Dattatreya Jayanti 2022 | ಸ್ಮರಣೆ ಮಾತ್ರಕೆ ಒಲಿಯುವ ದೇವರು ಶ್ರೀಗುರು ದತ್ತ - Vistara News

ಪ್ರಮುಖ ಸುದ್ದಿ

Dattatreya Jayanti 2022 | ಸ್ಮರಣೆ ಮಾತ್ರಕೆ ಒಲಿಯುವ ದೇವರು ಶ್ರೀಗುರು ದತ್ತ

ಇಂದು ದತ್ತ ಜಯಂತಿ (Dattatreya Jayanti 2022). ಶ್ರೀ ಗುರು ದತ್ತಾತ್ರೇಯನ ಅವತಾರ ಹೇಗಾಯಿತು? ಪೂಜೆ ಹೇಗೆ ಎಂದು ತಿಳಿಸುವ ವಿಶೇಷ ಲೇಖನ ಇಲ್ಲಿದೆ.

VISTARANEWS.COM


on

Dattatreya Jayanti 2022
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ರಾಜಗುರು ದ್ವಾರಕನಾಥ್‌
ಮಾಲಕಮಂಡಲು ಧರಃ ಕರಪದ್ಮಯುಗ್ಮೆ
ಮಧ್ಯಸ್ಥಪಾಣಿಯುಗಲೇ ಡಮರು ತ್ರಿಶೂಲೇ|
ಯಸ್ಯಸ್ತ ಊಧ್ರ್ವಕರಯೋಃ ಶುಭ ಶಂಖಚಕ್ರೆ
ವಂದೇ ತಮತ್ರಿವರದಂ ಭುಜಷಟ್ಕಯುಕ್ತಂ ||
ಈ ಸ್ತೋತ್ರದಅರ್ಥವೆಂದರೆ ಕೆಳಗಿನವೆರಡು ಕೈಗಳೆಂಬ ಕಮಲಗಳಲ್ಲಿರುದ್ರಾಕ್ಷ ಮಾಲೆ, ಕಮಂಡಲಗಳೂ, ನಡುವಿನವೆರಡು ಕೈಗಳಲ್ಲಿಡಮರು ತ್ರಿಶೂಲಗಳೂ ಮತ್ತು ಯಾವಾತನ ಮೆಲಿನವೆರಡು ಕೈಗಳಲ್ಲಿಶುಭಪ್ರದವಾದ ಶಂಖ – ಚಕ್ರಗಳು ಉಂಟೋ ಅಂತಹ ಆರು ಭುಜಗಳುಳ್ಳ ಅತ್ರಿಋುಷಿಗೆ ವರಪ್ರದನಾದವನನ್ನು ಅಂದರೆ ದತ್ತನನ್ನು ವಂದಿಸುವೆ.

********

ಮಾರ್ಗಶಿರ ಮಾಸದ ಶುಕ್ಲಪಕ್ಷದ ರೋಹಿಣಿ ನಕ್ಷತ್ರವನ್ನು ಹೊಂದಿರುವ ಚತುರ್ದಶಿ ಬಹಳ ಪುಣ್ಯದ ದಿನ. ಏಕೆಂದರೆ ಅಂದು ಶ್ರೀಗುರು ದತ್ತಾತ್ರೇಯರ ಜಯಂತಿ. ಕೆಲವೆಡೆ ಮಾರ್ಗಶಿರ ಮಾಸದ ಶುಕ್ಲಪಕ್ಷದ ಶುದ್ಧ ಪೂರ್ಣಮಿಯಂದು ದತ್ತಜಯಂತಿಯನ್ನು ಆಚರಿಸುವುದೂ ಉಂಟು. ಇಂದು “ಕಾರ್ತಿಕ ದೀಪʼʼದ ದಿನವೂ ಹೌದು. ದಕ್ಷಿಣ ಭಾರತದಲ್ಲಿ ಅದರಲ್ಲಿಯೂ ಮುಖ್ಯವಾಗಿ ತಮಿಳುನಾಡಿನಲ್ಲಿ ಈ ದಿನವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ತಮಿಳರ ಪಂಚಾಂಗದ ಪ್ರಕಾರ ಹುಣ್ಣಿಮೆಯ ಈ ದಿನವನ್ನು “ಕಾರ್ತಿಕೈʼʼಎಂದು ಕರೆಯಲಾಗುತ್ತದೆ. ದತ್ತ ಜಯಂತಿ ಮತ್ತು ಸುಬ್ರಹ್ಮಣ್ಯನಿಗೆ ಸೇರಿದ ಈ ವಿಶೇಷ ದಿನ ಇಂದು ಒದಗಿ ಬಂದಿದೆ. ಹೀಗಾಗಿ ಈ ಬಾರಿಯ ದತ್ತ ಜಯಂತಿಗೆ ವಿಶೇಷವಾದ ಮಹತ್ವವಿದೆ.

‘ದತ್ತ’ ಎಂದರೆ ಕೊಡುವವನು ಎಂದರ್ಥ. ಏನು ಕೇಳಿದರೂ ಕೊಡವವನು. ನೀವು ದತ್ತನನ್ನು ಎಲ್ಲಿಬೇಕಾದರೂ ಪ್ರಾರ್ಥಿಸಬಹುದು, ಕುಳಿತಲ್ಲಿ, ನಿಂತಲ್ಲ, ಮಲಗಿದಲ್ಲಿ ಎಲ್ಲಿಗೆ ಬೇಕಾದರೂ ಬಂದು ನಿಮ್ಮ ಇಷ್ಟಾರ್ಥವನ್ನು ಈಡೇರಿಸುತ್ತಾನೆ. ಬೇರೆಲ್ಲಾ ದೇವರಗಳಿಗೆ ನೀವು ಪೂಜೆ, ಅಭಿಷೇಕ, ಸಹಸ್ರನಾಮ, ವ್ರತಕಲ್ಪಾದಿಗಳನ್ನು ಭಕ್ತಿಯಿಂದ ಮಾಡಿ ಪ್ರಾರ್ಥಿಸಬೇಕು. ಆದರೆ ಸ್ಮರಣೆಮಾಡಿದ ಮಾತ್ರಕ್ಕೆ ಸಂತುಷ್ಟನಾಗಿ ಮನೋಕಾರ್ಯವನ್ನು ನೆರವೇರಿಸುವ ಜಗತ್ತಿನ ಏಕೈಕ ದೇವರು ದತ್ತ. ದತ್ತ ತ್ರಿಮೂರ್ತಿಗಳ ಸ್ವರೂಪ, ಸುಗುಣ ರೂಪ, ಅವಧೂತ ಪರಂಪರೆಯ ಸೃಷ್ಟಿ ಕರ್ತ. ನಾರಾಯಣನ ಅವತಾರಗಳಿಗೂ ಕಾರಣಕರ್ತ.

ದತ್ತನ ಅವತಾರ ಹೇಗೆ?
ಚಿತ್ರಕೂಟ ಅರಣ್ಯದಲ್ಲಿ ಸಪ್ತರ್ಷಿಗಳಲ್ಲಿ ಒಬ್ಬರಾದ ಅತ್ರಿಮಹರ್ಷಿಗಳು ತಮ್ಮ ಧರ್ಮಪತ್ನಿ ಅನುಸೂಯಾದೇವಿ ಯೊಂದಿಗೆ ವಾಸವಾಗಿದ್ದರು. ಅನುಸೂಯ ಪರಮ ಪತಿವ್ರತೆ. ಅತ್ಯಂತ ಸುಂದರಿ ಬೇರೆ. ಅತ್ರಿ ಮುನಿಗಳ ತಪೋನುಷ್ಠಾನಗಳು ಮತ್ತು ಅನುಸೂಯಾಳ ಪರಮಪತಿ ವ್ರತವು ಎಲ್ಲಲೋಕವನ್ನು ತಲೂಪಿತ್ತು. ಇಂದ್ರಾದಿ ದೇವತೆಗಳು ಎಲ್ಲಿ ಇವರಿಬ್ಬರು ತಮ್ಮ ಪುಣ್ಯದ ಪ್ರಭಾವದಿಂದ ಸ್ವರ್ಗದ ಅಧಿಪತಿಗಳಾಗುತ್ತಾರೋ ಎಂದು ಹೆದರಿ, ತ್ರಿಮೂರ್ತಿಗಳ ಹತ್ತಿರ ಹೋಗಿ ಈ ಬಗ್ಗೆ ಹೇಳಿದರು. ಅನುಸೂಯಾಳನ್ನು ಅತಿಯಾಗಿ ಪ್ರಶಂಸಿಸಿ ತ್ರಿಮೂರ್ತಿಗಳಿಗೆ ಕೋಪ ಬರುವಂತೆ ಮಾಡಿದರು. ಆಕೆಯ ವ್ರತಭಂಗ ಮಾಡದಿದ್ದರೆ ಮೂರು ಲೋಕವನ್ನೂ ಆಕ್ರಮಣ ಮಾಡಿಕೊಂಡುಬಿಡುತ್ತಾಳೆ ಎಂದು ಹೆದರಿಸಿದರು.

ಹೀಗಾಗಿ ತ್ರಿಮೂರ್ತಿಗಳು ಆಕೆಯ ಪತಿವ್ರತವನ್ನು ಪರೀಕ್ಷಿಸಲು ಕಾರಣಿಕ ವೇಷ ಹಾಕಿಕೊಂಡು ಅನಸೂಯಳಿದ್ದ ಆಶ್ರಮಕ್ಕೆ ಬಂದು ಭಿಕ್ಷೆ ಬೇಡಿದರು. ಈ ಸಂದರ್ಭದಲ್ಲಿ ಅತ್ರಿಮಹರ್ಷಿಗಳು ತಪಸ್ಸಿಗೆಂದು ಹೊರಹೋಗಿದ್ದರು. ‘‘ಸಾದ್ವೀಮಣಿಯೇ, ನಾವು ಮೂವರೂ ಇಚ್ಛಾಭೋಜನ ಮಾಡುವ ಆಸೆಯಿಂದ ಇಲ್ಲಿಗೆ ಬಂದಿದ್ದೇವೆ. ನಿಮಗೆ ನಮಗೆ ಭೋಜನ ವ್ಯವಸ್ಥೆ ಮಾಡಲು ಸಾಧ್ಯವೇ’’ ಎಂದು ಕೇಳಲು ಅನುಸೂಯ ಸಂತೋಷದಿಂದ ಒಪ್ಪಿದಳು.
ಆಗ ಅತಿಥಿಗಳ ವೇಷದಲ್ಲಿದ್ದ ತ್ರಿಮೂರ್ತಿಗಳು ,‘‘ನೀನು ನಗ್ನಳಾಗಿ ಬಂದು ಬಡಿಸಿದರೆ ಮಾತ್ರ ನಾವು ಭೋಜನ ಮಾಡುತ್ತೇವೆ’’ ಎಂದು ಹೇಳಿದರು.

ಅತಿಥಿಗಳ ಈ ಅನಿರೀಕ್ಷಿತ ಅಪೇಕ್ಷೆ ಕೇಳಿ ಅನುಸೂಯಾದೇವಿಯು ಗೊಂದಲಕ್ಕೆಬಿದ್ದಳು. ಇವರ ಬೇಡಿಕೆಯನ್ನು ನೋಡಿದರೆ ನನ್ನ ಸತ್ವಪರೀಕ್ಷೆಗಾಗಿಯೇ ಬಂದವರ ಹಾಗೆ ಕಾಣಿಸುತ್ತದೆ, ಇವರು ಬಹುಶಃ ಅವತಾರಪುರುಷರೇ ಇರಬೇಕೆಂದುಕೊಂಡು, ನಿಮ್ಮ ಇಚ್ಛೆಯಂತೆಯೇ ಊಟಕ್ಕೆ ಬಡಿಸುತ್ತೇನೆ’’ ಎಂದು ಹೇಳಿ ಪಾಕಶಾಲೆಗೆ ಹೋದಳು. ಭೋಜನಕ್ಕೆ ತಯಾರು ಮಾಡಿದ ಬಗೆಬಗೆಯ ಪದಾರ್ಥಗಳನ್ನು ತೆಗದುಕೊಂಡ ಅನುಸೂಯ ಪತಿ ದೇವರ ಪ್ರಾರ್ಥನೆ ಮಾಡಿ; ‘‘ನನಗೆ ಪರೀಕ್ಷೆಯ ಸಮಯ ಬಂದಿದೆ, ನಿಮ್ಮ ಸಹಕಾರ ವಿರಲಿ’’ಎಂದು ಕೋರಿಕೊಂಡು, ಅನ್ನಪೂರ್ಣೆಶ್ವರಿಯನ್ನು ಪ್ರಾರ್ಥಸಿ, ನಗ್ನಳಾಗಿ ಬಡಿಸಳು ಹೋದಳು.

ಆಗ ಆಕೆಯ ಪತಿವ್ರತದ ಪ್ರಭಾವದಿಂದಾಗಿ ತ್ರಿಮೂರ್ತಿಗಳೂ ಶಿಶುಗಳಾಗಿ ಪರಿವರ್ತನೆಗೊಂಡಿದ್ದರು. ಕೂಡಲೇ ಅನುಸೂಯ ಮಾತೃಭಾವದಿಂದ ಈ ಶಿಶುಗಳನ್ನು ಎತ್ತಿಕೊಂಡು ಎದೆಹಾಲು ಕುಡಿಸಿ, ತೊಟ್ಟಿಲಲ್ಲಿಮಲಗಿಸಿ ಜೋಗುಳ ಹಾಡಿದಳು.

Dattatreya Jayanti 2022
ಶ್ರೀ ಗುರು ದತ್ತ ಪಾದುಕೆ

ಅಷ್ಟರಲ್ಲಿ ಅತ್ರಿಮಹರ್ಷಿಗಳು ಬಂದು ವಿಷಯವನ್ನೆಲ್ಲಾ ತಿಳಿದರು. ಅವರಿಗೆ ಶಿಶು ಗಳಾಗಿರುವುದು ತ್ರಿಮೂರ್ತಿಗಳೇ ಎಂದು ತಿಳಿದು ಹೋಯಿತು. ಇಷ್ಟರಲ್ಲಿತ್ರಿಮೂರ್ತಿಗಳು ಪ್ರತ್ಯಕ್ಷ ರಾಗಿ, ಬೇಕಾದವರ ಕೇಳುವಂತೆ ಸೂಚಿಸಿದರು. ಆಗ ಅನುಸೂಯಾ ದೇವಿಯು ಈ ಮೂವರು ಶಿಶುಗಳನ್ನೂಬಿಟ್ಟು ಹೋಗುವಂತೆ ಕೇಳಿಕೊಳ್ಳುತ್ತಾರೆ. ಆಗ ತ್ರಿಮೂರ್ತಿಗಳು ‘ತಥಾಸ್ತು’ ಎಂದು ಹೇಳಿ ತಮ್ಮ ಅಂಶದಿಂದ ಸೃಷ್ಟಿಯಾದ ಮೂವರು ಶಿಶುಗಳನ್ನು ಅಲ್ಲಿಯೇ ಬಿಟ್ಟು ಹೋಗುತ್ತಾರೆ. ಹೀಗಾಗಿ ದತ್ತರದು ‘ನಯೋನಿ’ ಸೃಷ್ಟಿ.

ಬ್ರಹ್ಮನ ಶಿಶುವಿಗೆ ಚಂದ್ರನೆಂದು, ವಿಷ್ಣುವಿನ ಶಿಶುವಿಗೆ ದತ್ತನೆಂದು, ಮಹೇಶ್ವರನ ಶಿಶುವಿಗೆ ದೂರ್ವಾಸನೆಂದು ನಾಮಕರಣ ಮಾಡಲಾಗುತ್ತದೆ. ಮುಂದೆ ತಾಯಿ ಅನುಸೂಯದೇವಿಯ ಅಪ್ಪಣೆಪಡೆದು ಚಂದ್ರನು ಚಂದ್ರಮಂಡಲಕ್ಕೂ ದೂರ್ವಾಸನು ತಪಸ್ಸಿಗಾಗಿ ಹೊರಟು ಹೋಗುತ್ತಾರೆ. ಆದರೆ ನಾರಾಯಣ ಸ್ವರೂಪಿಯಾದ ದತ್ತಾದೇವರು ತಾಯಿಯ ಬಳಿಯೇ ಉಳಿದುಕೊಂಡು, ಲೋಕರಕ್ಷಕರಾಗುತ್ತಾರೆ.

ಗುರು ಸ್ವರೂಪಿ ದತ್ತ
ದತ್ತರನ್ನು ಗುರು ಸ್ವರೂಪಿ ಎಂದು ಕರೆಯಲಾಗುತ್ತದೆ. ಅವರ ಚರಿತ್ರೆಯನ್ನು ‘ಶ್ರೀಗುರುಚರಿತ್ರೆ’ ಎಂದು ಹೆಸರಿಸಲಾಗಿದೆ. ಇದೊಂದು ಪ್ರಾಸಾಧಿಕ ಗ್ರಂಥವಾಗಿದ್ದು, ಭಾವಿಕ ಜನರಿಗೆ ಕಾಮಧೇನು, ಕಲ್ಪವೃಕ್ಷ ಗಳಂತೆ ಫಲಪ್ರದವಾಗಿದೆ. ಇದರ ಪಾರಾಯಣದಿಂದ ಪುರುಷಾರ್ಥಗಳು, ಅಷ್ಟಸಿದ್ದಿಗಳು ಲಭ್ಯವಾಗುತ್ತವೆ. ಧ್ಯಾನಕಾಂಡ, ಕರ್ಮಕಾಂಡ ಮತ್ತು ಭಕ್ತಿಕಾಂಡ ಎಂದು ಮೂರು ಕಾಂಡಗಳನ್ನು ಒಳಗೊಂಡ ಈ ಚರಿತ್ರೆಯು 53ಅಧ್ಯಾಯಗಳಲ್ಲಿವೆ. ಪ್ರತಿಯೊಂದು ಅಧ್ಯಯಕ್ಕೂ ತನ್ನದೇ ಆದ ಮಹತ್ವವಿರುತ್ತದೆ. ಕಷ್ಟ-ಕಾರ್ಪಣ್ಯ ಕಳೆಯಲು ಸಹಾಯಕವಾಗಿರುತ್ತದೆ.

ದೇವರಿಗೆ ಬಡವ-ಶ್ರೀಮಂತನೆಂಬ ಭೇದವಿಲ್ಲ, ಆ ಜಾತಿ- ಈ ಜಾತಿ ಶ್ರೇಷ್ಠವೆಂಬುದಿಲ್ಲ, ಎಲ್ಲರ ಕಷ್ಟವನ್ನೂ ದೂರ ಮಾಡುತ್ತಾನೆ ಎಂಬುದುದನ್ನು ಗುರುಚರಿತ್ರೆಯಲ್ಲಿ ಕಥೆಗಳ ಮೂಲಕ ನಿರೂಪಿಸಲಾಗಿದೆ. ಇದರ ಪಾರಾಯಣಕ್ಕಿಂತ ದೊಡ್ಡ ಪೂಜೆ ಇಲ್ಲ. ಇದನ್ನು ಶ್ರದ್ಧಾ ಭಕ್ತಿಯಿಂದ ಪಾರಾಯಣ ಮಾಡಿದರೆ ಏನನ್ನು ಬೇಕಾದರೂ ಗಳಿಸಬಹುದು. ಇದಕ್ಕೆ ನಾನೇ ಸಾಕ್ಷಿ. ವಿವಿಧ ರೀತಿಯ ಸಂಕಷ್ಟಗಳು, ಶತ್ರುಭೀತಿ ನಮ್ಮನ್ನೆಲ್ಲಾ ಕಾಡುತ್ತಿರುವ ಈ ಹೊತ್ತಲ್ಲಿ ಇದರ ಪಾರಾಯಣ ನಮ್ಮನ್ನು ಕಾಪಾಡುವುದರಲ್ಲಿ ಅನುಮಾನವಿಲ್ಲ. ದೈವಭಕ್ತರು ಮನೆ ಮನೆಗಳಲ್ಲಿ ಇದರ ಪಾರಾಯಣ ಮಾಡಿದರೆ ದೇಶ ಎಲ್ಲಾ ರೀತಿಯಲ್ಲಿಯೂ ಸುರಕ್ಷಿತವಾಗಿರುತ್ತದೆ. ಸಾಗರವನ್ನು ದಾಟಲು ನೌಕೆ ಬೇಕು ಅಂತೆಯೇ ಭವ ಸಾಗರವ ದಾಟಲು ಇರುವ ನೌಕೆ ಶ್ರೀಗುರು ಚರಿತ್ರೆ ಎಂಬುದನ್ನು ನಾವ್ಯಾರೂ ಮರೆಯಬಾರದು.

ಗುರು ಸ್ವರೂಪಿಯಾಗಿರುವ ಶ್ರೀದತ್ತರು ಬೋಧಿಸಿದ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ. ಶ್ರೀದತ್ತರೇ ಗುರುವು, ತತ್ತ್ವಸ್ವರೂಪನು, ಮಾರ್ಗವು, ಧ್ಯೇಯವು, ದಾರಿ-ಗುರಿಗಳೆರಡೂ ಆಗಿರುವ ತತ್ತ್ವಾರ್ಥಿ ಎನ್ನುತ್ತದೆ ಶಾಂಡಿಲ್ಯೋಪನಿಷತ್ತು. ದತ್ತರು ರಚಿಸಿದ ಕೃತಿಯೇ ‘ಅವಧೂತಗೀತೆ’.

ಅವತಾರ ಪುರುಷ ದತ್ತ
ದತ್ತರ ಮುಂದಿನ ಅವತಾರವೇ ಶ್ರೀಪಾದ ಶ್ರೀವಲ್ಲಭ ಮತ್ತು ಶ್ರೀನರಸಿಂಹ ಸರಸ್ವತಿ ಯತಿಗಳು. ದತ್ತನು ಒಟ್ಟು 24 ಅವತಾರವೆತ್ತಿದ್ದಾರೆ. ಸಾಕ್ಷಾತ್‌ ಶ್ರೀ ದತ್ತಾತ್ರೇಯರು ಆಂಧ್ರದ ಪೂರ್ವ ಗೋದಾವರಿ ಜಿಲ್ಲೆಯಲ್ಲಿನ ಶ್ರೀ ಕ್ಷೇತ್ರ ಪೀಠಾಪುರದಲ್ಲಿಶ್ರೀವಲ್ಲಭ ಎಂಬ ಹೆಸರಿನಲ್ಲಿ ಜನಿಸಿದರು. ನಂತರ ಮಹಾರಾಷ್ಟ್ರದ ಕರಂಜಿಪುರದಲ್ಲಿ ಬಾಲಕ ನೋರ್ವನಿಗೆ ವಿದ್ಯದಾನ ಮಾಡಿ (ಮುಂದೆ ಈ ಬಾಲಕನೇ ಶ್ರೀ ನರಸಿಂಹ ಸರಸ್ವತಿ ಯತಿಗಳು ಎಂದು ಜಗತ್ಪ್ರಸಿದ್ಧರಾಗುತ್ತಾರೆ) ಕೃಷ್ಣಾನದಿಯಲ್ಲಿ ಅದೃಶ್ಯರಾಗುತ್ತಾರೆ. ನರಸಿಂಹ ಸರಸ್ವತಿ ಯತಿಗಳು ನಮ್ಮ ರಾಜ್ಯದ ಗಾಣಗಾಪುರಕ್ಕೆ ಬಂದು ನೆಲೆಸಿದ್ದರು. ಅವರ ತಪ್ಪಸ್ಸಿನ ನೆಲ ಗಾಣಗಾಪುರ. ಅವರ ಪೂಜ್ಯ ನಿರ್ಗುಣ ಪಾದುಕೆ ಇಲ್ಲಿದೆ. ದತ್ತಭಕರ ನೆಚ್ಚಿನಕ್ಷೇತ್ರವಾಗಿ ಗಾಣಗಾಪುರ ವಿಖ್ಯಾತಿ ಪಡೆದಿದೆ. ಶ್ರೀ ನರಸಿಂಹ ಸರಸ್ವತಿ ಯತಿಗಳು ಕೂಡ ಮಂದೆ ಶ್ರೀಶೈಲದಲ್ಲಿ ಅದೃಶ್ಯರಾಗುತ್ತಾರೆ.

ಇಲ್ಲಿ ಆಶ್ಚರ್ಯದ, ಪವಾಡದ ಸಂಗತಿಯೊಂದನ್ನು ಹೇಳಬೇಕು. ದತ್ತ ಅವತಾರ ಎನಿಸಿಕೊಂಡಿರುವ ಎಲ್ಲ ಅವಧೂತರ ಸಮಾಧಿಗಳು ನಮಗೆ ಕಾಣಸಿಗುತ್ತವೆ. ಆದರೆ ಶ್ರೀಪಾದ ಶ್ರೀವಲ್ಲಭ ಮತ್ತು ಶ್ರೀ ನರಸಿಂಹ ಸರಸ್ವತಿ ಯತಿಗಳ ಸಮಾಧಿ ಎಲ್ಲೂ ಇಲ್ಲ!. ಹೀಗಾಗಿ ಅವರು ಈಗಲೂ ಭಕ್ತರನ್ನು ಕಾಯುತ್ತಿದ್ದಾರೆ ಎಂದೇ ನಾವು ನಂಬಿದ್ದೇವೆ. ಕಲಿಯುಗದಲ್ಲಿ ಜನರು ಅನ್ಯಮಾರ್ಗಗಳನ್ನು ತುಳಿದು ತಮ್ಮ ಮೌಲ್ಯಗಳನ್ನು ಕಳೆದುಕೊಂಡು ದುಖಿಃಸಬಾರದೆಂದು ಶ್ರೀಮನ್ನಾರಾಯಣನೇ ಈ ಯುಗದಲ್ಲಿದತ್ತಾತ್ರೇಯ ಸ್ವರೂಪದಲ್ಲಿ ನೆಲೆಸಿದ್ದಾರೆ.

ಪ್ರಧಾನಿ ಮೋದಿ ಗಾಣಗಾಪುರಕ್ಕೆ ಭೇಟಿ ನೀಡಲಿ
ದತ್ತಾವತಾರಿ ಶ್ರೀ ನರಸಿಂಹ ಸರಸ್ವತಿ ಯತಿಗಳು ನಮ್ಮ ರಾಜ್ಯದ ಗಾಣಗಾಪುರಕ್ಕೆ ಬಂದು ನೆಲೆಸಿದ್ದರು. ಅವರ ಪೂಜ್ಯ ನಿರ್ಗುಣ ಪಾದುಕೆ ಇಲ್ಲಿದೆ. ಹೀಗಾಗಿಯೇ ಗಾಣಗಾಪುರ ತ್ರಿಮೂರ್ತಿ ಸ್ವರೂಪಿ ದತ್ತ ದೇವರು ನೆಲೆಸಿರುವ ಪುಣ್ಯ ಭೂಮಿ. ತ್ರೀಮೂರ್ತಿಗಳು ಒಂದೆಡೆ ಪೂಜಿಸಲ್ಪಡುವ ಅಪರೂಪದ ಕ್ಷೇತ್ರ ಇದು. ನಾವಿಂದು ಭಾರತ ವಿಶ್ವಗುರುವಾಗಬೇಕೆನ್ನುತ್ತೇವೆ. ವಿಶ್ವ ಗುರುವಾಗಲು ನಮಗೆ ಖಂಡಿತವಾಗಿಯೂ ಗುರುಗಳ ಆಶೀರ್ವಾದ ಬೇಕೇ ಬೇಕು. ದೇಶದ ಚುಕ್ಕಾಣಿ ಹಿಡಿದಿರುವ ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ, ಗುರುವಿನ ಆಶೀರ್ವಾದ ಪಡೆದುಕೊಂಡಲ್ಲಿ, ಅವರು ಅಂದುಕೊಂಡಿರುವ ಕೆಲಸವನ್ನು ಮಾಡಲು ಸಾಧ್ಯವಾಗುತ್ತದೆ. ಭಾರತ ವಿಶ್ವಗುರುವಾಗಲೂ ಗುರುವಿನ ಜತೆಗೆ ತ್ರೀಮೂರ್ತಿಗಳ ಆಶೀರ್ವಾದ ದೊರೆತಂತಾಗುತ್ತದೆ.

ದತ್ತನ ಸ್ವರೂಪದ ಮಹತ್ವ
ತ್ರಿಮೂರ್ತಿಗಳ ಅಂಶದಿಂದ ಸೃಷ್ಟಿಯಾದ ಶ್ರೀಗುರುದತ್ತನ ಕೈಯಲ್ಲಿರುವ ಶಂಖ ಮತ್ತು ಚಕ್ರ ಶ್ರೀವಿಷ್ಣುವಿನ ಶಕ್ತಿಯ ಪ್ರತೀಕವಾಗಿದ್ದರೆ, ತ್ರಿಶೂಲ ಮತ್ತು ಡಮರುಗ ಶಿವ ಶಕ್ತಿಯ ಸೂಚಕ ವಾಗಿದೆ. ಕಮಂಡಲ ಮತ್ತು ಜಪಮಾಲೆ ಬ್ರಹ್ಮ ದೇವನ ಪ್ರತಿರೂಪವಾಗಿದೆ. ಇನ್ನು ಜೋಳಿಗೆ ಅಹಂ ನಾಶವಾಗಿರುವುದರ ಸಂಕೇತವಾಗಿದೆ. ಜೋಳಿಗೆ ಹಿಡಿದು ಕೊಂಡು ಮನೆ ಮನೆಗೆ ಅಲೆದಾಡಿ ಭಿಕ್ಷೆ ಬೇಡುವುದರಿಂದ ಅಹಂ ನಾಶವಾಗುತ್ತದೆ ಎಂದು ದತ್ತರು ಈ ಮೂಲಕ ಹೇಳಿದ್ದಾರೆ. ದತ್ತರ ಹಿಂದಿರುವ ಗೋವು ಧರ್ಮದ ಸಂಕೇತವಾಗಿದ್ದರೆ, ನಾಲ್ಕು ನಾಯಿಗಳು ನಾಲ್ಕು ವೇದಗಳನ್ನು ಸಂಕೇತಿಸುತ್ತವೆ. ಔದುಂಬರ ವೃಕ್ಷ ಔಷಧಿಯ ಸಂಕೇತವಾಗಿದೆ, ಕಲ್ಪವೃಕ್ಷ ವಾಗಿದೆ.

ಸ್ವರೂಪವೇ ತಿಳಿಸುವಂತೆ ಭಕ್ತರ ಹಿತ ಕಾಯಲೆಂದೇ ಅವತರಿಸಿರುವ ದೇವರು ಶ್ರೀಗುರು ದತ್ತ. ದತ್ತಾತ್ರೇಯ ದೇವರು ಮತ್ತು ನನ್ನ ಕುಲಗುರುಗಳಾದ ಶೃಂಗೇರಿಯ ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳು ಹಾಗೂ ಜಗದ್ಗುರು ಶ್ರೀ ವಿದುಶೇಖರ ಭಾರತಿ ಮಹಾಸ್ವಾಮಿಗಳಲ್ಲಿ,ಸರ್ವರಿಗೂ ಸದ್ಭುದ್ಧಿಯನ್ನು ಕೊಟ್ಟು, ಆರ್ಥಿಕ ವಾಗಿಸದೃಢವಾದ, ಸ್ವಾರ್ಥವಿಲ್ಲದ, ಸತ್ಯ, ಧರ್ಮ, ಮಾರ್ಗಗಳಲ್ಲಿಸಾಗಿ, ಅಖಂಡ ಭಾರತವನ್ನು ಕಟ್ಟುಲು ಎಲ್ಲಪ್ರಜೆಗಳಿಗೆ ಆಯಸ್ಸು, ಅಭಿವೃದ್ಧಿಕೊಡಲೆಂದು ಪ್ರಾರ್ಥಿಸುತ್ತೇನೆ.
||ದಿಗಂಬರಾ ದಿಗಂಬರಾ ಶ್ರೀಪಾದವಲ್ಲಭ ದಿಗಂಬರಾ||

ಇದನ್ನೂ ಓದಿ | Prerane | ಎಣ್ಣೆ, ಬತ್ತಿ ಇಲ್ಲದೆ ಬೆಳಗುವ ದೀವಿಗೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Viral Video: ಜಿಮ್‌ಗೆ ಹೋಗುವವರೇ ಹುಷಾರ್‌! ಈ ವಿಡಿಯೊ ನೋಡಿ!

Viral Video ಈಗ ಎಲ್ಲರೂ ತಮ್ಮ ಫಿಟ್‌ನೆಸ್‌ ಬಗ್ಗೆ ಹೆಚ್ಚು ಒಲವು ತೋರುತ್ತಾರೆ. ತೆಳ್ಳಗೆ ಬಳುಕುವ ದೇಹಸಿರಿ ತಮ್ಮದಾಗಬೇಕು, ಸಪಾಟದ ಹೊಟ್ಟೆ ಇರಬೇಕು ಎಂಬ ಕಾರಣಕ್ಕೆ ಜಿಮ್‌ಗೆ ಹೋಗಿ ದೇಹ ದಂಡಿಸುತ್ತಾರೆ.ಅದರೆ ಇಲ್ಲೊಬ್ಬರು ಮಹಿಳೆ ಜಿಮ್‌ಗೆ ಹೋಗಿ ಜೀವ ಕಳೆದುಕೊಂಡ ಘಟನೆ ನಡೆದಿದೆ. ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದ ಮಹಿಳೆಯೊಬ್ಬರು ಆಯ ತಪ್ಪಿ ಮೂರನೇ ಮಹಡಿಯಿಂದ ಬಿದ್ದು ಸಾವನಪ್ಪಿದ ಘಟನೆ ಇಂಡೋನೇಷಿಯಾ ಪಾಂಟಿಯಾನಕ್ ನಲ್ಲಿ ನಡೆದಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

VISTARANEWS.COM


on

Viral Video
Koo

ಇತ್ತೀಚಿನ ದಿನಗಳಲ್ಲಿ ತಮ್ಮ ದೇಹದ ಫಿಟ್ ನೆಸ್ ಕಾಪಾಡಿಕೊಳ್ಳಲು ಜನರು ಜಿಮ್‌ಗಳಿಗೆ ಭೇಟಿ ನೀಡುತ್ತಾರೆ. ಅಲ್ಲಿ ಸ್ವಲ್ಪ ಹೊತ್ತು ವರ್ಕೌಟ್ ಮಾಡುತ್ತಾರೆ. ಆದರೆ ಈ ವೇಳೆ ನೀವು ನಿಮ್ಮ ಬಗ್ಗೆ ಎಚ್ಚರಿಕೆ ವಹಿಸುವುದು ಅವಶ್ಯಕ. ಯಾಕೆಂದರೆ ವರ್ಕೌಟ್ ವೇಳೆ ಹಲವು ಅವಗಢಗಳು ಸಂಭವಿಸುತ್ತಿರುವುದು ನಾವು ಕೇಳಿದ್ದೇವೆ. ಅಂತಹದೊಂದು ದುರ್ಘಟನೆ ಇದೀಗ ಇಂಡೋನೇಷಿಯಾದ ಜಿಮ್‌ವೊಂದರಲ್ಲಿ ನಡೆದಿದ್ದು, ಇದು ವೈರಲ್ (Viral Video) ಆಗಿದೆ. ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದ ಮಹಿಳೆಯೊಬ್ಬರು ಆಯ ತಪ್ಪಿ ಮೂರನೇ ಮಹಡಿಯಿಂದ ಬಿದ್ದು ಸಾವನಪ್ಪಿದ ಘಟನೆ ಇಂಡೋನೇಷಿಯಾ ಪಾಂಟಿಯಾನಕ್‌ನಲ್ಲಿ ನಡೆದಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೊದಲ್ಲಿ 22 ವರ್ಷದ ಮಹಿಳೆಯೊಬ್ಬರು ಮೂರನೇ ಮಹಡಿಯಲ್ಲಿದ್ದ ಜಿಮ್ ನ ಕಿಟಕಿಯ ಬಳಿ ಇರಿಸಲಾದ ಟ್ರೆಡ್ ಮಿಲ್ ನಲ್ಲಿ ವರ್ಕೌಟ್ ಮಾಡುತ್ತಿದ್ದಾರೆ. ಅಲ್ಲಿ ಕಿಟಿಕಿಯ ಬಾಗಿಲು ತೆರೆದಿತ್ತು. ಹಾಗಾಗಿ ಆಕೆ 30 ನಿಮಿಷ ವರ್ಕೌಟ್ ಮಾಡಿ ಟ್ರೆಡ್ ಮಿಲ್ ನಿಂದ ಕೆಳಗೆ ಇಳಿಯುವಾಗ ಹಿಂದೆ ಹೆಜ್ಜೆ ಹಾಕಿ ಎಡವಿ ಕಿಟಿಕಿಯಿಂದ ಹೊರಗೆ ಬಿದ್ದಿದ್ದಾರೆ. ಇದರಿಂದ ಅವರು ಸಾವನಪ್ಪಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದನ್ನು ಕಾಲಿನ್ ರಗ್ ಎಂಬುವವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ 8.1 ಮಿಲಿಯನ್ ವೀವ್ಸ್ ಬಂದಿದ್ದು, ಈ ವಿಡಿಯೊ ವೈರಲ್ ಆಗಿದೆ. ಪೊಲೀಸರ ಮಾಹಿತಿ ಪ್ರಕಾರ ಜಿಮ್ ನಲ್ಲಿ ಟ್ರೆಡ್ ಮಿಲ್ ಯಂತ್ರವನ್ನು ಕಿಟಿಕಿಯಿಂದ ಕೇವಲ 2 ಅಡಿ ದೂರದಲ್ಲಿ ಇಡಲಾಗಿದೆ. ಹಾಗೇ ಕಿಟಿಕಿಯ ಎತ್ತರ ಕೇವಲ ಒಂದು ಅಡಿಯಷ್ಟು ಇದ್ದ ಕಾರಣ ಈ ಅವಘಡ ಸಂಭವಿಸಿದೆ. ಅಲ್ಲದೇ ಮಹಿಳೆ ಬೀಳುವಾಗ ಕಿಟಕಿಯ ಅಂಚನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಆದರೆ ಅದು ಸಫಲವಾಗದೆ ಆಕೆ ಕೆಳಗೆ ಬಿದ್ದಿದ್ದಾರೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಆಕೆ ಆಗಲೇ ಸಾವನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ.

Viral Video

ಈ ವಿಡಿಯೊ ನೋಡಿದ ನೆಟ್ಟಿಗರು ದಿಗ್ಭ್ರಮೆಗೊಂಡಿದ್ದಾರೆ. ಮತ್ತು ಈ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಟ್ರೆಡ್ ಮಿಲ್ ಅನ್ನು ತೆರೆದ ಕಿಟಿಕಿಯ ಬಳಿ ಇಡಬಾರದಿತ್ತು. ಅದಕ್ಕೆ ವಿರುದ್ಧವಾಗಿ ಇಟ್ಟಿದ್ದರೆ ಈ ಅವಘಡ ಸಂಭವಿಸುತ್ತಿರಲಿಲ್ಲ ಎಂದು ಕೆಲವರು ಬೇಸರಗೊಂಡಿದ್ದಾರೆ. ಕೆಲವರು ಜಿಮ್ ಮಾಲೀಕನ ನಿರ್ಲಕ್ಷ್ಯದ ಬಗ್ಗೆ ಕಿಡಿಕಾರಿದ್ದಾರೆ. ಹಾಗೇ ಮತ್ತೆ ಈ ಘಟನೆ ಸಂಭವಿಸದಂತೆ ಎಚ್ಚರವಹಿಸುವುದು ಅಗತ್ಯವೆಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ:ಸಿಮೆಂಟ್, ಕಲ್ಲಿನಿಂದ ವಾಷಿಂಗ್ ಮೆಷಿನ್ ತಯಾರಿಸಿದ ಮಹಿಳೆ; ಹೇಗೆ ಕೆಲಸ ಮಾಡುತ್ತೆ ನೋಡಿ!

ಹಾಗಾಗಿ ಪ್ರತಿದಿನ ಜಿಮ್‌ಗೆ ಹೋಗಿ ವರ್ಕೌಟ್ ಮಾಡುವುದು ತಪ್ಪಲ್ಲ. ಆದರೆ ಈ ವೇಳೆ ನಿಮ್ಮ ಬಗ್ಗೆ ಎಚ್ಚರಿಕೆವಹಿಸಿ. ದೇಹದ ಬಗ್ಗೆ ಕಾಳಜಿಯ ಜೊತೆಗೆ ಜೀವದ ಬಗ್ಗೆಯೂ ಕಾಳಜಿ ಇರಲಿ. ಇದರಿಂದ ಇಂತಹ ದುರ್ಘಟನೆ ನಡೆಯುವುದನ್ನು ತಪ್ಪಿಸಬಹುದು.

Continue Reading

ದೇಶ

ಕಾಂಗ್ರೆಸ್‌ನಂತೆ 15 ತಿಂಗಳಲ್ಲಿ ಪ್ರತಿಪಕ್ಷಗಳೂ ರಾಹುಲ್‌ ಗಾಂಧಿಯಿಂದ ನಿರ್ನಾಮ; ಆಚಾರ್ಯ ಪ್ರಮೋದ್‌ ಸ್ಫೋಟಕ ಹೇಳಿಕೆ!

ರಾಹುಲ್‌ ಗಾಂಧಿ ಅವರು ಕಾಂಗ್ರೆಸ್‌ಅನ್ನು ಮುಗಿಸಲು 15 ವರ್ಷ ತೆಗೆದುಕೊಂಡರು. ಇನ್ನು, ರಾಹುಲ್‌ ಗಾಂಧಿ ಅವರು ಪ್ರತಿಪಕ್ಷಗಳನ್ನು 15 ತಿಂಗಳೊಳಗೇ ಮುಗಿಸಲಿದ್ದಾರೆ ಎಂದು ಕಾಂಗ್ರೆಸ್‌ ಮಾಜಿ ನಾಯಕ ಆಚಾರ ಪ್ರಮೋದ್‌ ಕೃಷ್ಣಂ ಹೇಳಿದರು.

VISTARANEWS.COM


on

Acharya Pramod Krishnam
Koo

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ (Rahul Gandhi) ಗಾಂಧಿ ಅವರು ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿ ಹೊರಹೊಮ್ಮಿದ್ದಾರೆ. ಪ್ರತಿಪಕ್ಷ ನಾಯಕನಾಗಿ ಅವರು ಕಾಂಗ್ರೆಸ್‌ ಜತೆಗೆ ಇಂಡಿಯಾ ಒಕ್ಕೂಟವನ್ನೂ (INDIA Bloc) ಸಂಸತ್‌ನಲ್ಲಿ ಪ್ರತಿನಿಧಿಸಲಿದ್ದಾರೆ. ಇದರ ಬೆನ್ನಲ್ಲೇ, ಕಾಂಗ್ರೆಸ್‌ ಮಾಜಿ ನಾಯಕ ಆಚಾರ್ಯ ಪ್ರಮೋದ್‌ ಕೃಷ್ಣಂ (Acharya Pramod Krishnam) ಅವರು ರಾಹುಲ್‌ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಕಾಂಗ್ರೆಸ್‌ನಂತೆ ಪ್ರತಿಪಕ್ಷಗಳನ್ನೂ ರಾಹುಲ್‌ ಗಾಂಧಿ ನಿರ್ನಾಮ ಮಾಡಲಿದ್ದಾರೆ” ಎಂದು ಅವರು ಹೇಳಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಐಎಎನ್‌ಎಸ್‌ ಸುದ್ದಿಸಂಸ್ಥೆಯೊಂದಿಗೆ ಆಚಾರ್ಯ ಪ್ರಮೋದ್‌ ಕೃಷ್ಣಂ ಮಾತನಾಡಿದರು. “ರಾಹುಲ್‌ ಗಾಂಧಿ ಅವರು ಕಾಂಗ್ರೆಸ್‌ಅನ್ನು ಮುಗಿಸಲು 15 ವರ್ಷ ತೆಗೆದುಕೊಂಡರು. ಇನ್ನು, ರಾಹುಲ್‌ ಗಾಂಧಿ ಅವರು ಪ್ರತಿಪಕ್ಷಗಳನ್ನು 15 ತಿಂಗಳೊಳಗೇ ಮುಗಿಸಲಿದ್ದಾರೆ” ಎಂದು ಹೇಳಿದರು. ಸಂಸತ್‌ನಲ್ಲಿ ಪ್ರಮಾಣವಚನ ಸ್ವೀಕರಿಸುವ ವೇಳೆ ಜೈ ಪ್ಯಾಲೆಸ್ತೀನ್‌ ಎಂದು ಅಸಾದುದ್ದೀನ್‌ ಓವೈಸಿ ಘೋಷಣೆ ಕೂಗಿದ ಕುರಿತು ಪ್ರತಿಕ್ರಿಯಿಸಿದ ಅವರು, “ಇದು ಭಾರತ ಸಂಸತ್ತು. ಭಾರತದ ಸಂಸತ್‌ನಲ್ಲಿ ಹಾಗೆ ಘೋಷಣೆ ಕೂಗುವುದು ಸರಿಯಲ್ಲ. ಅವರು ಕೂಡಲೇ ಕ್ಷಮೆಯಾಚಿಸಬೇಕು” ಎಂದು ಒತ್ತಾಯಿಸಿದರು.

ಆಚಾರ್ಯ ಪ್ರಮೋದ್‌ ಕೃಷ್ಣಂ ಅವರು ಕಾಂಗ್ರೆಸ್‌ ನಾಯಕರೂ ಆಗಿದ್ದರು. ಕಲ್ಕಿ ಧಾಮದ ಪೀಠಾಧೀಶರೂ ಆಗಿರುವ ಇವರನ್ನು ಕೆಲವು ತಿಂಗಳ ಹಿಂದಷ್ಟೇ ಕಾಂಗ್ರೆಸ್‌ ಉಚ್ಚಾಟನೆ ಮಾಡಿದೆ. ಕಲ್ಕಿ ದೇವಾಲಯಕ್ಕೆ ನರೇಂದ್ರ ಮೋದಿ ಅವರನ್ನು ಆಹ್ವಾನಿಸಿದ ಬಳಿಕ ಪಕ್ಷ ವಿರೋಧಿ ಚಟುವಟಿಕೆ ಆರೋಪದಲ್ಲಿ ಉಚ್ಚಾಟನೆ ಮಾಡಿತ್ತು. ಇದಾದ ಬಳಿಕ ನರೇಂದ್ರ ಮೋದಿ ಅವರು ಕಲ್ಕಿ ದೇವಾಲಯಕ್ಕೆ ಭೇಟಿ ನೀಡಿ, ಆಚಾರ್ಯ ಪ್ರಮೋದ್‌ ಕೃಷ್ಣಂ ಅವರನ್ನು ಹೊಗಳಿದ್ದರು.

“ಆಚಾರ್ಯ ಪ್ರಮೋದ್‌ ಕೃಷ್ಣಂ ಅವರು ಕಲ್ಕಿ ಧಾಮ ದೇವಾಲಯ ನಿರ್ಮಾಣಕ್ಕಾಗಿ ಹೋರಾಡಿದರು. ಇದಕ್ಕೂ ಮೊದಲಿನ ಸರ್ಕಾರಗಳು ಕಲ್ಕಿ ಧಾಮ ದೇವಾಲಯ ನಿರ್ಮಾಣಕ್ಕೆ ಅವಕಾಶ ಕೊಡಲಿಲ್ಲ. ಕಾನೂನು ಹೋರಾಟವನ್ನೂ ಪ್ರಮೋದ್‌ ಕೃಷ್ಣಂ ಅವರು ಮಾಡಬೇಕಾಯಿತು. ಕಲ್ಕಿ ಮಂದಿರ ನಿರ್ಮಾಣವಾದರೆ ಕಾನೂನು ಸುವ್ಯಸ್ಥೆಗೆ ಧಕ್ಕೆಯುಂಟಾಗುತ್ತದೆ ಎಂದರು. ಆದರೆ, ನಮ್ಮ ಸರ್ಕಾರದ ಅವಧಿಯಲ್ಲಿ ಕಲ್ಕಿ ಮಂದಿರ ನಿರ್ಮಾಣಕ್ಕಶಂಕುಸ್ತಾಪನೆ ನೆರವೇರಿಸಲಾಗುತ್ತದೆ” ಎಂದು ಪ್ರತಿಪಕ್ಷಗಳಿಗೆ ಮೋದಿ ಪರೋಕ್ಷವಾಗಿ ಟಾಂಗ್‌ ಕೊಟ್ಟಿದ್ದರು.

ಇದನ್ನೂ ಓದಿ: Parliament Session 2024: ಪ್ರಧಾನಿ ಮೋದಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ರಾಹುಲ್‌ ಗಾಂಧಿ ಮಾಡಿದ್ದೇನು ಗೊತ್ತಾ? ವೈರಲಾಯ್ತು ವಿಡಿಯೋ

Continue Reading

Latest

Viral Video: ಬಾಗಿಲ ಬಳಿ ಇದ್ದ ಆಹಾರ ಪ್ಯಾಕೆಟ್‌ ಕದ್ದೊಯ್ದ ಜೊಮ್ಯಾಟೊ ಡೆಲಿವರಿ ಬಾಯ್‌!

Viral Video: ಆನ್‌ಲೈನ್‌ ಮೂಲಕ ಫುಡ್ ತರಿಸಿಕೊಂಡು ತಿನ್ನುವುದು ಈಗ ಸರ್ವೆಸಾಮಾನ್ಯವಾಗಿ ಬಿಟ್ಟಿದೆ. ಫುಡ್ ಡೆಲಿವರಿ ಬಾಯ್ ಮಾಡಿದ ದುಷ್ಕೃತ್ಯದ ವಿಡಿಯೊವೊಂದು ಈಗ ಎಲ್ಲೆಡೆ ವೈರಲ್ ಆಗಿದೆ. ಜೊಮ್ಯಾಟೊ ಡೆಲಿವರಿ ಬಾಯ್ ಆರ್ಡರ್ ಅನ್ನು ಮನೆಗೆ ತಲುಪಿಸಲು ಮನೆಯ ಬಾಗಿಲಿಗೆ ಬಂದಿದ್ದಾನೆ. ನಂತರ ಆತ ಆರ್ಡರ್ ನೀಡಿ ಮರಳುವಾಗ ಮನೆಯ ಬಾಗಿಲಿ ಬಳಿ ಇದ್ದ ಆಹಾರದ ಪ್ಯಾಕೆಟ್ ಒಂದನ್ನು ಗಮನಿಸಿದ್ದಾನೆ. ಮನೆಯವರು ಒಳಗೆ ಹೋದ ತಕ್ಷಣ ಅದನ್ನು ಎತ್ತಿಕೊಂಡು ಹೋಗಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

VISTARANEWS.COM


on

Viral Video
Koo

ಬೆಂಗಳೂರು: ಯಾವುದೇ ಆನ್‌ಲೈನ್ ಆ್ಯಪ್‌ಗಳಲ್ಲಿ ನೀವು ಯಾವುದೇ ವಸ್ತುಗಳನ್ನು ಆರ್ಡರ್ ಮಾಡಿದರೂ ಅದನ್ನು ಅವರು ಮನೆ ಬಾಗಿಲಿಗೆ ತಂದು ನೀಡುತ್ತಾರೆ ನಿಜ. ಆದರೆ ಕೆಲವೊಮ್ಮೆ ಡೆಲಿವರಿ ಬಾಯ್ಸ್ ನಿಂದ ಕೆಲವು ದುರ್ಘಟನೆಗಳು ನಡೆಯುತ್ತಿರುವುದನ್ನು ನೀವು ಕೇಳಿರಬಹುದು. ಹಾಗಾಗಿ ಡೆಲಿವರಿ ಬಾಯ್ಸ್ ಬಗ್ಗೆ ಎಚ್ಚರಿಕೆಯಿಂದಿರಿ. ಯಾಕೆಂದರೆ ಅಂತಹದೊಂದು ಘಟನೆ ಇದೀಗ ಬೆಂಗಳೂರಿನಲ್ಲಿ ನಡೆದಿದೆ. ಜೊಮ್ಯಾಟೊ ಡೆಲಿವರಿ ಬಾಯ್ ಮಾಡಿದ ಕಳ್ಳತನದ ಕೃತ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ಜೂನ್ 25ರಂದು ಜೊಮ್ಯಾಟೊ ಡೆಲಿವರಿ ಬಾಯ್ ಆರ್ಡರ್ ಅನ್ನು ಮನೆಗೆ ತಲುಪಿಸಲು ಮನೆಯ ಬಾಗಿಲಿಗೆ ಬಂದಿದ್ದಾನೆ. ನಂತರ ಆತ ಆರ್ಡರ್ ನೀಡಿ ಮರಳುವಾಗ ಮನೆಯ ಬಾಗಿಲಿ ಬಳಿ ಇದ್ದ ಆಹಾರದ ಪ್ಯಾಕೆಟ್ ಒಂದನ್ನು ಗಮನಿಸಿದ್ದಾನೆ. ಮನೆಯವರು ಒಳಗೆ ಹೋದ ತಕ್ಷಣ ಅದನ್ನು ಎತ್ತಿಕೊಂಡು ಹೋಗಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪತ್ರಕರ್ತ ಆದಿತ್ಯ ಕಾಲ್ರಾ ಎಂಬುವವರು ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅನೇಕರು ಕಾಮೆಂಟ್ ಮಾಡಿದ್ದಾರೆ. ಇದನ್ನು ಗಮನಿಸಿದ ಜೊಮ್ಯಾಟೊ ಕೇರ್ ಈ ಬಗ್ಗೆ ಕ್ಷಮೆ ಯಾಚಿಸಿದೆ ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ. “ಇದು ಸಂಭವಿಸಿದ್ದಕ್ಕಾಗಿ ನಾವು ವಿಷಾದಿಸುತ್ತೇವೆ. ಅಂತಹ ವಿಷಯಗಳನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ. ಮತ್ತು ಅಂತಹ ಘಟನೆಗಳಿಗೆ ಕಾರಣವಾದವರ ವಿರುದ್ಧ ನಾವು ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಜೊಮ್ಯಾಟೊ ಕೇರ್ ಭರವಸೆ ನೀಡಿದ್ದಾರೆ. ಹಾಗೇ ಇದಕ್ಕೆ ಸಂಬಂಧಪಟ್ಟ ವಿವರಗಳನ್ನು ಕಳುಹಿಸಿ, ಇದರಿಂದ ನಾವು ತ್ವರಿತವಾಗಿ ತನಿಖೆ ಮಾಡಬಹುದು ಎಂಬುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಮುಂದಿನ ಐದು ಸಾಲಿನಲ್ಲಿ ಮಹಿಳೆಯರಿಗೆ ಅವಕಾಶವಿಲ್ಲ! ಇದು ಸ್ವಾಮೀಜಿಯೊಬ್ಬರ ಕಂಡೀಷನ್‌!

Viral Video

ಜೊಮ್ಯಾಟೊ ಡೆಲಿವರಿ ಬಾಯ್ಸ್ ನ ಕಳ್ಳತನದ ಪ್ರಕರಣ ಇದೇ ಮೊದಲಲ್ಲ. ಇದಕ್ಕೂ ಮೊದಲು ಜೊಮ್ಯಾಟೊ ಡೆಲಿವರಿ ಬಾಯ್ ಒಬ್ಬ ಟ್ರಾಫಿಕ್ ಸಿಗ್ನಲ್‌ನಲ್ಲಿ ಕಾಯುತ್ತಿರುವಾಗ ಗ್ರಾಹಕರು ಆರ್ಡರ್ ಮಾಡಿದ ಬಾಕ್ಸ್ ನಿಂದ ಫುಡ್ ತೆಗೆದು ತಿಂದಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರಿಂದ ಜೊಮ್ಯಾಟೊ ಆಹಾರ ಸುರಕ್ಷತಾ ಕಾರ್ಯವಿಧಾನಗಳ ಬಗ್ಗೆ ಜನರಿಗೆ ಕಳವಳ ಉಂಟಾಗಿತ್ತು. ಹಾಗಾಗಿ ಜೊಮ್ಯಾಟೊದಿಂದ ವಸ್ತುಗಳನ್ನು ಆರ್ಡರ್ ಮಾಡುವಾಗ ಗ್ರಾಹಕರು ಬಹಳ ಎಚ್ಚರಿಕೆ ಇರುವುದು ಉತ್ತಮ. ಇಲ್ಲವಾದರೆ ಇದರಿಂದ ನೀವು ಸಮಸ್ಯೆ ಎದುರಿಸಬೇಕಾಗುತ್ತದೆ.

Continue Reading

Latest

Viral Video: ಪ್ರೇಯಸಿ ಹೆಜ್ಜೆ ಇರಿಸಲು ಕಂತೆಕಂತೆ ನೋಟಿನ ಮೆಟ್ಟಿಲು! ಪ್ರಿಯತಮನ ಹುಚ್ಚು ಪ್ರೀತಿ ನೋಡಿ!

Viral Video : ಪ್ರೀತಿಸಿದ ಹುಡುಗಿಯ ಮನಮೆಚ್ಚಿಸುವುದಕ್ಕಾಗಿ ಹುಡುಗರು ಏನೆಲ್ಲಾ ಸರ್ಕಸ್ ಮಾಡುತ್ತಾರೆ ಎಂಬುದಕ್ಕೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ. ತನ್ನನ್ನು ನೋಡಲು ಬರುವ ಪ್ರೇಯಸಿಯನ್ನು ಪ್ರಿಯಕರನೊಬ್ಬ ಸ್ವಾಗತಿಸಿದ ಪರಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೊ ನೋಡಿ ಕೆಲ ಹುಡುಗಿಯರು ಮನಸ್ಸಿನಲ್ಲಿಯೇ ʼನನಗೂ ಒಬ್ಬ ಗೆಳೆಯಬೇಕುʼ…. ಎಂಬ ಹಾಡು ಗುನುಗುವಂತೆ ಆಗಿದೆ. ತನ್ನನ್ನು ನೋಡಲ್ಛಿಸಿದ ಪ್ರೇಯಸಿಗಾಗಿ ಶ್ರೀಮಂತ ಉದ್ಯಮಿಯೊಬ್ಬ ಹೆಲಿಕಾಪ್ಟರ್ ಕಳುಹಿಸಿದ್ದು ಅಲ್ಲದೇ, ಆಕೆ ಇಳಿಯಲು ಕಾರ್ಪೆಟ್ ಬದಲು ಹಣದ ನೋಟಿನ ಕಂತಿನ ಮೆಟ್ಟಿಲು ಮಾಡಿದ್ದಾನೆ!

VISTARANEWS.COM


on

Viral Video
Koo

ದುಬೈ: ಹಣ ಜೀವನದಲ್ಲಿ ತುಂಬಾ ಮೌಲ್ಯಯುತವಾದುದು. ಹಾಗಾಗಿ ಹಣವನ್ನು ಖರ್ಚು ಮಾಡಲು ಜನರು ಮೀನಾಮೇಷ ಎಣಿಸುತ್ತಾರೆ. ಆದರೆ ಕೆಲವು ಹುಡುಗರು ಮಾತ್ರ ತಮ್ಮ ಹುಡುಗಿಗಾಗಿ ಏನು ಮಾಡಲು ಕೂಡ ಸಿದ್ಧರಿರುತ್ತಾರೆ. ಇದಕ್ಕೆ ನಿರ್ದಶನ ಎಂಬಂತೆ ಇಲ್ಲೊಂದು ಘಟನೆ ನಡೆದಿದ್ದು, ತನ್ನ ಪ್ರೇಯಸಿಗಾಗಿ ಪ್ರಿಯಕರನೊಬ್ಬ ಹಣದ ಹೊಳೆಯನ್ನೇ ಹರಿಸಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದೆ.

ವಿಡಿಯೊದಲ್ಲಿ ಶ್ರೀಮಂತ ಉದ್ಯಮಿಯೊಬ್ಬ ಪ್ರೇಯಸಿಯನ್ನು ಹೆಲಿಕಾಪ್ಟರ್ ಮೂಲಕ ಕರೆಸಿಕೊಂಡಿದ್ದಾನೆ. ಅಷ್ಟೇ ಅಲ್ಲದೇ ಆಕೆ ಹೆಲಿಕಾಪ್ಟರ್‌ನಿಂದ ಇಳಿಯಲು ಕಾರ್ಪೆಟ್ ಬದಲು ಹಣದ ನೋಟಿನ ಕಂತಿನ ಮೆಟ್ಟಿಲು ಮಾಡಿದ್ದಾನೆ. ಆ ಯುವತಿ ಹಣದ ಕಂತಿನ ಮೇಲೆ ರಾಣಿಯಂತೆ ಅವನ ಕೈ ಹಿಡಿದುಕೊಂಡು ನಡೆದುಬರುತ್ತಿದ್ದಾಳೆ. ಕಂತೆ ಕಂತೆ ಹಣ ನೋಡಿದರೆ ಯಾರಿಗೆ ತಾನೆ ದಂಗಾವುದಿಲ್ಲ ಹೇಳಿ. ಹಾಗಾಗಿ ಜನರು ಇದನ್ನು ಕಂಡು ಜನರು ಹೌಹಾರಿದ್ದಾರೆ.

ಆ ಐಷರಾಮಿ ಉದ್ಯಮಿ ದುಬೈನ ಸರ್ಗಿ ಕೊಸೆಂಕೋ ಎಂಬುದಾಗಿ ತಿಳಿದುಬಂದಿದೆ. ಈತ ತನ್ನ ಇನ್ ಸ್ಟಾಗ್ರಾಂನಲ್ಲಿ ಇದನ್ನು ಪೋಸ್ಟ್ ಮಾಡಿದ್ದಾನೆ. ಜನರು ಉದ್ಯಮಿಯ ಐಷಾರಾಮಿ ಜೀವನ ಕಂಡು ದಂಗಾಗಿದ್ದಾರೆ. ವರದಿ ಪ್ರಕಾರ, ಯುವತಿ ಹಾಗೂ ಸರ್ಗಿ ಕೊಸೆಂಕೋ ಒಬ್ಬರನೊಬ್ಬರು ಪ್ರೀತಿಸುತ್ತಿದ್ದು, ಯುವತಿಗೆ ತನ್ನ ಪ್ರಿಯತಮನನ್ನು ನೋಡುವ ಆಸೆಯಾಗಿ ಆತನಿಗೆ ಕಾಲ್ ಮಾಡಿ ವಿಚಾರ ತಿಳಿಸಿದ್ದಾಳೆ. ಆಗ ಆತ ಆಕೆಯನ್ನು ಕರೆದುಕೊಂಡು ಬರಲು ತನ್ನ ಹೆಲಿಕಾಪ್ಟರ್ ಕಳುಹಿಸಿದ್ದಲ್ಲದೇ ಮನೆಗೆ ಬಂದ ಆಕೆಗೆ ಹೆಲಿಕಾಪ್ಟರ್ ನಿಂದ ಇಳಿಯಲು ನೋಟಿನ ಕಂತಿನ ಮೆಟ್ಟಿಲು ಮಾಡಿದ್ದಾನೆ. ಅಷ್ಟೇ ಅಲ್ಲದೇ ಈ ಹಣದ ಮೆಟ್ಟಿಲು ಆತನ ಮನೆಯ ತನಕ ಹಾಕಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: ಸಿಮೆಂಟ್, ಕಲ್ಲಿನಿಂದ ವಾಷಿಂಗ್ ಮೆಷಿನ್ ತಯಾರಿಸಿದ ಮಹಿಳೆ; ಹೇಗೆ ಕೆಲಸ ಮಾಡುತ್ತೆ ನೋಡಿ!

ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಜನರು ಆಶ್ಚರ್ಯಚಕಿತರಾಗಿದ್ದು, ನಮಗೆ ಆ ಕಂತೆ ಕಂತೆ ನೋಟು ಬೇಡ. ಅದರ ಅಕ್ಕಪಕ್ಕ ಬಿದ್ದಿರುವ ನೋಟುಗಳು ಸಿಕ್ಕರೆ ಸಾಕು, ನೆಮ್ಮದಿಯ ಜೀವನ ಕಟ್ಟಿಕೊಳ್ಳುವುದಾಗಿ ಆಸೆ ವ್ಯಕ್ತಪಡಿಸಿದ್ದಾರೆ.

Continue Reading
Advertisement
Viral Video
Latest4 mins ago

Viral Video: ಜಿಮ್‌ಗೆ ಹೋಗುವವರೇ ಹುಷಾರ್‌! ಈ ವಿಡಿಯೊ ನೋಡಿ!

Acharya Pramod Krishnam
ದೇಶ29 mins ago

ಕಾಂಗ್ರೆಸ್‌ನಂತೆ 15 ತಿಂಗಳಲ್ಲಿ ಪ್ರತಿಪಕ್ಷಗಳೂ ರಾಹುಲ್‌ ಗಾಂಧಿಯಿಂದ ನಿರ್ನಾಮ; ಆಚಾರ್ಯ ಪ್ರಮೋದ್‌ ಸ್ಫೋಟಕ ಹೇಳಿಕೆ!

Viral Video
Latest42 mins ago

Viral Video: ಬಾಗಿಲ ಬಳಿ ಇದ್ದ ಆಹಾರ ಪ್ಯಾಕೆಟ್‌ ಕದ್ದೊಯ್ದ ಜೊಮ್ಯಾಟೊ ಡೆಲಿವರಿ ಬಾಯ್‌!

Rohit Sharma
ಕ್ರೀಡೆ49 mins ago

Rohit Sharma: ವಿಶ್ವ ದಾಖಲೆ ಮೇಲೆ ಕಣ್ಣಿಟ್ಟ ಹಿಟ್​ಮ್ಯಾನ್​ ರೋಹಿತ್​; ಲಂಕಾ ಆಟಗಾರನಿಗೆ ನಡುಕ

Viral Video
Latest51 mins ago

Viral Video: ಪ್ರೇಯಸಿ ಹೆಜ್ಜೆ ಇರಿಸಲು ಕಂತೆಕಂತೆ ನೋಟಿನ ಮೆಟ್ಟಿಲು! ಪ್ರಿಯತಮನ ಹುಚ್ಚು ಪ್ರೀತಿ ನೋಡಿ!

Arvind Kejriwal
ದೇಶ53 mins ago

Arvind Kejriwal: ಅರೆಸ್ಟ್‌ ಬೆನ್ನಲ್ಲೇ ತಡೆಯಾಜ್ಞೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಹಿಂಪಡೆದ ಕೇಜ್ರಿವಾಲ್‌

Actor Darshan Full aggressive mode while he drunk
ಸ್ಯಾಂಡಲ್ ವುಡ್58 mins ago

Actor Darshan: `ದರ್ಶನ್‌’ ಫುಲ್‌ ಟೈಟ್‌ ಆದಾಗಲೇ ಅಗ್ರೆಸಿವ್‌ ಆಗೋದು‌ ಎಂದ ಭಾವನಾ ಬೆಳಗೆರೆ!

5G Spectrum
ವಾಣಿಜ್ಯ59 mins ago

5G Spectrum: 11,300 ಕೋಟಿ ರೂ. ಮೌಲ್ಯದ 5ಜಿ ತರಂಗ ಹರಾಜು; ಭಾರ್ತಿ ಏರ್‌ಟೆಲ್‌ ಮುಂಚೂಣಿ

Rain News
ಕರ್ನಾಟಕ1 hour ago

Rain News: ಕೊಡಗು, ಚಿಕ್ಕಮಗಳೂರು, ಕಾರವಾರದಲ್ಲಿ ವರುಣಾರ್ಭಟ; ಐದು ಜಿಲ್ಲೆಗಳಲ್ಲಿ ಮುಂದಿನ 3 ಗಂಟೆ ಭಾರಿ ಮಳೆ!

Money Guide
ಮನಿ-ಗೈಡ್1 hour ago

Money Guide: ಸಾಲಕ್ಕೆ ಅಪ್ಲೈ ಮಾಡುವ ಮುನ್ನ ಈ ಅಂಶ ನಿಮಗೆ ತಿಳಿದಿರಲೇ ಬೇಕು

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ2 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ5 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ5 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ6 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 weeks ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

ಟ್ರೆಂಡಿಂಗ್‌