Chardham Yatra 2024: ಚಾರ್‌ಧಾಮ್‌, ಕೇದಾರನಾಥನ ದರ್ಶನ ಮಾಡಲು ಬಯಸಿದ್ದೀರಾ? ನಿಮಗೆ ಬೇಕಾದ ಮಾಹಿತಿ ಇಲ್ಲಿದೆ - Vistara News

ಪ್ರವಾಸ

Chardham Yatra 2024: ಚಾರ್‌ಧಾಮ್‌, ಕೇದಾರನಾಥನ ದರ್ಶನ ಮಾಡಲು ಬಯಸಿದ್ದೀರಾ? ನಿಮಗೆ ಬೇಕಾದ ಮಾಹಿತಿ ಇಲ್ಲಿದೆ

ದ್ವಾದಶ ಜ್ಯೋತಿರ್ಲಿಂಗಗಳ (chardham yatra 2024) ಪೈಕಿ ಒಂದಾದ ಕೇದಾರನ ದರ್ಶನ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಮಾಡಬೇಕೆಂಬ ಕನಸು ಕೋಟಿಕೋಟಿ ಭಾರತೀಯರದ್ದು. ಮೇ 10ರಂದು ಚಳಿಗಾಲದ ಬ್ರೇಕ್‌ ಮುಗಿಸಿಕೊಂಡು ಕೇದಾರನಾಥ ಮತ್ತೆ ಭಕ್ತರಿಗೆ ದರ್ಶನ ಭಾಗ್ಯ ನೀಡುತ್ತಿದ್ದಾನೆ. ಇನ್ನು ಈ ವರ್ಷದ ನವೆಂಬರ್‌ 20ರವರೆಗೂ ಭಕ್ತರಿಗೆ ದರ್ಶನ ನೀಡಲಿದ್ದಾನೆ. ಕೇದಾರನ ಜೊತೆಜೊತೆಗೆ ಬದ್ರಿನಾಥ, ಗಂಗೋತ್ರಿ, ಯಮುನೋತ್ರಿಗಳೆಲ್ಲವೂ ಚಳಿಗಾಲದ ರಜೆಯನ್ನು ಮುಗಿಸಿಕೊಂಡು ಭಕ್ತರಿಗೆ ತೆರೆದಿವೆ.

VISTARANEWS.COM


on

Chardham Yatra
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹಿಮಾಲಯ ಶ್ರೇಣಿಗಳ ನಡುವೆ (chardham yatra 2024) ವಿರಾಜಮಾನನಾಗಿರುವ ಶಿವನ ದರ್ಶನ ಭಾಗ್ಯವೆಂಬುದು ಹಿಂದೂಗಳ ಪಾಲಿಗೆ ಜನ್ಮದ ಸೌಭಾಗ್ಯಗಳಲ್ಲಿ ಒಂದು. ದ್ವಾದಶ ಜ್ಯೋತಿರ್ಲಿಂಗಗಳ ಪೈಕಿ ಒಂದಾದ ಕೇದಾರನ ದರ್ಶನ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಮಾಡಬೇಕೆಂಬ ಕನಸು ಕೋಟಿಕೋಟಿ ಭಾರತೀಯರದ್ದು. ಮೇ 10ರಂದು ಚಳಿಗಾಲದ ಬ್ರೇಕ್‌ ಮುಗಿಸಿಕೊಂಡು ಕೇದಾರನಾಥ ಮತ್ತೆ ಭಕ್ತರಿಗೆ ದರ್ಶನ ಭಾಗ್ಯ ನೀಡುತ್ತಿದ್ದಾನೆ. ಇನ್ನು ಈ ವರ್ಷದ ನವೆಂಬರ್‌ 20ರವರೆಗೂ ಭಕ್ತರಿಗೆ ದರ್ಶನ ನೀಡಲಿದ್ದಾನೆ. ಕೇದಾರನ ಜೊತೆಜೊತೆಗೆ ಬದ್ರಿನಾಥ, ಗಂಗೋತ್ರಿ, ಯಮುನೋತ್ರಿಗಳೆಲ್ಲವೂ ಚಳಿಗಾಲದ ರಜೆಯನ್ನು ಮುಗಿಸಿಕೊಂಡು ಭಕ್ತರಿಗೆ ತೆರೆದಿವೆ.
ವಿಶೇಷವೆಂದರೆ ಈ ಬಾರಿ ಎಂದೂ ಕಾಣದ ಜನಜಂಗುಳಿ ಎಲ್ಲೆಡೆ ಕಾಣುತ್ತಿದೆ. ಕೇದಾರನಾಥ ಧಾಮ ತೆರೆದ ಮೊದಲ ಮೂರೇ ದಿನಗಳಲ್ಲಿ 75,135 ಭಕ್ತರು ಕೇದಾರನ ದರ್ಶನ ಮಾಡಿದ್ದಾರೆ. ಇದು ಕಳೆದ ಐದು ವರ್ಷಗಳಿಗೆ ಹೋಲಿಸಿದರೆ ಅತ್ಯಂತ ಹೆಚ್ಚು. ದಿನೇದಿನೇ ಭಕ್ತರ ಸಂಖ್ಯೆಯೂ ಹೆಚ್ಚುತ್ತಿದೆ. ಪ್ರತಿ ನಿತ್ಯವೂ ಇಪ್ಪತ್ತು ಸಾವಿರಕ್ಕೂ ಅಧಿಕ ಮಂದಿ ಭಕ್ತರು ದರ್ಶನ ಭಾಗ್ಯ ಪಡೆದು ಪುನೀತರಾದ ಧನ್ಯತೆ ಅನುಭವಿಸುತ್ತಿದ್ದಾರೆ. ಕೇದಾರನಾಥನ ಹಾದಿಗಳೆಲ್ಲವೂ ವಾಹನಗಳಿಂದ ತುಂಬಿಹೋಗಿದೆ. ಎಲ್ಲೆಡೆಯೂ ಟ್ರಾಫಿಕ್‌ ಜಾಮ್, ನೂಕುನುಗ್ಗಲು ಇತ್ಯಾದಿಗಳ ಸುದ್ದಿಗಳೇ ಕೇಳಿ ಬರುತ್ತಿವೆ. ಇದರಿಂದ ಇನ್ನು ಹೋಗಬೇಕೆಂದುಕೊಳ್ಳುವ ಆಸಕ್ತ ಭಕ್ತಾದಿಗಳ ಮನದಲ್ಲಿ ಒಂದು ಸಣ್ಣ ಗೊಂದಲವೂ ಎದ್ದಿವೆ. ಹಾಗಾದರೆ ಕೇದಾರನ ದರ್ಶನಕ್ಕೆ ಯಾವಾಗ, ಹೇಗೆ ಹೋಗಬೇಕು ಇತ್ಯಾದಿ ಇತ್ಯಾದಿ. ಈ ನಿಮ್ಮ ಗೊಂದಲಗಳಿಗೆ ಇಲ್ಲಿ ಪರಿಹಾರ ದೊರಕೀತು.

Kedarnath in India

ಜನಜಂಗುಳಿಯ ಗಮನ ಇರಲಿ

ಚಾರ್‌ಧಾಮ್‌ ಯಾತ್ರೆ ಆರಂಭವಾದ ತಕ್ಷಣ ಅನೇಕರು ದರ್ಶನಕ್ಕೆ ಹೊರಟುಬಿಡುತ್ತಾರೆ. ಆದರೆ, ಈ ಸಂದರ್ಭ ಶಾಲಾ ಕಾಲೇಜುಗಳಿಗೂ ರಜೆ ಇರುವುದರಿಂದ ಪ್ರವಾಸೀ ಸ್ಥಳಗಳಲ್ಲಿ, ಯಾತ್ರಾ ಸ್ಥಳಗಳಲ್ಲಿ ಸಹಜವಾಗಿಯೇ ಜನಜಂಗುಳಿ ಹೆಚ್ಚು. ಹಾಗಾಗಿ ಮೇ ತಿಂಗಳಲ್ಲಿ ಸಾಮಾನ್ಯವಾಗಿ ಯಾತ್ರೆ ಸುಖಕರವಾಗಿ ಆಗದು. ನಿಮಗೆ ಬೇರೆ ಸಮಯದಲ್ಲಿ ರಜೆ ಸಿಕ್ಕೀತು ಎಂಬ ಧೈರ್ಯವಿದ್ದರೆ ಈಗ ಜನಜಂಗುಳಿಯಿರುವ ಮೇ ತಿಂಗಳಲ್ಲಿ ಹೋಗದೆ ಇರುವುದೇ ಒಳಿತು. ಜೂನ್‌, ಜುಲೈ ತಿಂಗಳಲ್ಲಿಯೂ ಉತ್ತರಾಖಂಡದ ವಾತಾವರಣದ ಬಗ್ಗೆ ನಿಖರವಾಗಿ ಹೇಳಲು ಸಾಧ್ಯವಿಲ್ಲವಾದ್ದರಿಂದ ಈ ಎರಡು ತಿಂಗಳನ್ನೂ ನೀವು ಪರಿಗಣಿಸದೇ ಇರುವುದೇ ಒಳ್ಳೆಯದು. ಚಾರ್‌ಧಾಮ್‌ ಯಾತ್ರೆಯನ್ನು ನೆಮ್ಮದಿಯಿಂದ, ಕಡಿಮೆ ಜನರಿರುವ ಸಮಯದಲ್ಲಿ ಮಾಡಬೇಕೆನ್ನುವ ಆಸೆಯಿದ್ದರೆ, ನೀವು ಆಗಸ್ಟ್‌ನಿಂದ ಅಕ್ಟೋಬರ್‌ ಒಳಗೆ ಮಾಡುವುದು ಒಳಿತು. ಆ ಸಮಯದಲ್ಲಿ ವಾತಾವರಣವೂ ಅನುಕೂಲಕರವಾಗಿರುತ್ತದೆ. ಚಳಿ ತಡೆಯಬಲ್ಲಿರಾದರೆ ಅಕ್ಟೋಬರ್‌ ಪ್ರಶಸ್ತ.

ಹಿಮಾಲಯ ಪರ್ವತ ಪ್ರದೇಶದಲ್ಲಿ ಈ ಧಾಮಗಳಿರುವುದರಿಂದ ಖಂಡಿತವಾಗಿಯೂ ನೀವು ಅಂದುಕೊಂಡಂತೆ ಹವಾಮಾನ ಇರದು. ಅಲ್ಲಿ ಹೀಗೆಯೇ ಇದ್ದೀತೆಂದು ಊಹಿಸುವುದೂ ಕಷ್ಟ. ಇದ್ದಕ್ಕಿದ್ದಂತೆ ಮಳೆ ಬರಬಹುದು. ಬಿಸಿಲೂ ಇರಬಹುದು. ಭಾರೀ ಮಳೆಗೆ ರಸ್ತೆ ಕುಸಿದು ಬೀಳಬಹುದು. ಹಾಗಾಗಿ ಮಾನಸಿಕವಾಗಿ ಇಂತಹ ಅಡೆತಡೆಗಳಿಗೆ ಸಿದ್ಧವಾಗಿಯೇ ಹೋಗಿ. ಆದರೂ ನೀವು ಹೊರಡುವ ಮುನ್ನ ಹವಾಮಾನ ಮುನ್ಸೂಚನೆಯನ್ನೂ ಮೊದಲೇ ಪರೀಕ್ಷಿಸಿಕೊಳ್ಳಿ.

Kedarnath mountions

ಚಾರ್‌ಧಾಮ್‌ ಯಾತ್ರೆ ಮಾಡಲು ಯಾವುದೇ ಏಜೆನ್ಸಿಗಳ ಸಹಾಯ ಬೇಕಾಗಿಲ್ಲ. ನೀವು ಸರಿಯಾಗಿ ಈ ಬಗ್ಗೆ ಭೌಗೋಳಿಕವಾಗಿ ಕೊಂಚ ಓದಿ ತಿಳಿದುಕೊಂಡರೆ, ನಿಮ್ಮ ಪಾಡಿಗೆ ಸ್ವತಂತ್ರವಾಗಿ ಬುಕ್‌ ಮಾಡಿಕೊಳ್ಳಬಹುದು. ಇದು ಕಷ್ಟವೇನಲ್ಲ. ಆದರೆ ಇದು ನಿಮ್ಮಿಂದ ಸಾಧ್ಯವಿಲ್ಲ, ತಿಳಿಯದು ಎಂದಾದಲ್ಲಿ ಏಜೆನ್ಸಿ ಸಹಾಯ ಪಡೆಯಿರಿ. ನೀವೇ ನಿಮ್ಮಷ್ಟಕ್ಕೆ ಒಂದು ಸಣ್ಣ ಸಮಾನ ಆಸಕ್ತರ ಗುಂಪಿನ ಜೊತೆಗೆ ಹೋಗುವುದು ಅತ್ಯಂತ ಸೂಕ್ತ. ಆಗ ನಿಮ್ಮ ಆಯ್ಕೆಯ ದಿನಗಳಲ್ಲಿ, ನೀವಂದುಕೊಂಡ ಜಾಗಗಳಿಗೆ ಹೋಗಿ ಅಲ್ಲಿ ಅಂದಿಕೊಂಡದ್ದಕ್ಕಿಂತ ಹೆಚ್ಚು ತಂಗಬೇಕೆಂಬ ಬಯಕೆಯಾದಲ್ಲಿ ಅದನ್ನೂ ಮಾಡಬಹುದು. ಜೆನ್ಸಿಗಳ ಸಹಾಯವಿಲ್ಲದೆ ನಿಮ್ಮಷ್ಟಕ್ಕೆ ಹೋದರೆ ಇವೆಲ್ಲ ಆಯ್ಕೆಗಳು ನಿಮ್ಮ ಕೈಯಲ್ಲೇ ಇರುತ್ತವೆ ಎಂಬುದು ನೆನಪಿಡಿ.

ಹೇಗೆ ಹೋಗಬೇಕು?

ನವದೆಹಲಿ ಅಥವಾ ಡೆಹ್ರಾಡೂನ್‌ವರೆಗೆ ವಿಮಾನ ಪ್ರಯಾಣ ಮಾಡಿ ಅಲ್ಲಿಂದ ಹರಿದ್ವಾರ, ಋಷಿಕೇಶ, ದೇವಪ್ರಯಾಗ, ಶ್ರೀನಗರ, ರುದ್ರಪ್ರಯಾಗ ದಾಟಿಕೊಂಡು ಗೌರಿಕುಂಡ ಎಂಬಲ್ಲಿಗೆ ಸಾಗಬೇಕು.ಹರಿದ್ವಾರದಿಂದ ಗೌರಿಕುಂಡಕ್ಕೆ 123 ಕಿಮೀ ಆದರೂ, ಹಿಮಾಲಯದ ಕಡಿದಾದ ರಸ್ತೆಯಾಗಿರುವುದರಿಂದ ಈ ದಾರಿಯನ್ನು ಕ್ರಮಿಸಲು ಹೆಚ್ಚು ಸಮಯ ಬೇಕು ಎಂಬುದನ್ನು ನೆನಪಿಡಿ. ಗೌರಿಕುಂಡದಿಂದ ಕೇದಾರನವರೆಗೆ 18 ಕಿಮೀಗಳ ಚಾರಣ. ಈ ಹಾದಿಯನ್ನು ಕ್ರಮಿಸಲು ನಡೆಯಬಹುದು. ನಡೆಯಲು ಸಾಧ್ಯವಿಲ್ಲವೆಂದರೆ ಕುದುರೆ/ಪೋನಿ ಅಥವಾ ಹೊತ್ತುಕೊಂಡು ಹೋಗುವ ಮಂದಿಯ ಸಹಾಯವನ್ನು ಪಡೆಯಬಹುದು. ಹೆಲಿಕಾಪ್ಟರ್‌ ಸೇವೆಯನ್ನೂ ಪಡೆಯಬಹುದು.

ಹೆಲಿಕಾಪ್ಟರ್‌ ಸೇವೆ

ಕೇದಾರನಾಥಕ್ಕೆ ಹೋಗಲು ಹೆಲಿಕಾಪ್ಟರ್‌ ಸೌಲಭ್ಯವೂ ಇದೆ. ಈಗಾಗಲೇ ಬುಕ್ಕಿಂಗ್‌ ವ್ಯವಸ್ಥೆ ತೆರೆದಿದ್ದು, ಮೇ 10ರಿಂದ ಜೂನ್‌ 20 ಹಾಗೂ ಸೆಪ್ಟೆಂಬರ್‌ 15ರಿಂದ ಅಕ್ಟೋಬರ್‌ 31ರವರೆಗೆ ಹೆಲಿಕಾಪ್ಟರ್‌ ಸೇವೆ ಲಭ್ಯ ಇದೆ. IRCTC ಹೆಲಿಕಾಪ್ಟರ್‌ ಯಾತ್ರೆ ವೆಬ್‌ಸೈಟ್‌ (www.heliyatra.irctc.co.in) ತೆರೆದು ಅಲ್ಲಿ ಸೈನ್‌ ಅಪ್‌ ಮಾಡಿ ನಿಮ್ಮ ವಿವರಗಳನ್ನು ದಾಖಲು ಮಾಡಬೇಕು. ನಂತರ ಚಾರ್‌ಧಾಮ್‌ ಯಾತ್ರೆ ವಿವರಗಳ ಮೇಲೆ ಕ್ಲಿಕ್‌ ಮಾಡಿ ನಿಮಗೆ ಬೇಕಾದ ದಿನಾಂಕಕ್ಕೆ ಲಭ್ಯವಿರುವ ಹೆಲಿಕಾಪ್ಟರ್‌ ಸೇವೆಯನ್ನು ಹುಡುಕಿ ಟಿಕೆಟ್‌ಗಳನ್ನು ಬುಕ್‌ ಮಾಡಬಹುದು. ಟಿಕೆಟ್‌ ಕನ್‌ಫರ್ಮ್‌ ಆದ ಮೇಲೆ ಅದನ್ನು ಡೌನ್‌ಲೋಡ್‌ ಮಾಡಿಟ್ಟುಕೊಳ್ಳಿ.

ರಿಜಿಸ್ಟರ್‌ ಮಾಡಿ

ಇಷ್ಟೇ ಅಲ್ಲ, ಪ್ರತಿ ಕೇದಾರನಾಥ ಯಾತ್ರಿಯೂ ಉತ್ತರಾಖಂಡ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವೆಬ್‌ಸೈಟ್‌ಗೆ (https://registrationandtouristcare.uk.gov.in/signin.php) ಹೋಗಿ ಅಲ್ಲಿ ನಿಮ್ಮ ಕೇದಾರನಾಥ ಭೇಟಿಯ ವಿವರಗಳನ್ನು ಮೊದಲೇ ರಿಜಿಸ್ಟರ್‌ ಮಾಡಿಕೊಳ್ಳಬೇಕು. ನಕಲಿ ಟಿಕೆಟ್‌ ಜಾಲವೂ ಇರುವುದರಿಂದ ಈ ಬಗ್ಗೆ ಜಾಗರೂಕರಾಗಿರಿ. ಇಂತಹ ಮೋಸಕ್ಕೆ ಬಲಿಯಾಗಬೇಡಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರವಾಸ

Araku Valley Tour: ಆಂಧ್ರಪ್ರದೇಶದ ಅರಕು ವ್ಯಾಲಿ; ಹಲವು ಅದ್ಭುತಗಳ ಸಂಗಮ

Araku Valley Tour: ಆಂಧ್ರಪ್ರದೇಶದಲ್ಲಿರುವ ಅರಕು ಕಣಿವೆಯು ವಾರಾಂತ್ಯದಲ್ಲಿ ಭೇಟಿ ನೀಡುವವರಿಗೆ ಉತ್ತಮವಾದ ಸ್ಥಳವಾಗಿದೆ. ಇಲ್ಲಿನ ರಮಣೀಯವಾದ ಪ್ರಕೃತಿ ಸೌಂದರ್ಯವು ನಿಮ್ಮನ್ನು ಬೇರೊಂದು ಜಗತ್ತಿಗೆ ಕರೆದುಕೊಂಡು ಹೋಗುತ್ತದೆ.

VISTARANEWS.COM


on

Araku Valley Tour
Koo

ಜೀವನದ ಜಂಜಾಟದಿಂದ ಬೇಸತ್ತ ಜನರು ತಮ್ಮ ಕುಟುಂಬದ ಜೊತೆಗೆ ಪ್ರವಾಸಕ್ಕೆ ಹೋಗಲು ಇಷ್ಟಪಡುತ್ತಾರೆ. ಅದಕ್ಕಾಗಿ ಸುಂದರವಾದ, ಪ್ರಶಾಂತವಾದ ಸ್ಥಳಗಳನ್ನು ಹುಡುಕುತ್ತಿರುತ್ತಾರೆ. ಅಂಥವರು ಒಮ್ಮೆ ಭಾರತದ ಸುಂದರವಾದ ಮತ್ತು ರಮಣೀಯವಾದ ಪೂರ್ವ ಘಟ್ಟಗಳ ನಡುವಿನ ಶಾಂತಿಯುತವಾದ ಸ್ಥಳ ಅರಕು ಕಣಿವೆಗೆ (Araku Valley Tour) ಭೇಟಿ ನೀಡಬಹುದು.

ಆಂಧ್ರಪ್ರದೇಶದಲ್ಲಿರುವ ಈ ಸಣ್ಣ ಕಣಿವೆಯು ನೈಸರ್ಗಿಕ ಸೌಂದರ್ಯದ ಮೂಲಕ ನಿಮ್ಮನ್ನು ರೋಮಾಂಚನಗೊಳಿಸುವಂತಹ ಸ್ಥಳವಾಗಿದೆ. ಇಲ್ಲಿನ ಹಸಿರು ತಾಣಗಳು, ಜಲಪಾತಗಳು ಮತ್ತು ಇಲ್ಲಿ ಸಿಗುವಂತಹ ರುಚಿಕರವಾದ ತಿನಿಸು ಪ್ರಯಾಣಿಕರನ್ನು ಈ ಸ್ಥಳಕ್ಕೆ ಸೆಳೆಯುತ್ತದೆ. ಹಾಗಾಗಿ ಅರಕು ಕಣಿವೆಯ ಈ ರಮಣೀಯ ಸ್ಥಳಗಳ ಬಗ್ಗೆ ತಿಳಿಯಿರಿ. ಇದು ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ 111 ಕಿ.ಮೀ ದೂರದಲ್ಲಿದೆ. ಬೆಂಗಳೂರಿನಿಂದ ಇಲ್ಲಿಗೆ 20 ಗಂಟೆಗಳ ಪ್ರಯಾಣ.

Araku Valley Tour

ಬೊರ್ರಾ ಗುಹೆಗಳು

ಇದು ಭಾರತದ ಅತಿದೊಡ್ಡ ಗುಹೆಗಳಲ್ಲಿ ಒಂದು. ಇದು ಸಾಹಸಿಗಳಿಗೆ ಹೇಳಿ ಮಾಡಿಸಿದ ಸ್ಥಳ. ಇದು ಸುಣ್ಣದ ಕಲ್ಲುಗಳಿಂದ ಮಾಡಿದ ಗುಹೆಯಾಗಿದೆ. ಇದು ಸುಂದರವಾದ ಸ್ಟಾಲಾಕ್ಟೈಟ್ ಗಳು ಮತ್ತು ಸ್ಟಾಲಗ್ಮೈಟ್ ಗಳಿಂದ ಅಲಂಕರಿಸಲ್ಪಟ್ಟಿದೆ. ಇವುಗಳ ಮೂಲಕ ಗುಹೆಗೆ ಪ್ರವೇಶಿಸುವಾಗ ನೀವು ಮಂತ್ರಮುಗ್ಧರಾಗುವುದಂತು ಖಂಡಿತ.

Araku Valley Tour

ಕಟಿಕಿ ಜಲಪಾತ

ಸೊಂಪಾದ ಕಾಡುಗಳ ಆಳದಲ್ಲಿ ಅಡಗಿರುವ ಈ ಜಲಪಾತ ನಿಮಗೆ ಉಲ್ಲಾಸದಾಯಕ ಅನುಭವವನ್ನು ನೀಡುತ್ತದೆ. ಈ ಜಲಪಾತಕ್ಕೆ ಹೋಗಲು ಕಾಡುಗಳ ನಡುವೆ ನೀವು ಚಾರಣ ಮಾಡಬೇಕಾಗುತ್ತದೆ. ಇದು ಪ್ರಕೃತಿ ಪ್ರಿಯರಿಗೆ ಖುಷಿಯನ್ನು ನೀಡುತ್ತದೆ. ಇಲ್ಲಿನ ಜಲಪಾತದ ಕೆಳಗಿನ ಕೊಳದಲ್ಲಿ ಜಲಕ್ರೀಡೆ ಆಡಬಹುದು.

Araku Valley Tour

ಪದ್ಮಪುರಂ ಉದ್ಯಾನ

ಅರಕು ಕಣಿವೆಯ ಹೃದಯ ಭಾಗದಲ್ಲಿರಿವ ಪದ್ಮಪುರಂ ಉದ್ಯಾನದಲ್ಲಿ ಪರಿಮಳಯುಕ್ತವಾದ ಬಣ್ಣ ಬಣ್ಣದ ಹೂಗಳನ್ನು ನೋಡಬಹುದು. ಇದನ್ನು ನೋಡಿದರೆ ಸ್ವರ್ಗವೇ ಭೂಮಿಗೆ ಬಂದಂತೆ ಭಾಸವಾಗುತ್ತದೆ. ಇಲ್ಲಿನ ಸುಂದರವಾದ ಉದ್ಯಾನ, ಸಸ್ಯಗಳು, ಮತ್ತು ನಡೆಯಲು ನಿರ್ಮಿಸಿದ ಆಕರ್ಷಕವಾದ ಫುಟ್ ಪಾತ್ ಗಳಲ್ಲಿ ನಿಮ್ಮ ಕುಟುಂಬದವರ ಜೊತೆ ವಾಕ್ ಮಾಡಬಹುದು. ಇಲ್ಲಿ ಆಟಿಕೆ ರೈಲಿನಲ್ಲಿ ಸವಾರಿ ಮಾಡುವ ಮೂಲಕ ಉದ್ಯಾನವನದ ನೋಟವನ್ನು ಕಣ್ತುಂಬಿಕೊಳ್ಳಬಹುದು.

Araku Valley Tour

ಬುಡಕಟ್ಟು ವಸ್ತು ಸಂಗ್ರಹಾಲಯ (ಟ್ರೈಬಲ್ ಮ್ಯೂಸಿಯಂ)

ಈ ಬುಡಕಟ್ಟು ವಸ್ತು ಸಂಗ್ರಹಾಲಯವು ಬುಡಕಟ್ಟು ಪರಂಪರೆಯನ್ನು ಸಾರುತ್ತದೆ. ಇದು ಸ್ಥಳೀಯ ಜನರ ಜೀವನ ಮತ್ತು ಪದ್ಧತಿಗಳನ್ನು ಪ್ರತಿನಿಧಿಸುತ್ತದೆ. ಈ ವಸ್ತು ಸಂಗ್ರಾಹಾಲಯದಲ್ಲಿ ಬುಡಕಟ್ಟು ಆಚರಣೆಗಳು, ಸಂಪ್ರದಾಯಗಳು ಮತ್ತು ಕೌಶಲ್ಯಗಳನ್ನು ಒಳಗೊಂಡ ಕಲಾಕೃತಿಗಳು ಮತ್ತು ಕರಕುಶಲ ವಸ್ತುಗಳನ್ನು ಕಾಣಬಹುದು.

Araku Valley Tour

ಅನಂತಗಿರಿ ಬೆಟ್ಟಗಳು

ಇಲ್ಲಿ ದಟ್ಟವಾದ ಕಾಡುಗಳು ಮತ್ತು ಮಂಜಿನ ಮೋಡಗಳಿಂದ ಆವೃತವಾದ ಬೆಟ್ಟಗಳಿಂದ ಸುತ್ತುವರಿದ ಗಿರಿಧಾಮವಿದೆ. ಇಲ್ಲಿ ಸಾಹಸಮಯ ಚಾರಣವನ್ನು ಮಾಡಬಹುದು. ಇಲ್ಲಿ ವಿವಿಧ ರೀತಿಯ ಸಸ್ಯಗಳು ಮತ್ತು ಪ್ರಾಣಿಗಳನ್ನು ನೋಡಬಹುದಂತೆ.

ಇದನ್ನೂ ಓದಿ: Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Araku Valley Tour

ಚಾಪಾರೈ ವಾಟರ್ ಕ್ಯಾಸ್ಕೇಡ್

ಪ್ರಕೃತಿಯ ಮಧ್ಯೆ ಶಾಂತಿಯುತವಾಗಿ ಇರಲು ಬಯಸುವವರು ಈ ಸ್ಥಳಕ್ಕೆ ಭೇಟಿ ನೀಡಿ. ಇಲ್ಲಿ ಹರಿಯುವ ನೀರು ಮತ್ತು ಸೊಂಪಾದ ಹಸಿರು ನಿಮ್ಮ ಮನಸ್ಸಿಗೆ ಮುದವನ್ನು ನೀಡುತ್ತದೆ. ಇದು ವಿಶ್ರಾಂತಿ ಪಡೆಯಲು ಸೂಕ್ತವಾದ ಸ್ಥಳ.
ಹಾಗಾಗಿ ಕುಟುಂಬದೊಂದಿಗೆ ಅರಕು ಕಣಿವೆಯ ಈ ಸ್ಥಳಕ್ಕೆ ಭೇಟಿ ನೀಡಿ ನಿಮ್ಮ ಪ್ರವಾಸವನ್ನು ಸ್ಮರಣೀಯವಾಗಿಸಿ.

Continue Reading

ದೇಶ

Joshimath Teshil Now Jyotirmath: ಉತ್ತರಾಖಂಡದ ಜೋಶಿಮಠ ಈಗ ಜ್ಯೋತಿರ್ಮಠ!

ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಕಳೆದ ವರ್ಷ ನಡೆದ ಕಾರ್ಯಕ್ರಮವೊಂದರಲ್ಲಿ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಮಿ ಅವರು ಜೋಶಿಮಠ ತಹಸಿಲ್ (Joshimath Teshil Now Jyotirmath) ಅನ್ನು ಮರುನಾಮಕರಣ ಮಾಡುವುದಾಗಿ ಭರವಸೆ ನೀಡಿದ್ದರು. ಆ ಮಾತನ್ನು ಅವರು ಈಗ ಪೂರ್ಣಗೊಳಿಸಿದ್ದಾರೆ.

VISTARANEWS.COM


on

By

Joshimath Teshil Now Jyotirmath
Koo

ಉತ್ತರಾಖಂಡದ (Uttarakhand) ಚಮೋಲಿ (Chamoli) ಜಿಲ್ಲೆಯಲ್ಲಿರುವ ಜೋಶಿಮಠ ತಾಲೂಕು (Joshimath tehsil) ಅನ್ನು ‘ಜ್ಯೋತಿರ್ಮಠ’ (Joshimath Teshil Now Jyotirmath) ಎಂಬ ಹೊಸ ಹೆಸರಿನಿಂದ ಕರೆಯಲಾಗುವುದು ಎಂದು ಮುಖ್ಯಮಂತ್ರಿ (Chief Minister) ಪುಷ್ಕರ್ ಸಿಂಗ್ ಧಮಿ (Pushkar Singh Dhami) ಘೋಷಣೆ ಮಾಡಿದ್ದಾರೆ. ಜ್ಯೋತಿರ್ಮಠವು ಜೋಶಿಮಠದ ಪ್ರಾಚೀನ ಹೆಸರಾಗಿದೆ.

ತಹಸಿಲ್‌ನ ಹೆಸರು ಬದಲಾವಣೆ ಕುರಿತು ಉತ್ತರಾಖಂಡ ಸರ್ಕಾರ ಸಲ್ಲಿಸಿರುವ ಪ್ರಸ್ತಾವನೆಯನ್ನು ಕೇಂದ್ರವು ಅನುಮೋದಿಸಿದೆ.

ಸ್ಥಳೀಯರಿಂದ ಸ್ವಾಗತ

ಜೋಶಿಮಠ ತಹಸಿಲ್ ಅನ್ನು ‘ಜ್ಯೋತಿರ್ಮಠ’ ಎಂದು ಹೆಸರು ಬದಲಾವಣೆ ಮಾಡಿರುವುದನ್ನು ಜೋಶಿಮಠದ ನಿವಾಸಿಗಳು ಸ್ವಾಗತಿಸಿದ್ದಾರೆ. ಯಾಕೆಂದರೆ ತಹಸಿಲ್ ಅನ್ನು ಅದರ ಮೂಲ ಹೆಸರಿಗೆ ಹಿಂತಿರುಗಿಸುವುದರಿಂದ ಅದರ ಪ್ರಾಚೀನ ಮೂಲವನ್ನು ಎತ್ತಿ ತೋರಿಸುತ್ತದೆ. ಮಾತ್ರವಲ್ಲದೆ ಅದರ ವಿಶಾಲವಾದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಗೆ ಗೌರವ ಸಲ್ಲಿಸುತ್ತದೆ ಎಂದಿದ್ದಾರೆ.

ಕಳೆದ ವರ್ಷ ಚಮೋಲಿ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ತಹಸಿಲ್ ಅನ್ನು ಮರುನಾಮಕರಣ ಮಾಡುವ ಸರ್ಕಾರದ ನಿರ್ಣಯದ ಬಗ್ಗೆ ಸಾರ್ವಜನಿಕ ಪ್ರಕಟಣೆಯನ್ನು ಮಾಡಿದರು. ಆ ಮೂಲಕ ಅದರ ಐತಿಹಾಸಿಕ ವೈಭವವನ್ನು ಮರುಸ್ಥಾಪನೆಗೆ ಯೋಚಿಸಿರುವುದಾಗಿ ಹೇಳಿದ್ದರು.

ಬಹುಕಾಲದ ಬೇಡಿಕೆ

ಜೋಶಿ ಮಠದ ಸ್ಥಳೀಯರು ಬಹಳ ಹಿಂದಿನಿಂದಲೂ ಹೆಸರು ಬದಲಾವಣೆಗೆ ಒತ್ತಾಯಿಸುತ್ತಿದ್ದರು. ಜನರ ಭಾವನೆಗಳಿಗೆ ಸ್ಪಂದಿಸಿ ಧಾಮಿ ಸರ್ಕಾರ ತಹಸಿಲ್ ಹೆಸರನ್ನು ಮರುನಾಮಕರಣ ಮಾಡುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಬುಧವಾರ ಅನುಮೋದನೆ ಪಡೆದಿದೆ.

ಇದನ್ನೂ ಓದಿ: Jagannath Temple: 4 ವರ್ಷದ ಬಳಿಕ ಜಗನ್ನಾಥ ದೇಗುಲದ ಬಾಗಿಲು ಓಪನ್;‌ ಇದಕ್ಕೂ ಬಿಜೆಪಿ ಪ್ರಣಾಳಿಕೆಗೂ ಇದೆ ಸಂಬಂಧ!


ಶಂಕರಾಚಾರ್ಯರಿಗೂ ಇದೆ ನಂಟು

8ನೇ ಶತಮಾನದಲ್ಲಿ ಆದಿ ಗುರು ಶಂಕರಾಚಾರ್ಯರು ಈ ಕ್ಷೇತ್ರಕ್ಕೆ ಬಂದಿದ್ದರು ಎಂಬುದು ಸ್ಥಳೀಯರ ನಂಬಿಕೆ. ಅವರು ಅಮ6ರ ಕಲ್ಪ ವೃಕ್ಷದ ಕೆಳಗೆ ತಪಸ್ಸು ಕೈಗೊಂಡರು ಎಂದು ಹೇಳಲಾಗುತ್ತದೆ. ಇದರಿಂದಾಗಿ ದೈವಿಕ ಜ್ಞಾನೋದಯ ಮತ್ತು ಜ್ಞಾನವನ್ನು ಸಾಧಿಸಿದರು. ಈ ಸ್ಥಳವನ್ನು ಮೂಲತಃ ಜ್ಯೋತಿರ್ಮಠ ಎಂದು ಕರೆಯಲಾಗುತ್ತಿತ್ತು. ಆದರೆ ಕಾಲಾನಂತರದಲ್ಲಿ ಇದು ಜೋಶಿಮಠ ಎಂಬ ಬೇರೆ ಹೆಸರಿನಲ್ಲಿ ಜನಪ್ರಿಯತೆಯನ್ನು ಗಳಿಸಿತು.

ಜ್ಯೋತಿರ್ಮಠವು 6,150 ಅಡಿ ಅಂದರೆ ಸರಿಸುಮಾರು 1,875 ಮೀಟರ್ ಎತ್ತರದಲ್ಲಿದೆ. ಹಲವಾರು ಹಿಮಾಲಯ ಪರ್ವತಾರೋಹಣ, ಚಾರಣ ಮತ್ತು ಬದರಿನಾಥದಂತಹ ಯಾತ್ರಾ ಕೇಂದ್ರಗಳಿಗೆ ಇದು ಹೆಬ್ಬಾಗಿಲಾಗಿದೆ.

Continue Reading

Latest

Bhubaneswar Tour: ಭುವನೇಶ್ವರಕ್ಕೆ ಪ್ರವಾಸ ಮಾಡಿದಾಗ ಏನೆಲ್ಲ ನೋಡಬಹುದು?

Bhubaneswar Tour: ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎಂಬ ಮಾತಿನಂತೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿದಾಗ ನಾವು ಸಾಕಷ್ಟು ವಿಷಯಗಳನ್ನು ಕಲಿಯಬಹುದು. ಕೆಲವೊಂದು ಪ್ರದೇಶಗಳ ಆಹಾರ, ಸಂಪ್ರದಾಯ, ಆಚರಣೆಗಳು ಎಲ್ಲವೂ ವಿಭಿನ್ನವಾಗಿರುತ್ತದೆ. ಪ್ರವಾಸಕ್ಕೆ ಹೋಗುವಾಗ ಈ ಅಂಶಗಳ ಕುರಿತು ನಾವು ಹೆಚ್ಚಿನ ನಿಗಾ ವಹಿಸಬೇಕು. ಇಲ್ಲಿ ಒಡಿಶಾದ ಭುವನೇಶ್ವರಕ್ಕೆ ಭೇಟಿ ನೀಡುವಾಗ ಗಮನಿಸಬೇಕಾದ ವಿಷಯಗಳ ಕುರಿತ ಮಾಹಿತಿ ಇದೆ.

VISTARANEWS.COM


on

Bhubaneswar Tour
Koo

ಭುವನೇಶ್ವರ ಇದು ಒಡಿಶಾ ರಾಜ್ಯದ ರಾಜಧಾನಿಯಾಗಿದೆ. ಮಹಾನದಿ ಮುಖಜಭೂಮಿಯ ಉದ್ದಕ್ಕೂ ನೆಲೆಸಿರುವ ಭುವನೇಶ್ವರ ಪುರಾತನ ದೇವಾಲಯಗಳ ನಗರವಾಗಿದೆ. ಇದು ಕಳಿಂಗ ರಾಜವಂಶದ ಕುಶಲತೆಯಿಂದ ಪ್ರೇರಿತವಾದ ಸಂಕೀರ್ಣವಾದ ಕಲಾತ್ಮಕ ಪಾಂಡಿತ್ಯವನ್ನು ಚಿತ್ರಿಸುವ ಭವ್ಯವಾದ ಕಲ್ಲಿನ ದೇವಾಲಯಗಳನ್ನು ಹೊಂದಿದೆ. ಇಲ್ಲಿಗೆ ಭೇಟಿ ನೀಡುವವರು ಒಮ್ಮೆ ಈ ಸ್ಥಳದ ಬಗೆಗಿನ ವಿವರಗಳನ್ನು ತಿಳಿದುಕೊಳ್ಳಿ. ಇಲ್ಲಿನ ಹವಾಮಾನದ ವಿವರ, ದೇವಾಲಯಗಳು, ಪಾಕವಿಧಾನಗಳ ಬಗ್ಗೆ ತಿಳಿದುಕೊಂಡು ಈ ಸ್ಥಳಕ್ಕೆ ಭೇಟಿ ನೀಡಿದರೆ ಉತ್ತಮ. ಇದರಿಂದ ನಿಮ್ಮ ಪ್ರವಾಸ ಆರಾಮದಾಯಕವಾಗಿರುತ್ತದೆ.

ಭುವನೇಶ್ವರದ ಹವಾಮಾನದ ವಿವರ

ಈ ಸ್ಥಳ ಆರ್ದ್ರ ಉಪೋಷ್ಣವಲಯದ ಹವಾಮಾನ ವಲಯದ ಅಡಿಯಲ್ಲಿ ಬರುತ್ತದೆ. ಇದು ಬಿಸಿ ಆರ್ದ್ರ ಬೇಸಿಗೆ, ಮಧ್ಯಮ ಮಳೆ ಹಾಗೂ ಹದವಾದ ಚಳಿಯನ್ನು ಹೊಂದಿರುವ ಪ್ರದೇಶವಾಗಿದೆ. ಬೇಸಿಗೆ(ಏಪ್ರಿಲ್- ಜೂನ್ )ಯಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಯಾಗಿರುತ್ತದೆ. ಮಳೆಗಾಲ(ಜುಲೈ-ಸೆಪ್ಟೆಂಬರ್)ದಲ್ಲಿ ಧಾರಾಕಾರ ಮಳೆಯಾಗುತ್ತದೆ. ಬಿಸಿಲಿನ ಬೇಗೆಯಿಂದ ಸುಟ್ಟ ಮರಗಳು ಮಳೆಗಾಲದಲ್ಲಿ ಚಿಗುರಿ ಹಸಿರಾಗುತ್ತವೆ. ಚಳಿಗಾಲ(ನವೆಂಬರ್- ಫೆಬ್ರವರಿ)ದಲ್ಲಿ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ನಷ್ಟು ಇರುತ್ತದೆ. ಡಿಸೆಂಬರ್,ಜನವರಿಯಲ್ಲಿ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ಕ್ಕೆ ಇಳಿಯುತ್ತದೆ. ಹಾಗಾಗಿ ಭುವನೇಶ್ವರಗೆ ಭೇಟಿ ನೀಡಲು ಅಕ್ಟೋಬರ್‌ನಿಂದ ಮಾರ್ಚ್ ಅತ್ಯುತ್ತಮ ಸಮಯವಾಗಿದೆ.

ಭುವನೇಶ್ವರದ ಪ್ರಮುಖ ದೇವಾಲಯಗಳು

Bhubaneswar Tour

ಅತ್ಯಂತ ಪುರಾತನ ನಗರಗಳಲ್ಲಿ ಒಂದಾದ ಭುವನೇಶ್ವರದಲ್ಲಿ ರಾಜವಂಶಸ್ಥರು ನಿರ್ಮಿಸಿದ ಹಲವು ದೇವಾಲಯಗಳನ್ನು ನೋಡಬಹುದು. ಲಿಂಗರಾಜ ದೇವಾಲಯ, ರಾಜರಾಣಿ ದೇವಾಲಯ, ಮುಕ್ತೇಶ್ವರ ದೇವಾಲಯ, ಅನಂತ ವಾಸುದೇವ ದೇವಾಲಯಗಳಲ್ಲಿ ಸಂಕೀರ್ಣವಾದ ಕೆತ್ತನೆಗಳನ್ನು ನೋಡಬಹುದು.

ಬಾಯಿಯಲ್ಲಿ ನೀರುಣಿಸುವ ಪಾಕವಿಧಾನ

ಇಲ್ಲಿನ ಆಹಾರವು ನದಿ ಅಥವಾ ಸರೋವರದ ಸಿಹಿ ನೀರಿನ ಪದಾರ್ಥಗಳೊಂದಿಗೆ ಗಿಡಮೂಲಿಕೆಗಳು ಅಥವಾ ಕಾಡುಗಳ ಮಧ್ಯೆ ಬೆಳೆದ ಖಾದ್ಯ ಹೂಗಳನ್ನು ಒಳಗೊಂಡಿದೆ. ಇಲ್ಲಿನ ಒಂದೊಂದು ಅಡುಗೆಗಳು ವಿಭಿನ್ನ ರುಚಿಯನ್ನು ಹೊಂದಿದೆ. ಇಲ್ಲಿನ ಸಾಂಪ್ರದಾಯಿಕ ಭಕ್ಷ್ಯಗಳು ಹೀಗಿವೆ:

  • ಪಾಖಾಲಾ ಭಾತ್ – ಅನ್ನದ ಜೊತೆಗೆ ಪ್ಯಾನ್ ಫ್ರೈಡ್ ತರಕಾರಿಗಳು ಮತ್ತು ಮೊಸರನ್ನು ನೀಡಲಾಗುತ್ತದೆ.
  • ದಹಿ ಬೈಗಾನಾ – ಮೊಸರು ಮತ್ತು ಮಸಾಲೆ ಗ್ರೇವಿಯಲ್ಲಿ ಬೇಯಿಸಿದ ಬದನೆಕಾಯಿಯ ಖಾದ್ಯ ಇದಾಗಿದೆ
  • ಆಲೂ ಪೊಟಾಲ ರಸ – ಹುಣಸೆಹಣ್ಣು ಮತ್ತು ಬೆಲ್ಲದ ರುಚಿಯ ಗ್ರೇವಿಯಲ್ಲಿ ಆಲೂಗಡ್ಡೆಯನ್ನು ಮಸಾಲೆಯೊಂದಿಗೆ ಬೆರೆಸಿದ ಕರಿಯಾಗಿದೆ.

ಸಿಹಿ ಪದಾರ್ಥಗಳು:

  • ಪಿತಾ – ಬೆಲ್ಲ, ರವೆ ಮತ್ತು ಒಣ ಹಣ್ಣುಗಳಿಂದ ತುಂಬಿದ ಮೃದುವಾದ ಅಕ್ಕಿಯ ಕೇಕ್ ಗಳಾಗಿವೆ.
  • ಚೆನಾ ಪೋಡಾ – ನಯಾಗರ್ ಪ್ರದೇಶದ ಬೇಯಿಸಿದ ಚೀಸ್ ನ ಸಿಹಿತಿಂಡಿ ಇದಾಗಿದೆ.
  • ರಸಬಲಿ – ಸುವಾಸನೆಯಿಂದ ಕೂಡಿದ ಸಿಹಿಯಾದ ಕೇಸರಿ ಸಿಹಿ ಸಿರಪ್‌ ಗೆ ಹಾಲು ಮತ್ತು ಚೀಸ್ ನ ಉಂಡೆಗಳನ್ನು ಸೇರಿಸಿ ಮಾಡುವ ಖಾದ್ಯ

ಇದನ್ನೂ ಓದಿ: Indian Chutneys: ವಿಶ್ವದ ಟಾಪ್ 50 ಅಚ್ಚುಮೆಚ್ಚಿನ ತಿನಿಸುಗಳಲ್ಲಿ ಭಾರತದ ಈ ಎರಡು ಚಟ್ನಿಗಳು!

ಈ ಎಲ್ಲಾ ಮಾಹಿತಿಗಳ ಮೂಲಕ ನೀವು ಭುವನೇಶ್ವರಕ್ಕೆ ಭೇಟಿ ನೀಡಿದರೆ ನಿಮಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಆರಾಮವಾಗಿ ನಿಮ್ಮ ಪ್ರವಾಸವನ್ನು ಮುಗಿಸಬಹುದು.

Continue Reading

ಲೈಫ್‌ಸ್ಟೈಲ್

Himachal Tour: ರೋಮಾಂಚನ ಉಂಟುಮಾಡುವ ಹಿಮಾಚಲ ಪ್ರದೇಶದ ಡಾಲ್ ಹೌಸಿ ಗಿರಿಧಾಮ!

Himachal tour: ಡಾಲ್ ಹೌಸಿ ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿರುವ ಒಂದು ಸುಂದರವಾದ ಗಿರಿಧಾಮವಾಗಿದೆ. ಈ ಗಿರಿಧಾಮವನ್ನು 1850ರಲ್ಲಿ ಲಾರ್ಡ್ ಡಾಲ್ ಹೌಸಿ ಅಭಿವೃದ್ಧಿ ಪಡಿಸಿದ ಕಾರಣ ಈ ಗಿರಿಧಾಮಕ್ಕೆ ಆತನ ಹೆಸರನ್ನೇ ಇಡಲಾಗಿದೆ.

VISTARANEWS.COM


on

Himachal tour
Koo

ದೆಹಲಿ: ಒಬ್ಬರೇ ಪ್ರವಾಸಕ್ಕೆ ಹೋಗುವುದಕ್ಕಿಂತ ಕೆಲವರಿಗೆ ಕುಟುಂಬದ ಜೊತೆ ಪ್ರವಾಸಕ್ಕೆ ಹೋಗುವುದೆಂದರೆ ಬಹಳ ಇಷ್ಟ. ಇದು ನಿಮಗೆ ಹೆಚ್ಚಿನ ಮನೋರಂಜನೆಯನ್ನು ನೀಡುತ್ತದೆ. ಮತ್ತು ಸ್ಥಳದ ಬಗ್ಗೆ ನಿಮ್ಮ ಅಭಿಪ್ರಾಯ ಮತ್ತು ಅವರ ವಿಚಾರಗಳನ್ನು ಹಂಚಿಕೊಳ್ಳಬಹುದು. ಹಾಗೇ ಮೋಜು, ಮಸ್ತಿ ಮಾಡಲು, ಅಲ್ಲಿನ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಖುಷಿಯಾಗುತ್ತದೆ. ಹಾಗಾಗಿ ಕುಟುಂಬದ ಜೊತೆ ಪ್ರವಾಸ ಮಾಡಲು ಹಿಮಾಚಲ ಪ್ರದೇಶದ (Himachal Tour)ಡಾಲ್ ಹೌಸಿಗೆ ಭೇಟಿ ನೀಡಿ.

ಡಾಲ್ ಹೌಸಿ ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿರುವ ಒಂದು ಸುಂದರವಾದ ಗಿರಿಧಾಮವಾಗಿದೆ. ಈ ಗಿರಿಧಾಮವನ್ನು 1850ರಲ್ಲಿ ಲಾರ್ಡ್ ಡಾಲ್ ಹೌಸಿ ಅಭಿವೃದ್ಧಿ ಪಡಿಸಿದ ಕಾರಣ ಈ ಗಿರಿಧಾಮಕ್ಕೆ ಆತನ ಹೆಸರನ್ನೇ ಇಡಲಾಗಿದೆ. ಈ ಸ್ಥಳ ಹಚ್ಚಹಸಿರಾದ ಸಸ್ಯಗಳಿಂದ ಆವೃತ್ತವಾಗಿದೆ. ಇಲ್ಲಿ ಕಣಿವೆಗಳು, ಜಲಪಾತಗಳು ಮುಂತಾದವುಗಳನ್ನು ನೋಡಬಹುದು. ಹಾಗಾಗಿ ನಿಮ್ಮ ಕುಟುಂಬದ ಜೊತೆ ಈ ಸ್ಥಳಕ್ಕೆ ಬನ್ನಿ.

Himachal tour

ಖಜ್ಜಿಯಾರ್

“ಮಿನಿ ಸ್ವಿಟ್ಜರ್‌ಲ್ಯಾಂಡ್” ಎಂದು ಕರೆಯಲ್ಪಡುವ ಈ ಸ್ಥಳದಲ್ಲಿ ದಟ್ಟವಾದ ಕಾಡುಗಳು, ಹುಲ್ಲುಗಾವಲು ಮತ್ತು ಪ್ರಶಾಂತವಾದ ಸರೋವರವಿದೆ. ಈ ಸ್ಥಳವು ರಮಣೀಯವಾದ ಪ್ರಕೃತಿ ಸೌಂದರ್ಯವನ್ನು ಹೊಂದಿದೆ. ಇಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲರೂ ಕುದುರೆ ಸವಾರಿ ಮಾಡಬಹುದು, ಪ್ರಕೃತಿ ಸೌಂದರ್ಯದ ಮಧ್ಯದಲ್ಲಿ ವಾಕಿಂಗ್ ಮಾಡಬಹುದು ಮತ್ತು ಕುಟುಂಬದವರ ಜೊತೆ ಕುಳಿತು ಹಚ್ಚ ಹಸಿರಿನ ನಡುವೆ ಊಟ ಮಾಡಲು ಅವಕಾಶವಿದೆ.

ಡೈನ್ಕುಂಡ್ ಶಿಖರ

ಇದು ಹಿಮಾಚಲ ಪ್ರದೇಶದ ಅತ್ಯುನ್ನತ ಶಿಖರಗಳಲ್ಲಿ ಒಂದಾಗಿದೆ. ಕಣಿವೆಯ ನೋಟ ಮತ್ತು ಹಿಮದಿಂದ ಆವೃತವಾದ ಹಿಮಾಲಯ ಶಿಖರಗಳನ್ನು ನೋಡಲು ಬಯಸಿದ್ದರೆ ಈ ಸ್ಥಳಕ್ಕೆ ಭೇಟಿ ನೀಡಿ. ಇಲ್ಲಿ ಹಚ್ಚಹಸಿರಾದ ಪ್ರಕೃತಿಯ ಸೌಂದರ್ಯವನ್ನು ನೋಡಬಹುದು. ಟ್ರೆಕ್ಕಿಂಗ್ ಮತ್ತು ಇತರ ಸಾಹಸ ಚಟುವಟಿಕೆಗಳಿಗೆ ಇದು ಅತ್ಯುತ್ತಮ ಸ್ಥಳವಾಗಿದೆ

Himachal tour

ಪಂಚಪುಲ

ಪಂಚಪುಲ ಎಂದರೆ ಐದು ಸೇತುವೆಗಳು ಎಂದರ್ಥ. ಇಲ್ಲಿ ಬಂಡೆಗಳ ಮೇಲೆ ಬೀಳುವ ಆಕರ್ಷಕ ಜಲಪಾತಗಳನ್ನು ಕಾಣಬಹುದು. ಇದು ಪ್ರಪಂಚದಾದ್ಯಂತ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಲ್ಲಿ ಹೊಳೆಗಳಲ್ಲಿ ನಿಧಾನವಾಗಿ ನಡೆಯಬಹುದು. ಇಲ್ಲಿ ತಿನ್ನಲು ಆಹಾರಗಳು ಕೂಡ ದೊರೆಯುತ್ತದೆ.

ಸತ್ಧಾರ ಜಲಪಾತ

ಹಚ್ಚಹಸುರಿನ ಕಾಡುಗಳಿಂದ ಸುತ್ತುವರಿದಿರುವ ಏಳು ಬುಗ್ಗೆಗಳಲ್ಲಿ ಚಿಮ್ಮುವ ಸತ್ಧಾರ ಜಲಪಾತ ಒಂದು ಅದ್ಭುತ ಪ್ರವಾಸಿ ತಾಣವಾಗಿದೆ. ನೀವು ಇಲ್ಲಿಗೆ ಕುಟುಂಬದ ಜೊತೆ ಆಗಮಿಸಿದರೆ ಜಲಪಾತದ ಸೊಬಗನ್ನು ನೋಡಬಹುದು. ಇಲ್ಲಿ ಸ್ಟ್ರೀಮ್ ಸೈಡ್ ನಲ್ಲಿ ಪಿಕ್ನಿಕ್ ಗಳನ್ನು ಮಾಡಬಹುದು ಅಥವಾ ಪ್ರಕೃತಿಯ ಸೌಂದರ್ಯವನ್ನು ಪ್ರಶಾಂತವಾಗಿ ಸವಿಯಬಹುದು.

Himachal tour

ಚಮೇರಾ ಸರೋವರ

ಡಾಲ್ ಹೌಸಿ ಪಟ್ಟಣದಿಂದ ಸುಮಾರು 25ಕಿಮೀ ದೂರದಲ್ಲಿರುವ ಚಮೇರಾ ಸರೋವರವು ಕುಟುಂಬದ ಜೊತೆಗಿನ ವಿಹಾರಕ್ಕೆ ಬಹಳ ಸೂಕ್ತವಾದ ಸ್ಥಳವಾಗಿದೆ. ಇಲ್ಲಿ ನೀವು ಕುಟುಂಬದ ಜೊತೆ ದೋಣಿ ವಿಹಾರ ಮಾಡಬಹುದು. ಹಾಗೇ ಮೀನುಗಾರಿಕೆ, ಛಾಯಗ್ರಹಣ ಮುಂತಾದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಹುದು.

ಸೇಂಟ್ ಜಾನ್ ಚರ್ಚ್

ಇದು ಈ ಪಟ್ಟಣದಲ್ಲಿರುವ ಹಳೆಯ ಚರ್ಚ್ ಗಳಲ್ಲಿ ಒಂದಾಗಿದೆ. ಇದು ಆಧ್ಯಾತ್ಮಕ ಮತ್ತು ಐತಿಹಾಸಿಕ ಮಹತ್ವವನ್ನು ಸಾರುತ್ತದೆ. ಇಲ್ಲಿ ನೀವು ಅದರ ವಾಸ್ತುಶಿಲ್ಪಗಳನ್ನು ನೋಡಬಹುದು. ಇಲ್ಲಿ ಪ್ರಾರ್ಥನೆಗೂ ಹಾಜರಾಗಬಹುದು.

ಗಂಜಿ ಪಹಾರಿ

ಡಾಲ್ ಹೌಸ್ ನಿಂದ ಕೇವಲ 5 ಕಿ.ಮೀ ದೂರದಲ್ಲಿರುವ ಗಂಜಿ ಪಹಾರಿ ಬೆಟ್ಟಗಳಲ್ಲಿ ಒಂದಾಗಿದೆ. ಇಲ್ಲಿ ಸುತ್ತಮುತ್ತಲಿನ ಕಣಿವೆಗಳ ವ್ಯಾಪಕ ನೋಟಗಳ ಜೊತೆಗೆ ಕೆಲವು ರೋಮಾಂಚಕಾರಿ ಚಾರಣಗಳನ್ನು ಮಾಡಬಹುದು. ಇಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ವೀಕ್ಷಿಸಬಹುದು.

ಸುಭಾಷ್ ಬಾವೊಲಿ

ಇದಕ್ಕೆ ಭಾರತದ ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಅವರ ಹೆಸರನ್ನು ಇಡಲಾಗಿದೆ. ಇಲ್ಲಿ ನೀವು ನೈಸರ್ಗಿಕ ಚಿಲುಮೆಗಳು ಮತ್ತು ಪ್ರಶಾಂತವಾದ ವಾತಾವರಣವನ್ನು ಕಾಣಬಹುದು. ಇದು ಔಷಧೀಯ ಗುಣಗಳನ್ನು ಹೊಂದಿದ್ದು, ಸ್ವಾತಂತ್ರ್ಯ ಹೋರಾಟಗಾರನ ಅನಾರೋಗ್ಯವನ್ನು ಗುಣಪಡಿಸಿದೆ ಎಂದು ನಂಬಲಾಗಿದೆ. ಹಾಗಾಗಿ ಹಚ್ಚ ಹಸಿರಾದ ಪ್ರಕೃತಿ ಸೌಂದರ್ಯದ ಜೊತೆ ಸಮಯ ಕಳೆಯಲು ನಿಮ್ಮ ಕುಟುಂಬದ ಜೊತೆ ಇಲ್ಲಿಗೆ ಬನ್ನಿ.

Himachal tour

ಡಾಲ್ ಹೌಸಿ ಮಾಲ್ ರಸ್ತೆ

ಡಾಲ್ ಹೌಸಿ ಪಟ್ಟಣವು ತನ್ನದೇ ಆದ ಮಾಲ್ ರಸ್ತೆಗಳನ್ನು ಹೊಂದಿದೆ. ಇಲ್ಲಿ ಶಾಪಿಂಗ್ ಮಾಲ್ ಮತ್ತು ರೆಸ್ಟೋರೆಂಟ್ ಗಳಿವೆ. ಜೊತೆಗೆ ಇಲ್ಲಿ ಪ್ರಪಂಚದಾದ್ಯಂತ ಅನೇಕ ರೀತಿಯ ಭಕ್ಷ್ಯಗಳು ಸಿಗುತ್ತವೆ. ಹಾಗೇ ಸ್ಮಾರಕಗಳು ಮತ್ತು ಸ್ಥಳೀಯ ಕರಕುಶಲ ವಸ್ತುಗಳನ್ನು ನೋಡಲು ಬಯಸಿದ್ದರೆ ಈ ಸ್ಥಳಕ್ಕೆ ಭೇಟಿ ನೀಡಿ.

ಇದನ್ನೂ ಓದಿ: Viral News: ರೈಲಿನಲ್ಲಿ ಜನಿಸಿದ ತಮ್ಮ ಮಗುವಿಗೆ ʼಮಹಾಲಕ್ಷ್ಮಿʼ ಎಂದು ಹೆಸರಿಟ್ಟಿದ್ದೇಕೆ ಮುಸ್ಲಿಂ ದಂಪತಿ?

ಕಲಾಟಾಪ್ ವನ್ಯಜೀವಿ ಅಭಯಾರಣ್ಯ

ಈ ಸುಂದರವಾದ ಅಭಯಾರಣ್ಯವು ಡಾಲ್ ಹೌಸಿ ಮತ್ತು ಖಜ್ಜಿಯಾರ್ ನಡುವೆ ಇದೆ. ಇಲ್ಲಿ ಜಿಂಕೆಗಳು , ಕಪ್ಪು ಕರಡಿಗಳು, ನರಿ, ಚಿರತೆ, ಕಾಡು ಬೆಕ್ಕುಗಳು ಇತರ ಜಾತಿಯ ಪ್ರಾಣಿಗಳು ಹಾಗೂ ಪಕ್ಷಿಗಳನ್ನು ನೋಡಬಹುದು. ಇಲ್ಲಿ ನೀವು ಅಳಿವಿನಂಚಿನಲ್ಲಿರುವ ಪ್ರಾಣಿಗಳು ಮತ್ತು ಪಕ್ಷಿಗಳನ್ನು ನೋಡಬಹುದು.

Continue Reading
Advertisement
Actor Darshan case pavithra Gowda manager Arrest
ಸ್ಯಾಂಡಲ್ ವುಡ್11 mins ago

Actor Darshan: ರೇಣುಕಾಸ್ವಾಮಿ ಕೊಲೆ ಪ್ರಕರಣ; ಪವಿತ್ರಾ ಗೌಡ ಮ್ಯಾನೇಜರ್ ಅರೆಸ್ಟ್‌

Gold Rate Today
ಚಿನ್ನದ ದರ16 mins ago

Gold Rate Today: ವೀಕೆಂಡ್‌ನಲ್ಲಿ ಚಿನ್ನ ಖರೀದಿಸುವವರಿಗೆ ಗುಡ್‌ ನ್ಯೂಸ್;‌ ಇಂದು ಏರಿಕೆಯಾಗದ ಬೆಲೆ

Tata Motors SUV Tata Nexon 7th Anniversary Benefit up to Rs 1 lakh for customers
ವಾಣಿಜ್ಯ28 mins ago

Tata Motors: ಎಸ್‌ಯುವಿ ಟಾಟಾ ನೆಕ್ಸಾನ್‌ನ 7ನೇ ವಾರ್ಷಿಕೋತ್ಸವ; ಗ್ರಾಹಕರಿಗೆ 1 ಲಕ್ಷ ರೂ.ವರೆಗೆ ಉಳಿತಾಯ!

murder case
ಚಿಕ್ಕಬಳ್ಳಾಪುರ30 mins ago

Murder Case : ಚಿಕ್ಕಬಳ್ಳಾಪುರದಲ್ಲಿ ತಲೆ ಮೇಲೆ ಕಲ್ಲು ಎತ್ತಿಹಾಕಿ ವ್ಯಕ್ತಿಯ ಬರ್ಬರ ಹತ್ಯೆ

David Wiese Retirement
ಕ್ರೀಡೆ50 mins ago

David Wiese Retirement: ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಡೇವಿಡ್ ವೈಸ್

Money Guide
ಮನಿ-ಗೈಡ್57 mins ago

Money Guide: ಹಿರಿಯ ನಾಗರಿಕರಿಗಾಗಿ ಅತ್ಯಾಕರ್ಷಕ ಉಳಿತಾಯ ಯೋಜನೆ

PMAY
ವಾಣಿಜ್ಯ57 mins ago

PMAY: ಸ್ವಂತ ಮನೆ ಹೊಂದುವ ನಿಮ್ಮ ಕನಸು ಪ್ರಧಾನ್ ಮಂತ್ರಿ ಆವಾಸ್ ಯೋಜನೆ ಮೂಲಕ ನನಸು; ಹೀಗೆ ಅಪ್ಲೈ ಮಾಡಿ

Bahaddur movie is re released on June 21
ಕರ್ನಾಟಕ58 mins ago

Bahaddur Movie: ಹತ್ತು ವರ್ಷಗಳ ನಂತರ ಬೆಳ್ಳಿತೆರೆಯ ಮೇಲೆ ಮತ್ತೆ “ಬಹದ್ದೂರ್”!

Darshan Arrested renuka shed like hell more murders here
ಸ್ಯಾಂಡಲ್ ವುಡ್1 hour ago

Darshan Arrested: ಬಡ್ಡಿ ಕಟ್ಟದವರಿಗೆ ‘ನರಕ’ ಆಗಿತ್ತೇ ಈ ಶೆಡ್? ಇಲ್ಲಿ ನಡೆದಿವೆಯೇ ಇನ್ನಷ್ಟು ಕೊಲೆಗಳು?

Foeticide
ಕರ್ನಾಟಕ1 hour ago

Foeticide: ಬೆಳಗಾವಿಯಲ್ಲಿ ನಕಲಿ ವೈದ್ಯನಿಂದ ಭ್ರೂಣಗಳ ಹತ್ಯೆ; ಜಮೀನಲ್ಲಿ ಸಿಕ್ಕಿತು ಶಿಶುವಿನ ಶವ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಯಾದಗಿರಿ21 hours ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ2 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು2 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು2 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ2 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

karnataka weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ5 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ5 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ5 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ5 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

ಟ್ರೆಂಡಿಂಗ್‌