5G auction| 1.5 ಲಕ್ಷ ಕೋಟಿ ರೂ.ಗಳ 5ಜಿ ಸ್ಪೆಕ್ಟ್ರಮ್‌ ಮಾರಾಟ, ಹರಾಜು ಮುಕ್ತಾಯ - Vistara News

ಗ್ಯಾಜೆಟ್ಸ್

5G auction| 1.5 ಲಕ್ಷ ಕೋಟಿ ರೂ.ಗಳ 5ಜಿ ಸ್ಪೆಕ್ಟ್ರಮ್‌ ಮಾರಾಟ, ಹರಾಜು ಮುಕ್ತಾಯ

ಭಾರತದ ಮೊಟ್ಟ ಮೊದಲ 5ಜಿ ಸ್ಪೆಕ್ಟ್ರಮ್‌ ಹರಾಜು ಸೋಮವಾರ ಮುಕ್ತಾಯವಾಗಿದ್ದು, ಕಳೆದ 7 ದಿನಗಳಲ್ಲಿ ಒಟ್ಟು 1.5 ಲಕ್ಷ ಕೋಟಿ ರೂ.ಗಳ ದಾಖಲೆಯ ಸ್ಪೆಕ್ಟ್ರಮ್‌ ಮಾರಾಟವಾಗಿರುವುದು ಗಮನಾರ್ಹ.

VISTARANEWS.COM


on

5g
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಭಾರತದ ಮೊಟ್ಟ ಮೊದಲ ೫ಜಿ ಸ್ಪೆಕ್ಟ್ರಮ್‌ ಹರಾಜು ಸೋಮವಾರ ಮುಕ್ತಾಯವಾಗಿದೆ. ಜುಲೈ ೨೬ರಿಂದ ಆಗಸ್ಟ್‌ ೧ರ ತನಕ ಒಟ್ಟು ೧,೫೦,೧೭೩ ರೂ.ಗಳ ಸ್ಪೆಕ್ಟ್ರಮ್‌ ಮಾರಾಟವಾಗಿದೆ. ಮುಕೇಶ್‌ ಅಂಬಾನಿ ನೇತೃತ್ವದ ರಿಲಯನ್ಸ್‌ ಇಂಡಸ್ಟ್ರೀಸ್‌ನ ಭಾಗವಾಗಿರುವ ರಿಲಯನ್ಸ್‌ ಜಿಯೊ, ಅತಿ ಹೆಚ್ಚು ಸ್ಪೆಕ್ಟ್ರಮ್‌ ಖರೀದಿಸಿದೆ.

ರಿಲಯನ್ಸ್‌ ಜಿಯೊ ೨೪,೭೪೦ ಮೆಗಾಹರ್ಟ್ಸ್‌ ಮೌಲ್ಯದ ೫ಜಿ ಸ್ಪೆಕ್ಟ್ರಮ್‌ ಖರೀದಿಸಿದ್ದರೆ, ಏರ್‌ಟೆಲ್‌ ೧೯,೮೬೭ ಮೆಗಾಹರ್ಟ್ಸ್‌ ಮೌಲ್ಯದ ೫ಜಿ ಖರೀದಿಸಿದೆ.

ಯಾರಿಂದ ಎಷ್ಟು ೫ಜಿ ಸ್ಪೆಕ್ಟ್ರಮ್‌ ಖರೀದಿ?

ರಿಲಯನ್ಸ್‌ ಜಿಯೊದಿಂದ 24,740 ಮೆಗಾಹರ್ಟ್ಸ್‌88,078 ಕೋಟಿ ರೂ. ಮೌಲ್ಯ
ಭಾರ್ತಿ ಏರ್‌ಟೆಲ್, 19,867 ಮೆಗಾಹರ್ಟ್ಸ್‌43,084 ಕೋಟಿ ರೂ. ಮೌಲ್ಯ
ವೊಡಾಫೋನ್‌ ಐಡಿಯಾ, 6,228 ಮೆಗಾಹರ್ಟ್ಸ್
‌18,784 ಕೋಟಿ ರೂ. ಮೌಲ್ಯ
ಅದಾನಿ ಗ್ರೂಪ್‌, 400 ಮೆಗಾ ಹರ್ಟ್ಸ್‌212 ಕೋಟಿ ರೂ.

ಸೋಮವಾರ ಹರಾಜಿನ ೭ನೇ ದಿನವಾಗಿತ್ತು. ರಿಲಯನ್ಸ್‌ ಜಿಯೊ, ಭಾರ್ತಿ ಏರ್‌ಟೆಲ್‌, ವೊಡಾಫೋನ್‌ ಐಡಿಯಾ, ಅದಾನಿ ಎಂಟರ್‌ಪ್ರೈಸಸ್‌ ಹರಾಜಿನಲ್ಲಿ ಭಾಗವಹಿಸಿದ್ದವು. ೪ಜಿಗಿಂತ ೧೦ ಪಟ್ಟು ಹೆಚ್ಚು ವೇಗವನ್ನು ೫ಜಿ ಹೊಂದಿದೆ.

3ಜಿಯಿಂದ ೫ಜಿ ತನಕ ಹರಾಜಿನ ಮೌಲ್ಯ ವರ್ಧನೆ

3ಜಿ50,968 ಕೋಟಿ ರೂ.
4ಜಿ 77,815 ಕೋಟಿ ರೂ.
5ಜಿ150,173 ಕೋಟಿ ರೂ.

ಕಳೆದ ವರ್ಷ ನಡೆದ ೪ಜಿ ಸ್ಪೆಕ್ಟ್ರಮ್‌ ಹರಾಜಿನ ಮೌಲ್ಯ ೭೭,೮೧೫ ಕೋಟಿ ರೂ.ಗಳಾಗಿದ್ದರೆ, ೨೦೧೦ರಲ್ಲಿ ನಡೆದ ೩ಜಿ ಸ್ಪೆಕ್ಟ್ರಮ್‌ ಹರಾಜಿನ ಮೌಲ್ಯ ೫೦,೯೬೮ ಕೋಟಿ ರೂ. ಆಗಿತ್ತು. ಒಟ್ಟು ೭ ಸುತ್ತುಗಳಲ್ಲಿ ಹರಾಜು ನಡೆದಿತ್ತು. ಈ ವರ್ಷ ೪.೩ ಲಕ್ಷ ಕೋಟಿ ರೂ. ಮೌಲ್ಯದ ೭೨ ಗಿಗಾಹರ್ಟ್ಸ್‌ ಸ್ಪೆಕ್ಟ್ರಮ್‌ ಅನ್ನು ಹರಾಜಿಗಿಡಲಾಗಿತ್ತು. ೬೦೦ ಮೆಗಾಹರ್ಟ್ಸ್‌, ೭೦೦ ಮೆಗಾಹರ್ಟ್ಸ್‌, ೮೦೦ ಮೆಗಾಹರ್ಟ್ಸ್‌, ೯೦೦ ಮೆಗಾಹರ್ಟ್ಸ್‌, ೧೮೦೦ ಮೆಗಾಹರ್ಟ್ಸ್‌, ೨,೧೦೦ ಮೆಗಾಹರ್ಟ್ಸ್‌, ೨,೩೦೦ ಮೆಗಾಹರ್ಟ್ಸ್‌, ೨,೫೦೦ ಮೆಗಾಹರ್ಟ್ಸ್‌, ೩೩೦೦ ಮೆಗಾಹರ್ಟ್ಸ್‌, ೨೬ ಗಿಗಾಹರ್ಟ್ಸ್‌ ಶ್ರೇಣಿಯ ೫ಜಿ ಸ್ಪೆಕ್ಟ್ರಮ್‌ ಅನ್ನು ಹರಾಜಿಗಿಡಲಾಗಿತ್ತು.

ಉದ್ದಿಮೆಗಳ ವಿಸ್ತರಣೆಗೆ ಪೂರಕ: ೫ಜಿ ಸ್ಪೆಕ್ಟ್ರಮ್‌ ಹರಾಜಿನಲ್ಲಿ ೧.೫ ಲಕ್ಷ ಕೋಟಿ ರೂ.ಗಳ ಸ್ಪೆಕ್ಟ್ರಮ್‌ ಮಾರಾಟ ಆಗಿರುವುದು ಉದ್ಯಮ ವಲಯ ಹಿಂದೆಂದಿಗೂ ಕಂಡರಿಯದಷ್ಟು ವಿಸ್ತರಣೆಯಾಗಲು ಅಣಿಯಾಗುತ್ತಿರುವುದರ ದ್ಯೋತಕ. ೭೦೦ ಮೆಗಾಹರ್ಟ್ಸ್‌ ಬ್ಯಾಂಡ್‌ಗಳ ೫ಜಿ ಸ್ಪೆಕ್ಟ್ರಮ್‌ ಮಾರಾಟವಾಗಿರುವುದಕ್ಕೂ ಇದೇ ಕಾರಣ. ದೀರ್ಘಕಾಲೀನವಾಗಿ ಪರಿಗಣಿಸುವುದಿದ್ದರೆ ೭೦೦ ಮೆಗಾಹರ್ಟ್ಸ್‌ನ ೫ಜಿ ಸ್ಪೆಕ್ಟ್ರಮ್‌ ದುಬಾರಿ ಎನ್ನಿಸಿದರೂ, ಜನತೆಗೆ ಪ್ರಯೋಜನಕ್ಕೆ ಬರಲಿದೆ. ಭಾರಿ ಜನ ಸಾಂದ್ರತೆಯ ದೇಶದಲ್ಲಿ ಸರ್ಕಾರಕ್ಕೆ ಭವಿಷ್ಯದ ೫ಜಿ ಮೂಲಸೌಕರ್ಯ ಅಭಿವೃದ್ಧಿಗೆ ಹರಾಜಿನಿಂದ ಸಿಗುವ ಆದಾಯ ಉಪಯೋಗವಾಗಲಿದೆ. ಉದ್ದಿಮೆಸ್ನೇಹಿ ಉಪಕ್ರಮವಾಗಿ ಪ್ರತಿ ವರ್ಷ ೨೦ ಸಮಾನ ಕಂತುಗಳಲ್ಲಿ ಸ್ಪೆಕ್ಟ್ರಮ್‌ ಪಾವತಿಯನ್ನು ಮಾಡಲು ಅವಕಾಶ ಕಲ್ಪಿಸಲಾಗಿದೆ. ಅಧ್ಯಯನದ ಪ್ರಕಾರ ೫ಜಿ ಸೇವೆ ಲಭಿಸಿದ ಮೊದಲ ವರ್ಷ ೪ ಕೋಟಿ ಸ್ಮಾರ್ಟ್‌ಫೋನ್‌ ಬಳಕೆದಾರರು ೫ಜಿ ಸೇವೆ ಪಡೆಯಲಿದ್ದಾರೆ ಎಂದು ಪ್ರೈಮಸ್‌ ಪಾರ್ಟ್ನರ್ಸ್‌ ಕಂಪನಿಯ ಸಹ ಸಂಸ್ಥಾಪಕ ದೇವ್‌ರೂಪ್‌ ಧಾರ್‌ ಅವರು ತಿಳಿಸಿದ್ದಾರೆ.

” ಹೂಡಿಕೆ ಮತ್ತು ಮೂಲಸೌಕರ್ಯ ದೃಷ್ಟಿಯಿಂದ ರಿಲಯನ್ಸ್‌ ಜಿಯೊ ಮೇಲುಗೈ ಪಡೆಯಬಹುದು. ಆದರೆ ಇತರ ಕಂಪನಿಗಳಿಗೂ ಇದರಿಂದ ಅನುಕೂಲವಾಗಲಿದೆʼʼ ಎಂದು ಅವರು ತಿಳಿಸಿದ್ದಾರೆ.

೫ಜಿ ಸ್ಪೆಕ್ಟ್ರಮ್‌ ಹರಾಜಿನ ಮುಖ್ಯಾಂಶಗಳು

  • ಹರಾಜಿನಲ್ಲಿ ಮಾರಾಟವಾಗಿರುವ ಒಟ್ಟು ೫ಜಿ ಸ್ಪೆಕ್ಟ್ರಮ್ ಮೌಲ್ಯ: ೧,೫೦,೧೭೩ ಕೋಟಿ ರೂ.
  • ಹರಾಜು ನಡೆದ ದಿನಗಳು: ೭
  • ೪ಜಿ ಸ್ಪೆಕ್ಟ್ರಮ್‌ಗೆ (೭೭,೮೧೫ ಕೋಟಿ ರೂ.) ಹೋಲಿಸಿದರೆ ಇಮ್ಮಡಿ ಮೌಲ್ಯದ ಹರಾಜು
  • ಪ್ರಮುಖ ಬಿಡ್ಡರ್:‌ ರಿಲಯನ್ಸ್‌ ಜಿಯೊ. ಉಳಿದ ಬಿಡ್ಡರ್-ಭಾರ್ತಿ ಏರ್‌ಟೆಲ್‌, ವೊಡಾಫೋನ್‌ ಐಡಿಯಾ, ಅದಾನಿ ಗ್ರೂಪ್‌
  • ಮೊದಲ ದಿನದ ಹರಾಜಿನಲ್ಲಿ ಸ್ವೀಕರಿಸಿದ ಬಿಡ್‌ ಮೌಲ್ಯ: ೧.೪೫ ಲಕ್ಷ ಕೋಟಿ ರೂ.

ಇದನ್ನೂ ಓದಿ:ವಿಸ್ತಾರ Explainer | 5G ತಂತ್ರಜ್ಞಾನದಿಂದ ಅನುಕೂಲ ಅಪಾರ, ಅನನುಕೂಲ ಅತ್ಯಲ್ಪ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ತಂತ್ರಜ್ಞಾನ

Gemini Mobile App: ಕನ್ನಡ ಸೇರಿದಂತೆ 9 ಭಾರತೀಯ ಭಾಷೆಗಳಲ್ಲಿ ಗೂಗಲ್ ಜೆಮಿನಿ ಆ್ಯಪ್; ಏನಿದರ ಉಪಯೋಗ?

ಗೂಗಲ್ ತನ್ನ ಬಳಕೆದಾರರಿಗೆ ಜೆಮಿನಿ ಅಪ್ಲಿಕೇಶನ್ ಮತ್ತು ಜೆಮಿನಿ ಅಡ್ವಾನ್ಸ್ಡ್ ಎಂಬ ಎರಡೂ ಅಪ್ಲಿಕೇಶನ್ ಗಳನ್ನು (Gemini Mobile App) ಒಂಬತ್ತು ಭಾರತೀಯ ಭಾಷೆಗಳಲ್ಲಿ ಲಭ್ಯವಾಗುವಂತೆ ಮಾಡಿದೆ. ಇದರಿಂದ ಹೆಚ್ಚಿನ ಜನರು ತಮ್ಮ ಆದ್ಯತೆಯ ಭಾಷೆಯಲ್ಲಿ ಮಾಹಿತಿಯನ್ನು ಪಡೆಯಲು ಸಹಾಯ ಮಾಡುತ್ತದೆ.

VISTARANEWS.COM


on

By

Gemini Mobile App
Koo

ಗೂಗಲ್ (google) ಕೃತಕ ಬುದ್ಧಿಮತ್ತೆಯಿಂದ (AI) ಕಾರ್ಯನಿರ್ವಹಿಸುವ ಚಾಟ್ ಬಾಟ್ ಜೆಮಿನಿ ಮೊಬೈಲ್ ಅಪ್ಲಿಕೇಶನ್ (Gemini Mobile App) ಅನ್ನು ಇಂಗ್ಲಿಷ್ (English) ಮತ್ತು ಒಂಬತ್ತು ಭಾರತೀಯ ಭಾಷೆಗಳಲ್ಲಿ (Indian languages) ಬಿಡುಗಡೆ ಮಾಡಿದೆ. ಈ ಕುರಿತು ಕಂಪನಿಯು ಬ್ಲಾಗ್ ಪೋಸ್ಟ್‌ನಲ್ಲಿ ಹೇಳಿಕೆ ನೀಡಿದ್ದು, ಇದು ಗೂಗಲ್‌ನ ಅತ್ಯಂತ ಸಮರ್ಥ ಎಐ ಮಾದರಿಯಾಗಿದೆ.

ಬಳಕೆದಾರರಿಗೆ ಜೆಮಿನಿ ಅಪ್ಲಿಕೇಶನ್ ಮತ್ತು ಜೆಮಿನಿ ಅಡ್ವಾನ್ಸ್ಡ್ ಈ ಎರಡೂ ಅಪ್ಲಿಕೇಶನ್‌ಗಳು ಒಂಬತ್ತು ಭಾರತೀಯ ಭಾಷೆಗಳಲ್ಲಿ ಲಭ್ಯವಿರುತ್ತವೆ. ಇದರಿಂದ ಹೆಚ್ಚಿನ ಜನರು ತಮ್ಮ ಆದ್ಯತೆಯ ಭಾಷೆಯಲ್ಲಿ ಮಾಹಿತಿಯನ್ನು ಪ್ರವೇಶಿಸಲು ಮತ್ತು ಕಾರ್ಯಗಳನ್ನು ಪೂರ್ಣಗೊಳಿಸಲು ಸಹಾಯ ಮಾಡುತ್ತದೆ.

ಹಿಂದಿ, ಬೆಂಗಾಲಿ, ಗುಜರಾತಿ, ಕನ್ನಡ, ಮಲಯಾಳಂ, ಮರಾಠಿ, ತಮಿಳು, ತೆಲುಗು ಮತ್ತು ಉರ್ದು ಭಾಷೆಗಳಲ್ಲಿ ಲಭ್ಯವಿದ್ದು, ಗೂಗಲ್ ಈ ಒಂಬತ್ತು ಸ್ಥಳೀಯ ಭಾಷೆಗಳನ್ನು ಜೆಮಿನಿ ಅಡ್ವಾನ್ಸ್‌ಡ್‌ಗೆ ಸಂಯೋಜಿಸುತ್ತದೆ.
ಇದಲ್ಲದೆ, ಗೂಗಲ್ ಜೆಮಿನಿ ಅಡ್ವಾನ್ಸ್‌ಡ್‌ನಲ್ಲಿ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಇದರಲ್ಲಿ ಹೊಸ ಡೇಟಾ ವಿಶ್ಲೇಷಣೆ ಸಾಮರ್ಥ್ಯಗಳು, ಫೈಲ್ ಅಪ್‌ಲೋಡ್‌ಗಳು ಮತ್ತು ಇಂಗ್ಲಿಷ್‌ನಲ್ಲಿ ಗೂಗಲ್ ಸಂದೇಶಗಳಲ್ಲಿ ಜೆಮಿನಿಯೊಂದಿಗೆ ಚಾಟ್ ಮಾಡುವ ಸಾಮರ್ಥ್ಯವನ್ನು ಒಳಗೊಂಡಿದೆ. ಭಾರತ ಮಾತ್ರವಲ್ಲದೆ ಟರ್ಕಿ, ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿಯೂ ಜೆಮಿನಿ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲಾಗಿದೆ.


ಈ ಕುರಿತು ಸುಂದರ್ ಪಿಚೈ ಹೇಳಿದ್ದೇನು?

ಗೂಗಲ್ ಸಿಇಒ ಸುಂದರ್ ಪಿಚೈ ಎಕ್ಸ್ ನಲ್ಲಿ ಇದರ ಬಿಡುಗಡೆಯನ್ನು ಘೋಷಿಸಿ, ಅಪ್ಲಿಕೇಶನ್ ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಲು, ಟೈಪ್ ಮಾಡಲು, ಮಾತನಾಡಲು ಅಥವಾ ಚಿತ್ರವನ್ನು ಸೇರಿಸಲು ಅನುಮತಿಸುತ್ತದೆ. ಅದನ್ನು ಹೇಗೆ ಬದಲಾಯಿಸುವುದು ಎಂಬುದರ ಕುರಿತು ಸೂಚನೆಗಳಿಗಾಗಿ ಫ್ಲಾಟ್ ಟೈರ್‌ನ ಚಿತ್ರವನ್ನು ತೆಗೆದುಕೊಳ್ಳಿ ಅಥವಾ ಪರಿಪೂರ್ಣವಾದ ಟಿಪ್ಪಣಿಯನ್ನು ಬರೆಯಲು ಸಹಾಯ ಪಡೆಯಿರಿ ಎಂದು ಹೇಳಿದ್ದಾರೆ.


ಸಾಧ್ಯತೆಗಳಿಗೆ ಅಂತ್ಯವಿಲ್ಲ. ಇದು ನಿಜವಾದ ಸಂಭಾಷಣಾಶೀಲ, ಮಲ್ಟಿಮೋಡಲ್ ಮತ್ತು ಸಹಾಯಕ ಎಐ ಸಹಾಯಕವನ್ನು ನಿರ್ಮಿಸುವ ನಮ್ಮ ಪ್ರಯಾಣದಲ್ಲಿ ಮಹತ್ವದ ಹೆಜ್ಜೆಯನ್ನು ಸೂಚಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Smartphone Charging Tips: ನಿಮ್ಮ ಸ್ಮಾರ್ಟ್ ಪೋನ್ ಬ್ಯಾಟರಿ ಹೆಚ್ಚು ಬಾಳಿಕೆ ಬರಲು ಹೀಗೆ ಮಾಡಿ

ಜೆಮಿನಿಗೆ ಹೇಗೆ ಪ್ರವೇಶಿಸುವುದು?

ಜೆಮಿನಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ ಅಥವಾ ಗೂಗಲ್ ಅಸಿಸ್ಟೆಂಟ್ ಮೂಲಕ ಆಯ್ಕೆ ಮಾಡಿ. ಅನಂತರ ಕಾರ್ನರ್ ಸ್ವೈಪ್ ಮಾಡುವ ಮೂಲಕ, ಆಯ್ದ ಫೋನ್‌ಗಳಲ್ಲಿ ಪವರ್ ಬಟನ್ ಒತ್ತಿ ಅಥವಾ “ಹೇ ಗೂಗಲ್” ಎಂದು ಹೇಳುವ ಮೂಲಕ ಜೆಮಿನಿ ಬಳಸಬಹುದು.

ಐಒಎಸ್ ನಲ್ಲಿ, ಜೆಮಿನಿ ಪ್ರವೇಶವು ಗೂಗಲ್ ಅಪ್ಲಿಕೇಶನ್‌ನಿಂದ ನೇರವಾಗಿ ಸಿಗುತ್ತದೆ. ಜೆಮಿನಿ ಟಾಗಲ್ ಅನ್ನು ಟ್ಯಾಪ್ ಮಾಡಿ ಮತ್ತು ಚಾಟ್ ಮಾಡಲು ಪ್ರಾರಂಭಿಸಬೇಕು.

Continue Reading

ತಂತ್ರಜ್ಞಾನ

Smartphone Charging Tips: ನಿಮ್ಮ ಸ್ಮಾರ್ಟ್ ಪೋನ್ ಬ್ಯಾಟರಿ ಹೆಚ್ಚು ಬಾಳಿಕೆ ಬರಲು ಹೀಗೆ ಮಾಡಿ

Smartphone Charging Tips ಸ್ಮಾರ್ಟ್ ಫೋನ್ ಗಳ ಬ್ಯಾಟರಿ ಹೆಚ್ಚು ಕಾಲ ಬಾಳಿಕೆ ಬರುವುದಿಲ್ಲ ಎಂಬ ದೂರು ಎಲ್ಲರ ಬಾಯಲ್ಲೂ ಇದೆ. ಈ ಸಮಸ್ಯೆಯನ್ನು ನಿವಾರಿಸಲು ಸ್ಯಾಮ್ ಸಂಗ್, ರಿಯಲ್ ಮಿ ಮತ್ತು ಇತರ ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನ್ ತಯಾರಕರು ಕೆಲವು ಸಲಹೆಗಳನ್ನು ಹಂಚಿಕೊಂಡಿದ್ದಾರೆ. ಹಾಗಾಗಿ ನೀವು ಚಾರ್ಜ್ ಮಾಡುವಾಗ ಈ ನಿಯಮವನ್ನು ಪಾಲಿಸಿ ನೋಡಿ. ಹೀಗೆ ಮಾಡಿದರೆ ನಿಮ್ಮ ಸ್ಮಾರ್ಟ್ ಫೋನ್ ಹೆಚ್ಚು ಬಾಳಿಕೆ ಬರುವುದು ಖಚಿತ.

VISTARANEWS.COM


on

Smartphone Charging Tips
Koo

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಎಲ್ಲರ ಕೈಯಲ್ಲೂ ಸ್ಮಾರ್ಟ್ ಪೋನ್ ! ತಂತ್ರಜ್ಞಾನವಿಲ್ಲದೇ ಬದುಕು ನಡೆಸುವುದು ಕೂಡ ಕಷ್ಟವಾಗಿದೆ. ದುಬಾರಿ ಬೆಲೆ ತೆತ್ತು ಖರೀದಿಸಿದ ಈ ಸ್ಮಾರ್ಟ್ ಫೋನ್ ಗಳ ಬ್ಯಾಟರಿ ಹೆಚ್ಚು ಕಾಲ ಬಾಳಿಕೆ ಬರುವುದಿಲ್ಲ. ಇದು ಎಲ್ಲಾ ಜನರ ಸಮಸ್ಯೆಯಾಗಿದೆ. ಸ್ಮಾರ್ಟ್ ಫೋನ್ ಬಳಸಲು ಖುಷಿಯಾಗುತ್ತದೆ. ಆದರೆ ಸಮಸ್ಯೆ ಎದುರಾಗುವುದು ಅದರ ಬ್ಯಾಟರಿಯದ್ದು. ಮನೆಯಿಂದ ಹೊರಗೆ ಹೋಗುವಾಗ ಸಂಪೂರ್ಣವಾಗಿ ಚಾರ್ಜ್‌ ಮಾಡಿಕೊಂಡು ಹೋಗಿದ್ದರೂ, ಪದೇ ಪದೇ ಜಾರ್ಜ್‌ ಇದೆಯಾ…? ಎಂದು ಕಣ್ಣು ಮೊಬೈಲ್‌ ಪರದೆಯ ಮೇಲೆ ಓಡಾಡುತ್ತಾ ಇರುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಸ್ಯಾಮ್ ಸಂಗ್, ರಿಯಲ್ ಮಿ ಮತ್ತು ಇತರ ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನ್ (Smartphone Charging Tips) ತಯಾರಕರು ಕೆಲವು ಸಲಹೆಗಳನ್ನು ಹಂಚಿಕೊಂಡಿದ್ದಾರೆ. ಹಾಗಾಗಿ ನೀವು ಚಾರ್ಜ್ ಮಾಡುವಾಗ ಈ ನಿಯಮವನ್ನು ಪಾಲಿಸಿ.

ಫೋನ್‌ ಬಿಸಿಯಾದರೆ ಜಾರ್ಜ್‌ ಆಫ್‌ ಮಾಡಿ!

ಸ್ಮಾರ್ಟ್ ಫೋನ್ ಗಳಿಗೆ ನಿಯಮಿತವಾಗಿ ಚಾರ್ಜ್ ಮಾಡಿ. ಸ್ಯಾಮ್ಸಂಗ್ ಲಿಥಿಯಂ-ಐಯಾನ್ ಬ್ಯಾಟರಿಗಳು 50 ಪ್ರತಿಶತದಷ್ಟು ಚಾರ್ಜ್ ಆಗಿದ್ದರೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತವೆ. ಆದ್ದರಿಂದ ನಿಮ್ಮ ಮೊಬೈಲ್ ಗೆ ಫುಲ್ ಚಾರ್ಜ್ ಮಾಡಬೇಡಿ. ಹಾಗೇ ನೀವು ಮೊಬೈಲ್ ಹೆಚ್ಚು ಬಳಸದೇ ಇದ್ದರೆ 20ರಿಂದ 80 ಪ್ರತಿಶತದಷ್ಟು ಚಾರ್ಜ್ ಮಾಡಿದರೆ ಸಾಕು. ಅಲ್ಲದೇ ನೀವು ಬ್ಯಾಟರಿ ಚಾರ್ಜ್ ಹಾಕಿದಾಗ ಅದು ತುಂಬಾ ಬಿಸಿಯಾದರೆ ತಕ್ಷಣ ಚಾರ್ಜಿಂಗ್ ಅನ್ನು ಆಫ್ ಮಾಡಿ. ಇದರಿಂದ ಬ್ಯಾಟರಿ ಹೆಚ್ಚು ಕಾಲ ಬಾಳಿಕೆ ಬರುತ್ತದೆ.

ತಾಪಮಾನ ಗಮನಿಸಿ:

ಫೋನ್ ಕಾರ್ಯ ನಿರ್ವಹಿಸಲು 15 ಡಿಗ್ರಿ ಸೆಲ್ಸಿಯಸ್ ನಷ್ಟು ತಾಪಮಾನವಿರಬೇಕು ಎಂದು ರಿಯಲ್ ಮಿ ಶಿಫಾರಸು ಮಾಡುತ್ತದೆ. ಹಾಗಾಗಿ ಇಂತಹ ತಾಪಮಾನವಿದ್ದ ಕಡೆ ಮೊಬೈಲ್ ಚಾರ್ಜ್ ಹಾಕುವುದು ಉತ್ತಮ. ಇದರಿಂದ ಬ್ಯಾಟರಿ ಹೆಚ್ಚು ಬಾಳಿಕೆ ಬರುತ್ತದೆಯಂತೆ.

ಫೋನ್ ಜತೆ ನೀಡಲಾದ ಅಡಾಪ್ಟರ್ ಮೂಲಕವೇ ಚಾರ್ಜ್ ಮಾಡಿ:

ನಿಮ್ಮ ಮೊಬೈಲ್ ಚಾರ್ಜಿಂಗ್ ವೇಗವಾಗಿ ಆಗಲು ಮತ್ತು ಯಾವುದೇ ಅಪಘಾತಗಳನ್ನು ತಪ್ಪಿಸಲು ನಿಮ್ಮ ಫೋನ್ ಗೆ ನೀಡಲಾದ ಅಡಾಪ್ಟರ್ ಅಥವಾ ಕೇಬಲ್ ಮೂಲಕ ಮಾತ್ರ ನೀವು ಚಾರ್ಜ್ ಮಾಡಬೇಕು. ಇಲ್ಲವಾದರೆ ಸ್ಮಾರ್ಟ್ ಫೋನ್ ತಯಾರಕರಿಂದ ನಿಮ್ಮ ಫೋನ್ ಗೆ ಹೊಂದುವಂತಹ ಚಾರ್ಜರ್ ಅಥವಾ ಕೇಬಲ್ ಅನ್ನು ಖರೀದಿಸುವುದು ಉತ್ತಮ.

ಇದನ್ನೂ ಓದಿ: Viral Video: ಬಿಜೆಪಿ ಶಾಲು ಧರಿಸಿ ಅಯೋಧ್ಯೆ ಹೆಸರಿನ ಪ್ರತಿಕೃತಿಗೆ ಬೆಂಕಿ! ಸೋಲೇ ಕಾರಣ!

ಹಿಂಬದಿಯ ಕವರ್ ತೆಗೆದರೆ ಉತ್ತಮ:

ಸ್ಮಾರ್ಟ್ ಫೋನ್ ಚಾರ್ಜ್ ಮಾಡುವಾಗ ಅದರ ಹಿಂಬದಿಯ ಪ್ಯಾನೆಲ್ ನ ತಾಪಮಾನ ಹೆಚ್ಚಾಗುತ್ತದೆ. ಹಾಗಾಗಿ ನೀವು ನಿಮ್ಮ ಮೊಬೈಲ್ ಗೆ ಹಾಕಿದ ಹಿಂಬದಿಯ ಕವರ್ ಗಳನ್ನು ತೆಗೆದು ಹಾಕಿ ಚಾರ್ಜ್ ಮಾಡಿದರೆ ಒಳ್ಳೆಯದು.
ನಿಮ್ಮ ಮೊಬೈಲ್ ಬ್ಯಾಟರಿ ಹೆಚ್ಚು ಬಾಳಿಕೆ ಬರಲು ಮತ್ತು ಚಾರ್ಜ್ ಕಡಿಮೆಯಾಗದಿರಲು ಅದರ ಬ್ರೈಟ್ ನೆಸ್ ಮೋಡ್ ಅನ್ನು ಕಡಿಮೆ ಮಾಡಬಹುದು. ಅಥವಾ ಪವರ್ ಸೇವಿಂಗ್ ಮೋಡ್ ಗೆ ಹಾಕಬಹುದು. ಹಾಗೇ ಮೊಬೈಲ್ ಡೇಟಾದ ಬದಲು ವೈಫೈ ಅನ್ನು ಬಳಸಬಹುದು. ಹಾಗೇ ಆಟೋ ಸಿಂಕ್ ಅನ್ನು ಆಫ್ ಮಾಡಿ. ಅಲ್ಲದೇ ಜಿಪಿಎಸ್, ಇತರ ಆ್ಯಪ್ ಗಳು ಮತ್ತು ಗೇಮ್ ಗಳನ್ನು ಕಡಿಮೆ ಡೌನ್ ಲೋಡ್ ಮಾಡಿ.

Continue Reading

ದೇಶ

Samsung: ಕ್ಯೂಎಲ್ಇಡಿ 4ಕೆ ಪ್ರೀಮಿಯಂ ಟಿವಿ ಸರಣಿ ಬಿಡುಗಡೆ ಮಾಡಿದ ಸ್ಯಾಮ್‌ಸಂಗ್

Samsung: ಸ್ಯಾಮ್‌ಸಂಗ್ ಇಂದು 2024 ಕ್ಯೂಎಲ್ಇಡಿ 4ಕೆ ಟಿವಿ ಸರಣಿಯನ್ನು ಭಾರತದಲ್ಲಿ ರೂ.65990 ರ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಿದ್ದು, 2024 ಕ್ಯೂಎಲ್ಇಡಿ 4ಕೆ ಟಿವಿ ಉತ್ಪನ್ನ ಶ್ರೇಣಿಯು ಪ್ರೀಮಿಯಂ ಫೀಚರ್‌ಗಳ ಸಮೃದ್ಧಿಯನ್ನು ಹೊಂದಿದೆ. 2024 ಕ್ಯೂಎಲ್ಇಡಿ 4ಕೆ ಟಿವಿಯು 55”, 65” ಮತ್ತು 75” ಈ ಮೂರು ಗಾತ್ರಗಳಲ್ಲಿ ದೊರೆಯಲಿದೆ. ಕ್ವಾಂಟಮ್ ಪ್ರೊಸೆಸರ್ ಲೈಟ್ 4ಕೆ ಎಂಬ ಪ್ರೊಸೆಸರ್ ನಿಂದ ಚಾಲಿತವಾಗಿರುವ 2024 ಕ್ಯೂಎಲ್ಇಡಿ 4ಕೆ ಟಿವಿ ಸರಣಿಯು ಕ್ವಾಂಟಮ್ ಡಾಟ್ ಮತ್ತು ಕ್ವಾಂಟಮ್ ಎಚ್‌ಡಿಆರ್‌ ಫೀಚರ್ ಹೊಂದಿದೆ.

VISTARANEWS.COM


on

Samsung launches 2024 QLED 4K premium TV series
Koo

ಬೆಂಗಳೂರು: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್‌ಸಂಗ್ (Samsung) ಇಂದು 2024 ಕ್ಯೂಎಲ್ಇಡಿ 4ಕೆ ಟಿವಿ ಸರಣಿಯನ್ನು ಭಾರತದಲ್ಲಿ ರೂ.65990 ರ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಿದೆ. 2024 ಕ್ಯೂಎಲ್ಇಡಿ 4ಕೆ ಟಿವಿ ಉತ್ಪನ್ನ ಶ್ರೇಣಿಯು ಪ್ರೀಮಿಯಂ ಫೀಚರ್‌ಗಳ ಸಮೃದ್ಧಿಯನ್ನು ಹೊಂದಿದೆ.

2024 ಕ್ಯೂಎಲ್ಇಡಿ 4ಕೆ ಟಿವಿಯು 55”, 65” ಮತ್ತು 75” ಈ ಮೂರು ಗಾತ್ರಗಳಲ್ಲಿ ದೊರೆಯಲಿದ್ದು, ಈ ಉತ್ಪನ್ನ ಶ್ರೇಣಿಯು ಇಂದಿನಿಂದ Samsung.com ಮತ್ತು Amazon.in ಸೇರಿದಂತೆ ಹಲವು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಮಾರಾಟಕ್ಕೆ ಲಭ್ಯವಿದೆ.

2024 ಕ್ಯೂಎಲ್ಇಡಿ 4ಕೆ ಟಿವಿ ಸರಣಿ ವಿಶೇಷತೆ

ಕ್ವಾಂಟಮ್ ಪ್ರೊಸೆಸರ್ ಲೈಟ್ 4ಕೆ ಎಂಬ ಪ್ರೊಸೆಸರ್ ನಿಂದ ಚಾಲಿತವಾಗಿರುವ 2024 ಕ್ಯೂಎಲ್ಇಡಿ 4ಕೆ ಟಿವಿ ಸರಣಿಯು ಕ್ವಾಂಟಮ್ ಡಾಟ್ ಮತ್ತು ಕ್ವಾಂಟಮ್ ಎಚ್‌ಡಿಆರ್‌ ಫೀಚರ್ ಹೊಂದಿದ್ದು, ಜತೆಗೆ 100% ಬಣ್ಣಗಳ ಶ್ರೀಮಂತಿಕೆಯ ಅನುಭವವನ್ನು ಒದಗಿಸುತ್ತದೆ. ಇದಲ್ಲದೇ, ಈ ಸರಣಿಯು 4ಕೆ ಅಪ್‌ಸ್ಕೇಲಿಂಗ್‌ ತಂತ್ರಜ್ಞಾನ ಹೊಂದಿದ್ದು, ಈ ತಂತ್ರಜ್ಞಾನವು ಬಳಕೆದಾರರು ಹೈ ರೆಸಲ್ಯೂಶನ್ 4ಕೆ ಗುಣಮಟ್ಟದಲ್ಲಿ ದೃಶ್ಯಗಳನ್ನು ಆನಂದಿಸಲು ಅನುವು ಮಾಡಿಕೊಡುತ್ತದೆ. ಕ್ಯೂ-ಸಿಂಫನಿ ಸೌಂಡ್ ಟೆಕ್ನಾಲಜಿ, ಡ್ಯುಯಲ್ ಎಲ್‌ಇಡಿ, ಗೇಮಿಂಗ್‌ಗಾಗಿ ಮೋಷನ್ ಎಕ್ಸಲರೇಟರ್ ಮತ್ತು ಪ್ಯಾಂಟೋನ್ ಮೌಲ್ಯೀಕರಣ, ಅತ್ಯುತ್ತಮ ಬಣ್ಣದ ಸಂಯೋಜನೆ ಇತ್ಯಾದಿ ಹೊಂದಿರುವ ಈ ಟಿವಿಯು ಗ್ರಾಹಕರ ವಿಶ್ವಾಸಾರ್ಹ ಉತ್ಪನ್ನವಾಗಿ ಮೂಡಿಬಂದಿದೆ.

ಇದನ್ನೂ ಓದಿ: Kannada New Movie: ಹಳ್ಳಿಗಳನ್ನು ಉಳಿಸುವ ಹುಡುಗರ ಕಥೆ ʻಸಂಭವಾಮಿ ಯುಗೇ ಯುಗೇʼ: ಇದೇ ಜೂನ್‌ 21ಕ್ಕೆ ತೆರೆಗೆ!

ಸ್ಯಾಮ್‌ಸಂಗ್ ಇಂಡಿಯಾದ ವಿಷುಯಲ್ ಡಿಸ್‌ಪ್ಲೇ ಬಿಸಿನೆಸ್‌ನ ಹಿರಿಯ ಉಪಾಧ್ಯಕ್ಷ ಮೋಹನ್‌ದೀಪ್ ಸಿಂಗ್ ಈ ಕುರಿತು ಮಾತನಾಡಿ, ದೃಶ್ಯ ವೀಕ್ಷಣಾ ಕ್ರಮವು ಕಳೆದ ಎರಡು ವರ್ಷಗಳಲ್ಲಿ ಬಹಳ ವೇಗದ ಬದಲಾವಣೆ ಕಂಡಿದೆ. ಬಳಕೆದಾರರು ಹೆಚ್ಚು ತೀವ್ರ ಅನುಭವ ಒದಗಿಸುವ ಮತ್ತು ಪ್ರೀಮಿಯಂ ವೀಕ್ಷಣೆಯ ಅನುಭವವನ್ನು ಹೊಂದಲು ಬಯಸುತ್ತಾರೆ. ಈ ಬೇಡಿಕೆಯನ್ನು ಪೂರೈಸಲು ನಾವು 2024 ಕ್ಯೂಎಲ್ಇಡಿ 4ಕೆ ಟಿವಿ ಸರಣಿಯನ್ನು ಪ್ರಾರಂಭಿಸಿದ್ದೇವೆ. ಈ ಮೂಲಕ ಪ್ರೀಮಿಯಂ ಮತ್ತು ಉನ್ನತ ಮಟ್ಟದ ವೀಕ್ಷಣೆಯ ಅನುಭವ ಒದಗಿಸುವ ನಿಟ್ಟಿನಲ್ಲಿ ಒಂದು ಮೆಟ್ಟಿಲು ಮೇಲೆ ಹೋಗಿದ್ದೇವೆ.

ಈ ಹೊಸ ಟಿವಿ ಸರಣಿಯು 4ಕೆ ಅಪ್‌ಸ್ಕೇಲಿಂಗ್ ಫೀಚರ್ ಹೊಂದಿದ್ದು, ದೃಶ್ಯ ಗುಣಮಟ್ಟವನ್ನು ಒದಗಿಸುತ್ತದೆ. ಪರದೆಯ ಮೇಲೆ ಕಾಣಿಸುವ ದೃಶ್ಯಗಳನ್ನು 4ಕೆ ಗುಣಮಟ್ಟಕ್ಕೆ ಬದಲಿಸುತ್ತದೆ. ಈ ಮೂಲಕ ಗ್ರಾಹಕರ ಒಟ್ಟಾರೆ ವೀಕ್ಷಣೆಯ ಅನುಭವವನ್ನು ಹಲವು ಹಂತಗಳಲ್ಲಿ ಉನ್ನತೀಕರಿಸುತ್ತದೆ ಎಂದು ತಿಳಿಸಿದ್ದಾರೆ.

ಕ್ವಾಂಟಮ್ ತಂತ್ರಜ್ಞಾನ

ಉದ್ಯಮದ ಮಾನದಂಡಗಳನ್ನು ಮೀರಿ 2024 ಕ್ಯೂಎಲ್ಇಡಿ 4ಕೆ ಟಿವಿ ಸರಣಿಯು ಕ್ವಾಂಟಮ್ ಪ್ರೊಸೆಸರ್ ಲೈಟ್ 4ಕೆ ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸುತ್ತಿದೆ. ಈ ಪ್ರೊಸೆಸರ್ ವೀಕ್ಷಣೆ ಮತ್ತು ಆಡಿಯೋ ಗುಣಮಟ್ಟವನ್ನು ಉತ್ತಮಗೊಳಿಸುವ ಶಕ್ತಿಶಾಲಿ ಪ್ರೊಸೆಸರ್ ಆಗಿದೆ. ಹೆಚ್ಚುವರಿಯಾಗಿ ಕ್ವಾಂಟಮ್ ಎಚ್‌ಡಿಆರ್‌ ಫೀಚರ್ ಇದ್ದು, ಸಿನಿಮೀಯ ಪ್ರಮಾಣದಲ್ಲಿ ವಿಸ್ತಾರ ವ್ಯಾಪ್ತಿಯ ಕಾಂಟ್ರಾಸ್ಟ್ ಅನ್ನು ಒದಗಿಸುತ್ತದೆ. ಕ್ವಾಂಟಮ್ ಡಾಟ್ ತಂತ್ರಜ್ಞಾನವು ಜೀವನದ ತರಹವೇ ದೃಶ್ಯಗಳನ್ನು ಕಾಣಿಸುವ ಸೌಲಭ್ಯ ಒದಗಿಸುತ್ತಿದ್ದು, ಬಣ್ಣಗಳ ಒಂದು ಬಿಲಿಯನ್ ಶೇಡ್‌ಗಳನ್ನು ಕಾಣಿಸುತ್ತದೆ. ಜತೆಗೆ ವಿವಿಧ ಹಂತದ ಬ್ರೈಟ್‌ನೆಸ್‌ನಲ್ಲಿಯೂ ಬಣ್ಣಗಳನ್ನು ನಿಖರವಾಗಿ ಪ್ರದರ್ಶಿಸುತ್ತದೆ.

ಇದನ್ನೂ ಓದಿ: UGCET 2024: ಸಿಇಟಿ ಅಪ್‌ಡೇಟ್‌; ಮೊದಲ ದಿನ 250 ವಿಕಲಚೇತನರ ವೈದ್ಯಕೀಯ ತಪಾಸಣೆ

ಅತ್ಯುತ್ತಮ ದೃಶ್ಯ ಗುಣಮಟ್ಟ

ಅಂತಿಮ 4ಕೆ ಅಪ್‌ಸ್ಕೇಲಿಂಗ್ ಫೀಚರ್ ಗ್ರಾಹಕರಿಗೆ ಉತ್ತಮವಾದ ದೃಶ್ಯ ಅನುಭವವನ್ನು ನೀಡುತ್ತದೆ. ಬಳಕೆದಾರರು ವೀಕ್ಷಿಸುತ್ತಿರುವ ಕಂಟೆಂಟ್‌ನ ರೆಸಲ್ಯೂಶನ್ ಏನೇ ಆಗಿದ್ದರೂ ಟಿವಿಗಳು ಸ್ವಯಂಚಾಲಿತವಾಗಿ ಟೋನಿಯರ್-4ಕೆ ಮಟ್ಟವನ್ನು ಅಪ್‌ಗ್ರೇಡ್ ಮಾಡುವುದರಿಂದ ಅವರು 4ಕೆ ಗುಣಮಟ್ಟದ ದೃಶ್ಯಗಳನ್ನು ಆನಂದಿಸಬಹುದು. ಮೇಲಾಗಿ, ಪ್ಯಾಂಟೋನ್ ಮೌಲ್ಯೀಕರಣವು 2000ಕ್ಕೂ ಬಣ್ಣಗಳನ್ನು ಹೆಚ್ಚು ನಿಖರವಾಗಿ ತೋರಿಸುತ್ತದೆ ಮತ್ತು ಡ್ಯುಯಲ್ ಎಲ್ಇಡಿಯ ನವೀನ ಬ್ಯಾಕ್‌ಲೈಟಿಂಗ್ ತಂತ್ರಜ್ಞಾನವು ವೀಕ್ಷಿಸುತ್ತಿರುವ ದೃಶ್ಯದ ಪ್ರಕಾರಕ್ಕೆ ತಕ್ಕಂತೆ ಬ್ಯಾಕ್‌ಲೈಟ್ ಬಣ್ಣದ ಟೋನ್ ಅನ್ನು ಬದಲಿಸುವ ಮೂಲಕ ಉತ್ತಮ ಕಾಂಟ್ರಾಸ್ಟ್ ನ ದೃಶ್ಯವನ್ನು ವೀಕ್ಷಿಸುವ ಸೌಕರ್ಯ ಒದಗಿಸುತ್ತದೆ.

ಭವಿಷ್ಯಕ್ಕೆ ತಕ್ಕ ವಿನ್ಯಾಸ

2024 ಕ್ಯೂಎಲ್ಇಡಿ 4ಕೆ ಟಿವಿ ಸರಣಿಯು ಏರ್‌ಸ್ಲಿಮ್ ವಿನ್ಯಾಸವನ್ನು ಹೊಂದಿದೆ. ಈ ವಿನ್ಯಾಸವು ನಿಮ್ಮ ಟಿವಿಯು ಗೋಡೆಗೆ ಉತ್ತಮವಾಗಿ ಹೊಂದಿಕೆಯಾಗುತ್ತದೆ. ಈ ಟಿವಿಯ ಸ್ಕ್ರೀನ್ ಮತ್ತು ಅಡ್ಜಸ್ಟೇಬಲ್ ಸ್ಟ್ಯಾಂಡ್ ಹೋಮ್ ಎಂಟರ್ಟೈನ್ಮೆಂಟ್ ಸೆಟಪ್ ಅನ್ನು ಬಹಳ ಅದ್ಭುತವಾಗಿ ಕಾಣಿಸುತ್ತದೆ. ಈ ಟಿವಿ ಸರಣಿಯು ಸೋಲಾರ್‌ಸೆಲ್ ರಿಮೋಟ್‌ ಅನ್ನು ಹೊಂದಿದ್ದು, ಸುಸ್ಥಿರತೆಯ ಗುಣವನ್ನು ಹೊಂದಿದೆ. ಈ ರಿಮೋಟ್ ಬ್ಯಾಟರಿಗಳ ಅಗತ್ಯವಿಲ್ಲದೆ ಕಾರ್ಯನಿರ್ವಹಿಸುತ್ತದೆ. ಜತೆಗೆ, ಎಐ ಎನರ್ಜಿ ಮೋಡ್ ವಿದ್ಯುತ್ ಉಳಿತಾಯ ಪ್ರಯೋಜನವನ್ನು ಒದಗಿಸುತ್ತದೆ.

ಅತ್ಯುತ್ತಮ ಧ್ವನಿ ಗುಣಮಟ್ಟ

ತೀವ್ರವಾದ ದೃಶ್ಯ ವೀಕ್ಷಣೆಯ ಅನುಭವ ಒದಗಿಸಲು 2024 ಕ್ಯೂಎಲ್ಇಡಿ 4ಕೆ ಟಿವಿ ಸರಣಿಯು ಸರಣಿಯು ಕ್ಯೂ-ಸಿಂಫನಿ, ಓಟಿಎಸ್ ಲೈಟ್ ಮತ್ತು ಅಡಾಪ್ಟಿವ್ ಸೌಂಡ್‌ ಫೀಚರ್‌ಗಳನ್ನು ಹೊಂದಿದೆ. ಈ ಫೀಚರ್‌ಗಳು ಬಳಕೆದಾರರಿಗೆ ಆನ್-ಸ್ಕ್ರೀನ್ ವೀಕ್ಷಣೆಯನ್ನು ಉತ್ತಮ ರೀತಿಯಲ್ಲಿ ಅನುಭವಿಸಲು ಅನುವು ಮಾಡಿಕೊಡುತ್ತದೆ. ನೈಜ-ಸಮಯದ ದೃಶ್ಯ ವಿಶ್ಲೇಷಣೆ ಮಾಡುವ ಮೂಲಕ 3ಡಿ ಸರೌಂಡ್ ಸೌಂಡ್ ಸೌಕರ್ಯವನ್ನು ಒದಗಿಸುತ್ತದೆ. ಜತೆಗೆ ತೀವ್ರ ರೀತಿಯ ವೀಕ್ಷಣೆಯ ಅನುಭವವನ್ನು ಉಂಟು ಮಾಡುತ್ತದೆ.

ಅತ್ಯುತ್ತಮ ಗೇಮಿಂಗ್ ಸೌಲಭ್ಯ

2024 ಕ್ಯೂಎಲ್ಇಡಿ 4ಕೆ ಟಿವಿ ಸರಣಿಯು ಮೋಷನ್ ಎಕ್ಸಲರೇಟರ್ ಮತ್ತು ಆಟೋ ಲೋ ಲೋಟೆನ್ಸಿ ಮೋಡ್ (ಎಎಲ್ಎಲ್ಎಂ) ತಂತ್ಪಜ್ಞಾನ ಹೊಂದಿದೆ. ಅದರಿಂದಾಗಿ ಗೇಮರ್‌ಗಳು ಉತ್ತಮ ಗೇಮ್ ಆಡಬಹುದಾಗಿದೆ. ಫ್ರೇಮ್‌ಗಳ ನಡುವಿನ ಚಲನೆಯನ್ನು ಮೊದಲೇ ಊಹಿಸಬಹುದಾಗಿದೆ. ಈ ಫೀಚರ್‌ಗಳು ಸ್ಕ್ರೀನ್ ಚಲನೆಯ ಮೃದುತ್ವವನ್ನು ಸುಧಾರಿಸುತ್ತದೆ ಮತ್ತು ಕಡಿಮೆ ಲೇಟೆನ್ಸಿ ಜತೆಗೆ ಫ್ರೇಮ್ ಬದಲಾವಣೆನ್ನು ವೇಗಗೊಳಿಸುತ್ತದೆ.

ಇದನ್ನೂ ಓದಿ:8th Pay Commission: ಭಾರಿ ವೇತನ ಹೆಚ್ಚಳ ನಿರೀಕ್ಷೆಯಲ್ಲಿ ಕೇಂದ್ರ ಸರ್ಕಾರಿ ನೌಕರರು

ಇತರ ಸ್ಮಾರ್ಟ್ ಫೀಚರ್‌ಗಳು

2024 ಕ್ಯೂಎಲ್ಇಡಿ 4ಕೆ ಟಿವಿ ಸರಣಿಯು ಸ್ಯಾಮ್‌ಸಂಗ್‌ನ ಟಿವಿ ಪ್ಲಸ್ ಫೀಚರ್ ಹೊಂದಿದ್ದು, 100+ ಉಚಿತ ಚಾನಲ್‌ಗಳನ್ನು ಒದಗಿಸುತ್ತದೆ. ಇದಲ್ಲದೆ, ಅಂತರ್ನಿರ್ಮಿತ ಮಲ್ಟಿ ವಾಯ್ಸ್ ಅಸಿಸ್ಟೆಂಟ್ ಫೀಚರ್ ಗ್ರಾಹಕರಿಗೆ ಉತ್ತಮ ಕನೆಕ್ಟಿವಿಟಿ ಒದಗಿಸುತ್ತದೆ. ಜತೆಗೆ ಉನ್ನತ ಶ್ರೇಣಿಯ ಭದ್ರತಾ ಪರಿಹಾರವಾದ ಸ್ಯಾಮ್‌ಸಂಗ್ ನಾಕ್ಸ್ ಸುರಕ್ಷಿತ ಅನುಭವವನ್ನು ಒದಗಿಸುತ್ತದೆ.

Continue Reading

ಗ್ಯಾಜೆಟ್ಸ್

Phone Cooling Tips: ಸ್ಮಾರ್ಟ್ ಫೋನ್ ಹೆಚ್ಚು ಬಿಸಿಯಾಗುತ್ತಿದೆಯೇ? ಹಾಗಿದ್ದರೆ ಈ 5 ಟಿಪ್ಸ್ ಫಾಲೋ ಮಾಡಿ

ನೇರ ಸೂರ್ಯನ ಬೆಳಕಿನಲ್ಲಿ ಸಾಧನವನ್ನು ಬಳಸುವುದರಿಂದ ಗ್ಯಾಜೆಟ್ ನ ಬಿಸಿ ಹೆಚ್ಚಾಗಬಹುದು. ಗ್ಯಾಜೆಟ್ ಗಳಲ್ಲಿ ಅಧಿಕ ತಾಪದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಅದನ್ನು ಸರಿಪಡಿಸಲು (Phone Cooling Tips) ಐದು ಸಲಹೆಗಳು ಇಲ್ಲಿವೆ. ಮೊಬೈಲ್ ಫೋನ್ ಹೆಚ್ವು ಬಿಸಿಯಾಗದಂತೆ ಏನೇನು ಮಾಡಬಹುದು ಎನ್ನುವುದರ ಕುರಿತಂತೆ ಇರುವ ಈ ಸಲಹೆಗಳನ್ನು ಪಾಲಿಸಿ.

VISTARANEWS.COM


on

By

Phone Cooling Tips
Koo

ವಾತಾವರಣದಲ್ಲಿ ತಾಪಮಾನ (Temperature) ಅಧಿಕವಾದಾಗ ಇದರ ಪರಿಣಾಮ ಸ್ಮಾರ್ಟ್‌ಫೋನ್‌ (smartphone), ಲ್ಯಾಪ್‌ಟಾಪ್‌ (laptop) ಅಥವಾ ಯಾವುದೇ ಇತರ ಬ್ಯಾಟರಿ (battery) ಚಾಲಿತ ಸಾಧನಗಳಂತಹ ಎಲೆಕ್ಟ್ರಾನಿಕ್ ಗ್ಯಾಜೆಟ್‌ ಗಳ (electronic gadgets) ಮೇಲೂ ಬೀರುತ್ತದೆ. ಹೀಗಾಗಿ ಬ್ಯಾಟರಿ ಚಾಲಿತ ಗ್ಯಾಜೆಟ್ ಗಳು ಹೆಚ್ಚು ಬಿಸಿಯಾಗುವುದನ್ನು (Phone Cooling Tips) ತಪ್ಪಿಸಬೇಕಿದೆ. ಫೋನ್ ಹೆಚ್ಚು ಬಿಸಿಯಾದರೆ ಗ್ಯಾಜೆಟ್ ನಲ್ಲಿ ನಾನಾ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ವಾತಾವರಣ ಬಿಸಿಯಿದ್ದಾಗ ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌ ನಂತಹ ಗ್ಯಾಜೆಟ್‌ಗಳು ಹೆಚ್ಚು ಬಿಸಿಯಾಗುತ್ತದೆ. ಜೊತೆಗೆ ದೈನಂದಿನ ಬಳಕೆಯ ಪರಿಣಾಮವೂ ಇದರ ಮೇಲೆ ಉಂಟಾಗುತ್ತದೆ. ಕೆಲವೊಮ್ಮೆ ಬಳಕೆ ಕಡಿಮೆ ಇದ್ದರೂ ಗೇಮಿಂಗ್, ಹಾಟ್‌ಸ್ಪಾಟ್ ಆಧಾರಿತ ಇಂಟರ್ನೆಟ್ ಹಂಚಿಕೆ ಭಾರೀ ಚಟುವಟಿಕೆಗಳನ್ನು ನಡೆಸುವುದರಿಂದ ಅಥವಾ ನೇರ ಸೂರ್ಯನ ಬೆಳಕಿನಲ್ಲಿ ಸಾಧನವನ್ನು ಬಳಸುವುದರಿಂದ ಗ್ಯಾಜೆಟ್ ನ ಬಿಸಿ ಹೆಚ್ಚಾಗಬಹುದು. ಗ್ಯಾಜೆಟ್ ಗಳಲ್ಲಿ ಅಧಿಕ ತಾಪದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಅದನ್ನು ಸರಿಪಡಿಸಲು ಐದು ಸಲಹೆಗಳು ಇಲ್ಲಿವೆ.

ಲೋಡ್ ಕಡಿಮೆ ಮಾಡಿ

ಸ್ಮಾರ್ಟ್‌ಫೋನ್ ಹೆಚ್ಚು ಬಿಸಿಯಾಗುತ್ತಿದೆ ಎಂದು ಭಾವಿಸಿದರೆ ಬ್ಯಾಟರಿ ಮೇಲೆ ಪ್ರಭಾವ ಬೀರುವ GPS, Wi-Fi, ಡೇಟಾವನ್ನು ಆಫ್ ಮಾಡಿ. ಇದರೊಂದಿಗೆ ಅನಗತ್ಯ ಅಪ್ಲಿಕೇಶನ್‌ಗಳನ್ನು ಆಫ್ ಮಾಡಿ. ಪವರ್ ಬ್ಯಾಂಕ್ ಅಥವಾ ವಾಲ್ ಚಾರ್ಜರ್‌ನಂತಹ ಯಾವುದೇ ಪವರ್ ಮೂಲದಿಂದ ಲಿಂಕ್‌ಗಳನ್ನು ತೆಗೆದುಹಾಕಬಹುದು. ಸಾಧ್ಯವಾದರೆ, ಸ್ವಲ್ಪ ಸಮಯದವರೆಗೆ ಸಾಧನವನ್ನು ಸ್ವಿಚ್ ಆಫ್ ಮಾಡಿ.

ಅಪ್ಲಿಕೇಶನ್‌ಗಳನ್ನು ಮುಚ್ಚಿ

ಅಗತ್ಯವಿಲ್ಲದ ಅಪ್ಲಿಕೇಶನ್‌ಗಳನ್ನು ಮುಚ್ಚಿ ಹಾಗೂ ಪರದೆಯ ಹೊಳಪನ್ನು ಕಡಿಮೆ ಮಾಡಿ. ಇದರ ಬದಲು ಸ್ವಯಂ ಪ್ರಕಾಶಮಾನವನ್ನು ಬಳಸಬಹುದು. ಇದರಿಂದ ಫೋನ್ ಸುತ್ತುವರಿದ ಬೆಳಕನ್ನು ಅವಲಂಬಿಸಿ ಹೊಳಪನ್ನು ಸರಿಹೊಂದಿಸುತ್ತದೆ ಮತ್ತು ಬ್ಯಾಟರಿಯನ್ನು ಉಳಿಸುತ್ತದೆ. ಅಲ್ಲದೆ, ಬ್ಯಾಟರಿ ಜೀವಿತಾವಧಿಯನ್ನು ಉಳಿಸಲು ಮತ್ತು ತಾಪಮಾನ ಹೆಚ್ಚಳವನ್ನು ಮಿತಿಗೊಳಿಸಲು ಕಾರ್ಯಕ್ಷಮತೆಗಿಂತ ದಕ್ಷತೆಗೆ ಆದ್ಯತೆ ನೀಡಲು ವಿದ್ಯುತ್ ಉಳಿತಾಯ ವಿಧಾನಗಳನ್ನು ಬಳಸಿ.

ಬಿಸಿ ತಾಗುವುದನ್ನು ತಪ್ಪಿಸಿ

ಗ್ಯಾಜೆಟ್ ಹೆಚ್ಚು ಬಿಸಿಯಾಗುತ್ತಿದ್ದರೆ ವೇಗವಾಗಿ ಶಾಖವನ್ನು ಹೊರಹಾಕಲು ಹಿಂಬದಿಯ ಕವರ್ ಅನ್ನು ತೆಗೆದುಹಾಕಿ ಮತ್ತು ಸ್ಮಾರ್ಟ್‌ಫೋನ್ ಅನ್ನು ಫ್ಯಾನ್ ಅಡಿಯಲ್ಲಿ ಅಥವಾ ಹವಾನಿಯಂತ್ರಿತ ಕೋಣೆಯಲ್ಲಿ ಇರಿಸಿ. ಅಲ್ಲದೇ ತಾಪಮಾನವು ಗಮನಾರ್ಹ ಮಟ್ಟಕ್ಕೆ ಏರುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಸಾಧ್ಯವಿರುವಲ್ಲೆಲ್ಲಾ ನೇರ ಸೂರ್ಯನ ಬೆಳಕನ್ನು ತಪ್ಪಿಸಿ.

ಪ್ರಮಾಣೀಕೃತ ಚಾರ್ಜರ್/ ಕೇಬಲ್ ಬಳಸಿ

ಸ್ಮಾರ್ಟ್‌ಫೋನ್ ಚಾರ್ಜ್ ಮಾಡಲು ಮೂಲ ಅಡಾಪ್ಟರ್ ಅಥವಾ ಯು ಎಸ್ ಬಿ ಕೇಬಲ್ ಅಥವಾ ಪ್ರಮಾಣೀಕೃತ ಬಿಡಿಭಾಗಗಳನ್ನು ಬಳಸಿ. ಪ್ರಮಾಣೀಕರಿಸದ ಪರಿಕರವು ನಿಧಾನವಾಗಿ ಚಾರ್ಜಿಂಗ್ ಅಥವಾ ಅತಿಯಾಗಿ ಬಿಸಿಯಾಗುವುದರ ಮೂಲಕ ಬ್ಯಾಟರಿಗೆ ಒತ್ತಡವನ್ನು ಉಂಟುಮಾಡಬಹುದು. ಚಾರ್ಜ್ ಮಾಡುವಾಗ ಹೆಚ್ಚುವರಿ ಶಾಖವನ್ನು ತಪ್ಪಿಸಲು ನಿಮ್ಮ ಫೋನ್‌ನಲ್ಲಿ ವೇಗದ ಚಾರ್ಜಿಂಗ್ ಮೋಡ್ ಅನ್ನು ಸ್ವಿಚ್ ಆಫ್ ಮಾಡಿ. ಯಾವುದೇ ಗ್ಯಾಜೆಟ್ ಗೆ ಬೆಂಕಿ ಹಿಡಿದರೆ ನೀರನ್ನು ಬಳಸಬಾರದು ಎಂಬುದು ನೆನಪಿರಲಿ. ಅಪಾಯವನ್ನು ಕಡಿಮೆ ಮಾಡಲು ಅಗ್ನಿಶಾಮಕದವರನ್ನು ಕರೆಸಿ.

ಇದನ್ನೂ ಓದಿ: Battery Life Tips: ಈ 5 ಸಲಹೆ ಪಾಲಿಸಿ; ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿ ಸಾಮರ್ಥ್ಯ ಹೆಚ್ಚಿಸಿ!

ಹೆಚ್ವಿನ ಟಾಸ್ಕ್ ಮಿತಿಗೊಳಿಸಿ

ವಿಪರೀತ ಶಾಖದಲ್ಲಿ ಹೊರಾಂಗಣದಲ್ಲಿ ಸ್ಮಾರ್ಟ್‌ಫೋನ್‌ಗಳಲ್ಲಿ ಆಟಗಳನ್ನು ಆಡುವುದನ್ನು ಅಥವಾ ಸಿಪಿಯು, ಜಿಪಿಯು ತೀವ್ರ ಟಾಸ್ಕ್ ನಿರ್ವಹಿಸುವುದನ್ನು ತಪ್ಪಿಸಿ. ಜೊತೆಗೆ, ಹೆಚ್ಚಿನ ಹೊಳಪಿನಲ್ಲಿ (ಬ್ರೈಟ್ ನೆಸ್) ಹೆಚ್ ಡಿ ಆರ್ ವೀಡಿಯೊ ಪ್ಲೇಬ್ಯಾಕ್ ಅನ್ನು ಸೀಮಿತಗೊಳಿಸುವುದು ಸಹ ತಾಪಮಾನವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Continue Reading
Advertisement
International Yoga Day 2024
ಫ್ಯಾಷನ್4 mins ago

International Yoga Day 2024: ಯುವತಿಯರ ಯೋಗಾಭ್ಯಾಸಕ್ಕೆ ಸಾಥ್‌ ನೀಡುವ 3 ಶೈಲಿಯ ಫ್ಯಾಷನ್‌ವೇರ್ಸ್

wild animals Attack
ಕೊಡಗು9 mins ago

Wild Animals Attack : ಮನೆಯಂಗಳವನ್ನು ಧ್ವಂಸ ಮಾಡಿದ ಆನೆಗಳು; ಗ್ರಾಮಕ್ಕೆ ಓಡೋಡಿ ಬಂದ ಕರಡಿ

Viral Video
ಕ್ರಿಕೆಟ್23 mins ago

Viral Video: ಅಭಿಮಾನಿ ಮೇಲೆ ಹಲ್ಲೆಗೆ ಯತ್ನಿಸಿದ ಪಾಕ್​ ವೇಗಿ; ತಡೆದು ನಿಲ್ಲಿಸಿದ ಪತ್ನಿ

Kempegowda Jayanti
ಕರ್ನಾಟಕ29 mins ago

Kempegowda Jayanti: ಬೆಂಗಳೂರಲ್ಲಿ ಜೂನ್ 27ಕ್ಕೆ ಕೆಂಪೇಗೌಡ ಜಯಂತಿ: ಡಿಸಿಎಂ ಡಿ.ಕೆ.ಶಿವಕುಮಾರ್‌

Train Accident
ದೇಶ30 mins ago

Train Accident: ಸಿಬ್ಬಂದಿ ನಿರ್ಲಕ್ಷ್ಯ, ಸಿಗ್ನಲ್‌ ದೋಷ; ಬಂಗಾಳ ರೈಲು ಅಪಘಾತಕ್ಕೇನು ಕಾರಣ?

Mumbai News
ದೇಶ60 mins ago

‘ಯಾಕ್‌ ಹೀಗ್‌ ಮೋಸ ಮಾಡ್ದೆ’ ಎನ್ನುತ್ತಲೇ ಪ್ರೇಯಸಿಯನ್ನು ನಡು ರಸ್ತೆಯಲ್ಲಿ ಬಡಿದು ಕೊಂದ ಪ್ರೇಮಿ; Video ಇದೆ

prajwal revanna case test
ಪ್ರಮುಖ ಸುದ್ದಿ1 hour ago

Prajwal Revanna Case: ʼಮತ್ತೆ ಮತ್ತೆ ಅದನ್ನು ತೋರಿಸೋಕೆ ಮುಜುಗರ….ʼ ಜಡ್ಜ್‌ ಮುಂದೆ ಅಲವತ್ತುಕೊಂಡ ಪ್ರಜ್ವಲ್!‌

Gemini Mobile App
ತಂತ್ರಜ್ಞಾನ1 hour ago

Gemini Mobile App: ಕನ್ನಡ ಸೇರಿದಂತೆ 9 ಭಾರತೀಯ ಭಾಷೆಗಳಲ್ಲಿ ಗೂಗಲ್ ಜೆಮಿನಿ ಆ್ಯಪ್; ಏನಿದರ ಉಪಯೋಗ?

SA vs USA
ಕ್ರೀಡೆ1 hour ago

SA vs USA: ನಾಳೆ ಮೊದಲ ಸೂಪರ್​-8 ಪಂದ್ಯ; ಅಮೆರಿಕ ಸವಾಲಿಗೆ ಹರಿಣ ಪಡೆ ಸಿದ್ಧ

Kolar News
ಕೋಲಾರ1 hour ago

Kolar news : ಬ್ಲಾಸ್ಟಿಂಗ್‌ ವೇಳೆ ಉರುಳಿ ಬಿದ್ದ ಬಂಡೆಕಲ್ಲು, ಟ್ರ್ಯಾಕ್ಟರ್‌-ಹಿಟಾಚಿ ಅಪ್ಪಚ್ಚಿ; ಮೂವರು ಕಾರ್ಮಿಕರು ನಾಪತ್ತೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಮೈಸೂರು1 day ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 day ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ2 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ2 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ2 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ3 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ4 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು4 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು4 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ4 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

ಟ್ರೆಂಡಿಂಗ್‌