Sharada Devi Jayanti | ವೈಯಕ್ತಿಕ ಮುಕ್ತಿ ಮತ್ತು ಜಗತ್ತಿನ ಹಿತವನ್ನು ಸಾರಿದ ಮಹಾಮಾತೆ ಶ್ರೀ ಶಾರದಾದೇವಿ - Vistara News

ಧಾರ್ಮಿಕ

Sharada Devi Jayanti | ವೈಯಕ್ತಿಕ ಮುಕ್ತಿ ಮತ್ತು ಜಗತ್ತಿನ ಹಿತವನ್ನು ಸಾರಿದ ಮಹಾಮಾತೆ ಶ್ರೀ ಶಾರದಾದೇವಿ

ರಾಷ್ಟ್ರಕವಿ ಕುವೆಂಪು ಅವರು ಶ್ರೀ ಶಾರದಾದೇವಿಯವರನ್ನು ಕಲಿಯುಗದ ಸೀತೆ ಎಂದು ʼಶ್ರೀ ಶಾರದಾದೇವಿ ಹೇ ಮಹಾಮಾತೆʼ ಎಂಬ ಹಾಡಿನಲ್ಲಿ ಬಣ್ಣಿಸಿದ್ದಾರೆ. ಇಂದು ಮಹಾಮಾತೆಯ 170ನೇ ಜಯಂತಿ (Sharada Devi Jayanti). ಅವರ ಕುರಿತ ವಿಶೇಷ ಲೇಖನ ಇಲ್ಲಿದೆ.

VISTARANEWS.COM


on

Sharada Devi Jayanti
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸ್ವಾಮಿ ಶಾಂತಿವ್ರತಾನಂದ
ಮಹಾಮಾತೆ, ಜಗಜ್ಜನನಿ, ಆದ್ರಾಶಕ್ತಿ ಶ್ರೀ ಶಾರದಾದೇವಿ ಅವರ170ನೇ ಜಯಂತಿ (Sharada Devi Jayanti) ಇಂದು. ಭಾರತ ಹಾಗೂ ವಿಶ್ವದೆಲ್ಲೆಡೆ ಸಂಭ್ರಮ, ಸಡಗರಗಳೊಡನೆ ಭಕ್ತರು ಈ ಶುಭದಿನವನ್ನು ಆಚರಿಸುತ್ತಿದ್ದಾರೆ.

ಮಹಾಮಾತೆ ಶ್ರೀ ಶಾರದಾದೇವಿ ಎಂಬ ಹೆಸರು ಕಿವಿಗೆ ಬಿದ್ದಾಗ, “ಅವರು ಹೇಗೆ ಮಹಾನ್‌ ತಾಯಿ? ಎಷ್ಟು ಮಕ್ಕಳಿಗೆ ಅವರು ಜನ್ಮ ನೀಡಿದ್ದರು? ಎಷ್ಟು ಮಕ್ಕಳನ್ನು ಸಲುಹಿದ್ದರು?ʼʼ ಎಂಬೆಲ್ಲಾ ಪ್ರಶ್ನೆಗಳು ನಮ್ಮ ಮನಸ್ಸಿನಗೆ ಬರಬಹುದು.

ವಾಸ್ತವದಲ್ಲಿ ಅವರು ಭೌತಿಕವಾಗಿ ಯಾರಿಗೂ ಜನ್ಮ ನೀಡಲಿಲ್ಲ. ಆದರೆ ವಿಶ್ವದ ಪ್ರತಿಯೊಬ್ಬ ಜೀವಿಗೂ ಯಾವುದೇ ಜಾತಿ, ಮತ, ಪಂಥ, ದೇಶಗಳ ಭೇದ-ಭಾವವಿಲ್ಲದೆ, ಮೇಲು-ಕೀಳು, ಸಿರಿವಂತ-ಬಡವ, ಸಾಧು, ದುರ್ಜನ ಹೀಗೆ ಯಾವುದೇ ಭೇದವೆಣಿಸದೆ ತಮ್ಮ ಪ್ರೇಮವನ್ನು ಉಣ ಬಡಿಸಿದರು. ಅವರ ವಾತ್ಸಲ್ಯದಲ್ಲಿ ಮಿಂದ ಅಸಂಖ್ಯ ಭಕ್ತರು ಪುನೀತರಾದರು, ಅಮೃತತ್ತ್ವವನ್ನು ಅನುಭವಿಸಿದರು.

ಶ್ರೀ ಮಾತೆಯವರೇ ಹೇಳುವಂತೆ ಭಗವಾನ್‌ ಶ್ರೀ ರಾಮಕೃಷ್ಣ ಪರಮಾತ್ಮನು ಮಾತೃಶಕ್ತಿಯನ್ನು ಪ್ರಕಟಿಸಲು ಜಗತ್ತಿಗೆ ಶ್ರೀ ಮಾತೆ ಶಾರದಾದೇವಿಯನ್ನು ಬಿಟ್ಟು ಹೋಗಿದ್ದರು. ಶ್ರೀ ಮಾತೆಯವರ ಪ್ರೇಮದಲ್ಲಿ ಯಾವುದೇ ಮೋಹವಿರಲಿಲ್ಲ. ಅದು ಶುದ್ಧ ನಿಸ್ವಾರ್ಥ ಪ್ರೇಮ. ಅದ್ವೈತದ ತಳಹದಿಯಿಂದ ಅವರ ಪ್ರೇಮ ಹೊರಹೊಮ್ಮಿತ್ತು.

ಯಕ್ಷನು ಧರ್ಮರಾಯನಿಗೆ ಭೂಮಿಗೆ ಸರಿಸಮನಾದ ವಸ್ತು ಯಾವುದು? ಎಂದು ಪ್ರಶ್ನಿಸಿದ್ದ. ಅದಕ್ಕೆ ಧರ್ಮರಾಯನು “ತಾಯಿʼʼ ಎಂದು ಉತ್ತರಿಸಿದ್ದನಂತೆ. ಭೂಮಿಯ ಮೇಲೆ ಎಲ್ಲರಿಗೂ ಎಲ್ಲವುದಕ್ಕೂ ಸಮನಾದ ಆಶ್ರಯವಿದೆ. ಎಲ್ಲರೂ ಭೂಮಿ ತಾಯಿಯನ್ನು ತುಳಿಯುತ್ತಾರೆ. ಅಗೆಯುತ್ತಾರೆ, ಒಂದು ರೀತಿಯಲ್ಲಿ ಹಿಂಸೆಯನ್ನು ನೀಡುತ್ತಾರೆ. ಆದರೂ ಭೂಮಿ ತಾಯಿ ಎಲ್ಲರನ್ನೂ ಕಾಪಾಡುತ್ತಾಳೆ, ಪೋಷಿಸುತ್ತಾಳೆ. ಎಲ್ಲರಿಗೂ ಆಧಾರವಾಗಿದ್ದಾಳೆ. ಅದರಂತೆ ತಾಯಿಯೂ ಕೂಡ.

ಮಾತೃ ಪ್ರೇಮ ತೋರಿದ ಮಹಾದೇವಿ

ಶ್ರೀ ಮಾತೆಯವರು ತಮ್ಮ ಮಾತೃ ಪ್ರೇಮವನ್ನು ಹೇಗೆ ಜಗತ್ತಿಗೆ ಉಣಬಡಿಸಿದರು ಎಂದು ತಿಳಿಯೋಣ; ಶ್ರೀ ಮಾತೆಯವರ ಜನ್ಮ ಸ್ಥಾನ ಜಯರಾಮಬಾಟಿ. ಅದು ಪಶ್ಚಿಮ ಬಂಗಾಳದ ಒಂದು ಹಳ್ಳಿ. ಅವರ ಗುಡಿಸಿಲಿನಲ್ಲಿ  ಮೈನಾ ಪಕ್ಷಿಯನ್ನು ಸಾಕಿದ್ದರು. ಅದು ಆಹಾರ ಬೇಕಾದಾಗ “ಅಮ್ಮಾ…. ಅಮ್ಮಾ…ʼʼ ಎಂದು ಕರೆಯುತ್ತಿತ್ತು. ಆಗ ಶ್ರೀಮಾತೆಯವರೇ ಓಡಿ ಬಂದು ಆಹಾರ ನೀಡುತ್ತಿದ್ದರು.

ಜಯರಾಮಬಾಟಿಯಲ್ಲಿ ಅಂದಿನ ಸಮಯದಲ್ಲಿ ಹಾಲು ಸುಲಭವಾಗಿ ಸಿಗುತ್ತಿರಲಿಲ್ಲ. ಆದರೂ ಬೆಕ್ಕಿಗೆಂದು ಹಾಲು ಅನ್ನವನ್ನು ಶ್ರೀ ಮಾತೆಯವರು ವ್ಯವಸ್ಥೆ ಮಾಡಿ, ನೀಡುತ್ತಿದ್ದರು. ಬೆಕ್ಕು ಅದರ ಸ್ವಭಾವವನ್ನು ಬಿಡದೆ ಕದ್ದು ಹಾಲನ್ನು ಕುಡಿಯಲು ಪ್ರಯತ್ನಿಸುತ್ತಿತ್ತು. ಅನೇಕ ಬಾರಿ ಭಕ್ತರಿಗೆ ಟೀಗೆಂದು ಮೀಸಲಿಟ್ಟಿದ್ದ ಹಾಲನ್ನು ಬೆಕ್ಕು ಕದ್ದು ಕುಡಿದು ಮುಗಿಸಿಬಿಡುತ್ತಿತ್ತು. ಇದರಿಂದ ಶ್ರೀ ಮಾತೆಯವರು ಹಾಲಿಗಾಗಿ ಕಷ್ಟಪಡಬೇಕಾಗುತ್ತಿತ್ತು. ಆದರೂ ಅವರು ಕೋಪ ಮಾಡಿಕೊಳ್ಳುತ್ತಿರಲಿಲ್ಲ. ಭಕ್ತರು ಇದನ್ನು ಕಂಡು ಕೋಪ ಮಾಡಿಕೊಂಡು ಬೆಕ್ಕನ್ನು ಹೊಡೆಯಲು ಹೋದಾಗ ಶ್ರೀಮಾತೆಯವರು ಬೆಕ್ಕಿಗೆ ಆಶ್ರಯವನ್ನು ನೀಡಿ, ಶಿಕ್ಷೆಯನ್ನು ತಪ್ಪಿಸುತ್ತಿದ್ದರು!

ಜಗಜ್ಜನನಿಯೇ ಬೆಕ್ಕಿಗೆ ಆಶ್ರಯ ನೀಡಿ, ಏಟನ್ನು ತಪ್ಪಿಸುತ್ತಿದ್ದಾಳೆ. ಎಂತಹ ಅದೃಷ್ಟ ಆ ಬೆಕ್ಕಿನದು. ಎಷ್ಟಾದರೂ ಅವಳು ಅಭಯಮಾತೆ ಅಲ್ಲವೇ?!

ಅದೊಂದು ರಾತ್ರಿ ಜೋರು ಮಳೆ, ಜತೆಗೆ ಅಮಾವಾಸ್ಯೆಯ ಕತ್ತಲು ಬೇರೆ. ರಾತ್ರಿ ಶ್ರೀಮಾತೆಯವರ ಗುಡಿಸಿಲಿನ ಬಾಗಿಲನ್ನು ಯಾರೋ ತಟ್ಟಿದರು. ಯಾರೆಂದು ಬಾಗಿಲು ತೆರೆದು ನೋಡಿದರೆ ನಾಲ್ಕು ಮಂದಿ ಭಕ್ತರು. ಕೊಲ್ಕತ್ತಾದಿಂದ ಶ್ರೀ ಮಾತೆಯವರನ್ನು ನೋಡಲು ಬಂದಿದ್ದಾರೆ. ಅವರಿಗೆ ಆ ರಾತ್ರಿ ತಮ್ಮ ಗುಡಿಸಿಲಿನಲ್ಲಿಯೇ ಉಳಿಯಲು ಮತ್ತು ಊಟದ ವ್ಯವಸ್ಥೆಯನ್ನು ಶ್ರೀಮಾತೆಯವರೇ ಮಾಡಿದರು.

ಬೆಳಗ್ಗೆ ಶ್ರೀ ಮಾತೆಯವರು ಭಕ್ತರನ್ನು ನೀವು ಆ ಜೋರು ಮಳೆಯಲ್ಲಿ,ಕತ್ತಲಿನಲ್ಲಿ ಏಕೆ ಬಂದಿರಿ ಎಂದು ಕೇಳಿದರು. ಆಗ ಅವರು, “ಹೌದು ಮಾತೆ ನಾವು ಕತ್ತಲಲ್ಲೇ ಬಂದೆವು, ನಾವು ಬೇರೆಡೆ ಉಳಿದು, ಬೆಳಗ್ಗೆ ನಿಮ್ಮಲ್ಲಿಗೆ ಬರಬಹುದಿತ್ತು. ಆದರೆ ರಾತ್ರಿ ಬಂದರೆ ನಿಮ್ಮನ್ನು ನಾವು ನೋಡಬಹುದು. ಒಂದು ಜಾವ ಹೆಚ್ಚು ಸಮಯ ನಿಮ್ಮ  ಜೊತೆ ಕಳೆಯಬಹುದು. ಅದಕ್ಕಾಗಿಯೇ ರಾತ್ರಿ ಬಂದೆವುʼʼ ಎಂದು ಉತ್ತರಿಸಿದರು.

ಈ ಉತ್ತರವನ್ನು ಕೇಳಿ ಬೇರೆಯವರಾದರೆ, ಅಹಂಕಾರಕ್ಕೆ ಒಳಗಾಗುತ್ತಿದ್ದರೇನೋ. ನಾನು ಅಷ್ಟು ಪ್ರಸಿದ್ಧಿಯಾ ಗಿದ್ದೇನೆಯೇ? ನನ್ನನ್ನು ನೋಡಲು ಭಕ್ತರು ಹೀಗೆಲ್ಲಾ ಮಾಡುತ್ತಾರೆಂದರೆ ನಾನು ದೊಡ್ಡ ಮನುಷ್ಯಳಾಗಿದ್ದೇನೆ ಇತ್ಯಾದಿ ಯೋಚನೆ ಮಾಡುತ್ತಿದ್ದರೇನೋ. ಆದರೆ ಶ್ರೀ ಮಾತೆಯವರು ಆ ಭಕ್ತರಿಗೆ “ನೋಡಪ್ಪ ನನ್ನ ಕಾಲಿಗೆ ಒಂದು ಸಣ್ಣ ಮುಳ್ಳು ಚುಚ್ಚಿದೆ. ನನ್ನ ಎದೆಗೆ ಈಟಿಯಿಂದ ಇರಿದಂತಾಗುತ್ತಿದೆ. ರಾತ್ರಿ ನಿಮಗೆ ದಾರಿಯಲ್ಲಿ ಸಿಕ್ಕ ಆಮೋದರ ಹಳ್ಳ ತುಂಬಿ ಹರಿಯುತ್ತಿತ್ತು. ಹಾವುಗಳ ಕಾಟ ಬೇರೆ. ಇಂತಹ ಸಂದರ್ಭದಲ್ಲಿ ನೀವು ನಿಮ್ಮನ್ನು ಕಾಪಾಡಿಕೊಳ್ಳಬೇಕಾಗಿತ್ತುʼʼ ಎಂದು ಬುದ್ಧಿಮಾತು ಹೇಳಿದರು. ಎಂತಹ ನಿಷ್ಕಲ್ಮಶ ಹೃದಯ, ನಿಸ್ವಾರ್ಥ ಪ್ರೇಮ, ಶ್ರೀಮಾತೆಯವರದ್ದು!

ಶ್ರೀ ಮಾತೆಯವರು ಯುವಕನೊಬ್ಬನಿಗೆ ಮಂತ್ರ ದೀಕ್ಷೆಯನ್ನು ಅನುಗ್ರಹಿಸಿದ್ದರೂ ದುರಾದೃಷ್ಟವಶಾತ್‌ ಅವನು ಅನೈತಿಕ ಮಾರ್ಗವನ್ನು ಹಿಡಿದಿದ್ದನ್ನು. ಇದು ಭಕ್ತರಿಗೆ ತಿಳಿದು, ಅವನನ್ನು ಇವರಿದ್ದಲ್ಲಿಗೆ ಬಾರದಂತೆ ತಡೆಯಲು ಪ್ರಯತ್ನಿಸುತ್ತಿದ್ದರು. ಆದರೆ ಶ್ರೀಮಾತೆಯವರು ಇದನ್ನು ತಿಳಿದಿದ್ದರೂ, ಆತನ ಮೇಲಿನ ಅವರ ಪ್ರೀತಿಯಲ್ಲಿ ಯಾವುದೇ ವ್ಯತ್ಯಾಸವಾಗಲಿಲ್ಲ. ಬದಲಾಗಿ ಬಂದಾಗ, ಸಿಕ್ಕಾಗ ಈ ಹಿಂದಿನಂತೆಯೇ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಅವರ ಈ ಅಚಲ ಪ್ರೀತಿಯಿಂದ ಆ ಯುವಕನ ಮನಸ್ಸು ಪರಿವರ್ತನೆಯಾಗಿ ಒಳ್ಳೆಯ ದಾರಿಯನ್ನು ಹಿಡಿದನು. ಅದು ಪ್ರೀತಿಯ ಶಕ್ತಿ.

ಜಾತಿಯತೆಯ ತೊಡೆದರು

1911ರಲ್ಲಿ ಶ್ರೀ ಮಾತೆಯವರು ಬೆಂಗಳೂರಿಗೆ ಬಂದಿದ್ದರು. ಬಸವನಗುಡಿಯ ರಾಮಕೃಷ್ಣ ಮಠದಲ್ಲೇ ಅವರು ತಂಗಿದ್ದರು. ಅವರು ಉಳಿದುಕೊಂಡ ಕಟ್ಟಡದ ಗೇಟಿನ ಮುಂಭಾಗದಲ್ಲಿ ಒಬ್ಬ ಹುಡುಗನು ಬಹಳ ಕಾಲ ನಿಂತಿದ್ದ. ಇದು ಶ್ರೀಮಾತೆಯವರ ಗಮನಕ್ಕೆ ಬಂದು, ಅವನ ಕುರಿತು ವಿಚಾರಿಸಿದರು.

ಸ್ಥಳೀಯರು ಅವನು ನೀಚ ಕುಲಕ್ಕೆ ಸೇರಿದವನು. ಆದ್ದರಿಂದ ಒಳಗೆ ಬರುತ್ತಿಲ್ಲ ಎಂದರು. ಶ್ರೀಮಾತೆಯವರು ಭಕ್ತರನ್ನು ಯಾವುದೇ ಜಾತಿ, ಕುಲಗಳ ಭೇದವಿಲ್ಲದೆ ನೋಡುತ್ತಿದ್ದರು. “ಅವನು ಒಳಗೆ ಬರಬಹುದುʼʼ ಎಂದರು. ಆದರೆ ಕೆಲವು ಭಕ್ತರು ಅವನನ್ನು ಒಳಗೆ ಬಿಟ್ಟುಕೊಳ್ಳಲು ಒಪ್ಪಲಿಲ್ಲ. ಇದು ಶ್ರೀಮಾತೆಯವರ ಗಮನಕ್ಕೆ ಬಂದಿತು. ಅವರು ಕಾರಣ ಕೇಳಿದರು. ಅವನು ಶುಭ್ರವಾದ ಬಟ್ಟೆಯನ್ನು ಧರಿಸಿಲ್ಲ. ಅಲ್ಲದೆ, ಅವನು ಎಂದು ಸ್ನಾನ ಮಾಡಿದ್ದಾನೋ ತಿಳಿಯದು ಎಂದರು. ಶ್ರೀಮಾತೆಯವರು ಆಗಲಿ ನಾಳೆ ಅವನು ಸ್ನಾನಮಾಡಿ, ಶುಭ್ರವಾದ ಬಟ್ಟೆಯನ್ನು ಧರಿಸಿಕೊಂಡು ಬರಲಿ, ಆಗಬಹುದೇ ಎಂದಾಗ ಭಕ್ತರು ಸಮ್ಮತಿಸಿದರು. ಶ್ರೀ ಮಾತೆಯವರು ಈ ಮೂಲಕ ಜಾತಿ ಪದ್ಧತಿಯನ್ನು ತೊಡೆದು ಹಾಕಲು ಮುಂದಾಗಿದ್ದರು. ಈ ವಿಷಯವನ್ನು ಆ ಹುಡುಗನಿಗೆ ತಿಳಿಸಲಾಯಿತು. ಅವನು ಸಂತೋಷದಿಂದ ಕುಣಿದಾಡಿದ. ಸ್ಥಳದಲ್ಲೇ ಪ್ರಣಾಮ ಮಾಡಿ ಮನೆಗೆ ಹೊರಟ.

ಮಾರನೇ ದಿನ ಭಕ್ತರು ಹೇಳಿದ ಹಾಗೆ ಆ ಹುಡುಗ ಸ್ನಾನ ಮಾಡಿ, ಶುಭ್ರವಾದ ಬಟ್ಟೆಯನ್ನು ಧರಿಸಿ ಬಂದಿದ್ದ. ನೇರವಾಗಿ ಅವರಿದ್ದಲ್ಲಿಗೆ ಬಂದು ಶ್ರೀಮಾತೆಯವರಿಗೆ ಪ್ರಣಾಮ ಮಾಡಿದ. ಶ್ರೀ ಮಾತೆಯವರು ಅವನನ್ನು ಪ್ರೀತಿಯಿಂದ ಮಾತನಾಡಿಸಿ, ವೈಯುಕ್ತಿಕ ಸೇವೆಯನ್ನು ಸ್ವೀಕರಿಸಿದರು.

ಅದೇ ಸಮಯದಲ್ಲಿ ಶ್ರೀಮಂತ ವರ್ಗಕ್ಕೆ ಸೇರಿದ ಭಕ್ತರೊಬ್ಬರು ಬಂದು ಶ್ರೀಮಾತೆಯವರನ್ನು ಮಾರನೇ ದಿನದ ಮಧ್ಯಾಹ್ನದ ಊಟಕ್ಕೆ ಆಮಂತ್ರಿಸಿದರು. ಶ್ರೀಮಾತೆಯವರು ಹುಡುಗನ ಕಡೆ ಕೈ ತೋರಿಸಿ, ಅವನ ಜೊತೆ ನಾನು ಬರುವೆ ಎಂದರು. ಎಲ್ಲರಿಗೂ ಆಶ್ಚರ್ಯ. ಮಾರನೇ ದಿವನ ಶ್ರೀಮಾತೆಯವರು ಆ ಹುಡುಗನ ಹಾಗೂ ಕೆಲವು ಭಕ್ತರೊಡನೆ ಅವರ ಮನೆಗೆ ಊಟಕ್ಕೆ ತೆರಳಿದರು. ಅವರಿಗೆ ಊಟವನ್ನು ಬಡಿಸಲಾಯಿತು. ಒಂದು ತುತ್ತನ್ನು ಸ್ವೀಕರಿಸಿ, ಪ್ರಸಾದವನ್ನು ಭಕ್ತರಿಗೆಲ್ಲರಿಗೂ ಹಂಚಬೇಕೆಂದು ಆ ಹುಡುಗನಿಗೇ ನೀಡಿದರು. ಎಲ್ಲ ಭಕ್ತರೂ ಪ್ರಸಾದವನ್ನು ಬಾಲಕನ ಕೈಯಿಂದ ಸ್ವೀಕರಿಸಬೇಕಾಯಿತು.

ಹೀಗೆ ಅನೇಕ ಸಮಾಜ ಸುಧಾರಣೆಯನ್ನೂ ಶ್ರೀಮಾತೆಯವರು ಸದ್ದಿಲ್ಲದೆ ಮಾಡಿದ್ದರು. ನೀಚ ಕುಲದ ಹುಡುಗನಿಗೆ ಪ್ರೀತಿ ತೋರಿ, ಅವನಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿದ್ದರು. ಎಷ್ಟಾದರೂ ಅವರು ಮಾಹಾಮಾತೆ ಅಲ್ಲವೇ?

ಲೇಖಕರು ಅಧ್ಯಕ್ಷರು, ರಾಮಕೃಷ್ಣ ವೇದಾಂತ ಕೇಂದ್ರ, ಐರ್ಲೆಂಡ್‌.

ಇದನ್ನೂ ಓದಿ | Prerane | ಮೇಲ್ಬೇರು, ಕೆಳಕೊಂಬೆ-ಈ ವೃಕ್ಷವಾದರೂ ಯಾವುದು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಧಾರ್ಮಿಕ

Vastu Tips: ಮನೆ, ಅಂಗಡಿಯಲ್ಲಿ ಧನಾತ್ಮಕ ಶಕ್ತಿ ಆಹ್ವಾನಿಸಿ; ಸುಖ, ಶಾಂತಿ, ಸಮೃದ್ಧಿ ವೃದ್ಧಿಸಿ

ಮನೆ ಮತ್ತು ಅಂಗಡಿಯಲ್ಲಿ ವಾಸ್ತು ನಿಯಮಗಳನ್ನು (Vastu Tips) ಅನುಸರಿಸುವ ಮೂಲಕ ಧನಾತ್ಮಕ ಶಕ್ತಿಯನ್ನು ವೃದ್ಧಿಸಿಕೊಳ್ಳಬಹುದು. ಹೊಸ ಮನೆ ಅಥವಾ ಅಂಗಡಿಯನ್ನು ಖರೀದಿಸಲು ಹೋದಾಗ ವಿಶೇಷವಾಗಿ ವಾಸ್ತು ನಿಯಮಗಳನ್ನು ಅನುಸರಿಸಬೇಕು. ಆ ನಿಯಮಗಳು ಯಾವುದು ಎನ್ನುವ ಮಾಹಿತಿ ಇಲ್ಲಿದೆ.

VISTARANEWS.COM


on

By

Vastu Tips
Koo

ಮನೆ (home) ಮತ್ತು ಅಂಗಡಿಯಲ್ಲಿ (store) ಧನಾತ್ಮಕ ಶಕ್ತಿ (Positive energy) ನೆಲೆಯಾಗಿದ್ದರೆ ಮಾತ್ರ ಸುಖ, ಶಾಂತಿ, ನೆಮ್ಮದಿ, ಸಮೃದ್ಧಿ ಕಾಣಲು ಸಾಧ್ಯ. ಇದಕ್ಕಾಗಿ ವಾಸ್ತು ನಿಯಮಗಳನ್ನು ಪಾಲಿಸುವುದು ಮುಖ್ಯ. ಮನೆ ಮತ್ತು ಅಂಗಡಿಯಲ್ಲಿ ವಾಸ್ತು ನಿಯಮಗಳನ್ನು (Vastu Tips) ಅನುಸರಿಸುವ ಮೂಲಕ ಧನಾತ್ಮಕ ಶಕ್ತಿಯನ್ನು ವೃದ್ಧಿಸಿಕೊಳ್ಳಬಹುದು. ಸಂತೋಷ ಮತ್ತು ಸಮೃದ್ಧಿಯ ಜೊತೆಗೆ ಲಕ್ಷ್ಮಿ ದೇವಿಯ ಆಶೀರ್ವಾದವನ್ನೂ ಪಡೆಯಬಹುದು.

ಹೊಸ ಮನೆ ಅಥವಾ ಅಂಗಡಿಯನ್ನು ಖರೀದಿಸಲು ಹೋದಾಗ ವಿಶೇಷವಾಗಿ ವಾಸ್ತು ನಿಯಮಗಳನ್ನು ಅನುಸರಿಸಬೇಕು. ಆ ನಿಯಮಗಳು ಯಾವುದು ಎಂಬುದು ತಿಳಿದುಕೊಳ್ಳೋಣ.

ದಿಕ್ಕುಗಳ ಬಗ್ಗೆ ತಿಳಿದಿರಲಿ

ವಾಸ್ತು ಶಾಸ್ತ್ರದಲ್ಲಿ ಕೆಲವು ನಿಯಮಗಳಿಗೆ ವಿಶೇಷ ಗಮನ ನೀಡಲಾಗಿದೆ. ಮನೆ ಅಥವಾ ಅಂಗಡಿಯ ಮುಖ್ಯ ದ್ವಾರವು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿರಬೇಕು. ಮನೆಯಲ್ಲಿ ಪೂಜಾ ಸ್ಥಳವು ಈಶಾನ್ಯ ಮೂಲೆಯಲ್ಲಿದ್ದರೆ ಮಲಗುವ ಕೋಣೆ ನೈಋತ್ಯ ದಿಕ್ಕಿನಲ್ಲಿರಬೇಕು. ಅದೇ ಸಮಯದಲ್ಲಿ, ಅಡುಗೆಮನೆಯು ಅಗ್ನಿ ಮೂಲೆಯಲ್ಲಿ ಅಂದರೆ ಆಗ್ನೇಯ ದಿಕ್ಕಿನಲ್ಲಿರಬೇಕು.

ಆಕಾರ ಗಮನಿಸಿ

ಮನೆ ಅಥವಾ ಅಂಗಡಿಯ ಆಕಾರವು ಚೌಕ ಅಥವಾ ಆಯತಾಕಾರವಾಗಿರಬೇಕು. ಅನಿಯಮಿತ ಆಕಾರಗಳನ್ನು ಹೊಂದಿರುವ ಕಟ್ಟಡಗಳನ್ನು ವಾಸ್ತು ಪ್ರಕಾರ ಅಶುಭವೆಂದು ಪರಿಗಣಿಸಲಾಗುತ್ತದೆ.


ಗಾಳಿ, ಬೆಳಕು

ಮನೆ ಅಥವಾ ಅಂಗಡಿಯಲ್ಲಿ ಸಾಕಷ್ಟು ಕಿಟಕಿಗಳು ಇರಬೇಕು. ಇದರಿಂದ ನೈಸರ್ಗಿಕ ಬೆಳಕು ಮತ್ತು ಗಾಳಿ ಪ್ರವೇಶಿಸಬೇಕು. ಇದಕ್ಕಾಗಿ ಕಿಟಕಿಗಳು ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನಲ್ಲಿರಬೇಕು.

ಮುಖ್ಯ ಬಾಗಿಲು

ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಖ್ಯ ಬಾಗಿಲು ದೊಡ್ಡದಾಗಿರಬೇಕು ಮತ್ತು ಭವ್ಯವಾಗಿರಬೇಕು. ಮುಖ್ಯ ಬಾಗಿಲಿನ ಮುಂದೆ ಯಾವುದೇ ಅಡೆತಡೆಗಳು ಇರಬಾರದು. ಮನೆ ಅಥವಾ ಅಂಗಡಿಯ ಚಾವಣಿ ಸಮತಟ್ಟಾಗಿರಬೇಕು.

ಚಾವಣಿಯ ಮೇಲಿನ ಇಳಿಜಾರು

ಮನೆ, ಅಂಗಡಿಯ ಚಾವಣಿಯ ಮೇಲಿನ ಇಳಿಜಾರು ನೈಋತ್ಯ, ಈಶಾನ್ಯ ದಿಕ್ಕಿನಲ್ಲಿರಬೇಕು.

ಬಣ್ಣಗಳು

ವಾಸ್ತು ಪ್ರಕಾರ ಮನೆ ಅಥವಾ ಅಂಗಡಿಗೆ ತಿಳಿ ಮತ್ತು ಬಿಳಿ ಬಣ್ಣಗಳನ್ನು ಬಳಸಬೇಕು. ಈ ಬಣ್ಣಗಳು ಧನಾತ್ಮಕತೆಯನ್ನು ತರುತ್ತವೆ. ಇದು ವ್ಯವಹಾರದಲ್ಲಿ ಪ್ರಗತಿಯನ್ನು ಒದಗಿಸುವಲ್ಲಿ ಸಹಾಯಕವೆಂದು ಪರಿಗಣಿಸಲಾಗಿದೆ. ಕಡಿಮೆ ಪ್ರಮಾಣದಲ್ಲಿ ಗಾಢ ಬಣ್ಣಗಳನ್ನು ಬಳಸಿ.

ನೀರಿನ ಸಂಗ್ರಹ

ಮನೆ ಅಥವಾ ಅಂಗಡಿಯಲ್ಲಿ ನೀರಿನ ಸಂಗ್ರಹವು ಈಶಾನ್ಯ ದಿಕ್ಕಿನಲ್ಲಿರಬೇಕು. ಮನೆ ಅಥವಾ ಅಂಗಡಿಯಲ್ಲಿ ಸರಿಯಾದ ಒಳಚರಂಡಿ ವ್ಯವಸ್ಥೆ ಇರಬೇಕು.

ಗಿಡಗಳು

ಮನೆ ಅಥವಾ ಅಂಗಡಿಯ ಸುತ್ತ ತುಳಸಿ, ಮನಿ ಪ್ಲಾಂಟ್, ಅಲೋವೆರಾ ಮುಂತಾದ ಮಂಗಳಕರ ಗಿಡಗಳನ್ನು ನೆಡಿ. ಮನೆ ಅಥವಾ ಅಂಗಡಿ ಸುತ್ತಮುತ್ತ ಮುಳ್ಳಿನ ಗಿಡಗಳನ್ನು ನೆಡಬಾರದು.

ಇದನ್ನೂ ಓದಿ: Vastu Tips: ಮನೆಯ ದ್ವಾರದಲ್ಲಿ ಗಣೇಶನ ವಿಗ್ರಹ ಇಡುವುದು ಸರಿಯೇ?


ಸಮೃದ್ಧಿ ತರುವ ವಸ್ತುಗಳು

ವ್ಯಾಪಾರದಲ್ಲಿ ಯಶಸ್ವಿಯಾಗಲು ಅಂಗಡಿಯಲ್ಲಿ ಶ್ರೀಯಂತ್ರ, ವ್ಯಾಪಾರ ವೃದ್ಧಿ ಯಂತ್ರ, ಸ್ಫಟಿಕ ಆಮೆ ಅಥವಾ ಸ್ಫಟಿಕ ಚೆಂಡನ್ನು ಇರಿಸಬಹುದು. ಇದು ಧನಾತ್ಮಕ ಶಕ್ತಿಯನ್ನು ತರುತ್ತದೆ. ಹೊಸ ಅಂಗಡಿಯನ್ನು ತೆಗೆದುಕೊಂಡಿದ್ದರೆ ಅದರಲ್ಲಿ ಪಾಂಚಜನ್ಯ ಶಂಖವನ್ನು ಸ್ಥಾಪಿಸಬಹುದು. ಶಂಖ್ ಅನ್ನು ಮಾತಾ ಲಕ್ಷ್ಮಿಯ ಸಹೋದರ ಎಂದು ಪರಿಗಣಿಸಲಾಗುತ್ತದೆ. ಯಾಕೆಂದರೆ ಇಬ್ಬರೂ ಸಮುದ್ರ ಮಂಥನದಿಂದ ಹುಟ್ಟಿಕೊಂಡಿದ್ದಾರೆ. ಶಂಖದ ಆರಾಧನೆಯಿಂದ ಲಕ್ಷ್ಮೀದೇವಿಯೂ ಪ್ರಸನ್ನಳಾಗುತ್ತಾಳೆ. ಇದು ವ್ಯವಹಾರದಲ್ಲಿ ಯಶಸ್ಸನ್ನು ತರುತ್ತದೆ.

ಅಲಂಕಾರ

ಮನೆ ಅಥವಾ ಅಂಗಡಿಯ ಪ್ರವೇಶದ್ವಾರಕ್ಕೆ ಹೆಚ್ಚು ಅಲಂಕಾರಿಕ ವಸ್ತುಗಳಿಂದ ಅಲಂಕರಿಸಬೇಡಿ. ವಾಸ್ತು ತಜ್ಞರ ಪ್ರಕಾರ ಇದನ್ನು ಮಾಡಬಾರದು. ಏಕೆಂದರೆ ದಾರಿಯಲ್ಲಿ ಬರುವ ಉತ್ತಮ ಅವಕಾಶಗಳನ್ನು ಇದು ತಡೆಯಬಹುದು. ಪ್ರವೇಶದ್ವಾರ ಯಾವಾಗಲೂ ಸ್ವಚ್ಛವಾಗಿರಬೇಕು.

Continue Reading

ಕರ್ನಾಟಕ

Koppala News: ಅಂಜನಾದ್ರಿ ದೇಗುಲ ಹುಂಡಿಯಲ್ಲಿ 32.95 ಲಕ್ಷ ರೂ; ವಿವಿಧ ದೇಶಗಳ ನೋಟುಗಳು

Koppala News: ಗಂಗಾವತಿ ತಾಲೂಕಿನ ಪ್ರಮುಖ ಧಾರ್ಮಿಕ ತಾಣವಾಗಿರುವ ಚಿಕ್ಕರಾಂಪುರದ ಅಂಜನಾದ್ರಿ ಬೆಟ್ಟದ ಆಂಜನೇಯ ದೇಗುಲದ ಹುಂಡಿ ಎಣಿಕೆ ಕಾರ್ಯವು ಮಂಗಳವಾರ ನಡೆಯಿತು. ಕಾಣಿಕೆ ಹುಂಡಿಯಲ್ಲಿ 32.95 ಲಕ್ಷ ರೂಪಾಯಿ ಮೊತ್ತದ ಕಾಣಿಕೆ ಸಂಗ್ರಹವಾಗಿದೆ. ನಾನಾ ದೇಶಗಳ ನೋಟುಗಳು ಮತ್ತು ನಾಣ್ಯಗಳು ಪತ್ತೆಯಾಗಿರುವುದು ವಿಶೇಷವಾಗಿದೆ.

VISTARANEWS.COM


on

Anjanadri Temple Hundi Count
Koo

ಗಂಗಾವತಿ: ತಾಲೂಕಿನ ಪ್ರಮುಖ ಧಾರ್ಮಿಕ ತಾಣವಾಗಿರುವ ಚಿಕ್ಕರಾಂಪುರದ ಅಂಜನಾದ್ರಿ (Anjanadri) ಬೆಟ್ಟದ ಆಂಜನೇಯ ದೇಗುಲದ ಹುಂಡಿ ಎಣಿಕೆ ಕಾರ್ಯವು ಮಂಗಳವಾರ (Koppala News) ನಡೆಯಿತು. ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗತ್ತಿ ಸೂಚನೆ ಮೇರೆಗೆ ತಹಸೀಲ್ದಾರ್ ನಾಗರಾಜ್ ನೇತೃತ್ವದಲ್ಲಿ ಹುಂಡಿ ಕಾಣಿಕೆ ಹಣದ ಎಣಿಕೆ ಕಾರ್ಯವು ನಡೆಯಿತು. ಕಾಣಿಕೆ ಹುಂಡಿಯಲ್ಲಿ 32.95 ಲಕ್ಷ ರೂಪಾಯಿ ಮೊತ್ತದ ಕಾಣಿಕೆ ಸಂಗ್ರಹವಾಗಿದೆ.

ಇದನ್ನೂ ಓದಿ: Eshwar Khandre: ಚಾರಣಪಥಗಳ ಆನ್‌ಲೈನ್ ಟಿಕೆಟ್‌ಗೆ ಶೀಘ್ರ ಚಾಲನೆ; ಸಚಿವ ಈಶ್ವರ ಖಂಡ್ರೆ

ವಿವಿಧ ದೇಶಗಳ ಮೂರು ನೋಟು ಮತ್ತು ಏಳು ನಾಣ್ಯಗಳು ಪತ್ತೆ

ಅಂಜನಾದ್ರಿ ಆಂಜನೇಯ ದೇಗುಲದ ಹುಂಡಿಯಲ್ಲಿ ಸಂಗ್ರವಾಗಿದ್ದ ಕಾಣಿಕೆ ಹಣದ ಎಣಿಕೆಯ ಸಂದರ್ಭದಲ್ಲಿ ಸೌದಿ ಅರೇಬಿಯಾ ಸೇರಿದಂತೆ ವಿವಿಧ ದೇಶಗಳ ಮೂರು ನೋಟು ಮತ್ತು ಏಳು ನಾಣ್ಯಗಳು ಪತ್ತೆಯಾಗಿವೆ.

ಈ ಪೈಕಿ ಸೌತ್ ಆಫ್ರಿಕಾದ ಒಂದು ನೂರು ರಾಂಡ್ ಮೊತ್ತದ ಒಂದು ನೋಟು, ಮತ್ತು ಯುನೈಟೆಡ್ ಸ್ಟೇಟ್ಸ್‌ ಆಫ್ ಅಮೆರಿಕಾದ ತಲಾ ಹತ್ತು ಡಾಲರ್ ಮೊತ್ತದ ಎರಡು ನೋಟು ಪತ್ತೆಯಾಗಿವೆ ಹಾಗೂ ಸೌದಿ ಅರೇಬಿಯಾ, ಥೈಲ್ಯಾಂಡ್, ಇಟಲಿ, ಓಮನ್, ಯುಕೆ ಮತ್ತು ನೇಪಾಳದ ನಾನಾ ಮುಖಬೆಲೆಯ ನಾಣ್ಯಗಳು ಪತ್ತೆಯಾಗಿವೆ.

ಇದನ್ನೂ ಓದಿ: Yuva Sambhrama 2024: ಬೆಂಗಳೂರಿನಲ್ಲಿ ಜು.12ರಿಂದ 3 ದಿನ ಯುವ ಸಂಭ್ರಮ

ಕಳೆದ ಮೇ 21ರಂದು ಹಣ ಎಣಿಕೆ ಮಾಡಿದ ಸಂದರ್ಭದಲ್ಲಿ 30.21 ಲಕ್ಷ ರೂ. ಮೊತ್ತದ ಹಣ ಸಂಗ್ರವಾಗಿತ್ತು.

Continue Reading

ದೇಶ

Hathras Stampede: ಹತ್ರಾಸ್‌ನಲ್ಲಿ ಕಾಲ್ತುಳಿತ ಹೇಗಾಯ್ತು? ಸತ್ಸಂಗ ನಡೆಸಿದ ಭೋಲೆ ಬಾಬಾ ಯಾರು? ಇಲ್ಲಿದೆ ಮಾಹಿತಿ

Hathras Stampede: ಭೋಲೆ ಬಾಬಾ ಅವರಿಗೆ ಭಾರತದಾದ್ಯಂತ ಅನುಯಾಯಿಗಳು ಇದ್ದಾರೆ. ಅದರಲ್ಲೂ, ಉತ್ತರ ಪ್ರದೇಶದ ಪಶ್ಚಿಮ ಭಾಗ, ಉತ್ತರಾಖಂಡ, ಹರಿಯಾಣ, ರಾಜಸ್ಥಾನ ಹಾಗೂ ದೆಹಲಿಯಲ್ಲಿ ಹೆಚ್ಚು ಅನುಯಾಯಿಗಳು ಇದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಖಾತೆ ಹೊಂದಿರದಿದ್ದರೂ ಇವರ ಧಾರ್ಮಿಕ ಕಾರ್ಯಕ್ರಮವನ್ನು ಭಕ್ತರು ತಪ್ಪಿಸಿಕೊಳ್ಳುವುದಿಲ್ಲ.

VISTARANEWS.COM


on

Hathras Stampede
Koo

ಲಖನೌ: ಉತ್ತರ ಪ್ರದೇಶದ ಹತ್ರಾಸ್‌ ಜಿಲ್ಲೆ ಮೊಘಲ್‌ಘರಾಹಿ ಎಂಬ ಗ್ರಾಮದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಕಾಲ್ತುಳಿತ (Hathras Stampede) ಸಂಭವಿಸಿದ್ದು, 100ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ನಾರಾಯಣ ಸಕಾರ್‌ ಹರಿ (Narayan Sakaar Hari) ಅಥವಾ ಸಕಾರ್‌ ವಿಶ್ವ ಹರಿ ಅಥವಾ ಭೋಲೆ ಬಾಬಾ (Bhole Baba) ಅವರು ಸತ್ಸಂಗ ನೆರವೇರಿಸಿದ ಬಳಿಕ ಉಂಟಾದ ಕಾಲ್ತುಳಿತವು ನೂರಾರು ಜನರ ಸಾವಿಗೆ ಕಾರಣವಾಗಿದೆ. ಇನ್ನು, ದುರಂತದ ಕುರಿತು ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವರು ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಸ್ಥರಿಗೆ ತಲಾ 2 ಲಕ್ಷ ರೂ. ಪರಿಹಾರವನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಘೋಷಣೆ ಮಾಡಿದ್ದಾರೆ. ಇನ್ನು ಕಾಲ್ತುಳಿತ ಹೇಗಾಯಿತು? ನೂರಾರು ಜನರ ಸಾವಿಗೆ ಕಾರಣವೇನು? ಪ್ರತ್ಯಕ್ಷದರ್ಶಿಗಳು ಹೇಳುವುದು ಏನು ಎಂಬುದರ ಮಾಹಿತಿ ಇಲ್ಲಿದೆ.

ಪ್ರತ್ಯಕ್ಷದರ್ಶಿಗಳು ಹೇಳುವುದಿಷ್ಟು…

ಸತ್ಸಂಗ ಮುಗಿದ ಬಳಿಕ ನೂರಾರು ಜನ ಹೊರಗೆ ಬಂದಿದ್ದಾರೆ. ಎತ್ತರದ ಚರಂಡಿ ಮೇಲೆ ನಿರ್ಮಿಸಿದ ರಸ್ತೆ ಮೇಲೆ ಸಾವಿರಾರು ಜನ ನಿಂತಿದ್ದಾರೆ. ಆಗ ರಸ್ತೆಯ ಒಂದು ಭಾಗ ಚರಂಡಿಯೊಳಗೆ ಕುಸಿದಿದೆ. ಕೂಡಲೇ ಹತ್ತಾರು ಜನ ಚರಂಡಿಯೊಳಗೆ ಬಿದ್ದಿದ್ದು, ಒಬ್ಬರ ಮೇಲೆ ಒಬ್ಬರು ಬಿದ್ದ ಕಾರಣ ಹೆಚ್ಚಿನ ಜನ ಸಾವಿಗೀಡಾಗಿದ್ದಾರೆ. ಇನ್ನು ಚರಂಡಿ ಮೇಲಿನ ರಸ್ತೆ ಕುಸಿದ ಸುದ್ದಿ ಹರಿದಾಡುತ್ತಲೇ ಎಲ್ಲರೂ ಓಡಲು ಶುರು ಮಾಡಿದರು. ಆಗಲೂ ಒಬ್ಬರ ಮೇಲೆ ಒಬ್ಬರು ಬಿದ್ದು, ತುಳಿದಾಡಿದ ಕಾರಣ ಸಾವಿನ ಸಂಖ್ಯೆ ಜಾಸ್ತಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಧ್ಯಮಗಳಿಗೆ ಘಟನೆ ಕುರಿತು ವಿವರ ನೀಡಿದ್ದಾರೆ.

ಇನ್ನೊಂದಿಷ್ಟು ಮೂಲಗಳ ಪ್ರಕಾರ, ಸಣ್ಣದೊಂದು ಹಾಲ್‌ನಲ್ಲಿ ಸತ್ಸಂಗ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಹೊರಗಡೆ ಚರಂಡಿ ಮೇಲಿನ ಸ್ಲ್ಯಾಬ್‌ ಕುಸಿದಿದೆ ಎಂಬ ಸುದ್ದಿ ಕೇಳಿ ಎಲ್ಲರೂ ಓಡಲು ಶುರು ಮಾಡಿದರು. ಹೊರಗೆ ಹೋಗುವ ಗೇಟ್‌ ಚಿಕ್ಕದಿದ್ದ ಕಾರಣ ಎಲ್ಲರೂ ನುಗ್ಗಿದಾಗ ಕಾಲ್ತುಳಿತ ಸಂಭವಿಸಿದೆ. ಹೆಣ್ಣುಮಕ್ಕಳು ಓಡಲೂ ಆಗದೆ, ನೂಕುತ್ತಿದ್ದ ಪುರುಷರನ್ನು ಹಿಮ್ಮೆಟ್ಟಿಸಲೂ ಆಗದೆ ನೆಲಕ್ಕೆ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಯಾರಿವರು ಭೋಲೆ ಬಾಬಾ?

ಭೋಲೆ ಬಾಬಾ ಅವರು ಉತ್ತರ ಪ್ರದೇಶದ ಎತಾಹ್‌ ಜಿಲ್ಲೆಯ ಬಹದ್ದೂರ್‌ ಗ್ರಾಮದವರಾಗಿದ್ದಾರೆ. ಇವರು ಈಗ ಪ್ರಮುಖ ಧಾರ್ಮಿಕ ಮುಖಂಡರೆನಿಸಿದ್ದು, ಇವರ ಭಾಷಣ, ಬೋಧನೆಗಳನ್ನು ಕೇಳಲು ಸಾವಿರಾರು ಜನ ಆಗಮಿಸುತ್ತಾರೆ. ಇವರು ದೇಶದ ಗುಪ್ತಚರ ಇಲಾಖೆಯಲ್ಲಿ (IB) ಕಾರ್ಯನಿರ್ವಹಿಸಿದ್ದು, 26 ವರ್ಷಗಳ ಹಿಂದೆಯೇ ಸರ್ಕಾರಿ ನೌಕರಿ ತೊರೆದು, ಸ್ವಯಂಘೋಷಿತ ದೇವಮಾನವರಾಗಿದ್ದಾರೆ.

ಭೋಲೆ ಬಾಬಾ ಅವರಿಗೆ ಭಾರತದಾದ್ಯಂತ ಅನುಯಾಯಿಗಳು ಇದ್ದಾರೆ. ಅದರಲ್ಲೂ, ಉತ್ತರ ಪ್ರದೇಶದ ಪಶ್ಚಿಮ ಭಾಗ, ಉತ್ತರಾಖಂಡ, ಹರಿಯಾಣ, ರಾಜಸ್ಥಾನ ಹಾಗೂ ದೆಹಲಿಯಲ್ಲಿ ಹೆಚ್ಚು ಅನುಯಾಯಿಗಳು ಇದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಖಾತೆ ಹೊಂದಿರದಿದ್ದರೂ ಇವರ ಧಾರ್ಮಿಕ ಕಾರ್ಯಕ್ರಮವನ್ನು ಭಕ್ತರು ತಪ್ಪಿಸಿಕೊಳ್ಳುವುದಿಲ್ಲ. ಪ್ರತಿ ಮಂಗಳವಾರ ಅಲಿಗಢದಲ್ಲಿ ಅವರ ಕಾರ್ಯಕ್ರಮ ನಡೆಯುತ್ತದೆ. ಅಲ್ಲಿಯೂ ಸಾವಿರಾರು ಜನ ಸೇರುತ್ತಾರೆ. ಕೊರೊನಾ ನಿರ್ಬಂಧದ ಮಧ್ಯೆಯೂ ಸಾವಿರಾರು ಜನರನ್ನು ಸೇರಿಸಿ, ಸತ್ಸಂಗ ಆಯೋಜಿಸಿದ್ದು ವಿವಾದಕ್ಕೂ ಕಾರಣವಾಗಿತ್ತು.

ಇದನ್ನೂ ಓದಿ: Uttar Pradesh stampede: ಹತ್ರಾಸ್‌ ಕಾಲ್ತುಳಿತ ದುರ್ಘಟನೆ; ಸಾವಿನ ಸಂಖ್ಯೆ 60ಕ್ಕೆ ಏರಿಕೆ

Continue Reading

ಧಾರ್ಮಿಕ

Vastu Tips: ಮನೆಯ ದ್ವಾರದಲ್ಲಿ ಗಣೇಶನ ವಿಗ್ರಹ ಇಡುವುದು ಸರಿಯೇ?

ಎಲ್ಲ ವಿಘ್ನಗಳನ್ನು ದೂರ ಮಾಡುವ ಗಣಪತಿಯನ್ನು ಪೂಜಿಸಿದರೆ ಜೀವನದಲ್ಲಿ ಎಂದಿಗೂ ಸಮಸ್ಯೆಗಳಿರುವುದಿಲ್ಲ ಎಂದೇ ನಂಬಲಾಗುತ್ತದೆ. ಕೆಲವರು ತಮ್ಮ ಮನೆಯ ಮುಂಭಾಗದ ಬಾಗಿಲುಗಳಲ್ಲಿ ಗಣಪತಿಯ ಚಿತ್ರ ಅಥವಾ ವಿಗ್ರಹವನ್ನು ನೇತುಹಾಕುತ್ತಾರೆ. ವಾಸ್ತು ಶಾಸ್ತ್ರದಲ್ಲಿ (Vastu Tips) ಇದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಗಣೇಶ ವಿಗ್ರಹವನ್ನು ಎಲ್ಲಿ ಇಡಬೇಕು, ಹೇಗೆ ಇಡಬೇಕು ಎಂಬ ಮಾಹಿತಿ ಇಲ್ಲಿದೆ.

VISTARANEWS.COM


on

By

Vastu Tips
Koo

ಪ್ರಥಮ ಪೂಜಿತ ಗಣಪತಿಯನ್ನು (ganapati) ನಮ್ಮ ನಿತ್ಯದ ಎಲ್ಲ ಕಾರ್ಯದಲ್ಲೂ ಮೊದಲ ಆದ್ಯತೆ (First priority) ನೀಡಲಾಗುತ್ತದೆ. ಎಲ್ಲಾ ದೇವರುಗಳಲ್ಲಿ (god) ಗಣಪತಿಯನ್ನು ಅತ್ಯಂತ ಪೂಜನೀಯ ಎಂದು ಪರಿಗಣಿಸಲಾಗಿದೆ. ಈ ಕಾರಣಕ್ಕಾಗಿ ಪ್ರತಿಯೊಂದು ಕೆಲಸದಲ್ಲೂ ಆತನಿಗೆ ಮೊದಲ ಪೂಜೆಯನ್ನು ಸಲ್ಲಿಸಲಾಗುತ್ತದೆ. ಆದರೆ ಇದಕ್ಕೆ ವಾಸ್ತು ಶಾಸ್ತ್ರದ (Vastu Tips) ಪ್ರಕಾರ ಇದರ ಕುರಿತು ಕೆಲವೊಂದು ನಿಯಮಗಳಿವೆ.

ಎಲ್ಲ ವಿಘ್ನಗಳನ್ನು ದೂರ ಮಾಡುವ ಗಣಪತಿಯನ್ನು ಪೂಜಿಸಿದರೆ ಜೀವನದಲ್ಲಿ ಎಂದಿಗೂ ಸಮಸ್ಯೆಗಳಿರುವುದಿಲ್ಲ ಎಂದೇ ನಂಬಲಾಗುತ್ತದೆ. ಕೆಲವರು ತಮ್ಮ ಮನೆಯ ಮುಂಭಾಗದ ಬಾಗಿಲುಗಳಲ್ಲಿ ಗಣಪತಿಯ ಚಿತ್ರ ಅಥವಾ ವಿಗ್ರಹವನ್ನು ನೇತುಹಾಕುತ್ತಾರೆ. ವಾಸ್ತು ಶಾಸ್ತ್ರದಲ್ಲಿ ಇದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಆದರೆ ಪ್ರವೇಶದ್ವಾರದಲ್ಲಿ ಗಣೇಶನ ಚಿತ್ರವನ್ನು ಪ್ರತಿಷ್ಠಾಪಿಸುವಾಗ ಪ್ರತಿಯೊಬ್ಬರೂ ಕೆಲವೊಂದು ನಿಯಮಗಳನ್ನು ಪಾಲಿಸಬೇಕು.


ಯಾವ ದಿಕ್ಕು ಸೂಕ್ತ?

ವಾಸ್ತು ಶಾಸ್ತ್ರದಲ್ಲಿ ಮನೆಯ ಮುಂಭಾಗದ ದ್ವಾರದ ಮೇಲೆ ಗಣಪತಿ ವಿಗ್ರಹವನ್ನು ಇರಿಸಲು ಕೆಲವೊಂದು ಸೂಚನೆಗಳನ್ನು ಅನುಸರಿಸುವುದು ಮುಖ್ಯವಾಗಿದೆ. ಇದಕ್ಕಾಗಿ ಮನೆಯ ಮುಂಭಾಗದ ಬಾಗಿಲು ಉತ್ತರ ಅಥವಾ ದಕ್ಷಿಣಕ್ಕೆ ಎದುರಾಗಿರಬೇಕು. ಆದರೆ ಮುಖ್ಯ ಪ್ರವೇಶ ದ್ವಾರ ಇರುವಲ್ಲಿ ಪೂರ್ವ ಅಥವಾ ಪಶ್ಚಿಮಕ್ಕೆ ಎದುರಾಗಿರುವ ಗಣೇಶನ ಪ್ರತಿಮೆಯನ್ನು ಇರಿಸಬಾರದು.

ಸ್ಥಾಪನೆ ಸರಿಯಾಗಿರಲಿ

ಮನೆಯ ಮುಂಭಾಗದ ದ್ವಾರದ ಮೇಲೆ ಗಣೇಶನ ವಿಗ್ರಹವನ್ನು ಇರಿಸುವಾಗ ಅದನ್ನು ವಿಧಿವತ್ತಾಗಿ ಸ್ಥಾಪಿಸಬೇಕು. ವಿಗ್ರಹವು ಎಲ್ಲಾ ಸಮಯದಲ್ಲೂ ಒಳಮುಖವಾಗಿರಬೇಕು. ಪಶ್ಚಿಮ, ಉತ್ತರ ಮತ್ತು ಈಶಾನ್ಯ ದೃಷ್ಟಿಕೋನಗಳು ಇದಕ್ಕೆ ಅತ್ಯುತ್ತಮವೆಂದು ಹೇಳಲಾಗುತ್ತದೆ.

ಇದನ್ನೂ ಓದಿ Sadhguru Jaggi Vasudev: ಮಕ್ಕಳಲ್ಲಿ ಅಲರ್ಜಿ ಸಮಸ್ಯೆಗೆ ಏನು ಪರಿಹಾರ? ಸದ್ಗುರು ಸಲಹೆ ಇಲ್ಲಿದೆ ಕೇಳಿ

ಬಣ್ಣ ಯಾವುದು?

ವಾಸ್ತು ಶಾಸ್ತ್ರದ ಪ್ರಕಾರ ಕುಟುಂಬದಲ್ಲಿ ಸಮೃದ್ಧಿಯಾಗಬೇಕೆಂದು ಬಯಸಿದರೆ ಬಿಳಿ ಅಥವಾ ಸಿಂಧೂರ ವರ್ಣದ ಗಣೇಶನನ್ನು ಪ್ರತಿಷ್ಠಾಪಿಸಬೇಕು. ಇದನ್ನು ಮಾಡುವುದರಿಂದ ಕುಟುಂಬದಲ್ಲಿ ಸಂಪತ್ತು ಮತ್ತು ಸಂತೋಷವನ್ನುನಿರಂತರವಾಗಿ ಇರುವುದು.

ಪ್ರತಿಮೆಯ ಭಂಗಿ

ಗಣೇಶನ ಪ್ರತಿಮೆಯನ್ನು ಮನೆಯ ಮುಂಭಾಗದ ಬಾಗಿಲಿನಲ್ಲಿ ಕುಳಿತುಕೊಳ್ಳುವ ಭಂಗಿಯಲ್ಲಿ ಇಡಬೇಕು. ಮನೆಯ ದ್ವಾರದ ಹೊರಗೆ ನಿಂತಿರುವ ಗಣೇಶನ ಪ್ರತಿಷ್ಠಾಪನೆಯು ಅದೃಷ್ಟವನ್ನು ತರುವುದಿಲ್ಲ. ಕಾರ್ಯಸ್ಥಳ ಅಥವಾ ಕಚೇರಿಯಲ್ಲಿ ನಿಂತಿರುವ ಗಣೇಶನ ವಿಗ್ರಹವನ್ನು ಇಡಬಹುದು. ಆದರೆ ಮನೆಯಲ್ಲಿ ಇಡಬಾರದು ಎನ್ನುತ್ತದೆ ವಾಸ್ತು ನಿಯಮ.

Continue Reading
Advertisement
Actor Darshan
ಕರ್ನಾಟಕ8 mins ago

Actor Darshan: ಮಗುವನ್ನು ಕೈದಿ ಮಾಡಿದವರಿಗೆ ಕಾನೂನು ಕಂಟಕ; ಪಾಲಕರಿಗೆ ನೋಟಿಸ್‌!

IPL 2025
ಕ್ರೀಡೆ15 mins ago

IPL 2025: ಮುಂದಿನ ವರ್ಷ ಆರ್​ಸಿಬಿಗೆ ವಿರಾಟ್​ ಕೊಹ್ಲಿ ನಾಯಕ?

Kannada New Movie kannnajaru teaser teaser Out
ಸಿನಿಮಾ17 mins ago

Kannada New Movie: ‘ಕಣಂಜಾರು’ ಟೀಸರ್ ಮೆಚ್ಚಿದ ಚಂದನವನ!

viral news signboard
ವೈರಲ್ ನ್ಯೂಸ್28 mins ago

Viral News: ʼತುರ್ತಾಗಿ ಒಂದು ಅಪಘಾತ ಮಾಡಿʼ ಅನ್ನುತ್ತಿದೆ ಈ ಸೈನ್‌ಬೋರ್ಡ್‌!

Hijab Row
ದೇಶ30 mins ago

Hijab Row: ಹಿಬಾಬ್‌ ನಿಷೇಧದ ಬೆನ್ನಲ್ಲೇ ಜೀನ್ಸ್‌, ಟೀ-ಶರ್ಟ್‌ ಬ್ಯಾನ್‌- ಪ್ರಕಟಣೆ ಹೊರಡಿಸಿದ ಮುಂಬೈ ಕಾಲೇಜು

Stray Dogs Attack
ಕರ್ನಾಟಕ42 mins ago

Stray Dogs Attack: ಸುರಪುರದಲ್ಲಿ ಬೀದಿ ನಾಯಿಗಳ ದಾಳಿಗೆ 15 ಕುರಿಗಳು ಬಲಿ

Gold Rate Today
ಚಿನ್ನದ ದರ47 mins ago

Gold Rate Today: ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ; ಇಷ್ಟಿದೆ ಇಂದಿನ ಬೆಲೆ

lovers death self harming
ಕ್ರೈಂ1 hour ago

Lovers Death: ನಾಪತ್ತೆಯಾಗಿದ್ದ ಪ್ರೇಮಿಗಳ ಶವ ನೈಸ್ ರಸ್ತೆ ಬಳಿ ಕೆರೆಯಲ್ಲಿ ಪತ್ತೆ

Anant-Radhika Wedding
ದೇಶ1 hour ago

Anant-Radhika Wedding: ಅನಂತ್‌ ಅಂಬಾನಿ ಮದುವೆಗೆ ಪೂರ್ವಭಾವಿಯಾಗಿ ಸಾಮೂಹಿಕ ವಿವಾಹ; ಪ್ರತಿ ವಧುವಿಗೆ ಚಿನ್ನಾಭರಣ, 1 ಲಕ್ಷ ರೂ.

Prajwal Devaraj cancel birthday darshan main reason
ಸಿನಿಮಾ1 hour ago

Prajwal Devaraj: ಪ್ರಜ್ವಲ್ ದೇವರಾಜ್ ಬರ್ತ್‌ಡೇ ಸೆಲೆಬ್ರೇಷನ್‌ ಕ್ಯಾನ್ಸಲ್‌; ದರ್ಶನ್‌ ಕಾರಣ?

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ18 hours ago

Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

karnataka Weather Forecast
ಮಳೆ2 days ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ3 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು3 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ4 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ4 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ5 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ6 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ6 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

ಟ್ರೆಂಡಿಂಗ್‌