Summer Travel Tips: ಬೇಸಿಗೆ ರಜೆಯಲ್ಲಿ ವಿದೇಶ ಪ್ರವಾಸ ಮಾಡಬೇಕೇ? ಇಲ್ಲಿವೆ ನೋಡಿ ಪರ್ಫೆಕ್ಟ್‌ ತಾಣಗಳು! - Vistara News

ಪ್ರವಾಸ

Summer Travel Tips: ಬೇಸಿಗೆ ರಜೆಯಲ್ಲಿ ವಿದೇಶ ಪ್ರವಾಸ ಮಾಡಬೇಕೇ? ಇಲ್ಲಿವೆ ನೋಡಿ ಪರ್ಫೆಕ್ಟ್‌ ತಾಣಗಳು!

ಶಾಂತವಾದ, ತಂಪಾದ ವಿದೇಶೀ (Summer Travel Tips) ನೆಲದಲ್ಲೊಂದಿಷ್ಟು ದಿನ ಸುತ್ತು ಹಾಕಿ ಬರುವ ಆಸಕ್ತಿಯಿರುವ ಮಂದಿಗೆ ಟಾಪ್‌ ಐದು ಜಾಗಗಳು ಇಲ್ಲಿವೆ.

VISTARANEWS.COM


on

Summer Travel
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೇಸಿಗೆ ಬಂದಾಕ್ಷಣ (Summer Travel Tips) ಪ್ರವಾಸಗಳ ಸುಗ್ಗಿ. ಬೇಸಿಗೆಯಲ್ಲಿ ಬಿಸಿಲ ಝಳವನ್ನು ತಪ್ಪಿಸಿ, ನಿತ್ಯದ ಅದೇ ಜಂಜಾಟವನ್ನು ಮರೆತು ಒಂದಿಷ್ಟು ದಿನ ಎಲ್ಲಾದರೂ ಹೋಗಿ ಬರೋಣ ಎಂದು ಎಲ್ಲರಿಗೂ ಅನಿಸುವುದುಂಟು. ಮಕ್ಕಳು ಮರಿಗಳಿರುವ ಹೆತ್ತವರಿಗೆ ಬೇಸಿಗೆ ರಜೆಯಲ್ಲಿ ಎಲ್ಲಾದರೂ ಹೋಗಿ ಬರುವ ತವಕ. ಹೀಗೆ ಬಹುತೇಕ ಎಲ್ಲರೂ ಪ್ರವಾಸ ಬಯಸುವ ಕಾಲ ಎಂದರೆ ಅದು ಬೇಸಿಗೆ ಕಾಲ. ಇಂಥ ಬೇಸಿಗೆಯಲ್ಲಿ ವಿದೇಶೀ ಪ್ರವಾಸವೂ ಕೂಡ ಸಾಕಷ್ಟು ಮಂದಿಯ ಕನಸು. ಶಾಂತವಾದ, ತಂಪಾದ ವಿದೇಶೀ ನೆಲದಲ್ಲೊಂದಿಷ್ಟು ದಿನ ಸುತ್ತು ಹಾಕಿ ಬರುವ ಆಸಕ್ತಿಯಿರುವ ಮಂದಿಗೆ ಟಾಪ್‌ ಐದು ಜಾಗಗಳು ಇಲ್ಲಿವೆ. ಇವೆಲ್ಲವೂ ಬೇಸಿಗೆಯಲ್ಲಿ ಹೋಗಿ ಬರಬಹುದಾದ ಪರ್ಫೆಕ್ಟ್‌ ತಾಣಗಳು.

Zermatt, Switzerland

ಝರ್ಮಾಟ್‌, ಸ್ವಿಜರ್‌ಲ್ಯಾಂಡ್

ಝರ್ಮಾಟ್‌ ಎಂಬ ಪುಟ್ಟ ಪಟ್ಟಣ ಸ್ವಿಜರ್‌ಲ್ಯಾಂಡಿನ ಆಲ್ಫ್ಸ್‌ ಪರ್ವತ ಶ್ರೇಣಿಗಳ ಮಧ್ಯದಲ್ಲಿದೆ. ಹಾಗಾಗಿಯೇ ಈ ಪಟ್ಟಣ ಸ್ಕೀಯಿಂಗ್‌, ಚಾರಣ, ಕೇಬಲ್‌ ಕಾರ್‌ ಪಯಣ ಸೇರಿದಂತೆ ಹಲವು ಸಾಹಸಮಯ ಚಟುವಟಿಕೆಗಳಿಗೆ ಪ್ರಸಿದ್ಧ ತಾಣ. ಮನಮೋಹಕ ಹುಲ್ಲುಗಾವಲು, ಹಿಮಪರ್ವತ ಸಾಲು, ಪಟ್ಟಣದ ಜೀವನಕ್ರಮ, ಸುಮ್ಮನೆ ನಡೆಯಲು ಬೇಕಾದಷ್ಟು ಜಾಗ ಎಲ್ಲವೂ ಈ ಪಟ್ಟಣವನ್ನು ಪ್ರವಾಸಿಗರ ಕನಸಿನ ತಾಣವನ್ನಾಗಿಸಿದೆ. ಜೂನ್‌ ತಿಂಗಳಿಂದ ಸೆಪ್ಟೆಂಬರ್‌ ಇಲ್ಲಿಗೆ ಭೇಟಿ ಕೊಡಲು ಪ್ರಶಸ್ತ ಸಮಯ. ಝೂರಿಚ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಥವಾ ಜಿನೀವಾ ವಿಮಾನ ನಿಲ್ದಾಣದಿಂದ ಇಲ್ಲಿಗೆ ರೈಲಿನಲ್ಲಿ ಹೋಗಬಹುದು. ವೆಚ್ಚ (ಉಳಿದುಕೊಳ್ಳಲು ಹಾಗೂ ಊಟೋಪಚಾರ): ಸುಮಾರು 1.8 ಲಕ್ಷ ರೂಪಾಯಿಗಳು (ಒಂದು ವಾರದ ಪ್ರವಾಸಕ್ಕೆ)

Bali, Indonesia

ಬಾಲಿ, ಇಂಡೋನೇಷ್ಯಾ

ಹನಿಮೂನಿಗರ ಸ್ವರ್ಗ ಎಂದೇ ಪ್ರಸಿದ್ಧವಾಗಿರುವ ಬಾಲಿ ಬೇಸಿಗೆಯಲ್ಲಿ ಪಯಣಿಸಬಹುದಾದ ಅತ್ಯಂತ ಸುಂದರ ತಾಣ. ಇಂಡೋನೇಷ್ಯಾದ ಪ್ರಕೃತಿ ಸೌಂದರ್ಯ, ದೇವಾಲಯಗಳು, ಸಾಂಸ್ಕೃತಿ ಉತ್ಸವಗಳು ಎಲ್ಲವೂ ಪ್ರವಾಸಿಗರ ಕಣ್ಣಿಗೆ ಹಬ್ಬ. ಸಾವಿರಾರು ಮಂದಿ ಇಲ್ಲಿನ ಸ್ಪಾ ಟ್ರೀಟ್‌ಮೆಂಟ್‌ಗಳಿಗಾಗಿಯೂ ಬರುತ್ತಾರೆ. ಬಾಲಿ ಸಫಾರಿ, ಮರೈನ್‌ ಪಾರ್ಕ್‌ ಭೇಟಿ, ಬಗೆಬಗೆಯ ಜಲಕ್ರೀಡೆಗಳು ಇಲ್ಲಿನ ಪ್ರವಾಸದ ಪ್ರಮುಖ ಆಕರ್ಷಣೆಗಳು. ಮೇ ತಿಂಗಳಿಂದ ಜುಲೈವರೆಗೆ ಇಲ್ಲಿಗೆ ಭೇಟಿ ಕೊಡಲು ಸಕಾಲ. ಏಳು ದಿನದ ಪ್ರವಾಸದಲ್ಲಿ ಉಳಿದುಕೊಳ್ಳಲು ಹಾಗೂ ಊಟೋಪಚಾರಕ್ಕಾಗಿ ಒಬ್ಬರಿಗೆ ಸುಮಾರು ಕನಿಷ್ಟ 35,000 ರೂಪಾಯಿಗಳು ಖರ್ಚಾಗಬಹುದು.

Pokhara, Nepal

ಪೊಖಾರಾ, ನೇಪಾಳ

ನೇಪಾಳದ ಅದ್ಭುತ ಸೌಂದರ್ಯದ ಊರುಗಳಲ್ಲಿ ಪೊಖಾರಾ ಕೂಡಾ ಒಂದು. ಇಲ್ಲಿಂದ ಕಾಣುವ ಹಿಮಾಲಯದ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು, ಬೌದ್ಧಸ್ತೂಪಗಳು, ದೇವಾಲಯಗಳು ಹೀಗೆ ನೇಪಾಳದ ಸಂಸ್ಕೃತಿಯನ್ನು ಕಾಣಲು ಪೊಖಾರಾ ಉತ್ತಮ ಜಾಗ. ಇಲ್ಲಿನ ಪ್ಯೂ ಸರೋವರದಲ್ಲಿ ಬೋಟಿಂಗ್, ಮಚುಪುಚರೇ ಶಿಖರ ದರ್ಶನ, ಝಿಪ್‌ ಲೈನಿಂಗ್‌, ಹಿಮಾಲಯದಲ್ಲಿ ಚಾರಣ, ಬಂಜೀ ಜಂಪಿಂಗ್ ಇತ್ಯಾದಿಗಳನ್ನೂ ಸಮಯವಿದ್ದರೆ ಮಾಡಬಹುದು. ಏಪ್ರಿಲ್‌ನಿಂದ ಜೂನ್‌ ತಿಂಗಳಲ್ಲಿ ಇಲ್ಲಿಗೆ ಭೇಟಿ ಕೊಡಬಹುದು.‌ ಒಬ್ಬರಿಗೆ ಏಳು ದಿನದ ಪ್ರವಾಸದಲ್ಲಿ ಉಳಿದುಕೊಳ್ಳಲು ಹಾಗೂ ಊಟೋಪಚಾರಕ್ಕಾಗಿ ಸುಮಾರು ಕನಿಷ್ಠ 10,000 ರೂಪಾಯಿಗಳು ಖರ್ಚಾಗಬಹುದು.

Hamburg, Germany

ಹ್ಯಾಂಬರ್ಗ್‌, ಜರ್ಮನಿ

ಜರ್ಮನಿಯ ಹ್ಯಾಂಬರ್ಗ್‌ ನಗರ ಪ್ರಸಿದ್ಧ ಬೇಸಿಗೆಯ ಪ್ರವಾಸೀ ತಾಣಗಳ ಪೈಕಿ ಒಂದಾಗಿದೆ. 19ನೇ ಶತಮಾನದಲ್ಲಿ ನಿರ್ಮಾಣವಾದ ಈ ನಗರದ ವಾಸ್ತುಶಿಲ್ಪ, ಬೀದಿಗಳು, ಸಂಸ್ಕೃತಿ ಎಲ್ಲವೂ ಕೂಡಾ ಹೊಸ ಪರಿಚಯವನ್ನೇ ಮಾಡಿಸುತ್ತದೆ. ಮುಖ್ಯವಾಗಿ ಇಲ್ಲಿನ ಬೀಯರ್‌ಗಳು, ಅವುಗಳನ್ನು ತಯಾರು ಮಾಡುವ ಮನೆಗಳು, ಉದ್ಯಮ ಎಲ್ಲವೂ ನೋಡಬೇಕಾದಂಥದ್ದೇ. ಏಳು ದಿನದ ಪ್ರವಾಸದಲ್ಲಿ ಉಳಿದುಕೊಳ್ಳಲು ಹಾಗೂ ಊಟೋಪಚಾರಕ್ಕಾಗಿ ಒಬ್ಬರಿಗೆ ಸುಮಾರು ಕನಿಷ್ಠ 52,000 ರೂಪಾಯಿಗಳು ಖರ್ಚಾಗಬಹುದು.

Whistler, Canada

ವಿಸ್ಲರ್‌, ಕೆನಡಾ

ಸಮುದ್ರ ತೀರದ ಈ ಪಟ್ಟಣ ಪ್ರಕೃತಿ ಸೌಂದರ್ಯವನ್ನು ಇಷ್ಟಪಡುವ ಮಂದಿಗೆ ಹೇಳಿ ಮಾಡಿಸಿದ ಪಟ್ಟಣ. ಬೆಟ್ಟಗುಡ್ಡಗಳಲ್ಲಿ ಚಾರಣ, ವನ್ಯಧಾಮಗಳಲ್ಲಿ ಸಫಾರಿ, ಕಲೆ ಸಂಸ್ಕೃತಿಗಳ ಪರಿಚಯ ಇತ್ಯಾದಿಗಳನ್ನು ನೋಡಿ ಅನುಭವಿಸಲು ಇಷ್ಟವಿರುವ ಮಂದಿ ಈ ಊರನ್ನು ತುಂಬಾ ಇಷ್ಟಪಡಬಹುದು. ಜೂನ್‌ನಿಂದ ಆಗಸ್ಟ್‌ ತಿಂಗಳ ಸಮಯ ಇಲ್ಲಿಗೆ ಭೇಟಿ ಕೊಡಲು ಅತ್ಯಂತ ಪ್ರಶಸ್ತ. ಒಂದು ಶಿಖರದಿಂದ ಇನ್ನೊಂದಕ್ಕೆ ಇರುವ ಗೊಂಡೋಲಾ ರೈಡ್‌, ಆರ್ಟ್‌ ಮ್ಯೂಸಿಯಂಗಳು, ಪುರಾತನ ಕಟ್ಟ್ಡಗಳ ಸೌಂದರ್ಯವನ್ನು ವೀಕ್ಷಿಸುತ್ತಾ ಇಲ್ಲಿ ಸಮಯ ಕಳೆಯಬಹುದು. ಏಳು ದಿನದ ಪ್ರವಾಸದಲ್ಲಿ ಉಳಿದುಕೊಳ್ಳಲು ಹಾಗೂ ಊಟೋಪಚಾರಕ್ಕಾಗಿ ಒಬ್ಬರಿಗೆ ಸುಮಾರು ಕನಿಷ್ಠ 60,000 ರೂಪಾಯಿಗಳು ಖರ್ಚಾಗಬಹುದು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರವಾಸ

IRCTC Jyotirlinga Yatra: ರೈಲ್ವೆ ಇಲಾಖೆಯಿಂದ ಏಳು ಜ್ಯೋತಿರ್ಲಿಂಗ ವೀಕ್ಷಣೆ ಪ್ರವಾಸ; ದರ ವಿವರ ಇಲ್ಲಿದೆ

IRCTC Jyotirlinga Yatra: ಏಳು ಜ್ಯೋತಿರ್ಲಿಂಗಗಳ ದರ್ಶನ ದರ್ಶನ ಮಾಡಲು ಇಚ್ಛಿಸುವವರಿಗೆ ಶುಭ ಸುದ್ದಿ. ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮವು ಭಾರತ್ ಗೌರವ್ ಎಸಿ ಪ್ರವಾಸಿ ರೈಲಿನ ಮೂಲಕ ಮೇ 22ರಿಂದ ಏಳು ಜ್ಯೋತಿರ್ಲಿಂಗ ಯಾತ್ರೆಯ ಪ್ರವಾಸೋದ್ಯಮ ಪ್ಯಾಕೇಜ್ ಅನ್ನು ಘೋಷಿಸಿದೆ. ಈ ಕುರಿತು ಮಾಹಿತಿ ಇಲ್ಲಿದೆ.

VISTARANEWS.COM


on

By

IRCTC Jyotirlinga Yatra
Koo

ನವದೆಹಲಿ: ಏಕಕಾಲಕ್ಕೆ ಏಳು ಜ್ಯೋತಿರ್ಲಿಂಗಗಳ (seven Jyotirlinga ) ದರ್ಶನ ಮಾಡಬೇಕು ಎಂದು ಬಯಸುವವರಿಗೆ ಶುಭ ಸುದ್ದಿ. ಭಾರತೀಯ ರೈಲ್ವೆ ಊಟೋಪಚಾರ ಮತ್ತು ಪ್ರವಾಸೋದ್ಯಮ ನಿಗಮ (IRCTC) ಭಾರತ್ ಗೌರವ್ ಎಸಿ ಟೂರಿಸ್ಟ್ ಟ್ರೈನ್ (Bharat Gaurav AC Tourist Train) ಮೂಲಕ 7 ಜ್ಯೋತಿರ್ಲಿಂಗ ಯಾತ್ರೆಯ (IRCTC Jyotirlinga Yatra) ಹೊಸ ಪ್ರವಾಸೋದ್ಯಮ ಪ್ಯಾಕೇಜ್ ಅನ್ನು ಪ್ರಕಟಿಸಿದೆ.

ಜ್ಯೋತಿರ್ಲಿಂಗ ಯಾತ್ರೆಯು 2024ರ ಮೇ 22ರಿಂದ ಪ್ರಾರಂಭವಾಗಲಿದ್ದು, 11 ರಾತ್ರಿ, 12 ಹಗಲಿನಲ್ಲಿ ಪೂರ್ಣಗೊಳ್ಳಲಿದೆ ಎಂದು ಐಆರ್‌ಸಿಟಿಸಿ ನಿಗಮ ಹೇಳಿದೆ. ಈ ನಿಗಮ ಪ್ರವಾಸೋದ್ಯಮ ಪ್ಯಾಕೇಜ್ ಕೋಡ್- NZBG35. ಬೆಳಗ್ಗೆ ಚಹಾ, ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟವನ್ನು ಒಳಗೊಂಡಿರುತ್ತದೆ. ಸಸ್ಯಾಹಾರಿ ಆಹಾರವನ್ನು ಮಾತ್ರ ನೀಡಲಾಗುವುದು.

ಇದನ್ನೂ ಓದಿ: Summer Tour: ಬೇಸಿಗೆ ಪ್ರವಾಸಕ್ಕೆ ಸೂಕ್ತ ಈ 5 ಅದ್ಭುತ ಗಿರಿಧಾಮಗಳು!


ಎಲ್ಲಿಗೆ ಭೇಟಿ?

ಈ ಸಂದರ್ಭದಲ್ಲಿ ಏಳು ಜ್ಯೋತಿರ್ಲಿಂಗ ಕ್ಷೇತ್ರಗಳಾದ ಓಂಕಾರೇಶ್ವರ ಜ್ಯೋತಿರ್ಲಿಂಗ, ಮಹಾಕಾಳೇಶ್ವರ ಜ್ಯೋತಿರ್ಲಿಂಗ, ಸೋಮನಾಥ ಜ್ಯೋತಿರ್ಲಿಂಗ, ದ್ವಾರಕಾಧೀಶ ದೇವಸ್ಥಾನ ಮತ್ತು ನಾಗೇಶ್ವರ ಜ್ಯೋತಿರ್ಲಿಂಗ, ಭೇಟ್ ದ್ವಾರಕಾ ತ್ರಯಂಬಕೇಶ್ವರ ಜ್ಯೋತಿರ್ಲಿಂಗ, ಗೃಷ್ಣೇಶ್ವರ ಜ್ಯೋತಿರ್ಲಿಂಗ ಔರಂಗಾಬಾದ್, ಭೀಮಾಶಂಕರ ಜ್ಯೋತಿರ್ಲಿಂಗ, ಪುಣೆ ಸೇರಿದೆ.

ಯಾತ್ರಾರ್ಥಿಗಳೇ ಗಮನಿಸಿ

ಆಸಕ್ತ ಯಾತ್ರಾರ್ಥಿಗಳು ಐಆರ್‌ಸಿಟಿಸಿಯಿಂದ ಜ್ಯೋತಿರ್ಲಿಂಗ ಯಾತ್ರೆಗಾಗಿ ಉದ್ದೇಶಿಸಿರುವ ಭಾರತ್ ಗೌರವ್ ಎಸಿ ಟೂರಿಸ್ಟ್ ರೈಲಿನಲ್ಲಿ ಸ್ಲೀಪರ್ ಕ್ಲಾಸ್, ಥರ್ಡ್ ಎಸಿ ಮತ್ತು ಸೆಕೆಂಡ್ ಎಸಿ ಆಯ್ಕೆ ಮಾಡಬಹುದು.

ದರ ಇಂತಿದೆ

ಟ್ರೈನ್ ಜರ್ನಿ ಸಿಂಗಲ್, ಡಬಲ್, 5-11 ವರ್ಷದ ಮೂವರು ಮಕ್ಕಳಿಗೆ ಇಂತಿದೆ. 2A 48600- 46700 ರೂ. , 3A ರೂ 36700- 35150ರೂ., ಎಸ್ಎಲ್ ರೂ 22150 ನಿಂದ 20800ರೂ.

ನಿಲುಗಡೆ ತಾಣಗಳು

ಐಆರ್‌ಸಿಟಿಸಿ ನಿಗಮದ ಬೋರ್ಡಿಂಗ್/ ಡಿ-ಬೋರ್ಡಿಂಗ್ ಪಾಯಿಂಟ್‌ಗಳನ್ನು ಗುರುತಿಸಿದೆ. ಯೋಗ ನಗರಿ ರಿಷಿಕೇಶ್, ಹರಿದ್ವಾರ, ಮೊರಾದಾಬಾದ್, ಬರೇಲಿ, ಶಹಜಹಾನ್‌ಪುರ, ಹರ್ದೋಯ್, ಲಕ್ನೋ, ಕಾನ್ಪುರ್, ಒಆರ್‌ಐ, ವಿರಂಗನ ಲಕ್ಷ್ಮೀಬಾಯಿ ಮತ್ತು ಲಲಿತ್‌ಪುರ ಜಂಕ್ಷನ್.

ಯಾತ್ರಾ ಪ್ಯಾಕೇಜ್ ಸೇರ್ಪಡೆ

ಒಬ್ಬ ಪ್ರಯಾಣಿಕ ಪ್ಯಾಕೇಜ್ ಅನ್ನು ಬುಕ್ ಮಾಡಬಹುದು. ಆದರೆ ಆ ವ್ಯಕ್ತಿಯು ಡಬಲ್/ ಟ್ರಿಪಲ್ ಆಕ್ಯುಪೆನ್ಸಿಯಲ್ಲಿ ಬುಕ್‌ ಮಾಡಬೇಕಾಗುತ್ತದೆ ಎಂದು ಐಆರ್‌ಸಿಟಿಸಿ ತಿಳಿಸಿದೆ. ಎಲ್ಲಾ ಸಂಚಾರ ಮತ್ತು ದೃಶ್ಯ ವೀಕ್ಷಣೆಯ ಪ್ಯಾಕೇಜ್ ವರ್ಗದ ಪ್ರಕಾರ ಇರುತ್ತದೆ. ನಿಗಮವು ಪ್ರಯಾಣಿಕರಿಗೆ ಪ್ರಯಾಣ ವಿಮೆಯನ್ನು ನೀಡುತ್ತದೆ. ವೃತ್ತಿಪರ ಮತ್ತು ಸ್ನೇಹಪರ ಪ್ರವಾಸದ ಅನುಭವಕ್ಕಾಗಿ ವಿವಿಧ ಸೇವೆಗಳನ್ನು ನೀಡುತ್ತದೆ. ನಿಗಮದ ಟೂರ್ ಮ್ಯಾನೇಜರ್‌ಗಳು ಪ್ರವಾಸದ ಉದ್ದಕ್ಕೂ ಪ್ರವಾಸಿಗರ ಜೊತೆ ಪ್ರಯಾಣಿಸುತ್ತಾರೆ.


ಉತ್ತಮ ಸೌಲಭ್ಯ

ಟ್ರೈನ್ ಜರ್ನಿ ಸ್ಲೀಪರ್ ಕ್ಲಾಸ್ 3AC 2AC ಪ್ರಯಾಣದ ಪ್ರಕಾರ ಬಜೆಟ್ ಗೆ ಹೊಂದಿಕೆಯಾಗುವ ಹೊಟೇಲ್ ಗಳಲ್ಲಿ ರಾತ್ರಿ ತಂಗುವ ವ್ಯವಸ್ಥೆ ಮಾಡಲಾಗುತ್ತದೆ. ಮೂರು ಹೊತ್ತು ಊಟ ಮತ್ತು ಉಪಾಹಾರದ ವ್ಯವಸ್ಥೆ ಕಲ್ಪಿಸಲಾಗುತ್ತದೆ.

ಭಾರತ್ ಗೌರವ್ ರೈಲುಗಳು

ಭಾರತೀಯ ರೈಲ್ವೆಯು ಭಾರತ್ ಗೌರವ್ ಪ್ರವಾಸಿ ರೈಲುಗಳ ಬ್ಯಾನರ್ ಅಡಿಯಲ್ಲಿ ಥೀಮ್ ಆಧಾರಿತ ಸ್ಥಳಗಳಿಗೆ ಪ್ರವಾಸಿ ರೈಲುಗಳನ್ನು ನಿರ್ವಹಿಸುತ್ತದೆ. ರೈಲು ಪ್ರಯಾಣಗಳನ್ನು ವೈವಿಧ್ಯಮಯ ಸ್ಥಳಗಳಿಗೆ ಪರಿಚಯಿಸಲಾಗಿದೆ. ರೈಲ್ವೆ ಸಚಿವಾಲಯವು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಭವ್ಯವಾದ ಐತಿಹಾಸಿಕ ಸ್ಥಳಗಳನ್ನು ಪ್ರದರ್ಶಿಸುವ ಉದ್ದೇಶದಿಂದ ‘ಭಾರತ್ ಗೌರವ್ ರೈಲುಗಳು’ ಪರಿಕಲ್ಪನೆಯನ್ನು ಪರಿಚಯಿಸಿದೆ. ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ರೈಲು ನಿಲ್ದಾಣ ಅಥವಾ ರೈಲ್ವೆ ಇಲಾಖೆಯ ವೆಬ್‌ ಸೈಟ್‌ ಸಂಪರ್ಕಿಸಬಹುದು.

Continue Reading

Lok Sabha Election 2024

Lok Sabha Election 2024 : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ; ಪ್ರವಾಸಿ ತಾಣಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ

ಏಪ್ರಿಲ್‌ 26ರಂದು‌ ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭೆ ಚುನಾವಣೆಯ ಮತದಾನ (Lok Sabha Election 2024) ನಡೆಯಲಿದೆ. ಈ ನಿಟ್ಟಿನಲ್ಲಿ ಸಾರ್ವತ್ರಿಕ ರಜೆ ಇರಲಿದ್ದು, ಮತದಾನವನ್ನು ಮತದಾರರು ತಪ್ಪಿಸಬಾರೆಂದು ಪ್ರವಾಸಿ ತಾಣಗಳ ಪ್ರವೇಶಕ್ಕೆ ನಿಷೇದ ಹೇರಲಾಗಿದೆ. ಗುರುವಾರ ಸಂಜೆಯಿಂದಲೇ ನಂದಿ ಬೆಟ್ಟ ಕ್ಲೋಸ್‌ ಆಗಲಿದ್ದು, ಬನ್ನೇರುಘಟ್ಟ ಉದ್ಯಾನವನಕ್ಕೂ (Bannerghatta National Park) ನಿಷೇಧಿಸಲಾಗಿದೆ.

VISTARANEWS.COM


on

By

Lok sabha election 2024
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಲೋಕಸಭೆ ಚುನಾವಣೆ (Lok sabha Election 2024) ಹಿನ್ನೆಲೆಯಲ್ಲಿ ಶೇ 100ಕ್ಕೆ 100ರಷ್ಟು ಮತದಾನ (Voting) ಆಗಬೇಕೆಂದು, ಚುನಾವಣಾ ಆಯೋಗ ನಾನಾ ಕಸರತ್ತುಗಳನ್ನು ಮಾಡುತ್ತಿದೆ. ಸದ್ಯ ಚುನಾವಣಾ ಆಯೋಗಕ್ಕೆ ಸಾಥ್‌ ನೀಡಿರುವ ನಂದಿ ಹಿಲ್ಸ್‌ (Nandi hills) ಮತ್ತು ಬನ್ನೇರುಘಟ್ಟ ಜೈವಿಕ ಉದ್ಯಾನವನ (Bannerghatta National Park) ಆಡಳಿತ ಮಂಡಳಿ ಮತದಾನದ ದಿನದಂದು ಪ್ರವಾಸಿಗರ ಪ್ರವೇಶಕ್ಕೆ ನಿಷೇಧ ಹೇರಿದೆ.

ಲೋಕಸಭಾ ಚುನಾವಣೆ (Lok Sabha Election 2024) ಸಂಬಂಧ ರಾಜಕೀಯ ಪಕ್ಷಗಳಂತೆ ಚುನಾವಣಾ ಆಯೋಗವೂ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಇನ್ನು ಕರ್ನಾಟಕದಲ್ಲಿ ಏಪ್ರಿಲ್ 26 ಹಾಗೂ ಮೇ 7 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಮತದಾನ ನಡೆಯುವ (Voting Day) ಆ ಎರಡು ದಿನವೂ ಸಾರ್ವತ್ರಿಕ ರಜೆಯನ್ನು (Government Holiday) ಘೋಷಿಸಲಾಗಿದೆ. ಸರ್ಕಾರಿ ನೌಕರರಿಗೆ ವೇತನ ಸಹಿತ ರಜೆಯನ್ನು (Paid leave) ಘೋಷಿಸಿ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶಿಸಿದ್ದಾರೆ.

ಏಪ್ರಿಲ್ 26 ರಂದು ಅಂದರೆ ನಾಳೆ ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ. 2ನೇ ಹಂತದ ಮತದಾನವು ಮೇ 7ರಂದು ನಡೆಯಲಿದೆ. ಈ ದಿನಗಳಂದು ಎಲ್ಲ ರಾಜ್ಯ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು, ಎಲ್ಲ ವ್ಯಾವಹಾರಿಕ ಸಂಸ್ಥೆಗಳು, ಔದ್ಯಮಿಕ ಸಂಸ್ಥೆಗಳು ಹಾಗೂ ಇನ್ನಿತರ ಸಂಸ್ಥೆಗಳಲ್ಲಿ ಕಾಯಂ ಆಗಿ ಹಾಗೂ ದಿನಗೂಲಿ ಮೇಲೆ ಕೆಲಸ ನಿರ್ವಹಿಸುವ ನೌಕರರಿಗೆ ವೇತನ ಸಹಿತ ರಜೆ ಘೋಷಣೆ ಮಾಡಲಾಗಿದೆ.

ರಜೆ ಸಿಕ್ಕ ಖುಷಿಯಲ್ಲಿ ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗದೆ ಪ್ರವಾಸಕ್ಕೆ ತೆರಳುವ ಸಾಧ್ಯತೆ ಇದೆ. ಹೀಗಾಗಿ ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಝೂ, ಸಫಾರಿ ಮತ್ತು ಚಿಟ್ಟೆ ಪಾರ್ಕ್ ಪ್ರವಾಸಿಗರ ವೀಕ್ಷಣೆಗೆ ಲಭ್ಯವಿರುವುದಿಲ್ಲ. ಏಪ್ರಿಲ್‌ 26ರಂದು ಮತದಾನ ಹಿನ್ನೆಲೆಯಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ರಜೆ ಘೋಷಿಸಲಾಗಿದೆ. ಲೋಕಸಭಾ ಚುನಾವಣೆಯ ಮತದಾನದಲ್ಲಿ ಜನರು ಸಕ್ರಿಯವಾಗಿ ಭಾಗಿಯಾಗಲೆಂದು ರಜೆ ಘೋಷಣೆ ಮಾಡಲಾಗಿದೆ.

ಮತದಾನದ ಪ್ರಮಾಣ ಹೆಚ್ಚಳ ಮಾಡುವ ದೃಷ್ಟಿಯಿಂದ ಏಪ್ರಿಲ್‌ 26ರಂದು ಬನ್ನೇರುಘಟ್ಟ ಪಾರ್ಕ್‌ ರಜೆ ಇರಲಿದೆ. 26 ಬದಲಾಗಿ ಏಪ್ರಿಲ್‌ 30ರಂದು ಪಾರ್ಕ್‌ ತೆರೆಯಲಿದೆ. ಬನ್ನೇರುಘಟ್ಟ ಪಾರ್ಕ್‌ ಪ್ರತಿ ಮಂಗಳವಾರ ರಜೆ ಇರುತ್ತಿತ್ತು. ಆದರೆ 26ರ ರಜೆಯನ್ನು ಸರಿದೂಗಿಸುವ ಸಲುವಾಗಿ ಏಪ್ರಿಲ್‌ 30ರಂದು ಪ್ರವಾಸಿಗರ ವೀಕ್ಷಣೆಗೆ ಲಭ್ಯ ಇರಲಿದೆ.

ಇದನ್ನೂ ಓದಿ: Voter ID: ವೋಟರ್‌ ಐಡಿ ಕಾರ್ಡ್‌ ಸಿಕ್ಕಿಲ್ಲವೆ? ಡೋಂಟ್‌ ವರಿ. ಈ 12 ದಾಖಲೆಗಳಲ್ಲಿ ಒಂದಿದ್ದರೆ ಸಾಕು!

ಏ.25ರ ಸಂಜೆಯಿಂದಲೇ ನಂದಿ ಬೆಟ್ಟ ಕ್ಲೋಸ್‌

ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು (ಏ.25) ಸಂಜೆ ಐದು ಗಂಟೆಯಿಂದ‌ ನಂದಿ ಬೆಟ್ಟಕ್ಕೆ ನಿಷೇಧ ಹೇರಲಾಗಿದೆ. ನಂದಿಗಿರಿಧಾಮ ನಿಷೇಧ ಏರಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಆದೇಶ ಹೊರಡಿಸಿದ್ದಾರೆ.

ಗುರುವಾರ ಸಂಜೆ 5 ಗಂಟೆಯಿಂದ ಶುಕ್ರವಾರ ಸಂಜೆ 7 ಗಂಟೆವರೆಗೂ ನಂದಿ ಹಿಲ್ಸ್ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧವಿದೆ. ಮತದಾನಕ್ಕೆಂದು ರಜೆ ಜತೆಗೆ ವೀಕೆಂಡ್ ಇರುವುದರಿಂದ ಮತದಾನ ಬಿಟ್ಟು ನಂದಿ ಹಿಲ್ಸ್‌ಗೆ ಮೋಜು ಮಸ್ತಿ ಮಾಡಲು ಪ್ರವಾಸಿಗರ ದಂಡು ಬರುತ್ತದೆ. ಇದನ್ನೂ ತಪ್ಪಿಸಲು ವಿಶ್ವವಿಖ್ಯಾತ ನಂದಿಗಿರಿಧಾಮದ ಪ್ರವೇಶ ಬಂದ್‌ ಮಾಡಲಾಗುತ್ತಿದೆ.

ಏಪ್ರಿಲ್‌ 26ರಂದು ಮತದಾನ ನಡೆಯುವ ಕ್ಷೇತ್ರಗಳು: ದಕ್ಷಿಣ ಕರ್ನಾಟಕ

1.ಉಡುಪಿ-ಚಿಕ್ಕಮಗಳೂರು (ಸಾಮಾನ್ಯ)
2.ಹಾಸನ (ಸಾಮಾನ್ಯ)
3.ದಕ್ಷಿಣ ಕನ್ನಡ (ಸಾಮಾನ್ಯ)
4.ಚಿತ್ರದುರ್ಗ (ಪರಿಶಿಷ್ಟ ಜಾತಿ ಮೀಸಲು)
5. ತುಮಕೂರು (ಸಾಮಾನ್ಯ)
6.ಮಂಡ್ಯ (ಸಾಮಾನ್ಯ)
7.ಮೈಸೂರು-ಕೊಡಗು (ಸಾಮಾನ್ಯ)
8.ಚಾಮರಾಜನಗರ (ಪರಿಶಿಷ್ಟ ಜಾತಿ ಮೀಸಲು)
9. ಬೆಂಗಳೂರು ಗ್ರಾಮಾಂತರ (ಸಾಮಾನ್ಯ)
10 ಬೆಂಗಳೂರು ಉತ್ತರ (ಸಾಮಾನ್ಯ)
11. ಬೆಂಗಳೂರು ಕೇಂದ್ರ (ಸಾಮಾನ್ಯ)
12. ಬೆಂಗಳೂರು ದಕ್ಷಿಣ (ಸಾಮಾನ್ಯ)
13.ಚಿಕ್ಕಬಳ್ಳಾಪುರ (ಸಾಮಾನ್ಯ)
14.ಕೋಲಾರ (ಪರಿಶಿಷ್ಟ ಜಾತಿ ಮೀಸಲು)

Lok Sabha Election 2024 Karnataka declares 2 day general holiday
Lok Sabha Election 2024 Karnataka declares 2 day general holiday

ಮೇ 7ರಂದು ಚುನಾವಣೆ ನಡೆಯಲಿರುವ ಕ್ಷೇತ್ರಗಳು: ಉತ್ತರ ಕರ್ನಾಟಕ

1.ಚಿಕ್ಕೋಡಿ (ಸಾಮಾನ್ಯ)
2.ಬೆಳಗಾವಿ (ಸಾಮಾನ್ಯ)
3.ಬಾಗಲಕೋಟೆ (ಸಾಮಾನ್ಯ)
4.ಬಿಜಾಪುರ (ಪರಿಶಿಷ್ಟ ಜಾತಿ ಮೀಸಲು)
5.ಕಲಬುರಗಿ (ಪರಿಶಿಷ್ಟ ಜಾತಿ ಮೀಸಲು)
6.ರಾಯಚೂರು(ಪರಿಶಿಷ್ಟ ಪಂಗಡ ಮೀಸಲು)
7.ಬೀದರ್ (ಸಾಮಾನ್ಯ)
8.ಕೊಪ್ಪಳ (ಸಾಮಾನ್ಯ)
9.ಬಳ್ಳಾರಿ (ಪರಿಶಿಷ್ಟ ಪಂಗಡ ಮೀಸಲು)
10. ಹಾವೇರಿ (ಸಾಮಾನ್ಯ)
11. ಧಾರವಾಡ (ಸಾಮಾನ್ಯ)
12.ಉತ್ತರ ಕನ್ನಡ (ಸಾಮಾನ್ಯ)
13.ದಾವಣಗೆರೆ (ಸಾಮಾನ್ಯ)
14.ಶಿವಮೊಗ್ಗ (ಸಾಮಾನ್ಯ)

Lok Sabha Election 2024 Karnataka declares 2 day general holiday

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಪ್ರವಾಸ

Summer Tour: ಬೇಸಿಗೆ ಪ್ರವಾಸಕ್ಕೆ ಸೂಕ್ತ ಈ 5 ಅದ್ಭುತ ಗಿರಿಧಾಮಗಳು!

Summer Tour: ಬೇಸಿಗೆ ರಜೆಯನ್ನು ಬೆಟ್ಟಗುಡ್ಡಗಳ ನಡುವೆ ಪ್ರಶಾಂತವಾದ ಸ್ಥಳದಲ್ಲಿ ಕಳೆಯುವ ಆಸೆ ಇದೆಯೇ ಹಾಗಿದ್ದರೆ ಇಲ್ಲಿ ಹೇಳಿರುವ ಐದು ಪ್ರದೇಶಗಳಿಗೆ ಪ್ರವಾಸ ಹೊರಡುವ ಪ್ಲಾನ್ ಈಗಲೇ ಮಾಡಿಕೊಳ್ಳಿ.

VISTARANEWS.COM


on

By

Summer Tour
Koo

ಭಾರತದಲ್ಲಿ (india) ಹಲವಾರು ಸುಂದರ, ಮನೋಹರ ತಾಣಗಳಿರುವಂತೆ ರುದ್ರರಮಣೀಯ ಸ್ಥಳಗಳೂ ಇವೆ. ಬೇಸಿಗೆಯ ರಜೆಯನ್ನು (Summer Tour) ಬೆಟ್ಟ ಗುಡ್ಡಗಳ ನಡುವೆ ಕಳೆಯಬೇಕು, ನಗರದ ಜಂಜಾಟದಿಂದ ದೂರವಾಗಿ ಮನಸ್ಸಿಗೆ ಶಾಂತಿ ಸೀಗುವ ಸ್ಥಳದಲ್ಲಿ ಕೆಲಕಾಲ ಇದ್ದು ಬರಬೇಕು ಎನ್ನುವ ಯೋಚನೆ ಇದ್ದರೆ ಭಾರತದ ಈ ಐದು ಗಿರಿಧಾಮಗಳಿಗೊಮ್ಮೆಯಾದರೂ (Hill Stations) ಭೇಟಿ ನೀಡಬಹುದು.

ಭಾರತದಲ್ಲಿ ಅನೇಕ ಪ್ರವಾಸಿ ತಾಣಗಳಿವೆ. ಅದರಲ್ಲಿ ಕೆಲವು ಜೀವನದಲ್ಲಿ ರೋಮಾಂಚಕಾರಿ ಅನುಭವವನ್ನು ನೀಡುತ್ತದೆ. ನಾವು ರಜೆಯ ಬಗ್ಗೆ ಯೋಚಿಸಿದಾಗ ನಮಗೆ ಬೇಕಾಗಿರುವುದು ಜನಸಂದಣಿಯಿಲ್ಲದ ಸ್ಥಳ, ರುಚಿಕರವಾದ ಆಹಾರ, ಸಮ್ಮೋಹನಗೊಳಿಸುವ ನೋಟಗಳು ಮತ್ತು ಶಾಂತ ವಾತಾವರಣ.

29 ರಾಜ್ಯಗಳು ಮತ್ತು 7 ಕೇಂದ್ರಾಡಳಿತ ಪ್ರದೇಶಗಳಿರುವ ಭಾರತದಲ್ಲಿ ಸುಂದರವಾದ ವಿಹಾರ ತಾಣಗಳು ಹಲವಾರು ಇವೆ. ಅವುಗಳಲ್ಲಿ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ಐದು ಗಿರಿಧಾಮಗಳು ಮಾಹಿತಿ ಇಲ್ಲಿದೆ.

ಇದನ್ನೂ ಓದಿ: Haridwara Travel: ಹರಿದ್ವಾರಕ್ಕೆ ಭೇಟಿ ನೀಡಿದಾಗ ಈ ಸ‍್ಥಳಗಳನ್ನು ಮಿಸ್ ಮಾಡದೇ ನೋಡಿ!


ಮಾವ್ಲಿನ್ನಾಂಗ್ (Mawlynnong)

‘ಏಷ್ಯಾದ ಸ್ವಚ್ಛ ಗ್ರಾಮ’ ಎಂದು ಕರೆಯಲ್ಪಡುವ ಮೇಘಾಲಯದ ಮಾವ್ಲಿನ್ನಾಂಗ್ ಪರಿಸರ ಸ್ನೇಹಿ ಜೀವನ ಹೊಂದಿದೆ. ನಿತ್ಯಹರಿದ್ವರ್ಣ ಪರಿಸರ, ಧುಮ್ಮಿಕ್ಕುವ ತೊರೆಗಳು, ಹಣ್ಣಿನ ತೋಟಗಳು ಮತ್ತು ತೂಗಾಡುವ ತಾಳೆ ಮರಗಳು ಮೇಘಾಲಯದ ಹೃದಯಭಾಗದಲ್ಲಿ ರಜೆಯ ಸುಂದರ ಅನುಭವವನ್ನು ನೀಡುತ್ತವೆ. ನೋಹ್ವೆಟ್ ಲಿವಿಂಗ್ ರೂಟ್ ಬ್ರಿಡ್ಜ್ ಕೂಡ ಈ ಸ್ಥಳದಲ್ಲಿದೆ. ಇಲ್ಲಿನ ತ್ಯಾಜ್ಯವನ್ನು ಬಿದಿರಿನ ಡಸ್ಟ್‌ಬಿನ್‌ಗಳಲ್ಲಿ ಸಂಗ್ರಹಿಸಿ ಅನಂತರ ಗೊಬ್ಬರವಾಗಿ ಬಳಸುವುದರಿಂದ ಮಾವ್ಲಿನ್ನಾಂಗ್ ಸ್ವಚ್ಛತೆಗೆ ಹೆಸರುವಾಸಿಯಾಗಿದೆ.

ನೊಹ್ವೆಟ್‌ನ ಲಿವಿಂಗ್ ರೂಟ್ ಬ್ರಿಡ್ಜ್ ಇಲ್ಲಿಯ ಪ್ರಮುಖ ಆಕರ್ಷಣೆ ಮಾತ್ರವಲ್ಲ ಮಾವ್ಲಿನ್ನಾಂಗ್‌ನಲ್ಲಿರುವ ಎಪಿಫ್ಯಾನಿ ಚರ್ಚ್ ಒಂದು ಶತಮಾನಕ್ಕೂ ಹೆಚ್ಚು ಹಳೆಯದಾಗಿದೆ. ಈ ಸೊಂಪಾದ ಮತ್ತು ಹಸಿರು ಉಷ್ಣವಲಯದ ಸ್ವರ್ಗದ ಮಧ್ಯದಲ್ಲಿ ಐರೋಪ್ಯ ವಾಸ್ತುಶಿಲ್ಪದ ಒಂದು ಸುಂದರ ಭಾಗವಾಗಿದೆ. ಚರ್ಚ್‌ಗೆ ಹತ್ತಿರವಿರುವ ಮರದ ಮನೆಗಳನ್ನು ಏರಿ ದೂರದವರೆಗೂ ಬಯಲು ಪ್ರದೇಶಗಳನ್ನು ಕಾಣಬಹುದು.


ಹಳೇಬೀಡು (Halebidu)

ಹಳೇಬೀಡು ಕರ್ನಾಟಕದ ಹಾಸನ ಜಿಲ್ಲೆಯಲ್ಲಿದೆ. ರಮಣೀಯ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಇದು ಹಾಸನದ ಒಂದು ಸಣ್ಣ ಪಟ್ಟಣವಾಗಿದ್ದು, ಹೊಯ್ಸಳ ಸಾಮ್ರಾಜ್ಯದ ರಾಜರಾಜಧಾನಿಯಾಗಿತ್ತು. ಈ ಸ್ಥಳವು ತನ್ನ ಭವ್ಯವಾದ ದೇವಾಲಯಗಳಿಗೆ ಹೆಸರುವಾಸಿಯಾಗಿರುವುದರಿಂದ ಪ್ರತಿವರ್ಷ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಬೇಲೂರಿನಿಂದ ಕೇವಲ 17 ಕಿ.ಮೀ. ದೂರದಲ್ಲಿರುವ ಹೊಯ್ಸಳರ ಪ್ರಾಚೀನ ರಾಜಧಾನಿ ಹಳೇಬೀಡು. ಕ್ರಿ.ಶ 1121 ರಲ್ಲಿ ನಿರ್ಮಿಸಲಾದ ಹೊಯ್ಸಳೇಶ್ವರ ಮತ್ತು ಕೇದಾರೇಶ್ವರದ ಸುಂದರವಾದ ಹೊಯ್ಸಳ ದೇವಾಲಯಗಳಿಗೆ ಇದು ಹೆಸರುವಾಸಿಯಾಗಿದೆ. ಲೋಹದಂತಹ ಹೊಳಪು ಹೊಂದಿರುವ ಸೂಕ್ಷ್ಮ ಮತ್ತು ಸಂಕೀರ್ಣವಾದ ಕೆತ್ತನೆಗಳು ಪ್ರವಾಸಿಗರನ್ನು ಮಂತ್ರಮುಗ್ಧರಾಗುವಂತೆ ಮಾಡುತ್ತದೆ.


ಕುದುರೆಮುಖ (Kudremukh)

ಕರ್ನಾಟಕದ ಕುದುರೆಮುಖ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಒಂದು ಪರ್ವತ ಶ್ರೇಣಿ. ಇದು ಮಲಬಾರ್ ಟ್ರೋಗನ್, ಮಲಬಾರ್ ಶಿಳ್ಳೆ ಥ್ರಷ್ ಮತ್ತು ಸಾಮ್ರಾಜ್ಯಶಾಹಿ ಪಾರಿವಾಳದಂತಹ ವಿವಿಧ ಪಕ್ಷಿಗಳಿಗೆ ನೆಲೆಯಾಗಿದೆ. ಉಷ್ಣವಲಯದ ಜೈವಿಕ ಶ್ರೀಮಂತಿಕೆಯಿಂದಾಗಿ ಈ ಸ್ಥಳವನ್ನು ವಿಶ್ವದ 34 ಜೈವಿಕ ಹಾಟ್‌ಸ್ಪಾಟ್‌ಗಳಲ್ಲಿ ಒಂದೆಂದು ಘೋಷಿಸಲಾಗಿದೆ.

ಪರ್ವತದ ಬದಿಯು ಕುದುರೆಯ ಮುಖದ ಆಕಾರವನ್ನು ಹೋಲುವುದರಿಂದ ಇಲ್ಲಿಗೆ ಕುದುರೆಮುಖ ಎಂದು ಹೆಸರಾಗಿದೆ. ಈ ಶಿಖರವು ಸಂಸೆಗೆ ಹತ್ತಿರವಾಗಿರುವುದರಿಂದ ಐತಿಹಾಸಿಕ ಪುಟಗಳಲ್ಲಿ ‘ಸಂಸೆಪರ್ವತ’ ಎಂದೂ ಕರೆಯಲಾಗಿದೆ.


ಖಜ್ಜಿಯಾರ್ (Khajjiar)

ಖಜ್ಜಿಯಾರ್ ಹಿಮಾಚಲ ಪ್ರದೇಶದಲ್ಲಿ ಒಂದು ಗುಪ್ತ ರತ್ನವಾಗಿದೆ. ಇದು ಚಂಬಾ ಕಣಿವೆಯಲ್ಲಿರುವ ದೇವದಾರು-ಹೊದಿಕೆಯ ತಟ್ಟೆ-ಆಕಾರದ ಹಿಮಾಲಯನ್ ಪಟ್ಟಣವಾಗಿದೆ. ಸುಂದರ ಪರಿಸರಗಳು, ದಟ್ಟಣೆಯ ಹಸಿರು ಮತ್ತು ಸಾಹಸಗಳಿಗಾಗಿ ಜನಪ್ರಿಯ ಸ್ಥಳ ಇದಾಗಿದೆ.

ಖಜ್ಜಿಯಾರ್ ಅನ್ನು ಭಾರತದ ಮಿನಿ ಸ್ವಿಟ್ಜರ್ಲೆಂಡ್ ಎಂದು ಕರೆಯಲಾಗುತ್ತದೆ. ದಟ್ಟವಾದ ಪೈನ್ ಕಾಡುಗಳು, ಸೊಂಪಾದ ಹುಲ್ಲುಗಾವಲುಗಳು ಮತ್ತು ಹಿಮದಿಂದ ಆವೃತವಾದ ಪರ್ವತಗಳಿಂದ ಆವೃತವಾಗಿರುವ ಖಜ್ಜಿಯಾರ್ ಪ್ರತಿಯೊಬ್ಬ ಪ್ರವಾಸಿಗನು ಇಷ್ಟಪಡುವಂತಿದೆ.


ತವಾಂಗ್ (Tawang)

ತವಾಂಗ್ ಅರುಣಾಚಲ ಪ್ರದೇಶದ ಪಶ್ಚಿಮ ಭಾಗದಲ್ಲಿದ್ದು ಟಿಬೆಟ್‌ನ ಲಾಸಾದ ಹೊರಗೆ ವಿಶ್ವದ ಅತಿದೊಡ್ಡ ಬೌದ್ಧ ಮಠ ಎಂದು ಕರೆಯಲಾಗುತ್ತದೆ. 10,000 ಅಡಿ ಎತ್ತರದಲ್ಲಿರುವ ತವಾಂಗ್ 400 ವರ್ಷಗಳಷ್ಟು ಹಳೆಯದಾದ ಬೌದ್ಧ ಮಠಕ್ಕೆ ವಿಶ್ವ ಪ್ರಸಿದ್ಧವಾಗಿದೆ. ಐದನೇ ದಲೈ ಲಾಮಾ ಅವರ ಸಮಕಾಲೀನರಾದ ಸನ್ಯಾಸಿ ಮೇರಾ ಲಾಮಾ ಅವರು ಇಲ್ಲಿ ಮಠವನ್ನು ಸ್ಥಾಪಿಸಿದರು. ಆರನೇ ದಲೈ ಲಾಮಾ ಇಲ್ಲಿ ಜನಿಸಿದ್ದರು. ಪಟ್ಟಣದ ಹೃದಯಭಾಗದಿಂದ ಸುಮಾರು 2 ಕಿ.ಮೀ. ದೂರದಲ್ಲಿ ಇದು ನೆಲೆಯಾಗಿದೆ.

Continue Reading

ಪ್ರವಾಸ

Special Food In Kashi: ನೀವು ಕಾಶಿಗೆ ಹೋದರೆ ಈ ತಿಂಡಿಗಳ ರುಚಿ ನೋಡಲು ಮರೆಯದಿರಿ!

ಕಾಶಿಗೆ ಹೋದರೆ ದರ್ಶನ, ಗಂಗಾತೀರ, ಗಂಗಾರತಿ, ಮಣಿಕರ್ಣಿಕಾ, ಕಾಳಭೈರವ ಮತ್ತಿತರ ದರ್ಶನ ಮಾತ್ರವಲ್ಲ, ಕಾಶಿಯ ಜೀವನಶೈಲಿ, ಊಟ ಇತ್ಯಾದಿಗಳ ದರ್ಶನವನ್ನೂ ಮಾಡಬೇಕು. ಕಾಶಿಯೊಳಗೆ ಹೊಕ್ಕರೆ ಸಾಕು, ಆಹಾರ ಪ್ರಿಯರಿಗೆ ನೆಮ್ಮದಿ ನೀಡುವ ನಾಳಿಗೆ ಚಪ್ಪರಿಸುವ ಸಾಕಷ್ಟು ಜಾಗಗಳಿವೆ. ಬಗೆಬಗೆಯ ಖಾದ್ಯಗಳೂ, ವಾರಣಾಸಿಯಲ್ಲಿ ಮಾತ್ರ ದಕ್ಕುವ ಆಹಾರ ವೈವಿಧ್ಯಗಳೂ ಇವೆ. ಈ ಕುರಿತ ಮಾಹಿತಿ (Special Food In Kashi) ಇಲ್ಲಿದೆ.

VISTARANEWS.COM


on

Special Food In Kashi
Koo

ಕಾಶಿ ಅಥವಾ ವಾರಣಾಸಿಗೆ ಜೀವನದಲ್ಲೊಮ್ಮೆಯಾದರೂ ಹೋಗಬೇಕು, ಕಾಶಿ ವಿಶ್ವನಾಥನ ದರ್ಶನ ಮಾಡಬೇಕು. ಗಂಗೆಯನ್ನು ಕಂಡು ಕೈಮುಗಿದು ಮುಳುಗೆದ್ದು ಗಂಗಾರತಿಯನ್ನು ನೋಡಿ ಈ ಬದುಕು ಧನ್ಯ ಎಂದು ನೆಮ್ಮದಿ ಪಡೆಯಬೇಕು ಎಂಬುದು ಬಹುತೇಕ ಹಿಂದೂಗಳ ಜೀವಿತಾವಧಿಯ ಕನಸು. ಹಿಂದೆಲ್ಲ ಕಾಶಿಗೆ ಹೋಗುವುದೇ ಜೀವಿತಾವಧಿಯ ಅತ್ಯುನ್ನತವಾದ ದೊಡ್ಡ ಕನಸು. ಬಹಳ ದೂರ ಎಂಬ ಕಾರಣದಿಂದ ಹಿಡಿದು ಬದುಕಿನ ಜಂಜಡಗಳನ್ನೆಲ್ಲ ಮುಗಿಸಿದ ಮೇಲೆ ವೃದ್ಧಾಪ್ಯ ಸಮೀಪಿಸುವ ಹೊತ್ತಿಗೆ ಕಾಶಿಗೊಮ್ಮೆ ಹೇಗಾದರೂ ಮಾಡಿ ಹೋಗಿ ನೋಡಿ ಪ್ರಾಣ ಬಿಡುತ್ತೇನೆ ಎಂಬ ಸ್ಥಿತಿ ಹಲವರದ್ದಾಗಿತ್ತು. ಆದರೆ ಇಂದು ಕಾಲ ಬದಲಾಗಿದೆ. ಜಗತ್ತು ಬದಲಾಗಿದೆ. ಕಾಶಿಯನ್ನು ನೋಡಲು ವೃದಾಪ್ಯದವರೆಗೆ ಕಾಯುವ ತಾಳ್ಮೆ ಯಾರಿಗೂ ಇಲ್ಲ. ಅಂದುಕೊಂಡ ತಕ್ಷಣ ವಿಮಾನದಲ್ಲೋ, ರೈಲಿನಲ್ಲೋ ಯುವಜನರೂ ಕೂಡಾ ಕಾಶಿಗೆ ಹೋಗಿ ಧನ್ಯರಾಗುತ್ತಿದ್ದಾರೆ. ಕಳೆದೊಂದು ದಶಕದಲ್ಲಿ ಕಾಶಿಯ ವಿಶ್ವನಾಥನನ್ನು ಕಣ್ತುಂಬಿಕೊಳ್ಳಲು ಬರುವ ಪ್ರವಾಸಿಗರಷ್ಟೇ ಅಲ್ಲ, ಯುವಜನರ ಸಂಖ್ಯೆಯಲ್ಲಿಯೂ ಭಾರೀ ಏರಿಕೆಯಾಗಿದೆ.
ಆದರೆ, ಕಾಶಿಗೆ ಹೋದರೆ ದರ್ಶನ, ಗಂಗಾತೀರ, ಗಂಗಾರತಿ, ಮಣಿಕರ್ಣಿಕಾ, ಕಾಳಭೈರವ ಮತ್ತಿತರ ದರ್ಶನ ಮಾತ್ರವಲ್ಲ, ಕಾಶಿಯ ಜೀವನಶೈಲಿ, ಊಟ ಇತ್ಯಾದಿಗಳ ದರ್ಶನವನ್ನೂ ಮಾಡಬೇಕು. ಕಾಶಿಯೊಳಗೆ ಹೊಕ್ಕರೆ ಸಾಕು, ಆಹಾರ ಪ್ರಿಯರಿಗೆ ನೆಮ್ಮದಿ ನೀಡುವ ನಾಳಿಗೆ ಚಪ್ಪರಿಸುವ ಸಾಕಷ್ಟು ಜಾಗಗಳಿವೆ. ಬಗೆಬಗೆಯ ಖಾದ್ಯಗಳೂ, ವಾರಣಾಸಿಯಲ್ಲಿ ಮಾತ್ರ ದಕ್ಕುವ ಆಹಾರ ವೈವಿಧ್ಯಗಳೂ ಇವೆ. ಬನ್ನಿ, ಕಾಶಿಯ ಗಲ್ಲಿಗಳಲ್ಲೊಮ್ಮೆ ಸುತ್ತಾಡಿ, ಇಲ್ಲಿ ಬಂದರೆ ತಿನ್ನಲೇಬೇಕಾದ ತಿನಿಸುಗಳು ಯಾವುವು ಎಂಬುದನ್ನು ನೋಡಿಕೊಂಡು (Special Food In Kashi) ಬರೋಣ.

Kachodi Subji

ಕಚೋಡಿ ಸಬ್ಜಿ

ಕಾಶಿಯಲ್ಲಿ ನೀವು ಯಾವದೇ ಹೊಟೇಲಿನಲ್ಲಿ ಉಳಿದುಕೊಂಡರೂ, ತಿನ್ನಲೆಂದು ಕಾಶಿಯ ಯಾವುದೇ ಗಲ್ಲಿಗಿಳಿದರೂ ಸಾಕು ನಿಮ್ಮನ್ನು ಕಚೋಡಿ ಸಬ್ಜಿ ಸ್ವಾಗತಿಸುತ್ತದೆ. ಕಾಶಿಯ ಬೆಳಗ್ಗಿನ ಉಪಹಾರಗಳ ಪೈಕಿ ಕಚೋಡಿ ಸಬ್ಜಿ ಪ್ರಮುಖವಾದುದು. ಒಳಗಡೆ ಬೇಳೆಕಾಳುಗಳ ಹೂರಣ ಹಾಕಿ ವಡೆಯಂತೆ ತಟ್ಟಿ ಎಣ್ಣಿಯಲ್ಲಿ ಬೇಯಿಸಿ ಆಲೂಗಡ್ಡೆಯ ಸಬ್ಜಿಯೊಂದಗೆ ಅವರು ಸವಿಯಲು ಕೊಡುವ ಕಚೋಡಿಯು ಆಹಾ ಎಂಬ ರುಚಿ. ವೃದ್ಧರಿಂದ ಮಕ್ಕಳವರೆಗೆ ಎಲ್ಲರೂ ಸವಿದು ಚಪ್ಪರಿಸುವ ಈ ಬೆಳಗಿನ ತಿಂಡಿಯನ್ನು ಕಾಶಿಯಲ್ಲಿದ್ದಾಗ ತಿನ್ನದೇ ಇದ್ದರೆ ಏನೋ ಕಳೆದುಕೊಂಡಂತೆ.

Tomato chaat

ಟಮಾಟರ್‌ ಚಾಟ್‌

ಕಾಶಿಯ ಜನಪ್ರಿಯ ಚಾಟ್‌ ಎಂದರೆ ಟಮಾಟರ್‌ ಚಾಟ್‌. ಇಲ್ಲಿನ ಸ್ಥಳೀಯರೂ, ಇಲ್ಲಿಗೆ ಬರುವ ಪ್ರವಾಸಿಗರೂ ಇಷ್ಟಪಟ್ಟು ತಿನ್ನುವ ಚಾಟ್‌ ಇದು. ಗೋಲ್‌ಗಪ್ಪ, ಸೇವ್‌ಪುರಿ, ದಹಿ ಪುರಿ, ಟಿಕ್ಕಿ ಚಾಟ್‌ ಮತ್ತಿತರ ಚಾಟ್‌ಗಳು ಎಲ್ಲೆಡೆಯೂ ದೊರೆತರೂ, ಈ ಟಮಾಟರ್‌ ಚಾಟ್‌ ಮಾತ್ರ ಕಾಶಿಯ ಸ್ಪೆಷಲ್‌. ಇಲ್ಲಿ ಟಮಾಟರ್‌ ಚಾಟ್‌ನ ರುಚಿ ಜೀವನದಲ್ಲೊಮ್ಮೆಯಾದರೂ ನೋಡಬೇಕು ಎನ್ನುತ್ತಾರೆ ಚಾಟ್‌ ಪ್ರಿಯರು.

malaiyo sweet

ಮಲೈಯೋ

ಬಾಯಿಗಿಟ್ಟರೆ ಕರಗುವ ಹಾಲಿನ ಕೆನೆಯಿಂದಲೇ ಮಾಡುವ ಈ ಸಿಹಿತಿನಿಸು ಐಸ್‌ಕ್ರೀಮಿನಂತೆ. ಆಹಾ ಎನ್ನುವ ರುಚಿಯ, ಕೇಸರಿಯ ಘಮದ ತಿನಿಸು. ಕೇವಲ ಚಳಿಗಾಲದಲ್ಲಿ ಮಾತ್ರ ಲಭ್ಯವಿರುವ ಈ ತಿನಿಸು, ಚಳಿಗಾಲದಲ್ಲಿ ರಸ್ತೆಬದಿಯಲ್ಲಿ ಮಾರಾಟ ಮಾಡುತ್ತಾರೆ ಕೂಡ.

Rabdi Jalebi

ರಬ್ಡಿ ಜಿಲೇಬಿ

ರಬ್ಡೀ ಜೊತೆಗೆ ಜೀಲೇಬಿ ಸೇರಿಸಿ ತಿನ್ನುವ ಮಜಾವೇ ಬೇರೆ. ಹಾಲಿನಿಂದ ಮಾಡುವ ರಬ್ಡೀ ಎಂಬ ಸಿಹಿತಿನಿಸನ್ನು ಹಾಗೆಯೇ ತಿನ್ನಬಹುದಾದರೂ, ಬಿಸಿಬಿಸಿ ಜಿಲೇಬಿ ಜೊತೆಗೆ ಚಳಿಚಳಿಯಾಗ ರಬ್ಡೀ ಸುರಿದು ತಿಂದರೇನೇ ರುಚಿ.

Banarasi Paan

ಬನಾರಸಿ ಪಾನ್‌

ಭರ್ಜರಿ ಊಟವೊಂದನ್ನು ಉಂಡ ಮೇಲೆ ಒಂದು ಪಾನ್‌ ಹಾಕಿ ಬಾಯಿ ಚಪ್ಪರಿಸದಿದ್ದರೆ ಊಟ ಉಂಡಂತಾಗದು. ಕಾಶೀಯ ಪಾನ್‌ನ ರುಚಿಯನ್ನು ವರ್ಣಿಸಿ ಬರೆಯದ ಕವಿತೆಗಳಿಲ್ಲ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಹೀಗಿರುವಾಗ ಕಾಶಿಗೆ ಹೋಗಿ ಕವಳ ಹಾಕದಿದ್ದರೆ ಅದು ವ್ಯರ್ಥ ಜೀವನವೇ ಸರಿ.

Banarasi Lassi

ಲಸ್ಸೀ

ಲಸ್ಸಿಯ ನಿಜವಾದ ರುಚಿಯನ್ನು ಸವಿಯಬೇಕೆಂದಿದ್ದರೆ ಕಾಶಿಗೆ ಹೋಗಬೇಕು. ದಪ್ಪ ಮೊಸರಿನಿಂದ ಮಾಡಿದ ಈ ಲಸ್ಸಿಯ ಮೇಲೆ ಕೆನೆಯನ್ನೂ ಹಾಕಿ ಮಣ್ಣಿನ ಕಪ್‌ಗಳಲ್ಲಿ ನೀಡಿದರೆ, ಹೊಟ್ಟೆಗೂ ಮನಸ್ಸಿಗೂ ತಂಪು. ಕಾಶಿ ಗಲ್ಲಿಗಳಲ್ಲೆಲ್ಲ ಸುತ್ತಾಡಿ ಸುಸ್ತಾದ ಮೇಲೆ ಒಂದು ಲಸ್ಸಿ ಕುಡಿದರೆ ಸುಸ್ತೆಲ್ಲ ಮಾಯ!

ಇದನ್ನೂ ಓದಿ: Baking Powder: ಬೇಕಿಂಗ್‌ ಪುಡಿ ಹುಟ್ಟಿದ ಕತೆ ಕುತೂಹಲಕರ! ಅಡುಗೆ ಮಾಡುವ ಮೊದಲು ಇದರ ಹಿನ್ನೆಲೆ ಗೊತ್ತಿರಲಿ

Continue Reading
Advertisement
Swiggy fined
ಬೆಂಗಳೂರು5 hours ago

Swiggy fined: ಐಸ್‌ ಕ್ರೀಂ ಡೆಲಿವರಿ ಮಾಡಲು ವಿಫಲ; ಸ್ವಿಗ್ಗಿಗೆ 5000 ರೂ. ದಂಡ ವಿಧಿಸಿದ ಕೋರ್ಟ್!

Vistara Editorial
ಪ್ರಮುಖ ಸುದ್ದಿ5 hours ago

ವಿಸ್ತಾರ ಸಂಪಾದಕೀಯ: ಭಾರತದ ಉತ್ಪನ್ನಗಳ ರಫ್ತಿಗೆ ಕುಖ್ಯಾತಿ ಅಂಟದಿರಲಿ

ಕರ್ನಾಟಕ5 hours ago

Modi in Karnataka: ಬೆಳಗಾವಿ ಹೋಟೆಲ್‌ನಲ್ಲಿ 36 ಬಗೆಯ ಭಕ್ಷ್ಯ ಭೋಜನ ಇದ್ರೂ ಎಳನೀರು ಮಾತ್ರ ಸೇವಿಸಿದ ಮೋದಿ!

IPL 2024
ಪ್ರಮುಖ ಸುದ್ದಿ5 hours ago

IPL 2024 : ಲಕ್ನೊ ವಿರುದ್ಧ ರಾಜಸ್ಥಾನ್​ಗೆ 7 ವಿಕೆಟ್​ ಭರ್ಜರಿ ಜಯ, ಪ್ಲೇಆಫ್​ ಹೊಸ್ತಿಲಲ್ಲಿ ಸಂಜು ಬಳಗ

CBI Raid
ದೇಶ5 hours ago

CBI Raid: ಸಂದೇಶ್‌ಖಾಲಿ ಟಿಎಂಸಿ ನಾಯಕನ ಆಪ್ತನ ಮನೆಯಿಂದ ವಶಪಡಿಸಿಕೊಂಡ ಶಸ್ತ್ರಾಸ್ತ್ರದ ಮೂಲ ಪತ್ತೆ

Hassan Pen Drive Case
ಪ್ರಮುಖ ಸುದ್ದಿ5 hours ago

Hassan Pen Drive Case: ಎಸ್‌ಐಟಿ ತನಿಖೆ ಆದೇಶಕ್ಕೂ ಮುನ್ನವೇ ವಿದೇಶಕ್ಕೆ ತೆರಳಿದ ಪ್ರಜ್ವಲ್ ರೇವಣ್ಣ!

KL Rahul
ಕ್ರಿಕೆಟ್6 hours ago

KL Rahul : ಐಪಿಎಲ್​ನಲ್ಲಿ ಆರಂಭಿಕನಾಗಿ 4000 ರನ್ ಪೂರೈಸಿದ ಕೆಎಲ್ ರಾಹುಲ್; ಈ ಪಟ್ಟಿಯಲ್ಲಿ ಯಾರೆಲ್ಲ ಇದ್ದಾರೆ?

Modi in Karnataka
ಪ್ರಮುಖ ಸುದ್ದಿ6 hours ago

Modi in Karnataka: ಬೆಳಗಾವಿಗೆ ಆಗಮಿಸಿದ ಪ್ರಧಾನಿ‌ ಮೋದಿ; ಐಟಿಸಿ ವೆಲ್‌ಕಮ್‌ ಹೋಟೆಲ್‌ನಲ್ಲಿ ವಾಸ್ತವ್ಯ

Hasan pen drive case
ಹಾಸನ6 hours ago

Hassan Pen Drive Case: ಪ್ರಜ್ವಲ್ ರೇವಣ್ಣ ಸೆಕ್ಸ್ ಹಗರಣ ಆರೋಪ​; ಎಸ್​​ಐಟಿ ತನಿಖೆಗೆ ಸಿದ್ದರಾಮಯ್ಯ ಆದೇಶ

Air Force Chopper
ದೇಶ7 hours ago

Air Force Chopper: ಉತ್ತರಾಖಂಡದಲ್ಲಿ ಕಾಡಿನ ಬೆಂಕಿ ನಂದಿಸಲು ವಾಯು ಪಡೆಯ ಹೆಲಿಕಾಪ್ಟರ್‌ ಬಳಕೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok sabha election 2024
Lok Sabha Election 202412 hours ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

road Accident in kolar evm
ಕೋಲಾರ17 hours ago

Road Accident : ಇವಿಎಂ ಸಾಗಿಸುವಾಗ ವಾಹನದ ಟೈರ್‌ ಸ್ಫೋಟ; ರೋಡ್‌ನಲ್ಲೇ ರಿಪೇರಿ, ಮೊಕ್ಕಾಂ ಹೂಡಿದ ಪೊಲೀಸರು

Dina Bhavishya
ಭವಿಷ್ಯ24 hours ago

Dina Bhavishya : ಈ ದಿನ ನಿಮ್ಮ ಪ್ರೀತಿಯ ಕನಸು ನನಸಾಗುವ ಸುದಿನ

Lok Sabha Election 2024 congress booth agent allegation for Fake voting in Hassan Lok Sabha constituency
ಹಾಸನ2 days ago

Lok Sabha Election 2024: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ! ಏನಿದು ಕಾಂಗ್ರೆಸ್‌ ಬೂತ್‌ ಏಜೆಂಟ್‌ ಆರೋಪ?

Lok Sabha Election 2024 Woman suffers cardiac arrest at polling booth Doctor who came to cast his vote saved life
Lok Sabha Election 20242 days ago

Lok Sabha Election 2024: ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ; ಮತ ಹಾಕಲು ಬಂದಿದ್ದ ವೈದ್ಯನಿಂದ ಪ್ರಾಣ ರಕ್ಷಣೆ

Lok Sabha Election 2024 Youth Congress protest
Lok Sabha Election 20242 days ago

Lok Sabha Election 2024 : ಮತಗಟ್ಟೆ ಬಳಿ ಚೆಂಬು, ಗ್ಯಾಸ್ ಸಿಲಿಂಡರ್ ಪ್ರದರ್ಶಿಸಿದ ಯೂತ್‌ ಕಾಂಗ್ರೆಸ್‌

Dina bhavishya
ಭವಿಷ್ಯ2 days ago

Dina Bhavishya : ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರ

Neha Murder Case in hubblli
ಹುಬ್ಬಳ್ಳಿ3 days ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ3 days ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

Neha Murder case CID Officer
ಹುಬ್ಬಳ್ಳಿ3 days ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

ಟ್ರೆಂಡಿಂಗ್‌