WhatsApp: 'ಸಂಚಾರ್ ಸಾಥಿ'ಯಲ್ಲಿ ರಿಪೋರ್ಟ್‌ ಮಾಡಲಾದ ಮೊಬೈಲ್ ನಂಬರ್ ತೆಗೆದು ಹಾಕಲಿದೆ ವಾಟ್ಸಾಪ್! - Vistara News

ಗ್ಯಾಜೆಟ್ಸ್

WhatsApp: ‘ಸಂಚಾರ್ ಸಾಥಿ’ಯಲ್ಲಿ ರಿಪೋರ್ಟ್‌ ಮಾಡಲಾದ ಮೊಬೈಲ್ ನಂಬರ್ ತೆಗೆದು ಹಾಕಲಿದೆ ವಾಟ್ಸಾಪ್!

WhatsApp: ಭಾರತದಲ್ಲಿ ಮೊಬೈಲ್ ಬಳಕೆದಾರರ ಸುರಕ್ಷತೆಯನ್ನು ಹೆಚ್ಚಿಸುವುದಕ್ಕಾಗಿ ಮೊನ್ನೆಯಷ್ಟೇ ಕೇಂದ್ರ ಸರ್ಕಾರವು ಸಂಚಾರ್ ಸಾಥಿ (Sanchar Saathi) ಎಂಬ ಹೊಸ ಪೋರ್ಟಲ್ ಆರಂಭಿಸಿದೆ.

VISTARANEWS.COM


on

Whatsapp will remove number flagged in Sanchar Saathi portal
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಮೊಬೈಲ್ ಬಳಕೆದಾರರ ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಮೊನ್ನೆಯಷ್ಟೇ ಸಂಚಾರ್ ಸಾಥಿ (Sanchar Saathi) ಪೋರ್ಟಲ್ ಆರಂಭಿಸಿದೆ. ಈ ಪೋರ್ಟಲ್‌ನಲ್ಲಿ ಬಳಕೆದಾರರು ನಿರ್ದಿಷ್ಟ ನಂಬರ್‌ಗಳನ್ನು ಮೋಸದ ಅಥವಾ ನಂಕಲಿ ನಂಬರ್‌ಗಳೆಂದು ಗುರುತಿಸಿದರೆ, ಅಂಥ ಫೋನ್ ನಂಬರ್‌ಗಳನ್ನು ವಾಟ್ಸಾಪ್‌ (Wahtsapp) ತನ್ನ ವೇದಿಕೆಯಿಂದ ಕಿತ್ತು ಹಾಕಲಿದೆ. ಕೇಂದ್ರ ಸಂವಹನ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಮಂಗಳವಾರ ಸಂಚಾರ್ ಸಾಥಿ ಪೋರ್ಟಲ್‌ವನ್ನು ಲೋಕಾರ್ಪಣೆ ಮಾಡಿದ್ದರು.

ಈ ಮೊಬೈಲ್ ಸಂಖ್ಯೆಗಳನ್ನು ನಕಲಿ ದಾಖಲೆಗಳನ್ನು ಬಳಸಿ ನೋಂದಾಯಿಸಿದ್ದರೆ ಅಥವಾ ಯಾವುದಾದರೂ ರೂಪದಲ್ಲಿ ಸೈಬರ್ ಅಪರಾಧಕ್ಕಾಗಿ ಬಳಸಲಾಗಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ ಎಂದು ವೈಷ್ಣವ್ ಹೇಳಿದ್ದಾರೆ.

ಎಲ್ಲ ಒಟಿಟಿ ವೇದಿಕೆಗಳು ಸಹಕಾರ ನೀಡಿದ್ದು, ನಕಲಿ ನಂಬರ್‌ಗಳನ್ನು ಹೊಂದಿರುವ ಬಳಕೆದಾರರನ್ನು ಗುರುತಿಸಲು ಮತ್ತು ನೋಂದಣಿಯಿಂದ ತೆಗೆದು ಹಾಕಲು ಎಲ್ಲ ಒಟಿಟಿಗಳು ಸಂಪೂರ್ಣ ಸಹಕಾರ ನೀಡಲು ಬದ್ಧವಾಗಿವೆ. ಸರ್ಕಾರ ಕೂಡ ಇತರ ಮೆಸೇಜಿಂಗ್ ಮತ್ತು ಒಟಿಟಿ ಕಾಲಿಂಗ್ ‌ಆ್ಯಪ್‌ಗಳ ಜತೆ ಮಾತುಕತೆ ನಡೆಸಿದ್ದು, ವಂಚನೆಯ ಅಥವಾ ನಕಲಿ ಎಂದು ಗುರುತಿಸಲಾದ ನಂಬರ್‌ಗಳನ್ನು ನೋಂದಣಿಯಿಂದ ತೆಗೆದು ಹಾಕುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಸಹಮತ ವ್ಯಕ್ತಪಡಿಸಿವೆ ಎಂದು ವೈಷ್ಣವ್ ಅವರು ಹೇಳಿದ್ದಾರೆ.

ಇದನ್ನೂ ಓದಿ: WhatsApp New Feature: ಈಗ ನಾಲ್ಕು ಫೋನ್‌ಗಳಲ್ಲಿ ಒಂದೇ ವಾಟ್ಸಾಪ್ ಖಾತೆ ಬಳಸಿ! ಈ ಫೀಚರ್‌ನಿಂದ ಏನು ಲಾಭ?

ವೇದಿಕೆಯಿಂದ ಕೆಟ್ಟ ಬಳಕೆದಾರರನ್ನು ತೆಗೆದುಹಾಕುವುದು ಸೇರಿದಂತೆ ಭದ್ರತೆ ಮತ್ತು ಸುರಕ್ಷಿತ ಬಳಕೆದಾರರ ಅನುಭವವನ್ನು ಸ್ಥಿರವಾಗಿ ಖಚಿತಪಡಿಸಿಕೊಳ್ಳಲು ವಾಟ್ಸಾಪ್ ಸರ್ಕಾರದೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿದೆ ವಾಟ್ಸಾಪ್ ವಕ್ತಾರರು ಹೇಳಿದ್ದಾರೆ. ಬಳಕೆದಾರರ ಸುರಕ್ಷತೆಯನ್ನು ರಕ್ಷಿಸುವಲ್ಲಿ ವಾಟ್ಸಾಪ್ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಸೇವೆಗಳಲ್ಲಿ ಮುಂಚೂಣಿಯಲ್ಲಿದೆ. ಬಳಕೆದಾರರ ಸುರಕ್ಷತೆ ಶಿಕ್ಷಣ ಮತ್ತು ಜಾಗೃತಿಯನ್ನು ನಿಯಮಿತವಾಗಿ ಚಾಲ್ತಿಯಲ್ಲಿಡುವುದರ ಜೊತೆಗೆ ಬ್ಲಾಕ್ ಮತ್ತು ರಿಪೋರ್ಟ್, ಎರಡು-ಹಂತದ ಪರಿಶೀಲನೆ ಸೇರಿದಂತೆ ಇತರ ಅಂತರ್ನಿರ್ಮಿತ ಸುರಕ್ಷತಾ ಸಾಧನಗಳನ್ನು ನಾವು ಒದಗಿಸುವುದನ್ನು ಮುಂದುವರಿಸುತ್ತೇವೆ ವಾಟ್ಸಾಪ್ ವಕ್ತಾರರು ತಿಳಿಸಿದ್ದಾರೆ.

ಸಂಚಾರ್ ಸಾಥಿ ಪೋರ್ಟಲ್ ಆರಂಭ

ಗೂಗಲ್ ಮತ್ತು ಐಫೋನ್‌ನ ಫೈಂಡ್ ಮೈ ಡಿವೈಸ್ (Find My Device) ರೀತಿಯ ಫೀಚರ್ ಒಳಗೊಂಡಿರುವ ‘ಸಂಚಾರ್ ಸಾಥಿ’ (Sanchar Saathi) ಜಾಲತಾಣವನ್ನು ಕೇಂದ್ರ ಸರ್ಕಾರವು ಲಾಂಚ್. ಈ ಮೂಲಕ ಮೊಬೈಲ್ ಫೋನ್ ಸುರಕ್ಷತೆಗೆ ಮತ್ತೊಂದು ಹಂತವನ್ನು ಒದಗಿಸಿದಂತಾಗಿದೆ. ಕೇಂದ್ರ ರೈಲ್ವೆ, ಸಂಹವನ ಮತ್ತು ಎಲೆಕ್ಟ್ರಾನಿಕ್ಸ್, ಐಟಿ ಸಚಿವ ಅಶ್ವಿನ್ ವೈಷ್ಣವ್ (Ashwini Vaishnaw) ಅವರು ಈ ಜಾಲತಾಣಕ್ಕೆ ಚಾಲನೆ ನೀಡಿದರು.

ಸಾಧನಗಳ ಪತ್ತೆ ಮತ್ತು ಟ್ರ್ಯಾಕಿಂಗ್‌ಗಾಗಿ ಗೂಗಲ್ ಮತ್ತು ಆಪಲ್ ಒದಗಿಸುವ ಸೇವೆಗಳಿಗೆ ಪರ್ಯಾಯವಾಗಿ ಪೋರ್ಟಲ್ ಬಳಕೆಯಾಗಲಿದೆ. ಆಂಡ್ರಾಯ್ಡ್ ಫೋನ್‌ಗಳಿಗಾಗಿ, ಐಒಎಸ್ ಸಾಧನವನ್ನು ಪತ್ತೆಹಚ್ಚಲು ಗೂಗಲ್, ಫೈಂಡ್, ಲಾಕ್, ಅಥವಾ ಎರೇಜ್, ಕಳೆದು ಹೋದ ಸಾಧನದ ಆಯ್ಕೆಯನ್ನು ಒದಗಿಸುತ್ತದೆ. ಬಳಕೆದಾರರು ಐಒಎಸ್ ಸಾಧನ ಪತ್ತೆ ಹಚ್ಚಲು iCloud.com/find ಅಥವಾ ಫೈಂಡ್ ಮೈ ಆ್ಯಪ್ ಬಳಸಬೇಕಾಗುತ್ತದೆ.

ಸಂಚಾರ್ ಸಾಥಿ ಪೋರ್ಟಲ್ ನಾಗರಿಕ ಕೇಂದ್ರಿತ ಪ್ರಾಜೆಕ್ಟ್ ಆಗಿದ್ದು, ಟೆಲಿಕಮ್ಯುನಿಕೇಷನ್ ಇಲಾಖೆಯ ನೇತೃತ್ವದಲ್ಲಿ ಕೈಗೊಳ್ಳಲಾಗಿದೆ. ಮೊಬೈಲ್ ಗ್ರಾಹಕರು ಮತ್ತು ಅವರು ಭದ್ರತೆಯನ್ನು ಹೆಚ್ಚಿಸುವುದಕ್ಕಾಗಿ ಕೈಗೊಳ್ಳಲಾಗಿದೆ. ಜನರು ತಮ್ಮ ಹೆಸರಿನಲ್ಲಿ ನೀಡಲಾದ ಮೊಬೈಲ್ ಸಂಪರ್ಕಗಳನ್ನು ನೋಡಲು, ಅಗತ್ಯವಿಲ್ಲದ ಸಂಪರ್ಕ ಕಡಿತಗೊಳಿಸಲು, ಕಾಣೆಯಾದ ಮೊಬೈಲ್ ಫೋನ್‌ಗಳನ್ನು ನಿರ್ಬಂಧಿಸಲು ಅಥವಾ ಪತ್ತೆಹಚ್ಚಲು ಮತ್ತು ಹೊಸ ಅಥವಾ ಬಳಸಿದ ಮೊಬೈಲ್ ಫೋನ್ ಖರೀದಿಸುವಾಗ ಸಾಧನಗಳ ದೃಢೀಕರಣವನ್ನು ಪರಿಶೀಲಿಸಲು ಸಂಚಾರ್ ಸಾಥಿ ನೆರವು ಒದಗಿಸಲಿದೆ.

ಸಂಚಾರ್ ಸಾಥಿ ಪೋರ್ಟಲ್‌ ಸಿಇಐಆರ್(ಸೆಂಟ್ರಲ್ ಇಕ್ವಿಪ್‌ಮೆಂಟ್ ಐಡೆಂಟಿಟಿ ರಿಜಿಸ್ಟರ್), ನೋ ಇವರ್ ಮೊಬೈಲ್(ಕೆವೈಎಂ) ಮತ್ತು ಎಎಸ್‌ಟಿಆರ್‌ಗಳನ್ನು ಒಳಗೊಂಡಿದೆ. ಸಿಇಐಆರ್ ಆರಂಭಿಕ ಪ್ರಾಜೆಕ್ಟ್ ಆಗಿದ್ದು, ಟೆಲಿಕಾಂ ಸಚಿವಾಲಯವು ದೇಶದ ಕೆಲವು ಟೆಲಿಕಾಂ ಸರ್ಕಲ್‌ಗಳಲ್ಲಿ ಆರಂಭಿಸಿದೆ. ಈ ಪೋರ್ಟಲ್, ಟೆಲಿಕಾಂ ಅನಾಲಿಟಿಕ್ಸ್ ಫಾರ್ ಫ್ರಾಡ್ ಮ್ಯಾನೇಜ್ಮೆಂಟ್ ಆ್ಯಂಡ್ ಕಂನ್ಸೂಮರ್ ಪ್ರೊಟೆಕ್ಷನ್(ಟಿಎಎಫ್‍‌ಸಿಒಪಿ) ಮತ್ತೊಂದು ಮಾದರಿಯನ್ನು ಒಳಗೊಂಡಿದೆ.

ಕಳೆದ ಹೋದ ಅಥವಾ ಕಳ್ಳತನವಾದ ಮೊಬೈಲ್‌ ಫೋನ್‌ಗಳನ್ನು ಮರಳಿ ಪಡೆಯಲು ಸಿಇಐಆರ್ ನೆರವು ಒದಗಿಸಲಿದೆ. ಕಳೆದ ಹೋದ ಅಥವಾ ಕಳ್ಳತನ ಮಾಡಲಾದ ಮೊಬೈಲ್‌ ಫೋನ್‌ಗಳ ಬಳಕೆಯನ್ನು ದೇಶದ ಎಲ್ಲೆಡೆ ಬಳಸಲು ನಿರ್ಬಂಧಿಸಲು ಅವಕಾಶ ಕಲ್ಪಿಸಿ ಕೊಡುತ್ತದೆ. ನಿರ್ಬಂಧಿಸಲ್ಪಟ್ಟ ಮೊಬೈಲ್‌ನ್ನು ಬಳಸಲು ಮುಂದಾದರೆ, ಅಂಥ ಮೊಬೈಲ್ ‍‌ಎಲ್ಲಿದೆ ಎಂಬುದನ್ನು ಪತ್ತೆ ಹಚ್ಚಲು ಸುಲಭವಾಗಲಿದೆ.

ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ತಂತ್ರಜ್ಞಾನ

WhatsApp colour: ವಾಟ್ಸ್ಆ್ಯಪ್​ನ ಬಣ್ಣ ಬದಲಾಗಿದ್ದು ಯಾಕೆ? ಏನಿದರ ಗುಟ್ಟು?

WhatsApp colour: ನಿರಂತರ ಅಪ್ಡೇಟ್ ಆಗುತ್ತಿರುವ ವಾಟ್ಸ್ ಆಪ್ ನಲ್ಲಿ ಈಗ ಬಣ್ಣ ಬದಲಾವಣೆ ಆಗಿದ್ದು, ಹೆಚ್ಚಿನವರು ಇದನ್ನು ಗಮನಿಸಿ ಇಲ್ಲದೇ ಇದ್ದರೂ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆ ಆರಂಭವಾಗಿದೆ. ಯಾಕೆ ಈ ಬಣ್ಣ ಬದಲಾಯಿಸಲಾಗಿದೆ ಗೊತ್ತೇ?

VISTARANEWS.COM


on

By

WhatsApp color
Koo

ಜಗತ್ತಿನಾದ್ಯಂತ (world) ಎರಡು ಬಿಲಿಯನ್ ಗಿಂತಲೂ ಹೆಚ್ಚು ಮಂದಿ ಬಳಸುತ್ತಿರುವ ವಾಟ್ಸ್ ಆಪ್ (whatsApp) ತನ್ನ ವೈಶಿಷ್ಟ್ಯದಿಂದಾಗಿ ನಿರಂತರ ಎಲ್ಲರ ಗಮನ ಸೆಳೆಯುತ್ತದೆ. ಎಲ್ಲರೂ ಬಹು ಸುಲಭವಾಗಿ ಬಳಸಬಹುದಾದ ಈ ಪುಟ್ಟ ಆ್ಯಪ್ ಈಗ ನವೀಕರಣಗೊಂಡಿದ್ದು ಬಣ್ಣದ ಬದಲಾವಣೆಯಿಂದ (WhatsApp colour) ಬಳಕೆದಾರರಲ್ಲಿ ಚರ್ಚೆಯನ್ನು ಹುಟ್ಟು ಹಾಕಿದೆ.

ವಾಟ್ಸ್ ಆಪ್ ಈಗ ಒಂದು ಸೂಕ್ಷ್ಮ ಬದಲಾವಣೆಗೆ ಒಳಗಾಗಿದ್ದು ಅದು ಅದರ ಹಸಿರು ಬಣ್ಣ (green colour). ಸಂದೇಶ ಕಳುಹಿಸುವಿಕೆಯ ಅಪ್ಲಿಕೇಶನ್‌ ವಾಟ್ಸ್ ಆ್ಯಪ್​ ನ ಭಾಗಗಳು ಈಗ ಲೋಗೋದಂತೆಯೇ ಹಸಿರು ಬಣ್ಣಕ್ಕೆ ತಿರುಗಿದೆ. ಆದರೆ ಇದು ಹೆಚ್ಚಿನವರ ಗಮನಕ್ಕೆ ಬರಲಿಲ್ಲವಾದರೂ ಕೆಲವರು ಮಾತ್ರ ಇದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಪ್ರಾರಂಭಿಸಿದ್ದಾರೆ.

ಕೆಲವು ಬಳಕೆದಾರರು ಈ ಬದಲಾವಣೆ ತುಂಬಾ ಚೆನ್ನಾಗಿಲ್ಲ ಎಂದು ಹೇಳಿದ್ದು, ಮೆಟಾ (meta) ಮಾಲೀಕತ್ವದ ಈ ಅಪ್ಲಿಕೇಶನ್ ಈ ರೀತಿ ಮಾಡಲು ಏಕೆ ನಿರ್ಧರಿಸಿದೆ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Deep Fakes: ಶೇ. 75 ಭಾರತೀಯರು ಡೀಪ್‌ಫೇಕ್‌ಗೆ ಒಳಗಾಗಿದ್ದಾರೆ; ಗೊತ್ತಾಗಿದ್ದು ಶೇ.22 ಮಂದಿಗೆ ಮಾತ್ರ!

ಭಾರತೀಯ ಬಳಕೆದಾರರಿಗೂ ಈ ಹೊಸ ಅಪ್ಡೇಟ್ ಲಭ್ಯವಾಗಿದ್ದು, ಒಂದು ವೇಳೆ ವಾಟ್ಸ್ ಆಪ್ ಈ ಸಣ್ಣ ಬದಲಾವಣೆ ಕಂಡು ಬಂದರೆ ಈ ಬಗ್ಗೆ ಆಶ್ಚರ್ಯ ಪಡಬೇಕಿಲ್ಲ.


ವಾಟ್ಸಾಪ್ ಏಕೆ ಹಸಿರಾಗಿದೆ?

ವಾಟ್ಸ್ ಆ್ಯಪ್​​ನ ಮಾಲೀಕರಾಗಿರುವ ಮೆಟಾ ಈ ಬದಲಾವಣೆಗಳ ಮೂಲಕ ಬಳಕೆದಾರರಿಗೆ ಆಧುನಿಕ, ಹೊಸ ಅನುಭವ ನೀಡುವ ಗುರಿಯನ್ನು ಹೊಂದಿದೆ ಮತ್ತು ಅದನ್ನು ಹೆಚ್ಚು ಸುಲಭವಾಗಿ ಮತ್ತು ಬಳಸಲು ಸರಳವಾಗುವಂತೆ ಮಾಡಲಾಗುತ್ತದೆ ಎಂದು ಹೇಳಿದೆ.

ಬದಲಾವಣೆಗಳೇನು?

ವಾಟ್ಸ್ ಆ್ಯಪ್ ನವೀಕರಣದ ಬಳಿಕ iOS ಮತ್ತು Android ಬಳಕೆದಾರರಿಗೆ ಇದು ಲಭ್ಯವಾಗುತ್ತಿದೆ. Android ಬಳಕೆದಾರರು ಹಿಂದಿನ ಹಸಿರು ಬಣ್ಣದಲ್ಲಿ ಬದಲಾವಣೆಯನ್ನು ಗಮನಿಸಬಹುದು.

ವಾಟ್ಸ್​​ಆ್ಯಪ್​ನಲ್ಲಿ ಹಸಿರು ಬಣ್ಣವನ್ನು ಮಾತ್ರವಲ್ಲ ಸ್ಟೇಟಸ್ ಬಾರ್‌ನಿಂದ ಚಾಟ್-ಲಿಸ್ಟ್ ವಿಂಡೋದವರೆಗೆ ಎಲ್ಲವೂ ವಿನ್ಯಾಸ ಬದಲಾವಣೆಯಾಗಿದೆ. ಅಪ್ಲಿಕೇಶನ್‌ನಲ್ಲಿ ಹಂಚಿಕೊಳ್ಳಲಾದ ಲಿಂಕ್‌ಗಳು ಕೂಡ ಹಸಿರು ಬಣ್ಣದಲ್ಲಿ ಗೋಚರಿಸುತ್ತವೆ.

ಆಂಡ್ರಾಯ್ಡ್ ಬಳಕೆದಾರರು ಡಾರ್ಕ್ ಮೋಡ್‌ ನಲ್ಲಿ ಸೂಕ್ಷ್ಮ ಹೊಂದಾಣಿಕೆಗಳನ್ನು ಕಾಣಬಹುದು. ಡಾರ್ಕ್ ಮೋಡ್ ನಲ್ಲಿ ಅದು ಇನ್ನಷ್ಟು ಗಾಢವಾಗುತ್ತದೆ ಮತ್ತು ಲೈಟ್ ಮೋಡ್ ನಲ್ಲಿ ಹೆಚ್ಚುವರಿ ಸ್ಥಳಾವಕಾಶದೊಂದಿಗೆ ಸುಧಾರಿತ ಓದುವಿಕೆಗೆ ಪ್ರಾಶಸ್ತ್ಯ ನೀಡುತ್ತದೆ.

ಬಳಕೆದಾರರ ಅನುಭವ ಸುಧಾರಣೆಗೆ ಕ್ರಮ

ವಾಟ್ಸ್ ಆ್ಯಪ್ ನಲ್ಲಿ ಬಣ್ಣ ಬದಲಾವಣೆಯೊಂದಿಗೆ ಬಳಕೆದಾರರ ಅನುಭವವನ್ನು ಸುಧಾರಿಸುವ ಉದ್ದೇಶದಿಂದ ಹಲವು ನವೀಕರಣಗಳನ್ನು ಮಾಡಿದೆ.

ವಾಟ್ಸ್ ಆ್ಯಪ್ ತನ್ನ ಸಂದೇಶ ಸೂಚಕಗಳಲ್ಲಿ ಕೆಲವು ಪದಗಳನ್ನು ದೊಡ್ಡಕ್ಷರ ಮಾಡಲು ಇತ್ತೀಚೆಗೆ ಪರಿಶೀಲನೆಗೆ ಒಳಗಾಯಿತು. ಕೆಲವು ಬಳಕೆದಾರರು “ಆನ್‌ಲೈನ್” ಮತ್ತು “ಟೈಪಿಂಗ್” ನ ಮೊದಲ ಅಕ್ಷರಗಳನ್ನು ಕ್ರಮವಾಗಿ “ಆನ್‌ಲೈನ್” ಮತ್ತು “ಟೈಪಿಂಗ್” ಎಂದು ದೊಡ್ಡಕ್ಷರದಲ್ಲಿ ಬದಲಾವಣೆಯನ್ನು ಗಮನಿಸಿದ್ದಾರೆ. ಆಂಡ್ರಾಯ್ಡ್ ಮತ್ತು ಐಒಎಸ್ ಎರಡರಲ್ಲೂ ಗಮನಿಸಲಾದ ಬದಲಾವಣೆಯು ಆನ್‌ಲೈನ್‌ನಲ್ಲಿ ಮಹತ್ವದ ಚರ್ಚೆಗಳನ್ನು ಹುಟ್ಟುಹಾಕಿದೆ.

Continue Reading

ತಂತ್ರಜ್ಞಾನ

English Speaking Practice: ಸರಳ, ಸುಲಭವಾಗಿ ಇಂಗ್ಲಿಷ್ ಮಾತನಾಡಬೇಕೇ?; ಗೂಗಲ್​​ನಲ್ಲಿದೆ ‘ಸ್ಪೀಕಿಂಗ್ ಪ್ರಾಕ್ಟೀಸ್’

English Speaking Practice: ಇಂಗ್ಲಿಷ್ ಮಾತನಾಡುವ ಕೌಶಲವನ್ನು ವೃದ್ಧಿಸಿಕೊಳ್ಳಬೇಕೇ. ಇದಕ್ಕಾಗಿ ಇನ್ನು ಹೆಚ್ಚಿನ ಕಡೆ ಅಲೆದಾಡಬೇಕಿಲ್ಲ. ನಾವು ನಿತ್ಯ ಏನಾದರೊಂದು ವಿಷಯದ ಬಗ್ಗೆ ಹುಡುಕಾಡುವ ಗೂಗಲ್ ನಲ್ಲೇ ಇದು ಲಭ್ಯವಾಗಲಿದೆ.

VISTARANEWS.COM


on

By

English Speaking Practice
Koo

ಸ್ಮಾರ್ಟ್ ಫೋನ್ (smart phone) ಬಳಕೆದಾರರ ಇಂಗ್ಲಿಷ್ ಮಾತನಾಡುವ ಕೌಶಲ್ಯವನ್ನು (English Speaking Practice) ಸುಧಾರಿಸಲು ಗೂಗಲ್ (google) ಹೊಸ ವೈಶಿಷ್ಠ್ಯವೊಂದನ್ನು ಪರಿಚಯಿಸಿದೆ. ‘ಸ್ಪೀಕಿಂಗ್ ಪ್ರಾಕ್ಟೀಸ್’ ಎಂದು ಕರೆಯಲ್ಪಡುವ ಈ ಹೊಸ ವೈಶಿಷ್ಟ್ಯವು ಪ್ರಸ್ತುತ ಅರ್ಜೆಂಟೀನಾ (Argentina), ಕೊಲಂಬಿಯಾ (Colombia), ಭಾರತ (India), ಇಂಡೋನೇಷ್ಯಾ (Indonesia), ಮೆಕ್ಸಿಕೋ (Mexico) ಮತ್ತು ವೆನೆಜುವೆಲಾದಲ್ಲಿ (Venezuela) ಗೂಗಲ್ ಹುಡುಕಾಟದಲ್ಲಿ ಲಭ್ಯವಾಗುತ್ತಿದೆ.

ಆರ್ಟಿಫಿಷಿಯಲ್ ಇಂಟಲಿಜೆನ್ಸ್ (AI) ಸಹಾಯದಿಂದ ಹೊಸ ವೈಶಿಷ್ಟ್ಯವು ಸಂವಹನ ಭಾಷಾ ಕಲಿಕೆಯನ್ನು ಪ್ರಾಕ್ಟೀಸ್ ಮಾಡಲು ಬಳಕೆದಾರರಿಗೆ ಅವಕಾಶ ಕಲ್ಪಿಸುತ್ತದೆ. ದಿನನಿತ್ಯ ಬಳಸಬಹುದಾದ ಹೊಸ ಪದಗಳನ್ನು ಕಲಿಯಲು ಇದು ಸಹಾಯ ಮಾಡುತ್ತದೆ ಎಂದು ಟೆಕ್ ದೈತ್ಯ ಗೂಗಲ್ ಹೇಳಿದೆ.

ಟೆಕ್ಕ್ರಂಚ್ ಪ್ರಕಾರ, ಸ್ಪೀಕಿಂಗ್ ಪ್ರಾಕ್ಟೀಸ್ ಅನ್ನು ಟ್ವಿಟರ್​​ ನಲ್ಲಿ ಹಿಂದೆ ಪರಿಚಯಿಸಲಾಗಿತ್ತು. ಈ ಹೊಸ ವೈಶಿಷ್ಟ್ಯವು ಬಳಕೆದಾರರಿಗೆ ಪ್ರಶ್ನೆ ಕೇಳುವ ಮೂಲಕ ಕಾರ್ಯನಿರ್ವಹಿಸುತ್ತದೆ. ಅದರ ಅನಂತರ ಬಳಕೆದಾರರು ಪೂರ್ವನಿರ್ಧರಿತ ಪದಗಳ ಗುಂಪಿನಿಂದ ಉತ್ತರಿಸಲು ಪ್ರೇರೇಪಿಸುತ್ತಾರೆ.

ಇದನ್ನೂ ಓದಿ: WhatsApp: ಭಾರತ ತೊರೆಯುವುದಾಗಿ ವಾಟ್ಸ್‌ಆ್ಯಪ್‌ ಎಚ್ಚರಿಕೆ; ಶೀಘ್ರದಲ್ಲೇ ಆ್ಯಪ್‌ ಅಲಭ್ಯ?

ಬಳಕೆದಾರರು ಹಂಚಿಕೊಂಡಿರುವ ಸ್ಕ್ರೀನ್‌ಶಾಟ್‌ಗಳಲ್ಲಿ ಒಂದಾದ ವೈಶಿಷ್ಟ್ಯವು ಎಐ ಚಾಟ್‌ಬಾಟ್ ಅನ್ನು ಹೊಂದಿರುತ್ತದೆ. ಅದು ಬಳಕೆದಾರರು ಏನು ಮಾಡಬೇಕು ಎಂದು ತಿಳಿಸುತ್ತದೆ. ಬಳಕೆದಾರರು ಅನಂತರ ‘ದಣಿದ’, ‘ಹೃದಯ’ ಮತ್ತು ‘ವ್ಯಾಯಾಮ’ ದಂತಹ ಪದಗಳನ್ನು ಒಳಗೊಂಡಿರುವ ಒಂದು ಪದದ ಪ್ರತಿಕ್ರಿಯೆಗಳೊಂದಿಗೆ ಉತ್ತರಿಸ ಬೇಕು.


ಜನರು ತಮ್ಮ ಸ್ಮಾರ್ಟ್ ಫೋನ್‌ಗಳಲ್ಲಿ ಇಂಗ್ಲಿಷ್ ಸಂವಹನವನ್ನು ವೃದ್ಧಿಸಿಕೊಳ್ಳಲು ಗೂಗಲ್ ತನ್ನ ಎಐ ಆಲಿಸುವ ಕೌಶಲ್ಯಗಳನ್ನು 2023ರ ಅಕ್ಟೋಬರ್ ನಲ್ಲಿ ಹೊರತಂದಿದೆ. ಮೊದಲು ಮಾತನಾಡುವ ವಾಕ್ಯಗಳ ಕುರಿತು ಮಾತ್ರ ಪ್ರತಿಕ್ರಿಯೆಯನ್ನು ಒದಗಿಸುತಿತ್ತು. ಈಗ, ಬಳಕೆದಾರರು ತಾವು ಕಲಿಯುತ್ತಿರುವ ಭಾಷೆಯಲ್ಲಿ ನಡೆಯುತ್ತಿರುವ ಸಂಭಾಷಣೆಗಳನ್ನು ಅಭ್ಯಾಸ ಮಾಡಬಹುದು.


ಇಂಗ್ಲಿಷ್ ಟ್ಯೂಟರಿಂಗ್

ಇದಲ್ಲದೇ ಗೂಗಲ್ ಕಳೆದ ವರ್ಷ ಹೊಸ ಡ್ಯುಯೊಲಿಂಗೋ ನಂತಹ ಇಂಗ್ಲಿಷ್ ಟ್ಯೂಟರಿಂಗ್ ವೈಶಿಷ್ಟ್ಯವನ್ನು ಪರಿಚಯಿಸಿತ್ತು. ಅದು ಜನರು ತಮ್ಮ ಇಂಗ್ಲಿಷ್ ಮಾತನಾಡುವ ಕೌಶಲ್ಯಗಳನ್ನು ಅಭ್ಯಾಸ ಮಾಡಲು ಮತ್ತು ಸುಧಾರಿಸಲು ಸಹಾಯ ಮಾಡಿತು. ಮಾತನಾಡುವ ಅಭ್ಯಾಸ ಕಾರ್ಯವು ಇದನ್ನು ಒಳಗೊಂದು ನಿರ್ಮಿಸಲಾಗಿದೆ.

ಹೇಗೆ ಅಭ್ಯಾಸ ಮಾಡುವುದು?

ಹೊಸ ಮಾತನಾಡುವ ಅಭ್ಯಾಸ ವೈಶಿಷ್ಟ್ಯವನ್ನು ಬಳಸಲು ಸ್ಮಾರ್ಟ್ ಫೋನ್ ಅಥವಾ ಲ್ಯಾಪ್ ಟಾಪ್ ನಲ್ಲಿ ಗೂಗಲ್ ಅಪ್ಲಿಕೇಶನ್ ತೆರೆಯಿರಿ ಮತ್ತು ಮೇಲಿನ ಎಡ ಮೂಲೆಯಲ್ಲಿರುವ ಲ್ಯಾಬ್ಸ್ ಐಕಾನ್ ಮೇಲೆ ಟ್ಯಾಪ್ ಮಾಡಿ. ಇಲ್ಲಿ, ನಿಮ್ಮ ಖಾತೆಯಲ್ಲಿ ಲಭ್ಯವಿರುವ ಹೊಸ ವೈಶಿಷ್ಟ್ಯವನ್ನು ನೋಡಬಹುದು.

ಎರಡು ಅತ್ಯಂತ ಜನಪ್ರಿಯ ಭಾಷಾ-ಕಲಿಕೆಯ ಅಪ್ಲಿಕೇಶನ್‌ಗಳಾದ ಡ್ಯುಯೊಲಿಂಗೋ ಮತ್ತು ಬಾಬೆಲ್‌ಗಳಂತಹವುಗಳನ್ನು ಗ್ರಾಹಕರಿಗೆ ಪರಿಚಯಿಸಲು ಗೂಗಲ್ ಬಯಸುತ್ತಿರುವಂತೆ ತೋರುತ್ತಿದೆ. ಈಗಿನಂತೆ ಗೂಗಲ್ ಈ ಪ್ರಾಯೋಗಿಕ ವೈಶಿಷ್ಟ್ಯವನ್ನು ಹೆಚ್ಚಿನ ಪ್ರದೇಶಗಳಿಗೆ ತರಲು ಯೋಜಿಸುತ್ತಿದೆಯೇ ಎಂಬ ಬಗ್ಗೆ ಯಾವುದೇ ಮಾಹಿತಿ ಈವರೆಗೆ ಲಭ್ಯವಾಗಿಲ್ಲ.

Continue Reading

ಗ್ಯಾಜೆಟ್ಸ್

Mobile Data Saving: ಮೊಬೈಲ್ ಡೇಟಾ ಉಳಿಸಲು ಇಲ್ಲಿದೆ ಕೆಲವು ಸರಳ ಉಪಾಯಗಳು!

Mobile data saving: ಡೇಟಾ ಮೊಬೈಲ್ ಗೆ ಜೀವ ತುಂಬುತ್ತದೆ. ನಮ್ಮ ಕೆಲವೊಂದು ಅಭ್ಯಾಸ, ನಿರ್ಲಕ್ಷ್ಯದಿಂದಾಗಿ ನಮಗೆ ಅರಿವಿಲ್ಲದಂತೆ ಹೆಚ್ಚಿನ ಡೇಟಾ ನಷ್ಟಕ್ಕೆ ಕಾರಣವಾಗಬಹುದು. ಡೇಟಾ ನಷ್ಟವನ್ನು ಕಡಿಮೆ ಮಾಡಲು, ಡೇಟಾ ಬಳಕೆಯನ್ನು ಗರಿಷ್ಠಗೊಳಿಸಲು ಸಹಾಯ ಮಾಡಲು ಕೆಲವು ಸಲಹೆಗಳು ಇಲ್ಲಿವೆ.

VISTARANEWS.COM


on

By

Mobile data
Koo

ಆಂಡ್ರಾಯ್ಡ್ (Android) ಸ್ಮಾರ್ಟ್ ಫೋನ್‌ಗಳು (smart phones) ಈಗ ಎಲ್ಲರ ಬದುಕಿನ ಅವಿಭಾಜ್ಯ ಅಂಗವಾಗಿದೆ. ಒಂದು ಕ್ಷಣ ಕೈಕೊಟ್ಟರೂ, ಎಲ್ಲಾದರೂ ಕಳೆದು ಹೋದರೂ ಓಡುತ್ತಿದ್ದ ಬದುಕು ಒಂದು ಕ್ಷಣ ನಿಂತಂತಾಗುತ್ತದೆ. ಇಂತಹ ಮೊಬೈಲ್‌ ಬಗ್ಗೆ ಕೆಲವೊಂದು ವಿಷಯಗಳನ್ನು ಪ್ರತಿಯೊಬ್ಬರೂ ತಿಳಿದುಕೊಂಡಿರಬೇಕು. ಅವುಗಳಲ್ಲಿ ಮೊಬೈಲ್ ಡೇಟಾ (mobile data saving) ಕೂಡ ಒಂದಾಗಿದೆ.

ಮೊಬೈಲ್ ನಲ್ಲಿ ಡೇಟಾ ಎನ್ನುವುದು ಅದರ ಉಸಿರಿದ್ದಂತೆ. ನಿರಂತರ ಸಂಪರ್ಕದಲ್ಲಿರಲು, ಮಾಹಿತಿಯನ್ನು ಪ್ರವೇಶಿಸಲು ಮತ್ತು ಪ್ರಯಾಣದಲ್ಲಿರುವಾಗ ಮಲ್ಟಿಮೀಡಿಯಾ (Multimedia) ವಿಷಯವನ್ನು ಆನಂದಿಸಲು ಇದು ನಮಗೆ ಅವಕಾಶ ಮಾಡಿಕೊಡುತ್ತದೆ. ಆದರೆ ಮೊಬೈಲ್ ಡೇಟಾದ ಮೇಲೆ ಹೆಚ್ಚಿನ ಅವಲಂಬನೆ ಸೀಮಿತ ಡೇಟಾ (Limited data) ಯೋಜನೆಗಳನ್ನು ಹೊಂದಿರುವವರಿಗೆ ದುಬಾರಿಯಾಗಬಹುದು. ಇದಕ್ಕಾಗಿಯೇ ಮೊಬೈಲ್ ಡೇಟಾವನ್ನು ಹೇಗೆ ಉಳಿಸುವುದು ಎನ್ನುವುದನ್ನು ತಿಳಿದುಕೊಂಡಿರಬೇಕು.

ಮೊಬೈಲ್ ಡೇಟಾವನ್ನು ಕಡಿಮೆ ಬಳಕೆ ಮಾಡುವುದು ಹೇಗೆ ಎಂಬುದನ್ನು ಕಲಿಯುವುದು ಬಹಳ ಮುಖ್ಯ. ಇದಕ್ಕಾಗಿ ಮೊಬೈಲ್ ಡೇಟಾ ಬಳಕೆಯ ಅಭ್ಯಾಸದಲ್ಲಿ ಕೆಲವು ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಂಡರೆ ಅನಗತ್ಯವಾಗಿ ಡೇಟಾ ನಷ್ಟವಾಗುವುದನ್ನು ತಡೆಯಬಹುದು.

ಇದನ್ನು ಓದಿ: Kishan Bagaria: ಒಂದೇ ಒಂದು ಆ್ಯಪ್​ ಅಭಿವೃದ್ಧಿ ಮಾಡಿ ರಾತ್ರೋರಾತ್ರಿ ಕೋಟ್ಯಾಧೀಶ್ವರನಾದ ಅಸ್ಸಾಂ ಯುವಕ!


1. ಬಳಕೆಯ ಮೇಲ್ವಿಚಾರಣೆ ಮಾಡಿ

ಸಾಮಾನ್ಯವಾಗಿ ಡೇಟಾ ಬಳಕೆಯನ್ನು ಕಡಿಮೆ ಮಾಡುವ ಮೊದಲ ಹಂತವೆಂದರೆ ಬಳಕೆಯನ್ನು ಟ್ರ್ಯಾಕ್ ಮಾಡುವುದು. ಹೆಚ್ಚಿನ ಮೊಬೈಲ್ ಸಾಧನಗಳು ಡೇಟಾ ಬಳಕೆಯ ಮಾನಿಟರ್ ಮಾಡುತ್ತದೆ. ಅದು ನಿಮ್ಮ ಡೇಟಾ ಬಳಕೆಯ ಮೇಲೆ ಕಣ್ಣಿಡಲು ಅನುವು ಮಾಡಿಕೊಡುತ್ತದೆ. ನಿರ್ದಿಷ್ಟ ಮಿತಿಯನ್ನು ತಲುಪಿದಾಗ ಎಚ್ಚರಿಕೆಗಳನ್ನು ನೀಡುತ್ತದೆ.


2. ವೈ-ಫೈ ಬಳಸಿ

ಮೊಬೈಲ್ ಡೇಟಾ ಬಳಕೆಯನ್ನು ಕಡಿಮೆ ಮಾಡಲು ವೈ-ಫೈ ಉತ್ತಮ ಮಾರ್ಗವಾಗಿದೆ. ದೊಡ್ಡ ಫೈಲ್‌ಗಳನ್ನು ಡೌನ್‌ಲೋಡ್ ಮಾಡಲು ಅಥವಾ ವೀಡಿಯೊಗಳನ್ನು ಸ್ಟ್ರೀಮ್ ಮಾಡಲು ಮನೆ, ಕಚೇರಿ, ಕಾಫಿ ಶಾಪ್‌ಗಳಲ್ಲಿ ಇರುವ ವೈ ಫೈಗಳನ್ನು ಬಳಸಿ. ಇದು ಮೊಬೈಲ್ ಡೇಟಾವನ್ನು ಹೆಚ್ಚಾಗಿ ಬಳಸುವುದನ್ನು ತಪ್ಪಿಸಲು ಸಹಾಯ ಮಾಡುತ್ತದೆ.

3. ಅಪ್ಲಿಕೇಶನ್‌ ನಿಯಂತ್ರಿಸಿ

ಮೊಬೈಲ್ ಡೇಟಾವನ್ನು ಉಳಿಸಲು ಸಹಾಯ ಮಾಡಲು ಕೆಲವು ಅಪ್ಲಿಕೇಶನ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಕೆಲವೊಂದು ಅಪ್ಲಿಕೇಶನ್‌ಗಳು ಡೇಟಾವನ್ನು ಕುಗ್ಗಿಸಿದರೆ, ಇನ್ನು ಕೆಲವು ಅಪ್ಲಿಕೇಶನ್ ಗಳು ಬಳಸುವ ಡೇಟಾದ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ಕ್ರೋಮ್ ಡೇಟಾ ಸೇವರ್, ಒಪೇರಾ ಮ್ಯಾಕ್ಸ್ ಮತ್ತು ಒನಾವೊ ಎಕ್ಸ್‌ಟೆಂಡ್ ಕೂಡ ಸೇರಿವೆ.


4. ಅಪ್ಡೇಟ್ ನಿಷ್ಕ್ರಿಯಗೊಳಿಸಿ

ಹೆಚ್ಚಿನ ಮೊಬೈಲ್ ಸಾಧನಗಳಲ್ಲಿ ಇರುವ ಅಪ್ಲಿಕೇಶನ್‌ಗಳು ನಿರಂತರ ಅಪ್ಡೇಟ್ ಆಗುತ್ತಿರುತ್ತದೆ. ಇದನ್ನು ಸ್ವಯಂಚಾಲಿತವಾಗಿ ಮಾಡುವುದನ್ನು ನಿಷ್ಕ್ರಿಯಗೊಳಿಸಿದರೆ ಬಹಳಷ್ಟು ಡೇಟಾವನ್ನು ಉಳಿಸಬಹುದು. ವೈಫೈ ಸಂಪರ್ಕವಿದ್ದಾಗ ಮಾತ್ರ ಅಪ್ಲಿಕೇಶನ್‌ ಗಳನ್ನು ಅಪ್ಡೇಟ್ ಮಾಡಿಕೊಳ್ಳಿ.


5. ಸ್ವಯಂ-ಪ್ಲೇ ನಿಷ್ಕ್ರಿಯಗೊಳಿಸಿ

ಹೆಚ್ಚಿನ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳು ಸ್ವಯಂ-ಪ್ಲೇ (self play) ವಿಡಿಯೋ ವೈಶಿಷ್ಟ್ಯವನ್ನು ಹೊಂದಿರುತ್ತದೆ. ಅದು ಹೆಚ್ಚಿನ ಡೇಟಾವನ್ನು ತಿನ್ನುತ್ತದೆ. ಇದನ್ನು ತಡೆಯಲು ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳಲ್ಲಿ ಸ್ವಯಂ-ಪ್ಲೇ ವಿಡಿಯೋ ವೈಶಿಷ್ಟ್ಯವನ್ನು ನಿಷ್ಕ್ರಿಯಗೊಳಿಸಿ.

6. ಆಫ್‌ಲೈನ್ ಆಯ್ಕೆ ಮಾಡಿ

ಆಫ್‌ಲೈನ್‌ನಲ್ಲಿ ವಿಡಿಯೊ ನೋಡುವುದು ಮತ್ತು ಡಾಟಾ ಸಂಗ್ರಹ ಇರುವಾಗ ಡೌನ್‌ಲೋಡ್ ಮಾಡುವುದು ಡೇಟಾ ಬಳಕೆಯನ್ನು ಕಡಿಮೆ ಮಾಡುವ ಅತ್ಯುತ್ತಮ ಮಾರ್ಗವಾಗಿದೆ. ವೈ-ಫೈಗೆ ಸಂಪರ್ಕಗೊಂಡಿರುವಾಗ ನಿಮ್ಮ ಮೆಚ್ಚಿನ ಹಾಡು, ಚಲನಚಿತ್ರ ಮತ್ತು ಟಿವಿ ಕಾರ್ಯಕ್ರಮಗಳನ್ನು ಡೌನ್‌ಲೋಡ್ ಮಾಡಬಹುದು ಮತ್ತು ಮೊಬೈಲ್ ಡೇಟಾವನ್ನು ಬಳಸದೆಯೇ ಅವುಗಳನ್ನು ಅನಂತರ ವೀಕ್ಷಿಸಬಹುದು.

7. Lite ಆವೃತ್ತಿಗಳನ್ನು ಬಳಸಿ

ಅಪ್ಲಿಕೇಶನ್‌ಗಳ ಲೈಟ್ ಆವೃತ್ತಿಗಳು ಕಡಿಮೆ ಡೇಟಾವನ್ನು ಬಳಸುತ್ತವೆ. ಅವುಗಳು ಕಡಿಮೆ ಡೇಟಾವನ್ನು ಬಳಸುವಂತೆ ವಿನ್ಯಾಸಗೊಳಿಸಲಾಗಿದೆ. ಉದಾಹರಣೆಗೆ Facebook Lite, Messenger Lite ಮತ್ತು YouTube Go ಮೊದಲಾದವುಗಳು ಮೊಬೈಲ್ ಡೇಟಾವನ್ನು ಕಡಿಮೆ ಬಳಸುತ್ತದೆ.

8. ಹಿನ್ನೆಲೆ ಡೇಟಾ ಬಳಕೆ ನಿರ್ಬಂಧಿಸಿ

ಕೆಲವು ಅಪ್ಲಿಕೇಶನ್‌ಗಳು ಬಳಸದಿದ್ದರೂ ಹಿನ್ನೆಲೆಯಲ್ಲಿ ಡೇಟಾವನ್ನು ಬಳಸುತ್ತವೆ. ಇದನ್ನು ತಡೆಗಟ್ಟಲು ನಿರಂತರ ಸಂಪರ್ಕದ ಅಗತ್ಯವಿಲ್ಲದ ಅಪ್ಲಿಕೇಶನ್‌ಗಳಿಗೆ ಹಿನ್ನೆಲೆ ಡೇಟಾ ಬಳಕೆಯನ್ನು ನಿರ್ಬಂಧಿಸಿ. ಇದು ಡೇಟಾವನ್ನು ಉಳಿಸಲು ಮತ್ತು ಮೊಬೈಲ್ ಬ್ಯಾಟರಿ ಅವಧಿಯನ್ನು ವಿಸ್ತರಿಸಲು ಸಹಾಯ ಮಾಡುತ್ತದೆ.

Continue Reading

ತಂತ್ರಜ್ಞಾನ

Kishan Bagaria: ಒಂದೇ ಒಂದು ಆ್ಯಪ್​ ಅಭಿವೃದ್ಧಿ ಮಾಡಿ ರಾತ್ರೋರಾತ್ರಿ ಕೋಟ್ಯಾಧೀಶ್ವರನಾದ ಅಸ್ಸಾಂ ಯುವಕ!

Kishan Bagaria: ಮೆಸೇಜಿಂಗ್ ಅಪ್ಲಿಕೇಶನ್ ವೊಂದನ್ನು ಸಿದ್ದ ಪಡಿಸಿದ ಅಸ್ಸಾಂನ ಹಳ್ಳಿಯೊಂದರ 26 ವರ್ಷದ ಯುವಕನಿಗೆ ಅದು ಹೆಸರು ಮತ್ತು ಹಣ ಎರಡನ್ನು ತಂದುಕೊಡುತ್ತದೆ ಎಂಬ ಕನಸು ಕೂಡ ಇರರಲಿಲ್ಲ. ಆದರೆ ಅವನು ಸಿದ್ದಪಡಿಸಿದ ಒಂದು ಆಪ್ ಅವನನ್ನು ರಾತ್ರೋರಾತ್ರಿ ಕೋಟ್ಯಾಧೀಶ್ವರನ್ನಾಗಿ ಮಾಡಿದೆ.

VISTARANEWS.COM


on

By

Kishan Bagaria
Koo

ಮೆಸೇಜಿಂಗ್ ಅಪ್ಲಿಕೇಶನ್ (Messaging App) ಅಭಿವೃದ್ಧಿ ಮಾಡಿದ ಅಸ್ಸಾಂನ (assam) ಹಳ್ಳಿಯೊಂದರ 26 ವರ್ಷದ ಯುವಕ ಈಗ ವಿಶ್ವ ಖ್ಯಾತಿಗಳಿಸಿದ್ದಾನೆ. ಇವನು ತಯಾರಿಸಿದ ಮೆಸೇಜಿಂಗ್ ಅಪ್ಲಿಕೇಶನ್ ಅನ್ನು ಯುಎಸ್ ನ (US) ಟೆಕ್ ದೈತ್ಯ ( tech giant) ಕಂಪೆನಿಯೊಂದು ಬರೋಬ್ಬರಿ 400 ಕೋಟಿ ರುಪಾಯಿಗಿಂತಲೂ ಹೆಚ್ಚು ಮೌಲ್ಯಕ್ಕೆ ಖರೀದಿ ಮಾಡಿದೆ. ಅಸ್ಸಾಂನ ದಿಬ್ರುಗಢದ (Dibrugarh) ಕಿಶನ್ ಬಗಾರಿಯಾ (Kishan Bagaria) ತಾನು ಸೃಷ್ಟಿ ಮಾಡಿದ ಅಪ್ಲಿಕೇಶನ್ ನಿಂದಾಗಿ ತನಗೆ ಜಾಗತಿಕ ಮನ್ನಣೆಯೊಂದಿಗೆ ಖ್ಯಾತಿ ಮತ್ತು ಹಣ ಎರಡು ಸಿಗುತ್ತದೆ ಎಂದು ಊಹೆಯನ್ನೂ ಮಾಡಿರಲಿಲ್ಲ.

ಕಿಶನ್ ಬಗಾರಿಯಾ ಸಿದ್ದಪಡಿಸಿದ Texts.com ಎಂಬ ಹೆಸರಿನ ಸಿಂಗಲ್​ ಪ್ಲಾಟ್‌ಫಾರ್ಮ್ ಮೆಸೇಜಿಂಗ್ ಅಪ್ಲಿಕೇಶನ್ ಅನ್ನು ಯುಎಸ್ ನ ಟೆಕ್ ದೈತ್ಯ (US tech giant) ಆಟೋಮ್ಯಾಟಿಕ್ (Automattic) 50 ಮಿಲಿಯನ್‌ ಡಾಲರ್ ಗೆ ಖರೀದಿ ಮಾಡಿದೆ. ಈ ಕಂಪೆನಿಯು ಮ್ಯಾಟ್ ಮುಲ್ಲೆಂಗ್ ಅವರ ಒಡೆತನದಲ್ಲಿದೆ. ಇವರು WordPress.com ಮತ್ತು Tumblr ನ ಮಾಲೀಕರಾಗಿದ್ದಾರೆ.

ಇದನ್ನೂ ಓದಿ: WhatsApp Update: ವಾಟ್ಸ್ ಆಪ್ ನಲ್ಲಿ ಮತ್ತೊಂದು ಹೊಸ ಫೀಚರ್! ಫೋಟೊ, ವಿಡಿಯೊ ಶೇರಿಂಗ್ ಇನ್ನೂ ಸುಲಭ

Kishan Bagaria


ಯಾರು ಈ ಕಿಶನ್ ?

ಉದ್ಯಮಿ ಮಹೇಂದ್ರ ಬಗಾರಿಯಾ ಮತ್ತು ನಮೀತಾ ದಂಪತಿಯ ಮಗನಾಗಿರುವ ಕಿಶನ್ ದಿಬ್ರುಗಢದ ಥಾನಾ ಚರಿಯಾಲಿ ನಿವಾಸಿ.ಕಂಪೆನಿಯು Texts.com ಖರೀದಿ ಮಾಡಿದ ಬಳಿಕ ಅವರು ರಾತ್ರೋರಾತ್ರಿ ಕೋಟ್ಯಾಧೀಶ್ವರನಾಗಿದ್ದಾರೆ. ಅವರ ಆಪ್ ಸುಮಾರು 416 ಕೋಟಿ ರೂಪಾಯಿ ಗೆ ಮಾರಾಟವಾಗಿದೆ. ಮಾತ್ರವಲ್ಲ ಕಿಶನ್ ನ ಆಪ್ ಅನ್ನು ಖರೀದಿ ಮಾಡಿರುವ ಆಟೋಮ್ಯಾಟಿಕ್ ಕಂಪೆನಿ Texts.com ನ ಕಾರ್ಯಚಟುವಟಿಕೆಗಳ ಉಸ್ತುವಾರಿಯನ್ನು ಅವರು ವಹಿಸಿಕೊಂಡಿದ್ದಾರೆ.

ಹೇಗಿತ್ತು ಪಯಣ ?

ಕಿಶನ್ ಕಂಪ್ಯೂಟರ್ ಮತ್ತು ಇಂಟರ್ನೆಟ್ ಸಂಪರ್ಕವನ್ನು ಹೊರತುಪಡಿಸಿ ಬೇರೆ ಯಾವುದೇ ತಂತ್ರಜ್ಞಾನ ಅವರ ಬಳಿ ಇರಲಿಲ್ಲ. ವಿಂಡೋಸ್ ಅಪ್ಲಿಕೇಶನ್‌ ನಲ್ಲಿ ಅವರು ತಮ್ಮ ಪ್ರಯೋಗಗಳನ್ನು ಮಾಡುತ್ತಿದ್ದರು. ಇವರ ಸಾಧನೆಯ ಹಾದಿ ಉದಯೋನ್ಮುಖ ಅಪ್ಲಿಕೇಶನ್ ಡೆವಲಪರ್‌ಗಳಿಗೆ ದಾರಿದೀಪವಾಗಿದೆ.

ಇತರ ಆಪ್ ಗಳಿಗಿಂತ ಹೇಗೆ ಭಿನ್ನ ?

Texts.com ಜನಪ್ರಿಯ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳಾದ Instagram, Twitter, Messenger, WhatsApp ಗಳಂತೆ ಕಾರ್ಯ ನಿರ್ವಹಿಸಲಿದ್ದು, ಇದನ್ನೂ ಅದೇ ವೇದಿಕೆಯಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ.
Texts.com ಸಂದೇಶ ಕಳುಹಿಸುವುದರಲ್ಲಿ ಕ್ರಾಂತಿ ಎಂದೇ ಹೇಳಬಹದು.

ಇತ್ತೀಚೆಗೆ ಸ್ಮಾರ್ಟ್‌ಫೋನ್‌ಗಳು ಹಲವಾರು ಮೆಸೇಜಿಂಗ್ ಅಪ್ಲಿಕೇಶನ್‌ ಗಳನ್ನು ಹೊಂದಿದೆ. ಸಾಮಾನ್ಯವಾಗಿ ಸಂದೇಶ ಕಳುಹಿಸುವ ಆಪ್ ಗಳು ವಿವಿಧ ಪ್ಲಾಟ್‌ಫಾರ್ಮ್‌ಗಳಿಂದ ಸಂದೇಶಗಳನ್ನು ಒಂದು ಅರ್ಥಗರ್ಭಿತ ಇಂಟರ್ಫೇಸ್‌ಗೆ ಮನಬಂದಂತೆ ಸಂಯೋಜಿಸುತ್ತದೆ. ಆದರೆ ಇದು ಕೇವಲ ಅಪ್ಲಿಕೇಶನ್ ಆಗಿಲ್ಲ. ವಿವೇಚನಾಯುಕ್ತ ಸಂದೇಶ ವೀಕ್ಷಣೆ ಮತ್ತು ಆರಂಭದಿಂದ ಅಂತ್ಯದ ವರೆಗೆ ಗೂಢಲಿಪೀಕರಣದಂತಹ ವೈಶಿಷ್ಟ್ಯಗಳನ್ನು ಒದಗಿಸುತ್ತದೆ. ಡಿಜಿಟಲ್ ಸಂವಹನದಲ್ಲಿ ಗೌಪ್ಯತೆ ಮತ್ತು ಸರಳತೆಯನ್ನು ಖಾತ್ರಿಪಡಿಸುತ್ತದೆ. ಎಲ್ಲ ಸಂದೇಶಗಳು ಒಂದೇ ವೇದಿಕೆಯಡಿ ಲಭ್ಯವಾಗುವಂತೆ ಮಾಡುತ್ತದೆ.

Kishan Bagaria


ಭವಿಷ್ಯ ಹೇಗಿದೆ ?

ಆಟೋಮ್ಯಾಟಿಕ್‌ನ ಬೆಂಬಲದೊಂದಿಗೆ, ಕಿಶನ್ ಅವರ Texts.com ಜಾಗತಿಕ ಸಂವಹನ ಸೇವೆಗಳೊಂದಿಗೆ ಲಭ್ಯವಾಗುತ್ತಿದೆ. ಡಿಜಿಟಲ್ ಸಂವಹನವನ್ನು ಸುಲಭವಾಗಿ ಮತ್ತು ಸುರಕ್ಷಿತವಾಗಿಸಲು ಅವರು ನಿರಂತರ ಬದ್ಧತೆಯನ್ನು ಒತ್ತಿಹೇಳುತ್ತಿರುವುದರಿಂದ ಮುಂದಿನ ದಿನಗಳಲ್ಲಿ Texts.com ಮತ್ತಷ್ಟು ವಿಕಸನಗೊಳ್ಳುವುದು. ಇದರಲ್ಲಿ ಇನ್ನಷ್ಟು ಅದ್ಭುತ ವೈಶಿಷ್ಟ್ಯಗಳನ್ನು ಪರಿಚಯಿಸುವ ಭರವಸೆಯನ್ನು ಅವರು ನೀಡುತ್ತಾರೆ.

ಕಿಶನ್ ಬಗ್ಗೆ ಈಗ ಜಾಗತಿಕವಾಗಿ ಸಾಕಷ್ಟು ನಿರೀಕ್ಷೆಗಳು ಮೂಡಿದೆ. ಅವರು ಮುಂದೆ ಏನನ್ನು ಆವಿಷ್ಕರಿಸುತ್ತಾರೆ ಎಂದು ಎದುರು ನೋಡುತ್ತಿರುವುದಾಗಿ ಟೆಕ್ ದೈತ್ಯ ಕಂಪೆನಿಗಳು ಹೇಳಿವೆ. ಅವರ ಕಥೆ ಈಗ ಡಿಜಿಟಲ್ ವಿಕಾಸದ ಸಾಹಸಗಾಥೆಯಲ್ಲಿ ಸೇರಿಕೊಂಡಿದೆ.

Continue Reading
Advertisement
Vinay Gowda Got three Film Offer
ಸ್ಯಾಂಡಲ್ ವುಡ್9 seconds ago

Vinay Gowda: ಮೂರು ಸಿನಿಮಾಗಳಿಗೆ ಸಹಿ ಮಾಡಿದ ʻಬಿಗ್‌ ಬಾಸ್‌ʼ ಖ್ಯಾತಿಯ ವಿನಯ್‌ ಗೌಡ!

Hassan Pen Drive Case
ಕರ್ನಾಟಕ3 mins ago

ಪ್ರಜ್ವಲ್‌ ರೇವಣ್ಣ ವಿಡಿಯೊಗಳ ಕುರಿತು ಕೆಲ ತಿಂಗಳ ಮೊದಲೇ ಎಚ್ಚರಿಸಿದ್ದ ಬಿಜೆಪಿ ನಾಯಕ! ಯಾರವರು?

Sex Scandals
Latest12 mins ago

Politicians Scandals : ದೇಶದ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದ ಲೈಂಗಿಕ ಹಗರಣಗಳಿವು!

MS Dhoni
ಕ್ರೀಡೆ13 mins ago

MS Dhoni: ಗೆಳತಿಯ ಹೆಸರಿನಲ್ಲಿ 7 ಅಕ್ಷರಗಳಿಲ್ಲದ ಕಾರಣ ಬ್ರೇಕಪ್ ಆದ ಧೋನಿ ಅಭಿಮಾನಿ

Hassan Pen drive case
ಕರ್ನಾಟಕ28 mins ago

Hassan Pen Drive Case: ಪ್ರಜ್ವಲ್‌, ರೇವಣ್ಣ ಹಾಗೆ ಮಾಡಿಯೇ ಇಲ್ಲ ಎಂದ ದೂರುದಾರೆಯ ಅತ್ತೆ!

Actor Dharmendra not spending enough time with parents
ಸಿನಿಮಾ28 mins ago

Actor Dharmendra: ಪೋಷಕರ ಜತೆ ಸಾಕಷ್ಟು ಸಮಯ ಕಳೆಯಲೇ ಇಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ರಾ ನಟ ಧರ್ಮೇಂದ್ರ?

Cleric
ದೇಶ40 mins ago

Cleric: ಮಸೀದಿಯಲ್ಲಿ ಮಲಗಿದ್ದ 30 ವರ್ಷದ ಮೌಲ್ವಿಯನ್ನು ಬಡಿದು ಕೊಂದರು; ಹತ್ಯೆಗೆ ಕಾರಣ?

Congress fears defeat over EVMs Congress will not win a single seat in Karnataka says PM Narendra Modi
ರಾಜಕೀಯ41 mins ago

Narendra Modi: ಪ್ರಧಾನಿ ಮೋದಿ ಅನರ್ಹತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಜಾ

T20 World Cup 2024
ಕ್ರೀಡೆ51 mins ago

T20 World Cup 2024: ಆಸ್ಟ್ರೇಲಿಯಾದಿಂದ ಹಡಗಿನಲ್ಲೇ 3 ಕ್ರಿಕೆಟ್ ಪಿಚ್ ತಂದ ಅಮೆರಿಕ

Revanth Reddy
ದೇಶ59 mins ago

Revanth Reddy : ಅಮಿತ್​ ಶಾ ತಿರುಚಿದ ವಿಡಿಯೊ ಪ್ರಕರಣ; ತೆಲಂಗಾಣ ಸಿಎಂಗೆ ಡೆಲ್ಲಿ ಪೊಲೀಸರಿಂದ ಸಮನ್ಸ್​

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

PM Narendra modi in Bagalakote and Attack on Congress
Lok Sabha Election 20244 hours ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20245 hours ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ12 hours ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Congress fears defeat over EVMs Congress will not win a single seat in Karnataka says PM Narendra Modi
Lok Sabha Election 20241 day ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20241 day ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20241 day ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20241 day ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest1 day ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

Lok sabha election 2024
Lok Sabha Election 20242 days ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

ಟ್ರೆಂಡಿಂಗ್‌