Viral Video : ವೇದಿಕೆ ಮೇಲೆ ಧೂಳೆಬ್ಬಿಸಿದ ಭಲೇ ಜೋಡಿ; ಸಕತ್‌ ಆಗಿದೆ ಈ ಸೆನೋರಿಟಾ ಡ್ಯಾನ್ಸ್‌ Vistara News
Connect with us

ವೈರಲ್ ನ್ಯೂಸ್

Viral Video : ವೇದಿಕೆ ಮೇಲೆ ಧೂಳೆಬ್ಬಿಸಿದ ಭಲೇ ಜೋಡಿ; ಸಕತ್‌ ಆಗಿದೆ ಈ ಸೆನೋರಿಟಾ ಡ್ಯಾನ್ಸ್‌

ವೃದ್ಧ ಜೋಡಿ ವೇದಿಕೆ ಮೇಲೆ ಸೆನೋರಿಟಾ ಹಾಡಿಗೆ ನೃತ್ಯ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ (Viral Video) ಆಗಿದೆ.

VISTARANEWS.COM


on

old pair dance
Koo

ಮದುವೆ ಕಾರ್ಯಕ್ರಮ ಎಂದ ಮೇಲೆ ಅಲ್ಲಿ ಸಂಭ್ರಮವೋ ಸಂಭ್ರಮ. ಮನೆಯ ಪ್ರತಿಯೊಬ್ಬ ಸದಸ್ಯರೂ ಹಾಡಿ, ಕುಣಿದು, ಕುಪ್ಪಳಿಸುವುದಕ್ಕೆ ಸಿಗುವ ಅವಕಾಶವೇ ಮದುವೆ. ಈ ಸಂಭ್ರಮದ ಹಲವಾರು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವೈರಲ್‌ ಆಗುತ್ತಿರುತ್ತವೆ. ಅದೇ ರೀತಿಯ ಮತ್ತೊಂದು ವಿಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಕತ್‌ ಸದ್ದು (Viral Video) ಮಾಡುತ್ತಿದೆ.

ವೇದಿಕೆಯ ಮೇಲೆ ವೃದ್ಧ ದಂಪತಿ ನಿಂತಿದ್ದಾರೆ. ಹಿಂದಿನಿಂದ 2011ರ ಜಿಂದಗಿ ನಾ ಮಿಲೇಗಿ ದುಬಾರಾ ಸಿನಿಮಾದ ಸೆನೋರಿಟಾ ಹಾಡು ತೇಲಿಬರುತ್ತಿದೆ. ಈ ಹಾಡು ತಮ್ಮದೇ ಎನ್ನುವ ರೀತಿಯಲ್ಲಿ ವೇದಿಕೆ ಮೇಲಿದ್ದ ಜೋಡಿ ಕುಣಿಯಲಾರಂಭಿಸುತ್ತದೆ. ಒಂದು ಸೆಕೆಂಡ್‌ ಕೂಡ ಬಿಡುವು ಕೊಡದೆ ಇಬ್ಬರೂ ಹೊಂದಾಣಿಕೆಯೊಂದಿಗೆ ಹಾಡಿಗೆ ಹೆಜ್ಜೆ ಹಾಕುತ್ತಾರೆ.

ಇದನ್ನೂ ಓದಿ: Viral News: ಪಲ್ಟಿಯಾದ ಬಿಯರ್‌ ತುಂಬಿದ ಲಾರಿ, ಸಿಕ್ಕಿದ್ದೇ ಚಾನ್ಸು ಅಂತ ಬಾಟಲಿ ಎತ್ತಿಕೊಂಡು ಕುಡುಕರು ಪರಾರಿ
ಈ ರೀತಿಯಲ್ಲಿ ಜೋಡಿ ಯುವಕರೂ ನಾಚುವಂತೆ ಹೆಜ್ಜೆ ಹಾಕುತ್ತಿದ್ದರೆ ವೇದಿಕೆಯ ಕೆಳಗಿರುವ ಜನರು ಜೋರಾಗಿ ಚೀರುತ್ತಾ, ಚಪ್ಪಾಳೆ ತಟ್ಟುತ್ತಾ ಜೋಡಿಗೆ ಪ್ರೋತ್ಸಾಹಿಸುತ್ತಾರೆ. ಕ್ಯಾಮರಾಮೆನ್‌ ಕೂಡ ಎಲ್ಲ ರೀತಿಯ ಭಂಗಿಯಲ್ಲಿ ಈ ಜೋಡಿಯ ನೃತ್ಯವನ್ನು ಸೆರೆಹಿಡಿದಿದ್ದಾನೆ.

ಈ ವಿಡಿಯೊವನ್ನು sikhlens ಹೆಸರಿನ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಹಂಚಿಕೊಳ್ಳಲಾಗಿದೆ. ಮೇ 16ರಂದು ಹಂಚಿಕೊಳ್ಳಲಾದ ಈ ವಿಡಿಯೊ ಈಗಾಗಲೇ 2.1 ಮಿಲಿಯನ್‌ಗೂ ಅಧಿಕ ಮಂದಿಯಿಂದ ವೀಕ್ಷಣೆಗೊಂಡಿದೆ. ಸಾವಿರಾರು ಮಂದಿ ವಿಡಿಯೊವನ್ನು ಲೈಕ್‌ ಮಾಡಿದ್ದಾರೆ. ಹಾಗೆಯೇ ಮೆಚ್ಚುಗೆಯ ಕಾಮೆಂಟ್‌ಗಳ ಸುರಿಮಳೆಯೇ ವಿಡಿಯೊಗೆ ಸುರಿದಿದೆ.

ಇದನ್ನೂ ಓದಿ: Video Viral: ಉಚಿತ ಗ್ಯಾರಂಟಿ ಯೋಜನೆ ಚುನಾವಣೆಯ ಚೀಪ್‌ ಗಿಮಿಕ್‌ ಎಂದ ಕೃಷಿ ಸಚಿವ ಚಲುವರಾಯಸ್ವಾಮಿ!
“ಅಬ್ಬಾ, ಲವ್ಲಿ ಜೋಡಿಯಿದು. ಇವರು ಹಲವಾರು ಕಾರ್ಯಕ್ರಮಗಳಲ್ಲಿ ಕುಣಿದಿರುವ ವಿಡಿಯೊವನ್ನು ನಾನು ನೋಡಿದ್ದೇನೆ”, “ಇದು ಅತ್ಯದ್ಭುತ ವಿಡಿಯೊ”, “ಇವರು ನಿಜವಾಗಿಯೂ ಸಾಕಷ್ಟು ಜನರಿಗೆ ಸ್ಫೂರ್ತಿ” ಎನ್ನುವ ಹಲವಾರು ಕಾಮೆಂಟ್‌ಗಳು ಈ ವಿಡಿಯೊಗೆ ಬಂದಿವೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Bed Bugs: ಪ್ಯಾರಿಸ್‌ನಲ್ಲಿ ಸಿಕ್ಕಾಪಟ್ಟೆ ತಿಗಣೆ ಕಾಟ! ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಎಂಟ್ರಿ ಕೊಟ್ಟ ಫ್ರಾನ್ಸ್ ಸರ್ಕಾರ

Bed Bugs: ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ ನಗರದಲ್ಲಿ ತಿಗಣೆ ಕಾಟ ವಿಪರೀತವಾಗಿದ್ದು, ಈ ಕುರಿತಾದ ಫೋಟೋ, ವಿಡಿಯೋಗಳನ್ನು ಜನರು ಸೋಷಿಯಲ್ ಮೀಡಿಯಾದಲ್ಲಿ ಷೇರ್ ಮಾಡುತ್ತಿದ್ದಾರೆ.

VISTARANEWS.COM


on

Edited by

Paris facing bed bugs and France government is trying to tackle crisis
Koo

ಪ್ಯಾರಿಸ್: ಫ್ರಾನ್ಸ್ (France) ರಾಜಧಾನಿ ಪ್ಯಾರಿಸ್ (Paris City) ತನ್ನ ಐಫೆಲ್ ಟವರ್, ಚಾಂಪ್ಸ್-ಎಲಿಸೀಸ್ ಮತ್ತು ಲೌವ್ರೆ ಮ್ಯೂಸಿಯಂ ಸೇರಿದಂತೆ ಇನ್ನ ಅನೇಕ ಐತಿಹಾಸಿಕ ಹೆಗ್ಗುರುತಗಳಿಗಾಗಿ ಪ್ರಸಿದ್ಧಿಯಾಗಿದೆ. ಆದರೆ, ಕಳೆದ ಕೆಲವು ದಿನಗಳಿಂದ ಪ್ಯಾರಿಸ್ ಬೇರೆ ಕಾರಣಕ್ಕೆ ಸುದ್ದಿಯಲ್ಲಿದೆ. ಈ ನಗರದಲ್ಲಿ ಎಲ್ಲೆಂದರಲ್ಲಿ ಕಂಡು ಬರುತ್ತಿರುವ ತಿಗಣೆಗಳಿಂದ (Bed Bugs) ಜನರು ಭಾರೀ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಹಾಗಾಗಿ, ತಿಗಣೆಗಳ ನಿರ್ಮೂಲನಕ್ಕಾಗಿ ಫ್ರಾನ್ಸ್ ಸರ್ಕಾರವು (France Government) ಸಮರವನ್ನೇ ಸಾರಿದೆ(Viral News).

ಹೈಸ್ಪೀಡ್ ರೈಲುಗಳು, ಬಸ್‌ಗಳು, ಸಿನಿಮಾ ಥಿಯೇಟರ್‌ಗಳು, ಚಾರ್ಲ್ಸ್ ಡೇ ಗೌಲ್ ವಿಮಾನ ನಿಲ್ದಾಣ ಸೇರಿದಂತೆ ನಗರದ ಬಹುತೇಕ ತಿಗಣೆ ಕಾಟದ ಫೋಟೋಗಳು ಮತ್ತು ವಿಡಿಯೋಗಳನ್ನು ಪ್ಯಾರಿಸ್ ಜನರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಫ್ರಾನ್ಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಫ್ರಾನ್ಸ್ ಸರ್ಕಾರ ಈಗ ತಿಗಣೆ ಸಂಹಾರಕ್ಕೆ ಮುಂದಾಗಿದೆ. ಫ್ರಾನ್ಸ್ ಸಾರಿಗೆ ಸಚಿವ ಕ್ಲೆಮೆಂಟ್ ಬ್ಯೂನ್ ಅವರು, ಸಾರ್ವಜನಿಕ ಸಾರಿಗೆ ಕಂಪನಿಗಳ ಪ್ರತಿನಿಧಿಗಳ ಸಭೆ ನಡೆಸಲಿದ್ದೇನೆ. ಈ ವೇಳೆ, ತಿಗಣೆಗಳ ಸಮಸ್ಯೆಯನ್ನು ಬಗೆಹರಿಸುವ ಕುರಿತು ಚರ್ಚಿಸಲಾಗುವುದು. ಅಲ್ಲದೇ, ಪ್ರಯಾಣಿಕರಿಗೆ ತಿಗಣೆ ಕಾಟದಿಂದ ತಪ್ಪಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಫ್ರಾನ್ಸ್ ಸರ್ಕಾರ ಕೈಗೊಳ್ಳಲಿದೆ ಎಂಬ ಭರವಸೆ ನೀಡಿದ್ದಾರೆ ಎಂದು ಫ್ರಾನ್ಸ್ 24 ವರದಿ ಮಾಡಿದೆ.

ತಿಗಣೆ ಸಂವಹಾರ ಮಾಡುವುದಕ್ಕಾಗಿಯೇ ಮೀಸಲಾದ ಕಾರ್ಯಪಡೆಯನ್ನು ರಚಿಸುವ ಮೂಲಕ ಜನರ ನೆರವಿಗೆ ಧಾವಿಸಬೇಕು ಎಂದು ಪ್ಯಾರಿಸ್ ಸಿಟಿ ಹಾಲ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರನ್ನು ಒತ್ತಾಯಿಸಿದೆ. ಫ್ರೆಂಚ್ ಸಾರಿಗೆ ಪೂರೈಕೆದಾರರು ಇತ್ತೀಚೆಗೆ ಈ ತಿಗಣೆಗಳು ಕಂಡು ಬಂದಿಲ್ಲ ವಾಸ್ತವದ ನಡುವೆಯೂ ಅವುಗಳ ಬಗ್ಗೆ ಎಚ್ಚರಿಕೆ ವಹಿಸುವುದಾಗಿ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Viral News: 163 ಇಲಿ ಹಿಡಿಯಲು 69 ಲಕ್ಷ ರೂ. ವೆಚ್ಚ ಮಾಡಿದ ರೈಲ್ವೆ ಇಲಾಖೆ! ಭ್ರಷ್ಟಾಚಾರ ಎಂದು ಕಿಡಿಕಾರಿದ ಕಾಂಗ್ರೆಸ್

ಪ್ಯಾರಿಸ್ ಮೆಟ್ರೋ ಕಾರ್ಯನಿರ್ವಹಣೆ ಮಾಡುವ ಆರ್‌ಎಟಿಪಿ, ಪ್ರತಿಯೊಂದು ಅಂಶವನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಆದರೆ, ಕಳೆದ ಕೆಲವು ದಿನಗಳಿಂದ ನಮ್ಮ ಉಪಕರಣಗಳಲ್ಲಿ ತಿಗಣೆಗಳ ಕುರಿತಾದ ಯಾವುದೇ ಸಾಬೀತಾದ ಪ್ರಕರಣಗಳು ದಾಖಲಾಗಿಲ್ಲ ಎಂದು ಸಿಎನ್ಎನ್‌ಗೆ ತಿಳಿಸಿದೆ.

ಮನೆಗಳಲ್ಲಿ ತಿಗಣೆ ಹೆಚ್ಚಾಗುವ ಸಂಭವಗಳಿವೆ. ತ್ವರಿತಗತಿಯಲ್ಲಿ ತಿಗಣೆಗಳು ಹೆಚ್ಚಾಗುತ್ತಿರುವ ಕುರಿತು ಅಗತ್ಯವಿರುವ ಎಲ್ಲ ಸಂಗತಿಗಳನ್ನು ನಾವು ಪರಿಶೀಲಿಸುತ್ತಿದ್ದೇವೆ. ಪ್ರಯಾಣ, ಹಂಚಿಕೊಳ್ಳುವ ವಸತಿ ವ್ಯವಸ್ಥೆ ಸೇರಿದಂತೆ ಕೆಲವು ಸಂಗತಿಗಳು ತಿಗಣೆಗಳ ಸಮಸ್ಯೆ ಕಾರಣವಾಗಿರಬಹುದು ಎಂದು ANSESನ ಸಾಮಾಜಿಕ ವಿಜ್ಞಾನ, ಅರ್ಥಶಾಸ್ತ್ರ ಮತ್ತು ಸಮಾಜ ವಿಭಾಗದ ಉಪ ನಿರ್ದೇಶಕರಾದ ಕರೀನ್ ಫಿಯೋರ್ ಅವರು ತಿಳಿಸಿದ್ದಾರೆ.

ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Continue Reading

ವೈರಲ್ ನ್ಯೂಸ್

Viral News: ಹುಟ್ಟುಹಬ್ಬದಂದು ಮಗಳಿಗೆ ಕೊಳಕು ನೀರು ತುಂಬಿದ ಬಾಟಲಿ ನೀಡಿದ ತಂದೆ; ಹಿಂದಿದೆ ಅದ್ಭುತ ಪಾಠ

Viral News: ಮಹಿಳೆಯೊಬ್ಬರಿಗೆ ಅವರ ತಂದೆ ಕೊಳಕು ನೀರು ತುಂಬಿದ ಬಾಟಲಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದೂ ಒಂದು ಗಿಫ್ಟಾ? ಎಂದು ಮೂಗು ಮುರಿಯಬೇಡಿ. ಇದರ ಹಿಂದಿದೆ ಬಹು ದೊಡ್ಡ ಜೀವನ ಪಾಠ, ಅದೇನು ಎನ್ನುವುದರ ವಿವರ ಇಲ್ಲಿದೆ.

VISTARANEWS.COM


on

Edited by

viral news
Koo

ಬೆಂಗಳೂರು: ಸಾಮಾನ್ಯವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುವ ಪ್ರೀತಿ ಪಾತ್ರರಿಗೆ ಉತ್ತಮ, ದುಬಾರಿ ಉಡುಗೊರೆ ನೀಡುತ್ತೇವೆ. ಆದರೆ ಇಲ್ಲೊಬ್ಬಳು ಮಹಿಳೆ ಹುಟ್ಟುಹಬ್ಬದಂದು ತನ್ನ ತಂದೆಯಿಂದ ಪಡೆದುಕೊಂಡ ಗಿಫ್ಟ್‌ ನೋಡಿದರೆ ನಿಮ್ಮ ಹುಬ್ಬೇರುವುದು ಖಚಿತ. ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ತಂದೆಯಿಂದ ಸ್ವೀಕರಿಸಿದ ʼಅಪರೂಪʼದ ಉಡುಗೊರೆಯ ಚಿತ್ರವನ್ನು ಹಂಚಿಕೊಂಡಿದ್ದಾರೆ. ʼʼತಂದೆ ನನ್ನ ಹುಟ್ಟುಹಬ್ಬಕ್ಕೆ ಕೊಳಚೆ ನೀರು ತುಂಬಿದ ಬಾಟಲಿಯನ್ನು ಗಿಫ್ಟ್‌ ಆಗಿ ನೀಡಿದ್ದಾರೆʼʼ ಎಂದಿದ್ದಾರೆ. ಜತೆಗೆ ಅವರು ಅದರ ಹಿಂದಿರುವ ಕಾರಣವನ್ನೂ ವಿವರಿಸಿದ್ದಾರೆ. ಸದ್ಯ ಈ ಪೋಸ್ಟ್‌ ವೈರಲ್‌ ಆಗಿದೆ.

ಯಾರು ಈ ಮಹಿಳೆ?

ಪೆಟ್ರೀಷಿಯಾ ಮೌ ಎನ್ನುವ ಮಹಿಳೆಯೇ ಈ ʼಅಪರೂಪʼದ ಉಡುಗೊರೆ ಪಡೆದಾಕೆ. ʼʼಈ ವರ್ಷದ ನನ್ನ ಹುಟ್ಟುಹಬ್ಬಕ್ಕೆ ತಂದೆ ಕೊಳಚೆ ನೀರಿರುವ ಬಾಟಲಿಯನ್ನು ಗಿಫ್ಟ್‌ ಮಾಡಿದ್ದಾರೆʼʼ ಎಂದು ಅವರು ಬರೆದುಕೊಂಡಿದ್ದಾರೆ. ಹಿಂದೆಲ್ಲ ಅವರ ತಂದೆ ಬರ್ತ್‌ ಡೇ ಸಂದರ್ಭಗಳಲ್ಲಿ ಪ್ರಥಮ ಚಿಕಿತ್ಸೆ ಕಿಟ್‌, ಪೆಪ್ಪರ್‌ ಸ್ಪ್ರೇ, ಕೀ ಚೈನ್‌, ಆಕೆಗಾಗಿಯೇ ಬರೆದ ಪುಸ್ತಕ ಮುಂತಾದ ಅರ್ಥಪೂರ್ಣ ಗಿಫ್ಟ್‌ ನೀಡಿದ್ದರಂತೆ. ʼʼಈ ಬಾರಿ ತುಂಬಾ ವಿಶೇಷವಾದ ಉಡುಗೊರೆ ನೀಡುತ್ತೇನೆ. ಅದರ ಖರೀದಿಗೆ ಹಣ ಬೇಕಾಗುವುದಿಲ್ಲ. ಆದರೆ ಅತೀ ಮುಖ್ಯ ಜೀವನ ಪಾಠ ಕಲಿಸುತ್ತದೆʼ ಎಂದು ತಂದೆ ಈ ಹಿಂದೆಯೇ ಹೇಳಿದ್ದರುʼʼ ಎಂದು ಮೌ ಬರೆದುಕೊಂಡಿದ್ದಾರೆ.

ಜೀವನ ಸಂದೇಶವೇನು?

ಮುಂದೆ ಮೌ ಕೊಳಚೆ ನೀರು ಬೋಧಿಸುವ ಬಹುಮುಖ್ಯ ಜೀವನ ಪಾಠ ವಿವರಿಸುತ್ತಾರೆ. ಇದು ಓದುತ್ತಿದ್ದಂತೆ ನೀವು ಕೂಡ ಅಮೂಲ್ಯ ಉಡುಗೊರೆ ಎಂದಯ ತಲೆ ತೂಗುವುದು ಖಂಡಿತ. ಆಕೆ ಬರೆಯುತ್ತಾರೆ, ʼʼಅಲುಗಾಡಿಸಿದ ಕೊಳಚೆ ನೀರಿನ ಬಾಟಲಿಯ ನೀರು ಚಿಂತೆ, ಗೊಂದಲ, ಕೋಪದಲ್ಲಿರುವ ನಿಮ್ಮ ಮನಸ್ಥಿತಿಯನ್ನು ಹೋಲುತ್ತದೆ. ಆಗ ಪ್ರತಿಯೊಂದು ನಿಮ್ಮ ಕಣ್ಣಿಗೆ ತಪ್ಪಾಗಿಯೇ ಕಾಣಿಸುತ್ತದೆ. ಯಾವಾಗ ನೀರು ಶಾಂತವಾಗುತ್ತದೆಯೋ ಆಗ ಕೊಳಕೆಲ್ಲ ಕೆಳಗೆ ಉಳಿದು ಮೇಲೆ ಶುಭ್ರ ನೀರು ಕಾಣಿಸುತ್ತದೆ. ಆಗ ಕೊಳಕು ಬಾಟಲಿಯ 10% ಭಾಗದಲ್ಲಷ್ಟೇ ಉಳಿದಿರುತ್ತದೆ. ಅದರಂತೆ ನಮ್ಮ ಮನಸ್ಸಿನ ಗೊಂದಲವೆಲ್ಲ ತಿಳಿಯಾದಾಗ ಎಲ್ಲವೂ ಸರಿಯಾಗಿ ಗೋಚರಿಸುತ್ತದೆ. ಆದ್ದರಿಂದ ನಾವು ಸರಿಯಾದ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕುʼʼ ಎಂದು ಮೌ ಹೇಳಿದ್ದಾರೆ.

ʼʼವಾರಾಂತ್ಯದ ಬಳಿಕ ನಾನು ಸಮುದ್ರದ ದಂಡೆಗೆ ತೆರಳಿ ಬಾಟಲಿ ನೀರನ್ನು ಸುರಿದೆ. ಅದರೊಂದಿಗೆ ನಾನು ಇನ್ನೊಂದು ಪಾಠವನ್ನೂ ಕಲಿತೆ. ನಾವು ಸಾಗರದ ಹನಿಯಲ್ಲ, ನಾವು ಒಂದು ಹನಿಯಲ್ಲಿ ಸಾಗರ’ ಎನ್ನುವುದನ್ನು ಕಂಡುಕೊಂಡೆʼʼ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Viral Video: ಫ್ರಿಡ್ಜ್‌ ಡೋರ್ ತೆಗೆಯಲು ಹೋದ 4 ವರ್ಷದ ಬಾಲಕಿಗೆ ಕರೆಂಟ್ ಶಾಕ್, ಸ್ಥಳದಲ್ಲೇ ಸಾವು

ಅಕ್ಟೋಬರ್‌ 2ರಂದು ಮಾಡಲಾದ ಈ ಪೋಸ್ಟ್‌ ಅನ್ನು ಈಗಾಗಲೇ ಸುಮಾರು 1.2 ಕೋಟಿ ಮಂದಿ ವೀಕ್ಷಿಸಿದ್ದಾರೆ. ಜತೆಗೆ 5,900 ಅಧಿಕ ಲೈಕ್‌ ಲಭಿಸಿದೆ. ಹಲವರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ʼʼಇದು ಉತ್ತಮ ಉಡುಗೊರೆ. ನಿಮಗೆ ಹುಟ್ಟುಹಬ್ಬದ ಶುಭಾಶಯಗಳುʼʼ ಎಂದು ಒಬ್ಬರು ಹೇಳಿದ್ದಾರೆ. ʼʼಈ ಜೀವನ ಪಾಠ ನಿಜಕ್ಕೂ ಅತ್ಯುತ್ತಮವಾದುದು. ಹಂಚಿಕೊಂಡಿದ್ದಕ್ಕೆ ಧನ್ಯವಾದಗಳುʼʼ ಎಂದು ಇನ್ನೊಬ್ಬರು ಹೇಳಿದ್ದಾರೆ. ʼʼಅದ್ಭುತ ತಂದೆʼʼ ಎಂದು ಮಗದೊಬ್ಬರು ಕಮೆಂಟ್‌ ಮಾಡಿದ್ದಾರೆ. “ಸರಳ ಆದರೆ ಆಳವಾದ ಜೀವನ ಪಾಠ. ಅವರು ಕಲಿಸಲು ಬಯಸಿದ ಎರಡನೇ ಜೀವನ ಪಾಠ, ಒಮ್ಮೆ ಕಳೆದು ಹೋದರೆ, ಅದು ಶಾಶ್ವತವಾಗಿ ಕಳೆದುಹೋಗುತ್ತದೆ” ಎಂದು ಐದನೆಯವರು ಹಂಚಿಕೊಂಡಿದ್ದಾರೆ. ಒಟ್ಟಿನಲ್ಲಿ ಜೀವನವನ್ನು ಸರಳವಾಗಿ ತಿಳಿಸಿದ ತಂದೆಯ ಪ್ರಯತ್ನಕ್ಕೆ ಭಾರಿ ಮೆಚ್ಚುಗೆಯೇ ಲಭಿಸಿದೆ.

Continue Reading

ಕರ್ನಾಟಕ

Gold Smuggling : ವಿಮಾನದಲ್ಲಿ ಬಂಗಾರದ ಮನುಷ್ಯರು!; ಪ್ಯಾಂಟಲ್ಲೂ ಚಿನ್ನ, ಪ್ಯಾಂಟಿನೊಳಗೂ ಚಿನ್ನ, ಗಂಟಲ್ಲೂ ಚಿನ್ನ!

Gold smuggling: ಜನರು ಚಿನ್ನವನ್ನು ಕಸ್ಟಮ್ಸ್‌ ಕಣ್ತಪ್ಪಿಸಿ ತರಲು ಮಾಡುವ ಉಪಾಯಗಳನ್ನು ನೋಡಿದರೆ ಇನ್ನೋವೇಟಿವ್‌ ಪ್ರಶಸ್ತಿ ಕೊಡುವಂತಿವೆ. ಆದರೆ, ಅಧಿಕಾರಿಗಳು ಮತ್ತು ತಂತ್ರಜ್ಞಾನ ಅದಕ್ಕಿಂತಲೂ ಬುದ್ಧಿವಂತರು!

VISTARANEWS.COM


on

Edited by

Gold smuggling
ಪ್ಯಾಂಟಿನ ಬಕಲ್‌ನೊಳಗೆ ಚಿನ್ನ, ಕಾಲಿನ ಮಂಡಿಯಲ್ಲಿ, ಗುದದ್ವಾರದಲ್ಲಿ ಸಿಕ್ಕಿದ ಚಿನ್ನ
Koo

ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ) : ಚಿನ್ನ ಕಂಡರೆ ಹೆಣವೂ ಬಾಯಿಬಿಡುತ್ತದೆ ಎಂದು ಒಂದು ಹೊಸ ಗಾದೆಯೇ ಮಾಡಬೇಕಾದೀತೇನೋ! ಬೆಂಗಳೂರು ವಿಮಾನ ನಿಲ್ದಾಣದಲ್ಲಿ (Kempegowda International Airport) ಚಿನ್ನವನ್ನು ಕಣ್ತಪ್ಪಿಸಿ ತರಲು ಜನರು ಮಾಡುವ ಹೊಸ ಹೊಸ ಉಪಾಯಗಳಿಗೆ ಇನ್ನೋವೇಟಿವ್‌ ಐಡಿಯಾ ಪ್ರಶಸ್ತಿ ಕೊಡಬೇಕಾದೀತೇನೋ!

ಆ ಮಟಕ್ಕೆ ಜನರು ಹುಚ್ಚುಗಟ್ಟಿಕೊಂಡು ಚಿನ್ನದ ಗಟ್ಟಿಯನ್ನು ವಿದೇಶಗಳಿಂದ ತರಲು (Gold Smuggling) ಪ್ರಯತ್ನ ಮಾಡುತ್ತಿದ್ದಾರೆ. ಕೆಲವರು ವಿಮಾನ ನಿಲ್ದಾಣದಲ್ಲಿ (Bangalore Airport) ಸಿಕ್ಕಿಬೀಳುತ್ತಾರೆ, ಇನ್ನು ಕೆಲವರು ಸಿಕ್ಕಿ ಹಾಕಿಕೊಳ್ಳದೆ ಬಚಾವಾಗುತ್ತಾರೆ!

ಗುದದ್ವಾರ, ಕಾಲಿನ ಮಂಡಿಯಲ್ಲಿ ಚಿನ್ನ!

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಳು ಎರಡು ದಿನದ ಹಿಂದೆ ನಡೆಸಿದ ಕಾರ್ಯಾಚರಣೆಯಲ್ಲಿ ಕೋಟಿ ಕೋಟಿ ಮೌಲ್ಯದ ಚಿನ್ನ ಸೀಜ್ ಮಾಡಿದ್ದಾರೆ. ದುಬೈ ಹಾಗೂ ಕೊಲೊಂಬೊದಿಂದ ಬಂದ ನಾಲ್ವರು ಪ್ರಯಾಣಿಕರ ತೀವ್ರ ತಪಾಸಣೆ ವೇಳೆ ಅವರಲ್ಲಿ ಮೂರು ಕೆಜಿ ಚಿನ್ನ ಪತ್ತೆಯಾಗಿದೆ. ಅವರು ಅದನ್ನು ಎಲ್ಲಿಟ್ಟುಕೊಂಡಿದ್ದರು ಎಂದು ತಿಳಿದರೆ ನೀವು ಮೂಗಿಗೆ ಬೆರಳಿಡುತ್ತೀರಿ! ಯಾಕೆಂದರೆ ಅವರಲ್ಲಿ ಕೆಲವರ ಬಳಿ ಚಿನ್ನ ಪತ್ತೆಯಾಗಿದ್ದು ಗುದದ್ವಾರದಲ್ಲಿ (Gold Found in anus). ಇನ್ನೊಬ್ಬ ಕಾಲಿನ ಮಂಡಿಯಲ್ಲಿ ಆಪರೇಟ್‌ ಮಾಡಿ ಚಿನ್ನ ಇಟ್ಟುಕೊಂಡು ಬಂದಿದ್ದ.

Bangalore airport terminal 2

ಕಸ್ಟಮ್ಸ್ ಅಧಿಕಾರಿಗಳ ತಪಾಸಣೆಯಲ್ಲಿ ನಾಲ್ವರು ಪ್ರಯಾಣಿಕರ ಕರಾಮತ್ತು ಬಯಲಾಗಿದ್ದು, ಒಟ್ಟು 1 ಕೋಟಿ 77 ಲಕ್ಷ ಮೌಲ್ಯದ ಮೂರು ಕೆಜಿ ಚಿನ್ನದ ಬಿಸ್ಕೆಟ್‌ಗಳು ಸಿಕ್ಕಿವೆ. ನಾಲ್ವರೂ ಪ್ರಯಾಣಿಕರು ಈಗ ಪೊಲೀಸರ ವಶದಲ್ಲಿದ್ದು, ಈ ಸಾಗಾಟದ ಹಿಂದಿರುವ ಜಾಲವನ್ನು ಭೇದಿಸಲು ಪ್ರಯತ್ನಿಸಲಾಗುತ್ತಿದೆ.

ಪೇಸ್ಟ್‌ ಮಾಡಿ ಪ್ಯಾಂಟ್‌ನೊಳಗೆ ಹಚ್ಚಿದ್ದ!

ಇನ್ನೊಂದು ಘಟನೆಯಲ್ಲಿ ವ್ಯಕ್ತಿಯೊಬ್ಬ ಅದೆಷ್ಟು ಪ್ಲ್ಯಾನ್‌ ಮಾಡಿದ್ದ ಎಂದರೆ ಪ್ಯಾಂಟ್ ಹಾಗೂ ಒಳ‌ ಉಡುಪಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ. ಅವನ ಖತರ್ನಾಕ್‌ ಬುದ್ಧಿ ಹೇಗೆ ವರ್ಕ್‌ ಮಾಡಿತ್ತು ಎಂದರೆ ಕೊಲಂಬೊದಿಂದ ಶ್ರೀಲಂಕಾ ಏರ್ಲೈನ್ಸ್ ನಲ್ಲಿ ಬಂದಿದ್ದ ಈ ಪ್ರಯಾಣಿಕ ಪೌಡರ್ ರೂಪದಲ್ಲಿ ಚಿನ್ನವನ್ನು ಪೇಸ್ಟ್ ಮಾಡಿ ಪ್ಯಾಂಟ್ ಒಳಗಡೆ ಮರೆ ಮಾಚಿದ್ದ.

ಪ್ಯಾಂಟ್‌ನ ಸೊಂಟದ ಪಟ್ಟಿಯ ಒಳಗಡೆ ಒಂದು ಕಡೆ ಜೇಬಿನ ತರ ಮಾಡುತ್ತೇವಲ್ಲ. ಇವರು ಇಡೀ ಪಟ್ಟಿಯನ್ನೇ ಹಾಗೆ ಮಾಡಿದ್ದ. ಅದರಲ್ಲಿ ಚಿನ್ನವನ್ನು ಪೇಸ್ಟ್‌ ಮಾಡಿ ಅಂಟಿಸಿದ್ದ. ವಿಮಾನ ನಿಲ್ದಾಣದಿಂದ ತಪ್ಪಿಸಿಕೊಂಡರೆ ಅದನ್ನು ಚಿನ್ನವಾಗಿ ಮರು ರೂಪ ನೀಡುವುದು ಕಷ್ಟವೇನಲ್ಲ ಅನ್ನುವುದು ಅವನ ಲೆಕ್ಕಾಚಾರವಾಗಿತ್ತು. ಆದರೆ, ಕಸ್ಟಮ್ಸ್‌ ಅಧಿಕಾರಿಗಳ ಕೈಗೆ ಸಿಕ್ಕಿ ಹಾಕಿಕೊಂಡ ಆತನನ್ನು ಈಗ ಚಿನ್ನದ ಸಹಿತ ಬಂಧಿಸಲಾಗಿದೆ. ಆತನ ಪ್ಯಾಂಟ್‌ನಲ್ಲಿ ಸುಮಾರು 74 ಗ್ರಾಂ ಚಿನ್ನ ಪತ್ತೆಯಾಗಿದೆ. ಇದೀಗ ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸುತ್ತಿದ್ದಾರೆ.

Continue Reading

ದೇಶ

Viral Video: ಫ್ರಿಡ್ಜ್‌ ಡೋರ್ ತೆಗೆಯಲು ಹೋದ 4 ವರ್ಷದ ಬಾಲಕಿಗೆ ಕರೆಂಟ್ ಶಾಕ್, ಸ್ಥಳದಲ್ಲೇ ಸಾವು

Viral Video: ನಿಜಮಾಬಾದ್ ಸೂಪರ್ ಮಾರುಕಟ್ಟೆಯಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ.

VISTARANEWS.COM


on

Edited by

4-Year-Old Child dead While Trying to Open Supermarket Fridge and Viral Video
Koo

ನಿಜಮಾಬಾದ್: ಎನ್ ಸೂಪರ್ ಮಾರುಕಟ್ಟೆಯಲ್ಲಿ (Super Market) 4 ವರ್ಷದ ಬಾಲಕಿಯೊಬ್ಬಳು (4 year old Girl) ಚಾಕೋಲೆಟ್ ಆಸೆಗಾಗಿ ಫ್ರಿಡ್ಜ್‌ ತೆರೆಯಲು ಹೋದಾಗ, ವಿದ್ಯುತ್ ತಗುಲಿ ಮೃತಪಟ್ಟ ಘಟನೆ ತೆಲಂಗಾಣದ ನಿಜಾಮಾಬಾದ್‌ನಲ್ಲಿ (Nizamabad) ನಡೆದಿದೆ(Viral Video).

ನವಿಪೇಟೆಯ ಮಗುವಿನ ತಂದೆ ರಾಜಶೇಖರ್ ಅವರು ತಮ್ಮ ಮಗಳು ರುಷಿತಾ (4) ಅವರೊಂದಿಗೆ ಕೆಲವು ದಿನಸಿ ಖರೀದಿಸಲು ಎನ್ ಸೂಪರ್ ಮಾರ್ಕೆಟ್‌ಗೆ ಹೋಗಿದ್ದರು. ಸಿಸಿಟಿವಿ ಕ್ಯಾಮೆರಾ ದೃಶ್ಯಗಳಲ್ಲಿ ಸೆರೆಯಾಗಿರುವಂತೆ, ಮಗುವು ಫ್ರಿಡ್ಜ್ ತೆರೆಯಲು ಪ್ರಯತ್ನಿಸುವಾಗ ವಿದ್ಯುದಾಘಾತಕ್ಕೊಳಗಾಗುವುದನ್ನು ಕಾಣಬಹುದು. ವಿಶೇಷ ಎಂದರೆ, ಇದೇ ಫ್ರಿಡ್ಜ್‌ನಿಂದ ಬಾಲಕಿಯ ತಂದೆ ಕೆಲವು ಸೆಕೆಂಡುಗಳ ಏನನ್ನೋ ತೆಗೆದುಕೊಳ್ಳುತ್ತಾರೆ. ಆದರೆ, ಮಗು ಫ್ರಿಡ್ಜ್ ಬಾಗಿಲು ತೆರೆಯುತ್ತಲೇ ಮಗು ವಿದ್ಯುತ್ ತಗುಲಿ ಸಾವಿಗೀಡಾದ ಸಂಗತಿ ಅವರಿಗೆ ಗೊತ್ತಾಗುವುದಿಲ್ಲ. ಈ ಘಟನೆಯ ದೃಶ್ಯಾವಳಿಯು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಭಾರೀ ವೈರಲ್ ಆಗಿದೆ.

ಈ ಸುದ್ದಿಯನ್ನೂ ಓದಿ: Viral Video: ಅಂಪೈರ್​ ತೀರ್ಪಿಗೆ ಆಕ್ರೋಶಗೊಂಡು ಕೈ ಕೈ ಮಿಲಾಯಿಸಿದ ಸೆಲೆಬ್ರಿಟಿಗಳು

ವಿಡಿಯೋದಲ್ಲಿ ಏನಿದೆ?

ಮಗುವಿನ ತಂದೆ ಸೂಪರ್ ಮಾರ್ಕೆಟ್‌ಗೆ ಅವಳೊಂದಿಗೆ ಹೋಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಸೆರೆಹಿಡಿದ ದೃಶ್ಯಗಳ ಎಡಭಾಗದಲ್ಲಿ ಇರಿಸಲಾದ ಫ್ರಿಡ್ಜ್‌ನಲ್ಲಿ ಏನನ್ನಾದರೂ ಹುಡುಕುವಲ್ಲಿ ತಂದೆ ನಿರತರಾಗುತ್ತಾರೆ. ಏತನ್ಮಧ್ಯೆ, ಚಿಕ್ಕ ಹುಡುಗಿ ಬಲಭಾಗದಲ್ಲಿರುವ ಫ್ರಿಡ್ಜ್ ಅನ್ನು ತೆರೆಯಲು ಹೆಣಗಾಡುತ್ತಿರುವುದನ್ನು ಕಾಣಬಹುದು. ಕೆಲವೇ ಸೆಕೆಂಡುಗಳಲ್ಲಿ, ಅವಳು ವಿದ್ಯುತ್ ಸ್ಪರ್ಶಕ್ಕೆ ಒಳಗಾಗುತ್ತಾಳೆ ಮತ್ತು ಉಪಕರಣದ ಹ್ಯಾಂಡಲ್ ಅನ್ನು ಹಿಡಿದುಕೊಂಡು ನೇತಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ತನ್ನ ಮಗುವಿಗೆ ಏನಾಗುತ್ತದೆ ಎಂದು ಗೊತ್ತಾಗದ ತಂದೆ ಪಕ್ಕದಲ್ಲೇ ತನಗೆ ಬೇಕಾದ್ದನ್ನು ಹೆಕ್ಕುತ್ತಿರುತ್ತಾರೆ. ಆದರೆ, ತಾನು ತೆಗೆದುಕೊಂಡು ವಸ್ತುಗಳೊಂದಿಗೆ ಹಿಂತಿರುಗಿ ನೋಡಿದಾಗ ಮಗು ಫ್ರಿಡ್ಜ್‌ ಹಿಡಿಕೆಗೆ ನೇತಾಡುತ್ತಿರುವುದನ್ನು ಕಾಣುತ್ತಾರೆ. ಕೂಡಲೇ ಕೈಯಲ್ಲಿದ್ದ ಎಲ್ಲ ವಸ್ತುಗಳನ್ನು ಎಸೆದು ಮಗುವನ್ನು ಎತ್ತಿಕೊಂಡು ಓಡುತ್ತಾರೆ. ಆದರೆ, ಅಷ್ಟೊತ್ತಿಗೆ ಮಗು ಸಾವಿಗೀಡಾಗುತ್ತಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Continue Reading
Advertisement
No Rain Girl waiting For rain and holding Umbrella
ಉಡುಪಿ6 mins ago

karnataka weather forecast : ಮುಕ್ಕಾಲು ಜಿಲ್ಲೆಗೆ ಕೈಕೊಟ್ಟ ಮಳೆರಾಯ; ಮತ್ತೆ ಮುಂಗಾರು ದುರ್ಬಲ

Paris facing bed bugs and France government is trying to tackle crisis
ಪ್ರಮುಖ ಸುದ್ದಿ7 mins ago

Bed Bugs: ಪ್ಯಾರಿಸ್‌ನಲ್ಲಿ ಸಿಕ್ಕಾಪಟ್ಟೆ ತಿಗಣೆ ಕಾಟ! ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಎಂಟ್ರಿ ಕೊಟ್ಟ ಫ್ರಾನ್ಸ್ ಸರ್ಕಾರ

Parul won gold medal in asian Games
ಕ್ರೀಡೆ8 mins ago

Asian Games : ಭಾರತಕ್ಕೆ ಮತ್ತೊಂದು ಚಿನ್ನದ ಪದಕ, 5000 ಮೀಟರ್​ ಓಟದಲ್ಲಿ ಮೊದಲ ಸ್ಥಾನ ಪಡೆದ ಪಾರುಲ್​

Siddaramaiah felicitated at Shepherds India International Conference
ಕರ್ನಾಟಕ21 mins ago

Kuruba Conference: ಬೆಳಗಾವಿಯಲ್ಲಿ ಬೃಹತ್‌ ಕುರುಬ ಸಮಾವೇಶದ ಮೂಲಕ ಸಿದ್ದರಾಮಯ್ಯ ಮತ್ತೊಮ್ಮೆ ಶಕ್ತಿ ಪ್ರದರ್ಶನ

Shivamogga encounter Fake News
ಕರ್ನಾಟಕ26 mins ago

Shivamogga Violence : ಎನ್‌ಕೌಂಟರ್‌ ಸುದ್ದಿ ಸುಳ್ಳು, ಮುಸ್ಲಿಮರು ಬಳಸಿದ್ದು ಆಟಿಕೆ ತಲವಾರ್‌ ಎಂದ ಎಸ್ಪಿ

boney kapoor
ಬಾಲಿವುಡ್33 mins ago

Boney Kapoor: ನಟಿ ಶ್ರೀದೇವಿ ಸಾವಿನ ಹಿಂದಿನ ಸತ್ಯ ಬಿಚ್ಚಿಟ್ಟ ಪತಿ ಬೋನಿ ಕಪೂರ್! ಅಂದು ಆಗಿದ್ದೇನು?

indvsned practice match
ಕ್ರಿಕೆಟ್35 mins ago

ICC World Cup 2023 : ಭಾರತ- ನೆದರ್ಲ್ಯಾಂಡ್ಸ್​ ​​​ ಅಭ್ಯಾಸ ಪಂದ್ಯವೂ ರದ್ದು

Bhagwant Mann
ದೇಶ48 mins ago

Punjab Debt: 47,107 ಕೋಟಿ ರೂ. ಸಾಲದ ಪೈಕಿ ಅರ್ಧದಷ್ಟು ಬಡ್ಡಿ ಪಾವತಿಗೆ ಬಳಕೆ ಎಂದ ಪಂಜಾಬ್ ಸಿಎಂ

Side Effects Of Bananas
ಆರೋಗ್ಯ57 mins ago

Side Effects Of Bananas: ಬಾಳೆಹಣ್ಣು ಹೆಚ್ಚು ತಿಂದರೆ ಏನಾಗುತ್ತದೆ?

BGS College lecturer Sudharshan
ಕರ್ನಾಟಕ59 mins ago

Lecturer Death : ಬಿಜಿಎಸ್‌ ಕಾಲೇಜಿನ ಉಪನ್ಯಾಸಕ ನೇಣಿಗೆ ಶರಣು; ಸಾವಿನ ಸುತ್ತ ಅನುಮಾನದ ಹುತ್ತ

7th Pay Commission
ನೌಕರರ ಕಾರ್ನರ್11 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Karnataka bandh Majestic
ಕರ್ನಾಟಕ1 week ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

DCC Bank Recruitment 2023
ಉದ್ಯೋಗ8 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ4 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Govt employees ssociation
ಕರ್ನಾಟಕ8 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

kpsc recruitment 2023 pdo recruitment 2023
ಉದ್ಯೋಗ3 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Rajendra Singh Gudha
ದೇಶ3 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Village Accountant Recruitment
ಉದ್ಯೋಗ8 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike; Order from Govt
ನೌಕರರ ಕಾರ್ನರ್7 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ10 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

The maintenance train finally lifted Metro services as usual
ಕರ್ನಾಟಕ3 hours ago

Namma Metro : ಕೊನೆಗೂ ಲಿಫ್ಟ್ ಆಯ್ತು ಮೆಂಟೈನ್ಸ್‌ ವೆಹಿಕಲ್‌; ಎಂದಿನಂತೆ ಮೆಟ್ರೋ ಓಡಾಟ

BBK Season 10 KicchaSudeep
ಕಿರುತೆರೆ4 hours ago

BBK Season 10 : ಅಕ್ಟೋಬರ್‌ 8 ರಿಂದ ಬಿಗ್‌ ಬಾಸ್‌ ಆಟ; ಚಾರ್ಲಿ ಎಂಟ್ರಿ ಕನ್ಫರ್ಮ್, ಉಳಿದವರು ಯಾರು ?

dina bhavishya
ಪ್ರಮುಖ ಸುದ್ದಿ13 hours ago

Dina Bhavishya : ಈ ರಾಶಿಯವರಿಗೆ ಮಾತೇ ಮುತ್ತು, ಮಾತೇ ಮೃತ್ಯು!

Actor Nagabhushana
ಕರ್ನಾಟಕ1 day ago

Actor Nagabhushana : ಡ್ರಂಕ್‌ ಆ್ಯಂಡ್‌ ಡ್ರೈವ್‌ನಲ್ಲಿ ನಟ ನಾಗಭೂಷಣ್‌ ನೆಗಟಿವ್‌; ವಿಚಾರಣೆಗೆ ಕರೆದ ಪೊಲೀಸರು

Dina Bhavishya
ಪ್ರಮುಖ ಸುದ್ದಿ2 days ago

Dina Bhavishya : ಆಪ್ತರೊಂದಿಗೆ ಮಾಡುವ ವ್ಯಾಪಾರ ನಷ್ಟ ತಂದೀತು ಹುಷಾರ್‌!

Terrorist Attack in Turkey Suicide bomber blows himself near parliament
ಪ್ರಮುಖ ಸುದ್ದಿ2 days ago

Terrorist Attack: ಟರ್ಕಿ ಸಂಸತ್ ಬಳಿ ಆತ್ಮಹತ್ಯಾ ಬಾಂಬ್ ದಾಳಿ, ಸಿಸಿಟಿವಿಯಲ್ಲಿ ಸೆರೆಯಾಯ್ತು ಸ್ಫೋಟದ ಕ್ಷಣಗಳು!

prajwal and yashswini
ಕರ್ನಾಟಕ2 days ago

Actor Nagabhushana : ಆ್ಯಕ್ಟಿಂಗ್‌ ನೋಡಿ ಮೆಚ್ಚಿದವರ ಪಾಲಿಗೆ ಯಮನಾಗಿಬಿಟ್ಟ; ಮೃತ ಕುಟುಂಬಸ್ಥರ ಆಕ್ರೋಶ

Dina Bhavishya
ಪ್ರಮುಖ ಸುದ್ದಿ3 days ago

Dina Bhavishya : ಆಪ್ತರೊಂದಿಗೆ ಅತಿಯಾದ ಸಲುಗೆ ಈ ರಾಶಿಯವರಿಗೆ ಒಳ್ಳೆಯದಲ್ಲ!

dina bhavishya
ಪ್ರಮುಖ ಸುದ್ದಿ4 days ago

Dina Bhavishya : ದಿನ ಪೂರ್ತಿ ಈ ರಾಶಿಯವರಿಗೆ ಟೆನ್ಷನ್‌ ಜತೆಗೆ ಪ್ರೆಶರ್‌

Dina Bhavishya
ಪ್ರಮುಖ ಸುದ್ದಿ5 days ago

Dina Bhavishya : ಈ ರಾಶಿಯವರಿಗೆ ಮನೆಯಲ್ಲೂ ಕಿರಿಕಿರಿ, ಆಫೀಸ್‌ನಲ್ಲೂ ಕಿರಿಕ್‌!

ಟ್ರೆಂಡಿಂಗ್‌