IRCTC Jyotirlinga Yatra: ರೈಲ್ವೆ ಇಲಾಖೆಯಿಂದ ಏಳು ಜ್ಯೋತಿರ್ಲಿಂಗ ವೀಕ್ಷಣೆ ಪ್ರವಾಸ; ದರ ವಿವರ ಇಲ್ಲಿದೆ - Vistara News

ಪ್ರವಾಸ

IRCTC Jyotirlinga Yatra: ರೈಲ್ವೆ ಇಲಾಖೆಯಿಂದ ಏಳು ಜ್ಯೋತಿರ್ಲಿಂಗ ವೀಕ್ಷಣೆ ಪ್ರವಾಸ; ದರ ವಿವರ ಇಲ್ಲಿದೆ

IRCTC Jyotirlinga Yatra: ಏಳು ಜ್ಯೋತಿರ್ಲಿಂಗಗಳ ದರ್ಶನ ದರ್ಶನ ಮಾಡಲು ಇಚ್ಛಿಸುವವರಿಗೆ ಶುಭ ಸುದ್ದಿ. ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮವು ಭಾರತ್ ಗೌರವ್ ಎಸಿ ಪ್ರವಾಸಿ ರೈಲಿನ ಮೂಲಕ ಮೇ 22ರಿಂದ ಏಳು ಜ್ಯೋತಿರ್ಲಿಂಗ ಯಾತ್ರೆಯ ಪ್ರವಾಸೋದ್ಯಮ ಪ್ಯಾಕೇಜ್ ಅನ್ನು ಘೋಷಿಸಿದೆ. ಈ ಕುರಿತು ಮಾಹಿತಿ ಇಲ್ಲಿದೆ.

VISTARANEWS.COM


on

IRCTC Jyotirlinga Yatra
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಏಕಕಾಲಕ್ಕೆ ಏಳು ಜ್ಯೋತಿರ್ಲಿಂಗಗಳ (seven Jyotirlinga ) ದರ್ಶನ ಮಾಡಬೇಕು ಎಂದು ಬಯಸುವವರಿಗೆ ಶುಭ ಸುದ್ದಿ. ಭಾರತೀಯ ರೈಲ್ವೆ ಊಟೋಪಚಾರ ಮತ್ತು ಪ್ರವಾಸೋದ್ಯಮ ನಿಗಮ (IRCTC) ಭಾರತ್ ಗೌರವ್ ಎಸಿ ಟೂರಿಸ್ಟ್ ಟ್ರೈನ್ (Bharat Gaurav AC Tourist Train) ಮೂಲಕ 7 ಜ್ಯೋತಿರ್ಲಿಂಗ ಯಾತ್ರೆಯ (IRCTC Jyotirlinga Yatra) ಹೊಸ ಪ್ರವಾಸೋದ್ಯಮ ಪ್ಯಾಕೇಜ್ ಅನ್ನು ಪ್ರಕಟಿಸಿದೆ.

ಜ್ಯೋತಿರ್ಲಿಂಗ ಯಾತ್ರೆಯು 2024ರ ಮೇ 22ರಿಂದ ಪ್ರಾರಂಭವಾಗಲಿದ್ದು, 11 ರಾತ್ರಿ, 12 ಹಗಲಿನಲ್ಲಿ ಪೂರ್ಣಗೊಳ್ಳಲಿದೆ ಎಂದು ಐಆರ್‌ಸಿಟಿಸಿ ನಿಗಮ ಹೇಳಿದೆ. ಈ ನಿಗಮ ಪ್ರವಾಸೋದ್ಯಮ ಪ್ಯಾಕೇಜ್ ಕೋಡ್- NZBG35. ಬೆಳಗ್ಗೆ ಚಹಾ, ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟವನ್ನು ಒಳಗೊಂಡಿರುತ್ತದೆ. ಸಸ್ಯಾಹಾರಿ ಆಹಾರವನ್ನು ಮಾತ್ರ ನೀಡಲಾಗುವುದು.

ಇದನ್ನೂ ಓದಿ: Summer Tour: ಬೇಸಿಗೆ ಪ್ರವಾಸಕ್ಕೆ ಸೂಕ್ತ ಈ 5 ಅದ್ಭುತ ಗಿರಿಧಾಮಗಳು!


ಎಲ್ಲಿಗೆ ಭೇಟಿ?

ಈ ಸಂದರ್ಭದಲ್ಲಿ ಏಳು ಜ್ಯೋತಿರ್ಲಿಂಗ ಕ್ಷೇತ್ರಗಳಾದ ಓಂಕಾರೇಶ್ವರ ಜ್ಯೋತಿರ್ಲಿಂಗ, ಮಹಾಕಾಳೇಶ್ವರ ಜ್ಯೋತಿರ್ಲಿಂಗ, ಸೋಮನಾಥ ಜ್ಯೋತಿರ್ಲಿಂಗ, ದ್ವಾರಕಾಧೀಶ ದೇವಸ್ಥಾನ ಮತ್ತು ನಾಗೇಶ್ವರ ಜ್ಯೋತಿರ್ಲಿಂಗ, ಭೇಟ್ ದ್ವಾರಕಾ ತ್ರಯಂಬಕೇಶ್ವರ ಜ್ಯೋತಿರ್ಲಿಂಗ, ಗೃಷ್ಣೇಶ್ವರ ಜ್ಯೋತಿರ್ಲಿಂಗ ಔರಂಗಾಬಾದ್, ಭೀಮಾಶಂಕರ ಜ್ಯೋತಿರ್ಲಿಂಗ, ಪುಣೆ ಸೇರಿದೆ.

ಯಾತ್ರಾರ್ಥಿಗಳೇ ಗಮನಿಸಿ

ಆಸಕ್ತ ಯಾತ್ರಾರ್ಥಿಗಳು ಐಆರ್‌ಸಿಟಿಸಿಯಿಂದ ಜ್ಯೋತಿರ್ಲಿಂಗ ಯಾತ್ರೆಗಾಗಿ ಉದ್ದೇಶಿಸಿರುವ ಭಾರತ್ ಗೌರವ್ ಎಸಿ ಟೂರಿಸ್ಟ್ ರೈಲಿನಲ್ಲಿ ಸ್ಲೀಪರ್ ಕ್ಲಾಸ್, ಥರ್ಡ್ ಎಸಿ ಮತ್ತು ಸೆಕೆಂಡ್ ಎಸಿ ಆಯ್ಕೆ ಮಾಡಬಹುದು.

ದರ ಇಂತಿದೆ

ಟ್ರೈನ್ ಜರ್ನಿ ಸಿಂಗಲ್, ಡಬಲ್, 5-11 ವರ್ಷದ ಮೂವರು ಮಕ್ಕಳಿಗೆ ಇಂತಿದೆ. 2A 48600- 46700 ರೂ. , 3A ರೂ 36700- 35150ರೂ., ಎಸ್ಎಲ್ ರೂ 22150 ನಿಂದ 20800ರೂ.

ನಿಲುಗಡೆ ತಾಣಗಳು

ಐಆರ್‌ಸಿಟಿಸಿ ನಿಗಮದ ಬೋರ್ಡಿಂಗ್/ ಡಿ-ಬೋರ್ಡಿಂಗ್ ಪಾಯಿಂಟ್‌ಗಳನ್ನು ಗುರುತಿಸಿದೆ. ಯೋಗ ನಗರಿ ರಿಷಿಕೇಶ್, ಹರಿದ್ವಾರ, ಮೊರಾದಾಬಾದ್, ಬರೇಲಿ, ಶಹಜಹಾನ್‌ಪುರ, ಹರ್ದೋಯ್, ಲಕ್ನೋ, ಕಾನ್ಪುರ್, ಒಆರ್‌ಐ, ವಿರಂಗನ ಲಕ್ಷ್ಮೀಬಾಯಿ ಮತ್ತು ಲಲಿತ್‌ಪುರ ಜಂಕ್ಷನ್.

ಯಾತ್ರಾ ಪ್ಯಾಕೇಜ್ ಸೇರ್ಪಡೆ

ಒಬ್ಬ ಪ್ರಯಾಣಿಕ ಪ್ಯಾಕೇಜ್ ಅನ್ನು ಬುಕ್ ಮಾಡಬಹುದು. ಆದರೆ ಆ ವ್ಯಕ್ತಿಯು ಡಬಲ್/ ಟ್ರಿಪಲ್ ಆಕ್ಯುಪೆನ್ಸಿಯಲ್ಲಿ ಬುಕ್‌ ಮಾಡಬೇಕಾಗುತ್ತದೆ ಎಂದು ಐಆರ್‌ಸಿಟಿಸಿ ತಿಳಿಸಿದೆ. ಎಲ್ಲಾ ಸಂಚಾರ ಮತ್ತು ದೃಶ್ಯ ವೀಕ್ಷಣೆಯ ಪ್ಯಾಕೇಜ್ ವರ್ಗದ ಪ್ರಕಾರ ಇರುತ್ತದೆ. ನಿಗಮವು ಪ್ರಯಾಣಿಕರಿಗೆ ಪ್ರಯಾಣ ವಿಮೆಯನ್ನು ನೀಡುತ್ತದೆ. ವೃತ್ತಿಪರ ಮತ್ತು ಸ್ನೇಹಪರ ಪ್ರವಾಸದ ಅನುಭವಕ್ಕಾಗಿ ವಿವಿಧ ಸೇವೆಗಳನ್ನು ನೀಡುತ್ತದೆ. ನಿಗಮದ ಟೂರ್ ಮ್ಯಾನೇಜರ್‌ಗಳು ಪ್ರವಾಸದ ಉದ್ದಕ್ಕೂ ಪ್ರವಾಸಿಗರ ಜೊತೆ ಪ್ರಯಾಣಿಸುತ್ತಾರೆ.


ಉತ್ತಮ ಸೌಲಭ್ಯ

ಟ್ರೈನ್ ಜರ್ನಿ ಸ್ಲೀಪರ್ ಕ್ಲಾಸ್ 3AC 2AC ಪ್ರಯಾಣದ ಪ್ರಕಾರ ಬಜೆಟ್ ಗೆ ಹೊಂದಿಕೆಯಾಗುವ ಹೊಟೇಲ್ ಗಳಲ್ಲಿ ರಾತ್ರಿ ತಂಗುವ ವ್ಯವಸ್ಥೆ ಮಾಡಲಾಗುತ್ತದೆ. ಮೂರು ಹೊತ್ತು ಊಟ ಮತ್ತು ಉಪಾಹಾರದ ವ್ಯವಸ್ಥೆ ಕಲ್ಪಿಸಲಾಗುತ್ತದೆ.

ಭಾರತ್ ಗೌರವ್ ರೈಲುಗಳು

ಭಾರತೀಯ ರೈಲ್ವೆಯು ಭಾರತ್ ಗೌರವ್ ಪ್ರವಾಸಿ ರೈಲುಗಳ ಬ್ಯಾನರ್ ಅಡಿಯಲ್ಲಿ ಥೀಮ್ ಆಧಾರಿತ ಸ್ಥಳಗಳಿಗೆ ಪ್ರವಾಸಿ ರೈಲುಗಳನ್ನು ನಿರ್ವಹಿಸುತ್ತದೆ. ರೈಲು ಪ್ರಯಾಣಗಳನ್ನು ವೈವಿಧ್ಯಮಯ ಸ್ಥಳಗಳಿಗೆ ಪರಿಚಯಿಸಲಾಗಿದೆ. ರೈಲ್ವೆ ಸಚಿವಾಲಯವು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಭವ್ಯವಾದ ಐತಿಹಾಸಿಕ ಸ್ಥಳಗಳನ್ನು ಪ್ರದರ್ಶಿಸುವ ಉದ್ದೇಶದಿಂದ ‘ಭಾರತ್ ಗೌರವ್ ರೈಲುಗಳು’ ಪರಿಕಲ್ಪನೆಯನ್ನು ಪರಿಚಯಿಸಿದೆ. ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ರೈಲು ನಿಲ್ದಾಣ ಅಥವಾ ರೈಲ್ವೆ ಇಲಾಖೆಯ ವೆಬ್‌ ಸೈಟ್‌ ಸಂಪರ್ಕಿಸಬಹುದು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರವಾಸ

Muthyala Maduvu Waterfalls: ಜಲರಾಶಿಯಿಂದ ತುಂಬಿಕೊಂಡು ಕಣ್ಮನ ಸೆಳೆಯುತ್ತಿರುವ ಮುತ್ಯಾಲಮಡುವು ಜಲಪಾತ

ಧುಮ್ಮಿಕ್ಕಿ ಹರಿಯುತ್ತಿರೋ ಮುತ್ಯಾಲಮಡು ಜಲಪಾತ (Muthyala Maduvu Waterfalls) ಕಾಣಲು ಬೆಂಗಳೂರು ನಗರವಾಸಿಗಳು ಸೇರಿದಂತೆ ದೂರದೂರದಿಂದ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿದ್ದಾರೆ. ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಿಂದ ಈ ಪ್ರವಾಸಿತಾಣದ ಸೊಬಗು ಮತ್ತಷ್ಟು ಹೆಚ್ಚಾಗಿದೆ.

VISTARANEWS.COM


on

By

Muthyala Maduvu Waterfalls
Koo

ವರದಿ: ಅಂಬರೀಷ್, ಆನೇಕಲ್

ಆನೇಕಲ್(ಬೆಂಗಳೂರು): ಹಚ್ಚ ಹಸುರಿನ ಗಿಡ ಮರಗಳ ನಡುವೆ ಧುಮ್ಮಿಕ್ಕುತ್ತಿರುವ ಬೆಂಗಳೂರು (bengaluru) ಹೊರವಲಯದಲ್ಲಿರುವ ಆನೇಕಲ್ (anekal) ತಾಲೂಕಿನ ಮುತ್ಯಾಲಮಡುವು ಜಲಪಾತ (Muthyala Maduvu Waterfalls) ಈಗ ಪ್ರವಾಸಿಗರನ್ನು ಸೆಳೆಯುತ್ತಿದೆ. ಕಳೆದ ಕೆಲವು ದಿನಗಳಿಂದ ಬೆಂಗಳೂರು ಸುತ್ತಮುತ್ತ ನಿರಂತರ ಮಳೆಯಾಗುತ್ತಿರುವ ಜಲರಾಶಿಯಿಂದ ಮೈತುಂಬಿಕೊಂಡಿರುವ ಎಲ್ಲರ ಕಣ್ಮನ ಸೆಳೆಯುತ್ತಿದೆ.

ಧುಮ್ಮಿಕ್ಕಿ ಹರಿಯುತ್ತಿರೋ ಮುತ್ಯಾಲಮಡುವು ಜಲಪಾತ ಕಾಣಲು ಬೆಂಗಳೂರು ನಗರವಾಸಿಗಳು ಸೇರಿದಂತೆ ದೂರದೂರದಿಂದ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿದ್ದಾರೆ. ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಿಂದ ಈ ಪ್ರವಾಸಿತಾಣದ ಸೊಬಗು ಮತ್ತಷ್ಟು ಹೆಚ್ಚಾಗಿದೆ.

ಪ್ರವಾಸಿಗರ ಹಾಟ್​ ಸ್ಪಾಟ್​ ಆಗಿರುವ ಮುತ್ಯಾಲಮಡುವು ಫಾಲ್ಸ್ ಸುಮಾರು 300 ಅಡಿ ಎತ್ತರದಿಂದ ಕಣಿವೆಯತ್ತ ಹರಿದು ಬರುತ್ತದೆ. ಹಾಲ್ನೊರೆಯಂತೆ ಕಾಣುವ ಜಲಪಾತದ ಸೌಂದರ್ಯ ರಾಶಿ ಎಲ್ಲರ ಕಣ್ಮನ ಸೆಳೆಯುತ್ತಿದೆ.
ಜಲಪಾತದ ಸೌಂದರ್ಯ ಕಂಡು ಪ್ರವಾಸಿಗರು ಫುಲ್ ಖುಷ್ ಆಗಿದ್ದು, ಅನೇಕರು ಸುರಿಯುವ ಮಳೆಯ ನಡುವೆಯೂ ನೀರಿನಲ್ಲಿ ಮಿಂದೇಳುತ್ತಿದ್ದಾರೆ. ಜಲಪಾತದ ರಮಣೀಯ ಸೊಬಗನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.

ಆನೇಕಲ್ ನಿಂದ ಸುಮಾರು 5 ಕಿ.ಮೀ ಮತ್ತು ಬೆಂಗಳೂರಿನಿಂದ 40 ಕಿ.ಮೀ. ದೂರದಲ್ಲಿರುವ ಮುತ್ಯಾಲಮಡು ಇರುವ ಸ್ಥಳವನ್ನು ಪರ್ಲ್ ವ್ಯಾಲಿ ಎಂದೂ ಕರೆಯುತ್ತಾರೆ.


ಮುತ್ತಿನ ಕಣಿವೆ

ಈ ಸ್ಥಳವು ಜಲಪಾತ ಮತ್ತು ಪರ್ವತ ಶ್ರೇಣಿಗಳಿಗೆ ಹೆಸರುವಾಸಿಯಾಗಿದೆ. ಜಲಪಾತದ ನೀರು ಸಸ್ಯಗಳ ನಡುವೆ ಕೆಳಗೆ ಇಳಿಯುವಾಗ ಮುತ್ತುಗಳ ಸರಮಾಲೆಯಂತೆ ಕಾಣುವುದರಿಂದ ಇದನ್ನು ಪರ್ಲ್ ವ್ಯಾಲಿ ಅಥವಾ ಮುತ್ತಿನ ಕಣಿವೆ ಎನ್ನಲಾಗುತ್ತದೆ.


ಪ್ರವಾಸಿಗರ ಆಕರ್ಷಣೆ

ಜಲಪಾತದ ಸಮೀಪದಲ್ಲಿ ಒಂದು ಶಿವನ ದೇವಾಲಯವಿದೆ. ಇಲ್ಲಿ ಪ್ರತಿದಿನ ಬೆಳಗ್ಗೆ ಪೂಜೆ ನಡೆಯುತ್ತದೆ. ಜಲಪಾತದಿಂದಾಗಿ ಈ ಸ್ಥಳವು ವಿವಿಧ ಜಾತಿಯ ಪಕ್ಷಿಗಳ ಆಶ್ರಯತಾಣವಾಗಿದೆ.

ಸಾಕಷ್ಟು ಪರ್ವತ ರೋಹಿಗಳು, ಟ್ರೆಕ್ಕಿಂಗ್ ಉತ್ಸಾಹಿಗಳೂ ಇಲ್ಲಿಗೆ ಭೇಟಿ ನೀಡುತ್ತಾರೆ. ಇಲ್ಲಿನ ಸಮೀಪದ ಮತ್ತೊಂದು ಪ್ರವಾಸಿ ಆಕರ್ಷಣೆ ತಟ್ಟೆಕೆರೆ ಸರೋವರ.

ತೆರೆದ ಅರಣ್ಯ ಪ್ರದೇಶ ಮತ್ತು ನಗರಕ್ಕೆ ಸಮೀಪವಾಗಿರುವುದರಿಂದ ಎಲ್ಲರಿಗೂ ಇಲ್ಲಿ ಪ್ರವೇಶವಿದೆ. ಚಾರಣ ಪ್ರಿಯರಿಗೆ ಸೂಕ್ತ ಅವಕಾಶವೂ ಇಲ್ಲಿದೆ.


ಭೇಟಿಗೆ ಯಾವ ಸಮಯ ಸೂಕ್ತ ?

ಮುತ್ಯಾಲಮಡುವು ಜಲಪಾತಕ್ಕೆ ಭೇಟಿ ನೀಡಲು ಸೂಕ್ತ ಸಮಯ ಬೆಳಗ್ಗೆ 6ರಿಂದ ಸಂಜೆ 7ರವರೆಗೆ. ನವೆಂಬರ್ ವರೆಗೆ ಇಲ್ಲಿ ಜಲಧಾರೆ ತುಂಬಿ ಹರಿಯುವುದರಿಂದ ಈ ಸಂದರ್ಭದಲ್ಲಿ ಭೇಟಿ ನೀಡಬಹುದು.

ಇದನ್ನೂ ಓದಿ: Konark Tourist Destination: ರಜೆಯಲ್ಲಿ ಕೋನಾರ್ಕ್‌ಗೆ ಹೋದಾಗ ಈ ಅದ್ಭುತ ಸ್ಥಳಗಳಿಗೆ ಭೇಟಿ ನೀಡಲು ಮರೆಯಬೇಡಿ

ಬೆಂಗಳೂರಿನಿಂದ ಎಷ್ಟು ದೂರ?

ಮುತ್ಯಾಲಮಡುವು ಜಲಪಾತ ಪ್ರದೇಶಕ್ಕೆ ಪ್ರವೇಶ ಶುಲ್ಕ ಕನಿಷ್ಠ ಪ್ರವೇಶ ಶುಲ್ಕವನ್ನು ನಿಗದಿಪಡಿಸಲಾಗಿದೆ. ಬೆಂಗಳೂರಿನಿಂದ ಮುತ್ಯಾಲಮಡು ಜಲಪಾತಕ್ಕೆ ಹೊಸೂರು ರಸ್ತೆ ಮೂಲಕ 1.16 ಗಂಟೆ ಪ್ರಯಾಣವಿದೆ. ಎಲೆಕ್ಟ್ರಾನಿಕ್ ಸಿಟಿಯಿಂದ ಮುತ್ಯಾಲಮಡುವು ಜಲಪಾತಕ್ಕೆ ಬನ್ನೇರುಘಟ್ಟ ಮುಖ್ಯ ರಸ್ತೆ/ ಜಿಗಣಿ – ಆನೇಕಲ್ ರಸ್ತೆ ಮೂಲಕ 45 ನಿಮಿಷದ ಪ್ರಯಾಣವಿದೆ.

Continue Reading

ಪ್ರವಾಸ

Kanyakumari Tour: ನಿಮ್ಮ ಕನ್ಯಾಕುಮಾರಿ ಪ್ರವಾಸದ ಪಟ್ಟಿಯಲ್ಲಿರಲಿ ಈ 10 ಸಂಗತಿಗಳು

ಆಧ್ಯಾತ್ಮಿಕ ಸಾರ, ನೈಸರ್ಗಿಕ ವೈಭವ, ಐತಿಹಾಸಿಕ ಹೆಗ್ಗುರುತುಗಳಿಂದ ಖ್ಯಾತಿ ಪಡೆದಿರುವ ಕನ್ಯಾಕುಮಾರಿ (Kanyakumari Tour) ಭೇಟಿಯನ್ನು ಸ್ಮರಣೀಯವಾಗಿಸಲು ಈ ಹತ್ತು ಚಟುವಟಿಕೆಗಳು ನಿಮ್ಮ ಪ್ರವಾಸದ ಪಟ್ಟಿಯಲ್ಲಿ ಸೇರ್ಪಡೆಯಾಗಲಿ.

VISTARANEWS.COM


on

By

Kanyakumari Tour
Koo

ದಕ್ಷಿಣ ಭಾರತದಲ್ಲಿ (South India) ನೀವು ಪ್ರವಾಸ (tour) ಮಾಡುವ ಯೋಜನೆ ರೂಪಿಸುತ್ತಿದ್ದರೆ ಭಾರತದ ದಕ್ಷಿಣದ ತುದಿಯಾದ ಕನ್ಯಾಕುಮಾರಿ (Kanyakumari Tour) ನಿಮ್ಮ ಆದ್ಯತೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರಲಿ. ತಮಿಳುನಾಡಿನ (tamilnadu) ಕರಾವಳಿಯಲ್ಲಿರುವ ಈ ರತ್ನವು ಭೌಗೋಳಿಕ ಅದ್ಭುತ ಮಾತ್ರವಲ್ಲದೆ ಸಂಸ್ಕೃತಿ, ಇತಿಹಾಸ ಮತ್ತು ನೈಸರ್ಗಿಕ ಸೌಂದರ್ಯದ ಸಂಗಮವಾಗಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಧ್ಯಾನದ ಕಾರಣಕ್ಕಾಗಿ ಕನ್ಯಾಕುಮಾರಿ ಈಗ ಸುದ್ದಿಯ ಕೇಂದ್ರವಾಗಿದೆ.

ಕನ್ಯಾಕುಮಾರಿಯಲ್ಲಿ ನೀವು ಮಿಸ್ ಮಾಡಿಕೊಳ್ಳಲೇಬಾರದ ಪ್ರಮುಖ 10 ಸಂಗತಿಗಳಿವೆ. ಇವೆಲ್ಲ ನಿಮ್ಮ ಪ್ರವಾಸದ ಪಟ್ಟಿಯಲ್ಲಿ ಇರಲಿ.

ತ್ರಿವೇಣಿ ಸಂಗಮ

ಕನ್ಯಾಕುಮಾರಿಯು ತನ್ನ ವಿಶಿಷ್ಟ ಭೌಗೋಳಿಕ ಸ್ಥಾನಕ್ಕೆ ಹೆಸರುವಾಸಿಯಾಗಿದೆ. ಅಲ್ಲಿ ಸಮುದ್ರದ ಮೇಲೆ ಸೂರ್ಯೋದಯ ಮತ್ತು ಸೂರ್ಯಾಸ್ತ ಎರಡನ್ನೂ ವೀಕ್ಷಿಸಬಹುದು. ಅರಬ್ಬೀ ಸಮುದ್ರ, ಬಂಗಾಳಕೊಲ್ಲಿ ಮತ್ತು ಹಿಂದೂ ಮಹಾಸಾಗರದ ಸಂಗಮವಾಗಿರುವ ತ್ರಿವೇಣಿ ಸಂಗಮವು ನಯನ ಮನೋಹರ ದೃಶ್ಯವನ್ನು ಒದಗಿಸುತ್ತದೆ.

ವಿವೇಕಾನಂದ ಕಲ್ಲಿನ ಸ್ಮಾರಕ

ಕರಾವಳಿಯ ಕಲ್ಲಿನ ದ್ವೀಪದಲ್ಲಿ ನೆಲೆಗೊಂಡಿರುವ ಈ ಸ್ಮಾರಕವನ್ನು ಸ್ವಾಮಿ ವಿವೇಕಾನಂದರಿಗೆ ಸಮರ್ಪಿಸಲಾಗಿದೆ. ಸಣ್ಣ ದೋಣಿ ಸವಾರಿಯ ಮೂಲಕ ಅದನ್ನು ತಲುಪಿ ಮತ್ತು ವಿಹಂಗಮ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು. ಆಧ್ಯಾತ್ಮಿಕ ಮತ್ತು ಐತಿಹಾಸಿಕ ಮಹತ್ವವನ್ನು ಇಲ್ಲಿ ನೆನಪಿಸಿಕೊಳ್ಳಿ.

ತಿರುವಳ್ಳುವರ್ ಪ್ರತಿಮೆ

ವಿವೇಕಾನಂದ ಬಂಡೆಯ ಪಕ್ಕದಲ್ಲಿರುವ ಈ 133 ಅಡಿ ಎತ್ತರದ ತಮಿಳು ಕವಿ-ಸಂತ ತಿರುವಳ್ಳುವರ್ ಪ್ರತಿಮೆ ಕಲೆ ಮತ್ತು ವಾಸ್ತುಶಿಲ್ಪದ ಅದ್ಭುತವಾಗಿದೆ. ಇಲ್ಲಿಗೆ ಭೇಟಿ ನೀಡಲು ತಪ್ಪಿಸದಿರಿ.

ಸುಂದರ ಕಡಲತೀರ

ಕನ್ಯಾಕುಮಾರಿ ಕಡಲತೀರವು ಬಹು-ಬಣ್ಣದ ಮರಳು ಮತ್ತು ಕಲ್ಲಿನ ತೀರವನ್ನು ಹೊಂದಿದೆ. ಪ್ರಶಾಂತವಾದ ವಾತಾವರಣದಲ್ಲಿ ಸುತ್ತಾಡಲು ಬಯಸುವವರು ಸಂಗುತುರೈ ಬೀಚ್, ಸೋತವಿಲೈ ಬೀಚ್ ನಲ್ಲಿ ಕೆಲಕಾಲ ಕಳೆಯಬಹುದು.


ಪದ್ಮನಾಭಪುರಂ ಅರಮನೆ

ಕನ್ಯಾಕುಮಾರಿಯಿಂದ ಸ್ವಲ್ಪ ದೂರದಲ್ಲಿ 16ನೇ ಶತಮಾನದ ಈ ಅರಮನೆಯು ಸಾಂಪ್ರದಾಯಿಕ ಕೇರಳ ವಾಸ್ತುಶಿಲ್ಪಕ್ಕೆ ಸಾಕ್ಷಿಯಾಗಿದೆ ಮತ್ತು ದಕ್ಷಿಣ ಭಾರತದ ಪ್ರವಾಸದ ವೇಳೆ ತಪ್ಪಿಸಿಕೊಳ್ಳಲೇ ಬಾರದ ಅತ್ಯಂತ ಸುಂದರ ತಾಣವಾಗಿದೆ.

ತನುಮಲಯನ್ ದೇವಾಲಯ

ಸ್ಥಾನುಮಲಯನ್ ಕೋವಿಲ್ ಎಂದೂ ಕರೆಯಲ್ಪಡುವ ಈ ದೇವಾಲಯದ ವಾಸ್ತುಶಿಲ್ಪದ ಅದ್ಭುತವು ಅದರ ಅಂದವಾದ ಕೆತ್ತನೆಗಳು ಮತ್ತು ವಿಶಿಷ್ಟವಾದ ಸಂಗೀತ ಸ್ತಂಭಗಳಿಗೆ ಗಮನಾರ್ಹವಾಗಿ. ಇದು ದಕ್ಷಿಣ ಭಾರತದಲ್ಲಿನ ಸಾಂಸ್ಕೃತಿಕ ಪ್ರವಾಸದಲ್ಲಿ ಪ್ರಮುಖ ಅಂಶವಾಗಿದೆ.

ಗಾಂಧಿ ಸ್ಮಾರಕ

ಮಹಾತ್ಮಾ ಗಾಂಧಿಯವರ ಚಿತಾಭಸ್ಮವನ್ನು ಮುಳುಗಿಸುವ ಮೊದಲು ಇರಿಸಲಾಗಿದ್ದ ಸ್ಥಳದಲ್ಲಿ ನಿರ್ಮಿಸಲಾದ ಈ ಸ್ಮಾರಕವು ಭಾರತದ ಶ್ರೀಮಂತ ಇತಿಹಾಸದಲ್ಲಿ ಆಸಕ್ತಿ ಹೊಂದಿರುವವರಿಗೆ ಅತ್ಯಂತ ಸುಂದರ, ಶಾಂತವಾದ ತಾಣವಾಗಿದೆ.


ಕನ್ಯಾಕುಮಾರಿ ವ್ಯಾಕ್ಸ್ ಮ್ಯೂಸಿಯಂ

ವಿನೋದ ಮತ್ತು ಶೈಕ್ಷಣಿಕ ಅನುಭವ ಪಡೆಯಲು ಈ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿ. ಇಲ್ಲಿ ಪ್ರಸಿದ್ಧ ವ್ಯಕ್ತಿಗಳ ಮೇಣದ ಪ್ರತಿಮೆಗಳು ಆಕರ್ಷಣೀಯವಾಗಿದೆ.

ಇದನ್ನೂ ಓದಿ: Wildlife Sanctuaries: ಮಳೆ ಬರುವ ಮುನ್ನ ಈ ವನ್ಯಜೀವಿಧಾಮಗಳನ್ನು ನೋಡಲು ಪ್ರಯತ್ನಿಸಿ

ಮರುಂತುವಜ್ ಮಲೈ

ಕನ್ಯಾಕುಮಾರಿಯ ಸಮೀಪದಲ್ಲಿರುವ ಈ ಸಣ್ಣ ಗುಡ್ಡಗಾಡು ಪ್ರದೇಶವು ಪುರಾಣದ ಮಹತ್ವವನ್ನು ಹೊಂದಿದೆ. ರಮಣೀಯ ನೋಟವನ್ನು ಒದಗಿಸಿಯುವ ಇದು ದಕ್ಷಿಣ ಭಾರತ ಪ್ರವಾಸದಲ್ಲಿರುವ ಸಾಹಸ ಪ್ರಿಯರ ಪಟ್ಟಿಗೆ ಪರಿಪೂರ್ಣ ಸೇರ್ಪಡೆಯಾಗಿದೆ.

ಸ್ಥಳೀಯ ಖಾದ್ಯ ಸವಿಯಿರಿ

ಕೋತು ಪರೋಟಾ, ಬಾಳೆಹಣ್ಣು ಚಿಪ್ಸ್ ಮತ್ತು ಸಮುದ್ರಾಹಾರ ಭಕ್ಷ್ಯಗಳಂತಹ ಸ್ಥಳೀಯ ಭಕ್ಷ್ಯಗಳನ್ನು ಇಲ್ಲಿ ಸವಿಯಬಹುದು.

Continue Reading

ಪ್ರವಾಸ

Belagavi Tour: ಬೆಳಗಾವಿಗೆ ಭೇಟಿ ನೀಡಿದಾಗ ಈ ಸ್ಥಳಗಳನ್ನು ನೋಡಲು ಮರೆಯಬೇಡಿ

ಕುಂದಾನಗರಿ ಬೆಳಗಾವಿಯಲ್ಲಿ ಅತ್ಯಾಕರ್ಷಕ ಹಲವು ತಾಣಗಳಿದ್ದು, ಪ್ರವಾಸಿಗರು ಇಲ್ಲಿಗೆ ಭೇಟಿ ನೀಡದೇ ಇದ್ದರೆ ಬೆಳಗಾವಿ ಪ್ರವಾಸ (Belagavi Tour) ಅಪೂರ್ಣವಾಗುವುದು. ನೀವು ಬೆಳಗಾವಿಗೆ ಭೇಟಿ ನೀಡಿದಾಗ ಮರೆಯದೆ ಈ ಸ್ಥಳಗಳನ್ನು ನೋಡಿ ಬನ್ನಿ. ಬೆಳಗಾವಿಯ ಪ್ರಮುಖ ಸ್ಥಳಗಳ ಕಿರು ಪರಿಚಯ ಇಲ್ಲಿದೆ.

VISTARANEWS.COM


on

By

Belagavi Tour
Koo

ಜಲಪಾತಗಳಿಂದ (waterfalls) ಹಿಡಿದು ಪ್ರಾಚೀನ ಕೋಟೆಗಳವರೆಗೆ (ancient forts) ಬೆಳಗಾವಿಯಲ್ಲಿ ಪ್ರವಾಸಿಗರು (Belagavi Tour) ಮಿಸ್ ಮಾಡಿಕೊಳ್ಳಲೇಬಾರದ ಒಂಬತ್ತು ಆಕರ್ಷಕ ಪ್ರವಾಸಿ (Tourist place) ತಾಣಗಳಿವೆ.

ರಜೆಯಲ್ಲಿ ಬೆಳಗಾವಿಯತ್ತ ಹೊರಟರೆ ರಮಣೀಯ ಮತ್ತು ಪಾರಂಪರಿಕ ತಾಣಗಳಿಗೆ ಭೇಟಿ ನೀಡಲು ಮರೆಯದಿರಿ.
ಪ್ರವಾಸಿ ತಾಣಗಳಿಗೆ ಹೋಗಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ, ವಿಡಿಯೋಗಳನ್ನು ಹಂಚಿಕೊಂಡು ಎಲ್ಲರ ಮೆಚ್ಚುಗೆ ಪಡೆಯಬೇಕು ಎನ್ನುವ ಯೋಚನೆ ಇದ್ದರೆ ಕೂಡಲೇ ಬ್ಯಾಗ್ ಪ್ಯಾಕ್ ಮಾಡಿ ಬೆಳಗಾವಿಯತ್ತ ಪ್ರವಾಸ ಹೊರಡಲು ತಯಾರಾಗಿ. ಎಲ್ಲರ ಮನ ಸೆಳೆಯುವ ಹಲವಾರು ಸುಪ್ರಸಿದ್ದ ತಾಣಗಳು ಇಲ್ಲಿವೆ.

ಬೆಳಗಾವಿ ಕೋಟೆ

12ನೇ ಶತಮಾನದ ಬೆಳಗಾವಿ ಕೋಟೆ ಮರಗಳಿಂದ ಸುತ್ತುವರಿದಿದ್ದು, ಕಮಾನಿನ ಗೇಟ್‌ವೇಗಳ ಮೂಲಕ ಹೆಜ್ಜೆ ಹಾಕುತ್ತ ಸಾಗುವಾಗ ಎತ್ತರದ ಗೋಡೆಗಳ ಮೇಲೆ ವಿವಿಧ ಆಡಳಿತಗಾರರು ಹೋರಾಡಿದ ಭೀಕರ ಯುದ್ಧಗಳ ಚಿತ್ರಣ ಮನದಲ್ಲಿ ಮೂಡುವುದು. ಸಂಕೀರ್ಣವಾದ ಕೆತ್ತನೆಗಳೊಂದಿಗೆ ಅರಮನೆ, ಮಸೀದಿ ಮತ್ತು ದೇವಾಲಯಗಳ ಕುಸಿಯುತ್ತಿರುವ ಅವಶೇಷಗಳನ್ನು ಕಿರಿದಾದ ಮಾರ್ಗಗಳನ್ನು ಸುತ್ತಾಡುವಾಗ ಫೋಟೋ, ವಿಡಿಯೋ ಮಾಡಲು ಮರೆಯದಿರಿ. ಇಲ್ಲಿಯೇ ಚಿಕ್ಕ ವಸ್ತುಸಂಗ್ರಹಾಲಯಕ್ಕೂ ಭೇಟಿ ನೀಡಿ ಸುಂದರ ನೆನಪುಗಳನ್ನು ಮನದ ಜೋಳಿಗೆಯಲ್ಲಿ ತುಂಬಿಕೊಳ್ಳಿ.

ಬೆಳಗಾವಿ ನಗರದ ಬಹುಭಾಗವನ್ನು ಈ ಕೋಟೆ ಆವರಿಸಿದೆ ಇಲ್ಲಿ ಪ್ರವೇಶಿಸಲು ಯಾವುದೇ ಪ್ರವೇಶ ಶುಲ್ಕಗಳಿಲ್ಲ.


ಕಮಲ್ ಬಸ್ತಿ

ಕೋಟೆಯ ಗೋಡೆಗಳ ಒಳಗಿರುವ ಕಮಲ್ ಬಸ್ತಿ ಜೈನ ದೇವಾಲಯ 12ನೇ ಶತಮಾನದ ಸೊಗಸಾದ ವಾಸ್ತುಶಿಲ್ಪಗಳಲ್ಲಿ ಒಂದಾಗಿದೆ. ಬೆಳಗಾವಿಯ ಕಿರೀಟದಲ್ಲಿ ವೈಭವದಿಂದ ಮಿನುಗುತ್ತಿರುವ ಈ ಪ್ರತಿಷ್ಠಿತ ದೇವಾಲಯದಲ್ಲಿ ಪ್ರಾಚೀನ ಕಥೆಗಳು ಅನುರಣಿಸುತ್ತಿರುವಂತೆ ಭಾಸವಾಗುವುದು. ಬಹು-ಪದರದ ಅಲಂಕೃತ ಛಾವಣಿಗಳು, ಕಲ್ಲಿನ ಸ್ತಂಭಗಳನ್ನು ಒಳಗೊಂಡಿರುವ ಪೌರಾಣಿಕ ವ್ಯಕ್ತಿಗಳನ್ನು ಇಲ್ಲಿ ಕಾಣಬಹುದು.

ಇಲ್ಲಿ 40 ಸಮಾನ ಅಂತರದಲ್ಲಿ ಕೆತ್ತಿದ ಕಂಬಗಳು, ಗುಮ್ಮಟಗಳು ಆಕರ್ಷಣೀಯವಾಗಿದೆ. ರಟ್ಟ ರಾಜವಂಶದ ಕುಶಲಕರ್ಮಿಗಳು ಇದನ್ನು ನಿರ್ಮಿಸಿದ್ದಾರೆ. ಇಲ್ಲಿಗೆ ಪ್ರವೇಶಿಸಲು ಯಾವುದೇ ಪ್ರವೇಶ ಶುಲ್ಕಗಳಿಲ್ಲ.


ಗೋಕಾಕ್ ಜಲಪಾತ

ಹಸಿರು ಕಾಡುಗಳ ನಡುವೆ ಸುಮಾರು 157 ಮೀಟರ್‌ ಎತ್ತರದಿಂದ ಧುಮುಕುವ ಗೋಕಾಕ್ ಜಲಪಾತ ಬೃಹತ್ ಪ್ರಮಾಣದ ಜಲರಾಶಿಯನ್ನು ಹೊಂದಿದೆ. ನದಿಯಲ್ಲಿ ದೋಣಿ ಸವಾರಿ ಮಾಡಿ ತಂಗಾಳಿಯಲ್ಲಿ ಆನಂದಿಸಬಹದು. ಮಳೆ, ಚಳಿಗಾಲದಲ್ಲಿ ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯ. ಟ್ರೆಕ್ಕಿಂಗ್ ಮಾಡಲು ಅವಕಾಶವಿದೆ. ಯಾವುದೇ ಶುಲ್ಕವಿಲ್ಲ.


ಕಿತ್ತೂರು ಕೋಟೆ

16 ನೇ ಶತಮಾನದಲ್ಲಿ ನಿರ್ಮಿಸಲಾದ ಭವ್ಯವಾದ ಕಿತ್ತೂರು ಕೋಟೆಯ ಅವಶೇಷಗಳನ್ನು ಇಲ್ಲಿ ಕಾಣಬಹುದು. ಹಳ್ಳಿಗಾಡಿನ ದೋಣಿಗಳ ಮೇಲೆ ಸೊಂಪಾದ ಕಾಡುಗಳಿಂದ ರಚಿಸಲಾದ ಶಾಂತವಾದ ಸರೋವರದ ನೀರಿನಲ್ಲಿ ಪೆಡಲ್ ಮಾಡಿ ಹಳೆಯ ಅರಮನೆಯ ಹಾದಿಗಳಲ್ಲಿ ಸುತ್ತಾಡಿ, ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಚನ್ನಮ್ಮ ನನ್ನು ನೆನಪಿಸಿಕೊಳ್ಳಬಹುದು. ಚೆನ್ನಮ್ಮ ತನ್ನ ಅಂತಿಮ ದಿನಗಳನ್ನು ಕಳೆದ ಜೈಲು ಕೊಠಡಿಯ ಒಂದು ನೋಟ ಅಥವಾ 1967 ರಲ್ಲಿ ನಿರ್ಮಿಸಲಾದ ಕಿತ್ತೂರಿನ ಸರೋವರದ ಇತಿಹಾವನ್ನು ಇಲ್ಲಿ ಕಾಣಬಹುದು.

ಪ್ರಾದೇಶಿಕ ಆಡಳಿತಗಾರರಾದ ದೇಸಾಯಿ ಕುಟುಂಬ ಇದನ್ನು ನಿರ್ಮಿಸಿದ್ದು, ಇಲ್ಲಿ ಅರಮನೆ, ಮ್ಯೂಸಿಯಂ, ದೇವಸ್ಥಾನ, ಸರೋವರವನ್ನು ವೀಕ್ಷಿಸಬಹುದು. ಕನಿಷ್ಠ ಪ್ರವೇಶ ಶುಲ್ಕವಿದೆ.

ಶಿವಗಿರಿ ಬೆಟ್ಟ

ಒಂದು ಬದಿಯಲ್ಲಿ ಪಶ್ಚಿಮ ಘಟ್ಟದ ಇಳಿಜಾರು ಮತ್ತು ಇನ್ನೊಂದೆಡೆ ಹತ್ತಿ ಉಣ್ಣೆಯ ಮೋಡಗಳು ತೇಲುತ್ತಿರುವ ವಿಸ್ತಾರವಾದ ಬೆಳಗಾವಿ ನಗರವನ್ನು ನೋಡುವಾಗ ಉಸಿರು ಬಿಗಿ ಹಿಡಿದ ಅನುಭವ. ಹಸಿರು ಶಿವಗಿರಿ ಗಿರಿಧಾಮದ ಮೇಲಿನ ವೈಮಾನಿಕ ನೋಟವು ಪ್ರವಾಸಿಗರನ್ನು ವಿಸ್ಮಯಗೊಳಿಸುವುದು. ಜಾಂಬೋಟಿ ಜಲಪಾತ, ಉದ್ಯಾನಗಳು ಇಲ್ಲಿನ ಆಕರ್ಷಣೆ. ಖಾಸಗಿ ಟ್ಯಾಕ್ಸಿ ಮೂಲಕ ಬೆಳಗಾವಿಯಿಂದ 30 ಕಿ.ಮೀ. ದೂರದಲ್ಲಿರುವ ಶಿವಗಿರಿ ಬೆಟ್ಟ ತಲುಪಲು ಯಾವುದೇ ಪ್ರವೇಶ ಶುಲ್ಕಗಳಿಲ್ಲ. ಇಲ್ಲಿ ಸುಂದರವಾದ ಸೂರ್ಯಾಸ್ತದ ದೃಶ್ಯಗಳನ್ನು ಕಣ್ತುಂಬಿಕೊಳ್ಳಿ.

ಸಿದ್ಧೇಶ್ವರ ದೇವಸ್ಥಾನ

12 ನೇ ಶತಮಾನದ ಕಲ್ಲಿನ ಕೆತ್ತನೆಯ ಐತಿಹಾಸಿಕ ಸಿದ್ಧೇಶ್ವರ ದೇವಾಲಯ ಶಿವನಿಗೆ ಸಮರ್ಪಿತವಾಗಿದೆ. ಶ್ರೀಗಂಧದ ಕಮಾನುಗಳು ಪೂಜ್ಯ ಲಿಂಗವನ್ನು ಹೊಂದಿರುವ ಒಳಗಿನ ಗರ್ಭಗುಡಿಯೊಳಗೆ ಸಂಜೆಯ ಆರತಿಗೆ ಹಾಜರಾಗಿ. ದೇವಾಲಯದ ಶಬ್ದಗಳು ಮತ್ತು ಪ್ರಜ್ವಲಿಸುವ ದೀಪಗಳು ಮನಸ್ಸಿಗೆ ಶಾಂತಿ ತುಂಬುವುದು. ಕಪ್ಪು ಕಲ್ಲಿನ ನೆಲದ ಮೇಲೆ ಕುಳಿತು ಧ್ಯಾನ ಮಾಡುವಾಗ ದೇಹದೊಳಗೆ ಶಕ್ತಿ ಸಂಚಾರವಾದ ಅನುಭವ ಕೊಡುವುದು.
ರಟ್ಟ ರಾಜವಂಶದ ದೊರೆ ಸಿದ್ಧರಸ ನಿರ್ಮಿಸಿರುವ ಈ ದೇವಾಲಯ ನಗರ ಕೇಂದ್ರದಿಂದ 5 ಕಿ.ಮೀ. ದೂರದಲ್ಲಿದೆ.

ರೇಷ್ಮೆ ಸೀರೆ ಖರೀದಿಸಿ

ಕಾರ್ಪೊರೇಷನ್ ವೃತ್ತದ ಬಳಿಯಿರುವ ಅಂಗಡಿಗಳಾದ್ಯಂತ ಸಾಂಪ್ರದಾಯಿಕ ನೇಯ್ಗೆ, ಮುದ್ರಣಗಳು ಮತ್ತು ಕರಕುಶಲತೆಯನ್ನು ಕಾಣಬಹುದು. ಕೈಗೆಟುಕುವ ದರದಲ್ಲಿ ರೇಷ್ಮೆ ಸೀರೆಗಳನ್ನು ಖರೀದಿ ಮಾಡಬಹುದು. ಇಲ್ಲಿ ಚಂದೇರಿ ರೇಷ್ಮೆ ಸೀರೆಗಳು, ಕೈಮಗ್ಗದ ಕಾಟನ್ ಕುರ್ತಿಗಳು ಖರೀದಿ ಮಾಡಲು ಮರೆಯದಿರಿ.

ಇದನ್ನೂ ಓದಿ: South Indian Monsoon Destinations: ದಕ್ಷಿಣ ಭಾರತದ ಈ 6 ಸ್ಥಳಗಳಲ್ಲಿ ಮಳೆಗಾಲದಲ್ಲಿ ಚಾರಣ ಮಾಡಲೇಬೇಕು!


ಮಿಲಿಟರಿ ಮಹಾದೇವ ದೇವಸ್ಥಾನ

ಶಿವನಿಗೆ ಸಮರ್ಪಿತವಾಗಿರುವ ಇನ್ನೊಂದು ದೇಗುಲ ಮಿಲಿಟರಿ ಮಹಾದೇವ ದೇವಾಲಯ. ಕಲ್ಲಿನ ಮಾರ್ಗದಲ್ಲಿ ದೇವಾಲಯವನ್ನು ತಲುಪಬೇಕಾದರೆ ಅರ್ಧ ದಿನವನ್ನು ಟ್ರೆಕ್ಕಿಂಗ್ ನಲ್ಲಿ ಕಳೆಯಬೇಕು. ಮರಾಠ ದೊರೆ ಸಾರ್ಜೆಂಟ್ ಧೂಳಪ್ಪ ಇದನ್ನು ನಿರ್ಮಿಸಿದ್ದು, ಮುಂಜಾನೆ ಮತ್ತು ಸಂಜೆ ವೇಳೆ ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯವಾಗಿದೆ.

Continue Reading

ಪ್ರವಾಸ

Dream Of Retired Couple: ನಿರಂತರ ಮೂರೂವರೆ ವರ್ಷಗಳ ನೌಕಾಯಾನಕ್ಕಾಗಿ ತಮ್ಮದೆಲ್ಲವನ್ನೂ ಮಾರಿದ ದಂಪತಿ!

ಕಳೆದ ಎರಡು ವಾರಗಳಿಂದ ಗ್ರೇಸ್ ಮತ್ತು ಜೆರ್ರಿ ಗ್ರೇಡಿ ಯಾವುದೇ ಸೂಟ್‌ಕೇಸ್‌ ಭಾರ ಎತ್ತಿಕೊಳ್ಳದೇ ವಾಸ ಮಾಡುತ್ತಿದ್ದಾರೆ. ಯಾಕೆಂದರೆ ಅವರು ಈಗ ತಮ್ಮ ಜೀವಮಾನದ ಕನಸನ್ನು (Dream Of Retired Couple) ನನಸಾಗಿಸಿಕೊಳ್ಳುವ ದಾರಿಯಲ್ಲಿ ನಡೆಯುತ್ತಿದ್ದಾರೆ. ಪ್ರವಾಸಿ ದಂಪತಿಯ ಕುತೂಹಲಕರ ಕಥನ ಇಲ್ಲಿದೆ.

VISTARANEWS.COM


on

By

Dream Of Retired Couple
Koo

ಬದುಕಿನಲ್ಲಿ ಎಲ್ಲರಿಗೂ ಒಂದಲ್ಲ ಒಂದು ರೀತಿಯ ಕನಸುಗಳಿರುತ್ತವೆ. ಅದರಲ್ಲೂ ಕೆಲವರು ತಮ್ಮ ಕನಸು (dream) ನನಸು ಮಾಡಿಕೊಳ್ಳಲು ಎಲ್ಲವನ್ನೂ ತ್ಯಾಗ ಮಾಡಲು ಸಿದ್ಧರಾಗುತ್ತಾರೆ. ಅಂಥವರಲ್ಲಿ ಒಬ್ಬರಾಗಿದ್ದಾರೆ ಅಮೆರಿಕನ್ (American)-ಇಟಾಲಿಯನ್ ನ (Italian) ಈ ದಂಪತಿ (Dream Of Retired Couple). ಇವರು ತಮ್ಮ ಕನಸನ್ನು ಸಾಕಾರಗೊಳಿಸಲು ತಮ್ಮದು ಎಂದೆನಿಸಿಕೊಂಡಿದ್ದ, ತಾವು ಜೀವಮಾನದಲ್ಲಿ ಗಳಿಸಿದ್ದ ಎಲ್ಲವನ್ನೂ ಮಾರಾಟ ಮಾಡಿದ್ದಾರೆ.

ಕಳೆದ ಎರಡು ವಾರಗಳಿಂದ ಗ್ರೇಸ್ ಮತ್ತು ಜೆರ್ರಿ ಗ್ರೇಡಿ ಯಾವುದೇ ಸೂಟ್‌ಕೇಸ್‌ ಭಾರ ಎತ್ತಿಕೊಳ್ಳದೇ ವಾಸ ಮಾಡುತ್ತಿದ್ದಾರೆ. ಯಾಕೆಂದರೆ ಅವರು ಈಗ ತಮ್ಮ ಜೀವಮಾನದ ಕನಸನ್ನು ನನಸಾಗಿಸಿಕೊಳ್ಳುವ ದಾರಿಯಲ್ಲಿ ನಡೆಯುತ್ತಿದ್ದಾರೆ.

70ರ ಹರೆಯದಲ್ಲಿರುವ ಈ ದಂಪತಿ ಶೀಘ್ರದಲ್ಲೇ ಪ್ರಪಂಚದಾದ್ಯಂತ (world tour) ನಿರಂತರ ಮೂರೂವರೆ ವರ್ಷಗಳ ವಿಹಾರಕ್ಕೆ (cruise) ತೆರಳಲಿದ್ದಾರೆ. ಈ ವಿಹಾರ ನಡೆಸಲಿರುವ ಸುಮಾರು 800 ಪ್ರಯಾಣಿಕರಲ್ಲಿ ಇವರೂ ಸೇರಿದ್ದಾರೆ.

ಇವರ ಈ ವಿಹಾರವು ಮೇ 30ರಂದು ಪ್ರಾರಂಭವಾಗಲಿದೆ. ಎಲ್ಲಾ ಏಳು ಖಂಡಗಳಾದ್ಯಂತ 147 ದೇಶಗಳಲ್ಲಿ 425 ಬಂದರುಗಳಿಗೆ ಈ ಸಂದರ್ಭದಲ್ಲಿ ಇವರು ಭೇಟಿ ನೀಡಲಿದ್ದಾರೆ. ಈ ಪ್ರವಾಸದ ವೇಳೆ ಯಾವುದೇ ದೇಶಕ್ಕೆ ಹೋದರೂ ಅಲ್ಲಿ ವಸಂತ ಮತ್ತು ಬೇಸಿಗೆಯ ಋತುವಾಗಿರುವುದು ಖಾತ್ರಿ ಪಡಿಸಲಾಗಿದೆ. ಈ ವಿಹಾರದಲ್ಲಿ ವಿಲ್ಲಾ ವೈ ಒಡಿಸ್ಸಿ ಎಂಬ ಎರಡು ವಸತಿ ಹಡಗುಗಳು ಮಾತ್ರ ಬಳಕೆಯಾಗಲಿದೆ.


ವಿಹಾರಕ್ಕಾಗಿ ಎಲ್ಲವನ್ನೂ ಮಾರಾಟ ಮಾಡಿದ ದಂಪತಿ

ಗ್ರೇಡಿ ದಂಪತಿ ಎರಡು ವರ್ಷಗಳ ಹಿಂದೆ ಗ್ರೇಸ್‌ನ ತಾಯ್ನಾಡು ಸಿಸಿಲಿಗೆ ತೆರಳಿ, ಅಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ತಮ್ಮ ಮನೆಯನ್ನು ಮಾರಾಟ ಮಾಡಿದ ಅನಂತರ ಅವರು ಕಳೆದ ಕೆಲವು ತಿಂಗಳುಗಳಿಂದ ತಮ್ಮ ಪ್ರವಾಸಕ್ಕೆ ಧನಸಹಾಯಕ್ಕಾಗಿ ತಮ್ಮ ಇತರ ಅಮೂಲ್ಯವಾದ ಆಸ್ತಿಯನ್ನು ಮಾರಾಟ ಮಾಡಿದ್ದಾರೆ.

ಸಾಹಸಕ್ಕೆ ಹೊಸದಲ್ಲ

ನಾವು ನಮ್ಮ ಹೆಚ್ಚಿನ ವಸ್ತುಗಳನ್ನು ಸ್ನೇಹಿತರಿಗೆ ಮಾರಾಟ ಮಾಡಿದ್ದೇವೆ ಎಂದು ಹೇಳುವ ಗ್ರೇಸ್ ದಂಪತಿಗೆ ಸಾಹಸವೇನು ಹೊಸತಲ್ಲ. ಕನಿಷ್ಠ ವಸ್ತುಗಳ ಬಳಕೆಯನ್ನು ಅಭ್ಯಾಸ ಮಾಡಿಕೊಂಡಿರುವ ಇವರು ಪ್ರತಿದಿನ ಒಂದೇ ಬಟ್ಟೆಯನ್ನು ಧರಿಸುತ್ತಾರೆ. ರಾತ್ರಿ ತೊಳೆದು ಹಾಕುತ್ತಾರೆ. ಹೀಗಾಗಿ ವಾರ್ಡ್ ರೋಬ್ ನ ಅಗತ್ಯ ನಮಗಿಲ್ಲ ಎನ್ನುತ್ತಾರೆ ಗ್ರೇಸ್.

ಭೂಮಿಯಲ್ಲಿ ವಾಸಿಸುವುದಕ್ಕಿಂತ ಇದು ಹೆಚ್ಚು ದುಬಾರಿಯಲ್ಲ ಎನ್ನುವ ಇವರು ವಿಲ್ಲಾ ವೈ ಒಡಿಸ್ಸಿಯಲ್ಲಿ ಒಂದು ವಸತಿ ಕೋಣೆಯನ್ನು ಬಾಡಿಗೆಗೆ ಪಡೆದಿದ್ದಾರೆ. ಇದರ ಬಾಡಿಗೆ ವರ್ಷಕ್ಕೆ ಸರಿಸುಮಾರು 36.22 ಲಕ್ಷ ರೂಪಾಯಿಗಳು.
ಕ್ರೂಸ್ ದರ ಕೈಗೆಟುಕುವಂತಿದೆ. ವಾರ್ಷಿಕ ಬಾಡಿಗೆ, ಬಾಲ್ಕನಿಯೊಂದಿಗೆ ಹೊರಗಿನ ಕ್ಯಾಬಿನ್ ನಲ್ಲಿ ವರ್ಷಕ್ಕೆ ಸುಮಾರು 60.57 ಲಕ್ಷ ರೂ. ವೆಚ್ಚವಾಗಲಿದೆ.


ಕ್ರೂಸ್ ವಿಶೇಷ ಏನು?

ವಿಲ್ಲಾ ವೈ ಒಡಿಸ್ಸಿಯನ್ನು 1993ರಲ್ಲಿ ನಿರ್ಮಿಸಲಾಯಿತು. ಸಂಪೂರ್ಣವಾಗಿ 12 ಮಿಲಿಯನ್ ಡಾಲರ್ ನಲ್ಲಿ ದುರಸ್ತಿ ಕಾರ್ಯಗಳನ್ನು ನಡೆಸಲಾಗಿದೆ. ವಿಲ್ಲಾ ವೈ ಒಡಿಸ್ಸಿಯಲ್ಲಿ ಪ್ರಯಾಣಿಕರು ಒಳಾಂಗಣ ಕ್ಯಾಬಿನ್‌ಗೆ ಪ್ರತಿ ವ್ಯಕ್ತಿಗೆ ದಿನಕ್ಕೆ 7,421.79 ರೂ., ಹೊರಾಂಗಣ ಕ್ಯಾಬಿನ್‌ಗಳಿಗೆ 9,923.52 ರೂ. ಮತ್ತು ಬಾಲ್ಕನಿಯಲ್ಲಿರುವವರಿಗೆ 16,594.79 ರೂ. ಪಾವತಿಸಬೇಕಾಗುತ್ತದೆ.

ಅತಿಥಿಗಳಿಗೆ ರಾತ್ರಿಯ ಊಟದಲ್ಲಿ ಅನಿಯಮಿತ ಆಹಾರ, ತಂಪು ಪಾನೀಯ ಮತ್ತು ಆಲ್ಕೊಹಾಲ್ ಲಭ್ಯವಿರುತ್ತದೆ. ಉಚಿತ ವೈಫೈ ಮತ್ತು ಔಷಧ ಮತ್ತು ಇತರ ಕಾರ್ಯವಿಧಾನ ಹೊರತುಪಡಿಸಿ ನಿರಂತರ ವೈದ್ಯಕೀಯ ತಪಾಸಣೆಗಳನ್ನು ನಡೆಸಲಾಗುತ್ತದೆ.

24/7 ಕೊಠಡಿ ಸೇವೆ, ವಾರಕ್ಕೊಮ್ಮೆ ಕೊಠಡಿ ಸ್ವಚ್ಛತೆ ಮತ್ತು ಎರಡು ವಾರಕ್ಕೊಮ್ಮೆ ಲಾಂಡ್ರಿ ಸೇವೆ ಎಲ್ಲವನ್ನೂ ಕ್ರೂಸ್ ನ ದರದಲ್ಲಿ ಸೇರಿಸಲಾಗಿದೆ.

ಪ್ರತ್ಯೇಕ ಪ್ರವಾಸ, ವಿಮಾನಯಾನಕ್ಕೆ ಹೋಲಿಸಿದರೆ ಇದು ಅಗ್ಗವಾಗಿದೆ ಎನ್ನುತ್ತಾರೆ ಗ್ರೇಸ್.

ಬಹು ದಿನಗಳ ಕನಸು

ಗ್ರೇಸ್ ದಂಪತಿ ಮೂರು ವರ್ಷಗಳ ಲೈಫ್ ಅಟ್ ಸೀ ಕ್ರೂಸಸ್ ಟ್ರಿಪ್‌ಗೆ ಸೇರಲು ನಿರ್ಧರಿಸಿದ್ದರು. ಆದರೆ ನವೆಂಬರ್ 2023 ರಲ್ಲಿ ಅದನ್ನು ಅನಿರೀಕ್ಷಿತವಾಗಿ ರದ್ದುಗೊಳಿಸಲಾಯಿತು. ಮರುಪಾವತಿಯನ್ನು ಕೋರಿ ಸಾಕಷ್ಟು ಮಂದಿ ಪ್ರವಾಸವನ್ನು ಕೈಬಿಟ್ಟರು. ನಾವು ಅಲೆಮಾರಿಗಳು, ಸಾಕಷ್ಟು ಪ್ರಯಾಣಿಸಿದ್ದೇವೆ. ನಾನು ಯಾವುದರ ಬಗ್ಗೆಯೂ ಚಿಂತಿಸುವುದಿಲ್ಲ ಎನ್ನುತ್ತಾರೆ ಗ್ರೇಸ್.

ಇದನ್ನೂ ಓದಿ: Munnar Tour: ಪ್ರಕೃತಿಯ ನಡುವೆ ಅವಿತಿರುವ ಸೌಂದರ್ಯದ ಗಣಿ ಮುನ್ನಾರ್! ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕು

ಕ್ರೂಸ್ ಗೆ ಹಣ ಪಾವತಿ ಮಾಡಲು ಆಯ್ಕೆಗಳಿವೆ. 16 ವಿಭಾಗಗಳು ಪಾವತಿಯ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ. ಪ್ರಯಾಣಿಕರು ಮುಂಗಡ ಠೇವಣಿ ಮತ್ತು ಪ್ರತಿ ವಿಭಾಗಕ್ಕೆ 30 ದಿನಗಳ ಮೊದಲು ಉಳಿದ ಹಣವನ್ನು ಪಾವತಿಸಬೇಕಾಗುತ್ತದೆ. ಯಾವುದೇ ಹಂತದಲ್ಲಿ ಹಡಗನ್ನು ತೊರೆಯಲು ಬಯಸಿದರೆ ಸಂಪೂರ್ಣ ಮರುಪಾವತಿಗಾಗಿ ಅವರು ಹೊಸ ವಿಭಾಗಕ್ಕಿಂತ ಕನಿಷ್ಠ ಆರು ತಿಂಗಳ ಮೊದಲು ಸೂಚನೆಯನ್ನು ನೀಡಬೇಕಾಗುತ್ತದೆ ಎಂದು ಗ್ರೇಸ್ ತಿಳಿಸಿದ್ದಾರೆ.

Continue Reading
Advertisement
Amul Milk
ದೇಶ3 hours ago

Amul Milk: ಗ್ರಾಹಕರಿಗೆ ಬಿಗ್‌ ಶಾಕ್‌; ಹಾಲಿನ ಬೆಲೆ ಲೀಟರ್‌ಗೆ 2 ರೂ. ಹೆಚ್ಚಳ

Odisha Assembly Election
ದೇಶ4 hours ago

Odisha Assembly Election: ಒಡಿಶಾ ವಿಧಾನಸಭಾ ಚುನಾವಣೆ; ಬಿಜೆಡಿ-ಬಿಜೆಪಿ ನಡುವೆ ತೀವ್ರ ಹಣಾಹಣಿ: ಹಳೆ ದೋಸ್ತಿಗೆ ಠಕ್ಕರ್‌ ಕೊಡುತ್ತಾ ಕಮಲ ಪಡೆ?

Mysore lok sabha constituency
ಪ್ರಮುಖ ಸುದ್ದಿ5 hours ago

Mysore lok sabha Constituency : ಕಿಂಗ್​​ ವರ್ಸಸ್​ ಆರ್ಡಿನರಿ ಸಿಟಿಜನ್​ ಫೈಟ್​​ನಲ್ಲಿ ಗೆಲುವು ಯಾರಿಗೆ?

Haveri Lok Sabha Constituency
ಹಾವೇರಿ5 hours ago

Haveri Lok Sabha Constituency: ಹಾವೇರಿಯಲ್ಲಿ ಅನುಭವಿ vs ಉತ್ಸಾಹಿ; ಯಾರಿಗೆ ಜಯದ ಮಾಲೆ?

Hyderabad City : Hyderabad no longer joint capital of Andhra Pradesh, Telangana from today
ಪ್ರಮುಖ ಸುದ್ದಿ5 hours ago

Hyderabad City : ಹೈದರಾಬಾದ್​ ಇನ್ನು ತೆಲಂಗಾಣಕ್ಕಷ್ಟೇ ರಾಜಧಾನಿ; ಏನಿದು ವಿಂಗಡಣೆ?

Loksabha Election 2024
Lok Sabha Election 20246 hours ago

Lok Sabha Election 2024: ಮತ ಎಣಿಕೆಗೆ 1 ದಿನವಷ್ಟೇ ಬಾಕಿ; ಚುನಾವಣಾ ಆಯೋಗದ ಕದ ತಟ್ಟಿದ ಎನ್‌ಡಿಎ, ʼಇಂಡಿಯಾʼ ಮೈತ್ರಿಕೂಟ

Chikballapur lok sabha constituency
ಪ್ರಮುಖ ಸುದ್ದಿ6 hours ago

Chikballapur lok sabha constituency : ಚಿಕ್ಕಬಳ್ಳಾಪುರದಲ್ಲಿ ಬಿಜೆಪಿಗೆ ಇನ್ನಷ್ಟು ಬಲ ತರುವರೇ ಸುಧಾಕರ್​?

Bangalore Rain
ಕರ್ನಾಟಕ6 hours ago

Bangalore Rain: ಬೆಂಗಳೂರಲ್ಲಿ ವರುಣನ ಅಬ್ಬರ; ಅಂಡರ್ ಪಾಸ್‌ನಲ್ಲಿ ಸಿಲುಕಿದ ಬಸ್‌, 20 ಪ್ರಯಾಣಿಕರ ರಕ್ಷಣೆ

Kannada New Movie
ಸಿನಿಮಾ6 hours ago

Kannada New Movie: ಎಸ್. ನಾರಾಯಣ್ ನಿರ್ದೇಶನದ ಹೊಸ ಚಿತ್ರದಲ್ಲಿ ಒಂದಾದ ದುನಿಯಾ ವಿಜಯ್, ಶ್ರೇಯಸ್ ಮಂಜು

Koppal Lok Sabha Constituency
ಕೊಪ್ಪಳ6 hours ago

Koppal Lok Sabha Constituency: ಮಾಜಿ ಶಾಸಕರ ಪುತ್ರರ ನಡುವಿನ ಸ್ಪರ್ಧೆಯಲ್ಲಿ ಯಾರಾಗುವರು ಸಂಸದ?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ16 hours ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 day ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ4 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ5 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು6 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ6 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು1 week ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ2 weeks ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

ಟ್ರೆಂಡಿಂಗ್‌