Rahul Gandhi:‌ ವ್ಹೀಲ್‌ ಇರುವ ಬ್ಯಾಗ್ ತಲೆಮೇಲೆ ಹೊತ್ತು ತಿರುಗಿದ ರಾಹುಲ್‌ ಗಾಂಧಿ; ಭಾರಿ ಟ್ರೋಲ್ - Vistara News

ವೈರಲ್ ನ್ಯೂಸ್

Rahul Gandhi:‌ ವ್ಹೀಲ್‌ ಇರುವ ಬ್ಯಾಗ್ ತಲೆಮೇಲೆ ಹೊತ್ತು ತಿರುಗಿದ ರಾಹುಲ್‌ ಗಾಂಧಿ; ಭಾರಿ ಟ್ರೋಲ್

Rahul Gandhi:‌ ದೆಹಲಿಯ ಆನಂದ್‌ ವಿಹಾರ ರೈಲು ನಿಲ್ದಾಣಕ್ಕೆ ಭೇಟಿ ನೀಡಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಅಲ್ಲಿ ಬ್ಯಾಗ್‌ ಹೊರುವವರ (ಕೂಲಿಗಳು) ಸಮಸ್ಯೆಗಳನ್ನು ಆಲಿಸಿದರು.

VISTARANEWS.COM


on

Rahul Gandhi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ಭಾರತ್‌ ಜೋಡೋ ಯಾತ್ರೆ (Bharat Jodo Yatra) ವೇಳೆ ಜನ ಹೆಚ್ಚು ಪ್ರೀತಿ ತೋರಿಸಿದ ಬಳಿಕ ಹೆಚ್ಚು ಹೆಚ್ಚು ಜನರ ಜತೆ ಬೆರೆಯುತ್ತಿದ್ದಾರೆ. ರೈತರ ಜತೆಗೂಡಿ ಭತ್ತ ನಾಟಿ ಮಾಡುವುದು, ಬೈಕ್‌ ರಿಪೇರಿ ಅಂಗಡಿಗಳಿಗೆ ತೆರಳುವುದು ಸೇರಿ ಹಲವು ರೀತಿಯಲ್ಲಿ ಜನರ ಜತೆ ಕಾಲ ಕಳೆಯಲು ಇಷ್ಟಪಡುತ್ತಿದ್ದಾರೆ. ಇದೇ ರೀತಿ, ದೆಹಲಿಯ ಆನಂದ್‌ ವಿಹಾರ ರೈಲು ನಿಲ್ದಾಣಕ್ಕೆ ತೆರಳಿದ ರಾಹುಲ್‌ ಗಾಂಧಿ, ಬ್ಯಾಗ್‌ ಸೇರಿ ಹಲವು ಲಗೇಜ್‌ ಹೊರುವವರ (ಕೂಲಿಗಳು) ಜತೆ ಮಾತುಕತೆ ನಡೆಸಿದ್ದಾರೆ. ಆದರೆ, ಇದೇ ವೇಳೆ ರಾಹುಲ್‌ ಗಾಂಧಿ ಅವರು ಕೂಲಿಯವರ ಡ್ರೆಸ್‌, ಬ್ಯಾಡ್ಜ್‌ ಹಾಕಿಕೊಂಡು ವ್ಹೀಲ್‌ ಇರುವ ಟ್ರಾಲಿ ಬ್ಯಾಗ್‌ ಹೊತ್ತುಕೊಂಡು ತಿರುಗಾಡಿರುವ ವಿಡಿಯೊ (Viral Video) ವೈರಲ್‌ ಆಗಿದೆ.

ಹೌದು, ರಾಹುಲ್‌ ಗಾಂಧಿ ಅವರು ವ್ಹೀಲ್‌ ಇರುವ ಬ್ಯಾಗ್‌ಅನ್ನು ತಲೆಮೇಲೆ ಹೊತ್ತುಕೊಂಡು ತಿರುಗಾಡಿರುವುದು ಭಾರಿ ಟ್ರೋಲ್‌ ಆಗಿದೆ. ಬಿಜೆಪಿಯವರು ಕೂಡ ರಾಹುಲ್‌ ಗಾಂಧಿ ಅವರನ್ನು ಛೇಡಿಸಿದ್ದಾರೆ. ಜಗತ್ತಿನಲ್ಲಿ ವ್ಹೀಲ್‌ ಇರುವ ಬ್ಯಾಗ್‌ಅನ್ನು ಹೊರುವವರು ರಾಹುಲ್‌ ಗಾಂಧಿ ಮಾತ್ರ ಎಂದು ವ್ಯಂಗ್ಯ ಮಾಡಿದ್ದಾರೆ. ಆದರೆ, ಕೂಲಿಗಳಿಗೆ ಬೆಂಬಲ ಸೂಚಿಸುವ ದಿಸೆಯಲ್ಲಿ ರಾಹುಲ್‌ ಗಾಂಧಿ ಅವರು ಅವರ ಡ್ರೆಸ್‌ ಹಾಗೂ ಬ್ಯಾಡ್ಜ್‌ ಧರಿಸಿ, ಬ್ಯಾಗ್‌ ಹೊತ್ತು ತಿರುಗಾಡಿದ್ದಾರೆ.

ಬಿಜೆಪಿ ಟಾಂಟ್

ಕೆಲ ದಿನಗಳ ಹಿಂದಷ್ಟೇ ದೆಹಲಿಯ ಆನಂದ್‌ ವಿಹಾರ ರೈಲು ನಿಲ್ದಾಣದ ಕೂಲಿಗಳು ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗುವ ಕುರಿತು ಇಂಗಿತ ವ್ಯಕ್ತಪಡಿಸಿದ್ದರು. ಹಾಗಾಗಿ, ರಾಹುಲ್‌ ಗಾಂಧಿ ಅವರು ರೈಲು ನಿಲ್ದಾಣಕ್ಕೆ ತೆರಳಿ ಬ್ಯಾಗ್‌ ಹೊರುವವರ ಜತೆ ಮಾತುಕತೆ ನಡೆಸುವ ಜತೆಗೆ ಅವರ ಸಮಸ್ಯೆಗಳನ್ನು ಆಲಿಸಿದರು. ‌ಇನ್ನು ರಾಹುಲ್‌ ಗಾಂಧಿ ಅವರು ಬ್ಯಾಗ್‌ ಹೊರುವವರ ಜತೆ ಬೆರೆತಿದ್ದು, ಅವರ ಸಮಸ್ಯೆ ಆಲಿಸಿದ ರೀತಿಗೆ ಮೆಚ್ಚುಗೆಯೂ ವ್ಯಕ್ತವಾಗಿದೆ.

ವೈರಲ್‌ ಆದ ವಿಡಿಯೊ

ಇದನ್ನೂ ಓದಿ: Rahul Gandhi: ರಾಹುಲ್‌ ಗಾಂಧಿಗೆ ಮತ್ತೆ ಸಂಕಷ್ಟ! ಸಂಸತ್ ಸದಸ್ಯತ್ವ ಮರುಸ್ಥಾಪನೆ ಪ್ರಶ್ನಿಸಿ ಸುಪ್ರೀಂಗೆ ಅರ್ಜಿ

ಕೆಲ ತಿಂಗಳ ಹಿಂದಷ್ಟೇ ರಾಹುಲ್‌ ಗಾಂಧಿ ಅವರು ದೆಹಲಿಯ ಕಾಜೋಲ್‌ಬಾಗ್‌ನಲ್ಲಿರುವ ಬೈಕ್‌ ರಿಪೇರಿ ಅಂಗಡಿಗಳಿಗೆ ತೆರಳಿದ್ದರು. ಅಲ್ಲಿನ ಕೆಲಸಗಾರರು ಹೇಗೆ ಬೈಕ್‌ ರಿಪೇರಿ ಮಾಡುತ್ತಾರೆ ಎಂಬುದನ್ನು ತಿಳಿದುಕೊಂಡಿದ್ದರು. “ಬೈಕ್‌ ರಿಪೇರಿ ಅಂಗಡಿಗಳಿಗೆ ತೆರಳಿ, ನಾನೂ ವ್ರೆಂಚ್‌ಗಳನ್ನು ತಿರುಗಿಸಿದೆ. ಅವರಿಂದ ಬೈಕ್‌ ರಿಪೇರಿ ಮಾಡುವುದನ್ನು ಕಲಿತೆ. ಬೈಕ್‌ ರಿಪೇರಿ ಮಾಡುವ ಇಂತಹ ಕೈಗಳೇ ಭಾರತವನ್ನು ನಿರ್ಮಿಸಿವೆ. ಇಲ್ಲಿಗೆ ಭೇಟಿ ನೀಡುವ ಮೂಲಕ ನಾನು ಮತ್ತೆ ಭಾರತ್‌ ಜೋಡೋ ಯಾತ್ರೆಯನ್ನು ಮುಂದುವರಿಸಿದ್ದೇನೆ” ಎಂದು ರಾಹುಲ್‌ ಗಾಂಧಿ ಪೋಸ್ಟ್‌ ಮಾಡಿದ್ದರು. ಇನ್ನು ಕೆಲ ದಿನಗಳ ಹಿಂದೆ ರಾಹುಲ್‌ ಗಾಂಧಿ ಅವರು ಗದ್ದೆಗೆ ಇಳಿದು, ಭತ್ತ ನಾಟಿ ಮಾಡಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Viral Video: ಕಚೇರಿಯ ಟೇಬಲ್‌ನೊಳಗೆ ಅಡಗಿದ್ದ ಬೃಹತ್‌ ಹಾವನ್ನು ಹಿಡಿದ ಮಹಿಳಾ ಸಿಬ್ಬಂದಿ! ವಿಡಿಯೊ ನೋಡಿ

Viral Video: ಹಾವೆಂದರೆ ಒಂದು ಮೈಲಿ ಹಾರುವವರನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬಳು ಮಹಿಳೆ ಯಾವುದೇ ಅಂಜಿಕೆ, ಅಳುಕು ಇಲ್ಲದೇ ಹಾವನ್ನು ಎತ್ತಿ ಚೀಲದೊಳಗೆ ತುಂಬಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಹಾವು ಕಚ್ಚುತ್ತದೆ ಎಂಬ ಭಯವು ಇಲ್ಲದೇ ಅದನ್ನು ಚೀಲದಲ್ಲಿ ತುಂಬಿಸಿ ದಿನಸಿ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗುವಂತೆ ಹೊರಗೆ ತೆಗೆದುಕೊಂಡು ಬಂದಿದ್ದಾಳೆ.

VISTARANEWS.COM


on

Viral Video
Koo


ಸಾಮಾನ್ಯವಾಗಿ ಮಹಿಳೆಯರು ಹಾವನ್ನು ನೋಡಿದರೆ ಭಯಬೀಳುತ್ತಾರೆ. ಒಂದು ಚಿಕ್ಕ ಹುಳ ಮೈಮೇಲೆ ಹರಿದಾಡಿದರೆ ದೊಡ್ಡ ಹಾವು ಮೈಮೇಲೆ ಬಿದ್ದಂತೆ ಕಿರುಚುತ್ತಾ ಓಡುತ್ತಾರೆ. ಅಂತಹದರಲ್ಲಿ ಮಹಿಳೆಯೊಬ್ಬಳು ಯಾವುದೇ ಭಯವಿಲ್ಲದೆ ದೊಡ್ಡ ಗಾತ್ರದ ಹಾವನ್ನೇ ಕೈಯಲ್ಲಿ ಸಲೀಸಾಗಿ ಹಿಡಿದಿದ್ದಾಳೆ. ಮಹಿಳೆ ಕಚೇರಿಯಲ್ಲಿ ಕೈಯಲ್ಲಿ ಹಾವನ್ನು ಹಿಡಿದು ಸ್ಟಂಟ್ ಮಾಡುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ಮಹಿಳೆಯ ಈ ಧೈರ್ಯಶಾಲಿ ಕೆಲಸವನ್ನು ಕಂಡು ಅಲ್ಲಿದ್ದ ಜನರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಈ ಧೈರ್ಯಶಾಲಿ ಮಹಿಳೆ ಕಚೇರಿಯಲ್ಲಿ ಇರುವ ದೊಡ್ಡ ಗಾತ್ರದ ಹಾವನ್ನು ಯಾವುದೇ ಸುರಕ್ಷತಾ ಉಡುಗೆ ಅಥವಾ ಅಗತ್ಯ ಉಪಕರಣಗಳಿಲ್ಲದೆ ಬಹಳ ಸುಲಭವಾಗಿ ಹಿಡಿದಿದ್ದಾಳೆ.ಇದಕ್ಕೆ ಸಂಬಂಧಪಟ್ಟ ವಿಡಿಯೊವನ್ನು @moronhumor ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದ್ದಾರೆ, ವಿಡಿಯೊದಲ್ಲಿ ಮಹಿಳೆ ಒಬ್ಬ ವ್ಯಕ್ತಿಯೊಂದಿಗೆ ಬರುತ್ತಿದ್ದು, ಅಲ್ಲಿ ಕಂಪ್ಯೂಟರ್ ಕೇಬಲ್ ಅನ್ನು ಸರಿಪಡಿಸುತ್ತಿದ್ದಾಳೆ ಎಂದು ವೀಕ್ಷಕರು ಭಾವಿಸುವಂತಿದೆ.

ಆದರೆ ಆಕೆ ಸಡನ್ ಆಗಿ ಹಾವಿನ ತಲೆಯನ್ನು ಹಿಡಿದು ಮೇಲಕ್ಕೆ ಎತ್ತಿದ್ದಾಳೆ. ನಂತರ ಹಾವು ಕಚ್ಚುತ್ತದೆ ಎಂಬ ಭಯವು ಇಲ್ಲದೇ ಅದನ್ನು ಚೀಲದಲ್ಲಿ ತುಂಬಿಸಿ ದಿನಸಿ ಸಾಮಾಗ್ರಿಗಳನ್ನು ತೆಗೆದುಕೊಂಡು ಹೋಗುವಂತೆ ಹೊರಗೆ ತೆಗೆದುಕೊಂಡು ಬಂದಿದ್ದಾಳೆ. ಆ ವೇಳೆ ಅವಳ ಮುಖದಲ್ಲಿ ಭಯದ ಬದಲು ನಗು ಕಂಡುಬಂದಿದೆ. ಅಲ್ಲದೇ ಮಹಿಳೆ ಈ ವೇಳೆ ಹಾವಿನ ಬಗ್ಗೆ ಕೆಲವು ಸಲಹೆಗಳನ್ನು ಸಹ ಹಂಚಿಕೊಳ್ಳುತ್ತಾಳೆ. ಹಾವು ವಿಷಕಾರಿಯಲ್ಲ ಎಂದು ಅವಳು ತನ್ನ ಸಹೋದ್ಯೋಗಿಗಳಿಗೆ ಹೇಳಿದಳು. ಅವಳು ಹಾವುಗಳ ವಿವಿಧ ಲಕ್ಷಣಗಳು ಮತ್ತು ಹಾವನ್ನು ನಿರ್ವಹಿಸುವ ವಿಧಾನದ ಬಗ್ಗೆ ಜನರಿಗೆ ಮಾರ್ಗದರ್ಶನ ನೀಡಿದ್ದಾಳೆ. ಅಲ್ಲಿ ಹಾಜರಿದ್ದ ಜನರು ಆಕೆ ಸುಲಭವಾಗಿ ಹಾವನ್ನು ಹಿಡಿಯುವುದನ್ನು ಕಂಡು ಆಶ್ಚರ್ಯಚಕಿತರಾದರು. ಈ ವಿಡಿಯೊ ಅನೇಕರ ಗಮನವನ್ನು ಸೆಳೆದಿದೆ ಮತ್ತು ಅನೇಕರು ಕಾಮೆಂಟ್ ಮಾಡಿದ್ದಾರೆ. ನೆಟ್ಟಿಗರು ಮಹಿಳೆಯ ವೀಡಿಯೊವನ್ನು ಕಂಡು ಅವಳ ಶಾಂತ, ಧೈರ್ಯಶಾಲಿ ಕಾರ್ಯವನ್ನು ಕಂಡು ಹೊಗಳಿದ್ದಾರೆ.

ಬಳಕೆದಾರರೊಬ್ಬರು ಅವಳ ಕಾರ್ಯಕ್ಕೆ ಮತ್ತು ಅವಳ ತಿಳಿವಳಿಕೆಯನ್ನು ಕಂಡು ಆಕೆಯನ್ನು ರಾಕ್‌ಸ್ಟಾರ್‌ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಈ ಮೊದಲು ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ಹೆಣ್ಣು ಹಾವು ಹಿಡಿಯುವುದನ್ನು ನೋಡಿಲ್ಲ ಎಂದು ಹೇಳಿ ಮಹಿಳೆಗೆ ಅಭಿನಂದನೆ ಸಲ್ಲಿಸಿದ್ದಾರೆ. ಮೂರನೆಯವರು ಈಕೆ ನಿಜವಾದ ನಾಯಕಿ. ಹೀರೋಗಳಿಗಿಂತ ಒಂದು ಹೆಜ್ಜೆ ಮುಂದೆ ಎಂದು ಹೊಗಳಿದ್ದಾರೆ.

Continue Reading

ದೇಶ

Viral News: ಕಾಲಿಗೆ ಕಬ್ಬಿಣದ ಸರಪಳಿ.. ಕೈಯಲ್ಲಿ ಅಮೆರಿಕ ಪಾಸ್‌ಪೋರ್ಟ್‌..ದಟ್ಟ ಕಾಡಿನಲ್ಲಿ ಮಹಿಳೆ ಪತ್ತೆ-ವಿಡಿಯೋ ವೈರಲ್‌

Viral News:ಮುಂಬೈನಿಂದ ಸುಮಾರು 450 ಕಿಲೋಮೀಟರ್ ದೂರದಲ್ಲಿರುವ ಸೋನುರ್ಲಿ ಗ್ರಾಮದಲ್ಲಿ ಶನಿವಾರ ಸಂಜೆ ಕುರಿಗಾಹಿಯೊಬ್ಬರು ಆಕೆಯ ಅಳಲು ಕೇಳಿದ್ದು, ಸರಪಳಿಯಲ್ಲಿ ಸಿಲುಕಿರುವ ಮತ್ತು ಸಂಕಷ್ಟದಲ್ಲಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಆಕೆಯನ್ನು ರಕ್ಷಿಸಿ ನಂತರ ಸಿಂಧುದುರ್ಗದ ಓರೋಸ್‌ನ ಆಸ್ಪತ್ರೆಗೆ ಕರೆದೊಯ್ಯಲಾಯಿತು

VISTARANEWS.COM


on

Viral News
Koo

ಮುಂಬೈ: ಮರಕ್ಕೆ ಕಬ್ಬಿಣದ ಸರಪಳಿಯಲ್ಲಿ ಕಟ್ಟಿಹಾಕಿದ ಸ್ಥಿತಿಯಲ್ಲಿ ಮಹಿಳೆಯೊಬ್ಬಳು ಮಹಾರಾಷ್ಟ್ರದ ಸಿಂಧುದುರ್ಗ ದಟ್ಟ ಅರಣ್ಯದಲ್ಲಿ ಪತ್ತೆಯಾಗಿರುವ ಶಾಕಿಂಗ್‌ ಘಟನೆ ವರದಿಯಾಗಿದೆ. ಸುಮಾರು 50 ವರ್ಷದ ಮಹಿಳೆಯನ್ನು ಕಬ್ಬಿಣದ ಸರಪಳಿಯಿಂದ ಮರಕ್ಕೆ ಕಟ್ಟಿಹಾಕಲಾಗಿದ್ದು, ಆಕೆಯ ಬಳಿ ಅಮೆರಿಕದ ಪಾಸ್‌ಪೋರ್ಟ್‌ನ ಜೆರಾಕ್ಸ್‌ ಮತ್ತು ತಮಿಳುನಾಡು ವಿಳಾಸವಿರುವ ಆಧಾರ್‌ ಕಾರ್ಡ್‌ ಪತ್ತೆಯಾಗಿದೆ(Viral News).

ಮುಂಬೈನಿಂದ ಸುಮಾರು 450 ಕಿಲೋಮೀಟರ್ ದೂರದಲ್ಲಿರುವ ಸೋನುರ್ಲಿ ಗ್ರಾಮದಲ್ಲಿ ಶನಿವಾರ ಸಂಜೆ ಕುರಿಗಾಹಿಯೊಬ್ಬರು ಆಕೆಯ ಅಳಲು ಕೇಳಿದ್ದು, ಸರಪಳಿಯಲ್ಲಿ ಸಿಲುಕಿರುವ ಮತ್ತು ಸಂಕಷ್ಟದಲ್ಲಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಆಕೆಯನ್ನು ರಕ್ಷಿಸಿ ನಂತರ ಸಿಂಧುದುರ್ಗದ ಓರೋಸ್‌ನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಕೆಯನ್ನು ಲಲಿತಾ ಕಯಿ ಎಂದು ಗುರುತಿಸಲಾಗಿದ್ದು, ಆಕೆಯ ಮಾನಸಿಕ ಮತ್ತು ಆರೋಗ್ಯ ಸ್ಥಿತಿಯನ್ನು ಪರಿಗಣಿಸಿ, ಅವರಿಗೆ ಉನ್ನತ ಚಿಕಿತ್ಸೆಗಾಗಿ ಗೋವಾ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಯಿತು.

ಸದ್ಯ ಆಕೆ ಅಪಾಯದಿಂದ ಪಾರಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಆಕೆ ಮನೋ ಖಾಯಿಲೆಯಿಂದ ಬಳಲುತ್ತಿದ್ದಾಳೆ. ಅದಕ್ಕೆ ಬೇಕಾದ ಸೂಕ್ತ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ. ನಾವು ಆಕೆಯ ತಮಿಳುನಾಡು ವಿಳಾಸ ಆಧಾರ್ ಕಾರ್ಡ್, ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಪಾಸ್‌ಪೋರ್ಟ್‌ನ ಜೆರಾಕ್ಸ್‌ ಆಕೆಯ ಬಳಿ ಇತ್ತು. ಆಕೆಯ ವೀಸಾ ಅವಧಿ ಮುಗಿದಿದೆ.

ಇನ್ನು ಆಕೆ ಯಾವರ ದೇಶಕ್ಕೆ ಸೇರಿದವಳು ಎಂಬ ಬಗ್ಗೆ ನಾವು ಈ ಎಲ್ಲ ದಾಖಲೆಗಳನ್ನು ಪರಿಶೀಲಿಸುತ್ತಿದ್ದೇವೆ. ನಮ್ಮ ಪೊಲೀಸರು ವಿದೇಶಿಯರ ಪ್ರಾದೇಶಿಕ ನೋಂದಣಿ ಕಛೇರಿಯೊಂದಿಗೆ ಸಂಪರ್ಕದಲ್ಲಿದೆ” ಎಂದು ಅವರು ಹೇಳಿದರು.
ಪೊಲೀಸರು ಪಡೆದ ಪ್ರಾಥಮಿಕ ಮಾಹಿತಿಯಂತೆ ಮಹಿಳೆ ಕಳೆದ 10 ವರ್ಷಗಳಿಂದ ಭಾರತದಲ್ಲಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಸದ್ಯ ಮಹಿಳೆ ಯಾವುದೇ ರೀತಿಯ ಹೇಳಿಕೆ ನೀಡುವ ಪರಿಸ್ಥಿತಿಯಲ್ಲಿಲ್ಲ. ಆಕೆ ತೀರ ಕ್ಷೀಣಿಸಿದ್ದಾಳೆ. ಆಕೆಯನ್ನು ಎಷ್ಟು ದಿನಗಳಿಂದ ಅಲ್ಲಿ ಕಟ್ಟಿ ಹಾಕಲಾಗಿತ್ತು? ಯಾರು ಕಟ್ಟಿ ಹಾಕಿದ್ದಾರೆ ಎಂಬ ಬಗ್ಗೆ ತನಿಖೆ ಮುಂದುವರೆದಿದೆ. ಮೇಲ್ನೋಟಕ್ಕೆ ಆಕೆಯ ಪತಿಯೇ ಆಕೆಯನ್ನು ಕಟ್ಟಿ ಹಾಕಿ ಪರಾರಿಯಾಗಿರುವ ಸಾಧ್ಯತೆ ಇದೆ ಆಧಾರ್‌ ಕಾರ್ಡ್‌ನಲ್ಲಿರುವ ಆಕೆಯ ವಿಳಾಸ ಆಧರಿಸಿ ಸಂಬಂಧಿಕರನ್ನು ವಿಚಾರಣೆಗೊಳಪಡಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನು ಓದಿ: Areca Nut Illegal Import: ಭಾರತದೊಳಗೆ 3 ತಿಂಗಳಲ್ಲಿ 3009 ಟನ್‌ ವಿದೇಶಿ ಅಡಿಕೆ ಅಕ್ರಮ ಆಮದು; ಬೆಳೆಗಾರರಿಗೆ ಕಾದಿದೆ ಆಪತ್ತು!

Continue Reading

Latest

Viral News: ʼಎಣ್ಣೆ ಹೊಡೆಯಿರಿ, ಇಂಗ್ಲಿಷ್‌ ಕಲಿಯಿರಿʼ ಎಂದು ಬೋರ್ಡ್‌ ಹಾಕಿದ್ದ ಮದ್ಯದಂಗಡಿ ಮಾಲೀಕನಿಗೆ ದಂಡ!

Viral News: ಮದ್ಯದ ಅಂಗಡಿಯ ಮಾಲೀಕನೊಬ್ಬ ಗ್ರಾಹಕರನ್ನು ಆಕರ್ಷಿಸಲು ಜಾಹೀರಾತನ್ನು ನೀಡಿದ್ದು, ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಇದೀಗ ಮದ್ಯದಂಗಡಿ ಮಾಲೀಕನಿಗೆ ಸಂಕಷ್ಟವನ್ನುಂಟುಮಾಡಿದೆ. ಮದ್ಯದಂಗಡಿಯ ಮಾಲೀಕ ಇಂಗ್ಲಿಷ್ ಮಾತನಾಡಲು ಕಲಿಯಿರಿ ಎಂಬ ಸಂದೇಶವನ್ನು ಬರೆದಿರುವ ಬ್ಯಾನರ್ ಹಾಕಿ ಆ ಸಂದೇಶದ ಕೆಳಗೆ ಬಾಣವೊಂದನ್ನು ಬಿಡಿಸಿದ್ದು, ಅದು ಮದ್ಯದಂಗಡಿಯನ್ನು ತೋರಿಸುತ್ತಿತ್ತು. ಈ ಬ್ಯಾನರ್‌ನ ಪೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

VISTARANEWS.COM


on

Viral News
Koo


ಕುಡಿದ ಮತ್ತಿನಲ್ಲಿ ಜನರು ಏನೇನೋ ಮಾತನಾಡುತ್ತಾರೆ. ಅವರು ಏನು ಹೇಳುತ್ತಿದ್ದಾರೆ ಎಂದು ಯಾರಿಗೂ ಅರ್ಥವಾಗುವುದಿಲ್ಲ! ಕುಡುಕರು ಮಾತನಾಡುವ ಶೈಲಿ ಯಾವ ರೀತಿ ಇರುತ್ತದೆ ಎಂದರೆ ಕೆಲವು ಜನರಿಗೆ ಅರ್ಥವಾಗದೆ ಇರುವ ಇಂಗ್ಲೀಷ್ ಭಾಷೆ ಮಾತನಾಡಿದ ಹಾಗೆಯೇ ಅನಿಸುತ್ತದೆ. ಇದನ್ನೇ ಬಂಡವಾಳವಾಗಿಟ್ಟುಕೊಂಡು ಮದ್ಯದ ಅಂಗಡಿಯೊಂದು ಗ್ರಾಹಕರನ್ನು ಆಕರ್ಷಿಸಲು ಜಾಹೀರಾತನ್ನು ನೀಡಿದ್ದು, ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿ ಇದೀಗ ಮದ್ಯದಂಗಡಿ ಮಾಲೀಕನಿಗೆ ಸಂಕಷ್ಟವನ್ನುಂಟುಮಾಡಿದೆ.

ಕುಡಿದ ಮತ್ತಿನಲ್ಲಿ ಜನರು ತೊದಲು ಮಾತನಾಡುವುದನ್ನೇ ಇಂಗ್ಲಿಷ್‍ನಲ್ಲಿ ಮಾತನಾಡುವ ಶೈಲಿಯಂದು ಹೇಳಿ ಜಾಹೀರಾತನ್ನು ಹಾಕಿದ್ದಕ್ಕಾಗಿ ಮಧ್ಯಪ್ರದೇಶದ ಮದ್ಯದಂಗಡಿ ಮಾಲೀಕರಿಗೆ 10,000 ರೂ.ಗಳ ದಂಡ ವಿಧಿಸಲಾಗಿದೆ. ಬುರ್ಹಾನ್ಪುರ ಜಿಲ್ಲೆಯ ನಚನ್‍ಖೇಡಾದಲ್ಲಿರುವ ಮದ್ಯದಂಗಡಿಯ ಬಳಿ ಮಾಲೀಕ ” ಇಂಗ್ಲಿಷ್ ಬೋಲ್ನಾ ಸೀಖೇʼʼ (ಇಂಗ್ಲಿಷ್ ಮಾತನಾಡಲು ಕಲಿಯಿರಿ) ಎಂಬ ಸಂದೇಶವನ್ನು ಬರೆದಿರುವ ಬ್ಯಾನರ್ ಹಾಕಿದ್ದ. ಈ ಸಂದೇಶದ ಕೆಳಗೆ ಬಾಣವೊಂದನ್ನು ಬಿಡಿಸಿದ್ದು, ಅದು ಮದ್ಯದಂಗಡಿಯನ್ನು ತೋರಿಸುತ್ತಿತ್ತು. ಈ ಬ್ಯಾನರ್ ನ ಪೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ಜಿಲ್ಲಾಡಳಿತದ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಬುರ್ಹಾಂಪುರ ಜಿಲ್ಲಾಧಿಕಾರಿ ಶನಿವಾರ ಮದ್ಯದಂಗಡಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಬಕಾರಿ ಇಲಾಖೆಗೆ ನಿರ್ದೇಶನ ನೀಡಿದ್ದಾರೆ. ಅಬಕಾರಿ ಇಲಾಖೆ ಮದ್ಯದಂಗಡಿ ಮಾಲೀಕನಿಗೆ ನೋಟಿಸ್ ನೀಡಿದೆ.

ಇದಕ್ಕೆ ಉತ್ತರಿಸಿದ ಅಂಗಡಿ ಮಾಲೀಕ, ತನ್ನ ಅಂಗಡಿಯಿಂದ 40-5೦ ಅಡಿ ದೂರದಲ್ಲಿರುವ ಇನ್ನೊಬ್ಬ ವ್ಯಕ್ತಿಯ ಖಾಸಗಿ ಜಮೀನಿನಲ್ಲಿ ಬ್ಯಾನರ್ ಹಾಕಲಾಗಿದೆ. ಹಾಗಾಗಿ ಇದು ಬೇರೆ ಯಾರೋ ಪಿತೂರಿ ಮಾಡಿ ಹೀಗೆ ಮಾಡಿದ್ದಾರೆ ಎಂದು ಸಮರ್ಥನೆ ನೀಡಿದ್ದಾನೆ. ಆದರೆ ಅಧಿಕಾರಿಗಳು ಆತ ಮದ್ಯದ ಪರವಾನಗಿಯ ಷರತ್ತುಗಳನ್ನು ಉಲ್ಲಂಘಿಸಿದ್ದಕ್ಕಾಗಿ 10,000 ರೂ.ಗಳ ದಂಡ ವಿಧಿಸಿದರು ಎಂಬುದಾಗಿ ತಿಳಿದುಬಂದಿದೆ.

ಇದನ್ನೂ ಓದಿ: ಪತ್ನಿಗೆ ಮಕ್ಕಳಾಗಿಲ್ಲ ಎಂದು ಮಾವನ ಕುಟುಂಬದವರ ವಿರುದ್ಧ ಪ್ರಕರಣ ದಾಖಲಿಸಿದ!

ಈ ಬ್ಯಾನರ್ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಇದು ಯುವಕರಿಗೆ ತಪ್ಪು ಸಂದೇಶವನ್ನು ರವಾನಿಸುತ್ತದೆ, ಅವರು “ಇಂಗ್ಲಿಷ್ ಕಲಿಯಿರಿ” ಎಂಬ ಸಂದೇಶದಿಂದ ಪ್ರಭಾವಿತರಾಗಬಹುದು ಮತ್ತು ಮದ್ಯದಂಗಡಿಗೆ ಪ್ರವೇಶಿಸಿ ಮದ್ಯಪಾನ ಮಾಡಬಹುದು ಎಂದು ಕಿಡಿಕಾರಿದ್ದಾರೆ. ಅಲ್ಲದೇ ಇದು ಸ್ಪೋಕನ್ ಇಂಗ್ಲಿಷ್ ಕೋಚಿಂಗ್ ಸೆಂಟರ್‌ನ ಜಾಹೀರಾತಿನಂತೆ ಕಾಣುವುದರಿಂದ ಇದು ಜನರನ್ನು ದಾರಿತಪ್ಪಿಸುವ ಸಂಚು ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಈ ಪೋಟೊ ನೆಟ್ಟಿಗರಲ್ಲಿ ನಗುವನ್ನುಂಟುಮಾಡಿದೆ ಎನ್ನಲಾಗಿದೆ.

Continue Reading

ವೈರಲ್ ನ್ಯೂಸ್

Viral News: ಮನೆಯೊಳಗೆ ವಿಚಿತ್ರ ವಾಸನೆ, ಇಡೀ ಕುಟುಂಬ ಅಸ್ವಸ್ಥ; ರಹಸ್ಯ ಕೆಮೆರಾದಲ್ಲಿತ್ತು ಶಾಕಿಂಗ್‌ ದೃಶ್ಯ!

ಮಗುವಿನೊಂದಿಗೆ ಗಂಡ, ಹೆಂಡತಿ ರಜೆ ಮುಗಿಸಿ ಮನೆಗೆ ಬಂದ ಮೇಲೆ ಅಸಾಮಾನ್ಯ ತೊಂದರೆಗಳನ್ನು ಎದುರಿಸಿದರು. ಎಲ್ಲರೂ ಅನಾರೋಗ್ಯಕ್ಕೆ ಒಳಗಾದರು. ಎಲ್ಲರ ತಲೆ ಕೂದಲು ಉದುರತೊಡಗಿತು. ಮನೆಯೊಳಗೆ ವಿಚಿತ್ರ ವಾಸನೆಯಿಂದ ಅವರು ಗಾಬರಿಗೊಂಡರು. ಇದಕ್ಕೆ ಕಾರಣ ಏನಿರಬಹುದು ಎಂದು ಹುಡುಕಲು ಹೊರಟವರು ಸಿಸಿಟಿವಿ ದೃಶ್ಯಗಳನ್ನು (cctv footage) ನೋಡಿ ದಂಗಾದರು.

VISTARANEWS.COM


on

By

Viral News
Koo

ರಜೆ ಮುಗಿಸಿ ಮನೆಗೆ ಹಿಂತಿರುಗಿದ ಕುಟುಂಬವೊಂದು ಅನಾರೋಗ್ಯಕ್ಕೆ ಈಡಾಗಿದ್ದು ಕೂದಲು ಉದುರುವ ವಿಚಿತ್ರ ಸಮಸ್ಯೆಯನ್ನು (Hair Loss problem) ಎದುರಿಸುತ್ತಿತ್ತು. ಗಂಡ, ಹೆಂಡತಿ ಮತ್ತು ಚಿಕ್ಕ ಮಗುವಿನ ಕೂದಲು ಕೂಡ ಉದುರಲಾರಂಭಿಸಿತ್ತು. ಇದಕ್ಕೆ ಕಾರಣ ಏನಿರಬಹುದು ಎಂದು ಹುಡುಕಲು ಹೊರಟವರು ಸಿಸಿಟಿವಿ ದೃಶ್ಯಗಳನ್ನು (cctv footage) ನೋಡಿ ದಂಗಾದರು. ಈ ಸುದ್ದಿ ಇದೀಗ ವೈರಲ್ (Viral News) ಆಗಿದೆ.

ಮಗುವಿನೊಂದಿಗೆ ಗಂಡ, ಹೆಂಡತಿ ರಜೆ ಮುಗಿಸಿ ಮನೆಗೆ ಬಂದ ಮೇಲೆ ವಿಚಿತ್ರ ತೊಂದರೆಗಳನ್ನು ಎದುರಿಸಿದರು. ಎಲ್ಲರೂ ಅನಾರೋಗ್ಯಕ್ಕೆ ಒಳಗಾದರು. ಇಷ್ಟು ಮಾತ್ರವಲ್ಲ ಮನೆಯೊಳಗೆ ವಿಚಿತ್ರ ವಾಸನೆಯಿಂದ ಅವರು ಗಾಬರಿಗೊಂಡರು. ಇದರೊಂದಿಗೆ ಮನೆಯವರೆಲ್ಲರ ಕೂದಲು ಉದುರುವಿಕೆ ಪ್ರಾರಂಭವಾಯಿತು. ಮನೆಯನ್ನು ಸಂಪೂರ್ಣ ಹುಡುಕಾಡಿದರೂ ಅವರಿಗೆ ಏನೂ ಸಿಗಲಿಲ್ಲ. ಅಂತಿಮವಾಗಿ ಬಾಗಿಲಿನ ಬಳಿ ಹಿಡನ್ ಕೆಮೆರಾವನ್ನು ಅಳವಡಿಸಿದರು. ಬಳಿಕ ಅದರಲ್ಲಿ ಅವರಿಗೆ ನೆರೆಯ ನಿವಾಸಿಗಳ ಅನುಮಾನಾಸ್ಪದ ಚಟುವಟಿಕೆ ಕಂಡು ಬಂತು.

Viral News
Viral News


ಅಮೆರಿಕದ ಫ್ಲೋರಿಡಾದ ಉಮರ್ ಮತ್ತು ಸಮೀರಾ ದಂಪತಿ ಮಗುವಿನೊಂದಿಗೆ ರಜೆಯಿಂದ ಹಿಂದಿರುಗಿದಾಗ ಈ ಸಸ್ಯೆ ಪ್ರಾರಂಭವಾಗಿತ್ತು. ಎಲ್ಲಿ, ಏನು ತಪ್ಪಾಗಿದೆ ಎಂದು ಅವರು ಹುಡುಕಲು ಪ್ರಾರಂಭಿಸಿದಾಗ ಭಿನ್ನವಾದ ವಿಚಿತ್ರ ಎನಿಸುವ ವಾಸನೆಯನ್ನು ಪತ್ತೆಹಚ್ಚಿದರು. ಈ ವಾಸನೆಯ ಮೂಲವನ್ನು ಪತ್ತೆಹಚ್ಚಲು ತನಿಖೆ ಆರಂಭಿಸಿದರು.

ಗುಪ್ತ ಕೆಮೆರಾವನ್ನು ಅಳವಡಿಸಿ ವಾಸನೆಯನ್ನು ತೊಡೆದುಹಾಕಲು ಪ್ರಯತ್ನಿಸತೊಡಗಿದ ದಂಪತಿ ಮನೆಯ ಪ್ರತಿಯೊಂದು ಕಿಟಕಿಗಳನ್ನೂ ತೆರೆದರು. ಈ ಸಮಯದಲ್ಲಿ ಅವರ ಚಿಕ್ಕ ಮಗಳ ಆರೋಗ್ಯವು ಕ್ಷೀಣಿಸಿತು. ಅವಳು ನಿರಂತರವಾಗಿ ಅಳಲು ಶುರು ಮಾಡಿದಳು. ತಿನ್ನಲು ನಿರಾಕರಿಸಿದಳು.

ಉಮರ್ ಮತ್ತು ಸಮೀರಾ ಅವರಿಗೂ ತಲೆನೋವು ಕಾಣಿಸಿಕೊಂಡಿತು. ಮಗಳ ತಲೆಯಿಂದ ಗಮನಾರ್ಹ ಪ್ರಮಾಣದ ಕೂದಲನ್ನು ಕಳೆದುಕೊಂಡಿರುವುದನ್ನು ಉಮರ್ ಗಮನಿಸಿದರು. ಬಳಿಕ ಉಮರ್ ಅವರ ಕೂದಲು ಉದುರುವಿಕೆ ಪ್ರಾರಂಭವಾಯಿತು. ಮೂವರೂ ಹಾಸಿಗೆಯಲ್ಲೇ ಕಳೆಯುವಷ್ಟರ ಮಟ್ಟಿಗೆ ಅವರ ಪರಿಸ್ಥಿತಿ ಹದಗೆಟ್ಟಿತು. ಹೀಗಾಗಿ ಅವರು ವೈದ್ಯಕೀಯ ಸಹಾಯವನ್ನು ಕೋರಿದರು ಮತ್ತು ಮನೆ ಮಾಲೀಕರಿಗೆ ಮಾಹಿತಿ ನೀಡಿದರು. ಆದರೆ ಯಾವುದೇ ಪರಿಹಾರ ಸಿಗಲಿಲ್ಲ.

Viral News
Viral News


ಬಳಿಕ ಬಾಗಿಲ ಬಳಿ ಅಳವಡಿಸಿದ್ದ ಕೆಮೆರಾವನ್ನು ಪರೀಕ್ಷಿಸಿದಾಗ ನೆರೆಹೊರೆಯವರಾದ 36 ವರ್ಷದ ಚೀನೀ ಪ್ರಜೆ ಲಿ ಬಾಗಿಲಿನ ಮೂಲಕ ದ್ರವ ಪದಾರ್ಥವನ್ನು ಎಸೆಯುತ್ತಿರುವುದನ್ನು ಕಂಡು ಬಂತು.


ಈ ವಸ್ತುವು ಮೆಥಡೋನ್, ಹೈಡ್ರೊಕೊಡೋನ್ ಮತ್ತು ಮತ್ತೊಂದು ಗುರುತಿಸಲಾಗದ ವಿಷಕಾರಿ ಅಂಶವನ್ನು ಒಳಗೊಂಡಿತ್ತು. ಉಮರ್ ಮನೆಯಿಂದ ಬರುವ ಶಬ್ದಗಳ ಕಿರಿಕಿರಿಯಿಂದಾಗಿ ಅವರನ್ನು ಅಲ್ಲಿಂದ ಓಡಿಸಲು ಹೀಗೆ ಮಾಡಿರುವುದಾಗಿ ಲೀ ಹೇಳಿದ್ದಾನೆ.

Viral News
Viral News


ಇದನ್ನೂ ಓದಿ: Viral Video: ಬೀದಿ ನಾಯಿ ದಾಳಿಯಿಂದ ಮಗುವನ್ನು ರಕ್ಷಿಸಿದ ಸಾಕು ನಾಯಿ! ಅಪರೂಪದ ವಿಡಿಯೊ

ಬಳಿಕ ಲಿಯನ್ನು ಅಮೆರಿಕದಿಂದ ಚೀನಾಕ್ಕೆ ಗಡೀಪಾರು ಮಾಡಲಾಯಿತು. ಲಿ ಅಮೆರಿಕಕ್ಕೆ ಹಿಂತಿರುಗಿದರೆ ಕಾನೂನು ಕ್ರಮದ ಎಚ್ಚರಿಕೆಯನ್ನು ನ್ಯಾಯಾಲಯ ನೀಡಿದೆ.

Continue Reading
Advertisement
Fraud Case
Latest7 mins ago

Fraud Case: 20ಕ್ಕೂ ಹೆಚ್ಚು ಮಹಿಳೆಯರನ್ನು ಮದುವೆಯಾಗಿ ಚಿನ್ನಾಭರಣ ಎಗರಿಸಿದ್ದ ವಂಚಕ ಪೊಲೀಸ್‌ ಬಲೆಗೆ ಬಿದ್ದಿದ್ದು ಹೇಗೆ?

Paris Olympics 2024
ಕ್ರೀಡೆ40 mins ago

Paris Olympics 2024 : ಭಾರತಕ್ಕೆ ಶೂಟಿಂಗ್​ನಲ್ಲಿ ಕಂಚಿನ ಪದಕ ಜಸ್ಟ್​ ಮಿಸ್​!

Rajendra Nagara tragedy
ದೇಶ1 hour ago

Rajendra Nagar Tragedy: ನೆಲಮಾಳಿಗೆ ಗೇಟ್‌ಗೆ SUV ಕಾರು ಡಿಕ್ಕಿ ಹೊಡೆದಿದ್ದ ಚಾಲಕ ಅರೆಸ್ಟ್‌- ವಿಡಿಯೋ ವೈರಲ್‌

Mosquito Repellents
ಆರೋಗ್ಯ1 hour ago

Natural Mosquito Repellents: ಸೊಳ್ಳೆಗಳು ನಿಮ್ಮ ಹತ್ತಿರ ಸುಳಿಯದಂತೆ ಮಾಡಲು ಇಲ್ಲಿವೆ ನೈಸರ್ಗಿಕ ಉಪಾಯಗಳು!

DK Shivakumar
ಕರ್ನಾಟಕ1 hour ago

DK Shivakumar: ಕನ್ನಂಬಾಡಿ ಕಟ್ಟೆ, ನಮ್ಮೆಲ್ಲರ ಅನ್ನದ ತಟ್ಟೆ; ಮಳೆ ಬರಲ್ಲ ಎಂದವರಿಗೆ ತಕ್ಕ ಉತ್ತರ ಸಿಕ್ಕಿದೆ ಎಂದ ಡಿಕೆಶಿ

ICW 2024
ಫ್ಯಾಷನ್2 hours ago

ICW 2024: ರ‍್ಯಾಂಪ್‌ ಮೇಲೆ ಮಾಡೆಲ್‌ಗಳು ಧರಿಸಿರುವುದು ಗೌನಾ ಅಥವಾ ಪಂಜರ?!

Aditya Birla Group
ಚಿನ್ನದ ದರ2 hours ago

Aditya Birla Group: ಟಾಟಾ, ಅಂಬಾನಿಯೊಂದಿಗೆ ಸ್ಪರ್ಧೆ: ಆಭರಣ ವ್ಯಾಪಾರಕ್ಕೆ ಬಿರ್ಲಾ ಎಂಟ್ರಿ!

ಪ್ರಮುಖ ಸುದ್ದಿ2 hours ago

Rohit Sharma : ಏಕ ದಿನ ಸರಣಿಗಾಗಿ ಶ್ರೀಲಂಕಾ ತಲುಪಿದ ರೋಹಿತ್, ವಿರಾಟ್​ ಕೊಹ್ಲಿ

karnataka Rain
ಮಳೆ2 hours ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

New Toll System
ತಂತ್ರಜ್ಞಾನ2 hours ago

New Toll System: ಫಾಸ್ಟ್‌ ಟ್ಯಾಗ್‌ಗೂ ಉಪಗ್ರಹ ಆಧರಿತ ಟೋಲ್‌ ಸಂಗ್ರಹಕ್ಕೂ ಏನು ವ್ಯತ್ಯಾಸ? ಏನು ಪ್ರಯೋಜನ?

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ2 hours ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ3 hours ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ6 hours ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ1 day ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ1 day ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ1 day ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ1 day ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

Karnataka weather Forecast
ಮಳೆ2 days ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ2 days ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ2 days ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

ಟ್ರೆಂಡಿಂಗ್‌