ಕನ್ನಡದ ಹುಡುಗರಿಗೆ ಬೇಕು ಕನ್ನಡದ ಡೇಟಿಂಗ್‌ ಆ್ಯಪ್‌! - Vistara News

ಲೈಫ್‌ಸ್ಟೈಲ್

ಕನ್ನಡದ ಹುಡುಗರಿಗೆ ಬೇಕು ಕನ್ನಡದ ಡೇಟಿಂಗ್‌ ಆ್ಯಪ್‌!

ಜನರೇಷನ್‌ z ಹಾಗೂ ಜನರೇಷನ್‌ ಆಲ್ಫಾ ಹುಡುಗ ಹುಡುಗೀರಿಗೆ ತಮ್ಮ ಪ್ರೀತಿಯನ್ನು ಕಂಡುಕೊಳ್ಳೋಕೆ ಕನ್ನಡದಲ್ಲೇ ಡೇಟಿಂಗ್‌ ಆಪ್ಸ್ ಬೇಕು ಅನ್ನೋದು ಬಡಪಾಯಿ ಕನ್ನಡ ಹುಡುಗರ ಆಗ್ರಹ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇಂಗ್ಲಿಷ್‌ ಚೆನ್ನಾಗಿ ಬಲ್ಲ ಈ ತಲೆಮಾರಿನ ಹದಿ ಹರೆಯದವರು ಡೇಟಿಂಗ್‌ ಆ್ಯಪ್‌ಗಳ ಮೂಲಕ ತಮ್ಮ ಸಂಗಾತಿಗಳನ್ನು ಕಂಡುಕೊಳ್ಳುತ್ತಾರೆ. ಸದ್ಯ tinder ಎಂಬ ಡೇಟಿಂಗ್‌ ಆ್ಯಪ್‌ ತುಂಬಾ ಪ್ರಚಲಿತದಲ್ಲಿದೆ. ಇದನ್ನು ಬಳಸುವವರ ಸಂಖ್ಯೆ ಎಷ್ಟೆಂದು ಊಹಿಸುವುದೂ ಕಷ್ಟ. ಆದರೆ ಈ ರೀತಿಯ ಆ್ಯಪ್‌ಗಳು ಬಹುತೇಕ ವಿದೇಶ ಮೂಲದ್ದು. ಈ ಮಾದರಿಯ ಆ್ಯಪ್‌ ಒಂದು ನಮ್ಮ ನಾಡಿನದ್ದೇ ಆಗಿದ್ದರೆ ಹೇಗಿರುತ್ತದೆ? ಕನ್ನಡದಲ್ಲಿ, ಕನ್ನಡಿಗರಿಗಾಗಿ ಹೀಗೊಂದು ಡೇಟಿಂಗ್‌ ಆ್ಯಪ್‌ ಇದ್ದರೆ ಹೇಗೆ ಅಲ್ವಾ?

ಈವರೆಗೆ ಅತಿ ಹೆಚ್ಚು ಬಳಕೆಯಾಗಿರುವ ಟಿಂಡರ್‌ ಕೂಡ ಹಲವರಿಗೆ ಬೋರ್‌ ಎನ್ನಿಸಿದ್ದು ನಿಜ. ಆದ್ದರಿಂದ, ಮತ್ತೊಂದಿಷ್ಟು ಹೊಸ ಆ್ಯಪ್‌ಗಳನ್ನು ಈ ಜನರೇಷನ್ ಶೋಧಿಸಿತು. ಆಗ ಬಂಬಲ್‌, ಹ್ಯಾಪ್ನ್‌, ಓಕೆ ಕ್ಯೂಪಿಡ್‌ನಂಥ ಹೊಸ ಆಪ್‌ಗಳು ಹುಟ್ಟಿವೆ. ಎಲ್ಲವೂ ವಿದೇಶದ ಆ್ಯಪ್‌ಗಳು. ಇವೆಲ್ಲದರ ನಡುವೆ ಭಾರತದಲ್ಲೂ ಟ್ರೂಲಿಮ್ಯಾಡ್ಲಿ ಎಂಬ ಡೇಟಿಂಗ್‌ ಆ್ಯಪ್‌ ಆವಿಷ್ಕರಿಸಲಾಯಿತು. ಆದರೆ ಕನ್ನಡದಲ್ಲಿ ಈ ರೀತಿಯ ಪ್ರಯತ್ನ ಕಂಡುಬಂದಿಲ್ಲ. ಟಿಂಡರ್‌, ಬಂಬಲ್‌ನಂತಹ ಆ್ಯಪ್‌ಗಳ ಬಳಕೆ ಸಾಮಾನ್ಯ ಕನ್ನಡಿಗರಿಗೆ ಕಷ್ಟ. ಹಾಗಾಗಿ ಕನ್ನಡದಲ್ಲೊಂದು ಡೇಟಿಂಗ್‌ ಆ್ಯಪ್‌ ಇದ್ದರೆ ಅನುಕೂಲವಾಗಬಹುದು.

ಈ ಆ್ಯಪ್‌ಗಳ ಬಳಕೆ ಹೇಗೆ?
ಒಂದೊಂದು ಆ್ಯಪ್‌ನಲ್ಲಿ ಒಂದೊಂದು ವಿಶೇಷ ಫೀಚರ್‌ಗಳನ್ನು ನೀಡಲಾಗಿದೆ. ಕೆಲವು ಆ್ಯಪ್‌ಗಳಲ್ಲಿ ಕೇವಲ ಡೇಟಿಂಗ್‌ಗೆ ಸೀಮಿತಗೊಳಿಸಿಲ್ಲ. ಡೇಟಿಂಗ್‌ ಜೊತೆ ವೃತ್ತಿಗೆ ಸಂಬಂಧಿಸಿದ ಕಾರ್ಯಗಳಿಗೂ ವ್ಯಾಪಿಸಿದೆ. ಟಿಂಡರ್‌ ಆ್ಯಪ್‌ ಅತಿ ಹೆಚ್ಚು ಜನಪ್ರೀಯತೆ ಪಡೆದುಕೊಂಡಿದೆ. ಇದು ಸಂಪೂರ್ಣ ಡೇಟಿಂಗ್‌ ಆ್ಯಪ್‌. ಇದರಲ್ಲಿ ಇಷ್ಟಪಟ್ಟವರನ್ನು ಬಲಕ್ಕೆ ಸ್ವೈಪ್‌ ಮಾಡಬಹುದು ಅಥವಾ ಇಷ್ಟವಿಲ್ಲದವರನ್ನು ಮುಕ್ತವಾಗಿ ಎಡಕ್ಕೆ ಸ್ವೈಪ್‌ ಮಾಡಬಹುದು. ಟಿಂಡರ್‌ಗೆ ನಿಮ್ಮ ಫೇಸ್ಬುಕ್‌ ಅಥವಾ ಜಿಮೇಲ್‌ ಐಡಿ ಮೂಲಕ ಪ್ರವೇಶಿಸಬಹುದು. ನಿಮ್ಮ ಇಷ್ಟಗಳು, ಹವ್ಯಾಸಗಳು, ವೃತ್ತಿಯ ಬಗ್ಗೆ ಮಾಹಿತಿಯನ್ನೂ ನೀಡಬೇಕು. ಆದರೆ, ಎಲ್ಲದಕ್ಕಿಂತ ಮುಖ್ಯವಾಗಿ ನೀವು ನಿಮ್ಮ ಬಗ್ಗೆ ಕೆಲವೇ ಪದಗಳಲ್ಲಿ ಹೆಳಬೇಕು. ಅದನ್ನು ಎಷ್ಟು ಸುಂದರವಾಗಿ ವಿವರಿಸುತ್ತೀರಿ ಎನ್ನುವುದು ತುಂಬಾ ಮುಖ್ಯ. ಆ ಆಧಾರದ ಮೇಲೆ ಜನ ನಿಮ್ಮನ್ನು ʼಇಂಟರೆಸ್ಟಿಂಗ್‌ ಪರ್ಸ್ನಾಲಿಟಿʼ ಎಂದು ಇಷ್ಟಪಡುತ್ತಾರೆ. ಇಲ್ಲದಿದ್ದರೆ ನೀವು ತುಂಬಾ ಬೋರಿಂಗ್‌ ಎಂದು ಟ್ಯಾಗ್‌ ಮಾಡುತ್ತಾರೆ. ನಂತರ ರಿಜೆಕ್ಟ್‌ ಮಾಡುತ್ತಾರೆ. ಆ್ಯಪ್‌ ಖರೀದಿ ಮಾಡಿದರೆ, ಅನೇಕ ಫೀಚರ್‌ಗಳು ಲಭ್ಯವಾಗುತ್ತದೆ. ಎಷ್ಟು ಜನ ನಿಮ್ಮ ಪ್ರೊಫೈಲ್‌ನ್ನು ನೋಡಿದರು, ಯಾರಿಗೆ ನೀವು ಇಷ್ಟವಾಗಿದ್ದೀರಿ ಎಂದು ತಿಳಿಯಬಹುದು.


ನಿಮ್ಮ ಸುತ್ತಮುತ್ತಲಿನ ಜಾಗದಲ್ಲಿ ಯಾರಾದರೂ ನಿಮಗೆ ಮ್ಯಾಚ್‌ ಆಗುವಂಥವರು ಇದ್ದಾರ? ಎಂದು ಕೂಡ ತಿಳಿಯಬಹುದು. ಹಾಗೆ ಯಾರಾದರೂ ನಿಮ್ಮನ್ನು ಇಷ್ಟಪಟ್ಟರೆ ನೀವು ಅವರೊಂದಿಗೆ ವೈಯ್ಯಕ್ತಿಕ ಮೆಸೇಜ್‌ ಮಾಡನಹುದು. ಚಾಟ್‌ ಮಾಡಿ ಮಾತನಾಡಬಹುದು. ಇಬ್ಬರೂ ಪರಸ್ಪರ ಭೇಟಿಯಾಗಬಹುದು. ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಬಹುದು. ಆಸಕ್ತಿ ಇದ್ದರೆ, ಹೊಂದಾಣಿಕೆಯಾದರೆ ರಿಲೇಷನ್‌ಶಿಪ್‌ ಮುಂದುವರೆಸಬಹುದು. ಇಲ್ಲದಿದ್ದರೆ ಜೀವನದಲ್ಲಿ ಎಡಕ್ಕೆ ಸ್ವೈಪ್‌ ಮಾಡಿ ತಿರಸ್ಕರಿಸಬಹುದು. ಇದೊಂದು ಮಾಯಾಲೋಕ. ಇಷ್ಟೊಂದು ಸ್ವಾತಂತ್ರ್ಯ ಇರುವ ಕಾರಣದಿಂದಲೇ ಡೇಟಿಂಗ್‌ ಆ್ಯಪ್‌ಗಳು ಹೆಚ್ಚು ಪ್ರಚಲಿತದಲ್ಲಿವೆ.


ಹೀಗೆ ಅಪರಿಚತರೊಂದಿಗೆ ಸಂಬಂಧ ಬೆಸೆಯುವ ಕೆಲಸ ಈ ಮಾದರಿಯ ಆ್ಯಪ್‌ಗಳು ಮಾಡುತ್ತಿವೆ. ಎಷ್ಟೋ ಸಂಬಂಧಗಳು ಡೇಟಿಂಗ್‌ ಆ್ಯಪ್‌ ಮೂಲಕ ಶುರುವಾಗಿವೆ. ಈ ಸಂಬಂಧಗಳು ಒಟ್ಟಿಗೆ ಜೀವನ ಮಾಡುತ್ತಿರುವ, ಗಟ್ಟಿಯಾಗಿ ಉಳಿದಿರುವ ಎಷ್ಟೋ ಉದಾಹರಣೆಗಳಿವೆ.

ಕನ್ನಡದ್ದೇ ಬೇಕೆನ್ನಲು ಕಾರಣಗಳು:

  1. ವಿದೇಶಿಗರು ಪ್ರೀತಿಸುವ ರೀತಿ ಬೇರೆ. ಭಾರತೀಯರು ಪ್ರೀತಿಯನ್ನು ನೋಡುವ ದೃಷ್ಟಿ ವಿಭಿನ್ನವಾಗಿದೆ. ಅಮೆರಿಕ ಹಾಗೂ ಯುರೋಪ್‌ನ ಪ್ರೀತಿಯ ಅಭಿವ್ಯಕ್ತಿ ನಮ್ಮದಲ್ಲ. ಕನ್ನಡದ ಜಾಯಮಾನ ಬೇರೆ.
  2. ಕನ್ನಡಿಗರು ಕನ್ನಡದಲ್ಲಿ ಪ್ರೀತಿಯನ್ನು ವ್ಯಕ್ತಪಡಿಸಲು ಬಯಸಬಹುದು. ಅದಕ್ಕೆ ಕನ್ನಡದ್ದೇ ಫೀಚರ್‌ಗಳನ್ನು ಬಳಸಲು ಇಷ್ಟಪಡಬಹುದು.
  3. ಗ್ರಾಮೀಣ ಪ್ರದೇಶದವರು ಇಂಗ್ಲಿಷ್‌ ಎಂದರೆ ಮಾರು ದೂರ ಹಾರುತ್ತಾರೆ. ಇಂಥವರಿಗೆ ಕನ್ನಡ ನೆರವಾಗುತ್ತದೆ.
  4. ಕನ್ನಡದ ಸಿನಿಮಾ, ತಿಂಡಿಗಳು ಸೇರಿದಂತೆ ಸ್ವಂತ ಭಾಷೆಯ ಇಮೇಜ್‌ಗಳು ಸೃಷ್ಟಿಸುವ ಮಧುರ ಭಾವವೇ ಬೇರೆ.
  5. ಈಗಾಗಲೇ ಫೇಸ್ಬುಕ್‌ನಂತಹ ಆಪ್‌ಗಳು ಕನ್ನಡ ಭಾಷೆಯಲ್ಲಿ ಕೂಡ ಬಳಸುವ ಸೌಲಭ್ಯ ನೀಡಿದೆ. ಹಲವು ಶಾಪಿಂಗ್‌ ಆಪ್‌ಗಳು ಕೂಡ ಕನ್ನಡದಲ್ಲಿ ಬಳಸುವ ಅವಕಾಶ ಕಲ್ಪಿಸಿದೆ. ಆದರೆ ಕನ್ನಡದಲ್ಲಿ ಸುಲಭವಾಗಿ ಬಳುಸುವಂಥ ಡೇಟಿಂಗ್‌ ಆಪ್‌ ಇನ್ನೂ ಮೂಡಿಬಂದಿಲ್ಲ.

ಕನ್ನಡದಲ್ಲಿ ಹೀಗೊಂದು ಆ್ಯಪ್‌ ಬಂದರೆ ಹೇಗಿರಬಹುದು?

  1. ಕನ್ನಡದ ಡೇಟಿಂಗ್‌ ಆಪ್ ಕನ್ನಡಿಗರೇ ತುಂಬಿರುವ ಮನೆಯ ಹಾಗಿರಬಹುದು. ಅಲ್ಲಿ ಪರಸ್ಪರ ಸಂವಹನ ಮಾಡುವ ಭಾಷೆ ಕನ್ನಡವಾಗಿರುತ್ತದೆ. ನೀವು ಮೆಸೇಜ್‌ ಮಾಡುವವರು ಇಂಗ್ಲಿಂಷ್‌ನಲ್ಲಿ ಉತ್ತರ ನೀಡಿದರೆ ಅದಕ್ಕೆ ಪ್ರತಿಕ್ರಿಯೆ ಹೇಗೆ ನೀಡಬೇಕೆಂಬ ಭಯವಿರುವುದಿಲ್ಲ. ಯಾವುದೇ ಮಾತುಕತೆಯ ಆರಂಭಕ್ಕೆ ಭಾಷೆ ತುಂಬಾ ಮುಖ್ಯವಾಗುತ್ತದೆ. ಹಾಗಾಗಿ, ಪರಿಚಿತ ಭಾಷೆಯನ್ನು ಇಂತಹ ಆ್ಯಪ್‌ಗಳಲ್ಲಿ ಬಳಸಿದಾಗ ಮೆಸೇಜ್‌ಗಳ ಆಪ್ತತೆ ಹೆಚ್ಚುತ್ತದೆ.
  2. ನೀವು ಉಳಿದ ಡೇಟಿಂಗ್‌ ಆ್ಯಪ್‌ ಬಳಸುವಾಗ ಏನಾದರೂ ತೊಡಕು ಉಂಟಾಗಬಹುದು. ಆಗೆಲ್ಲ ಯಾರನ್ನಾದರೂ ಸಹಾಯ ಕೇಳಿಕೊಂಡು ಹೋಗಬೇಕಾಗುತ್ತದೆ. ಆಗ, ಅವರು ನಿಮ್ಮ ಮೆಸೇಜ್‌ಗಳನ್ನು ಓದಿದರೆ ಎಂಬ ಚಿಂತೆ ಮೂಡುತ್ತದೆ. ಅಥವಾ ಯಾರಾದರೂ ನಿಮ್ಮನ್ನು ರಿಜೆಕ್ಟ್‌ ಮಾಡಿದ್ದು ನೋಡಿದರೆ ಅವಮಾನವಾಗುವ ಭಯವಿರುತ್ತದೆ. ಆದರೆ, ನಿಮ್ಮದೇ ಭಾಷೆಯವರಿರುವ ಆ್ಯಪ್‌ ಇದ್ದಾಗ ಆ ಸಮಸ್ಯೆ ದೂರವಾಗುತ್ತದೆ. ನೀವು ಯಾರನ್ನೂ ಸಹಾಯ ಕೇಳಿಕೊಂಡು ಹೋಗಬೇಕಾಗಿಲ್ಲ.
  3. ಎದುರಿರುವವರು ಯಾರೋ, ಏನೋ? ಎಂಬ ಭಯ ಕಡಿಮೆಯಾಗುತ್ತದೆ. ಕೊನೇಪಕ್ಷ ಕನ್ನಡದವರು ಎಂಬ ಧೈರ್ಯದ ಭಾವನೆ ಇರುತ್ತದೆ. ಇದನ್ನು ಬಳಸುವುದು ಸುಲಭ. ಹಾಗಾಗಿ ಸಾಂಗತ್ಯದ ಹಂಬಲದಲ್ಲಿರುವ ಹಿರಿಯರು ಕೂಡ ಯಾವುದೇ ತೊಡಕುಗಳಿಲ್ಲದೇ ಬಳಸಬಹುದು.
  4. ಇದರ ವ್ಯಾಪ್ತಿ ಕನ್ನಡಿಗರಿಗೆ ಸೀಮಿತಗೊಳ್ಳುವುದರಿಂದ ಹೆಚ್ಚಿನ ಆಪ್ಷನ್‌ಗಳು ಇಲ್ಲದಿರಬಹುದು. ಹಾಗಾಗಿ ಗೆಳೆಯ-ಗೆಳತಿಯರನ್ನು ಹುಡುಕುತ್ತಾ ಅಣ್ಣ-ಅಕ್ಕಂದಿರು ಸಿಕ್ಕಬಹುದು! ಈ ಬಗ್ಗೆ ಸ್ವಲ್ಪ ಎಚ್ಚರ ವಹಿಸಬೇಕಾಗಬಹುದು.

ಹೆಚ್ಚಿನ ಓದಿಗಾಗಿ: ಇದು ಮನುಷ್ಯರನ್ನು ಓದೋ ‌ಹ್ಯೂಮನ್‌ ಲೈಬ್ರರಿ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

AC Side Effects: ಅತಿಯಾದ ಎಸಿ ಬಳಕೆಯಿಂದ ಏನಾಗುತ್ತದೆ ಎಂಬ ಅರಿವಿರಲಿ

ಹಿಂದೊಮ್ಮೆ ಐಶಾರಾಮಿ ಎನಿಸಿದ್ದ ವಸ್ತುಗಳು ಈಗ ಅಗತ್ಯಗಳು ಎನಿಸಿರುವುದು ಹೌದು. ಆದರೆ ಅವುಗಳ ಬಳಕೆ ಅತಿ ಎನ್ನುವಷ್ಟಾದರೆ ಅದರಿಂದ ಅಡ್ಡ ಪರಿಣಾಮಗಳು ಉಂಟೇ ಎನ್ನುವುದನ್ನೂ ಗಮನಿಸಬೇಕಲ್ಲ. ಹವಾನಿಯಂತ್ರಕವನ್ನು ಬಳಸುವುದರಿಂದ ಬೇಸಿಗೆಯ ಹೊಡೆತವನ್ನು ತಪ್ಪಿಸಿಕೊಳ್ಳಬಹುದು ಎನ್ನುವುದು ಹೌದಾದರೂ, ದಿನ-ರಾತ್ರಿ ಅದರಡಿಯಲ್ಲೇ ಇರುವುದು ಆರೋಗ್ಯದ ಮೇಲೆ (AC Side Effects) ಮಾಡುವ ಪರಿಣಾಮವೇನು?

VISTARANEWS.COM


on

AC Side Effects
Koo

ಬೇಸಿಗೆಯಲ್ಲಿ ಮಾತ್ರವಲ್ಲ, ವರ್ಷದ ಹೆಚ್ಚಿನ ದಿನಗಳಲ್ಲಿ ಹವಾನಿಯಂತ್ರಣ ವ್ಯವಸ್ಥೆ ಅಥವಾ ಎಸಿ ಬಳಕೆ ವ್ಯಾಪಕವಾಗಿದೆ. ಒಮ್ಮೆ ಎಸಿ ಬಳಕೆಗೆ ಒಗ್ಗಿದರೆ ಮತ್ತೆ ಅದರ ಹೊರತಾಗಿ ಇರುವುದು ಕಷ್ಟ ಎನ್ನುವಂತಾಗುತ್ತದೆ. ಹಗಲಿಡೀ ಕಚೇರಿಗಳಲ್ಲಿ ಎಸಿ ಛಾಯೆಯಲ್ಲಿ ಕುಳಿತರೆ, ರಾತ್ರಿ ಮನೆಗೆ ಬಂದ ಮೇಲೂ ಎಸಿ ಹಾಕಿಕೊಳ್ಳುತ್ತೇವೆ. ಹವಾನಿಯಂತ್ರಣ ವ್ಯವಸ್ಥೆ ಇಲ್ಲದೆ ಹಗಲೂ ಇಲ್ಲ, ರಾತ್ರಿಯೂ ಇಲ್ಲ ಎನ್ನುವಷ್ಟು ಅದಕ್ಕೆ ಒಗ್ಗಿ ಹೋಗಿರುತ್ತೇವೆ. ಸಾಮಾನ್ಯ ದಿನಗಳಲ್ಲೇ ಇಷ್ಟಾದ ಮೇಲೆ ಬೇಸಿಗೆಯಲ್ಲಿ ಇನ್ನೆಷ್ಟಿರಬೇಡ ಇದರ ಬಳಕೆ? ಆದರೆ ಹೀಗೆ ಅತಿಯಾಗಿ ಎಸಿ ಬಳಸುವುದು ಒಳ್ಳೆಯದೇ? ಹಿಂದೊಮ್ಮೆ ಐಶಾರಾಮಿ ಎನಿಸಿದ್ದ ವಸ್ತುಗಳು ಈಗ ಅಗತ್ಯಗಳು ಎನಿಸಿರುವುದು ಹೌದು. ಆದರೆ ಅವುಗಳ ಬಳಕೆ ಅತಿ ಎನ್ನುವಷ್ಟಾದರೆ ಅದರಿಂದ ಅಡ್ಡ ಪರಿಣಾಮಗಳು ಉಂಟೇ ಎನ್ನುವುದನ್ನೂ ಗಮನಿಸಬೇಕಲ್ಲ. ಹವಾನಿಯಂತ್ರಕವನ್ನು ಬಳಸುವುದರಿಂದ ಬೇಸಿಗೆಯ ಹೊಡೆತವನ್ನು ತಪ್ಪಿಸಿಕೊಳ್ಳಬಹುದು ಎನ್ನುವುದು ಹೌದಾದರೂ, ದಿನ-ರಾತ್ರಿ ಅದರಡಿಯಲ್ಲೇ ಇರುವುದು ಆರೋಗ್ಯದ ಮೇಲೆ ಮಾಡುವ ಪರಿಣಾಮವೇನು? ಬೇಸಿಗೆಗಷ್ಟೇ ಇದರ ಬಳಕೆಯನ್ನು ಮಿತಗೊಳಿಸಿ, ವರ್ಷದ ಉಳಿದ ದಿನಗಳಲ್ಲಿ ಇದನ್ನು ಬಳಸದೆ ಇರಬಹುದೇ? ಹೆಚ್ಚು ಬಳಸುವುದರಿಂದ (AC Side Effects) ಏನಾಗುತ್ತದೆ?

dry skin

ಒಣ ಕಣ್ಣು ಮತ್ತು ಚರ್ಮ

ಎಸಿ ಇರುವಂಥ ಸ್ಥಳಗಳಲ್ಲಿ ತೇವಾಂಶ ಕಡಿಮೆ. ಜೊತೆಗೆ, ಅತಿಯಾಗಿ ಎಸಿ ಅಡಿಯಲ್ಲಿ ಕುಳಿತಿದ್ದರೆ ಬೇಸಿಗೆಯಲ್ಲಿ ದಾಹವೂ ಅಷ್ಟಾಗಿ ಕಾಡದೆ, ಕುಡಿಯುವ ನೀರಿನ ಪ್ರಮಾಣವೂ ಕಡಿಮೆ ಆಗಬಹುದು. ಇದರಿಂದ ಚರ್ಮವೆಲ್ಲ ಒಣಗಿದಂತಾಗುತ್ತದೆ. ಇದೇ ಮುಂದುವರೆದು ಸುಕ್ಕುಗಟ್ಟಿದಂತಾದೀತು. ಕಣ್ಣೂ ತೇವ ಕಳೆದುಕೊಂಡು ಶುಷ್ಕವಾಗಬಹುದು. ಇದರಿಂದ ಕಣ್ಣು ಕೆಂಪಾಗುವುದು, ತುರಿಕೆಯಂಥ ತೊಂದರೆಗಳು ಗಂಟು ಬೀಳಬಹುದು. ಹಾಗಾಗಿ ಎಸಿಯಿಂದ ಮಧ್ಯೆ ಬಿಡುವು ತೆಗೆದುಕೊಳ್ಳುವುದು ಸೂಕ್ತ. ಒಂದೊಮ್ಮೆ ಸತತವಾಗಿ ಎಸಿ ಬಳಸುವುದು ಅನಿವಾರ್ಯ ಎಂದಾದರೆ, ವಾತಾವರಣದ ತೇವ ಹೆಚ್ಚಿಸುವ ಹ್ಯುಮಿಡಿಫಯರ್‌ ಸಹ ಬಳಸುವುದು ಜಾಣತನ.

Doctor listens to the human lungs

ಶ್ವಾಸಕೋಶದ ತೊಂದರೆಗಳು

ಹವಾನಿಯಂತ್ರಕ ನೀಡುವಂಥ ಶುಷ್ಕವಾದ ತಣ್ಣನೆಯ ಗಾಳಿಯು ಶ್ವಾಸಕೋಶಗಳಿಗೆ ಕಿರಿಕಿರಿ ನೀಡಬಹುದು. ಇದರಿಂದ ಅಲರ್ಜಿಗಳು, ಅಸ್ತಮಾ ಮತ್ತು ಶ್ವಾಸಕೋಶದ ಸೋಂಕಿನ ತೊಂದರೆ ಉಲ್ಭಣಿಸಬಹುದು. ಜೊತೆಗೆ ದೀರ್ಘ ಕಾಲದವರೆಗೆ ಎಸಿಯ ತಣ್ಣನೆಯ ಗಾಳಿಗೆ ಒಡ್ಡಿಕೊಂಡಾಗ ಫ್ಲೂ ಮಾದರಿಯ ಶೀತ, ಜ್ವರವನ್ನು ಅಂಟಿಸಿಕೊಳ್ಳುವ ಸಾಧ್ಯತೆಗಳೂ ಅಧಿಕ. ಇಂಥ ಸಮಸ್ಯೆಗಳಿಗೆ ಕಡಿವಾಣ ಹಾಕುವ ಉದ್ದೇಶವಿದ್ದರೆ, ಎಸಿ ಫಿಲ್ಟರ್‌ಗಳನ್ನು ಸ್ವಚ್ಛವಾಗಿ ಇರಿಸಬೇಕು. ಉಷ್ಣತೆಯ ಏರಿಳಿತವನ್ನು ಕ್ರಮೇಣ ಮಾಡುವುದೊಳಿತು. ಜೊತೆಗೆ ಏರ್‌ ಪ್ಯೂರಿಫಯರ್‌ ಬಳಸುವ ಬಗ್ಗೆ ಯೋಚಿಸುವುದು ಸೂಕ್ತ.

woman have backache pain and waist painful.

ನೋವುಗಳು ಹೆಚ್ಚು

ದೀರ್ಘ ಕಾಲ ಹವಾ ನಿಯಂತ್ರಕದ ಅಡಿಯಲ್ಲಿ ಇರುವುದರಿಂದ ದೇಹದ ಉಷ್ಣತೆ ಕುಸಿಯುತ್ತದೆ. ಇದರಿಂದ ಸ್ನಾಯುಗಳಲ್ಲಿ ನೋವು, ಕೀಲುಗಳು ಬಿಗಿಯಾಗುವುದು ಮುಂತಾದ ತೊಂದರೆಗಳು. ಅದರಲ್ಲೂ ಇಂಥ ತೊಂದರೆಗಳು, ಮೂಳೆ-ಸ್ನಾಯುಗಳಲ್ಲಿ ನೋವು ಈಗಾಗಲೇ ಇದ್ದವರು ಈ ಬಗ್ಗೆ ಎಚ್ಚರ ವಹಿಸುವುದು ಒಳಿತು. ಎಸಿ ವಾತಾವರಣಕ್ಕೆ ಸೂಕ್ತವಾದಂಥ ವಸ್ತ್ರಗಳನ್ನು ಧರಿಸಬೇಕು. ಆಗೀಗ ಲಘುವಾದ ವ್ಯಾಯಾಮಗಳನ್ನು ಮಾಡುವುದರಿಂದ ರಕ್ತ ಸಂಚಾರ ಸುಗಮವಾಗುತ್ತದೆ. ಚೆನ್ನಾಗಿ ನೀರು ಕುಡಿಯುವುದು ಸಹ ಅಗತ್ಯ.

ಇದನ್ನೂ ಓದಿ: Mouthwashes: ಬಾಯಿಯ ಎಲ್ಲ ಸಮಸ್ಯೆಗಳಿಗೂ ಮೌತ್‌ವಾಷ್‌ ಪರಿಹಾರವೆ? ಇದರ ಇತಿಮಿತಿ ಬಗ್ಗೆಯೂ ತಿಳಿದಿರಲಿ

ಪ್ರತಿರೋಧಕತೆ ಕುಂಠಿತ

ಸತತವಾಗಿ ಹವಾನಿಯಂತ್ರಣದಡಿಯಲ್ಲಿ ಇರುವುದರಿಂದ ಪ್ರತಿರೋಧಕತೆ ಸಹ ಕುಂಠಿತವಾಗಬಹುದು. ಮುಖ್ಯವಾಗಿ ತಣ್ಣನೆಯ ಶುಷ್ಕ ವಾತಾವರಣವೇ ಇದಕ್ಕೆಲ್ಲ ಕಾರಣ. ಒಮ್ಮೆ ಯಾವುದಾದರೂ ರೋಗಾಣು ಎಸಿ ವಾತಾವರಣವನ್ನು ಹೊಕ್ಕಿದರೆ, ದೀರ್ಘ ಕಾಲದವರೆಗೆ ಅಲ್ಲಿಯೇ ಇರುತ್ತದೆ. ಹಾಗಾಗಿ ಎಸಿಯಿಂದ ಬಿಡುವು ತೆಗೆದುಕೊಳ್ಳುವುದು ಅಗತ್ಯ. ಸೂಕ್ತವಾದ ಪೋಷಕಾಂಶವನ್ನು ಆಹಾರದ ಮೂಲಕ ತೆಗೆದುಕೊಳ್ಳುವುದು ಸಹ ಇನ್ನೊಂದು ಮುಖ್ಯವಾದ ಅಂಶ.
ಎಸಿಯಲ್ಲಿ ಸತತವಾಗಿ ಕುಳಿತಾಗ ಜಡತೆ ಸಹ ಅಮರಿಕೊಳ್ಳಬಹುದು. ಅದರಲ್ಲೂ ಬೇಸಿಗೆಯ ಮಧ್ಯಾಹ್ನಗಳಲ್ಲಿ ನಿದ್ದೆ ಹೆಚ್ಚು. ಹಾಗಿರುವಾಗ ಎಸಿ ಆ ಭಾವವನ್ನು ದ್ವಿಗುಣಗೊಳಿಸಬಹುದು. ಕಠೋರ ಬೇಸಿಗೆಯಲ್ಲೇ ಆದರೂ ಆಗಾಗ ಎಸಿಯಿಂದ ಹೊರಬನ್ನಿ. ಇದು ದೇಹಕ್ಕೆ ಅಗತ್ಯವಾದ ತಾಜಾ ಮತ್ತು ಶುದ್ಧ ಗಾಳಿಯನ್ನು ನೀಡುತ್ತದೆ. ಅಗತ್ಯಕ್ಕೆ ಬೇಕಷ್ಟೇ ಎಸಿಯನ್ನು ಬಳಸುವುದರಿಂದ ಅತಿಯಾದ ವಿದ್ಯುತ್‌ ಖರ್ಚನ್ನೂ ಉಳಿಸಬಹುದು. ವಾತಾವರಣಕ್ಕೆ ಎಸಿಯಿಂದ ಆಗುವ ಹಾನಿಯನ್ನೂ ಕಡಿಮೆ ಮಾಡಬಹುದು. ಹಾಗಾಗಿ ವಾತಾವರಣ ತಂಪಾಗಿಸುವ ಬದಲಿ ವ್ಯವಸ್ಥೆಯ ಬಗ್ಗೆಯೂ ಚಿಂತಿಸಿ.

Continue Reading

ಆರೋಗ್ಯ

Vijayanagara News: ಹೊಸಪೇಟೆಯಲ್ಲಿ ವಿಶ್ವ ಋತುಚಕ್ರ ನೈರ್ಮಲ್ಯ ದಿನಾಚರಣೆ

Vijayanagara News: ಹೊಸಪೇಟೆ ನಗರದ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಯಲ್ಲಿ ಮಂಗಳವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವಿಶ್ವ ಋತುಚಕ್ರ ನೈರ್ಮಲ್ಯ ದಿನಾಚರಣೆ ಕಾರ್ಯಕ್ರಮ ಜರುಗಿತು.

VISTARANEWS.COM


on

World Menstrual Hygiene Day in Hosapete
Koo

ಹೊಸಪೇಟೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಗರದ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಯಲ್ಲಿ ಮಂಗಳವಾರ ವಿಶ್ವ ಋತುಚಕ್ರ ನೈರ್ಮಲ್ಯ ದಿನಾಚರಣೆ ಕಾರ್ಯಕ್ರಮ (Vijayanagara News) ಜರುಗಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶಂಕರ್ ನಾಯಕ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, 11 ರಿಂದ 14 ವರ್ಷದ ಹೆಣ್ಣುಮಕ್ಕಳಲ್ಲಿ ಪ್ರಾರಂಭವಾಗುವ ಋತುಚಕ್ರದ ಕುರಿತು ಪ್ರತಿಯೊಬ್ಬ ಕಿಶೋರಿಯಿಂದ ಹಿಡಿದು ಎಲ್ಲ ಮಹಿಳೆಯರು ಜಾಗೃತಿ ಹೊಂದಬೇಕು.

ಋತುಸ್ರಾವವಾದಾಗ ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ವಿಶ್ವ ಆರೋಗ್ಯ ಸಂಸ್ಥೆಯು ಪ್ರತಿ ವರ್ಷ ಹೊಸದಾದ ಘೋಷಣೆಯೊಂದಿಗೆ ತಿಳಿಸುವ ವಿಶ್ವ ಋತುಚಕ್ರದ ನೈರ್ಮಲ್ಯ ದಿನದ ಮಹತ್ವವನ್ನು ಪ್ರತಿಯೊಬ್ಬರು ಅರಿಯಬೇಕು ಎಂದು ಸಲಹೆ ಮಾಡಿದರು.

ಇದನ್ನೂ ಓದಿ: Credit Card Safety Tips: ಕ್ರೆಡಿಟ್‌ ಕಾರ್ಡ್ ವಂಚನೆಯಿಂದ ಪಾರಾಗಲು ಇಲ್ಲಿದೆ 9 ಸಲಹೆ

ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಜಂಬಯ್ಯ ಮಾತನಾಡಿ, ಪ್ರತಿಯೊಬ್ಬ ಪ್ರಜೆ ಋತುಚಕ್ರದ ಕುರಿತು ಅರಿವು ಪಡೆದು ಜ್ಞಾನವಂತರಾಗಬೇಕು. ಮೂಢನಂಬಿಕೆಯನ್ನು ಹೋಗಲಾಡಿಸಬೇಕು. ಕಿಶೋರಿಯರು ಮತ್ತು ಮಹಿಳೆಯರು ಋತುಸ್ರಾವ ಉಂಟಾದಾಗ ವೈಯಕ್ತಿಕ ಕಾಳಜಿ, ಸಂತಾನೋತ್ಪತ್ತಿ, ಪೌಷ್ಟಿಕ ಆಹಾರದ ಸೇವನೆಯ ಬಗ್ಗೆ ತಿಳುವಳಿಕೆ ಹೊಂದಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಡಿಎಂಒ ಕಾರ್ಯಕ್ರಮದ ಅಧಿಕಾರಿ ಡಾ. ಕಮಲಮ್ಮ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಋತುಚಕ್ರ ಅಥವಾ ಋತುಸ್ರಾವ ಎಂದರೆ ಹದಿಹರೆಯದ ಹೆಣ್ಣುಮಕ್ಕಳು ಪ್ರೌಢಾವಸ್ಥೆ ತಲುಪುವ ಹಂತವಾಗಿದೆ. ಈ ಸಂದರ್ಭದಲ್ಲಿ ಮಹಿಳೆಯರು ಪೌಷ್ಠಿಕ ಆಹಾರ ಸೇವನೆ ಮಾಡಬೇಕು. ಋತುಸ್ರಾವ ಉಂಟಾದಾಗ ಹಳೆಯದಾದ ಉಪಯೋಗಿಸಿದ ಬಟ್ಟೆಗಳನ್ನು ಬಳಸಬಾರದು. ವಿಶೇಷವಾಗಿ ಋತುಚಕ್ರದ ಶುಚಿತ್ವ ನಿರ್ವಹಣೆಯ ಬಗ್ಗೆ ಗ್ರಾಮೀಣ ಭಾಗದ ಮಹಿಳೆಯರು ಹೆಚ್ಚಿನ ತಿಳುವಳಿಕೆ ಹೊಂದಬೇಕಿದೆ ಎಂದು ಸಲಹೆ ನೀಡಿದರು.

ಆರ್‌ಬಿಎಸ್‌ಕೆ ವೈದ್ಯಾಧಿಕಾರಿ ಡಾ.ಆಶಾ, ಮುಟ್ಟಿನ ನೈರ್ಮಲ್ಯ ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು, ಆರ್‌ಸಿಎಚ್ ಸಿಬ್ಬಂದಿ, ಆರೋಗ್ಯ ಸಿಬ್ಬಂದಿ, ಸಮುದಾಯ ಆರೋಗ್ಯ ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರು, ತುಂಗಭದ್ರಾ ಸ್ಕೂಲ್ ಆಫ್ ನರ್ಸಿಂಗ್ ಹೋಂನ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಉಪಸ್ಥಿತರಿದ್ದರು.

ಇದನ್ನೂ ಓದಿ: Child Trafficking Racket: ಅಂತಾರಾಜ್ಯ ಮಕ್ಕಳ ಕಳ್ಳಸಾಗಣೆ ದಂಧೆ ಪತ್ತೆ; 11 ಮಕ್ಕಳ ರಕ್ಷಣೆ

ಕಾರ್ಯಕ್ರಮದಲ್ಲಿ ಎಲ್ಲರಿಗೂ ಮುಟ್ಟಿನ ನೈರ್ಮಲ್ಯದ ಕುರಿತು ಪ್ರತಿಜ್ಞಾವಿಧಿ ಬೋಧಿಸಲಾಯಿತು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ. ದೊಡ್ಡಮನಿ ಪ್ರಾಸಾವಿಕ ಮಾತನಾಡಿದರು. ಧರ್ಮನಗೌಡ ವಂದಿಸಿದರು.

Continue Reading

ಫ್ಯಾಷನ್

Summer Dress Fashion: ಸೀಸನ್‌ ಎಂಡ್‌ ಫ್ಯಾಷನ್‌ಗೆ ಕಾಲಿಟ್ಟ ಸಮುದ್ರದ ಅಲೆ ಬಿಂಬಿಸುವ ವೆವಿ ಡ್ರೆಸ್‌!

ಸಮ್ಮರ್‌ ಸೀಸನ್‌ ಎಂಡ್‌ನಲ್ಲಿ (Summer dress fashion) ಇದೀಗ ಸಮುದ್ರದ ಅಲೆಗಳಂತೆ ಕಾಣಿಸುವ ಪ್ರಿಂಟ್ಸ್ ಇರುವಂತಹ ವೆವಿ ಡ್ರೆಸ್‌ಗಳು ಕಾಲಿಟ್ಟಿವೆ. ಇದಕ್ಕೆ ಪೂರಕ ಎಂಬಂತೆ, ನಟಿ ಶಾರ್ವರಿ ಧರಿಸಿದಂತಹ ವೆವಿ ಡ್ರೆಸ್‌ಗಳು ಟ್ರೆಂಡ್‌ ಸೆಟ್‌ ಮಾಡಿವೆ. ಏನಿದು ವೆವಿ ಡ್ರೆಸ್‌? ಇಲ್ಲಿದೆ ಡಿಟೇಲ್ಸ್ .

VISTARANEWS.COM


on

Summer Dress Fashion
ಚಿತ್ರಗಳು : ಶಾರ್ವರಿ, ನಟಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಇನ್ನೇನೂ ಸಮ್ಮರ್‌ ಸೀಸನ್‌ (Summer dress fashion) ಮುಗಿಯುವ ಹಂತದಲ್ಲಿದೆ. ಆಗಲೇ ವೆವಿ ಡ್ರೆಸ್‌ಗಳು ಎಂಟ್ರಿ ನೀಡಿವೆ. ಹೌದು. ನೋಡಿದಾಕ್ಷಣ ಮನೋಲ್ಲಾಸ ತುಂಬುವಂತಹ ಉತ್ಸಾಹ ಮೂಡಿಸುವ ಡಿಫರೆಂಟ್‌ ಲುಕ್‌ ನೀಡುವ ನಾನಾ ಶೇಡ್‌ನ ವೆವಿ ಡ್ರೆಸ್‌ಗಳು ಫ್ಯಾಷನ್‌ ಲೋಕಕ್ಕೆ ಕಾಲಿಟ್ಟಿವೆ.

Summer Dress Fashion

ಏನಿದು ವೆವಿ ಡ್ರೆಸ್‌?

ಅರರೆ, ಏನಿದು ವೆವಿ ಡ್ರೆಸ್‌ ಎಂದು ಯೋಚಿಸುತ್ತಿದ್ದೀರಾ! ಹೆಸರೇ ಹೇಳುವಂತೆ, ಇವು ಬೀಚ್‌ನಲ್ಲಿ ಸಮುದ್ರದ ಅಲೆಗಳನ್ನು ಬಿಂಬಿಸುವಂತಹ ಪ್ರಿಂಟ್ಸ್ ಇರುವಂತಹ ಸಮ್ಮರ್‌ ಡ್ರೆಸ್‌ಗಳಿವು. ನೋಡಲು ಬೀಚ್‌ ಲುಕ್‌ ಪ್ಲಸ್‌ ಹಾಲಿ ಡೇ ಪಾರ್ಟಿ ಲುಕ್‌ ನೀಡುವಂತಹ ಉಡುಗೆಗಳಿವು. ಅಷ್ಟೇಕೆ! ಲಂಚ್‌-ಬ್ರಂಚ್‌ ಪಾರ್ಟಿಗಳಲ್ಲೂ ಕಾಣಬಹುದಾದ ಹೈ ಫ್ಯಾಷನ್‌ ಉಡುಪುಗಳಿವು. ಇವುಗಳ ಪ್ರಿಂಟ್ಸ್ ಅಲೆಗಳಂತೆ ಇರುವುದರಿಂದ ಇವನ್ನು ವೆವಿ ಡ್ರೆಸ್‌ಗಳೆಂದು ಕರೆಯಲಾಗುತ್ತದೆ. ನಾನಾ ಹೈ ಫ್ಯಾಷನ್‌ ಬ್ರಾಂಡ್‌ಗಳಲ್ಲಿ ಇವು ಬಿಡುಗಡೆಗೊಂಡಿವೆ. ಸೆಲೆಬ್ರೆಟಿಗಳು ಮಾತ್ರವಲ್ಲ, ಸ್ಟೈಲಿಶ್‌ ಹುಡುಗಿಯರನ್ನು ಸವಾರಿ ಮಾಡತೊಡಗಿವೆ ಎಂದು ವಿವರಿಸುತ್ತಾರೆ ಸ್ಟೈಲಿಸ್ಟ್‌ಗಳು.

Summer Dress Fashion

ಶಾರ್ವರಿ ವೆವಿ ಡ್ರೆಸ್‌

ಬಾಲಿವುಡ್‌ನಲ್ಲಿ ಇನ್ನೂ ಅತಿ ಹೆಚ್ಚಾಗಿ ಕಂಡು ಬರದ ಉಡುಪುಗಳಲ್ಲಿ ಈ ವೆವಿ ಡ್ರೆಸ್‌ ಕೂಡ ಸೇರಿದೆ. ಯಾಕೆಂದರೇ, ಈ ಉಡುಪು ಈ ಜನರೇಷನ್‌ ನಟಿಯರ ಲಿಸ್ಟ್ನಲ್ಲಿದೆ. ಇದಕ್ಕೆ ಪೂರಕ ಎಂಬಂತೆ, ಬಾಲಿವುಡ್‌ ನಟಿ ಶಾರ್ವರಿ ಸಮುದ್ರದ ಅಲೆಗಳನ್ನು ನೆನಪಿಸುವ ಪಿಸ್ತಾ ಮಿಂಟ್‌ ಗ್ರೀನ್‌ ಶೇಡ್ ಮಿಕ್ಸ್ ಇರುವಂತಹ ವೆವಿ ಡ್ರೆಸ್‌ನಲ್ಲಿ ಕಾಣಿಸಿಕೊಂಡು ಫ್ಯಾಷನ್‌ ಲೋಕದಲ್ಲಿ ಟ್ರೆಂಡ್‌ ಸೆಟ್‌ ಮಾಡಿದ್ದಾರೆ. ಸದ್ಯ, ಇತರೇ ಯಾವುದೇ ನಟಿಯರು ಪ್ರಯೋಗಿಸದ ಡಿಸೈನರ್‌ವೇರ್‌ನಲ್ಲಿ ಕಾಣಿಸಿಕೊಂಡಿರುವ ಹೆಗ್ಗಳಿಕೆ ಇವರದು. ವೆವಿ ಡ್ರೆಸ್‌ನಂತಹ ಸಮ್ಮರ್‌ ಡ್ರೆಸ್‌ ಇದೆಯಾ! ಒಮ್ಮೆ ನಾವು ಕೂಡ ಧರಿಸೋಣಾ! ಎಂಬ ಟೀನೇಜ್‌ ಹುಡುಗಿಯರ ಫ್ಯಾಷನ್‌ ಚಾಯ್ಸ್‌ಗೆ ಹೊಸ ಶೇಡ್‌ಗಳು ಆಕರ್ಷಿಸುತ್ತಿವೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕಿ ಜಿಯಾ. ಅವರ ಪ್ರಕಾರ, ವೆವಿ ಡ್ರೆಸ್‌ಗಳು ಯಂಗ್‌ ಲುಕ್‌ ನೀಡುತ್ತವಂತೆ. ಹಾಗಾಗಿ ಆನ್‌ಲೈನ್‌ನಲ್ಲಿ ಇದೀಗ ಇವುಗಳ ಖರೀದಿ ಹೆಚ್ಚಾಗಿದೆ ಎನ್ನುತ್ತಾರೆ.

Summer Dress Fashion

ವೆವಿ ಡ್ರೆಸ್‌ಗಳ ಟ್ರೆಂಡ್‌

ಸಾಗರ ಹಾಗೂ ಸಮುದ್ರ ಅಲೆಗಳ ನ್ಯಾಚುರಲ್‌ ಶೇಡ್ಸ್, ಪೀಚ್‌ ಹಾಗೂ ಕೇಸರಿ ಶೇಡ್‌ಗಳ ನೈಜವೆನಿಸದ ಪ್ರಿಂಟ್ಸ್‌ನ ವೆವಿ ಡ್ರೆಸ್‌ಗಳು, ಅಸ್ಸೆಮ್ಮಿಟ್ರಿಕಲ್‌ ವೆವಿ ಡ್ರೆಸ್‌ಗಳು ಅದರಲ್ಲೂ, ವೈಟ್‌ & ಸೀ ಬ್ಲ್ಯೂ , ರಾಯಲ್‌ ಬ್ಲ್ಯೂ ವೆವಿ ಡ್ರೆಸ್‌ಗಳು ಅತಿ ಹೆಚ್ಚಾಗಿ ಬೇಡಿಕೆ ಪಡೆದುಕೊಂಡಿವೆ.

  • ಸಮ್ಮರ್‌ ಪಾರ್ಟಿಗೆ ಹಾಗೂ ಔಟಿಂಗ್‌ಗೆ ಮ್ಯಾಚ್‌ ಆಗುತ್ತವೆ.
  • ಹೆಚ್ಚು ಆಕ್ಸೆಸರೀಸ್‌ ಧರಿಸುವ ಅಗತ್ಯವಿಲ್ಲ.
  • ಮಿನಿಮಲ್‌ ಮೇಕಪ್‌ ಆಕರ್ಷಕವಾಗಿ ಕಾಣಿಸುತ್ತದೆ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

ಇದನ್ನೂ ಓದಿ: Mango Nail Art: ಸಮ್ಮರ್‌ ಸೀಸನ್‌ನಲ್ಲಿ ಬಂತು ಮ್ಯಾಂಗೋ ನೇಲ್‌ ಆರ್ಟ್!

Continue Reading

ಫ್ಯಾಷನ್

Anant Ambani Radhika Merchant Pre Wedding: ಹೀಗಿದೆ ಅಂಬಾನಿ ಫ್ಯಾಮಿಲಿಯ ಲಕ್ಷುರಿ ಕ್ರ್ಯೂಸ್‌ ಪ್ರಿ-ವೆಡ್ಡಿಂಗ್‌ ಸೆಲೆಬ್ರೇಷನ್‌ನ ಡ್ರೆಸ್‌ ಕೋಡ್ಸ್!

ಲಕ್ಷುರಿ ಕ್ರ್ಯೂಸ್‌ನಲ್ಲಿ ನಡೆಯಲಿರುವ ಅಂಬಾನಿ ಫ್ಯಾಮಿಲಿಯ 2ನೇ ಪ್ರಿ –ವೆಡ್ಡಿಂಗ್‌ನ (Anant Ambani Radhika Merchant Pre Wedding) ನಾನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸೆಲೆಬ್ರೆಟಿಗಳು ಧರಿಸಬೇಕಾದ ಡ್ರೆಸ್‌ಕೋಡ್‌ ಬಗ್ಗೆ ಈಗಾಗಲೇ ಆಹ್ವಾನ ಪತ್ರಿಕೆಯಲ್ಲಿ ನಮೂದಿಸಲಾಗಿದೆ. ಈ ಬಾರಿ ಯಾವ್ಯಾವ ಕಾರ್ಯಕ್ರಮಕ್ಕೆ ಯಾವ ಥೀಮ್‌ನ ಔಟ್‌ಫಿಟ್ಸ್ ಧರಿಸಲಿದ್ದಾರೆ ಎಂಬುದರ ಬಗ್ಗೆ ಇಲ್ಲಿದೆ ಡಿಟೇಲ್ಸ್.

VISTARANEWS.COM


on

Anant Ambani Radhika Merchant Pre Wedding
ಸಾಂದರ್ಭಿಕ ಚಿತ್ರಗಳು: ಅಂಬಾನಿ ಫ್ಯಾಮಿಲಿಯ ಪ್ರಿ-ವೆಡ್ಡಿಂಗ್‌ ಚಿತ್ರಗಳು
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮೂರು ದಿನಗಳ ಕಾಲ ಇಟಲಿಯಿಂದ ದಕ್ಷಿಣ ಫ್ರಾನ್ಸ್‌ ತನಕ ನೀರಿನ ಮೇಲೆ ಲಕ್ಷುರಿ ಕ್ರ್ಯೂಸ್‌ನಲ್ಲಿ ನಡೆಯಲಿರುವ ಅಂಬಾನಿ ಫ್ಯಾಮಿಲಿಯ ರಾಧಿಕಾ ಮರ್ಚೆಂಟ್‌-ಆನಂತ್‌ ಅಂಬಾನಿಯ ಪ್ರಿ –ವೆಡ್ಡಿಂಗ್‌ನ (Anant Ambani Radhika Merchant Pre Wedding) ನಾನಾ ಕಾರ್ಯಕ್ರಮಗಳಲ್ಲಿ ಸೆಲೆಬ್ರೆಟಿಗಳು ಧರಿಸುವ ಡ್ರೆಸ್‌ಕೋಡ್‌ ಬಗ್ಗೆ ಎಲ್ಲರಲ್ಲೂ ಕುತೂಹಲ ಮೂಡಿದೆ. ಕಳೆದ ಬಾರಿಯಂತೆ ಈ ಬಾರಿಯೂ ಕೂಡ ಈಗಾಗಲೇ ಆಹ್ವಾನ ಪತ್ರಿಕೆಯಲ್ಲಿ ಧರಿಸಬೇಕಾದ ಡ್ರೆಸ್‌ಕೋಡ್ಸ್ ಮೊದಲೇ ನಮೂದಿಸಲಾಗಿದೆ. ಅಂದಹಾಗೆ, ಸೆಲೆಬ್ರೆಟಿಗಳು ಯಾವ್ಯಾವ ಕಾರ್ಯಕ್ರಮಕ್ಕೆ ಯಾವ ಬಗೆಯ ಡ್ರೆಸ್‌ಕೋಡ್‌ ಧರಿಸಬೇಕು? ಎಂಬುದರ ಬಗ್ಗೆ ಆಹ್ವಾನಪ್ರತಿಕೆಯಲ್ಲಿ ನೀಡಲಾಗಿರುವ ಡಿಟೇಲ್ಸ್ ಕುರಿತಂತೆ ಫ್ಯಾಷನಿಸ್ಟಾಗಳು ವಿವರಿಸಿರುವುದು ಹೀಗೆ…

Anant Ambani Radhika Merchant Pre Wedding

ಮೇ 29 ಸ್ಟಾರಿ ನೈಟ್‌ಗೆ ಫಾರ್ಮರ್ಲ್ಸ್

ಕ್ರ್ಯೂಸ್‌ ಬೋರ್ಡಿಂಗ್‌ ಆದ ದಿನದಂದು ಆಗಮಿಸುವ ಸ್ಟಾರ್ಗಳು, ಸೆಲೆಬ್ರೆಟಿಗಳು ಎಲ್ಲರೂ “ವೆಲ್ಕಮ್‌ ಲಂಚ್‌ “ ಹೆಸರಿನ ಥೀಮ್‌ಗೆ ತಕ್ಕಂತೆ ಕ್ಲಾಸಿಕ್‌ ಕ್ರೂಸ್‌ ಆಧಾರಿತ ಉಡುಪುಗಳನ್ನು ಧರಿಸಲಿದ್ದಾರೆ. ಅದೇ ದಿನ ರಾತ್ರಿ “ ಸ್ಟಾರಿ ನೈಟ್‌” ಥೀಮ್‌ಗೆ ತಕ್ಕಂತೆ ಎಲ್ಲರೂ ವೆಸ್ಟರ್ನ್ ಫಾರ್ಮಲ್ಸ್ “ ಡ್ರೆಸ್‌ಕೋಡ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಲಿಸ್ಟ್ಗೆ ವೆಸ್ಟರ್ನ್ ಶಿಮ್ಮರ್‌ , ಬಾಡಿಕಾನ್‌, ಮೆರ್ಮೈಡ್‌ ಗೌನ್‌ಗಳು ಸೇರಲಿವೆ. ಇನ್ನು ಪುರುಷರಿಗೆ ಎಂದಿನಂತೆ ಸೂಟ್‌, ಟುಕ್ಸಡೋ, ಫಾರ್ಮಲ್ಸ್ ಔಟ್‌ಫಿಟ್‌ಗಳು ಎಂದು ಹೇಳಲಾಗಿದೆ.

Anant Ambani Radhika Merchant Pre Wedding

ಮೇ 30: ರೋಮ್‌ ಹಾಲಿ ಡೇ –ಟೋಗಾ ಪಾರ್ಟಿ

ರೋಮ್‌ನಲ್ಲಿ ಕ್ರ್ಯೂಸ್‌ ಲ್ಯಾಂಡಿಂಗ್‌ ಆದಾಗ ಅಲ್ಲಿಗೆ ಹೊಂದುವಂತಹ ಥೀಮ್‌ ಪ್ಲಾನ್‌ ಮಾಡಲಾಗಿದೆ. ಟೂರಿಸ್ಟ್ ಚಿಕ್‌ ಅಟೈರ್ಸ್ ಅಂದರೇ, ಟೂರ್‌ ಮಾಡುವಾಗ ಧರಿಸುವಂತಹ ಆಕರ್ಷಕ ಫಂಕಿ ಆಕ್ಸೆಸರೀಸ್‌ ಹಾಗೂ ಔಟ್‌ಫಿಟ್‌ಗಳು ಈ ದಿನಕ್ಕೆ ಫಿಕ್ಸ್ ಮಾಡಲಾಗಿದೆ. ಇನ್ನು ಅದೇ ದಿನ ಮತ್ತೊಮ್ಮೆ ಕ್ರ್ಯೂಸ್‌ ಒಳಗೆ ನಡೆಯುವ ಕ್ರಾರ್ಯಕ್ರಮದಲ್ಲಿ “ ಲಾ ಡೊಲ್ಸಿ ಫಾರ್‌ ನೈಂಟೆ” ಥೀಮ್‌ ಗೆ ತಕ್ಕಂತೆ ರೆಟ್ರೋ ಫ್ಯಾಷನ್‌ಗೆ ಮಣೆ ಹಾಕಲಾಗಿದೆ. ಇದೇ ಕಾಸ್ಟ್ಯೂಮ್ಸ್ನಲ್ಲಿ ರಾತ್ರಿ ಟೋಗಾ ಪಾರ್ಟಿ ಕೂಡ ನಡೆಯಲಿದೆ.

Anant Ambani Radhika Merchant Pre Wedding

ಮೇ 31ಕ್ಕೆ ಆಫ್ಟರ್‌ ಪಾರ್ಟಿ ಗ್ಲಾಮರಸ್‌ ಔಟ್‌ಫಿಟ್ಸ್

ಕ್ರ್ಯೂಸ್‌ನಲ್ಲಿ ಬೆಳಗ್ಗೆ ವೇಳೆ “ ವೀ ಅಂಡರ್‌ ದಿ ಸನ್‌” ಹೆಸರಿನ ಥೀಮ್‌ಗೆ ತಕ್ಕಂತೆ ಫ್ಲೇಫುಲ್‌ ಅಂದರೇ, ಉಲ್ಲಾಸ ನೀಡುವಂತಹ ಉಡುಗೆಗಳಿಗೆ ಗ್ರೀನ್‌ ಸಿಗ್ನಲ್‌ ನೀಡಲಾಗಿದೆ. ಕಾನ್‌ನಲ್ಲಿ ಲ್ಯಾಂಡ್‌ ಮಾಡಿದ ನಂತರ, ಡ್ರೆಸ್‌ಕೋಡ್‌ ಬದಲಾಗಲಿದೆ. “ ಲೇ ಮಾಸ್ಕ್ಯೂರೆಡ್‌” ಥೀಮ್‌ಗೆ ತಕ್ಕಂತೆ ಬ್ಲಾಕ್‌ ಮಾಸ್ಕ್‌ ಧರಿಸಿದ ಬ್ಲಾಕ್‌ ಔಟ್‌ಫಿಟ್‌ಗಳು ಎಲ್ಲರನ್ನು ಆವರಿಸಲಿವೆ. ಕ್ರ್ಯೂಸ್‌ ಮರಳಿದ ನಂತರ “ ಪಾರ್ಡನ್‌ ಮೈ ಫ್ರೆಂಚ್‌” ಥೀಮ್‌ಗೆ ತಕ್ಕಂತೆ ಆಫ್ಟರ್‌ ಪಾರ್ಟಿ ಗೆ ಮ್ಯಾಚ್‌ ಆಗುವಂತಹ ಗ್ಲಾಮರಸ್‌ ಔಟ್‌ಫಿಟ್‌ಗಳು ಎಲ್ಲರನ್ನೂ ಸವಾರಿ ಮಾಡಲಿವೆ.

Anant Ambani Radhika Merchant Pre Wedding

ಜೂನ್‌ 1 ಇಟಾಲಿಯನ್‌ ಸಮ್ಮರ್‌

ಇನ್ನು ಕೊನೆಯ ದಿನ ಕ್ರ್ಯೂಸ್‌ನಿಂದ ಬಂದರಿಗೆ ಇಳಿದಾಗ ಸೆಲೆಬ್ರೆಟಿಗಳು “ ಲಾ ಡೊಲ್ಚೆ ವಿಟಾ” ಥೀಮ್‌ಗೆ ತಕ್ಕಂತೆ ಇಟಾಲಿಯನ್‌ ಸಮ್ಮರ್‌ ಡ್ರೆಸ್‌ಕೋಡ್‌ನಲ್ಲಿ ಕಾಣಿಸಿಕೊಂಡು, ಲಕ್ಷುರಿ ಕ್ರ್ಯೂಸ್‌ ಪ್ರಿ-ವೆಡ್ಡಿಂಗ್‌ ಸೆಲೆಬ್ರೇ‍ಷನ್‌ಗೆ ಬೈ ಬೈ ಹೇಳಲಿದ್ದಾರೆ. ನಿಮಗೆ ಗೊತ್ತೇ! ಈ ಬಾರಿ ಭಾಗವಹಿಸುವ ಯಾವ ಸೆಲೆಬ್ರೆಟಿಯೂ ಕೂಡ ಮೊಬೈಲ್‌ ಬಳಸಿ ಫೋಟೋ ಕ್ಲಿಕ್ಕಿಸಿ ಶೇರ್‌ ಮಾಡುವಂತಿಲ್ಲವಂತೆ!

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Anant Ambani Radhika: ಅಂಬಾನಿ ಮಗನ ಮತ್ತೊಂದು ಪ್ರಿ ವೆಡ್ಡಿಂಗ್‌: ಇಟಲಿಗೆ ಹೊರಟ ಆಲಿಯಾ ಭಟ್ ದಂಪತಿ!

Continue Reading
Advertisement
Ambareesh Birthday
ಸಿನಿಮಾ10 mins ago

Ambareesh Birthday: ರೆಬಲ್‌ ಸ್ಟಾರ್‌ 72 ನೇ ಹುಟ್ಟುಹಬ್ಬ; ಅಂಬಿ ಸ್ಮರಣಾರ್ಥ ಅಭಿಮಾನಿಗಳಿಂದ ವಿವಿಧ ಕಾರ್ಯಕ್ರಮ

Ambareesh Birthday heartfelt note By sumalatha
ಸ್ಯಾಂಡಲ್ ವುಡ್15 mins ago

Ambareesh Birthday: ಅಂಬಿ ನೆನೆದು ಸುಮಲತಾ ಭಾವನಾತ್ಮಕ ಪೋಸ್ಟ್‌ !

Vastu Tips
ಧಾರ್ಮಿಕ25 mins ago

Vastu Tips: ವಾಸ್ತು ಶಾಸ್ತ್ರದ ಪ್ರಕಾರ ಪ್ರೀತಿ ಪಾತ್ರರಿಗೆ ನೀಡುವ ಉಡುಗೊರೆಗಳು ಹೀಗಿರಬೇಕು

Mani Shankar Aiyar
ದೇಶ35 mins ago

Mani Shankar Aiyar: ಮಣಿಶಂಕರ್‌ ಅಯ್ಯರ್ ಮತ್ತೊಂದು ವಿವಾದ;‌ ಪಾಕ್‌ ಬಳಿಕ ಚೀನಾ ಪರ ಬ್ಯಾಟಿಂಗ್‌!

Uttarakaanda Movie Shivarajkumar Visits Savadatti Yallamma Temple After Uttarakaanda Movie
ಸ್ಯಾಂಡಲ್ ವುಡ್47 mins ago

Uttarakaanda Movie:  ಸವದತ್ತಿ ಯಲ್ಲಮ್ಮನ ದರ್ಶನ ಪಡೆದ ಶಿವರಾಜ್​ ಕುಮಾರ್​

school reopen
ಪ್ರಮುಖ ಸುದ್ದಿ57 mins ago

School Reopen: ಬನ್ನಿ ಮಕ್ಕಳೇ ಶಾಲೆಗೆ! ರಜೆ ಮುಗೀತು, ಇಂದಿನಿಂದ ಕ್ಲಾಸ್‌ ಶುರು

Nawaz Sharif
ವಿದೇಶ1 hour ago

Nawaz Sharif: “ಕಾರ್ಗಿಲ್‌ ಯುದ್ಧ ನಮ್ಮಿಂದಲೇ ಆಗಿರುವ ಅತಿದೊಡ್ಡ ಪ್ರಮಾದ”- 23 ವರ್ಷಗಳ ಬಳಿಕ ತಪ್ಪೊಪ್ಪಿಕೊಂಡ ಪಾಕ್‌

prajwal revanna case mattress
ಪ್ರಮುಖ ಸುದ್ದಿ1 hour ago

Prajwal Revanna Case: ಪ್ರಜ್ವಲ್‌ ಮನೆಯಿಂದ ಹಾಸಿಗೆ, ಹೊದಿಕೆ ಕೊಂಡೊಯ್ದ ಎಸ್‌ಐಟಿ; ಏನ್‌ ಸಿಗ್ತು?

AC Side Effects
ಆರೋಗ್ಯ2 hours ago

AC Side Effects: ಅತಿಯಾದ ಎಸಿ ಬಳಕೆಯಿಂದ ಏನಾಗುತ್ತದೆ ಎಂಬ ಅರಿವಿರಲಿ

karnataka weather forecast
ಮಳೆ3 hours ago

Karnataka weather : ಗುಡುಗು ಸಹಿತ ಮಳೆಯೊಂದಿಗೆ 40 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ14 hours ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು22 hours ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ2 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ3 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು3 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ6 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

ಟ್ರೆಂಡಿಂಗ್‌