KL Rahul | ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಟೀಮ್​ ಇಂಡಿಯಾ ಕ್ರಿಕೆಟಿಗ ಕೆ.ಎಲ್. ರಾಹುಲ್ - Vistara News

Latest

KL Rahul | ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಟೀಮ್​ ಇಂಡಿಯಾ ಕ್ರಿಕೆಟಿಗ ಕೆ.ಎಲ್. ರಾಹುಲ್

ಟೀಮ್​ ಇಂಡಿಯಾ ಕ್ರಿಕೆಟಿಗ ಕೆ.ಎಲ್​. ರಾಹುಲ್​ ಸ್ನೇಹಿತರ ಜತೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

VISTARANEWS.COM


on

kl rahul kukke subramanya
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸುಬ್ರಹ್ಮಣ್ಯ: ಟೀಮ್​ ಇಂಡಿಯಾದ ಆಟಗಾರ ಕೆ.ಎಲ್.​ ರಾಹುಲ್ (KL Rahul)​ ಬುಧವಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತಮ್ಮ ಸ್ನೇಹಿತರೊಂದಿಗೆ ಆಗಮಿಸಿ, ದೇವರ ದರ್ಶನ ಪಡೆದರು. ಪ್ರಾರ್ಥನೆ ಸಲ್ಲಿಸಿದ ಬಳಿಕ ಅವರು ದೇಗುಲದಲ್ಲಿ ಪ್ರಸಾದ ಸ್ವೀಕರಿಸಿದರು.

ಟಿ20 ವಿಶ್ವ ಕಪ್‌ನ ವೈಫಲ್ಯದ ನಿರಾಸೆಯ ನಡುವೆ ವೈಯಕ್ತಿಕ ಜೀವನದಲ್ಲಿ ದೊಡ್ಡ ನಿರ್ಧಾರ ಕೈಗೊಂಡಿರುವ ಕೆ.ಎಲ್‌. ರಾಹುಲ್‌ ಮುಂದಿನ ವರ್ಷದ ಜನವರಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ರಾಹುಲ್ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಸ್ನೇಹಿತರ ಜತೆಗೆ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿ ಮಹಾಪೂಜೆಯಲ್ಲೂ ಕೂಡ ಭಾಗಿಯಾದರು. ಈ ಸಮಯದಲ್ಲಿ ದೇವಳದ ವತಿಯಿಂದ ಕೆ.ಎಲ್. ರಾಹುಲ್ ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ ಮತ್ತಿತರರು ದೇವಸ್ಥಾನದ ವತಿಯಿಂದ ರಾಹುಲ್​ ಅವರನ್ನು ಗೌರವಿಸಿದರು.

ಇದನ್ನೂ ಓದಿ | IND VS NZ | ಭಾರತ ಮತ್ತು ನ್ಯೂಜಿಲ್ಯಾಂಡ್​ ವಿರುದ್ಧದ ಅಂತಿಮ ಟಿ20 ಪಂದ್ಯ ಟೈನಲ್ಲಿ ಅಂತ್ಯ; ಸರಣಿ ಗೆದ್ದ ಭಾರತ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪರಿಸರ

Arecanut Research Centre: ಹೊಸ ಅಡಿಕೆ ಸಂಶೋಧನಾ ಕೇಂದ್ರ ಮತ್ತೊಂದು ಮದುವೆ ಛತ್ರ ಆಗದಿರಲಿ!

Arecanut Research Centre: ಇರುವ ಅಡಿಕೆ ಸಂಶೋಧನಾ ಕೇಂದ್ರಗಳಲ್ಲಿ ಅಡಿಕೆ ರೋಗಗಳ ವಿಚಾರದಲ್ಲಿ ಯಾವುದೇ ಮಹತ್ತರ ಸಂಶೋಧನೆ, ಅಧ್ಯಯನಗಳು ನೆಡೆಯದೆ ಇರುವಾಗ, ಮತ್ತೊಂದು ಅಡಿಕೆ ಸಂಶೋಧನಾ ಕೇಂದ್ರ ಕರ್ನಾಟಕಕ್ಕೆ ಬೇಕಾ ಎನ್ನುವುದು ಅಡಿಕೆ ಬೆಳೆಗಾರರ ಮುಂದಿರುವ ಪ್ರಶ್ನೆ.

VISTARANEWS.COM


on

Koo

-ಅರವಿಂದ ಸಿಗದಾಳ್, ಮೇಲುಕೊಪ್ಪ
ನಿಯಮ 377ರ ಅಡಿಯಲ್ಲಿ ಹಳದಿ ರೋಗದ (Arecanut Research Centre) ಹರಡುವಿಕೆಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಅಡಿಕೆ ಬೆಳೆಗಾರರು ಅನುಭವಿಸುತ್ತಿರುವ ನಷ್ಟದ ಕುರಿತು ಲೋಕಸಭೆಯಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟರವರು ವಿಷಯ ಪ್ರಸ್ತಾಪಿಸಿ ಗಮನ ಸೆಳೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಹಳದಿ ಎಲೆ ರೋಗ ಸಮಸ್ಯೆ ಬಗ್ಗೆ ಒಂದೇ ಹಂತದಲ್ಲಿ ಪರಿಹಾರ ನೀಡುವ ಮೂಲಕ ಬಿಕ್ಕಟ್ಟನ್ನು ಬಗೆಹರಿಸಲು ಮುಂದಾಗಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಯಿತು. ಈ ರೋಗ ತಡೆಗೆ ಸಂಬಂಧಿಸಿ, ದಕ್ಷಿಣ ಕನ್ನಡದಲ್ಲಿ ಅಡಿಕೆ ಸಂಶೋಧನಾ ಸಂಸ್ಥೆ ಸ್ಥಾಪಿಸಲು ಹಣಕಾಸು ನೆರವನ್ನು ನೀಡಬೇಕು ಎಂದು ಲೋಕಸಭೆಗೆ ಕ್ಯಾಪ್ಟನ್ ಬ್ರಿಜೇಶ್ ಚೌಟ ಮನವಿ ಮಾಡಿದ್ದಾರೆ.

arecanut price
Arecanut Price

ಇನ್ನೊಂದು ಅಡಿಕೆ ಸಂಶೋಧನಾ ಕೇಂದ್ರ ಬೇಕಾ?

ಇರುವ ಅಡಿಕೆ ಸಂಶೋಧನಾ ಕೇಂದ್ರಗಳಲ್ಲಿ ಅಡಿಕೆ ರೋಗಗಳ ವಿಚಾರದಲ್ಲಿ ಯಾವುದೇ ಮಹತ್ತರ ಸಂಶೋಧನೆ, ಅಧ್ಯಯನಗಳು ನೆಡೆಯದೆ ಇರುವಾಗ, ಮತ್ತೊಂದು ಅಡಿಕೆ ಸಂಶೋಧನಾ ಕೇಂದ್ರ ಕರ್ನಾಟಕಕ್ಕೆ ಬೇಕಾ ಎನ್ನುವುದು ಅಡಿಕೆ ಬೆಳೆಗಾರರ ಮುಂದಿರುವ ಪ್ರಶ್ನೆ.
ತೀರ್ಥಹಳ್ಳಿ ಮತ್ತು ಶೃಂಗೇರಿಗಳಲ್ಲಿ ಈಗಾಗಲೇ ಸಂಶೋಧನಾ ಕೇಂದ್ರಗಳಿದ್ದು, ಅಲ್ಲಿ ಅಡಿಕೆಗೆ ಸಂಬಂಧಿಸಿದ ಯಾವ ಮಹತ್ತರವಾದ ಸಂಶೋಧನೆಗಳೂ ನೆಡೆಯುತ್ತಿರುವ ವರದಿಗಳಿಲ್ಲ. ಅದರಲ್ಲೂ ಶೃಂಗೇರಿ ಸಂಶೋಧನಾ ಕೇಂದ್ರದ ಸುತ್ತಮುತ್ತಲಿನ ಅಡಿಕೆ ತೋಟಗಳಿಗೆ ಹಳದಿ ರೋಗ ಬಂದು, ದಶಕಗಳೇ ಕಳೆದು, ಈಗ ಎಲೆ ಚುಕ್ಕಿ ರೋಗವೂ ಜೊತೆಗೂಡಿ ತೋಟಗಳೇ ನಾಶವಾಗಿವೆ. ಶೃಂಗೇರಿ ಕ್ಷೇತ್ರದ ಸುತ್ತಮುತ್ತಲಿನ ಅಡಿಕೆ ಬೆಳೆಗಾರರು ಪರ್ಯಾಯ ಬೆಳೆಯ ದಾರಿ ಹುಡುಕುತ್ತಿದ್ದಾರೆ. ಹಳದಿರೋಗ, ಎಲೆಚುಕ್ಕಿ ರೋಗದ ಬಾಧೆ ತಾಳಲಾರದೆ ಪರ್ಯಾಯ ಕ್ಷೇತ್ರಗಳಲ್ಲಿ ಬದುಕು ಕಟ್ಟಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.

ವಿಜ್ಞಾನಿಗಳೆಲ್ಲಿ?

ಅಡಿಕೆ ಎಲೆಚುಕ್ಕಿ, ಹಳದಿ ರೋಗಗಳ ಬಗ್ಗೆ ಎರಡು ವರ್ಷಗಳ ಹಿಂದೆ ಸ್ಥಳೀಯ ಅಡಿಕೆ ಬೆಳೆಗಾರರ ತೀವ್ರ ಒತ್ತಡ ತಂದಾಗ, ಆಗಿನ ರಾಜ್ಯ ಸರಕಾರದ ತೋಟಗಾರಿಕೆ ಸಚಿವರು “ಅಗತ್ಯ ಬಿದ್ದರೆ ಇಸ್ರೇಲ್‌ನಿಂದ ವಿಜ್ಞಾನಿಗಳನ್ನು ಕರೆಸೋಣ. ಅತಿ ಶೀಘ್ರದಲ್ಲಿ ವಿಜ್ಞಾನಿಗಳನ್ನು ಕರೆಸಿ ಎರಡೂ ರೋಗಗಳ ಬಗ್ಗೆ ತ್ವರಿತಗತಿಯಲ್ಲಿ ಅಧ್ಯಯನ, ಸಂಶೋದನೆಗೆ ಒತ್ತು ಕೊಟ್ಟು ಅಡಿಕೆ ರೋಗಗಳಿಗೆ ಪರಿಹಾರ ಕೊಡಿಸುತ್ತೇನೆ” ಎಂದಿದ್ದರು. ಅಡಿಕೆ ಹಳದಿ ರೋಗ, ಎಲೆ ಚುಕ್ಕಿರೋಗಗಳಿಂದ ಶೃಂಗೇರಿ ಪ್ರಾಂತ್ಯದ ಅಡಿಕೆ ತೋಟಗಳು ‘ಕುರುಕ್ಷೇತ್ರದ’ ಬಣ್ಣಕ್ಕೆ ತಿರುಗಿದ್ದ ಕಾಲ ಅದು!
ನುಡಿದಂತೆ ನಡೆದ ಸಚಿವರು ಮೂರು ವಿಜ್ಞಾನಿಗಳನ್ನು ಶೃಂಗೇರಿಯಲ್ಲಿರುವ ಅಡಿಕೆ ಸಂಶೋಧನಾ ಕೇಂದ್ರಕ್ಕೆ ಡೆಪ್ಯೂಟ್ ಮಾಡಿದರು! ಆದರೆ, ಡೆಪ್ಯೂಟ್ ಡ್ರಾಮಾ ಎಷ್ಟು ತಮಾಷೆಯಾಗಿತ್ತು ಅಂದರೆ, ಡೆಪ್ಯೂಟ್ ಆದ ಮೇಲೆ, ಆ ಮೂರು ಜನ ವಿಜ್ಞಾನಿಗಳೊಂದಿಗೆ ರೈತ ಸಂವಾದ ಕಾರ್ಯಕ್ರಮ ನೆಡೆಸಿದಾಗ ತಿಳಿದಿದ್ದು ಮೂವರೂ ವಿಜ್ಞಾನಿಗಳು ಅಡಿಕೆ ತೋಟದ ವಿಚಾರದಲ್ಲಿ ಪ್ರೀ ನರ್ಸರಿ ಮಾಹಿತಿಯೂ ಇಲ್ಲದವರು ಎಂದು! ಮೂವರು ವಿಜ್ಞಾನಿಗಳೂ ಹೊಸಬರು. ಅಡಿಕೆ ವಿಚಾರದ ವೃತ್ತಿ ಅನುಭವ ಇಲ್ಲದವರು. ಕನಿಷ್ಠ ಪಕ್ಷ ಅಡಿಕೆ ತೋಟದ ಕಪ್ಪು ದಾಟಿದ ಅನುಭವವೂ ಇಲ್ಲದವರು! ಇಸ್ರೇಲ್ ಬೇಡ ಭಾರತದಲ್ಲೇ, ಅದರಲ್ಲೂ ಕರ್ನಾಟಕದಲ್ಲೇ ನುರಿತ ಅನುಭವಿ ತಜ್ಞ ವಿಜ್ಞಾನಿಗಳು ಇರಲಿಲ್ವಾ?
ಕೆಲವು ತಿಂಗಳು ಕಳೆಯುವುದರೊಳಗೆ ಬಂದ ಅಧಿಕೃತ ಸುದ್ದಿ ‘ಆ ಮೂವರು ‘ಹೊಸ’ ವಿಜ್ಞಾನಿಗಳನ್ನು ಬೇರೆಡೆಗೆ ವರ್ಗಾಯಿಸಲಾಗಿದೆ’ ಎಂದು. ಅಲ್ಲಿಗೆ ಹಳದಿ, ಎಳೆ ಚುಕ್ಕಿ ಸಂಶೋಧನೆಗಳು, ರೋಗ ಅಧ್ಯಯನಗಳು ಶೃಂಗೇರಿ ಆಶ್ಲೇಷಾ ಮಳೆಯ ನೆರೆಯಲ್ಲಿ ಹುಣಸೇಹಣ್ಣು ಕರಗಿದಂತೆ ಕರಗಿ ತೇಲಿ ಹೋಯಿತು!

Arecanut Price
Arecanut Price

ನರಳುತ್ತಿದೆ ಸಂಶೋಧನೆ

ಲ್ಯಾಬ್ ಇಲ್ಲದ, ವಿಜ್ಞಾನಿಗಳಿಲ್ಲದ, ಸಿಬ್ಬಂದಿ ಇಲ್ಲದ, ಸಂಶೋಧನೆಗೆ ಅನುದಾನವೂ ಇಲ್ಲದೆ ನರಳುತ್ತಿರುವ ತೀರ್ಥಹಳ್ಳಿ ಮತ್ತು ಶೃಂಗೇರಿಯ ಎರಡೂ ಸಂಶೋಧನಾ ಕೇಂದ್ರಗಳನ್ನು ಕರಿ ಕಸ ಗುಡಿಸಿ ಮದುವೆ, ಮುಂಜಿಗಳಗೆ ಬಾಡಿಗೆಗೆ ಕೊಟ್ಟರೆ ಸರ್ಕಾರಕ್ಕೆ ಒಂದಿಷ್ಟು ಆದಾಯ ಬರಬಹುದು ಅಂತ ಅಡಿಕೆ ಬೆಳೆಗಾರರು ಮಾತಾಡಿಕೊಳ್ತಾ ಇದ್ದಾರೆ.
ಈಗಲೂ ಆ ಸಂಶೋಧನಾ ಛತ್ರಗಳಲ್ಲಿ ವರ್ಷಕ್ಕೊಂದೆರಡು ಕೃಷಿ ಸಮಾಲೋಚನೆ, ಮಾಹಿತಿ ಶಿಬಿರಗಳನ್ನು ನೆಡೆಸಿ ರೈತರಿಗೆ ಒಂದು ಪಲಾವ್ ಊಟ ಹಾಕಿಸಲಾಗುತ್ತದೆ! ಮಣ್ಣು ಪರೀಕ್ಷೆಗೆ ಕೊಟ್ಟರೆ, ಹದಿನೆಂಟು ಪ್ಯಾರಾಮೀಟರ್‌ಗಳಲ್ಲಿ ಮೂರು ಪ್ಯಾರಾಮೀಟರ್ ಚಕ್ ಮಾಡುವ ಉಪಕರಣಗಳೂ ಅಲ್ಲಿಲ್ಲ, ಸಿಬ್ಬಂದಿಯೂ ಇಲ್ಲ. ಅನುದಾನ ಬಂದಿದ್ದರಲ್ಲಿ ಖುರ್ಚಿ, ಪೋಡಿಯಂ, ಡೆಸ್ಕ್, ಟೇಬಲ್‌ಗಳನ್ನು ವಾಸ್ತು ಪ್ರಕಾರ ಹಾಕಿ ಮೆಯಿನ್ಟೆಯಿನ್ ಮಾಡಲಾಗುತ್ತಿದೆ!

ಇದನ್ನೂ ಓದಿ: ವಿಸ್ತಾರ ಗ್ರಾಮ ದನಿ: ಅಡಿಕೆ ಬೆಳೆಗಾರರೂ ‘ಇನ್‌ಕಮ್ ಟ್ಯಾಕ್ಸ್ ರಿಟರ್ನ್ಸ್ʼ ಸಲ್ಲಿಸಬೇಕಾ? ಸಲ್ಲಿಸದಿದ್ದರೆ ಏನಾಗುತ್ತದೆ?

ರೋಗ ಯಾವುದು? ಪರಿಹಾರ ಏನು?

ಸಂಶೋಧನೆ, ಅಧ್ಯಯನಗಳು ಮೊದಲು ಆಗಬೇಕಾಗಿದ್ದು ಹಳದಿ ರೋಗ, ಎಲೆ ಚುಕ್ಕಿ ರೋಗಗಳಿಗಲ್ಲ. ಮೊದಲು ಸಂಶೋಧನೆ ಆಗಬೇಕಾಗಿರುವುದು ಅಡಿಕೆ ಸಂಶೋಧನಾ ಕೇಂದ್ರಗಳಿಗೆ ಬಂದಿರುವ ರೋಗ ಯಾವುದು? ಪರಿಹಾರ ಏನು ಎಂದು ನೋಡುವುದಕ್ಕೆ! ಇರುವ ಎರಡು ಅಡಿಕೆ ಸಂಶೋಧನಾ ಕೇಂದ್ರಗಳಿಗೆ ಕೊರೋನಾ, ಡೆಂಗ್ಯು ಬಂದು ನರಳುತ್ತಿರುವಾಗ, ಈಗ ಇನ್ನೊಂದು ಸಂಶೋಧನಾ ಕೇಂದ್ರವನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೆರೆಯಲು ಮುಂದಾಗುವುದು, ಅದಕ್ಕೆ ಸ್ಥಳಿಯ ಸಂಸದರು ಒತ್ತಾಯಿಸುವುದು ಸುಮ್ಮನೆ ಹಣ ವ್ಯರ್ಥ ಅನಿಸುತ್ತದೆ. ದಕ್ಷಿಣ ಕನ್ನಡದಲ್ಲಿ ಸಾಕಷ್ಟು ಛತ್ರಗಳಿರುವುದರಿಂದ, ಮತ್ತೊಂದು ಛತ್ರದ ಕಟ್ಟಡ ನಿರ್ಮಾಣ ಬೇಡ ಅನಿಸುತ್ತದೆ! ಬೇಕೇ ಬೇಕು ಅನ್ನುವುದಾದಲ್ಲಿ ಘಟ್ಟದ ಮೇಲಿನ ಸಂಶೋಧನಾ ಛತ್ರಗಳ ಕಾರ್ಯಕ್ಷಮತೆಯನ್ನು ಒಮ್ಮೆ ಸಂಶೋಧನೆ ಮಾಡಿ ತೀರ್ಮಾನ ಮಾಡುವುದು ಒಳ್ಳೆಯದು. ಹೊಸ ಸಂಶೋಧನಾ ಕೇಂದ್ರದ ಹಣದಲ್ಲಿ, ಇರುವ ಸಂಶೋಧನಾ ಕೇಂದ್ರಗಳನ್ನು ಬಲ ಪಡಿಸಿ, ಅಡಿಕೆ ರೋಗಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಬಹುದು.

Continue Reading

ಸಿನಿಮಾ

Aishwarya Rai Bachchan: ಐಶ್ವರ್ಯಾ ರೈ ಧರಿಸಿರುವ V ಆಕಾರದ ಈ ವಜ್ರದುಂಗುರದ ವಿಶೇಷತೆ ಗೊತ್ತೆ?

Aishwarya Rai Bachchan: ನಟಿ ಐಶ್ವರ್ಯ ರೈ ಧರಿಸಿರುವ ವಿ ಆಕಾರದ ಉಂಗುರವನ್ನು “ವಂಕಿʼ ಉಂಗುರ ಅಥವಾ “ವಡುಂಗಿಲಾ” ಎಂದು ಕರೆಯಲಾಗುತ್ತದೆ. ಈ ಉಂಗುರವನ್ನು ಮದುವೆಯಾದ ಮಹಿಳೆಯರು ಧರಿಸುವ ಸಂಪ್ರದಾಯವಿದೆ. ವಿವಾಹಿತ ಮಹಿಳೆಯ ಜೀವನದಲ್ಲಿ ಈ ಉಂಗುರಕ್ಕೆ ಹೆಚ್ಚು ಪ್ರಾಮುಖ್ಯತೆ ಇದೆ. ವಂಕಿ ಉಂಗುರವನ್ನು ವಧು ತಮ್ಮ ಮದುವೆಯ ದಿನದಂದು ಧರಿಸುತ್ತಾರೆ. ಈ ಉಂಗುರವನ್ನು ಆಕೆಯ ಕುಟುಂಬದ ತಂದೆಯ ಕಡೆಯಿಂದ ಅಥವಾ ಮಹಿಳೆಯ ಸಂಬಂಧಿಕರು ನೀಡುತ್ತಾರೆ.

VISTARANEWS.COM


on

Aishwarya Rai Bachchan
Koo

ಮುಂಬೈ: ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ (Actress Aishwarya Rai Bachchan) ತಮ್ಮ ಅಭಿನಯದ ಮೂಲಕ ಮಾತ್ರವಲ್ಲದೇ ತಮ್ಮ ವಿಶೇಷ ಫ್ಯಾಷನ್ ಶೈಲಿ ಮತ್ತು ಸೌಂದರ್ಯದಿಂದ ಕೂಡ ಅನೇಕ ಅಭಿಮಾನಿಗಳನ್ನು ಆಕರ್ಷಿಸಿದ್ದಾರೆ. ನಿಮಗೂ ಐಶ್ವರ್ಯಾ ಅವರ ಫ್ಯಾಷನ್ ಶೈಲಿಯನ್ನು ಅನುಸರಿಸುವ ಆಸಕ್ತಿ ಇದ್ದರೆ, ನಟಿ ತಮ್ಮ ಬಲಗೈಗೆ ಧರಿಸಿದ ವಿ-ಆಕಾರದ ವಜ್ರದ ಉಂಗುರದ ಬಗ್ಗೆ ತಿಳಿದುಕೊಳ್ಳಿ! ನಟಿ ಈ ಉಂಗುರವನ್ನು ಧರಿಸದೆ ಎಂದಿಗೂ ಹೊರಗೆ ಹೋಗುವುದಿಲ್ಲ. ಹಾಗಾದ್ರೆ ನಟಿ ಧರಿಸಿದ ಈ ಉಂಗುರದ ವಿಶೇಷತೆ ಏನು ಎಂಬುದನ್ನು ತಿಳಿಯಿರಿ. ನಟಿ ಐಶ್ವರ್ಯ ರೈ ಧರಿಸಿರುವ ವಿ ಆಕಾರದ ಉಂಗುರವನ್ನು “ವಂಕಿ” ಉಂಗುರ ಅಥವಾ “ವಡುಂಗಿಲಾ” ಎಂದು ಕರೆಯಲಾಗುತ್ತದೆ. ಈ ಉಂಗುರವನ್ನು ಮದುವೆಯಾದ ಮಹಿಳೆಯರು ಧರಿಸುವ ಸಂಪ್ರದಾಯವಿದೆ. ಹಾಗಾಗಿ ವಿವಾಹಿತ ಮಹಿಳೆಯ ಜೀವನದಲ್ಲಿ ಈ ಉಂಗುರಕ್ಕೆ ಹೆಚ್ಚು ಪ್ರಾಮುಖ್ಯತೆ ಇದೆ. ವಂಕಿ ಉಂಗುರವನ್ನು ವಧು ತಮ್ಮ ಮದುವೆಯ ದಿನದಂದು ಧರಿಸುತ್ತಾರೆ ಮತ್ತು ಈ ಉಂಗುರವನ್ನು ಆಕೆಯ ಕುಟುಂಬದ ತಂದೆಯ ಕಡೆಯಿಂದ ಅಥವಾ ಮಹಿಳೆಯ ಸಂಬಂಧಿಕರು ನೀಡುತ್ತಾರೆ. ಅವರ ಸಂಪ್ರದಾಯದಲ್ಲಿ ಮದುವೆಯ ನಂತರ ಮಂಗಳಸೂತ್ರವನ್ನು ಧರಿಸುವ ಹಾಗೇ ಈ ಉಂಗುರವನ್ನು ಧರಿಸಬೇಕಾಗುತ್ತದೆ.

Aishwarya Rai Bachchan V shape dimond ring

ಬಂಟ ಸಮುದಾಯದ ಸಂಪ್ರದಾಯ

ಈ ಉಂಗುರವು ಹೆಚ್ಚಾಗಿ ಮಂಗಳೂರಿನ ಬಂಟ ಸಮುದಾಯದವರು ಧರಿಸುತ್ತಾರೆ. ಈ ಉಂಗುರವು ವಿವಾಹಿತ ಮಹಿಳೆಯರು ಮತ್ತು ನವ ವಧುವನ್ನು ಕೆಟ್ಟ ಸಂದರ್ಭಗಳಿಂದ ರಕ್ಷಿಸುತ್ತದೆ ಎಂಬುದು ಬಂಟ ಸಮುದಾಯದ ನಂಬಿಕೆಯಾಗಿದೆ. ಬಂಟ ಸಮುದಾಯಕ್ಕೆ ಸೇರಿದ ನಟಿ ಐಶ್ವರ್ಯ ರೈ 2007ರಲ್ಲಿ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅವರನ್ನು ಮದುವೆಯಾದ ನಂತರ ತಮ್ಮ ಸಮುದಾಯದ ಸಂಪ್ರದಾಯದಂತೆ ಯಾವಾಗಲೂ ತನ್ನ ಕೈಯಲ್ಲಿ ವಂಕಿ ಉಂಗುರವನ್ನು ಧರಿಸುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಉಂಗುರವನ್ನು ಬಂಟ ಸಮುದಾಯ ಮಾತ್ರವಲ್ಲದೇ ದಕ್ಷಿಣ ಭಾರತದ ಸಮುದಾಯದ ಅನೇಕ ವಿವಾಹಿತ ಮಹಿಳೆಯರು ಧರಿಸುತ್ತಾರೆ.

ಇದನ್ನೂ ಓದಿ: Bollywood Cinema: ಜೀವನ ಪ್ರೀತಿಯ ತೀವ್ರತೆ ಸಾರಿದ 5 ಬಾಲಿವುಡ್ ಚಿತ್ರಗಳಿವು

ಹಲವಾರು ವಿನ್ಯಾಸಗಳಲ್ಲಿ ಲಭ್ಯ:
ಈ ವಂಕಿ ಉಂಗುರವು ಹಲವಾರು ವಿನ್ಯಾಸಗಳಲ್ಲಿ ಲಭ್ಯವಿದೆ, ಉದಾಹರಣೆಗೆ ವಿ-ಆಕಾರದ ತೆಳುವಾದ ಚಿನ್ನದ ಬ್ಯಾಂಡ್ ಅಥವಾ ನಟಿ ಐಶ್ವರ್ಯ ರೈ ಧರಿಸಿದಂತೆ ವಜ್ರದ ಬ್ಯಾಂಡ್ ನಲ್ಲಿ ಸಿಗುತ್ತದೆ. ಈ ಉಂಗುರವನ್ನು ಮಂಗಳೂರಿನ ವಿವಾಹಿತ ಮಹಿಳೆಯರು ತಮ್ಮ ಬಲಗೈಯ ಉಂಗುರ ಬೆರಳಿಗೆ ಧರಿಸುತ್ತಾರೆ. ಇದರಿಂದ ಅವರು ವಿವಾಹಿತರು ಎಂದು ಹೇಳುತ್ತಾರೆ. ಅಲ್ಲದೇ ಈ ಉಂಗುರವು ಮಹಿಳೆಯರಿಗೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ, ಉದಾಹರಣೆಗೆ ದುಷ್ಟ ಶಕ್ತಿಗಳಿಂದ ಅವರನ್ನು ರಕ್ಷಿಸುತ್ತದೆ ಮತ್ತು ಅವರಿಗೆ ಶಕ್ತಿಯನ್ನು ನೀಡುತ್ತದೆ ಮತ್ತು ಅವರ ವೈವಾಹಿಕ ಜೀವನ ಸಂತೋಷ ಮತ್ತು ಪ್ರೀತಿಯಿಂದ ತುಂಬಿರುವಂತೆ ಮಾಡುತ್ತದೆ ಎಂಬ ನಂಬಿಕೆ ಇದೆ. ಐಶ್ವರ್ಯ ರೈ ಮತ್ತು ಅಭಿಷೇಕ್‌ ಬಚ್ಚನ್‌ ವಿವಾಹ ವಿಚ್ಛೇದನ ಪಡೆಯಲಿದ್ದಾರೆ ಎಂಬ ವದಂತಿಗಳ ನಡುವೆ ಈ ಉಂಗುರ ವಿಶೇಷವಾಗಿ ಗಮನ ಸೆಳೆದಿದೆ.

Continue Reading

ವಾಣಿಜ್ಯ

Mukesh Ambani: ಬಜೆಟ್ ದಿನ 9,200 ಕೋಟಿ ರೂ. ಕಳೆದುಕೊಂಡಿದ್ದ ಮುಕೇಶ್ ಅಂಬಾನಿ!

ಕೇಂದ್ರ ಬಜೆಟ್‌ ಮಂಡನೆಯಾದ ದಿನ ಷೇರು ಮಾರುಕಟ್ಟೆಯು ಸಣ್ಣ ಕುಸಿತದೊಂದಿಗೆ ಕ್ಲೋಸ್‌ ಆಗಿತ್ತು. ಆದರೆ ಇದು ವಹಿವಾಟಿನ ವೇಳೆ ಬಹುದೊಡ್ಡ ಪರಿಣಾಮವನ್ನು ಬೀರಿತ್ತು. ಕೆಲವು ಷೇರುಗಳು ತೀವ್ರವಾಗಿ ಕುಸಿದರೆ, ಇನ್ನು ಸಣ್ಣ ಪ್ರಮಾಣದಲ್ಲಿ ಏರಿಕೆ ಕಂಡವು. ಇದು ಮುಕೇಶ್ ಅಂಬಾನಿ (Mukesh Ambani) ಸೇರಿದಂತೆ ದೇಶದ ದೊಡ್ಡ ಬಿಲಿಯನೇರ್‌ಗಳ ಸಂಪತ್ತಿನ ಮೇಲೆ ಭಾರೀ ಪರಿಣಾಮವನ್ನು ಬೀರಿತು.

VISTARANEWS.COM


on

By

Mukesh Ambani
Koo

ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹವನ್ನು (Ananth Ambani and Radhika Merchant’s wedding) ಅದ್ಧೂರಿಯಾಗಿ ನಡೆಸಿ ವಿಶ್ವದ ಗಮನ ಸೆಳೆಯುವಂತೆ ಮಾಡಿದ್ದ ರಿಲಯನ್ಸ್ ಉದ್ಯಮಿ ಮುಕೇಶ್ ಅಂಬಾನಿ (businessman Mukesh Ambani) 2024ರ ಕೇಂದ್ರ ಬಜೆಟ್ (Union Budget 2024) ಮಂಡನೆಯಾದ ದಿನ ಷೇರು ಮಾರುಕಟ್ಟೆಯಲ್ಲಿ ಆದ ಏರುಪೇರಿನಿಂದಾಗಿ ಬರೋಬ್ಬರಿ 9,200 ಕೋಟಿ ರೂ. ಕಳೆದುಕೊಂಡಿದ್ದರು!

ಕೇಂದ್ರ ಬಜೆಟ್‌ ದಿನ ಷೇರು ಮಾರುಕಟ್ಟೆಯು ಸಣ್ಣ ಕುಸಿತದೊಂದಿಗೆ ಕ್ಲೋಸ್‌ ಆಗಿತ್ತು. ಆದರೆ ಇದು ವಹಿವಾಟಿನ ವೇಳೆ ಬಹುದೊಡ್ಡ ಪರಿಣಾಮವನ್ನು ಬೀರಿತ್ತು. ಈ ಸಂದರ್ಭದಲ್ಲಿ ವಹಿವಾಟಿನಲ್ಲಿ ಗಮನಾರ್ಹವಾದ ಏರಿಳಿತಗಳು ಕಂಡುಬಂದವು. ಕೆಲವು ಷೇರುಗಳು ತೀವ್ರವಾಗಿ ಕುಸಿದರೆ ಇನ್ನು ಸಣ್ಣ ಪ್ರಮಾಣದಲ್ಲಿ ಏರಿಕೆ ಕಂಡವು. ಇದು ದೇಶದ ದೊಡ್ಡ ಬಿಲಿಯನೇರ್‌ಗಳ ಸಂಪತ್ತಿನ ಮೇಲೆ ಭಾರೀ ಪರಿಣಾಮವನ್ನು ಬೀರಿತು.

ಏಷ್ಯಾದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಅವರ ನಿವ್ವಳ ಮೌಲ್ಯದಲ್ಲಿ ಈ ದಿನ ಗಣನೀಯ ಇಳಿಕೆಯಾಗಿದೆ. ಬಜೆಟ್ ದಿನದಂದು, ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಏರುವ ನಿರೀಕ್ಷೆ ಇತ್ತು. ಇದರಿಂದ ಮುಕೇಶ್ ಅಂಬಾನಿ ಅವರ ನಿವ್ವಳ ಮೌಲ್ಯವನ್ನು ಹೆಚ್ಚಾಗುತ್ತದೆ ಎಂದೇ ಭಾವಿಸಲಾಗಿತ್ತು. ಆದರೆ ಮಾರುಕಟ್ಟೆಯಲ್ಲಿ ಇದು ವ್ಯತಿರಿಕ್ತ ಪರಿಣಾಮ ಬೀರಿತು.

ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ ಅಂಬಾನಿ ಅವರ ನಿವ್ವಳ ಮೌಲ್ಯವು 1.10 ಬಿಲಿಯನ್ ಡಾಲರ್‌ ಅಂದರೆ ಸರಿಸುಮಾರು 9200 ಕೋಟಿ ರೂ. ಗಳಷ್ಟು ಕಡಿಮೆಯಾಗಿದೆ. ಈ ಕುಸಿತದ ಹೊರತಾಗಿಯೂ ಈ ವರ್ಷದ ಆರಂಭದಲ್ಲಿ ಅವರ ಸಂಪತ್ತು 16 ಶತಕೋಟಿ ಡಾಲರ್‌ಗಳಷ್ಟು ಹೆಚ್ಚಾಗಿತ್ತು.

ಕಳೆದ ಕೆಲವು ದಿನಗಳಲ್ಲಿ ಅಂಬಾನಿ ಅವರ ನಿವ್ವಳ ಮೌಲ್ಯವು 7 ಶತಕೋಟಿ ಡಾಲರ್‌ಗಿಂತ ಕಡಿಮೆಯಾಗಿದೆ. ಜುಲೈ 19ರಂದು ಅವರ ನಿವ್ವಳ ಮೌಲ್ಯವು 119 ಶತಕೋಟಿ ಡಾಲರ್ ಆಗಿತ್ತು. ಆದರೆ ಅದು ಈಗ 112 ಶತಕೋಟಿ ಡಾಲರ್‌ಗೆ ಇಳಿದಿದೆ ಎನ್ನಲಾಗಿದೆ.

ಇದನ್ನೂ ಓದಿ: Jio Air Fiber: ಗ್ರಾಹಕರಿಗೆ ಭರ್ಜರಿ ರಿಯಾಯಿತಿ ಘೋಷಿಸಿದ ಜಿಯೊ! ಎಲ್ಲಿಯವರೆಗೆ ಈ ಆಫರ್‌?

ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಇತ್ತೀಚೆಗೆ ಕುಸಿಯುತ್ತಲೇ ಇದ್ದು, ಮುಂದಿನ ದಿನಗಳಲ್ಲಿ ಅಂಬಾನಿ ಸಂಪತ್ತಿನಲ್ಲಿ ಮತ್ತಷ್ಟು ಕುಸಿತ ಉಂಟಾಗಬಹುದು ಎನ್ನಲಾಗಿದೆ.

Mukesh Ambani
Mukesh Ambani


ಇದಕ್ಕೆ ವ್ಯತಿರಿಕ್ತವಾಗಿ ಉದ್ಯಮಿ ಗೌತಮ್ ಅದಾನಿ ಅವರ ಸಂಪತ್ತು ಹೆಚ್ಚಳವಾಗಿದೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ ಅದಾನಿ ಅವರ ನಿವ್ವಳ ಮೌಲ್ಯವು 751 ಮಿಲಿಯನ್ ಡಾಲರ್‌ಗಳು ಅಂದರೆ ಸರಿಸುಮಾರು 63 ಕೋಟಿ ರೂಪಾಯಿ ಹೆಚ್ಚಳವಾಗಿದೆ. ಅವರ ಸಂಪತ್ತು 102 ಬಿಲಿಯನ್ ಡಾಲರ್‌ ಗಳನ್ನು ತಲುಪಿದೆ. ಈ ವರ್ಷ ಅವರ ಸಂಪತ್ತು 17.8 ಬಿಲಿಯನ್ ಡಾಲರ್‌ಗಳಷ್ಟು ಏರಿಕೆಯಾಗಿದೆ.

Continue Reading

ವಾಣಿಜ್ಯ

Aadhaar Update: ಹೊಸ ನಿಯಮ ಪ್ರಕಾರ ಆಧಾರ್ ವಿಳಾಸ ನವೀಕರಣಕ್ಕೆ ಯಾವ ದಾಖಲೆ ಬಳಸಬಹುದು?

ಬಹುತೇಕ ಕೆಲಸಗಳಿಗೆ ದಾಖಲೆಯಾಗಿ ಬಳಸಲ್ಪಡುವ ಭಾರತೀಯ ನಾಗರಿಕರ ಗುರುತಿನ ಪುರಾವೆಯಾಗಿರುವ ಆಧಾರ್ ಕಾರ್ಡ್ ನಲ್ಲಿ (Aadhaar Update) ವಿಳಾಸ ಬದಲಾವಣೆಗೆ ಇನ್ನು ಮುಂದೆ ವಿದ್ಯುತ್, ನೀರು, ದೂರವಾಣಿ ಬಿಲ್ ಗಳನ್ನು ಬಳಸಬಹುದು. ಆದರೆ ಇದಕ್ಕೆ ಕೆಲವು ನಿಯಮಗಳಿವೆ. ಅದು ಏನು, ಹೇಗೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

VISTARANEWS.COM


on

By

Aadhaar Update
Koo

ಆಧಾರ್ ಕಾರ್ಡ್ ಭಾರತೀಯ ನಾಗರಿಕರ ಗುರುತಿನ ( identity of Indian citizens) ದಾಖಲೆಯಾಗಿದೆ. ಈ ಸರ್ಕಾರಿ ದಾಖಲೆಯನ್ನು ಅನೇಕ ಕೆಲಸಗಳಿಗಾಗಿ ಬಳಸಲಾಗುತ್ತದೆ. ಆಧಾರ್ ಕಾರ್ಡ್ ನಲ್ಲಿ (Aadhaar Update) ಯಾವುದೇ ಮಾಹಿತಿ (name and address) ಹಳೆಯದಾಗಿದ್ದರೆ ಅದನ್ನು ಕಾಲಕಾಲಕ್ಕೆ ಅಪ್ಡೇಟ್ ಮಾಡಿಕೊಳ್ಳುವುದು ಬಹುಮುಖ್ಯವಾಗಿರುತ್ತದೆ. ಈ ಮಾಹಿತಿ ಅಪ್ಡೇಟ್ ಗೆ ಕೆಲವೊಂದು ಪೂರಕ ದಾಖಲೆಗಳನ್ನು ಒದಗಿಸಬೇಕಾಗುತ್ತದೆ.

ಆಧಾರ್ ಕಾರ್ಡ್‌ನಲ್ಲಿ ನೀಡಲಾದ ಮಾಹಿತಿಯು ಹಳೆಯದಾಗಿರಬಾರದು. ಯಾಕೆಂದರೆ ಆಗಾಗ್ಗೆ ಇದನ್ನು ಗುರುತಿನ ಪುರಾವೆಯಾಗಿ ಬಳಸಬೇಕಾಗುತ್ತದೆ. ಆಧಾರ್ ಕಾರ್ಡ್‌ನಲ್ಲಿರುವ ಹೆಸರು ಮತ್ತು ವಿಳಾಸ ಮಾಹಿತಿಯು ಸರಿಯಾಗಿರಬೇಕು. ಒಂದು ವೇಳೆ ಆಧಾರ್ ಕಾರ್ಡ್‌ನಲ್ಲಿರುವ ವಿಳಾಸವನ್ನು ನವೀಕರಿಸಲು ಯೋಚಿಸುತ್ತಿದ್ದರೆ ಇದಕ್ಕಾಗಿ ಬಳಸುವ ದಾಖಲೆಗಳು ಯಾವುದು ಎಂಬುದನ್ನು ತಿಳಿದುಕೊಳ್ಳುವುದು ಬಹುಮುಖ್ಯ.

ಆಧಾರ್ ಕಾರ್ಡ್ ಹೊಂದಿರುವವರು ಇನ್ನು ಮುಂದೆ ಹೆಸರು, ವಿಳಾಸ ನವೀಕರಣಕ್ಕೆ ಈ ಕೆಲವು ದಾಖಲೆಗಳನ್ನು ಬಳಸಬಹುದು ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ಸ್ಪಷ್ಟಪಡಿಸಲಾಗಿದೆ.

Aadhaar Update
Aadhaar Update


ಯಾವ ದಾಖಲೆಗಳು ಮುಖ್ಯ?

ಆಧಾರ್ ಕಾರ್ಡ್‌ನಲ್ಲಿರುವ ಹೆಸರು, ವಿಳಾಸವನ್ನು ನವೀಕರಿಸಲು ಮಾನ್ಯವಾದ ಭಾರತೀಯ ಪಾಸ್‌ಪೋರ್ಟ್, ಪಾನ್ ಕಾರ್ಡ್, ಡ್ರೈವಿಂಗ್ ಲೈಸನ್ಸ್ ಅನ್ನು ಪುರಾವೆಯಾಗಿ ಬಳಸಬಹುದು. ಆದರೆ ಎಲ್ಲರೂ ಪಾಸ್ ಪೋರ್ಟ್, ಪಾನ್ ಕಾರ್ಡ್ ಅಥವಾ ಡ್ರೈವಿಂಗ್ ಲೈಸನ್ಸ್ ಹೊಂದಿರುವುದಿಲ್ಲ. ಅಲ್ಲದೇ ಪಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಅನ್ನು ಅನ್ನು ವಿಳಾಸದ ಪುರಾವೆಯಾಗಿ ಪರಿಗಣಿಸಲಾಗುವುದಿಲ್ಲ. ಆದರೆ ಪಡಿತರ ಮತ್ತು ಇ-ಪಡಿತರ ಕಾರ್ಡ್ ಅನ್ನು ವಿಳಾಸದ ಪುರಾವೆಯಾಗಿ ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: Income Tax Return: ಹಳೆಯ ತೆರಿಗೆ ಪದ್ದತಿ ಕೊನೆಯಾಗುತ್ತಾ? CBDT ಅಧ್ಯಕ್ಷ ಹೇಳೋದೇನು?

ನೀರು, ವಿದ್ಯುತ್‌ ಬಿಲ್‌:

ಈಗ ಇದರೊಂದಿಗೆ ವಿದ್ಯುತ್, ನೀರು ಮತ್ತು ದೂರವಾಣಿ ಬಿಲ್‌ಗಳನ್ನು ವಿಳಾಸದ ಪುರಾವೆಯಾಗಿ ಬಳಸಬಹುದು. ಮುಖ್ಯವಾಗಿ ಆಧಾರ್ ಕಾರ್ಡ್‌ನಲ್ಲಿರುವ ವಿಳಾಸವನ್ನು ನವೀಕರಿಸಲು ಯಾರ ಹೆಸರಿನಲ್ಲಿ ವಿದ್ಯುತ್ ಬಿಲ್, ದೂರವಾಣಿ ಬಿಲ್, ನೀರಿನ ಬಿಲ್ ಅನ್ನು ಬಳಸಬಹುದು. ಆದರೆ ಇದು ಕನಿಷ್ಠ 3 ತಿಂಗಳಿಗಿಂತ ಹಳೆಯದಾಗಿರಬೇಕು.

ಪೋಸ್ಟ್‌ಪೇಯ್ಡ್ ಮೊಬೈಲ್ ಬಿಲ್:

ಇದಲ್ಲದೇ ಪೋಸ್ಟ್‌ಪೇಯ್ಡ್ ಮೊಬೈಲ್ ಬಿಲ್ ಅನ್ನು ಸಹ ಬಳಸಬಹುದು. ಆಧಾರ್ ಕಾರ್ಡ್ ಹೊಂದಿರುವವರು ತಮ್ಮ ಜೀವ ಮತ್ತು ವೈದ್ಯಕೀಯ ವಿಮಾ ಪಾಲಿಸಿಗಳನ್ನು ಬಳಸಬಹುದು ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಹೇಳುತ್ತದೆ. ಆದರೆ ಈ ನೀತಿಯು ಬಿಲ್ ವಿತರಿಸಿದ ದಿನಾಂಕದಿಂದ 1 ವರ್ಷದವರೆಗೆ ಮಾತ್ರ ಮಾನ್ಯವಾಗಿರುತ್ತದೆ.

Continue Reading
Advertisement
IND vs SL
ಕ್ರೀಡೆ23 mins ago

IND vs SL: ಗ್ಲೆನ್​ ಮ್ಯಾಕ್ಸ್​ವೆಲ್​ ಟಿ20 ವಿಶ್ವ ದಾಖಲೆ ಮುರಿದ ಸೂರ್ಯಕುಮಾರ್

Gold Rate Today
ಚಿನ್ನದ ದರ37 mins ago

Gold Rate Today: ಆಭರಣ ಖರೀದಿಸುವ ಯೋಚನೆಯಲ್ಲಿದ್ದೀರಾ? ಇಂದಿನ ಬೆಲೆ ಚೆಕ್‌ ಮಾಡಿ

Bigg Boss OTT 3 Anil Kapoor as the worst ever host of Bigg Boss
ಬಿಗ್ ಬಾಸ್42 mins ago

Bigg Boss OTT 3: ಅನಿಲ್​ ಕಪೂರ್ ʻವರ್ಸ್ಟ್‌ ನಿರೂಪಕʼ ಎಂದ ನೆಟ್ಟಿಗರು ; ಬೇಸತ್ತ ವೀಕ್ಷಕರು!

CH Vijayashankar
ಪ್ರಮುಖ ಸುದ್ದಿ55 mins ago

CH Vijayashankar: ಮೇಘಾಲಯ ರಾಜ್ಯಪಾಲರಾಗಿ ಸಿ.ಎಚ್. ವಿಜಯಶಂಕರ್ ನೇಮಕ

Vinay Rajkumar pepe the film A certificate
ಸ್ಯಾಂಡಲ್ ವುಡ್1 hour ago

Vinay Rajkumar: ಸೆನ್ಸಾರ್ ಪಾಸಾದ ‘ಪೆಪೆ’; ವಿನಯ್ ರಾಜ್ ಕುಮಾರ್ ಚಿತ್ರಕ್ಕೆ A’ ಸರ್ಟಿಫಿಕೇಟ್!

INDW vs SLW Final
ಪ್ರಮುಖ ಸುದ್ದಿ1 hour ago

INDW vs SLW Final: ಇಂದು ಭಾರತ-ಲಂಕಾ ಏಷ್ಯಾ ಕಪ್​ ಫೈನಲ್​; 8ನೇ ಟ್ರೋಫಿ ಮೇಲೆ ಕಣ್ಣಿಟ್ಟ ಹರ್ಮನ್​ಪ್ರೀತ್​​ ಪಡೆ  

Suzuki India
ಆಟೋಮೊಬೈಲ್1 hour ago

4 ಲಕ್ಷ ಬೈಕ್‌, ಸ್ಕೂಟರ್‌ ಹಿಂಪಡೆಯಲು ಮುಂದಾದ ಸುಜುಕಿ ಇಂಡಿಯಾ; ಈ ಪಟ್ಟಿಯಲ್ಲಿ ನಿಮ್ಮ ವಾಹನವೂ ಇದ್ಯಾ? ಹೀಗೆ ಚೆಕ್‌ ಮಾಡಿ

rowdysheeters police firing
ಕ್ರೈಂ1 hour ago

Police Firing: ಕೈ ಕಟ್‌ ಮಾಡಿದ ರೌಡಿಗಳ ಕಾಲಿಗೆ ಪೊಲೀಸರ ಗುಂಡೇಟು

ಪ್ರಮುಖ ಸುದ್ದಿ2 hours ago

Olympic Games Paris: ಒಲಿಂಪಿಕ್ಸ್​ನಲ್ಲಿ ಇಂದು ಭಾರತದ ಸ್ಪರ್ಧೆಗಳ ವಿವರ

Bigg Boss Marathi 5 premiere ritesh deshmukh co star shubhankar tawde
ಬಿಗ್ ಬಾಸ್2 hours ago

Bigg Boss Marathi 5: ಶುರುವಾಯ್ತು ಮರಾಠಿ ಬಿಗ್​ಬಾಸ್ 5; ಈ ಬಾರಿ ರಿತೇಶ್ ದೇಶ್​ಮುಖ್ ನಿರೂಪಕ!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ15 hours ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ20 hours ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ21 hours ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

Ankola landslide
ಉತ್ತರ ಕನ್ನಡ2 days ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ2 days ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ2 days ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ2 days ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ3 days ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್3 days ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ3 days ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

ಟ್ರೆಂಡಿಂಗ್‌