Prerane | ಮೂರು ಶ್ರೇಷ್ಠ ಪ್ರಾರ್ಥನೆಗಳು - Vistara News

ಧಾರ್ಮಿಕ

Prerane | ಮೂರು ಶ್ರೇಷ್ಠ ಪ್ರಾರ್ಥನೆಗಳು

“ಪ್ರೇರಣೆʼʼ (Prerane) ಇದು ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತನೆಗಳನ್ನು ಬಿತ್ತುವ ಬೆಳಗಿನ ಹೊಳಹು. ಪ್ರತಿ ನಿತ್ಯ ಧಾರ್ಮಿಕ ಚಿಂತಕರು, ಪ್ರವಚನಕಾರರು, ಆಧ್ಯಾತ್ಮಚಿಂತಕರು ಇಲ್ಲಿ ಬರೆಯುತ್ತಿದ್ದಾರೆ. ಇಂದು ಮೂರು ಶ್ರೇಷ್ಠ ಪ್ರಾರ್ಥನೆಗಳ ಕುರಿತು ತಿಳಿಯೋಣ.

VISTARANEWS.COM


on

prerane
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸುಬ್ರಹ್ಮಣ್ಯ ಸೋಮಯಾಜಿ
ಅಸತೋಮಾ ಸದ್ಗಮಯ|
ತಮಸೋಮಾ ಜ್ಯೋತಿರ್ಗಮಯ|
ಮೃತ್ಯೋರ್ಮಾ ಅಮೃತಂ ಗಮಯ||

ಅಸತ್ಯದಿಂದ ಸತ್ಯದೆಡೆಗೆ, ಕತ್ತಲಿನಿಂದ ಬೆಳಕಿನೆಡೆಗೆ, ಮೃತ್ಯುವಿನಿಂದ ಅಮೃತತ್ವದ ಎಡೆಗೆ ನಮ್ಮನ್ನು ಕರೆದೊಯ್ಯು ಎಂದು ಭಗವಂತನಲ್ಲಿ ನಮ್ಮ ಪ್ರಾಚೀನ ಮಹರ್ಷಿಗಳ ಪ್ರಾರ್ಥನೆ. ಭಾರತೀಯ ಜೀವನದಲ್ಲಿ ಈ ಪ್ರಾರ್ಥನೆ ಜನಜನಿತ. ನಮ್ಮ ಪೂಜೆ ಪುರಸ್ಕಾರಗಳಲ್ಲಿ, ವಿಶೇಷ ಸಮಾರಂಭಗಳಲ್ಲಿ ಈ ಬಗೆಯ ಪ್ರಾರ್ಥನೆಮಾಡುವುದನ್ನು ಇಂದಿಗೂ ಅಲ್ಲಲ್ಲಿ ಕಾಣಬಹುದಾಗಿದೆ. ನಮ್ಮ ಶಾಲಾ ಕಾಲೇಜುಗಳಲ್ಲೂ ವಿದ್ಯಾರ್ಥಿಗಳು ಈ ಪ್ರಾರ್ಥನೆಯನ್ನು ಮೊಳಗುವುದನ್ನು ಕಾಣುತ್ತೇವೆ.

ನಿಜ ಹೇಳಿದರೆ ಸತ್ಯ ನುಡಿದಂತೆ. ಸುಳ್ಳು ಹೇಳಬಾರದು ಎಂಬ ನೀತಿ ಎಲ್ಲರಿಗೂ ಗೊತ್ತಿರುವುದೇ. ಹಾಗೆಯೇ ಕತ್ತಲೆ ನಮಗೆ ಗೊತ್ತು. ಬೆಳಕೂ ಸಹ ಗೊತ್ತು. ಕತ್ತಲೆಯಿಂದ ಬೆಳಕಿನೆಡೆಗೆ ನಾವೇ ಸಾಗಬಹುದು. ಕಡೆಯದು ಮೃತ್ಯು. ಎಲ್ಲರಿಗೂ ಬರುವಂತಹದು. ಯಾರೂ ಚಿರಂಜೀವಿಗಳಲ್ಲ. ಎಂದಮೇಲೆ ಈ ಪ್ರಾರ್ಥನೆಯ ಔಚಿತ್ಯವಾದರೂ ಏನು? ಪ್ರಾಯಃ ಜೀವಿತಾವಧಿಯಲ್ಲೇ ಲೋಕದಲ್ಲಿ ಎಂದೆಂದಿಗೂ ಅಳಿಯದ ಕೆಲಸಗಳನ್ನು ಮಾಡಬೇಕು ಎಂದಿರಬೇಕು.

ಇವೆಲ್ಲವೂ ನಮಗೆ ಗೊತ್ತಿದೆ ಎಂದಮೇಲೆ ಭಗವಂತನಲ್ಲಿ ಪ್ರಾರ್ಥನೆ ಮಾಡುವುದೇನಿದೆ? ನಾವೇ ಮಾಡಬಹುದಾದ ಕೆಲಸಕ್ಕೆ ಅವನ ಸಹಾಯ ಏಕೆ? ಬುದ್ಧಿಗೆ ಶ್ರಮ ಕೊಡದೇ ಇಷ್ಟನ್ನು ಆಲೋಚನೆ ಮಾಡಬಹುದು. ಆದರೆ ಪ್ರಾರ್ಥನೆ ಮಾಡಿದವರು ಈ ದೇಶದ ಮಹರ್ಷಿಗಳು. ಅಂತರಂಗದ ಸತ್ಯವನ್ನು, ಪರಮಾತ್ಮನನ್ನು ತಮ್ಮಲ್ಲಿ ಕಂಡು ಪ್ರಾರ್ಥನೆ ಮಾಡಿದ್ದಾರೆ. ವ್ಯರ್ಥವಾದ ಮಾತುಗಳು ಅವರಿಂದ ಬಾರವು. ಏನೀ ಪ್ರಾರ್ಥನೆಯ ಔಚಿತ್ಯ ಎಂದು ವಿಚಾರಮಾಡಬೇಕಿದೆ.

ಅಸತೋಮಾ ಸದ್ಗಮಯ
ಶಂಕರಭಗವತ್ಪಾದರು ಸತ್ಯವನ್ನು ಮೂರು ಬಗೆಯಲ್ಲಿ ವಿವರಿಸಿದ್ದಾರೆ- ವ್ಯಾವಹಾರಿಕ ಸತ್ಯ,ಪ್ರಾತಿಭಾಸಿಕ ಸತ್ಯ,ಮತ್ತು ಪಾರಮಾರ್ಥಿಕ ಸತ್ಯ ಎಂಬುದಾಗಿ. ನಾವು ಮೇಲೆ ಹೇಳಿದಂತೆ ನಿಜ ಹೇಳುವುದು ಇತ್ಯಾದಿ ವ್ಯಾವಹಾರಿಕ ಸತ್ಯವಾಗುತ್ತದೆ. ಪ್ರಾತಿಭಾಸಿಕ ಸತ್ಯವೆಂದರೆ ಕನಸಿನಲ್ಲಿ ಕಂಡ ಅನುಭವಗಳು, ನಾವು ನಮ್ಮ ಭ್ರಮೆಯಿಂದ ಸತ್ಯವೆಂದು ತಿಳಿದುಕೊಂಡ ಸತ್ಯಗಳು-ಉದಾಹರಣೆಗೆ ಹಗ್ಗವನ್ನು ಹಾವೆಂದು ಭಾವಿಸಿದಂತೆ. ಆದರೆ ಎಂದೆಂದಿಗೂ ಬದಲಾಗದ, ತಾನೇ ತಾನಾಗಿ ಬೆಳಗುತ್ತಿರುವ ಮತ್ತು ಎಲ್ಲವನ್ನೂ ತನ್ನ ಇರುವಿಕೆಯಿಂದ ಬೆಳಗುವಂತೆ ಮಾಡುವ, ನಿತ್ಯ ಶಾಶ್ವತವಾದ, ಜಗತ್ತಿನ ಇರುವಿಕೆಗೇ ಕಾರಣವಾದ ಪರಮಾತ್ಮ ಸತ್ಯವೇ ಪಾರಮಾರ್ಥಿಕ ಸತ್ಯ.

ನಚಿಕೇತನಿಗೆ ಯಮನು ಉಪದೇಶಿಸುವಂತೆ ನ ತತ್ರ ಸೂರ್ಯೋ ಭಾತಿ ನ ಚಂದ್ರತಾರಕಂ, ನೇಮಾ ವಿದ್ಯುತೋ ಭಾಂತಿ ಕುತೋಯಮಗ್ನಿ: ತಮೇವ ಭಾನ್ತಮ್ ಅನುಭಾತಿ ಸರ್ವಂ ತಸ್ಯ ಭಾಸಾ ಸರ್ವಮಿದಂ ವಿಭಾತಿ- ಎಂಬಂತೆ ಸೂರ್ಯಚಂದ್ರಾಗ್ನಿಗಳು ವಿದ್ಯುತ್ತು ಎಲ್ಲವೂ ಯಾವ ಬೆಳಕನ್ನು ತಮ್ಮಬೆಳಗುವಿಕೆಗಾಗಿ ಅವಲಂಬಿಸಿವೆಯೋ ಅಂತಹ ಪರಮಾತ್ಮಜ್ಯೋತಿಯನ್ನೇ ಇಲ್ಲಿ ಸತ್ಯ ಎಂದಿರುವುದು. ಅದು ಎಂದೆಂದಿಗೂ ಇರುವಂತಹದ್ದು. ಇವತ್ತಿದ್ದು ನಾಳೆ ಇಲ್ಲವಾಗುವುದಲ್ಲ.

ಅಂತಹ ಸತ್ಯವು ನಮ್ಮ ಅರಿವಿಗೆ ಬರುವಂತೆ ಸತ್ಯಸ್ವರೂಪನಾದ ಅವನೇ ಮಾಡಬೇಕು. ನಮ್ಮ ಕೈಯಲ್ಲಿ ಯಾವುದನ್ನು ಮಾಡಲು ಸಾಧ್ಯವಾಗದೋ ಅಥವಾ ಅತ್ಯಂತ ಕಷ್ಟಸಾಧ್ಯವೋ ಅದನ್ನು ತಾನೇ ಭಗವಂತನನ್ನು ಕೇಳಬೇಕು? ಆ ಪರಮ ಸತ್ಯದ ನೇರದಲ್ಲಿ ಅದಲ್ಲದೇ ಉಳಿದುದೆಲ್ಲವೂ ಅಸತ್ಯವೇ. ಎಲ್ಲವೂ ಆ ಪರಮಸತ್ಯವನ್ನು ಮರೆ ಮಾಡುವಂತಹದ್ದೇ. ಅಂತಹ ಅಸತ್ಯಗಳಿಂದ ನಮ್ಮನ್ನು ಪರಮ ಸತ್ಯದೆಡೆಗೆ ಕೊಂಡೊಯ್ಯು ಎಂಬ ಪ್ರಾರ್ಥನೆ ಜೀವಲೋಕವೆಲ್ಲವೂ ಅನವರತವೂ ಮಾಡಬೇಕಾದ ಪ್ರಾರ್ಥನೆಯೇ ಆಗುತ್ತದೆ.

ತಮಸೋಮಾ ಜ್ಯೋತಿರ್ಗಮಯ
ಕತ್ತಲೆಯಿಂದ ಬೆಳಕಿನೆಡೆಗೆ. ಭಾರತೀಯರಿಗೆ ಕತ್ತಲೆಯೇ ಬೇಕಿಲ್ಲವೇ? ಹೊರಗಿನ ಕತ್ತಲೆ ನಾವು ವಿಶ್ರಾಂತಿ ತೆಗೆದುಕೊಳ್ಳಲು ಅವಶ್ಯವಾಗಿ ಬೇಕು. ಅಲ್ಲದೇ ತಾನಾಗಿ ಕತ್ತಲಾಗುತ್ತದೆ, ಸೂರ್ಯ ಉದಿಸಿದ ನಂತರ ಬೆಳಕೂ ಆಗುತ್ತದೆ. ಮತ್ತೆ ಈ ಪ್ರಾರ್ಥನೆಯ ಔಚಿತ್ಯವಾದರೂ ಏನು? ಎಂದರೆ ಆ ಪಾರಮಾರ್ಥಿಕ ಸತ್ಯದ ವಿಷಯದಲ್ಲಿ ನಮ್ಮ ಬುದ್ಧಿಗೆ ಕತ್ತಲು ಕವಿದಿದೆ. ನಾವು ನಮ್ಮ ವ್ಯಾವಹಾರಿಕ, ಇಂದ್ರಿಯಜೀವನದಲ್ಲೇ ಜನ್ಮ ಜನ್ಮಾಂತರಗಳಿಂದ ಕಾಲ ಕಳೆಯುತ್ತಾ ನಮ್ಮೊಳಗೇ ಬೆಳಗುತ್ತಿರುವ ಬೆಳಕನ್ನು ಕಾಣಲಾರದವರಾಗಿದ್ದೇವೆ.

ಜ್ಞಾನಿಗಳು, ಸಂತರು ಹೇಳಿದರೂ ಅಂತಹ ಬೆಳಕೊಂದು ಉಂಟು ಎಂದು ನಮಗೆ ನಂಬಿಕೆ ಬಾರದಷ್ಟು ವಿಸ್ಮೃತರಾಗಿದ್ದೇವೆ. ಆ ಅಂತರ್ಜ್ಯೋತಿಯನ್ನು ಸಂಪೂರ್ಣವಾಗಿ ಮರೆತಿರುವುದೇ ತಮಸ್ಸು. ಅದನ್ನು ಕಳಚಿ ನಮ್ಮನ್ನು ಆ ಒಳ ಬೆಳಕಿನ ಕಡೆಗೆ ನಡೆಸು ಎಂದು ಬೆಳಕನ್ನೇ ಪ್ರಾರ್ಥಿಸಿದ್ದಾರೆ. ಆ ಬೆಳಕು ತಾನೇ ತಾನಾಗಿ ಬೆಳಗುತ್ತಿದೆ. ಅದರ ಭಿಕ್ಷೆಯಿಂದಲೇ ನಮ್ಮ ಲೌಕಿಕ ಜೀವನಗಳೂ ನಡೆಯುತ್ತಿವೆ. ಆದರೆ ನಮ್ಮ ಮನಸ್ಸುಗಳಲ್ಲಿ ಅದನ್ನು ಅರಿಯದ ಕತ್ತಲು. ಈ ಕತ್ತಲೆಯಿಂದಲೇ ನಮ್ಮನ್ನು ಆ ಬೆಳಕಿನೆಡೆಗೆ ಕರೆದೊಯ್ಯಬೇಕಿರುವುದು.

ಅದಕ್ಕಾಗಿಯೇ ಋಷಿಗಳು ಭಗವಂತನಲ್ಲಿ ಪ್ರಾರ್ಥಿಸುತ್ತಿರುವುದು. ಅದು ಹೊರಗಿನ ಕತ್ತಲೆಯಿಂದ ಹೊರಗಿನ ಬೆಳಕಿನೆಡೆ ಅಲ್ಲ. ನಮ್ಮಬುದ್ಧಿಯಲ್ಲಿನ ಕತ್ತಲೆಯಿಂದ ಒಳಬೆಳಕಿನೆಡೆಗೆ. ನಮ್ಮ ಪ್ರಾರ್ಥನೆ ಎಷ್ಟು ಬಲವತ್ತರವೋ ಅಷ್ಟು ಬೇಗ ಅವನು ನಮ್ಮಕತ್ತಲೆಯನ್ನು ಹೋಗಲಾಡಿಸುತ್ತಾನೆ. ಈ ಭಾವವಿಲ್ಲದೇ ಶುಷ್ಕವಾಗಿ ಮಾಡುವ ಪ್ರಾರ್ಥನೆಯಿಂದ ಪ್ರಯೋಜನವಿರದು.

ಮೃತ್ಯೋರ್ಮಾ ಅಮೃತಂ ಗಮಯ
ಶರೀರವನ್ನು ತಳೆದು ಬಂದಮೇಲೆ ಇದಕ್ಕೆ ಮೃತ್ಯು ನಿಶ್ಚಿತ. ಜಾತಸ್ಯ ಮರಣಂ ಧ್ರುವಂ. ಎಂದಮೇಲೆ ಅಮರತ್ವಎಲ್ಲಿಂದ ಬರಬೇಕು? ನಾವು ಸಾಯದಂತೆ ವರವನ್ನು ಬೇಡುತ್ತಿದ್ದೆವೆಯೇ? ಅಂತಹ ಬೇಡಿಕೆ ಎಷ್ಟು ಅರ್ಥಪೂರ್ಣ? ಅದನ್ನುಭಗವಂತನು ಹೇಗೆ ಈಡೇರಿಸಿಯಾನು? ಎಲ್ಲವೂ ಪ್ರಶ್ನೆಯಾಗುತ್ತದೆ. ಇಲ್ಲಿ ಅಮರವಾದುದು ನಮ್ಮೊಳಗೇ ಬೆಳಗುತ್ತಿರುವ ಚೈತನ್ಯ. ಅದೇ ನಮ್ಮನ್ನು ಜೀವಂತವಾಗಿಟ್ಟಿರುವುದು. ಅದು ನಮ್ಮ ಆನಂದದ, ನೆಮ್ಮದಿಯ ನಿಜವಾದ ತಾಣ. ಅದರೊಡನೆ ನಮ್ಮ ಮನಸ್ಸು ನಿರಂತರವಾಗಿ ಸಂಪರ್ಕವನ್ನಿಟ್ಟುಕೊಂಡರೆ ಅದೇ ಅಮರ ಜೀವನ.

ನದಿಯೊಂದು ತಾನು ಹರಿಯುತ್ತಿರುವ ಎಲ್ಲೆಕಟ್ಟುಗಳೊಂದಿಗೆ ಸಮುದ್ರವನ್ನು ಸೇರಿದಾಗಲೇ ಆ ನದಿಯ ಜೀವನ ಅಮರ. ಅಲ್ಲಿ ಅದನ್ನು ಗಂಗೆ,ಯಮುನೆ, ಗೋದಾವರಿ,ಕಾವೇರಿ ಎಂದು ಗುರುತಿಸಲಾಗದು. ಅದು ಮಹಾ ಸಮುದ್ರವೇ ಆಗಿಬಿಡುತ್ತೆ. ಹಾಗೆ ಈ ಜೀವನದಿಯೂ ತನ್ನ ಮೂಲವಾದ ಆ ಮಹಾ ಚೈತನ್ಯದ ಆಶಯದಂತೆ ಅದರ ನೆನಪನ್ನು ಒಂದಿನಿತೂ ಬಿಡದೇ ಬಾಳುತ್ತಾ ಕಡೆಯಲ್ಲಿ ನಾಮ-ರೂಪಗಳಿಂದ ಆರೋಪಿತವಾದ ಶರೀರದ ಎಲ್ಲೆಕಟ್ಟುಗಳನ್ನು ಮೀರಿ ಪರಮಾತ್ಮ ಸಮುದ್ರದಲ್ಲಿ ಸೇರುವಂತಾಗುವುದು ಇದರ ಸಹಜವಾದ ನಡೆ ಎಂಬುದನ್ನು ಹಾಗೆ ಅಮರಜೀವನವನ್ನು ಮಾಡಿದ ಮಹರ್ಷಿಗಳ ಆನುಭವಿಕ ಸತ್ಯ. ಎಂದೇ ನಮ್ಮ ಜೀವಿತಕಾಲದಲ್ಲಿ ನಮ್ಮ ಜೀವನದ ಸ್ರೋತಸ್ಸಾದ, ಎಂದೆಂದಿಗೂ ಇರುವ ಆ ಅಮರವಾದ ಬೆಳಕಿನ ಆಶಯದಂತೆ ಬದುಕಿ ಕಡೆಯಲ್ಲಿ ಆ ಅಮೃತನಾದ ದೇವನಲ್ಲಿ ಒಂದಾಗುವಂತೆ ಮಾಡೆಂದು ಭಗವಂತನಲ್ಲಿ ಪ್ರಾರ್ಥನೆ-ಮೃತ್ಯೋರ್ಮಾ ಅಮೃತಂ ಗಮಯ.

ಈಗ ನಾವು ಆ ಸ್ರೋತಸ್ಸನ್ನು ಮರೆತು ಕೇವಲ ಮೃತ್ಯುಮುಖರಾಗಿ ಜೀವನ ನಡೆಸುತ್ತಿದ್ದೇವೆ. ಹಾಗಿಲ್ಲದೇ ಮೃತವಾಗುವ ಈ ಶರೀರದಿಂದ ಅಮೃತವಾದ ವಸ್ತುವನ್ನೇ ಕಾಣುತ್ತಾ ಕಡೆಯಲ್ಲಿ ಆ ಅಮೃತವೇ ಆಗಿಬಿಡುವಂತೆ ನಮ್ಮನ್ನು ಅನುಗ್ರಹಿಸು ಎಂಬ ಪ್ರಾರ್ಥನೆ. ನದಿಗಳು ಸಮುದ್ರವಾದಂತೆ. ಶ್ರೀರಂಗಮಹಾಗುರುಗಳು ಸತ್ಯ ಎನ್ನುವ ಪದಕ್ಕೆ “ಸತಿಯಂ” ಎಂಬ ಉಪನಿಷತ್ತಿನ ವ್ಯಾಖ್ಯೆಯನ್ನು ನೆನಪಿಸಿದ್ದರು. ಅದರಂತೆ ಅಮರವಾದದ್ದಕ್ಕೂ ಮರವಾದದ್ದಕ್ಕೂ ಸೇತುವೆಯನ್ನು ಹಾಕುವುದು ಸತ್ಯವೆಂದಾಗುತ್ತದೆ. ನಮ್ಮ ಬಾಳು ಮರವಾದ ಈ ದೇಹದಿಂದ ಅಮರವಾದ ಭಗವಂತನನ್ನು ಕಂಡು ಅವನಲ್ಲಿ ಒಂದಾಗುವ ಅಪೇಕ್ಷೆಯಿಂದ ಬಂದ ಪ್ರಾರ್ಥನೆ ಇದು.

ಇಂದು ಮೃತ್ಯುಭಯ, ಜೀವನದ ಅನಿಶ್ಚಿತತೆ ಇತ್ಯಾದಿ ಆತಂಕಗಳಿಂದ ನಾವೆಲ್ಲಾ ಭಯಗ್ರಸ್ತರಾಗಿದ್ದೇವೆ. ಈ ಶ್ರೇಷ್ಠ ಪ್ರಾರ್ಥನೆಗಳು ಇಂದು ಅತ್ಯಂತ ಪ್ರಸ್ತುತವಾಗಿವೆ. ನಮ್ಮ ಆರೋಗ್ಯವನ್ನು ರಕ್ಷಿಸಿಕೊಂಡು ಬದುಕುವ ಸರ್ವ ಪುರುಷಪ್ರಯತ್ನವನ್ನೂ ಮೆರೆಯೋಣ. ಉಳಿದುದನ್ನುಆ ಕರುಣಾಮಯನಿಗೆ ಬಿಡೋಣ. ನಮ್ಮ ಮನಸ್ಸುಗಳು ಎಂದೆಂದಿಗೂ ಬೆಳಗುವ ಸತ್ಯದಕಡೆಗೆ, ಬುದ್ಧಿಯು ಸದಾ ಬೆಳಗುವ ಬೆಳಕಿನೆಡೆಗೆ ಒಯ್ಯಲ್ಪಟ್ಟರೆ, ನಾವು ಈ ಮರವಾದ ಬದುಕನ್ನು ಅಮರವಾದ ಜೀವನದ ಚೈತನ್ಯದ ಜೊತೆಗೆ ಜೋಡಿಸಿಕೊಂಡೆವಾದರೆ ಎಲ್ಲಾ ಬಗೆಯ ಭಯ, ಆತಂಕಗಳಿಂದ ಮುಕ್ತರಾಗಿ ಜೀವನ ಮಾಡಬಹುದಾಗಿದೆ.

ಕಡೆಯಲ್ಲಿ ಶ್ರೀರಂಗಮಹಾಗುರುಗಳ ಈ ಮಾತು ಇಲ್ಲಿ ಸ್ಮರಣೀಯ-“ಜ್ಞಾನವನ್ನು ಬೆಳೆಸಲು,ಸತ್ಯವನ್ನು ಮೆರೆಸಲು ಎಷ್ಟು ಸಮಾಜಗಳು ದುಡಿದಿವೆ! ಎಷ್ಟು ತಪಸ್ಯೆಗಳು ನಡೆದಿವೆ! ವೇದ-ಇತಿಹಾಸ-ಪುರಾಣಗಳನ್ನು ನೋಡಿದರೆ ಒಂದೊಂದು ವಿಷಯ ತರಲು ಲಕ್ಷಾಂತರ ವರ್ಷಗಳ ತಪಸ್ಯೆ ನಡೆದಿದೆ ಎಂಬುದು ತಿಳಿಯುತ್ತದೆ

ಹೀಗೆ ಕೇವಲ ಪುರುಷಪ್ರಯತ್ನದಿಂದ ಸಾಧ್ಯವಾಗದ, ಅವನ ಅನುಗ್ರಹದಿಂದಲೇ ಆಗಬೇಕಾದದ್ದನ್ನೇ ಅವನಲ್ಲಿ ಪ್ರಾರ್ಥಿಸಿದ್ದಾರೆ. ಮಹರ್ಷಿಗಳು ತಾವು ಅಸತ್ಯದಿಂದ ಸತ್ಯದೆಡೆಗೆ, ತಮಸ್ಸಿನಿಂದ ಆಜ್ಯೋತಿರ್ಧಾಮದೆಡೆಗೆ, ಮೃತ್ಯುವಿನಿಂದ ಅಮೃತತ್ವದ ಎಡೆಗೆ ಸಾಗಿ ಜೀವನದ ಸಾರ್ಥಕತೆಯನ್ನು ಪಡೆದವರಾಗಿದ್ದರೂ ಜೀವಲೋಕವೆಲ್ಲವೂ ಅಂತಹ ನೆಮ್ಮದಿಯನ್ನು ಹೊಂದುವಂತಾಗಲಿ ಎಂಬ ಕರುಣೆಯಿಂದ ಈ ಪ್ರಾರ್ಥನೆಯನ್ನು ನಮ್ಮೆಲ್ಲರಿಗಾಗಿ ಮೊಳಗಿದ್ದಾರೆ. ಅವರ ಮನಸ್ಸಿನಂತೆ ನಮ್ಮ ಜೀವನದ ಯಶಸ್ಸಿಗಾಗಿ ಅನವರತವೂ ಈ ಪ್ರಾರ್ಥನೆಯನ್ನು ಮಾಡೋಣ.

ಲೇಖಕರು ಆಧ್ಯಾತ್ಮ ಚಿಂತಕರು ಮತ್ತು ಪ್ರವಚನಕಾರರು
ಅಷ್ಟಾಂಗಯೋಗ ವಿಜ್ಞಾನಮಂದಿರಂ

ಇದನ್ನೂ ಓದಿ | Prerane | ಸ್ಫೂರ್ತಿಯ ಮಾತುಗಳಿಂದ ಕಾರ್ಯೋತ್ಸಾಹ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಬೆಂಗಳೂರು

Navaratri : ನವರಾತ್ರಿ ಸಂಭ್ರಮದಲ್ಲಿ ಗೊಂಬೆಗಳಂತೆ ಮಿಂಚಿದ ಹೆಂಗಳೆಯರು

Navaratri: ನವರಾತ್ರಿಯಂದು ಬಣ್ಣಕ್ಕೂ ಎಲ್ಲಿಲ್ಲದ ಮಹತ್ವವಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯರು ಒಂದೇ ತರಹ ಬಟ್ಟೆ ಧರಿಸಿ ಮಿಂಚಿದ್ದಾರೆ.

VISTARANEWS.COM


on

By

navaratri
Koo

ಬೆಂಗಳೂರು: ನವರಾತ್ರಿಯ(Navaratri) ಸಂಭ್ರಮ ಎಲ್ಲೆಡೆ ಕಳೆಕಟ್ಟಿದೆ. ದೇವಿಯನ್ನು ವಿವಿಧ ರೂಪದಲ್ಲಿ ಆರಾಧಿಸಲಾಗುತ್ತದೆ. ನವರಾತ್ರಿಯ ಇನ್ನೊಂದು ವಿಶೇಷ ಎಂದರೆ 9 ದಿನಗಳಿಗೆ 9 ಬಣ್ಣದ ಬಟ್ಟೆ. ಒಂದೊಂದು ದಿನ ಒಂದೊಂದು ಬಣ್ಣದ ಬಟ್ಟೆ ಧರಿಸುವುದು ವಾಡಿಕೆ. ಹೀಗೆ ನವರಾತ್ರಿಯ ವೈಭವ ಜೋರಾಗಿದ್ದು, ಹೆಂಗಳೆಯರು ಒಂದೇ ತರಹದ ಸೀರೆಯನ್ನುಟ್ಟು ಮಿಂಚಿದ್ದಾರೆ.

ಜೆ.ಎಸ್.ಎಸ್ ಪದವಿ ಮಹಾವಿದ್ಯಾಲಯದ ಬೋಧಕ – ಬೋಧಕೇತರ ಮಹಿಳಾ ಸಿಬ್ಬಂದಿ ಶರನ್ನವರಾತ್ರಿ ಸಂಭ್ರಮದ ಮೊದಲ ದಿನ .

ಶರನ್ನವರಾತ್ರಿ ಸಂಭ್ರಮದ ಎರಡನೇ ದಿನ ಹಸಿರು ಸೀರೆಯಲ್ಲಿ ಮಿಂಚಿ ಸಂಭ್ರಮಿಸಿ ಮಹಿಳಾಮಣಿಯರು

ತರ್ಮಾಕೋಲ್‌ನಲ್ಲಿ ಮೂಡಿ ಬಂತು ಅಂಬಾರಿ

ನಾಡ ಹಬ್ಬ ದಸರಾ ಹಾಗೂ ನವರಾತ್ರಿ ಸಂಭ್ರಮ ಶುರುವಾಗಿದೆ. ವಿಜಯ ದಶಮಿಯಂದು ಗರ್ಜಿಸಲು ತರ್ಮಾಕೋಲ್ ಆನೆಗಳು, ಅಂಬಾರಿ ಸಹ ರಗಡ್ಡಗಿದ್ದು, ಗತಿಸಿ ಹೋದ ಇತಿಹಾಸ ಇಲ್ಲಿ ಕಾಣಸಿಗುತ್ತಿವೆ. ಒಂಬತ್ತು ದಿನಗಳ ನವರಾತ್ರಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಹೆಂಗಳೆಯರು ಕಲರ್ ಕಲರ್ ಸೀರೆಯುಟ್ಟು ಮಸ್ತಿ ಮಾಡುತ್ತಿದ್ದರೆ, ಇತ್ತ ವಿಜಯದಶಮಿ ದಿನಕ್ಕೆ ತರ್ಮಾಕೋಲ್‌ನಲ್ಲಿ ಅಂಬಾರಿ ಮೂಡಿ ಬಂದಿದೆ. ಇದನ್ನು ನೋಡಿದರೆ ಸೇಮ್‌ ಮೈಸೂರು ಅಂಬಾರಿಯಂತೆ ಭಾಸವಾಗುತ್ತದೆ.

ಅಂದಹಾಗೆ ವುಡ್‌ನಲ್ಲಿ ಬೇಕಾದಂತಹ ಐಟಮ್ಸ್ ತಯಾರಿಸೋದು ಕಷ್ಟವಲ್ಲ ಆದರೆ ಅದನ್ನು ಮೆಂಟೇನ್ ಮಾಡೋದು ಕಷ್ಟಕರವೆಂದು ಜನರು ತರ್ಮಾಕೋಲ್ ಗೊಂಬೆಗಳಿಗೆ ಮೊರೆ ಹೋಗಿದ್ದಾರೆ. ತರ್ಮಾಕೋಲ್‌ನಲ್ಲಿ ಅಂಬಾರಿ, ಜೋಡಿ ಗೊಂಬೆಗಳು, ಹಂಪಿಯ ದೇವಸ್ಥಾನ, ಯಕ್ಷಗಾನದ ಮಂಟಪ, ಆನೆ, ಕಮಲದ ಹೂಗಳು ಮಾತ್ರವಲ್ಲ ಮೈಸೂರು ಅರಮನೆ ಸೇರಿದಂತೆ ಹಲವಾರು ವಿಭಿನ್ನವಾದ ಕಲೆಗಳು ಮೂಡಿ ಬಂದೀವೆ. ಸಿಲಿಕಾನ್ ಸಿಟಿ ಜನರಿಗೆ ಹಬ್ಬದ ಸಂಭ್ರಮಕ್ಕೆ ತರ್ಮಾಕೋಲ್‌ನಿಂದ ಮಾಡಿರುವ ವಸ್ತುಗಳು ಗಮನ ಸೆಳೆಯುತ್ತಿವೆ.

Continue Reading

ಕೊಡಗು

Kodagu News : ದಸರಾದಲ್ಲಿ ಡಿಜೆ ಬಳಕೆಗೆ ನಿರ್ಬಂಧ; ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್

Kodagu News : ದಸರಾದಲ್ಲಿ ಡಿಜೆ ಬಳಕೆಗೆ ನಿರ್ಬಂಧ ಮಾಡಲಾಗಿದೆ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಸ್ಪಷ್ಟಪಡಿಸಿದ್ದಾರೆ.

VISTARANEWS.COM


on

By

Kodagu News
ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್
Koo

ಮಡಿಕೇರಿ: ನಮ್ಮ ಸಂವಿಧಾನ ಎಲ್ಲರಿಗೂ ಸ್ವಾತಂತ್ರ್ಯವಾಗಿ ಬದುಕುವ ಹಕ್ಕನ್ನು ನೀಡಿದೆ. ನಮ್ಮ ಇಂದಿನ ಆಚರಣೆಗಳಿಂದ ನಾಳಿನ ಬದುಕಿಗೆ ತೊಂದರೆಯಾಗಬಾರದು. ದಸರಾದಲ್ಲಿ ಡಿಜೆ ಬಳಕೆಗೆ ನಿರ್ಬಂಧ ಹೇರಿರುವುದು ಕೂಡ ಇದೇ ಉದ್ದೇಶದಿಂದಲೇ ಹೊರತು, ನಮ್ಮ ಸಂಸ್ಕೃತಿ , ಸಂಪ್ರದಾಯಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಸ್ಪಷ್ಟ ಪಡಿಸಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಕೊಡಗು (Kodagu News) ಪ್ರೆಸ್ ಕ್ಲಬ್ ವತಿಯಿಂದ ನಡೆದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದಸರಾದಲ್ಲಿ ನಿಗಧಿಗಿಂತ ಹೆಚ್ಚಿನ ಡೆಸಿಬಲ್ ಡಿಜೆ ಬಳಸದಂತೆ ನಿಯಮವೇ ಇದೆ. ಈ ಕಾನೂನನ್ನು ನಾವೂ ಗೌರವಿಸಬೇಕು. ಡಿಜೆಯಿಂದ ಯುವಕರಿಗೆ ಹೆಚ್ಚಿನ ತೊಂದರೆ ಇಲ್ಲ. ಆದರೆ ವಯೋವೃದ್ಧರು, ಮಂಟಪದ ರಕ್ಷಣೆಗೆ ಇರುವ ಪೊಲೀಸರು, ಸಣ್ಣ ಮಕ್ಕಳು, ಪ್ರಾಣಿ ಪಕ್ಷಿಗಳಿಗೆ, ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಹೆಚ್ಚಿನ ತೊಂದರೆಯಾಗುತ್ತದೆ. ದೇಶದ ಕಾನೂನಿನಂತೆ ಇಲ್ಲಿ ಪ್ರತಿಯೊಬ್ಬರಿಗೂ ಬದುಕುವ ಹಕ್ಕಿದೆ. ಆ ಸ್ವಾತಂತ್ರ್ಯಕ್ಕೆ ಯಾರೂ ತೊಂದರೆ ಮಾಡಬಾರದು ಎಂಬ ಉದ್ದೇಶಕ್ಕೆ ಕಾನೂನು ಜಾರಿ ಮಾಡಲಾಗಿದೆ.

ನಮ್ಮ ಹಿರಿಯ ತಲೆಮಾರಿನವರು ಹಿಂದೆ ಹದಿನಾಲ್ಕು, ಹದಿನಾರು ವಯಸ್ಸಿಗೆ ಮದುವೆಯಾಗುತ್ತಿದ್ದರು. ನಾವೂ ಸಂಪ್ರದಾಯದ ಹೆಸರಿನಲ್ಲಿ ಅದನ್ನು ಮುಂದುವರೆಸಿದ್ದೇವು. ಕ್ರಮೇಣ ಕಾನೂನು ಬದಲಾವಣೆಯಿಂದ ಈ ಪದ್ಧತಿಗೆ ಕಡಿವಾಣ ಹಾಕಲಾಗಿದ್ದು, ಇಂದು ಈ ಪದ್ಧತಿಯನ್ನು ಕೈ ಬಿಡಲಾಗಿದೆ. ಡಿಜೆ ನಿರ್ಬಂಧ ಹಿಂದಿನ ಉದ್ದೇಶವೂ ಇದೆ. ನಾವು ನಮ್ಮ ಹಿಂದಿನ ಸಂಸ್ಕೃತಿಯನ್ನು ನೆನಪಿಸಿಕೊಳ್ಳಬೇಕು. ಹಿರಿಯರು ಸಂಪ್ರದಾಯವನ್ನು ಬಿಡದೇ ಆಚರಿಸಿದ್ದಾರೆ. ಅವರು ಉಳಿಸಿ ಬೆಳೆಸಿರುವ ಸಂಪ್ರದಾಯವನ್ನು ಅದೇ ರೀತಿಯನ್ನೇ ಮುನ್ನಡೆಸಿಕೊಂಡು ಮುನ್ನಡೆಯಬೇಕಾದ ಜವಾಬ್ದಾರಿ ನಮ್ಮ ಮುಂದಿದೆ. ದಸರಾದಲ್ಲೂ ನಮ್ಮ ಸಂಪ್ರದಾಯಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದರು.

ಕಳೆದ ಬಾರಿ ಡೆಸಿಬಲ್‌ ಡಿಜೆ ಬಳಕೆ

ಇಂದು ಎಲ್ಲ ಕಡೆ ಪಬ್‌ಗಳಲ್ಲಿ ಡಿಜೆ, ಲೇಸರ್ ಲೈಟ್ ಕಾಣಸಿಗುತ್ತದೆ. ಆದರೆ ಕೊಡಗಿನ ಒಲಗ ಮೈಸೂರು ದಾಟಿದರೆ ಎಲ್ಲಿ ಇದೆ. ಇಂತಹ ವೈವಿಧ್ಯಮಯ ಸಂಸ್ಕೃತಿ ನಮ್ಮದಾಗಿರುವಾಗ ಬೇರೆ ಅನುಕರಣೆ ಯಾಕೆ ಬೇಕೆಂದು ಪ್ರಶ್ನಿಸಿದರು.
ಡಿಜೆ ಬಳಸುವಾಗ 55 – 75 ಡೆಸಿಬಲ್ ಒಳಗೆ ಮಾತ್ರ ಇರಬೇಕು. ಇದಕ್ಕಿಂತ ಜಾಸ್ತಿ ಮಾಡಬಾರದು. ಇದಕ್ಕಿಂತ ಹೆಚ್ಚಿನ ಡೆಸಿಬಲ್‌ ಬಳಸಿದ್ದಲ್ಲಿ ಶಬ್ದ ಮಾಲಿನ್ಯ ಎಂದು ವ್ಯಾಖ್ಯಾನಿಸಲಾಗುತ್ತದೆ. ಹೀಗಾಗಿ ಅದು ಹಾನಿಕಾರಕವಾಗಲಿದೆ. ಕಳೆದ ಬಾರಿ ದಸರಾದಲ್ಲಿ ನಿಗಧಿತ ಡೆಸಿಬಲ್‌ಗಿಂತ ಹೆಚ್ಚಿನ ಡೆಸಿಬಲ್‌ನಲ್ಲಿ ಡಿಜೆ ಬಳಸಲಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಶಬ್ದಮಾಲಿನ್ಯದ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ಹೊಂದಿದ್ದು, ಅವರು ಈ ಬಗ್ಗೆ ಕ್ರಮ ವಹಿಸುತ್ತಾರೆಂದು ಹೇಳಿದರು.

ದಸರಾ ಭದ್ರತೆಗೆ ಹೆಚ್ಚಿನ ಕ್ರಮ

ಈ ಬಾರಿ ದಶಮಂಟಪ ಸಮಿತಿಗಳು ಡಿಜೆ ಸಂಬಂಧದ ನಿಯಮ ಪಾಲಿಸುವ ಭರವಸೆ ಇದೆ. ಲೇಸರ್ ಬಳಕೆಯಿಂದ ತೊಂದರೆ ಆಗುತ್ತದೆ ಎಂಬ ಬಗ್ಗೆಯೂ ಸಮಿತಿಯವರೇ ಗಮನ ಹರಿಸಬೇಕು ಎಂದರು. ದಸರಾ ಭದ್ರತೆಗೆ ಈ ಬಾರಿ ಹೆಚ್ಚಿನ ಕ್ರಮ ವಹಿಸಲಾಗಿದೆ. ಸಾವಿರಕ್ಕೂ ಅಧಿಕ ಪೊಲೀಸರು, ಜಂಬೋ ಟೀಮ್ ದಸರಾ ಸಂದರ್ಭ ಹೆಚ್ಚಿನ ನಿಗಾ ವಹಿಸಲಿದೆ. ವಿಶೇಷವಾಗಿ ಹದಿನೈದು ಮಂದಿಯ, ಆರೇಳು ಜಂಬೋ ತಂಡವನ್ನು ತಯಾರಿ ಮಾಡಲಾಗಿದೆ.

ಗುಂಪಿನಲ್ಲಿ ಗಲಾಟೆ, ಮಹಿಳೆಯರಿಗೆ ಕಿರಿಕಿರಿ ಮಾಡುವುದನ್ನು ತಪ್ಪಿಸುವ ಕಾರ್ಯವನ್ನು ಈ ತಂಡ ಮಾಡಲಿದೆ. ಹಲವು ಪೊಲೀಸರು ದ್ವಿಚಕ್ರ ವಾಹನದಲ್ಲಿಯೂ ನಗರದಲ್ಲಿ ವೀಕ್ಷಣೆಯಲ್ಲಿರುತ್ತಾರೆ. ಟ್ರಾಫಿಕ್ ನಿಯಂತ್ರಣ, ಹೆಲ್ಪ್‌ಲೈನ್‌ ಬಗ್ಗೆಯೂ ಗಮನ ಹರಿಸಲಾಗಿದೆ. ಕಳೆದ ಬಾರಿಯ ಅನುಭವದೊಂದಿಗೆ ಯಾವುದೇ ಸಮಸ್ಯೆ ಉಂಟಾಗದಂತೆ ದಸರಾಗೆ ಬಂದೋಬಸ್ತ್‌ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ. ಕಳ್ಳರ ಮೇಲೆ ಹೆಚ್ಚಿನ ನಿಗಾ ವಹಿಸಲಾಗುತ್ತದೆ. ಇದಕ್ಕಾಗಿಯೇ ಹೆಚ್ಚು ಲೈಟ್ ಅಳವಡಿಕೆ, ಸಿಸಿ ಕ್ಯಾಮೆರಾ ಅಳವಡಿಕೆ ಮೇಲೂ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು. ಪ್ರತಿಯೊಂದು ಮಂಟಪಕ್ಕೂ 1 ಪೊಲೀಸ್‌ ಆಫೀಸರ್‌ ಸೇರಿದಂತೆ 8 ಮಂದಿ ಸಿಬ್ಬಂದಿ ಕಾವಲಿರುತ್ತಾರೆ ಎಂದು ಕೆ.ರಾಮರಾಜನ್ ಹೇಳಿದರು. ದಸರಾ ಸಂದರ್ಭ ಯಾವುದೇ ಅಂಗಡಿಯಲ್ಲಿಯೂ ಮುಖವಾಡ ಮಾರಾಟಕ್ಕೆ ಅವಕಾಶ ಇಲ್ಲ. ಮುಖವಾಡ ಮಾರಾಟ ಕಂಡು ಬಂದಲ್ಲಿ ನಗರಸಭೆ ವಶಕ್ಕೆ ಪಡೆಯುತ್ತದೆ ಹಾಗೂ ದಸರಾ ನಂತರ ಹಿಂತಿರುಗಿಸುವ ಕೆಲಸವಾಗುತ್ತದೆ ಎಂದು ಹೇಳಿದರು.

ಬಾಂಗ್ಲಾ ದೇಶಿಯರು ಇದ್ದ ಬಗ್ಗೆ ಸಂಶಯವಿದ್ದಲ್ಲಿ ಮಾಹಿತಿ ಕೊಡಿ

ಕೊಡಗಿನಲ್ಲಿ ಹೊರ ರಾಜ್ಯದ ಕಾರ್ಮಿಕರಿಗೆ ಹೆಚ್ಚಿನ ಬೇಡಿಕೆ ಇದೆ. ತೋಟಗಳ ನಿರ್ವಹಣೆಗೆ ಹೊರ ರಾಜ್ಯದ ಕಾರ್ಮಿಕರ ಅಗತ್ಯವೂ ಇದೆ. ದೇಶದಲ್ಲಿ ಯಾರೂ ಎಲ್ಲಿಗೆ‌ಬೇಕಾದರೂ ತೆರಳಿ ಉದ್ಯೋಗ ಮಾಡುವ ಅವಕಾಶವಿದೆ. ಆದರಿಂದ ಅವರನ್ನು ಬರಬಾರದು ಎನ್ನಲು ಸಾಧ್ಯವಿಲ್ಲ ಅಥವಾ ಅವರ ಮೇಲೆ ಹೆಚ್ಚಿನ ನಿಯಂತ್ರಣ ಮಾಡಲು ಸಾಧ್ಯವಿಲ್ಲ. ಇದರಿಂದ ನೈಜ ಕಾರ್ಮಿಕರಿಗೆ ಇರುಸು ಮುರುಸು ಉಂಟಾಗುತ್ತದೆ. ಹಾಗಾಗೀ ಕಾರ್ಮಿಕರನ್ನು ನೇಮಿಸುವ ಮುನ್ನ ತೋಟದ ಮಾಲೀಕರೇ ಎಚ್ಚರ ವಹಿಸಬೇಕು. ಅವರಿಂದ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ಹಾಗೇಂದು ಬಂಗ್ಲಾದೇಶದಿಂದ ಬಂದರೆ ಅವರಿಗೆ ಇಲ್ಲಿರಲು ಅವಕಾಶ ಇಲ್ಲ. ಬಾಂಗ್ಲಾ ದೇಶಿಯರು ಇದ್ದ ಬಗ್ಗೆ ಸಂಶಯವಿದ್ದಲ್ಲಿ ನಮಗೆ ಮಾಹಿತಿ ಕೊಡಿ. ನಾವೂ ಪರಿಶೀಲನೆ ನಡೆಸುತ್ತೇವೆ ಎಂದು ಕೆ.ರಾಮರಾಜನ್ ಹೇಳಿದರು.

Continue Reading

ಮೈಸೂರು

Mysuru Dasara 2024: ವೈಭವದ ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟಿಸಿದ ಹಿರಿಯ ಸಾಹಿತಿ ಡಾ. ಹಂಪ ನಾಗರಾಜಯ್ಯ

Mysuru Dasara 2024: ನಾಡ ಅಧಿದೇವತೆ ಚಾಮುಂಡೇಶ್ವರಿ ತಾಯಿಗೆ ಪೂಜೆ ಸಲ್ಲಿಸುವ ಮೂಲಕ ದಸರಾ ಮಹೋತ್ಸವವನ್ನು ಉದ್ಘಾಟಿಸಲಾಗಿದೆ. ಉದ್ಘಾಟನೆಯ ಸುಂದರ ಘಳಿಗೆಯ ಚಿತ್ರಣ ಇಲ್ಲಿದೆ

VISTARANEWS.COM


on

By

Mysuru Dasara 2024
Koo

ಮೈಸೂರು: ವಿಶ್ವವಿಖ್ಯಾತ 417ನೇ ಮೈಸೂರು ದಸರಾ (Mysore Dasara 2024) ಮಹೋತ್ಸವ ಅದ್ಧೂರಿಯಾಗಿ ಉದ್ಘಾಟನೆಗೊಂಡಿದೆ. ನಾಡಿನ ದೇವತೆ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ವಿಧ್ಯುಕ್ತ ಚಾಲನೆ ನೀಡಲಾಗಿದೆ.

Mysuru Dasara 2024

ಗುರುವಾರ ಬೆಳಗ್ಗೆ 9:15 ರಿಂದ 9:40 ರೊಳಗಿನ ಶುಭ ವೃಶ್ಚಿಕ ಲಗ್ನದಲ್ಲಿ ಹಿರಿಯ ಸಾಹಿತಿ ಡಾ. ಹಂಪ ನಾಗರಾಜಯ್ಯ ಅವರಿಂದ ದಸರಾ ಮಹೋತ್ಸವ ಉದ್ಘಾಟನೆಗೊಂಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ ಹೆಚ್ ಸಿ ಮಹದೇವಪ್ಪ, ಚಾಮುಂಡೇಶ್ವರಿ ದೇಗುಲದ ಪ್ರಧಾನ ಅರ್ಚಕ ಡಾ.ಶಶಿಶೇಖರ್ ದೀಕ್ಷಿತ್ ಸೇರಿದಂತೆ ಹಲವು ಸಚಿವರು, ಶಾಸಕರು ದಸರಾ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ.

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಚಾಲನೆ

ಇಂದು ಇಡೀ ದಿನ ಕಾರ್ಯಕ್ರಮಗಳು

-ಗುರುವಾರ ಬೆಳಗ್ಗೆ 9.15 ರಿಂದ 9.45ನಡುವೆ ವೃಶ್ಚಿಕ ಲಗ್ನದಲ್ಲಿ ದಸರಾ ಉದ್ಘಾಟನೆ
-ನಾಡದೇವತೆ ತಾಯಿ ಚಾಮುಂಡೇಶ್ವರಿ ಸನ್ನಿಧಿ ಚಾಮುಂಡಿ ಬೆಟ್ಟದಲ್ಲಿ ಕಾರ್ಯಕ್ರಮ.
-ಬೆಳಗ್ಗೆ 11.30ಕ್ಕೆ ಕರ್ನಾಟಕ ಮುಕ್ತ ವಿವಿ ಘಟಿಕೋತ್ಸವ ಭವನದಲ್ಲಿ ಚಲನಚಿತ್ರೋತ್ಸವ ಉದ್ಘಾಟನೆ.
-ಮಧ್ಯಾಹ್ನ 12.30ಕ್ಕೆ ಕುಪ್ಪಣ್ಣ ಪಾರ್ಕ್ ನಲ್ಲಿ ಫಲಪುಷ್ಪ ಪ್ರದರ್ಶನ ಉದ್ಘಾಟನೆ.
-ಸಂಜೆ 4ಕ್ಕೆ ದಸರಾ ಕುಸ್ತಿ ಪಂದ್ಯಾವಳಿ ಉದ್ಘಾಟನೆ.
-ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣ.
-ಸಂಜೆ 4.30ಕ್ಕೆ ರಾಜ್ಯ ದಸರಾ ಸಿಎಂ ಕಪ್ ಕ್ರೀಡಾಕೂಟ ಉದ್ಘಾಟನೆ.
-ಚಾಮುಂಡಿ ವಿಹಾರ ಕ್ರೀಡಾಂಗಣ.
-ರಾತ್ರಿ 6ಕ್ಕೆ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ.
-ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ, ಅರಮನೆ ಆವರಣ.
-ರಾತ್ರಿ 7.30 ದಸರಾ ವಸ್ತು ಪ್ರದರ್ಶನ ಉದ್ಘಾಟನೆ.

Mysuru Dasara 2024
ದಸರಾ ಮಹೋತ್ಸವದಲ್ಲಿ ಸಿಎಂ ಸಿದ್ದರಾಮಯ್ಯ
Mysuru Dasara 2024

ವಿಶ್ವವಿಖ್ಯಾತ ದಸರಾ ಮಹೋತ್ಸವ

Mysuru Dasara 2024

ವಿಶ್ವವಿಖ್ಯಾತ ದಸರಾ ಮಹೋತ್ಸವ

ವಿಶ್ವವಿಖ್ಯಾತ ದಸರಾ ಮಹೋತ್ಸವ

ವಿಶ್ವವಿಖ್ಯಾತ ದಸರಾ ಮಹೋತ್ಸವ

Continue Reading

ಬೆಂಗಳೂರು

Gali Anjaneya Temple : ಗಾಳಿ ಆಂಜನೇಯ ದೇಗುಲದಲ್ಲಿ ಹಣ ಲಪಟಾಯಿಸಲು ಹತ್ತಾರು ತಂತ್ರ; ಟ್ರಸ್ಟಿಗಳು, ಅರ್ಚಕರಿಂದಲೇ ದೇವರ ಹಣಕ್ಕೆ‌ ಕನ್ನ!

Gali Anjaneya Temple : ಗಾಳಿ ಆಂಜನೇಯ ದೇಗುಲದಲ್ಲಿ ಹಣ ಲಪಟಾಯಿಸಲು ಟ್ರಸ್ಟಿಗಳು, ಅರ್ಚಕರೇ ಹತ್ತಾರು ತಂತ್ರ ಮಾಡಿ ದೇವರ ಹಣಕ್ಕೆ‌ ಕನ್ನ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

VISTARANEWS.COM


on

By

Gali Anjaneya Temple
Koo

ಬೆಂಗಳೂರು: ಬೆಂಗಳೂರಿನ ಪ್ರಸಿದ್ಧ ದೇಗುಲದಲ್ಲಿ ಮತ್ತೊಂದು ಅವ್ಯವಹಾರ ಬೆಳಕಿಗೆ ಬಂದಿದೆ. ಗಾಳಿ ಆಂಜನೇಯ ದೇಗುಲದಲ್ಲಿ (Gali Anjaneya Temple) ಹಣ ಲಪಟಾಯಿಸಲು ಹತ್ತಾರು ತಂತ್ರ ಮಾಡಿರುವ ಆರೋಪ ಕೇಳಿ ಬಂದಿದೆ. ದೇಗುಲದ ಟ್ರಸ್ಟಿಗಳು, ಅರ್ಚಕರಿಂದ ದೇಗುಲದ ಹಣಕ್ಕೆ‌ ಕನ್ನ ಹಾಕಲಾಗಿದೆ. ಈ ಹಿಂದೆ ಹುಂಡಿ ಎಣಿಕೆ ವೇಳೆ ಹಣ ಕಳ್ಳತನ ವಿಚಾರ ಬಯಲಾಗಿತ್ತು. ಈಗ ದೇವಸ್ಥಾನದ ಮತ್ತೊಂದು ಅನಾಚಾರ ಬೆಳಕಿಗೆ ಬಂದಿದೆ.

ಹುಂಡಿ‌ ಹಣ ಕದಿಯುವುದಲ್ಲದೇ ಟೆಕ್ನಾಲಜಿ ಬಳಸಿ ಭಕ್ತರ ಕಾಣಿಕೆಗಳಿಗೂ ಕನ್ನ ಹಾಕುತ್ತಿದ್ದಾರೆ. QR ಕೋಡ್ ಮೂಲಕ ದೇಗುಲಕ್ಕೆ ಸೇರಬೇಕಿದ್ದ ಹಣ ಪೂಜಾರಿ ಖಾತೆಗೆ ಸೇರುತ್ತಿದೆ. ದೇಗುಲದಲ್ಲಿ ಇಟ್ಟಿರೋ QR ಕೋಡ್ ಬ್ಯಾಂಕ್ ಖಾತೆ ಅರ್ಚಕ ಶ್ರೀನಿವಾಸ್ ವೈಯಕ್ತಿಕ ಖಾತೆಗೆ ಲಿಂಕ್ ಮಾಡಲಾಗಿದೆ. ಇದರಿಂದ ಸೇವೆಗಳ ಶುಲ್ಕ, ಕಾಣಿಕೆ ರೂಪದ ಹಣ ನೇರವಾಗಿ ಪೂಜಾರಿ ಖಾತೆಗೆ ಹೋಗುತ್ತಿದೆ. ದೇಗುಲದ ಬ್ಯಾಂಕ್ ಖಾತೆ ಬದಲಿಗೆ ಅರ್ಚಕ ಶ್ರೀನಿವಾಸ ರಾಮಾನುಜ ಭಟ್ಟಾಚಾರ್ಯ ಖಾತೆಗೆ ಹಣ ಸೇರುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ದೇಗುಲದ ಭಕ್ತರಾದ ಮೋಹನ್ ಪಿ.ವಿ ಈ ಬಗ್ಗೆ ಬ್ಯಾಟರಾಯನಪುರ ಠಾಣೆಗೆ ದೂರು‌ ನೀಡಿದ್ದಾರೆ. ಅಷ್ಟಲ್ಲದೇ ಟ್ರಸ್ಟಿಗಳು, ಪೂಜಾರಿಗಳಿಂದ ದೇಗುಲದ ಟ್ರಸ್ಟ್ ಆಸ್ತಿ ದುರುಪಯೋಗವಾಗುತ್ತಿದೆ. ದೇಗುಲದ ಚಿನ್ನಾಭರಣ, ಬೆಳ್ಳಿ ಆಭರಣಗಳು, ಹುಂಡಿ ಹಣಕೆ ದುರ್ಬಳಕೆ ಮಾಡಿಕೊಳ್ತಿದ್ದಾರೆ. ಹೀಗಾಗಿ ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ದೂರು ನೀಡಿದ್ದಾರೆ.

ಒಟ್ಟು 8 ಮಂದಿ ವಿರುದ್ಧ ಮೋಹನ್ ಪಿ. ವಿ ದೂರು ನೀಡಿದ್ದಾರೆ. ದೂರು ಆಧರಿಸಿ ಟ್ರಸ್ಟಿಗಳಾದ ಡಿ.ಎಂ.ಹನುಮಂತಪ್ಪ, ಬಿ.ಪಿ.ನಾಗರಾಜ್ @ ಅಶೋಕ್, ಬಿ.ವಿ.ಶ್ರೀನಿವಾಸ ರಾಮಾನುಜ ಭಟ್ಟಾಚಾರ್ಯ, ಎ.ಎಚ್.ಗೋಪಿನಾಥ್, ಅರ್ಚಕರಾದ ಬಿ.ಕೆ.ರಾಮನುಜ ಭಟ್ಟಾಚಾರ್ಯ, ಸುರೇಶ್, ರಾಘವೇಂದ್ರ, ಮಲ್ಲಿಕಾರ್ಜುನ್ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ದೂರಿನ ಸಂಬಂಧ ದೂರುದಾರ ಅಗತ್ಯ ಮಾಹಿತಿ ಒದಗಿಸಲು ಸಿದ್ದ ಎಂದಿದ್ದಾರೆ. 2 ತಿಂಗಳ ಹಿಂದೆ ಹಣ ಕಳ್ಳತ‌ನ‌ ಸಂಬಂಧ ಎಫ್‌ಐಆರ್‌ ದಾಖಲಾಗಿತ್ತು. ಈಗ ಹಣ ದುರುಪಯೋಗ ಸಂಬಂಧ ಮತ್ತೊಂದು ದೂರು ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
karnataka Weather Forecast
ಮಳೆ4 ಗಂಟೆಗಳು ago

Karnataka Weather : ರಾಜ್ಯದಲ್ಲಿ ಮುಂದುವರಿಯಲಿದೆ ಮಳೆಯಾಟ; ಗುಡುಗು, ಮಿಂಚು ಸಾಥ್‌

Dina Bhavishya
ಭವಿಷ್ಯ4 ಗಂಟೆಗಳು ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

navaratri
ಬೆಂಗಳೂರು15 ಗಂಟೆಗಳು ago

Navaratri : ನವರಾತ್ರಿ ಸಂಭ್ರಮದಲ್ಲಿ ಗೊಂಬೆಗಳಂತೆ ಮಿಂಚಿದ ಹೆಂಗಳೆಯರು

Mysuru News
ಮೈಸೂರು16 ಗಂಟೆಗಳು ago

Mysuru News : ಪರ್ಯಾವರಣ ಸಂರಕ್ಷಣ ಗತಿವಿಧಿಯಿಂದ ತ್ಯಾಜ್ಯ ಸಂಗ್ರಹಣ ಅಭಿಯಾನಕ್ಕೆ ಚಾಲನೆ

Kodagu News
ಕೊಡಗು16 ಗಂಟೆಗಳು ago

Kodagu News : ದಸರಾದಲ್ಲಿ ಡಿಜೆ ಬಳಕೆಗೆ ನಿರ್ಬಂಧ; ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್

Actor Darshan Renukaswamy murder case
ಬೆಂಗಳೂರು16 ಗಂಟೆಗಳು ago

Actor Darshan : ತನಿಖಾಧಿಕಾರಿಗಳ ವಿರುದ್ಧ ಬ್ಯಾಟಿಂಗ್‌ ಮಾಡಿದ ದರ್ಶನ್‌ ಪರ ವಕೀಲ; ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

Bomb threat to BMS, MS Ramayya and four other colleges in Basavanagudi Bengaluru
ಬೆಂಗಳೂರು17 ಗಂಟೆಗಳು ago

Bomb Threat : ಬೆಂಗಳೂರಿನ ಬಸವನಗುಡಿಯ ಬಿಎಂಎಸ್‌ ಸೇರಿ ನಾಲ್ಕು ಕಾಲೇಜುಗಳಿಗೆ ಬಾಂಬ್‌ ಬೆದರಿಕೆ

Medical Seat
ಬೆಂಗಳೂರು18 ಗಂಟೆಗಳು ago

Medical Seat : ಬೆಂಗಳೂರಿನಲ್ಲಿ ಮೆಡಿಕಲ್ ಸೀಟ್ ಕೊಡಿಸುವುದಾಗಿ ಉದ್ಯಮಿಗೆ 1.5 ಕೋಟಿ ರೂ. ವಂಚನೆ

Murder case
ಚಿತ್ರದುರ್ಗ19 ಗಂಟೆಗಳು ago

Murder Case : ಪ್ರಿಯಕರನಿಗಾಗಿ ಪತಿಗೆ ಚಟ್ಟ ಕಟ್ಟಿದ್ದಳು ಪಾಪಿ ಪತ್ನಿ; ಹೊಟ್ಟೆ ಉರಿಯಿಂದ ಸತ್ತ ಎಂದವಳು ಈಗ ಜೈಲುಪಾಲು

Namma metro ticket prices will be hiked soon
ಬೆಂಗಳೂರು20 ಗಂಟೆಗಳು ago

Namma Metro : ಸಿಟಿ ಮಂದಿಗೆ ಮತ್ತೊಂದು ಶಾಕ್‌; ಶೀಘ್ರದಲ್ಲೆ ನಮ್ಮ ಮೆಟ್ರೋ ಟಿಕೆಟ್‌ ದರ ಏರಿಕೆಯ ಬರೆ!

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

galipata neetu
ಕಿರುತೆರೆ10 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Sharmitha Gowda in bikini
ಕಿರುತೆರೆ12 ತಿಂಗಳುಗಳು ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ12 ತಿಂಗಳುಗಳು ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ11 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ10 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ11 ತಿಂಗಳುಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 ದಿನಗಳು ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್1 ತಿಂಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್1 ತಿಂಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ1 ತಿಂಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌