 20 ವಿಶ್ವಕಪ್ 2024 ಪ್ರಶಸ್ತಿಯನ್ನು ಗೆಲ್ಲುವ ಮೂಲಕ ದ್ರಾವಿಡ್ ಭಾರತದ ಮುಖ್ಯ ಕೋಚ್ ಆಗಿ ತಮ್ಮ ಅಧಿಕಾರಾವಧಿಯನ್ನು ಉತ್ತಮವಾಗಿ ಮುಗಿಸಿದ್ದರು. ದ್ರಾವಿಡ್ ನಾಯಕತ್ವದಲ್ಲಿ ಭಾರತ ತಂಡ 2013ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್ ಹಾಗೂ ಏಕದಿನ ವಿಶ್ವಕಪ್ ಫೈನಲ್ ತಲುಪಿತ್ತು.

ಇದನ್ನೂ ಓದಿ: Joe Root : ಟೆಸ್ಟ್ ಇತಿಹಾಸದ ರನ್​ ಗಳಿಕೆಯ ದಾಖಲೆಯ ಪಟ್ಟಿಯಲ್ಲಿ ಲಾರಾ ಹಿಂದಿಕ್ಕಿದ ಜೋ ರೂಟ್

ಈ ಬಗ್ಗೆ ಹೇಳಿಕೆ ಕೊಟ್ಟಿರುವ ಸಂಜಯ್​, ಎಲ್ಲವೂ ತರಬೇತುದಾರನ ಕುರಿತ ಚರ್ಚೆ ಅಲ್ಲ. ನಾಲ್ಕು ವಿಶ್ವಕಪ್​​ ಗೆದ್ದ ಭಾರತೀಯ ಕ್ರಿಕೆಟ್ ಬಗ್ಗೆ ಮಾಡಬೇಕು ಎಂದು ಮಂಜ್ರೇಕರ್ ಹೇಳಿದ್ದಾರೆ. ಪ್ರತಿಯೊಬ್ಬರೂ ತಮ್ಮ ಗಮನವನ್ನು ವೈಯಕ್ತಿಕ ಹೆಸರಿನ ಬದಲಾಗಿ ಸಾಮೂಹಿಕ ತಂಡದ ಪ್ರದರ್ಶನಕ್ಕೆ ಬದಲಾಯಿಸಬೇಕೆಂದು ನುಡಿದರು.

1983 ರ ವಿಶ್ವಕಪ್ ಮತ್ತು 2007ರ ಟಿ 20 ವಿಶ್ವಕಪ್​​ ವೇಳೆ ಭಾರತಕ್ಕೆ ಕೋಚ್ ಇರಲಿಲ್ಲ. ತರಬೇತುದಾರರಿಂದ ಪ್ರಾಮುಖ್ಯತೆ ಪಡೆಯದ ಯುಗಗಳಲ್ಲಿ ಭಾರತದ ಮೊದಲ ಎರಡು ವಿಶ್ವಕಪ್ ಗೆಲುವುಗಳು ಬಂದಿವೆ ಎಂದು ಅವರು ಗಮನಸೆಳೆದರು. ಶ್ರೀಲಂಕಾ ವಿರುದ್ಧದ ಮೊದಲ ಟಿ 20 ಪಂದ್ಯಕ್ಕೆ ಮುಂಚಿತವಾಗಿ ಅವರು ಶನಿವಾರ (ಜುಲೈ 27) ಬೆಳಿಗ್ಗೆ ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ.

ಲಾಲ್​ಚಂದ್​ ರಜಪೂತ್​​

ಲೆಜೆಂಡರಿ ಆಲ್ರೌಂಡರ್ ಮತ್ತು ಮಾಜಿ ನಾಯಕ ಕಪಿಲ್ ದೇವ್ 1983 ರಲ್ಲಿ ಮುಖ್ಯ ಕೋಚ್ ಇಲ್ಲದೆ ಬಲಿಷ್ಠ ವೆಸ್ಟ್ ಇಂಡೀಸ್ ಅನ್ನು ಸೋಲಿಸುವ ಮೂಲಕ ಏಕದಿನ ವಿಶ್ವಕಪ್ ಅನ್ನು ಎತ್ತಿಹಿಡಿದಿದ್ದರು. ಆದಾಗ್ಯೂ, ಭಾರತವು ತನ್ನ ಎರಡನೇ ವಿಶ್ವಕಪ್ ಗೆಲ್ಲಲು 24 ವರ್ಷಗಳ ಕಾಲ ಕಾಯಬೇಕಾಯಿತು.

ಎಂಎಸ್ ಧೋನಿ ಅವರ ವರ್ಚಸ್ವಿ ನಾಯಕತ್ವವು 2007 ರಲ್ಲಿ ಮೊದಲ ಟಿ 20 ವಿಶ್ವಕಪ್​​ನಲ್ಲಿ ಯುವ ಭಾರತೀಯ ತಂಡವನ್ನು ಪ್ರಶಸ್ತಿ ಗೆಲುವಿನತ್ತ ಮುನ್ನಡೆಸಿತು. ಆದಾಗ್ಯೂ, ಆ ಬಾರಿಯೂ ಭಾರತಕ್ಕೆ ಮುಖ್ಯ ಕೋಚ್ ಇರಲಿಲ್ಲ, ಏಕೆಂದರೆ ಗ್ರೆಗ್ ಚಾಪೆಲ್ ಅವರನ್ನು ಮುಖ್ಯ ಕೋಚ್ ಹುದ್ದೆಯಿಂದ ವಜಾಗೊಳಿಸಿತ್ತು. ಧೋನಿ ಅವರ ತಂಡಕ್ಕೆ ಲಾಲ್​ಚಂದ್​ ರಜಪೂತ್ ಅವರನ್ನು ತಂಡದ ನಿರ್ದೇಶಕರಾಗಿ ದಕ್ಷಿಣ ಆಫ್ರಿಕಾಕ್ಕೆ ಕಳುಹಿಸಲಾಗಿತ್ತು.

ಭಾರತ 2011ರ ಏಕದಿನ ವಿಶ್ವಕಪ್ ಹಾಗೂ 2024ರ ಟಿ20 ವಿಶ್ವಕಪ್ ಗೆದ್ದಾಗ ಗ್ಯಾರಿ ಕರ್ಸ್ಟನ್ ಮತ್ತು ದ್ರಾವಿಡ್ ನಾಯಕತ್ವ ವಹಿಸಿದ್ದರು.

Continue Reading

ಕ್ರೀಡೆ

Joe Root : ಟೆಸ್ಟ್ ಇತಿಹಾಸದ ರನ್​ ಗಳಿಕೆಯ ದಾಖಲೆಯ ಪಟ್ಟಿಯಲ್ಲಿ ಲಾರಾ ಹಿಂದಿಕ್ಕಿದ ಜೋ ರೂಟ್

Joe Root : ಲಾರ್ಡ್ಸ್​ನಲ್ಲಿ ನಡೆದ ಮೊದಲ ಟೆಸ್ಟ್​ನಲ್ಲಿ ಅವರು ಸೀಮಿತ ಅವಕಾಶಗಳನ್ನು ಪಡೆದುಕೊಂಡಿದ್ದರು. ಒಮ್ಮೆ ಮಾತ್ರ ಬ್ಯಾಟಿಂಗ್ ಮಾಡಿದ್ದರು. ಆದಾಗ್ಯೂ, ಟ್ರೆಂಟ್ ಬ್ರಿಜ್​​ನಲ್ಲಿ ನಡೆದ ಎರಡನೇ ಟೆಸ್ಟ್​​ನಲ್ಲಿ ಅವರು ಶ್ರೀಲಂಕಾದ ಆಟಗಾರ ಮಹೇಲಾ ಜಯವರ್ಧನೆ ಮತ್ತು ವೆಸ್ಟ್ ಇಂಡೀಸ್​​ನ ಶಿವನಾರಾಯಣ್ ಚಂದ್ರಪಾಲ್ ಅವರನ್ನು ಹಿಂದಿಕ್ಕಿದ್ದರು. ಇದರಲ್ಲಿ ಅವರ 32 ನೇ ಟೆಸ್ಟ್ ಶತಕವೂ ಸೇರಿದೆ.

VISTARANEWS.COM


on

Joe Root
Koo

ಎಡ್ಜ್ ಬಾಸ್ಟನ್: ಇಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನವಾದ ಶನಿವಾರ ಇಂಗ್ಲೆಂಡ್ ಸ್ಟಾರ್ ಬ್ಯಾಟ್ಸ್ ಮನ್ ಜೋ ರೂಟ್ (Joe Root) ವೆಸ್ಟ್ ಇಂಡೀಸ್ ದಂತಕತೆ ಬ್ರಿಯಾನ್ ಲಾರಾ ಅವರನ್ನು ಹಿಂದಿಕ್ಕಿ ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಏಳನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಲಾರಾ ಅವರ ವೃತ್ತಿಜೀವನದಲ್ಲಿ ಗಳಿಸಿದ್ದ 11,953 ರನ್​ ಳಿಗಿಂತ ಕೇವಲ 14 ರನ್​ ಹಿಂದಿದ್ದ ರೂಟ್​ ಮೊದಲ ದಿನ ಸ್ಟಂಪ್ ವೇಲೆ 2* ರನ್ ಗಳಿಸಿ ಅಜೇಯರಾಗಿದ್ದರು. ಅಂತೆಯೇ ಇಂಗ್ಲೆಂಡ್​ನ ಮೊದಲ ಇನ್ನಿಂಗ್ಸ್​ನ 14 ನೇ ಓವರ್​ನಲ್ಲಿ ಅವರು ಜೇಡನ್ ಸೀಲ್ಸ್ ಅವರ ಎಸೆತವನ್ನು ಎದುರಿಸಿ ಲಾರಾ ಹಿಂದಿಕ್ಕಿದರು. ಇದು ರೂಟ್​ ವೃತ್ತಿಜೀವನದಲ್ಲಿ ಮತ್ತೊಂದು ಮಹತ್ವದ ಸಾಧನೆಯನ್ನು ಸೂಚಿಸುತ್ತದೆ.

ಈ ಮೈಲಿಗಲ್ಲು ದಾಟುವಲ್ಲಿ ರೂಟ್ ಕೆಲವು ನಾಟಕೀಯ ಅವಕಾಶಗಳನ್ನು ಪಡೆದರು. 10 ನೇ ಓವರ್​ನಲ್ಲಿ ಸೀಲ್ಸ್ ಅವರ ಬೌಲಿಂಗ್​ ವೇಳೆ ಎಲ್ಬಿಡಬ್ಲ್ಯು ನಿರ್ಧಾರವನ್ನು ವೆಸ್ಟ್ ಇಂಡೀಸ್ ಪರಿಶೀಲಿಸಲಿಲ್ಲ, ಈ ನಿರ್ಧಾರವು ದುಬಾರಿ ಎಂಬುದಾಗಿ ಸಾಬೀತಾಯಿತು. ಡಿಆರ್​ಎಸ್​ ತೆಗೆದುಕೊಂಡಿದ್ದರೆ ರೂಟ್ ಔಟ್ ಆಗುತ್ತಿದ್ದರು ಎಂದು ರಿಪ್ಲೇಗಳು ತೋರಿಸಿದ್ದವು. ಇಂಗ್ಲೆಂಡ್​ನ ಬ್ಯಾಟಿಂಗ್ ಲೈನ್ಅಪ್​​ನ ಆಧಾರಸ್ತಂಭವಾಗಿರುವ ರೂಟ್, ಟೆಸ್ಟ್ ಕ್ರಿಕೆಟ್​​ನಲ್ಲಿ 10 ನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಈ ಸರಣಿ ಪ್ರಾರಂಭಿಸಿದ್ದರು. ಲಾರ್ಡ್ಸ್​ನಲ್ಲಿ ನಡೆದ ಮೊದಲ ಟೆಸ್ಟ್​ನಲ್ಲಿ ಅವರು ಸೀಮಿತ ಅವಕಾಶಗಳನ್ನು ಪಡೆದುಕೊಂಡಿದ್ದರು. ಒಮ್ಮೆ ಮಾತ್ರ ಬ್ಯಾಟಿಂಗ್ ಮಾಡಿದ್ದರು. ಆದಾಗ್ಯೂ, ಟ್ರೆಂಟ್ ಬ್ರಿಜ್​​ನಲ್ಲಿ ನಡೆದ ಎರಡನೇ ಟೆಸ್ಟ್​​ನಲ್ಲಿ ಅವರು ಶ್ರೀಲಂಕಾದ ಆಟಗಾರ ಮಹೇಲಾ ಜಯವರ್ಧನೆ ಮತ್ತು ವೆಸ್ಟ್ ಇಂಡೀಸ್​​ನ ಶಿವನಾರಾಯಣ್ ಚಂದ್ರಪಾಲ್ ಅವರನ್ನು ಹಿಂದಿಕ್ಕಿದ್ದರು. ಇದರಲ್ಲಿ ಅವರ 32 ನೇ ಟೆಸ್ಟ್ ಶತಕವೂ ಸೇರಿದೆ.

ಫಾರ್ಮ್​ಗೆ ಮರಳಿದ ರೂಟ್​

ಇಂಗ್ಲೆಂಡ್​ನ ಮಾಜಿ ನಾಯಕ ಜೋ ರೂಟ್ ಟೆಸ್ಟ್ ಕ್ರಿಕೆಟ್​ನಲ್ಲಿ ತಮ್ಮ ಫಾರ್ಮ್ ಮರಳಿ ಪಡೆದಿದ್ದಾರೆ. ತವರಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪ್ರಸ್ತುತ ಮೂರು ಪಂದ್ಯಗಳ ಸರಣಿಯಲ್ಲಿ, ಅವರು ಇಲ್ಲಿಯವರೆಗೆ ಒಂದು ಶತಕ ಮತ್ತು ಅರ್ಧಶತಕವನ್ನು ಗಳಿಸುವ ಮೂಲಕ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಟೆಸ್ಟ್ ಕ್ರಿಕೆಟ್​ನಲ್ಲಿ ಸಾರ್ವಕಾಲಿಕ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗುವ ಸಾಮರ್ಥ್ಯ ರೂಟ್ ಹೊಂದಿದ್ದಾರೆ ಎಂದು ಅನೇಕ ಕ್ರಿಕೆಟ್ ಶ್ರೇಷ್ಠರು ಮತ್ತು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 32 ಶತಕಗಳು ಮತ್ತು 62 ಅರ್ಧಶತಕಗಳನ್ನು ಹೊಂದಿರುವ ಅವರ ದಾಖಲೆ ಸ್ವತಃ ಮಾತನಾಡುತ್ತಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಮತ್ತು ಶತಕಗಳ ದಾಖಲೆಯನ್ನು ರೂಟ್ ಹೊಂದಿದ್ದಾರೆ.

Continue Reading

ಪ್ರಮುಖ ಸುದ್ದಿ

Paris Olympics 2024 : ಶೂಟಿಂಗ್​ನಲ್ಲಿ ಭಾರತಕ್ಕೆ ಖುಷಿ ಸುದ್ದಿ; ಮಹಿಳೆಯರ 10 ಮೀಟರ್ ಏರ್​ ಪಿಸ್ತೂಲ್ ವಿಭಾಗದಲ್ಲಿ ಮನು ಭಾಕರ್​ ಫೈನಲ್​ಗೆ

Paris Olympics 2024 :

VISTARANEWS.COM


on

Paris Olympics 2024
Koo

ನವದೆಹಲಿ: ಭಾರತದ ಮಹಿಳಾ ಶೂಟರ್​ ಮನು ಭಾಕರ್ ಶನಿವಾರ (ಜುಲೈ 27) ಪ್ಯಾರಿಸ್ ಒಲಿಂಪಿಕ್ಸ್ 2024ರ (Paris Olympics 2024) 10 ಮೀಟರ್​ ಏರ್​ ಪಿಸ್ತೂಲ್ ವಿಭಾಗದಲ್ಲಿ ಫೈನಲ್​ಗೇರಿದ್ದಾರೆ. ಈ ಮೂಲಕ ಹಾಲಿ ಒಲಿಂಪಿಕ್ಸ್​​ನಲ್ಲಿ ಫೈನಲ್​ಗೇರಿದ ಮೊದಲ ಸ್ಪರ್ಧಿ ಎನಿಸಿಕೊಂಡಿದ್ದಾರೆ. ಫ್ರಾನ್ಸ್ನ ಚಟೌರಾಕ್ಸ್​ನಲ್ಲಿ ನಡೆದ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಅರ್ಹತಾ ಸುತ್ತಿನಲ್ಲಿ 22 ವರ್ಷದ ಭಾಕರ್ ಮೂರನೇ ಸ್ಥಾನ ಪಡೆದುಕೊಂಡು ಅಂತಿಮ ಸುತ್ತಿಗೆ ಪ್ರವೇಶ ಪಡೆದುಕೊಂಡಿದ್ದಾರೆ. ಭಾರತದ ಶೂಟರ್​ಗಳು ಮೊದಲ ದಿನದಂದು ನಿರಾಸೆಯ ಪ್ರದರ್ಶನ ನೀಡಿರುವ ಕಾರಣ ಮನು ಸಾಧನೆ ಭರವಸೆ ಎನಿಸಿಕೊಂಡಿದೆ.

ಭಾನುವಾರ ನಡೆಯಲಿರುವ ಫೈನಲ್ ಪ್ರವೇಶಿಸಲು ಆರು ಸರಣಿಗಳ ಶೂಟಿಂಗ್​ ಅರ್ಹತೆಯಲ್ಲಿ 580 ಅಂಕ ಗಳಿಸಿದ ಮನು ಸಂಭ್ರಮಿಸಿದರು. ಭಾರತದ ಮತ್ತೊಬ್ಬರು ಶೂಟರ್​ ರಿದಮ್ ಸಾಂಗ್ವಾನ್ 15ನೇ ಸ್ಥಾನ ಪಡೆದು ತಮ್ಮ ಅಭಿಯಾನ ಮುಗಿಸಿದರು. ಅವರು 573 ಅಂಕಗಳನ್ನು ಪಡೆದುಕೊಂಡಿದ್ದಾರೆ. ಅಗ್ರ ಎಂಟು ಶೂಟರ್​ಗಳು ಫೈನಲ್ ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಹಂಗರಿಯ ವೆರೋನಿಕಾ ಮೇಜರ್ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಅವರು 582 ಅಂಕಗಳನ್ನು ಪಡೆದರು. ಇನ್ನು ಕೊರಿಯಾದ ವೈ.ಜೆ ಓಹ್​ 52 ಅಂಕ ಪಡೆದು ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.

ಮನು ಬಾಕರ್​ ಆರಂಭದಿಂದಲೇ ಉತ್ತಮ ಪ್ರದರ್ಶ ನೀಡಿದ್ದರು. ಮೊದಲ 10 ಶಾಟ್​ಗಳಲ್ಲಿ 97/100 ಗಳಿಸಿದರು 22 ವರ್ಷದ ಭಾರತೀಯ ಆಟಗಾರ್ತಿ ಎರಡನೇ ಸುತ್ತಿನಲ್ಲೂ 97 ಅಂಕ ಗಳಿಸಿಕೊಂಡರು. ಆರು ಸೀರಿಸ್​​ನ ಸ್ಪರ್ಧೆಯಲ್ಲಿ ಮನು 292/300 ಅಂಕಗಳನ್ನು ತಮ್ಮದಾಗಿಸಿಕೊಂಡರು.

ಇದನ್ನೂ ಓದಿ: Paris Olympics: ಕ್ರೀಡಾ ಗ್ರಾಮದಲ್ಲಿ ಭಾರತದ ಅಥ್ಲೀಟ್ಸ್‌ಗೆ ಆಹಾರ ಕೊರತೆ; ರೆಸ್ಟೋರೆಂಟ್​ನಿಂದ ರೋಟಿ, ದಾಲ್‌ ತರಿಸಿದ ಬಾಕ್ಸರ್​

ರಿದಮ್ ಸಾಂಗ್ವಾನ್ ಅರ್ಧದ ಹಂತದಲ್ಲಿ 286/300 ರನ್ ಗಳಿಸಿದ್ದರು. ಅವರು ಈವೆಂಟ್ ಅನ್ನು 573-14x ನಿಂದ ಕೊನೆಗೊಳಿಸಿದರು. ಮೊದಲ ಸರಣಿಯಲ್ಲಿ 97/100 ರನ್ ಗಳಿಸಿದ ನಂತರ, ಸಾಂಗ್ವಾನ್ ಎರಡನೇ ಸೀರಿಸ್​ನಲ್ಲಿ 92 ರನ್ ಗಳಿಸಿದರು. ಅಗ್ರ ಎಂಟು ಶೂಟರ್ಗಳು ನಾಳೆ, ಭಾನುವಾರ ಮಧ್ಯಾಹ್ನ 3:30 ಕ್ಕೆ ನಡೆಯಲಿರುವ ಫೈನಲ್​ಗೆ ಅರ್ಹತೆ ಪಡೆದಿದ್ದಾರೆ.

ಫೈನಲ್​​ಗೆ ಅರ್ಹತೆ ಪಡೆದ ಅಗ್ರ ಎಂಟು ಶೂಟರ್​ಗಳ ವಿವರ

  • ವೆರೋನಿಕಾ ಮೇಜರ್ (ಹಂಗರಿ) : 582 ಅಂಕ
  • ಓಹ್ ಯೆ ಜಿನ್ (ಕೊರಿಯಾ ): 582 ಅಂಕ
  • ಮನು ಭಾಕರ್ (ಭಾರತ): 580 ಅಂಕ
  • ಥು ವಿನ್ಹ್ ಟ್ರಿನ್ಹ್ (ವಿಯೆಟ್ನಾಂ): 578 ಅಂಕ
  • ಕಿಮ್ ಯೆಜಿ (ಕೊರಿಯಾ): 578 ಅಂಕ
  • ಲಿ ಕ್ಸುಯೆ (ಚೈನಾ): 577 ಅಂಕ
  • ಸೇವ್ವಾಲ್ ತರ್ಹಾನ್ (ಟರ್ಕಿ): 577 ಅಂಕ
  • ಜಿಯಾಂಗ್ ರಾನ್ಕ್ಸಿನ್ (ಚೈನಾ): 577 ಅಂಕ

ಭಾರತಕ್ಕೆ ನಿರಾಸೆ

ಆರಂಭಿಕ ಎರಡು ಸ್ಪರ್ಧೆಗಳಲ್ಲಿ ಯಾವುದೇ ಭಾರತೀಯರು ಫೈನಲ್​​ಗೆ ಪ್ರವೇಶಿಸಲು ಸಾಧ್ಯವಾಗದ ಕಾರಣ ಭಾರತವು ಶೂಟಿಂಗ್​​ನಲ್ಲಿ ಕಳಪೆ ಆರಂಭವನ್ನು ಹೊಂದಿತ್ತು. 10 ಮೀಟರ್ ಏರ್ ರೈಫಲ್ ಮಿಶ್ರ ತಂಡಗಳು 28 ತಂಡಗಳ ಸ್ಪರ್ಧೆಯಲ್ಲಿ 6 ಮತ್ತು 12 ನೇ ಸ್ಥಾನಗಳನ್ನು ಗಳಿಸಿದವು. ಹೀಗಾಗಿ ಪದಕ ಪಂದ್ಯಗಳಿಗೆ ಅಗತ್ಯವಾದ ಅಗ್ರ ನಾಲ್ಕು ಸ್ಥಾನಗಳಿಗೆ ಹೋಗಲು ವಿಫಲಗೊಂಡಿತು. ಪುರುಷರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಸರಬ್ಜೋತ್ ಸಿಂಗ್ 33 ಅಥ್ಲೀಟ್​ಗಳ ವಿಭಾಗದಲ್ಲಿ 9ನೇ ಸ್ಥಾನ ಪಡೆದು ಫೈನಲ್​ಗೆ ಪ್ರವೇಶಿಸುವಲ್ಲಿ ವಿಫಲರಾದರು. ಮತ್ತೊಬ್ಬ ಶೂಟರ್ ಅರ್ಜುನ್ ಸಿಂಗ್ ಚೀಮಾ 18ನೇ ಸ್ಥಾನ ಪಡೆದರು.

Continue Reading
Advertisement
Mumbai Girl
ದೇಶ11 mins ago

ಬಾರೆ ಸಖಿ ಎಂದು 20 ವರ್ಷದ ಯುವತಿಯನ್ನು ಕರೆದುಕೊಂಡು ಹೋದ, ಕೊಂದು ಪೊದೆಯಲ್ಲಿ ಬಿಸಾಡಿದ; ಕೃತ್ಯಕ್ಕೆ ಕಾರಣವೇನು?

ಪರಿಸರ19 mins ago

Arecanut Research Centre: ಹೊಸ ಅಡಿಕೆ ಸಂಶೋಧನಾ ಕೇಂದ್ರ ಮತ್ತೊಂದು ಮದುವೆ ಛತ್ರ ಆಗದಿರಲಿ!

ind vs sl
ಪ್ರಮುಖ ಸುದ್ದಿ39 mins ago

IND vs SL : ಅಪರೂಪದ ದೃಶ್ಯ; ಎರಡೂ ಕೈಯಲ್ಲಿ ಬೌಲಿಂಗ್ ಮಾಡಿದ ಲಂಕಾದ ಬೌಲರ್​ ಕಮಿಂಡು ಮೆಂಡಿಸ್​!

Opposition MLAs agree to Skydeck near Nice Road will discuss in Cabinet meeting says DCM DK Shivakumar
ಕರ್ನಾಟಕ49 mins ago

DK Shivakumar: ಬೆಂಗಳೂರಿನ ನೈಸ್‌ ರಸ್ತೆ ಬಳಿ ದೇಶದ ಅತಿ ಎತ್ತರದ ಸ್ಕೈಡೆಕ್!

Team India Coach
ಪ್ರಮುಖ ಸುದ್ದಿ59 mins ago

Team India Coach : ಕೋಚ್​​ ಗೌತಮ್ ಗಂಭೀರ್ ವೈಭವೀಕರಣ; ಮಾಜಿ ಆಟಗಾರನ ಆಕ್ಷೇಪ

Infiltration
ದೇಶ1 hour ago

Infiltration: ಭಾರತಕ್ಕೆ ನುಗ್ಗುವುದು ಹೇಗೆ ಎಂದು ವಿಡಿಯೊ ಮಾಡಿದ ಬಾಂಗ್ಲಾ ವ್ಯಕ್ತಿ; ದೀದಿ ಆಹ್ವಾನದ ಬೆನ್ನಲ್ಲೇ ವಿಡಿಯೊ ವೈರಲ್‌

ICW 2024
ಫ್ಯಾಷನ್2 hours ago

ICW 2024: ಮುಂಬರುವ ವೆಡ್ಡಿಂಗ್‌ ಸೀಸನ್‌ ಮೆನ್ಸ್ ವೇರ್‌ ಅನಾವರಣಗೊಳಿಸಿದ ಇಂಡಿಯಾ ಕೌಚರ್‌ ವೀಕ್‌ 2024

Indian Army
ದೇಶ2 hours ago

ಪಾಕ್‌ಗೆ ಮೋದಿ ಎಚ್ಚರಿಕೆ ಬೆನ್ನಲ್ಲೇ ಗಡಿಯಲ್ಲಿ 2 ಸಾವಿರ ಹೆಚ್ಚುವರಿ ಸೈನಿಕರ ನಿಯೋಜಿಸಿದ ಕೇಂದ್ರ; ಏನಿದರ ಮರ್ಮ?

Joe Root
ಕ್ರೀಡೆ3 hours ago

Joe Root : ಟೆಸ್ಟ್ ಇತಿಹಾಸದ ರನ್​ ಗಳಿಕೆಯ ದಾಖಲೆಯ ಪಟ್ಟಿಯಲ್ಲಿ ಲಾರಾ ಹಿಂದಿಕ್ಕಿದ ಜೋ ರೂಟ್

CT Ravi
ಕರ್ನಾಟಕ3 hours ago

CT Ravi: ಮುಡಾ ಹಗರಣ: ಸಿಎಂ ಸಿದ್ದರಾಮಯ್ಯಗೆ ಬಹಿರಂಗ ಪತ್ರ ಬರೆದ ಸಿ.ಟಿ.ರವಿ; ಇಲ್ಲಿದೆ ಪತ್ರದ ಸಾರಾಂಶ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ3 hours ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ8 hours ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ9 hours ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

Ankola landslide
ಉತ್ತರ ಕನ್ನಡ1 day ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ1 day ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ1 day ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ1 day ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ2 days ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್2 days ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ2 days ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

ಟ್ರೆಂಡಿಂಗ್‌