World Environment Day: ನಿಮ್ಮದಾಗಲಿ ಇಕೋ ಫ್ರೆಂಡ್ಲಿ ವಾರ್ಡ್ ರೋಬ್ - Vistara News

ಪರಿಸರ

World Environment Day: ನಿಮ್ಮದಾಗಲಿ ಇಕೋ ಫ್ರೆಂಡ್ಲಿ ವಾರ್ಡ್ ರೋಬ್

ಇಂದು ಜೂನ್‌5. ವಿಶ್ವ ಪರಿಸರ ದಿನ. ನಾವು ಪರಿಸರ ಪ್ರೇಮಿ ಆಗಿದ್ದರಷ್ಟೆ ಸಾಕೆ? ನಾವು ಧರಿಸುವ ಉಡುಪುಗಳೂ ಇಕೋ ಫ್ರೆಂಡ್ಲಿ ಆಗಿರಬೇಕಲ್ಲವೆ? ಪರಿಸರ ಪ್ರೇಮಿ ಉಡುಪುಗಳು ಅಂದ್ರೇನು? ಹೇಗೆ ತಯಾರಿಸುತ್ತಾರೆ ನೋಡೋಣ ಬನ್ನಿ.

VISTARANEWS.COM


on

ಇಕೋ ಫ್ರೆಂಡ್ಲಿ
ಮಾಡೆಲ್‌ಗಳೊಂದಿಗೆ ಸಿಲೆಬ್ರಿಟಿ ಡಿಸೈನರ್‌ ಸೀಮಾ.
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಪರಿಸರ ಪ್ರೇಮಿಯಾಗಿದ್ದರೆ ಸಾಲದು, ಧರಿಸುವ ಉಡುಪುಗಳು ಇಕೋ ಫ್ರೆಂಡ್ಲಿ ಆಗಿರಬೇಕು ಎನ್ನುತ್ತಾರೆ ದೇಸಿ ಡಿಸೈನರ್ ಗಳು. ಹೌದು. ಇದಕ್ಕೆ ಪೂರಕ ಎಂಬಂತೆ, ಇದೀಗ ಸಾಕಷ್ಟು ಬಗೆಯ ಇಕೋ ಫ್ರೆಂಡ್ಲಿ ಫ್ಯಾಷನ್ ದಿರಸುಗಳು ಮಾರುಕಟ್ಟೆಯಲ್ಲಿ ದೊರೆಯಲಾರಂಭಿಸಿದ್ದು, ನಿಮ್ಮ ವಾರ್ಡ್ ರೋಬ್ ಅನ್ನು ಬದಲಿಸಿಕೊಳ್ಳಬಹುದು.

ಯಾವುದು ಟ್ರೆಂಡಿ?
“ಯಾವುದೇ ವಿನ್ಯಾಸವಾಗಿರಬಹುದು, ಧರಿಸಿದಾಕ್ಷಣ ಹಿತವೆನಿಸುವ ಮನ ಮೆಚ್ಚುವ ಕೆಮಿಕಲ್‌ ರಹಿತ ದಿರಸು, ನೈಸರ್ಗಿಕ ವಿನ್ಯಾಸ, ಹಣ್ಣು ತರಕಾರಿಗಳ ಬಣ್ಣ, ಚರ್ಮಕ್ಕೆ ಕೊಂಚವೂ ಅಲರ್ಜಿಯಾಗದ ಉಡುಪುಗಳು ಇಂದು ದೇಸಿ ಡಿಸೈನರ್‌ಗಳ ಕೈಗಳಲ್ಲಿ ಸೃಷ್ಟಿಯಾಗತೊಡಗಿವೆ. ದಿನದಿಂದ ದಿನಕ್ಕೆ ಬೇಡಿಕೆಯೂ ಹೆಚ್ಚಾಗತೊಡಗಿದೆ ಎನ್ನುತ್ತಾರೆ ಸೆಲೆಬ್ರಿಟಿ ಡಿಸೈನರ್‌ ಸೀಮಾ ಎಸ್‌. ಕೆ.

eco friendly cloth
ಪರಿಸರ ಪೂರಕ ಬಟ್ಟೆ

ಎಲ್ಲಿ ಲಭ್ಯ?
ದೇಸಿ ಬೋಟಿಕ್‌ಗಳು ಇಲ್ಲವೇ ದೇಸಿ ಮೇಳಗಳಲ್ಲಿ ಇವುಗಳ ಮಾರಾಟ ಹೆಚ್ಚು. ಟಾಪ್‌, ಕುರ್ತಾ, ಸೀರೆ, ಜಾಕೆಟ್‌, ಚೂಡಿದಾರ್‌, ಸಲ್ವಾರ್‌, ದುಪಟ್ಟಾ ಹೀಗೆ ನಾನಾ ಬಗೆಯ ಪರಿಸರ ಸ್ನೇಹಿ ಉಡುಪುಗಳು ಲಭ್ಯ. ಆದರೆ, ಬೆಲೆ ಮಾತ್ರ ತುಸು ಹೆಚ್ಚು. ಸಮೀಕ್ಷೆ ಯೊಂದರ ಪ್ರಕಾರ, ಎಕೋ ಫ್ರೆಂಡ್ಲಿ ಉಡುಪುಗಳನ್ನು ಕೊಳ್ಳುವುದರಲ್ಲಿ ಹೈ ಪ್ರೊಫೈಲ್‌ ಮಂದಿಯೇ ಮುಂದಿದ್ದಾರಂತೆ. ಪರಿಣಾಮ, ಇದೀಗ ಆರ್ಡರ್‌ ಪಡೆದು ಈ ಉಡುಪುಗಳನ್ನು ಸಿದ್ಧಪಡಿಸಿಕೊಡುವ ಕಸ್ಟಮೈಸ್ಡ್‌ ಬೋಟಿಕ್‌ಗಳು ಉದ್ಯಾನ ನಗರಿಯಲ್ಲಿವೆ.

ಕಾಟನ್‌/ಖಾದಿಗೆ ಅಗ್ರ ಸ್ಥಾನ
ಎಕೋ ಫ್ರೆಂಡ್ಲಿ ಉಡುಪುಗಳಲ್ಲಿ ಕಾಟನ್‌ ಹಾಗೂ ಖಾದಿ ಹ್ಯಾಂಡ್ಲೂಮ್‌ ಉಡುಪುಗಳಿಗೆ ಹೆಚ್ಚು ಬೇಡಿಕೆಯಿದೆ.‌

ಇದನ್ನೂ ಓದಿ| ಫ್ರಿಲ್‌- ಫ್ಲೇರ್‌ ಗೌನ್‌ಗೆ ಫ್ಯಾಷನ್‌ ಪ್ರಿಯರು ಫಿದಾ!

ವೆಜಿಟೇಬಲ್‌ ಡೈಯಿಂಗ್‌ ಡಿಸೈನರ್‌ವೇರ್‌ಗಳು
ಡಿಸೈನರ್‌ ಸೀಮಾ ಅವರು ಹೇಳುವಂತೆ, ಎಲೆಗಳಿಂದ ಹಸಿರು ಬಣ್ಣ, ಸಿಹಿ ಚೆರ‍್ರಿಗಳಿಂದ ಗುಲಾಬಿ, ಜ್ಯೂಸಿ ಬೆರ‍್ರಿಗಳಿಂದ ಬ್ಲ್ಯೂ, ಬೇರು ಹಾಗೂ ಸಸ್ಯಗಳ ಕಾಂಡಗಳಿಂದ ಬ್ರೌನ್‌ ಬಣ್ಣಗಳನ್ನು ಸಿದ್ಧಪಡಿಸಲಾಗುತ್ತದೆ. ಅದರಲ್ಲೂ ಇಂದು ಬಾಳೆಹಣ್ಣು ಹಾಗೂ ಬ್ಯಾಂಬೋ ಫೈಬರ್‌ ಬಳಸಿದ ಬಣ್ಣಗಳಿಂದ ತಯಾರಾದ ಆರೋಗ್ಯಕರ ಉಡುಪುಗಳು ವಿದೇಶೀಗರನ್ನು ಆಕರ್ಷಿಸುತ್ತಿವೆ ಎನ್ನುತ್ತಾರೆ.

(ಲೇಖಕಿ ಫ್ಯಾಷನ್ ಪತ್ರಕರ್ತೆ)

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಲೈಫ್‌ಸ್ಟೈಲ್

Vastu Tips: ಮನೆ ಹೊರಗಿನ ಉದ್ಯಾನದಲ್ಲಿ ವಾಸ್ತು ಪಾಲಿಸಿ; ಮನೆಯೊಳಗಿನ ನೆಮ್ಮದಿ ವೃದ್ಧಿಸಿ

Vastu Tips: ಮನೆಯ ಹೊರಗಿರುವ ಉದ್ಯಾನವೂ ನಮ್ಮ ಮನಸ್ಸಿನ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಹೀಗಾಗಿ ಮನೆಯ ಉದ್ಯಾನವನವನ್ನು ವಾಸ್ತು ಶಾಸ್ತ್ರದ ಪ್ರಕಾರ ಯೋಜಿಸುವುದು ಮತ್ತು ವಿನ್ಯಾಸಗೊಳಿಸುವುದು ಉತ್ತಮ. ಇದರಿಂದ ಆರೋಗ್ಯ ಮತ್ತು ಸಮೃದ್ಧಿ ಖಂಡಿತ ಸಿಗುವುದು.

VISTARANEWS.COM


on

By

Vastu Tips
Koo

ಮನೆಯ (home) ಒಳಾಂಗಣ (Indoor), ಹೊರಾಂಗಣದ (outdoor) ಪ್ರತಿಯೊಂದು ವಸ್ತುವೂ ನಮ್ಮ ಮನೆ, ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿಯೇ ಮನೆಯಲ್ಲಿ ವಾಸ್ತು (Vastu Tips) ಪಾಲಿಸಬೇಕು ಎನ್ನುತ್ತಾರೆ ಹಿರಿಯರು. ವಾಸ್ತು ಪಾಲನೆ ಮಾಡುವುದರಿಂದ ಧನಾತ್ಮಕ ಪ್ರಭಾವವನ್ನು (Positive influence) ಮನೆಯ ಸುತ್ತಮುತ್ತ ಹೆಚ್ಚಿಸಿಕೊಳ್ಳಬಹುದು.

ಮನೆಯ ಹೊರಗಿರುವ ಉದ್ಯಾನವೂ ನಮ್ಮ ಮನಸ್ಸಿನ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಹೀಗಾಗಿ ಮನೆಯ ಉದ್ಯಾನವನವನ್ನು ವಾಸ್ತು ಶಾಸ್ತ್ರದ ಪ್ರಕಾರ ಯೋಜಿಸುವುದು ಮತ್ತು ವಿನ್ಯಾಸಗೊಳಿಸುವುದು ಉತ್ತಮ. ಇದರಿಂದ ಆರೋಗ್ಯ ಮತ್ತು ಸಮೃದ್ಧಿ ಖಂಡಿತ ಸಿಗುವುದು.

ಹೊರಾಂಗಣ ಉದ್ಯಾನವು ನಮ್ಮನ್ನು ಪ್ರಕೃತಿಗೆ ಹತ್ತಿರವಾಗಲು ಅನುವು ಮಾಡಿಕೊಡುತ್ತದೆ. ಸಸ್ಯವರ್ಗದ ಸಮೃದ್ಧಿಯಿಂದ ಪ್ರಭಾವಿತವಾಗಿರುವ ಪ್ರಶಾಂತತೆ ಮತ್ತು ಶಾಂತತೆಯನ್ನು ಆನಂದಿಸಲು ಇದು ಸಹಾಯ ಮಾಡುತ್ತದೆ.

ಹೆಚ್ಚಿನವರು ಮನಸ್ಸಿನ ಉಲ್ಲಾಸಕ್ಕಾಗಿ ಉದ್ಯಾನಗಳನ್ನು ಬೆಳೆಸುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ಉದ್ಯಾನವು ನೈಸರ್ಗಿಕ ಸೌಂದರ್ಯ ಮತ್ತು ಅದರ ಶಕ್ತಿಯುತ ಗುಣಗಳನ್ನು ನಮಗೆ ಒದಗಿಸುತ್ತದೆ. ಹೀಗಾಗಿ ಉದ್ಯಾನ ರಚಿಸುವಾಗ ಉದ್ಯಾನ ವಾಸ್ತು ಪಾಲಿಸಿ.

ಇದನ್ನೂ ಓದಿ: Vastu Tips: ಸುಖ, ಶಾಂತಿ, ಸಮೃದ್ಧಿಗಾಗಿ ಹೀಗಿರಲಿ ಮನೆಯ ಕಿಟಕಿ, ಬಾಗಿಲು

ಉದ್ಯಾನದ ಸ್ಥಳ

ವಾಸ್ತು ಶಾಸ್ತ್ರದ ಪ್ರಕಾರ ಉದ್ಯಾನದ ಪ್ರತಿಯೊಂದು ವಿಭಾಗವು ಪಂಚ ಮಹಾಭೂತದ ಐದು ಅಂಶಗಳಲ್ಲಿ ಒಂದನ್ನು ಹೋಲುತ್ತದೆ. ಮನೆಯ ನೈಋತ್ಯ ಭಾಗವು ಭೂಮಿಯನ್ನು, ಈಶಾನ್ಯವು ನೀರನ್ನು, ಆಗ್ನೇಯವು ಬೆಂಕಿಯನ್ನು, ವಾಯುವ್ಯವು ಗಾಳಿಯನ್ನು ಪ್ರತಿನಿಧಿಸುತ್ತದೆ. ಕೇಂದ್ರವು ಜಾಗವನ್ನು ಪ್ರತಿನಿಧಿಸುತ್ತದೆ. ಆಗ್ನೇಯ ಅಥವಾ ನೈಋತ್ಯದಲ್ಲಿರುವ ಉದ್ಯಾನವು ಉದ್ವಿಗ್ನತೆಯನ್ನು ಉಂಟುಮಾಡುತ್ತದೆ.


ಉದ್ಯಾನವು ಮುಂಭಾಗದಲ್ಲಿ ನೆಲೆಗೊಂಡಿದ್ದರೆ ಬೃಹತ್ ಮರವು ಅದರ ಪ್ರವೇಶವನ್ನು ಎಂದಿಗೂ ನಿರ್ಬಂಧಿಸಬಾರದು. ಉದ್ಯಾನದ ಗೋಡೆಯ ಪಕ್ಕದಲ್ಲಿ ಮರವನ್ನು ನೆಡಬಹುದು. ವಾಸ್ತವವಾಗಿ ವಾಸ್ತು ದೃಷ್ಟಿಕೋನದಿಂದ ಪೀಪಲ್, ಮಾವು, ಬೇವು ಅಥವಾ ಬಾಳೆ ಮರವನ್ನು ನೆಡಲು ಆದ್ಯತೆ ನೀಡಲಾಗುತ್ತದೆ. ಈ ಮರಗಳು ತಮ್ಮ ಸುಗಂಧಕ್ಕೆ ಮಾತ್ರವಲ್ಲ, ಅವುಗಳು ನೀಡುವ ಧನಾತ್ಮಕ ಶಕ್ತಿಗಳಿಗೂ ಹೆಸರುವಾಸಿಯಾಗಿದೆ.

ಗಿಡ, ಮರಗಳು

ಉದ್ಯಾನದ ಪೂರ್ವ ಅಥವಾ ಉತ್ತರ ಭಾಗಗಳಲ್ಲಿ ಸಣ್ಣ ಪೊದೆಗಳನ್ನು ನೆಡಬೇಕು, ಈಶಾನ್ಯ ಭಾಗವನ್ನು ಮುಕ್ತವಾಗಿ ಬಿಡಬೇಕು. ಉದ್ಯಾನದ ಪಶ್ಚಿಮ, ದಕ್ಷಿಣ ಮತ್ತು ನೈಋತ್ಯ ವಿಭಾಗಗಳಲ್ಲಿ ಎತ್ತರದ ಮರಗಳನ್ನು ನೆಡಬೇಕು. ಮುಖ್ಯ ಮನೆ ಮತ್ತು ಮರಗಳ ನಡುವೆ ಗಣನೀಯ ಅಂತರವನ್ನು ನಿರ್ವಹಿಸಬೇಕು. ವಾಸ್ತು ಶಾಸ್ತ್ರದ ಪ್ರಕಾರ ಮರಗಳ ನೆರಳು ಬೆಳಗ್ಗೆ 9 ರಿಂದ ಮಧ್ಯಾಹ್ನ 3 ರ ನಡುವೆ ಮನೆಯ ಕಟ್ಟಡದ ಮೇಲೆ ಬೀಳಬಾರದು. ದೊಡ್ಡ ಮರಗಳನ್ನು ಮನೆಗೆ ತುಂಬಾ ಹತ್ತಿರದಲ್ಲಿ ನೆಡಬಾರದು. ಯಾಕೆಂದರೆ ಅವುಗಳ ಬೇರುಗಳು ಮನೆಯ ಅಡಿಪಾಯವನ್ನು ಹಾನಿಗೊಳಿಸುತ್ತವೆ. ಕೀಟ, ಹುಳು, ಜೇನುನೊಣ ಅಥವಾ ಸರ್ಪಗಳನ್ನು ಆಕರ್ಷಿಸುವ ಮರಗಳನ್ನು ಉದ್ಯಾನದಲ್ಲಿ ತಪ್ಪಿಸಬೇಕು. ಇವುಗಳು ಮನೆಗೆ ದುರಾದೃಷ್ಠವನ್ನು ತರುತ್ತದೆ.


ಸೂಕ್ತ ಸಸ್ಯಗಳು

ತುಳಸಿ ಸಸ್ಯವು ಧನಾತ್ಮಕ ಪ್ರಭಾವವನ್ನು ಹೊಂದಿದೆ. ಇದನ್ನು ಮನೆಯ ಉತ್ತರ, ಈಶಾನ್ಯ ಮತ್ತು ಪೂರ್ವ ಭಾಗಗಳಲ್ಲಿ ನೆಡಬೇಕು. ಮುಳ್ಳು ಇರುವ ಗಿಡಗಳನ್ನು ತೋಟದಲ್ಲಿ ನೆಡಬಾರದು. ಕಳ್ಳಿಯವನ್ನು ನೆಡಬಾರದು. ಮುಳ್ಳಿನ ಗಿಡಗಳು ನಕಾರಾತ್ಮಕ ಶಕ್ತಿಯನ್ನು ಪ್ರತಿನಿಧಿಸುತ್ತವೆ.

ಕಾಂಪೌಂಡ್ ಗೋಡೆಯ ಎತ್ತರವನ್ನು ಹೆಚ್ಚಿಸುವುದರಿಂದ ಅದರ ಮೇಲೆ ಹೂವಿನ ಕುಂಡಗಳನ್ನು ಇಡಬಾರದು. ಹೂವಿನ ಕುಂಡಗಳನ್ನು ನೆಲದ ಮೇಲೆ ಉತ್ತರ, ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಡಬೇಕು.

ಹುಲ್ಲುಹಾಸು

ಉದ್ಯಾನದಲ್ಲಿ ಹುಲ್ಲುಹಾಸು ಪೂರ್ವ ಅಥವಾ ಉತ್ತರಕ್ಕೆ ಎದುರಾಗಿರಬೇಕು. ಅಲ್ಲಿ ಉತ್ತರ-ದಕ್ಷಿಣ ಅಕ್ಷದ ಸ್ವಿಂಗ್ ಅನ್ನು ಇರಿಸಬಹುದು. ಇದು ವಾಸ್ತುಶಾಸ್ತ್ರದ ಪ್ರಕಾರ ಅಡೆತಡೆಯಿಲ್ಲದ ವೀಕ್ಷಣೆಗೆ ಅವಕಾಶ ಮಾಡಿಕೊಡುತ್ತದೆ.

ಜಲಪಾತ

ಪೂರ್ವ ಅಥವಾ ಉತ್ತರದಲ್ಲಿ ಮಿನಿ ಜಲಪಾತವನ್ನು ನಿರ್ಮಿಸಬಹುದು. ಉದ್ಯಾನದ ಈಶಾನ್ಯ ಮೂಲೆಯು ಮಿತಿಯಿಂದ ಹೊರಗಿರಬೇಕು.


ಈಜುಕೊಳ

ಉದ್ಯಾನದಲ್ಲಿ ಸಣ್ಣ ಈಜುಕೊಳವಿದ್ದರೆ, ಅದು ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿರಬೇಕು. ಕಮಲಗಳಿರುವ ಮಿನಿ ಕೊಳವು ಅದೃಷ್ಟವನ್ನು ತರುತ್ತದೆ. ತಪ್ಪು ದಿಕ್ಕಿನಲ್ಲಿ ಜಲಪಾತವು ಮಾನಸಿಕ ಶಾಂತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಬೆಂಚುಗಳು

ದೊಡ್ಡ ಉದ್ಯಾನಗಳಲ್ಲಿ ಬೆಂಚುಗಳು ಉಪಯುಕ್ತವಾಗಿವೆ ಮತ್ತು ಅವುಗಳ ಮೇಲೆ ಕುಳಿತುಕೊಳ್ಳುವ ಜನರು ಪೂರ್ವ ಅಥವಾ ಪಶ್ಚಿಮಕ್ಕೆ ಮುಖ ಮಾಡುವುದನ್ನು ಖಚಿತಪಡಿಸಿಕೊಳ್ಳಲು ಉತ್ತರ ಅಥವಾ ಪೂರ್ವದಲ್ಲಿ ಬೆಂಚುಗಳನ್ನು ಇರಿಸಬಹುದು.

Continue Reading

ಪ್ರವಾಸ

E-Pass Mandatory: ಊಟಿ, ಕೊಡೈಕೆನಾಲ್‌ ಪ್ರವಾಸ ಹೊರಟಿದ್ದೀರಾ? ಹಾಗಿದ್ದರೆ ಗಮನಿಸಿ

E-Pass Mandatory: ಬೇಸಿಗೆಯಲ್ಲಿ ಬೆಟ್ಟ ಗುಡ್ಡಗಳಿರುವ ತಂಪಾದ ಪ್ರದೇಶದಲ್ಲಿ ಸುತ್ತಾಡಬೇಕು ಎನ್ನುವ ಆಸೆಯಿಂದ ಊಟಿ, ಕೊಡೈಕೆನಾಲ್‌ ಗೆ ಪ್ರವಾಸ ಹೊರಡುವ ಯೋಜನೆ ಇದ್ದರೆ ಕೂಡಲೇ ಇ ಪಾಸ್ ಪಡೆಯಿರಿ.

VISTARANEWS.COM


on

By

E-Pass Mandatory
Koo

ಬೇಸಿಗೆಯ ಬಿಸಿಲಿನಿಂದ ಕಂಗೆಟ್ಟು ಎಲ್ಲಾದರೂ ತಂಪಾದ ಪ್ರದೇಶಗಳಲ್ಲಿ ಸುತ್ತಾಡಬೇಕು ಎನ್ನುವ ಆಸೆಯಿಂದ ಊಟಿ ಮತ್ತು ಕೊಡೈಕೆನಾಲ್‌ ಗೆ ಪ್ರವಾಸ ಹೊರಡಲು ಯೋಜನೆ ಹಾಕಿಕೊಂಡಿದ್ದೀರಾ. ಹಾಗಿದ್ದರೆ ಒಂದು ಮಹತ್ವದ ಸುದ್ದಿ ಇದೆ. ಈ ಬಾರಿ ಊಟಿ (Ooty) ಮತ್ತು ಕೊಡೈಕೆನಾಲ್‌ ಗೆ ( Kodaikanal) ಪ್ರವಾಸ (tour) ಹೋಗುವವರಿಗೆ ಇ-ಪಾಸ್ (E-Pass Mandatory) ಕಡ್ಡಾಯವಾಗಿದೆ.

ಬೇಸಗೆ ರಜೆ (summer vacation) ಹಿನ್ನೆಲೆಯಲ್ಲಿ ಊಟಿ ಮತ್ತು ಕೊಡೈಕೆನಾಲ್ ಪ್ರವಾಸಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಬರುತ್ತಿರುವುದರಿಂದ ಪ್ರಸ್ತುತ ಇರುವ ವಿವಿಧ ವಾಹನಗಳು ಮತ್ತು ಬೇಸಿಗೆಯ ತಿಂಗಳುಗಳಲ್ಲಿ ಈ ಗಿರಿಧಾಮಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಗೆ ಸಂಬಂಧಿಸಿದಂತೆ ಡೇಟಾವನ್ನು ಸಂಗ್ರಹಿಸಲು ಜಿಲ್ಲಾಡಳಿತಗಳಿಗೆ ಅನುಕೂಲವಾಗುವಂತೆ ಇ-ಪಾಸ್ ಕಡ್ಡಾಯಗೊಳಿಸಲಾಗಿದೆ.

ಇದನ್ನೂ ಓದಿ: Summer Tour: ಬೇಸಿಗೆ ಪ್ರವಾಸಕ್ಕೆ ಸೂಕ್ತ ಈ 5 ಅದ್ಭುತ ಗಿರಿಧಾಮಗಳು!

ಇ-ಪಾಸ್ ಕಡ್ಡಾಯ

ಮೇ 7ರಿಂದ ಜೂನ್ 30ರವರೆಗೆ ಊಟಿ ಮತ್ತು ಕೊಡೈಕೆನಾಲ್‌ಗೆ ಭೇಟಿ ನೀಡುವ ಪ್ರವಾಸಿಗರು ಕಡ್ಡಾಯವಾಗಿ ಇ-ಪಾಸ್ ಪಡೆಯಬೇಕು ಎಂದು ನ್ಯಾಯಮೂರ್ತಿಗಳಾದ ಎನ್. ಸತೀಶ್ ಕುಮಾರ್ ಮತ್ತು ಡಿ. ಭರತ್ ಚಕ್ರವರ್ತಿ ಅವರನ್ನೊಳಗೊಂಡ ವಿಶೇಷ ವಿಭಾಗೀಯ ಪೀಠ ಆದೇಶ ನೀಡಿದೆ.


ವಿಶೇಷ ವಿಭಾಗೀಯ ಪೀಠವು ನೀಲಗಿರಿ ಮತ್ತು ದಿಂಡುಗಲ್ ಕಲೆಕ್ಟರೇಟ್‌ಗಳಿಂದ ಇ-ಪಾಸ್‌ಗಳ ವಿತರಣೆಗೆ ಯಾವುದೇ ಮಿತಿಯಿಲ್ಲ ಎಂದು ಹೇಳಿದೆ. ಈ ಪಾಸ್‌ಗಳನ್ನು ಪಡೆದುಕೊಳ್ಳುವುದರಿಂದ ಸ್ಥಳೀಯ ನಿವಾಸಿಗಳಿಗೆ ವಿನಾಯಿತಿ ನೀಡಲಾಗಿದೆ.

ಹಲವು ವ್ಯವಸ್ಥೆ

ಇ- ಪಾಸ್ ವ್ಯವಸ್ಥೆಯನ್ನು ವ್ಯಾಪಕವಾಗಿ ಪ್ರಚಾರ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಇದರ ಜೊತೆಗೆ ಇಬ್ಬರು ಕಲೆಕ್ಟರ್‌ಗಳು, ಮಾಹಿತಿ ತಂತ್ರಜ್ಞಾನ ಇಲಾಖೆಯ ಬೆಂಬಲದೊಂದಿಗೆ, ಇ-ಪಾಸ್ ವ್ಯವಸ್ಥೆಯಲ್ಲಿ ಪಾವತಿ ಗೇಟ್‌ವೇ ಅನ್ನು ಸಂಯೋಜಿಸುವ ಬಗ್ಗೆ ಅನ್ವೇಷಿಸಲು ಪ್ರಸ್ತಾಪಿಸಲಾಗಿದೆ. ಇದು ಅರ್ಜಿದಾರರಿಗೆ ಆನ್‌ಲೈನ್‌ನಲ್ಲಿ ಟೋಲ್ ಶುಲ್ಕವನ್ನು ಪಾವತಿಸಲು, ಚೆಕ್‌ಪೋಸ್ಟ್‌ಗಳ ಬಳಿ ದಟ್ಟಣೆಯನ್ನು ಕಡಿಮೆ ಮಾಡಲು, ಇಂಧನವನ್ನು ಉಳಿಸಲು ಮತ್ತು ಇಂಗಾಲದ ಹೊರಸೂಸುವಿಕೆಯನ್ನು ತಡೆಯಲು ಅನುವು ಮಾಡಿಕೊಡುತ್ತದೆ.


ಯಾಕೆ ಈ ಕ್ರಮ?

ಪ್ರವಾಸಿಗರ ಸಂಖ್ಯೆಗೆ ಕಡಿವಾಣ ಹಾಕುವ ಹೈಕೋರ್ಟ್‌ನ ಚಿಂತನೆಗೆ ಪ್ರತಿಕ್ರಿಯೆಯಾಗಿ ನೀಲಗಿರಿ ಮತ್ತು ದಿಂಡುಗಲ್ ಜಿಲ್ಲಾಧಿಕಾರಿಗಳು ವಾಹನ ಸಂಚಾರವನ್ನು ನಿರ್ಬಂಧಿಸಲು ಈ ಹಿಂದೆ ಪ್ರಸ್ತಾಪಿಸಲಾಗಿತ್ತು. ರಜೆ ಸೀಸನ್‌ಗಳಲ್ಲಿ ಊಟಿ ಮತ್ತು ಕೊಡೈಕೆನಾಲ್‌ ಗೆ ಬರುವ ವಾಹನಗಳ ಸಂಖ್ಯೆ ದಿನಕ್ಕೆ 2,000 ರಿಂದ 20,000ಕ್ಕೆ ಏರುತ್ತದೆ. ಇದು ವಾಹನ ದಟ್ಟಣೆ ಮತ್ತು ಪರಿಸರ ಹಾನಿಗೆ ಕಾರಣವಾಗುತ್ತದೆ.


ಈ ವಿಷಯವನ್ನು ಅಂಗೀಕರಿಸಿದ ನ್ಯಾಯಮೂರ್ತಿಗಳ ವಿಶೇಷ ವಿಭಾಗೀಯ ಪೀಠವು ಈ ವಿಷಯದ ಬಗ್ಗೆ ಚರ್ಚೆ ನಡೆಸಿದೆ. ಘಾಟ್ ರಸ್ತೆಗಳ ಮೇಲಿನ ಒತ್ತಡ ಮತ್ತು ಬೇಸಿಗೆಯಲ್ಲಿ ಅತಿಯಾದ ಪ್ರವಾಸಿ ಚಟುವಟಿಕೆಯಿಂದ ಉಂಟಾಗುವ ಪರಿಸರ ನಾಶವನ್ನು ವಕೀಲರು ಎತ್ತಿ ತೋರಿಸಿದರು.

ಈ ಕುರಿತು ಮಾತನಾಡಿರುವ ನೀಲಗಿರಿ ಜಿಲ್ಲಾಧಿಕಾರಿ ಎಂ. ಅರುಣಾ, ಕೇರಳ ಮತ್ತು ಕರ್ನಾಟಕ ಗಡಿಯಲ್ಲಿರುವ ಊಟಿ ಮತ್ತು ಕೊಡೈಕೆನಾಲ್‌ ಗೆ ಒಂಬತ್ತು ಗಡಿ ಚೆಕ್ ಪೋಸ್ಟ್‌ ಗಳಿವೆ. ರಜೆಯ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಹೀಗಾಗಿ ವಾಹನ ದಟ್ಟಣೆಯಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತದೆ. ಹೀಗಾಗಿ ವಾಹನಗಳ ಎಣಿಕೆಯು ಅಗತ್ಯ. ಕೇವಲ ಪ್ರವಾಸಿ ವಾಹನಗಳಲ್ಲದೇ ಸರಕುಗಳ ಸಾಗಣೆಯ ವಾಹನಗಳನ್ನೂ ಇದು ಒಳಗೊಂಡಿರುತ್ತದೆ ಎಂದು ಹೇಳಿದರು.

Continue Reading

ಪರಿಸರ

Chocolate: ಏನಿದು ಮೀಲಿಬಗ್‌ ವೈರಸ್‌? ಚಾಕೊಲೇಟ್ ದರ ಏರಿಕೆಗೂ ಇದಕ್ಕೂ ಏನು ಸಂಬಂಧ?

Chocolate industry: ಪಶ್ಚಿಮ ಆಫ್ರಿಕಾದ ಕೋಕೋ ಮರಗಳಲ್ಲಿ ವೈರಸ್ ಹರಡುತ್ತಿದ್ದು, ಇದು ಚಾಕೊಲೇಟ್ ಪೂರೈಕೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಮೀಲಿಬಗ್‌ ವೈರಸ್ ಗಳಿಂದ ಚಿಗುರು ಊದಿಕೊಂಡಿದ್ದು, ಒಂದರಿಂದ ಇನ್ನೊಂದಕ್ಕೆ ವೇಗವಾಗಿ ಹರಡುತ್ತಿದೆ.

VISTARANEWS.COM


on

By

Chocolate industry
Koo

ನವದೆಹಲಿ: ಚಾಕೊಲೇಟ್‌ನಲ್ಲಿ ಬಳಸುವ ಪ್ರಮುಖ ಸಾಮಗ್ರಿಯಾದ ಕೋಕೋ (cacao) ಮರಗಳಲ್ಲಿ ವೈರಸ್ (virus) ಕಾಣಿಸಿಕೊಂಡಿದ್ದು, ಇದು ಚಾಕೊಲೇಟ್ ಉತ್ಪಾದನೆ ಮೇಲೆ ಬಹುದೊಡ್ದ ಹೊಡೆತ ಬೀಳುವ ಸಾಧ್ಯತೆ ಇದೆ. ಇದರಿಂದ ಚಾಕೊಲೇಟ್‌ಗಳು ಮತ್ತಷ್ಟು ದುಬಾರಿಯಾಗಬಹುದು.

ಪ್ರಸ್ತುತ ಪಶ್ಚಿಮ ಆಫ್ರಿಕಾದ (West Africa) ಕೋಕೋ ಮರಗಳಲ್ಲಿ ವೈರಸ್ ಹರಡುತ್ತಿದ್ದು, ಇದು ಚಾಕೊಲೇಟ್ ಪೂರೈಕೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಮೀಲಿಬಗ್‌ (mealybugs) ವೈರಸ್ ಗಳಿಂದ ಚಿಗುರು ಊದಿಕೊಂಡಿದ್ದು, ಒಂದರಿಂದ ಇನ್ನೊಂದಕ್ಕೆ ವೇಗವಾಗಿ ಹರಡುತ್ತಿದೆ. ಇದು ಬಿಸಿ ವಾತಾವರಣದಲ್ಲಿ ಹೆಚ್ಚು ತೀವ್ರವಾಗಿ ಬೆಳೆಯುತ್ತಿದೆ.

ಈ ವೈರಸ್ ಭೂಮಿಯ ಮೇಲಿರುವ ಪರಿಸರ ವಿನಾಶಕಾರಿ ಜೀವಿ ಎನ್ನಲಾಗುತ್ತದೆ. ಇದು ಘಾನಾದಲ್ಲಿ 50,000 ಹೆಕ್ಟೇರ್ ಕೋಕೋ ಫಾರ್ಮ್‌ಗಳನ್ನು ನಾಶಪಡಿಸಿದೆ. ಇದು ವಿಶ್ವದ ಎರಡನೇ ಅತಿದೊಡ್ಡ ಚಾಕೊಲೇಟ್ ಉತ್ಪಾದಕ ದೇಶ. ಇದು ಜಾಗತಿಕ ಚಾಕೊಲೇಟ್ ಪೂರೈಕೆಯ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆ ಇದೆ.

ಇದನ್ನೂ ಓದಿ: Areca Price: ಅಡಿಕೆ ದರ ಗಗನಮುಖಿ; ಚುನಾವಣೆ ಬಳಿಕ ಮತ್ತಷ್ಟು ಏರಿಕೆ?

ಯುಎಸ್ ಮತ್ತು ಘಾನಾದ ವಿಶ್ವವಿದ್ಯಾನಿಲಯಗಳ ವಿಜ್ಞಾನಿಗಳು ವೈರಸ್ ಹರಡುವುದನ್ನು ನಿಲ್ಲಿಸಲು ಪ್ರಯತ್ನಿಸುತ್ತಿದ್ದಾರೆ. ಪ್ರಪಂಚದ ಚಾಕೊಲೇಟ್‌ಗಳನ್ನು ಉಳಿಸಲು ಹೊಸ ಮಾರ್ಗವನ್ನು ಈಗಾಗಲೇ ಕಂಡುಹಿಡಿದಿದ್ದರೂ ಇದು ಚಾಕೊಲೇಟ್ ನ ಜಾಗತಿಕ ಪೂರೈಕೆ ಸರಪಳಿಗೆ ಅಡ್ಡಿಯಾಗುವ ಸಾಧ್ಯತೆ ಇದೆ.


ಚಾಕೊಲೇಟ್ ಪೂರೈಕೆ ಮೇಲೆ ಪರಿಣಾಮ

ಪ್ರಪಂಚದ ಶೇ. 50ರಷ್ಟು ಚಾಕೊಲೇಟ್‌ಗಳು ಘಾನಾ ಮತ್ತು ಐವರಿ ಕೋಸ್ಟ್‌ನಿಂದ ಬರುತ್ತವೆ. ಈ ಪ್ರದೇಶಗಳಲ್ಲಿನ ಕೋಕೋ ಮರಗಳ ಚಿಗುರು ವೈರಸ್ ನಿಂದ ನಾಶವಾಗಿವೆ. ಕೊಲಂಬಿಯಾದಲ್ಲಿ ರೈತರು ಒಡೆದು ಸಿಪ್ಪೆ ಸುಲಿದಿದ್ದರೂ ಕೋಕೋ ಮರಗಳ ಎಲೆ, ಮೊಗ್ಗು ಮತ್ತು ಹೂವುಗಳನ್ನು ತಿನ್ನುವ ಮೀಲಿಬಗ್ಸ್ ಎಂದು ಕರೆಯಲ್ಪಡುವ ಸಣ್ಣ ಕೀಟಗಳಿಂದ ವೈರಸ್ ಹರಡುತ್ತದೆ. ಘಾನಾವು 254 ಮಿಲಿಯನ್ ಮರಗಳನ್ನು ಹೊಂದಿದೆ ಮತ್ತು ಐವರಿ ಕೋಸ್ಟ್‌ನಲ್ಲಿ ಶೇ. 20ರಷ್ಟು ಬೆಳೆ ಸೋಂಕಿಗೆ ಒಳಗಾಗಿದೆ.

ಚಾಕೊಲೇಟ್‌ ಹೇಗೆ ತಯಾರಿಸಲಾಗುತ್ತದೆ?

ಉಷ್ಣವಲಯದ ಹವಾಮಾನದಲ್ಲಿ ಬೆಳೆಯುವ ಕೋಕೋ ಬೀನ್ಸ್‌ನಿಂದ ಚಾಕೊಲೇಟ್‌ಗಳನ್ನು ತಯಾರಿಸಲಾಗುತ್ತದೆ. ಅವುಗಳನ್ನು ಹುದುಗಿಸಿ, ಒಣಗಿಸಿ ಮತ್ತು ಹುರಿದು ಮಾಡಿದ ಪುಡಿಯನ್ನು ಹಾಲು ಮತ್ತು ಸಕ್ಕರೆಯೊಂದಿಗೆ ಬೆರೆಸಿ ಚಾಕೊಲೇಟ್ ತಯಾರಿಸಲಾಗುತ್ತದೆ.

2022ರಲ್ಲಿ ಐವರಿ ಕೋಸ್ಟ್ 2.2 ಮಿಲಿಯನ್ ಟನ್ ಕೋಕೋವನ್ನು ಉತ್ಪಾದಿಸಿತು ಮತ್ತು ಘಾನಾ 1.1 ಮಿಲಿಯನ್ ಉತ್ಪಾದಿಸಿತು. ಪ್ರಪಂಚದ ಅತಿದೊಡ್ಡ ಉತ್ಪಾದಕ ಇಂಡೋನೇಷ್ಯಾವು 2022 ರಲ್ಲಿ 6,67,000 ಟನ್‌ಗಳನ್ನು ಉತ್ಪಾದಿಸಿದೆ.

ಬೆಚ್ಚಗಿನ ತಾಪಮಾನವು ಮೀಲಿಬಗ್ ಗೆ ಹೆಚ್ಚು ಪೂರಕವಾಗಿರುವುದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆ ಇದೆ. ಆರ್ಲಿಂಗ್ಟನ್‌ನಲ್ಲಿರುವ ಟೆಕ್ಸಾಸ್ ವಿಶ್ವವಿದ್ಯಾನಿಲಯದ ತಜ್ಞರ ಪ್ರಕಾರ, ಈ ವೈರಸ್ ಪ್ರಪಂಚದ ಚಾಕೊಲೇಟ್ ಪೂರೈಕೆಗೆ ಅಪಾಯವನ್ನುಂಟು ಮಾಡುತ್ತದೆ.

ವೈರಸ್ ಅನ್ನು ನಿಲ್ಲಿಸಬಹುದೇ?

ಕೀಟನಾಶಕಗಳಿಂದ ಮೀಲಿಬಗ್‌ಗಳ ವಿರುದ್ಧ ಹೋರಾಡಲು ಸಾಧ್ಯವಿಲ್ಲ. ಸೋಂಕಿತ ಮರಗಳನ್ನು ಕಡಿಯುವುದು ಮತ್ತು ನಿರೋಧಕ ಮರಗಳನ್ನು ನೆಡುವುದು ಸುಲಭ ಮತ್ತು ಅಗ್ಗದ ಮಾರ್ಗವಾಗಿದೆ. ರೈತರು ಮರಗಳಿಗೆ ಲಸಿಕೆಯನ್ನೂ ನೀಡಬಹುದು. ಆದರೆ ಇದು ದುಬಾರಿಯಾಗಿರುವುದರಿಂದ ಇದು ಮರಗಳಿಂದ ಉತ್ಪತ್ತಿಯಾಗುವ ಕೋಕೋ ಮೇಲೆ ಪರಿಣಾಮವನ್ನು ಬೀರುತ್ತದೆ.

ದೂರದೂರ ಮರಗಳನ್ನು ನೆಡುವುದರಿಂದ ವೈರಸ್ ಹರಡುವುದನ್ನು ತಡೆಯಲು ಸಹಾಯ ಮಾಡುತ್ತದೆ ಎನ್ನುತ್ತಾರೆ ಸಂಶೋಧಕರು. ಆದರೆ ಇದು ಇನ್ನೂ ಪ್ರಯೋಗ ಹಂತದಲ್ಲಿದೆ. ಇದು ರೈತರಿಗೆ ತಮ್ಮ ಬೆಳೆಯನ್ನು ರಕ್ಷಿಸಲು ಸಹಾಯ ಮಾಡುವ ಸಾಧ್ಯತೆಯಿದೆ.


ಮೀಲಿಬಗ್‌ನಿಂದ ಮಾತ್ರ ತೊಂದರೆಯೇ?

ಈ ಹಿಂದೆ ಕಪ್ಪು ಪಾಡ್ ರೋಗವು ಚಾಕೊಲೇಟ್ ಉತ್ಪನ್ನಗಳ ಮೇಲೆ ಪರಿಣಾಮ ಬೀರಿತ್ತು. ಈ ರೋಗವು ಕೋಕೋ ಬೀಜಗಳನ್ನು ಕಪ್ಪು ಅಥವಾ ಕಂದು ಬಣ್ಣಕ್ಕೆ ತಿರುಗಿಸುತ್ತದೆ. ಇದು 2022 ರಲ್ಲಿ ವಿಶ್ವದ ವಾರ್ಷಿಕ ಕೋಕೋ ಬೆಳೆಗಳಲ್ಲಿ ಶೇ. 30ರಷ್ಟನ್ನು ನಾಶಪಡಿಸಿತು. ಈ ಪ್ರದೇಶದಲ್ಲಿ ಉಂಟಾದ ಭಾರೀ ಮಳೆಯಿಂದಾಗಿ ರೋಗವನ್ನು ಮತ್ತಷ್ಟು ಉಲ್ಬಣವಾಗಿತ್ತು. ಏಕೆಂದರೆ ಸೋಂಕು ತೇವಾಂಶವುಳ್ಳ ಸ್ಥಿತಿಯಲ್ಲಿ ಹೆಚ್ಚು ವೇಗವಾಗಿ ಬೆಳೆಯುತ್ತದೆ ಮತ್ತು ಹರಡುತ್ತದೆ.

Continue Reading

ಪರಿಸರ

Areca Price: ಅಡಿಕೆ ದರ ಗಗನಮುಖಿ; ಚುನಾವಣೆ ಬಳಿಕ ಮತ್ತಷ್ಟು ಏರಿಕೆ?

ಕಳೆದೆರಡು ವಾರದಲ್ಲಿ ಅಡಿಕೆಯ (Areca Price) ಎಲ್ಲಾ ವೆರೈಟಿಗಳು ಧಾರಣೆ ಮೇಲ್ಮುಖವಾಗಿ ಏರುತ್ತಿದ್ದು, ರೈತರ ಮುಖದಲ್ಲಿ ಮಂದಹಾಸ ಕಾಣುತ್ತಿದೆ. ಕಳೆದ ಮೂರ್ನಾಲ್ಕು ತಿಂಗಳಿಂದ ಒಂದೇ ರೀತಿ 47,000-48,000 ನಡೆಯುತ್ತಿದ್ದ ರಾಶಿ ಅಡಿಕೆ ಧಾರಣೆ, ಕಳೆದ ವಾರ 50,000 ರೂ. ದಾಟಿ, ಈಗ 53,856ಕ್ಕೆ ತಲುಪಿದೆ. ಇನ್ನೂ ಏರುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗುತ್ತಿದೆ.

VISTARANEWS.COM


on

Areca Price
Koo

-ಅರವಿಂದ ಸಿಗದಾಳ್, ಮೇಲುಕೊಪ್ಪ
ಒಂದು ನಿರ್ದಿಷ್ಟ ಪಕ್ಷ (Areca Price) ಎಲೆಕ್ಷನ್‌ನಲ್ಲಿ ಗೆಲ್ಲುತ್ತದೆ ಅಂತ ಸರ್ವೆ ಏಜೆನ್ಸಿಗಳು ಹೇಳುವಾಗ, ಷೇರು ಮಾರುಕಟ್ಟೆ ಏರುತ್ತದೆ. ಇನ್ನೊಂದು ನಿರ್ದಿಷ್ಟ ಪಕ್ಷ ಎಲೆಕ್ಷನ್‌ನಲ್ಲಿ ಗೆಲ್ಲುತ್ತದೆ ಅಂತ ಸರ್ವೆ ಏಜೆನ್ಸಿಗಳು ಹೇಳುವಾಗ ಷೇರು ಮಾರುಕಟ್ಟೆ ಕುಸಿಯುತ್ತದೆ. ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಷೇರು ಮಾರುಕಟ್ಟೆಯ ಏರಿಳತವೂ ತಲ್ಲಣವನ್ನೇ ಸೃಷ್ಟಿ ಮಾಡುತ್ತದೆ. ಆದರೆ, ಈ ಬಾರಿ ಮುಂಬಯಿ ಸ್ಟಾಕ್ ಎಕ್ಸ್ಚೇಂಜ್ ಏರಿಳಿತವನ್ನು ಮೀರಿಸುವಂತೆ ಅಡಿಕೆ ದರ ಗೂಳಿಯ ಕುಣಿತವಾಗಿದೆ! ಕಳೆದೆರಡು ವಾರದಲ್ಲಿ ಅಡಿಕೆಯ ಎಲ್ಲಾ ವೆರೈಟಿಗಳು ಧಾರಣೆ ಮೇಲ್ಮುಖವಾಗಿ ಏರುತ್ತಿದ್ದು, ರೈತರ ಮುಖದಲ್ಲಿ ಮಂದಹಾಸ ಕಾಣುತ್ತಿದೆ. ಕಳೆದ ಮೂರ್ನಾಲ್ಕು ತಿಂಗಳಿಂದ ಒಂದೇ ರೀತಿ 47,000-48,000 ನಡೆಯುತ್ತಿದ್ದ ರಾಶಿ ಅಡಿಕೆ ಧಾರಣೆ, ಕಳೆದ ವಾರ 50,000 ರೂ. ದಾಟಿ, ಈಗ 53,856ಕ್ಕೆ ತಲುಪಿದೆ. ಇನ್ನೂ ಏರುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗುತ್ತಿದೆ. ಅದೇ ರೀತಿ, ಮೂರು ತಿಂಗಳ ಹಿಂದೆ 53,000 ಇದ್ದ ಬೆಟ್ಟ ಅಡಿಕೆ ಧಾರಣೆ ಕಳೆದ ವಾರ 55,000 ರೂ. ದಾಟಿ, ಇವತ್ತು 56,333 ರೂ.ಗೆ ತಲುಪಿದೆ. ಇದೇ ಸಮಯದಲ್ಲಿ ಅಡಿಕೆ ಮಾರುಕಟ್ಟೆಗೆ ಬರುತ್ತಿರುವ ಆವಕವೂ ಏರುತ್ತಿದ್ದು, ಅಡಿಕೆ ಆವಕ ಏರಿದರೂ ಅಡಿಕೆ ಧಾರಣೆ ಏರುತ್ತಿರುವುದು ವಿಶೇಷವಾಗಿದೆ.

Areca nuts image

ಶಿವಮೊಗ್ಗ APMC ದಾಖಲೆಗಳ ಪ್ರಕಾರ ಹೆಚ್ಚು ವ್ಯಾಪಾರವಾಗುವ ರಾಶಿ ಇಡಿ ಅಡಿಕೆ ಆವಕ ಬಾರೀ ಏರಿಕೆ ಕಂಡಿದೆ:
ದಿನಾಂಕ 17.04.2024: 3,907 ಕ್ವಿಂಟಾಲ್
ದಿನಾಂಕ 19.04.2024: 4,378 ಕ್ವಿಂಟಾಲ್
ದಿನಾಂಕ 22.04.2024: 4543 ಕ್ವಿಂಟಾಲ್
ದಿನಾಂಕ 23.04.2024: 17,474 ಕ್ವಿಂಟಾಲ್
ರಾಶಿ ಇಡಿ ಧಾರಣೆ 53,800 ರೂ., ಬೆಟ್ಟೆ 56,300 ರೂ. ದಾಟಿದಾಗ ಸಹಜವಾಗಿಯೇ ಗೊರಬಲು 41 ಸಾವಿರದ ಸನಿಹ ತಲುಪಿದೆ. ಈ ಎಲ್ಲ ವೆರೈಟಿಗಳ ಧಾರಣೆಯ ಏರಿಕೆಯ ಹಿನ್ನೆಲೆಯಲ್ಲಿ ಸಿಪ್ಪೆ ಗೋಟು ದರವೂ ಏರುವ ನಿರೀಕ್ಷೆಯಿದ್ದು, ಸದ್ಯದಲ್ಲೇ ಓಪನ್ ನಗದು ಮಾರುಕಟ್ಟೆಯಲ್ಲಿ 20,000 ರೂ. ದಾಟುವ ನಿರೀಕ್ಷೆ ರೈತರದು. APMC ಮಂಡಿ ಮತ್ತು ಸೊಸೈಟಿಗಳಲ್ಲಿ ಸಿಪ್ಪೆ ಗೋಟು ವ್ಯವಹಾರವೂ ಬಹಳ ಕಮ್ಮಿ. APMC ಒಳಗೆ ವ್ಯಾಪ್ತಿಗೆ ಬರದೆಯೇ ಸಿಪ್ಪೆ ಗೋಟು ವ್ಯವಹಾರ ನೆಡೆಯುತ್ತದೆ. ಅದನ್ನು APMC ವ್ಯಾಪ್ತಿಯ ಒಳಗೆ ಸಂಪೂರ್ಣ ತರಲು ಪ್ರಯತ್ನ ನೆಡೆಯುತ್ತಿಲ್ಲ.

Areca nut

ಚುನಾವಣೆ ಬಳಿಕ ಏನಾಗಲಿದೆ?

ಎಲ್ಲಾ ವೆರೈಟಿ ಅಡಿಕೆಗಳ (ಹಸ, ಬೆಟ್ಟೆ, ಇಡಿ, ಗೊರಬಲು, ಸಿಪ್ಪೆ ಗೋಟು) ದೊಡ್ಡ ಮಟ್ಟದ ಓಪನ್ ನಗದು ವ್ಯವಹಾರಕ್ಕೆ ಒಂದಿಷ್ಟು ಚುನಾವಣೆ ನೀತಿ ಸಂಹಿತೆ ನಿರ್ಬಂಧ ಇರುವುದರಿಂದ, ಎಲೆಕ್ಷನ್ ಮುಗಿದ ಮೇಲೆ ಅಡಿಕೆ ನಗದು ವ್ಯವಹಾರ ಇನ್ನಷ್ಟು ತೀವ್ರತೆ ಪಡೆದ ಮೇಲೆ ಧಾರಣೆ ಏರಿಕೆಯ ಸಾಧ್ಯತೆಯೂ ಇದೆ ಎಂದು ಅಭಿಪ್ರಾಯ ಇದೆ.
ಏನೇ ಆದರೂ, ಅಡಿಕೆ ಮಾರುಕಟ್ಟೆಯ ಧಾರಣೆ ಸಂಪೂರ್ಣ ಲೆಕ್ಕಾಚಾರಕ್ಕೆ ಸಿಗುವಂಥದ್ದಲ್ಲ! ಅದೂ ಷೇರು ಮಾರುಕಟ್ಟೆಯ ರೀತಿ, ಯಾವಾಗ ಗೂಳಿ ಮುನ್ನುಗ್ಗುತ್ತದೆ, ಕರಡಿ ಕುಣಿಯುತ್ತದೆ ಗೊತ್ತಾಗುವುದಿಲ್ಲ.
ಅಡಿಕೆ ಧಾರಣೆಯ ಗೂಳಿ ನುಗ್ಗುವ ಸಮಯದಲ್ಲೇ ಕಾಳು ಮೆಣಸಿನ ಧಾರಣೆಯೂ ಏರು ಮುಖ ಕಾಣುತ್ತಿದೆ. ಕಾಳು ಮೆಣಸಿನ ದರ ಈಗ 57,000 ರೂ. ತಲುಪಿದೆ. ಒಟ್ಟಿನಲ್ಲಿ ಅಡಿಕೆ, ಕಾಳು ಮೆಣಸು ಧಾರಣೆ ರೈತರ ಮೊಗದಲ್ಲಿ ಸಂತಸ ಮೂಡಿಸಿದೆ. ನಾಲ್ಕು ಜನ ಸೇರಿದಲ್ಲಿ, ರಾಜಕೀಯ ವಿಚಾರದೊಂದಿಗೆ ಅಡಿಕೆ ಧಾರಣೆಯ ಚರ್ಚೆಯೂ ಜೋರಾಗಿ ಸೌಂಡ್ ಮಾಡ್ತಾ ಇದೆ!

ಇದನ್ನೂ ಓದಿ: ವಿಸ್ತಾರ ಗ್ರಾಮ ದನಿ: ಅಡಿಕೆ ರೋಗಗಳಿಗೆ, ಇಳುವರಿ ಕ್ಷೀಣಿಸುವುದಕ್ಕೆ ಕಾರಣವೇ ಇದು! ಬೆಳೆಗಾರರೇ ಗಮನಿಸಿ…

Continue Reading
Advertisement
MS Dhoni
ಕ್ರೀಡೆ2 mins ago

MS Dhoni: ರನ್​ ಓಡದೆ ಸ್ವಾರ್ಥ ತೋರಿದ ಧೋನಿ; ನೆಟ್ಟಿಗರಿಂದ ಭಾರೀ ಟೀಕೆ

Google Layoff
ವಿದೇಶ5 mins ago

Google Layoff: ಮತ್ತಷ್ಟು ಉದ್ಯೋಗ ಕಡಿತಗೊಳಿಸಿದ ಗೂಗಲ್‌; ಕಾರಣವೇನು?

Tobacco use
ಆರೋಗ್ಯ6 mins ago

Tobacco Use: ತಂಬಾಕು ಸೇವನೆ; ವಿಶ್ವದಲ್ಲೇ ಭಾರತಕ್ಕೆ ಎರಡನೇ ಸ್ಥಾನ

Jammu Tour
ಪ್ರವಾಸ14 mins ago

Jammu Tour: ಜಮ್ಮುವಿಗೆ ಭೇಟಿ ನೀಡುವವರು ಈ ಸ್ಥಳಗಳನ್ನು ಮಿಸ್ ಮಾಡದೇ ನೋಡಿ!

Uma Ramanan dies in Chennai
ಕಾಲಿವುಡ್22 mins ago

Uma Ramanan: ಖ್ಯಾತ ಹಿನ್ನೆಲೆ ಗಾಯಕಿ ಉಮಾ ರಮಣನ್ ಇನ್ನಿಲ್ಲ

CoWin Certificates
ದೇಶ37 mins ago

CoWIN Certificates: ಕೋವಿಡ್‌ ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಫೋಟೋ ಔಟ್‌; ಕೇಂದ್ರ ಹೇಳೋದೇನು?

PBKS vs CSK
ಕ್ರೀಡೆ40 mins ago

PBKS vs CSK: ಕೆಕೆಆರ್​ ದಾಖಲೆ ಹಿಂದಿಕ್ಕಿದ ಪಂಜಾಬ್​ ಕಿಂಗ್ಸ್

Parineeti Chopra husband Raghav Chadha doing well after eye surgery
ಬಾಲಿವುಡ್49 mins ago

Parineeti Chopra: ಪರಿಣಿತಿ ಚೋಪ್ರಾ ಪತಿ ಕಣ್ಣು ಕಳೆದುಕೊಳ್ಳುವ ಸಾಧ್ಯತೆ: ವೈದ್ಯರು ಹೇಳೋದೇನು?

Rahul Gandhi
ಪ್ರಮುಖ ಸುದ್ದಿ56 mins ago

Rahul Gandhi: ಇಂದು ಶಿವಮೊಗ್ಗದಲ್ಲಿ ರಾಹುಲ್‌ ಗಾಂಧಿ ಪ್ರಚಾರ; ಪ್ರಜ್ವಲ್‌ ರೇವಣ್ಣ ವಿಚಾರ ತೆಗೀತಾರಾ?

Job Alert
ಉದ್ಯೋಗ1 hour ago

Job Alert: ಗಮನಿಸಿ; ಹಟ್ಟಿ ಚಿನ್ನದ ಗಣಿ ಕಂಪನಿಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಾಳೆಯೇ ಕೊನೆಯ ದಿನ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ5 hours ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ2 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20243 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20243 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20244 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20244 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20244 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20244 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest4 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

ಟ್ರೆಂಡಿಂಗ್‌