World Environment Day: ನಿಮ್ಮದಾಗಲಿ ಇಕೋ ಫ್ರೆಂಡ್ಲಿ ವಾರ್ಡ್ ರೋಬ್ - Vistara News

ಪರಿಸರ

World Environment Day: ನಿಮ್ಮದಾಗಲಿ ಇಕೋ ಫ್ರೆಂಡ್ಲಿ ವಾರ್ಡ್ ರೋಬ್

ಇಂದು ಜೂನ್‌5. ವಿಶ್ವ ಪರಿಸರ ದಿನ. ನಾವು ಪರಿಸರ ಪ್ರೇಮಿ ಆಗಿದ್ದರಷ್ಟೆ ಸಾಕೆ? ನಾವು ಧರಿಸುವ ಉಡುಪುಗಳೂ ಇಕೋ ಫ್ರೆಂಡ್ಲಿ ಆಗಿರಬೇಕಲ್ಲವೆ? ಪರಿಸರ ಪ್ರೇಮಿ ಉಡುಪುಗಳು ಅಂದ್ರೇನು? ಹೇಗೆ ತಯಾರಿಸುತ್ತಾರೆ ನೋಡೋಣ ಬನ್ನಿ.

VISTARANEWS.COM


on

ಇಕೋ ಫ್ರೆಂಡ್ಲಿ
ಮಾಡೆಲ್‌ಗಳೊಂದಿಗೆ ಸಿಲೆಬ್ರಿಟಿ ಡಿಸೈನರ್‌ ಸೀಮಾ.
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಪರಿಸರ ಪ್ರೇಮಿಯಾಗಿದ್ದರೆ ಸಾಲದು, ಧರಿಸುವ ಉಡುಪುಗಳು ಇಕೋ ಫ್ರೆಂಡ್ಲಿ ಆಗಿರಬೇಕು ಎನ್ನುತ್ತಾರೆ ದೇಸಿ ಡಿಸೈನರ್ ಗಳು. ಹೌದು. ಇದಕ್ಕೆ ಪೂರಕ ಎಂಬಂತೆ, ಇದೀಗ ಸಾಕಷ್ಟು ಬಗೆಯ ಇಕೋ ಫ್ರೆಂಡ್ಲಿ ಫ್ಯಾಷನ್ ದಿರಸುಗಳು ಮಾರುಕಟ್ಟೆಯಲ್ಲಿ ದೊರೆಯಲಾರಂಭಿಸಿದ್ದು, ನಿಮ್ಮ ವಾರ್ಡ್ ರೋಬ್ ಅನ್ನು ಬದಲಿಸಿಕೊಳ್ಳಬಹುದು.

ಯಾವುದು ಟ್ರೆಂಡಿ?
“ಯಾವುದೇ ವಿನ್ಯಾಸವಾಗಿರಬಹುದು, ಧರಿಸಿದಾಕ್ಷಣ ಹಿತವೆನಿಸುವ ಮನ ಮೆಚ್ಚುವ ಕೆಮಿಕಲ್‌ ರಹಿತ ದಿರಸು, ನೈಸರ್ಗಿಕ ವಿನ್ಯಾಸ, ಹಣ್ಣು ತರಕಾರಿಗಳ ಬಣ್ಣ, ಚರ್ಮಕ್ಕೆ ಕೊಂಚವೂ ಅಲರ್ಜಿಯಾಗದ ಉಡುಪುಗಳು ಇಂದು ದೇಸಿ ಡಿಸೈನರ್‌ಗಳ ಕೈಗಳಲ್ಲಿ ಸೃಷ್ಟಿಯಾಗತೊಡಗಿವೆ. ದಿನದಿಂದ ದಿನಕ್ಕೆ ಬೇಡಿಕೆಯೂ ಹೆಚ್ಚಾಗತೊಡಗಿದೆ ಎನ್ನುತ್ತಾರೆ ಸೆಲೆಬ್ರಿಟಿ ಡಿಸೈನರ್‌ ಸೀಮಾ ಎಸ್‌. ಕೆ.

eco friendly cloth
ಪರಿಸರ ಪೂರಕ ಬಟ್ಟೆ

ಎಲ್ಲಿ ಲಭ್ಯ?
ದೇಸಿ ಬೋಟಿಕ್‌ಗಳು ಇಲ್ಲವೇ ದೇಸಿ ಮೇಳಗಳಲ್ಲಿ ಇವುಗಳ ಮಾರಾಟ ಹೆಚ್ಚು. ಟಾಪ್‌, ಕುರ್ತಾ, ಸೀರೆ, ಜಾಕೆಟ್‌, ಚೂಡಿದಾರ್‌, ಸಲ್ವಾರ್‌, ದುಪಟ್ಟಾ ಹೀಗೆ ನಾನಾ ಬಗೆಯ ಪರಿಸರ ಸ್ನೇಹಿ ಉಡುಪುಗಳು ಲಭ್ಯ. ಆದರೆ, ಬೆಲೆ ಮಾತ್ರ ತುಸು ಹೆಚ್ಚು. ಸಮೀಕ್ಷೆ ಯೊಂದರ ಪ್ರಕಾರ, ಎಕೋ ಫ್ರೆಂಡ್ಲಿ ಉಡುಪುಗಳನ್ನು ಕೊಳ್ಳುವುದರಲ್ಲಿ ಹೈ ಪ್ರೊಫೈಲ್‌ ಮಂದಿಯೇ ಮುಂದಿದ್ದಾರಂತೆ. ಪರಿಣಾಮ, ಇದೀಗ ಆರ್ಡರ್‌ ಪಡೆದು ಈ ಉಡುಪುಗಳನ್ನು ಸಿದ್ಧಪಡಿಸಿಕೊಡುವ ಕಸ್ಟಮೈಸ್ಡ್‌ ಬೋಟಿಕ್‌ಗಳು ಉದ್ಯಾನ ನಗರಿಯಲ್ಲಿವೆ.

ಕಾಟನ್‌/ಖಾದಿಗೆ ಅಗ್ರ ಸ್ಥಾನ
ಎಕೋ ಫ್ರೆಂಡ್ಲಿ ಉಡುಪುಗಳಲ್ಲಿ ಕಾಟನ್‌ ಹಾಗೂ ಖಾದಿ ಹ್ಯಾಂಡ್ಲೂಮ್‌ ಉಡುಪುಗಳಿಗೆ ಹೆಚ್ಚು ಬೇಡಿಕೆಯಿದೆ.‌

ಇದನ್ನೂ ಓದಿ| ಫ್ರಿಲ್‌- ಫ್ಲೇರ್‌ ಗೌನ್‌ಗೆ ಫ್ಯಾಷನ್‌ ಪ್ರಿಯರು ಫಿದಾ!

ವೆಜಿಟೇಬಲ್‌ ಡೈಯಿಂಗ್‌ ಡಿಸೈನರ್‌ವೇರ್‌ಗಳು
ಡಿಸೈನರ್‌ ಸೀಮಾ ಅವರು ಹೇಳುವಂತೆ, ಎಲೆಗಳಿಂದ ಹಸಿರು ಬಣ್ಣ, ಸಿಹಿ ಚೆರ‍್ರಿಗಳಿಂದ ಗುಲಾಬಿ, ಜ್ಯೂಸಿ ಬೆರ‍್ರಿಗಳಿಂದ ಬ್ಲ್ಯೂ, ಬೇರು ಹಾಗೂ ಸಸ್ಯಗಳ ಕಾಂಡಗಳಿಂದ ಬ್ರೌನ್‌ ಬಣ್ಣಗಳನ್ನು ಸಿದ್ಧಪಡಿಸಲಾಗುತ್ತದೆ. ಅದರಲ್ಲೂ ಇಂದು ಬಾಳೆಹಣ್ಣು ಹಾಗೂ ಬ್ಯಾಂಬೋ ಫೈಬರ್‌ ಬಳಸಿದ ಬಣ್ಣಗಳಿಂದ ತಯಾರಾದ ಆರೋಗ್ಯಕರ ಉಡುಪುಗಳು ವಿದೇಶೀಗರನ್ನು ಆಕರ್ಷಿಸುತ್ತಿವೆ ಎನ್ನುತ್ತಾರೆ.

(ಲೇಖಕಿ ಫ್ಯಾಷನ್ ಪತ್ರಕರ್ತೆ)

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕೊಡಗು

Elephant Death: ಕ್ಯೂಟ್‌ ಆಗಿ ಆಟವಾಡುತ್ತಿದ್ದ ತಬ್ಬಲಿ ಮರಿಯಾನೆಗೆ ಕೊನೆಗೂ ಸಿಗಲಿಲ್ಲ ತಾಯಿ

Elephant Death: ಕೊಡಗಿನ ಕಾಫಿ ತೋಟಕ್ಕೆ ದಾಳಿ ಮಾಡಿದ್ದ ಆನೆ ಹಿಂಡನ್ನು ಓಡಿಸುತ್ತಿದ್ದಾಗ, ಮರಿಯಾನೆ ಅದರ ತಾಯಿಯಿಂದ ಬೇರ್ಪಟ್ಟಿತ್ತು. ತಾಯಿಯಿಂದ ಬೇರ್ಪಟ್ಟು ಅಲೆದಾಡುತ್ತಿದ್ದ ಈ ಆನೆಯನ್ನು ಅದರ ತಾಯಿಯೊಂದಿಗೆ ಸೇರಿಸಲು ಅರಣ್ಯ ಇಲಾಖೆ ಸಿಬ್ಬಂದಿ ಸಾಕಷ್ಟು ಪ್ರಯತ್ನ ಪಟ್ಟಿದ್ದರು.

VISTARANEWS.COM


on

elephant death in dubare camp
Koo

ಕೊಡಗು: ತಾಯಿ ಕಾಡಾನೆಯಿಂದ ಬೇರ್ಪಟ್ಟು ತಬ್ಬಲಿಯಾಗಿದ್ದ ಮರಿಯಾನೆ (Elephant cub) ಕೊನೆಗೂ ತಾಯಿಯನ್ನು ಕಾಣದೆ ಸಾವು (Elephant Death) ಕಂಡಿದೆ. ಕೊಡಗು ಜಿಲ್ಲೆಯ ದುಬಾರೆ (Dubare) ಸಾಕಾನೆ ಶಿಬಿರದಲ್ಲಿ (Elephant camp) ಘಟನೆ ನಡೆದಿದೆ.

ಕೊಡಗಿನ ಕಾಫಿ ತೋಟಕ್ಕೆ ದಾಳಿ ಮಾಡಿದ್ದ ಆನೆ ಹಿಂಡನ್ನು ಓಡಿಸುತ್ತಿದ್ದಾಗ, ಮರಿಯಾನೆ ಅದರ ತಾಯಿಯಿಂದ ಬೇರ್ಪಟ್ಟಿತ್ತು. ತಾಯಿಯಿಂದ ಬೇರ್ಪಟ್ಟು ಅಲೆದಾಡುತ್ತಿದ್ದ ಈ ಆನೆಯನ್ನು ಅದರ ತಾಯಿಯೊಂದಿಗೆ ಸೇರಿಸಲು ಅರಣ್ಯ ಇಲಾಖೆ ಸಿಬ್ಬಂದಿ ಸಾಕಷ್ಟು ಪ್ರಯತ್ನ ಪಟ್ಟಿದ್ದರು.

ತಾಯಿಗಾಗಿ ಅಲೆದು ನಿತ್ರಾಣಗೊಂಡಿದ್ದ 5 ತಿಂಗಳ ಮರಿಯಾನೆಯನ್ನು ರಕ್ಷಿಸಿ ದುಬಾರೆ ಶಿಬಿರಕ್ಕೆ ಶಿಫ್ಟ್ ಮಾಡಲಾಗಿತ್ತು. ಗಂಜಿ ಹಾಲು ನೀಡಿ ಆರೈಕೆ ಮಾಡಲು ಯತ್ನಿಸಲಾಗಿತ್ತು. ವನ್ಯಜೀವಿ ವೈದ್ಯ ಡಾ. ಚೆಟ್ಟಿಯಪ್ಪ ಚಿಕಿತ್ಸೆ ನೀಡುತ್ತಿದ್ದರು. ಕಳೆದ ಕೆಲವು ದಿನಗಳಿಂದ ಕೊಂಚ ಚೇತರಿಸಿಕೊಂಡಿದ್ದ ಮರಿ ಆನೆ ಇದಿಗ ದಿಢೀರ್ ಸಾವು ಕಂಡಿದೆ.

ಅರಣ್ಯ ಇಲಾಖೆಯಿಂದ ಮೃತ ಆನೆ ಮರಿಯ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಲಾಗಿದೆ. 25 ದಿನಗಳಿಂದ ಮರಿಯಾನೆ ತಾಯಿಗಾಗಿ ಕಾಡು- ಊರು ಅಲೆದಿತ್ತು. ಎಲ್ಲಿಯೂ ತಾಯಿ ಸಿಗದ ಹಿನ್ನೆಲೆಯಲ್ಲಿ ಒಂಟಿಯಾಗಿದ್ದ ಮರಿ ಆನೆ ಆಹಾರ ಸೇವಿಸುತ್ತಿರಲಿಲ್ಲ ಎನ್ನಲಾಗಿದೆ. ಹೀಗಾಗಿ ರಕ್ಷಣೆಯಾದರೂ ಕೂಡ ಬದುಕುಳಿಯದ ಮರಿ‌ ಆನೆ ದುರಂತ ಅಂತ್ಯ ಕಂಡಿದೆ. ದುಬಾರೆ ಶಿಬಿರದ ಸಿಬ್ಬಂದಿ ಮರಿಯಾನೆಗಾಗಿ ಕಣ್ಣೀರು ಮಿಡಿದಿದ್ದಾರೆ.

ಕುಡಿಯಲು ನೀರು ಸಿಗದೆ ಕಾಡಾನೆಗಳು ಸಾವು

ರಾಮನಗರ: ಕನಕಪುರ ತಾಲೂಕಿನ ಯಲವನತ್ತ ಅರಣ್ಯಪ್ರದೇಶ ಹಾಗೂ ಬೆಟ್ಟಹಳ್ಳಿ ಬೀಟ್‌ನಲ್ಲಿ ಕಾಡಾನೆಗಳು (Elephants Death) ಮೃತಪಟ್ಟಿವೆ. 35 ಹಾಗೂ 14 ವರ್ಷದ ಎರಡು ಕಾಡಾನೆಗಳು ಉಸಿರು ನಿಲ್ಲಿಸಿದೆ. ಬಿಸಿಲಿನ ಬೇಗೆ ತಾಳಲಾರದೆ ಕಾಡಾನೆಗಳು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ರಾಮನಗರದ ಕನಕಪುರ ವಲಯದ ಬೆಟ್ಟಹಳ್ಳಿ ಬೀಟ್‌ನಲ್ಲಿ ಘಟನೆ ನಡೆದಿದೆ. ಕಳೆದ ಮೂರು ದಿನಗಳ ಹಿಂದೆ 14 ವರ್ಷದ ಒಂಟಿ ಸಲಗ ನಿತ್ರಾಣಗೊಂಡಿತ್ತು. ನಿತ್ರಾಣಗೊಂಡಿದ್ದ ಕಾಡಾನೆಯನ್ನು ಗಮನಿಸಿದ ಅರಣ್ಯ ಸಿಬ್ಬಂದಿ ವೈದ್ಯಕೀಯ ಚಿಕಿತ್ಸೆಯನ್ನು ಕೊಡಿಸಿದ್ದರು. ಆದರೆ ಇದೀಗ ಕಾಡಂಚಿನಲ್ಲಿ ಕೊನೆಯುಸಿರೆಳೆದಿದೆ.

ಸ್ಥಳಕ್ಕೆ ಡಿಎಫ್‌ಓ ರಾಮಕೃಷ್ಣಪ್ಪ, ಕನಕಪುರ ಎಸಿಎಫ್ ಗಣೇಶ್ ಹಾಗು ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಕಾಡಾನೆ ಸಾವಿನ ಬಗ್ಗೆ ನಿಖರ ಮಾಹಿತಿ ಲಭ್ಯವಾಗಲಿದೆ.

elephants Death in Ramanagara

ಕಾಡಿನಲ್ಲಿ ಕುಡಿಯಲು ನೀರು ಸಿಗದೆ ಪರದಾಡಿ ನಿತ್ರಾಣಗೊಂಡು ಮೃತಪಟ್ಟಿರುವ ಶಂಕೆ ಇದೆ. 14 ವರ್ಷದ ಕಾಡಾನೆ ಕಳೆದ ಮೂರು ದಿನಗಳ ಹಿಂದೆ ನಿತ್ರಾಣಗೊಂಡಿತ್ತು. ಇದೀಗ ನಿತ್ರಾಣಗೊಂಡಿದ್ದ ಕಾಡಾನೆ ಸೇರಿ ಮತ್ತೊಂದು 35 ವರ್ಷದ ಕಾಡಾನೆಯೂ ಮೃತಪಟ್ಟಿದೆ. ಕನಕಪುರ -ತಮಿಳುನಾಡು ಗಡಿಭಾಗ ಯಲವನತ್ತ ಕಾಡಂಚಿನಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಇದನ್ನೂ ಓದಿ: Elephant Attack: ವಾಕಿಂಗ್‌ ಹೋಗುತ್ತಿದ್ದ ವ್ಯಕ್ತಿ ಮೇಲೆರಗಿ ಕೊಂದುಹಾಕಿದ ಒಂಟಿ ಸಲಗ

Continue Reading

ಅಂಕಣ

ದಶಮುಖ ಅಂಕಣ: “ಮಧುಮಾಸವೆ ಅಡಿ ಇಡುತಿದೆ ಹೊಸವರ್ಷದ ಬೆಳಗೆ”

ದಶಮುಖ ಅಂಕಣ: ವಸಂತ ಎನ್ನಿ, ಬೈಸಾಖಿ ಎನ್ನಿ, ಸ್ಪ್ರಿಂಗ್ (Spring) ಎನ್ನಿ, ಹೆಸರು ಯಾವುದಾದರೇನು… ಎಲ್ಲವೂ ಒಂದೇ ಋತುವಿಗೆ ಸಂಬಂಧಿಸಿದ್ದು. ʻಬೇವಿನ ಕಹಿ ಬಾಳಿನಲ್ಲಿ ಹೂವಿನ ನಸುಗಂಪು ಸೂಸಿ ಜೀವಕಳೆಯʼ ತರುವುದಕ್ಕೆ ಪ್ರಕೃತಿಗೆ ಗಡಿ, ಸೀಮೆಗಳ ಹಂಗಿಲ್ಲ. ಇದೇ ಹಿನ್ನೆಲೆಯಲ್ಲಿ ಹೊಸತನಕ್ಕೂ ವಸಂತನಿಗೂ ಇರುವ ಅಂಟು ಕುತೂಹಲಕ್ಕೆ ಕಾರಣವಾಗಿದೆ.

VISTARANEWS.COM


on

dashamukha column spring time
Koo

ಈ ಅಂಕಣವನ್ನು ಇಲ್ಲಿ ಓದಿ:

dashamukha column logo

ದಶಮುಖ ಅಂಕಣ: ಋತುಗಳು (Seasons) ವಿಶ್ವದೆಲ್ಲೆಡೆ ಒಂದೇ ತೆರನಾಗಿಲ್ಲ. ಕೆನಡಾ, ಅಮೆರಿಕದ ಬೇಸಿಗೆಯ (Summer) ಋತುವಿನಲ್ಲಿ ಭಾರತದಲ್ಲಿ ಮಳೆಗಾಲ (monsoon); ಈ ದಿನಗಳಲ್ಲಿ ನ್ಯೂಜಿಲೆಂಡ್, ಆಸ್ಟ್ರೇಲಿಯದಲ್ಲಿ ಚಳಿಗಾಲ (winter)! ಭೌಗೋಳಿಕವಾಗಿ ಆ ದೇಶಗಳು ಎಲ್ಲೆಲ್ಲಿವೆ ಎನ್ನುವುದರ ಮೇಲೆ ಯಾವ ದಿನಗಳಲ್ಲಿ ಯಾವ ಋತು ಎನ್ನುವುದು ನಿರ್ಧಾರವಾಗುವುದು ಸಾಮಾನ್ಯ ವಿದ್ಯಮಾನ. ಸ್ಪ್ರಿಂಗ್ ಟೈಮ್ ಅಥವಾ ಹೂ ಬಿಡುವ ದಿನಗಳು ಸಹ ಸಹಜವಾಗಿ ಭಿನ್ನವೇ ಆಗಿರುತ್ತದೆ. ದಿನಗಳು ಬೇರೆಯಾದರೂ, ಆ ದಿನಗಳಲ್ಲಿ ಪ್ರಕೃತಿಯಲ್ಲಿ ನಡೆಯುವ ಚಟುವಟಿಕೆಗಳು ಬೇರೆಯಲ್ಲವಲ್ಲ. ನಮ್ಮಲ್ಲಿದು ವಸಂತ ಋತು. ವಸಂತ ಎನ್ನಿ, ಬೈಸಾಖಿ ಎನ್ನಿ, ಸ್ಪ್ರಿಂಗ್ (Spring) ಎನ್ನಿ, ಹೆಸರು ಯಾವುದಾದರೇನು… ಎಲ್ಲವೂ ಒಂದೇ ಋತುವಿಗೆ ಸಂಬಂಧಿಸಿದ್ದು. ʻಬೇವಿನ ಕಹಿ ಬಾಳಿನಲ್ಲಿ ಹೂವಿನ ನಸುಗಂಪು ಸೂಸಿ ಜೀವಕಳೆಯʼ ತರುವುದಕ್ಕೆ ಪ್ರಕೃತಿಗೆ ಗಡಿ, ಸೀಮೆಗಳ ಹಂಗಿಲ್ಲ. ಇದೇ ಹಿನ್ನೆಲೆಯಲ್ಲಿ ಹೊಸತನಕ್ಕೂ ವಸಂತನಿಗೂ ಇರುವ ಅಂಟು ಕುತೂಹಲಕ್ಕೆ ಕಾರಣವಾಗಿದೆ.

ನಮ್ಮ ವಸಂತ ಋತುವಿಗೂ ಹೊಸತನಕ್ಕೂ ಇರುವುದು ಅಂಟು, ನಂಟು- ಎರಡೂ ಹೌದು. ಹಾಗೆಂದೇ ಭಾರತದ ಒಳಗಿನ ಲೆಕ್ಕವಿಲ್ಲದಷ್ಟು ಜಾತಿ, ಭಾಷೆ, ಪ್ರಾಂತ್ಯಗಳ ಜನ ವಸಂತ ಋತುವಿನುದ್ದಕ್ಕೂ ಹೊಸ ವರ್ಷ ಇಲ್ಲವೇ ಸುಗ್ಗಿಯ ಹಬ್ಬವನ್ನಾಚರಿಸುತ್ತಾರೆ. ಸಾಮಾನ್ಯವಾಗಿ ಕೇಳಿಬರುವ ಯುಗಾದಿ, ಗುಡಿಪಡ್ವಾಗಳ ಹೊರತಾಗಿ ಸಿಖ್ ಬಾಂಧವರು ಆಚರಿಸುವ ಬೈಸಾಖಿ, ಅಸ್ಸಾಂನ ಬೋಹಾಗ್ ಬಿಹು ಅಥವಾ ರಂಗೋಲಿ ಬಿಹು, ಬಂಗಾಳದ ಪೊಲೇಹ ಬೊಐಸಾಖ್, ಕಾಶ್ಮೀರದ ನವ್ರಿ, ಸಿಂಧಿ ಜನರ ಚೇತಿ ಚಾಂದ್, ಸೌರಮಾನ ಯುಗಾದಿ ಅಥವಾ ವಿಶು, ಹಿಮಾಚಲ ಪ್ರದೇಶದ ದೋಗ್ರಾ, ಒಡಿಸ್ಸಾದ ವಿಶು ಸಂಕ್ರಾಂತಿ, ಮಣಿಪುರದ ಚೈರೋಬ… ಅಂತೂ ದೇಶದ ಉದ್ದಗಲಕ್ಕೂ ಒಂದಿಲ್ಲೊಂದು ಹೆಸರಿನಿಂದ ವಸಂತನ ಆಗಮನವನ್ನು ಹೊಸವರ್ಷವೆಂದೇ ಸಂಭ್ರಮಿಸುತ್ತಾರೆ. ಶಿಶಿರದಲ್ಲಿ ಬೋಳಾಗಿ ನಿಂತ ಪ್ರಕೃತಿಯೆಲ್ಲ ಹಸಿರು ಧರಿಸಿ, ಲೋಕಕ್ಕೆಲ್ಲ ಉಸಿರು ತುಂಬುವ ಈ ದಿನಗಳಲ್ಲಿ ನಾವು ಮಾತ್ರವೇ ಯುಗಾದಿ ಆಚರಿಸುತ್ತೇವೆ ಎಂದು ಭಾವಿಸುವಂತಿಲ್ಲ. ವಿಶ್ವದ ಎಷ್ಟೊಂದು ಸಂಸ್ಕೃತಿಗಳು ಹೊಸ ವರ್ಷದ ಸಂಭ್ರಮವನ್ನು ಆಚರಿಸುತ್ತವೆ ಗೊತ್ತೆ?

ಹೌದು, ಭಾರತದಲ್ಲಿ ಮಾತ್ರವೇ ಅಲ್ಲ, ಇನ್ನೂ ಬಹಳಷ್ಟು ದೇಶಗಳಲ್ಲಿ ವಸಂತ ಋತುವಿನಲ್ಲೇ ಹೊಸ ವರ್ಷದ ಆಚರಣೆಯಿದೆ. ಜನವರಿ ಮೊದಲ ತಾರೀಖಿನ ಹೊಸವರ್ಷವೆಂಬುದು ಬೇರೆಯದೇ ಆದ ಕ್ಯಾಲೆಂಡರಿನ ಲೆಕ್ಕಾಚಾರ. ಆದರೆ ಪ್ರಕೃತಿಯ ಎಣಿಕೆಗೆ ಸ್ಪಂದಿಸುವುದು ನಮ್ಮ ಯುಗಧರ್ಮ. ಪ್ರಕೃತಿಯಂತೆಯೇ ಶತಶತಮಾನಗಳಿಂದ ನಡೆದು ಬಂದಂಥ ನಿರಂತರತೆಯಿದು. ಪ್ರಕೃತಿಯ ಆರಾಧನೆಯೇ ಪರಮನ ಆರಾಧನೆ ಎಂಬ ತತ್ವ ಬಹುಶಃ ನಾಗರೀಕತೆಯಷ್ಟೇ ಹಳೆಯದಿರಬೇಕು. ಈ ಮಾತಿನ ವ್ಯಾಪ್ತಿಯನ್ನು ತಿಳಿಯುವುದಕ್ಕೆ ಫೆಬ್ರವರಿಯಿಂದ ಪ್ರಾರಂಭವಾಗಿ ಎಪ್ರಿಲ್ವರೆಗಿನ ದಿನಗಳಲ್ಲಿ ಬರುವ ಬೇರೆಬೇರೆ ದೇಶಗಳ ಸಾಂಪ್ರದಾಯಿಕ ಹೊಸವರ್ಷಗಳನ್ನು ಸಹ ತಿಳಿಯಬೇಕು ನಾವು. ಚೀನಾ, ಕೊರಿಯ, ವಿಯೆತ್ನಾಂ, ಟಿಬೆಟ್, ಇರಾನ್, ಕಜಕಿಸ್ತಾನ, ಉಜ್ಬೆಕಿಸ್ತಾನ, ನೇಪಾಳ, ಶ್ರೀಲಂಕಾ, ಮ್ಯಾನ್ಮಾರ್, ಲಾವೊಸ್, ಕಾಂಬೋಡಿಯ, ಥಾಯ್ಲೆಂಡ್… ಪಟ್ಟಿ ಇನ್ನೂ ಉದ್ದವಿದೆ. ಈ ಎಲ್ಲಾ ದೇಶಗಳಲ್ಲಿ ಕ್ಯಾಲೆಂಡರ್ ಹೊಸ ವರ್ಷದ ಹೊರತಾಗಿ ಹೂ ಬಿಡುವ ಕಾಲದಲ್ಲಿ ಸಾಂಪ್ರದಾಯಿಕವಾದ ಬೇರೆಯದೇ ರೀತಿಯಲ್ಲಿ ನವವರ್ಷವನ್ನು ಸ್ವಾಗತಿಸುತ್ತಾರೆ.

ಯಾವುದೇ ದೇಶದಲ್ಲಾದರೂ, ವಸಂತವೆಂದರೆ ಹಿತವಾದ ಕಾಲ. ಚಳಿಯ ಆರ್ಭಟವೆಲ್ಲಾ ಮುಗಿದಿದೆ, ಆದರೆ ಬಿಸಲಿನ ಪ್ರಕೋಪವಿನ್ನೂ ಜೋರಾಗಿಲ್ಲ ಎಂಬಂಥ ದಿನಗಳು. ಹೊಸ ಹಸಿರಿನ ನಡುವೆ ನಾನಾ ವರ್ಣ ಮತ್ತು ವಿನ್ಯಾಸಗಳ ಹೂ-ಮಿಡಿಗಳ ವೈಭೋಗ. ಶಿಶಿರ ಸುರಿಯುವ ಕಸಿವಿಸಿಯನ್ನು ಸಂಪೂರ್ಣವಾಗಿ ತೊಡೆದು, ಎಲ್ಲೆಡೆ ಆಹ್ಲಾದ, ಉತ್ಸಾಹ, ಉಲ್ಲಾಸಗಳನ್ನು ಚೆಲ್ಲುವುದರಲ್ಲಿ ನಮ್ಮ ವಸಂತ ಲೋಭ ತೋರುವವನೇ ಅಲ್ಲ. ಹಾಗಾದರೆ ವಸಂತ ಎಂದರೆ ಸಂತಸ ಮಾತ್ರವೇ? ಏನೆಲ್ಲಾ ಭಾವಗಳು ಬೆರೆತಿವೆ ಇದೊಂದು ಋತುವಿನೊಂದಿಗೆ? ಹೊಸತನ, ಏಳಿಗೆ, ಸಮೃದ್ಧಿ, ನಿರೀಕ್ಷೆ, ಭರವಸೆ, ಹರುಷ, ಪ್ರೀತಿ, ಒಲವು, ಶೃಂಗಾರ, ಝೇಂಕಾರ, ಕವಿಸಮಯ- ಹೇಳುತ್ತಿದ್ದರೆ ಇನ್ನೂ ಎಷ್ಟೊಂದು ಇದೆಯಲ್ಲ. ಅಲ್ಲಿಗೆ ವಸಂತನಿಗೂ ಹೊಸತನಕ್ಕೂ ತಳುಕು ಹಾಕುವುದು ಗಡಿ, ಸೀಮೆಗಳನ್ನು ಮೀರಿದ ಭಾವ; ಇಡೀ ಯುಗಧರ್ಮದ ಸ್ವಭಾವ ಎಂದಾಯಿತು.

Spring Tourism

ವಸಂತನ ಋತುವಿನ ಅಥವಾ ಚೈತ್ರಮಾಸದ ವರ್ಣನೆಗಳು ಸಂಸ್ಕೃತ ಕಾವ್ಯಗಳಿಂದ ತೊಡಗಿ, ಹಳೆಗನ್ನಡ ಕಾವ್ಯಗಳಿಂದ ಹಿಡಿದು, ಇಂದಿನವರೆಗೂ ಕಂಡುಬರುತ್ತದೆ. ಇವೆಲ್ಲವುಗಳಲ್ಲಿ ಕಾಣುವುದು ಪ್ರಕೃತಿಯಲ್ಲಿರುವ, ಆ ಮೂಲಕ ನಮ್ಮಲ್ಲೂ ಇರುವಂಥ ಹೊಸತನ. ಈ ವಿಷಯಗಳಲ್ಲಿ ಮೊದಲು ನೆನಪಾಗುವುದು ನಮ್ಮ ಕಾಳಿದಾಸ. ಆತನ ʻಮಾಳವಿಕಾಗ್ನಿ ಮಿತ್ರʼದಲ್ಲಿ ವಸಂತನ ಒಂದಿಷ್ಟು ವರ್ಣನೆಗಳನ್ನು ಕಾಣಬಹುದು. ಆದರೆ ಎಲ್ಲಕ್ಕಿಂತ ಮನಸೆಳೆಯುವುದು ಆತನ ʻಋತುಸಂಹಾರʼದಲ್ಲಿನ ವರ್ಣನೆಗಳು. ವರುಷದ ಆರೂ ಋತುಗಳನ್ನು ವರ್ಣಿಸುವ ಈ ಖಂಡಕಾವ್ಯದ ಕೊನೆಯ ಸರ್ಗದಲ್ಲಿ ಬರುವ ವಸಂತನ ವರ್ಣನೆಗಳ ಕನ್ನಡಾನುವಾದ (ಕೃಪೆ- ಹಂಸಾನಂದಿ) ಹೀಗಿವೆ- “ಹೊಮ್ಮಿರುವ ಮಾಂದಳಿರ ಮೊನಚು ಬಾಣಗಳನ್ನು/ ಚಿಮ್ಮಿಸಲು ದುಂಬಿಸಾಲಿನ ಬಿಲ್ಲ ಹೆದೆಯ/ ಹಮ್ಮುಗೊಳಿಸುತ ಯೋಧ ಬಂದಿಹ ವಸಂತನಿವ/ ನೊಮ್ಮೆಗೇ ಪ್ರಣಯಿಗಳ ಮನವ ಪೀಡಿಸಲು// ಕುಸುಮಿಸಿಹ ವೃಕ್ಷಗಳು ಕೊಳದಲ್ಲಿ ಕಮಲಗಳು/ ನಸುಗಂಪು ಗಾಳಿ; ಜೊತೆ ಬಯಸುವೆಣ್ಣುಗಳು/ ಮಸುಕು ಸಂಜೆಯ ನಲಿವು ಹಾಯಾದ ಹಗಲುಗಳು/ ಎಸೆದಾವು ಮಿಗೆ ಗೆಳತಿ ಹಿತ ವಸಂತದಲಿ”

ಹಳೆಗನ್ನಡದ ವಿಷಯಕ್ಕೆ ಬಂದರೆ ಮೊದಲು ನೆನಪಾಗುವವನು ಪಂಪ. ʻನೀನೇ ಭುವನಕ್ಕಾರಾಧ್ಯನೈ, ಭೃಂಗ ಕೋಕಿಳ ಕೀರ ಪ್ರಿಯ ಚೂತರಾಜ, ತರುಗಳ್ ನಿನ್ನಂತೆ ಚೆನ್ನಂಗಳೇʼ ಎಂದು ವಸಂತದಲ್ಲಿ ತೂಗುವ ಮಾವಿನ ಮರವನ್ನು ಕೊಂಡಾಡುತ್ತಾನೆ. ಅಭಿನವ ಪಂಪನೆಂದೇ ಹೆಸರಾಗಿದ್ದ ನಾಗಚಂದ್ರನ ರಾಮಚಂದ್ರಚರಿತ ಪುರಾಣದಲ್ಲಿನ ರಾಮ, ಕಳೆದು ಹೋದ ತನ್ನ ಸೀತೆಯನ್ನು ಹುಡುಕುತ್ತಾ, ʻತಳಿರೇ ತಾಮರೆಯೇ ಮೃಗಾಳಿ ಸಂಕುಲಮೇ ಮತ್ತ ಕೋಕಿಲಮೇ ಕಂಡಿರೇ ಪಲ್ಲವಾಧರೆಯʼ ಎಂದು ಸುತ್ತಲಿನ ಪ್ರಕೃತಿಯನ್ನು ಕೇಳುತ್ತಾ ಹೋಗುವ ವರ್ಣನೆಯಿದೆ. ಹಿಂದಿನವರು ನಿಸರ್ಗದೊಂದಿಗೆ ಇಷ್ಟೊಂದು ನಿಕಟವಾಗಿ ಬೆರೆತು ಬದುಕಿದ್ದರ ಹಿನ್ನೆಲೆಯಲ್ಲೇ, ಪ್ರಕೃತಿಗೆ ಹೊಸತನ ಬಂದ ಕಾಲದಲ್ಲಿ ಅವರಿಗೂ ಹೊಸತನ ಬಂದಂತೆನಿಸಿದ್ದರಲ್ಲಿ ಅಚ್ಚರಿಯಿಲ್ಲ. ಹರಿಹರ, ಕುಮಾರವ್ಯಾಸನಿಂದ ತೊಡಗಿ ಅವರಿಗಿಂತ ಇತ್ತೀಚಿನ ಜಯದೇವ ಕವಿಯ ಕಾವ್ಯಗಳೆಲ್ಲ ವಸಂತನಿಂದ, ಚೈತ್ರದಿಂದ ಸಿಂಗಾರಗೊಂಡಂಥವು.

ಇದನ್ನೂ ಓದಿ: ದಶಮುಖ ಅಂಕಣ: ಮೌನವೆಂಬ ಭಾವಸೇತು

ಹೊಸಗನ್ನಡ ಕವಿಗಳೂ ಹೊಸವರ್ಷದ ಹೊಸತನಕ್ಕೆ ಸೋತವರೇ. ರಸಋಷಿ ಕುವೆಂಪು ಅವರು, “ಗೀತೆಯ ಘೋಷದಿ ನವ ಅತಿಥಿಯ ಕರೆ/ ಹೃದಯ ದ್ವಾರವನಗಲಕೆ ತೆರೆ ತೆರೆ/ ನವಜೀವನ ರಸ ಬಾಳಿಗೆ ಬರಲಿ/ ನೂತನ ಸಾಹಸವೈತರಲಿ” ಎಂದು ತಮ್ಮ ʻಯುಗಾದಿʼ ಎನ್ನುವ ಕವನದಲ್ಲಿ ಆಶಿಸುತ್ತಾರೆ. ಕೆ.ಎಸ್. ನರಸಿಂಹಸ್ವಾಮಿಯವರ ಮಧುಮಾಸದ ಹೊಸತನ ಇದಕ್ಕಿಂತ ಭಿನ್ನವಲ್ಲ. “ಬಾನ್ನೀಲಿಯ ಕೊನೆಯಿಲ್ಲದ ನೀಲಾಂಬರದೊಳಗೆ/ ಬಂದಾಡುವ ಬಿಳಿಮುಗಿಲಿನ ತಣ್ಣೆಳಲಿನ ಕೆಳಗೆ/ ಮಾಂದಳಿರಿನ ತೋರಣವಿಹ ಮುಂಬಾಗಿಲ ಬಳಿಗೆ/ ಮಧುಮಾಸವೆ ಅಡಿ ಇಡುತಿದೆ ಹೊಸವರ್ಷದ ಬೆಳಗೆ” ಎಂದು ಸಂಭ್ರಮಿಸುತ್ತಾರೆ. ನಿಸಾರ್ ಅಹಮದ್ ಅವರ ʻವರ್ಷಾದಿʼ ಕವಿತೆಯಲ್ಲಿ, “ಹೊಸ ಬಟ್ಟೆಯ ತೊಟ್ಟ ಚೈತ್ರ/ ಜಲದರ್ಪಣ ಮಗ್ನ ನೇತ್ರ/ ಮುಗಿಲಿನ ಪಂಚಾಂಗ ತೆರೆಸಿ/ ಕುಳಿತಿಹ ಫಲ ತಿಳಿಯ ಬಯಸಿ” ಎಂದು ಚೈತ್ರಮಾಸದ ನವ್ಯತೆಯನ್ನು ಭವ್ಯತೆಯನ್ನು ವರ್ಣಿಸುತ್ತಾರೆ. ಜಿ.ಎಸ್.ಶಿವರುದ್ರಪ್ಪನವರ ʻಯುಗಾದಿಯ ಹಾಡʼನ್ನೂ ಕಾಡುವುದು ಚೈತ್ರ ಮಾಸಕ್ಕಿರುವ ಹೊಸ ಸ್ಪರ್ಶವೇ. “ಬಂದ ಚೈತ್ರದ ಹಾದಿ ತೆರೆದಿದೆ/ ಬಣ್ಣ-ಬೆಡಗಿನ ಮೋಡಿಗೆ/ ಹೊಸತು ವರ್ಷದ ಹೊಸತು ಹರ್ಷದ/ ಬೇವು ಬೆಲ್ಲದ ಬೀಡಿಗೆ” ಎಂದು ಹಾಡುತ್ತಾರೆ. ಇವರುಗಳು ಮಾತ್ರವಲ್ಲ, ವರಕವಿ ಬೇಂದ್ರೆ, ಪು.ತಿ.ನರಸಿಂಹಾಚಾರ್, ಗೋಪಾಲಕೃಷ್ಣ ಅಡಿಗರ ಆದಿಯಾಗಿ ನಮ್ಮೆಲ್ಲ ಮೇರು ಕವಿಗಳಿಗೆ ವಸಂತನಿಗೂ ಹೊಸತನಕ್ಕೂ ನಡುವೆ ಪ್ರವಹಿಸುವ ವಾಹಿನಿ ಕಾಡಿದೆ.

ಎಲೆಗಳು ಉದುರುವಾಗಲೂ, ಚಿಗುರುವಾಗಲೂ ಪ್ರಕೃತಿಯದ್ದು ಅದೇ ಹದ. ಈ ನಡುವಿನ ಅವಧಿಯಲ್ಲಿ ಏನು ನಡೆಯುತ್ತದೆಂಬ ಗುಟ್ಟನ್ನೆಂದೂ ಬಿಟ್ಟುಕೊಡದ ನಿಸರ್ಗ, ನಮಗೆ ತೋರಿಸಿ ಕೊಡುವುದು ಹೊಸತನವನ್ನು ಮಾತ್ರ. ಇದನ್ನೇ ಉಂಡು, ಉಟ್ಟು ನಡೆಯೋಣ. ಎಲ್ಲರ ಕಂಗಳಲ್ಲಿ ಪಲ್ಲವಿಸಿರುವ ಹೊಸ ಚಿಗುರು ಬೆಳೆಯಲಿ, ಹೂವಾಗಿ, ಕಾಯಾಗಿ, ಹಣ್ಣಾಗಲಿ. ಪ್ರಕೃತಿಯಂತೆಯೇ ತನ್ನ ನಿರಂತರತೆಯನ್ನು ಕಾಯ್ದುಕೊಳ್ಳಲಿ ಬದುಕು.

ಇದನ್ನೂ ಓದಿ: ದಶಮುಖ ಅಂಕಣ: ಉಪವಾಸದ ಹಿಂದೆ ಎಷ್ಟೊಂದು ನೆನಪುಗಳು!

Continue Reading

ಪರಿಸರ

Tigers fasting: ವಾರದಲ್ಲೊಂದು ದಿನ ಉಪವಾಸ ಮಾಡುತ್ತಿವೆ ಈ ಹುಲಿಗಳು!

Tigers fasting: ನೇಪಾಳದ ಮೃಗಾಲಯವೊಂದರಲ್ಲಿ ಹುಲಿಗಳು ವಾರದಲ್ಲೊಂದು ದಿನ ಉಪವಾಸ ಮಾಡುತ್ತಿದೆ. ಆಹಾರದ ಕೊರತೆ ಇಲ್ಲದೇ ಇದ್ದರೂ ಮಾಂಸಹಾರಿ ಪ್ರಾಣಿಯಾದ ಹುಲಿಗಳು ಇಲ್ಲಿ ಉಪವಾಸ ಮಾಡಲು ಹಲವು ಕಾರಣಗಳಿವೆ. ಅದು ಏನು ಗೊತ್ತೇ ?

VISTARANEWS.COM


on

By

Tigers fasting
Koo

ಹುಲಿ (tiger), ಚಿರತೆ (Leopard), ಸಿಂಹ (lion) ಇವುಗಳನ್ನು ನೋಡಿದರೆ (Tigers fasting) ಎಷ್ಟು ಗಟ್ಟಿ ಹೃದಯವಾದರೂ ಒಮ್ಮೆ ಮೈ ನಡುಗುತ್ತದೆ. ಯಾಕೆಂದರೆ ಇವುಗಳು ಯಾರ ಮೇಲೂ ಕರುಣೆಯನ್ನು ತೋರುವುದಿಲ್ಲ. ಅವುಗಳ ಆಕ್ರಮಣದಿಂದ ಬದುಕಿ ಉಳಿದರೆ ಅದು ಇನ್ನೊಂದು ಜನ್ಮ ಸಿಕ್ಕಿದಂತೆಯೇ.. ಇವುಗಳನ್ನು ಪಳಗಿಸುವುದು,. ಕೂಡಿ ಹಾಕುವುದು ಅಷ್ಟು ಸುಲಭವಲ್ಲ. ಆದರೂ ಪ್ರಾಣಿ ಸಂಗ್ರಹಾಲಯದಲ್ಲಿ ಅತ್ಯಂತ ಎಚ್ಚರಿಕೆಯಿಂದ ಇವುಗಳನ್ನು ಸಂರಕ್ಷಿಸಿ ಇಡಲಾಗುತ್ತದೆ.
ಪ್ರಕೃತಿಯೇ ಕೆಲವೊಂದು ಪ್ರಾಣಿಗಳನ್ನು ಸಂಪೂರ್ಣವಾಗಿ ಮಾಂಸಹಾರಿಗಳನ್ನಾಗಿ ಮಾಡಿದೆ. ಇದರಲ್ಲಿ ಹುಲಿಗಳು ಸೇರಿವೆ. ಇದು ಬೇಟೆಯಾಡುವಾಗ ಮಾತ್ರ ಯಾರ ಮೇಲೂ ಕರುಣೆ ತೋರಿಸುವುದಿಲ್ಲ. ಹೊಟ್ಟೆ ತುಂಬಿದಾಗ ಮಾತ್ರ ಸುಮ್ಮನಿರುತ್ತವೆ.

ಹುಲಿಗಳು ಸಂಪೂರ್ಣವಾಗಿ ಮಾಂಸಾಹಾರಿಗಳು ಮತ್ತು ಬದುಕಲು ಮಾಂಸವನ್ನು ಅವಲಂಬಿಸಿರುತ್ತವೆ. ಆದರೆ ಈ ಹುಲಿಗಳು ಇದೀಗ ಮೃಗಾಲಯದಲ್ಲಿ ವಾರದಲ್ಲಿ ಒಂದು ದಿನ ಉಪವಾಸ (Tigers fasting) ಮಾಡುತ್ತಿವೆ. ಆ ದಿನ ಮಾಂಸಾಹಾರವನ್ನು ಅದು ಸೇವಿಸುವುದೇ ಇಲ್ಲ.


ಎಲ್ಲಿ?

ನೇಪಾಳದ (nepal) ಕೇಂದ್ರ ಮೃಗಾಲಯದಲ್ಲಿರುವ (Central Zoo) ಹುಲಿಗಳು ಉಪವಾಸ ಆಚರಿಸುತ್ತಿರುವುದಾಗಿ ತಿಳಿದು ಬಂದಿದೆ. ಇದು ಆಹಾರದ ಕೊರತೆಯಿಂದ ಅಂತೂ ಅಲ್ಲ.

ಇದನ್ನೂ ಓದಿ: Health Benefits of Walnuts: ವಾಲ್‌ನಟ್‌ ತಿಂದರೆ ಆಗುವ ಪ್ರಯೋಜನಗಳು ಹಲವು!

ಉಪವಾಸ ಯಾಕೆ?

ನೇಪಾಳದ ಮೃಗಾಲಯದಲ್ಲಿ ಹುಲಿಗಳನ್ನು ಉದ್ದೇಶಪೂರ್ವಕವಾಗಿ ವಾರದಲ್ಲಿ ಒಂದು ದಿನ ಉಪವಾಸ ಇರುವಂತೆ ಮಾಡಲಾಗುತ್ತದೆ. ಯಾಕೆಂದರೆ ಇದು ಅವುಗಳ ಅರೋಗ್ಯಕ್ಕಾಗಿ.

ಏನಾಗಿದೆ?

ಈ ಕುರಿತು ಮಾಹಿತಿ ನೀಡಿರುವ ಮೃಗಾಲಯದ ಮಾಹಿತಿ ಅಧಿಕಾರಿ ಗಣೇಶ್ ಕೊಯಿರಾಲಾ, ಹುಲಿಗಳ ಆರೋಗ್ಯವನ್ನು ಸುಧಾರಿಸುವ ಸಲುವಾಗಿ ಪ್ರತಿ ಶನಿವಾರ ಉಪವಾಸ ಇರಿಸಲಾಗುತ್ತದೆ. ಈ ಸಂದರ್ಭದಲ್ಲಿ ಅವುಗಳಿಂದ ಯಾವುದೇ ಪ್ರಾಣಿಗಳಿಗೂ ತೊಂದರೆಯಾಗುವುದಿಲ್ಲ. ಹುಲಿಗಳನ್ನು ಉಪವಾಸಕ್ಕೆ ಹಾಕಲು ಮುಖ್ಯ ಕಾರಣ ತೂಕ ಹೆಚ್ಚಳ ಸಮಸ್ಯೆ. ಹೀಗಾಗಿ ಅವುಗಳನ್ನು ಒಂದು ದಿನ ಉಪವಾಸವಿಟ್ಟು ಅವುಗಳ ಜೀರ್ಣಕ್ರಿಯೆ ಚೆನ್ನಾಗಿ ಇರುವಂತೆ ನೋಡಿಕೊಳ್ಳಲಾಗುತ್ತದೆ ಎನ್ನುತ್ತಾರೆ.

ಎಷ್ಟು ಆಹಾರ ಸೇವಿಸುತ್ತದೆ?

ಮೃಗಾಲಯದಲ್ಲಿ ಹೆಣ್ಣು ಹುಲಿಗಳಿಗೆ ಐದು ಕೆ.ಜಿ ಎಮ್ಮೆ ಮಾಂಸ ಮತ್ತು ಗಂಡು ಹುಲಿಗಳು ದಿನಕ್ಕೆ 6 ಕೆ.ಜಿ ಮಾಂಸವನ್ನು ತಿನ್ನುತ್ತವೆ. ಆದರೆ ಶನಿವಾರದಂದು ಅವುಗಳ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುವ ಸಲುವಾಗಿ ಮಾಂಸವನ್ನು ತಿನ್ನುವುದಿಲ್ಲ.

ಯಾವ ಸಮಸ್ಯೆ ?

ಮೃಗಾಲಯದ ಹುಲಿಗಳು ಇತ್ತೀಚಿಗೆ ಸ್ಥೂಲಕಾಯ ಸಮಸ್ಯೆಗಳನ್ನು ಎದುರಿಸಿವೆ. ಇದಕ್ಕಾಗಿ ಔಷಧವನ್ನು ಅವಲಂಬಿಸುವುದು ಅವುಗಳ ಅರೋಗ್ಯ ದೃಷ್ಟಿಯಿಂದ ಒಳ್ಳೆಯದಲ್ಲ. ಹೀಗಾಗಿ ಒಂದು ದಿನ ಉಪವಾಸ ಮಾಡಿಸಿ ಅವುಗಳ ಅರೋಗ್ಯ ರಕ್ಷಣೆ ಮಾಡಲಾಗುತ್ತಿದೆ. ಇದು ಅವುಗಳ ಆರೋಗ್ಯವನ್ನು ನಿರ್ವಹಿಸಲು ಸುಲಭವಾದ ಮಾರ್ಗ. ಇದು ಅವುಗಳ ದೀರ್ಘಾವಧಿಯ ಮೇಲೆ ಪರಿಣಾಮ ಬೀರುತ್ತದೆ ಎನ್ನಲಾಗುತ್ತಿದೆ. ಯಾಕೆಂದರೆ ಮಾಂಸಾಹಾರಿ ಪ್ರಾಣಿಗಳು ಒಂದು ದಿನದ ಉಪವಾಸ ಮಾಡುವಾಗ ಅದು ಅವರ ಆರೋಗ್ಯದ ಮೇಲೆ ಗಮನಾರ್ಹವಾದ ಧನಾತ್ಮಕ ಪರಿಣಾಮ ಬಿರುವುದಾಗಿ ತಜ್ಞರು ಗಮನಿಸಿದ್ದಾರೆ.

ಆಹಾರ ಹೇಗಿರುತ್ತದೆ ?

ಸಾಮಾನ್ಯವಾಗಿ ಹುಲಿಗಳು ಗೆದ್ದಲುಗಳಂತಹ ಸಣ್ಣ ಕೀಟಗಳಿಂದ ಹಿಡಿದು ದೊಡ್ಡ ಆನೆ, ಕರುಗಳನ್ನೂ ಸೇವಿಸುತ್ತದೆ. ಜಿಂಕೆ, ಹಂದಿ, ಹಸು, ಕುದುರೆ, ಎಮ್ಮೆ ಮತ್ತು ಮೇಕೆಗಳಂತಹ ಪ್ರಾಣಿಗಳನ್ನು ಅವು ಬೇಟೆಯಾಡಿ ತಿನ್ನುತ್ತವೆ. ಸಾಮಾನ್ಯವಾಗಿ ಅವುಗಳ ಆಹಾರ ಕನಿಷ್ಠ 20 ಕೆ.ಜಿ. (45 ಪೌಂಡ್) ನಷ್ಟಿರುತ್ತದೆ.
ನೇಪಾಳದ ಕೇಂದ್ರ ಮೃಗಾಲಯ

ನೇಪಾಳದ ಕೇಂದ್ರ ಮೃಗಾಲಯವು ಜವಾಲಾಖೇಲ್‌ನ ಹತ್ತಿರದಲ್ಲಿದೆ. ಇಲ್ಲಿ 109 ವಿಭಿನ್ನ ಜಾತಿಗಳ 969 ಪ್ರಾಣಿಗಳ ಆವಾಸಸ್ಥಾನವಾಗಿದೆ. ಪ್ರಸ್ತುತ ನ್ಯಾಷನಲ್ ಟ್ರಸ್ಟ್ ಫಾರ್ ನೇಚರ್ ಕನ್ಸರ್ವೇಶನ್ (NTNC) ನಿಂದ ನಿರ್ವಹಿಸಲ್ಪಡುತ್ತಿದೆ. 15 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಈ ಮೃಗಾಲಯವು ಮೊದಲು ಖಾಸಗಿ ಸಂಸ್ಥೆಯಿಂದ ನಡೆಸಲ್ಪಡುತ್ತಿತ್ತು. 1956 ರಲ್ಲಿ ಇದನ್ನು ಸಾರ್ವಜನಿಕರಿಗಾಗಿ ತೆರೆಯಲಾಯಿತು.

Continue Reading

ಪರಿಸರ

Longest Rivers: ಗಂಗೆಯಿಂದ ತಪತಿವರೆಗೆ ಅತಿ‌ ಉದ್ದದ ಟಾಪ್ 10 ನದಿಗಳಿವು; ಕಾವೇರಿ ನದಿಗೆ ಎಷ್ಟನೇ ಸ್ಥಾನ?

Longest Rivers: ಭಾರತವು ವೈವಿಧ್ಯಮಯ ಭೂದೃಶ್ಯಗಳನ್ನು ಹೊಂದಿರುವ ಭೂಮಿಯಾಗಿದ್ದು ನದಿಗಳ ದೊಡ್ಡ ಜಾಲವು ಇಲ್ಲಿದೆ. ದೇಶದ ಹಲವಾರು ನದಿಗಳು ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿವೆ . ಜೀವನವನ್ನು ಉಳಿಸಿಕೊಳ್ಳುವಲ್ಲಿ, ಕೃಷಿಯನ್ನು ಪೋಷಿಸುವಲ್ಲಿ ಮತ್ತು ನಾಗರಿಕತೆಗಳನ್ನು ಬೆಳೆಸುವಲ್ಲಿ ಇವುಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತಿವೆ. ಅಂತಹ ಭಾರತದ 10 ಅತೀ ಉದ್ದದ ನದಿಗಳ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ.

VISTARANEWS.COM


on

By

Longest Rivers
Koo

ಹಳ್ಳಿಯಿಂದ ಪಟ್ಟಣದವರೆಗೂ ನದಿಗಳು ಜೀವನಾಡಿಯಾಗಿರುತ್ತದೆ. ನದಿ ಇಲ್ಲದ ಊರೆಂದರೆ ಅದು ಜೀವ ಇಲ್ಲದ ದೇಹದಂತೆಯೇ ಸರಿ. ಒಂದು ರೀತಿಯಲ್ಲಿ ಭಾರತೀಯರು (indians) ಅದೃಷ್ಟವಂತರು. ಇಲ್ಲಿ ಸಾಕಷ್ಟು ನದಿಗಳಿವೆ. ಅದರಲ್ಲೂ ಬಹುತೇಕ ಭೂಪ್ರದೇಶಗಳಿಗೆ ನೀರುಣಿಸುವ ಈ ನದಿಗಳು ವಿಶಾಲವಾದ (Longest Rivers) ಪ್ರದೇಶವನ್ನು ವ್ಯಾಪಿಸಿಕೊಂಡು ಕೃಷಿಯೊಂದಿಗೆ ನಾಗರಿಕತೆಗಳನ್ನು ಪೋಷಿಸುವ ಪಾತ್ರ ವಹಿಸುತ್ತಿದೆ.

ಭಾರತವು ವೈವಿಧ್ಯಮಯ ಭೂದೃಶ್ಯಗಳನ್ನು ಹೊಂದಿರುವ ಭೂಮಿಯಾಗಿದ್ದು ನದಿಗಳ ದೊಡ್ಡ ಜಾಲವು ಇಲ್ಲಿದೆ. ದೇಶದ ಹಲವಾರು ನದಿಗಳು ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿವೆ . ಜೀವನವನ್ನು ಉಳಿಸಿಕೊಳ್ಳುವಲ್ಲಿ, ಕೃಷಿಯನ್ನು ಪೋಷಿಸುವಲ್ಲಿ ಮತ್ತು ನಾಗರಿಕತೆಗಳನ್ನು ಬೆಳೆಸುವಲ್ಲಿ ಇವುಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತಿವೆ.

200ಕ್ಕೂ ಹೆಚ್ಚು ನದಿಗಳು ಭಾರತದ ವಿಶಾಲ ಭೂದೃಶ್ಯವನ್ನು ದಾಟಿ ಹರಿಯುತ್ತವೆ. ಇದರಲ್ಲಿ ಹೆಚ್ಚಿನ ನದಿಗಳು ಅರಾವಳಿ, ಕಾರಕೋರಂ ಮತ್ತು ಹಿಮಾಲಯದಲ್ಲಿ ಹುಟ್ಟಿ ತನ್ನದೇ ದಿಕ್ಕಿನಲ್ಲಿ ಸಾಗಿ ಸಮುದ್ರವನ್ನು ಸೇರುತ್ತದೆ. ಹೆಚ್ಚಿನ ನದಿಗಳು ದೇಶದ ಪಶ್ಚಿಮ ಭಾಗದಲ್ಲಿ ನೆಲೆಗೊಂಡಿವೆ. ದೇಶದಲ್ಲಿ ಅತೀ ಉದ್ದದ 10 ಪ್ರಮುಖ ನದಿಗಳಿದ್ದು, ಅವುಗಳ ವಿಶೇಷತೆಗಳು ಏನು ಗೊತ್ತೇ ?

ಇದನ್ನೂ ಓದಿ: Rainfall Expect: ನಕ್ಷತ್ರಗಳ ಪ್ರಕಾರ ಈ ವರ್ಷ ಯಾವಾಗ ಮಳೆ ಬರಬಹುದು? ಇಲ್ಲಿದೆ ಪಕ್ಕಾ ಲೆಕ್ಕಾಚಾರ!

ಗಂಗಾ (ganga)

ಉತ್ತರಾಖಂಡದ ಗಂಗೋತ್ರಿ ಹಿಮನದಿಯಿಂದ ಹುಟ್ಟುವ ಗಂಗಾನದಿಯು ಭಾರತದ ಅತೀ ಉದ್ದದ ನದಿಯಾಗಿದೆ. ಇದು ಉತ್ತರಾಖಂಡ, ಉತ್ತರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಹಲವಾರು ರಾಜ್ಯಗಳ ಮೂಲಕ ಹಾದು ಬಂಗಾಳಕೊಲ್ಲಿಯನ್ನು ಸೇರುತ್ತದೆ. ಇದರ ಉದ್ದ ಸುಮಾರು 2,525 ಕಿಲೋಮೀಟರ್. ಇದಕ್ಕೆ ಬಾಂಗ್ಲಾದೇಶದಲ್ಲಿ ಪದ್ಮಾ ನದಿ ಎಂದೂ ಕರೆಯುತ್ತಾರೆ.

Longest rivers


ಗೋದಾವರಿ (Godavari)

ಗಂಗಾ ನದಿಯ ಅನಂತರ ಭಾರತದ ಎರಡನೇ ಅತೀ ದೊಡ್ಡ ನದಿ ಗೋದಾವರಿ. ಇದರ ಉದ್ದ ಸುಮಾರು 1,465 ಕಿಲೋಮೀಟರ್. ಮಹಾರಾಷ್ಟ್ರದ ತ್ರಯಂಬಕ್ ನಿಂದ ಹುಟ್ಟಿ ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರಪ್ರದೇಶದ ಮೂಲಕ ಬಂಗಾಳಕೊಲ್ಲಿಯನ್ನು ಸೇರುತ್ತದೆ. ಗೋದಾವರಿಯು ಪ್ರವರ, ಮಂಜೀರ, ಪೆಂಗಂಗ, ವಾರ್ಧಾ, ಇಂದ್ರಾವತಿ, ಶಬರಿ ಮತ್ತು ಇತರ ಕೆಲವು ಉಪನದಿಗಳನ್ನು ಹೊಂದಿದೆ.

ಕೃಷ್ಣ (Krishna)

ಭಾರತದ ಮೂರನೇ ಅತೀ ದೊಡ್ಡ ನದಿ ಕೃಷ್ಣ. ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಸುಮಾರು 1,400 ಕಿಲೋ ಮೀಟರ್ ದೂರದವರೆಗೆ ಹರಿದು ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರಪ್ರದೇಶದ ಮೂಲಕ ಬಂಗಾಳ ಕೊಲ್ಲಿಗೆ ಸೇರುತ್ತದೆ, ತುಂಗಭದ್ರಾ, ಭೀಮಾ, ಘಟಪ್ರಭಾ, ಮಲಪ್ರಭಾ ಮತ್ತು ಮೂಸಿ ನದಿಗಳು ಇದರ ಉಪನದಿಗಳಾಗಿದೆ. ಇದರಲ್ಲಿ ಕರ್ನಾಟಕದಲ್ಲಿ ಹುಟ್ಟುವ ತುಂಗಭದ್ರಾ ನದಿಯು ಅದರ ದೊಡ್ಡ ಉಪನದಿಯಾಗಿದೆ.

ಯಮುನಾ (yamuna)

ಭಾರತದ ನಾಲ್ಕನೇ ದೊಡ್ಡ ನದಿ ಸುಮಾರು 1,376 ಕಿಲೋ ಮೀಟರ್ ದೂರದವರೆಗೆ ಹರಿಯುತ್ತದೆ. ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಯಮುನೋತ್ರಿ ಹಿಮನದಿಗಳಿಂದ ಹುಟ್ಟುವ ಇದು ಗಂಗೆಯ ಉಪನದಿ. ಉತ್ತರಪ್ರದೇಶದ ಅಲಹಾಬಾದ್ ನ ಪ್ರಯಾಗರಾಜ್ ನಲ್ಲಿ ಗಂಗಾ ನದಿಯೊಂದಿಗೆ ವಿಲೀನಗೊಳ್ಳುವ ಮೊದಲು ಹಿಮಾಚಲ ಪ್ರದೇಶ, ಹರಿಯಾಣ, ದೆಹಲಿ ಮತ್ತು ಉತ್ತರ ಪ್ರದೇಶಕ್ಕೆ ನೀರುಣಿಸುತ್ತದೆ. ಗಂಗಾ-ಯಮುನಾ ಸಂಗಮದಿಂದಾಗಿ ಪ್ರಯಾಗರಾಜ್ ಅನ್ನು ಸಂಗಮ್ ನಗರಿ ಎಂದು ಕರೆಯುತ್ತಾರೆ.


ನರ್ಮದಾ (narmada)

ಭಾರತದ ಐದನೇ ದೊಡ್ಡ ನದಿಸುಮಾರು 1,312 ಕಿಲೋ ಮೀಟರ್‌ ದೂರ ಸಾಗುತ್ತದೆ. ಮಧ್ಯಪ್ರದೇಶದ ಅಮರಕಂಟಕ್ ಪ್ರಸ್ಥಭೂಮಿಯಲ್ಲಿ ಹುಟ್ಟಿ ಅರಬ್ಬೀ ಸಮುದ್ರ ಸೇರುತ್ತದೆ. ಇದಕ್ಕೂ ಮೊದಲು ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಿಗೆ ನೀರುಣಿಸುತ್ತದೆ.
ತಾವಾ, ಬರ್ನಾ, ಶಕ್ಕರ್ ಮತ್ತು ಹಿರಾನ್ ನರ್ಮದೆಯ ಪ್ರಮುಖ ಉಪನದಿಗಳಾಗಿವೆ. ನೀರಾವರಿ, ಜಲವಿದ್ಯುತ್ ಉತ್ಪಾದನೆಗಾಗಿ ಈ ನದಿಗೆ ಹಲವಾರು ಅಣೆಕಟ್ಟುಗಳು ಮತ್ತು ಜಲಾಶಯಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ ಗುಜರಾತ್ ನ ಸುಪ್ರಸಿದ್ಧ ಸರ್ದಾರ್ ಸರೋವರ ಅಣೆಕಟ್ಟು ಕೂಡ ಒಂದು.

ಸಿಂಧು (Indus)

ಪಾಕಿಸ್ತಾನದ ಮೂಲಕ ಹರಿಯುವ ಸಿಂಧೂ ಭಾರತದ ಪಶ್ಚಿಮ ಪ್ರದೇಶಗಳಿಗೆ ತಲುಪುತ್ತದೆ. ಇದು ಟಿಬೆಟಿಯನ್ ಪ್ರಸ್ಥಭೂಮಿಯ ಮಾನಸರೋವರದಿಂದ ಹುಟ್ಟುತ್ತದೆ. ಪಾಕಿಸ್ತಾನ ತಲುಪುವ ಮೊದಲು ಲಡಾಖ್ ಮತ್ತು ಜಮ್ಮು ಮತ್ತು ಕಾಶ್ಮೀರದ ಕೆಲವು ಭಾಗಗಳಲ್ಲಿ ಹರಿದು ಅರಬ್ಬೀ ಸಮುದ್ರವನ್ನು ಸೇರುತ್ತದೆ. ಇದರ ಉದ್ದ ಸುಮಾರು 3,180 ಕಿಲೋಮೀಟರ್.

ಬ್ರಹ್ಮಪುತ್ರ (Brahmaputra)

ಹಿಮಾಲಯದ ಕೈಲಾಶ್ ಪರ್ವತದ ಬಳಿ ಚೀನಾದ ಚೆಮಯುಂಗ್‌ಡಂಗ್ ಹಿಮನದಿಯಿಂದ ಹುಟ್ಟುವ ಬ್ರಹ್ಮಪುತ್ರ ನದಿಯ ಉದ್ದ ಸುಮಾರು 2,900 ಕಿಲೋಮೀಟರ್‌. ಆದರೆ ಇದು ಭಾರತದ ಕೇವಲ 918 ಕಿಲೋ ಮೀಟರ್ ಪ್ರದೇಶಕ್ಕೆ ನೀರುಣಿಸುತ್ತದೆ. ಆಂಧ್ರಪ್ರದೇಶದ ಮೂಲಕ ಭಾರತವನ್ನು ಪ್ರವೇಶಿಸುವ ಇದನ್ನು ಸಿಯಾಂಗ್ ನದಿ ಎಂದು ಕರೆಯಲಾಗುತ್ತದೆ. ಅಸ್ಸಾಂ ಮತ್ತು ಬಾಂಗ್ಲಾದೇಶದ ಮೂಲಕ ಹರಿದು ಗಂಗಾ ಮತ್ತು ಮೇಘನಾ ನದಿಗಳೊಂದಿಗೆ ವಿಲೀನಗೊಂಡು ಬಂಗಾಳಕೊಲ್ಲಿ ಸೇರುತ್ತದೆ. ಇದಕ್ಕೂ ಮೊದಲು ಇದು ವಿಶ್ವದ ಅತೀ ದೊಡ್ಡ ಜೌಗು ಪ್ರದೇಶವಾದ ಸುಂದರಬನ್ಸ್ ಡೆಲ್ಟಾವನ್ನು ರೂಪಿಸುತ್ತದೆ.

ಮಹಾನದಿ (mahanadi)

858 ಕಿಲೋಮೀಟರ್ ಉದ್ದದ ಭಾರತದ ಎಂಟನೇ ದೊಡ್ಡ ನದಿಯಾಗಿದೆ. ಮಹಾನದಿಯು ಛತ್ತೀಸ್‌ಗಢದ ರಾಯ್‌ಪುರ ಜಿಲ್ಲೆಯಲ್ಲಿ ಹುಟ್ಟಿ ಛತ್ತೀಸ್‌ಗಢ ಮತ್ತು ಒಡಿಶಾ ರಾಜ್ಯಗಳ ಮೂಲಕ ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಸಿಯೋನಾಥ್, ಜೋಂಕ್, ಹಾಸ್ಡಿಯೊ, ಓಂಗ್ ಮತ್ತು ಟೆಲ್ ಇದರ ಉಪನದಿಗಳು. ಈ ನದಿಯ ನೀರು ವ್ಯಾಪಕವಾಗಿ ನೀರಾವರಿಗೆ ಬಳಸಲಾಗುತ್ತದೆ, ಛತ್ತೀಸ್ಗಢ ಮತ್ತು ಒಡಿಶಾದ ಕೃಷಿ ಚಟುವಟಿಕೆಗೆ ಇದು ಜೀವನಾಡಿಯಾಗಿದೆ.

Longest rivers


ಕಾವೇರಿ (Kaveri)

ಭಾರತದ ಒಂಬತ್ತನೇ ದೊಡ್ಡ ನದಿ. ಕರ್ನಾಟಕದ ಪಶ್ಚಿಮ ಘಟ್ಟಗಳ ಬ್ರಹ್ಮಗಿರಿ ಬೆಟ್ಟಗಳಲ್ಲಿ ಹುಟ್ಟಿ ತಮಿಳುನಾಡು ಮೂಲಕ ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಸರಿಸುಮಾರು 800 ಕಿಲೋ ಮೀಟರ್‌ ದೂರದವರೆಗೆ ಹರಿಯುವ ಈ ನದಿಗೆ ಹೇಮಾವತಿ, ಕಬಿನಿ, ಅರ್ಕಾವತಿ, ಶಿಂಷಾ ಮತ್ತು ಅಮರಾವತಿ ಉಪನದಿಗಳಾಗಿವೆ.

ತಪತಿ (Tapti)

ಭಾರತದ ಹತ್ತನೇ ದೊಡ್ಡ ನದಿಯಾಗಿರುವ ಇದು ಮಧ್ಯಪ್ರದೇಶದ ಸಾತ್ಪುರ ಶ್ರೇಣಿಯಿಂದ ಹುಟ್ಟುತ್ತದೆ. ಮಹಾರಾಷ್ಟ್ರ ಮತ್ತು ಗುಜರಾತ್ ಮೂಲಕ ಸುಮಾರು 724 ಕಿಲೋಮೀಟರ್ ದೂರ ಹರಿದು ಅರಬ್ಬಿ ಸಮುದ್ರವನ್ನು ಸೇರುತ್ತದೆ.

Continue Reading
Advertisement
Dina bhavishya
ಭವಿಷ್ಯ8 mins ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Steet Food
ಆಹಾರ/ಅಡುಗೆ5 hours ago

ವಿಸ್ತಾರ ಸಂಪಾದಕೀಯ: ಸಾರ್ವಜನಿಕ ಆಹಾರದಲ್ಲಿ ಆರೋಗ್ಯ ಕಾಳಜಿ ಪ್ರಮುಖವಾಗಿರಲಿ

IPL 2024
ಪ್ರಮುಖ ಸುದ್ದಿ5 hours ago

IPL 2024 : ಪಂಜಾಬ್​ ತಂಡಕ್ಕೆ ವಿರೋಚಿತ 9 ರನ್ ಸೋಲು, ಜಯದ ಹಳಿಗೆ ಮರಳಿದ ಮುಂಬೈ

Physical Abuse
ದೇಶ6 hours ago

Physical Abuse : ಸ್ಪೇನ್​ನ ಮಹಿಳೆ ಮೇಲೆ ಜಾರ್ಖಂಡ್​ನಲ್ಲಿ ಗ್ಯಾಂಗ್​ ರೇಪ್​; ತಿಂಗಳ ಬಳಿಕ ಪ್ರಕರಣ ಬಯಲು

Amanatullah Khan
ದೇಶ6 hours ago

Amanatullah Khan: ಆಪ್‌ಗೆ ಮತ್ತಷ್ಟು ಸಂಕಷ್ಟ; ಶಾಸಕ ಅಮಾನತುಲ್ಲಾ ಖಾನ್ ಅರೆಸ್ಟ್‌

Moral policing
ಪ್ರಮುಖ ಸುದ್ದಿ6 hours ago

Moral policing : ನೈತಿಕ ಪೊಲೀಸ್​ಗಿರಿ; ಮುಸ್ಲಿಮರ ಗುಂಪಿನಿಂದ ಹಿಂದೂ ಯುವಕನ ಮೇಲೆ ಹಲ್ಲೆ

Rishab Shetty
ಸಿನಿಮಾ7 hours ago

Rishab Shetty: ರಿಷಬ್‌ ಮೀಟ್ಸ್‌ ಮೋಹನ್‌ಲಾಲ್‌; ʼಕಾಂತಾರʼ ಪ್ರೀಕ್ವೆಲ್​ನಲ್ಲಿ ಅಭಿನಯಿಸುತ್ತಾರಾ ಮಾಲಿವುಡ್‌ ಸೂಪರ್‌ ಸ್ಟಾರ್‌?

lok Sabha Election
ಪ್ರಮುಖ ಸುದ್ದಿ7 hours ago

Lok Sabha Election : ಕಾಂಗ್ರೆಸ್​​ಗೆ ಹಿನ್ನಡೆಯಾದರೆ ಸಿದ್ದರಾಮಯ್ಯ ಸ್ಥಾನಕ್ಕೆಕಂಟಕ​​​; ಚರ್ಚೆ ಹುಟ್ಟು ಹಾಕಿದ ಬೈರತಿ ಸುರೇಶ್​ ಹೇಳಿಕೆ

Hubli Murder Case
ಪ್ರಮುಖ ಸುದ್ದಿ7 hours ago

Hubli murder case : ನೇಹಾಳನ್ನು ಕೊಲ್ಲಲೆಂದೇ ಕಾಲೇಜಿಗೆ ಸಜ್ಜಾಗಿ ಬಂದಿದ್ದ ಶಿಕ್ಷಕರ ಪುತ್ರ ಫಯಾಜ್!

congress workers meeting in kudligi
ವಿಜಯನಗರ7 hours ago

Lok Sabha Election 2024: ಬಳ್ಳಾರಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಈ. ತುಕಾರಾಂ ಗೆಲ್ಲಿಸಲು ಸಂತೋಷ್‌ ಲಾಡ್‌ ಮನವಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina bhavishya
ಭವಿಷ್ಯ8 mins ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ2 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ3 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20244 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20244 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ5 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ6 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ7 days ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ1 week ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

ಟ್ರೆಂಡಿಂಗ್‌