Viral Video : ಮಾರುದ್ದದ ವಿಷಕಾರಿ ಹಾವನ್ನು ಕೈನಲ್ಲಿ ಹಿಡಿದು ವಿಡಿಯೊ ಮಾಡಿದ ವ್ಯಕ್ತಿ; ಇಲ್ಲಿದೆ ನೋಡಿ ವೈರಲ್‌ ವಿಡಿಯೊ - Vistara News

ವೈರಲ್ ನ್ಯೂಸ್

Viral Video : ಮಾರುದ್ದದ ವಿಷಕಾರಿ ಹಾವನ್ನು ಕೈನಲ್ಲಿ ಹಿಡಿದು ವಿಡಿಯೊ ಮಾಡಿದ ವ್ಯಕ್ತಿ; ಇಲ್ಲಿದೆ ನೋಡಿ ವೈರಲ್‌ ವಿಡಿಯೊ

9 ಅಡಿಯಷ್ಟು ಉದ್ದರ ವಿಷಕಾರಿ ಹಾವೊಂದನ್ನು ಹಿಡಿದ ವ್ಯಕ್ತಿಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವೈರಲ್‌ (Viral Video) ಆಗಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಹಾವೆಂದರೆ ಭಯದಿಂದ ಓಡುವವರು ಅನೇಕರು ಇರುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿಗೆ ಹಾವೆಂದರೆ ಭಯವೇ ಇಲ್ಲ. ಮಾರುದ್ದ ಇರುವ ವಿಷಕಾರಿ ಹಾವನ್ನು ಕೈನಲ್ಲಿ ಹಿಡಿದುಕೊಂಡೇ ವಿಡಿಯೊ ಕೂಡ ಮಾಡಿದ್ದಾರೆ. ಆ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ (Viral Video) ಆಗಿದೆ.

ಇದನ್ನೂ ಓದಿ: Cobras Trapped: ಮನೆಯೊಂದರಲ್ಲಿ ಕಂಡು ಬಂತು ಮೂರು ನಾಗರ ಹಾವು; ರಕ್ಷಿಸಿ ಕಾಡಿನೊಳಗೆ ಬಿಟ್ಟ ಉರಗ ರಕ್ಷಕ

ಸರೀಸೃಪಗಳ ಮೃಗಾಲಯ ನಡೆಸುತ್ತಿರುವ ಜೇ ಬ್ರೀವರ್‌ ವಿಡಿಯೊ ಮಾಡಿರುವ ವ್ಯಕ್ತಿ. ರ್ಯಾಟ್‌ ಸ್ನೇಕ್‌ ಎಂದು ಕರೆಯಲ್ಪಡುವ ವಿಷಕಾರಿ ಹಾವನ್ನು ಅವರು ಕೈನಲ್ಲಿ ಹಿಡಿದುಕೊಂಡು ವಿಡಿಯೊ ಮಾಡಿದ್ದಾರೆ. ಆ ಹಾವು 9 ಅಡಿಗಳಷ್ಟು ಉದ್ದ ಇರುವುದಾಗಿಯೂ ಅವರು ತಿಳಿಸಿದ್ದಾರೆ.

ವಿಡಿಯೊವನ್ನು ಜೇ ಬ್ರೀವರ್‌ ಅವರೇ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. “ಈ ರೀತಿಯ ಹಾವನ್ನು ನಾನೂ ಕೂಡ ಈ ಹಿಂದೆ ನೋಡಿರಲಿಲ್ಲ. ಇದು ವಿಶ್ವದಲ್ಲೇ ಅತ್ಯಂತ ದೊಡ್ಡ ಹಾವುಗಳಲ್ಲಿ ಒಂದು. ಇದನ್ನು ಕೀಲಡ್‌ ರ್ಯಾಟ್‌ ಸ್ನೇಕ್‌ ಎಂದು ಕರೆಯಲಾಗುತ್ತದೆ. ಈ ಹಾವು ವಿಷ ಹೊರಹಾಕುವುದಕ್ಕೆ ನಿಮ್ಮನ್ನು ಕಚ್ಚುತ್ತದೆ. ಒಂದು ಖುಷಿಯ ವಿಚಾರವೇನೆಂದರೆ ಇವುಗಳಲ್ಲಿ ವಿಷದ ಪ್ರಮಾಣ ಕಡಿಮೆಯಿರುತ್ತದೆ. ಈ ಹಾವು ಮರದ ಮೇಲಾಗಲಿ, ನೀರಿನ ಮೇಲಾಗಲಿ ತುಂಬ ವೇಗವಾಗಿ ಚಲಿಸುತ್ತದೆ” ಎಂದು ಅವರು ವಿಡಿಯೊದೊಂದಿಗೆ ಬರೆದುಕೊಂಡಿದ್ದಾರೆ.


ಜೇ ಅವರ ಈ ವಿಡಿಯೊ ಸಾಮಾಜಿಕ ಜಾಲತಾಣದ ತುಂಬೆಲ್ಲ ಹರಿದಾಡಿದೆ. ಲಕ್ಷಾಂತರ ಮಂದಿ ವಿಡಿಯೊ ನೋಡಿದ್ದು, ಸಾವಿರಾರು ಮಂದಿ ವಿಡಿಯೊಗೆ ಲೈಕ್‌ ಮಾಡಿದ್ದಾರೆ. “ಅಬ್ಬಾ, ನೋಡುವುದಕ್ಕೇ ಭಯವಾಗುತ್ತಿದೆ” ಎಂದು ಅನೇಕರು ಕಾಮೆಂಟ್‌ಗಳಲ್ಲಿ ತಿಳಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Board Exam Result: 93.5% ಫಲಿತಾಂಶ ನೋಡಿ ಮೂರ್ಛೆ ಹೋದ ವಿದ್ಯಾರ್ಥಿ! ಐಸಿಯುಗೆ ದಾಖಲು

Board Exam Result: ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳು ಸಂತೋಷದಿಂದ ಜಿಗಿಯುವುದು ಸ್ವಾಭಾವಿಕ. ವಿಶೇಷವಾಗಿ, 90%ಕ್ಕಿಂತ ಹೆಚ್ಚಿರುವಾಗ ಇನ್ನಷ್ಟು ಸಂತಸವಾಗುತ್ತದೆ. ಆದರೆ ಮೀರತ್‌ನ 10ನೇ ತರಗತಿಯ ವಿದ್ಯಾರ್ಥಿ ತನ್ನ ಫಲಿತಾಂಶಗಳನ್ನು ನೋಡಿದ ನಂತರ ಮೂರ್ಛೆ ಹೋದ.

VISTARANEWS.COM


on

board exam tension viral news
Koo

ಲಖನೌ: ತನ್ನ ಯುಪಿ ಬೋರ್ಡ್ (UP Board Exam, Public Exam) 10ನೇ ತರಗತಿಯ ಪರೀಕ್ಷೆಯಲ್ಲಿ 93.5% ಅಂಕಗಳನ್ನು ಪಡೆದ ಪಾಸಾದ ವಿದ್ಯಾರ್ಥಿಯೊಬ್ಬ (Student), ಫಲಿತಾಂಶ ನೋಡಿದ ಕ್ಷಣವೇ ನಂಬಲಾಗದೆ ಮೂರ್ಛೆ ಹೋಗಿದ್ದಾನೆ. ನಂತರ ಈತನನ್ನು ತೀವ್ರ ನಿಗಾ ಘಟಕಕ್ಕೆ (ICU) ದಾಖಲಿಸಲಾಯಿತು.

ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳು ಸಂತೋಷದಿಂದ ಜಿಗಿಯುವುದು ಸ್ವಾಭಾವಿಕ. ವಿಶೇಷವಾಗಿ, 90%ಕ್ಕಿಂತ ಹೆಚ್ಚಿರುವಾಗ ಇನ್ನಷ್ಟು ಸಂತಸವಾಗುತ್ತದೆ. ಆದರೆ ಮೀರತ್‌ನ 10ನೇ ತರಗತಿಯ ವಿದ್ಯಾರ್ಥಿ ತನ್ನ ಫಲಿತಾಂಶಗಳನ್ನು ನೋಡಿದ ನಂತರ ಮೂರ್ಛೆ ಹೋದ. ಬೋರ್ಡ್ ಪರೀಕ್ಷೆಗಳ ಸಮಯದಲ್ಲಿ ವಿದ್ಯಾರ್ಥಿಗಳು ಅನುಭವಿಸುವ ಒತ್ತಡವನ್ನು ಇದು ಎತ್ತಿ ತೋರಿಸಿದೆ.

ತನ್ನ ಯುಪಿ ಬೋರ್ಡ್ 10ನೇ ತರಗತಿಯ ಪರೀಕ್ಷೆಯಲ್ಲಿ 93.5% ಪಡೆದ ನಂತರ, ಐಸಿಯುಗೆ ದಾಖಲಾದ ವಿದ್ಯಾರ್ಥಿ ನಂತರ ಚೇತರಿಸಿಕೊಂಡಿದ್ದಾನೆ. ಮೀರತ್‌ನ ಮೋದಿಪುರಂನಲ್ಲಿರುವ ಮಹರ್ಷಿ ದಯಾನಂದ ಇಂಟರ್ ಕಾಲೇಜಿನ 16 ವರ್ಷದ ಅನ್ಶುಲ್ ಕುಮಾರ್ ತನ್ನ ಪರೀಕ್ಷೆಗಳಲ್ಲಿ 93.5% ಅಂಕಗಳನ್ನು ಗಳಿಸಿದ್ದಾನೆ. ಆದರೆ ಸಂತೋಷದ ಕ್ಷಣವೇ ಆತನ ಕುಟುಂಬಕ್ಕೆ ದುಃಖದಾಯಕವಾಯಿತು. ಆತನ ಸ್ಥಿತಿ ಸುಧಾರಿಸದ ಕಾರಣ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಯ ನಂತರ ಕುಮಾರ್ ಬೇಗನೆ ಪ್ರಜ್ಞೆಯನ್ನು ಪಡೆದ.

ಉತ್ತರ ಪ್ರದೇಶದಲ್ಲಿ 10ನೇ ತರಗತಿ ಮತ್ತು 12ನೇ ತರಗತಿಯ ಫಲಿತಾಂಶಗಳನ್ನು ಏಪ್ರಿಲ್ 20, 2024ರಂದು ಬಿಡುಗಡೆ ಮಾಡಲಾಯಿತು. 10 ನೇ ತರಗತಿಯಲ್ಲಿ 89.55% ಮತ್ತು 12 ನೇ ತರಗತಿಯಲ್ಲಿ 82.60% ಮಂದಿ ಉತ್ತೀರ್ಣರಾಗಿದ್ದಾರೆ. ಶುಭಂ ವರ್ಮಾ ಮತ್ತು ಪ್ರಾಚಿ ನಿಗಮ್ ಯುಪಿಎಂಎಸ್‌ಪಿ 10 ಮತ್ತು 12 ನೇ ತರಗತಿಯಲ್ಲಿ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದರು.

ಇದನ್ನೂ ಓದಿ: Drought Relief: ಒಂದು ವಾರದಲ್ಲಿ ಕರ್ನಾಟಕಕ್ಕೆ ಬರ ಪರಿಹಾರ; ಸುಪ್ರೀಂಗೆ ಕೇಂದ್ರ ಮಹತ್ವದ ಮಾಹಿತಿ

Continue Reading

ಪ್ರಮುಖ ಸುದ್ದಿ

Look between H and L : ಸೋಶಿಯಲ್​ ಮೀಡಿಯಾಗಳಲ್ಲಿ ಟ್ರೆಂಡ್​ ಆದ H ಮತ್ತು L; ಏನಿದರ ಗಮ್ಮತ್ತು?

Look between H and L : ನಿಮ್ಮ ಕೀಬೋರ್ಡ್​​ನಲ್ಲಿ ಎಚ್ ಮತ್ತು ಎಲ್ ನಡುವೆ ನೋಡಿ” ಟ್ರೆಂಡ್ ಕೂಡ ಗೊಂದಲ ಸೃಷ್ಟಿಸಿತು. ಯಾಕೆಂದರೆ ಸ್ವಿಗ್ಗಿ, ಯೂಟ್ಯೂಬ್, ಬ್ಲಿಂಕಿಟ್ ಮತ್ತು ಇತರ ಬ್ರಾಂಡ್​ಗಳು ಕೂಡ ತಮ್ಮದೂ ಇರಲಿ ಎಂದು ಪೋಸ್ಟ್​​ ಮಾಡಿದವು. ಹೀಗಾಗಿ ವಿಷಯವೇನೆಂದು ತಿಳಿದುಕೊಳ್ಳುವುದು ಅಗತ್ಯ.

VISTARANEWS.COM


on

ook between H and L
Koo

ಬೆಂಗಳೂರು: ಮೇಣದ ಅರಮನೆಗೆ ಬೆಂಕಿ ಹಿಡಿದಷ್ಟೇ ವೇಗವಾಗಿ ಸೋಶಿಯಲ್​ ಮೀಡಿಯಾಗಳಲ್ಲಿ ಟ್ರೆಂಡ್ ಗಳು ಸೃಷ್ಟಿಯಾಗುತ್ತವೆ. ವ್ಯಕ್ತಿಯೊಬ್ಬರು ಶೇರ್ ಮಾಡುವ ಯಾವುದೊ ಒಂದು ಕಾನ್ಸೆಪ್ಟ್​ ಬೆಳೆಬೆಳೆದು ವಿಶ್ವ ವ್ಯಾಪಿಯಾಗುತ್ತದೆ. ಆ ವಿಷಯಕ್ಕೆ ತಲೆ, ಕಾಲು ಮತ್ತು ಬಾಲಗಳೂ ಸೇರಿಕೊಳ್ಳುತ್ತವೆ. ಮುಂದೆ ಅದು ಎಲ್ಲರ ಮನಸ್ಸನ್ನೂ ಗೆಲ್ಲುವ ಸೋಶಿಯಲ್​ ಮೀಡಿಯಾ ಟ್ರೆಂಡ್ ಆಗಿ ಉಳಿಯುತ್ತದೆ. ಅಂತೆಯೇ ಮಂಗಳವಾರ (ಏಪ್ರಿಲ್ 23ರಂದು) ಸೋಶಿಯಲ್​ ಮೀಟಿಯಾ ವೇದಿಕೆಯಾಗಿರುವ ಎಕ್ಸ್​​ನಲ್ಲಿ ಎಚ್​​ ಮತ್ತು ಎಲ್ ಮಧ್ಯೆ ನೋಡಿ (Look between H and L) ಟ್ರೆಂಡ್​ ಕಿಡಿ ಹಚ್ಚಿತ್ತು. ಎಲ್ಲಿ ನೋಡಿದರೂ ಇದೇ ರೀತಿಯ ಪೋಸ್ಟ್​ಗಳು ಕಾಣಿಸುತ್ತಿದ್ದವು. ಆರಂಭದಲ್ಲಿ ಪೋಸ್ಟ್​​ ನೋಡಿ ಗಾಬರಿ ಬಿದ್ದಿದ್ದರು ಹಲವರು. ಅರ್ಥ ಮಾಡಿಕೊಂಡ ಬಳಿಕ ಅದು ದೊಡ್ಡ ವಿನೋದವಾಗಿ ಮಾರ್ಪಾಡಾಯಿತು.

ಸೋಶಿಯಲ್​ ಮೀಡಿಯಾಗಳಲ್ಲಿ ಆಗಾಗ್ಗೆ ಮೀಮ್ ಗಳು, ವೀಡಿಯೊಗಳು ಮತ್ತು ನೆಟ್ಟಿಗರು ಹಂಚಿಕೊಳ್ಳುವ ವಿಷಯಗಳು ಸಮೃದ್ಧವಾಗಿರುತ್ತವೆ. ಆದಾಗ್ಯೂ, ಈ ಕೆಲವು ಸಂಗತಿಗಳ ಅರ್ಥದ ಬಗ್ಗೆ ತಿಳಿದಿಲ್ಲದ ಬಹಳಷ್ಟು ಜನರಿಗೆ ಇದೇನು ಅನಿಸುವುದು ಸಹಜ. ಅಂತೆಯೇ “ನಿಮ್ಮ ಕೀಬೋರ್ಡ್​​ನಲ್ಲಿ ಎಚ್ ಮತ್ತು ಎಲ್ ನಡುವೆ ನೋಡಿ” ಟ್ರೆಂಡ್ ಕೂಡ ಗೊಂದಲ ಸೃಷ್ಟಿಸಿತು. ಯಾಕೆಂದರೆ ಸ್ವಿಗ್ಗಿ, ಯೂಟ್ಯೂಬ್, ಬ್ಲಿಂಕಿಟ್ ಮತ್ತು ಇತರ ಬ್ರಾಂಡ್​ಗಳು ಕೂಡ ತಮ್ಮದೂ ಇರಲಿ ಎಂದು ಪೋಸ್ಟ್​​ ಮಾಡಿದವು. ಹೀಗಾಗಿ ವಿಷಯವೇನೆಂದು ತಿಳಿದುಕೊಳ್ಳುವುದು ಅಗತ್ಯ.

ಏನಿದು Look between H and L?

ನಿಮ್ಮ ಕಂಪ್ಯೂಟರ್ ಅಥವಾ ಮೊಬೈಲ್ ಕಿ ಪ್ಯಾಡ್​ನಲ್ಲಿ ಇಂಗ್ಲಿಷ್​ನ H ಮತ್ತು L ನಡುವೆ J ಮತ್ತು K ಇದೆ. ಹಾಗಾದರೆ ಜೆ.ಕೆ ಎಂದರೇನು? ಇಂಗ್ಲಿಷ್​ನಲ್ಲಿ Just Kidding ( ಕೇವಲ ತಮಾಷೆಗಾಗಿ) ಎಂಬ ಮಾತಿದೆ. ಅದನ್ನು ನೇರವಾಗಿ ಹೇಳುವ ಬದಲು Look between H and L ಟ್ರೆಂಡ್​ ಸೃಷ್ಟಿ ಮಾಡಲಾಗಿದೆ. ಅಂದ ಹಾಗೆ ಇದಕ್ಕೂ ಒಂದು ಕಾರಣವಿದೆ. ಇತ್ತೀಚೆಗೆ ಮಲಯಾಳಂನಲ್ಲಿ ‘ಪ್ರೇಮಾಲು’ ಎಂಬ ಸಿನಿಮಾ ಬಿಡುಗಡೆಯಾಗಿತ್ತು. ಅದು ಈಗ ಒಟಿಟಿಯಲ್ಲೂ ಲಭ್ಯ. ಅದಲ್ಲಿ ಭಗ್ನ ಪ್ರೇಮಿ ಹಾಗೂ ಐಟಿ ಕಂಪನಿಯೊಂದರ ಪ್ರಾಜೆಕ್ಟ್​ ಮ್ಯಾನೇಜರ್​ ಆದಿ ಎಂಬ ಪಾತ್ರವನ್ನು Just Kidding ಅನ್ನು ಪದೇ ಪದೆ ಬಳಸುತ್ತಾನೆ. ಗಂಭೀರವಾದ ವಿಷಯವನ್ನು ಹೇಳಿ just kidding ಎಂದು ಹೇಳುತ್ತಿದ್ದಾನೆ.

ಇದನ್ನೂ ಓದಿ: Virat kohli : ಅಂಪೈರ್​ಗಳ ಕೈ ಕುಲುಕಲೂ ನಿರಾಕರಿಸಿದ್ದ ವಿರಾಟ್​ ಕೊಹ್ಲಿ; ವಿಡಿಯೊ ಇದೆ

ಇದೇ ವೇಳೆ Look Between T and O ಟ್ರೆಂಡ್​ ಕೂಡ ಆಗಿದೆ. ಇದು 2021ರಲ್ಲಿ ಆರಂಭಗೊಂಡಿತು. 4Chan ಎಂಬ ಚಿತ್ರ ಆಧಾರಿತ ವೆಬ್​​ ಸರಣಿಯದ್ದಾಗಿದೆ. ಕೀಬೋರ್ಡ್​​ನಲ್ಲಿ T ಮತ್ತು O ನಡುವಿನ Y, U ಮತ್ತು I ಅಕ್ಷರಗಳಿವೆ. ಇದು ಅನಿಮೆ ಸರಣಿಯ ಪಾತ್ರವಾದ Yui ಹೆಸರಾಗಿದೆ. ಇದು ತಮ್ಮ ಪ್ರೌಢ ಶಾಲೆಯ ಸಂಗೀತ ಕ್ಲಬ್ ಮೂಲಕ ಬ್ಯಾಂಡ್ ನುಡಿಸುವು ಹುಡುಗಿಯ ಕುರಿತದ್ದು.

ಬಹಳಷ್ಟು ಜನರು ಈ ಟ್ರೆಂಡ್​ ತಮ್ಮ ಪ್ರತಿಕ್ರಿಯೆಗಳನ್ನು ಸಹ ವ್ಯಕ್ತಪಡಿಸಿದರು. ಕೆಲವರು ಅದರ ಬಗ್ಗೆ ಗೊಂದಲಕ್ಕೊಳಗಾಗಿದ್ದರೆ ಇತರರು ಇದು “ಕಿರಿಕಿರಿ” ಎಂದು ಎಂದೂ ಕಾಮೆಂಟ್​ ಮಾಡಿದ್ದಾರೆ.

Continue Reading

ವೈರಲ್ ನ್ಯೂಸ್

Viral News: ರಾಮನ ಚಿತ್ರವಿರುವ ಪ್ಲೇಟ್‌ನಲ್ಲಿ ನಾನ್‌ವೆಜ್‌ ಬಿರಿಯಾನಿ; ಅಂಗಡಿ ಮಾಲೀಕ ಅರೆಸ್ಟ್‌

Viral News: ರಾಮನ ಚಿತ್ರವಿದ್ದ ಪೇಪರ್ ಪ್ಲೇಟ್‌ನಲ್ಲಿ ನಾನ್‌ವೆಜ್‌ ಬಿರಿಯಾನಿ ಮಾರಾಟ ಮಾಡಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಅಂಗಡಿ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ. ದೆಹಲಿಯಲ್ಲಿ ಈ ಘಟನೆ ನಡೆದಿದೆ.

VISTARANEWS.COM


on

By

Viral News
Koo

ದೆಹಲಿ: ಭಗವಾನ್ ರಾಮನ (god ram) ಚಿತ್ರಗಳನ್ನು ಹೊಂದಿರುವ ಪ್ಲೇಟ್‌ಗಳಲ್ಲಿ (plate) ನಾನ್‌ವೆಜ್‌ ಬಿರಿಯಾನಿ (biriyani) ಬಡಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (social) ವೈರಲ್ (Viral News) ಆಗಿದೆ. ಈ ಘಟನೆ ಉತ್ತರ ದೆಹಲಿಯ (north delhi) ಜಹಾಂಗೀರ್‌ಪುರಿಯಲ್ಲಿರುವ (jahangirpuri) ಬಿರಿಯಾನಿ ಜಾಯಿಂಟ್‌ನಲ್ಲಿ ಭಾನುವಾರ ನಡೆದಿದೆ.

ಈ ವಿಡಿಯೋದಲ್ಲಿ ಭಗವಾನ್ ರಾಮನ ಚಿತ್ರಗಳನ್ನು ಒಳಗೊಂಡ ಪ್ಲೇಟ್‌ ಗಳಲ್ಲಿ ಬಿರಿಯಾನಿ ನೀಡುತ್ತಿರುವುದನ್ನು ವಿಡಿಯೋ ತೋರಿಸುತ್ತದೆ. ಬಿರಿಯಾನಿ ಅಂಗಡಿಯ ಬಳಿ ಜನರ ಗುಂಪಾಗಿ ನಿಂತು ಬಳಕೆ ಮಾಡಿ ಬಿಸಾಡುವ ಪ್ಲೇಟ್ ಗಳಲ್ಲಿ ಬಿರಿಯಾನಿ ತಿನ್ನುತ್ತಿದ್ದರು. ಅಂಗಡಿ ಮಾಲೀಕನ ಈ ವರ್ತನೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ಬಳಿಕ ಸ್ಥಳಕ್ಕೆ ತೆರಳಿದ ಪೊಲೀಸರು ರಾಮನ ಚಿತ್ರವಿದ್ದ ಪ್ಲೇಟ್‌ಗಳನ್ನು ವಶಪಡಿಸಿಕೊಂಡು ಅಂಗಡಿ ಮಾಲೀಕನನ್ನು ಬಂಧಿಸಿದರು.

ಇದನ್ನೂ ಓದಿ: IPL 2024: ಹಾರ್ದಿಕ್​ ಪಾಂಡ್ಯ ನಿಜವಾಗಿಯೂ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರಾ?; ವಿಚಿತ್ರ ವರ್ತನೆಯ ವಿಡಿಯೊ ವೈರಲ್​

ಬಿರಿಯಾನಿ ಅಂಗಡಿಯಲ್ಲಿ ಗಲಾಟೆ

ರಾಮನ ಚಿತ್ರವಿರುವ ಪ್ಲೇಟ್ ನಲ್ಲಿ ಬಿರಿಯಾನಿ ಮಾರಾಟ ಮಾಡುತ್ತಿರುವ ಮಾಹಿತಿ ತಿಳಿದು ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯರು ಮತ್ತು ಬಜರಂಗದಳದ ಸದಸ್ಯರು ಸೇರಿದ್ದು ಅಂಗಡಿಯ ಮಾಲೀಕರನ್ನು ತರಾಟೆಗೆ ತೆಗೆದುಕೊಂಡರು. ಆ ಪ್ಲೇಟ್‌ಗಳಲ್ಲಿ ಬಿರಿಯಾನಿ ಮಾರಾಟ ಮಾಡುವುದನ್ನು ವಿರೋಧಿಸಿ ಪೊಲೀಸರಿಗೆ ದೂರು ನೀಡಿದರು. ಅಂಗಡಿಯಲ್ಲಿ ಬಿರಿಯಾನಿ ಮಾರುವವರ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಸ್ಥಳೀಯ ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ ಆರೋಪಿಯನ್ನು ಬಂಧಿಸಿದ್ದಾರೆ.


ಪೇಪರ್ ಪ್ಲೇಟ್‌ಗಳ ಬಂಡಲ್‌ ನಲ್ಲಿ ಒಂದೆರಡು ಪ್ಲೇಟ್‌ಗಳು ಮಾತ್ರ ಭಗವಾನ್ ರಾಮನ ಫೋಟೋಗಳನ್ನು ಹೊಂದಿದ್ದವು. ಪ್ರಸ್ತುತ, ಜಹಾಂಗೀರ್ಪುರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಕುರಿತು ಸಂಪೂರ್ಣ ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ತನಿಖೆ ಮುಂದುವರಿಕೆ

ಘಟನೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಅಂಗಡಿ ಮಾಲೀಕರ ವಿರುದ್ಧ ಸ್ಥಳೀಯರ ಆಕ್ರೋಶ ವ್ಯಕ್ತವಾಗಿದೆ. ಆರೋಪಿಗಳು ಮಾರ್ಕೆಟಿಂಗ್ ಉದ್ದೇಶಕ್ಕಾಗಿ ಇದನ್ನು ಮಾಡಿದ್ದಾರೆಯೇ ಅಥವಾ ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಲು ಇದನ್ನು ಮಾಡಲಾಗಿದೆಯೇ ಎಂಬುದನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.

ದೆಹಲಿಯ ಜನರು ಬೀದಿ ಬದಿಯ ಆಹಾರವನ್ನು ಹೆಚ್ಚಾಗಿ ಸೇವಿಸುತ್ತಾರೆ. ಹಳೆಯ ದೆಹಲಿಯಲ್ಲಿಯೂ ಆಹಾರದ ರುಚಿ ಹೆಚ್ಚಿನ ಜನರನ್ನು ಆಕರ್ಷಿಸುತ್ತದೆ. ಈ ಭಾಗದಲ್ಲಿ ಬಿರಿಯಾನಿ ಕೂಡ ಅನೇಕರು ಇಷ್ಟಪಡುತ್ತಾರೆ. ಆದರೆ ಆಹಾರ ಮಾರಾಟಕ್ಕಾಗಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿರುವುದು ಸರಿಯಲ್ಲ ಎಂದು ನಗರದ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Continue Reading

ಬೆಂಗಳೂರು

Murder Case : ಕೊಲೆಯಾದ ಮಹಿಳೆಗೆ 20 ಹುಡುಗರ ಸಹವಾಸ! ಅವರಿಗೆ ಆಕೆ ಇಟ್ಟಿದ್ದ ಹೆಸರು ಆರೆಂಜ್, ಆ್ಯಪಲ್, ಬನಾನಾ ಇತ್ಯಾದಿ!

Murder case : ಅತಿಯಾದ ಲೈಂಗಿಕ ಕ್ರಿಯೆಗೆ ಒತ್ತಾಯಿಸಿಸುತ್ತಿದ್ದ ಮಹಿಳೆಯನ್ನು ಕೊಂದು ಪರಾರಿ ಆಗಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. 20 ಹುಡುಗರ ಸಹವಾಸ ಮಾಡಿದ್ದ ಮಹಿಳೆಯ ಹಿಸ್ವರಿ ಕೇಳಿ ಪೊಲೀಸರೇ ದಂಗಾಗಿದ್ದಾರೆ.

VISTARANEWS.COM


on

By

Murder case In Bengaluur
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ತನ್ನ ಮನೋಕಾಮನೆ ತಣಿಸಲು 48ರ ಮಹಿಳೆ, ಹುಡುಗರನ್ನು ಬಟ್ಟೆ ಬದಲಾಯಿಸುವಂತೆ ಬದಲಿಸುತ್ತಿದ್ದಳು. 20 ಹುಡುಗರ ಸಹವಾಸ ಹೊಂದಿದ್ದ ಆಕೆ ಅವರಿಗೆಲ್ಲ ಆರೆಂಜ್, ಆ್ಯಪಲ್, ಬನಾನಾ ಇತ್ಯಾದಿ ಹೆಸರು ಇಟ್ಟಿದ್ದಳು. ಆದರೆ ಕೊನೆಗೆ ಆಕೆಗೆ ಅದುವೇ ಮುಳುವಾಯಿತು. ಕಳೆದ ಏ. 19ರಂದು ಬೆಂಗಳೂರಿನ ಕೊಡಿಗೇಹಳ್ಳಿಯ ಭದ್ರಪ್ಪ ಲೇಔಟ್‌ನ ಗಣೇಶ ನಗರದಲ್ಲಿ ಒಂಟಿ ಮಹಿಳೆಯ ಬರ್ಬರ (Murder Case) ಹತ್ಯೆಯಾಗಿತ್ತು. ಶೋಭಾ (48) ಎಂಬಾಕೆಯ ಮೃತದೇಹವು ಬೆಡ್‌ ರೂಮಿನಲ್ಲಿ ನಗ್ನ ಸ್ಥಿತಿಯಲ್ಲಿ ಬಿದ್ದಿತ್ತು. ಇದೀಗ ಕೊಲೆ ಪ್ರಕರಣವನ್ನು ಭೇದಿಸಿರುವ ಕೊಡಿಗೇಹಳ್ಳಿ ಪೊಲೀಸರು ಹೇರೋಹಳ್ಳಿ ಮೂಲದ ನವೀನ್ ಎಂಬಾತನನ್ನು ಬಂಧಿಸಿದ್ದಾರೆ. ತನಿಖೆಯಲ್ಲಿ ಮಹಿಳೆಯ ಕಾಮಕಥೆ ಕೇಳಿ ಪೊಲೀಸರೇ ಸುಸ್ತಾಗಿದ್ದಾರೆ.

ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿಕೊಟ್ಟಿದ್ದ ಶೋಭಾ, ಕೊಡಿಗೆಹಳ್ಳಿಯಲ್ಲಿ ಮನೆ ಮಾಡಿಕೊಂಡು ಒಂಟಿಯಾಗಿ ವಾಸವಾಗಿದ್ದಳು. ಇತ್ತ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ನವೀನ್‌, ಕಾಲ್ ಗರ್ಲ್‌ಗಾಗಿ ಆ್ಯಪ್‌ಗಳನ್ನು ಬಳಕೆ ಮಾಡುವುದು, ಅವರ ಜತೆ ಚಾಟ್ ಮಾಡುವುದು ಮಾಡುತ್ತಿದ್ದ. ಈ ವೇಳೆ ಶೋಭಾಳ ಪರಿಚಯವಾಗಿತ್ತು. ಮೊದ ಮೊದಲು ನವೀನ್‌ಗೆ ಶೋಭಾಳ ಸಂಗ ಚೆನ್ನಾಗಿಯೇ ಇತ್ತು. ಆದರೆ ಶೋಭಾಳ ವಿಕೃತತೆ ಹೆಚ್ಚಾಗುತ್ತಲೇ ಹೋಗಿತ್ತು. ಪದೇಪದೆ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದಳು. ಕೊಲೆ ನಡೆದ ದಿನವೂ ಶೋಭಾ ಮನೆಗೆ ನವೀನ್ ಬಂದಿದ್ದ. ಏ.19ರಂದು ಇಬ್ಬರು ದೈಹಿಕ ಸಂರ್ಪಕವನ್ನು ಬೆಳೆಸಿದ್ದರು. ಆ ನಂತರ ಶೋಭಾ ಮತ್ತೆ ನವೀನ್‌ಗೆ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಳು. ಈಕೆ ಅತಿಯಾಗಿ ಸೆಕ್ಸ್‌ಗೆ ಒತ್ತಾಯಿಸಿದ್ದಕ್ಕೆ ಸಿಟ್ಟಾದ ನವೀನ್‌ ಉಸಿರುಗಟ್ಟಿಸಿ ಕೊಂದು ಪರಾರಿ ಆಗಿದ್ದ.

ಫೋಟೋ ತೋರಿಸಿ ಹುಡುಗರಿಗೆ ಬ್ಲಾಕ್‌ಮೇಲ್‌

ಇನ್ನು ಶೋಭಾ ಹಿನ್ನೆಲೆ ಕೇಳಿ ಪೊಲೀಸರೇ ಶಾಕ್ ಆಗಿದ್ದಾರೆ. 48ರ ಶೋಭಾಳಿಗೆ ಯುವಕರೆಂದರೆ ಹುಚ್ಚು ಅಂತೆ. ಒಬ್ಬೊಬ್ಬ ಹುಡುಗರಿಗೂ ಒಂದೊಂದು ಹಣ್ಣಿನ ಹೆಸರಿಟ್ಟಿರುವ ಶೋಭಾ, ನವೀನ್‌ಗೆ ಆ್ಯಪಲ್ ಎಂದು ಹೆಸರಿಟ್ಟಿದ್ದಳಂತೆ ಆ್ಯಪಲ್, ಆರೆಂಜ್, ಬನಾನ ಹೆಸರಿನಲ್ಲಿ ಹುಡುಗರ ಹೆಸರು ಸೇವ್ ಮಾಡಿಕೊಳ್ಳುತ್ತಿದ್ದಳು. ಕಾಲ್‌ ಗರ್ಲ್‌ ಆ್ಯಪ್‌ಗಳಲ್ಲಿಯೂ ಆ್ಯಕ್ಟಿವ್ ಆಗಿದ್ದ ಶೋಭಾ ಸುಮಾರು 20ಕ್ಕೂ ಹೆಚ್ಚು ಹುಡುಗರನ್ನು ಖೆಡ್ಡಾಗೆ ಬೀಳಿಸಿಕೊಂಡಿದ್ದಳು.

ಈಕೆ ಕರೆದಾಗ ಯುವಕರು ಏನಾದರೂ ಬಾರದೆ ಇದ್ದರೆ ಅವರ ಮನೆ ಬಳಿಯೇ ಹೋಗುತ್ತಿದ್ದಳು. ನಂತರ ಕಾರಿನ ಹಾರ್ನ್ ಜೋರಾಗಿ ಹಾಕುತ್ತಿದ್ದಳು. ಇಷ್ಟಕ್ಕೂ ಜಗ್ಗದೆ ಹೋದರೆ ಮನೆಯವರಿಗೆ ಖಾಸಗಿ ಫೋಟೊವನ್ನು ತೋರಿಸುವುದಾಗಿ ಬೆದರಿಕೆ ಹಾಕುತ್ತಿದ್ದಳು. ಅಷ್ಟೆ ಅಲ್ಲದೆ ಅವರೇನಾದರೂ ಬೇರೆಯವರನ್ನು ಮದುವೆ ಆಗಲು ಮುಂದಾದರೆ ಅದನ್ನು ತಪ್ಪಿಸುತ್ತಿದ್ದಳು. ನೀ ಮದುವೆ ಆಗಬಾರದು, ನಾನು ಕರೆದಾಗ ಬರಬೇಕು ಎಂದು ಧಮ್ಕಿ ಹಾಕುತ್ತಿದ್ದಳು. ಹೀಗೆ ನಾಲ್ವರು ಯುವಕರ ಮದುವೆಯನ್ನು ನಿಲ್ಲಿಸಿದ್ದಾಳೆ.

Murder Case
ಕೊಲೆಯಾದ ಶೋಭಾ ಹಾಗೂ ಆರೋಪಿ ನವೀನ್

ಒಳ್ಳೆ ಕುಟುಂಬದಿಂದ ಬಂದಿದ್ದ ನವೀನ್‌ನ ಹಿಂದೆ ಬಿದ್ದ ಶೋಭಾ ಕಾಟ ಕೊಟ್ಟಿದ್ದಳು. ಮನೆಗೆ ಕರೆದಾಗ
ಬಂದಿಲ್ಲ ಎಂದರೆ ಬೆದರಿಕೆ ಹಾಕುತ್ತಿದ್ದಳು ಎನ್ನಲಾಗಿದೆ. ಆಕೆಗೆ ಹೆದರಿ ನವೀನ್‌ ಬಂದು ಹೋಗುತ್ತಿದ್ದ. ಇನ್ನೂ
ಕೊಲೆಯಾದ ದಿನವೂ ನವೀನ್‌ಗೆ ಬ್ಲಾಕ್ ಮೇಲ್ ಮಾಡಿ ಕರೆಸಿಕೊಂಡಿದ್ದಳು. ನವೀನ್‌ ಎಡಗೈಗೆ ಗಾಯವಾಗಿತ್ತು, ಗಾಯದ ಮೇಲೆ ಕೂತು ನೀನು‌ ಮದುವೆ ಆಗಬಾರದು, ಹೀಗೆ ನನ್ನ ಜತೆ ಇರಬೇಕು. ಮದುವೆ ಆದರೆ ಅಲ್ಲೆ ಬಂದು ಗಲಾಟೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಳು. ಇದರಿಂದ ಬೇಸತ್ತ ನವೀನ್‌, ಶೋಭಾಳ ಕತ್ತು ಹಿಸುಕಿ ಕೊಲೆ‌ ಮಾಡಿದ್ದಾಗಿ ವಿಚಾರಣೆ ವೇಳೆ ಹೇಳಿದ್ದಾನೆ. ಸದ್ಯ ಆರೋಪಿಯನ್ನು ಬಂಧಿಸಿರುವ ಕೊಡಿಗೇಹಳ್ಳಿ ಠಾಣೆ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Lok Sabha Election 2024 ID raid in Bengaluru South Lok Sabha constituency 21.15 crore Gold ornaments seized in 2 days
ಕರ್ನಾಟಕ11 mins ago

Lok Sabha Election 2024: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಐಡಿ ರೇಡ್;‌ 2 ದಿನದಲ್ಲಿ 21.15 ಕೋಟಿ ರೂ. ಚಿನ್ನಾಭರಣ ವಶ!

Train Ticket Cancellation
ದೇಶ20 mins ago

Train Ticket Cancellation: ರೈಲು ಪ್ರಯಾಣಿಕರಿಗೆ ಗುಡ್‌ನ್ಯೂಸ್‌; ಆರ್‌ಎಸಿ ಟಿಕೆಟ್‌ ರದ್ದು ಪಡಿಸಿದರೆ ಇನ್ನು ಮುಂದೆ ಕೇವಲ 60 ರೂ. ಕಡಿತ

sam pitroda narendra modi
ಪ್ರಮುಖ ಸುದ್ದಿ26 mins ago

Wealth Redistribution: ಸಂಪತ್ತು ಮರು ಹಂಚಿಕೆ ವಿವಾದದ ಬೆಂಕಿಗೆ ತುಪ್ಪ ಸುರಿದ ಸ್ಯಾಮ್ ಪಿತ್ರೊಡಾ; ಕಾಂಗ್ರೆಸ್‌ಗೆ ಫಜೀತಿ!

Rajkumar Birth Anniversary Dodmane family visited Rajkumar Samadhi
ಸಿನಿಮಾ51 mins ago

Rajkumar Birth Anniversary: ರಾಜ್ ಕುಮಾರ್ ಸಮಾಧಿಗೆ ಆಗಮಿಸಿ ಪೂಜೆ ಸಲ್ಲಿಸಿದ ದೊಡ್ಮನೆ ಕುಟುಂಬ

Zero Shadow Day
ವಿಜ್ಞಾನ1 hour ago

Zero Shadow Day: ಇಂದು ಬೆಂಗಳೂರಿನಲ್ಲಿ ನೆರಳೇ ಮೂಡುವುದಿಲ್ಲ; ಅದ್ಯಾಕೆ? ಏನಿದು ʼಶೂನ್ಯ ನೆರಳಿನ ದಿನʼ ?

Karan Johar receives Director of the Year award from Vice President of India
ಬಾಲಿವುಡ್2 hours ago

Karan Johar: ಉಪ ರಾಷ್ಟ್ರಪತಿಯಿಂದ ಪ್ರಶಸ್ತಿ ಸ್ವೀಕರಿಸಿದ ಕರಣ್ ಜೋಹರ್

VVPAT Verification
ದೇಶ2 hours ago

VVPAT Verification: ಇವಿಯಂ-ವಿವಿಪ್ಯಾಟ್‌ ತಾಳೆ ಪ್ರಕರಣ; ಇಂದು ಸುಪ್ರೀಂ ಕೋರ್ಟ್‌ನಿಂದ ಮಹತ್ವದ ತೀರ್ಪು

board exam tension viral news
ವೈರಲ್ ನ್ಯೂಸ್2 hours ago

Board Exam Result: 93.5% ಫಲಿತಾಂಶ ನೋಡಿ ಮೂರ್ಛೆ ಹೋದ ವಿದ್ಯಾರ್ಥಿ! ಐಸಿಯುಗೆ ದಾಖಲು

Kannada New Movie Dadasaheb Phalke Film Festival Kenda Movie
ಸ್ಯಾಂಡಲ್ ವುಡ್3 hours ago

Kannada New Movie:ʻದಾದಾ ಸಾಹೇಬ್ ಫಾಲ್ಕೆ ಫಿಲ್ಮ್ ಫೆಸ್ಟಿವಲ್’ಗೆ ಆಯ್ಕೆಯಾದ ಕನ್ನಡದ ʻಕೆಂಡʼ ಸಿನಿಮಾ!

Naga Chaitanya and Sobhita Dhulipala holidaying together
ಟಾಲಿವುಡ್3 hours ago

Naga Chaitanya: ವಕೇಶನ್‌ ಮೂಡ್‌ನಲ್ಲಿ ಸಮಂತಾ ಮಾಜಿ ಪತಿ! ಶೋಭಿತಾ ಜತೆ ಕಾಡಿನಲ್ಲಿ ಸುತ್ತಾಟ?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ7 hours ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು2 days ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ2 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು2 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು2 days ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ2 days ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ3 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ4 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20244 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

ಟ್ರೆಂಡಿಂಗ್‌