Mahalaya 2022 | ಮಹಾಲಯದ ವಿಶೇಷವೇನು? ಶ್ರಾದ್ಧಕ್ಕೆ ಪ್ರಶಸ್ತವಾದ ದಿನ ಯಾವುದು? - Vistara News

ಧಾರ್ಮಿಕ

Mahalaya 2022 | ಮಹಾಲಯದ ವಿಶೇಷವೇನು? ಶ್ರಾದ್ಧಕ್ಕೆ ಪ್ರಶಸ್ತವಾದ ದಿನ ಯಾವುದು?

ಈಗ ಪಿತೃಪಕ್ಷ (Pitru Paksha) ನಡೆಯುತ್ತಿದ್ದು, ಮಹಾಲಯ ಅಮಾವಾಸ್ಯೆಯೂ (Mahalaya 2022) ಬರುತ್ತಿದೆ. ಈ ಸಂದರ್ಭದಲ್ಲಿ ನಡೆಸಬೇಕಿರುವ ಪಿತೃಕಾರ್ಯಗಳ ಮಹತ್ವವನ್ನು ತಿಳಿಸುವ ಲೇಖನ ಮಾಲಿಕೆಯ ಮೊದಲ ಭಾಗ ಇಲ್ಲಿದೆ.

VISTARANEWS.COM


on

Mahalaya 2022
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
Mahalaya 2022

ಶ್ರೀ ಶ್ರೀ ರಂಗಪ್ರಿಯ ಶ್ರೀ ಶ್ರೀಃ
ಮಹಾಲಯ (Mahalaya 2022) ಎಂಬುದು ಭಾರತಾದ್ಯಂತ ಆಚರಿಸಲ್ಪಡುವ ಹಬ್ಬ. ಭಾರತೀಯರೆಲ್ಲರೂ ಕೂಡ ಆಚರಿಸುವ ಒಂದು ಪುಣ್ಯವಾದ ಪರ್ವ. ಎಲ್ಲ ಜನಾಂಗದವರೂ ಎಲ್ಲ ಗೃಹಸ್ಥರೂ ಕೂಡ ಪಿತೃಗಳನ್ನು ನೆನೆದು ಕೃತಜ್ಞತೆಯಿಂದ ಆಚರಿಸುವ ಹಬ್ಬದ ಕಾಲವಾಗಿರುವುದರಿಂದ ಮಹಾಲಯಪರ್ವ ಅತಿ ಶ್ರೇಷ್ಠವಾದದ್ದು. ಆಚರಣೆಯ ಕ್ರಮದಲ್ಲಿ ವ್ಯತ್ಯಾಸವಿರಬಹುದು. ಪಿತೃದೇವತೆಗಳ ಪೂಜೆಯನ್ನು ವಿಶೇಷವಾಗಿ ಈ ಸಮಯದಲ್ಲಿ ಮಾಡುತ್ತಾರೆ. ಮತ್ತು ಪಿತೃದೇವತೆಗಳಿಗೆ ಪ್ರಿಯವಾಗಿರುವ ಪದಾರ್ಥಗಳು, ಎಂದರೆ, ಜೇನುತುಪ್ಪ, ಎಳ್ಳು, ತಣ್ಣಗಿರುವ ನೀರು, ಇವುಗಳಿಂದ ತರ್ಪಣವನ್ನು ನೀಡುತ್ತಾರೆ.

ಈ ಹಬ್ಬದ ವಿಶೇಷತೆ, ಮಹತ್ವವನ್ನು ಇಲ್ಲಿ ಪ್ರಶ್ನೋತ್ತರ ಮಾದರಿಯಲ್ಲಿ ತಿಳಿಸಿಕೊಡಲಾಗಿದೆ.

ಮಹಾಲಯವನ್ನು ಎಂದು ಆಚರಿಸಬೇಕು?
ಉತ್ತರ: ಭಾದ್ರಪದ ಮಾಸದ ಕೃಷ್ಣ ಪಕ್ಷದ ೧೫ ದಿವಸಗಳನ್ನು ಮಹಾಲಯ (Mahalaya 2022) ಪಕ್ಷ ಎಂದು ಕರೆಯುವ ರೂಢಿ ಇದೆ. ಕೆಲವು ಕಲ್ಪಗಳಲ್ಲಿ ೧೬ ದಿವಸಗಳನ್ನೂ ಮಹಾಲಯ ಪಕ್ಷ ಎಂದು ಹೇಳುತ್ತಾರೆ. ಅದರ ಮುಂದಿನ ತಿಂಗಳು ಮೊದಲನೆಯ ದಿವಸದಲ್ಲಿ ಚಂದ್ರನಲ್ಲಿ ಎರಡು ಕಲೆಗಳು ಮಾತ್ರ ಇರುವುದರಿಂದ ಅದನ್ನೂ ಇದನ್ನೂ ಸೇರಿಸಿಕೊಂಡು ೧೬ ದಿವಸ ಮಹಾಲಯ ಪಕ್ಷ ಎನ್ನುತ್ತಾರೆ. ಎಂದರೆ, ೧೫ ದಿವಸ ಅಥವಾ ೧೬ ದಿವಸದ ಕೃಷ್ಣ ಪಕ್ಷದ ಕಾಲವನ್ನು ಮಹಾಲಯ ಪಕ್ಷ ಎಂಬುದಾಗಿ ಕರೆಯುತ್ತಾರೆ. ಇದು ಪ್ರಾಸಂಗಿಕವಾದ ವಿಷಯ ಮಾತ್ರವಲ್ಲದೆ ನಮ್ಮ ದೇಶದಲ್ಲಿ ಎಲ್ಲಾ ಭಾಗಗಳಲ್ಲಿಯೂ ಕೂಡ ಪುರಾತನವಾಗಿರುವ, ಸನಾತನ ಸಂಸ್ಕಾರಕ್ಕೆ ಒಳಪಟ್ಟಿರುವ ಎಲ್ಲರೂ ಕೂಡ ಭಕ್ತಿ ಶ್ರದ್ಧೆಯಿಂದ ಆಚರಿಸತಕ್ಕಂತಹ ಒಂದು ಕರ್ಮಕ್ಕೆ ಅತ್ಯಂತ ಪ್ರಶಸ್ತವಾದ ಕಾಲ ಮಹಾಲಯ ಪಕ್ಷಕಾಲ.

ಈ ಕಾಲವನ್ನು ಹಳ್ಳಿ ೧೮ ಜಾತಿಗಳೂ ಕೂಡ ಅತ್ಯಂತ ಕೃತಜ್ಞತೆಯಿಂದ ಪಿತೃಪೂಜೆಗೋಸ್ಕರವಾಗಿ ಉಪಯೋಗಿಸಿಕೊಳ್ಳುತ್ತಾರೆ. ಈ ಭಾದ್ರಪದಮಾಸದ ಜೊತೆಗೆ ಸೂರ್ಯನು ಕನ್ಯಾರಾಶಿಗೆ ಪ್ರವೇಶ ಮಾಡುತ್ತಾನೆ. ಆದ್ದರಿಂದ ಕನ್ಯಾ ಮಾಸವೆಂದು ಕರೆಯುತ್ತಾರೆ. ’ಕನ್ಯಾ ಗತೇ ಸವಿತರಿ’ ಸೂರ್ಯನು ಕನ್ಯಾರಾಶಿಗೆ ಪ್ರವೇಶ ಮಾಡಿದಾಗ ಕನ್ಯಾ ಮಾಸವೂ ಸೇರಿಕೊಂಡರೆ ಇನ್ನೂ ಪ್ರಶಸ್ತ ಇದು. ಕನ್ಯಾಮಾಸ ಬರದೇಹೋದರೂ ಭಾದ್ರಪದಮಾಸ ಕೃಷ್ಣಪಕ್ಷ (ಅಪರ ಪಕ್ಷ) ಮಹಾಲಯಕ್ಕೆ ಪ್ರಶಸ್ತವಾದದ್ದು. ಸೂರ್ಯನು ಕನ್ಯಾರಾಶಿಯಲ್ಲಿ ಸೇರಿಕೊಂಡಾಗ ಇನ್ನೂ ವಿಶೇಷ ಪ್ರಾಶಸ್ತ್ಯ ಉಂಟು ಅದಕ್ಕೆ. “ನಭಸ್ಯಸ್ಸ ಅಪರೇ ಪುಣ್ಯಃ ಪುಣ್ಯಃ ಕನ್ಯಾಗತೋ ರವಿಃʼʼ ನಭಸ್ಯ ಎಂದರೆ ಭಾದ್ರಪದ ಮಾಸ. ಅದರಲ್ಲಿ, ಅಪರಪಕ್ಷ ಪುಣ್ಯವಾದದ್ದು ಮತ್ತು ಸೂರ್ಯ ಕನ್ಯಾರಾಶಿ ಪ್ರವೇಶಮಾಡಿದ್ದೂ ಕೂಡಿಬಂದರೆ ಅದು ಪುಣ್ಯತಮವಾದದ್ದು ಎಂಬುದಾಗಿ ಶಾಸ್ತ್ರಗಳಲ್ಲೂ ಪ್ರಶಂಸೆ ಮಾಡಿದ್ದಾರೆ, ಈ ಪುಣ್ಯಕಾಲವನ್ನು.

Mahalaya 2022

“ಮಹಾಲಯ’ʼ ಪದದ ಅರ್ಥವೇನು?
ಉತ್ತರ: ಲಯ ಎಂದರೆ ಎಲ್ಲವೂ ಕೂಡ ತನ್ನ ಮೂಲದಲ್ಲಿ ಹೋಗಿ ಸೇರಿ ಕೊಂಡುಬಿಡತಕ್ಕದ್ದು. ತನ್ನ ಹಿಂದಿನ ರೂಪವನ್ನು ತೋರದೆ, ಮೂಲರೂಪದಲ್ಲಿ ಒಂದಾಗಿ ಸೇರಿಕೊಂಡುಬಿಡುವುದು. ಲಯವಾಗಿಬಿಡುವುದು. Absorb ಆಗಿಬಿಡುತ್ತದೆ ಮೂಲದಲ್ಲಿ. ಅಂತಹ ದೊಡ್ಡ absorption ಲಯ ಆಗಿಬಿಡುತ್ತದೆ ಮೂಲದಲ್ಲಿ. ಆ ಕಾರಣದಿಂದ ಮಹಾಲಯ ಎಂದು ಶಬ್ದಾರ್ಥ ಹೇಳುತ್ತದೆ. ಆದರೆ ಸಾಂಪ್ರದಾಯಿಕ ಗ್ರಂಥಗಳಲ್ಲಿ ಮಹಾಲಯಕ್ಕೆ ವಿವರಣೆ ಕೊಡುವಾಗ “ಮಹಾಂತಃ ಲೀಯಂತೇ ಅಸ್ಮಿನ್ ಇತಿ ಮಹಾಲಯಃ” ಮಹಾಂತರು ಎಂದರೆ ದೊಡ್ಡವರು, ಪಿತೃಗಳು. “ಅಸ್ಮಿನ್ ಲೀಯಂತೇ” ಎಂದರೆ ಇದರಲ್ಲಿ ಬಂದು ಸೇರಿಕೊಳ್ಳುತ್ತಾರೆ. ಇದನ್ನು ಮನೆಯಾಗಿ ಮಾಡಿಕೊಳ್ಳುತ್ತಾರೆ. ಇಲ್ಲಿ ಬಂದು ಸಂತೋಷವಾಗಿ ವಿಹರಿಸುತ್ತಾರೆ. ತಮ್ಮ ಮನೆಯಲ್ಲಿ ಹೇಗೆ ವಿಶ್ರಾಂತಿ ಪಡೆಯುತ್ತಾರೆಯೋ ಧಾರಾಳವಾಗಿ, ಹಾಗೆಯೇ ವಿಶಿಷ್ಟವಾದ ಈ ಅಪರಪಕ್ಷದಲ್ಲಿ ಇದ್ದು ಅವರು ಸುಖವನ್ನು ಅನುಭವಿಸುತ್ತಾರೆ. ಆ ಮಹಾಂತರೆಲ್ಲರೂ ಕೂಡ ಮನೆಯನ್ನಾಗಿ ಮಾಡಿಕೊಳ್ಳುವುದರಿಂದ ಇದಕ್ಕೆ ಮಹಾಲಯ. ಮಹಾತ್ಮರಾದ ಪಿತೃದೇವತೆಗಳೂ ಕೂಡ ಮನೆಯನ್ನು ಮಾಡಿಕೊಳ್ಳುವ ಜಾಗ, ಮನೆಯಲ್ಲಿ ರುವಂತೆಯೇ ಸುಖವಾಗಿರುವ ಕಾಲ ವಿಶೇಷ. ಲಯ ಎಂದರೆ ಸಂಸ್ಕೃತದಲ್ಲಿ ಮನೆ ಎಂಬ ಅರ್ಥವಾಗುತ್ತದೆ. “ವಿಷಂ ಪೀತ್ವಾ ಲಯಂ ಗತಃ’ ಈ ಮಹಾತ್ಮ ವಿಷ ಕುಡಿದು ಲಯಕ್ಕೆ ಹೋದ ಎಂದರೆ ವಿಷವನ್ನು ಕುಡಿದು ಸತ್ತು ಹೋಗಿಬಿಟ್ಟ ಎನ್ನುವ ಅರ್ಥವಲ್ಲ! ವಿಷಂ ಎಂದರೆ ಜಲ. “ಜಲಂ ಪೀತ್ವಾ ಗೃಹಂ ಗತಃʼʼ ಲಯ ಎಂದರೆ ಗೃಹ ಎನ್ನುವ ಅರ್ಥ ಇದೆ. ಆದ್ದರಿಂದ ಮಹಾಂತರು- ಪಿತೃಗಳು ಗೃಹವನ್ನಾಗಿ ಮಾಡಿಕೊಳ್ಳುವುದರಿಂದ ಮಹಾಲಯ ಎಂಬ ಹೆಸರು.

ಆದರೆ ಮೂಲತಃ ನೋಡುವ ಪಕ್ಷಕ್ಕೆ ದೊಡ್ಡ ಲಯ ಉಂಟಾಗುತ್ತದೆ ಈ ಸಮಯದಲ್ಲಿ. ಯಾವುದು ಯಾವುದರಲ್ಲಿ ಲಯ ಹೊಂದುತ್ತದೆ ಎಂದರೆ ಇಂದ್ರಿಯ, ಮನಸ್ಸು, ಬುದ್ಧಿ ಎಲ್ಲವೂ ಕೂಡ ತನ್ನ ಮೂಲದಲ್ಲಿ ಲಯ ಹೊಂದುತ್ತವೆ. ಯೋಗ ಮಾರ್ಗದಲ್ಲಿ, ಜ್ಞಾನಮಾರ್ಗದಲ್ಲಿ ಹೋಗುವಾಗ ಭೂತಶುದ್ಧಿಯು ಒದಗುವಾಗ ತತ್ತ್ವಗಳು ತಮ್ಮ ಹಿಂದಿನ ತತ್ತ್ವದಲ್ಲಿ ಹೋಗಿ ಲಯ ಹೊಂದುತ್ತವೆ. ಅದು ಯೋಗಿಗೆ ಯಾವಾಗ ಬೇಕಾದರೂ ಆಗಬಹುದು. ಕಾಲವೂ ಅದಕ್ಕೆ ಅನುಗುಣ ವಾಗಿರುವುದರಿಂದ, ಈ ಸಮಯದಲ್ಲಿ ಪ್ರಕೃತಿಯಲ್ಲಿ ಲಯವು ಸಹಜವಾಗಿ, ಸುಲಭವಾಗಿ ಆಗುವ ಕಾಲವಾದ್ದರಿಂದ ಇದನ್ನು ಬರೀ ಲಯವಲ್ಲ, ಮಹಾಲಯ ಎಂದು ಕರೆಯುತ್ತಾರೆ.

ಈ ಮನೋಲಯವಾದಾಗ ಆಗಬೇಕಾದ ಕೆಲಸವೆಂದರೆ ಪಿತೃಗಳ ಪೂಜೆ. ಈ ಪಿತೃದೇವತೆಗಳ ಪೂಜೆಯನ್ನು ವಿಶೇಷವಾಗಿ ಹೊಂದಿರುವ ಅದಕ್ಕನುಗುಣವಾಗಿ ತತ್ತ್ವಗಳು ಲಯವನ್ನು ಹೊಂದಿರತಕ್ಕಂತಹ, ಇನ್ನೂ ಒಳಗಡೆ ಪ್ರವೇಶಿಸಿದರೆ ಪಿತೃಗಳಿಗೂ ಮೂಲಭೂತವಾಗಿರುವ ಅಷ್ಟ ಪ್ರಕೃತಿಗಳು. ಅದಕ್ಕೂ ಮೂಲವಾಗಿರುವ ಹಿರಣ್ಯಗರ್ಭ. ಅದಕ್ಕೂ ಮೂಲವಾಗಿರುವ ಪರಂಜ್ಯೋತಿ. ಅಲ್ಲಿಯವರೆಗೂ ಮಹಾಲಯ ಮಾಡುವ ಸಾಧ್ಯತೆಗಳಿವೆ. ದಾರಿಯಲ್ಲಿ ಪಿತೃದೇವತೆಗಳಿಗೆ ನಮಸ್ಕರಿಸಿ, ನಮ್ಮನ್ನು ಪ್ರವೃತ್ತಿಮಾರ್ಗಕ್ಕೆ ತರಬೇಡಿ, ಇನ್ನೂ ಮೇಲಕ್ಕೆ ಕಳುಹಿಸಿಕೊಡಿ ಎಂದು ಪ್ರಾರ್ಥಿಸಿ ಪರಬ್ರಹ್ಮದವರೆಗೂ ತಲುಪುವುದಕ್ಕನುಗುಣವಾಗಿ ಲಯವಾಗುತ್ತದೆ. ಮನೋಲಯವಾಗುತ್ತದೆ. ತತ್ತ್ವದ ಲಯವಾಗುತ್ತದೆ. ಅದಕ್ಕೆ ಅನುಗುಣವಾಗಿರುವ, ಅನುಕೂಲಕರವಾಗಿರುವ ಒಂದು ಕಾಲ/ಪಕ್ಷ ಇದು ಆಗಿರುವುದರಿಂದ ಇದನ್ನು ಪಿತೃಪಕ್ಷ “ಮಹಾಲಯಪಕ್ಷ’ʼ ಎಂಬುದಾಗಿ ಕರೆಯುತ್ತಾರೆ.

ಮಹಾಲಯ ಶ್ರಾದ್ಧವು ನಿತ್ಯ ಕರ್ಮವೋ? ಕಾಮ್ಯ ಕರ್ಮವೋ?
ಉತ್ತರ: ಮಹಾಲಯ ನಿತ್ಯಕರ್ಮಗಳಿಗೆ ಸೇರಿದ್ದು. ನಿತ್ಯಕರ್ಮ ಎಂದು ಏಕೆ ಒತ್ತಿ ಹೇಳುತ್ತೇವೆ ಎಂದರೆ, ಕೆಲವರು ನಿತ್ಯಕರ್ಮ ಅಲ್ಲ ಇದು, ಕಾಮ್ಯಕರ್ಮ ಎಂದು ಹೇಳುತ್ತಾ ಕಾಮನೆ ಯಾರಿಗೆ ಇದೆಯೋ ಅವರು ಮಾಡಬೇಕು. ಇಲ್ಲದಿದ್ದರೆ ಮಾಡಬೇಕಾಗಿಲ್ಲ ಎಂದು ಹೇಳುತ್ತಾರೆ. ಅವರು ಕಾಮ್ಯಕರ್ಮ ಎಂದು ಹೇಳಲು ಕಾರಣವೇನೆಂದರೆ ಮಹಾಲಯ ತರ್ಪಣವನ್ನು ಪ್ರಥಮೆಯಲ್ಲಿ ಮಾಡಿದರೆ ಇಂತಹ ಫಲ, ದ್ವಿತೀಯೆಯಲ್ಲಿ ಮಾಡಿದರೆ ಇಂತಹ ಫಲ, ಅಮಾವಾಸ್ಯೆಯಲ್ಲಿ ಮಾಡಿದರೆ ಇಂತಹ ಫಲ ಎಂದು ಬೇರೆ ಬೇರೆ ಫಲಗಳನ್ನು ಹೇಳಿದೆ. ಆದ್ದರಿಂದ ಕಾಮ್ಯಕರ್ಮ ಎನ್ನುತ್ತಾರೆ. ಆದರೆ ಕಾಮ್ಯಕರ್ಮ ಎಂದು ಹೇಳುವ ಉದ್ದೇಶವೇನೆಂದರೆ, ಆ ಕಾಮನೆ ಇಟ್ಟುಕೊಂಡು ಮಾಡಿದರೆ ಆ ಫಲ ಸಿಗುತ್ತದೆ. ಕಾಮನೆ ಇಟ್ಟುಕೊಳ್ಳದೆ ಕೇವಲ ಭಗವತ್ಪ್ರೀತ್ಯರ್ಥವಾಗಿ ಮಾಡಿದರೆ ಪಿತೃಗಳಿಗೂ, ಪಿತೃಗಳಿಗೂ ಪಿತೃವಾಗಿರುವ ಬ್ರಹ್ಮದೇವರಿಗೂ, ಅವರಿಗೂ ಪಿತೃವಾಗಿರುವ ಪರಮಾತ್ಮನಿಗೂ ತೃಪ್ತಿಯನ್ನು ಉಂಟು ಮಾಡುತ್ತದೆ ಈ ಕರ್ಮ. ಇದು ನಿತ್ಯಕರ್ಮವೇ. ಕಾಮ್ಯಕರ್ಮವಲ್ಲ. ಕಾಮನೆಯಿಂದ ಮಾಡಿದರೆ ಮಾತ್ರ ಕಾಮ್ಯವಾಗುತ್ತದೆ.

ಕಾಮ್ಯಕರ್ಮಗಳನ್ನು ಕೂಡ ಗೃಹಸ್ಥರಾದವರು ಆಚರಿಸಿದರೆ ಅದನ್ನು ತಪ್ಪು ಎಂದು ಹೇಳಬಾರದು. ಭಗವದ್ಗೀತೆಯಲ್ಲಿ ಭಗವಂತ, ’ಧರ್ಮಾವಿರುದ್ಧೋ ಭೂತೇಷು ಕಾಮೋಸ್ಮಿ ಭರತರ್ಷಭ’ ಪ್ರಾಣಿಗಳಲ್ಲಿ ಧರ್ಮಕ್ಕೆ ವಿರುದ್ಧವಲ್ಲದೇ ಇರತಕ್ಕಂತಹ ಕರ್ಮಗಳೆಲ್ಲಾ ನಾನೇ ಆಗಿದ್ದೇನೆ. ಅದು ಪವಿತ್ರವಾದದ್ದು’ ಎಂದು ಹೇಳುತ್ತಾನೆ. “ಅವರು ಯಾವ ಕಾಮ್ಯಕರ್ಮಗಳನ್ನೂ ಮಾಡುವುದಿಲ್ಲ. ಉದಕಶಾಂತಿ ಮಾಡಿದರೆ ಬೇರೆಬೇರೆ ಸ್ತೋತ್ರ ಬರುತ್ತದೆ. ಕಾಮ್ಯ ಕಾರಣದ ಶಾಂತಿ ಮಾಡುವುದಿಲ್ಲ. ಶಾಂತಿ ಬೇಡ ಅವರಿಗೆ” ಎಂದು ಹೇಳಬಾರದು. ಹಾಗೆ ಹೇಳಿದರೆ, ಔಷಧಿಯೇ ತೆಗೆದು ಕೊಳ್ಳಬಾರದು. ಔಷಧಿ ತೆಗೆದುಕೊಳ್ಳಬೇಕಾದರೆ, ಏನು ಸಂಕಲ್ಪ ಮಾಡುತ್ತೀರಿ? ಈ ಜ್ವರ ಹೋಗಲಿ ಎಂಬ ಕಾಮನೆಯಿಂದ. ಆ ಕಾಮನೆ ಇಟ್ಟುಕೊಂಡು ಔಷಧಿ ಸೇವಿಸ ಬಾರದು ಎಂದರೆ ಎಂತಹ ಮೂರ್ಖತನ ಇದು? ಔಷಧಿ ಸೇವಿಸಿದ ಪಕ್ಷದಲ್ಲಿ ಎಂತಹ ಒಳ್ಳೆಯ ಕೆಲಸವನ್ನು ಮಾಡುತ್ತದೆ ನೋಡಿ ಅದು. ಇಂತಹ ಕಾಮ್ಯಕರ್ಮಗಳು ಭಗವಂತನಿಗೆ ಪ್ರಿಯವಾದದ್ದು ಎಂದು ಆಚಾರ್ಯರು ತತ್ತ್ವಮುಕ್ತಾಕಲಾಪದಲ್ಲಿ “ತಸ್ಮಾತ್ ನಾನಾಮರೇಜ್ಯಾ ನ ಭವತಿ ಪರಭಕ್ತ್ಯಂಗಮಿತಿ ಅಯುಕ್ತಮ್” ಎಂದು ಹೇಳಿದ್ದಾರೆ. [ಈ ನಾನಾ ದೇವತೆಗಳ ಪೂಜೆಯೂ (ಭಗತ್‌ಪ್ರೀತ್ಯರ್ಥವಾಗಿ ಮಾಡಿದಾಗ) ಪರಭಕ್ತಿಯ ಅಂಗವಾಗುವುದು ಎನ್ನುವುದು ಯುಕ್ತವೇ]. ಮತ್ತೊಂದು, ಆ ಕಾಮನೆ ಗಳನ್ನು ಪೂರೈಸುವ ದೇವತೆಗಳು ಅಥವಾ ಆ ದೇವತೆಗಳಿಗೂ ಅಂತರ್ಯಾಮಿಯಾಗಿ ಸಾಕ್ಷಾತ್ ಪರಮಾತ್ಮನೇ ವರ ಕೊಡುವುದರಿಂದ ಭಗವತ್ ಪ್ರೀತ್ಯರ್ಥವಾಗಿ ಆಚರಿಸುವ ಪಕ್ಷಕ್ಕೆ ಅದು ಮೋಕ್ಷಕ್ಕೆ ಸಹಾಯ ಮಾಡುತ್ತದೆ. ಇದು ವಾಸ್ತವವಾಗಿ ನಿತ್ಯಕರ್ಮಕ್ಕೆ ಸೇರಿದೆ. ಕಾಮ್ಯವಲ್ಲ. ಶ್ರಾದ್ಧವನ್ನು ಮಾಡುವ ಅಧಿಕಾರ ಯಾರಿಗೆ ಇದೆಯೋ, ಅವರೆಲ್ಲರೂ ಆಚರಿಸಲೇಬೇಕು.

ಶ್ರಾದ್ಧ ಮಾಡುವ ಅಧಿಕಾರವಿಲ್ಲದವರು (ಜೀವತ್ಪಿತೃಗಳು) ಈ ವಿಷಯವನ್ನು ಕೇಳಬಹುದೇ?
ಉತ್ತರ : ಈ ವಿಷಯವನ್ನು ಕೇಳಿ ಅಧಿಕಾರಿಗಳಲ್ಲದವರು ಯಾರೂ ಹೆದರಬೇಕಾಗಿಲ್ಲ. ಇದು ಅವರಿಗೆ ತಿಳುವಳಿಕೆಗೋಸ್ಕರ. ಈಗ ಮಾಡುವ ಸಂದರ್ಭ ಇಲ್ಲದಿದ್ದರೂ ಮುಂದೆಂದಾದರೂ ಸಂದರ್ಭ ಬಂದಾಗ ಆಚರಿಸಲೇಬೇಕಾಗುತ್ತದೆ. ಮಹಾಲಯ ಅಮಾವಾಸ್ಯೆಯನ್ನು ಮನೆಯಲ್ಲಿ ಅಧಿಕಾರಿಗಳು ಆಚರಿಸುತ್ತಿದ್ದರೆ ಅವರಿಗೆ ಉಪಯೋಗವಾಗುವ ಸಾಮಗ್ರಿಗಳನ್ನು ಒದಗಿಸಿ ಕೊಡುವ ಸಂಸ್ಕಾರ ಕೂಡಿ ಬರುತ್ತದೆ. ಆದ್ದರಿಂದ ಈ ವಿಷಯ ಎಲ್ಲರಿಗೂ ಅಗತ್ಯವಾಗಿದೆ.

ಮಹಾಲಯ ಪಕ್ಷದಲ್ಲಿ ಶ್ರಾದ್ಧಕ್ಕೆ ಪ್ರಶಸ್ತವಾದ ದಿನ ಯಾವುದು?
ಉತ್ತರ : ಈ ಮಹಾಲಯಪಕ್ಷದಲ್ಲಿ ಎಲ್ಲ ದಿವಸಗಳೂ ಪ್ರಸಿದ್ಧವಾದವು. ಇದನ್ನು ಆಷಾಢಾದಿ ಪಂಚಮಹಾಪಕ್ಷ ಎನ್ನುತ್ತಾರೆ. ಎಂದರೆ, ಆಷಾಡ ಮುಂತಾದ ಅಪರ ಪಕ್ಷಗಳಲ್ಲಿ ಎರಡನೆಯದು. ಆಷಾಡೇ ಎಂದರೆ ಆಷಾಡಮಾಸದ ಪೂರ್ಣಿಮೆ. ಆ ಪೂರ್ಣಿಮೆಯಿಂದ ಮುಂದಕ್ಕೆ ೫ನೇ ಅಪರ ಪಕ್ಷವಾಗುತ್ತದೆ. ಅಲ್ಲಿಂದ ಪ್ರತಿಯೊಂದು ಅಪರಪಕ್ಷವೂ ಪಿತೃಗಳ ಪೂಜೆಗೆ ಪ್ರಶಸ್ತವಾಗಿದೆ. ಅದರಲ್ಲೂ ಮಹಾಲಯ – ಈ ಪಂಚಮ ಅಪರಪಕ್ಷ ಪ್ರಶಸ್ತವಾದದ್ದು ಪಿತೃಪೂಜೆಗೆ. ಪಿತೃಗಳೂ ಈ ಪೂಜೆಯಿಂದ ಸಂತೋಷದಿಂದ ತಮ್ಮ ಮನೆ ಎಂದು ತಿಳಿದು ಸದಾ ಬರುತ್ತಾ ಇರಲಿ ಎಂದು ಆಲಂಕಾರಿಕ ಭಾಷೆಯಲ್ಲಿ ಪುರಾಣಗಳಲ್ಲಿ ಹೇಳಿದ್ದಾರೆ. ಈ ಪಂಚಮ ಅಪರಪಕ್ಷದಲ್ಲಿ ಧರ್ಮರಾಯ ತನ್ನ ಲೋಕದಲ್ಲಿ ಇರುವ ಎಲ್ಲ ಪಿತೃಗಳಿಗೂ ರಜಾ ಕೊಟ್ಟು ನಿಮ್ಮ ನಿಮ್ಮ ಮಕ್ಕಳು ನಿಮ್ಮನ್ನು ಕುರಿತು ಜೇನುತುಪ್ಪವನ್ನು ಕೊಟ್ಟು ಸಂತೋಷಪಡಿಸುತ್ತಿದ್ದಾರೆ. ಅದನ್ನು ಅನುಭವಿಸಿ ತತ್ ಕ್ಷಣದಲ್ಲೇ ಎಂದು ಒಡನೆಯೇ ಕಳುಹಿಸಿಕೊಡುತ್ತಾನೆ! ಎಂತಹ leave ಇದು. Leave without payನೇ ಎಂದು ಅಪಹಾಸ್ಯ ಮಾಡಬಾರದು. ಇದು ಒಂದು ಆಲಂಕಾರಿಕ ಭಾಷೆಯಷ್ಟೇ.

ಆಲಂಕಾರಿಕವಾಗಿ ಎಂದರೆ ಈ ಸಮಯದಲ್ಲಿ ಪಿತೃಗಳು ತಮ್ಮ ಮಕ್ಕಳಿಂದ ವಿಶೇಷವಾಗಿರುವ ಸೇವೆಯನ್ನು, ಸಂತೋಷವನ್ನು ಅಪೇಕ್ಷೆಪಡುತ್ತಾರೆ. ನಮ್ಮ ಶರೀರದಲ್ಲಿ ಉತ್ತರಾಯಣ ದಕ್ಷಿಣಾಯನ ಮಾರ್ಗವನ್ನು ಸೂಚಿಸುವ ನಾಡಿಗಳಿವೆ. ಅದರಲ್ಲಿ ದಕ್ಷಿಣಾಯನ ಮಾರ್ಗದಲ್ಲಿರುವ ಶಕ್ತಿಗಳು ಪಿತೃ ಮಾರ್ಗದ ಶಕ್ತಿಗಳು. ಧೂಮಾದಿ ಮಾರ್ಗದ ಶಕ್ತಿಗಳು ಯಾರುಂಟೋ ಅವರು. ಈ ಭೂಮಿಯ ಸುಖವನ್ನು ಅನುಭವಿಸತಕ್ಕ ಪ್ರವೃತ್ತಿಗೆ ಅಭಿಮುಖವಾಗಿರುವ ಒಂದು ವಾತಾವರಣ ಇರುವ ಕಾಲ ಎಂದರೆ ದಕ್ಷಿಣಾಯನಕ್ಕೆ ಅನುಗುಣವಾದ ಶಕ್ತಿಗಳು. ಎಂದರೆ ಸೃಷ್ಟಿಯನ್ನು ಮುಂದುವರಿಸುವ ಶಕ್ತಿಗಳು ಯಾರುಂಟೋ ಅವರ ಪ್ರಸನ್ನತೆಯನ್ನು ಹೊಂದುವುದಕ್ಕೆ ಅನುಗುಣ ವಾಗಿರುವ ಕಾಲವಾಗಿರುವುದರಿಂದ ಅವರನ್ನು ಭೂಲೋಕಕ್ಕೆ ಕಳುಹಿಸಿ ಕೊಡುತ್ತಾನೆ.

(ಮುಂದಿನ ಭಾಗದಲ್ಲಿ ಶ್ರಾದ್ಧದ ಆಚರಣೆ ಹೇಗೆ?)

ಲೇಖಕರು: ಆಧ್ಯಾತ್ಮ ಚಿಂತಕರು ಮತ್ತು ಪ್ರವಚನಕಾರರು,
 ಅಷ್ಟಾಂಗಯೋಗ ವಿಜ್ಞಾನಮಂದಿರಂ

ಇದನ್ನೂ ಓದಿ | Pitru Paksha | ಪಿತೃ ಪಕ್ಷ ಎಂದರೇನು? ಏಕೆ ಮತ್ತು ಹೇಗೆ ಆಚರಣೆ ಮಾಡಬೇಕು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಧಾರ್ಮಿಕ

Vastu Tips: ಸಣ್ಣ ವಾಸ್ತು ದೋಷವೇ ಕುಟುಂಬದಲ್ಲಿ ದೊಡ್ಡ ಸಮಸ್ಯೆಗೆ ಕಾರಣವಾಗಬಹುದು!

ಸಣ್ಣಪುಟ್ಟ ವಾಸ್ತು ದೋಷಗಳು ಮನೆ ಮಂದಿಯ ಸುಖ, ಶಾಂತಿ, ನೆಮ್ಮದಿಯನ್ನು ಮಾತ್ರವಲ್ಲ ಆರೋಗ್ಯವನ್ನು ಕೆಡಿಸುತ್ತದೆ. ಹೀಗಾಗಿ ಮನೆಯ ಒಳಾಂಗಣ, ಹೊರಾಂಗಣದ ಸಣ್ಣ ಪುಟ್ಟ ವಸ್ತುಗಳ ವಿಚಾರದಲ್ಲೂ ವಾಸ್ತು ನಿಯಮಗಳನ್ನು (Vastu Tips) ಅನುಸರಿಸಬೇಕು ಎನ್ನುತ್ತದೆ ವಾಸ್ತು ಶಾಸ್ತ್ರ. ಆ ನಿಯಮಗಳು ಯಾವುದು ಎನ್ನುವ ಕುರಿತು ಇಲ್ಲಿದೆ ಮಾಹಿತಿ.

VISTARANEWS.COM


on

By

Vastu Tips
Koo

ವ್ಯಕ್ತಿಯ ಜೀವನದಲ್ಲಿ (life) ಅನೇಕ ಸಮಸ್ಯೆಗಳು (problems) ಸಣ್ಣಪುಟ್ಟ ವಾಸ್ತು ದೋಷಗಳಿಂದ (Vastu Tips) ಉಂಟಾಗುತ್ತವೆ. ಮನೆಯವರಲ್ಲಿ ಮನಸ್ತಾಪಗಳು, ಕುಟುಂಬ (family) ಸದಸ್ಯರಲ್ಲಿ ಭಿನ್ನಾಭಿಪ್ರಾಯಗಳು, ಆರೋಗ್ಯ ಸಮಸ್ಯೆಗಳು (health issues) ಕಾಡುತ್ತವೆ. ವಾಸ್ತುವಿಗೆ ಸಂಬಂಧಿಸಿದ ತಪ್ಪುಗಳನ್ನು ಮಾಡುವ ವ್ಯಕ್ತಿಗಳು ಮಾನಸಿಕ ಮತ್ತು ದೈಹಿಕ ಯಾತನೆ ಅನುಭವಿಸುತ್ತಾರೆ. ಆದ್ದರಿಂದ ಮನೆಯಲ್ಲಿ ಪ್ರತಿಯೊಂದು ವಿಚಾರದಲ್ಲೂ ವಾಸ್ತು ನಿಯಮಗಳನ್ನು ಅನುಸರಿಸುವುದು ಉತ್ತಮ.

ನಿರ್ದಿಷ್ಟ ವಿಷಯಗಳ ಬಗ್ಗೆ ಉತ್ತಮ ಕಾಳಜಿ ವಹಿಸುವ ಮೂಲಕ ಆರೋಗ್ಯಕರ ಜೀವನಶೈಲಿಯನ್ನುನಡೆಸಬಹುದು. ಅಲ್ಲದೇ ಮನೆಯ ಹಲವಾರು ಸಮಸ್ಯೆಗಳನ್ನು ಸರಿಪಡಿಸಬಹುದು.

ಹಳೆಯ ವಸ್ತುಗಳು ಬೇಡ

ವಾಸ್ತು ಶಾಸ್ತ್ರದ ಪ್ರಕಾರ, ಮನೆಯೊಳಗೆ ತುಂಬಾ ಹಳೆಯ ಮತ್ತು ನಿಷ್ಪ್ರಯೋಜಕ ವಸ್ತುಗಳನ್ನು ಸಂಗ್ರಹಿಸಬಾರದು. ಇವುಗಳನ್ನು ಮಲಗುವ ಕೋಣೆಗಳಲ್ಲಿ ಇಡಬಾರದು. ಒಂದು ವೇಳೆ ಇಟ್ಟರೆ ಇದರಿಂದ ಆರೋಗ್ಯ ಕೆಡುತ್ತದೆ.

ದೇವರ ಪ್ರತಿಮೆ

ಮಲಗುವ ಕೋಣೆಯಲ್ಲಿ ದೇವರ ಪ್ರತಿಮೆ ಅಥವಾ ಚಿತ್ರವನ್ನು ಇಡಬಾರದು. ಅದು ದುರದೃಷ್ಟಕರವೆಂದು ಪರಿಗಣಿಸಲಾಗಿದೆ.


ಅಚ್ಚುಕಟ್ಟಾಗಿರಲಿ

ಮಲಗುವ ಕೋಣೆಯನ್ನು ಅಚ್ಚುಕಟ್ಟಾಗಿ ಇರುವಂತೆ ವಿಶೇಷ ಗಮನ ನೀಡಬೇಕು. ಅಸ್ತವ್ಯಸ್ತವಾಗಿರುವ ಮಲಗುವ ಕೋಣೆಗಳಿಂದ ಮಾನಸಿಕ ಆರೋಗ್ಯದ ಮೇಲೆ ಋಣಾತ್ಮಕವಾಗಿ ಪರಿಣಾಮ ಬೀರುತ್ತದೆ.

ಆಹಾರ ಸೇವನೆ

ಮನೆಯಲ್ಲಿ ಆಹಾರ ಸೇವನೆ ಮಾಡುವಾಗ ಅಥವಾ ಏನನ್ನಾದರೂ ತಿನ್ನುವಾಗ ಯಾವಾಗಲೂ ಉತ್ತರ ಅಥವಾ ಪೂರ್ವಕ್ಕೆ ಮುಖ ಮಾಡಿ ಕುಳಿತುಕೊಂಡು ತಿನ್ನಬೇಕು.

ನಲ್ಲಿ ನೀರು

ಮನೆಯಲ್ಲಿ ಒಡೆದ ನಲ್ಲಿಯನ್ನು ಆದಷ್ಟು ಬೇಗ ಸರಿಪಡಿಸಿ. ನಲ್ಲಿಯಲ್ಲಿ ನೀರು ತೊಟ್ಟಿಕ್ಕುತ್ತಿರುವುದು ದುರದೃಷ್ಟಕರ ಎಂದು ಹೇಳಲಾಗುತ್ತದೆ.

ಮಲಗುವ ದಿಕ್ಕು

ಪೂರ್ವ ಅಥವಾ ದಕ್ಷಿಣಕ್ಕೆ ತಲೆ ಇಟ್ಟು ಮಲಗುವುದು ಆರೋಗ್ಯಕ್ಕೆ ಒಳ್ಳೆಯದು. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಭಾವಿಸಲಾಗ್ಗುತ್ತದೆ.


ಕಸ ಸಂಗ್ರಹ

ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮೆಟ್ಟಿಲುಗಳ ಕೆಳಗೆ ಹೆಚ್ಚಿನ ಪ್ರಮಾಣದ ಕಸವನ್ನು ಸಂಗ್ರಹಿಸಲು ಬಿಡಬಾರದು. ಇದು ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ.

ಓದುವ ದಿಕ್ಕು

ಮಕ್ಕಳು ಓದುವಾಗ ಯಾವಾಗಲು ಉತ್ತರ ಅಥವಾ ಪೂರ್ವಕ್ಕೆ ಮುಖ ಮಾಡಬೇಕು. ಇದರಿಂದ ಓದಿದ್ದು ಹೆಚ್ಚು ಕಾಲ ನೆನಪಿನಲ್ಲಿರುತ್ತದೆ.

ಇದನ್ನೂ ಓದಿ: Vastu Tips: ಮನೆಯ ಗೋಡೆಗಳ ಮೇಲೆ ಎಲ್ಲೆಂದರಲ್ಲಿ ಫೋಟೊ ಅಳವಡಿಸಿದರೆ ಏನಾಗುತ್ತದೆ?

ಮರ, ಸಸ್ಯಗಳು

ಅತ್ಯುತ್ತಮ ಆರೋಗ್ಯಕ್ಕಾಗಿ, ಮನೆಯ ಸುತ್ತಮುತ್ತ ಮರ ಮತ್ತು ಸಸ್ಯಗಳನ್ನು ಬೆಳೆಸಿ. ಇದು ಕುಟುಂಬದ ಎಲ್ಲರನ್ನು ಸಂತೋಷವಾಗಿರಿಸುತ್ತದೆ ಮತ್ತು ಸಕಾರಾತ್ಮಕತೆಯನ್ನು ಉತ್ತೇಜಿಸುತ್ತದೆ.

ಕಿಟಕಿ, ಬಾಗಿಲು

ಮನೆಯೊಳಗೇ ಉತ್ತಮ ಶಕ್ತಿಯನ್ನು ಸ್ವಾಗತಿಸಲು, ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಸ್ವಲ್ಪ ಸಮಯದವರೆಗೆ ಬಾಗಿಲು ಮತ್ತು ಕಿಟಕಿಗಳನ್ನು ತೆರೆಯಿರಿ.

Continue Reading

ಧಾರ್ಮಿಕ

Vastu Tips: ಮನೆಯ ಗೋಡೆಗಳ ಮೇಲೆ ಎಲ್ಲೆಂದರಲ್ಲಿ ಫೋಟೊ ಅಳವಡಿಸಿದರೆ ಏನಾಗುತ್ತದೆ?

ಗೋಡೆಗಳ ಮೇಲೆ ತೂಗು ಹಾಕುವ ಚಿತ್ರಗಳಿಗೂ ಪ್ರಮುಖ ನಿಯಮಗಳು ಮತ್ತು ಸಲಹೆಗಳನ್ನು ವಾಸ್ತು ಶಾಸ್ತ್ರದಲ್ಲಿ (Vastu Tips) ನೀಡಲಾಗಿದೆ. ಇವುಗಳನ್ನು ಅನುಸರಿಸುವ ಮೂಲಕ ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ತುಂಬಬಹುದು ಮತ್ತು ಕುಟುಂಬದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತರಬಹುದು.

VISTARANEWS.COM


on

By

Vastu Tips
Koo

ಮನೆಯಲ್ಲಿ (home) ಪ್ರತಿಯೊಂದು ವಸ್ತುವನ್ನು ಇಡಲೂ ವಾಸ್ತು (Vastu Tips) ನಿಯಮವಿದೆ. ಯಾಕೆಂದರೆ ಮನೆಯೊಳಗಿರುವ ಪ್ರತಿಯೊಂದು ವಸ್ತುವಿನಲ್ಲೂ ಜೀವಕಳೆ ತುಂಬುತ್ತದೆ ಮತ್ತು ಶಕ್ತಿಯ ಕೇಂದ್ರವಾಗಿಸುತ್ತದೆ. ಗೋಡೆಯಲ್ಲಿ (wall) ತೂಗು ಹಾಕುವ ಚಿತ್ರಗಳನ್ನು (Picture) ಇಡುವಾಗಲೂ ವಾಸ್ತು ನಿಯಮವನ್ನು ಪಾಲಿಸಬೇಕು. ಯಾಕೆಂದರೆ ಗೋಡೆಗಳ ಮೇಲೆ ಇಡುವ ಚಿತ್ರಗಳು ಮತ್ತು ಅಲಂಕಾರಿಕ ವಸ್ತುಗಳು ಕೇವಲ ಮನೆಯ ಸೌಂದರ್ಯವನ್ನು ಮಾತ್ರ ಹೆಚ್ಚಿಸುವುದಿಲ್ಲ ಸಕಾರಾತ್ಮಕ ಶಕ್ತಿಯನ್ನು ಮನೆಯೊಳಗೆ ಪ್ರವಹಿಸುವಂತೆ ಮಾಡುತ್ತದೆ. ಎಲ್ಲೆಂದರಲ್ಲಿ ಅಳವಡಿಸಿದರೆ ನಕಾರಾತ್ಮಕತೆ ಹೆಚ್ಚುತ್ತದೆ.

ಮನೆಯ ಗೋಡೆಗಳ ಮೇಲೆ ತೂಗು ಹಾಕುವ ಚಿತ್ರ, ಸರಿಯಾದ ದಿಕ್ಕು ಮತ್ತು ನಿರ್ದಿಷ್ ಬಣ್ಣದದ್ದರೆ ಮಾತ್ರ ಮನೆಯಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿ ಉಳಿಯುತ್ತದೆ ಎನ್ನುತ್ತದೆ ವಾಸ್ತು.

ಉತ್ತರ ದಿಕ್ಕು

ಸಂಪತ್ತಿನ ದೇವರು ಕುಬೇರ ಈ ದಿಕ್ಕಿನಲ್ಲಿ ವಾಸಿಸುತ್ತಾನೆ. ಹಚ್ಚ ಹಸಿರಿನ ಮರಗಳು, ಸಸ್ಯವರ್ಗ ಮತ್ತು ನೀರಿನ ಮೂಲಗಳ ಚಿತ್ರಗಳನ್ನು ಈ ದಿಕ್ಕಿನಲ್ಲಿ ಇಡುವುದು ಶುಭವೆಂದು ಪರಿಗಣಿಸಲಾಗಿದೆ. ಈ ಚಿತ್ರಗಳು ಸಂಪತ್ತು ಮತ್ತು ಸಮೃದ್ಧಿಯನ್ನು ಆಕರ್ಷಿಸುತ್ತವೆ.

ಪೂರ್ವ ದಿಕ್ಕು

ಈ ದಿಕ್ಕನ್ನು ಉದಯಿಸುತ್ತಿರುವ ಸೂರ್ಯನ ದಿಕ್ಕು ಎಂದು ಪರಿಗಣಿಸಲಾಗಿದೆ. ಭಗವಾನ್ ಸೂರ್ಯ, ಸಂತರು ಅಥವಾ ಸೂರ್ಯೋದಯದ ಚಿತ್ರಗಳನ್ನು ಈ ದಿಕ್ಕಿನಲ್ಲಿ ಇಡುವುದು ಪ್ರಯೋಜನಕಾರಿ. ಈ ಚಿತ್ರಗಳು ಮನೆಯಲ್ಲಿ ಶಕ್ತಿ ಮತ್ತು ಸಕಾರಾತ್ಮಕತೆಯನ್ನು ತರುತ್ತವೆ.

ದಕ್ಷಿಣ ದಿಕ್ಕು

ಪೂರ್ವಜರು ಮತ್ತು ಧರ್ಮಗ್ರಂಥಗಳ ಚಿತ್ರಗಳನ್ನು ಈ ದಿಕ್ಕಿನಲ್ಲಿ ಇರಿಸಬಹುದು. ದೆವ್ವ, ಆತ್ಮ ಅಥವಾ ನಕಾರಾತ್ಮಕ ಶಕ್ತಿಯ ಚಿತ್ರಗಳನ್ನು ಈ ದಿಕ್ಕಿನಲ್ಲಿ ಇಡಬಾರದು. ಕೆಂಪು, ಚಿನ್ನದ ಅಥವಾ ಕಿತ್ತಳೆ ಬಣ್ಣದ ಚಿತ್ರಗಳನ್ನು ದಕ್ಷಿಣ ದಿಕ್ಕಿನಲ್ಲಿ ಇಡುವುದು ಶುಭವೆಂದು ಪರಿಗಣಿಸಲಾಗುತ್ತದೆ.

ಪಶ್ಚಿಮ ದಿಕ್ಕು

ಈ ದಿಕ್ಕು ನೀರಿನ ಅಂಶದಿಂದ ಪ್ರಭಾವಿತವಾಗಿರುತ್ತದೆ. ಈ ದಿಕ್ಕಿನಲ್ಲಿ ನೀರು, ಸಮುದ್ರ, ನದಿ ಅಥವಾ ಕಾರಂಜಿ ಚಿತ್ರಗಳನ್ನು ಹಾಕುವುದು ಮಾನಸಿಕ ಶಾಂತಿ ಮತ್ತು ಸಮತೋಲನವನ್ನು ಕಾಯ್ದುಕೊಳ್ಳುತ್ತದೆ.


ಫೋಟೋಗಳು ಹೇಗಿರಬೇಕು?

ದೇವರು, ದೇವತೆಗಳು ಮತ್ತು ಧಾರ್ಮಿಕ ಸ್ಥಳಗಳ ಚಿತ್ರಗಳನ್ನು ಮನೆಯಲ್ಲಿ ಹಾಕುವುದು ಶುಭವೆಂದು ಪರಿಗಣಿಸಲಾಗಿದೆ. ಈ ಚಿತ್ರಗಳು ಕುಟುಂಬದಲ್ಲಿ ಶಾಂತಿ ಮತ್ತು ಭಕ್ತಿಯನ್ನು ಉತ್ತೇಜಿಸುತ್ತವೆ.

ಹಚ್ಚ ಹಸಿರಿನ ಮರ, ಹೂವುಗಳು, ಪರ್ವತ, ನದಿಗಳು ಮುಂತಾದ ಸುಂದರವಾದ ನೈಸರ್ಗಿಕ ದೃಶ್ಯಗಳ ಚಿತ್ರಗಳನ್ನು ಹಾಕುವುದು ಮನಸ್ಸಿನಲ್ಲಿ ಶಾಂತಿ ಮತ್ತು ಸಕಾರಾತ್ಮಕತೆಯನ್ನು ತರುತ್ತದೆ.

ಕುಟುಂಬ ಸದಸ್ಯರ ಗುಂಪು ಫೋಟೋಗಳನ್ನು ಅಥವಾ ಸಂತೋಷದ ಕುಟುಂಬ ಕ್ಷಣಗಳ ಚಿತ್ರಗಳನ್ನು ಹಾಕುವುದು ಕುಟುಂಬದಲ್ಲಿ ಪ್ರೀತಿ ಮತ್ತು ಏಕತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಏರುತ್ತಿರುವ ಸೂರ್ಯ, ಚಾಲನೆಯಲ್ಲಿರುವ ಕುದುರೆಗಳು, ಹಾರುವ ಪಕ್ಷಿಗಳು ಮುಂತಾದ ಶಕ್ತಿಯುತ ಮತ್ತು ಸ್ಪೂರ್ತಿದಾಯಕ ಚಿತ್ರಗಳನ್ನು ಇಡುವುದರಿಂದ ಮನೆಯವರಲ್ಲಿ ಶಕ್ತಿ ಮತ್ತು ಸ್ಫೂರ್ತಿ ನೀಡುತ್ತದೆ.

ಯಾವ ಎತ್ತರದಲ್ಲಿ ಇಡಬೇಕು?

ಚಿತ್ರಗಳನ್ನು ಸುಲಭವಾಗಿ ಗೋಚರಿಸುವಂತಹ ಎತ್ತರದಲ್ಲಿ ಗೋಡೆಯ ಮೇಲೆ ಇಡಬೇಕು ಮತ್ತು ಅವುಗಳನ್ನು ನೋಡುವಲ್ಲಿ ಯಾರೂ ಅನಾನುಕೂಲವಾಗಬಾರದು. ಚಿತ್ರಗಳನ್ನು ಮುಖ್ಯ ಬಾಗಿಲಿನ ಮುಂದೆ ಅಥವಾ ನೇರವಾಗಿ ಹಾಸಿಗೆಯ ಮುಂದೆ ಇಡುವುದನ್ನು ತಪ್ಪಿಸಬೇಕು. ಧಾರ್ಮಿಕ ಅಥವಾ ಕುಟುಂಬದ ಚಿತ್ರಗಳನ್ನು ಅಡುಗೆಮನೆ ಮತ್ತು ಸ್ನಾನಗೃಹದಲ್ಲಿ ಇಡಬಾರದು.

ಇದನ್ನೂ ಓದಿ: Vastu Tips: ವೈವಾಹಿಕ ಜೀವನ ಸುಖಮಯವಾಗಿರಲು ಈ ವಾಸ್ತು ನಿಯಮ ಅನುಸರಿಸಿ

ಫೋಟೋಗಳ ಬಣ್ಣ ಏನು?

ವರ್ಣಚಿತ್ರಗಳಲ್ಲಿ ಬಳಸುವ ಬಣ್ಣಗಳಿಗೆ ಗಮನ ಕೊಡುವುದು ಸಹ ಮುಖ್ಯವಾಗಿದೆ. ನೀಲಿ, ಹಸಿರು, ಹಳದಿ ಮುಂತಾದ ಬೆಳಕು ಮತ್ತು ಹಿತವಾದ ಬಣ್ಣಗಳು ಮಾನಸಿಕ ಶಾಂತಿ ಮತ್ತು ಸಕಾರಾತ್ಮಕತೆಯನ್ನು ಉತ್ತೇಜಿಸುತ್ತವೆ. ಕೆಂಪು, ಕಪ್ಪು ಮತ್ತು ಕಂದು ಬಣ್ಣಗಳಂತಹ ಗಾಢ ಮತ್ತು ಹೆಚ್ಚು ಉತ್ತೇಜಕ ಬಣ್ಣಗಳನ್ನು ಮಿತವಾಗಿ ಬಳಸಬೇಕು.

ಫೋಟೋಗಳನ್ನು ಹೇಗೆ ಇರಿಸಬೇಕು?

ಚಿತ್ರಗಳನ್ನು ಯಾವಾಗಲೂ ಸ್ವಚ್ಛವಾಗಿ ಮತ್ತು ಉತ್ತಮ ಸ್ಥಿತಿಯಲ್ಲಿಡಬೇಕು. ಧೂಳು, ಕೊಳಕು ಮತ್ತು ಹಾನಿಗೊಳಗಾದ ಚಿತ್ರಗಳು ನಕಾರಾತ್ಮಕ ಶಕ್ತಿಯನ್ನು ಉಂಟುಮಾಡಬಹುದು.

Continue Reading

ಮೈಸೂರು

Mysore News: ಗುರುಗಳ ಅನುಗ್ರಹವಿದ್ದರೆ ಜೀವನದಲ್ಲಿ ಎಲ್ಲ ಸಾಧನೆಗಳು ಸುಲಭ; ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ

Mysore News: ಮೈಸೂರಿನ ಜೆಪಿ ನಗರದ ವಿಠಲಧಾಮದ ಭವ್ಯ ವೇದಿಕೆಯಲ್ಲಿ ಶ್ರೀ ಸೋಸಲೆ ವ್ಯಾಸರಾಜ ಮಠ ಆಯೋಜನೆ ಮಾಡಿರುವ ಶ್ರೀಮನ್ ನ್ಯಾಯ ಸುಧಾ ಮಂಗಳ ಮಹೋತ್ಸವದ ಶುಕ್ರವಾರದ ವಿದ್ವತ್ ಸಭೆಯಲ್ಲಿ ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು.

VISTARANEWS.COM


on

All achievements in life are easy if there is Guru's grace says Sri Satyatmatirtha Swamiji
Koo

ಮೈಸೂರು: ಗುರುಗಳ ಅನುಗ್ರಹವಿದ್ದರೆ ಜೀವನದಲ್ಲಿ ಎಲ್ಲ ಸಾಧನೆಗಳು ಸುಲಭ ಎಂದು ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ (Mysore News) ತಿಳಿಸಿದರು.

ಜೆಪಿ ನಗರದ ವಿಠಲಧಾಮದ ಭವ್ಯ ವೇದಿಕೆಯಲ್ಲಿ ಶ್ರೀ ಸೋಸಲೆ ವ್ಯಾಸರಾಜ ಮಠ ಆಯೋಜನೆ ಮಾಡಿರುವ ಶ್ರೀಮನ್ ನ್ಯಾಯ ಸುಧಾ ಮಂಗಳ ಮಹೋತ್ಸವದ ಶುಕ್ರವಾರದ ವಿದ್ವತ್ ಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.

ವಿದ್ಯಾರ್ಥಿಗಳು ಶ್ರಮ ವಹಿಸಿ ಅಧ್ಯಯನ ಮಾಡಿರುವುದು ಒಂದೆಡೆಯಾದರೆ ಅವರಲ್ಲಿ ಧೈರ್ಯ, ಸದಾಚಾರ, ಸಂಸ್ಕಾರ, ನೈತಿಕತೆ ಮತ್ತು ಜೀವನ ಕ್ರಮದ ಮಾರ್ಗವನ್ನು ಕಲಿಯುವುದು ಗುರುವಿನ ಅನುಸರಣೆಯಿಂದ ಮಾತ್ರ. ಈ ನಿಟ್ಟಿನಲ್ಲಿ ಇಂದು ಸುಧಾಮಂಗಳ ಮಾಡುತ್ತಿರುವ ವಿದ್ಯಾರ್ಥಿಗಳಾದ ಸೌಮಿತ್ರಿ, ಸುಘೋಷ, ಪ್ರಣವ ಮತ್ತು ಹೊನ್ನಾಳಿ ಆಯಾಚಿತ ಶ್ರೀಶ ಆಚಾರ್ಯರು ಪಂಡಿತರು ಮತ್ತು ವಿದ್ವಾಂಸರು ಮೆಚ್ಚುವಂತಹ ಮುಕ್ತ ಪರೀಕ್ಷೆ ನೀಡಿದ್ದಾರೆ. ಅವರಿಗೆ ಉನ್ನತೋನ್ನತ ಪ್ರಗತಿ ಆಗಲಿ ಎಂದು ಸತ್ಯಾತ್ಮ ಶ್ರೀಗಳು ಆಶೀರ್ವಾದ ಪೂರ್ವಕವಾಗಿ ಹೇಳಿದರು.

ಇದನ್ನೂ ಓದಿ: World Food Safety Day: ಆಹಾರ ಸುರಕ್ಷತೆಗಾಗಿ ನಾವು ಏನು ಮಾಡಬಹುದು?

ಮುಳಬಾಗಿಲು ಶ್ರೀಪಾದರಾಜರ ಮಠದ ಶ್ರೀ ಸುಜಯನಿಧಿ ತೀರ್ಥರು ಮಾತನಾಡಿ, ಶ್ರೀ ವಿದ್ಯಾಶ್ರೀಶ ತೀರ್ಥರು ಶ್ರೀ ವ್ಯಾಸ ತೀರ್ಥ ವಿದ್ಯಾಪೀಠದ ಮೂಲಕ ಯುವ-ನವ ವಿದ್ವಾಂಸರನ್ನು ತರಬೇತುಗೊಳಿಸಿ ಸಮಾಜಕ್ಕೆ ಮಹತ್ವದ ಕೊಡುಗೆಯನ್ನಾಗಿ ನೀಡುತ್ತಿದ್ದಾರೆ. ಅವರ ಸೇವೆ ಮಹತ್ತರವಾಗಿದೆ. ವಿದ್ಯಾರ್ಥಿಗಳು ಪಂಡಿತರಾಗಿ ಭಾರತೀಯ ಸನಾತನ ಪರಂಪರೆಯ ಪ್ರತೀಕವೂ ಆಗಿ ದೇಶದ ಸಂಸ್ಕೃತಿಯನ್ನು ಮುನ್ನಡೆಸುವಂತಾಗಲಿ ಎಂದು ತಿಳಿಸಿದರು.

ಶ್ರೀ ವ್ಯಾಸ ತೀರ್ಥ ವಿದ್ಯಾಪೀಠದ ಗೌರವ ಕಾರ್ಯದರ್ಶಿ ಡಾ. ಡಿ.ಪಿ. ಮಧುಸೂದನಾಚಾರ್ಯರು ಮಾತನಾಡಿ, ಪೇಜಾವರ ಶ್ರೀ ವಿಶ್ವೇಶ ತೀರ್ಥರು ನಮ್ಮ ವಿದ್ಯಾಪೀಠಕ್ಕೆ ಪ್ರಪ್ರಥಮವಾಗಿ ಸ್ಪೂರ್ತಿ ಮತ್ತು ಚೈತನ್ಯ ನೀಡಿದವರು ಎಂದು ಸ್ಮರಿಸಿದರು.

ಕಳೆದ ಎಂಟು ವರ್ಷಗಳ ಹಿಂದೆ ಶ್ರೀ ವ್ಯಾಸ ತೀರ್ಥ ವಿದ್ಯಾಪೀಠ ತಿರುಮಕೂಡಲು ಕ್ಷೇತ್ರದಲ್ಲಿ ಆರಂಭವಾದಾಗ ಸ್ವತಃ ನನ್ನ ತಾಯಿಯವರೇ ಎಲ್ಲ ಮಕ್ಕಳಿಗೂ ಅಡುಗೆ ಮಾಡಿ ಕೈ ತುತ್ತು ಹಾಕಿ ಬೆಳೆಸಿದರು. ವಿದ್ಯಾರ್ಥಿಗಳ ಸಮಗ್ರ ಕ್ಷೇಮ ಪಾಲನೆಯಲ್ಲಿ ಪ್ರತಿನಿತ್ಯವೂ ನೂರಾರು ಸಮಸ್ಯೆ ಎದುರಾದರು ಅವೆಲ್ಲವೂ ಗುರುಗಳ ಪರಮ ಅನುಗ್ರಹದಿಂದ ನಿವಾರಣೆಯಾಗಿ ಇಂದು ನಾಲ್ವರು ಪಂಡಿತರಾಗುವ ಮಟ್ಟದವರೆಗೆ ಸಂಸ್ಥೆ ಬೆಳೆದಿದೆ. ಇವುಗಳ ಹಿಂದೆ ಸೋಸಲ ಶ್ರೀ ವಿದ್ಯಾಶ್ರೀಶ ತೀರ್ಥರ ಪರಿಶ್ರಮ ಅಗಾಧವಾಗಿದೆ ಎಂದರು.

ವಿದ್ಯಾಪೀಠದ ವ್ಯವಸ್ಥಾಪಕ ಟ್ರಸ್ಟಿ ಶೇಷಗಿರಿ ಆಚಾರ್ಯ ಮಾತನಾಡಿ, ಸುಧಾ ಪರೀಕ್ಷೆ ಎಂಬುದು ವಿದ್ಯಾರ್ಥಿಗಳಿಗೆ ಮಾತ್ರ ಅಲ್ಲ, ವಿದ್ವಾಂಸರೂ ತಮ್ಮನ್ನು ತಾವು ಸರಿಪಡಿಸಿಕೊಳ್ಳಲು, ಜ್ಞಾನದ ಶಾಖೆಯನ್ನು ಉನ್ನತೀಕರಿಸಿಕೊಳ್ಳಲು ಮಹೋನ್ನತವಾದ ವೇದಿಕೆಯಾಗಿದೆ ಎಂದರು.

ಇದನ್ನೂ ಒದಿ: Cyber Crime: ವಾಟ್ಸ್ಆ್ಯಪ್‌ ಗ್ರೂಪ್‌ ಮೆಸೇಜ್‌ ಓಪನ್‌ ಮಾಡಿ ಲಕ್ಷಾಂತರ ರೂ. ಕಳೆದುಕೊಂಡ ವ್ಯಾಪಾರಿ

ಸುಧಾ ಪರೀಕ್ಷೆ ಎದುರಿಸಿ, ವಿದ್ವಾಂಸರ ಪ್ರಶಂಸೆಗೆ ಭಾಜನರಾದ ಆಯಾಚಿತ ಶ್ರೀ ಶ ಮತ್ತು ಸುಘೋಷ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಆಯಾಚಿತ ಶ್ರೀ ಶ ಮಾತನಾಡಿ, ಬಡತನದ ಬೇಗೆಯಲ್ಲಿ ನಾನು ಇದ್ದರೂ ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡರೂ ಸೋಸಲೆ ಶ್ರೀಗಳು ನನ್ನನ್ನು ಕೈಹಿಡಿದು ಅನ್ನ, ಆಹಾರವನ್ನು ನೀಡಿ ವಿದ್ಯಾದಾನ ಮಾಡಿದರು. ಕಳೆದ ವರ್ಷ ನನ್ನ ಸಹೋದರಿಯ ವಿವಾಹ ಸಂದರ್ಭದಲ್ಲಿಯೂ ನಮ್ಮ ಬಡತನವನ್ನು ಕಂಡು ಸಂಪೂರ್ಣ ವಿವಾಹದ ಜವಾಬ್ದಾರಿಯನ್ನು ಮಠದಿಂದಲೇ ನಿರ್ವಹಿಸಿದ್ದನ್ನು ಜೀವನದಲ್ಲಿ ಮರೆಯಲಾಗದು ಎಂದು ತಿಳಿಸಿದರು.

ಪ್ರಣವ ಆಚಾರ್ಯ ಮಾತನಾಡಿ, ನಮ್ಮ ಪರೀಕ್ಷೆ ಮತ್ತು ಯಶಸ್ವಿಗಾಗಿ ಹಗಲು ಇರುಳು ಶ್ರಮಿಸಿದ ಉಪನ್ಯಾಸಕರು ಮತ್ತು ಪಂಡಿತರನ್ನು ಸ್ಮರಿಸಿಕೊಂಡರು. ಹಿರಿಯರ ಅನುಗ್ರಹದಿಂದಲೇ ನಮ್ಮ ಉನ್ನತಿ ಸಾಧ್ಯವಾಗಿದೆ ಎಂದು ಧನ್ಯತೆ ಸಮರ್ಪಿಸಿದರು.

ಹಿರಿಯ ವಿದ್ವಾಂಸ ಎ.ವಿ. ನಾಗಸಂಪಿಗೆ ಮಾತನಾಡಿದರು. ಇದೇ ಸಂದರ್ಭದಲ್ಲಿ ಶ್ರೀ ಮಠ ಆಯೋಜಿಸಿದ್ದ ವಿಶೇಷ ಪ್ರದರ್ಶಿನಿ ಗಮನ ಸೆಳೆಯಿತು. ರಾಮಾಯಣ, ಮಹಾಭಾರತ ಶ್ರೀಮನ್ ನ್ಯಾಯ ಸುಧಾ, ವ್ಯಾಸತ್ರಗಳು, ವೇದಗಳು ಮತ್ತು ಉಪನಿಷತ್ತಿನ ವರ್ಣ ಚಿತ್ರಗಳು ವೀಕ್ಷಕರ ಗಮನಸೆಳೆದವು. ಸಂಜೆ ವಿವಿಧ ಭಜನಾ ಮಂಡಳಿಗಳು ನಾದಸ್ವರ ವೇದಘೋಷದೊಂದಿಗೆ ಶೋಭಾ ಯಾತ್ರೆ ಸಂಪನ್ನಗೊಂಡಿತು.

ಶ್ರೀ ವ್ಯಾಸರಾಜರಿಗೆ ಸಾಂಪ್ರದಾಯಿಕವಾಗಿ ದರ್ಬಾರ್ ಸಮರ್ಪಿಸಲಾಯಿತು. ವಿವಿಧ ಪೀಠಾಧೀಶರು ವ್ಯಾಸರಾಜರಿಗೆ ರತ್ನದ ಅಭಿಷೇಕ ಸಮರ್ಪಣೆ ಮಾಡಿದರು.

ಇದನ್ನೂ ಓದಿ: Money Guide: ಪಿಎಫ್‌ ನಿಯಮಗಳಲ್ಲಿ ಮಹತ್ವದ ಬದಲಾವಣೆ; ಇಲ್ಲಿದೆ ಸಂಪೂರ್ಣ ಮಾಹಿತಿ

ಪ್ರಶಸ್ತಿ ಪ್ರದಾನ

ವಿವಿಧ ರಂಗದಲ್ಲಿ ಅದ್ವಿತೀಯ ಸಾಧನೆ ಮಾಡಿದ ಕೆ.ಎಸ್. ಗುರುರಾಜ, ಎಚ್.ಆರ್. ನಾಗೇಂದ್ರ ಮತ್ತು ಎ.ಆರ್. ರಘುರಾಮ ಅವರಿಗೆ ಶ್ರೀಮಠದ ರಘುನಾಥ ತೀರ್ಥ ಅನುಗ್ರಹ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

Continue Reading

ಶಿವಮೊಗ್ಗ

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Sigandur launch: ಮಳೆ ಕೊರತೆಯಿಂದಾಗಿ ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ ಕುಸಿತಗೊಂಡಿದೆ, ಹೀಗಾಗಿ ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಹಾಕಲಾಗಿದೆ.

VISTARANEWS.COM


on

By

Sigandur launch
Koo

ಶಿವಮೊಗ್ಗ: ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ ಕುಸಿತ ಹಿನ್ನೆಲೆಯಲ್ಲಿ ಸಿಗಂದೂರು ಲಾಂಚ್‌ನಲ್ಲಿ (Sigandur launch) ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಸದ್ಯಕ್ಕೆ ಲಾಂಚ್‌ನಲ್ಲಿ ಬೈಕ್ ಹಾಗೂ ಸಾರ್ವಜನಿಕರ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಮಳೆ ಕೊರತೆ ಮುಂದುವರಿದ ಹಿನ್ನೆಲೆಯಲ್ಲಿ ಶಿವಮೊಗ್ಗದ ಸಾಗರ ತಾಲೂಕಿನ ಶರಾವತಿ ಹಿನ್ನೀರು ಭಾಗದಲ್ಲಿರುವ ಲಾಂಚ್ ಸಂಚಾರ ಸೇವೆ ಸ್ಥಗಿತವಾಗಿದೆ. ಎರಡು ಬದಿಯಲ್ಲಿ ಪ್ಲಾಟ್ ಫಾರ್ಮ್‌ಕ್ಕಿಂತ ನೀರು ಕಡಿಮೆ ಆದ ಹಿನ್ನೆಲೆಯಲ್ಲಿ ಸಂಚಾರ ನಿರ್ಬಂಧ ಮಾಡಲಾಗಿದೆ. ಮಳೆ ಬಾರದೆ ಇದ್ದರೆ 16 ದಿನದಲ್ಲಿ ಸಂಪೂರ್ಣವಾಗಿ ಎಲ್ಲ ವಾಹನಗಳು ಹಾಗೂ ಸಾರ್ವಜನಿಕ ಪ್ರವೇಶವು ಬಂದ್ ಆಗಲಿದೆ ಎನ್ನಲಾಗಿದೆ.

ಶರಾವತಿ ಹಿನ್ನೀರು ಭಾಗದಲ್ಲಿರುವ ಇತಿಹಾಸ ಪ್ರಸಿದ್ಧ ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ಈ ಲಾಂಚ್‌ ಸಂಪರ್ಕ ಕಲ್ಪಿಸಲಿದೆ. ಜತೆಗೆ ಸಾಗರ ತಾಲೂಕಿನ ಕಳಸವಳ್ಳಿ ಮತ್ತು ಅಂಬರಗೋಡ್ಲು, ಕರೂರು, ಬಾರಂಗಿ ಹೋಬಳಿಯ ಹತ್ತಾರು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಲಾಂಚ್ ಇದಾಗಿದೆ. ಲಾಂಚ್ ಸಂಪೂರ್ಣ ಸ್ಥಗಿತಗೊಂಡರೆ 90 ಕಿಲೋ ಮೀಟರ್ ಸುತ್ತಿ ಪ್ರಯಾಣಿಸುವ ಅನಿವಾರ್ಯತೆ ಇದೆ. ಇತ್ತ ಭಾರಿ ವಾಹನ ನಿರ್ಬಂಧದಿಂದ ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆಗಾಗಿ ಸ್ಥಳೀಯರು ಮತ್ತು ಪ್ರವಾಸಿಗರು ಪ್ರಾರ್ಥಿಸುತ್ತಿದ್ದಾರೆ.

ಇದನ್ನೂ ಓದಿ: Karnataka Rain : ಆಗುಂಬೆಯಲ್ಲಿ ದುರಂತ; ಅಡಿಕೆ ತೋಟದಲ್ಲಿ ಕಳೆ ಕೀಳುವಾಗ ಸಿಡಿಲು ಬಡಿದು ವ್ಯಕ್ತಿ ಸಾವು

Karnataka Rain : ಮಳೆ ಶುರುವಾದರೆ ಸಾಕು ಗೋಕಾಕ ಜನರಿಗೆ ಗುಡ್ಡದ ಭೂತದ ಕಾಟ!

ಬೆಳಗಾವಿ: ಬೆಳಗಾವಿಯ ಗೋಕಾಕ ತಾಲೂಕಿನ ಗೋಕಾಕ ಕೊಣ್ಣೂರ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಗುಡ್ಡದ ಭೂತದ ಕಾಟ (Karnataka Rain) ಶುರುವಾಗಿದೆ. ಅದು ಕೂಡ ಮಳೆ ಪ್ರಾರಂಭವಾಗುತ್ತಿದ್ದಂತೆ ಗೋಕಾಕ ಜನರಿಗೆ ಗುಡ್ಡದ ಭೂತದ ಕಾಟ ಹೆಚ್ಚಾಗುತ್ತದೆ. ಇಷ್ಟಕ್ಕೂ ಏನಿದು ಗುಡ್ಡದ ಭೂತದ ಕಾಟ ಅಂದರೆ ಗೋಕಾಕ ಬೆಟ್ಟದಿಂದ ದೊಡ್ಡ ದೊಡ್ಡ ಬಂಡೆಕಲ್ಲುಗಳು ಉರುಳಿ ಬೀಳುತ್ತಿವೆ.

karnataka rain

ಗೋಕಾಕ ಹಾಗೂ ಕೊಣ್ಣೂರು ಸಂಪರ್ಕ ಕಲ್ಪಿಸುವ ರಸ್ತೆಯ ಮಧ್ಯೆ ಬಂಡೆಗಳು ಉರುಳಿ ಬೀಳುತ್ತಿವೆ. ಬೆಟ್ಟದಿಂದ ಉರುಳುತ್ತಿರುವ ಬಂಡೆಗಳಿಂದ ಸವಾರರು, ಜನರು ಭಯಭೀತರಾಗಿದ್ದಾರೆ. ಮಳೆಯಿಂದಾಗಿ ಬಂಡೆಗಳ ಕೆಳಗಿನ ಮಣ್ಣು ಕುಸಿಯುತ್ತಿದೆ. ಇದರಿಂದಾಗಿ ಬಂಡೆ ಕಲ್ಲುಗಳು ರಸ್ತೆಗೆ ಬಂದು ಬೀಳುತ್ತಿವೆ. ರಸ್ತೆಯಲ್ಲಿ ಸಂಚರಿಸುವವರು ಪ್ರಾಣ ಭಯದಲ್ಲೇ ಓಡಾಡುವಂತಾಗಿದೆ.

karnataka rain

ಕೊಚ್ಚಿ ಹೋದ ಬೈಕ್‌

ವಿಜಯಪುರದಲ್ಲಿ ನಿನ್ನೆ ಗುರುವಾರ ತಡರಾತ್ರಿ ಸುರಿದ ಭಾರಿ ಮಳೆಗೆ ನದಿ, ಹಳ್ಳಗಳು ತುಂಬಿ ಹರಿಯುತ್ತಿದೆ. ವಿಜಯಪುರ ಜಿಲ್ಲೆಯ ಸಾರವಾಡ ಗ್ರಾಮದಲ್ಲಿ ಡೋಣಿ ನದಿ ಉಕ್ಕಿ ಹರಿದಿದೆ. ಪರಿಣಾಮ ಅಕ್ಕ ಪಕ್ಕದ ಜಮೀನುಗಳಿಗೆ ನೀರು ನುಗ್ಗಿದೆ. ವಿಜಯಪುರ ನಗರದಲ್ಲಿ ಮಳೆಯು ಅವಾಂತರವನ್ನೇ ಸೃಷ್ಟಿಸಿದೆ. ಮಳೆ ನೀರಲ್ಲಿ ಬೈಕ್‌ವೊಂದು ಕೊಚ್ಚಿ ಹೋದ ಘಟನೆ ವಿಜಯಪುರ ನಗರದ ಮನಗೂಳಿ ಅಗಸಿ ಬಳಿ ನಡೆದಿದೆ. ಉಕ್ಕಿ ಹರಿಯುತ್ತಿರುವ ಮಳೆ ನೀರಲ್ಲಿ ಬೈಕ್ ಕೊಂಡೊಯ್ಯುವ ಹರಸಾಹಸದ ವೇಳೆ ಕೊಚ್ಚಿಹೋಗಿದೆ.

ಇದನ್ನೂ ಓದಿ: Electric shock : ಶಾಲೆಗೆ ಹೋದವಳು ಮಸಣ ಸೇರಿದಳು; ಕರೆಂಟ್‌ ಶಾಕ್‌ಗೆ ಒದ್ದಾಡಿ ಪ್ರಾಣಬಿಟ್ಟಳು

ಇತ್ತ ತುಮಕೂರು ಜಿಲ್ಲೆಯಲ್ಲಿ ರಾತ್ರಿ ಧಾರಕಾರ ಸುರಿದ ಮಳೆ ರಭಸಕ್ಕೆ ಕೆರೆ, ಕಟ್ಟೆಗಳು ಕೋಡಿ ಬಿದ್ದಿದ್ದವು. ತುಮಕೂರು ಜಿಲ್ಲೆಯ ಕೊರಟಗೆರೆ ಬಳಿಯಿರುವ ಜಂಪೇನಹಳ್ಳಿ ಕೆರೆ ನೀರಿಲ್ಲದೇ ಬತ್ತಿಹೋಗಿತ್ತು. ಇದೀಗ ತುಂಬಿ ಹರಿಯುತ್ತಿದ್ದು, ರೈತರಲ್ಲಿ ಮಂದಹಾಸ ಮೂಡಿದೆ.

ಇತ್ತ ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿದೆ. ಕೃಷ್ಣಾ ನದಿ ಉಗಮ ಸ್ಥಾನ ಮಹಾಬಲೇಶ್ವರದಲ್ಲಿ ಭಾರೀ ಮಳೆ ಹಿನ್ನೆಲೆ ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಆರಂಭವಾಗಿದೆ. ಈ ವರ್ಷದ ಮೊದಲ ಒಳಹರಿವು 1,768 ಕ್ಯೂಸೇಕ್ ದಾಖಲಾಗಿದ್ದು, ಕೃಷ್ಣಾ ನದಿ ಪಾತ್ರದ ಜನರು ಸಂತಸಗೊಂಡಿದ್ದಾರೆ. ಕಳೆದ ವರ್ಷ ಜೂನ್ ಕಳೆದರು ಒಳಹರಿವು ಇರಲಿಲ್ಲ. ಈ ವರ್ಷ ಜೂನ್ ಮೊದಲ ವಾರವೇ ಒಳಹರಿವು ಆರಂಭವಾಗಿದೆ.

ಗ್ರಾಮಕ್ಕೆ ರಭಸವಾಗಿ ನುಗ್ಗಿದ ನೀರು

ಚಿತ್ರದುರ್ಗ ಜಿಲ್ಲೆಯಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಕೂನಬೇವು ಗ್ರಾಮದ ಮನೆಗಳಿಗೆ ನೀರು ನುಗ್ಗಿದೆ. ವರುಣ ಅಬ್ಬರಕ್ಕೆ ಕೊನಬೇವು ಗ್ರಾಮ ಜಲಾವೃತಗೊಂಡಿತ್ತು. ಗ್ರಾಮದ ರಸ್ತೆಯಲ್ಲಿ ನೀರು ನದಿಯಂತೆ ಹರಿದಿತ್ತು. ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿತ್ತು. ಚಿತ್ರದುರ್ಗ ತಾಲೂಕಿನ ಬೆಳಘಟ್ಟ ಗ್ರಾಮದಲ್ಲಿ ನೀರಿನಲ್ಲಿ ಬಸ್ ಸಿಲುಕಿದ ಘಟನೆಯು ನಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Modi 3.0 Cabinet
Lok Sabha Election 202414 mins ago

Modi 3.0 Cabinet: ಎನ್‌ಡಿಎ ಸರ್ಕಾರದಲ್ಲಿ ರಾಜ್ಯದಿಂದ ಐವರಿಗೆ ಸ್ಥಾನ; ವಿ.ಸೋಮಣ್ಣ ಅಚ್ಚರಿಯ ಆಯ್ಕೆ?

Murder Case
ಬೆಂಗಳೂರು ಗ್ರಾಮಾಂತರ19 mins ago

Murder Case : ಬಾಡಿಗೆ ಹಣ ಪಡೆಯಲು ಕಿರಿಕ್‌; ಬೆಡ್‌ ರೂಮ್‌ನಲ್ಲೇ ಪತ್ನಿ ಕೊಂದಿದ್ದ ಹಂತಕ ಅರೆಸ್ಟ್‌

IND vs PAK
ಕ್ರೀಡೆ27 mins ago

IND vs PAK: ಭಾರತ-ಪಾಕ್​ ಪಂದ್ಯಕ್ಕೆ ಸಚಿನ್ ಹಾಜರ್; ಮಾಜಿ ಅಧ್ಯಕ್ಷ ಒಬಾಮಗೂ ಇರದ ಭದ್ರತೆಯಲ್ಲಿ ನಡೆಯಲಿದೆ ಪಂದ್ಯ

Modi 3.0 Cabinet
ದೇಶ39 mins ago

Modi 3.0 Cabinet: ಬಿಜೆಪಿಯ 5, NDAಯ 10 ಸಂಸದರು INDIA ಜೊತೆ ಸಂಪರ್ಕ? ಹೊಸ ಬಾಂಬ್‌ ಸ್ಫೋಟಿಸಿದ TMC

Road Accident
ಬೆಂಗಳೂರು46 mins ago

Road Accident : ವಾಕಿಂಗ್‌ ಹೊರಟಿದ್ದ ವೃದ್ಧೆಗೆ ಬೈಕ್‌ ಡಿಕ್ಕಿ; ಕ್ಷಣದಲ್ಲೇ ಹಾರಿಹೋಯ್ತು ಪ್ರಾಣ

Valmiki Corporation Scam
ಕರ್ನಾಟಕ1 hour ago

Valmiki Corporation Scam: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಅಕ್ರಮ; ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ ಪರಮೇಶ್ವರ್‌

Niveditha Gowda chandan matters told by Prashanth Sambargi
ಸ್ಯಾಂಡಲ್ ವುಡ್1 hour ago

Niveditha Gowda: ದುಡ್ಡಿನ ಹಿಂದೆ ಹೋದವರು ಯಾರಂತ ಗೊತ್ತಾಗುತ್ತೆ; ಚಂದನ್‌ಗೆ ನಮ್ಮ ಸಪೋರ್ಟ್‌ ಎಂದ ಪ್ರಶಾಂತ್‌ ಸಂಬರಗಿ!

assault Case in Bengaluru
ಬೆಂಗಳೂರು1 hour ago

Assault case : ಮೊದಲನೇ ಹೆಂಡ್ತಿ ಮಕ್ಕಳೊಂದಿಗೆ ಬಂದು 2ನೇ ಹೆಂಡ್ತಿಗೆ ರಕ್ತ ಬರುವಂತೆ ಬಾರಿಸಿದ ಭೂಪ

Puja Tomar
ಕ್ರೀಡೆ1 hour ago

Puja Tomar: ಯುಎಫ್​ಸಿ ಪಂದ್ಯ ಗೆದ್ದು ಇತಿಹಾಸ ನಿರ್ಮಿಸಿದ ಭಾರತದ ಪೂಜಾ ತೋಮರ್

road Accident
ಕಲಬುರಗಿ2 hours ago

Road Accident : ಟೆಂಪೋ ಪಲ್ಟಿ; ಓವರ್‌ಟೇಕ್‌ ಧಾವಂತಕ್ಕೆ ಕಾರ್ಮಿಕ ಸಾವು, ಮತ್ತೋರ್ವ ಗಂಭೀರ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ2 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ2 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ5 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ6 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ6 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 week ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ1 week ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 weeks ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

ಟ್ರೆಂಡಿಂಗ್‌