Boycott PhonePe: ತಾಕತ್ತಿದ್ರೆ ಫೋನ್ ಪೇ ತರಹದ ಕಂಪನಿ ಹುಟ್ಟುಹಾಕಿ; ಕನ್ನಡಿಗರ ವಿರುದ್ಧ ಯುವಕ ಆಕ್ರೋಶ! ವಿಡಿಯೊ ಇದೆ - Vistara News

ವೈರಲ್ ನ್ಯೂಸ್

Boycott PhonePe: ತಾಕತ್ತಿದ್ರೆ ಫೋನ್ ಪೇ ತರಹದ ಕಂಪನಿ ಹುಟ್ಟುಹಾಕಿ; ಕನ್ನಡಿಗರ ವಿರುದ್ಧ ಯುವಕ ಆಕ್ರೋಶ! ವಿಡಿಯೊ ಇದೆ

Boycott PhonePe: ಫೋನ್ ಪೇ ಅನ್ ಇನ್‌ಸ್ಟಾಲ್ ಮಾಡುತ್ತಿರುವ ಕನ್ನಡಿಗರ ವಿರುದ್ಧ ಯುವಕ ಆಕ್ರೋಶ ಹೊರಹಾಕಿದ್ದಾನೆ. ಈ ರೀತಿ ಕಂಪನಿಗಳನ್ನು ಬಾಯ್ಕಾಟ್‌ ಮಾಡುವುದರಿಂದ ರಾಜ್ಯದ ಆರ್ಥಿಕತೆಗೆ ಎಷ್ಟು ದೊಡ್ಡ ಹೊಡೆತ ಬೀಳುತ್ತೆ ಎಂದು ಯೋಚಿಸಿದ್ದೀರಾ ಎಂದು ಪ್ರಶ್ನಿಸಿದ್ದಾನೆ.

VISTARANEWS.COM


on

Boycott PhonePe
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ರಾಜ್ಯ ಸರ್ಕಾರದ ಪ್ರಸ್ತಾವನೆಗೆ ಅಸಮಾಧಾನ ವ್ಯಕ್ತಪಡಿಸಿದ್ದಕ್ಕೆ ವಿರೋಧ ವ್ಯಕ್ತವಾದ ಬೆನ್ನಲ್ಲೇ ಫೋನ್‌ ಪೇ ಸಿಇಒ ಸಮೀರ್‌ ನಿಗಮ್‌ ಕ್ಷಮೆ ಕೋರಿದ್ದರು. ಈ ನಡುವೆ ʼಬಾಯ್ಕಾಟ್‌ ಫೋನ್‌ ಪೇʼ ಅಭಿಯಾನ (Boycott PhonePe) ಟ್ರೆಂಡ್‌ ಆಗುತ್ತಿರುವುದಕ್ಕೆ ಯುವಕನೊಬ್ಬ ಕನ್ನಡಿಗರ ವಿರುದ್ಧ ಆಕ್ರೋಶ ಹೊರಹಾಕಿದ್ದು, ತಾಕತ್ತಿದ್ದರೆ ಫೋನ್ ಪೇ ತರಹದ ಕಂಪನಿಯನ್ನು ಹುಟ್ಟು ಹಾಕಿ ಎಂದು ಸವಾಲು ಹಾಕಿದ್ದಾನೆ.

ಕಿರಣ್‌ ಎಂಬ ಯುವಕ ವಿಡಿಯೊ ಹಂಚಿಕೊಂಡಿದ್ದು, ಇದರಲ್ಲಿ ಫೋನ್ ಪೇ ಅನ್ ಇನ್‌ಸ್ಟಾಲ್ ಮಾಡುತ್ತಿರುವ ಕನ್ನಡಿಗರ ವಿರುದ್ಧ ಆಕ್ರೋಶ ಹೊರಹಾಕಿದ್ದಾನೆ. ಫೋನ್ ಪೇ ಪರ ವಹಿಸಿಕೊಂಡು ಯುವಕ ಮಾತನಾಡಿದ್ದು, ತಾಕತ್ತಿದ್ದರೆ ಫೋನ್ ಪೇ ತರಹದ ಕಂಪನಿಯನ್ನು ಹುಟ್ಟು ಹಾಕಿ, ಇಂತಹ ಕಂಪನಿಗಳು ಇಲ್ಲಿ ಇಲ್ಲವೆಂದರೆ ಯಾರಿಗೂ ಆದಾಯ ಇಲ್ಲ. ಬೆಂಗಳೂರಿನಲ್ಲಿ ಬೇರೆ ದೇಶ, ರಾಜ್ಯದವರಿಂದಲೇ ಅರ್ಥಿಕತೆ ಬೆಳೆಯುತ್ತಿದೆ. ಬೇರೆ ಕಂಪನಿಗಳಿಲ್ಲವೆಂದರೆ ಏನೂ ಸಿಕ್ಕಲ್ಲ ಎಂದು ಹೇಳಿದ್ದಾನೆ. ಸದ್ಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

ಕನ್ನಡಿಗರಿಗೆ ಮೀಸಲಾತಿ ವಿರೋಧಿಸಿದ್ದಕ್ಕೆ ಫೋನ್‌ ಪೇ ಅನ್‌ ಇನ್‌ಸ್ಟಾಲ್‌ ಮಾಡುವುದು ದೊಡ್ಡ ವಿಚಾರವಲ್ಲ. ಅಂತಹ ಕಂಪನಿಯನ್ನು ಹುಟ್ಟುಹಾಕುವುದಕ್ಕೆ ಗಂಡಸುತನ ಇರಬೇಕು. ನಮ್ಮ ರಾಜಕಾರಣಿಗಳು ಹೇಳೋದನ್ನು ಕೇಳಿಕೊಂಡಿರುವ ನಮಗೆ ಇಂತಹ ಕಂಪನಿ ಸೃಷ್ಟಿಸಲು ಸಾಧ್ಯವಿಲ್ಲ. ಈ ರೀತಿ ಕಂಪನಿಗಳನ್ನು ಬಾಯ್ಕಾಟ್‌ ಮಾಡುವುದರಿಂದ ರಾಜ್ಯದ ಆರ್ಥಿಕತೆಗೆ ಎಷ್ಟು ದೊಡ್ಡ ಹೊಡೆತ ಬೀಳುತ್ತೆ ಎಂದು ಯೋಚಿಸಿದ್ದೀರಾ? ರಾಜಕಾರಣಿಗಳು ಇಂತಹವುಗಳ ಬಗ್ಗೆ ಯೋಚಿಸಲ್ಲ. ಯಾಕೆಂದರೆ ಅವರ ಮಕ್ಕಳು, ಮೊಮ್ಮಕ್ಕಳು ವಿದೇಶದಲ್ಲಿರುತ್ತಾರೆ. ಈ ಕೆಟ್ಟ ರಾಜಕಾರಣಿಗಳ ಕುತಂತ್ರಗಳಿಗೆ ನೀವು ಬಲಿಯಾಗಬೇಡಿ. ಇಂತಹ ವಿಚಾರಗಳಿಂದ ದೇಶದ ಏಕತೆ, ಅಭಿವೃದ್ಧಿಗೆ ಅಡ್ಡಿಯಾಗಬಾರದು ಎನ್ನುವುದೇ ನನ್ನ ಉದ್ದೇಶ ಎಂದು ವಿಡಿಯೊದಲ್ಲಿ ಯುವಕ ಹೇಳಿದ್ದಾನೆ.

ಇದನ್ನೂ ಓದಿ | Karnataka Jobs Reservation: ಉದ್ಯೋಗ ವಿಚಾರದಲ್ಲಿ ಕನ್ನಡಿಗರೊಂದಿಗೆ ಸರ್ಕಾರ ಚೆಲ್ಲಾಟ: ವಿಜಯೇಂದ್ರ ಆಕ್ರೋಶ

ಬಾಯ್ಕಾಟ್ ಫೋನ್ ಪೇ ಅಭಿಯಾನ

ಬೆಂಗಳೂರು: ಖಾಸಗಿ ವಲಯದ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ವಿಚಾರಕ್ಕೆ ಫೋನ್ ಪೇ ಸಿಇಒ ಸಮೀರ್ ನಿಗಮ್ ಅಸಮಾಧಾನ ಹೊರಹಾಕಿದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಕನ್ನಡಿಗರ ವಿಷಯದಲ್ಲಿ ಫೋನ್ ಪೇ ಸಿಇಒ ಸಮೀರ್ ನಿಗಮ್ ಉದ್ಧಟತನ ತೋರಿದ್ದಾರೆ. ಹೀಗಾಗಿ ಫೋನ್‌ ಪೇ ಆ್ಯಪ್ ಅನ್ನು ಯಾರೂ ಬಳಸಬೇಡಿ. 1 ರೇಟಿಂಗ್ ನೀಡಿದ ಬಳಿಕ ಆ್ಯಪ್ ಡಿಲಿಟ್ ಮಾಡುವಂತೆ ಅಭಿಯಾನ ಮಾಡಲಾಗುತ್ತಿದೆ.

ಇನ್ನು ಕೆಲ ನೆಟ್ಟಿಗರು, ಯಾರಾದರೂ ನನ್ನ ಹೆಸರಲ್ಲಿ ಫೋನ್ ಪೇ ಮಾಡಿ ಎಂದರೆ ಯಾರು ಮಾಡಬೇಡಿ. ಯಾಕೆಂದರೆ ನನ್ನ ಹತ್ತಿರ ಫೋನ್ ಪೇ ಇಲ್ಲ. ಕನ್ನಡಿಗರಿಗೆ ಕೆಲಸದಲ್ಲಿ ಮೀಸಲಾತಿ ಕೊಡುವುದಕ್ಕೆ ಎದುರು ಮಾಡಿರುವ ಫೋನ್‌ಪೇ ಸಿಇಒಗೆ ಬುದ್ಧಿ ಕಲಿಸಲು ಫೋನ್‌ಪೇ ಅನ್‌ಇನ್ಸ್ಟಾಲ್ ಮಾಡಿ. ಕನ್ನಡಿಗರ ಬಲ ತೋರಿಸಿ ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ | Karnataka Job Reservation : ಹಗರಣಗಳನ್ನು ಮುಚ್ಚಿಡಲು ಕನ್ನಡಿಗರಿಗೆ ಮೀಸಲು ವಿಚಾರ ಮುನ್ನೆಲೆಗೆ ತಂದ ಸರ್ಕಾರ; ಸಿಟಿ ರವಿ ಆರೋಪ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ವೈರಲ್ ನ್ಯೂಸ್

Viral Video: ಹುಟ್ಟುವಾಗಲೇ 32 ಹಲ್ಲುಗಳೊಂದಿಗೆ ಜನಿಸಿದ ಮಗು! ಹೀಗೇಕಾಯಿತು?

ಮಹಿಳೆಯೊಬ್ಬರು ತನ್ನ ನವಜಾತ ಮಗಳು ಹಲ್ಲುಗಳನ್ನು ಹೊಂದಿರುವ ವಿಡಿಯೋವನ್ನು (Viral Video) ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಇದು ಭಾರಿ ವೈರಲ್ ಆಗಿದೆ. ಸಾಕಷ್ಟು ಮಂದಿಯ ಗಮನ ಸೆಳೆದಿದೆ. ಈ ಕುರಿತು ಬರೆದಿರುವ ಮಹಿಳೆ, ತನ್ನ ಮಗಳು ಅಪರೂಪದ ಕಾಯಿಲೆಯನ್ನು ಜನಿಸುವಾಗಲೇ ಹೊಂದಿದ್ದಳು. ಅವಳು 32 ಹಲ್ಲುಗಳೊಂದಿಗೆ ಜನಿಸಿದ್ದಾಳೆ ಎಂದು ಅಚ್ಚರಿಯ ಫೋಟೊ ಪೋಸ್ಟ್‌ ಮಾಡಿದ್ದಾಳೆ.

VISTARANEWS.COM


on

By

Viral Video
Koo

ಸಾಮಾನ್ಯವಾಗಿ ಮಗು ಹುಟ್ಟಿದ 7- 8 ತಿಂಗಳ ಬಳಿಕ ಹಲ್ಲು ಬರುತ್ತದೆ. ಆದರೆ ಇಲ್ಲೊಂದು ಮಗು ಹುಟ್ಟುತ್ತಲೇ ಬಾಯಿ ತುಂಬಾ ಹಲ್ಲನ್ನು (Baby Born With Teeth) ಹೊಂದಿದ್ದು, ಈ ಕುರಿತು ಅಚ್ಚರಿಯನ್ನು ವ್ಯಕ್ತಪಡಿಸಿ ತಾಯಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ (Viral Video) ಹಂಚಿಕೊಂಡಿದ್ದಾಳೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇನ್‌ಸ್ಟಾ ಗ್ರಾಮ್‌ನಲ್ಲಿ 29.7 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.

ಸಾಮಾನ್ಯವಾಗಿ ಮಕ್ಕಳು ಹಲ್ಲಿಲ್ಲದೆ ಹುಟ್ಟುತ್ತವೆ. ಮಗು ಬೆಳೆದಾಗ, ಅವರ ಹಾಲು ಹಲ್ಲುಗಳು ಬೆಳೆಯಲು ಪ್ರಾರಂಭಿಸುತ್ತವೆ. ಕ್ರಮೇಣ ಹಾಲು ಹಲ್ಲು ಕಳೆದುಕೊಂಡು ʼಬುದ್ಧಿವಂತಿಕೆಯ ಹಲ್ಲುʼಗಳನ್ನು ಒಳಗೊಂಡಂತೆ ಸರಾಸರಿ 32 ಶಾಶ್ವತ ಹಲ್ಲುಗಳು ಬರುತ್ತವೆ. 21ನೇ ವಯಸ್ಸಿನವರೆಗೂ ಹಲ್ಲಿನ ಬೆಳವಣಿಗೆಯಾಗುತ್ತದೆ.

ಹಲ್ಲುಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವ ವಿವಿಧ ಅಂಶಗಳಿವೆ. ಇವುಗಳು ಸರಿಯಾದ ಪೋಷಣೆಯನ್ನು ಒಳಗೊಂಡಿವೆ. ಆದರೆ ಇಲ್ಲೊಂದು ಹುಟ್ಟಿದ ಮಗುವಿಗೆ 32 ಹಲ್ಲುಗಳಿದ್ದ ಅಚ್ಚರಿಯ ಘಟನೆ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಮಹಿಳೆಯೊಬ್ಬರು ತನ್ನ ಮಗಳು 32 ಹಲ್ಲುಗಳನ್ನು ಹೊಂದಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಇದು ಸಾಕಷ್ಟು ಮಂದಿಯ ಗಮನ ಸೆಳೆದಿದೆ.

ಈ ಕುರಿತು ಬರೆದಿರುವ ಮಹಿಳೆ, ತನ್ನ ಮಗಳು ಅಪರೂಪದ ಕಾಯಿಲೆಯಿಂದ ಜನಿಸಿದಳು. ಅವಳು 32 ಹಲ್ಲುಗಳೊಂದಿಗೆ ಜನಿಸಿದ್ದಾಳೆ ಎಂದು ಹೇಳಿಕೊಂಡಿದ್ದಾರೆ. ಈ ಕುರಿತು ಜಾಗೃತಿ ಮೂಡಿಸಲು ಸಾರ್ವಜನಿಕರೊಂದಿಗೆ ಇದನ್ನು ಹಂಚಿಕೊಳ್ಳುತ್ತಿರುವುದಾಗಿ ಮಹಿಳೆ ತಿಳಿಸಿದ್ದಾಳೆ. ವಿಡಿಯೋದಲ್ಲಿ ಮಹಿಳೆ ಸಂಪೂರ್ಣ ಹಲ್ಲುಗಳೊಂದಿಗೆ ಜನಿಸಿದ ತಮ್ಮ ಮಗಳನ್ನು ತೋರಿಸಿದ್ದಾರೆ. ಮಗಳು ಹುಟ್ಟುವಾಗಲೇ ಸಂಪೂರ್ಣ ಹಲ್ಲುಗಳನ್ನು ಹೊಂದಿದ್ದಳು ಎಂಬುದನ್ನು ಅವರು ಹೇಳಿದ್ದಾರೆ.


ಈ ಸ್ಥಿತಿಯನ್ನು ಸಾಮಾನ್ಯವಾಗಿ ಹಲ್ಲುಗಳನ್ನು ಹಾಲು ಹಲ್ಲು ಎಂದು ಕರೆಯಲಾಗುತ್ತದೆ. ಇದು ಮಗುವಿಗೆ ಹೆಚ್ಚು ಹಾನಿಕಾರಕವಲ್ಲದಿದ್ದರೂ ಇದು ತಾಯಿಗೆ ತೊಂದರೆ ಉಂಟುಮಾಡಬಹುದು. ಯಾಕೆಂದರೆ ಅವಳು ತನ್ನ ಮಗುವಿಗೆ ಆಹಾರವನ್ನು ನೀಡಲು ಕಷ್ಟವಾಗಬಹುದು. ಇದಲ್ಲದೆ ಹಲ್ಲುಗಳು ಮುರಿದರೆ ಮಗು ನುಂಗುವ ಅಪಾಯವಿದೆ.

ಇದನ್ನೂ ಓದಿ: Viral Video: ವೃದ್ಧನ ಮೊಬೈಲ್‌ ಕಸಿದು ಓಡಿದ ಯುವಕನಿಗೆ ಯಾವ ಗತಿಯಾಯಿತು ನೋಡಿ!

ಈ ವಿಡಿಯೋ ಕ್ಲಿಪ್ ಅನ್ನು ಅಪ್‌ಲೋಡ್ ಮಾಡಿದ ಅನಂತರ ಅನೇಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ಮಗುವನ್ನು ನೋಡಿ ಹೆದರಿದ್ದರು.

ಬಳಕೆದಾರರಲ್ಲಿ ಒಬ್ಬರು ಹೀಗೆ ಬರೆದಿದ್ದಾರೆ, ಮಗು ಚೆನ್ನಾಗಿದೆ ಎಂದು ನಾನು ಭಾವಿಸುತ್ತೇನೆ. ಮಗು ಬೆಳೆಯುವಾಗ ನೀವು ಯಾವುದೇ ಸಮಸ್ಯೆಗಳನ್ನು ಎದುರಿಸಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬ ಬಳಕೆದಾರರು, ಕ್ಷಮಿಸಿ, ಆದರೆ ಮಗುವು ಭಯಾನಕವಾಗಿ ಕಾಣುತ್ತಿದೆ ಎಂದಿದ್ದಾರೆ.

Continue Reading

ವೈರಲ್ ನ್ಯೂಸ್

Viral News: ಮಕ್ಕಳ ಹಸಿವು ನೀಗಿಸಲು ಸೈನಿಕರೆದುರು ಬೆತ್ತಲಾಗುತ್ತಿರುವ ಮಹಿಳೆಯರು!

Viral News: ಯುದ್ಧ ಪೀಡಿತ ಸುಡಾನ್‌ನಲ್ಲಿ ಮಹಿಳೆಯರು ತಮ್ಮ ಕುಟುಂಬದವರಿಗಾಗಿ ಆಹಾರವನ್ನು ಪಡೆಯಲು ಸೈನಿಕರೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸಲಾಗುತ್ತಿದೆ ಎಂಬ ಸುದ್ದಿ ಈಗ ಸಂಚಲನ ಮೂಡಿಸಿದೆ. ಸುಡಾನ್ ನಗರದ ಒಮ್ದುರ್ಮನ್‌ನಿಂದ ಪಲಾಯನ ಮಾಡಿದ ಅನೇಕ ಮಹಿಳೆಯರು ತಮ್ಮ ಕುಟುಂಬದವರ ಊಟಕ್ಕಾಗಿ ಆಹಾರವನ್ನು ಪಡೆಯಲು ಮತ್ತು ಹಣವನ್ನು ಸಂಗ್ರಹಿಸಲು ಸೈನಿಕರೊಂದಿಗೆ ಲೈಂಗಿಕ ಕ್ರಿಯೆ ನಡೆಸುವುದು ಬಿಟ್ಟರೆ ಬೇರೆ ದಾರಿಯಿಲ್ಲ ಎಂದು ದುಃಖ ತೋಡಿಕೊಂಡಿದ್ದಾರೆ.

VISTARANEWS.COM


on

Viral News
Koo

ಸುಡಾನ್: ಸೈನಿಕರನ್ನು ಜನರು ತಮ್ಮ ರಕ್ಷಕರೆಂದು (Viral News) ಭಾವಿಸುತ್ತಾರೆ. ಯಾಕೆಂದರೆ ಅವರು ಹಗಲಿರುಳೆನ್ನದೇ ದೇಶದ ಗಡಿಯಲ್ಲಿ ಕಾವಲು ಕಾಯುತ್ತಾ ಶತ್ರು ದೇಶದವರಿಂದ ಜನರ ಪ್ರಾಣವನ್ನು ಕಾಪಾಡುತ್ತಾರೆ. ಹಾಗಾಗಿ ಜನರು ಅವರಿಗೆ ಗೌರವವನ್ನು ನೀಡುತ್ತಾರೆ. ಆದರೆ ಅಂತಹ ಗೌರವದ ಸ್ಥಾನದಲ್ಲಿರುವ ಸೈನಿಕರು ತಮ್ಮ ಲೈಂಗಿಕ ದಾಹವನ್ನು ತೀರಿಸಿಕೊಳ್ಳಲು ದೇಶದ ಮಹಿಳೆಯರನ್ನು ಬಳಸಿಕೊಂಡರೆ? ಈ ಸುದ್ದಿ ಎಲ್ಲೆಡೆ ವೈರಲ್‌ ಆಗಿದೆ.

ಯುದ್ಧ ಪೀಡಿತ ಸುಡಾನ್‍ನಲ್ಲಿ ಜನ ಆಹಾರ ಇಲ್ಲದೆ ಬಳಲುತ್ತಿದ್ದಾರೆ. ಮಹಿಳೆಯರು ತಮ್ಮ ಕುಟುಂಬದವರಿಗಾಗಿ ಆಹಾರವನ್ನು ಪಡೆಯಲು ಸೈನಿಕರೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸಲಾಗುತ್ತಿದೆ ಎಂಬ ಆಘಾತಕರ ಸುದ್ದಿ ಬೆಳಕಿಗೆ ಬಂದಿದೆ. ಸುಡಾನ್ ನಗರದ ಒಮ್ದುರ್ಮನ್‍ನಿಂದ ಪಲಾಯನ ಮಾಡಿದ ಅನೇಕ ಮಹಿಳೆಯರು ತಮ್ಮ ಕುಟುಂಬದವರ ಊಟಕ್ಕಾಗಿ ಆಹಾರವನ್ನು ಪಡೆಯಲು ಮತ್ತು ಹಣವನ್ನು ಸಂಗ್ರಹಿಸಲು ಸೈನಿಕರೊಂದಿಗೆ ಲೈಂಗಿಕ ಕ್ರಿಯೆಗೆ ಒಳಗಾಗುವುದೊಂದೇ ಮಾರ್ಗವಾಗಿದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಮಹಿಳೆಯೊಬ್ಬರು, ತನ್ನ ಹೆತ್ತವರು ತುಂಬಾ ವಯಸ್ಸಾದವರು ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ತನಗೆ ಹೊರಗೆ ಹೋಗಿ ದುಡಿಯಲು ಆಗುತ್ತಿಲ್ಲ. ಹಾಗಾಗಿ ತಾನು ಸೈನಿಕರ ಬಳಿಗೆ ಹೋದಾಗ ಅವರ ಬಳಿ ಆಹಾರವನ್ನು ಪಡೆಯಲು ಅವರ ಜೊತೆ ಲೈಂಗಿಕ ಕ್ರಿಯೆ ನಡೆಸುವುದೊಂದೇ ಮಾರ್ಗವಾಗಿತ್ತು. ಅವರು ಕಾರ್ಖಾನೆಗಳ ಪ್ರದೇಶದಲ್ಲಿ ಎಲ್ಲೆಡೆ ಇದ್ದರು. ಹಾಗಾಗಿ ಕಳೆದ ವರ್ಷ ಮೇ ತಿಂಗಳಲ್ಲಿ ಮಾಂಸ ನೀಡುವ ಕಾರ್ಖಾನೆಯಲ್ಲಿ ಸೈನಿಕರೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಒತ್ತಾಯಿಸಿದರು ಎಂಬುದಾಗಿ ತಿಳಿಸಿದ್ದಾಳೆ.

ದೇಶದಲ್ಲಿ ಅಂತರ್ಯುದ್ಧ ಪ್ರಾರಂಭವಾದ ಕೂಡಲೇ ಈ ದೌರ್ಜನ್ಯ ಪ್ರಾರಂಭವಾದವು ಎಂದು ವರದಿಯಾಗಿದೆ. ಕಳೆದ ವರ್ಷ ಏಪ್ರಿಲ್ 15ರಂದು ಸಂಘರ್ಷ ಪ್ರಾರಂಭವಾದ ಕೆಲವೇ ದಿನಗಳಲ್ಲಿ ಸಶಸ್ತ್ರ ಪುರುಷರಿಂದ ಅತ್ಯಾಚಾರದ ವರದಿಗಳು ಹೊರಬಂದವು. ಸುಡಾನ್‍ನಲ್ಲಿನ ಯುದ್ಧದಲ್ಲಿ ಹತ್ತಾರು ಜನರು ಸಾವನಪ್ಪಿದ್ದರು. ಕೆಲವು ಅಂದಾಜಿನ ಪ್ರಕಾರ ಸಾವಿನ ಸಂಖ್ಯೆ 150,000ದಷ್ಟಿದೆ ಎನ್ನಲಾಗಿತ್ತು. ಈ ಯುದ್ಧದಿಂದ ಇಲ್ಲಿನ ಜನರು ಸ್ಥಳಾಂತರಗೊಳ್ಳಬೇಕಾಯಿತು. ಇದು ದೇಶವನ್ನು ಕ್ಷಾಮದ ಅಂಚಿಗೆ ತಂದಿತ್ತು.

ಇದೀಗ ತಮ್ಮ ನಿಯಂತ್ರಣದಲ್ಲಿರುವ ಪ್ರದೇಶಗಳಲ್ಲಿ ಆರ್‌ಎಸ್‌ಎಫ್ ಹೋರಾಟಗಾರರು ವ್ಯವಸ್ಥಿತ ರೀತಿಯಲ್ಲಿ ಲೈಂಗಿಕ ದೌರ್ಜನ್ಯ ಎಸಗುತ್ತಿರುವ ಭಯಾನಕ ಕಥೆಗಳನ್ನು ಹಂಚಿಕೊಳ್ಳಲು ಹಲವಾರು ಮಹಿಳೆಯರು ಮುಂದೆ ಬಂದಿದ್ದಾರೆ. ಸೈನಿಕರೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ನಂತರ ಅವರಿಗೆ ಆಹಾರ, ಅಡುಗೆ ಉಪಕರಣಗಳು ಮತ್ತು ಸುಗಂಧ ದ್ರವ್ಯಗಳನ್ನು ನೀಡಲಾಗಿದೆ ಎಂದು ಮಹಿಳೆಯೊಬ್ಬರು ಹೇಳಿದ್ದಾರೆ. ಅಲ್ಲದೇ ಸೈನಿಕರು ಮಹಿಳೆಯರನ್ನು ಪಾಳುಬಿದ್ದ ಮನೆಗಳಿಗೆ ಕರೆತಂದು ಅಲ್ಲಿ ಅವರನ್ನು ಸರತಿ ಸಾಲಿನಲ್ಲಿ ನಿಲ್ಲುವಂತೆ ತಿಳಿಸುತ್ತಾರೆ. ಬಳಿಕ ತಮಗೆ ಇಷ್ಟ ಆದವರನ್ನು ಆಯ್ಕೆ ಮಾಡುತ್ತಾರೆ. ಲೈಂಗಿಕ ಕ್ರಿಯೆ ನಡೆಸಿ ಕಳುಹಿಸುತ್ತಾರೆ.

ಇದನ್ನೂ ಓದಿ: ವೃದ್ಧನ ಮೊಬೈಲ್‌ ಕಸಿದು ಓಡಿದ ಯುವಕನಿಗೆ ಯಾವ ಗತಿಯಾಯಿತು ನೋಡಿ!

ಇನ್ನೊಬ್ಬ ಮಹಿಳೆ ತಾನು ಸೈನಿಕನೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ನಿರಾಕರಿಸಿದ ನಂತರ ಅವರು ತನಗೆ ಚಿತ್ರಹಿಂಸೆ ನೀಡಿದರು ಮತ್ತು ತನ್ನ ಕಾಲುಗಳನ್ನು ಸುಟ್ಟು ಹಾಕಿದರು ಎಂದು ಹೇಳಿದ್ದಾಳೆ.

Continue Reading

ವೈರಲ್ ನ್ಯೂಸ್

Viral Video: ಜಿಂಕೆಯನ್ನು ತಿನ್ನಲು ಸುರುಳಿ ಸುತ್ತಿದ ಹೆಬ್ಬಾವಿಗೆ ಕೊನೆಗೆ ಆಗಿದ್ದೇನು? ಭಯಾನಕ ವಿಡಿಯೊ

Viral Video: ಒಂದು ಪ್ರಾಣಿಯನ್ನು ತಿಂದು ಇನ್ನೊಂದು
ಪ್ರಾಣಿ ಬದುಕುವುದು ಪ್ರಕೃತಿಯ ನಿಯಮ. ಆದರೆ ಕೆಲವೊಮ್ಮೆ ಬಲಿಷ್ಠ ಪ್ರಾಣಿಗಳು, ಅಮಾಯಕ ಜೀವಿಗಳನ್ನು ಹಿಡಿದಾಗ ಕರುಳು ಚುರ್ರಕ್ಕೆಂದು ತಪ್ಪಿಸುವುದಕ್ಕೆ ಕೆಲವರು ಹೋಗುತ್ತಾರೆ. ಇಲ್ಲಿ ಕೂಡ ಹಾಗೇ ಆಗಿದೆ. ಬೃಹತ್ ಹೆಬ್ಬಾವೊಂದು ಮತ್ತು ಜಿಂಕೆಯನ್ನು ಇನ್ನೇನು ತಿಂದು ಹೊಟ್ಟೆ ತುಂಬಿಸಿಕೊಳ್ಳುಬೇಕು ಎಂದುಕೊಳ್ಳುತ್ತಿರುವಾಗ ಅಲ್ಲಿಗೆ ಬಂದ ವ್ಯಕ್ತಿಯೊಬ್ಬ ಹೆಬ್ಬಾವನ್ನು ಮರದ ಕೊಂಬೆಯಿಂದ ಹೊಡೆದಿದ್ದಾನೆ. ಆಗ ಹೆದರಿದ ಹೆಬ್ಬಾವು ಜಿಂಕೆಯನ್ನು ಬಿಟ್ಟು ಓಡಿ ಹೋಗಿದೆ!

VISTARANEWS.COM


on

Viral Video
Koo


ಬೆಂಗಳೂರು: ಹೆಚ್ಚಿನ ಜನ ಸ್ವಾರ್ಥಿಯಾಗಿರುತ್ತಾರೆ. ಯಾಕೆಂದರೆ ಯಾವುದೇ ಜೀವಿಗಳು ಸಂಕಷ್ಟದಲ್ಲಿದ್ದರೂ ಕೂಡ ಅವುಗಳನ್ನು ರಕ್ಷಿಸುವ ಬದಲು ತನ್ನ ಜೀವ ಉಳಿದರೆ ಸಾಕು ಎಂದು ಓಡುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಜೀವವನ್ನು ಲೆಕ್ಕಿಸದೆ ಜಿಂಕೆಯೊಂದರ ಪ್ರಾಣ ರಕ್ಷಣೆಗೆ ಮುಂದಾಗಿದ್ದಾನೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ವ್ಯಕ್ತಿಯ ಕಾರ್ಯವನ್ನು ಮೆಚ್ಚಿಕೊಂಡರೆ ಕೆಲವರು ಪ್ರಕೃತಿ ನಿಯಮವನ್ನು ಉಲ್ಲಂಘಿಸಿರುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಆಘಾತಕಾರಿ ವಿಡಿಯೊದಲ್ಲಿ ಬೃಹತ್ ಹೆಬ್ಬಾವೊಂದು ಮತ್ತು ಜಿಂಕೆಯನ್ನು ಹಿಡಿದಿರುವ ದೃಶ್ಯ ಕಂಡುಬಂದಿದೆ. ಹೆಬ್ಬಾವು ರಸ್ತೆ ಬದಿಯಲ್ಲಿ ಜಿಂಕೆಯೊಂದರ ಮೈಯನ್ನು ಬಿಗಿಯಾಗಿ ಸುತ್ತಿಕೊಂಡಿರುವುದನ್ನು ತೋರಿಸುತ್ತದೆ. ಅಲ್ಲಿಗೆ ಬಂದ ವ್ಯಕ್ತಿಯೊಬ್ಬ ಹೆಬ್ಬಾವನ್ನು ಮರದ ಕೊಂಬೆಯಿಂದ ಹೊಡೆಯುತ್ತಿರುವುದನ್ನು ತೋರಿಸುತ್ತದೆ. ಆಗ ಹೆದರಿದ ಹೆಬ್ಬಾವು ಜಿಂಕೆಯನ್ನು ಬಿಟ್ಟು ಓಡಿ ಹೋಗಿದೆ. ಗಾಬರಿಗೊಂಡಿದ್ದ ಜಿಂಕೆ ಜೀವ ಉಳಿಸಿಕೊಂಡು ಓಡಿ ಹೋಗಿದೆ. ಕಾರಿನ ಒಳಗಿನಿಂದ ಚಿತ್ರೀಕರಿಸಲಾದ ಈ ದೃಶ್ಯ ನೈಜ ಘಟನೆಯಾಗಿದ್ದು, ಇದನ್ನು 50 ದಶಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. “ನೀವು ಚಾಲನೆ ಮಾಡುತ್ತಿದ್ದಾಗ ಇದನ್ನು ನೋಡಿದರೆ, ನೀವು ಮಧ್ಯಪ್ರವೇಶಿಸುತ್ತೀರಾ ಅಥವಾ ಈ ಮುಂದುವರಿಸಲು ಬಿಡುತ್ತೀರಾ? “ ಎಂದು ಈ ವಿಡಿಯೊಗೆ ಶೀರ್ಷಿಕೆ ನೀಡಲಾಗಿದೆ.

ಈ ಘಟನೆ ನೈಸರ್ಗಿಕವಾಗಿದೆ. ಯಾಕೆಂದರೆ ಒಂದು ಪ್ರಾಣಿ ತನ್ನ ಆಹಾರಕ್ಕಾಗಿ ಮತ್ತೊಂದು ಪ್ರಾಣಿಯನ್ನು ಹಿಡಿದು ತಿನ್ನುವುದು ಅನಿರ್ವಾಯ. ಇದು ದೇವರ ಸೃಷ್ಟಿ. ಆದರೆ ಇಂತಹ ಘಟನೆಯಲ್ಲಿ ಮಧ್ಯಪ್ರವೇಶಿಸುವುದು ಸೂಕ್ತವೇ ಎಂಬ ಬಗ್ಗೆ ಈ ವಿಡಿಯೊ ಚರ್ಚೆಯನ್ನು ಹುಟ್ಟುಹಾಕಿದೆ.

ಇದನ್ನೂ ಓದಿ: ವೃದ್ಧನ ಮೊಬೈಲ್‌ ಕಸಿದು ಓಡಿದ ಯುವಕನಿಗೆ ಯಾವ ಗತಿಯಾಯಿತು ನೋಡಿ!

ಜಿಂಕೆಯ ಜೀವ ಉಳಿಸಿದ್ದಕ್ಕೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೆ, ಹೆಬ್ಬಾವಿನ ಆಹಾರವನ್ನು ಕಸಿದುಕೊಂಡಿದ್ದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರಕೃತಿಯ ನಿಯಮಗಳ ಮಧ್ಯೆ ಹಸ್ತಕ್ಷೇಪ ಮಾಡಬೇಡಿ. ಇದು ಸೂಕ್ಷ್ಮ ಸಮತೋಲನವಾಗಿದೆ. ಅದನ್ನು ಭಂಗಗೊಳಿಸುವುದು ಒಳ್ಳೆಯದಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದರೆ, ಮತ್ತೊಬ್ಬರು ಆ ವ್ಯಕ್ತಿ ಅಲ್ಲಿಗೆ ಬಂದಿರುವುದೇ ಈ ಜಿಂಕೆಯ ಜೀವ ಉಳಿಸಲು ಎಂದು ಸಮರ್ಥನೆ ನೀಡಿದ್ದಾರೆ.

Continue Reading

ವೈರಲ್ ನ್ಯೂಸ್

Viral News: 10 ವರ್ಷ ಪ್ರಯತ್ನಿಸಿ ಸಿಎ ಪಾಸಾದ ಚಹಾ ಮಾರುವವನ ಮಗಳು! ಭಾವುಕ ವಿಡಿಯೊ ನೋಡಿ

ದೆಹಲಿಯ ಬೀದಿಯಲ್ಲಿ ಚಹಾ ಮಾರಾಟ ಮಾಡುವವನ ಮಗಳು ಸಿಎ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ಇದನ್ನು ಸಾಮಾಜಿಕ ಜಾಲತಾಣದಲ್ಲಿ ಆಕೆ ಹಂಚಿಕೊಂಡಿದ್ದಾಳೆ. ಕಷ್ಟದ ಬದುಕಿನ ಮಧ್ಯೆಯೂ ತಾನು ಸಿಎ ಪರೀಕ್ಷೆ ಬರೆಯಲು ಏನು ಕಾರಣ, ಹೇಗೆ ಪರೀಕ್ಷೆಯನ್ನು ಎದುರಿಸಬೇಕಾಯಿತು ಎಂಬುದನ್ನು ಹೇಳಿಕೊಂಡಿದ್ದಾಳೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral News) ಆಗಿದೆ.

VISTARANEWS.COM


on

By

Viral News
Koo

ನವದೆಹಲಿ: ಹತ್ತು ವರ್ಷಗಳ ಹಿಂದೆ ಮಾಡಿದ ದೃಢ ನಿರ್ಧಾರದ ಬಳಿಕ ಕಠಿಣ ಪರಿಶ್ರಮಪಟ್ಟು ಓದಿದ ಮಗಳು ಸಿಎ ಪರೀಕ್ಷೆಯಲ್ಲಿ (CA exam) ತೇರ್ಗಡೆಯಾಗಿರುವುದನ್ನು ಕೇಳಿ ದೆಹಲಿಯ ಬೀದಿಯಲ್ಲಿ ಚಹಾ ಮಾರಾಟ ಮಾಡುವ ತಂದೆಯ (Chai seller’s daughter) ಸಂತೋಷ ಕಣ್ಣೀರಾಗಿ ಹರಿದುದನ್ನು ಮಗಳು ಲಿಂಕ್ಡ್ ಇನ್ ನಲ್ಲಿ (LinkedIn) ಹಚ್ಚಿಕೊಂಡಿದ್ದಾಳೆ. ಇದು ಸಾಮಾಜಿಕ ಜಾಲತಾಣದಲ್ಲಿ (Viral News) ವೈರಲ್ ಆಗಿದೆ.

ದೆಹಲಿಯ ಅಮಿತಾ ಪ್ರಜಾಪತಿ ಸಿಎ ಪರೀಕ್ಷೆ ಪಾಸಾಗಿರುವ ವಿದ್ಯಾರ್ಥಿನಿ. ತನ್ನ ಶೈಕ್ಷಣಿಕ ಪಯಣದುದ್ದಕ್ಕೂ ತಂದೆ ಹೇಗೆ ತನಗೆ ಬೆಂಬಲವಾಗಿ ನಿಂತರು ಎಂಬುದನ್ನು ಆಕೆ ಹೇಳಿಕೊಂಡಿದ್ದಾಳೆ. ಅಮಿತಾ ಪ್ರಜಾಪತಿ ಅವರು ಪರೀಕ್ಷೆಯನ್ನು ಹೇಗೆ ಎದುರಿಸಿದರು ಎಂಬುದನ್ನು ವಿವರಿಸಿದ್ದಾರೆ. ತಂದೆಯನ್ನು ತಬ್ಬಿಕೊಂಡು ಕಣ್ಣೀರು ಈಡುತ್ತಿರುವ ಭಾವನಾತ್ಮಕ ವಿಡಿಯೋವನ್ನು ಆಕೆ ಪೋಸ್ಟ್ ಮಾಡಿದ್ದಾಳೆ.

ಇದು 10 ವರ್ಷಗಳನ್ನು ತೆಗೆದುಕೊಂಡಿತು. ಪ್ರತಿದಿನ ನನ್ನ ಕಣ್ಣುಗಳಲ್ಲಿ ಸಿಎ ಆಗುವ ಕನಸು ಇತ್ತು. ಇದು ಕೇವಲ ಕನಸೇ ಅಥವಾ ಇದು ಎಂದಾದರೂ ನನಸಾಗಬಹುದೇ ಎಂದು ನಾನು ನನ್ನನ್ನು ಕೇಳಿಕೊಳ್ಳುತ್ತೇನೆ. 2024ರ ಜುಲೈ 11ರಂದು ಅದು ನಿಜವಾಯಿತು. ಹೌದು ಕನಸುಗಳು ನನಸಾಗುತ್ತವೆ. ಜನರು ಹೇಳುತ್ತಿದ್ದರು, ನೀವು ಅವಳನ್ನು ಏಕೆ ಇಷ್ಟು ದೊಡ್ಡ ಕೋರ್ಸ್‌ಗೆ ಸೇರಿಸುತ್ತಿದ್ದೀರಿ, ನಿಮ್ಮ ಮಗಳು ಇದನ್ನು ಮಾಡಲು ಸಾಧ್ಯವಾಗುವುದಿಲ್ಲ ಎಂದು ತಂದೆಗೆ ಹೇಳುತ್ತಿದ್ದರು ಎಂದು ಅಮಿತಾ ಪ್ರಜಾಪತಿ ಹೇಳಿದರು.

ಚಹಾ ಮಾರಾಟ ಮಾಡುವ ಮೂಲಕ ತಂದೆ ಹಣವನ್ನು ಉಳಿಸಿ ಮನೆಯನ್ನು ನಿರ್ಮಿಸುವ ಕನಸು ಕಾಣುತ್ತಿದ್ದರು. ಇದರಿಂದ ಮಗಳಿಗೆ ಶಿಕ್ಷಣ ನೀಡಲು ಸಾಧ್ಯವಿಲ್ಲ ಎಂದು ಅವರು ಹೇಳುತ್ತಿದ್ದರು. ಬೆಳೆದ ಹೆಣ್ಣು ಮಕ್ಕಳೊಂದಿಗೆ ನೀವು ಎಷ್ಟು ದಿನ ಬೀದಿಯಲ್ಲಿ ವಾಸಿಸುತ್ತೀರಿ ಎಂದು ಜನ ಪ್ರಶ್ನಿಸುತ್ತಿದ್ದರು. ಅವರು ಹೇಗಿದ್ದರೂ ಬೇರೆಯವರ ಸಂಪತ್ತು. ಒಂದು ದಿನ ಬಿಟ್ಟು ಹೋಗುತ್ತಾರೆ ಮತ್ತು ನಿಮಗೆ ಏನೂ ಉಳಿಯುವುದಿಲ್ಲ ಎನ್ನುತ್ತಿದ್ದರು ಎನ್ನುತ್ತಾರೆ ಅಮಿತಾ.

ತಂದೆಯೊಂದಿಗೆ ನಾನು ಕೊಳೆಗೇರಿಯಲ್ಲಿ ವಾಸಿಸುತ್ತಿದ್ದೇನೆ. ಇದು ಕೆಲವೇ ಜನರಿಗೆ ತಿಳಿದಿದೆ. ಆದರೆ ಈಗ ನಾನು ಇದಕ್ಕೆ ನಾಚಿಕೆಪಡುತ್ತಿಲ್ಲ. ಕೆಲವರು ಸ್ಲಂ ನಿವಾಸಿಗಳು, ಹುಚ್ಚು ಮನಸ್ಸಿನವರು ಎಂದು ಹೇಳುತ್ತಿದ್ದರು. ನಿಜ, ಅದು ಸಂಪೂರ್ಣವಾಗಿ ಸರಿ. ನನ್ನ ಮನಸ್ಸು ಹುಚ್ಚ ಆಗಿಲ್ಲದಿದ್ದರೆ ನಾನು ಇಂದು ಇಲ್ಲಿಗೆ ಬರುತ್ತಿರಲಿಲ್ಲ. ಈಗ, ನನ್ನ ತಂದೆಗೆ ಮನೆ ನಿರ್ಮಿಸಲು ನಾನು ಸಾಕಷ್ಟು ಸಮರ್ಥಳಾಗಿದ್ದೇನೆ. ನಾನು ಅವರ ಎಲ್ಲಾ ಆಸೆಗಳನ್ನು ಪೂರೈಸಬಲ್ಲೆ. ಮೊದಲ ಬಾರಿಗೆ, ನಾನು ನನ್ನ ತಂದೆಯನ್ನು ಅಪ್ಪಿಕೊಂಡು ಅಳುತ್ತಿದ್ದೆ. ಇದು ಶಾಂತಿ. ನಾನು ಈ ಕ್ಷಣಕ್ಕಾಗಿ ಬಹಳ ಸಮಯ ಕಾಯುತ್ತಿದ್ದೆ, ತೆರೆದ ಕಣ್ಣುಗಳಿಂದ ಈ ಕನಸನ್ನು ಕಲ್ಪಿಸಿಕೊಂಡಿದ್ದೇನೆ ಮತ್ತು ಇಂದು ಅದು ವಾಸ್ತವದಲ್ಲಿ ಸೆರೆಹಿಡಿಯಲ್ಪಟ್ಟಿದೆ ಎಂದು ಭಾವುಕರಾಗುತ್ತಾರೆ ಅಮಿತಾ.


ಇದು ಎಂದಿಗೂ ತಡವಾಗಿಲ್ಲ ಎಂದು ನಾನು ಎಲ್ಲರಿಗೂ ಹೇಳಲು ಬಯಸುತ್ತೇನೆ ಮತ್ತು ನಮ್ಮ ಕನಸುಗಳು ನಿಜವಾಗುತ್ತವೆ. ಇಂದು ನಾನು ಏನಾಗಿದ್ದರೂ ನನ್ನ ತಂದೆ ಮತ್ತು ತಾಯಿಯಿಂದ. ಅವರು ನನ್ನನ್ನು ತುಂಬಾ ನಂಬಿದ್ದರು. ಒಂದು ದಿನ ನಾನು ಮದುವೆಯಾಗಿ ಅವರನ್ನು ಬಿಟ್ಟು ಹೋಗುತ್ತೇನೆ ಎಂದು ಎಂದಿಗೂ ಯೋಚಿಸಲಿಲ್ಲ. ಆದರೆ ತಮ್ಮ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವ ದೃಢ ನಿರ್ಧಾರ ಮಾಡಿದ್ದರು ಎನ್ನುತ್ತಾರೆ ಅಮಿತಾ ಪ್ರಜಾಪತಿ.

ಇದನ್ನೂ ಓದಿ: Viral Video: ಭವ್ಯ ರಥೋತ್ಸವ; ಪ್ಯಾರಿಸ್‌ ಬೀದಿಯಲ್ಲಿ ಸಾವಿರಾರು ತೆಂಗಿನ ಕಾಯಿ ಒಡೆದ ಹಿಂದೂಗಳು!

ಅವರು ಮಾಡಿರುವ ಈ ಪೋಸ್ಟ್‌ಗೆ ಹಲವಾರು ಕಮೆಂಟ್‌ಗಳು ಬಂದಿವೆ. ಇದು ಸ್ಫೂರ್ತಿದಾಯಕ! ಆಕೆಯಂತಹ ಕಥೆಗಳನ್ನು ಮೇಲಿಂದ ಕೂಗಿ ಹೇಳಬೇಕು ಮತ್ತು ಅದನ್ನು ಸಂಭ್ರಮಿಸಬೇಕು. ಭರವಸೆ ಮತ್ತು ಪರಿಶ್ರಮದ ಬೆಳಕಿನಂತೆ ಹಿಡಿದಿಟ್ಟುಕೊಳ್ಳಬೇಕು ಎಂದಿದೆ ಈ ಪೋಸ್ಟ್‌. ಮತ್ತೊಬ್ಬರು ಕಮೆಂಟ್ ಮಾಡಿ, ತಂದೆಯು ತನ್ನ ಮಗಳನ್ನು ಯಶಸ್ಸಿನ ಏಣಿಯನ್ನು ಏರುವಂತೆ ಮಾಡುವ ಅದ್ಭುತ ಭಾವುಕ ಕತೆ ಎಂದು ಪ್ರತಿಕ್ರಿಯಿಸಿದ್ದಾರೆ.

Continue Reading
Advertisement
Viral Video
ವೈರಲ್ ನ್ಯೂಸ್2 mins ago

Viral Video: ಹುಟ್ಟುವಾಗಲೇ 32 ಹಲ್ಲುಗಳೊಂದಿಗೆ ಜನಿಸಿದ ಮಗು! ಹೀಗೇಕಾಯಿತು?

karnataka Rain
ಮಳೆ7 mins ago

Karnataka Rain : ಆಲದ ಮರ ಬಿದ್ದು ಆಟೋ ಜಖಂ, ಚಾಲಕ ಪಾರು; ನಾಳೆಗೂ ಗಾಳಿ-ಮಳೆ ಎಚ್ಚರ

Damage to furniture learning material by miscreants in government model school
ಉತ್ತರ ಕನ್ನಡ18 mins ago

Banavasi News: ಬನವಾಸಿಯ ಸರ್ಕಾರಿ ಮಾದರಿ ಶಾಲೆಯಲ್ಲಿ ಕಿಡಿಗೇಡಿಗಳಿಂದ ಕಲಿಕಾ ಸಾಮಗ್ರಿ ಹಾನಿ

Contact Lens Awareness
ಫ್ಯಾಷನ್19 mins ago

Contact Lens Awareness: ಶೋಕಿಗಾಗಿ ಕಾಂಟ್ಯಾಕ್ಟ್‌ ಲೆನ್ಸ್ ಧರಿಸುವವರೇ ಎಚ್ಚರ! ಈ 5 ಸಂಗತಿ ಗಮನದಲ್ಲಿರಲಿ

Viral News
ವೈರಲ್ ನ್ಯೂಸ್20 mins ago

Viral News: ಮಕ್ಕಳ ಹಸಿವು ನೀಗಿಸಲು ಸೈನಿಕರೆದುರು ಬೆತ್ತಲಾಗುತ್ತಿರುವ ಮಹಿಳೆಯರು!

Suraj Revanna Case
ಕರ್ನಾಟಕ43 mins ago

Suraj Revanna Case: ಸೂರಜ್‌ ರೇವಣ್ಣಗೆ ಬಿಗ್‌ ರಿಲೀಫ್‌; 2ನೇ ಕೇಸ್‌ನಲ್ಲೂ ಜಾಮೀನು, ನಾಳೆ ರಿಲೀಸ್‌!

Gautam Gambhir
ಕ್ರೀಡೆ52 mins ago

Gautam Gambhir : ನನ್ನ ಮತ್ತು ಕೊಹ್ಲಿಯ ನಡುವೆ ಗೌರವಯುತ ಸಂಬಂಧವಿದೆ; ಗೌತಮ್ ಗಂಭೀರ್​

Nipah Virus
ಆರೋಗ್ಯ53 mins ago

Nipah Virus: ಡೇಂಜರಸ್‌ ನಿಫಾ ವೈರಸ್‌; ಇದರ ಲಕ್ಷಣಗಳೇನು? ನಮಗೆ ಅಪಾಯ ಇದೆಯೆ?

Nitish Kumar
ದೇಶ54 mins ago

Nitish Kumar: ಬಿಹಾರಕ್ಕೆ ವಿಶೇಷ ಸ್ಥಾನಮಾನ ಕೊಡಲ್ಲ ಎಂದ ಮೋದಿ ಸರ್ಕಾರ; ನಿತೀಶ್‌ ಕುಮಾರ್‌ ಬಂಡಾಯ ನಿಶ್ಚಿತ?

Shoe Theft
ಕ್ರೈಂ59 mins ago

Shoe Theft: ಬೆಂಗಳೂರಿನಲ್ಲಿ 10,000 ಶೂ, ಚಪ್ಪಲಿ ಕದ್ದ ಖತರ್‌ನಾಕ್‌ ಕಳ್ಳರ ಬಂಧನ!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ2 days ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

karnataka Rain
ಮಳೆ3 days ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ3 days ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ4 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ4 days ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ6 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ1 week ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ1 week ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

ಟ್ರೆಂಡಿಂಗ್‌