Prerane | ಫಲ ಮೂಲಾಶನಾಃ ದಾನ್ತಾಃ ಎಂಬ ಋಷಿ ವಾಕ್ಯದ ಅಂತರಾರ್ಥ - Vistara News

ಧಾರ್ಮಿಕ

Prerane | ಫಲ ಮೂಲಾಶನಾಃ ದಾನ್ತಾಃ ಎಂಬ ಋಷಿ ವಾಕ್ಯದ ಅಂತರಾರ್ಥ

“ಪ್ರೇರಣೆʼʼ (Prerane) ಇದು ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತನೆಗಳನ್ನು ಬಿತ್ತುವ ಬೆಳಗಿನ ಹೊಳಹು. ಪ್ರತಿ ನಿತ್ಯ ಧಾರ್ಮಿಕ ಚಿಂತಕರು, ಪ್ರವಚನಕಾರರು, ಆಧ್ಯಾತ್ಮಚಿಂತಕರು ಇಲ್ಲಿ ಬರೆಯುತ್ತಿದ್ದಾರೆ. ಇಂದು ಋಷಿ ವಾಕ್ಯವೊಂದರ ಅರ್ಥಪೂರ್ಣ ವಿಶ್ಲೇಷಣೆ ಇಲ್ಲಿದೆ.

VISTARANEWS.COM


on

prerane hindu sages
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸುಬ್ರಹ್ಮಣ್ಯ ಸೋಮಯಾಜಿ
ಪ್ರಾಚೀನ ಭಾರತದ ಋಷಿಗಳ ಬಗ್ಗೆ ಉಲ್ಲೇಖಿಸುವಾಗ, “ಫಲ ಮೂಲಾಶನಾಃ ದಾನ್ತಾಃ” ಎಂಬ ಮಾತಿದೆ. ಆ ಇಂದ್ರಿಯ ಸಂಯಮಿಗಳು ಕಾಡಿನಲ್ಲಿ ಸಿಗುವ ಹಣ್ಣು ಮತ್ತು ಗಡ್ಡೆ ಗಳನ್ನು ಆಹಾರವಾಗಿ ಬಳಸುತ್ತಿದ್ದರು ಎಂಬುದು ಮಾತಿನ ಸಾಮಾನ್ಯ ವ್ಯಾಖ್ಯಾನ.

ಆದರೆ ಋಷಿಗಳ ಮಾತನ್ನು ನಾವು ಸ್ಥೂಲ ಬುದ್ಧಿಯಿಂದ ವ್ಯಾಖ್ಯಾನ ಮಾಡುತ್ತೇವೆ. ಕಾರಣ ನಾವು ಅವರಂತೆ ಸ್ಥೂಲ, ಸೂಕ್ಷ್ಮ, ಪರಾ ಎಂಬ ಜೀವನದ ಮೂರೂ ಕ್ಷೇತ್ರಗಳನ್ನು ಮುಟ್ಟಿದವರಾಗಿಲ್ಲ. ಅವರ ಮಾತಿಗೆ ವ್ಯಾಖ್ಯಾನ ಮಾಡಲು ಅವರಂತೆಯೇ ಯೋಗದೃಷ್ಟಿ ಇರುವವರಿಗೆ ಮಾತ್ರ ಸಾಧ್ಯ. ಅಂತಹವರ ಮಾತೇ ನಿಜಕ್ಕೂ ಪ್ರಮಾಣವಾಗುತ್ತವೆ. ಮಹಾ ಯೋಗಿಗಳಾದ ಶ್ರೀರಂಗ ಮಹಾಗುರುಗಳ ವ್ಯಾಖ್ಯಾನವು ಹೀಗಿತ್ತು; “ಋಷಿಗಳು ಸೃಷ್ಟಿಯ ಮೂಲ ಮತ್ತು ಸೃಷ್ಟಿಯ ಫಲ ಇವೆರಡನ್ನೇ ಆಹಾರವಾಗಿಟ್ಟುಕೊಂಡು ಜೀವಿಸುತ್ತಿದ್ದರು”. ಎಂತಹ ಅದ್ಭುತವಾದ ವ್ಯಾಖ್ಯಾನ!

ಯಾವ ಚೈತನ್ಯದ ಮೂಲದಿಂದ ಸೃಷ್ಟಿ ಆರಂಭವಾಯಿತೋ ಅದರೆಡೆಗೆ ಅವರ ಲಕ್ಷ್ಯವಿತ್ತು, ಹಾಗೆಯೇ ಆ ಚೈತನ್ಯದ ವಿಕಾಸದ ಫಲ ಮತ್ತೆ ಆ ಚೈತನ್ಯದಲ್ಲೇ ಒಂದಾಗುವ ಮೋಕ್ಷ. ಇವೆರಡನ್ನೂ ಅರೆನಿಮಿಷವೂ ಮರೆಯದೇ ಅವರು ಜೀವನ ನಡೆಸುತ್ತಿದ್ದರಿಂದ ಅದು ಅವರ ಆಹಾರ. ಅವರ ಜೀವನದ ನಡೆ ಎಲ್ಲವೂ ಸೃಷ್ಟಿಯ ಈ ಸಹಜವಾದ ವೃತ್ತಕ್ಕೆ ಅನುಗುಣವಾಗಿಯೇ ಇರುತ್ತಿತ್ತು. ಒಂದು ವೃತ್ತದ ಅಂತ ವೃತ್ತಾಂತ- ಅದು ಹೊರಟ ಜಾಗಕ್ಕೆ ಮತ್ತೆ ಬಂದು ಸೇರಿದಾಗಲೇ ಆಗುವುದು. ಒಂದು ಬೀಜವು ಬೆಳೆಯುತ್ತಾ, ಕಾಂಡವಾಯಿತು, ಕೊಂಬೆ, ಎಲೆಗಳಾದವು, ಕಾಯಿ, ಹಣ್ಣಾಗಿ ಮತ್ತೆ ಬೀಜದಲ್ಲಿ ನಿಂತಾಗಲೇ ಅದರ ವೃತ್ತದ ಅಂತವಾಗುವುದು.

ಹಾಗೆಯೇ ಭಗವಂತ ಎಂಬ ಮಹಾಶಕ್ತಿಯಿಂದ ಹೊರಟು ತನ್ನ ವಿಕಾಸದ ಹಾದಿಯಲ್ಲೆಲ್ಲೂ ಅದನ್ನು ಮರೆಯದೇ ಕಡೆಯಲ್ಲಿ ಆ ಶಕ್ತಿಯಲ್ಲೇ ಒಂದಾಗಿ ಸೇರುವುದು ಮಾನವ ಜೀವನದ ಸಹಜವಾದ ವೃತ್ತಾಂತ ಎಂಬುದನ್ನು ತಮ್ಮ ತಪಸ್ಯೆಯಿಂದ ಈ ದೇಶದ ಮಹರ್ಷಿಗಳು ಕಂಡುಕೊಂಡ ಪರಮ ಸತ್ಯ. ಅಂತಹ ಜೀವನ ವೃಕ್ಷದ ಕೃಷಿ ಅದರ ಮೂಲ ಮತ್ತು ಫಲದ ಅರಿವಿಲ್ಲದೇ ಮಾಡುವುದಾದರೂ ಹೇಗೆ? ಅಂತಹ ತುಂಬು ಜೀವನವನ್ನು ನಡೆಸಿ ಅದಕ್ಕೆ ಬೇಕಾದ ಕೃಷಿ ವಿಧಾನವನ್ನು ತಮ್ಮ ತಪಸ್ಯೆಯಿಂದ ಕಂಡುಕೊಂಡು ಅದನ್ನು ಲೋಕಕ್ಕೆಲ್ಲಾ ಸಾರಿದ ಮಹಾಪುರುಷರ ನಾಡು ನಮ್ಮೀ ಭಾರತ ಭೂಮಿ.

ನಾವು ನಮ್ಮ ಎಲ್ಲ ಇಂದ್ರಿಯಗಳಿಂದ ಏನೇನನ್ನು ಒಳಗೆ ತೆಗೆದುಕೊಳ್ಳುತ್ತೆವೋ ಅದೆಲ್ಲವೂ ಒಂದು ದೃಷ್ಟಿಯಿಂದ ಆಹಾರವೇ ಆಗಿದೆ. ಬರಿಯ ಹೊಟ್ಟೆ ತುಂಬಿಸುವುದಷ್ಟೇ ಆದರೆ ಉಳಿದ ಪ್ರಾಣಿಗಳಿಗೂ ನಮಗೂ ಯಾವ ವ್ಯತ್ಯಾಸವೂ ಇಲ್ಲ. ನಮ್ಮ ಕಣ್ಣಿಂದ ನೋಡುವ ರೂಪ, ಕಿವಿಯಿಂದ ಕೇಳುವ ಶಬ್ದ, ಬಾಯಿಂದ ತೆಗೆದುಕೊಳ್ಳುವ ಅನ್ನ ಎಲ್ಲವೂ ಆಹಾರವೇ. ಅವೆಲ್ಲವೂ ನಮ್ಮ ಮನಸ್ಸನ್ನೂ ಬೆಳೆಸುತ್ತವೆ ಎಂಬುದನ್ನು ಮರೆಯಬಾರದು. ಮನಸ್ಸಿಗೆ ತನ್ನ ಜೀವನದ ಸಹಜವಾದ ಧ್ಯೇಯವಾದ ನೆಮ್ಮದಿ, ಆನಂದವನ್ನು ಅನುಭವಿಸುವುದಕ್ಕೆ ವ್ಯತಿರಿಕ್ತವಾದ ಆಹಾರವೆಲ್ಲವೂ ತ್ಯಾಜ್ಯ. ಮನಸ್ಸು ಜೀವನದ ಸದ್ವೃತ್ತವನ್ನು ಮರೆಯದೇ ಆ ದಿಕ್ಕಿನಲ್ಲಿ ಹೋಗುವಂತಾದರೆ ಅದಕ್ಕೆ ಸಹಕಾರಿಯಾದ ಆಹಾರವೆಲ್ಲವೂ ಪೂಜ್ಯ. ಇದು ಭಾರತೀಯ ಮಹರ್ಷಿಗಳ ನೋಟ.

ಇಂತಹ ಜೀವನ ದರ್ಶನವನ್ನು ಲೋಕಕ್ಕೆ ಕೊಟ್ಟ ಮಹರ್ಷಿಗಳ ಬಗ್ಗೆ ಬಂದ ಮಾತು “ಫಲಮೂಲಾಶನಾಃ ದಾನ್ತಾಃ” ಈ ಮಾತಿನ ಹಿಂದಿನ ಸತ್ಯಾರ್ಥದ ಶ್ರೀರಂಗಮಹಾಗುರುಗಳ ವ್ಯಾಖ್ಯಾನ ಎಷ್ಟು ಅರ್ಥಪೂರ್ಣವಲ್ಲವೇ?.

ಲೇಖಕರು ಆಧ್ಯಾತ್ಮ ಚಿಂತಕರು ಮತ್ತು ಪ್ರವಚನಕಾರರು
ಅಷ್ಟಾಂಗಯೋಗ ವಿಜ್ಞಾನಮಂದಿರಂ

ಇದನ್ನೂ ಓದಿ | Prerane | ಆಧುನಿಕ ಕ್ಷೇತ್ರಗಳಲ್ಲಿ ಯೋಗಸೂತ್ರದ ಪಾಲನೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Puri Jagannath Temple: ಪುರಿ ಜಗನ್ನಾಥ ದೇವಾಲಯದ 10 ಅದ್ಭುತ ಸಂಗತಿಗಳಿವು!

Puri Jagannath Temple: ಒಡಿಶಾದ ಪುರಿಯಲ್ಲಿರುವ ಜಗನ್ನಾಥ ದೇವಾಲಯವು ಭಾರತದ ಅತ್ಯಂತ ಪೂಜ್ಯನೀಯ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯದಲ್ಲಿ ಹಲವು ರಹಸ್ಯಗಳು ಮತ್ತು ಪವಾಡಗಳು ನಡೆಯುತ್ತದೆ. ಆದರೆ ಇದಕ್ಕೆ ಯಾವುದೇ ವೈಜ್ಞಾನಿಕ ಕಾರಣವಿಲ್ಲ. ಇತಿಹಾಸಕಾರರು, ವಿಜ್ಞಾನಿಗಳು, ಪುರೋಹಿತರು ಮತ್ತು ಸಾಮಾನ್ಯ ಜನರು ಈ ರಹಸ್ಯಗಳನ್ನು ಪರಿಹರಿಸಲು ಅನೇಕ ವರ್ಷಗಳಿಂದ ಶ್ರಮಿಸುತ್ತಿದ್ದಾರೆ ಆದರೆ ಇದು ಇಲ್ಲಿಯವರೆಗೆ ನಿಗೂಢವಾಗಿಯೇ ಉಳಿದಿದೆ. ಆ ರಹಸ್ಯಗಳು ಯಾವುವು ಎಂಬುದರ ಮಾಹಿತಿ ಇಲ್ಲಿದೆ.

VISTARANEWS.COM


on

Puri Jagannath Temple
Koo

ಪುರಿ ಜಗನ್ನಾಥ ದೇವಾಲಯವು (Puri Jagannath Temple) ಭಾರತದ ಅತ್ಯಂತ ಪೂಜ್ಯನೀಯ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು ಒಡಿಶಾದ ಪುರಿಯಲ್ಲಿದೆ. ಪ್ರತಿವರ್ಷ ಲಕ್ಷಾಂತರ ಭಕ್ತರು ಜಗನ್ನಾಥ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಜಗನ್ನಾಥ ದೇವಾಲಯದಲ್ಲಿ ಭಗವಾನ್ ಕೃಷ್ಣನನ್ನು ಭಗವಾನ್ ಜಗನ್ನಾಥನ ರೂಪದಲ್ಲಿ ಪೂಜಿಸಲಾಗುತ್ತದೆ. ಇಲ್ಲಿ ಕೃಷ್ಣನು ಜಗನ್ನಾಥನ ರೂಪದಲ್ಲಿ ಸಹೋದರ ಬಲರಾಮನ ರೂಪವಾದ ಭಗವಾನ್ ಬಲಭದ್ರ ಮತ್ತು ತಂಗಿ ದೇವಿ ಸುಭದ್ರಾ ಅವರೊಂದಿಗೆ ಈ ದೇವಾಲಯದಲ್ಲಿ ನೆಲೆಸಿದ್ದಾನೆ.

ಈ ದೇವಾಲಯದಲ್ಲಿ ಹಲವು ರಹಸ್ಯಗಳು ಮತ್ತು ಪವಾಡಗಳು ನಡೆಯುತ್ತದೆ. ಆದರೆ ಇದಕ್ಕೆ ಯಾವುದೇ ವೈಜ್ಞಾನಿಕ ಕಾರಣವಿಲ್ಲ. ಇತಿಹಾಸಕಾರರು, ವಿಜ್ಞಾನಿಗಳು, ಪುರೋಹಿತರು ಮತ್ತು ಸಾಮಾನ್ಯ ಜನರು ಈ ರಹಸ್ಯಗಳನ್ನು ಪರಿಹರಿಸಲು ಅನೇಕ ವರ್ಷಗಳಿಂದ ಶ್ರಮಿಸುತ್ತಿದ್ದಾರೆ ಆದರೆ ಇದು ಇಲ್ಲಿಯವರೆಗೆ ರಹಸ್ಯವಾಗಿ ಉಳಿದಿದೆ. ಆ ರಹಸ್ಯಗಳು ಯಾವುವು ಎಂದು ತಿಳಿಯೋಣ :-

Puri Jagannath Temple

ಧ್ವಜದ ದಿಕ್ಕು:

ಜಗನ್ನಾಥ ದೇವಾಲಯದ ಮೇಲ್ಭಾಗದಲ್ಲಿರುವ ಧ್ವಜವು ಗಾಳಿ ಬೀಸುವ ದಿಕ್ಕಿಗೆ ವಿರುದ್ಧ ದಿಕ್ಕಿನಲ್ಲಿ ಹಾರಾಡುತ್ತದೆ. 1800 ವರ್ಷಗಳ ಹಿಂದೆ, ಅರ್ಚಕರು ಸಂಪ್ರದಾಯದ ಪ್ರಕಾರ ಧ್ವಜವನ್ನು ಬದಲಾಯಿಸುವ ಸಲುವಾಗಿ ಪ್ರತಿದಿನ ಜಗನ್ನಾಥ ದೇವಾಲಯದ ಶಿಖರದ ಮೇಲೆ ಏರುತ್ತಾರೆ. ಈ ಆಚರಣೆಯನ್ನು ಒಂದು ದಿನದ ಮಟ್ಟಿಗೆ ತಪ್ಪಿಸಿದರೆ ದೇವಾಲಯವು 18 ವರ್ಷಗಳ ಕಾಲ ಮುಚ್ಚಲ್ಪಡುತ್ತದೆ ಎಂದು ಹೇಳಲಾಗುತ್ತದೆ. ಈ ದೇವಾಲಯವು ತುಂಬಾ ಎತ್ತರವಾಗಿದೆ. ದೇವಾಲಯದ ಮೇಲೆ ಏರಲು ಯಾವುದೇ ಉಪಕರಣವನ್ನು ಬಳಸುವುದಿಲ್ಲ ಇದನ್ನು ಬರಿಗೈಯಿಂದ ನಿರ್ವಹಿಸಲಾಗುತ್ತದೆ.

ಮರದ ವಿಗ್ರಹಗಳು;

ಇಲ್ಲಿ ದೇವರ ವಿಗ್ರಹಗಳನ್ನು ಪವಿತ್ರವಾದ ಬೇವಿನ ಮರದಿಂದ ತಯಾರಿಸಲಾಗುತ್ತದೆ ಮತ್ತು ನಬಕಲೆಬರಾ ಎಂಬ ಜಗನ್ನಾಥನ ವಿಶೇಷ ಹಬ್ಬದ ಸಮಯದಲ್ಲಿ ವಿಗ್ರಹಗಳನ್ನು ಬದಲಾಯಿಸಿ ಹೊಸ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುತ್ತದೆ. ಈ ಆಚರಣೆಯನ್ನು ಪ್ರತಿ 8, 12, ಅಥವಾ 19 ವರ್ಷಗಳಿಗೊಮ್ಮೆ ಮಾಡಲಾಗುತ್ತದೆ. ಈ ವಿಗ್ರಹ ಮಾಡಲು ಕಟ್ಟುನಿಟ್ಟಾದ ಕ್ರಮಗಳನ್ನು ಹೊಂದಿದ್ದು, ಇದಕ್ಕಾಗಿ ಪವಿತ್ರ ಬೇವಿನ ಮರಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ದ ಬಡಗಿಗಳು 21 ದಿನಗಳ ಅವಧಿಯಲ್ಲಿ ಕೆತ್ತನೆಯನ್ನು ರಹಸ್ಯವಾಗಿ ಮಾಡುತ್ತಾರೆ. ಹಳೆಯ ವಿಗ್ರಹಗಳನ್ನು ಕೊಯಿಲಿ ವೈಕುಂಠದ ಬಳಿ ಸಮಾಧಿ ಮಾಡಲಾಗಿದೆ. ಕೊನೆಯ ನಬಕಲೆಬರಾ 2015 ರಲ್ಲಿ ನಡೆಯಿತು ಮತ್ತು ಲಕ್ಷಾಂತರ ಭಕ್ತರು ಈ ಹಬ್ಬಕ್ಕೆ ಬಂದಿದ್ದರು.

Puri Jagannath Temple

ದೇವಾಲಯದ ನೆರಳು:

ದಿನದ ಯಾವುದೇ ಸಮಯದಲ್ಲಿ, ಸೂರ್ಯನ ಪ್ರಕಾಶ ಆಕಾಶದಲ್ಲಿ ಎಷ್ಟೇ ಹೆಚ್ಚಾಗಿದ್ದರೂ ಕೂಡ ದೇವಾಲಯದ ನೆರಳು ಬೀಳುವುದಿಲ್ಲ. ಅದು ವಾಸ್ತುಶಿಲ್ಪದ ಅದ್ಭುತವೇ ಅಥವಾ ಪವಾಡವೇ ಎಂಬುದು ಇನ್ನೂ ಬಗೆಹರಿದಿಲ್ಲ.

ಅಬಾಧ ಮಹಾಪ್ರಸಾದಂ:

ಮಹಾಪ್ರಸಾದವನ್ನು ಭಗವಾನ್ ಜಗನ್ನಾಥನಿಗೆ 5 ಹಂತಗಳಲ್ಲಿ ನೀಡಲಾಗುತ್ತದೆ ಮತ್ತು ಇದು 56 ರುಚಿಕರವಾದ ಭಕ್ಷ್ಯಗಳನ್ನು ಒಳಗೊಂಡಿದೆ. ಇದರಲ್ಲಿ ಎರಡು ವಿಧಗಳಿವೆ, ಸುಖಿಲಾ ಮತ್ತು ಶಂಖುಡಿ. ಸುಖಿಲಾ ಎಲ್ಲಾ ಒಣ ಮಿಠಾಯಿಗಳನ್ನು ಒಳಗೊಂಡಿದೆ ಮತ್ತು ಶಂಖುಡಿ ಅಕ್ಕಿ, ದಾಲ್ ಮತ್ತು ಇತರ ವಸ್ತುಗಳನ್ನು ಒಳಗೊಂಡಿದೆ. ಇದು ದೇವಾಲಯದ ಆವರಣದಲ್ಲಿರುವ ಆನಂದ ಬಜಾರ್‌ನ ಮಾರುಕಟ್ಟೆಯಲ್ಲಿ ಭಕ್ತರಿಗೆ ಲಭ್ಯವಿದೆ ಮತ್ತು ಇದು ದೈವಿಕ ರುಚಿಯನ್ನು ನೀಡುತ್ತದೆ.

Puri Jagannath Temple

ಮಹಾಪ್ರಸಾದದ ತಯಾರಿಕೆ:

ಮಹಾಪ್ರಸಾದವನ್ನು ಇಲ್ಲಿ ಸಾವಿರಾರು ಪುರೋಹಿತರು ತಯಾರಿಸುತ್ತಾರೆ ಮತ್ತು 7 ಮಣ್ಣಿನ ಮಡಕೆಗಳನ್ನು ಒಂದರ ಮೇಲೊಂದರಂತೆ ಇರಿಸಲಾಗುತ್ತದೆ ಮತ್ತು ಆಹಾರವನ್ನು ಸೌದೆ ಒಲೆಯ ಮೇಲೆ ಬೇಯಿಸಲಾಗುತ್ತದೆ. ಹೀಗೆ ಕಾಯಿಸಿದಾಗ ಮೇಲಿನ ಮಡಕೆಯಲ್ಲಿನ ಆಹಾರ ಮೊದಲು ಬೇಯುತ್ತದೆ. ಉಳಿದವು ನಂತರ ಬೇಯುತ್ತದೆ. ಇದು ಇಲ್ಲಿನ ಮತ್ತೊಂದು ಪವಾಡ.

Puri Jagannath Temple

ಅಲೆಗಳ ಶಬ್ದ:

ನೀವು ಒಮ್ಮೆ ದೇವಾಲಯದ ಒಳಗೆ ಕಾಲಿಟ್ಟರೆ, ಅಲ್ಲಿ ನಿಮಗೆ ಸಮುದ್ರದ ಅಲೆಗಳ ಶಬ್ದ ಕೇಳಿಸುವುದೇ ಇಲ್ಲ. ಪುರಾಣದ ಪ್ರಕಾರ, ಸುಭದ್ರಾ ದೇವಿಯು ದೇವಾಲಯವು ಪ್ರಶಾಂತತೆಯ ಸ್ಥಳವಾಗಬೇಕೆಂದು ಬಯಸಿದಳು, ಹಾಗಾಗಿ ಈ ದೇವಾಲಯದ ಒಳಗೆ ಸಮುದ್ರದ ಅಲೆಗಳ ಶಬ್ದ ಕೇಳಿಸುವುದಿಲ್ಲ ಎನ್ನಲಾಗಿದೆ.

Puri Jagannath Temple

ದೇವಾಲಯದ ಮೇಲೆ ಏನೂ ಹಾರುವುದಿಲ್ಲ:

ನೀವು ಆಕಾಶದಲ್ಲಿ ಮೇಲಕ್ಕೆ ನೋಡಿದಾಗ, ಪಕ್ಷಿಗಳು ಎತ್ತರಕ್ಕೆ ಹಾರುವುದನ್ನು ಕಾಣುತ್ತೀರಿ. ಆದರೆ ಪುರಿ ಜಗನ್ನಾಥ ದೇವಾಲಯದ ಗುಮ್ಮಟದ ಮೇಲೆ ಒಂದೇ ಒಂದು ಪಕ್ಷಿಯನ್ನು ಸಹ ನೋಡಲಾಗುವುದಿಲ್ಲ. ಯಾವುದೇ ಪಕ್ಷಿ ಗುಮ್ಮಟದ ಮೇಲೇ ಹಾರುವುದಿಲ್ಲ, ಯಾವುದೇ ವಸ್ತುವು ಹಾರುವುದಿಲ್ಲ. ಇದಕ್ಕೆ ಇನ್ನೂ ಯಾವುದೇ ತಾರ್ಕಿಕ ಸ್ಪಷ್ಟೀಕರಣ ಸಿಕ್ಕಿಲ್ಲ.

Puri Jagannath Temple

ಚಕ್ರದ ದಿಕ್ಕು:

ದೇವಾಲಯದ ಮೇಲ್ಭಾಗದಲ್ಲಿ ಅದೃಷ್ಟ ಚಕ್ರವಿದೆ. ಅದು ಸುಮಾರು ಒಂದು ಟನ್ ತೂಕವಿದೆ. ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ, ಪುರಿಯ ಯಾವುದೇ ಸ್ಥಳದಲ್ಲಿ ನಿಂತು ಚಕ್ರವನ್ನು ಎತ್ತರದಿಂದ ಯಾವುದೇ ದಿಕ್ಕಿನಲ್ಲಿ ನೋಡಿದರೂ ವೀಕ್ಷಕರಿಗೆ ಯಾವಾಗಲೂ ಚಕ್ರವು ತನ್ನ ಕಡೆಗೆ ಮುಖ ಮಾಡಿರುವಂತೆ ಕಾಣುತ್ತದೆ. ಇನ್ನೂ ನಿಗೂಢವಾದ ವಿಚಾರವೇನೆಂದರೆ, 12ನೇ ಶತಮಾನದ ಜನರು ದೇವಾಲಯದ ಮೇಲ್ಭಾಗದಲ್ಲಿ ಇಷ್ಟು ಭಾರವಾದ ಚಕ್ರವನ್ನು ಹೇಗೆ ಹಾಕಿದರು ಎಂಬುದು!

Puri Jagannath Temple

ಪ್ರಸಾದದ ರಹಸ್ಯ:

ಪ್ರತಿವರ್ಷ ಲಕ್ಷಾಂತರ ಯಾತ್ರಾರ್ಥಿಗಳು ಈ ಪವಿತ್ರ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ರಥಯಾತ್ರೆ ಅಥವಾ ಜಗನ್ನಾಥನ ಪೂಜಾ ದಿನಗಳಲ್ಲಿ ಸಾಮಾನ್ಯ ದಿನಗಳಿಗಿಂತ ಹೆಚ್ಚಿನ ಯಾತ್ರಾರ್ಥಿಗಳು ಬರುತ್ತಾರೆ. ಆದರೆ ಪ್ರತಿದಿನ ಅಷ್ಟೇ ಪ್ರಮಾಣದಲ್ಲಿ ಪ್ರಸಾದವನ್ನು ಬೇಯಿಸಲಾಗುತ್ತದೆ. ಯಾವುದೇ ದಿನಗಳಲ್ಲಿ, ಪ್ರಸಾದವು ವ್ಯರ್ಥವಾಗುವುದಿಲ್ಲ, ಮತ್ತು ಯಾವುದೇ ಭಕ್ತರು ಪ್ರಸಾದವಿಲ್ಲದೆ ಹಿಂತಿರುಗುವುದಿಲ್ಲ.

ಇದನ್ನೂ ಓದಿ: ಕೀರ್ತಿ ಚಕ್ರ ಸ್ವೀಕರಿಸಿದ ಹುತಾತ್ಮ ಯೋಧನ ಪತ್ನಿ; ಭಾವುಕರಾದ ದ್ರೌಪದಿ ಮುರ್ಮು‌,ರಾಜನಾಥ್ ಸಿಂಗ್!

Puri Jagannath Temple

ಹಿಮ್ಮುಖ ಸಮುದ್ರದ ಗಾಳಿ:

ಇದು ಸಾಮಾನ್ಯವಾಗಿ ಕರಾವಳಿ ಪ್ರದೇಶಗಳಲ್ಲಿ ಹಗಲಿನಲ್ಲಿ ಸಂಭವಿಸುವ ನೈಸರ್ಗಿಕ ವಿದ್ಯಮಾನವಾಗಿದೆ, ಗಾಳಿಯು ಸಮುದ್ರದಿಂದ ಭೂಮಿಯ ಕಡೆಗೆ ಬೀಸುತ್ತದೆ ಮತ್ತು ಸಂಜೆಯ ಸಮಯದಲ್ಲಿ ಅದು ಭೂಮಿಯಿಂದ ಸಮುದ್ರದ ಕಡೆಗೆ ಬೀಸುತ್ತದೆ. ಆದರೆ ಪುರಿಯಲ್ಲಿ, ಇದು ವಿರುದ್ಧ ರೂಪದಲ್ಲಿ ನಡೆಯುತ್ತದೆ!

Continue Reading

ಧಾರ್ಮಿಕ

Puri Jagannath Yatra: ಜುಲೈ 7ರಂದು ಪುರಿ ಜಗನ್ನಾಥ ರಥಯಾತ್ರೆ; ಇದಕ್ಕಿದೆ ಪೌರಾಣಿಕ ಹಿನ್ನೆಲೆ

Puri Jagannath Yatra: ಒಡಿಶಾದ ಪುರಿಯ ಜಗನ್ನಾಥ ರಥಯಾತ್ರೆಯು (Puri Rath Yatra) ಜುಲೈ 7ರಂದು ಬೆಳಗ್ಗೆ ಪ್ರಾರಂಭವಾಗಲಿದ್ದು, ಜುಲೈ 16ರಂದು ಬಹುದಾ ಯಾತ್ರೆಯೊಂದಿಗೆ ಸಂಪನ್ನಗೊಳ್ಳಲಿದೆ. ಈ ರಥಯಾತ್ರೆಯು ಜಗನ್ನಾಥ ದೇವಾಲಯದಿಂದ ದೇವರ ಜನ್ಮಸ್ಥಳವೆಂದು ನಂಬಲಾದ ಗುಂಡಿಚಾ ದೇವಾಲಯಕ್ಕೆ ಭಗವಾನ್ ಜಗನ್ನಾಥ, ಭಗವಾನ್ ಬಲಭದ್ರ ಮತ್ತು ಸುಭದ್ರಾ ದೇವಿಯನ್ನು ಮೆರವಣಿಗೆಯಲ್ಲಿ ಕರೆದುಕೊಂಡು ಹೋಗಿ ಗೌರವಿಸಲಾಗುತ್ತದೆ. ಐತಿಹಾಸಿಕ ಮಹತ್ವವನ್ನು ಹೊಂದಿರುವ ಈ ರಥಯಾತ್ರೆಯ ಹಿನ್ನೆಲೆ, ಮಹತ್ವ ಏನು? ಈ ಕುರಿತ ವರದಿ ಇದು.

VISTARANEWS.COM


on

By

Puri Jagannath Yatra
Koo

ಒಡಿಶಾದ (odisha) ಪುರಿಯ ಜಗನ್ನಾಥ ರಥಯಾತ್ರೆಯು (Puri Jagannath Yatra) ಭಾರೀ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಒಂಬತ್ತು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮಕ್ಕೆ ಜಗತ್ತಿನಾದ್ಯಂತ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಈ ಬಾರಿ ಜುಲೈ 7ರಂದು ಜಗನ್ನಾಥ ಯಾತ್ರೆ ನಡೆಯಲಿದೆ.

ಈ ರಥಯಾತ್ರೆಯು ಜಗನ್ನಾಥ ದೇವಾಲಯದಿಂದ ದೇವರ ಜನ್ಮಸ್ಥಳವೆಂದು ನಂಬಲಾದ ಗುಂಡಿಚಾ ದೇವಾಲಯಕ್ಕೆ ಭಗವಾನ್ ಜಗನ್ನಾಥ, ಭಗವಾನ್ ಬಲಭದ್ರ ಮತ್ತು ಸುಭದ್ರಾ ದೇವಿಯನ್ನು ಮೆರವಣಿಗೆಯಲ್ಲಿ ಕರೆದುಕೊಂಡು ಹೋಗಿ ಗೌರವಿಸಲಾಗುತ್ತದೆ. ಮೂರು ದೇವತೆಗಳನ್ನು ಪ್ರತಿ ವರ್ಷ ಹೊಸದಾಗಿ ನಿರ್ಮಿಸಲಾದ ಮೂರು ಬೃಹತ್ ಮತ್ತು ಅಲಂಕಾರಿಕ ರಥಗಳಲ್ಲಿ ಕೊಂಡೊಯ್ಯಲಾಗುತ್ತದೆ ಜಗನ್ನಾಥನ ರಥವನ್ನು ನಂದಿಘೋಷ, ಬಲಭದ್ರನ ರಥವನ್ನು ತಾಳಧ್ವಜ ಮತ್ತು ಸುಭದ್ರೆಯ ರಥವನ್ನು ದರ್ಪದಲನ ಎಂದು ಕರೆಯುತ್ತಾರೆ.


ಜಗನ್ನಾಥ ರಥ ಯಾತ್ರೆ ಯಾವಾಗ?

ಜೂನ್ ಅಥವಾ ಜುಲೈನಲ್ಲಿ ಬರುವ ಆಷಾಢ ಮಾಸದಲ್ಲಿ ಶುಕ್ಲ ಪಕ್ಷದ ಎರಡನೇ ದಿನದಂದು ಜಗನ್ನಾಥನ ರಥಯಾತ್ರೆ ನಡೆಯುತ್ತದೆ. ಈ ವರ್ಷ ಜುಲೈ 7ರಂದು ಭಗವಾನ್ ಜಗನ್ನಾಥನ ರಥಯಾತ್ರೆಯನ್ನು ಆಚರಿಸಲಾಗುತ್ತದೆ. ದ್ವಿತೀಯ ತಿಥಿಯು ಜುಲೈ 7 ರಂದು ಬೆಳಗ್ಗೆ 4.26ಕ್ಕೆ ಪ್ರಾರಂಭವಾಗಿ ಜುಲೈ 8ರಂದು ಬೆಳಗ್ಗೆ 4.59ಕ್ಕೆ ಕೊನೆಗೊಳ್ಳುತ್ತದೆ. ಜುಲೈ 16ರಂದು ನಡೆಯುವ ಬಹುದಾ ಯಾತ್ರೆಯೊಂದಿಗೆ ಉತ್ಸವವು ಮುಕ್ತಾಯಗೊಳ್ಳುತ್ತದೆ.

ಜಗನ್ನಾಥ ರಥ ಯಾತ್ರೆಯ ಇತಿಹಾಸ

ಜಗನ್ನಾಥ ರಥ ಯಾತ್ರೆಯ ಕುರಿತು ಹಲವಾರು ದಂತಕಥೆಗಳಿವೆ. ಒಂದು ಕಥೆಯ ಪ್ರಕಾರ ಭಗವಾನ್ ಜಗನ್ನಾಥ ಅವನ ಸಹೋದರ ಬಲಭದ್ರ ಮತ್ತು ಸಹೋದರಿ ಸುಭದ್ರೆ ವರ್ಷಕ್ಕೊಮ್ಮೆ ಗುಂಡಿಚಾ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ರಾಜ ಇಂದ್ರದ್ಯುಮ್ನ ಜಗನ್ನಾಥ ದೇವಾಲಯವನ್ನು ಸ್ಥಾಪಿಸಿದರು.

ಪುರಾಣಗಳ ಪ್ರಕಾರ ಭಗವಾನ್ ವಿಶ್ವಕರ್ಮನು ಗುಂಡಿಚಾ ದೇವಸ್ಥಾನದಲ್ಲಿ ಭಗವಾನ್ ಜಗನ್ನಾಥ, ಭಗವಾನ್ ಬಲಭದ್ರ ಮತ್ತು ಸುಭದ್ರಾ ದೇವಿಯ ಪ್ರಸ್ತುತ ಪ್ರತಿಮೆಗಳನ್ನು ಮರದ ದಿಮ್ಮಿಯಿಂದ ರಚಿಸಿದನು. ಅವನು ವಿಗ್ರಹಗಳನ್ನು ರಚಿಸುವಾಗ ರಾಣಿ ಗುಂಡಿಚಾ ದೇವಾಲಯದ ಬಾಗಿಲನ್ನು ತೆರೆದಳು ಮತ್ತು ಅನಂತರ ಭಗವಾನ್ ವಿಶ್ವಕರ್ಮನು ಕಣ್ಮರೆಯಾಯಿತು. ದೇವತೆಗಳ ಮೂರ್ತಿ ಅಪೂರ್ಣವಾಯಿತು ಎಂದು ಹೇಳಲಾಗುತ್ತದೆ.

ಅಂದಿನಿಂದ ರಾಣಿ ಗುಂಡಿಚಾಗೆ ನೀಡಿದ ಭರವಸೆಯನ್ನು ಪೂರೈಸಲು ದೇವರುಗಳು ವರ್ಷಕ್ಕೊಮ್ಮೆ ಮಾತ್ರ ತಮ್ಮ ದೇವಾಲಯದಿಂದ ಹೊರಬರುತ್ತಾರೆ ಎನ್ನಲಾಗುತ್ತದೆ. ರಾಣಿಯ ಹೆಸರಿನ ಗುಂಡಿಚಾ ದೇವಾಲಯವು ಮುಖ್ಯ ದೇವಾಲಯದಿಂದ ಮೂರು ಕಿಲೋಮೀಟರ್ ದೂರದಲ್ಲಿದೆ. ಒಂಬತ್ತನೇ ದಿನದಂದು ಬಹುದಾ ಯಾತ್ರೆ ಎಂದು ಕರೆಯಲ್ಪಡುವ ಮುಖ್ಯ ದೇವಾಲಯಕ್ಕೆ ಹಿಂದಿರುಗುವ ಮೊದಲು ದೇವತೆಗಳು ಎಂಟು ದಿನಗಳವರೆಗೆ ಅಲ್ಲಿ ನೆಲೆಸುತ್ತಾರೆ. ದೇವತೆಗಳು ದೇವಾಲಯವನ್ನು ಪ್ರವೇಶಿಸುವ ದಿನವನ್ನು ನೀಲಾದ್ರಿ ಬಿಜೆ ಎಂದು ಕರೆಯಲಾಗುತ್ತದೆ. ಇದರೊಂದಿಗೆ ಹಬ್ಬ ಮುಕ್ತಾಯವಾಗುತ್ತದೆ.

ಇದನ್ನೂ ಓದಿ: Koppala News: ಅಂಜನಾದ್ರಿ ದೇಗುಲ ಹುಂಡಿಯಲ್ಲಿ 32.95 ಲಕ್ಷ ರೂ; ವಿವಿಧ ದೇಶಗಳ ನೋಟುಗಳು


ಜಗನ್ನಾಥ ರಥಯಾತ್ರೆಯ ಮಹತ್ವ

ಈ ಹಬ್ಬವು ಭಗವಾನ್ ಜಗನ್ನಾಥ ಅವನ ಸಹೋದರ ಬಲಭದ್ರ ಮತ್ತು ಅವರ ಸಹೋದರಿ ಸುಭದ್ರೆಯ ಗುಂಡಿಚಾ ದೇವಸ್ಥಾನಕ್ಕೆ ಹೋಗುವುದನ್ನು ಸೂಚಿಸುತ್ತದೆ. ಭವ್ಯವಾದ ರಥವನ್ನು ಎಳೆಯಲು ಸಾವಿರಾರು ಭಕ್ತರು ಸೇರುತ್ತಾರೆ. ಉತ್ಸವದಲ್ಲಿ ಭಾಗವಹಿಸಿ ರಥಗಳನ್ನು ಎಳೆಯುವುದರಿಂದ ಪುಣ್ಯ ಲಭಿಸುತ್ತದೆ ಮತ್ತು ಆತ್ಮ ಶುದ್ಧಿಯಾಗುತ್ತದೆ ಎಂದು ನಂಬಲಾಗಿದೆ. ಈ ಯಾತ್ರೆಯು ಕೆಡುಕಿನ ಮೇಲೆ ಒಳಿತಿನ ವಿಜಯವನ್ನು ಸೂಚಿಸುತ್ತದೆ. ಇದು ಕೇವಲ ಹಬ್ಬವಾಗದೆ ಸಂಸ್ಕೃತಿ, ಏಕತೆ, ಸಮಾನತೆ ಮತ್ತು ಆಧ್ಯಾತ್ಮಿಕತೆಯ ಆಚರಣೆಯಾಗಿದೆ.

Continue Reading

ದೇಶ

Ayodhya Ram Mandir: ಅಯೋಧ್ಯೆ ರಾಮ ಮಂದಿರದ ಅರ್ಚಕರಿಗೆ ಹೊಸ ಸಮವಸ್ತ್ರ; ನಿಯಮದಲ್ಲಿ ಬದಲಾವಣೆ: ಕಾರಣವೇನು?

Ayodhya Ram Mandir: ಅಯೋಧ್ಯೆ ರಾಮ ಮಂದಿರದ ಕೆಲವೊಂದು ನಿಯಮಗಳಲ್ಲಿ ಬದಲಾವಣೆ ತರಲಾಗಿದೆ. ಜತೆಗೆ ಅರ್ಚಕರ ಸಮವಸ್ತ್ರ ಮತ್ತು ಬಣ್ಣ ಬದಲಾಗಿದೆ. ಅರ್ಚಕರು ದೇವಾಲಯಕ್ಕೆ ಮೊಬೈಲ್ ಫೋನ್‌ಗಳನ್ನು ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ. ಹೊಸ ಡ್ರೆಸ್‌ ಕೋಡ್‌ ಜುಲೈ 1ರಿಂದಲೇ ಜಾರಿಗೆ ಬಂದಿದೆ ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

VISTARANEWS.COM


on

Ayodhya Ram Mandir
Koo

ಲಕ್ನೋ: ಅಯೋಧ್ಯೆ ರಾಮ ಮಂದಿರ (Ayodhya Ram Mandir)ದ ಕೆಲವೊಂದು ನಿಯಮಗಳಲ್ಲಿ ಬದಲಾವಣೆ ತರಲಾಗಿದೆ. ಜತೆಗೆ ಅರ್ಚಕರ ಸಮವಸ್ತ್ರ ಮತ್ತು ಬಣ್ಣ ಬದಲಾಗಿದೆ. ಅರ್ಚಕರು ದೇವಾಲಯಕ್ಕೆ ಮೊಬೈಲ್ ಫೋನ್‌ಗಳನ್ನು ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ ಎಂದು ದೇವಾಲಯದ ಟ್ರಸ್ಟ್‌ನ ಅಧಿಕಾರಿಗಳು ತಿಳಿಸಿದ್ದಾರೆ. ಇಲ್ಲಿಯವರೆಗೆ ಗರ್ಭಗುಡಿಯ ಪುರೋಹಿತರು ಕೇಸರಿ ಬಟ್ಟೆಗಳನ್ನು ಅಂದರೆ ಕೇಸರಿ ಪೇಟ, ಕೇಸರಿ ಕುರ್ತಾ ಮತ್ತು ಧೋತಿ ಧರಿಸುತ್ತಿದ್ದರು. ಇದೀಗ ಪುರೋಹಿತರು ಹಳದಿ (ಪಿತಾಂಬರಿ) ಬಣ್ಣದ ಧೋತಿ, ಅದೇ ಬಣ್ಣದ ಕುರ್ತಾ ಮತ್ತು ಪೇಟ ಧರಿಸುತ್ತಿದ್ದಾರೆ.

ಹೊಸ ಡ್ರೆಸ್‌ ಕೋಡ್‌ ಜುಲೈ 1ರಿಂದಲೇ ಜಾರಿಗೆ ಬಂದಿದೆ ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಹೊಸ ಪುರೋಹಿತರಿಗೆ ಹಳದಿ ಪೇಟ ಕಟ್ಟಲು ತರಬೇತಿ ನೀಡಲಾಗಿದೆ ಎಂದೂ ಅವರು ಹೇಳಿದ್ದಾರೆ.

ಹೇಗಿದೆ ಹೊಸ ಸಮವಸ್ತ್ರ?

‘ಚೌಬಂದಿ’ ಎಂದು ಕರೆಯಲ್ಪಡುವ ಹೊಸ ಕುರ್ತಾದಲ್ಲಿ ಯಾವುದೇ ಬಟನ್‌ ಇರುವುದಿಲ್ಲ ಮತ್ತು ಅದನ್ನು ಕಟ್ಟಲು ದಾರವನ್ನು ಬಳಸಲಾಗುತ್ತದೆ. ಹಳದಿ ಬಣ್ಣದ ‘ಧೋತಿ’ಯನ್ನು ಹತ್ತಿ ಬಟ್ಟೆಯಿಂದ ತಯಾರಿಸಲಾಗುತ್ತದೆ. ಇದು ಪಾದವನ್ನೂ ಮುಚ್ಚಲಿದೆ. ದೇವಾಲಯದಲ್ಲಿ ಮುಖ್ಯ ಅರ್ಚಕರು ಮತ್ತು ನಾಲ್ವರು ಸಹಾಯಕ ಅರ್ಚಕರು ಇದ್ದಾರೆ. ಈಗ ಪ್ರತಿ ಸಹಾಯಕ ಪುರೋಹಿತರೊಂದಿಗೆ ಐವರು ಪುರೋಹಿತರು ತರಬೇತಿ ಪಡೆಯುತ್ತಿದ್ದಾರೆ.

ಪುರೋಹಿತರ ಪ್ರತಿ ತಂಡವು ಮುಂಜಾನೆ 3.30ರಿಂದ ರಾತ್ರಿ 11ರವರೆಗೆ ಪಾಳಿಯಲ್ಲಿ ಐದು ಗಂಟೆಗಳ ಕಾಲ ಸೇವೆ ಸಲ್ಲಿಸುತ್ತಿದೆ. ʼʼರಾಮ ಮಂದಿರದಲ್ಲಿ ಅರ್ಚಕರಿಗೆ ಹೊಸ ಡ್ರೆಸ್ ಕೋಡ್ ಜಾರಿಗೆ ತರಲಾಗಿದೆ. ಈಗ ಮುಖ್ಯ ಅರ್ಚಕರು, ನಾಲ್ವರು ಸಹಾಯಕ ಪುರೋಹಿತರು ಮತ್ತು 20 ತರಬೇತಿ ಪುರೋಹಿತರು ಸೇರಿದಂತೆ ಎಲ್ಲ ಪುರೋಹಿತರು ಹಳದಿ ಬಣ್ಣದ ತಲೆಯ ಸಫಾ, ಚೌಬಂದಿ ಮತ್ತು ಧೋತಿ ಧರಿಸಲಿದ್ದಾರೆ” ಎಂದು ರಾಮ ಮಂದಿರದ ಸಹಾಯಕ ಅರ್ಚಕ ಸಂತೋಷ್ ಕುಮಾರ್ ತಿವಾರಿ ತಿಳಿಸಿದ್ದಾರೆ.

ಕಾರಣವೇನು?

ಏಕರೂಪತೆಯನ್ನು ಕಾಪಾಡಿಕೊಳ್ಳಲು ಮತ್ತು ಭದ್ರತೆಯನ್ನು ಖಚಿತಪಡಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಅರ್ಚಕರು ತಮ್ಮ ಫೋನ್‌ಗಳನ್ನು ದೇವಾಲಯಗಳಿಗೆ ಕೊಂಡೊಯ್ಯುವುದನ್ನು ನಿಷೇಧಿಸಿದ್ದು ಕೂಡ ಭದ್ರತಾ ಕ್ರಮದ ಒಂದು ಭಾಗ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಇತ್ತೀಚೆಗೆ ದೇವಾಲಯದ ಚಿತ್ರಗಳು ಆನ್‌ಲೈನ್‌ನಲ್ಲಿ ಸೋರಿಕೆಯಾದ ಹಿನ್ನೆಲೆಯಲ್ಲಿ ಅಧಿಕಾರಿಗಳು ಈ ನಿಯಮ ಜಾರಿಗೊಳಿಸಿದ್ದಾರೆ.

ಕಡಿಮೆಯಾದ ಭಕ್ತರ ದಟ್ಟಣೆ

ಅಯೋಧ್ಯೆ ರಾಮಮಂದಿರ ಹಿಂದೂಗಳ ಪವಿತ್ರ ಯಾತ್ರಾ ಸ್ಥಳವಾಗಿ ಹೊರಹೊಮ್ಮಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುವುದು ಕೋಟ್ಯಂತರ ಹಿಂದೂಗಳ ಕನಸಾಗಿತ್ತು. ಹಾಗಾಗಿ ರಾಮಮಂದಿರ ಉದ್ಘಾಟನೆಯಾದ ಬೆನ್ನಿಗೇ ಲಕ್ಷಾಂತರ ಸಂಖ್ಯೆಯ ಭಕ್ತರು ರಾಮನ ದರ್ಶನಕ್ಕೆ ಬರುತ್ತಿದ್ದರು. ಆದರೆ ಮಂದಿರ ಉದ್ಘಾಟನೆಯಾಗಿ ಈಗಾಗಲೇ ಆರು ತಿಂಗಳು ಕಳೆದಿರುವುದರಿಂದ ಭಕ್ತರ ಸಂಖ್ಯೆ ಸಹಜವಾಗಿಯೇ ಕಡಿಮೆಯಾಗುತ್ತಿದೆ.

ಕಳೆದ ಆರು ವಾರಗಳಲ್ಲಿ ಅಯೋಧ್ಯೆ ನಗರಕ್ಕೆ ಬರುವ ವಿಮಾನಗಳು, ರೈಲುಗಳು ಮತ್ತು ಬಸ್ ಸೇವೆ ಗಮನಾರ್ಹವಾಗಿ ಕಡಿಮೆಯಾಗುತ್ತ ಬಂದಿದೆ. ಕೆಲವು ವಿಶೇಷ ರೈಲುಗಳ ಕಾರ್ಯಾಚರಣೆ ನಿಲ್ಲಿಸಲಾಗಿದೆ. ಇತರ ರಾಜ್ಯಗಳಿಂದ ಅಯೋಧ್ಯೆಗೆ ಬರುವ ವಿಶೇಷ ಬಸ್ಸುಗಳ ಸಂಖ್ಯೆಯಲ್ಲೂ ಕಡಿತವಾಗಿದೆ. ಜನವರಿ 22ರಂದು ಪ್ರಾಣ ಪ್ರತಿಷ್ಠಾ ಸಮಾರಂಭ ನಡೆದ ನಂತರ ಅಯೋಧ್ಯೆಗೆ ಬರುವ ಭಕ್ತರ ಸಂಖ್ಯೆ ವಿಪರೀತ ಹೆಚ್ಚಾಗಿತ್ತು. ಜನವರಿಯಿಂದ ಮಾರ್ಚ್ 2024ರವರೆಗೆ ಪ್ರತಿದಿನ ಸುಮಾರು 1.5 ಲಕ್ಷ ಭಕ್ತರು ಭೇಟಿ ನೀಡುತ್ತಿದ್ದರು. ಆದರೆ ಏಪ್ರಿಲ್‌ನಿಂದ ಭಕ್ತರ ಸಂಖ್ಯೆ ಕಡಿಮೆಯಾಗುತ್ತ ಬಂತು. 

ಇದನ್ನೂ ಓದಿ: Samrat Choudhary: ಅಯೋಧ್ಯೆಯಲ್ಲಿ ತಲೆ ಬೋಳಿಸಿಕೊಂಡು ರಾಮನಿಗೆ ಪೇಟ ಅರ್ಪಿಸಿದ ಬಿಹಾರ ಡಿಸಿಎಂ! ಇದಕ್ಕಿದೆ ವಿಶೇಷ ಕಾರಣ!

Continue Reading

ಧಾರ್ಮಿಕ

Vastu Tips: ಮನೆಯೊಳಗೆ ಎಲ್ಲೆಂದರಲ್ಲಿ ಕನ್ನಡಿ ಇಟ್ಟು ಕುಟುಂಬದ ನೆಮ್ಮದಿ ಹಾಳು ಮಾಡಬೇಡಿ!

ಕನ್ನಡಿಗಳು ಒಳ್ಳೆಯ ಮತ್ತು ಕೆಟ್ಟ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ. ಕನ್ನಡಿಯನ್ನು ಸರಿಯಾಗಿ ಇರಿಸಿದರೆ (Vastu Tips) ಮಾತ್ರ ಧನಾತ್ಮಕ ಶಕ್ತಿಯ ಉತ್ತೇಜನವಾಗುತ್ತದೆ. ಮನೆಯಲ್ಲಿರುವ ಕನ್ನಡಿಗಳ ಸ್ಥಾನವು ನಿವಾಸಿಗಳ ಜೀವನವನ್ನು ಹೇಗೆ ಪ್ರಭಾವಿಸುತ್ತದೆ ಎಂಬ ಕುರಿತು ಮಾಹಿತಿ ಇಲ್ಲಿದೆ.

VISTARANEWS.COM


on

By

Vastu Tips
Koo

ಎಲ್ಲರ ಮನೆಯಲ್ಲೂ ಕನ್ನಡಿ ಇದ್ದೇ ಇರುತ್ತದೆ. ಆದರೆ ಈ ಕನ್ನಡಿಗಳನ್ನು ಎಲ್ಲಿ, ಹೇಗೆ ಇರಿಸಬೇಕು ಎಂಬುದನ್ನು ತಿಳಿದಿರಬೇಕು. ಇಲ್ಲವಾದರೆ ಮನೆ ಮಂದಿಗೆ ಆಪತ್ತು ಕಟ್ಟಿಟ್ಟ ಬುತ್ತಿಯಾಗುವುದು. ಕನ್ನಡಿಗಳನ್ನು (mirror) ವಾಸ್ತು ಪ್ರಕಾರ (Vastu Tips) ಇರಿಸಿದರೆ ಮನೆಯೊಳಗೇ ಧನಾತ್ಮಕ ಶಕ್ತಿ (positive energy) ವೃದ್ಧಿಯಾಗುತ್ತದೆ. ಸುಖ, ಶಾಂತಿ, ನೆಮ್ಮದಿ ನೆಲೆಸುತ್ತದೆ.

ಕನ್ನಡಿಗಳು ಒಳ್ಳೆಯ ಮತ್ತು ಕೆಟ್ಟ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ. ಕನ್ನಡಿಯನ್ನು ಸರಿಯಾಗಿ ಇರಿಸಿದರೆ ಮಾತ್ರ ಧನಾತ್ಮಕ ಶಕ್ತಿಯ ಉತ್ತೇಜನವಾಗುತ್ತದೆ. ಮನೆಯಲ್ಲಿರುವ ಕನ್ನಡಿಗಳ ಸ್ಥಾನವು ನಿವಾಸಿಗಳ ಜೀವನವನ್ನು ಹೇಗೆ ಪ್ರಭಾವಿಸುತ್ತದೆ ಎಂಬ ಕುರಿತು ಮಾಹಿತಿ ಇಲ್ಲಿದೆ.

ಮಲಗುವ ಕೋಣೆ

ವಾಸ್ತು ಶಾಸ್ತ್ರದ ಪ್ರಕಾರ ಮಲಗುವ ಕೋಣೆಯಲ್ಲಿ ಅಥವಾ ಮಲಗುವ ಯಾವುದೇ ಜಾಗದಲ್ಲಿ ಕನ್ನಡಿಯನ್ನು ಇಡಬಾರದು. ದಂಪತಿ ತಮ್ಮ ಮಲಗುವ ಕೋಣೆಯಲ್ಲಿ ನೈಋತ್ಯ ದಿಕ್ಕಿನ ಕನ್ನಡಿಯನ್ನು ಇರಿಸಿದಾಗ ಮನೆ ಮಂದಿ ಹೆಚ್ಚಿನ ಒತ್ತಡವನ್ನು ಹೊಂದಿರುತ್ತಾರೆ.

ಮಗುವಿನ ನಿರೀಕ್ಷೆಯಲ್ಲಿರುವ ಮಹಿಳೆಯರು ಇನ್ನೂ ಹೆಚ್ಚಿನ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ನೀವು ನಿಮ್ಮ ಹಾಸಿಗೆಯ ಮುಂದೆ ಕನ್ನಡಿಯನ್ನು ಇಡುವುದನ್ನು ತಡೆಯುವುದು ಉತ್ತಮ.


ಡ್ರೆಸ್ಸಿಂಗ್ ಕೋಣೆ

ಮನೆಯಲ್ಲಿ ಸ್ಥಳಾವಕಾಶ ಇದ್ದರೆ ಪ್ರತ್ಯೇಕ ಡ್ರೆಸ್ಸಿಂಗ್ ಪ್ರದೇಶವನ್ನು ಮಾಡಿ. ಮಾಸ್ಟರ್ ಬೆಡ್‌ರೂಮ್‌ಗೆ ಜೋಡಿಸಲಾದ ಡ್ರೆಸ್ಸಿಂಗ್ ಕೋಣೆ ಪರಿಪೂರ್ಣವಾಗಿರುತ್ತದೆ. ಈ ಡ್ರೆಸ್ಸಿಂಗ್ ಕೋಣೆಯಲ್ಲಿ ಕನ್ನಡಿಯನ್ನು ಪೂರ್ವ ಅಥವಾ ಉತ್ತರ ಗೋಡೆಯ ವಿರುದ್ಧ ಇಡಬೇಕು.

ಮಕ್ಕಳ ಕೋಣೆ

ಮಕ್ಕಳ ಮಲಗುವ ಕೋಣೆಗಳಲ್ಲಿ ಕನ್ನಡಿಗಳನ್ನು ನೇತುಹಾಕುವಾಗ ಎಚ್ಚರಿಕೆ ಇರಲಿ. ವಾಸ್ತು ಪ್ರಕಾರ ಕನ್ನಡಿಯನ್ನು ಸರಿಯಾದ ದಿಕ್ಕಿನಲ್ಲಿ ಇಡದೇ ಇದ್ದರೆ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುತ್ತದೆ.

ಇದನ್ನೂ ಓದಿ: Vastu Tips: ಮನೆ, ಅಂಗಡಿಯಲ್ಲಿ ಧನಾತ್ಮಕ ಶಕ್ತಿ ಆಹ್ವಾನಿಸಿ; ಸುಖ, ಶಾಂತಿ, ಸಮೃದ್ಧಿ ವೃದ್ಧಿಸಿ

ಹಾಸಿಗೆಯ ಮೇಲ್ಭಾಗದಲ್ಲಿ ಕನ್ನಡಿಗಳ ಉಪಸ್ಥಿತಿಯು ಮಲಗುವವರಲ್ಲಿ ಚಡಪಡಿಕೆಯನ್ನು ಉಂಟು ಮಾಡುತ್ತದೆ. ಇದು ಉತ್ತಮ ನಿದ್ರೆ ಪಡೆಯಲು ಕಷ್ಟವಾಗಬಹುದು.

ಒಳಾಂಗಣ ವಿನ್ಯಾಸದಲ್ಲಿ ಇತ್ತೀಚೆಗೆ ಛಾವಣಿಗೆ ಕನ್ನಡಿಯನ್ನು ಹಾಕಲಾಗುತ್ತದೆ. ನೆಲ ಮತ್ತು ಹಾಸಿಗೆ ಅಡ್ಡಲಾಗಿ ಸೀಲಿಂಗ್ ಗೆ ಹೊಂದಿಸಲಾಗುವ ಕನ್ನಡಿಗಳಿಂದ ಉಂಟಾಗುವ ನೆರಳುಗಳು ಮನೆಯ ನಿವಾಸಿಗಳಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಬಹುದು ಮತ್ತು ಅತೃಪ್ತಿಕರ ವಾತಾವರಣಕ್ಕೆ ಕಾರಣವಾಗಬಹುದು.

Continue Reading
Advertisement
karnataka weather Forecast
ಮಳೆ20 mins ago

Karnataka Weather : ವೇಗವಾಗಿ ಬೀಸುವ ಗಾಳಿ ಜತೆಗೆ ಅಬ್ಬರಿಸಲಿದೆ ಮಳೆ; ಈ ಜಿಲ್ಲೆಗಳಿಗೆ ಎಚ್ಚರಿಕೆ

Puri Jagannath Temple
Latest50 mins ago

Puri Jagannath Temple: ಪುರಿ ಜಗನ್ನಾಥ ದೇವಾಲಯದ 10 ಅದ್ಭುತ ಸಂಗತಿಗಳಿವು!

Dina Bhavishya
ಭವಿಷ್ಯ2 hours ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಸಿಗಲಿದೆ ಶುಭ ಸುದ್ದಿ

Champions Trophy 2025:
ಪ್ರಮುಖ ಸುದ್ದಿ7 hours ago

Champions Trophy 2025 : ಭಾರತ ತಂಡ ಪಾಕಿಸ್ತಾನಕ್ಕೆ ಬರಲೇಬೇಕು ಹಠ ಹಿಡಿದು ಕುಳಿತಿರುವ ಪಿಸಿಬಿ

Rain News
ದೇಶ7 hours ago

Rain News: ವರುಣನ ಆರ್ಭಟ; ಮಳೆ ಸಂಬಂಧಿ ಅವಘಡಗಳಿಗೆ 24 ಗಂಟೆಯಲ್ಲಿ 13 ಜನ ಬಲಿ

KAS
ಕರ್ನಾಟಕ7 hours ago

KAS: ಕೆಎಎಸ್‌ ಅಭ್ಯರ್ಥಿಗಳಿಗೆ ಗುಡ್‌ ನ್ಯೂಸ್;‌ ನೇಮಕಾತಿಗೆ ಅರ್ಜಿ ಸಲ್ಲಿಸಲು ವಿಶೇಷ ಅವಕಾಶ, ಇಲ್ಲಿದೆ ಮಾಹಿತಿ

Mid Day Meal
ದೇಶ8 hours ago

Mid Day Meal: ಮಕ್ಕಳ ಬಿಸಿಯೂಟದಲ್ಲೂ ಕಳ್ಳಾಟ, ವಿದ್ಯಾರ್ಥಿಗಳಿಗೆ ಸಿಗೋದು ಬರೀ ಅನ್ನ-ಅರಿಶಿಣ; Video ಇದೆ

Dr HS Shetty: Rs 7 crore spent on charity; Businessman Dr. HS Shetty
ಪ್ರಮುಖ ಸುದ್ದಿ8 hours ago

Dr HS Shetty : ದಾನಗಳಿಗಾಗಿಯೇ ವರ್ಷದಲ್ಲಿ 7 ಕೋಟಿ ರೂ. ವಿನಿಯೋಗ

Vasishtha Simha starrer VIP Kannada movie
ಕರ್ನಾಟಕ9 hours ago

Kannada New Movie: ಖ್ಯಾತ ಗಾಯಕಿ ಕೆ.ಎಸ್.ಚಿತ್ರಾ ಕಂಠಸಿರಿಯಲ್ಲಿ ವಸಿಷ್ಠ ಸಿಂಹ ಅಭಿನಯದ ‘ವಿಐಪಿ’ ಚಿತ್ರದ ಹಾಡು

Asia Cup 2024
ಪ್ರಮುಖ ಸುದ್ದಿ9 hours ago

Asia Cup 2024 : ಮಹಿಳಾ ಏಷ್ಯಾಕಪ್ ಟೂರ್ನಿಗೆ ಭಾರತ ತಂಡ ಪ್ರಕಟ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ20 mins ago

Karnataka Weather : ವೇಗವಾಗಿ ಬೀಸುವ ಗಾಳಿ ಜತೆಗೆ ಅಬ್ಬರಿಸಲಿದೆ ಮಳೆ; ಈ ಜಿಲ್ಲೆಗಳಿಗೆ ಎಚ್ಚರಿಕೆ

karnataka weather Forecast
ಮಳೆ12 hours ago

Karnataka Weather : ಚಾರಣಪ್ರಿಯರಿಗೆ ಶಾಕ್‌; ಭಾರಿ ಮಳೆಯಿಂದಾಗಿ ಈ ಜಾಗಗಳಿಗೆ ಟ್ರೆಕ್ಕಿಂಗ್‌ ನಿಷೇಧ

Murder case
ಯಾದಗಿರಿ15 hours ago

Murder case : ಯಾದಗಿರಿಯಲ್ಲಿ ಹಸುಗೂಸನ್ನು ಬಾವಿಗೆ ಎಸೆದು ಕೊಂದರು ಹಂತಕರು

karnataka Rain
ಮಳೆ16 hours ago

Karnataka Rain : ಭಾರಿ ಗಾಳಿ- ಮಳೆಗೆ ಹಾರಿದ ಅಂಗಡಿಯ ತಗಡು; ಮಾಗುಂಡಿ-ಬಾಳೆಹೊನ್ನೂರು ಮಾರ್ಗ ಬಂದ್

Food Poisoning
ರಾಯಚೂರು18 hours ago

Food Poisoning : ಮೊರಾರ್ಜಿ ವಸತಿ ಶಾಲೆ ಅವ್ಯವಸ್ಥೆ; ಊಟ ಸೇವಿಸಿದ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

Wild Animal Attack Elephant attack
ರಾಮನಗರ20 hours ago

Wild Animal Attack : ತೋಟದಲ್ಲಿ ನೀರು ಹಾಯಿಸುತ್ತಿದ್ದವನ ತುಳಿದು ಸಾಯಿಸಿದ ಆನೆ

karnataka Weather Forecast
ಮಳೆ1 day ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಇಂದು ನಾನ್‌ ಸ್ಟಾಪ್‌ ಮಳೆ; ಬೆಂಗಳೂರಲ್ಲಿ ಹೇಗೆ?

karnataka Weather Forecast
ಮಳೆ2 days ago

Karnataka Weather: ಧಾರಾಕಾರ ಮಳೆಗೆ ಜನರ ಒದ್ದಾಟ- ಸೇತುವೆಗಳು ಮುಳುಗಿ ಪರದಾಟ; ಶಾಲಾ-ಕಾಲೇಜುಗಳಿಗೆ ರಜೆ

Lovers Fighting
ಚಿಕ್ಕಬಳ್ಳಾಪುರ2 days ago

Lovers Fighting: ಪ್ರೀತಿಸಿ ಕೈಕೊಟ್ಟವನಿಗೆ ನಡುರಸ್ತೆಯಲ್ಲೇ ಚಳಿ ಬಿಡಿಸಿದ ಗರ್ಭಿಣಿ

Medical negligence
ದಾವಣಗೆರೆ2 days ago

Medical negligence: ಸಿಸೇರಿಯನ್ ಮಾಡುವಾಗ ಶಿಶುವಿನ ಮರ್ಮಾಂಗವನ್ನೇ ಕತ್ತರಿಸಿ ಸಾಯಿಸಿದ ವೈದ್ಯ!

ಟ್ರೆಂಡಿಂಗ್‌