Viral Video: ನೂರಾರು ಮೊಸಳೆಗಳ ಮೇಲೇ ಸಾಗುವ ದೋಣಿ! ಮೈ ಝುಂ ಎನ್ನಿಸುವ ವಿಡಿಯೊ - Vistara News

ವೈರಲ್ ನ್ಯೂಸ್

Viral Video: ನೂರಾರು ಮೊಸಳೆಗಳ ಮೇಲೇ ಸಾಗುವ ದೋಣಿ! ಮೈ ಝುಂ ಎನ್ನಿಸುವ ವಿಡಿಯೊ

ನೂರಾರು ಮೊಸಳೆಗಳಿರುವ ನದಿಯಲ್ಲಿ ದೋಣಿ ಸಂಚರಿಸುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವೈರಲ್‌ (Viral Video) ಆಗಿದೆ.

VISTARANEWS.COM


on

more than 100 crocodiles in river
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನದಿಯೊಂದರಲ್ಲಿ ದೋಣಿ ವಿಹಾರ ಮಾಡುತ್ತಿದ್ದೀರಿ ಎಂದುಕೊಳ್ಳಿ. ಆಗ ಇದ್ದಕ್ಕಿದ್ದಂತೆ ಒಂದು ಮೊಸಳೆ ನೀರಿನಲ್ಲಿ ಕಾಣಿಸಿಕೊಂಡರೆ ಏನಾಗುತ್ತದೆ. ಭಯದಿಂದ ಜೀವವೇ ಹೋದಂತಾಗುತ್ತದೆಯಲ್ಲವೇ? ಆದರೆ ಇಲ್ಲೊಂದು ವಿಡಿಯೊದಲ್ಲಿ ದೋಣಿ ವಿಹಾರ ಮಾಡುವವರು ಒಂದಲ್ಲ, ಎರಡಲ್ಲ, ನೂರಾರು ಮೊಸಳೆಗಳ ಮೇಲೇ ದೋಣಿ ವಿಹಾರ ಮಾಡಿದ್ದಾರೆ. ದಾಳಿ ಮಾಡುವ ಬದಲು ಮೊಸಳೆಗಳು ಹೆದರಿ ಓಡಿ ಹೋಗಿವೆ. ಎಂತವರಿಗೂ ಭಯ ತರಿಸುವ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಭಾರೀ ವೈರಲ್‌ (Viral Video) ಆಗಿದೆ.

ಸಣ್ಣದೊಂದು ನದಿಯಲ್ಲಿ ಮೋಟಾರ್‌ ಚಾಲಿತ ದೋಣಿ ಸಾಗುತ್ತಿದೆ. ಆ ನದಿಯಲ್ಲಿ ನೂರಾರು ಮೊಸಳೆಗಳು ಗುಂಪು ಗುಂಪಾಗಿವೆ. ದೋಣಿ ಮೋಟಾರ್‌ ಸದ್ದು ಮಾಡುತ್ತಾ ಹೋದಂತೆ ಮೊಸಳೆಗಳು ಆ ಸದ್ದಿಗೆ ಹೆದರಿ ನದಿ ದಡ ಹತ್ತುತ್ತವೆ. ದೋಣಿಯಲ್ಲಿರುವ ವ್ಯಕ್ತಿ ಯಾವುದೋ ಭಾಷೆಯಲ್ಲಿ ಏನೋ ಮಾತನಾಡುತ್ತಾ ಅರಾಮವಾಗಿ ಸಾಗುತ್ತದೆ. ಚೂರೂ ಭಯವಿಲ್ಲದೆ ಈ ರೀತಿ ಮೊಸಳೆಗಳ ಮೇಲೇ ದೋಣಿಯನ್ನು ಸಾಗಿಸುವ ವಿಡಿಯೊವನ್ನು ಸೆರೆ ಹಿಡಿಯಲಾಗಿದ್ದು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Viral video : ಊರಿನವರ ಎದುರೇ ಯುವಕನ ಕೆನ್ನೆಗೆ ಚಪ್ಪಲಿಯಲ್ಲಿ ಬಾರಿಸಿದ ಯುವತಿ! ಮುಂದೇನಾಯ್ತು?

ಈ ವಿಡಿಯೊವನ್ನು ಸಿಸಿಟಿವಿ ಈಡಿಯಟ್ಸ್‌ ಹೆಸರಿನ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಕೇವಲ 39 ಸೆಕೆಂಡುಗಳಷ್ಟು ಕಾಲವಿರುವ ಈ ವಿಡಿಯೊದಲ್ಲಿ ನೀವು ನೂರಾರು ಮೊಸಳೆಗಳನ್ನು ನೋಡಬಹುದು. ಈ ವಿಡಿಯೊ ಯಾವ ದೇಶದಲ್ಲಿ, ಯಾವಾಗ ಸೆರೆ ಹಿಡಿದಿರುವುದು ಎನ್ನುವುದರ ಬಗ್ಗೆ ಮಾಹಿತಿಯಿಲ್ಲ. ಈ ಹಿಂದೆ ಕೂಡ ಒಮ್ಮೆ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ, ವೈರಲ್‌ ಆಗಿತ್ತು.


ಸಿಸಿಟಿವಿ ಈಡಿಯಟ್ಸ್‌ ಟ್ವಿಟರ್‌ ಖಾತೆಯವರು ಈ ವಿಡಿಯೊವನ್ನು ಆಗಸ್ಟ್‌ 16ರಂದು ಹಂಚಿಕೊಂಡಿದ್ದಾರೆ. “ಭಯಾನಕ ನದಿಯಲ್ಲಿ ದೋಣಿ ಸಾಗುವುದು” ಎಂದು ವಿಡಿಯೊಗೆ ಕ್ಯಾಪ್ಶನ್‌ ಕೊಡಲಾಗಿದೆ. ಅಂದಿನಿಂದ ಇಂದಿನವರೆಗೆ ವಿಡಿಯೊ ಸುಮಾರು 9.9 ಲಕ್ಷ ಮಂದಿಯಿಂದ ವೀಕ್ಷಣೆಗೊಂಡಿದೆ. 11 ಸಾವಿರಕ್ಕೂ ಅಧಿಕ ಮಂದಿ ವಿಡಿಯೊಗೆ ಲೈಕ್‌ ಮಾಡಿದ್ದಾರೆ. 1200ಕ್ಕೂ ಅಧಿಕ ಮಂದಿ ವಿಡಿಯೊವನ್ನು ತಮ್ಮ ವಾಲ್‌ಗಳಿಗೆ ರಿಟ್ವೀಟ್‌ ಮಾಡಿಕೊಂಡಿದ್ದಾರೆ. ನೂರಾರು ಜನರು ವಿಡಿಯೊ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್‌ ಮೂಲಕ ತಿಳಿಸಿದ್ದಾರೆ.

ಇದನ್ನೂ ಓದಿ: Viral Video: ಇಲ್ಲಿದೆ ನೋಡಿ ಜಗತ್ತಿನ ಅತಿ ಸಂತೋಷದ ನಾಯಿ! ಅಬ್ಬಬ್ಬಾ, ಎಷ್ಟು ಚೆಂದವಿದೆ ಈ ವಿಡಿಯೊಗಳು

“ಅಲ್ಲಿ ಎಷ್ಟು ಮೊಸಳೆಗಳಿವೆ? ಅವುಗಳನ್ನು ಲೆಕ್ಕ ಹಾಕುವ ಧೈರ್ಯ ಯಾರಿಗಾದರೂ ಇದಿಯಾ?”, “ಒಂದು ವೇಳೆ ಆ ನದಿಯೊಳಗೆ ನಾವು ಬಿದ್ದರೆ ನಮ್ಮ ಸ್ಥಿತಿ ಏನಾಗಬಹುದು?”, “ಇದು ಎಲ್ಲಿ ಚಿತ್ರೀಕರಿಸಿರುವ ವಿಡಿಯೊ?”, “ಯಾವ ನದಿಯಲ್ಲಿ ಇಷ್ಟೊಂದು ಮೊಸಳೆಗಳಿರುವುದು?” ಎನ್ನುವಂತಹ ಕಾಮೆಂಟ್‌ಗಳು ವಿಡಿಯೊಗೆ ಬಂದಿವೆ.


ಇತ್ತೀಚೆಗೆ ಮೊಸಳೆಯ ಮತ್ತೊಂದು ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ, ವೈರಲ್‌ ಆಗಿತ್ತು. ಒಡಿಶಾದಲ್ಲಿ ಮೊಸಳೆಯೊಂದು ನದಿ ದಡದಲ್ಲಿದ್ದ ಮಹಿಳೆಯನ್ನು ಎಳೆದುಕೊಂಡು ಹೋಗಿ ತಿಂದಿದ್ದ ದೃಶ್ಯ ಆ ವಿಡಿಯೊದಲ್ಲಿತ್ತು. ಭಯಾನಕವಾಗಿದ್ದ ಆ ವಿಡಿಯೊವನ್ನು ಕಂಡ ಜನರು ಕಂಗಾಲಾಗಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ವಿದೇಶ

Jai Shri Ram Slogan: ಪ್ಯಾಲೆಸ್ತೇನ್ ವಿರುದ್ಧ ಜೈಶ್ರೀರಾಮ್ ಘೋಷಣೆ ಕೂಗಿದ ಇಸ್ರೇಲ್ ಬೆಂಬಲಿಗರು!

Jai Shri Ram Slogan: ಅಮೆರಿಕದ ವಿವಿಧ ಕ್ಯಾಂಪಸ್‌ಗಳಲ್ಲಿ ನಡೆಯುತ್ತಿರುವ ಪ್ಯಾಲೆಸ್ತೀನ್‌ ಪರ ಪ್ರತಿಭಟನೆಗಳು ವ್ಯಾಪಕ ಚರ್ಚೆಯನ್ನೇ ಹುಟ್ಟು ಹಾಕಿವೆ. ಈ ಮಧ್ಯೆ ಇದಕ್ಕೆ ವಿರುದ್ಧವಾಗಿ ಲಾಸ್ ಏಂಜಲೀಸ್‌ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಇಸ್ರೇಲ್ ಬೆಂಬಲಿಗರು ಮೆರವಣಿಗೆ ನಡೆಸಿದ್ದಾರೆ. ಈ ಮೆರವಣಿಗೆಯಲ್ಲಿ ಇಸ್ರೇಲ್ ಬೆಂಬಲಿಗರು ಜೈ ಶ್ರೀ ರಾಮ್ ಎಂಬ ಘೋಷಣೆ ಕೂಗಿದ್ದಾರೆ. ಭಗವಾನ್ ರಾಮನಿಗೆ ಸಂಬಂಧಿಸಿದ ಈ ಘೋಷಣೆಯನ್ನು ಭಾರತ-ವಿರೋಧಿಗಳಿಗೆ ಪ್ರತಿಕ್ರಿಯೆಯಾಗಿ ಅಮೆರಿದಲ್ಲಿ ಬಳಸಲ್ಪಟ್ಟಿದ್ದು ವಿಶೇಷ.

VISTARANEWS.COM


on

Jai Shri Ram Slogan
Koo

ವಾಷಿಂಗ್ಟನ್‌: ಅಮೆರಿಕದ ವಿವಿಧ ಕ್ಯಾಂಪಸ್‌ಗಳಲ್ಲಿ ನಡೆಯುತ್ತಿರುವ ಪ್ಯಾಲೆಸ್ತೀನ್‌ ಪರ ಪ್ರತಿಭಟನೆಗಳು ವ್ಯಾಪಕ ಚರ್ಚೆಯನ್ನೇ ಹುಟ್ಟು ಹಾಕಿವೆ. ಈ ಮಧ್ಯೆ ಇದಕ್ಕೆ ವಿರುದ್ಧವಾಗಿ ಲಾಸ್ ಏಂಜಲೀಸ್‌ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ (UCLA) ಇಸ್ರೇಲ್ ಬೆಂಬಲಿಗರು ಮೆರವಣಿಗೆ ನಡೆಸಿದ್ದಾರೆ. ಈ ಮೆರವಣಿಗೆಯಲ್ಲಿ ಇಸ್ರೇಲ್ ಬೆಂಬಲಿಗರು ಜೈ ಶ್ರೀ ರಾಮ್ ಎಂಬ ಘೋಷಣೆ (Jai Shri Ram Slogan) ಕೂಗಿದ್ದಾರೆ.

ವಾರಾಂತ್ಯದಲ್ಲಿ ಯುಸಿಎಲ್ಎಯಲ್ಲಿ ಪ್ಯಾಲೆಸ್ತೀನ್‌ ಪರ ಮತ್ತು ಇಸ್ರೇಲ್ ಪರ ಪ್ರತಿಭಟನಾಕಾರರ ನಡುವಿನ ಘರ್ಷಣೆಗಳು ತೀವ್ರಗೊಂಡಿದ್ದವು. ಬ್ಲೂಮಿಂಗ್ಟನ್‌ನ ಇಂಡಿಯಾನಾ ವಿಶ್ವವಿದ್ಯಾಲಯ, ಅರಿಜೋನಾ ಸ್ಟೇಟ್ ಯೂನಿವರ್ಸಿಟಿ ಮತ್ತು ಸೇಂಟ್ ಲೂಯಿಸ್‌ನ ವಾಷಿಂಗ್ಟನ್ ವಿಶ್ವವಿದ್ಯಾಲಯದಂತಹ ಇತರ ಕ್ಯಾಂಪಸ್‌ಗಳಲ್ಲಿಯೂ ಇದೇ ರೀತಿಯ ದೃಶ್ಯಗಳನ್ನು ಕಂಡು ಬಂದಿವೆ. ಇನ್ನು ಯುಸಿಎಲ್ಎಯಲ್ಲಿ ಪರಿಸ್ಥಿತಿ ಗಂಭೀರ ಸ್ವರೂಪ ಪಡೆದುಕೊಂಡಿತ್ತು.

ಈ ಗೊಂದಲದ ಮಧ್ಯೆ ಅಮೆರಿಕದ ರಾಷ್ಟ್ರೀಯವಾದಿಯೊಬ್ಬರು “ಜೈ ಶ್ರೀ ರಾಮ್” ಎಂದು ಘೋಷಣೆ ಕೂಗುವ ಮೂಲಕ ಗಮನ ಸೆಳೆದಿದ್ದಾರೆ. ಸಾಮಾನ್ಯವಾಗಿ ಈ ಘೋಷಣೆಯನ್ನು ಭಾರತದಲ್ಲಿ ಹಿಂದುಗಳಿಗೆ ಸಂಬಂಧಿಸಿದ ಧಾರ್ಮಿಕ ಮೆರವಣಿಗೆ ಸಂದರ್ಭದಲ್ಲಿ ಕೂಗಲಾಗುತ್ತದೆ. ಭಗವಾನ್ ರಾಮನಿಗೆ ಸಂಬಂಧಿಸಿದ ಈ ಘೋಷಣೆಯನ್ನು ಭಾರತ-ವಿರೋಧಿಗಳಿಗೆ ಪ್ರತಿಕ್ರಿಯೆಯಾಗಿ ಅಮೆರಿದಲ್ಲಿ ಬಳಸಲ್ಪಟ್ಟಿದ್ದು ವಿಶೇಷ.

ಯುಸಿಎಲ್ಎಯ ಕಾರ್ಯತಂತ್ರದ ಸಂವಹನಗಳ ಉಪಕುಲಪತಿ ಮೇರಿ ಒಸಾಕೊ ಈ ಬಗ್ಗೆ ಮಾತನಾಡಿ, ʼʼಎರಡೂ ಕಡೆಯ ಪ್ರತಿಭಟನಾಕಾರರು ವಾಗ್ವಾದಗಳಲ್ಲಿ ತೊಡಗಿದ್ದರು. ಜತೆಗೆ ಘರ್ಷಣೆಯೂ ನಡೆಯಿತು. ಎರಡೂ ಕಡೆಯವರ ಘೋಷಣೆಗಳು ಮುಗಿಲು ಮುಟ್ಟಿದ್ದವುʼʼ ಎಂದು ವಿವರಿಸಿದ್ದಾರೆ. “ಯುಸಿಎಲ್ಎಯಲ್ಲಿ ಇದುವರೆಗೆ ಅನೇಕ ಶಾಂತಿಯುತ ಪ್ರತಿಭಟನೆ ನಡೆದಿದ್ದವು. ಆದರೆ ಇದೀಗ ಇಲ್ಲಿ ಭುಗಿಲೆದ್ದ ಹಿಂಸಾಚಾರ ತೀವ್ರ ನೋವುಂಟು ಮಾಡಿದೆʼʼ ಎಂದು ಹೇಳಿದ್ದಾರೆ.

ತೀವ್ರಗೊಂಡ ಪ್ರತಿಭಟನೆ

ಕಳೆದ ವಾರ ಅಮೆರಿಕದ ಕ್ಯಾಂಪಸ್‌ಗಳಲ್ಲಿ ವ್ಯಾಪಕವಾಗಿ ಪ್ಯಾಲೆಸ್ತೀನ್‌ ಪರ ಪ್ರತಿಭಟನೆಗಳು ನಡೆದವು. ಈ ಸಂಬಂಧ ಅನೇಕರನ್ನು ಬಂಧಿಸಲಾಗಿದೆ. ನ್ಯೂಯಾರ್ಕ್‌ನ ಕೊಲಂಬಿಯಾ ವಿಶ್ವವಿದ್ಯಾಲಯವೊಂದರಿಂದಲೇ 100ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ. ಯೇಲ್ ವಿಶ್ವವಿದ್ಯಾಲದಿಂದಲೂ ಅನೇಕರನ್ನು ವಶಕ್ಕೆ ಪಡೆಯಲಾಗಿದೆ. ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದಲೂ ಪ್ರತಿಭಟನಾಕಾರರನ್ನು ಸೆರೆ ಹಿಡಿಯಲಾಗಿದೆ. ಆಸ್ಟಿನ್‌ನಲ್ಲಿರುವ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿನ ಪ್ರತಿಭನಾಕಾರರನ್ನು ಬಲವಂತವಾಗಿ ಚದುರಿಸಲು ಪೊಲೀಸರು ಮಧ್ಯ ಪ್ರವೇಶಿಸಬೇಕಾಯಿತು.

ಪ್ಯಾಲೆಸ್ತೀನ್‌ ವಿರುದ್ಧ ನಡೆಸುತ್ತಿರುವ ಯುದ್ಧವನ್ನು ಇಸ್ರೇಲ್ ನಿಲ್ಲಿಸಬೇಕು. ಇಸ್ರೇಲ್‌ಗೆ ಅಮೆರಿಕದ ಮಿಲಿಟರಿ ಸಹಾಯವನ್ನು ಕೊನೆಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸುತ್ತಿದ್ದಾರೆ. ಈ ರೀತಿಯ ಪ್ರತಿಭಟನೆಗಳು ಶಿಕ್ಷಣಕ್ಕೆ ಅಡ್ಡಿಪಡಿಸುತ್ತವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹೆಚ್ಚುತ್ತಿರುವ ಪ್ರತಿಭಟನೆಗಳ ಮಧ್ಯೆ ಅಧ್ಯಕ್ಷ ಜೋ ಬೈಡನ್ ಈ ಪರಿಸ್ಥಿತಿಯ ಅವಲೋಕನ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Prakash Raj: ಕಾಶ್ಮೀರವನ್ನು ಪ್ಯಾಲೆಸ್ತೀನ್‌ಗೆ ಹೋಲಿಸಿದ ಪ್ರಕಾಶ್‌ ರಾಜ್;‌ ಕೆಂಡವಾದ ಜನ

“ಜೋ ಬೈಡನ್ ಶಾಂತಿಯುತ ಪ್ರತಿಭಟನೆಯನ್ನು ಗೌರವಿಸುತ್ತಾರೆ. ಜನರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಮತ್ತು ತಮ್ಮ ದೃಷ್ಟಿಕೋನಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರಬೇಕು ಎನ್ನುವುದು ಅವರ ಅಭಿಪ್ರಾಯ. ಆದರೆ ಅದು ಶಾಂತಿಯುತವಾಗಿರಬೇಕು. ಜತೆಗೆ ಯಹೂದಿ ವಿರೋಧಿ ಮತ್ತು ದ್ವೇಷ ಭಾಷಣವನ್ನು ಅವರು ಖಂಡಿಸುತ್ತಾರೆʼʼ ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ವಕ್ತಾರ ಜಾನ್ ಕಿರ್ಬಿ ತಿಳಿಸಿದ್ದಾರೆ.

Continue Reading

ದೇಶ

Viral Video: ಆರಾಮಾಗಿ ಆಟವಾಡ್ತಿದ್ದ ಬಾಲಕಿ ಮೇಲೆ ಜರ್ಮನ್‌ ಶೆಫರ್ಡ್‌ ಡೆಡ್ಲಿ ಅಟ್ಯಾಕ್‌!

Viral Video: ಅಪಾರ್ಟ್‌ಮೆಂಟ್‌ವೊಂದರ ಆವರಣದಲ್ಲಿ ಆಟವಾಡುತ್ತಿದ್ದ ಬಾಲಕಿ ಮೇಲೆ ಜರ್ಮನ್‌ ಶೆಫರ್ಡ್‌ ನಾಯಿಯೊಂದು ಡೆಡ್ಲಿ ಅಟ್ಯಾಕ್‌ ಮಾಡಿದ್ದು, ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ.

VISTARANEWS.COM


on

Koo

ಉತ್ತರಪ್ರದೇಶ: ಕೆಲವು ದಿನಗಳ ಹಿಂದೆ ಪಿಟ್‌ಬುಲ್‌ ನಾಯಿ ದಾಳಿ(Viral Video)ಯಿಂದ ಬಾಲಕನೋರ್ವ ಗಂಭೀರವಾಗಿ ಗಾಯಗೊಂಡಿರುವ ಬೆನ್ನಲ್ಲೇ ಉತ್ತರಪ್ರದೇಶ(Uttar Pradesh)ದ ಗಾಜಿಯಾಬಾದ್‌ನಲ್ಲಿ ಮತ್ತೊಂದು ಅಂತಹದ್ದೇ ಘಟನೆ ನಡೆದಿದೆ. ಅಪಾರ್ಟ್‌ಮೆಂಟ್‌(Apartment)ವೊಂದರ ಆವರಣದಲ್ಲಿ ಆಟವಾಡುತ್ತಿದ್ದ ಬಾಲಕಿ ಮೇಲೆ ಜರ್ಮನ್‌ ಶೆಫರ್ಡ್‌(German Shepherd) ನಾಯಿಯೊಂದು ಡೆಡ್ಲಿ ಅಟ್ಯಾಕ್‌(Dog attack) ಮಾಡಿದ್ದು, ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್‌ ಆಗಿದೆ

ಏನಿದು ಘಟನೆ?

ಅಂಜರಾ ಇಂಟಿಗ್ರಿಟಿ ಸೊಸೈಟಿ ಎಂಬ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದ್ದು, ಸೈಕಲ್‌ನಲ್ಲಿ ಆಟ ಆಡುತ್ತಿದ್ದ ಆರು ವರ್ಷದ ಬಾಲಕಿ ಮೇಲೆ ಅಲ್ಲೇ ಇದ್ದ ಜರ್ಮನ್‌ ಶಫರ್ಡ್‌ ನಾಯಿ ಏಕಾಏಕಿ ದಾಳಿ ನಡೆಸಿ, ಆಕೆ ತೋಳನ್ನು ಕಚ್ಚಿದೆ. ತಕ್ಷಣ ಅಲ್ಲೇ ಇದ್ದ ಬಾಲಕಿಯ ತಾಯಿ ಓದಿ ಬಂದು ನಾಯಿಯನ್ನು ಓಡಿಸಿದ್ದಾರೆ. ಅಲ್ಲದೇ ಸ್ಥಳದಲ್ಲಿದ್ದ ಸೆಕ್ಯೂರಿಟಿ ಗಾರ್ಡ್‌ ಆಕೆಯ ಸಹಾಯಕ್ಕೆ ಬರುತ್ತಾರೆ. ಘಟನೆಯಲ್ಲಿ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಇನ್ನು ಸ್ಥಳದಲ್ಲಿ ಅನೇಕ ಮಕ್ಕಳು ಆಟವಾಡುತ್ತಿರುರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಘಟನೆ ಬೆನ್ನಲ್ಲೇ ಬಾಲಕಿ ತಾಯಿ ನಮಿತಾ ಚೌಹಾಣ್‌ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ನಾಯಿ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದೆ. ನಾಯಿಯನ್ನು ಹೊರ ಕರೆತರುವ ವೇಳೆ ಅದರ ಬಾಯಿಗೆ ಯಾವುದೇ ಕವಚ ಹಾಕಿರಲಿಲ್ಲ. ಮುಂದಿನ ದಿನಗಳಲ್ಲಿ ಇಂಥಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮ ಜರುಗಿಸಬೇಕು. ಅಲ್ಲದೇ ಅಪಾರ್ಟ್‌ಮೆಂಟ್‌ನಲ್ಲಿ ಆ ನಾಯಿಯನ್ನು ಸಾಕದಂತೆ ನಿಯಮ ಜಾರಿಗೊಳಿಸಬೇಕು ಎಂದು ನಮಿತಾ ಆಗ್ರಹಿಸಿದ್ದಾರೆ.

ಗಾಜಿಯಾಬಾದ್‌ನಲ್ಲಿ ಎರಡು ವಾಗಳ ಹಿಂದೆ ಬಾಲಕನೊಬ್ಬನ ಮೇಲೆ ಪಿಟ್‌ಬುಲ್‌ ತಳಿಯ ನಾಯಿಯೊಂದು ದಾಳಿ ನಡೆಸಿದ್ದ ವಿಡಿಯೋ ವೈರಲ್‌ ಆಗಿತ್ತು. 15 ವರ್ಷದ ಅಲ್ತಾಫ್‌ ಎಂಬ ಬಾಲಕ ನಡೆದುಕೊಂಡು ಹೋಗುತ್ತಿದ್ದಾಗ ಪಿಟ್‌ಬುಲ್ ದಾಳಿ ನಡೆಸುತ್ತದೆ. ಇನ್ನೇನು ತನ್ನ ಮನೆಯ ಗೇಟ್‌ ತೆರೆಯಬೇಕು ಎನ್ನುವಷ್ಟರಲ್ಲಿ ಆತನ ಮೇಲೆ ಈ ಆಕ್ರಮಣ ನಡೆದಿತ್ತು. ಅನಿರೀಕ್ಷಿತ ಆಘಾತದಿಂದ ಆತ ನಿಯಂತ್ರಣ ತಪ್ಪಿ ನೆಲದ ಮೇಲೆ ಬೀಳುತ್ತಾನೆ. ಜನರು ನೋಡುತ್ತಿದ್ದರೂ ಭಯದಿಂದಾಗಿ ಯಾರೂ ಆತನನ್ನು ರಕ್ಷಿಸಲು ಮುಂದೆ ಬರಲಿಲ್ಲ. ಮೇಲಿನ ಮನೆಯವರು ನಾಯಿ ಮೇಲೆ ನೀರು ಸುರಿದರೂ ಅದು ಶಾಂತವಾಗಲಿಲ್ಲ

ನೆಲದಲ್ಲಿ ಬಿದ್ದು ಒದ್ದಾಡುತ್ತಿದ್ದ ಅಲ್ತಾಫ್‌ ಕೊನೆಗೂ ಅದರಿಂದ ತಪ್ಪಿಸಿಕೊಂಡು ಗೇಟ್‌ ಬಳಿಗೆ ಓಡುತ್ತಾನೆ. ಅವನನ್ನು ಹಿಂಬಾಲಿಸಿಕೊಂಡು ಪಿಟ್‌ಬುಲ್‌ ಕೂಡ ಬರುತ್ತದೆ. ನಾಯಿ ಮತ್ತೆ ದಾಳಿ ಮಾಡುತ್ತದೆ. ಆಗಲೇ ಅಲ್ಲಿದ್ದ ಬೀದಿ ನಾಯಿಗಳು ತಕ್ಷಣ ಧಾವಿಸಿ ಬಂದು ಪಿಟ್​ಬುಲ್‌ ಅನ್ನು ಕಚ್ಚಿ ಎಳೆದು ಹೊರ ಹಾಕುತ್ತವೆ. ಇದರಿಂದ ಬಾಲಕ ಸುಲಭವಾಗಿ ತಪ್ಪಿಸಿಕೊಂಡು ಮನೆಯ ಒಳಗೆ ತೆರಳಿತ್ತಾನೆ. ಈ ಮಧ್ಯೆ ಪಿಟ್‌ಬುಲ್‌ನನ್ನು ಓಡಿಸಲು ನೆರೆ ಮನೆಯ ಯುವಕನೊಬ್ಬ ಕೋಲು ಹಿಡಿದು ಮುಂದೆ ಬರುತ್ತಾನೆ. ಬಾಲಕ ತಪ್ಪಿಸಿಕೊಂಡ ರೋಷದಲ್ಲಿ ಅದು ಆತನ ಮೇಲೆ ಎರಗಲು ಮುಂದಾಗುತ್ತದೆ. ಅದೃಷ್ಟವಶಾತ್‌ ಆತ ತಪ್ಪಿಸಿಕೊಂಡು ಮನೆಯೊಳಗೆ ಸೇರಿ ಬಾಗಿಲು ಹಾಕಿಕೊಂಡು ಬಚಾವಾಗುತ್ತಾನೆ.

ಇದನ್ನೂ ಓದಿ:Viral Video: ರೈಲು ಹತ್ತುವಾಗ ಕೆಳಗೆ ಬಿದ್ದ ವ್ಯಕ್ತಿ; ಮಹಿಳಾ ಪೇದೆಯಿಂದ ರಕ್ಷಣೆ-ರೋಚಕ ವಿಡಿಯೋ ವೈರಲ್‌

ಕೆಲವು ದಿನಗಳ ಹಿಂದೆಯಷ್ಟೇ ಪಿಟ್‌ಬುಲ್‌ ಹೊಂದಿದ್ದ ಕುಟುಂಬ ಗಾಜಿಯಾಬಾದ್‌ಗೆ ಆಗಮಿಸಿತ್ತು. ಸದ್ಯ ಈ ನಾಯಿಯನ್ನು ಮುನ್ಸಿಪಲ್ ಕಾರ್ಪೊರೇಷನ್ ವಶಪಡಿಸಿಕೊಂಡಿದೆ. ಈ ರೀತಿಯ ನಾಯಿಯನ್ನು ಸಾಕುವುದಕ್ಕೆ ಹಿಂದೆಯೇ ಆಕ್ಷೇಪ ವ್ಯಕ್ತಪಡಿಸಲಾಗಿತ್ತು. ಆದರೂ ಮನೆಯವರು ನಮ್ಮ ಮಾತನ್ನು ಕೇಳಿರಲಿಲ್ಲ ಎಂದು ನೆರೆಮನೆಯವರು ತಿಳಿಸಿದ್ದಾರೆ.

Continue Reading

ಕ್ರೀಡೆ

IPL 2024: ರಿಂಕು ಸಿಂಗ್​ಗೆ ಬೌಲಿಂಗ್​ ಮಾಡಿದ ಶಾರುಖ್‌ ಪುತ್ರ ಅಬ್ರಾಮ್; ವಿಡಿಯೊ ವೈರಲ್​

IPL 2024: ಶಾರುಖ್‌ ಖಾನ್‌ ಮತ್ತು ಅವರ ಪುತ್ರ ಅಬ್ರಾಮ್(AbRam ) ರಿಂಕು ಸಿಂಗ್​ ಜತೆ ಕ್ರಿಕೆಟ್​ ಆಡಿದ ವಿಡಿಯೊ ವೈರಲ್​ ಆಗಿದೆ. ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಇಂದು ಕೆಕೆಆರ್​ ತಂಡ ಈಡನ್​ ಗಾರ್ಡನ್ಸ್​ನಲ್ಲಿ ಪಂದ್ಯವನ್ನಾಡುತ್ತಿದೆ. ಈ ಪಂದ್ಯಕ್ಕೂ ಮುನ್ನ ಕೆಕೆಆರ್​ ಆಟಗಾರರು ಅಭ್ಯಾಸ ನಡೆಸಿದ ವೇಳೆ ಶಾರುಖ್‌ ಪುತ್ರ ಅಬ್ರಾಮ್ ರಿಂಕು ಸಿಂಗ್​ ಅವರಿಗೆ ಬೌಲಿಂಗ್​ ನಡೆಸಿದ್ದಾರೆ.

VISTARANEWS.COM


on

IPL 2024
Koo

ಕೋಲ್ಕತ್ತಾ: ಬಾಲಿವುಡ್‌ ನಟ, ಕೆಕೆಆರ್​ ತಂಡದ ಸಹ ಮಾಲಿಕ ಶಾರುಖ್‌ ಖಾನ್‌(Shah Rukh Khan) ಅವರು ತನ್ನ ತಂಡದ ಪ್ರತಿ ಪಂದ್ಯದ ವೇಳೆಯೂ ಸ್ಟೇಡಿಯಂನಲ್ಲಿ ಕಾಣಿಸಿಕೊಳ್ಳುತ್ತಾರೆ. ತಂಡ ಸೋತರೂ ಗೆದ್ದರೂ ಆಟಗಾರರಿಗೆ ಸದಾ ಸ್ಫೂರ್ತಿ ತುಂಬುವ ಕೆಲ ಮಾಡುತ್ತಲೇ ಇರುತ್ತಾರೆ. ಈಗಾಗಲೇ ಇದರ ಹಲವು ವಿಡಿಯೊಗಳನ್ನು ಕೂಡ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಇದೀಗ ತಮ್ಮ ಕಿರಿಯ ಪುತ್ರ ಅಬ್ರಾಮ್(Shah Rukh Khan’s Son AbRam) ಮತ್ತು ಕೆಕೆಆರ್​ ಆಟಗಾರರ ಜತೆ ಕ್ರಿಕೆಟ್​ ಆಡಿ ಗಮನಸೆಳೆದಿದ್ದಾರೆ. ಶಾರುಖ್‌ ಖಾನ್‌ ಮತ್ತು ಅವರ ಪುತ್ರ ಅಬ್ರಾಮ್(AbRam ) ರಿಂಕು ಸಿಂಗ್​ ಜತೆ ಕ್ರಿಕೆಟ್​ ಆಡಿದ ವಿಡಿಯೊ ವೈರಲ್​ ಆಗಿದೆ.

ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಇಂದು ಕೆಕೆಆರ್​ ತಂಡ ಈಡನ್​ ಗಾರ್ಡನ್ಸ್​ನಲ್ಲಿ ಪಂದ್ಯವನ್ನಾಡುತ್ತಿದೆ. ಈ ಪಂದ್ಯಕ್ಕೂ ಮುನ್ನ ಕೆಕೆಆರ್​ ಆಟಗಾರರು ಅಭ್ಯಾಸ ನಡೆಸಿದ ವೇಳೆ ಶಾರುಖ್‌ ಪುತ್ರ ಅಬ್ರಾಮ್ ರಿಂಕು ಸಿಂಗ್​ ಅವರಿಗೆ ಬೌಲಿಂಗ್​ ನಡೆಸಿದ್ದಾರೆ. ಇದಾದ ಬಳಿಕ ತಂದೆಯ ಜತೆ ಕ್ಯಾಚ್​ ಹಿಡಿಯುವ ಅಭ್ಯಾಸ ನಡೆಸಿದ್ದಾರೆ. ಶಾರೂಕ್​ ಕೂಡ ಕೆಕೆಆರ್​ ಜೆರ್ಸಿಯಲ್ಲಿ ಕೆಲ ಕಾಲ ಟೆನಿಸ್​ ಬಾಲ್​ನಲ್ಲಿ ಬ್ಯಾಟಿಂಗ್​ ಅಭ್ಯಾಸ ನಡೆಸಿದ್ದಾರೆ. ಇದೆಲ್ಲದರ ವಿಡಿಯೊವನ್ನು ಶಾರುಖ್‌ ಮತ್ತು ಕೆಕೆಆರ್ ಅಭಿಮಾನಿಗಳು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್​ ಮಾಡಿದ್ದಾರೆ.​

ಏಪ್ರಿಲ್​ 16ರಂದು ರಾಜಸ್ಥಾನ್​ ರಾಯಲ್ಸ್(RR)​ ವಿರುದ್ಧ ಆಡಲಿಳಿದಿದ್ದ ಕೆಕೆಆರ್(KKR)​ ತಂಡ ಜಾಸ್​ ಬಟ್ಲರ್​ ಅವರ ಅಜೇಯ ಶತಕದ(IPL 2024) ಆಟದಿಂದ ಸೋಲು ಕಂಡಿತ್ತು. ತವರಿನಲ್ಲೇ ಸೋಲು ಕಂಡ ಬೇಸರದಲ್ಲಿ ತಂಡದ ಸಹ ಮಾಲೀಕ, ಬಾಲಿವುಡ್​ ನಟ ಶಾರೂಖ್ ಖಾನ್‌(Shah Rukh Khan) ಅವರು ಕಣ್ಣೀರು ಸುರಿಸಿದ್ದರು. ಈ ವಿಡಿಯೊ ವೈರಲ್​ ಆಗಿತ್ತು.

ಇದನ್ನೂ ಓದಿ IPL 2024: ಆರ್​ಸಿಬಿಗೆ ಇನ್ನೂ ಇದೆ ಪ್ಲೇ ಆಫ್ ಅವಕಾಶ; ಸದ್ಯದ​ ಲೆಕ್ಕಾಚಾರ ಹೇಗಿದೆ?

ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಶಾರೂಖ್ ಖಾನ್‌ ತನ್ನ ತಂಡ ಸೋಲು ಕಂಡಾಗ ಭಾವುಕರಾದರು. ಆದರೂ ಕೂಡ ಪಂದ್ಯ ಮುಗಿದ ಬಳಿಕ ಮೈದಾನಕ್ಕೆ ಹತಾಶರಾಗಿ ಕುಳಿತಿದ್ದ ತನ್ನ ತಂಡದ ಆಟಗಾರರನ್ನು ಸಮಾಧಾನ ಪಡೆಸಿದರು. ಅಲ್ಲದೆ ಡ್ರೆಸ್ಸಿಂಗ್​ ರೂಮ್​ಗೂ ತೆರಳಿ ಆಟಗಾರರಿಗೆ ಮುಂದಿನ ಪಂದ್ಯದಲ್ಲಿ ಉತ್ತಮವಾಗಿ ಆಡುವಂತೆ ಧೈರ್ಯ ತುಂಬಿದರು. ಜತೆಗೆ ಗೆಲುವು ಸಾಧಿಸಿದ ಎದುರಾಳಿ ತಂಡದ ಆಟಗಾರರನ್ನು ಕೂಡ ತಬ್ಬಿಕೊಂಡು ಅಭಿನಂದಿಸಿದ್ದರು.

ಸದ್ಯ ಕೆಕೆಆರ್​ ತಂಡ 8 ಪಂದ್ಯಗಳಲ್ಲಿ 5 ಪಂದ್ಯ ಗೆದ್ದು 10 ಅಂಕದೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಿಯಾಗಿ ಕಾಣಿಸಿಕೊಂಡಿದೆ. ಇಂದು ನಡೆಯುತ್ತಿರುವ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಿದರೆ 12 ಅಂಕದೊಂದಿಗೆ ಪ್ಲೇ ಆಫ್​ ಹಾದಿ ಮತ್ತಷ್ಟು ಸುಗಮಗೊಳಿಸಲಿದೆ.

Continue Reading

Lok Sabha Election 2024

Lok Sabha Election: ಒಂದೇ ಒಂದು ಕುಟುಂಬಕ್ಕಾಗಿ ಪ್ರತ್ಯೇಕ ಮತಗಟ್ಟೆ! ಹೀಗೂ ಉಂಟು!

Lok Sabha Election 2024: ಒಂದೇ ಕುಟುಂಬದ ಐದು ಮಂದಿಗಾಗಿ ಲೇಹ್ ಜಿಲ್ಲೆಯ ವಾಶಿ ಎಂಬ ಹಳ್ಳಿಯಲ್ಲಿಚುನಾವಣಾ ಅಧಿಕಾರಿಗಳು ಮತದಾನ ಕೇಂದ್ರವನ್ನು ಸ್ಥಾಪಿಸಿದ್ದಾರೆ. ಚುನಾವಣಾ ಆಯೋಗದ ಪ್ರಯತ್ನಗಳ ಭಾಗವಾಗಿ ಶೇ. 100ರಷ್ಟು ಮತದಾನವಾಗಬೇಕು ಎನ್ನುವ ಉದ್ದೇಶದಿಂದ ಚುನಾವಣಾ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಅರ್ಹ ನಾಗರಿಕನೂ ಪಾಲ್ಗೊಳ್ಳಬೇಕು. ಇದಕ್ಕಾಗಿ ದೂರದೂರದ ಸ್ಥಳಗಳಲ್ಲೂ, ಅತ್ಯಲ್ಪ ಮತದಾರರು ಇರುವಲ್ಲೂ ಎಲ್ಲರಿಗೂ ಅನುಕೂಲವಾಗಬೇಕು ಎನ್ನುವ ಉದ್ದೇಶದಿಂದ ಮತದಾನ ಕೇಂದ್ರವನ್ನು ತೆರೆಯಲಾಗಿದೆ.

VISTARANEWS.COM


on

By

Lok Sabha Election-2024
Koo

ಶ್ರೀನಗರ: ಲೋಕಸಭಾ ಚುನಾವಣೆ 2024 (Lok Sabha Election-2024) ಹಲವು ವಿಶೇಷಗಳಿಗೆ ಸಾಕ್ಷಿಯಾಗಿದೆ. ಇದರಲ್ಲಿ ಕೇವಲ ಐದು ಮಂದಿ ಮತದಾರರಿಗಾಗಿ (voters) ಮತದಾನ ಕೇಂದ್ರವನ್ನು (voting booth) ತೆರೆದಿರುವುದು ಕೂಡ ಒಂದು. ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ನ (Ladakh) ಲೇಹ್ (Leh) ಜಿಲ್ಲೆಯ ವಾಶಿ (Washi ) ಎಂಬ ದೂರದ ಹಳ್ಳಿಯಲ್ಲಿ ಒಂದು ಕುಟುಂಬದ ಐದು ಸದಸ್ಯರಿಗೆ ಚುನಾವಣಾ ಅಧಿಕಾರಿಗಳು ಮತದಾನ ಕೇಂದ್ರವನ್ನು ಸ್ಥಾಪಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಲಡಾಖ್ ನ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಯತೀಂದ್ರ ಎಂ. ಮರಾಲ್ಕರ್, ಲೇಹ್‌ನಿಂದ ಸುಮಾರು 170 ಕಿ.ಮೀ. ದೂರದಲ್ಲಿರುವ ನುಬ್ರಾದ ವಾಶಿ ಎಂಬ ದೂರದ ಹಳ್ಳಿಯಲ್ಲಿ ಟೆಂಟ್ ಅಡಿಯಲ್ಲಿ ಮತದಾನ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

ಚುನಾವಣಾ ಆಯೋಗದ ಪ್ರಯತ್ನಗಳ ಭಾಗವಾಗಿ ಶೇ. 100ರಷ್ಟು ಮತದಾನವಾಗಬೇಕು ಎನ್ನುವ ಉದ್ದೇಶದಿಂದ ಚುನಾವಣಾ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಅರ್ಹ ನಾಗರಿಕನೂ ಪಾಲ್ಗೊಳ್ಳಬೇಕು. ಇದಕ್ಕಾಗಿ ದೂರದೂರದ ಸ್ಥಳಗಳಲ್ಲೂ, ಅತ್ಯಲ್ಪ ಮತದಾರರು ಇರುವಲ್ಲೂ ಎಲ್ಲರಿಗೂ ಅನುಕೂಲವಾಗಬೇಕು ಎನ್ನುವ ಉದ್ದೇಶದಿಂದ ಮತದಾನ ಕೇಂದ್ರವನ್ನು ತೆರೆಯಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: Lok Sabha Election 2024: ಎಲೆಕ್ಷನ್‌ ಹೊತ್ತಲ್ಲೇ ಕಾಂಗ್ರೆಸ್‌ಗೆ ಬಿಗ್‌ ಶಾಕ್! ಕನ್ಹಯ್ಯ ಕುಮಾರ್‌ಗೆ ಸ್ವಪಕ್ಷದಲ್ಲೇ ವಿರೋಧ

ಮೇ 20ರಂದು ಮತದಾನ

ಲಡಾಖ್ ಲೋಕಸಭಾ ಸ್ಥಾನಕ್ಕೆ ಮೇ 20ರಂದು 5ನೇ ಹಂತದಲ್ಲಿ ಮತದಾನ ನಡೆಯಲಿದೆ. ಆರ್ಟಿಕಲ್ 370 ಅನ್ನು ರದ್ದುಗೊಳಿಸಿದ ಅನಂತರ ಮತ್ತು ಜಮ್ಮು ಮತ್ತು ಕಾಶ್ಮೀರದ ರಾಜ್ಯವನ್ನು ಎರಡು ಯುಟಿಗಳಾಗಿ ವಿಭಜಿಸಿದಬಳಿಕ ಶೀತ ಮರುಭೂಮಿ ಪ್ರದೇಶದಲ್ಲಿ ಮೊದಲ ಬಾರಿಗೆ ಮತದಾನ ನಡೆಯಲಿದೆ.


ಐವರು ಮತದಾರರು

ಒಂದೇ ಕುಟುಂಬದ ಐವರು ಗ್ರಾಮದಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದು, ಟೆಂಟ್‌ ಹಾಕಿದ ಮತಗಟ್ಟೆ ಅವರ ಮನೆ ಬಾಗಿಲಿಗೆ ಬಂದಿದೆ ಎಂದು ಮಾರಲ್ಕರ್ ಹೇಳಿದರು.

ಕುಟುಂಬವು ಆರು ಸದಸ್ಯರನ್ನು ಒಳಗೊಂಡಿದೆ ಮತ್ತು ಅವರಲ್ಲಿ ಇಬ್ಬರು ಪುರುಷರು ಮತ್ತು ಮೂವರು ಮಹಿಳೆಯರು ಮತ ಚಲಾಯಿಸಲು ಅರ್ಹರಾಗಿದ್ದಾರೆ. ಕುಟುಂಬದ ಮುಖ್ಯಸ್ಥ ರೈತನಾಗಿದ್ದಾನೆ.

ಲಡಾಖ್ ನಲ್ಲಿ 1,82,571 ಮತದಾರರು

ಲಡಾಖ್ ಯುಟಿಯು ಎರಡು ಜಿಲ್ಲೆಗಳನ್ನು ಒಳಗೊಂಡಿದೆ. ಮುಸ್ಲಿಂ ಪ್ರಾಬಲ್ಯದ ಕಾರ್ಗಿಲ್ ಮತ್ತು ಬೌದ್ಧ ಪ್ರಾಬಲ್ಯದ ಲೇಹ್. 91,703 ಪುರುಷರು ಮತ್ತು 90868 ಮಹಿಳೆಯರು ಸೇರಿದಂತೆ ಒಟ್ಟು 1,82,571 ಮತದಾರರು ಇಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದಾರೆ.

577 ಮತಗಟ್ಟೆಗಳು

ಚುನಾವಣಾ ಆಯೋಗವು ಯುಟಿಯಾದ್ಯಂತ 577 ಮತಗಟ್ಟೆಗಳನ್ನು ಸ್ಥಾಪಿಸಿದೆ. ಇದರಲ್ಲಿ 33 ನಗರ ಮತ್ತು 544 ಗ್ರಾಮೀಣ ಪ್ರದೇಶಗಳಲ್ಲಿ ಸೇರಿವೆ. ಲಡಾಖ್‌ನಲ್ಲಿ ಕೆಲವು ಮತಗಟ್ಟೆಗಳ ದುರ್ಗಮತೆಯನ್ನು ಗಮನದಲ್ಲಿಟ್ಟುಕೊಂಡು ದೂರದ ಹಳ್ಳಿಗಳಿಗೆ ಚುನಾವಣಾ ಸಾಮಗ್ರಿಗಳು ಮತ್ತು ಸಿಬ್ಬಂದಿಯನ್ನು ವಿಮಾನದಲ್ಲಿ ರವಾನಿಸಲಾಗುತ್ತದೆ.

Continue Reading
Advertisement
KL Rahul
ಕ್ರೀಡೆ2 mins ago

KL Rahul : ವಿಶ್ವ ಕಪ್​ ತಂಡಕ್ಕೆ ರಾಹುಲ್ ಕೈಬಿಟ್ಟ ಬಿಸಿಸಿಐಗೆ ಟಾಂಗ್​ ಕೊಟ್ಟ ಲಕ್ನೊ ಫ್ರಾಂಚೈಸಿ

Actress Summer Fashion
ಫ್ಯಾಷನ್2 mins ago

Actress Summer Fashion: ಬಾಲಿವುಡ್‌ನವರನ್ನು ಮೀರಿಸಿದ ನಟಿ ಶಿಲ್ಪಾ ಮಂಜುನಾಥ್‌ ಪೂಲ್‌ಸೈಡ್‌ ಹಾಟ್‌ ಲುಕ್‌!

Hassan Pen Drive Case
ಸಿನಿಮಾ5 mins ago

Hassan Pen Drive Case: ಪ್ರಜ್ವಲ್ ರೇವಣ್ಣ ಮೃಗಕ್ಕಿಂತ ಕಡೆ; ಕಿಡಿ ಕಾರಿದ ಬಹುಭಾಷಾ ನಟಿ ಪೂನಂ ಕೌರ್

Physical Abuse
ಕ್ರೈಂ25 mins ago

Physical Abuse: ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಅತ್ಯಾಚಾರ ಎಸಗಿದವನಿಗೆ 106 ವರ್ಷ ಜೈಲು ಶಿಕ್ಷೆ

Russia-Ukraine War
ರಷ್ಯಾ-ಉಕ್ರೇನ್‌ ಕದನ26 mins ago

Russia-Ukraine War: ಯುದ್ಧ ಭೂಮಿಯಿಂದ ಪಾರಾಗಲು 10 ಕಿ.ಮೀ ನಡೆದ 98 ವರ್ಷದ ವೃದ್ಧೆ!

Leg Swelling
ಆರೋಗ್ಯ32 mins ago

Leg Swelling: ಪ್ರಯಾಣಿಸುವಾಗ ನಮ್ಮ ಕಾಲುಗಳು ಊದಿಕೊಳ್ಳುವುದೇಕೆ?

Lok Sabha Election 2024 former MLA Venkatreddy Mudnala election campaign for Raichur Lok Sabha constituency BJP candidate Raja Amareshwar Nayaka
ರಾಜಕೀಯ36 mins ago

Lok Sabha Election 2024: ಬಿಜೆಪಿ ಅಭ್ಯರ್ಥಿ ರಾಜಾಅಮರೇಶ್ವರ ನಾಯಕಗೆ ಬೆಂಬಲಿಸಲು ವೆಂಕಟರೆಡ್ಡಿ ಮುದ್ನಾಳ ಮನವಿ

Manish Sisodia
ಪ್ರಮುಖ ಸುದ್ದಿ43 mins ago

Manish Sisodia : ಕೇಜ್ರಿವಾಲ್ ಜತೆಗಾರ ಮನೀಶ್ ಸಿಸೊಡಿಯಾ ಮತ್ತಷ್ಟು ದಿನ ಜೈಲಿನಲ್ಲೇ; ಜಾಮೀನು ಅರ್ಜಿ ವಜಾ

Mohammed Shami
ಕ್ರೀಡೆ43 mins ago

Mohammed Shami: ಸ್ಟಿಕ್​ ವಾಕರ್ ಸಹಾಯದೊಂದಿಗೆ ವ್ಯಾಯಾಮ ಆರಂಭಿಸಿದ ಶಮಿ

Lok Sabha Election 2024
Lok Sabha Election 202453 mins ago

Lok Sabha Election 2024: ಬಿಜೆಪಿ ಅಭ್ಯರ್ಥಿಗಳಿಗೆ ಪತ್ರ ಬರೆದ ಮೋದಿ; ಕಾಂಗ್ರೆಸ್‌ನ ತುಷ್ಟೀಕರಣ ನೀತಿಯ ಬಗ್ಗೆ ಅರಿವು ಮೂಡಿಸಲು ಕರೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for April 30 2024
ಭವಿಷ್ಯ13 hours ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20241 day ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20241 day ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20242 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20242 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20242 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20242 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest2 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

ಟ್ರೆಂಡಿಂಗ್‌